Motivational story | ವಸ್ತುಪ್ರದರ್ಶನದಲ್ಲಿ ಕಂಡ ಆ ಅಮೂಲ್ಯ ವಸ್ತುವನ್ನು ನಿಜಕ್ಕೂ ಕಳೆದುಕೊಂಡವರಾರು? - Vistara News

ಪ್ರಮುಖ ಸುದ್ದಿ

Motivational story | ವಸ್ತುಪ್ರದರ್ಶನದಲ್ಲಿ ಕಂಡ ಆ ಅಮೂಲ್ಯ ವಸ್ತುವನ್ನು ನಿಜಕ್ಕೂ ಕಳೆದುಕೊಂಡವರಾರು?

ಅಲ್ಲಿ ಇದ್ದುದು ವಜ್ರ ಎಂದು ಅವನಿಗೆ ಮಾತ್ರ ಗೊತ್ತಿತ್ತು. ಅಂಗಡಿ ಮಾಲೀಕ ಕೇಳಿದ ಬೆಲೆಗೆ ಕೊಟ್ಟಿದ್ದರೆ ಸಿಕ್ಕಿಬಿಡುತ್ತಿತ್ತು. ಆದರೆ, ಅವನು ಅಲ್ಲೂ ಜಿಪುಣತನ ಮಾಡಿದ. ಆಮೇಲೆ ಏನಾಯ್ತು?

VISTARANEWS.COM


on

diamond between pearls
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೃಷ್ಣ ಭಟ್‌ ಅಳದಂಗಡಿ- Motivational story
ಅದೊಂದು ಸಾರಿ ಊರಿನಲ್ಲಿ ವಸ್ತು ಪ್ರದರ್ಶನ ಆಯೋಜನೆಗೊಂಡಿತ್ತು. ಎಕ್ಸಿಬಿಷನ್ ಎಂದರೆ ಅಲ್ಲಿ ಫ್ಯಾನ್ಸಿ ವಸ್ತುಗಳಿಂದ ಹಿಡಿದು ನಿತ್ಯ ಜೀವನಕ್ಕೆ ಅಗತ್ಯವಿರುವ ನೂರಾರು ವಸ್ತುಗಳು ಸಿಗುತ್ತಿದ್ದವು. ನೂರಾರು ಅಂಗಡಿಗಳೂ ಇದ್ದವು. ಊರಿನ ಜನ ಸಮಯ ಕಳೆಯಲೆಂದೋ, ಖರೀದಿ ಮಾಡಲೆಂದೋ, ಅಲ್ಲಿ ಸಿಗುವ ತಿನಿಸುಗಳನ್ನು ತಿನ್ನಲೆಂದೋ ಗುಂಪು ಗುಂಪಾಗಿ ಬರುತ್ತಿದ್ದರು.

ಅಲ್ಲೊಬ್ಬ ಅತಿ ಸಾಮಾನ್ಯ ವ್ಯಾಪಾರಿಯೂ ಬಂದಿದ್ದ. ಅವನ ಅಂಗಡಿಯಲ್ಲಿ ಇಮಿಟೇಷನ್ ಜುವೆಲ್ಲರಿಗಳು, ಗಾಜಿನ ಶೈನಿಂಗ್ ವಸ್ತುಗಳೆಲ್ಲ ಇದ್ದವು. ಆ ಊರಿನ ಒಬ್ಬ ಚಿನ್ನಾಭರಣ ವ್ಯಾಪಾರಿ ಆ ಅಂಗಡಿಗೆ ಬಂದ. ಅಲ್ಲಿದ್ದ ಹೊಳೆಯುವ ಗಾಜಿನ ವಸ್ತುಗಳನ್ನು ನೋಡುತ್ತಿದ್ದಾಗ ಅವನಿಗೆ ಅದರಲ್ಲಿರುವ ಒಂದು ಎಂಟು ಮೈಯುಳ್ಳ, ಅಷ್ಟ ಭುಜಾಕೃತಿಯ ಹೊಳೆಯುವ ಗಾಜು ಬರೀ ಗಾಜಲ್ಲ, ಅದು ವಜ್ರ ಅಂತ ಗೊತ್ತಾಯಿತು. ಬಹುಶಃ ಅದು ಕಣ್ತಪ್ಪಿ ಬಂದಿರಬಹುದು ಅನಿಸುತ್ತದೆ. ಈ ವಿಷಯ ಅಂಗಡಿ ಇಟ್ಟವನಿಗಂತೂ ಗೊತ್ತಿರಲಿಲ್ಲ.

ಆ ಗಾಜಿನಂತೆ ಹೊಳೆಯುವ ವಸ್ತುವನ್ನು ತೋರಿಸಿದ ವ್ಯಾಪಾರಿ ಅದಕ್ಕೆಷ್ಟು ಬೆಲೆ ಎಂದು ಕೇಳಿದ. ಆಗ ವ್ಯಾಪಾರಿ, ಅದಕ್ಕೆ 200 ರೂ. ಎಂದ. ವ್ಯಾಪಾರಿಗೆ ಸ್ವರ್ಗವೇ ಧರೆಗೆ ಇಳಿದಂತಾಯಿತು. ಆದರೆ, ಜಿಪುಣ ಬುದ್ಧಿ ಬಿಡಲಿಲ್ಲ. ಇದನ್ನು 150 ರೂ. ಕೊಡುತ್ತೀಯಾ ಎಂದು ಕೇಳಿದ. ಅಂಗಡಿ ಮಾಲೀಕ ನಿರಾಕರಿಸಿದ.

ನಿಜವೆಂದರೆ ಆ ಆಂಗಡಿಗೆ ತುಂಬ ಗ್ರಾಹಕರೇನೂ ಇರಲಿಲ್ಲ. ಹೀಗಾಗಿ ಇನ್ನೊಂದು ರೌಂಡ್ ಹೋಗಿ ಬರೋಣ. ಆಗ ಅದನ್ನು 150 ರೂ.ಗಳಿಗೆ ಕೊಡಬಹುದು ಎಂದು ಭಾವಿಸಿದ ವ್ಯಾಪಾರಿ ಮತ್ತೆ ಮೇಳ ಸುತ್ತಲು ಹೊರಟ.

ಒಂದು ಸುತ್ತು ಹೋಗಿ ಬಂದಾಗ ಆ ನಿರ್ದಿಷ್ಟ ಗಾಜಿನ ಶೈನಿಂಗ್ ಪೀಸ್ ಕಾಣೆಯಾಗಿತ್ತು. ಆಗ ಅವನು ʻಆಗ ನಾನೊಂದು ಪೀಸ್ ನೋಡಿದ್ನಲ್ಲ. ಅದು ಎಲ್ಲಿ ಹೋಯಿತು’ ಎಂದು ಕೇಳಿದ.

