ಭಾರತದ ಸ್ವಾತಂತ್ರ್ಯ ದಿನ ಗೂಗಲ್‌ನಲ್ಲಿ ಕಾಣಿಸಿಕೊಂಡ ಗಾಳಿಪಟದ ಡೂಡಲ್ ಅರ್ಥವೇನು? - Vistara News

ಸ್ವಾತಂತ್ರ್ಯ ಅಮೃತ ಮಹೋತ್ಸವ

ಭಾರತದ ಸ್ವಾತಂತ್ರ್ಯ ದಿನ ಗೂಗಲ್‌ನಲ್ಲಿ ಕಾಣಿಸಿಕೊಂಡ ಗಾಳಿಪಟದ ಡೂಡಲ್ ಅರ್ಥವೇನು?

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಗೂಗಲ್‌ ಬಳಸಿಸುವ ಡೂಡಲ್‌ನಲ್ಲಿ ಗಾಳಿಪಟಗಳಿವೆ. ಈ ಚಿತ್ರ ಬಿಡಿಸಿದ ಕಲಾವಿದೆ ಇದರ ಬಗ್ಗೆ ಏನು ಹೇಳುತ್ತಾರೆ?

VISTARANEWS.COM


on

kites
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದಿನ ಬೆಳಗಾದರೆ, ಹಾಸಿಗೆಯಿಂದೇಳುವ ಹೊತ್ತಿಗೇ ಅನಾಯಾಸವಾಗಿ ಕೈ ಮೊಬೈಲು ಹುಡುಕುತ್ತದೆ. ಮುದುಕರಿಂದ ಮಕ್ಕಳಾದಿಯಾಗಿ ಅವರವರ ಆಸಕ್ತಿ ಅಗತ್ಯಗಳಿಗನುಗುಣವಾಗಿ ದಿನದಲ್ಲಿ ಏನಿಲ್ಲವೆಂದರೂ ಹಲವಾರು ಬಾರಿ ಏನಾದರೊಂದು ವಿಷಯಕ್ಕೆ ನಮ್ಮ ಬೆರಳುಗಳು ಗೂಗಲ್‌ ಹುಡುಕುತ್ತವೆ. ಆಗ ನಮ್ಮ ಕುತೂಹಲಕ್ಕೆ ಮೊದಲು ಕಾಣುವುದೇ ಡೂಡಲ್.‌ ಗೂಗಲ್‌ ಸರ್ಚ್‌ ಬಾರಿನ ಮೇಲೆ ಡೂಡಲ್‌ ಚಿತ್ರಗಳ ಮೂಲಕ ದೇಶ, ಅಂತಾರಾಷ್ಟ್ರೀಯ ಪ್ರಾಮುಖ್ಯತೆಗಳ್ನು ಕಲಾತ್ಮಕವಾಗಿ, ಕ್ರಿಯಾಶೀಲವಾಗಿ ನಮ್ಮ ಮುಂದೆ ತೆರೆದಿಟ್ಟು, ʻಅರೆ, ಇಂದಿನ ವಿಶೇಷ ಏನು?ʼ ಎಂದು ನಮ್ಮ ಕಣ್ಣು ಆ ದಿನದ ಪ್ರಾಮುಖ್ಯತೆಯನ್ನು ಹುಡುಕುವಂತೆ ಮಾಡುವ ರೇಖಾಚಿತ್ರ ʻಡೂಡಲ್‌ʼ ಎಲ್ಲರಿಗೂ ಪ್ರಿಯ.

ದೇಶ ಸ್ವತಂತ್ರವಾಗಿ ಅಮೃತ ಮಹೋತ್ಸವದ ಹೊಸ್ತಿಲಲ್ಲಿ ನಿಂತಾಗ ಗೂಗಲ್‌ ಡೂಡಲ್‌ ಮೂಲಕ ಹೇಗೆ ತೋರಿಸಿರಬಹುದು ಎಂಬ ಕುತೂಹಲ ಡೂಡಲ್‌ ಅನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ಬಂದಿರುವ ಎಲ್ಲರಿಗೂ ಇದ್ದೇ ಇರುತ್ತದೆ. ಅಂತೆಯೇ ಇಂದು ಗೂಗಲ್‌ನಲ್ಲಿ ಭಾರತದ ಸ್ವಾತಂತ್ರ್ಯದ ಅಮೃತಮಹೋತ್ಸವವೇ ಹೈಲೈಟ್‌ ಆಗಿದೆ. ೭೫ ವರ್ಷಗಳನ್ನು ಪೂರೈಸಿದ ಹೊಸ್ತಿಲಲ್ಲಿ ನಿಂತು ಸ್ವಾತಂತ್ರ್ಯದ ಸವಿ ಅನುಭವಿಸುತ್ತಿರುವ ದೇಶವೊಂದು ಡೂಡಲ್‌ನಲ್ಲಿ ವರ್ಣಮಯವಾಗಿ ಕಂಡಿದೆ.

ಈ ಡೂಡಲ್‌ ತನ್ನ ಚಿತ್ರದ ಮೂಲಕ ಸಾಕಷ್ಟು ವಿಚಾರಗಳನ್ನು ಸೂಕ್ಷ್ಮವಾಗಿ ದಾಟಿಸಿದೆ. ಬಣ್ಣ ಬಣ್ಣದ ಗಾಳಿಪಟಗಳು, ಗಾಳಿಪಟ ಮಾಡಲು ಕುಳಿತ ಮಹಿಳೆ, ೭೫ ಎಂದು ಬರೆದ ಗಾಳಿಪಟ ಹಾರಿಸುತ್ತಿರುವ ಮಕ್ಕಳು ಈ ಡೂಡಲ್‌ನಲ್ಲಿವೆ. ಗಾಳಿಪಟಗಳೆಂಬ ಸಾಂಸ್ಕೃತಿಕ ಪರಂಪರೆಯನ್ನು ದೇಶ ೭೫ರ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಇನ್ನಷ್ಟು ಮತ್ತಷ್ಟು ಮೇಲಕ್ಕೇರುತ್ತಿರುವುದನ್ನು ಸಾಂಕೇತಿಕವಾಗಿ ಡೂಡಲ್‌ ಮೂಲಕ ಹೇಳಲಾಗಿದೆ. ಈ ಬಾರಿ ಈ ಡೂಡಲ್‌ ವಿನ್ಯಾಸಗೊಳಿಸಿದವರು ಕೇರಳದ ಆರ್ಟಿಸ್ಟ್‌ ನೀತಿ.

ನೀತಿ ಅವರು ಹೇಳುವಂತೆ, ಗಾಳಿಪಟ ಎನ್ನುವ ಕಲೆಗೆ ಬಹಳ ಪುರಾತನ ಕಾಲದಿಂದಲೂ ಸಾಂಸ್ಕೃತಿಕ ಮಹತ್ವವಿದೆ. ಇದು ಕೇವಲ ಮಕ್ಕಳ ಆಟವಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಳಿಪಟವನ್ನು ಸ್ವಾತಂತ್ರ್ಯ ಹೋರಾಟದಲ್ಲೂ ಹಲವು ಮಾದರಿಗಳಲ್ಲಿ ಬಳಸಲಾಗಿತ್ತು. ಗಾಳಿಪಟಗಳ ಮೂಲಕ ಸ್ವಾತಂತ್ರ್ಯ ರಾಟ ಸಂಬಂಧೀ ಘೋಷವಾಕ್ಯಗಳನ್ನು ಬರೆದು ಹಾರಿಸಿ ಬಿಡಲಾಗುತ್ತಿತ್ತು. ಆ ಮೂಲಕ ದೇಶದ ಜನರ ಮನೆಮನಗಳಲ್ಲಿ ದೇಶಪ್ರೇಮದ ಕೆಚ್ಚು ಹೆಚ್ಚುವಲ್ಲಿ ಗಾಳಿಪಟಗಳ ಕಾಣಿಕೆಯೂ ಇದೆ. ಹಾಗಾಗಿ ಗಾಳಿಪಟವನ್ನು ನನ್ನ ಡೂಡಲ್‌ನಲ್ಲಿ ಬಳಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಅಮೃತ ನೆನಪು-75 | ಸ್ವಾತಂತ್ರ್ಯ ಹೋರಾಟದ ಜ್ವಾಲೆಯಲ್ಲಿ ಹವಿಸ್ಸಾದವರು ಇವರು!

