Dollu Teaser| ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಡೊಳ್ಳು ಸಿನಿಮಾ ಟೀಸರ್‌ ಔಟ್‌ Vistara News
Connect with us

ಪ್ರಮುಖ ಸುದ್ದಿ

Dollu Teaser| ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಡೊಳ್ಳು ಸಿನಿಮಾ ಟೀಸರ್‌ ಔಟ್‌

ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಡೊಳ್ಳು ಕನ್ನಡ ಸಿನಿಮಾದ ಟೀಸರ್‌ ಹೊರಬಂದಿದೆ. ಸಾಗರ್‌ ಪುರಾಣಿಕ್‌ ನಿರ್ದೇಶನದ ಈ ಚಿತ್ರ ಜಾನಪದ ಕಲೆ ಡೊಳ್ಳುವಿನ ಕುರಿತಾಗಿದೆ.

VISTARANEWS.COM


on

Koo

ಬೆಂಗಳೂರು : ಸ್ಯಾಂಡಲ್‌ವುಡ್‌ ನಿರ್ದೇಶಕ ಪವನ್‌ ಒಡೆಯರ್‌ ನಿರ್ಮಾಣದ ಡೊಳ್ಳು ಸಿನಿಮಾ ಟೀಸರ್‌ (Dollu Teaser) ಬಿಡುಗಡೆಗೊಂಡಿದೆ. ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ನಟ ಸಾರ್ವಭೌಮದಂತಹ ಹಿಟ್‌ ಸಿನಿಮಾ ನೀಡಿರುವ ಪವನ್‌ ಒಡೆಯರ್‌, ʼಒಡೆಯರ್‌ ಮೂವೀಸ್‌ ಬ್ಯಾನರ್‌ʼ ಅಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಸುನಿಲ್‌ ಪುರಾಣಿಕ್‌ ಅವರ ಪುತ್ರ ಸಾಗರ್‌ ಪುರಾಣಿಕ್‌ ಚೊಚ್ಚಲ ಸಿನಿಮಾ ಆಗಿದ್ದು, ಡೊಳ್ಳು ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಕನ್ನಡದಲ್ಲಿ ಕಮರ್ಷಿಯಲ್, ಹೊಡಿಬಡಿ, ಪ್ರೀತಿ-ಪ್ರೇಮ ಸಿನಿಮಾಗಳ ಮಧ್ಯೆ ಪ್ರಯೋಗಾತ್ಮಕ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ ತಯಾರಾಗಿರುವ ಸಿನಿಮಾ ಡೊಳ್ಳು. ಮಹಾನ್ ಹುತಾತ್ಮ ಕಿರುಚಿತ್ರದ ಸಾರಥಿ, ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಡೊಳ್ಳು ಸಿನಿಮಾ ಜುಲೈನಲ್ಲಿ ಥಿಯೇಟರ್‌ಗೆ ಆಗಮನವಾಗಲಿದೆ.

ಇದನ್ನೂ ಓದಿ | Golden Star | ಬಾನದಾರಿಯಲ್ಲಿ ಸಿನಿಮಾ First Look ರಿಲೀಸ್‌

ಸಾಕಷ್ಟು ಅಂತಾರಾಷ್ಟ್ರೀಯ, ರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿಗಳನ್ನು ಈಗಾಗಲೇ ಈ ಸಿನಿಮಾ ಪಡೆದುಕೊಂಡಿದೆ. ಕಿರುತೆರೆ ನಟ ಕಾರ್ತಿಕ್‌ ಮಹೇಶ್‌, ನಿಧಿ ಹೆಗ್ಡೆ, ಬಾಬು ಹಿರಣ್ಣಯ್ಯ, ಚಂದ್ರ ಮಯೂರ್‌, ಶರಣ್‌ ಸುರೇಶ್‌ ಚಿತ್ರದಲ್ಲಿ ನಟಿಸಿದ್ದಾರೆ. ಅನಂತ್‌ ಕಾಮತ್‌ ಸಂಗೀತ ನಿರ್ದೇಶನ ಮಾಡಿದ್ದು, ಅಭಿಲಾಷ್‌ ಕಳತ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳ ಸುರಿಮಳೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಡೊಳ್ಳು ಪ್ರತಿಷ್ಠಿತ ಬರ್ಲಿನ್‌ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ 9 ಭಾರತೀಯ ಸಿನಿಮಾಗಳಲ್ಲಿ ಒಂದು. ಢಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಡೊಳ್ಳು ಸಿನಿಮಾ ಪ್ರದರ್ಶನಗೊಂಡಿದೆ. ಚೆನ್ನೈನಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಇದರ ಜತೆ ಹ್ಯಾಬಿಟಾಟ್‌ ಅಂತಾರಾಷ್ಟ್ರೀಯ ಚಿತ್ರೋತ್ಸವ ಹೀಗೆ ಹಲವು ಚಿತ್ರೋತ್ಸವಗಳಲ್ಲಿ ಬಿಡುಗಡೆಗೂ ಮುನ್ನ ಪ್ರಶಸ್ತಿ ಬಾಚಿಕೊಂಡಿದೆ.

ಹೇಗಿದೆ ಟೀಸರ್‌ ?

ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ ಎಂಬ ಸಾರಾಂಶದೊಂದಿಗೆ ಹಳ್ಳಿಯಲ್ಲಿ ತೆರೆದುಕೊಳ್ಳುವ ಟೀಸರ್‌ನಲ್ಲಿ ಡೊಳ್ಳಿನ ಮಹತ್ವದ ಬಗ್ಗೆ ತಿಳಿಸಲಾಗಿದೆ. ಕೈಲಾಸದಲ್ಲಿ ಕುಳಿತಿರುವ ಶಿವಪ್ಪನನ್ನು ಒಲಿಸಿಕೊಳ್ಳುವ ಭಕ್ತಿ ಮಾರ್ಗ ಕೂಡ ಡೊಳ್ಳು ಅಂತಾ ನಂಬಿರುವ ಹಳ್ಳಿ ಮಂದಿ ಸುತ್ತಾ, ಜನಪದ ಕಲೆ ಡೊಳ್ಳಿನ ಸುತ್ತಾ ಟೀಸರ್‌ ಕಟ್ಟಿಕೊಡಲಾಗಿದೆ. ಈ ಚಿತ್ರದಲ್ಲಿ ಡೊಳ್ಳು ಕಲಾವಿದನ ಬದುಕು, ಅವನ ಸುತ್ತಲಿನ ಸಂಘರ್ಷ ಹಾಗೂ ಹಳ್ಳಿ ನಗರೀಕರಣದ ಸಮಸ್ಯೆಗಳ ಕಥಾ ಹಂದರವನ್ನು ಹೊಂದಿದೆ.

ʼʼಕಮರ್ಷಿಯಲ್‌ ಚಿತ್ರಗಳಿಗಿಂತ ಭಿನ್ನವಾಗಿ ಕಟೆಂಟ್‌ ಚಿತ್ರವನ್ನು ಮಾಡುವ ಆಸೆಯಿತ್ತು. ಸಾಗರ್‌ ಅವರ ಕಥೆ ತುಂಬಾ ಹಿಡಿಸಿತು. ನಮ್ಮ ನಿರ್ಮಾಣದಲ್ಲಿ ಒಳ್ಳೆಯ ಕಂಟೆಂಟ್‌ ಸಿನಿಮಾ ಮಾಡುವ ಆಸೆ ಇತ್ತು. ನಾವು ಚಿತ್ರರಂಗದಲ್ಲಿ ಮತ್ತಷ್ಟು ಹೊಸ ಪ್ರತಿಭೆಗಳಿಗೆ ವೇದಿಕೆ ನೀಡಬೇಕು ಎಂಬ ಕಾರಣಕ್ಕೆ ಡೊಳ್ಳು ಚಿತ್ರ ನಿರ್ಮಾಣ ಮಾಡಿದ್ದೇವೆʼʼ ಎಂದು ನಿರ್ಮಾಪಕ ಪವನ್‌ ಒಡೆಯರ್‌ ಹೇಳಿದರು.

