ಸಿಎಂ ಬೊಮ್ಮಾಯಿಗೆ ಯೋಗಿ ಆದಿತ್ಯನಾಥ ಬಹುಪರಾಕ್‌: ʼಕ್ಷೇಮವನʼದಲ್ಲಿ ಸಿಕ್ಕಿತು ರಾಜಕೀಯ ಸಂದೇಶ! - Vistara News

ಆರೋಗ್ಯ

ಸಿಎಂ ಬೊಮ್ಮಾಯಿಗೆ ಯೋಗಿ ಆದಿತ್ಯನಾಥ ಬಹುಪರಾಕ್‌: ʼಕ್ಷೇಮವನʼದಲ್ಲಿ ಸಿಕ್ಕಿತು ರಾಜಕೀಯ ಸಂದೇಶ!

ನೆಲಮಂಗಲದ ಬಳಿಯ ಮಹದೇವಪುರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಆಯುರ್ವೇದ ಸಂಸ್ಥೆ ವತಿಯಿಂದ ಸ್ಥಾಪಿಸಿರುವ “ಕ್ಷೇಮವನʼವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಉದ್ಘಾಟಿಸಿದರು.

VISTARANEWS.COM


on

yogi adityanath in kshemavana
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಸರ್ಕಾರದ ನೇತೃತ್ವ, ನಾಯಕತ್ವದ ವಿಚಾರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಹುಮುಖ್ಯವಾದ ಸಂದೇಶವೊಂದನ್ನು ಬೆಂಗಳೂರಿನಲ್ಲಿ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವಕ್ಕೆ ಅನೇಕ ಬಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ನೆಲಮಂಗಲದ ಬಳಿಯ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದೇವಪುರ ಗ್ರಾಮದಲ್ಲಿ ಮಂಜುನಾಥೇಶ್ವರ ನ್ಯಾಚುರೋಪಥಿ ಮತ್ತು ಯೋಗಿಕ್‌ ಸೈನ್ಸಸ್‌ನ ʼಕ್ಷೇಮವನʼ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯೋಗಿಯ ಮಾತಿನ ಸಾರ ಹೀಗಿದೆ:

ಈ ಕಾರ್ಯಕ್ರಮಕ್ಕೆ ಆಹ್ವಾನ ನನಗೆ ದೊರೆತದ್ದು ಅದ್ಭುತ ಕ್ಷಣ. ಶ್ರೀ ಕ್ಷೇತ್ರ ಮಂಜುನಾಥ ಸಂಸ್ಥಾನಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ವಿಶೇಷ. ಕರ್ನಾಟಕದಲ್ಲಿ ಮಂಜುನಾಥ ಎನ್ನುವುದು ನಾಥ ಪರಂಪರೆಯನ್ನೇ ಮುಂದುವರಿಸುತ್ತದೆ. ಈ ಮೂಲಕ ಆಧ್ಯಾತ್ಮಿಕ ಭಾವದಿಂದ ಉತ್ತರ ಪ್ರದೇಶ ಹಾಗೂ ಕರ್ನಾಟಕವನ್ನು ಜೋಡಿಸುತ್ತದೆ.

ವೀರೇಂದ್ರ ಹೆಗ್ಗಡೆಯವರು ದಶಕಗಳ ಹಿಂದಿನಿಂದಲೂ ಯೋಗ ಹಾಗೂ ನ್ಯಾಚುರೋಪಥಿಯನ್ನು ಮುನ್ನಡೆಸುತ್ತಿದ್ದಾರೆ. ಬೆಂಗಳೂರಿನ ಬಳಿಯಲ್ಲಿ ಈ ಕೇಂದ್ರ ಸ್ಥಾಪನೆಯಾಗಿರುವುದು ಕರ್ನಾಟಕ ಮಾತ್ರವಲ್ಲದೆ ದೇಶಕ್ಕೇ ಉಪಯೋಗವಾಗಲಿದೆ. ಕರ್ನಾಟಕದ ಮುಖ್ಯಮಂತ್ರಿಯವರೂ ಒಬ್ಬ ಯೋಗಿಯ ರೀತಿ ಕೆಲಸ ಮಾಡುತ್ತಿದ್ದಾರೆ. ಭಾರತದ ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ಹೆಚ್ಚಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಘೋಷಣೆಗೆ ಕೇವಲ ಸರ್ಕಾರ ಮಾತ್ರವಲ್ಲ, ಸಮಾಜದ ಎಲ್ಲರೂ ಪ್ರಯತ್ನಪಡಬೇಕು. ಇದಕ್ಕಾಗಿ ನಮ್ಮ ಕಾರ್ಯದಲ್ಲಿ ವೃತ್ತಿಪರತೆಯನ್ನು ಮೂಡಿಸಿಕೊಳ್ಳಬೇಕಿದೆ.

ಕರ್ನಾಟಕವನ್ನು ಎಂದಿಗೂ ಸಂಕಟದಲ್ಲಿನ ಸ್ನೇಹಿತ ಎಂದು ಕರೆಯಲಾಗುತ್ತದೆ. ಇದೇ ಕರ್ನಾಟಕದಲ್ಲಿ ಶ್ರೀರಾಮನ ಸಹಾಯಕ್ಕೆ ಹನುಮಂತ ಸಹಾಯಕ್ಕೆ ಬಂದಿದ್ದ. ಹನುಮಂತನ ಸಹಾಯದಿಂದಲೇ ಸೇತುಬಂಧ ನಿರ್ಮಾಣವಾಗಿ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯ ಆಧಾರವಾಯಿತು.

ಈ ಹಿಂದೆ ಯೋಗದ ಕುರಿತು ವಿವಿಧ ಮಾತುಗಳಿದ್ದವು. ಆದರೆ ಇಂದು ಭಾರತದಲ್ಲಿ ಮಾತ್ರವಲ್ಲ, ದೇಶದ ನೂರಾರು ದೇಶಗಳು ಯೋಗ ಪರಂಪರೆಯೊಂದಿಗೆ ಜೋಡಿಸಿಕೊಂಡಿದ್ದಾರೆ. ಈ ದೇಹದ ಮೂಲಕವೇ ನಮ್ಮ ಎಲ್ಲ ಕಾರ್ಯವನ್ನೂ ನಡೆಸಬೇಕು ಎಂಬುದನ್ನು ಯೋಗ ತಿಳಿಸಿದೆ. ಕೋವಿಡ್‌-19 ಸಂದರ್ಭದಲ್ಲಿಯಂತೂ ಯೋಗದ ಕುರಿತು ಜನರಿಗೆ ಅರಿವಾಗಿದೆ. ದೇಹದ ರೋಗನಿರೋಧಕತೆಯನ್ನು ಹೆಚ್ಚಿಸಿಕೊಳ್ಳಲು ಆಯುರ್ವೇದ, ಯೋಗ, ಸಿದ್ಧ ಮುಂತಾದ ವ್ಯವಸ್ಥೆಗಳ ಕೊಡುಗೆ ಇದೆ.

ಅಮೆರಿಕದ ಜನಸಂಖ್ಯೆ ಭಾರತದ ಕಾಲುಭಾಗವಷ್ಟೆ ಇದೆ. ಆದರೆ ಕೋವಿಡ್‌ನಿಂದಾಗಿ ಅಮೆರಿಕದ ಎರಡು ಪಟ್ಟು ಜನರು ಮೃತಪಟ್ಟಿದ್ದಾರೆ. ಅಂದರೆ, ಭಾರತದಲ್ಲಿ ಪರಂಪರಾಗತ ಪದ್ಧತಿಗಳ ಕೊಡುಗೆ ಬಹುದೊಡ್ಡದು. ಭಾರತದ ಸಾಂಪ್ರದಾಯಿಕ ಚಿಕಿತ್ಸಾ ವ್ಯವಸ್ಥೆಯನ್ನು ಮುನ್ನಡೆಸಲು ಧರ್ಮಸ್ಥಳ ಕ್ಷೇತ್ರದಿಂದ ನೀಡಿದ ಮಹಾ ಪ್ರಸಾದವಾಗಿದೆ ಎಂದು ಯೋಗಿ ಹೇಳಿದರು.