೭೫ ವರ್ಷ ಪೂರ್ಣಗೊಳಿಸಿ ೭೬ಕ್ಕೆ ಬಂದು ನಿಂತಿದ್ದೇವೆ. ಈ ಸಂದರ್ಭ ತ್ರಿವರ್ಣಗಳ ಗಾಳಿಪಟಗಳ ಮೂಲಕ ನಾನು ಇಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಕಾಣಿಕೆಯನ್ನೂ ನೀಡಿದ, ಮನಮನಗಳನ್ನು ಸಾಂಸ್ಕೃತಿಕವಾಗಿ ಬೆಸೆಯುವ ಗಾಳಿಪಟಗಳನ್ನು ಮುಖ್ಯವಾಗಿ ತೆಗೆದುಕೊಂಡು ಸಾಂಸ್ಕೃತಿಕವಾಗಿ ಭವ್ಯ ಪರಂಪರೆಯಿರುವ ದೇಶಕ್ಕೆ ನಮನ ಸಲ್ಲಿಸಲು ಪ್ರಯತ್ನಿಸಿದ್ದೇನೆ. ಎಲ್ಲರಿಗೂ ಇಷ್ಟವಾಗಿರಬಹುದು ಎಂದು ನಂಬಿದ್ದೇನೆ ಎಂದಿದ್ದಾರೆ.

ಈ ಸಾರಿಯ ಉತ್ಸವಕ್ಕೆ ಹೆಸರೇ ಆಜಾದೀ ಕಾ ಅಮೃತ್‌ಮಹೋತ್ಸವ. ಹೆಸರಿಗೆ ತಕ್ಕಂತೆ ಸ್ವತಂತ್ರವಾಗಿ ನಾವು ಹಂಗು, ಬಂಧನಗಳನ್ನು ಮೀರಿ ಏರಬೇಕಾದ ಎತ್ತರ, ವಿಸ್ತರಿಕೊಳ್ಳಬೇಕಾದ ಮಿತಿಗಳು ಎಲ್ಲವನ್ನೂ ಈ ಗಾಳಿಪಟಗಳ ಹಾರಾಟವೇ ಧ್ವನಿಸುತ್ತದೆ. ಗಾಳಿಪಟ ಎಂದರೆ ಪ್ರಗತಿ. ದೇಶವಾಗಿ ನಾವು ೭೫ ವರ್ಷಗಳಲ್ಲಿ ಸಾಧಿಸಿದ ಪ್ರಗತಿ ಹಾಗೂ ಇನ್ನೂ ನಾವು ಸಾಗಬೇಕಾದ ಹಾದಿ ಎರಡನ್ನೂ ಗಾಳಿಪಟ ಸೂಚ್ಯವಾಗಿ ಹೇಳುತ್ತದೆ ಎಂದು ನೀತಿ ಹೇಳಿದ್ದಾರೆ.

ನನಗೆ ಬಾಲ್ಯದಲ್ಲಿ ಸ್ವಾತಂತ್ರ್ಯ ದಿನದಂದು ಗಾಳಿಪಟ ಹಾರಿಸಿದ ನೆನಪುಗಳಿವೆ. ಸ್ವಾತಂತ್ರ್ಯೋತ್ಸವ ಎಂದರೆ ಗಾಳಿಪಟದ ಹಾರಾಟ ಅದರ ಭಾಗ. ಹೀಗಾಗಿ, ಸಾಂಕೇತಿಕವಾಗಿ ಗಾಳಿಪಟದ ಪ್ರಾಮುಖ್ಯತೆ ನನಗೆ ಹೆಚ್ಚು ಹತ್ತಿರವಾಯಿತು ಎಂದು ಅವರು ಗಾಳಿಪಟವನ್ನೇ ಮುಖ್ಯವಾಗಿ ಬಳಸಿದ್ದರ ಬಗೆಗೆ ವಿವರಿಸಿದ್ದಾರೆ. ತನ್ನ ಡೂಡಲ್‌ನಲ್ಲಿ ಬಳಸಿದ ಸೂರ್ಯ, ಬಹುಮಹಡಿ ಕಟ್ಟಡಗಳ ಹಿನ್ನೆಲೆಯೂ ಕೂಡಾ ಕಟ್ಟಡಗಳ ಮಿತಿಯನ್ನೂ ದಾಟಿ ಸೂರ್ಯನೆತ್ತರಕ್ಕೆ ಹಾರಬೇಕೆನ್ನುವುದೇ ಆಗಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ | ಸ್ವಾತಂತ್ರ್ಯ ಸೇನಾನಿಗಳ ರುಧಿರಾಭಿಷೇಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Independence Day 2023 : ವಿಶ್ವ ಗುರು ಆಗುವತ್ತ ಹೆಜ್ಜೆ ಇಡುತ್ತಿದೆ ಅಜೇಯ ಭಾರತ: ಚಕ್ರವರ್ತಿ ಸೂಲಿಬೆಲೆ

Independence Day 2023 : ಯುವಾಬ್ರಿಗೇಡ್‌ ನಡೆಸಿಕೊಂಡು ಬರುತ್ತಿರುವ “ಸ್ವಾತಂತ್ರ್ಯ ಶ್ರಾವಣ” ಕಾರ್ಯಕ್ರಮವನ್ನು ಈ ಬಾರಿ ವಿಶ್ವಗುರು ಭಾರತ ಪರಿಕಲ್ಪನೆಯಡಿ ಆಗಸ್ಟ್‌ 13ರಿಂದ 15ರವರೆಗೆ ಮೂರು ದಿನಗಳ ಕಾಲ ಆಚರಿಸಲಾಗಿದೆ. ಈ ವೇಳೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು, ಭವ್ಯ ಭಾರತದ ಇತಿಹಾಸ ಹಾಗೂ ಭವಿಷ್ಯದ ಕನಸಿನ ಬಗ್ಗೆ ಹೇಳಿದ್ದಾರೆ.

VISTARANEWS.COM


on

chakravarty sulibele in jago bharat at swatantrya shravana
Koo

ಬೆಂಗಳೂರು: ಭಾರತ ಹಾಗೂ ದೇಶದ ಪರಿಕಲ್ಪನೆ ಈಗ ಬದಲಾಗಿದೆ. ನಾವೀಗ ವಿಶ್ವ ಗುರು ಆಗುವ ಗುರಿಯನ್ನು ಹೊಂದಿದ್ದೇವೆ. ಆ ನಿಟ್ಟಿನಲ್ಲಿ ನಮ್ಮ ಹೆಜ್ಜೆ ಸಾಗುತ್ತಿದೆ. ಇದೆಲ್ಲದಕ್ಕೂ ನಮ್ಮ ಪರಂಪರೆಯೇ ಮೂಲ ಕಾರಣ ಎಂದು ಯುವಾ ಬ್ರಿಗೇಡ್‌ (Yuva Brigade) ಸಂಸ್ಥಾಪಕ, ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarty Sulibele) ಹೇಳಿದರು. ಸ್ವಾತಂತ್ರ್ಯ ಮಹೋತ್ಸವದ (Independence Day 2023) ಈ ಸಂದರ್ಭದಲ್ಲಿ “ವಿಶ್ವಗುರು ಭಾರತ” (Vishwa Guru Bharath) ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಾ ಬ್ರಿಗೇಡ್‌ (Yuva Brigade) ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದಿಂದ (Sodari Nivedita Pratishthana) ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ (Independence Day 2023) ಸಂದರ್ಭದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ “ಸ್ವಾತಂತ್ರ್ಯ ಶ್ರಾವಣ” ಕಾರ್ಯಕ್ರಮವನ್ನು ಈ ಬಾರಿ ಬೆಂಗಳೂರಿನ ಎಚ್‌ಎಎಲ್‌ ಸಮೀಪದ ಬಸವನಗರದ ವಿಭೂತಿಪುರ ಮಠದಲ್ಲಿ ಆಗಸ್ಟ್‌ 13ರಿಂದ 15ರವರೆಗೆ ಮೂರು ದಿನ ಆಚರಿಸಲಾಗಿದೆ. ಈ ವೇಳೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು “ವಿಶ್ವಗುರು ಭಾರತ” (Vishbaguru Bharata) ಎಂಬ ವಿಷಯದ ಮೇಲೆ ಸಂವಾದ ನಡೆಸಿದ್ದು, ಭಾರತೀಯ ಸಂಸ್ಕೃತಿ, ಪರಂಪರೆ, ಹಿಂದುತ್ವ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಿದ್ದಾರೆ.