ಚಿತ್ರವನ್ನು ಶಿವಮೊಗ್ಗ, ಸೊರಬ, ಶಿಕಾರಿಪುರ, ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷವಾಗಿ ಈ ಚಿತ್ರಕ್ಕೆ ವೃತ್ತಿಪರ ಡೊಳ್ಳು ಕುಣಿತಗಾರರಿಂದಲೇ ಹೆಜ್ಜೆ ಹಾಕಿಸಲಾಗಿದೆ. ಚಿತ್ರದಲ್ಲಿ ಕಾರ್ತಿಕ್‌ ಮಹೇಶ್‌ ನಾಯಕ ನಟನಾಗಿದ್ದು, ನಿಧಿ ಹೆಗ್ಡೆ ನಾಯಕಿ ನಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ | Mafia | ಬಿಗ್‌ ಬಾಸ್‌ ಖ್ಯಾತಿಯ ಶೈನ್‌ ಶೆಟ್ಟಿ ಸಿನಿಮಾಗೆ ಎಂಟ್ರಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಅಂಕಣ

Raja Marga Column : ಕಿರಣ್‌ ಬೇಡಿ IPS ; ವರ್ಷ 74 ಆದರೂ ಇಂದಿಗೂ ಅವರು ಯೂತ್ ಐಕಾನ್!

Raja Marga Column : ಕಿರಣ್‌ ಬೇಡಿ ಅವರಿಗೆ ಈಗ 74 ವರ್ಷ. ಆದರೆ, ಇವತ್ತಿಗೂ ಅವರು ಯುವಜನರ ಕಣ್ಮಣಿ. ಪೊಲೀಸ್‌ ಬದುಕಿನಲ್ಲಿ ಹಲವು ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟ ಕಿರಣ್‌ ಬೇಡಿ ತಿಹಾರ್ ಜೈಲಿನ ಚಹರೆಯನ್ನೇ ಬದಲಿಸಿದ ಕುತೂಹಲಕಾರಿ ಕಥೆಯೇ ಇಂದಿನ ರಾಜ ಮಾರ್ಗ ಅಂಕಣ.

VISTARANEWS.COM


on

Edited by

Kiran Bedi tihar jail
Koo
RAJAMARGA

ಕಿರಣ್ ಬೇಡಿ, ಐಪಿಎಸ್! (KIRAN BEDI IPS)
ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ನಮ್ಮ ಭಾರತದ ಮೊಟ್ಟಮೊದಲ ಮಹಿಳಾ ಐಪಿಎಸ್ (Indias first IPS officer) ಆಗಿ ಅವರು ವಿವಿಧ ಪೊಲೀಸ್ ಅಧಿಕಾರಿಯ ವಿವಿಧ ಹುದ್ದೆಗಳನ್ನು 35 ವರ್ಷಗಳ ಕಾಲ ಯಶಸ್ವಿಯಾಗಿ ನಿಭಾಯಿಸಿದ ರೀತಿಗೆ ಇಡೀ ಭಾರತವು ಎದ್ದು ನಿಂತು ಸೆಲ್ಯೂಟ್ ಹೊಡೆದಿತ್ತು! ಯಾವುದೇ ಹುದ್ದೆ ಕೊಟ್ಟರೂ ಅದನ್ನು 200% ಬದ್ಧತೆಯ ಜೊತೆಗೆ ಅವರು ಕೆಲಸ ಮಾಡಿ ಎಲ್ಲ ಕಡೆಯಲ್ಲಿಯೂ ಗೆದ್ದಿರುವುದು ನಮಗೆ ಗೊತ್ತಿದೆ.

ಭಾರತದ ವಿವಿಧ ಭಾಷೆಗಳಲ್ಲಿ ಅವರ ಬದುಕಿನ ಸ್ಫೂರ್ತಿ ಪಡೆದು ಬಂದಿರುವ ಪೊಲೀಸ್ ಸಿನಿಮಾಗಳು ಬೇರೆ ಯಾರ ಹೆಸರಲ್ಲಿ ಕೂಡ ಬಂದಿರುವ ಉದಾಹರಣೆ ಇಲ್ಲ. ಆ ಮಟ್ಟಿಗೆ ಅವರು ‘ಯೂತ್ ಐಕಾನ್’ (Youth Icon) ಹೌದು!

ನಾನಿಂದು ಅವರ ಬೇರೆ ಯಾವ ಸಾಧನೆಗಳ ಬಗ್ಗೆ ಕೂಡ ಬರೆಯುವುದಿಲ್ಲ. ಅವರ ರಾಜಕೀಯ ಹೆಜ್ಜೆಗಳ ಬಗ್ಗೆ ಕೂಡ ಬರೆಯುವುದಿಲ್ಲ. ಆದರೆ ಅವರು ಏಷಿಯಾದ ಅತೀ ದೊಡ್ಡ ಸೆರೆಮನೆ (Asias biggest Jail) ಆದ ತಿಹಾರ್ ಜೈಲಿನ (Tihar jail) ಒಳಗೆ ಮಾಡಿದ್ದ ಕ್ರಾಂತಿಕಾರಕವಾದ ಬದಲಾವಣೆಗಳನ್ನು (Revolution in Tihar Jail) ಮಾತ್ರ ಇಲ್ಲಿ ಉಲ್ಲೇಖ ಮಾಡುತ್ತಿದ್ದೇನೆ.

ಆ ಜೈಲು ಹೇಗಿತ್ತು ಅಂದರೆ..

180 ಎಕರೆಯಷ್ಟು ವಿಸ್ತೀರ್ಣದ ಆ ಸೆರೆಮನೆಯಲ್ಲಿ 2000ದಷ್ಟು ಖೈದಿಗಳಿಗೆ ಮಾತ್ರ ಜಾಗ ಇತ್ತು. ಆದರೆ 1992-93ರ ಹೊತ್ತಿಗೆ ಅಲ್ಲಿ 10,000ದಷ್ಟು ಸಂಖ್ಯೆಯ ಖೈದಿಗಳನ್ನು ತಂದು ವಸ್ತುಶಃ ತುರುಕಲಾಗಿತ್ತು! ಅದರಲ್ಲಿ 500 ಹೆಂಗಸರು ಕೂಡ ಇದ್ದರು! ಆ ಹೆಂಗಸರ ಜೊತೆಗೆ ಏನೂ ಅಪರಾಧ ಮಾಡದ ಅವರ ಮುಗ್ಧ ಮಕ್ಕಳು ಸೆಲ್ ಒಳಗೆ ಇದ್ದರು!

tihar jail in delhi

‘ONCE A CRIMINAL WAS ALWAYS A CRIMINAL!’ ಅನ್ನುವ ಮಾತು ತಿಹಾರ್ ಜೈಲಿಗೆ ತುಂಬಾನೇ ಹೊಂದಾಣಿಕೆ ಆಗುತ್ತಿತ್ತು. ಒಮ್ಮೆ ಆ ಜೈಲಿನ ಒಳಗೆ ಬಂದರೆ ಮತ್ತೆ ಹೊರಗೆ ಹೋಗುವ ಎಲ್ಲ ಅವಕಾಶಗಳು ಮುಚ್ಚಿ ಹೋಗುತ್ತಿದ್ದವು! ವರ್ಷಾನುಗಟ್ಟಲೆ ವಿಚಾರಣೆಯೇ ಇರುತ್ತಿರಲಿಲ್ಲ!

ಕತ್ತಲೆಯ, ದುರ್ವಾಸನೆ ಬೀರುವ ಕೋಣೆಗಳು, ಅನಾರೋಗ್ಯಕರ ವಾತಾವರಣ, ಕ್ರೂರವಾಗಿ ಹೊಡೆಯುವ ಜೈಲಿನ ಅಧಿಕಾರಿಗಳು, ಲಂಚ ಸ್ವೀಕರಿಸುವ ಪೊಲೀಸರು, ಸೆಲ್ ಒಳಗೆ ಕುಡಿತ, ಗಾಂಜಾ ಸೇವನೆ, ಜೂಜು, ಅನೈತಿಕ ಚಟುವಟಿಕೆಗಳು…. ಹೀಗೆ ಎಲ್ಲ ರೀತಿಯಿಂದಲೂ ತಿಹಾರ್ ಜೈಲು ಕುಖ್ಯಾತಿ ಪಡೆದಿತ್ತು!

ಅಂತಹ ಜೈಲಿಗೆ ಕಿರಣ್ ಬೇಡಿ ಐಜಿಪಿ ಆಗಿ ಬಂದಿದ್ದರು.

ಅಂತಹ ಜೈಲಿಗೆ 1993ರಲ್ಲಿ ಕಾರಾಗೃಹದ ಐಜಿಪಿ ಆಗಿ ಕಿರಣ್ ಬೇಡಿಯ ಆಗಮನ ಆಗಿತ್ತು. ಆಕೆಯ ಮುಂದೆ ಬೆಟ್ಟದಷ್ಟು ಸವಾಲುಗಳು ಇದ್ದವು! ಅವುಗಳನ್ನು ಗೆಲ್ಲಲು ಆಕೆ ನಿರ್ಧಾರ ಮಾಡಿ ದೃಢ ಹೆಜ್ಜೆ ಇಟ್ಟಾಗಿತ್ತು! ಬೆಟ್ಟದಷ್ಟು ಆತ್ಮವಿಶ್ವಾಸವೂ ಜೊತೆಗಿತ್ತು!