ಭಾಷಣದ ನಡುವೆ ಒಮ್ಮೆ ಯೋಗಿಗಳ ಕುರಿತು ಮಾತನಾಡಿದ ಆದಿತ್ಯನಾಥ, “”ಈ ವೇದಿಕೆಯಲ್ಲಿ ನಾನೊಬ್ಬ ಯೋಗಿ, ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರೂ ಒಬ್ಬ ಯೋಗಿಯಿದ್ದಾರೆ. ನಮ್ಮ ಜತೆಗೆ ಜನಪ್ರಿಯ ಮುಖ್ಯಮಂತ್ರಿಯಾಗಿರುವ ಸಿಎಂ ಬೊಮ್ಮಾಯಿ ಅವರೂ ಒಬ್ಬ ಯೋಗಿಯಂತೆಯೇ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಅವರು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆʼʼ ಎಂದು ಶ್ಲಾಘಿಸಿದರು.

ಭಾಷಣದ ನಡುವೆ ಮತ್ತೊಮ್ಮೆ ಸಿಎಂ ಬೊಮ್ಮಾಯಿ ಅವರನ್ನು ಹೆಸರಿಸಿದ ಯೋಗಿ ಆದಿತ್ಯನಾಥ, ಕರ್ನಾಟಕವನ್ನು ಅಭಿವೃದ್ಧಿಪಥದಲ್ಲಿ ಬೊಮ್ಮಾಯಿ ಅವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ದೇಶದ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿ ಕರ್ನಾಟಕ ರೂಪುಗೊಳ್ಳಲಿದೆ. ಈ ಕಾರ್ಯದಲ್ಲಿ ನಮ್ಮ ಸಂಪೂರ್ಣ ಸಹಕಾರ ಇರಲಿದೆ. ಅದರಲ್ಲೂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಆರೋಗ್ಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಇಂಬು ಸಿಗಲಿದೆ ಎಂದು ಆಶಿಸುವುದಾಗಿ ತಿಳಿಸಿದರು.

ಮಾನವನ ಮನಸ್ಸು ಒಂದುಗೂಡಲಿ

ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕೋವಿಡ್‌-19ರ ಸಂಕಷ್ಟಗಳನ್ನು ಎಲ್ಲರೂ ನೋಡಿದ್ದೇವೆ. ಇದೇ ಕೋವಿಡ್‌ ಸಮಯದಲ್ಲಿ ಕಾಮಗಾರಿ ನಡೆದು ಕ್ಷೇಮವನ ಇಂದು ಲೋಕಾರ್ಪಣೆಯಾಗಿದೆ. ಸೃಷ್ಟಿಯಲ್ಲಿ ಎಲ್ಲ ಜೀವಜಂತುಗಳೂ ಇವೆ, ಆದರೆ ಮನುಷ್ಯನಿಗೆ ವಿಶೇಷ ಸ್ಥಾನವಿದೆ. ಆದರೆ ಮಾನವನು ಹೃದಯಗಳನ್ನು ಬೆಸೆಯುವುದಕ್ಕಿಂತಲೂ ಮುಂಚೆಯೇ ಅಣುವನ್ನು ವಿಘಟನೆ ಮಾಡುವುದನ್ನು ರೂಡಿಸಿಕೊಂಡಿದ್ದಾನೆ ಎಂದು ಅಲ್ಬರ್ಟ್‌ ಐನ್‌ಸ್ಟಿನ್‌ ಹೇಳಿದ್ದಾರೆ. ಇತರರ ಕ್ಷೇಮವನ್ನು ಬಯಸದವರ ಕೈಗೆ ಶಕ್ತಿ ಸಿಕ್ಕರೆ ಅದರಿಂದ ಸಮಾಜ ಒಡೆಯುತ್ತದೆ. ಚಿತ್ತ ವೃತ್ತಿಯನ್ನು ನಿಯಂತ್ರಿಸಿಕೊಂಡಿರುವವರಿಂದಲೇ ಸಮಾಜದ ಬೆಳವಣಿಗೆ ಆಗುತ್ತದೆ. ಅಂತಹ ಕಾರ್ಯ ಈ ಕೇಂದ್ರದ ಮೂಲಕ ನಡೆಯುತ್ತದೆ ಎಂದು ಆಶಿಸಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಗ್ರಾಮೀಣ ಪ್ರದೇಶದ ಜನರ ಸ್ವಾವಲಂಬಿಯಾಗಲೂ ಪ್ರಯತ್ನಿಸುತ್ತಿರುವುದನ್ನು ಶ್ಲಾಘಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಜನರನ್ನು ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನಾಗಿ ಮಾಡದೆ, ಪಾಲುದಾರರನ್ನಾಗಿ ಮಾಡಿದ್ದಾರೆ. ಅನೇಕ ಸ್ತ್ರೀಯರಿಗೆ ಸ್ವಸಹಾಯ ಸಂಘಗಳ ಮೂಲಕ ಸ್ವಾಭಿಮಾನದ ಬದುಕು ನೀಡಿದ್ದಾರೆ. ಉಜಿರೆ, ಧಾರವಾಡ ಸೇರಿ ವಿವಿಧೆಡೆ ಅತ್ಯುತ್ತಮ ಆರೋಗ್ಯ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಇದೀಗ ಕ್ಷೇಮವನದ ಮೂಲಕ ಕ್ಷೇಮ ಕ್ಷೇತ್ರದಲ್ಲಿ ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದರು.

ಕ್ಷೇಮವನದಲ್ಲಿ ಔಷಧವೇ ಇಲ್ಲ!

ದೇವರು ಮತ್ತು ಗುರುಗಳಲ್ಲಿ ಏನು ವ್ಯತ್ಯಾಸ ಎಂದು ನೋಡಿದಾಗ, ಗುರು ಎಂದರೆ ಆತ್ಮಸಾಕ್ಷಾತ್ಕಾರ ಆದ ಮನುಷ್ಯರು. ಸಂತರು ಸಾಮಾನ್ಯರಂತೆಯೇ ಇರುತ್ತಾರೆಯಾದರೂ ಅವರ ದೇಹ, ಬರೆಯುವ ಸ್ಲೇಟ್‌ ಇದ್ದಂತೆ. ನಮ್ಮಲ್ಲಿರುವ ಕಷ್ಟವನ್ನು ಗುರುವಿನಲ್ಲಿ ನಿವೇದನೆ ಮಾಡಿಕೊಂಡರೆ ಅದು ನೇರವಾಗಿ ದೇವರಿಗೆ ಸಲ್ಲುತ್ತದೆ. ಜನರು ಸನ್ಮಾರ್ಗದಿಂದ ವಿಚಲಿತರಾಗದಂತೆ ನೋಡಿಕೊಳ್ಳುವುದು ಗುರುಗಳ ಕೆಲಸ. ರಾಜಕೀಯದಲ್ಲಿ ಧರ್ಮ ಇರಬೇಕು, ಆದರೆ ಧರ್ಮದಲ್ಲಿ ರಾಜಕೀಯ ಇರಬಾರದು ಎನ್ನುವಂತೆ ಯೋಗಿ ಆದಿತ್ಯನಾಥರಿದ್ದಾರೆ. ಮೊದಲ ಆಯುಷ್‌ ವಿವಿ ಸ್ಥಾಪನೆ ಮಾಡಿದ್ದಾರೆ, ಇದು ಕರ್ನಾಟಕಕ್ಕೂ ಮಾದರಿ ಆಗಲಿ ಎಂದು ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದರು.