chakravarty sulibele in jago bharat at swatantrya shravana Independence Day 2023
chakravarty sulibele in jago bharat at swatantrya shravana Independence Day 2023

ಇದನ್ನೂ ಓದಿ: Independence day 2023 : ಸರ್ವರಿಗೂ ನ್ಯಾಯ, ರಾಜ್ಯದ ಅಭ್ಯುದಯ; ಸಿಎಂ ಸಿದ್ದರಾಮಯ್ಯ ಭಾಷಣದ TOP 14 ವಿಶೇಷ

76 ವರ್ಷಗಳ ಹಿಂದೆ ಈ ದಿನ ಸ್ವಾತಂತ್ರ್ಯದ ಬಗ್ಗೆ ಕಳವಳ ಇತ್ತು ಸ್ವಾತಂತ್ರ್ಯ ಸಿಗುತ್ತದೆಯೋ ಇಲ್ಲವೋ? ಎಂಬ ಕಾತರತೆ ಇತ್ತು. ಆದರೆ, ಸುದೀರ್ಘ ಹೋರಾಟದಿಂದ ಆ ಸುಂದರ ಕ್ಷಣವು ನಮ್ಮದಾಯಿತು. ಹೀಗೆ ಸ್ವಾತಂತ್ರ್ಯಕ್ಕೋಸ್ಕರ ಅದೆಷ್ಟೋ ಜನರು ಬಲಿದಾನಗಳನ್ನು ನೀಡಿದ್ದಾರೆ. ಈ ಎಲ್ಲವನ್ನೂ ನೆನೆಯುವುದಕ್ಕೋಸ್ಕರ ಈ “ಜಾಗೋ ಭಾರತ್‌” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. “ಜಾಗೋ ಭಾರತ್‌” ಎಂಬ ಕಾರ್ಯಕ್ರಮವನ್ನು ನಾವು ಬಹಳ ಹಿಂದೆಯೇ ಮಾಡುತ್ತಾ ಬಂದಿದ್ದೆವು. ಆಗ ಈ “ಜಾಗೋ ಭಾರತ್‌” ಶೀರ್ಷಿಕೆಗೆ ಉಪ ಶೀರ್ಷಿಕೆ ಏನಿತ್ತೆಂದರೆ, “ಮಲಗಿದ್ದು ಸಾಕು ನಾವಿನ್ನು ಏಳೋಣ” ಎಂದು ಬರೆಯಲಾಗಿತ್ತು. ಅದಾದ ಬಳಿಕ ನಾವು ಎದ್ದಿದ್ದೇವೆ. ಹೀಗಾಗಿ 2014ರ ನಂತರ ನಾವು ಬದಲಾವಣೆಯನ್ನು ನೋಡುತ್ತಿದ್ದೇವೆ. ಅನೇಕ ಬದಲಾವಣೆಯನ್ನೂ ಕಂಡಿದ್ದೇವೆ. ಈಗ ನಮ್ಮೀ ಬೇಸ್‌ಲೈನ್‌ ಬದಲಾಗಿದೆ. “ಇನ್ನೀಗ ವಿಶ್ವಗುರು ಒಂದೇ ಗುರಿ” ಎಂಬ ಉಪ ಶೀರ್ಷಿಕೆಯನ್ನು ಹಾಕಿದ್ದೇವೆ. ಈ ಮೂಲಕ ಭಾರತ ವಿಶ್ವಕ್ಕೇ ಗುರು ಆಗಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

chakravarty sulibele in jago bharat at swatantrya shravana Independence Day 2023
chakravarty sulibele in jago bharat at swatantrya shravana Independence Day 2023

ಭಾರತವು ಅತ್ಯಂತ ವಿಶಿಷ್ಟವಾದ ರಾಷ್ಟ್ರವಾಗಿದೆ. ಇದು ಮಾತೃಭೂಮಿ, ಪಿತೃಭೂಮಿ ಹಾಗೂ ಗುರು ಸ್ವರೂಪಿಯಾಗಿರುವ ರಾಷ್ಟ್ರವೂ ಹೌದು. ಗುರು ವಿದ್ಯಾನಂದರು ಭಾರತ ಪದದ ಬಗ್ಗೆ ಹೇಳುವ ಮಾತೊಂದು ಬಹಳ ಚೆನ್ನಾಗಿದೆ. ಭಾ ಎಂದರೆ ಭಾವ, ರ ಎಂದರೆ ರಾಗ ಹಾಗೂ ತ ಎಂದರೆ ತಾಳವಾಗಿದೆ. ಹಾಗಾಗಿ ಭಾವ, ರಾಗ, ತಾಳಗಳ ಸುಂದರ ಮಿಶ್ರಣಗಳ ಸಂಗೀತ ನನ್ನ ಭಾರತ ಎಂದು ಹೇಳುತ್ತಿದ್ದರು. ಭಾರತ ಯಾಕೆ ಅತ್ಯಂತ ಶ್ರೇಷ್ಠ ಎಂದು ಕೇಳಿದರೆ ಹೇಳಲು ನೂರಾರು ಕಾರಣಗಳಿವೆ. ರಾಮ ಹುಟ್ಟಿದ್ದು ನಮ್ಮ ನಾಡಿನಲ್ಲಿ, ಅದಕ್ಕಾಗಿ ಈ ನಾಡು ಗ್ರೇಟ್.‌ ಕೃಷ್ಣ ಹುಟ್ಟಿದ್ದು ಕೂಡಾ ಇಲ್ಲಿ ಎಂದು ಹೇಳುತ್ತಾ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯ ಬಗ್ಗೆ ಚಕ್ರವರ್ತಿ ಸೂಲಿಬೆಲೆ ವಿವರಿಸಿದರು.

ರಾಮ ಯಾಕೆ ಇನ್ನೂ ಜೀವಂತವಾಗಿದ್ದಾನೆ?

ಜಗತ್ತಿನ ಅತ್ಯಂತ ಶ್ರೇಷ್ಠ ಗ್ರಂಥ ಎಂದರೆ ರಾಮಾಯಣ, ಮಹಾಭಾರತ ಎಂದು ಪರಿಗಣಿಸಲಾಗಿದೆ. ಆದರೆ, ಇಂದು ಶೇಕಡಾ 90ರಷ್ಟು ಜನ ರಾಮಾಯಣ ಮತ್ತು ಮಹಾಭಾರತವನ್ನು ಓದಿಯೇ ಇಲ್ಲ. ಹೀಗಿದ್ದರೂ ರಾಮ, ಸೀತೆ, ರಾವಣ ಯಾರು ಗೊತ್ತಾ? ಎಂದು ಕೇಳಿದರೆ ಎಲ್ಲರಿಗೂ ಗೊತ್ತಿರುತ್ತದೆ. ರಾವಣ ಸೀತೆಗೆ ಏನು ಮಾಡಿದ ಎಂದು ಕೇಳಿದರೂ ಗೊತ್ತಿದೆ. ಸೀತೆಯನ್ನು ಹೊತ್ತುಕೊಂಡು ಹೋಗಿದ್ದು ಯಾರು ಎಂಬುದು ಸಹ ಗೊತ್ತಿದೆ. ಆಂಜನೇಯ ಯಾರು ಎಂಬುದೂ ಗೊತ್ತಿದೆ. ರಾಮ ಹುಟ್ಟಿದ್ದು ಕನಿಷ್ಠ ಎಂಟು ಸಾವಿರ ವರ್ಷಗಳ ಹಿಂದೆ. ಹೀಗಿರುವಾಗ ರಾಮ, ರಾಮಾಯಣದ ಬಗ್ಗೆ ಇಂದಿನವರಿಗೂ ಸಂಪೂರ್ಣ ಮಾಹಿತಿ ಇದೆ. ಸಾಹಿತ್ಯವನ್ನು ಓದದಿದ್ದರೂ ಬಹಳಷ್ಟು ಜನರಿಗೆ ಗೊತ್ತಿರುವುದು ಹೇಗೆ ಸಾಧ್ಯವೆಂದರೆ, ನಮ್ಮ ರಾಮ ಪುಸ್ತಕದಲ್ಲಿ ಇಲ್ಲ. ಆತ ಭಾರತೀಯರ, ಹಿಂದುಗಳ ಮನಸ್ಸಿನಲ್ಲಿ ಇದ್ದಾನೆ. ಹಾಗಾಗಿ ರಾಮ ಇನ್ನೂ ಜೀವಂತವಾಗಿದ್ದಾನೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

chakravarty sulibele in jago bharat at swatantrya shravana Independence Day 2023
chakravarty sulibele in jago bharat at swatantrya shravana Independence Day 2023