Kiran Bedi at tihar jail

ಭ್ರಷ್ಟ ಅಧಿಕಾರಿಗಳನ್ನು ರಿಪೇರಿ ಮಾಡುವುದು ಸುಲಭದ ಕೆಲಸ ಅಲ್ಲ

ಮೊದಲು ಆಕೆಯು ರಿಪೇರಿ ಮಾಡಿದ್ದು ತಿಹಾರ್ ಜೈಲಿನ ಅತೀ ಭ್ರಷ್ಟರಾದ ಅಧಿಕಾರಿಗಳನ್ನು! ಅವರಲ್ಲಿ ಹಲವರ ತಲೆದಂಡ ಆಯಿತು! ಇನ್ನೂ ಹಲವರ ವರ್ಗಾವಣೆ ನಡೆಯಿತು! ಇನ್ನು ಹಲವರಿಗೆ ಎಚ್ಚರಿಕೆಯನ್ನು ಕೊಡಲಾಯಿತು. ಜೈಲ್ ನಿವಾಸಿಗಳನ್ನು ಕ್ರೂರವಾಗಿ ಹೊಡೆಯುವುದು, ಕೆಟ್ಟದಾಗಿ ನಿಂದಿಸುವುದು, ಹಿಂಸಾತ್ಮಕವಾಗಿ ದುಡಿಸಿಕೊಳ್ಳುವುದು ನಿಂತು ಹೋಯಿತು! ಜೈಲ್ ಒಳಗೆ ಸಲೀಸಾಗಿ ಬರುತ್ತಿದ್ದ ಮಾದಕ ವಸ್ತುಗಳನ್ನು ಪೂರ್ತಿಯಾಗಿ ತಡೆಯಲಾಯಿತು. ಲಂಚ ಸ್ವೀಕಾರ ಮಾಡುತ್ತಿದ್ದ ಪೊಲೀಸರು ಗೇಟ್ ಪಾಸ್ ಪಡೆದರು. ಕಿರಣ್ ಬೇಡಿ ಅಲ್ಲಿ ದುರ್ಗೆಯ ಅವತಾರವನ್ನು ತಾಳಿದ್ದರು!

Kiran Bedi at tihar jail

ಮಾನವೀಯ ಸ್ಪರ್ಶದ ಸೆರೆಮನೆ

ಜೈಲಿನ ನಿವಾಸಿಗಳಿಗೆ ಮೊದಲನೆಯ ಬಾರಿಗೆ ಸಮಗ್ರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಅವರಿಗೆ ಉಚಿತವಾದ ಶುಶ್ರೂಷೆಯ ವ್ಯವಸ್ಥೆ ಕೂಡ ಆಯಿತು. ಅಲ್ಲಿ ಆಲೋಪತಿ ಜೊತೆಗೆ ಹೋಮಿಯೋಪತಿಯ ಚಿಕಿತ್ಸೆಗೆ ಹೆಚ್ಚು ಆದ್ಯತೆಯನ್ನು ಕೊಡಲಾಯಿತು. ವಿವಿಧ ಸರಕಾರೇತರ ಸಂಸ್ಥೆಗಳ ಸಹಾಯ ಪಡೆದು ಅತ್ಯಾಧುನಿಕ ಕೌನ್ಸೆಲಿಂಗ್ ಕೇಂದ್ರವು ಜೈಲಿನ ಒಳಗೆ ಆರಂಭ ಆಯಿತು. ಇದು ಜಗತ್ತಿನಲ್ಲಿಯೇ ಮೊದಲು!

ಯೋಗ, ಪ್ರಾಣಾಯಾಮ ಮತ್ತು ಭಗವದ್ಗೀತೆ ಪಾಠ

ಸೆರೆಮನೆಯ ಕೈದಿಗಳಿಗೆ ತಜ್ಞರಿಂದ ಯೋಗ, ಅನುಶಾಸನ, ಪ್ರಾಣಾಯಾಮ, ಭಗವದ್ಗೀತೆ ಮತ್ತು ಧಾರ್ಮಿಕ ಪಠನದ ತರಗತಿಗಳು ಆರಂಭವಾದವು. ಅವರ ಮಾನಸಿಕ ದೃಢತೆ ಹೆಚ್ಚು ಮಾಡಲು ಈ ರೀತಿಯ ತರಗತಿಗಳು ನೆರವಾದವು.

Kiran Bedi at tihar jail

ಸಾಗರದ ತೆರೆಗಳಂತೆ ಮುಗಿಯದ ಸವಾಲು

ನಿಜವಾದ ಸಮಸ್ಯೆಗಳು ಇನ್ನೂ ಜೀವಂತವಾಗಿ ಇದ್ದವು. ಮಾದಕ ವಸ್ತುಗಳ ಕಳ್ಳ ಸಾಗಾಟದ ಕೇಸ್ ಮೇಲೆ ಅರೆಸ್ಟ್ ಆದ ವಿದೇಶದ ಕೆಲವು ಆಪಾದಿತರು 10-15 ವರ್ಷಗಳಿಂದ ಸೆರೆಮನೆಯಲ್ಲಿಯೇ ಇದ್ದರು. ಯಾಕೆಂದರೆ ಅವರ ವಿಚಾರಣೆಯೇ ಆಗಿರಲಿಲ್ಲ.

ಅವರು ತುಂಬಾ ಅಗ್ರೆಸ್ಸಿವ್ ಆಗಿದ್ದರು. ಅವರ ಮನವನ್ನು ಒಲಿಸಿ ಅವರಿಗೆ ಗಿಟಾರ್, ಪಿಯಾನೋ ಮತ್ತು ಪಿಟೀಲು ಕ್ಲಾಸ್‌ಗಳು ಆರಂಭವಾದವು. ಅವರ ತುರ್ತು ವಿಚಾರಣೆಗೆ ವ್ಯವಸ್ಥೆ ಮಾಡಲಾಯಿತು. ಜಾಮೀನು ದೊರೆಯುವ ಸಾಧ್ಯತೆಯು ಇದ್ದ ನಿವಾಸಿಗಳಿಗೆ ತುರ್ತು ಜಾಮೀನು ವ್ಯವಸ್ಥೆ ಮಾಡಿ ಅವರನ್ನು ಹೊರಗೆ ಕಳುಹಿಸಲಾಯಿತು.

ಕೈದಿಗಳಿಗೆ ಸ್ವಚ್ಛತಾ ಪ್ರಜ್ಞೆಯ ಬಗ್ಗೆ ಶಿಕ್ಷಣ ಕೊಡಲಾಯಿತು. ಸಿಕ್ಕಿದ್ದಲ್ಲಿ ಉಗುಳುವ, ಮೂತ್ರ ಮಾಡುವ ಆಪಾದಿತರಿಗೆ ಸಣ್ಣ ಸಣ್ಣ ಶಿಕ್ಷೆ ನೀಡಿ ಅವರ ಮಾನಸಿಕ ಪರಿವರ್ತನೆಗೆ ತೀವ್ರ ಪ್ರಯತ್ನ ಮಾಡಲಾಯಿತು.

Kiran Bedi at tihar jail

ಬಾಲಾಪರಾಧಿಗಳು ತಿಹಾರ್ ಸೆರೆಮನೆಯಲ್ಲಿ!

ಇನ್ನೂ ದೊಡ್ಡದಾದ ಸವಾಲು ಎದುರಾದದ್ದು ಏನೆಂದರೆ ಆ ಸೆರೆಮನೆಯಲ್ಲಿ 18 ವರ್ಷಗಳಿಗಿಂತ ಕಡಿಮೆ ವಯಸ್ಸಿನ 1000ಕ್ಕಿಂತ ಅಧಿಕ ಬಾಲಾಪರಾಧಿಗಳು ಇದ್ದರು! ಅವರನ್ನು ರಿಮಾಂಡ್ ಹೋಮ್‌ನಲ್ಲಿ ಪ್ರತ್ಯೇಕ ಇಡಬೇಕು ಎಂಬ ಕಾಯ್ದೆ ಇದ್ದರೂ ತಿಹಾರ್ ಜೈಲಿನಲ್ಲಿ ಅದಕ್ಕೆ ವ್ಯವಸ್ಥೆಯೇ ಇರಲಿಲ್ಲ.

