Adi Yogi | ನೀವೇ ನಿರ್ಮಿಸಿಕೊಂಡ ಬೇಲಿಗಳಿಂದ ಹೊರಬನ್ನಿ; ಸದ್ಗುರು: ಚಿಕ್ಕಬಳ್ಳಾಪುರದಲ್ಲಿ ಆದಿ ಯೋಗಿ ಪ್ರತಿಮೆ - Vistara News

ಅಧ್ಯಾತ್ಮ

Adi Yogi | ನೀವೇ ನಿರ್ಮಿಸಿಕೊಂಡ ಬೇಲಿಗಳಿಂದ ಹೊರಬನ್ನಿ; ಸದ್ಗುರು: ಚಿಕ್ಕಬಳ್ಳಾಪುರದಲ್ಲಿ ಆದಿ ಯೋಗಿ ಪ್ರತಿಮೆ

ಈಗಾಗಲೆ ಕೊಯಮತ್ತೂರಿನಲ್ಲಿರುವ ಮಾದರಿಯಲ್ಲೇ ಚಿಕ್ಕಬಳ್ಳಾಪುರದಲ್ಲಿಯೂ ಆದಿ ಯೋಗಿ ಪ್ರತಿಮೆಯ ನಿರ್ಮಾಣವಾಗಿದ್ದು, ಪ್ರಮುಖ ಧಾರ್ಮಿಕ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.

VISTARANEWS.COM


on

adi-yogi-come-out-of-self-made-fence-says-sadhguru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಾನವರು ಹುಟ್ಟುತ್ತ ಯಾವುದೇ ಬೇಲಿಗಳಿಲ್ಲದೇ ಇರುತ್ತಾರೆ. ಆದರೆ ನಂತರದಲ್ಲಿ ತಮ್ಮ ಸುತ್ತಲೇ ಬೇಲಿಗಳನ್ನು ನಿರ್ಮಿಸಿಕೊಳ್ಳುತ್ತ ಅದನ್ನೇ ನಿಜವಾದ ಪ್ರಪಂಚ ಎಂದು ಭಾವಿಸುತ್ತಾರೆ. ಅದರಿಂದ ಹೊರಬರಬೇಕು ಎಂದು ಈಶ ಫೌಂಡೇಷನ್‌ನ ಸದ್ಗುರು ತಿಳಿಸಿದ್ದಾರೆ. ಚಿಕ್ಕಬಳ್ಳಾಪುರದ ಅವಲಗುರ್ಕಿಯಲ್ಲಿ ನಿರ್ಮಾಣವಾಗಿರುವ 112 ಅಡಿ ಎತ್ತರದ ಆದಿಯೋಗಿ (Adi Yogi) ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದರು.

ಮಾನವರು ಅನೇಕ ರೂಪಗಳಲ್ಲಿ ಜೀವನ ನಡೆಸುತ್ತಾರೆ. ನಮ್ಮ ದೇಹದಲ್ಲಿ ಸಣ್ಣ ಪ್ರಮಾಣದಲ್ಲಿ ಇದರಿಂದ ಸಂತೋಷ ಉಂಟಾಗುತ್ತದೆ. ನಮ್ಮ ನಿಜವಾದ ವ್ಯಕ್ತಿತ್ವವನ್ನು ಸ್ಪರ್ಷಿಸುವುದರಿಂದ ಸಾಮಾನ್ಯ ಜೀವಿಯಿಂದ ಮೇಲೆದ್ದು ಉನ್ನತ ಮಟ್ಟವನ್ನು ತಲುಪುತ್ತೇವೆ.

ಅಂತಹ ವ್ಯಕ್ತಿತ್ವವು, ತಮ್ಮ ಕೆಳಕೆ ಇನ್ನೊಬ್ಬರನ್ನು ಹಿಂಸಿಸುತ್ತಿರುವವರತ್ತ ನೋಡಬೇಕು. ಇದರಿಂದಾಗಿಯೇ ಒಬ್ಬ ಸಾಮಾನ್ಯರು ಯೋಗಿ ಆಗುತ್ತಾರೆ. ಅದಕ್ಕಾಗಿಯೇ ಮೊಟ್ಟಮೊದಲ ಯೋಗಿ, ಅಂದರೆ ಆದಿ ಯೋಗಿಯನ್ನು ನಾವು ಹೊಂದಿದ್ದೇವೆ. ನಮ್ಮ ಪ್ರತಿನಿತ್ಯದ ಜಂಜಾಟಗಳ ನಡುವೆಯೇ ಸಣ್ಣ ಕ್ರಿಯೆಯ ಮೂಲಕ ಉನ್ನತ ಮಟ್ಟಕ್ಕೆ ಏರಬಹುದು.

ಕೆಲವರು ಈಶಾ ಕ್ರಿಯೆಯ ಮೂಲಕ, ಈಶಾ ಮೊಬೈಲ್‌ ಮೂಲಕವೇ ಇದನ್ನು ಸಾಧಿಸುತ್ತಾರೆ. ಯಾರಿಗೆ ಇಂತಹದ್ದರಿಂದ ಹೊರಬರಲು ಸಾಧ್ಯವಿಲ್ಲವೊ, ಅಂಥವರಿಗಾಗಿ ಇಂತಹ ಶಕ್ತಿಸ್ಥಳಗಳನ್ನು ಸೃಷ್ಟಿಸಲಾಗುತ್ತದೆ. ಏನನ್ನೋ ನಿರೀಕ್ಷೆ ಇಟ್ಟುಕೊಂಡವರಿಗೆ ಈ ಜಾಗವಲ್ಲ. ತಮ್ಮ ಮಟ್ಟವನ್ನು ಮೇಲಕ್ಕೆ ಎತ್ತರಿಸಿಕೊಳ್ಳಲು ಬಯಸುವವರಿಗಾಗಿ. ಆದರೆ, ಆ ಮಾರ್ಗಕ್ಕೆ ನಾವು ಪ್ರಯಾಣ ಆರಂಭಿಸುತ್ತೇವೆಯೇ ಎನ್ನುವುದು ಪ್ರಶ್ನೆ.