ರಾಮಾಯಣವು ರಾಮ-ಲಕ್ಷ್ಮಣರ ಬಾಂಧವ್ಯವನ್ನು ಸೂಚಿಸುತ್ತದೆ. ಇನ್ನು ಭರತನ ಸಹೋದರ ಪ್ರೇಮ ಎಂಥದ್ದು ಎಂಬುದು ಗೊತ್ತಾಗುತ್ತದೆ. ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ, ರಾಮನ ಪಾದುಕೆಯನ್ನು ಸಿಂಹಾಸನದ ಮೇಲಿಟ್ಟು ಭರತ 14 ವರ್ಷ ಹೇಗೆ ಆಳ್ವಿಕೆ ನಡೆಸಿದ್ದಾನೆ ಎಂಬುದು ನಮ್ಮವರಿಗೆ ಹೆಚ್ಚು ಗೊತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಇಂಡೋನೇಷ್ಯಾದಲ್ಲಿ ಇಂದು ಯಾರೇ ರಾಜನಾಗಿ ಅಧಿಕಾರ ಸ್ವೀಕಾರ ಮಾಡಿದರೂ ಆತನ ಹೆಸರು ರಾಮ ಎಂದೇ ಆಗಿರುತ್ತದೆ. ಆ ರಾಜ ಪ್ರಮಾಣವಚನವನ್ನು ಸ್ವೀಕಾರ ಮಾಡುವಾಗ, “ರಾಮನ ಪಾದುಕೆಗಳ ಮೇಲಾಣೆ, ಈ ರಾಜ್ಯವನ್ನು ಭರತ ಹೇಗೆ ನಡೆಸಿಕೊಂಡನೋ ಹಾಗೆಯೇ ನಾನು ಈ ರಾಜ್ಯದ ಆಳ್ವಿಕೆ ನಡೆಸುತ್ತೇನೆ ಎಂದು ಈಗಲೂ ಹೇಳುತ್ತಾರೆ ಎಂಬುದನ್ನು ಚಕ್ರವರ್ತಿ ಸೂಲಿಬೆಲೆ ಸ್ಮರಿಸಿದರು.

ಆಕ್ರಮಣಕಾರರು ರಾಮ ಮಂದಿರವನ್ನು ಧ್ವಂಸ ಮಾಡಿದರೆ ಮುಂದೇನೂ ಮಾಡಲಾಗದು ಎಂದು ಅಂದುಕೊಂಡಿದ್ದರು. ಆದರೆ, ರಾಮ ಮಂದಿರದಲ್ಲಿ ಮಾತ್ರವಲ್ಲ, ಪ್ರತಿಯೊಬ್ಬರ ಮನಸ್ಸಿನಲ್ಲಿ ಇದ್ದಾನೆ. ಹೀಗಾಗಿ ರಾಮನನ್ನು ಉಳಿಸಿಕೊಂಡ ಪರಂಪರೆ ನಮ್ಮದು. ಇಡೀ ಉತ್ತರ ಭಾರತದಲ್ಲಿ ಜನರ ಮನಸ್ಥಿತಿ ಹೇಗಿತ್ತೆಂದರೆ, ನೀನು ರಾಮ ಮಂದಿರವನ್ನು ಒಡೆದಿರಬಹುದು. ಆದರೆ, ನನ್ನ ಮನಸ್ಸು, ಬಾಯಿಯಿಂದ ಬರುವ ರಾಮನನ್ನು ಹೇಗೆ ತಡೆಯುತ್ತೀಯಾ? ಎಂಬ ಸವಾಲನ್ನು ಹಾಕುವ ಮನಸ್ಥಿತಿಯನ್ನು ಹೊಂದಿದ್ದರು. ಈಗ ಮತ್ತೆ ರಾಮ ಮಂದಿರ ತಲೆ ಎತ್ತುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಸ್ವಾತಂತ್ರ್ಯ ಇತಿಹಾಸದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಸಂವಾದ; ಇಲ್ಲಿದೆ ವಿಡಿಯೊ

ಇದನ್ನೂ ಓದಿ: Independence Day 2023: ವಿಶ್ವಕ್ಕೆ ಪ್ರಕಾಶ ನೀಡುವುದಕ್ಕಾಗಿಯೇ ಭಾರತ ಸ್ವತಂತ್ರವಾಗಿದೆ: ಡಾ. ಮೋಹನ್ ಭಾಗವತ್

ಜೌಹರ್‌ ಪದ್ಧತಿ ಆರಂಭವಾಗಿದ್ದು ಹೀಗೆ!

ಮಹಮ್ಮದ್‌ ಬಿನ್‌ ಖಾಸಿಮ್‌ ಭಾರತಕ್ಕೆ ಆಕ್ರಮಣ ಮಾಡಲು ಬಂದಿದ್ದ. ಆಗ ಸಿಂಧು ನದಿಯಲ್ಲಿ ಗಲಾಟೆ ಶುರುವಾಯಿತು. ಸಿಂಧು ನದಿಯ ಒಂದು ಭಾಗದಲ್ಲಿ ಮಹಮ್ಮದ್‌ ಬಿನ್‌ ಖಾಸಿಮ್‌ ಹಾಗೂ ಇನ್ನೊಂದು ಭಾಗದಲ್ಲಿ ರಾಜ ಧಾಹಿರನ ಸೈನ್ಯ ಇತ್ತು. ರಾಜ ಧಾಹಿರನ ಸೈನ್ಯದಲ್ಲಿದ್ದ ಆನೆಗಳನ್ನು ನೋಡಿ ಖಾಸಿಮ್‌ ಒಂದು ಕ್ಷಣ ಹೆದರಿದ. ಕೊನೆಗೆ ತನ್ನ ಬಳಿ ಇದ್ದ ಕುದುರೆಗಳಿಗೆ ಬೆಂಕಿಯ ಪಂಜುಗಳನ್ನು ಕಟ್ಟಿ ಆನೆಗಳ ಮೇಲೆ ದಾಳಿ ಮಾಡಿಸಿದ. ಆನೆಗಳು ಆಗ ಹಿಮ್ಮುಖವಾಗಿ ಓಡಿ ತನ್ನದೇ ಸೈನಿಕರನ್ನು ಕೊಂದು ಹಾಕುತ್ತಿತ್ತು. ಇದರಿಂದ ಗಲಿಬಿಲಿಗೊಂಡ ಧಾಹಿರ ಸೆರೆ ಸಿಕ್ಕ. ಕೊನೆಗೆ ಶಿರಚ್ಛೇದನಕ್ಕೂ ಒಳಗಾದ. ಬಳಿ ಧಾಹಿರನ ಮಡದಿ ಆಡಳಿತ ಚುಕ್ಕಾಣಿ ಹಿಡಿದಳಾದರೂ ಖಾಸಿಮ್‌ನಿಂದ ದೇಶ ಉಳಿಸಿಕೊಳ್ಳಲು ಆಗದು ಎಂಬುದು ಅರಿವಾಯಿತು. ಹೀಗಾಗಿ ಅತ್ಯಂತ ಕ್ರೂರಿ, ತುರ್ಕರ ಜನಾಂಗ ಇದಾಗಿದೆ. ಇವರಿಂದ ನನ್ನ ಮಾನಹರಣಕ್ಕೆ ಅವಕಾಶವನ್ನು ಕೊಡಲಾರೆ ಎಂದು ಆಕೆ ಅಗ್ನಿಕುಂಡವನ್ನು ಸಿದ್ಧಪಡಿಸಿ ಅಗ್ನಿಗೆ ಹಾರಿ ಪ್ರಾಣ ಬಿಟ್ಟಳು. ಆನಂತರ ಭಾರತದಲ್ಲಿ “ಜೌಹರ್‌” ಎಂಬ ಪದ್ಧತಿ ಶುರುವಾಯಿತು. ಹೀಗೆಂದರೆ, ಮಾನ ರಕ್ಷಣೆಗೋಸ್ಕರ ಜೀವವನ್ನು ಹರಣ ಮಾಡಿಕೊಳ್ಳುವ ಪದ್ಧತಿಯಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ವಿವರಣೆ ನೀಡಿದರು.