ಆಗ ಅಂಗಡಿಯವನು: ʻಓ ಅದಾ ಅದು ಮಾರಾಟ ಆಯಿತು. ನೀವು ಬೇಕೂಂತ ಹೇಳಿರಲಿಲ್ಲʼ ಅಂದ.
ಆಗ ಚಿನ್ನಾಭರಣ ವ್ಯಾಪಾರಿ: ʻಎಂಥ ಮೂರ್ಖ ಮಾರಾಯ ನೀನು. ಅದು ಬರೀ ಗಾಜಿನ ಪೀಸ್ ಅಲ್ಲ. ಅದು ವಜ್ರ ಮಾರಾಯ. ಮಾರ್ಕೆಟ್‍ನಲ್ಲಿ ಅದಕ್ಕೆ ಎಷ್ಟು ಕಡಿಮೆ ಎಂದರೂ ಒಂದು ಲಕ್ಷ ರೂ. ಬೆಲೆ ಉಂಟು. ಅವನು ನಿನ್ನನ್ನು ಮಂಗ ಮಾಡಿ ಹೋದ- ಎಂದ.

ಆಗ ಅಂಗಡಿಯವನು: ʻನಾನು ಮೂರ್ಖ ಅಲ್ಲ ಸ್ವಾಮೀ.. ನೀವೇ ಮೂರ್ಖರು. ನನಗೆ ಅದು ವಜ್ರದ್ದೋ ಇನ್ನೊಂದೋ ಗೊತ್ತಿಲ್ಲ. ನನಗೆ ಬಂದಿರುವ ಮಾಲುಗಳಲ್ಲಿ ಅದೂ ಇತ್ತು. ನನಗೆ ಅದು 100 ರೂ.ಗೆ ಸಿಕ್ಕಿತ್ತು. ಅದು ವಜ್ರ ಅಂತ ಗೊತ್ತಾದ ಮೇಲೂ ಅದನ್ನು 200 ರೂ. ಬದಲು 150 ರೂ. ಕೇಳಿದಿರಿ. ಅದನ್ನು ಖರೀದಿಸಿದ ವ್ಯಕ್ತಿ ನಾನು 200 ರೂ. ಎಂದರೂ ಐನೂರರ ನೋಟು ಕೊಟ್ಟು ಚಿಲ್ಲರೆಯನ್ನೂ ಇಟ್ಟುಕೊ ಎಂದು ಬಿಟ್ಟು ಹೋಗಿದ್ದಾರೆ. ನನಗೆ 400 ರೂ. ಲಾಭ ಬಂದಿದೆ- ಎಂದ.

ಚಿನ್ನಾಭರಣ ವ್ಯಾಪಾರಿ ಛೆ ಎಂದು ಕೈ ಕೈ ಹಿಸುಕಿಕೊಂಡ. ತನ್ನ ಸಣ್ಣ ಮನಸ್ಸಿನಿಂದ ಎಂಥಾ ಅವಕಾಶ ಮಿಸ್ ಆಯ್ತಲ್ಲ ಅಂತ ಬೇಜಾರಾದ.

ಇದನ್ನೂ ಓದಿ | Motivational story | ಪಕ್ಕದ್ಮನೆ ಆಂಟಿ, ಕೊಳಕು ಶರ್ಟ್‌ ಮತ್ತು ಅಮ್ಮ ಹೇಳಿದ ಕ್ಲೀನ್‌ ಸ್ಟೋರಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ಪ್ರಜ್ವಲ್‌ ರೇವಣ್ಣ ಅಜ್ಞಾತವಾಸಕ್ಕೆ ಒಂದು ತಿಂಗಳು, ಎಲ್ಲಿದ್ದೀಯಪ್ಪಾ ಪ್ರಜ್ವಲ್?

Prajwal Revanna Case: ಏಪ್ರಿಲ್ 26ರಂದು ನಡೆದ ಎರಡನೇ ಹಂತದ ಮತದಾನ ಮುಗಿಸಿ ಪ್ರಜ್ವಲ್‌ ಮಾರನೇ ದಿನ ಮುಂಜಾನೆ ದೇಶ ಬಿಟ್ಟು ಎಸ್ಕೇಪ್ ಆಗಿದ್ದರು. ತಲೆ ಮರೆಸಿಕೊಂಡು ತಿಂಗಳು ಕಳೆದರೂ ಅವರ ಸುಳಿವು ಪತ್ತೆಯಾಗಿಲ್ಲ. ಒಂದು ತಿಂಗಳಿನಿಂದ ಎಸ್‌ಐಟಿಗೆ (SIT) ಚಳ್ಳೆ ಹಣ್ಣು ತಿನ್ನಿಸಿ ತಲೆ ಮರೆಸಿಕೊಂಡಿರುವ ಪ್ರಜ್ವಲ್‌ ವಿರುದ್ಧ ಮೂರು ಅತ್ಯಾಚಾರ ಆರೋಪ ಕೇಸ್‌ಗಳಿವೆ.

VISTARANEWS.COM


on

Prajwal Revanna Case Will SIT team go abroad for arrest Prajwal
Koo

ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ (pen drive case video viral) ಪ್ರಕರಣಕ್ಕೆ ಸಂಬಂಧಿಸಿ ತನಿಖೆಯಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಹಾರಿರುವ ಪ್ರಜ್ವಲ್ ರೇವಣ್ಣ ಅವರ ದೇಶಾಂತರ ವಾಸಕ್ಕೆ ಒಂದು ತಿಂಗಳು ಪೂರ್ಣವಾಗಿದೆ. ಇನ್ನೂ ಅವರು ದೇಶಕ್ಕೆ ಹಿಂದಿರುಗುವ ಯಾವ ಸುಳಿವನ್ನೂ ಕಾಣಿಸಿಲ್ಲ.

ಏಪ್ರಿಲ್ 26ರಂದು ನಡೆದ ಎರಡನೇ ಹಂತದ ಮತದಾನ ಮುಗಿಸಿ ಪ್ರಜ್ವಲ್‌ ಮಾರನೇ ದಿನ ಮುಂಜಾನೆ ದೇಶ ಬಿಟ್ಟು ಎಸ್ಕೇಪ್ ಆಗಿದ್ದರು. ತಲೆ ಮರೆಸಿಕೊಂಡು ತಿಂಗಳು ಕಳೆದರೂ ಅವರ ಸುಳಿವು ಪತ್ತೆಯಾಗಿಲ್ಲ. ಒಂದು ತಿಂಗಳಿನಿಂದ ಎಸ್‌ಐಟಿಗೆ (SIT) ಚಳ್ಳೆ ಹಣ್ಣು ತಿನ್ನಿಸಿ ತಲೆ ಮರೆಸಿಕೊಂಡಿರುವ ಪ್ರಜ್ವಲ್‌ ವಿರುದ್ಧ ಮೂರು ಅತ್ಯಾಚಾರ ಆರೋಪ ಕೇಸ್‌ಗಳಿವೆ.