ಜನರು ಒಂದರ ನಂತರ ಒಂದು ಬೇಲಿಗಳನ್ನು ತಮ್ಮ ಸುತ್ತ ನಿರ್ಮಿಸಿಕೊಳ್ಳುತ್ತಿದ್ದಾರೆ. ಹುಟ್ಟಿದಾಗ ಯಾವುದೇ ಬೇಲಿ ಇರಲಿಲ್ಲ. ಆದರೆ ಮುಂದುವರಿದಂತೆ ಸಾಮಾಜಿಕ, ಶೈಕ್ಷಣಿಕ ಬೇಲಿಗಳನ್ನು ನಿರ್ಮಿಸಿಕೊಂಡಿದ್ದೇವೆ. ಈ ಬೇಲಿಗಳು ಸಿಹಿಯಾಗಿರುತ್ತವೆ. ಅದರ ಸವಿಯನ್ನು ಸವಿಯುತ್ತ, ಇದೇ ಉತ್ತಮ ಜಗತ್ತು ಎಂಬ ಭ್ರಮೆ ಮೂಡುತ್ತದೆ. ಆದರೆ ಅದು ಸತ್ಯವಲ್ಲ. ಅನೇಕರು ಇಂದು ತಮ್ಮನ್ನು ಹುಲಿ, ಸಿಂಹ ಎಂದು ಕರೆದುಕೊಳ್ಳುತ್ತಾರೆ. ಹಾಗೆ ಕರೆದುಕೊಂಡರೆ ಅದು ಮಾನವನ ಜೀವ ವಿಕಾಸದಲ್ಲಿ ಒಂದು ಹೆಜ್ಜೆ ಹಿಂದೆ ಇಟ್ಟಂತೆ. ಮಾನವನಾಗುವುದೇ ಈ ಜಗತ್ತಿನಲ್ಲಿ ಅತ್ಯುನ್ನತ ಜೀವನ ವಿಕಾಸ. ಆದರೆ ಅನೇಕ ಮಾನವರು ತಮ್ಮನ್ನು ಈ ಎತ್ತರದಲ್ಲಿ ಭಾವಿಸಿಕೊಳ್ಳುತ್ತಿಲ್ಲ. ಏಕೆಂದರೆ ಅವರ ಮೂಲಕ್ಕೆ ತಲುಪುವ ಮಾರ್ಗವನ್ನು ಅವರು ಕಂಡುಕೊಂಡಿಲ್ಲ. ಸುಖಾಸುಮ್ಮನೆ ನೋವನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಇಂತಹ ಕಾರಣಕ್ಕಾಗಿಯೇ ಅನೇಕರು ಯೋಗದ ಮೊರೆ ಹೋಗಿದ್ದಾರೆ. ಯೋಗ ಮಾಡದೇ ಇದ್ದರೆ ಕೊಲೆ ಮಾಡುತ್ತೇವೆ ಎಂದು ಯಾರೂ ಇಲ್ಲಿವರೆಗೆ ಹೇಳಿಲ್ಲ, ಯಾರೂ ಹೇಳುವುದೂ ಇಲ್ಲ. ಆದರೂ ಇಷ್ಟು ಬೃಹತ್‌ ಸಂಖ್ಯೆಯಲ್ಲಿ ಜನರು ಒಂದಲ್ಲ ಒಂದು ಮಾದರಿಯ ಯೋಗವನ್ನು ಆಚರಿಸುತ್ತಿದ್ದಾರೆ. ನೀವು ಎಳೆದುಕೊಂಡಿರುವ ಬೇಲಿಗಳನ್ನು ಮೀರಲು ಯೋಗವು ಸಹಕರಿಸುತ್ತದೆ. 112 ಮಾದರಿಗಳಲ್ಲಿ ಮಾನವರು ತಮ್ಮ ಔನ್ನತ್ಯವನ್ನು ಸಾಧಿಸಬಹುದು ಎಂದು ಆದಿಯೋಗಿ ತಿಳಿಸಿದ್ದಾರೆ. ಅದಕ್ಕಾಗಿಯೇ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದರು.

ಸ್ಥಳವು ಅರಣ್ಯ ಇಲಾಖೆಗೆ ಸೇರಿದ್ದು ಎಂಬ ಕಾರಣಕ್ಕೆ ಸ್ಥಳೀಯ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಬಾರದು ಎಂದು ಈಗಾಗಲೆ ಹೈಕೋರ್ಟ್‌ ತಿಳಿಸಿದೆ. ಆದರೆ ಈ ಮೊದಲೇ ನಿಶ್ಚಯವಾಗಿದ್ದ ಆದಿಯೋಗಿ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಿತ್ತು.

ಇದನ್ನೂ ಓದಿ Isha Foundation | ನಂದಿ ಬೆಟ್ಟದ ಬಳಿ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್‌ ಅನುಮತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Last Rites: ಅಂತ್ಯಕ್ರಿಯೆ ಮುಗಿಸಿ ಬರುವಾಗ ಸ್ಮಶಾನದತ್ತ ಹಿಂತಿರುಗಿ ನೋಡಬಾರದು ಅನ್ನೋದು ಏಕೆ ಗೊತ್ತಾ?

ಅಂತಿಮ ವಿಧಿವಿಧಾನಗಳಲ್ಲಿ (Last Rites) ಅಜ್ಞಾನ ಅಥವಾ ಮಾಹಿತಿಯ ಕೊರತೆಯಿಂದಾಗಿ ಕೆಲವರು ಇಂತಹ ಆಚರಣೆಗಳನ್ನು ಮಾಡುವುದಿಲ್ಲ. ಇನ್ನು ಕೆಲವು ಮಾಡಬಾರದ ಆಚರಣೆಗಳನ್ನು ಮಾಡುತ್ತಾರೆ. ಶವಸಂಸ್ಕಾರ ಮಾಡಿದ ಅನಂತರ ಸ್ಮಶಾನದತ್ತ ಹಿಂತಿರುಗಿ ನೋಡುವುದನ್ನು ತಪ್ಪಿಸುವುದು ಇವುಗಳಲ್ಲಿ ಒಂದು. ಹಿಂತಿರುಗಿ ನೋಡಬಾರದು ಎಂದು ಹಿರಿಯರು ಹೇಳುವುದೇಕೆ? ಇಲ್ಲಿದೆ ಮಾಹಿತಿ.

VISTARANEWS.COM


on

By

Last Rites
Koo

ಪ್ರತಿಯೊಂದು ಧರ್ಮದಲ್ಲೂ ವಿವಿಧ ಆಚರಣೆಗಳಿವೆ (rituals). ಅದರಲ್ಲೂ ಮುಖ್ಯವಾಗಿ ಸನಾತನ ಧರ್ಮದಲ್ಲಿ (sanatana dharma) ಸಾಕಷ್ಟು ವಿಶೇಷ ಮತ್ತು ಅರ್ಥಪೂರ್ಣವಾದ ಆಚರಣೆಗಳಿವೆ. ಕೆಲವೊಂದು ಆಚರಣೆಗಳ ಬಗ್ಗೆ ನಮಗೆ ಗೊತ್ತಿದ್ದರೂ ಮರಣಾನಂತರದ (post-death ceremony) ಕೆಲವು ಆಚರಣೆಗಳ ನಾವು ತಿಳಿದಿರುವುದಿಲ್ಲ. ಈ ಆಚರಣೆಗಳನ್ನು (Last Rites) ಪಾಲಿಸುವುದು ಬಹುಮುಖ್ಯ.

ಮರಣಾನಂತರದ ಆಚರಣೆಗಳಲ್ಲಿ 16 ಪ್ರಮುಖ ಆಚರಣೆಗಳಿವೆ. ಇದರಲ್ಲಿ ಅನೇಕ ನಿಯಮಗಳಿವೆ. ಅದನ್ನು ಪ್ರತಿಯೊಬ್ಬರೂ ಪಾಲಿಸುವುದು ಮುಖ್ಯವಾಗಿದೆ.

ಅಂತಿಮ ವಿಧಿವಿಧಾನಗಳಲ್ಲಿ ಅಜ್ಞಾನ ಅಥವಾ ಮಾಹಿತಿಯ ಕೊರತೆಯಿಂದಾಗಿ ಕೆಲವರು ಇಂತಹ ಆಚರಣೆಗಳನ್ನು ಮಾಡುವುದಿಲ್ಲ. ಇನ್ನು ಕೆಲವು ಮಾಡಬಾರದ ಆಚರಣೆಗಳನ್ನು ಮಾಡುತ್ತಾರೆ. ಶವಸಂಸ್ಕಾರ ಮಾಡಿದ ಅನಂತರ ಸ್ಮಶಾನದತ್ತ ಹಿಂತಿರುಗಿ ನೋಡುವುದನ್ನು ತಪ್ಪಿಸುವುದು ಇವುಗಳಲ್ಲಿ ಒಂದು.

ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ಸತ್ತಾಗ ಆತನ ಆತ್ಮವು ದೇಹವನ್ನು ತೊರೆಯುತ್ತದೆ. ಅಂತಿಮ ವಿಧಿಗಳನ್ನು ನಡೆಸಿದ ಬಳಿಕ ದೇಹವು ಬೂದಿಯಾಗುತ್ತದೆ. ಆದರೆ ಆತ್ಮವು ಅಲ್ಲೇ ಇರುತ್ತದೆ. ಆತ್ಮವನ್ನು ಶಾಶ್ವತ ಮತ್ತು ಅವಿನಾಶಿ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಯಾವುದೇ ಕತ್ತಿ, ಬೆಂಕಿ ಅಥವಾ ನೀರು ಆತ್ಮವನ್ನು ನಾಶಮಾಡುವುದಿಲ್ಲ.

ಸ್ಮಶಾನ ಕಾರ್ಯದ ಬಳಿಕ ವ್ಯಕ್ತಿಯ ಆತ್ಮವು ಬೇರೆ ಲೋಕಕ್ಕೆ ಪ್ರಯಾಣ ಬೆಳೆಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಸತ್ತವರ ಕುಟುಂಬದ ಸದಸ್ಯರು ಅಂತ್ಯಕ್ರಿಯೆಯ ಅನಂತರ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಹಿಂತಿರುಗಿ ನೋಡಿದಾಗ ಕುಟುಂಬಕ್ಕೆ ಆತ್ಮದ ಬಾಂಧವ್ಯವು ಅದನ್ನು ಇನ್ನೊಂದು ಲೋಕಕ್ಕೆ ಹಾದುಹೋಗದಂತೆ ತಡೆಯುತ್ತದೆ.

ಗರುಡ ಪುರಾಣದಲ್ಲಿ ಉಲ್ಲೇಖಿಸಿದಂತೆ ಮರಣದ ಅನಂತರ ಸತ್ತ ವ್ಯಕ್ತಿಯ ಆತ್ಮವು ಸ್ಮಶಾನದಲ್ಲಿ ನಡೆಯುವ ಅವನ ಕೊನೆಯ ಚಟುವಟಿಕೆಗಳನ್ನು ವೀಕ್ಷಿಸುತ್ತದೆ. ಮೃತನ ಕುಟುಂಬದ ಸದಸ್ಯರು ಸ್ಮಶಾನದಲ್ಲಿ ಇರುವುದರಿಂದ ಸತ್ತ ವ್ಯಕ್ತಿಯ ಅಂತ್ಯಕ್ರಿಯೆಯ ಕಡೆಗೆ ಹಿಂತಿರುಗಿ ನೋಡಿದರೆ ಮೃತನ ಆತ್ಮವು ಆ ವ್ಯಕ್ತಿಯೊಂದಿಗೆ ಬರುತ್ತದೆ ಮತ್ತು ಆ ಬಂಧವನ್ನು ಮುರಿಯಲಾಗುವುದಿಲ್ಲ.

ಹೀಗಾಗಿ ಅಂತಿಮ ವಿಧಿಗಳನ್ನು ನಡೆಸಿದ ಅನಂತರ ತಿರುಗಬಾರದು ಎಂದು ಹೇಳಲಾಗುತ್ತದೆ. ಯಾಕೆಂದರೆ ಅಂತಹ ಸಂದರ್ಭದಲ್ಲಿ ಆತ್ಮವು ಮರಣಾನಂತರದ ಜೀವನಕ್ಕೆ ಪರಿವರ್ತನೆ ಕಷ್ಟವಾಗುತ್ತದೆ.

ಇದನ್ನೂ ಓದಿ: Vastu Tips: ಗಂಗಾ ಜಲ ಮನೆಯಲ್ಲಿಟ್ಟರೆ ಸಾಲದು; ಅದನ್ನು ಎಲ್ಲಿ ಇಡಬೇಕು, ಹೇಗೆ ಇಡಬೇಕು?

ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು 13 ದಿನಗಳ ಕಾಲ ಹಲವು ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಇದರ ಹೊರತಾಗಿ ಅಂತ್ಯಕ್ರಿಯೆಯಿಂದ ಹಿಂದಿರುಗಿದ ಅನಂತರ ಅನುಸರಿಸಬೇಕಾದ ಕೆಲವು ನಿಯಮಗಳಿವೆ.

ತಕ್ಷಣ ಸ್ನಾನ ಮಾಡಿ ಮತ್ತು ವ್ಯಕ್ತಿಯ ಬಟ್ಟೆಗಳನ್ನು ತೊಳೆಯಬೇಕು. ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು ಗಂಗಾಜಲವನ್ನು ಇಡೀ ಮನೆಯಲ್ಲಿ ಸಿಂಪಡಿಸಬೇಕು. ವ್ಯಕ್ತಿ ಸತ್ತ ಮನೆಯಲ್ಲಿ ಮೃತರ ಆತ್ಮಕ್ಕೆ ಶಾಂತಿಗಾಗಿ 12 ದಿನಗಳ ಕಾಲ ದೀಪವನ್ನು ಬೆಳಗಿಸಬೇಕು. ಪಿತೃ ಪಕ್ಷದಲ್ಲಿ ಪಿಂಡದಾನ ಮಾಡಬೇಕು‌ ಎಂಬೆಲ್ಲ ಉಲ್ಲೇಖ ಗರುಡ ಪುರಾಣದಲ್ಲಿದೆ.

Continue Reading

ಧಾರ್ಮಿಕ

Vastu Tips: ನೆಲ ಒರೆಸುವಾಗಲೂ ವಾಸ್ತು ನಿಯಮ ಪಾಲಿಸಲೇಬೇಕು!

ಮನೆಯನ್ನು ಸ್ವಚ್ಛ ಮಾಡುವಾಗಲೂ ಪಾಲಿಸಬೇಕಾದ ವಾಸ್ತು ನಿಯಮಗಳಿವೆ. ಅದರಲ್ಲೂ ಮನೆ ಒರೆಸುವ ಕುರಿತು ವಾಸ್ತು ಶಾಸ್ತ್ರದಲ್ಲಿ (Vastu Tips) ಏನು ಹೇಳಿದೆ ಗೊತ್ತೇ? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಮನೆಯ (home) ಒಳಾಂಗಣ, ಹೊರಾಂಗಣ ಸ್ವಚ್ಛತೆ (cleaning) ಬಗ್ಗೆ ನಾವೆಲ್ಲ ಅತೀ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೆ ಇದರಲ್ಲೂ ವಾಸ್ತು ನಿಯಮ (Vastu Tips) ಪಾಲಿಸುವುದು ಬಹು ಮುಖ್ಯ ಎಂಬುದನ್ನು ಮರೆಯಬಾರದು. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಮನೆಯಿಂದ ಕಸ (garbage) ಹೊರಗೆ ಹಾಕುವ, ಕೊಳಕು ನೀರು ಹೊರ ಚೆಲ್ಲುವ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ನಿಯಮಗಳಿವೆ. ಇದನ್ನು ಪಾಲಿಸಿದರೆ ಮನೆಯ ವಾಸ್ತುವಿಗೆ ಬಹಳ ಒಳ್ಳೆಯದು.

ಲಕ್ಷ್ಮಿ ದೇವಿಯು ಯಾವಾಗಲೂ ಸ್ವಚ್ಛವಾಗಿರುವ ಮನೆಗಳಲ್ಲಿ ನೆಲೆಸುತ್ತಾಳೆ. ಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ಒರೆಸುವುದು ನಿತ್ಯ ಮಾಡಲೇಬೇಕಾದ ಸಾಮಾನ್ಯ ವಿಷಯ. ಮನೆಯ ಕೊಳೆಯನ್ನು ನಿತ್ಯ ಶುಚಿಗೊಳಿಸುವುದರಿಂದ ಮನೆಯಿಂದ ರೋಗಗಳನ್ನು ದೂರ ಮಾಡಬಹುದು ಮತ್ತು ಲಕ್ಷ್ಮಿ ದೇವಿಯು ಮನೆಯಲ್ಲಿ ಸಂತೋಷವಾಗಿ ನೆಲೆಯಾಗುವಂತೆ ಮಾಡಬಹುದು. ವಾಸ್ತು ಶಾಸ್ತ್ರದಲ್ಲಿ ನೆಲ ಒರೆಸುವ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಮನೆಯ ಸ್ವಚ್ಛತೆ ಮಾಡುವ ನೆಲ ಒರೆಸುವಾಗ ಕೆಲವು ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬಾರದು.