Continue Reading

ಉಡುಪಿ

Independence Day 2023 : ವೇದಿಕೆಯಲ್ಲಿ ಕುಸಿದ ಸಚಿವ ಮಹದೇವಪ್ಪ; ತಲೆಸುತ್ತಿ ಬಿದ್ದ ಮಹಿಳಾ ಪಿಎಸ್‌ಐ

Independence Day 2023 : ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಅನೇಕ ಕಡೆಗಳಲ್ಲಿ ಸಚಿವರು (Minister) ಸೇರಿದಂತೆ ಮಕ್ಕಳು ಹಾಗೂ ಪಿಎಸ್‌ಐ (PSI) ಒಬ್ಬರು ಕುಸಿದು ಬಿದ್ದ ಘಟನೆ ನಡೆದಿದೆ.

VISTARANEWS.COM


on

By

dizziness for psi in Independence Day 2023
ಕಾರವಾರದಲ್ಲಿ ಪರೇಡ್‌ ವೇಳೆ ತಲೆಸುತ್ತಿ ಬಿದ್ದ ಮಹಿಳಾ ಪಿಎಸ್‌ಐ
Koo

ಮೈಸೂರು/ಕಾರವಾರ: 77ನೇ ಸ್ವತಂತ್ರ್ಯ ದಿನದ (Independence Day 2023) ಸುದೀರ್ಘ ಸಂದೇಶದ ಭಾಷಣವನ್ನು ಮಾಡುವಾಗ ಬಿಸಿಲ ಝಳಕ್ಕೆ ಸುಸ್ತಾಗಿ ಸಚಿವ ಡಾ.ಮಹದೇವಪ್ಪ ಕುಸಿದು ಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ. ಇನ್ನೊಂದೆಡೆ ಕಾರವಾರದಲ್ಲಿ ಪರೇಡ್‌ನಲ್ಲಿ ಭಾಗಿಯಾಗಿದ್ದ ಮಹಿಳಾ ಪಿಎಸ್‌ಐ ತಲೆಸುತ್ತಿ ಬಿದ್ದರು. ಯಾದಗಿರಿ ಹಾಗೂ ಉಡುಪಿಯಲ್ಲಿ ವಿದ್ಯಾರ್ಥಿಗಳು ಕುಸಿದು ಅಸ್ವಸ್ಥಗೊಂಡರು.

ಭಾಷಣದ ನಡುವೆ ಎರಡು ಬಾರಿ ಸಚಿವ ಡಾ.ಮಹದೇವಪ್ಪ ನೀರು ಕುಡಿದಿದ್ದರು. ಭಾಷಣ ಮುಗಿದ ನಂತರ ಬಲೂನ್ ಹಾರಿಸುವ ಕಾರ್ಯ ಇತ್ತು. ಈ ವೇಳೆ ನಿಲ್ಲಲಾರದೆ ಸಚಿವರು ವೇದಿಕೆಗೆ ಒರಗಿದರು. ತಕ್ಷಣ ಸಹಾಯಕ್ಕೆ ಬಂದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಹದೇವಪ್ಪ ಅವರನ್ನು ಚೇರ್‌ನಲ್ಲಿ ಕೂರಿಸಿದರು. ಸ್ವಲ್ಪ ಸಮಯ ಸುಧಾರಿಸಿಕೊಂಡು ಬಳಿಕ ಕಾರ್ಯಕ್ರಮವನ್ನು ಮುಂದುವರಿಸಿದರು.

dizziness for psi in Independence Day 2023
ತಲೆಸುತ್ತಿ ಬಿದ್ದ ಪಿಎಸ್‌ಐ ಕೋಕಿಲಾ

ಕಾರವಾರದಲ್ಲಿ ಪರೇಡ್‌ನಲ್ಲಿ ತಲೆಸುತ್ತಿ ಬಿದ್ದ ಮಹಿಳಾ ಪಿಎಸ್‌ಐ

ಸ್ವಾತಂತ್ರ್ಯೋತ್ಸವ ಪರೇಡ್ ವೇಳೆ ಮಹಿಳಾ ಪಿಎಸ್‌ಐ ತಲೆಸುತ್ತಿ ಬಿದ್ದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದಿದೆ. ಸೈಬರ್ ಅಪರಾಧ ಠಾಣೆಯ ಪಿಎಸ್‌ಐ ಕೋಕಿಲಾ ತಲೆಸುತ್ತಿ ಬಿದ್ದ ಕಮಾಂಡರ್ ಆಗಿದ್ದಾರೆ.

ಪರೇಡ್ ತಂಡಗಳು ಬೆಳಗಿನಿಂದ ಬಿಸಿಲಿನಲ್ಲೇ ನಿಂತಿದ್ದರು. ಇತ್ತ ಸಚಿವ ಮಂಕಾಳು ವೈದ್ಯ ಭಾಷಣದ ವೇಳೆ ಕೋಕಿಲಾ ಅವರಿಗೆ ತಲೆ ತಿರುಗಿದೆ. ಕೂಡಲೇ ಪೊಲೀಸ್ ಸಿಬ್ಬಂದಿ ನೀರು ಕುಡಿಸಿ ಆರೈಕೆ ಮಾಡಿದ್ದಾರೆ. ಚೇತರಿಸಿಕೊಂಡ ಕೋಕಿಲಾ ಮತ್ತೆ ನಿರ್ಗಮನ ಪಥಸಂಚಲನದಲ್ಲಿ ಭಾಗಿಯಾದರು.

ಇದನ್ನೂ ಓದಿ: Road Accident : ವೀಲಿಂಗ್‌ ಪುಂಡರ ಹುಚ್ಚಾಟಕ್ಕೆ ಸವಾರ ಬಲಿ, ಮತ್ತೊಬ್ಬ ಗಂಭೀರ

ಲಕ್ಷ್ಮಿ ಹೆಬ್ಬಾಳ್ಕರ್‌ ಭಾಷಣದ ವೇಳೆ ಕುಸಿದು ಬಿದ್ದ ವಿದ್ಯಾರ್ಥಿಗಳು

ಇತ್ತ ಉಡುಪಿಯಲ್ಲೂ ವಿದ್ಯಾರ್ಥಿಗಳು ಕುಸಿದು ಬಿದ್ದ ಘಟನೆ ನಡೆದಿದೆ. ಉಡುಪಿ ಜಿಲ್ಲಾ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆ ಪಥ ಸಂಚಲನ ದಳದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕಾರ್ ಭಾಷಣದ ವೇಳೆ ಕೆಲ ವಿದ್ಯಾರ್ಥಿಗಳು ಕುಸಿದು ಬಿದ್ದರು.

ವಿವಿಧ ದಳದಲ್ಲಿ ಪರೇಡ್ ನಡೆಸಿ ಸುಸ್ತಾಗಿದ್ದ ವಿದ್ಯಾರ್ಥಿಗಳು ಕುಸಿದು ಬಿದ್ದರು. ತಕ್ಷಣವೇ ವಿದ್ಯಾರ್ಥಿಗಳಿಗೆ ಗ್ಲೂಕೋಸ್ ನೀಡಿ ಶಿಕ್ಷಕರು ಆರೈಕೆ ಮಾಡಿದರು. ಜಿಲ್ಲೆಯ ವಿವಿಧ ಶಾಲೆ, ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕವಾಯತು ನಿರ್ಗಮನದಂದು ಕುಸಿದು ಬಿದ್ದ ಮೂವರು ವಿದ್ಯಾರ್ಥಿಗಳು

ಇತ್ತ ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಕವಾಯತು ನಿರ್ಗಮನದ ವೇಳೆ ಮೂವರು ಶಾಲಾ ವಿದ್ಯಾರ್ಥಿಗಳು ಕುಸಿದು ಬಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಪಥಸಂಚಲನ ಮುಕ್ತಾಯದ ವೇಳೆ ಈ ಘಟನೆ ನಡೆದಿದೆ.