ಕ್ಷೇಮವನದಲ್ಲಿ ಯಾವುದೇ ಔಷಧ ಇಲ್ಲದೆ ಆರೋಗ್ಯವನ್ನು ವೃದ್ಧಿಸಲಾಗುತ್ತದೆ ಎಂದು ತಿಳಿಸಿದ ವೀರೇಂದ್ರ ಹೆಗ್ಗಡೆಯವರು, ಜನರ ಒತ್ತಾಸೆ ಮೇರೆಗೆ ಇದನ್ನು ಸ್ಥಾಪಿಸಲಾಗಿದೆ ಎಂದರು.

ಇದನ್ನೂ ಓದಿ | ಯೋಗಿ ಆದಿತ್ಯನಾಥ ಬೆಂಗಳೂರಿನಲ್ಲಿ ಉದ್ಘಾಟಿಸಿದ ʼಕ್ಷೇಮವನʼ ಹೇಗಿದೆ? ಅದರ ವಿಶೇಷತೆಯೇನು? ಇಲ್ಲಿದೆ ವಿವರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Aloe Vera Benefits: ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿಸಲು ಲೋಳೆಸರದ ಮಾಸ್ಕ್‌ ಬಳಸಿ

ಲೋಳೆಸರಕ್ಕೆ (Aloe Vera Benefits) ಚರ್ಮವನ್ನು ತಂಪಾಗಿಸುವ ಮತ್ತು ತೇವ ಹೆಚ್ಚಿಸುವ ಗುಣಗಳಿವೆ. ಹಾಗಾಗಿಯೇ ಹಲವಾರು ಸ್ಕಿನ್‌ಕೇರ್‌ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ. ಬಿಸಿಲಿಗೆ ಸುಟ್ಟಂತಾದರೆ, ಮೊಡವೆಯ ತೊಂದರೆಗೆಲ್ಲ ಇದನ್ನು ಔಷಧಿಯಾಗಿ ಬಳಸಬಹುದು. ಈ ಬೇಸಿಗೆಯಲ್ಲಿ ಅಲೋವೇರ ಹೇಗೆ ಬಳಸಬಹುದು? ಈ ಬಗ್ಗೆ ಇಲ್ಲಿದೆ (Aloe Vera Benefits) ಮಾಹಿತಿ.

VISTARANEWS.COM


on

Aloe Vera face mask
Koo

ಬೇಸಿಗೆಯಲ್ಲಿ ಸೆಕೆಗೆ ಮುಖವೆಲ್ಲ ಕೆಂಪಾಗಿ, ಬೆವರುಸಾಲೆಯಾಗಿ ಒದ್ದಾಡುವವರೇ ಹೆಚ್ಚು. ದುಬಾರಿ ಬೆಲೆಯ ಕ್ರೀಮುಗಳನ್ನು ಹಣ ತೆತ್ತು ತಂದು ಉಪಯೋಗಿಸಿದರೂ, ಪ್ರಯೋಜನ ಕಾಣದಿದ್ದಾಗ… ಹೊಸದನ್ನು ಹುಡುಕುತ್ತೇವೆ. ಇವೆಲ್ಲ ಸರ್ಕಸ್‌ ಮಾಡುವ ಬದಲು, ಸರಳವಾಗಿ ಅಲೋವೇರಾ ಅಥವಾ ಲೋಳೆಸರ ಉಪಯೋಗಿಸಿ ನೋಡಬಹುದು. ಸಾವಿರಾರು ವರ್ಷಗಳಿಂದ ಸೌಂದರ್ಯವರ್ಧಕವಾಗಿ ಇದು ಬಳಕೆಯಲ್ಲಿದೆ. ಹಲವು ರೀತಿಯ ವಿಟಮಿನ್‌ಗಳು, ಅಮೈನೊ ಆಮ್ಲಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಲೋಳೆಸರವನ್ನು ಉಪಯೋಗಿಸಿಕೊಂಡು ಹಲವು ರೀತಿಯ ಫೇಸ್‌ ಮಾಸ್ಕ್‌ಗಳನ್ನು ಮಾಡಬಹುದು. ಬಿಸಿಲಿನಲ್ಲಿ ಸುಟ್ಟ ಬದನೆಕಾಯಿಯಂತಾಗುವ ಚರ್ಮಕ್ಕೆ ಹೊಸ ಕಾಂತಿಯನ್ನು ತುಂಬಬಹುದು. ಇಲ್ಲಿವೆ (Aloe Vera Benefits) ವಿವರಗಳು.

Aloe Vera Benefits

ಲೋಳೆಸರವೇ ಏಕೆ?

ಇದಕ್ಕೆ ಚರ್ಮವನ್ನು ತಂಪಾಗಿಸುವ ಮತ್ತು ತೇವ ಹೆಚ್ಚಿಸುವ ಗುಣಗಳಿವೆ. ಹಾಗಾಗಿಯೇ ಹಲವಾರು ಸ್ಕಿನ್‌ಕೇರ್‌ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ. ಬಿಸಿಲಿಗೆ ಸುಟ್ಟಂತಾದರೆ, ಮೊಡವೆಯ ತೊಂದರೆಗೆ, ಸೋರಿಯಾಸಿಸ್‌ ಮತ್ತು ಎಕ್ಸಿಮಾದಂಥ ಚರ್ಮರೋಗಗಳಲ್ಲಿ ಇದು ಔಷಧಿಯಾಗಿ ಬಳಕೆಯಾಗುತ್ತಿದೆ. ಇದರೊಳಗಿರುವ ನೈಸರ್ಗಿಕ ಜೆಲ್‌ನಂಥ ವಸ್ತುವನ್ನು ಬಹಳಷ್ಟು ಔಷಧಿಗಳಲ್ಲಿ ಬಳಸಲಾಗುತ್ತದೆ. ಈ ಜೆಲ್‌ ಉಪಯೋಗಿಸಿಕೊಂಡು ಹಲವು ಫೇಸ್‌ಮಾಸ್ಕ್‌ಗಳನ್ನು ನಾವೇ ಮಾಡಿಕೊಳ್ಳಬಹುದು.

aloe vera cucumber

ಲೋಳೆಸರ-ಸೌತೇಕಾಯಿ ಮಾಸ್ಕ್‌

ಎರಡು ಚಮಚದಷ್ಟು ಲೋಳೆಸರ್‌ ಜೆಲ್‌ಗೆ ಒಂದು ಚಮಚದಷ್ಟು ಸೌತೇಕಾಯಿ ರಸ ಸೇರಿಸಿ. ಅರ್ಧ ಚಮಚ ಜೇನುತುಪ್ಪವನ್ನೂ ಸೇರಿಸಿ, ಚೆನ್ನಾಗಿ ಮಿಕ್ಸ್‌ ಮಾಡಿ. ಇದನ್ನು ಮುಖಕ್ಕೆ ಮಾಸ್ಕ್‌ನಂತೆ ಲೇಪಿಸಿ. ೨೦ ನಿಮಿಷಗಳ ನಂತರ ತಣ್ಣೀರಲ್ಲಿ ತೊಳೆಯಿರಿ. ಚರ್ಮ ಬಿಸಿಲಿಗೆ ಸುಟ್ಟು ಕೆಂಪಾಗಿದ್ದರೆ, ಇದು ತ್ವರಿತವಾಗಿ ಆರಾಮ ನೀಡುತ್ತದೆ.