ಮಾಪ್ ಅನ್ನು ಬಾಲ್ಕನಿಯಲ್ಲಿ ಇಡಬೇಡಿ

ಮನೆಯ ಬಾಲ್ಕನಿಯಲ್ಲಿ ಮಾಪ್ ಅನ್ನು ಎಂದಿಗೂ ನಿಲ್ಲಿಸಬಾರದು. ಮಾಪ್ ಮಾಡುವಾಗ ಬಟ್ಟೆಯನ್ನು ಹಿಸುಕಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿ. ಇದನ್ನು ಮಾಡದಿದ್ದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.

ತಕ್ಷಣ ಮಾಪ್ ಮಾಡಬಾರದು

ಮನೆಯಿಂದ ಯಾರಾದರೂ ಹೊರಗೆ ಹೋಗುತ್ತಿದ್ದರೆ ಅವರು ಹೋದ ತಕ್ಷಣ ನೆಲವನ್ನು ಒರೆಸಬಾರದು. ಹೀಗೆ ಮಾಡುವುದರಿಂದ ಹೊರಗೆ ಹೋದವರ ಆರೋಗ್ಯ ಕೆಡುತ್ತದೆ. ಅವರು ತಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು.

ಮುರಿದ ಬಕೆಟ್ ಬಳಸದಿರಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನೆಲವನ್ನು ಒರೆಸುವಾಗ ತಪ್ಪಾಗಿಯೂ ಮುರಿದ ಬಕೆಟ್‌ನಲ್ಲಿ ನೆಲವನ್ನು ಒರೆಸದಂತೆ ವಿಶೇಷ ಕಾಳಜಿ ವಹಿಸಿ. ಮುರಿದ ಬಕೆಟ್ ಕೆಂಪು ಬಣ್ಣದಲ್ಲಿರಬಾರದು. ಅಪ್ಪಿತಪ್ಪಿಯೂ ಮಧ್ಯಾಹ್ನ ನೆಲವನ್ನು ಒರೆಸಬಾರದು. ಬೆಳಗ್ಗೆ ನೆಲವನ್ನು ಒರೆಸುವುದು ಸರಿಯಾದ ಸಮಯ ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ Vastu Tips: ಮನೆಯಲ್ಲಿ ಚಪ್ಪಲಿ, ಶೂ ಎಲ್ಲೆಂದರಲ್ಲಿ ಇಟ್ಟು ಸಂಕಷ್ಟ ಮೈಮೇಲೆ ಎಳೆದುಕೊಳ್ಳಬೇಡಿ!

ಹೊಸ್ತಿಲಲ್ಲಿ ನೀರು ಸುರಿಯಬಾರದು

ಹೆಚ್ಚಿನ ಜನರು ಇದನ್ನು ಮಾಡುತ್ತಾರೆ. ನೆಲವನ್ನು ಒರೆಸಿದ ಅನಂತರ ಅವರು ಹೊಸ್ತಿಲಲ್ಲಿ ಕೊಳಕು ನೀರನ್ನು ಸುರಿಯುತ್ತಾರೆ. ಆದರೆ ಇದನ್ನು ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಮನೆಯ ಹೊಸ್ತಿಲನ್ನು ಲಕ್ಷ್ಮಿ ದೇವಿಯ ಪ್ರವೇಶ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಕೊಳಕು ನೀರನ್ನು ಸುರಿದರೆ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು.

Continue Reading

ಧಾರ್ಮಿಕ

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಪ್ರೀತಿ ಪಾತ್ರರಿಗೆ ನೀಡುವ ಉಡುಗೊರೆಗಳು ಹೀಗಿರಬೇಕು

ನಮ್ಮ ದೈನಂದಿನ ಜೀವನದಲ್ಲಿ ವಾಸ್ತು ಶಾಸ್ತ್ರದ (Vastu Tips) ಪ್ರಭಾವವು ಗಾಢವಾಗಿದೆ. ಮನೆ ಅಥವಾ ಕಾರ್ಯಸ್ಥಳದೊಳಗೆ ಸರಿಯಾದ ವಸ್ತುಗಳನ್ನು ಸರಿಯಾದ ಸ್ಥಳಗಳಲ್ಲಿ ಇರಿಸಿದಾಗ ಅವು ಶಕ್ತಿಯ ಹರಿವನ್ನು ಸಮನ್ವಯಗೊಳಿಸುತ್ತವೆ. ಉತ್ತಮ ಆರೋಗ್ಯ, ಆರ್ಥಿಕ ಸ್ಥಿರತೆ ಮತ್ತು ಸಂತೋಷವನ್ನು ನೀಡುವ ಉಡುಗೊರೆಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದ್ದು, ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವಾಗ ಹೆಚ್ಚು ಚಿಂತೆ ಮಾಡದೇ ಇವುಗಳನ್ನು ಆಯ್ಕೆ ಮಾಡಬಹುದು.

VISTARANEWS.COM


on

By

Vastu Tips
Koo

ಉಡುಗೊರೆಗಳನ್ನು (Gift) ಸ್ವೀಕರಿಸುವುದು ಯಾರಿಗೆ ಇಷ್ಟವಿಲ್ಲ? ಪ್ರತಿಯೊಬ್ಬರೂ ಉಡುಗೊರೆ ನೀಡುವಾಗ ಅದು ತೆಗೆದುಕೊಳ್ಳುವವರ ಮನಕ್ಕೆ ಇಷ್ಟವಾಗುವಂತಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಉಡುಗೊರೆಗಳು ಪ್ರೀತಿಯ ಶುದ್ಧ ಸೂಚಕವಾಗಿದೆ ಮತ್ತು ಅವು ಭಾವನಾತ್ಮಕ ಮತ್ತು ಆಂತರಿಕ ಮೌಲ್ಯವನ್ನು ಹೊಂದಿರುತ್ತದೆ. ಹೀಗಾಗಿ ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ಆಯ್ಕೆ ಮಾಡುವಾಗ ಯೋಚನೆ ಕಾಡುವುದು ಸಹಜ.

ನಾವು ಕೊಡುವ ಉಡುಗೊರೆಯು ಸ್ವೀಕರಿಸುವವರ ಜೀವನಕ್ಕೆ ಸಮೃದ್ಧಿ (prosperity), ಸಕಾರಾತ್ಮಕತೆ (positivity) ಮತ್ತು ಸಾಮರಸ್ಯವನ್ನು (harmony) ತರುವಂತೆ ಇರಬೇಕು ಎನ್ನುತ್ತದೆ ವಾಸ್ತುಶಾಸ್ತ್ರ (Vastu Tips). ಉಡುಗೊರೆಗಳನ್ನು ಆಯ್ಕೆ ಮಾಡಲು ವಾಸ್ತು ಶಾಸ್ತ್ರವು ಕೆಲವೊಂದು ಮಾರ್ಗದರ್ಶನವನ್ನು ನೀಡುತ್ತದೆ.