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಹಿನ್ನೆಲೆ ಪಥ ಸಂಚಲನ ದಳದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಯಾದಗಿರಿ ನಗರದ ಆದರ್ಶ ಶಾಲೆಯ ಮೂವರು ವಿದ್ಯಾರ್ಥಿಗಳು ಕುಸಿದು ಬಿದ್ದರು. ಬೆಳಗ್ಗೆ ಬೇಗನೇ ಬಂದಿದ್ದರಿಂದ ಊಟ ಮಾಡದೆ ಪರೇಡ್ ನಡೆಸಿ ಸುಸ್ತಾಗಿದ್ದರು. ವಿದ್ಯಾರ್ಥಿಗಳಿಗೆ ತಕ್ಷಣವೇ ಗ್ಲೂಕೋಸ್ ನೀಡಿ ಶಿಕ್ಷಕರು ಆರೈಕೆ ಮಾಡಿದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Independence Day 2023 : ಆಗಸ್ಟ್‌ 15ಕ್ಕೆ ಬೆಂಗಳೂರಿನ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧ

Independence Day 2023 : ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಆಗಸ್ಟ್‌ 15ರಂದು ಬೆಂಗಳೂರಿನ (Bengaluru Traffic) ಪ್ರಮುಖ ರಸ್ತೆಗಳಲ್ಲಿ ಸಂಚಾರ, ಪಾರ್ಕಿಂಗ್‌ಗೆ ನಿರ್ಬಂಧ ಹೇರಲಾಗಿದೆ. ರಸ್ತೆ ಸಂಚಾರ ಬದಲಾವಣೆಯ ಫುಲ್‌ ಡಿಟೇಲ್ಸ್‌ ಇಲ್ಲಿದೆ.

VISTARANEWS.COM


on

By

Independence day 2023 route change
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: 77ರ ಸ್ವಾತಂತ್ರ್ಯ ದಿನದ (Independence Day 2023) ಅಂಗವಾಗಿ ಬೆಂಗಳೂರಿನ ಮಾಣಿಕ್‌ಷಾ ಪೆರೇಡ್‌ ಮೈದಾನದಲ್ಲಿ ರಾಜ್ಯ ಸರ್ಕಾರದಿಂದ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಸಗ್ಟ್‌ 15 ರಂದು ಸ್ವಾತಂತ್ರ್ಯ ದಿನದ ಅಂಗವಾಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಕಬ್ಬನ್‌ಪಾರ್ಕ್‌ನಿಂದ ಬಿಆರ್‌ವಿ ಜಂಕ್ಷನ್‌, ಕಾಮರಾಜರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕುಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಯಾವೆಲ್ಲ ಮಾರ್ಗದಲ್ಲಿ ಸಂಚಾರ ಬದಲಾವಣೆ?

  • ಇನ್‌ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್‌ ಸೆಂಟರ್‌ ಕಡೆಗೆ ಸಂಚರಿಸುವ ವಾಹನಗಳು ನೇರವಾಗಿ ಇನ್‌ಫೆಂಟ್ರಿರಸ್ತೆ – ಸಫೀನಾ ಪ್ಲಾಜಾದಲ್ಲಿ ಎಡ ತಿರುವು ಪಡೆದು ಮೈನ್‌ಗಾರ್ಡ್‌ ರಸ್ತೆ- ಆಲೀಸ್ ಸರ್ಕಲ್- ಡಿಸ್ಪೆನ್ಸರಿರಸ್ತೆ- ಕಾಮರಾಜರಸ್ತೆ ಮತ್ತು ಡಿಕನ್ಸನ್‌ ರಸ್ತೆಜಂಕ್ಷನ್ – ಬಲಕ್ಕೆ ತಿರುವು ಪಡೆದು ಕಾಮರಾಜರಸ್ತೆ, ಕಬ್ಬನ್‌ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್‌ರಸ್ತೆ ಮುಖಾಂತರ ಮಣಿಪಾಲ್‌ ಸೆಂಟರ್‌ ಕಡೆಗೆ ಸಾಗಬಹುದಾಗಿದೆ.
  • ಕಬ್ಬನ್‌ರಸ್ತೆಯಲ್ಲಿ, ಮಣಿಪಾಲ್ ಸೆಂಟರ್‌ ಜಂಕ್ಷನ್‌ನಿಂದ ಬಿ.ಆರ್.ವಿ. ಜಂಕ್ಷನ್‌ ಕಡೆಗೆ ಬರುವ ವಾಹನಗಳ ಸಂಚಾರವನ್ನು ಮಣಿಪಾಲ್ ಸೆಂಟರ್ ಬಳ ನಿರ್ಬಂಧಿಸಲಾಗಿದೆ. ಹೀಗಾಗಿ ಈ ವಾಹನಗಳು ವೆಬ್ಸ್‌ ಜಂಕ್ಷನ್‌ ಬಳಿ ಬಲ ತಿರುವು ಪಡೆದು ಎಂ.ಜಿ. ರಸ್ತೆಯ ಮೂಲಕ ಮೆಯೋ ಹಾಲ್, ಕಾವೇರಿ ಎಂಪೋರಿಯಂ, ಅನಿಲ್‌ ಕುಂಬ್ಳೇ ವೃತ್ತದಲ್ಲಿ ಬಲ ತಿರುವು ಪಡೆಯಬೇಕು.
  • ಅನಿಲ್‌ ಕುಂಬ್ಳೆ ವೃತ್ತದಿಂದ ಕಬ್ಬನ್‌ ರಸ್ತೆ ಕಡೆಗೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್‌ ಸ್ಟ್ರೀಟ್‌ನಲ್ಲಿ ಸಾಗಿ, ಬಲಕ್ಕೆ ತಿರುವು ಪಡೆಯಬಹುದು. ಇನ್‌ಫೆಂಟ್ರಿರಸ್ತೆ- ಸಫೀನಾ ಪ್ಲಾಜಾ ಎಡಕ್ಕೆ ತಿರುವು ಪಡೆದು ಮೈನ್‌ಗಾರ್ಡ್‌ರಸ್ತೆ- ಆಲಿ ಸರ್ಕಲ್- ಡಿಸ್ಪೆನ್ಸರಿರಸ್ತೆ- ಕಾಮರಾಜರಸ್ತೆ ಮತ್ತು ಡಿಕನ್ನನ್‌ ರಸ್ತೆಜಂಕ್ಷನ್ ಬಲಕ್ಕೆ ತಿರುವು ಪಡೆಯಬೇಕು. ಕಬ್ಬನ್‌ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್‌ ಕಡೆಗೆ ಹೋಗಬಹುದು.

ವಾಹನಗಳ ನಿಲುಗಡೆ ನಿಷೇಧ

1) ಸೆಂಟ್ರಲ್‌ ಸ್ಟ್ರೀಟ್‌
2) ಅನಿಲ್‌ ಕುಂಬ್ಳೆ ವೃತ್ತ
3) ಶಿವಾಜಿನಗರ ಬಸ್‌ ನಿಲ್ದಾಣ
4) ಕಬ್ಬನ್‌ ರಸ್ತೆ
5) ಸಿಟಿಓ ವೃತ್ತ
6) ಕೆಆರ್‌ ರಸ್ತೆ ಮತ್ತು ಕಬ್ಬನ್‌ ರಸ್ತೆ ಜಂಕ್ಷನ್‌ವರೆಗೆ
7) ಎಂಜಿ ರಸ್ತೆ
8) ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ವೃತ್ತದವರೆಗೆ

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Independence Day 2023 : 77ರ ಸ್ವಾತಂತ್ರ್ಯದಿನಕ್ಕೆ ಮಾಣಿಕ್‌ ಷಾ ಮೈದಾನ ಸಿದ್ಧ; ಇರಲಿದೆ ಸಾಹಸ ಪ್ರದರ್ಶನ

Independence Day 2023 : ಬೆಂಗಳೂರಿನ ಮಾಣಿಕ್‌ಷಾ ಮೈದಾನದಲ್ಲಿ (Field Marshal Manikshah Parade Ground) ರಾಜ್ಯ ಸರ್ಕಾರದಿಂದ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

VISTARANEWS.COM


on

By

Independence Day 2023 Manikshah Maidan
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: 77ನೇ ಸ್ವಾತಂತ್ರ್ಯ ದಿನಾಚರಣೆ (Independence Day 2023) ಸಮಾರಂಭಕ್ಕೆ ಫೀಲ್ಡ್ ಮಾರ್ಷಲ್ ಮಾಣಿಕ್‌ಷಾ ಪರೇಡ್ ಮೈದಾನ (Field Marshal Manikshah Parade Ground) ಸಿದ್ಧತೆಯು ಭರದಿಂದ ಸಾಗುತ್ತಿದೆ. ಆಗಸ್ಟ್ 15ರ ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಆಗಸ್ಟ್‌ 15ರ ಸಿದ್ಧತೆ ಕುರಿತು ಬಿಬಿಎಂಪಿ ಹಾಗೂ ನಗರ ಪೊಲೀಸ್‌ ಆಯುಕ್ತರ ಜಂಟಿ ಸುದ್ದಿಗೋಷ್ಠಿ ಭಾನುವಾರ ನಡೆಸಲಾಯಿತು. ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೇರಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಭಾಗಿಯಾಗಿದ್ದರು.