ಲೋಳೆಸರ-ನಿಂಬೆ ಮಾಸ್ಕ್‌

ಎರಡು ಚಮಚ ಅಲೋವೇರ ಜೆಲ್‌, ಆರೆಂಟು ಹನಿಗಳಷ್ಟು ನಿಂಬೆ ರಸ, ಚಿಟಿಕೆ ಅರಿಶಿನ, ಒಂದು ಚಮಚದಷ್ಟು ಹಾಲಿನ ಕೆನೆ. ಇದನ್ನು ಚೆನ್ನಾಗಿ ಕಲೆಸಿ, ಮುಖಕ್ಕೆ ಲೇಪಿಸಿ. 20 ನಿಮಿಷಗಳ ನಂತರ ಉಗುರು ಬಿಸಿ ನೀರಿನಲ್ಲಿ ತೊಳೆಯಿರಿ. ಬೆವರಿನಿಂದ ಕಳೆಗುಂದಿದ್ದಂಥ ಚರ್ಮಕ್ಕೆ ಈ ಮಾಸ್ಕ್‌ ಹೊಸ ಕಳೆಯನ್ನು ನೀಡುತ್ತದೆ.

ಮೊಸರು-ಅಲೋವೇರ ಮಾಸ್ಕ್‌

2 ಚಮಚ ಅಲೋವೇರ ಜೆಲ್‌ನೊಂದಿಗೆ ಒಂದು ಚಮಚ ಮೊಸರು, ಅರ್ಧ ಚಮಚ ಬಾದಾಮಿ ಎಣ್ಣೆ ಸೇರಿಸಿ, ಮುಖಕ್ಕೆ ಲೇಪಿಸಿ. ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ಬಿಸಿಲು ಅತಿಯಾಗಿ ಸೋಕಿದಾಗ ಚರ್ಮ ಸುಕ್ಕಾದಂತಿದ್ದರೆ, ಈ ಮಾಸ್ಕ್‌ ಸುಕ್ಕು ನಿವಾರಣೆಗೆ ನೆರವಾಗುತ್ತದೆ.

Multani Mitti and aloe vera

ಮುಲ್ತಾನಿ ಮಿಟ್ಟಿ ಜೊತೆಗೆ

2 ಚಮಚ ಅಲೇವೇರದ ಜೊತೆಗೆ ಒಂದು ಚಮಚದಷ್ಟು ಮುಲ್ತಾನಿ ಮಿಟ್ಟಿ, ಕೆಲವು ಹನಿಗಳಷ್ಟು ಟೀಟ್ರೀ ತೈಲವನ್ನು ಬೆರೆಸಿ ಮುಖಕ್ಕೆ ಲೇಪಿಸಿ. 20 ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ. ಇದು ಮುಖದಲ್ಲಿ ಬೆವರಿನಿಂದ ಜಮೆಯಾದ ಕೊಳೆಯನ್ನು ತೆಗೆದು, ಚರ್ಮ ಉಸಿರಾಡುವಂತೆ ಮಾಡುತ್ತದೆ.

pudina and aloe vera

ಅಲೋವೇರ-ಪುದೀನಾ ಮಾಸ್ಕ್‌

ಅರ್ಧ ಚಮಚ ಪುದೀನಾ ಪೇಸ್ಟ್‌ಗೆ 2 ಚಮಚ ಅಲೋವೇರ ಜೆಲ್‌ ಸೇರಿಸಿ. ಇದಕ್ಕೆ ಒಂದು ಚಮಚ ಗುಲಾಬಿ ಜನ ಬೆರೆಸಿ, ಮುಖಕ್ಕೆ ಲೇಪಿಸಿ. 15 ನಿಮಿಷಗಳ ನಂತರ ತಣ್ಣೀರಲ್ಲಿ ತೊಳೆಯಿರಿ. ಮುಖವನ್ನು ತಾಜಾ ಆಗಿಸಿ, ತ್ವಚೆಗೆ ಹೊಸ ಕಾಂತಿಯನ್ನಿದು ನೀಡುತ್ತದೆ.

ಇದನ್ನೂ ಓದಿ: Summer Tips: ಬಿಸಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ…

Continue Reading

ಆರೋಗ್ಯ

Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

ಬೇಸಿಗೆಯ ದಾಹ ಇಂಗಿಸಿ, ಬಿಸಿಲಿನ ತಾಪದಲ್ಲೂ ದೇಹವನ್ನು ತಂಪಾಗಿಸಿ, ಬಳಲಿದವರಿಗೆ ಚೈತನ್ಯ ನೀಡುವ ಈ ಎಳನೀರು ಬೇಸಿಗೆಯ ಜೀವಜಲ. ಬಿಸಿಲಿಗೆ ಬಸವಳಿದಾಗ ತಂಪಾದ ಎಳನೀರೊಂದು ಸಿಕ್ಕಿಬಿಟ್ಟರೆ? ಮರಳುಗಾಡಿನಲ್ಲಿ ಜೀವಜಲ ಸಿಕ್ಕಂತಾಗುತ್ತದೆ. ಇಂತಹ ಎಳನೀರಿನಲ್ಲಿ ಇರುವ ಸತ್ವಗಳೇನು? ಏನೆಲ್ಲ ಲಾಭಗಳಿವೆ ಅದನ್ನು ಹೀರುವುದರಿಂದ? ಈ ಕುರಿತ ಮಾಹಿತಿ (Benefits of Tender Coconut) ಇಲ್ಲಿದೆ.

VISTARANEWS.COM


on

Benefits of Tender Coconut
Koo

ಬಿಸಿಲು ಜೋರಾಗುತ್ತಿದ್ದಂತೆ ಎಲ್ಲೆಡೆ ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಬೆಳಗ್ಗೆ ರಾಶಿ ಹಾಕಿದಂತೆ ಕಾಣುವ ಎಳನೀರು ಮಧ್ಯಾಹ್ನ ಎನ್ನುವಷ್ಟರಲ್ಲಿ ಬರಿದಾಗಿರುತ್ತದೆ. ಸಂಜೆಯ ಹೊತ್ತಿಗೆ ಬೇಕೆಂದರೂ ಸಿಗುವುದು ಕಷ್ಟ ಎನ್ನುವಂತಾಗುತ್ತದೆ. ಬೇಸಿಗೆಯ ದಾಹ ಇಂಗಿಸಿ, ಬಿಸಿಲಿನ ತಾಪದಲ್ಲೂ ದೇಹವನ್ನು ತಂಪಾಗಿಸಿ, ಬಳಲಿದವರಿಗೆ ಚೈತನ್ಯ ನೀಡುವ ಈ ಎಳನೀರು ಬೇಸಿಗೆಯ ಜೀವಜಲ ಎಂದರೆ ಹೆಚ್ಚಲ್ಲ. ಕುಡಿಯುತ್ತಿದ್ದಂತೆ ಆರಾಮ ನೀಡುವ ಈ ಎಳನೀರಿನಲ್ಲಿ ಏನುಂಟು? ಇದನ್ನು ಕುಡಿಯುವುದರಿಂದ ದೇಹಕ್ಕಾಗುವ (Benefits of Tender Coconut) ಲಾಭಗಳೇನು?

Tender Coconut Water Weight Loss Drink

ಸತ್ವಗಳೇನು?

ಸುಮಾರು ಕಾಲು ಲೀ. ಎಳನೀರಿನಲ್ಲಿ 60 ಕ್ಯಾಲರಿ ಶಕ್ತಿ ದೊರೆಯುತ್ತದೆ. ಜೊತೆಗೆ, 15 ಗ್ರಾಂ ಪಿಷ್ಟ, 8 ಗ್ರಾಂ ಸಕ್ಕರೆ, ನಿತ್ಯ ದೇಹಕ್ಕೆ ಬೇಕಾದ ಶೇ. 15ರಷ್ಟು ಪೊಟಾಶಿಯಂ, ಅದೇ ಪ್ರಮಾಣದಲ್ಲಿ ಶೇ. 4ರಷ್ಟು ಕ್ಯಾಲ್ಶಿಯಂ, ಶೇ. 4ರಷ್ಟು ಮೆಗ್ನೀಶಿಯಂ, ಶೇ. 2ರಷ್ಟು ಫಾಸ್ಫರಸ್‌ ಮುಖ್ಯವಾಗಿ ದೊರೆಯುತ್ತದೆ.