ಸೆರೆಮನೆ ನಿಧಾನಕ್ಕೆ ಶಾಲೆ ಆಯ್ತು

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಂದಿನ ಕಣ್ಮಣಿಗಳಾಗಿದ್ದ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರ ಹೆಸರಲ್ಲಿ ಎರಡು ವಿನೂತನವಾದ ವಾರ್ಡ್‌ಗಳ ನಿರ್ಮಾಣ ಮಾಡಲಾಯಿತು. ಅವರಿಗೆ ಓದುವ ಮತ್ತು ಬರೆಯುವ ವ್ಯವಸ್ಥೆಗಳು ಆದವು. ಪಾಠ ಮಾಡಲು ಜೈಲಿನ ಒಳಗೆ ಇದ್ದ ಕೆಲವು ವಿದ್ಯಾವಂತ ಯುವಕ, ಯುವತಿಯರ ಸಹಾಯ ಪಡೆಯಲಾಯಿತು. ಪಾಠ ಮಾಡುವ ಶಿಕ್ಷಕರಿಗೆ ದಿನಕ್ಕೆ 200 ರೂಪಾಯಿ ವೇತನವನ್ನು ನೀಡಲಾಯಿತು. ತಿಹಾರ್ ಜೈಲು ನಿಧಾನವಾಗಿ ಶಾಲೆಯಾಗಿ ಹೊಮ್ಮಿತು!

ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ, ಎಂಬ್ರಾಯ್ಡರಿ, ಕಸೂತಿ ತರಗತಿಗಳು ಆರಂಭ ಆದವು. ಅವರ ಜೊತೆಗೆ ಸೆಲ್ ಒಳಗೆ ಬಾಲ್ಯವನ್ನು ಮರೆತಿದ್ದ ನಿರಪರಾಧಿಗಳಾದ 40 ಪುಟ್ಟ ಪುಟ್ಟ ಕಂದಮ್ಮಗಳಿಗೆ ಶಾಲೆಗಳ ವ್ಯವಸ್ಥೆಯು ಆಯಿತು. ಅವರಿಗೆ ತಿಂಗಳಿಗೆ ಒಮ್ಮೆ ಕಿರು ಪ್ರವಾಸದ ವ್ಯವಸ್ಥೆ ಆಯಿತು.

ಜೈಲಿನ ಒಳಗೆ ಇಂದಿರಾ ಗಾಂಧಿ ಮುಕ್ತ ವಿವಿಯ (IGNOU) ಅಧ್ಯಯನ ಕೇಂದ್ರವು ಆರಂಭ ಆಯಿತು. ಕಲಿಯಲು ಆಸಕ್ತಿ ಇರುವ ಮಂದಿಗೆ ಪಠ್ಯಪುಸ್ತಕ, ಶೈಕ್ಷಣಿಕ ವಿಡಿಯೋ ಮತ್ತು ಆಡಿಯೋಗಳನ್ನು ಉಚಿತವಾಗಿ ಒದಗಿಸಲಾಯಿತು. ಕಂಪ್ಯೂಟರ್ ತರಬೇತಿಯು ಆರಂಭವಾಯಿತು. ಹಲವು ಜನ ಶಿಕ್ಷೆಗಳಿಗೆ ಒಳಗಾದ ಯುವಕ, ಯುವತಿಯರು ಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಪಡೆದು ಹೊರಬಂದರು!

Kiran Bedi at tihar jail

ಸೆರೆಮನೆ ಒಳಗೆ ಕೌನ್ಸೆಲಿಂಗ್ ಕೇಂದ್ರಗಳು

ವಿಚಾರಣಾಧೀನ ಕೈದಿಗಳಿಗೆ ಕಾನೂನು ಮಾಹಿತಿ ಶಿಬಿರಗಳು ನಡೆದವು. ಅವರ ಮನಸ್ಸು ಪರಿವರ್ತನೆಗೆ ಕೌನ್ಸೆಲಿಂಗ್ ಕೇಂದ್ರಗಳು ಶ್ರಮಿಸಿದವು! ಜೈಲಿನ ಒಳಗೆ ಕೈಮಗ್ಗದ ಒಂದು ಘಟಕವು ಉದ್ಘಾಟನೆ ಆಯಿತು. ಮುಂದೆ ಸಾಬೂನು ತಯಾರಿಕೆ, ಖಾದಿ ಬಟ್ಟೆ ತಯಾರಿ, ಬೇಕರಿ ಉತ್ಪನ್ನಗಳ ತಯಾರಿ ಘಟಕಗಳು ಆರಂಭ ಆದವು.

ಅವರ ಉತ್ಪನ್ನಗಳಿಗೆ ಮಾರ್ಕೆಟ್ ಬೇಕಲ್ಲಾ? ಅದಕ್ಕಾಗಿ ಕಿರಣ್ ಬೇಡಿ ಅವರು ನಗರದಲ್ಲಿ ಹಲವು ಮಾರಾಟ ಕೇಂದ್ರಗಳನ್ನು ತೆರೆದರು. ಅದಕ್ಕೆ ‘ತಿಹಾರ್ ಉತ್ಪನ್ನಗಳ ಮಾರಾಟ ಮಳಿಗೆ’ಎಂಬ ಬೋರ್ಡನ್ನು ಬರೆಸಲಾಯಿತು. ಗುಣಮಟ್ಟವು ಚೆನ್ನಾಗಿ ಇದ್ದ ಕಾರಣ ವ್ಯಾಪಾರ ಭರ್ಜರಿ ಆಯಿತು. ಅದರ ಲಾಭವನ್ನು ನೇರವಾಗಿ ಕೈದಿಗಳ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಕಿರಣ್ ಮೇಡಂ ಮಾಡಿದರು.

ಇದು ಸೆರೆಮನೆ ನಿವಾಸಿಗಳ ಬದುಕಿನಲ್ಲಿ ಭಾರೀ ಬದಲಾವಣೆ ತಂದಿತು!

ವಿಪಷ್ಯನ ಯೋಗ ಶಿಬಿರಗಳು ಸೆರೆಮನೆಯಲ್ಲಿ ಭಾರೀ ಬದಲಾವಣೆ ತಂದವು. ಮೊದ ಮೊದಲು ಪ್ರತಿಭಟನೆ ಮಾಡಿದ ಆಪಾದಿತರು ನಿಧಾನವಾಗಿ ಕಿರಣ್ ಮೇಡಂ ಅವರ ಸಹಜ ಪ್ರೀತಿಗೆ ಮನಸೋತರು. ಆಕೆಯು ಮಧ್ಯಾಹ್ನ ಸ್ವತಃ ಜೈಲಿಗೆ ಬಂದು ಎಲ್ಲ ಕೈದಿಗಳಿಗೆ ಮೊದಲು ಊಟ ಬಡಿಸಿ ಕೊನೆಗೆ ಅವರ ಜೊತೆ ಕೂತು ತಾನು ಊಟ ಮಾಡುತ್ತಿದ್ದರು! ಕೈದಿಗಳು ಉಣ್ಣುತ್ತಿದ್ದ ಅನ್ನವನ್ನೇ ಅವರು ದಿನವೂ ಊಟ ಮಾಡುತ್ತಿದ್ದರು. ಕೈದಿಗಳು ಅವರನ್ನು ಪ್ರೀತಿಯಿಂದ ‘ಕಿರಣ್ ದೀದಿ’ ಎಂದು ಕರೆಯಲು ಆರಂಭ ಮಾಡಿದರು. ಅವರ ಉದಾತ್ತ ಆಶಯಗಳಿಗೆ ಬೆಂಬಲವಾಗಿ ನಿಂತರು.

Kiran Bedi family  tihar jail
ಕಿರಣ್‌ ಬೇಡಿ ಕುಟುಂಬ ಆಗ

ಪ್ರತಿಯೊಬ್ಬ ಕೈದಿಯು ವಿಚಾರಣೆ ಮುಗಿದು ತೀರ್ಪು ಪಡೆದು ಹಿಂದೆ ಹೊರಟಾಗ ಅವರ ಮನೆಯವರನ್ನು ಕರೆದು ಅವರ ಸಮ್ಮುಖದಲ್ಲಿ ಬುದ್ಧಿವಾದ ಹೇಳಿ ಬೀಳ್ಕೊಡುತ್ತಿದ್ದರು. ‘ಇನ್ನು ಯಾವತ್ತೂ ಇಲ್ಲಿಗೆ ಬರಬೇಡಿ’ ಎನ್ನುತ್ತಿದ್ದರು ಕಿರಣ್ ಬೇಡಿ. ಅವರ ಮಾನವೀಯ ಸ್ಪರ್ಶಕ್ಕೆ ಕಠೋರ ಹೃದಯದ ಕ್ರಿಮಿನಲ್ ಅಪರಾಧಿಗಳು ಕೂಡ ಕರಗಿ ಹೋಗುತ್ತಿದ್ದರು.