ಬೆಳಗ್ಗೆ 9 ಕ್ಕೆ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ

77ರ ಸ್ವಾತಂತ್ರ್ಯ ದಿನಾಚರಣೆಯಂದು ಆಗಸ್ಟ್‌ 15ರ ಬೆಳಗ್ಗೆ 9ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಧ್ವಜಾರೋಹಣದ ಬಳಿಕ ತೆರೆದ ಜೀಪಿನಲ್ಲಿ ಪೆರೇಡ್‌ ವೀಕ್ಷಣೆ ಮಾಡಲಿದ್ದಾರೆ. ಜತೆಗೆ ಗೌರವ ರಕ್ಷೆ ಸ್ವೀಕಾರ ನಂತರ ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡಲಿದ್ದಾರೆ.

ಇದನ್ನೂ ಓದಿ: Independence Day 2023: ತಿರಂಗಾವನ್ನು ಜಾಲತಾಣಗಳ ಡಿಪಿ ಇಟ್ಟು ದೇಶಪ್ರೇಮ ಮೆರೆಯಲು ಮೋದಿ ಕರೆ

ಮಕ್ಕಳ ನೃತ್ಯದ ಜತೆಗೆ ಸಾಹಸಿ ಪ್ರದರ್ಶನ

ಆಗಸ್ಟ್‌ 15ರಂದು ನಾಡಗೀತೆ, ರೈತಗೀತೆ ಬಳಿಕ ಬೆಂಗಳೂರು ದಕ್ಷಿಣ ವಲಯದ ಕರ್ನಾಟಕ ಪಬ್ಲಿಕ್‌ ಶಾಲೆಯ 750 ಮಕ್ಕಳಿಂದ ವೀರ ನಮನದ ನೃತ್ಯ ಇರಲಿದೆ. ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 700 ವಿದ್ಯಾರ್ಥಿಗಳಿಂದ ವೀರಭೂಮಿ ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹ ಎಂಬ ನೃತ್ಯ ರೂಪಕ ಮಾಡಲಿದ್ದಾರೆ.

ಇದರೊಂದಿಗೆ ಬೆಳಗಾವಿಯ ಬೈಲಹೊಂಗಲದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 50 ಮಕ್ಕಳಿಂದ ರೋಪ್‌ ಸ್ಕಿಪಿಂಗ್‌ ಇರಲಿದೆ. ಎಂಇಜಿ ತಂಡದಿಂದ ಕಲಾರಿಪಯಟ್ಟು ಪ್ರದರ್ಶನ ಹಾಗೂ ಎಎಸ್‌ಸಿ ತಂಡದಿಂದ ಟೆಂಟ್‌ ಪೆಗ್ಗಿಂಗ್‌ ಹಾಗೂ ಮೋಟರ್‌ ಸೈಕಲ್‌ ಪ್ರದರ್ಶನ ಇರಲಿದೆ.

ಕವಾಯತ್ತಿನಲ್ಲಿ ಈ ಬಾರಿ ಗೋವಾ ಪೊಲೀಸರು ವಿಶೇಷವಾಗಿ ಭಾಗಿಯಾಗಲಿದ್ದಾರೆ. ಉಳಿದಂತೆ ಬಿಎಸ್ ಎಫ್, ಸಿಎಆರ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್ ಪಡೆ, ಟ್ರಾಫಿಕ್ ವಾರ್ಡ್‌ನ್, ಡಾಗ್ ಸ್ಕ್ವಾಡ್‌ಗಳು ಸೇರಿದಂತೆ 38 ತುಕಡಿಗಳಲ್ಲಿ 1.350 ಮಂದಿ ಭಾಗಿಯಾಗಲಿದ್ದಾರೆ.

100 ಸಿಸಿ ಕ್ಯಾಮೆರಾ ಅಳವಡಿಕೆ

ಸ್ವಾತಂತ್ರ್ಯ ದಿನದಂದು ಯಾವುದೇ ಅಹಿತಕರ ಘಟನೆ ನಡೆಯಬಾರೆಂದು ಸೂಕ್ತ ಬಂದೋಬಸ್ತ್‌ ಮಾಡಲಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮಾಹಿತಿ ನೀಡಿದ್ದಾರೆ. ಆಗಸ್ಟ್‌ 15ರಂದು ಪೆರೇಡ್ ಸುತ್ತಮುತ್ತ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಮೈದಾನ ಸುತ್ತ ಸುರಕ್ಷತೆ ದೃಷ್ಠಿಯಿಂದ 100 ಸಿಸಿ ಕ್ಯಾಮೆರಾ ವ್ಯವಸ್ಥೆ ಹಾಗೂ 2 ಬ್ಯಾಗೇಜ್‌ ಸ್ಕ್ಯಾನರ್‌ ಅಳವಡಿಕೆ ಮಾಡಲಾಗುತ್ತಿದೆ.

ಜತೆಗೆ ಆಂಬ್ಯುಲೆನ್ಸ್‌, ವೈದ್ಯಕೀಯ ವ್ಯವಸ್ಥೆಯೊಂದಿಗೆ ಅಗ್ನಿಶಾಮಕ ವಾಹನದೊಂದಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೆಎಸ್‌ಆರ್‌ಪಿ, ಸಿಎಆರ್, ಅಗ್ನಿಶಾಮಕ, ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ಸೇರಿದಂತೆ ಎಲ್ಲಾ ವಿಶೇಷ ತಂಡಗಳು ಇರಲಿವೆ ಎಂದು ತಿಳಿಸಿದರು. ಪಾಸ್ ಹೊಂದಿರುವವರಿಗೆ ಮಾತ್ರ ಪರೇಡ್ ಗ್ರೌಂಡ್‌ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಾಸ್‌ ಮೇಲೆ ಯಾವ ಗೇಟ್‌ನಲ್ಲಿ ಪ್ರವೇಶ ಎಂದು ಇರುತ್ತದೆಯೋ ಆ ಗೇಟ್‌ನಿಂದಲೇ ಬರಬೇಕು. ಬೆಳಗ್ಗೆ 8.30ರ ಒಳಗೆ ಮೈದಾನದಲ್ಲಿ ಇರಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Independence Day 2023 : ಆಗಸ್ಟ್‌ 15ರಂದು ಕೆಂಪುಕೋಟೆಗೆ ಆಹ್ವಾನ; ಬಣವಿಕಲ್ಲು ದಂಪತಿ ಸಂತಸ

ಆಗಸ್ಟ್‌ 15 ರಂದು ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧ

ಆಸಗ್ಟ್‌ 15ರಂದು ಸ್ವಾತಂತ್ರ್ಯ ದಿನದ ಅಂಗವಾಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಕಬ್ಬನ್‌ಪಾರ್ಕ್‌ನಿಂದ ಬಿಆರ್‌ವಿ ಜಂಕ್ಷನ್‌, ಕಾಮರಾಜರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕುಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.