ವಾಸ್ತು ತತ್ತ್ವಗಳೊಂದಿಗೆ ಜೋಡಿಸಲಾದ ಉಡುಗೊರೆಯನ್ನು ಪ್ರೀತಿ ಪಾತ್ರರಿಗೆ ನೀಡಿದಾಗ ಇದು ಕೇವಲ ವಸ್ತುವನ್ನು ನೀಡುವುದಿಲ್ಲ. ಅದರೊಂದಿಗೆ ಅದೃಷ್ಟ ಮತ್ತು ಧನಾತ್ಮಕ ಶಕ್ತಿಯನ್ನು ನೀಡುತ್ತೀರಿ.

ಸ್ವೀಕರಿಸುವವರ ಯೋಗಕ್ಷೇಮ ಮತ್ತು ಯಶಸ್ಸನ್ನು ಹೆಚ್ಚಿಸುವ ನಿರ್ದಿಷ್ಟ ಉಡುಗೊರೆಗಳನ್ನು ವಾಸ್ತು ಶಾಸ್ತ್ರವು ಸೂಚಿಸುತ್ತದೆ. ಈ ಉಡುಗೊರೆಗಳು ಯಾವುದೇ ಚಿಂತೆ ಇಲ್ಲದೆ ಆಯ್ಕೆ ಮಾಡಬಹುದು. ಇದು ಉಡುಗೊರೆ ಸ್ವೀಕರಿಸುವವರ ಪರಿಸರದಲ್ಲಿನ ಶಕ್ತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಜೀವನದ ವಿವಿಧ ಅಂಶಗಳಲ್ಲಿ ಅವರಿಗೆ ಅನುಕೂಲಕರವಾಗಿರುತ್ತದೆ.

ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ತರುವ 7 ಅದೃಷ್ಟದ ಉಡುಗೊರೆಗಳು

ಲಾಫಿಂಗ್ ಬುದ್ಧ

ಲಾಫಿಂಗ್ ಬುದ್ಧ ಅನೇಕರ ಕಚೇರಿ ಮತ್ತು ಮನೆಗಳಲ್ಲಿ ಕಂಡುಬರುವ ಜನಪ್ರಿಯ ಅಲಂಕಾರಿಕ ವಸ್ತುವಾಗಿದೆ. ಹರ್ಷಚಿತ್ತದ ವ್ಯಕ್ತಿ ಯಾವುದೇ ಜಾಗದಲ್ಲಿ ಸಂತೋಷವನ್ನು ತರುತ್ತದೆ ಎನ್ನುವ ನಂಬಿಕೆ ಇದೆ. ಫೆಂಗ್ ಶೂಯಿ ತತ್ತ್ವಗಳ ಪ್ರಕಾರ ರೋಮಾಂಚಕ ಮತ್ತು ಮಂಗಳಕರ ಶಕ್ತಿಯನ್ನು ಇದು ಸೃಷ್ಟಿಸುತ್ತದೆ.


ಗಣೇಶ ವಿಗ್ರಹ

ಗಣೇಶ ಹೊಸ ಆರಂಭ ಮತ್ತು ಯಶಸ್ಸಿನ ದೇವರು. ಗಣೇಶನ ಪ್ರತಿಮೆಯನ್ನು ನೀಡುವುದು ಉಡುಗೊರೆ ಸ್ವೀಕರಿಸುವವರಿಗೆ ಆಶೀರ್ವಾದವನ್ನು ಕೊಡುತ್ತದೆ. ಈ ಪ್ರತಿಮೆಯು ಶಕ್ತಿ, ಬುದ್ಧಿವಂತಿಕೆ ಮತ್ತು ಜೀವನದಲ್ಲಿ ಸವಾಲುಗಳನ್ನು ಜಯಿಸುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ.


ಶ್ರೀ ಮೇರು ಯಂತ್ರ

ಮೇರು ಶ್ರೀ ಯಂತ್ರವು ತನ್ನ ಆರಾಧಕರಿಗೆ ಶಾಂತಿ, ಸಂತೋಷ, ಜನಪ್ರಿಯತೆ, ಶಕ್ತಿ, ಅಧಿಕಾರ, ಸಂಪತ್ತು, ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ. ಸಮರ್ಪಣೆ ಮತ್ತು ನಂಬಿಕೆಯಿಂದ ಇದನ್ನು ಪೂಜಿಸಿದರೆ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ.


ರಾಧಾ ಕೃಷ್ಣನ ವಿಗ್ರಹ

ಶುಭ ಸೂಚಕವಾಗಿ ರಾಧಾ ಕೃಷ್ಣನ ವಿಗ್ರಹವನ್ನು ಉಡುಗೊರೆಯಾಗಿ ನೀಡಬಹುದು. ಇದು ನಿಮ್ಮ ಜೀವನದಲ್ಲಿ ಆಳವಾದ ಶಾಂತಿ, ಸಮೃದ್ಧ ಪ್ರೀತಿ ಮತ್ತು ಬಲವಾದ ಸಮರ್ಪಣೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ವಾಸ್ತು ಆಮೆ

ಆಮೆಗಳು ಅದೃಷ್ಟ ಮತ್ತು ದೀರ್ಘಾಯುಷ್ಯವನ್ನು ಪ್ರತಿನಿಧಿಸುತ್ತವೆ. ಆದ್ದರಿಂದ, ಗಾಜಿನ ಅಥವಾ ಸ್ಫಟಿಕ ಆಮೆಯನ್ನು ಉಡುಗೊರೆಯಾಗಿ ನೀಡುವುದು ಅವರಿಗೆ ಮಾಡುವ ಯಾವುದೇ ಕೆಲಸದಲ್ಲಿ ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ.

ಚೈಮ್ಸ್

ವಿಂಡ್ ಚೈಮ್ ಗಳು ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ. ಅವುಗಳು ಅದೃಷ್ಟ, ಸಮೃದ್ಧಿ ಮತ್ತು ಪಾಲಿಸಬೇಕಾದ ನೆನಪುಗಳನ್ನು ಸಂಕೇತಿಸುತ್ತವೆ. ಅದರ ಸುಮಧುರ ರಾಗಗಳು ಮನಸ್ಸನ್ನು ಶಾಂತಗೊಳಿಸುತ್ತದೆ. ಉತ್ಸಾಹವನ್ನು ಹೆಚ್ಚಿಸುತ್ತವೆ. ಮನೆಗೆ ಧನಾತ್ಮಕ ಶಕ್ತಿ ಮತ್ತು ಶಾಂತಿಯುತ ವಾತಾವರಣವನ್ನು ತುಂಬುತ್ತದೆ.

ಇದನ್ನೂ ಓದಿ: Vastu Tips: ಆರ್ಥಿಕ ಪ್ರಗತಿಗೆ ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ


ಗೋಮತಿ ಚಕ್ರ ವೃಕ್ಷ

ಗೋಮತಿ ಚಕ್ರವನ್ನು ಉಡುಗೊರೆಯಾಗಿ ನೀಡುವುದು ಆಧ್ಯಾತ್ಮಿಕ ಮಹತ್ವದಿಂದ ತುಂಬಿದ ಅರ್ಥಪೂರ್ಣ ಸೂಚಕವಾಗಿದೆ. ಗೋಮತಿ ನದಿಯಲ್ಲಿ ಹೆಚ್ಚಾಗಿ ಕಂಡುಬರುವ ಈ ಪವಿತ್ರ ಕಲ್ಲುಗಳು ಸಕಾರಾತ್ಮಕ ಶಕ್ತಿ ಮತ್ತು ರಕ್ಷಣಾತ್ಮಕ ಗುಣಗಳಿಂದ ಮೌಲ್ಯಯುತವಾಗಿವೆ. ಗೋಮತಿ ಚಕ್ರವನ್ನು ನೀಡುವುದು ಸ್ವೀಕರಿಸುವವರಿಗೆ ಸಮೃದ್ಧಿ ಮತ್ತು ಅದೃಷ್ಟವನ್ನು ಆಶೀರ್ವಾದಿಸುತ್ತದೆ.