ಮೂರು ಕೇಸ್ ದಾಖಲಾದರೂ ತಲೆ ಕೆಡಿಸಿಕೊಳ್ಳದ ಪ್ರಜ್ವಲ್ ತಂದೆ ಎಚ್‌.ಡಿ ರೇವಣ್ಣ (HD revanna) ಅವರ ಬಂಧನವಾದ್ರೂ ಹಿಂದಿರುಗಿಲ್ಲ. ಚಿಕ್ಕಪ್ಪ, ಮಾಜಿ ಸಿಎಂ‌ ಎಚ್‌.ಡಿ ಕುಮಾರಸ್ವಾಮಿ (HD Kumaraswami) ಮನವಿಗೂ ಡೋಂಟ್ ಕೇರ್ ಮಾಡಿದ್ದಾರೆ. ತಾತ, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ (HD Deve gowda) ಎಚ್ಚರಿಕೆಗೂ ಸೊಪ್ಪುಹಾಕಿಲ್ಲ. ʼಕೂಡಲೇ ಹಿಂದಿರುಗಿ ಬಾರದಿದ್ದರೆ ಕುಟುಂಬದಲ್ಲಿ ಒಂಟಿಯಾಗಬೇಕಾಗುತ್ತದೆʼ ಎಂದು ದೇವೇಗೌಡರು ಎಚ್ಚರಿಸಿದ್ದರೂ ಪ್ರಜ್ವಲ್‌ ತುಟಿ ಪಿಟಕ್‌ ಎಂದಿಲ್ಲ.

ಪ್ರಜ್ವಲ್ ಎಲ್ಲಿದ್ದಾನೆಂಬ ಖಚಿತ ಮಾಹಿತಿ ಎಸ್ಐಟಿಗೆ ದೊರೆತಿಲ್ಲ. ಜರ್ಮನಿ, ದುಬೈ, ಹಂಗೇರಿ, ಇಂಗ್ಲೆಂಡ್ ಹೀಗೆ ಹಲವು ದೇಶಗಳಲ್ಲಿ ಓಡಾಡಿದ್ದಾರೆ ಎಂದು ಹೇಳಲಾಗಿದೆ. ಜರ್ಮನಿಯಿಂದ ಹಿಂದಿರುಗುವ ಟಿಕೆಟ್‌ ರಿಸರ್ವ್‌ ಮಾಡಿಸಿ ನಂತರ ಕೊನೆಯ ಕ್ಷಣದಲ್ಲಿ ರದ್ದುಪಡಿಸಿದ್ದು ಗೊತ್ತಾಗಿದೆ. ಪ್ರಜ್ವಲ್‌ ಎಲ್ಲಿದ್ದಾರೆ ಎಂಬ ಸುಳಿವು ಹೊಂದಿರಬಹುದಾದ ಭವಾನಿ ರೇವಣ್ಣ (Bhavani revanna) ಕೂಡ ವಿಚಾರಣೆಗೆ ಹಾಜರಾಗಿಲ್ಲ.

ಪ್ರಜ್ವಲ್ ಹೊಂದಿರುವ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದುಗೊಳಿಸಲು ಕೋರಿ ಕೇಂದ್ರ ವಿದೇಶಾಂಗ ಇಲಾಖೆಗೆ ರಾಜ್ಯ ಸರ್ಕಾರ ಎರಡೆರಡು ಸಲ ಪತ್ರ ಬರೆದಿದೆ. ಈ ವಾರ ಪಾಸ್‌ಪೋರ್ಟ್ ರದ್ದಾದರೆ ಪ್ರಜ್ವಲ್ ವಾಪಸ್ ಮರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಹೀಗಾಗಿ ಕೇಂದ್ರ ಗೃಹ ಇಲಾಖೆ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.

ಇನ್ನೊಂದು ಕಡೆ, ಪ್ರಜ್ವಲ್‌ನ ಕರೆಸಿ ಅಂತ ಪುತ್ರ ರೇವಣ್ಣಗೆ ದೇವೇಗೌಡರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ವಾರ್ನಿಂಗ್ ಬೆನ್ನಲ್ಲೇ ಪ್ರಜ್ವಲ್ ವಾಪಸ್ ಕರೆಸಲು ಕಸರತ್ತು ಜೋರಾಗಿದೆ. ಪ್ರಜ್ವಲ್ ಸಂಪರ್ಕಕ್ಕೆ ರೇವಣ್ಣ ಕುಟುಂಬಸ್ಥರು ಯತ್ನಿಸುತ್ತಿದ್ದು, ಪ್ರಜ್ವಲ್ ತಾಯಿ ಕಡೆಯ ಸಂಬಂಧಿಕರ ಮೂಲಕ ಹಾಗೂ ವಿದೇಶದಲ್ಲಿರುವ ಪ್ರಜ್ವಲ್ ಸ್ನೇಹಿತರ ಮೂಲಕವೂ ಸಂಪರ್ಕಕ್ಕೆ ತೀವ್ರ ಪ್ರಯತ್ನ ನಡೆಯುತ್ತಿದೆ.

ಇನ್ನು ಎರಡು ಮೂರು ದಿನಗಳಲ್ಲಿ ಪ್ರಜ್ವಲ್‌ನನ್ನು ಕರೆಸಿ ಎಸ್ಐಟಿ ಮುಂದೆ ಹಾಜರು ಮಾಡಿಸಲು ಶತ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಪ್ರಜ್ವಲ್ ರೇವಣ್ಣಗೆ ವಿದೇಶಾಂಗ ಸಚಿವಾಲಯ ಶೋಕಾಸ್ ನೋಟಿಸ್ ನೀಡಿದೆ. ಒಂದು ವೇಳೆ ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದಾದರೆ ಪ್ರಕರಣದಲ್ಲಿ ಪ್ರಜ್ವಲ್‌ಗೆ ಸಂಕಷ್ಟ ಎದುರಾಗಲಿದೆ. ಆಗ ಕುಟುಂಬಕ್ಕೆ ಮತ್ತಷ್ಟು ಮುಜುಗರ ಉಂಟಾಗುತ್ತದೆ. ತೀವ್ರ ಸ್ವರೂಪದ ಮುಜುಗರ ತಪ್ಪಿಸಿಕೊಳ್ಳಲು ಪ್ರಜ್ವಲ್ ವಿದೇಶದಿಂದ ಕರೆಸಲು ರೇವಣ್ಣ ಕುಟುಂಬಸ್ಥರು ಎಲ್ಲಾ ಆಯಾಮದಲ್ಲೂ ಪ್ರಯತ್ನ ಮಾಡುತ್ತಿದ್ದಾರೆ.

ಚುನಾವಣೆ ಫಲಿತಾಂಶ ಜೂನ್‌ 4ರಂದು ಬರಲಿದ್ದು, ಅದಕ್ಕೂ ಮುನ್ನ ಪ್ರಜ್ವಲ್‌ ದೇಶಕ್ಕೆ ಮರಳುವುದು ಅಸಂಭವ ಎನ್ನಲಾಗುತ್ತಿದೆ. ಈ ಸಲದ ಚುನಾವಣೆಯಲ್ಲಿ ಸೋತರೆ ಅನಿವಾರ್ಯವಾಗಿ ಶರಣಾಗಬೇಕಾಗುತ್ತದೆ. ಗೆದ್ದರೆ ಸಂಸದೀಯ ಸ್ಥಾನದ ಪ್ರಭಾವ ಬಳಸುವ ಸಾಧ್ಯತೆಯಿದೆ.