Antioxidants in it keep immunity strong Benefits Of Mandakki

ಉತ್ಕರ್ಷಣ ನಿರೋಧಕಗಳು

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಹಲವು ರೀತಿಯಲ್ಲಿ ದೇಹಕ್ಕೆ ಉಪಕಾರ ಮಾಡುತ್ತವೆ. ಉರಿಯೂತ ಶಮನ ಮಾಡುವುದೇ ಅಲ್ಲದೆ, ಕೊಲೆಸ್ಟ್ರಾಲ್‌ ಮಟ್ಟವನ್ನು ತಗ್ಗಿಸುವ ಸಾಮರ್ಥ್ಯ ಇದಕ್ಕಿದೆ ಎನ್ನುತ್ತವೆ ಕೆಲವು ಅಧ್ಯಯನಗಳು. ದೇಹದಲ್ಲಿನ ಮುಕ್ತ ಕಣಗಳನ್ನು ನಿರ್ಬಂಧಿಸುವದರ ಜೊತೆಗೆ, ಇನ್‌ಸುಲಿನ ಚೋದಕದ ಪ್ರತಿರೋಧವನ್ನು ತಗ್ಗಿಸುವ ಸಾಧ್ಯತೆ ಇದಕ್ಕಿದೆ.

heart attack and Diabetes control

ಮಧುಮೇಹ

ಪ್ರಾಣಿಗಳ ಮೇಲೆ ನಡೆಸಲಾದ ಕೆಲವು ಅಧ್ಯಯನಗಳಲ್ಲಿ, ಮಧುಮೇಹ ನಿಯಂತ್ರಣಕ್ಕೆ ಎಳನೀರು ಪೂರಕ ಎಂಬ ಅಂಶ ಕಂಡುಬಂದಿದೆ. ಇನ್‌ಸುಲಿನ್‌ ಪ್ರತಿರೋಧವನ್ನು ತಗ್ಗಿಸಿದ್ದು ಮಾತ್ರವಲ್ಲದೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ ಎಳನೀರು ಎನ್ನುತ್ತವೆ ಈ ಅಧ್ಯಯನಗಳು. ಆದರೆ ಮಾನವರ ಮೇಲಿನ ಇಂಥ ಪ್ರಯೋಗಗಳ ಮೂಲಕ ಇದನ್ನು ದೃಢಪಡಿಸಿಕೊಳ್ಳಬೇಕಿದೆ.

Urology and Treatment of Kidney Diseases Closeup

ಕಿಡ್ನಿ ಕಲ್ಲು

ಮೂತ್ರಕೋಶದಲ್ಲಿ ಹರಳುಗಳಾದರೆ ಅತೀವ ನೋವು ತರುತ್ತದೆ. ದೇಹಕ್ಕೆ ಸಾಕಷ್ಟು ನೀರುಣಿಸುವುದು, ಆ ಮೂಲಕ ಬೇಡದ್ದನ್ನು ಹೊರಹಾಕಲು ಮೂತ್ರಕೋಶಗಳಿಗೆ ನೆರವಾಗುವುದು ಮುಖ್ಯವಾದ ಸಂಗತಿ. ನಿಯಮಿತವಾಗಿ ಎಳನೀರು ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲುಗಳಾಗುವ ಪ್ರಮಾಣವನ್ನು ತಗ್ಗಿಸಬಹುದು. ಅಂದರೆ ದೇಹದಲ್ಲಿ ಪೊಟಾಶಿಯಂ, ಕ್ಲೋರೈಡ್‌ ಮತ್ತು ಸಿಟ್ರೇಟ್‌ಗಳು ಅಧಿಕ ಪ್ರಮಾಣದಲ್ಲಿ ಜಮೆಯಾಗದಂತೆ ಸ್ವಚ್ಛ ಮಾಡುತ್ತದೆ.

Heart Health Fish Benefits

ಹೃದಯಕ್ಕೆ ಪೂರಕ

ರಕ್ತದ ಒತ್ತಡ ಹೆಚ್ಚದಂತೆ ತಡೆಯುವ ಸಾಧ್ಯತೆ ಎಳನೀರಿಗಿದೆ. ಇದರಲ್ಲಿ ಹೇರಳವಾಗಿರುವ ಪೊಟಾಶಿಯಂ ಅಂಶವೇ ಇದಕ್ಕೆ ಕಾರಣ. ಮಾತ್ರವಲ್ಲ, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ ಅಂಶವನ್ನು ತಗ್ಗಿಸುವ ಸಾಮರ್ಥ್ಯ ಎಳನೀರಿಗಿದೆ ಎನ್ನುತ್ತವೆ ಕೆಲವು ಅಧ್ಯಯನಗಳು. ಆದರೆ ಅಧ್ಯಯನದಲ್ಲಿ ಇದಕ್ಕಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಸೇವಿಸುವಂತೆ ಮಾಡಲಾಗಿತ್ತು. ಅದನ್ನು ಸಾಮಾನ್ಯ ಸಂದರ್ಭಗಳಲ್ಲಿ ಸಮೀಕರಿಸುವುದು ಕಷ್ಟವಾದರೂ, ಹೃದಯದ ಆರೋಗ್ಯಕ್ಕೆ ಪೂರಕವಂತೂ ಹೌದು.

Coconut water Foods For Fight Against Dengue Fever

ರುಚಿಕರ ಪಾನೀಯ

ಬೇಸಿಗೆಯೆಂಬ ನೆವಕ್ಕೆ ದಿನವಿಡೀ ನೀರನ್ನೇ ಕುಡಿಯುತ್ತಿರಲು ಸಾಧ್ಯವಿಲ್ಲ. ಪೌಷ್ಟಿಕವಾದ ಇನ್ನೇನಾದರೂ ಬೇಕಾಗುತ್ತದೆ. ಅದು ರುಚಿಕಟ್ಟಾಗಿಯೂ ಇದ್ದರೆ, ಶರೀರಕ್ಕೆ ನೀರುಣಿಸುವುದು ಕಷ್ಟವಾಗುವುದಿಲ್ಲ. ಸೆಕೆ ತೀವ್ರವಾದಾಗ, ಬಿಸಿಲಲ್ಲಿ ದಣಿದಾಗ, ವ್ಯಾಯಾಮ ಮಾಡಿ ಸುಸ್ತಾದಾಗ… ಹೀಗೆ ಹಲವು ಸಂದರ್ಭಗಳಲ್ಲಿ ದೇಹಕ್ಕೆ ಬೇಕಾದ ಎಲೆಕ್ಟ್ರೋಲೈಟ್‌ಗಳನ್ನು ಎಳನೀರು ಒದಗಿಸಿ, ಪೋಷಿಸುತ್ತದೆ.

ಇದನ್ನೂ ಓದಿ: Leg Swelling: ಪ್ರಯಾಣಿಸುವಾಗ ನಮ್ಮ ಕಾಲುಗಳು ಊದಿಕೊಳ್ಳುವುದೇಕೆ?

ನೈಸರ್ಗಿಕ

ದೇಹಕ್ಕೆ ಎಲೆಕ್ಟ್ರೊಲೈಟ್‌ಗಳನ್ನು ಒದಗಿಸಿ ಕೊಡುವ ಅತ್ಯಂತ ನೈಸರ್ಗಿಕ ವಿಧಾನವಿದು. ಕೃತಕ ಹೆಲ್ತ್‌ಡ್ರಿಂಕ್‌ಗಳಲ್ಲಿನ ಹೆಚ್ಚುವರಿ ಸಕ್ಕರೆಯ ಗೋಜು ಇದರಲ್ಲಿಲ್ಲ. ಸೇರಿಸಿದ ಬಣ್ಣ, ರುಚಿಯ ಗೊಡವೆಯೂ ಇಲ್ಲ. ಎಕ್ಸ್‌ಪೈರಿ ಯಾವತ್ತು ಎಂದು ನೋಡುವ ರಗಳೆಯಿಲ್ಲ. ತಾಜಾ ಎಳನೀರನ್ನು ತೆಗೆಸಿದರಾಯ್ತು, ಕಡಿದರಾಯ್ತು. ಸಂತೋಷಗೊಂಡ ದೇಹ ನಮಗೊಂದು ಥ್ಯಾಂಕ್ಸ್‌ ಹೇಳುತ್ತದೆ.