ಕಿರಣ್ ಬೇಡಿ ಮಾಡಿದ ಈ ಜೈಲು ಸುಧಾರಣೆಯ ಕ್ರಮಗಳು ಜಗತ್ತಿನಲ್ಲಿಯೇ ವಿನೂತನ ಆಗಿದ್ದವು. ಅದರಿಂದ ದೇಶದ, ವಿದೇಶದ ಮಾಧ್ಯಮಗಳು ಆಕೆಯ ಬಗ್ಗೆ, ತಿಹಾರ್ ಜೈಲಿನ ಸುಧಾರಣೆಯ ಕ್ರಮಗಳ ಬಗ್ಗೆ ಲೀಡ್ ಲೇಖನಗಳನ್ನು ಬರೆದವು. ಆಗ ಭಾರೀ ಇಂಪ್ರೆಸ್ ಆದ ಅಮೆರಿಕಾದ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಆಕೆಗೆ ಪತ್ರವನ್ನು ಬರೆದು ಶುಭಾಶಯ ಹೇಳಿದರು, ಮತ್ತು ಅವರ ಜೊತೆ ಒಮ್ಮೆ ಊಟ ಮಾಡಬೇಕು ಅಂತ ಆಸೆ ವ್ಯಕ್ತಪಡಿಸಿದರು!

ಕಿರಣ್ ಬೇಡಿ ಅವರಿಗೆ ಜಾಗತಿಕ ಮಟ್ಟದ ‘ಮ್ಯಾಗ್ಸೆಸೆ ಪ್ರಶಸ್ತಿ’ಯು ದೊರೆಯಿತು. ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿತು. ಮುಂದೆ ನಿವೃತ್ತರಾದ ನಂತರ ಅವರು ಪಾಂಡಿಚೇರಿಯ ಮೊದಲ ಮಹಿಳಾ ಗವರ್ನರ್ ಆಗಿ ಸೇವೆ ಸಲ್ಲಿಸಿದರು.

ಇದನ್ನೂ ಓದಿ : Raja Marga Column : ನಿಮ್ಮ ಮಕ್ಕಳನ್ನು ಸೂಪರ್‌ ಹೀರೊ ಮಾಡಲು ಹೋಗ್ಬೇಡಿ; ರಿಯಾಲಿಟಿ ಶೋಗಳಿಗೆ ಬೇಕು ಬ್ರೇಕ್!

ಭರತ ವಾಕ್ಯ

ಕಿರಣ್ ಬೇಡಿ ಅವರ ಆತ್ಮಚರಿತ್ರೆಯ ಪುಸ್ತಕ DARE TO BE GREAT ಓದುತ್ತಾ ಹೋದಂತೆ ನಮಗೆ ಅವರ ಅಸದೃಶವಾದ ವ್ಯಕ್ತಿತ್ವವು ಕಣ್ಣ ಮುಂದೆ ಬರುತ್ತದೆ. ಆಕೆ ನಿಜವಾಗಿಯೂ ಗ್ರೇಟ್ ಎಂದು ನನ್ನ ಭಾವನೆ!

Continue Reading

ದೇಶ

ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಭಯೋತ್ಪಾದಕರ ಹೆಡೆಮುರಿ ಕಟ್ಟಲೇಬೇಕಿದೆ

Vistara Editorial: ಕೆನಡಾ ವಿಚಾರದಲ್ಲಿ ಭಾರತ ದೃಢ ನಿರ್ಧಾರ ತೆಗೆದುಕೊಂಡಿದೆ. ಭಾರತದ ನಡೆಗಳು ಖಲಿಸ್ತಾನಿಗಳಿಗೆ ನಡುಕ ಹುಟ್ಟಿಸಿರುವಂತೆಯೇ ಕೆನಡಾ ಸರ್ಕಾರಕ್ಕೆ ಎಚ್ಚರಿಕೆಯನ್ನೂ ರವಾನಿಸಿವೆ.

VISTARANEWS.COM


on

Edited by

Vistara Editorial, Indian Government must act against Khalistani Terrorists
Koo

ಖಲಿಸ್ತಾನ್ ಉಗ್ರರು (Khalistani Terrorist) ಹಾಗೂ ಗ್ಯಾಂಗ್‌ಸ್ಟರ್‌ಗಳ ನಡುವಿನ ಲಿಂಕ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಬುಧವಾರ ಆರು ರಾಜ್ಯಗಳ 50 ಸ್ಥಳಗಳಲ್ಲಿ ಬೃಹತ್‌ ಪ್ರಮಾಣದ ದಾಳಿ (NIA raid) ನಡೆಸಿದೆ. ಮೂಲಗಳ ಪ್ರಕಾರ, ಖಲಿಸ್ತಾನ್‌ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಹವಾಲಾ ಆಪರೇಟರ್‌ಗಳು, ದರೋಡೆಕೋರರು, ಮತ್ತಿತರ ಸಂಘಟಿತ ಅಪರಾಧ ಜಾಲಗಳಲ್ಲಿ ಸಕ್ರಿಯರಾದವರನ್ನು ಬಂಧಿಸಲು ದಾಳಿಗಳು ನಡೆಯುತ್ತಿವೆ. ಪಂಜಾಬ್‌ನಲ್ಲಿ 30, ರಾಜಸ್ಥಾನದಲ್ಲಿ 13, ಹರಿಯಾಣದಲ್ಲಿ 4, ಉತ್ತರಾಖಂಡದಲ್ಲಿ 2 ಮತ್ತು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ತಲಾ 1 ಸ್ಥಳಗಳಲ್ಲಿ ದಾಳಿ ನಡೆದಿದೆ. ಭಾರತದಿಂದ ಪರಾರಿಯಾಗಿ ಬ್ರಿಟನ್, ಅಮೆರಿಕ, ಕೆನಡಾ, ದುಬೈ, ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿ ನೆಲೆಸಿರುವ 19 ಖಲಿಸ್ತಾನಿ ಭಯೋತ್ಪಾದಕರ ಪಟ್ಟಿಯನ್ನು ಈ ಹಿಂದೆ ಎನ್‌ಐಎ ಬಿಡುಗಡೆ ಮಾಡಿತ್ತು. ಇಲ್ಲಿರುವ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ. ಇಂಥದೊಂದು ವ್ಯಾಪಕ ಕಾರ್ಯಾಚರಣೆಯ ಅಗತ್ಯವಿತ್ತು(Vistara Editorial).

ಸದ್ಯ ಕೆನಡಾದಲ್ಲಿ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಬಳಿಕ ಬಿಗಡಾಯಿಸಿರುವ ಕೆನಡಾ- ಭಾರತ ಸಂಬಂಧದ ಹಿನ್ನೆಲೆಯಲ್ಲಿ, ಭಾರತದಲ್ಲಿರುವ ಖಲಿಸ್ತಾನ್‌ ಸಹಾನುಭೂತಿಪರರ ಹೆಡೆಮುರಿ ಕಟ್ಟುವುದು ಎನ್‌ಐಎಯ ತಕ್ಷಣದ ಉದ್ದೇಶವಾಗಿರುವಂತಿದೆ. ಈಗಾಗಲೇ ಕೆನಡಾದಲ್ಲಿರುವ, ನಿಷೇಧಿತ ಖಲಿಸ್ತಾನಿ ಪರವಾದ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಸದಸ್ಯ, ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಎಂಬಾತನ ಆಸ್ತಿಯನ್ನು ಎನ್ಐಎ ಮುಟ್ಟುಗೋಲು ಹಾಕಿಕೊಂಡಿದೆ. ನಿಷೇಧಿತ ಉಗ್ರ ಸಂಘಟನೆಯಾದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ) ನೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಮತ್ತು ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾ ಅವರ ತಲೆಗೆ ತಲಾ 10 ಲಕ್ಷ ರೂಪಾಯಿ ಹಾಗೂ ಫಿರೋಜ್‌ಪುರದ ಪರ್ಮಿಂದರ್ ಸಿಂಗ್ ಕೈರಾ, ಪಂಜಾಬ್‌ನ ತರ್ನ್ ತರನ್‌ನ ಸತ್ನಾಮ್ ಸಿಂಗ್ ಮತ್ತು ಯದ್ವಿಂದರ್ ಸಿಂಗ್ ಎಂಬವರ ತಲೆಗೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಎನ್‌ಐಎ ಘೋಷಿಸಿದೆ.