ಇದನ್ನೂ ಓದಿ: Prajwal Revanna Case: ವಿಡಿಯೊ ವೈರಲ್ ಅಪರಾಧದ ಸೆಕ್ಷನ್ ಹೇಳಿದ ಎಚ್‌ಡಿಕೆ; ಸಿಎಂ ಕುರ್ಚಿಯಲ್ಲಿ ಊಸರವಳ್ಳಿ ಎಂದು ಕಿಡಿ

Continue Reading

ಕ್ರಿಕೆಟ್

Chris Gayle : ಎಣ್ಣೆ ಹೊಡಿತಾ ಕೆಕೆಆರ್ ತಂಡಕ್ಕೆ ಶುಭಾಶಯ ತಿಳಿಸಿದ ಕ್ರಿಸ್​ ಗೇಲ್; ಇಲ್ಲಿದೆ ವಿಡಿಯೊ

Chris Gayle : ಗೇಲ್ 2009 ಮತ್ತು 2010ರ ಐಪಿಎಲ್ ಆವೃತ್ತಿಗಳಲ್ಲಿ ಕೆಕೆಆರ್ ಪರ ಆಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ವೀಡಿಯೊದಲ್ಲಿ, ಮಾಜಿ ನೈಟ್ ರೈಡರ್ ತನ್ನ ಮಾಜಿ ಫ್ರಾಂಚೈಸಿ ಮತ್ತು ವೆಸ್ಟ್ ಇಂಡೀಸ್ ತಂಡದ ಆಟಗಾರರನ್ನು ಅಭಿನಂದಿಸಿದ್ದರು. ಜನಪ್ರಿಯ ಹಾಡಾದ ‘ಡ್ಯಾನ್ಜಾ ಕುಡುರೊ’ ಹಾಡಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.

VISTARANEWS.COM


on

Chris Gayle
Koo

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಮೇ 26) ನಡೆದ ಐಪಿಎಲ್ 2024ನೇ (IPL 2024) ಆವೃತ್ತಿಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಶ್ರೇಯಸ್​ ಅಯ್ಯರ್ (Shreyas Iyer)​ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಡೀ ಕೆಕೆಆರ್​ ತಂಡ ಹಾಗೂ ಆ ಫ್ರಾಂಚೈಸಿಯ ಅಭಿಮಾನಿಗಳು ಸಂಭ್ರಮಿಸುತ್ತಿರುವ ನಡುವೆಯೇ ಐಪಿಎಲ್​ನ ಮಾಜಿ ಸ್ಟಾರ್ ಆಟಗಾರ ಕ್ರಿಸ್ ಗೇಲ್ (Chris Gayle ) ಪಾರ್ಟಿ ಮಾಡುತ್ತಾ ಎಣ್ಣೆ ಹೊಡೆಯುತ್ತಾ ಸಂಭ್ರಮಿಸಿದ್ದಾರೆ. ಅವರು ವಿಡಿಯೊವೊಂದನ್ನು ಮಾಡಿದ ಅದರಲ್ಲಿ ಕೆಕೆಆರ್ ಬಳಗಕ್ಕೆ ಶುಭಾಶಯ ತಿಳಿಸಿದ್ದಾರೆ. ಈ ವೇಳೆ ಅವರು ಕೆರಿಬಿಯನ್ ಆಟಗಾರರಾದ ಆ್ಯಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ಅವರನ್ನು ಅಭಿನಂದಿಸಿದ್ದಾರೆ.

ಗೇಲ್ 2009 ಮತ್ತು 2010ರ ಐಪಿಎಲ್ ಆವೃತ್ತಿಗಳಲ್ಲಿ ಕೆಕೆಆರ್ ಪರ ಆಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ವೀಡಿಯೊದಲ್ಲಿ, ಮಾಜಿ ನೈಟ್ ರೈಡರ್ ತನ್ನ ಮಾಜಿ ಫ್ರಾಂಚೈಸಿ ಮತ್ತು ವೆಸ್ಟ್ ಇಂಡೀಸ್ ತಂಡದ ಆಟಗಾರರನ್ನು ಅಭಿನಂದಿಸಿದ್ದರು. ಜನಪ್ರಿಯ ಹಾಡಾದ ‘ಡ್ಯಾನ್ಜಾ ಕುಡುರೊ’ ಹಾಡಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಅವರ ಕೈಯಲ್ಲಿ ಮದಿರೆಯ ಲೋಟವೂ ಇತ್ತು. ಸುತ್ತ ಮುತ್ತ ಪಾರ್ಟಿಮಾಡುತ್ತಿದ್ದವರ ಜತೆ ಸೇರಿಕೊಂಡು ಅವರು ಹಾಡು ಹಾಡುತ್ತಾ ಐಪಿಎಲ್ ಚಾಂಪಿಯನ್​ ಎಂದು ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: IPL 2024 : ಕೆಕೆಆರ್​ ಗೆದ್ದ ಭಳಿಕ ವಿವಾದಿತ ಫ್ಲೈಯಿಂಗ್ ಕಿಸ್​ ಕೊಟ್ಟ ಶಾರುಖ್ ಖಾನ್​; ಇದಕ್ಕೂ ಒಂದು ಕಾರಣವಿದೆ

ಐಪಿಎಲ್ 2024 ರ ಫೈನಲ್ ಪಂದ್ಯವು ಏಕಪಕ್ಷೀಯವಾಗಿ ನಡೆಯಿತು. ಟಾಸ್ ಗೆದ್ದ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ ಕೆಕೆಆರ್ ಆರಂಭದಿಂದಲೂ ಬೌಲಿಂಗ್​ನಲ್ಲಿ ಮೇಲುಗೈ ಸಾಧಿಸಿತು. ಮಿಚೆಲ್ ಸ್ಟಾರ್ಕ್ ಮತ್ತು ವೈಭವ್ ಅರೋರಾ ಮೊದಲ ಎರಡು ಓವರ್​ಗಳಲ್ಲಿ ಅಪಾಯಕಾರಿ ಆರಂಭಿಕ ಜೋಡಿ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡುವ ಮೂಲಕ ಹೊಸ ಚೆಂಡಿನೊಂದಿಗೆ ಮಿಂಚಿದರು. ಎಸ್ಆರ್​​ಎಚ್​ 11 ಓವರ್ಗಳಲ್ಲಿ ಕೇವಲ 62 ರನ್​ಗಳಿಗೆ ಅರ್ಧದಷ್ಟು ವಿಕೆಟ್ ಕಳೆದುಕೊಂಡಿದ್ದರಿಂದ ಬಲ ಕುಸಿಯಿತು.

ರಸೆಲ್ ಮೂರು ವಿಕೆಟ್ ಪಡೆದರೆ, ಸ್ಪಿನ್ ಬೌಲಿಂಗ್ ಜೋಡಿ ನರೈನ್ ಮತ್ತು ವರುಣ್ ಚಕ್ರವರ್ತಿ ಕೂಡ ಬ್ಯಾಟರ್​ಗಳನ್ನು ನಿಯಂತ್ರಿಸಿದರು. ಹರ್ಷಿತ್ ರಾಣಾ ಕೂಡ ಎರಡು ವಿಕೆಟ್ ಪಡೆದು ಮಿಂಚಿದರು. ಆರೆಂಜ್ ಆರ್ಮಿ 18.3 ಓವರ್​ಗಳಿಗೆ 113 ರನ್​ ಬಾರಿಸಿ ಆಲ್​ಔಟ್​​ ಆಯಿತು.