Continue Reading

ಪ್ರಮುಖ ಸುದ್ದಿ

ಗುರು ಸಕಲಮಾ ಆತ್ಮಕಥನ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳುʼ ಮುಖಪುಟ ಅನಾವರಣ

ಅಧ್ಯಾತ್ಮದ ಹಾದಿ ಕಷ್ಟದ್ದು, ನಮಗಲ್ಲ ಎಂದು ಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಇದೆ. ಗೃಹಸ್ಥ ಆಶ್ರಮದಲ್ಲಿದ್ದುಕೊಂಡೇ ಅಧ್ಯಾತ್ಮದ ಹಾದಿಯಲ್ಲಿ ಪಯಣಿಸಬಹುದು. ತಂತ್ರಮಾರ್ಗದ ಬಗೆಗೆ ಇಂದು ಸಮಾಜದಲ್ಲಿ ಗೊಂದಲಗಳಿವೆ, ತಪ್ಪು ತಿಳುವಳಿಕೆಗಳೂ ಇವೆ ಎಂದು ಗುರು ಸಕಲಮಾ ನುಡಿದರು. ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕೃತಿಯ ಮುಖಪುಟವನ್ನು ಸಾಹಿತಿ ಜೋಗಿ ಅನಾವರಣಗೊಳಿಸಿದರು.

VISTARANEWS.COM


on

ಹಿಮಾಲಯ book cover page launch 2
Koo

ಹಿಮಾಲಯದ ಗುರು ಪರಂಪರೆ ಅವಿನಾಶಿ: ಗುರು ಸಕಲಮಾ

ಬೆಂಗಳೂರು: ಅಧ್ಯಾತ್ಮದ (Spirituality) ಬಗ್ಗೆ ಸಮಾಜದಲ್ಲಿ ಇರುವ ತಪ್ಪು ತಿಳುವಳಿಕೆಗಳು, ಭಯಗಳಿಂದಾಗಿ ಮೊದಲಿನಷ್ಟು ಮೌಲ್ಯಯುತವಾಗಿ ಅದನ್ನು ನಮಗೆ ಉಳಿಸಿಕೊಳ್ಳಲಾಗಿಲ್ಲ. ಆದರೆ, ನಾವು ಅದನ್ನು ಕಳೆದುಕೊಂಡಿಲ್ಲ. ಯಾರು ಏನೇ ಪ್ರಯತ್ನ ಮಾಡಿದರೂ ಇದನ್ನು ನಾಶ ಮಾಡಲು ಸಾಧ್ಯವಿಲ್ಲ. ಈ ನಮ್ಮ ಸಂಸ್ಕೃತಿ ಅವಿನಾಶಿ ಎಂದು ಹಿಮಾಲಯ ಯೋಗಿ ಸ್ವಾಮಿ ರಾಮ (Swami Rama) ಹಾಗೂ ಬಹುಶ್ರುತ ವಿದ್ವಾಂಸ ಡಾ. ಆರ್‌ ಸತ್ಯನಾರಾಯಣ (Dr. R Satyanarayana) ಅವರ ನೇರ ಶಿಷ್ಯೆ, ಶ್ರೀವಿದ್ಯಾ ಗುರು ಸಕಲಮಾ (Guru Sakalamaa) ಅವರು ಹೇಳಿದ್ದಾರೆ.

ಅವರು ತಮ್ಮ, ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಪುಸ್ತಕದ ಇಂಗ್ಲೀಷ್‌ ಹಾಗೂ ಕನ್ನಡ ಆತ್ಮಚರಿತ್ರೆಯ ಮುಖಪುಟ ಅನಾವರಣ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಅಧ್ಯಾತ್ಮದ ಹಾದಿ ಕಷ್ಟದ್ದು, ನಮಗಲ್ಲ ಎಂದು ಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಇದೆ. ಆದರೆ ಇದಕ್ಕೆ ಇನ್ನೊಂದು ಮುಖವಿದೆ ಅದು ತಂತ್ರಶಾಸ್ತ್ರ. ತಂತ್ರ ನಿಮ್ಮನ್ನು ನೀವು ಹೇಗಿದ್ದೇವೋ ಹಾಗೆಯ ಸ್ವೀಕರಿಸುತ್ತದೆ. ಗೃಹಸ್ಥ ಆಶ್ರಮದಲ್ಲಿದ್ದುಕೊಂಡೇ ನೀವು ಅಧ್ಯಾತ್ಮ ದ ಹಾದಿಯಲ್ಲಿ ಪಯಣಿಸಬಹುದು. ಈ ತಂತ್ರದ ಬಗೆಗೆ ಇಂದು ಸಮಾಜದಲ್ಲಿ ಗೊಂದಲಗಳಿವೆ, ತಪ್ಪು ತಿಳುವಳಿಕೆಗಳೂ ಇವೆ. ಇದು ಇವತ್ತಿನ ಸಮಸ್ಯೆಯಲ್ಲ. ಶಂಕರಾಚಾರ್ಯರ ಕಾಲದಿಂದಲೂ ಇತ್ತು. ಅವರು ಇದಕ್ಕೆ ಅಂಟಿದ ಜಾಡ್ಯಗಳನ್ನು ಕಿತ್ತೆಸೆದು ಅದನ್ನು ಪ್ರವರ್ಧಮಾನಕ್ಕೆ ತರಲು ಶ್ರಮಿಸಿದರು ಎಂದರು.

ನನ್ನಮ್ಮ ನನಗೆ ಋಷಿಮುನಿಗಳ ಕತೆಗಳನ್ನೆಲ್ಲ ಹೇಳುವಾಗ ಈ ಕತೆಗಳ ಋಷಿಮುನಿಗಳಿಗೂ ನಮಗೂ ಸಂಬಂಧವಿಲ್ಲ, ಅವರು ಯಾವುದೋ ಲೋಕದಲ್ಲಿ ಕೂತಿರುವವರು. ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದೇ ನಾನಂದುಕೊಂಡಿದ್ದೆ. ಆದರೆ, ಶ್ರದ್ಧೆಯಿಂದ ನೀವು ಈ ಲೋಕಕ್ಕೆ ಬಂದರೆ, ಇವು ಕತೆಗಳಲ್ಲ, ಅಧ್ಯಾತ್ಮಿಕ ಸತ್ಯಗಳು ಎಂಬುದು ನಿಮಗೆ ಗೋಚರವಾಗಬಹುದು. ನೀವು ಬಯಸಿದಲ್ಲಿ, ಈ ಪುಸ್ತಕದಲ್ಲಿ ಬಂದಿರುವ ಋಷಿಮುನಿಗಳನ್ನೆಲ್ಲ ನೀವು ಭೇಟಿ ಮಾಡಬಹುದು. ನಿಮ್ಮ ಕನಸಿನಲ್ಲೂ ಅವರು ಬಂದು ನಿಮ್ಮ ಜೊತೆ ಮಾತನಾಡಬಹುದು. ಪಕ್ಕದಲ್ಲೇ ಗೆಳೆಯನ ರೀತಿಯಲ್ಲಿ ಬಂದು ನಿಮಗೆ ಅರಿವು ಮೂಡಿಸಿ ಹೋಗಬಹುದು. ಅವರೆಲ್ಲ ಬೇರೊಂದು ಲೋಕದಲ್ಲಿ ಕುಳಿತು, ಈ ಲೋಕಕಲ್ಯಾಣಕ್ಕಾಗಿ ಕಂಕಣ ಬದ್ಧರಾಗಿ ನಿಂತಿದ್ದಾರೆ, ಸದಾ ನಮ್ಮನ್ನು ಪೊರೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಬದುಕಿನ ಪಯಣದಲ್ಲಿ ಗುರುವಿನ ಸ್ಥಾನ ದೊಡ್ಡದು. ನಾನು, ನನ್ನದು ಎಂಬುದನ್ನು ಬಿಟ್ಟಾಗ ಗುರು ಸಿಕ್ಕುತ್ತಾನೆ. ಗುರುವಿನ ಅನ್ವೇಷಣೆಯಲ್ಲಿ ನಾವಿದ್ದೇವೆ ಎಂಬುದು ಅನೇಕ ಸಾರಿ ನಮಗೆ ಅರಿವೇ ಇರುವುದಿಲ್ಲ. ಅದಕ್ಕಾಗಿಯೇ, ಅರಿವೇ ಗುರುವು ಗುರುವೇ ಅರಿವು. ಗುರು ಸಿಕ್ಕ ಮೇಲೆ ಕೆಲವರಿಗೆ ಅರಿವು ಸಿಕ್ಕರೆ, ಇನ್ನು ಕೆಲವರಿಗೆ ಅರಿವಾಗಿ ಗುರು ಬೇಕು ಅನಿಸುತ್ತದೆ ಎಂದು ಹೇಳಿದರು.