  • ಇನ್‌ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್‌ ಸೆಂಟರ್‌ ಕಡೆಗೆ ಸಂಚರಿಸುವ ವಾಹನಗಳು ನೇರವಾಗಿ ಇನ್‌ಫೆಂಟ್ರಿರಸ್ತೆ – ಸಫೀನಾ ಪ್ಲಾಜಾದಲ್ಲಿ ಎಡ ತಿರುವು ಪಡೆದು ಮೈನ್‌ಗಾರ್ಡ್‌ ರಸ್ತೆ- ಆಲೀಸ್ ಸರ್ಕಲ್- ಡಿಸ್ಪೆನ್ಸರಿರಸ್ತೆ- ಕಾಮರಾಜರಸ್ತೆ ಮತ್ತು ಡಿಕನ್ಸನ್‌ ರಸ್ತೆಜಂಕ್ಷನ್ – ಬಲಕ್ಕೆ ತಿರುವು ಪಡೆದು ಕಾಮರಾಜರಸ್ತೆ, ಕಬ್ಬನ್‌ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್‌ರಸ್ತೆ ಮುಖಾಂತರ ಮಣಿಪಾಲ್‌ ಸೆಂಟರ್‌ ಕಡೆಗೆ ಸಾಗಬಹುದಾಗಿದೆ.
  • ಕಬ್ಬನ್‌ರಸ್ತೆಯಲ್ಲಿ, ಮಣಿಪಾಲ್ ಸೆಂಟರ್‌ ಜಂಕ್ಷನ್‌ನಿಂದ ಬಿ.ಆರ್.ವಿ. ಜಂಕ್ಷನ್‌ ಕಡೆಗೆ ಬರುವ ವಾಹನಗಳ ಸಂಚಾರವನ್ನು ಮಣಿಪಾಲ್ ಸೆಂಟರ್ ಬಳ ನಿರ್ಬಂಧಿಸಲಾಗಿದೆ. ಹೀಗಾಗಿ ಈ ವಾಹನಗಳು ವೆಬ್ಸ್‌ ಜಂಕ್ಷನ್‌ ಬಳಿ ಬಲ ತಿರುವು ಪಡೆದು ಎಂ.ಜಿ. ರಸ್ತೆಯ ಮೂಲಕ ಮೆಯೋ ಹಾಲ್, ಕಾವೇರಿ ಎಂಪೋರಿಯಂ, ಅನಿಲ್‌ ಕುಂಬ್ಳೇ ವೃತ್ತದಲ್ಲಿ ಬಲ ತಿರುವು ಪಡೆಯಬೇಕು.
  • ಅನಿಲ್‌ ಕುಂಬ್ಳೆ ವೃತ್ತದಿಂದ ಕಬ್ಬನ್‌ ರಸ್ತೆ ಕಡೆಗೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್‌ ಸ್ಟ್ರೀಟ್‌ನಲ್ಲಿ ಸಾಗಿ, ಬಲಕ್ಕೆ ತಿರುವು ಪಡೆಯಬಹುದು. ಇನ್‌ಫೆಂಟ್ರಿರಸ್ತೆ- ಸಫೀನಾ ಪ್ಲಾಜಾ ಎಡಕ್ಕೆ ತಿರುವು ಪಡೆದು ಮೈನ್‌ಗಾರ್ಡ್‌ರಸ್ತೆ- ಆಲಿ ಸರ್ಕಲ್- ಡಿಸ್ಪೆನ್ಸರಿರಸ್ತೆ- ಕಾಮರಾಜರಸ್ತೆ ಮತ್ತು ಡಿಕನ್ನನ್‌ ರಸ್ತೆಜಂಕ್ಷನ್ ಬಲಕ್ಕೆ ತಿರುವು ಪಡೆಯಬೇಕು. ಕಬ್ಬನ್‌ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್‌ ಕಡೆಗೆ ಹೋಗಬಹುದು.

ವಾಹನ ನಿಲುಗಡೆ ನಿಷೇಧ

1) ಸೆಂಟ್ರಲ್‌ ಸ್ಟ್ರೀಟ್‌
2) ಅನಿಲ್‌ ಕುಂಬ್ಳೆ ವೃತ್ತ
3) ಶಿವಾಜಿನಗರ ಬಸ್‌ ನಿಲ್ದಾಣ
4) ಕಬ್ಬನ್‌ ರಸ್ತೆ
5) ಸಿಟಿಓ ವೃತ್ತ
6) ಕೆಆರ್‌ ರಸ್ತೆ ಮತ್ತು ಕಬ್ಬನ್‌ ರಸ್ತೆ ಜಂಕ್ಷನ್‌ವರೆಗೆ
7) ಎಂಜಿ ರಸ್ತೆ
8) ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ವೃತ್ತದವರೆಗೆ

ಮೈದಾನದೊಳಗೆ ಇವುಗಳು ನಿಷಿದ್ಧ

ಸಿಗರೇಟ್, ಬೆಂಕಿ ಪೆಟ್ಟಿಗೆ , ಕರಪತ್ರಗಳು, ಬಣ್ಣದ ದ್ರಾವಣಗಳು, ನೀರಿನ ಬಾಟಲ್‌ಗಳು ಹಾಗೂ ಕ್ಯಾನ್‌ಗಳು ತರಲುವಂತಿಲ್ಲ. ಚಾಕು ಚೂರಿಗಳು, ಕಪ್ಪು ಕರವಸ್ತ್ರಗಳು ಸೇರಿ ತಿಂಡಿ, ತಿನಿಸುಗಳು, ಮದ್ಯದ ಬಾಟಲ್‌ಗಳು ತರುವಂತಿಲ್ಲ. ವಿಡಿಯೋ ಮತ್ತು ಸ್ಟಿಲ್ ಕ್ಯಾಮೆರಾಗಳು ಪಟಾಕಿ ಮತ್ತು ಸ್ಫೋಟಕ ವಸ್ತುಗಳು ನಿಷೇಧ ಮಾಡಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
IND vs SL
ಕ್ರೀಡೆ16 mins ago

IND vs SL: ಗ್ಲೆನ್​ ಮ್ಯಾಕ್ಸ್​ವೆಲ್​ ಟಿ20 ವಿಶ್ವ ದಾಖಲೆ ಮುರಿದ ಸೂರ್ಯಕುಮಾರ್

Gold Rate Today
ಚಿನ್ನದ ದರ29 mins ago

Gold Rate Today: ಆಭರಣ ಖರೀದಿಸುವ ಯೋಚನೆಯಲ್ಲಿದ್ದೀರಾ? ಇಂದಿನ ಬೆಲೆ ಚೆಕ್‌ ಮಾಡಿ

Bigg Boss OTT 3 Anil Kapoor as the worst ever host of Bigg Boss
ಬಿಗ್ ಬಾಸ್34 mins ago

Bigg Boss OTT 3: ಅನಿಲ್​ ಕಪೂರ್ ʻವರ್ಸ್ಟ್‌ ನಿರೂಪಕʼ ಎಂದ ನೆಟ್ಟಿಗರು ; ಬೇಸತ್ತ ವೀಕ್ಷಕರು!

CH Vijayashankar
ಪ್ರಮುಖ ಸುದ್ದಿ47 mins ago

CH Vijayashankar: ಮೇಘಾಲಯ ರಾಜ್ಯಪಾಲರಾಗಿ ಸಿ.ಎಚ್. ವಿಜಯಶಂಕರ್ ನೇಮಕ

Vinay Rajkumar pepe the film A certificate
ಸ್ಯಾಂಡಲ್ ವುಡ್59 mins ago

Vinay Rajkumar: ಸೆನ್ಸಾರ್ ಪಾಸಾದ ‘ಪೆಪೆ’; ವಿನಯ್ ರಾಜ್ ಕುಮಾರ್ ಚಿತ್ರಕ್ಕೆ A’ ಸರ್ಟಿಫಿಕೇಟ್!

INDW vs SLW Final
ಪ್ರಮುಖ ಸುದ್ದಿ59 mins ago

INDW vs SLW Final: ಇಂದು ಭಾರತ-ಲಂಕಾ ಏಷ್ಯಾ ಕಪ್​ ಫೈನಲ್​; 8ನೇ ಟ್ರೋಫಿ ಮೇಲೆ ಕಣ್ಣಿಟ್ಟ ಹರ್ಮನ್​ಪ್ರೀತ್​​ ಪಡೆ  

Suzuki India
ಆಟೋಮೊಬೈಲ್1 hour ago

4 ಲಕ್ಷ ಬೈಕ್‌, ಸ್ಕೂಟರ್‌ ಹಿಂಪಡೆಯಲು ಮುಂದಾದ ಸುಜುಕಿ ಇಂಡಿಯಾ; ಈ ಪಟ್ಟಿಯಲ್ಲಿ ನಿಮ್ಮ ವಾಹನವೂ ಇದ್ಯಾ? ಹೀಗೆ ಚೆಕ್‌ ಮಾಡಿ

rowdysheeters police firing
ಕ್ರೈಂ1 hour ago

Police Firing: ಕೈ ಕಟ್‌ ಮಾಡಿದ ರೌಡಿಗಳ ಕಾಲಿಗೆ ಪೊಲೀಸರ ಗುಂಡೇಟು

ಪ್ರಮುಖ ಸುದ್ದಿ1 hour ago

Olympic Games Paris: ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಸ್ಪರ್ಧೆಗಳ ವಿವರ

Bigg Boss Marathi 5 premiere ritesh deshmukh co star shubhankar tawde
ಬಿಗ್ ಬಾಸ್1 hour ago

Bigg Boss Marathi 5: ಶುರುವಾಯ್ತು ಮರಾಠಿ ಬಿಗ್​ಬಾಸ್ 5; ಈ ಬಾರಿ ರಿತೇಶ್ ದೇಶ್​ಮುಖ್ ನಿರೂಪಕ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ15 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ20 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ21 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ3 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ3 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