ಕಮಿನ್ಸ್ ಮೊದಲ ಓವರ್​ನಲ್ಲಿ ಅಪಾಯಕಾರಿ ನರೈನ್ ವಿಕೆಟ್ ಪಡೆದರು. ರಹಮಾನುಲ್ಲಾ ಗುರ್ಬಾಜ್ ಮತ್ತು ವೆಂಕಟೇಶ್ ಅಯ್ಯರ್ 45 ಎಸೆತಗಳಲ್ಲಿ 91 ರನ್​ಗಳ ಜೊತೆಯಾಟವನ್ನು ದಾಖಲಿಸಿ ಕೆಕೆಆರ್ ಅನ್ನು ಗೆಲುವಿನ ಅಂಚಿಗೆ ಕೊಂಡೊಯ್ದರು. ಅಫ್ಘಾನಿಸ್ತಾನ ಕ್ರಿಕೆಟಿಗ 32 ಎಸೆತಗಳಲ್ಲಿ 39 ರನ್ ಗಳಿಸಿ ನಿರ್ಗಮಿಸಿದರು. ನಂತರ ನಾಯಕ ಶ್ರೇಯಸ್ ಅಯ್ಯರ್ ಆಡಿದರು ವೆಂಕಟೇಶ್ ಕೇವಲ 26 ಎಸೆತಗಳಲ್ಲಿ 52* ರನ್ ಗಳಿಸಿ ಗೆಲುವಿಗೆ ಕೊಡುಗೆ ಕೊಟ್ಟರು. ಕೆಕೆಆರ್ 8 ವಿಕೆಟ್ ಮತ್ತು 57 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು.

Continue Reading

ಕ್ರೀಡೆ

IPL 2024 : ಕೆಕೆಆರ್​ ಗೆದ್ದ ಬಳಿಕ ವಿವಾದಿತ ಫ್ಲೈಯಿಂಗ್ ಕಿಸ್​ ಕೊಟ್ಟ ಶಾರುಖ್ ಖಾನ್​; ಇದಕ್ಕೂ ಒಂದು ಕಾರಣವಿದೆ

IPL 2024: ರಾಣಾ ಅವರಿಗೆ ನಿಷೇಧ ಹೇರಿದ್ದು ನಿಯಮ ಪ್ರಕಾರ ಸರಿಯಾದ ನಿರ್ಧಾರ ಆಗಿರುವ ಹೊರತಾಗಿಯೂ, ಫ್ರಾಂಚೈಸಿ ಆ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು. ತಮ್ಮ ಶೈಲಿಯ ಸಂಭ್ರಮಕ್ಕೆ ಈ ರೀತಿಯ ದಂಡನೆ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದೀಗ ಫೈನಲ್​ ಪಂದ್ಯದ ಬಳಿಕ ಶಾರುಖ್ ಖಾನ್ ಅದೇ ರೀತಿ ಸಂಭ್ರಮಿಸಿದ್ದಾರೆ.

VISTARANEWS.COM


on

IPL 2024
Koo

ಚೆನ್ನೈ: ಐಪಿಎಲ್​ 17ನೇ ಆವೃತ್ತಿಯ (IPL 2024) ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ (SRH) ತಂಡವನ್ನು ಮಣಿಸಿದ ಕೆಕೆಆರ್ ತಂಡ (KKR) ಐಪಿಎಲ್​ನಲ್ಲಿ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದಿತು. ಇದರಿಂದ ಪುಳಕಿತರಾದ ಕೋಲ್ಕತಾ ನೈಟ್ ರೈಡರ್ಸ್ ಸಹ ಮಾಲೀಕ ಶಾರುಖ್ ಖಾನ್ (Sha Rukh Khan) ತಂಡದೊಂದಿಗೆ ಸಂಭ್ರಮಿಸಿದರು. ಮೈದಾನಕ್ಕೆ ಇಳಿದ ಅವರು ಆಟಗಾರರನ್ನು ಅಪ್ಪಿಕೊಂಡು ಸಂಭ್ರಮಿಸಿದರು. ಪ್ರತಿಯೊಬ್ಬ ಆಟಗಾರನ ಜತೆಯೂ ಅವರು ಮಾತುಕತೆ ನಡೆಸಿ ಸಂಭ್ರಮಿಸಿದರು. ಏತನ್ಮಧ್ಯೆ ಅವರು ವೇಗದ ಬೌಲರ್​ ಹರ್ಷಿತ್ ರಾಣಾ (Harshit Rana) ಅವರೊಂದಿಗೆ ವಿಭಿನ್ನ ರೀತಿಯಲ್ಲಿ ಸಂಭ್ರಮಿಸಿದರು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕ್ಲಿಪ್​ನಲ್ಲಿ ರಾಣಾ ಅವರ ಫ್ಲೈಯಿಂಗ್ ಕಿಸ್ ಆಚರಣೆಯನ್ನು ಅನುಕರಿಸಿದರು. ಇದು ವಿವಾದಕ್ಕೆ ಒಳಗಾದ ಭಂಗಿಯಾಗಿದೆ.

ಕೆಕೆಆರ್​ ಮತ್ತು ಎಸ್​ಆರ್​ಎಚ್​ ತಂಡಗಳ ನಡುವಿನ ಲೀಗ್ ಹಂತದ ಮೊದಲ ಲೆಗ್​ನ ಪಂದ್ಯದ ವೇಳೆ ಇದು ವಿವಾದಕ್ಕೆ ಒಳಗಾಗಿತ್ತು. ಹರ್ಷಿತ್​ ರಾಣಾ ಎಸ್​ಆರ್​ಎಚ್ ಬ್ಯಾಟರ್ ಮಯಾಂಕ್ ಅಗರ್ವಾಲ್ ಅವರನ್ನು ಔಟ್​ ಮಾಡಿದ ಬಳಿಕ ಅವರ ಕಡೆ ಕೈ ತೋರಿಸಿ ಗಾಳಿಯಲ್ಲಿ ಕಿಸ್​ ಕೊಟ್ಟಿದ್ದರು. ಇದು ಎದುರಾಳಿ ತಂಡ ಆಟಗಾರನ ಅವಹೇಳ ಎಂದು ಭಾವಿಸಿದ ಮ್ಯಾಚ್ ರೆಫರಿ ದಂಡ ವಿಧಿಸಿದ್ದರು. ರಾಣಾ ನಂತರದ ಪಂದ್ಯದಲ್ಲಿಯೂ ಅದನ್ನು ಪುನರಾವರ್ತಿಸಿದ್ದರು. ಇದರಿಂದ ಕೆರಳಿದ ಬಿಸಿಸಿಐ ನೀತಿ ಸಂಹಿತೆಯ ಕಾವಲು ತಂಡ ರಾಣಾಗೆ ಒಂದು ಪಂದ್ಯದಿಂದ ನಿಷೇಧ ಹೇರಿತು. ಅಲ್ಲಿಂದ ಅವರು ಆ ರೀತಿ ಸಂಭ್ರಮಿಸಿರಲಿಲ್ಲ. ಬಾಯ್ಮುಚ್ಚು ಎಂಬಂತೆ ಸಂಭ್ರಮ ವ್ಯಕ್ರಪಡಿಸುತ್ತಿದ್ದರು.