ಹಿಮಾಲಯ book cover page launch 2

ಕನ್ನಡಪ್ರಭದ ಪುರವಣಿ ಸಂಪಾದಕ, ಸಾಹಿತಿ ಜೋಗಿ (Writer Jogi) ಮಾತನಾಡಿ, ಒಂದು ಪುಸ್ತಕವನ್ನು ಗೆಲ್ಲಿಸುವ ಅಂಶಗಳೆಂದರೆ ಮುಗ್ದತೆ ಹಾಗೂ ಪ್ರಾಮಾಣಿಕತೆ. ಇಂದು ಎಷ್ಟೋ ಪುಸ್ತಕಗಳು ಅಪ್ರಾಮಾಣಿಕವಾಗಿ ಇರುತ್ತದೆ, ಪುಸ್ತಕದ ಕೆಲವು ಪುಟಗಳನ್ನು ತೆರೆದು ನೋಡಿದ ತಕ್ಷಣ ಇದು ಪ್ರಾಮಾಣಿಕವೋ, ಅಪ್ರಾಮಾಣಿಕವೋ ಎಂಬುದು ಅರ್ಥವಾಗುತ್ತದೆ. ಈ ಪುಸ್ತಕ ಕೆಲವು ಪುಟಗಳನ್ನು ಮುಂಚಿತವಾಗಿ ಓದಿದ್ದರಿಂದ ನನಗೆ ಇದರಲ್ಲಿ ಮುಗ್ಧತೆ ಹಾಗೂ ಪ್ರಾಮಾಣಿಕತೆ ಎದ್ದು ಕಾಣುತ್ತಿವೆ. ಹಾಗಾಗಿ ಇದು ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ ಎಂದರು.

ಇಂದು ಪಾರಲೌಕಿಕ ಅಂದ ತಕ್ಷಣ ನಮಗೊಂದು ತಪ್ಪು ಕಲ್ಪನೆಯಿದೆ. ನಮಗೆ ಆ ವೇಷವನ್ನು ತೊಟ್ಟುಕೊಳ್ಳುವ ಧೈರ್ಯ ಇದೆಯೇ? ನಾವು ಆ ಜಗತ್ತಿಗೆ ಹೋಗಬಲ್ಲೆವಾ? ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡಿ ನಾವು ಅದರ ಗೊಡವೆಗೇ ಹೋಗುವುದಿಲ್ಲ. ಪುರಂದರ ದಾಸರೇ ʻಇಷ್ಟು ದಿನ ಈ ವೈಕುಂಠ ಎಷ್ಟು ದೂರ ಎನ್ನುತಲಿದ್ದೆʼ ಎಂದು ಬರೆಯುವ ಮೂಲಕ ವೈಕುಂಠ ಇಲ್ಲೇ ಇದ್ದರೂ, ಅಲ್ಲಿದೆ ಎಂದು ತಿಳಿದಿದ್ದೆ ಎನ್ನುವ ಸತ್ಯವನ್ನು ಹೇಳಿದ್ದಾರೆ. ಈ ಪುಸ್ತಕ ಈ ರೀತಿಯಲ್ಲಿ ಅಂಜಿಕೆಗಳನ್ನು ದೂರ ಮಾಡಿ ಸಂಕೋಚದ ತೆರೆಯನ್ನು ಸರಿಸಲು ದಾರಿದೀಪವಾಗಬಹುದು ಎಂದರು.

ಜೀವನದಲ್ಲಿ ನಾವು ಕಳೆದುಕೊಳ್ಳುವುದು ಅಪನಂಬಿಕೆಯಿಂದ. ನಮ್ಮಲ್ಲಿ ಅಪನಂಬಿಕೆಯಿದೆ ಎಂದರೆ ಅದು ನಮ್ಮ ವ್ಯಕ್ತಿತ್ವದ ದೋಷವೇ ಹೊರತು ಗುರುವಿನ ದೋಷವಲ್ಲ. ಒಂದು ಕತೆಯ ಒಳಗೆ ನನಗೆ ಹೋಗಲಾಗದಿದ್ದರೆ, ಅದು ಆ ಕಥನದ ದೋಷವಲ್ಲ, ಆ ಕಥನವನ್ನು ಸ್ವೀಕರಿಸುವ ಅನುಭವದ ಕೊರತೆಯೇ ಕಾರಣ. ಮನುಷ್ಯ ಎಲ್ಲ ದುಃಖಗಳನ್ನೂ, ಸುಖವನ್ನು ಬದುಕಿನಲ್ಲಿ ಅನುಭವಿಸಿದ ಮೇಲೆ ಒಂದು ಹುಡುಕಾಟ ಹಾದಿಯತ್ತ ಹೊರಳುತ್ತಾನೆ. ಈ ಹಾದಿಯಲ್ಲಿ ಸಿಗುವ ಗುರು ಯಾವುದೇ ರೂಪದಲ್ಲಿರಬಹುದು. ಇಂಥ ಸಂದರ್ಭ ನಂಬಿಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಪುಸ್ತಕ ಜಗತ್ತಿಗೆ ಇಂಥದ್ದೊಂದು ಸಮಾರಂಭ ಬೇಕಿದೆ. ಮುಖಪುಟ ಅನಾವರಣವನ್ನೂ ಸಂಭ್ರಮಿಸುವ ಈ ನಡೆ ಪುಸ್ತಕ ಜಗತ್ತಿನಲ್ಲಿ ಸ್ವಾಗತಾರ್ಹ ಎಂದೂ ಅವರು ಹೇಳಿದರು.