Continue Reading

ಲೈಫ್‌ಸ್ಟೈಲ್

Diabetic Chutney: ಡಯಬಿಟಿಕ್‌ ಚಟ್ನಿ ನಿಮಗೆ ಗೊತ್ತೆ? ಇದು ಮಧುಮೇಹಿಗಳಿಗೆ ಉಪಯುಕ್ತ

Diabetic Chutney: ಮಧುಮೇಹಿಗಳು ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುವಂತಿಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದರಿಂದ ಯಾವುದೇ ಫಂಕ್ಷನ್ ಗೆ ಹೋದರೂ ಸಿಹಿ ವಸ್ತುಗಳನ್ನು ಸೇವಿಸುವಂತಿಲ್ಲ.ಇನ್ನು ಊಟದಲ್ಲಿಯೂ ಸಾಕಷ್ಟು ನಿಯಂತ್ರಣವಿರಬೇಕು ಎನ್ನುತ್ತಾರೆ. ಹಾಗಾಗಿ ಮಧುಮೇಹಿಗಳಿಗೆ ಸೇವಿಸಬಹುದಾಂತಹ ಚಟ್ನಿಯ ಕುರಿತು ಮಾಹಿತಿ ಇಲ್ಲಿದೆ ನೋಡಿ.

VISTARANEWS.COM


on

Diabetic Chutney
Koo

ಬೆಂಗಳೂರು: ನಮ್ಮಲ್ಲಿ ಹೆಚ್ಚಿನವರು ರಕ್ತ ಪರೀಕ್ಷೆ ಮಾಡಿಸಿದಾಗ ಕಂಡುಬರುವಂತಹ ಮೊದಲ ಕಾಯಿಲೆ ಎಂದರೆ ಅದು ಮಧುಮೇಹ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಈ ಸಮಸ್ಯೆ ಕಾಡುತ್ತದೆ. ಒಮ್ಮೆ ಈ ಕಾಯಿಲೆ ಬಂದರೆ ಅದನ್ನು ವಾಸಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮಧುಮೇಹಿಗಳು ಆಹಾರದ ಬಗ್ಗೆ ಕಾಳಜಿವಹಿಸುವುದು ಅಗತ್ಯ.
ಮಧುಮೇಹಿಗಳು ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುವಂತಿಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದರಿಂದ ಯಾವುದೇ ಫಂಕ್ಷನ್ ಗೆ ಹೋದರೂ ಸಿಹಿ ವಸ್ತುಗಳನ್ನು ಸೇವಿಸುವಂತಿಲ್ಲ. ಹಾಗಾಗಿ ಊಟದ ತಟ್ಟೆಯಲ್ಲಿರುವ ಪಾಯಸ, ಲಾಡು, ಸಿಟ್ಸ್ ಗಳನ್ನು ನೋಡಿ ಬಾಯಿ ಚಪ್ಪರಿಸಬೇಕೆ ವಿನಃ ಸೇವಿಸುವಂತಿಲ್ಲ. ಇದು ಕೆಲವರಿಗೆ ಬೇಸರವನ್ನುಂಟುಮಾಡುತ್ತದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಅದಕ್ಕಾಗಿ ಮಧುಮೇಹಿಗಳು ಚಟ್ನಿಗಳನ್ನು (Diabetic Chutney) ಸೇವಿಸಿ. ಆದರೆ ಚಟ್ನಿ ತಯಾರಿಸುವಾಗ ಈ ಸಲಹೆ ಪಾಲಿಸಿ.

Diabetic Chutney

ಮಧುಮೇಹಿಗಳಿಗೆ ಚಟ್ನಿ ತಯಾರಿಸುವಾಗ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಪದಾರ್ಥಗಳನ್ನು ಹೆಚ್ಚು ಬಳಸಿ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬೇಗನೆ ಹೆಚ್ಚಿಸುವುದಿಲ್ಲ. ಹಸಿರು ಸೊಪ್ಪುಗಳು, ತರಕಾರಿಗಳು, ಟೊಮೆಟೊ ಮತ್ತು ಸೌತೆಕಾಯಿಗಳಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುತ್ತದೆ. ಹಾಗಾಗಿ ಪುದೀನಾ, ಟೊಮೆಟೊ ಚಟ್ನಿ ತಯಾರಿಸಿ ಸೇವಿಸಿ.

ಮಧುಮೇಹಿಗಳು ಸಕ್ಕರೆಯಂಶವಿರುವ ವಸ್ತುಗಳನ್ನು ತರಕಾರಿಯಲ್ಲಿ ಬಳಸುವುದನ್ನು ತಪ್ಪಿಸಬೇಕು. ಕೆಲವು ಆಹಾರ ಪದಾರ್ಥಗಳಲ್ಲಿ ಸಕ್ಕರೆಯಂಶ ಹೆಚ್ಚಾಗಿರುತ್ತದೆ. ಅವುಗಳನ್ನು ಚಟ್ನಿ ತಯಾರಿಸಲು ಬಳಸಲಾಗುತ್ತದೆ. ಉದಾಹರಣೆಗೆ ಮಾವಿನ ಹಣ್ಣು ನೈಸರ್ಗಿಕ ಸಕ್ಕರೆಯಂಶವನ್ನು ಹೊಂದಿದೆ. ಇದನ್ನು ಬಳಸಿ ಚಟ್ನಿ ತಯಾರಿಸುತ್ತಾರೆ. ಮತ್ತು ಈ ಚಟ್ನಿ ಎಲ್ಲರಿಗೂ ಬಹಳ ಪ್ರಿಯವಾದುದು. ಆದರೆ ಮಧುಮೇಹಿಗಳು ಈ ಚಟ್ನಿಯ ಸೇವನೆಯನ್ನು ತಪ್ಪಿಸಿ.

ಮಧುಮೇಹಿಗಳು ಚಟ್ನಿ ತಯಾರಿಸುವಾಗ ನೆನೆಪಿಡಬೇಕಾದ ವಿಚಾರವೆಂದರೆ ನೀವು ಚಟ್ನಿಯಲ್ಲಿ ಫೈಬರ್ ಅಂಶ ಹೆಚ್ಚಿರುವ ಪದಾರ್ಥಗಳನ್ನು ಸೇರಿಸಿಕೊಳ್ಳಿ. ಯಾಕೆಂದರೆ ಇವು ನಿಮ್ಮ ಹೊಟ್ಟೆ ದೀರ್ಘಕಾಲ ತುಂಬಿರುವಂತೆ ಮಾಡುತ್ತವೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಡೆಯುತ್ತವೆ. ಹೆಚ್ಚಿನ ತರಕಾರಿ ಮತ್ತು ಹಣ್ಣುಗಳಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆಯಂತೆ. ಆದರೆ ಸಕ್ಕರೆಯಂಶ ಹೆಚ್ಚಾಗಿರುವ ತರಕಾರಿ ಹಣ್ಣುಗಳಿಂದ ಬಳಸಬೇಡಿ. ಇದರಿಂದ ಸಮಸ್ಯೆಯಾಗಬಹುದು.

Diabetic Chutney

ಮಧುಮೇಹಿಗಳು ಸಕ್ಕರೆಯಂತೆ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿ. ಹಾಗಾಗಿ ಮಧುಮೇಹಿಗಳಿಗೆ ಚಟ್ನಿ ತಯಾರಿಸುವಾಗ ಚಟ್ನಿಗೆ ಹೆಚ್ಚು ಉಪ್ಪನ್ನು ಸೇರಿಸಬೇಡಿ. ಉಪ್ಪು ಚಟ್ನಿಯ ರುಚಿಯನ್ನು ಹೆಚ್ಚಿಸುತ್ತದೆ ನಿಜ. ಆದರೆ ಉಪ್ಪು ಮಧುಮೇಹಿಗಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಚಟ್ನಿಗೆ ಉಪ್ಪನ್ನು ಕಡಿಮೆ ಬಳಸಿ ಸೇವಿಸಿ.