ರಾಣಾ ಅವರಿಗೆ ನಿಷೇಧ ಹೇರಿದ್ದು ನಿಯಮ ಪ್ರಕಾರ ಸರಿಯಾದ ನಿರ್ಧಾರ ಆಗಿರುವ ಹೊರತಾಗಿಯೂ, ಫ್ರಾಂಚೈಸಿ ಆ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು. ತಮ್ಮ ಶೈಲಿಯ ಸಂಭ್ರಮಕ್ಕೆ ಈ ರೀತಿಯ ದಂಡನೆ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದೀಗ ಫೈನಲ್​ ಪಂದ್ಯದ ಬಳಿಕ ಶಾರುಖ್ ಖಾನ್ ಅದೇ ರೀತಿ ಸಂಭ್ರಮಿಸಿದ್ದಾರೆ.

ಕೆಕೆಆರ್​ಗೆ ಇದು ಅದ್ಭುತ ರಾತ್ರಿ: ಮಿಚೆಲ್ ಸ್ಟಾರ್ಕ್

ಫೈನಲ್ ಪಂದ್ಯದ ಬಗ್ಗೆ ಹೇಳುವುದಾದರೆ, ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಕ್ಕೆ ಇದು ಅದ್ಭುತ ರಾತ್ರಿಯಾಗಿತ್ತು. ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಕೇವಲ 113 ರನ್​​ಗಳಿಗೆ ಸೀಮಿತಗೊಳಿಸಿದ ಸಂದರ್ಭ ತಂಡದ ಬೌಲಿಂಗ್ ಘಟಕಕ್ಕೆ ನೆನಪಿನಲ್ಲಿ ಉಳಿಯುವ ದಿನವಾಗಿತ್ತು. ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: Mitchell Starc : ಇನ್ನು ಮುಂದೆ ಫುಲ್​ ಟೈಮ್ ಐಪಿಎಲ್​; ಏಕ ದಿನ ಕ್ರಿಕೆಟ್​ಗೆ ವಿದಾಯ ಹೇಳುವ ಸುಳಿವು ಕೊಟ್ಟ ಮಿಚೆಲ್ ಸ್ಟಾರ್ಕ್​

ವೇಗಿ ಮೂರು ಓವರ್​ಗಳನ್ನು ಎಸೆದರು. ಈ ವೇಳೆ ಅವರು 14 ರನ್​ ನೀಡಿದರು. ಎರಡು ಅದ್ಭುತ ವಿಕೆಟ್​ ಪಡೆದರು. ಪಂದ್ಯದ ನಂತರ, ಸ್ಟಾರ್ಕ್ ತಮ್ಮ ಋತುವಿನ ಬಗ್ಗೆ ಮತ್ತು ಈಗ ಮೂರು ಬಾರಿ ಐಪಿಎಲ್ ಚಾಂಪಿಯನ್​ಗಳಿಗೆ ರಾತ್ರಿ ಹೇಗೆ ಅದ್ಭುತವಾಗಿತ್ತು ಎಂಬುದರ ಬಗ್ಗೆ ಮಾತನಾಡಲು ಮುಂದೆ ಬಂದರು.

“ಕೆಕೆಆರ್ಗೆ ಇದು ಉತ್ತಮ ರಾತ್ರಿಯಾಗಿತ್ತು. ಬಹುಶಃ ಫೈನಲ್ ನಲ್ಲಿ ಎರಡು ಅತ್ಯಂತ ರೋಮಾಂಚಕಾರಿ ತಂಡಗಳು ಮುಖಾಮುಖಿಯಾಗಿದ್ದುವ. ಅದೊಂದು ವಿಭಿನ್ನ ಪ್ರಯಾಣವಾಗಿತ್ತು. ನಾವು ಅದ್ಭುತ ತಂಡವನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ. ಎಲ್ಲರ ಕೊಡುಗೆಗಳೊಂದಿಗೆ ನಾವು ಸ್ಥಿರವಾದ ತಂಡವಾಗಿ ಉಳಿದಿದ್ದೇವೆ. ಅದು ನಮ್ಮ ಯಶಸ್ಸಿನ ದೊಡ್ಡ ಭಾಗವಾಗಿತ್ತು. ನಾವು ಟಾಸ್ ಸೋತೆವು ಮತ್ತು ಮೊದಲು ಬೌಲಿಂಗ್ ಮಾಡಬೇಕಾಯಿತು. ಎರಡು ರಾತ್ರಿಗಳ ಹಿಂದೆ ಇಲ್ಲಿನ ಪಂದ್ಯವನ್ನು ವೀಕ್ಷಿಸಿದ ನಂತರ, (ಚೇಸ್ ಮಾಡಿದ ತಂಡ ಸೋತಿತ್ತು) ಏನನ್ನು ಮಾಡಬೇಕೆಂಬುದು ನಮಗೆ ತಿಳಿದಿರಲಿಲ್ಲ. ಆದರೆ ಬೌಲಿಂಗ್ ಘಟಕವು ತಮ್ಮಲ್ಲಿರುವ ಎಲ್ಲಾ ಕೌಶಲಗಳನ್ನು ತೋರಿಸಿತು”ಎಂದು ಮಿಚೆಲ್ ಸ್ಟಾರ್ಕ್ ಪಂದ್ಯದ ನಂತರದ ಸಮಾರಂಭದಲ್ಲಿ ಹೇಳಿದ್ದಾರೆ.

Continue Reading

ಕ್ರೀಡೆ

Mitchell Starc : ಇನ್ನು ಮುಂದೆ ಫುಲ್​ ಟೈಮ್ ಐಪಿಎಲ್​; ಏಕ ದಿನ ಕ್ರಿಕೆಟ್​ಗೆ ವಿದಾಯ ಹೇಳುವ ಸುಳಿವು ಕೊಟ್ಟ ಮಿಚೆಲ್ ಸ್ಟಾರ್ಕ್​

Mitchell Starc: ಸ್ಟಾರ್ಕ್ ಮುಂದಿನ ದಿನಗಳಲ್ಲಿ ತಮ್ಮ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ. ಈ ಋತುವಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಭಾಗವಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಸ್ಟಾರ್ಕ್ ಮುಂದಿನ ವರ್ಷಕ್ಕೆ ತಮ್ಮ ಲಭ್ಯತೆಯನ್ನು ದೃಢಪಡಿಸಿದರು. ಅವರು 2025 ರಲ್ಲಿ ಕೆಕೆಆರ್ ಪರ ಆಡುತ್ತಾರೆ ಎಂಬುದೇ ಅವರ ಮಾತಿನ ಅರ್ಥವಾಗಿದೆ.