ಒಂದು ಕಾಲದಲ್ಲಿ ಸಂಪೂರ್ಣ ನಾಶವಾಗಿದೆ ಎಂದು ಭಾವಿಸಲಾಗಿದ್ದ ಖಲಿಸ್ತಾನ್‌ ಚಳುವಳಿಯ ಪರ ಚಟುವಟಿಕೆ ಇತ್ತೀಚಿನ ಒಂದು ದಶಕದಲ್ಲಿ ನಿಧಾನವಾಗಿ ಹೆಚ್ಚುತ್ತ ಬಂದಿತ್ತು. ಕಾಶ್ಮೀರದಲ್ಲಿ ತನ್ನ ಆಟ ನಡೆಯುವುದಿಲ್ಲ ಎಂದು ಗೊತ್ತಾದ ಬಳಿಕ ಪಂಜಾಬ್‌ನತ್ತ ಪಾಕಿಸ್ತಾನ ತನ್ನ ದೃಷ್ಟಿಯನ್ನು ಹರಿಸಿದ್ದು, ಖಲಿಸ್ತಾನ ಚಳವಳಿಗಾರರಿಗೆ ಬೆಂಬಲ ನೀಡತೊಡಗಿದೆ. ಹೀಗಾಗಿ, ಇದು ಚಿಗುರುತ್ತಿರುವಾಗಲೇ ಚಿವುಟುವುದು ಅತ್ಯಂತ ಉತ್ತಮ. ಬೆಳೆಯಲು ಬಿಟ್ಟರೆ ಯಾವ ಬಗೆಯ ಅನಾಹುತವನ್ನು ಇದು ಎಸಗಬಹುದು ಎಂಬುದನ್ನು ತೊಂಬತ್ತರ ದಶಕದಲ್ಲಿ ನೋಡಿದ್ದಾಗಿದೆ. ಕಳೆದ ವರ್ಷ ಪಂಜಾಬ್‌ನ ತರಣ್ ತಾರಣ್ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ರಾಕೆಟ್ ಲಾಂಚರ್‌ನಿಂದ ಖಲಿಸ್ತಾನ್‌ ಉಗ್ರರು ದಾಳಿ ನಡೆಸಿದ್ದರು. ಅದೇ ವರ್ಷ ಮೇ ತಿಂಗಳಲ್ಲಿ ಪಂಜಾಬ್ ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಮೇಲೂ ಇದೇ ರೀತಿಯ ದಾಳಿ ನಡೆಸಲಾಗಿತ್ತು. ರಾಕೆಟ್‌ ಲಾಂಚರ್‌ ಮೂಲಕ, ಡ್ರೋನ್‌ಗಳ ಮೂಲಕ ದಾಳಿ ನಡೆಸುವುದೆಂದರೆ ಮಿಲಿಟರಿ ಮಟ್ಟದ ದಾಳಿ. ಇದು ಗಡಿಯಾಚೆಯಿಂದ ಸ್ಮಗಲ್‌ ಆಗಿ ಬಂದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದರು. ಯುದ್ಧದ ಹಂತಕ್ಕೆ ಖಲಿಸ್ತಾನಿ ಉಗ್ರರು ಮುಟ್ಟಿದ್ದಾರೆ ಎಂದ ಬಳಿಕ ಇದನ್ನು ಗಂಭೀರವಾಗಿಯೇ ಪರಿಗಣಿಸಬೇಕಿದೆ.

ಈ ಸಂಪಾದಕೀಯವನ್ನೂ ಓದಿ: Khalistani Terrorist: ಖಲಿಸ್ತಾನ್- ಗ್ಯಾಂಗ್‌ಸ್ಟರ್ ಜಾಲ ಭೇದಿಸಲು 6 ರಾಜ್ಯಗಳ 50 ಕಡೆ NIA ದಾಳಿ

1980-90ರ ದಶಕದಲ್ಲಿ ಒಂದು ಚಳವಳಿಯಾಗಿ ಹುಟ್ಟಿಕೊಂಡ ಖಲಿಸ್ತಾನಿ ಬೇಡಿಕೆ ಮುಂದೆ ಭಾರತದೊಳಗೇ ರಣಗಾಯವಾಗಿ ಸೃಷ್ಟಿಯಾಗಿದ್ದು, ಭದ್ರತೆಗೆ ತಲೆನೋವಾಗಿ ಪರಿಣಮಿಸಿದ್ದು ನಮಗೆ ಗೊತ್ತಿದೆ. ಸುಮಾರು 12,000 ನಾಗರಿಕರು, 10,000 ಉಗ್ರರು ಆಗ ಬಲಿಯಾಗಿದ್ದರು. ಪ್ರಧಾನ ಮಂತ್ರಿಯ ಕಗ್ಗೊಲೆ ನಡೆಸುವ ಮಟ್ಟಕ್ಕೂ ಆ ಭಯೋತ್ಪಾದಕರು ಹೋಗಿದ್ದರು. ಈಗ ಮತ್ತೆ ಖಲಿಸ್ತಾನಿಗಳು ಬಾಲ ಬಿಚ್ಚುತ್ತಿದ್ದಾರೆ. ಸಿಖ್ ಪ್ರತ್ಯೇಕತಾವಾದಿ ಖಲಿಸ್ತಾನಿಗಳಿಗೆ ಪಾಕಿಸ್ತಾನ ಮಾತ್ರವಲ್ಲ ಕೆನಡಾವೂ ನೇರವಾಗಿ ಬೆಂಬಲ ನೀಡುತ್ತಿದೆ. ಕೆನಡಾದಲ್ಲಿ ಮಿತಿ ಮೀರಿರುವ ಸಿಖ್ ಪ್ರತ್ಯೇಕತಾವಾದಿ ಭಯೋತ್ಪಾದಕರ ವಿರುದ್ಧ ಅಲ್ಲಿನ ಆಡಳಿತವಾಗಲೀ, ರಾಜಕೀಯ ಪಕ್ಷಗಳಾಗಲೀ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಯಾಕೆಂದರೆ ಅಲ್ಲಿ ಗಣನೀಯವಾಗಿರುವ ಸಿಖ್ಖರು ಹಾಗೂ ಅವರ ಮತ ಬ್ಯಾಂಕ್.‌ ಸಿಖ್ ಫಾರ್ ಜಸ್ಟಿಸ್ ಸಂಘಟನೆ ಕೆನಡಾದಿಂದಲೇ ಸಕ್ರಿಯವಾಗಿದ್ದುಕೊಂಡು ಪಂಜಾಬಿನಲ್ಲಿ ಮತ್ತೆ ಭಯೋತ್ಪಾದನೆ ಬಿತ್ತುತ್ತಿದೆ. ಸಾವಿರಾರು ಹಿಂದೂ ಕುಟುಂಬಗಳು ಕೆನಡಾ, ಆಸ್ಟ್ರೇಲಿಯಾದಲ್ಲಿ ವೃತ್ತಿ ಕಾರಣ ನೆಲೆಸಿವೆ. ಇದೀಗ ಇದೇ ಖಲಿಸ್ತಾನಿಗಳೇ ಕೆನಡಾ ಮತ್ತು ಭಾರತದ ನಡುವೆ ಸಂಬಂಧ ಹಳಸಲು ಕಾರಣರಾಗಿದ್ದಾರೆ. ಇವರನ್ನು ಬುಡದಿಂದಲೇ ಚಿವುಟಿ ಹಾಕಿದಾಗಲಷ್ಟೇ ಇವರ ಆವುಟ ತಣ್ಣಗಾಗಲು ಸಾಧ್ಯ.