ಇದನ್ನೂ ಓದಿ: ರಾಮೋಜಿ ಫಿಲ್ಮ್‌ ಸಿಟಿ ಮೀರಿಸುವಂತಿದೆಯಂತೆ ʻಕಾಂತಾರ ಚಾಪ್ಟರ್​ 1ʼ ಸೆಟ್‌!

ಮಧುಮೇಹಿಗಳು ಚಟ್ನಿ ಸೇವಿಸಿದ ಮಾತ್ರಕ್ಕೆ ಅವರು ಆರೋಗ್ಯವಾಗಿರುವುದಿಲ್ಲ, ಜೊತೆಗೆ ಅವರು ಪ್ರತಿದಿನ ವ್ಯಾಯಾಮಗಳನ್ನು ಮಾಡಬೇಕು. ತಮ್ಮ ದೇಹ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಮಧುಮೇಹಿಗಳು ಸೇವಿಸುವ ಕೆಲವು ಆಹಾರದಲ್ಲಿ ಕಾರ್ಬೋಹೈಡ್ರೆಟ್ ಹೆಚ್ಚಾಗಿರುತ್ತದೆ. ಹಾಗಾಗಿ ಇದರಿಂದ ನಿಮ್ಮ ತೂಖ ಹೆಚ್ಚಾಗಬಹುದು. ಹಾಗಾಗಿ ನಿಮ್ಮ ತೂಕವನ್ನು ನಿಯಂತ್ರಿಸಲು ಪ್ರತಿದಿನ ವ್ಯಾಯಾಮವನ್ನು ಮಾಡಬೇಕು.

Continue Reading

ಪ್ರಮುಖ ಸುದ್ದಿ

Covishield Vaccine: ಭಾರತದಲ್ಲೂ ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Covishield Vaccine: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ (ಏಮ್ಸ್-‌ AIIMS) ವೈದ್ಯರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸುವ ಮೂಲಕ ಅಸ್ಟ್ರಾಜೆನೆಕಾದ (AstraZeneca) ಕೋವಿಶೀಲ್ಡ್ ಲಸಿಕೆ, ಅದರ ಅಡ್ಡಪರಿಣಾಮಗಳು ಮತ್ತು ಅಪಾಯಕಾರಿ ಅಂಶಗಳನ್ನು ಪರೀಕ್ಷಿಸುವಂತೆ ಕೋರಿ ವಕೀಲ ವಿಶಾಲ್ ತಿವಾರಿ ಅವರು ಅರ್ಜಿ ಸಲ್ಲಿಸಿದ್ದಾರೆ.

VISTARANEWS.COM


on

Covishield vaccine supreme court
Koo

ಹೊಸದಿಲ್ಲಿ: ಬ್ರಿಟನ್‌ನಲ್ಲಿ (UK) ಕೋವಿಶೀಲ್ಡ್‌ ಲಸಿಕೆಯ (Covishield vaccine) ಅಡ್ಡ ಪರಿಣಾಮಗಳ (Side effects) ಬಗ್ಗೆ ಕೋಲಾಹಲ ಹೆಚ್ಚುತ್ತಿರುವಂತೆ, ಭಾರತದಲ್ಲಿಯೂ ಕೋವಿಶೀಲ್ಡ್‌ ಲಸಿಕೆ ಸೈಡ್‌ ಎಫೆಕ್ಟ್‌ಗಳ ಬಗೆಗೆ ಅಧ್ಯಯನ ನಡೆಸಲು ಆದೇಶಿಸುವಂತೆ ವಕೀಲರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ (Supreme court) ಮನವಿ ಸಲ್ಲಿಸಿದ್ದಾರೆ.

ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ (ಏಮ್ಸ್-‌ AIIMS) ವೈದ್ಯರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸುವ ಮೂಲಕ ಅಸ್ಟ್ರಾಜೆನೆಕಾದ (AstraZeneca) ಕೋವಿಶೀಲ್ಡ್ ಲಸಿಕೆ, ಅದರ ಅಡ್ಡಪರಿಣಾಮಗಳು ಮತ್ತು ಅಪಾಯಕಾರಿ ಅಂಶಗಳನ್ನು ಪರೀಕ್ಷಿಸುವಂತೆ ಕೋರಿ ವಕೀಲ ವಿಶಾಲ್ ತಿವಾರಿ ಅವರು ಅರ್ಜಿ ಸಲ್ಲಿಸಿದ್ದಾರೆ. ಸಮಿತಿಯು ಏಮ್ಸ್‌ ನಿರ್ದೇಶಕರ ನೇತೃತ್ವವನ್ನು ಹೊಂದಿರಬೇಕು; ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯವರು ಮೇಲ್ವಿಚಾರಣೆ ಮಾಡಬೇಕು; ಕೋವಿಶೀಲ್ಡ್ ಲಸಿಕೆ, ಅದರ ಅಡ್ಡಪರಿಣಾಮಗಳು ಮತ್ತು ಅಪಾಯಕಾರಿ ಅಂಶಗಳನ್ನು ಪರೀಕ್ಷಿಸಬೇಕು ಎಂದವರು ಕೋರಿದ್ದಾರೆ.

COVID-19 ಸಮಯದಲ್ಲಿ ವ್ಯಾಕ್ಸಿನೇಷನ್ ಅಭಿಯಾನದ ಅಡ್ಡ ಪರಿಣಾಮಗಳಿಂದ ಮರಣ ಹೊಂದಿದ, ತೀವ್ರವಾಗಿ ಅಸ್ವಸ್ಥರಾದ, ಅಂಗವಿಕಲರಾದ ನಾಗರಿಕರಿಗೆ ಲಸಿಕೆ ಹಾನಿ ಪಾವತಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸ್ಥಾಪಿಸಬೇಕು. ಜನರಿಗೆ ಪರಿಹಾರ ನೀಡಲು ಸುಪ್ರೀಂ ಕೋರ್ಟ್‌ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಬೇಕು ಎಂದು ತಿವಾರಿ ಮನವಿಯಲ್ಲಿ ತಿಳಿಸಿದ್ದಾರೆ.

ಕೋವಿಶೀಲ್ಡ್ ಲಸಿಕೆ ಅಪರೂಪದ ಸಂದರ್ಭಗಳಲ್ಲಿ ಅಡ್ಡ ಪರಿಣಾಮಗಳನ್ನು ಕಾರಣವಾಗಬಹುದು ಎಂದು ಇತ್ತೀಚೆಗೆ ಕಂಪನಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ತಿವಾರಿ ಅರ್ಜಿ ಸಲ್ಲಿಸಿದ್ದಾರೆ. ಫಾರ್ಮಾಸ್ಯುಟಿಕಲ್ ಕಂಪನಿ ಮತ್ತು ಲಸಿಕೆ ಡೆವಲಪರ್ ಆಸ್ಟ್ರಾಜೆನೆಕಾ ಬ್ರಿಟನ್‌ನ ನ್ಯಾಯಾಲಯದಲ್ಲಿ ಇದನ್ನು ತಿಳಿಸಿದೆ. ಇದು ರಕ್ತದಲ್ಲಿ ಪ್ಲೇಟ್‌ಲೆಟ್ ಕಡಿಮೆಯಾಗುವಿಕೆ ಮತ್ತು ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು ಎಂದು ಹೇಳಿದೆ.