VISTARANEWS.COM


on

Mitchell Starc
Koo

ನವದೆಹಲಿ: ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮತ್ತು ಐಪಿಎಲ್​ 2024 ರ (IPL 2024) ಪ್ಲೇಆಫ್​ ಹಂತದಲ್ಲಿ ಕೆಕೆಆರ್​ ತಂಡದ ಹೀರೋ ಮಿಚೆಲ್ ಸ್ಟಾರ್ಕ್ (Mitchell Starc) ಫ್ರ್ಯಾಂಚೈಸಿ ಕ್ರಿಕೆಟ್​ಗೆ ಹೆಚ್ಚಿನ ಆಸಕ್ತಿ ತೋರುವ ಲಕ್ಷಣ ಕಾಣುತ್ತಿದೆ. ಅವರು ತಮ್ಮ ರಾಷ್ಟ್ರೀಯ ವೇಳಾಪಟ್ಟಿಯನ್ನು ಮುಕ್ತಗೊಳಿಸಲು ಏಕದಿನ ಕ್ರಿಕೆಟ್​ಗೆ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದಾರೆ. ಐಪಿಎಲ್ ಗೆದ್ದ ನಂತರ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಟಾರ್ಕ್, ಪಂದ್ಯಾವಳಿಯಲ್ಲಿ ಆಡಲು ಮುಂದಿನ ವರ್ಷ ಮರಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ವೇಳೆ ಅವರು ನಿವೃತ್ತಿಯ ಆಯ್ಕೆಯನ್ನು ಬಯಸಿದ್ದಾರೆ. ವೇಗದ ಬೌಲರ್ ತಮ್ಮ ಜೀವನದ ಕೊನೆಯ 9 ವರ್ಷಗಳಲ್ಲಿ ಆಸ್ಟ್ರೇಲಿಯಾಕ್ಕೆ ಆದ್ಯತೆ ನೀಡಿದ್ದರು. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​​ ವೃತ್ತಿಜೀವನದ ಅಂತ್ಯವನ್ನು ಸಮೀಪಿಸುತ್ತಿರುವುದರಿಂದ ವಿಷಯ ಸ್ವಲ್ಪ ಬದಲಾಗಲಿದೆ ಎಂದು ಹೇಳಿದ್ದಾರೆ.

2024 ರ ಹರಾಜಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್​ ಆದ ಸ್ಟಾರ್ಕ್, 2015 ರ ನಂತರ ಮೊದಲ ಬಾರಿಗೆ ಐಪಿಎಲ್ ಆಡಲು ಮರಳಿದ್ದರು. ಸ್ಟಾರ್ಕ್ ಅವರ 24.25 ಕೋಟಿ ರೂ.ಗಳ ಮೌಲ್ಯವು ಆ ಸಮಯದಲ್ಲಿ ಹುಬ್ಬೇರುವಂತೆ ಮಾಡಿತು. ಐಪಿಎಲ್​​ನ ಮೊದಲಾರ್ಧದಲ್ಲಿ ಅವರ ಕಳಪೆ ಆರಂಭದ ನಂತರ ಟೀಕೆಗಳು ಹೆಚ್ಚಾದವು. ಆದರೆ ವೇಗಿ ತಿರುಗೇಟು ನೀಡಿದರು ಮತ್ತು ಅನಿವಾರ್ಯ ಅವಧಿಯಲ್ಲಿ ವಿಕೆಟ್​ಗಳನ್ನು ಪಡೆದರು.

ಸ್ಟಾರ್ಕ್ ಮುಂದಿನ ದಿನಗಳಲ್ಲಿ ತಮ್ಮ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ. ಈ ಋತುವಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಭಾಗವಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಸ್ಟಾರ್ಕ್ ಮುಂದಿನ ವರ್ಷಕ್ಕೆ ತಮ್ಮ ಲಭ್ಯತೆಯನ್ನು ದೃಢಪಡಿಸಿದರು. ಅವರು 2025 ರಲ್ಲಿ ಕೆಕೆಆರ್ ಪರ ಆಡುತ್ತಾರೆ ಎಂಬುದೇ ಅವರ ಮಾತಿನ ಅರ್ಥವಾಗಿದೆ.

“ಕಳೆದ 9 ವರ್ಷಗಳಿಂದ ನಾನು ಆಸ್ಟ್ರೇಲಿಯಾ ತಂಡದ ಪರ ಕ್ರಿಕೆಟ್​ಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಐಪಿಎಲ್ ನನ್ನ ಬಿಡುವಿನ ಸಮಯಕ್ಕೆ ಆಗಿತ್ತು. ನನ್ನ ದೇಹಕ್ಕೆ ವಿರಾಮ ನೀಡಿ ಮತ್ತು ನನ್ನ ಹೆಂಡತಿಯೊಂದಿಗೆ ಸ್ವಲ್ಪ ಸಮಯ ಕಳೆಯುತ್ತೇನೆ. ಕಳೆದ 9 ವರ್ಷಗಳಿಂದ ದೃಷ್ಟಿಕೋನವು ಖಂಡಿತವಾಗಿಯೂ ಅದೇ ಆಗಿತ್ತು. ಮುಂದೆ ಸಾಗುತ್ತಾ, ಖಂಡಿತವಾಗಿಯೂ ನಾನು ನನ್ನ ವೃತ್ತಿಜೀವನದ ಅಂತ್ಯಕ್ಕೆ ಹತ್ತಿರದಲ್ಲಿದ್ದೇನೆ. ಆದ್ದರಿಂದ, ಒಂದು ಸ್ವರೂಪದ ಕ್ರಿಕೆಟ್​ (ಒಡಿಐ) ಕೊನೆಗೊಳ್ಳಬಹುದು. ಇದು ಇನ್ನೂ ದೂರದಲ್ಲಿದೆ. ಮುಂದಿನ ಏಕದಿನ ವಿಶ್ವಕಪ್ ತನಕ ಆ ಸ್ವರೂಪವು ಮುಂದುವರಿಯುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಹೆಚ್ಚಿನ ಫ್ರ್ಯಾಂಚೈಸಿ ಕ್ರಿಕೆಟ್​ಗೆ ಬಾಗಿಲು ತೆರೆಯಬಹುದು, ಆದ್ದರಿಂದ, ನಾನು ಈ ಋತುವನ್ನು ಸಂಪೂರ್ಣವಾಗಿ ಆನಂದಿಸಿದ್ದೇನೆ. ಇದು ಅದ್ಭುತ ಆಟಗಾರರನ್ನು ಹೊಂದಿರುವ ಅದ್ಭುತ ಪಂದ್ಯಾವಳಿಯಾಗಿದೆ ಮತ್ತು ಯಶಸ್ಸು ಅದ್ಭುತವಾಗಿದೆ”ಎಂದು ಮಿಚೆಲ್ ಸ್ಟಾರ್ಕ್ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