ಸದ್ಯ ಕೆನಡಾ ವಿಚಾರದಲ್ಲಿ ಭಾರತ ದೃಢ ನಿರ್ಧಾರ ತೆಗೆದುಕೊಂಡಿದೆ. ಭಾರತದ ನಡೆಗಳು ಖಲಿಸ್ತಾನಿಗಳಿಗೆ ನಡುಕ ಹುಟ್ಟಿಸಿರುವಂತೆಯೇ ಕೆನಡಾ ಸರ್ಕಾರಕ್ಕೆ ಎಚ್ಚರಿಕೆಯನ್ನೂ ರವಾನಿಸಿವೆ. ಕೆನಡಾದಲ್ಲಿ ಖಲಿಸ್ತಾನಿ ಉಗ್ರರನ್ನು ಹೊಡೆದುರುಳಿಸಿದವರು ಭಾರತದ ಏಜೆಂಟರು ಎಂಬುದಕ್ಕೆ ಸಾಕ್ಷ್ಯವಿಲ್ಲವಾದರೂ, ಸತ್ತವರು ಆ ಶಿಕ್ಷೆಗೆ ಒಳಗಾಗಬೇಕಿದ್ದವರೇ ಎಂಬುದರಲ್ಲಿ ಸಂಶಯವಿಲ್ಲ. ಹಾಗೆಯೇ ಭಾರತದಲ್ಲಿರುವ ಖಲಿಸ್ತಾನಿ ಉಗ್ರರು ಮತ್ತು ಅವರ ಸಹಾನುಭೂತಿಪರರೂ ಕಾನೂನು ತನಿಖೆ, ನ್ಯಾಯಾಂಗ ವಿಚಾರಣೆ ಹಾಗೂ ಶಿಕ್ಷೆಯ ವ್ಯಾಪ್ತಿಯಡಿಗೆ ಬರಬೇಕು. ಎನ್‌ಐಎ ಈ ವಿಚಾರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಆಶಿಸೋಣ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರಿಗೆ ಇಂದು ಕಿರಿಕಿರಿ, ಆತಂಕದ ಭಾವವೇ ಹೆಚ್ಚು; ಸ್ವಲ್ಪ ಎಚ್ಚರವಹಿಸಿ!

Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ ಚತುರ್ದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Edited by

dina bhavishya September 27
Koo

ಚಂದ್ರನು ಗುರುವಾರ ರಾತ್ರಿವರೆಗೂ ಮೀನ ರಾಶಿಯಲ್ಲಿಯೇ ನೆಲಸಲಿದ್ದು, ರಾತ್ರಿ 8.17ಕ್ಕೆ ಮೇಷ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ಕನ್ಯಾ, ಧನಸ್ಸು, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮಿಥುನ ರಾಶಿಯವರು ಕುಟುಂಬದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪವಾಗದಂತೆ ಎಚ್ಚರಿಕೆ ವಹಿಸಬೇಕಿದೆ. ವೃಶ್ಚಿಕ ರಾಶಿಯವರಿಗೆ ನೆರೆಹೊರೆಯವರೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಮಾತಿನಲ್ಲಿ ಆದಷ್ಟು ಹಿಡಿತವಿರಲಿ. ಮಕರ ರಾಶಿಯವರಿಗೆ ಇಂದು ನೀವು ಹಲವಾರು ಒತ್ತಡಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಬಹುದು. ಇದು ನಿಮಗೆ ಕಿರಿಕಿರಿ ಹಾಗೂ ಆತಂಕದ ಭಾವನೆಗಳನ್ನು ಉಂಟು ಮಾಡಬಹುದು. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (2‌8-09-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ.
ತಿಥಿ:
ಚತುರ್ದಶಿ 18:48 ವಾರ: ಗುರುವಾರ
ನಕ್ಷತ್ರ: ಪೂರ್ವಾಭಾದ್ರಪದ 25:47 ಯೋಗ: ಗಂಡ 23:53
ಕರಣ: ಗರಜ 08:33 ಅಮೃತಕಾಲ : ಸಾಯಂಕಾಲ 06:42 ರಿಂದ ರಾತ್ರಿ 08:07 ರವರೆಗೆ
ದಿನದ ವಿಶೇಷ : ಅನಂತ ಪದ್ಮನಾಭ ವ್ರತ

ಸೂರ್ಯೋದಯ : 06:09  ಸೂರ್ಯಾಸ್ತ : 06:12

ರಾಹುಕಾಲ: ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ
: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಅನಿರೀಕ್ಷಿತ ಖರ್ಚು ಹೆಚ್ಚಾಗಲಿದ್ದು, ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುವ ಸಾಧ್ಯತೆ ಇದೆ. ಹಾಸಿಗೆ ಇದ್ದಷ್ಟು ಕಾಲು ಚಾಚಿ. ಸ್ನೇಹಿತರು, ಮಿತ್ರರ ಆಗಮನದಿಂದ ಅವರೊಂದಿಗೆ ಸಮಯ ಕಳೆಯುವಿರಿ. ಸಹದ್ಯೋಗಿಗಳ ಸಹಕಾರ ಸಿಗಲಿದೆ. ಆರೋಗ್ಯದ ಬಗ್ಗೆ ಕೊಂಚ ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ದಾಂಪತ್ಯದಲ್ಲಿ ಮಧುರ ಭಾವ ಮೂಡಲಿದೆ.
ಅದೃಷ್ಟ ಸಂಖ್ಯೆ: 9

Horoscope Today

ವೃಷಭ: ದಿನದ ಆರಂಭದಲ್ಲಿ ಇಂದು ನೀವು ಯಾವುದೇ ಆರ್ಥಿಕ ನಷ್ಟವನ್ನು ಹೊಂದಬಹುದು. ಇದರಿಂದ ನಿಮ್ಮ ಪೂರ್ತಿ ದಿನ ಹದಗೆಡುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರಿಕೆ ಇರಲಿ. ಆದಷ್ಟು ದೈಹಿಕ ಹಾಗೂ ಮಾನಸಿಕ ದೃಢತೆಗಾಗಿ ಯೋಗ ಹಾಗೂ ಧ್ಯಾನ ಮಾಡುವುದು ಉತ್ತಮ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮನೆಯಲ್ಲಿ ಅಪಸ್ವರಗಳು ಮೂಡದಂತೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಮಿಥುನ: ಉದ್ಯೋಗಿಗಳಿಗೆ ಆಪ್ತರಿಂದ ಸಲಹೆ ಸೂಚನೆಗಳು ಸಿಗಲಿವೆ. ಕುಟುಂಬದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪವಾಗದಂತೆ ಎಚ್ಚರಿಕೆ ವಹಿಸಿ. ಶ್ರೇಷ್ಠ ಜನರ ಸಹವಾಸವು ನಿಮ್ಮಲ್ಲಿ ಒಳ್ಳೆಯ ವಿಚಾರಗಳನ್ನು ಹುಟ್ಟುಹಾಕುತ್ತದೆ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕವಾಗಿ ಸಬಲರಾಗುವಿರಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಕಟಕ: ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರ್ಥಿಕವಾಗಿ ಸದೃಢರಾಗುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ ಸಿಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದ ಜನರು ಇಂದು ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ತಾಳ್ಮೆಯಿಂದ ಇರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಸಿಂಹ: ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇದೆ. ನಿಮ್ಮ ಸರ್ವಾಧಿಕಾರಿ ಧೋರಣೆಯಿಂದಾಗಿ ನಿಮ್ಮ ಸಹೋದ್ಯೋಗಿಗಳಿಂದ ಟೀಕೆಗೆ ಗುರಿಯಾಗುವ ಸಾಧ್ಯತೆ ಹೆಚ್ಚು. ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳ ಬಗ್ಗೆ ಹಿಡಿತವಿರಲಿ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 8

Horoscope Today

ಕನ್ಯಾ: ಅನಗತ್ಯ ಒತ್ತಡದಿಂದ ಹೊರಬರಲು ನಿಮ್ಮ ಪ್ರೀತಿ ಪಾತ್ರರೊಡನೆ ಸಮಯವನ್ನು ಕಳೆಯಿರಿ. ಅತಿಥಿಗಳ ಆಗಮನದಿಂದಾಗಿ ಕೊಂಚಮಟ್ಟಿಗೆ ಸಮಾಧಾನ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಕೊಂಚಮಟ್ಟಿಗೆ ನಿಧಾನವಾದರೂ ಪ್ರಯತ್ನವನ್ನು ಬಿಡಬೇಡಿ. ಮುಂದೊಂದು ದಿನ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕವಾಗಿ ಉತ್ತಮಗೊಳ್ಳುವಿರಿ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ. ನಿಮ್ಮ ಹರ್ಷಚಿತ್ತದ ಮನಸ್ಸು ನಿಮಗೆ ಇನ್ನಷ್ಟೂ ಆತ್ಮವಿಶ್ವಾಸ ತರಲಿದೆ. ಒಬ್ಬ ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಆರ್ಥಿಕವಾಗಿ ಸಾಧಾರಣ ಫಲ ನಿಮ್ಮದಾಗಲಿದೆ. ಉದ್ಯೋಗಿಗಳಿಗೆ ಮಿಶ್ರಫಲ ಉಂಟಾಗುವುದು. ಕೌಟುಂಬಿಕವಾಗಿ ಸಂತೋಷದ ವಾತಾವರಣ.
ಅದೃಷ್ಟ ಸಂಖ್ಯೆ: 9