“ಅಸ್ಟ್ರಾಜೆನೆಕಾ ಕೋವಿಶೀಲ್ಡ್‌ ಲಸಿಕೆ ಮತ್ತು ಥ್ರಂಬೋಸಿಸ್ (ಟಿಟಿಎಸ್) ನಡುವಿನ ಸಂಬಂಧವನ್ನು ಒಪ್ಪಿಕೊಂಡಿದೆ. ಅಸ್ಟ್ರಾಜೆನೆಕಾ ಲಸಿಕೆ ಸೂತ್ರವನ್ನು ಪುಣೆ ಮೂಲದ ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ನೀಡಲಾಗಿದೆ. ಕೋವಿಶೀಲ್ಡ್ ತಯಾರಿಕೆಗಾಗಿ ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ 175 ಕೋಟಿಗೂ ಹೆಚ್ಚು ಜನ ಕೋವಿಶೀಲ್ಡ್ ಅನ್ನು ಪಡೆದರು” ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕೋವಿಶೀಲ್ಡ್‌ ಜೊತೆಗೆ ಭಾರತೀಯ ತಯಾರಿಕೆಯಾದ Covaxin ಅನ್ನು ಕೂಡ ಭಾರತದಲ್ಲಿ ನೀಡಲಾಗಿತ್ತು.

ಕಳೆದ ವರ್ಷ ಲಂಡನ್‌ನಲ್ಲಿ ಜೇಮೀ ಸ್ಕಾಟ್ ಎಂಬವರು ಕಂಪನಿ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. ಅವರಲ್ಲಿ ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮೆದುಳಿನಲ್ಲಿ ರಕ್ತಸ್ರಾವವ ಉಂಟಾಗಿತ್ತು. ಶಾಶ್ವತ ಮಿದುಳಿನ ಗಾಯ ಉಂಟಾಗಿತ್ತು. ಇವರೂ ಸೇರಿ UKಯಲ್ಲಿ ಐವತ್ತೊಂದು ಪ್ರಕರಣಗಳನ್ನು ದಾಖಲಿಸಲಾಗಿದೆ. ಸಂತ್ರಸ್ತರು ಮತ್ತು ಸಂಬಂಧಿಕರು ಸುಮಾರು 100 ಮಿಲಿಯನ್ ಪೌಂಡ್‌ ಪರಿಹಾರವನ್ನು ಬಯಸಿದ್ದಾರೆ.

ಭಾರತದಲ್ಲಿ, ಕೋವಿಡ್ -19 ರ ನಂತರ ಹೃದಯಾಘಾತ ಮತ್ತು ವ್ಯಕ್ತಿಗಳ ಹಠಾತ್ ಕುಸಿತದ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವಜನರಲ್ಲಿಯೂ ಹೃದಯಾಘಾತದ ಪ್ರಕರಣಗಳು ಸಂಭವಿಸಿವೆ. ಕೋವಿಶೀಲ್ಡ್‌ ಮಾಲಿಕ ಕಂಪನಿಯ ಮಾಹಿತಿ ದಾಖಲಾತಿಯು ನಮ್ಮಲ್ಲಿಯೂ ನಾಗರಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೀಡಲಾದ ಕೋವಿಶೀಲ್ಡ್ ಲಸಿಕೆಯ ಅಪಾಯಗಳ ಬಗ್ಗೆ ಯೋಚಿಸಲು ಒತ್ತಾಯಿಸಿದೆ ಎಂದು ಮನವಿಯಲ್ಲಿ ಹೇಳಿದೆ.

ಈ ಮೂಲಕ ಭಾರತೀಯ ನಾಗರಿಕರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ತಿವಾರಿ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಲಸಿಕೆಯ ದುಷ್ಪರಿಣಾಮಗಳಿಗೆ ನಷ್ಟಪರಿಹಾರವನ್ನು ಕೋರಿದ್ದು, ಯುಕೆಯಂತಹ ಕೆಲವು ದೇಶಗಳಲ್ಲಿಯೂ ವ್ಯಾಕ್ಸಿನೇಷನ್‌ನಿಂದ ತೀವ್ರವಾಗಿ ಅಂಗವಿಕಲರಾದ ಜನರಿಗೆ ನಷ್ಟ ಪಾವತಿ ವ್ಯವಸ್ಥೆ ಇದೆ ಎಂದಿದ್ದಾರೆ.

ಇದನ್ನೂ ಓದಿ: Covishield Vaccine: ಭಾರತದಲ್ಲಿ ಕೋವಿಶೀಲ್ಡ್‌ ಅಡ್ಡ ಪರಿಣಾಮದ ಅಪಾಯವಿಲ್ಲ: ಯಾಕೆ ಗೊತ್ತೆ?

Continue Reading
Advertisement
Pushpa 2 The Rule Title track out
ಟಾಲಿವುಡ್6 mins ago

Pushpa 2: ‘ಪುಷ್ಪ 2’ ಟೈಟಲ್​ ಸಾಂಗ್ ಔಟ್‌: ಸ್ಟೈಲಿಶ್‌ ಆಗಿ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್!

Congress Candidate List
Lok Sabha Election 202410 mins ago

Congress Candidate List: ಅಮೇಥಿ, ರಾಯ್‌ ಬರೇಲಿಯಿಂದ ರಾಹುಲ್‌, ಪ್ರಿಯಾಂಕಾ ಸ್ಪರ್ಧಿಸುತ್ತಾರಾ? ಕುತೂಹಲಕ್ಕೆ ಇಂದು ತೆರೆ

Asaduddin Owaisi
ದೇಶ12 mins ago

Asaduddin Owaisi: ಅಸಾದುದ್ದೀನ್‌ ಓವೈಸಿಯ ಭರ್ಜರಿ ಬೈಕ್‌ ರೈಡ್‌;ವಿಡಿಯೋ ವೈರಲ್‌

IPL 2024 Points Table
ಕ್ರೀಡೆ23 mins ago

IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

karnataka SSLC result 2024
ಪ್ರಮುಖ ಸುದ್ದಿ28 mins ago

SSLC Result 2024: ಕರ್ನಾಟಕದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಣೆಗೆ ದಿನ ಫಿಕ್ಸ್

Karthik Jayaram The first look of The Veer motion Poster
ಸ್ಯಾಂಡಲ್ ವುಡ್35 mins ago

Karthik Jayaram: ʻಅಶ್ವಿನಿ ನಕ್ಷತ್ರʼ ಖ್ಯಾತಿಯ ʻಜೆಕೆʼ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ‘ದಿ ವೀರ್​’ ಫಸ್ಟ್​ ಲುಕ್​ ಪೋಸ್ಟರ್​!

prajawal revanna case driver karthik
ಪ್ರಮುಖ ಸುದ್ದಿ56 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ವಿಡಿಯೋ ಬಿಟ್ಟ ಕಾರ್ತಿಕ್‌ನನ್ನು ಮಲೇಷ್ಯಾಕ್ಕೆ ಕಳಿಸಿದವರು ಯಾರು?

Vande Bharat Metro
ದೇಶ1 hour ago

Vande Bharat Metro: ಮೊದಲ ವಂದೇ ಭಾರತ್‌ ಮೆಟ್ರೋ ಸಂಚಾರಕ್ಕೆ ಸಿದ್ಧ; ಇಲ್ಲಿದೆ ವಿಡಿಯೊ

Hindu Marriage
ದೇಶ1 hour ago

Hindu Marriage: ವಿಧಿಬದ್ಧವಾಗಿ ನಡೆಯದ ಮದುವೆಗೆ ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್‌

pm Narendra Modi
ಪ್ರಮುಖ ಸುದ್ದಿ2 hours ago

PM Narendra Modi: ಉಗ್ರರನ್ನು ಅವರ ತಾಯ್ನೆಲದಲ್ಲೇ ಕೊಲ್ಲುತ್ತೇವೆ: ಗುಡುಗಿದ ಪಿಎಂ ನರೇಂದ್ರ ಮೋದಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