“ಮುಂದಿನ ವರ್ಷ, ನನಗೆ ವೇಳಾಪಟ್ಟಿ ನಿಖರವಾಗಿ ತಿಳಿದಿಲ್ಲ. ಆದರೆ ನಾನು ಹೇಳಿದಂತೆ, ನಾನು ಇದವರೆಗಿನ ಆಟವನ್ನು ಆನಂದಿಸಿದೆ. ನಾನು ಮುಂದಿನ ವರ್ಷ ಹಿಂತಿರುಗಲು ಎದುರು ನೋಡುತ್ತಿದ್ದೇನೆ. ಮುಂದಿನ ವರ್ಷ ಮತ್ತೊಮ್ಮೆ ನೇರಳೆ ಬಣ್ಣದ ಜೆರ್ಸಿ ಧರಿಸುವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಶಾರುಖ್​ ಮಾಲೀಕತ್ವದ ಕೆಕೆಆರ್ ವಿರುದ್ಧ ಎಸ್​ಆರ್​ಎಚ್​ ಸೋತಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅಮಿತಾಭ್ ಬಚ್ಚನ್​​

ಸ್ಟಾರ್ಕ್ ತಮ್ಮ ಲಭ್ಯತೆಯನ್ನು ಖಚಿತಪಡಿಸುವುದರಿಂದ ಕೆಕೆಆರ್ ತಂಡವನ್ನು ಬಿಕ್ಕಟ್ಟಿಗೆ ಸಿಲುಕಿಸುತ್ತದೆ. ಮುಂದಿನ ಆವೃತ್ತಿಯಲ್ಲಿ ಮೆಗಾ ಹರಾಜು ನಡೆಯಲಿದೆ. ಅದಕ್ಕೆ ಮೊದಲು ಗರಿಷ್ಠ 4 ಆಟಗಾರರನ್ನು ಮಾತ್ರ ಉಳಿಸಲು ಫ್ರಾಂಚೈಸಿಗೆ ಅವಕಾ ಇದೆ. ಆದರೆ ಸ್ಟಾರ್ಕ್ ಅವರು ಲಭ್ಯವಿರುವುದರಿಂದ, ಕೆಕೆಆರ್ ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಫಿಲ್ ಸಾಲ್ಟ್, ಹರ್ಷಿತ್ ರಾಣಾಯಲ್ಲಿ ಯಾರನ್ನು ಆಯ್ಕೆ ಮಾಡುತ್ತಾರೆ ಎಂದು ಕಾದು ನೋಡಬೇಕು.

ಆಸ್ಟ್ರೇಲಿಯಾದ ಆಟಗಾರ ಮುಂಬರುವ ದಿನಗಳಲ್ಲಿ ಯುಎಸ್ಎಗೆ ಹಾರಲಿದ್ದಾರೆ. 2024 ರ ಟಿ 20 ವಿಶ್ವಕಪ್​​ನಲ್ಲಿ ತಮ್ಮ ಮೊದಲ ಗುಂಪು ಹಂತದ ಪಂದ್ಯಕ್ಕೆ ಸ್ವಲ್ಪ ಮೊದಲು ಆಸ್ಟ್ರೇಲಿಯಾ ತಂಡವನ್ನು ಸೇರಿಕೊಳ್ಳಲಿದ್ದಾರೆ.

Continue Reading
Advertisement
Prajwal Revanna Case Will SIT team go abroad for arrest Prajwal
ಕ್ರೈಂ5 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಜ್ಞಾತವಾಸಕ್ಕೆ ಒಂದು ತಿಂಗಳು, ಎಲ್ಲಿದ್ದೀಯಪ್ಪಾ ಪ್ರಜ್ವಲ್?

Robert Vadra
ದೇಶ5 mins ago

Robert Vadra: “ಮಣಿಶಂಕರ್‌ ಅಯ್ಯರ್‌ ಬಾಯಿ ಬಡುಕ…ಕೇಜ್ರಿವಾಲ್‌ ಅವಕಾಶವಾದಿ”-ರಾಬರ್ಟ್‌ ವಾದ್ರಾ ಅಚ್ಚರಿಯ ಹೇಳಿಕೆ

Gautam Gambhir
ಕ್ರೀಡೆ18 mins ago

Gautam Gambhir : ಟ್ರೋಫಿ ಗೆದ್ದ ಸಂಭ್ರಮ; ಗಂಭೀರ್​ಗೆ ಖಾಲಿ ಚೆಕ್​ ಕೊಟ್ಟರೇ ಶಾರುಖ್​ ಖಾನ್​ ?

Netraa Jadhav Out From Serial perform Yakshagana on the special occasion
ಕಿರುತೆರೆ32 mins ago

Netraa Jadhav: ಸೀರಿಯಲ್‌ನಿಂದ ಔಟ್‌ ಆಗುತ್ತಿದ್ದಂತೆ ʻಯಕ್ಷಗಾನʼದಲ್ಲಿ ಶಾರ್ವರಿ ಶೈನ್‌!

Pune Porsche accident
ದೇಶ52 mins ago

Pune Porsche accident: ಕಾರು ಗುದ್ದಿ ಇಬ್ಬರನ್ನು ಸಾಯಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ; ಇಬ್ಬರು ವೈದ್ಯರು ಅರೆಸ್ಟ್‌

Chris Gayle
ಕ್ರಿಕೆಟ್52 mins ago

Chris Gayle : ಎಣ್ಣೆ ಹೊಡಿತಾ ಕೆಕೆಆರ್ ತಂಡಕ್ಕೆ ಶುಭಾಶಯ ತಿಳಿಸಿದ ಕ್ರಿಸ್​ ಗೇಲ್; ಇಲ್ಲಿದೆ ವಿಡಿಯೊ

Comedy Khiladigalu anchor anushree and Jaggesh Remembers Dogs
ಕಿರುತೆರೆ1 hour ago

Comedy Khiladigalu: ನನ್ನ ಮಗ ಚಿನ್ನುವನ್ನು ಇದೇ ಕೈಯಲ್ಲಿ ಕಳ್ಕೊಂಡೆ: ಅನುಶ್ರೀ ಭಾವುಕ!

kalaburagi illegal relationship
ಕ್ರೈಂ1 hour ago

Illegal Relationship:`ಅತ್ತಿಗೆಯಿಂದ ದೂರ ಇರುʼ ಎಂದ ಮೈದುನನ ಬರ್ಬರವಾಗಿ ಹತ್ಯೆ ಮಾಡಿದ ಪ್ರಿಯಕರ

IPL 2024
ಕ್ರೀಡೆ1 hour ago

IPL 2024 : ಕೆಕೆಆರ್​ ಗೆದ್ದ ಬಳಿಕ ವಿವಾದಿತ ಫ್ಲೈಯಿಂಗ್ ಕಿಸ್​ ಕೊಟ್ಟ ಶಾರುಖ್ ಖಾನ್​; ಇದಕ್ಕೂ ಒಂದು ಕಾರಣವಿದೆ

Ranbir Kapoor and Alia Bhatt flew to Italy
ಬಾಲಿವುಡ್2 hours ago

Anant Ambani Radhika: ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌: ಇಟಲಿಗೆ ಹೊರಟ ಆಲಿಯಾ ಭಟ್ ದಂಪತಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ17 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು18 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ7 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