ಸಕಲಮಾ ಅವರ ಯುಟ್ಯೂಬ್ ಅನಾವರಣಗೊಳಿಸಿದ ಕಾಂತಾರ (Kantara Movie) ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಮಾತನಾಡಿ, ಮುಖಪುಟವನ್ನು ನೋಡಿ ಪುಸ್ತಕವನ್ನು ಅಳೆಯಬೇಡಿ ಎಂಬ ಇಂಗ್ಲೀಷ್‌ ನುಡಿಗಟ್ಟಿದೆ. ಆದರೆ, ಸಾಮಾನ್ಯವಾಗಿ ನಾವು ಮುಖಪುಟವನ್ನು, ಟ್ರೈಲರ್‌ಗಳನ್ನು ನೋಡಿ ಅಳೆಯುವ ಪರಿಸ್ಥಿತಿ ಈಗ ಎಲ್ಲೆಡೆ ಇದೆ. ಒಳ ಹೂರಣ ಇದ್ದರೆ ಸಿನಿಮಾವಿರಲಿ, ಪುಸ್ತಕವಿರಲಿ ಗೆದ್ದೇ ಗೆಲ್ಲುತ್ತದೆ ಎಂಬುದು ನಾನು ಕಾಂತಾರದಿಂದ ಕಲಿತ ಪಾಠ ಎಂದರು.

ಒಂದು ಸಿನಿಮಾ ಮಾಡುವಂತೆ, ಪುಸ್ತಕ ಬರೆಯುವುದೂ ಕೂಡಾ ಸಾಕಷ್ಟು ಶ್ರಮ ಬೇಡುವ ಕೆಲಸ. ಅದರ ಹಿಂದೆ ಅಪಾರ ಶ್ರದ್ಧೆಯಿದೆ. ಸಿನಿಮಾ ಮಂದಿ ತಮ್ಮ ಸಿನಿಮಾದ ಕುತೂಹಲ ಮೊದಲೇ ಹೆಚ್ಚಿಸಲು ಟ್ರೈಲರ್, ಟೀಸರ್‌ ಬಿಡುಗಡೆಯನ್ನು ಇಟ್ಟುಕೊಳ್ಳುತ್ತಾರೆ. ಹಾಗಾಗಿ, ಪುಸ್ತಕವನ್ನೂ ಹೆಚ್ಚು ಮಂದಿಗೆ ತಲುಪಿಸಲು, ಕುತೂಹಲ ಹುಟ್ಟು ಹಾಕಿಲು ಇಂಥ ಮುಖಪುಟ ಅನಾವರಣದಂತಹ ಕಾರ್ಯಕ್ರಮಗಳು ನಡೆಯಬೇಕು. ಜನರು ಸೇರಬೇಕು. ಓದುವ ಪರಂಪರೆ ಹೆಚ್ಚಬೇಕು ಎಂದರು.

ಗುರು ಯಾರೇ ಇರಲಿ, ಅವರ ಮೇಲೆ ನಮಗೆ ನಂಬಿಕೆ ಇರಬೇಕು. ಜೀವನದಲ್ಲಿ ಕಲಿಯುವ ಹಾದಿ ದೊಡ್ಡದಿದೆ. ಆ ಸಂದರ್ಭ ಗುರು ತಿದ್ದಿದ್ದನ್ನು ನಾವು ಕಲಿತುಕೊಳ್ಳುವ ಆಸಕ್ತಿ ಇರಬೇಕು. ಅದಕ್ಕಾಗಿ ಗುರು ತೋರಿದ ಹಾದಿಯಲ್ಲಿ ನಾವು ನಡೆಯಬೇಕು ಎಂದೂ ಹೇಳಿದರು.

ಜುಲೈ 21ರಂದು ಚಂಡೀಗಢದಲ್ಲಿ ಆಂಗ್ಲ ಭಾಷೆಯ `Messages from the Himalayan Sages- Timely and Timeless’ ಹಾಗೂ ಸೆಪ್ಟೆಂಬರ್22ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕನ್ನಡ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಗುರು ಸಕಲಮಾ ಅವರ ಯುಟ್ಯೂಬ್‌ ಲಿಂಕ್- https://youtube.com/@gurusakalamaa?feature=shared

ಇದನ್ನೂ ಓದಿ: ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಇವು ಗುರು ಸಕಲಮಾ ಬದುಕಿನ ಅಧ್ಯಾಯಗಳು!

Continue Reading
Advertisement
Application Invitation to Join Air Wing NCC July 09 is the last day for submission of application
ಕರ್ನಾಟಕ24 mins ago

Air Wing NCC: ಏರ್ ವಿಂಗ್ ಎನ್‌ಸಿಸಿ ಸೇರಲು ಅರ್ಜಿ ಆಹ್ವಾನ; ಜುಲೈ 9 ಕೊನೆಯ ದಿನ

Tulu language
ತಂತ್ರಜ್ಞಾನ36 mins ago

Tulu Translate Google: ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆ

India is a secular nation because Hindus are the majority says Union Minister Pralhad Joshi
ಕರ್ನಾಟಕ43 mins ago

Pralhad Joshi: ಹಿಂದೂಗಳು ಅಲ್ಪಸಂಖ್ಯಾತರಾದ ದಿನ ಭಾರತ ಜಾತ್ಯತೀತವಾಗಿ ಉಳಿಯದು; ಪ್ರಲ್ಹಾದ್‌ ಜೋಶಿ ಆತಂಕ

IND vs SA
ಪ್ರಮುಖ ಸುದ್ದಿ50 mins ago

IND vs SA: ದಕ್ಷಿಣ ಆಫ್ರಿಕಾದ ಬೌಲಿಂಗ್​ ಶಕ್ತಿ ಭಾರತದ ಬ್ಯಾಟಿಂಗ್​ಗೆ ಲೆಕ್ಕಕ್ಕೇ ಇಲ್ಲ; ಮಾಜಿ ಆಟಗಾರನ ಭವಿಷ್ಯ

Rain News
ಕರ್ನಾಟಕ55 mins ago

Rain News: ಕಾರವಾರದಲ್ಲಿ ಭಾರಿ ಮಳೆಗೆ ಮಣ್ಣಿನ ಗೋಡೆ ಕುಸಿದು ವೃದ್ಧೆ ಸಾವು

Maharashtra Budget
ದೇಶ55 mins ago

ಮಹಿಳೆಯರಿಗೆ ಬಂಪರ್‌; ಮಾಸಿಕ 1,500 ರೂ. ಜಮೆ, 3 ಅಡುಗೆ ಅನಿಲ ಸಿಲಿಂಡರ್‌ ಫ್ರೀ ಘೋಷಣೆ

Rahyl Dravid
ಪ್ರಮುಖ ಸುದ್ದಿ1 hour ago

Rahul Dravid : ವಿಶ್ವ ಕಪ್​ ಗೆದ್ದು ಬನ್ನಿ ಅಭಿಯಾನದ ವಿರುದ್ಧ ಸಿಟ್ಟಿಗೆದ್ದ ರಾಹುಲ್ ದ್ರಾವಿಡ್​

Run4Research programme on June 30 in Bengaluru
ಕರ್ನಾಟಕ1 hour ago

Run4Research: ಬೆಂಗಳೂರಿನಲ್ಲಿ ಜೂ.30ರಂದು ʼರನ್4ರೀಸರ್ಚ್ʼ ಓಟ

MLA Dr N T Srinivas drives for crop insurance Awareness jatha in Kudligi
ವಿಜಯನಗರ1 hour ago

Vijayanagara News: ಕೂಡ್ಲಿಗಿಯಲ್ಲಿ ಬೆಳೆ ವಿಮೆ ಜಾಗೃತಿ ಜಾಥಾಕ್ಕೆ ಶಾಸಕ ಶ್ರೀನಿವಾಸ್ ಚಾಲನೆ

physical Abuse
ಕ್ರೈಂ2 hours ago

Physical Abuse: ಕಲಬುರಗಿಯಲ್ಲಿ 13 ವರ್ಷದ ಬಾಲಕಿ ಲೈಂಗಿಕ ದೌರ್ಜನ್ಯ, ತೀವ್ರ ರಕ್ತಸ್ರಾವವಾಗಿ ಸಾವು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ3 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ10 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು1 day ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ1 day ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