Horoscope Today

ವೃಶ್ಚಿಕ: ನೆರೆಹೊರೆಯವರೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಮಾತಿನಲ್ಲಿ ಆದಷ್ಟು ಹಿಡಿತವಿರಲಿ. ಕುಟುಂಬದ ಸದಸ್ಯನ ಆರೋಗ್ಯ ಹದಗೆಡುವ ಕಾರಣ ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಕೆಲಸದ ನಿಧಾನಗತಿ ಸ್ವಲ್ಪ ಒತ್ತಡ ತರಲಿದೆ. ಉದ್ಯೋಗಿಗಳಿಗೆ ಹೆಚ್ಚಿದ ಕಿರಿಕಿರಿ. ಸಂಗಾತಿಯಿಂದ ಸಲಹೆ ಸಿಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 2

Horoscope Today

ಧನಸ್ಸು: ದೃಢ ವಿಶ್ವಾಸದ ನಿರ್ಧಾರದಿಂದಾಗಿ ಸುದೀರ್ಘವಾದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸ್ನೇಹಿತರಿಂದ ಆರ್ಥಿಕ ಸಹಾಯದ ಬೇಡಿಕೆ ಬರಲಿದೆ. ಹೀಗಾಗಿ ಆಲೋಚಿಸಿ ಸಹಾಯ ಮಾಡಿ. ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದ ಕಾರ್ಯಗಳು ಯಶಸ್ಸನ್ನು ತಂದುಕೊಡಲಿದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಉದ್ಯೋಗದ ಸ್ಥಳದಲ್ಲಿ ನಿಮಗೆ ಪ್ರಶಂಸೆ ಪ್ರೋತ್ಸಾಹ ಸಿಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 8

ಉಸಿರಾಟದ ಸಮಸ್ಯೆಗಳಿಗೆ ಈ ಕ್ಷೇತ್ರದಲ್ಲಿ ಸಿಗಲಿದೆ ಪರಿಹಾರ

Horoscope Today

ಮಕರ: ಇಂದು ನೀವು ಹಲವಾರು ಒತ್ತಡಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಬಹುದು. ಇದು ನಿಮಗೆ ಕಿರಿಕಿರಿ ಹಾಗೂ ಆತಂಕದ ಭಾವನೆಗಳನ್ನು ಉಂಟು ಮಾಡಬಹುದು. ಕುಟುಂಬದವರ ಬೆಂಬಲ ಪ್ರೋತ್ಸಾಹದಿಂದಾಗಿ ಕೊಂಚಮಟ್ಟಿಗೆ ನಿರಾಳರಾಗುವಿರಿ. ಆರೋಗ್ಯದ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುವುದು ಉತ್ತಮ. ಉದ್ಯೋಗದ ಸ್ಥಳದಲ್ಲಿ ಒತ್ತಡ ಹೆಚ್ಚಲಿದೆ. ಖರ್ಚಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕುಂಭ: ಆರೋಗ್ಯ ಪರಿಪೂರ್ಣವಾಗಿರುತ್ತದೆ. ಯಾವುದೇ ದೀರ್ಘಕಾಲೀನ ಹೂಡಿಕೆಗಳನ್ನು ದಿನದ ಮಟ್ಟಿಗೆ ಮಾಡುವುದು ಬೇಡ. ಆತುರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಸ್ನೇಹಿತರ ಜತೆ ಉತ್ತಮ ಕ್ಷಣಗಳನ್ನು ಕಳೆಯುವ ಸಾಧ್ಯತೆ ಇದೆ. ಅಗತ್ಯವಿದ್ದರೆ ಸ್ನೇಹಿತರು ನಿಮ್ಮ ನೆರವಿಗೆ ಬರುತ್ತಾರೆ. ವ್ಯಾಪಾರ – ವ್ಯವಹಾರಗಳಲ್ಲಿ ಮಧ್ಯಮ ಲಾಭ ಇರಲಿದೆ. ಉದ್ಯೋಗಿಗಳಿಗೆ ಶುಭ ಫಲವಿದ್ದರೆ, ಕೌಟುಂಬಿಕವಾಗಿ ಮಿಶ್ರಫಲ ಇರಲಿದೆ.
ಅದೃಷ್ಟ ಸಂಖ್ಯೆ: 6

ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?

Horoscope Today

ಮೀನ: ಇಂದು ನಿಮಗೆ ಹೂಡಿಕೆಯ ಲಾಭಾಂಶ ಸಿಗಲಿದೆ. ನೀವು ಯಾವುದೇ ದೊಡ್ಡ ಸಮಸ್ಯೆಯಿಂದ ಹೊರಬರಬಹುದು. ಪ್ರೀತಿ ಪಾತ್ರರೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳದಲ್ಲಿ ಭರವಸೆಯ ಹೊಸ ಅವಕಾಶಗಳು ಸಿಗಲಿವೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಅದೃಷ್ಟದ ದಿನಗಳು ಇಂದು ಫಲ ನೀಡಲಿದೆ.
ಅದೃಷ್ಟ ಸಂಖ್ಯೆ: 3

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

Continue Reading

ದೇಶ

ಜಿಮೇಲ್ ಓಪನ್ ಆಗ್ಲಿಲ್ಲ, ಅದ್ಕೆ ಜೈಲಿನಿಂದ ಬಿಡಲಿಲ್ಲ! ಹೈಕೋರ್ಟ್ ಬೇಲ್ ನೀಡಿದ್ರೂ 3 ವರ್ಷ ಜೈಲಿನಲ್ಲೇ ಉಳಿದ ಯುವಕ!

Gujarat High Court: ಗುಜರಾತ್ ಹೈಕೋರ್ಟ್ ಜಾಮೀನು ನೀಡಿದರೂ ಜೈಲು ಅಧಿಕಾರಿಗಳು ಆರೋಪಿಯನ್ನು ಮೂರು ವರ್ಷಗಳ ಕಾಲ ಜೈಲಿನಲ್ಲಿ ಉಳಿಸಿಕೊಂಡಿದ್ದೇಕೆ?

VISTARANEWS.COM


on

Edited by

Gujarat High Court
Koo

ಅಹಮದಾಬಾದ್: ಜಾಮೀನು ನೀಡಿದರೂ 3 ವರ್ಷಗಳಿಂದ ಜೈಲಿನಿಂದ ಬಿಡುಗಡೆಯಾಗದ 27 ವರ್ಷದ ಯುವಕನಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗುಜರಾತ್ ಹೈಕೋರ್ಟ್(Gujarat High Court), ಗುಜರಾತ್ ರಾಜ್ಯ ಸರ್ಕಾರಕ್ಕೆ (Gujarat State Government) ಬುಧವಾರ ಆದೇಶಿಸಿದೆ. 2020ರಲ್ಲಿ ಗುಜರಾತ್ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ, ಜೈಲು ಅಧಿಕಾರಿಗಳ (Jail Officials) ನಿರ್ಲಕ್ಷ್ಯದಿಂದಾಗಿ ಯುವಕ ಆಲ್ಮೋಸ್ಟ್ 3 ವರ್ಷಗಳವರೆಗೆ ಜೈಲಿನಲ್ಲಿ ಕೊಳೆಯುವಂತಾಯಿತು. ಅಲ್ಲದೇ, ಜೈಲು ಅಧಿಕಾರಿಗಳು ಕೊಟ್ಟಿರುವ ಕಾರಣ ಕೂಡ ವಿಚಿತ್ರವಾಗಿದೆ. ಜಿಮೇಲ್ ತೆರೆಯಲು (Gmail) ಸಾಧ್ಯವಾಗದ್ದಕ್ಕೆ ಜೈಲಿನಿಂದ ಬಿಡುಗಡೆ ಸಾಧ್ಯವಾಗಿಲ್ಲ ಎಂದು ಸಬೂಬು ಹೇಳಿರುವುದು ಅಪಹಾಸ್ಯಕ್ಕೆ ಕಾರಣವಾಗಿದೆ.

ಜಾಮೀನು ಆದೇಶವನ್ನು 2020ರ ಸೆಪ್ಟೆಂಬರ್ 29ರಂದು ನೀಡಲಾಯಿತು. ಆದರೆ ನಿನ್ನೆ, 2023ರ ಸೆಪ್ಟೆಂಬರ್ 21ರಂದು ಅಂತಿಮವಾಗಿ ಅಪರಾಧಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎಎಸ್ ಸುಪೇಹಿಯಾ ಮತ್ತು ಎಂಆರ್ ಮೆಂಗ್ಡೆ ಅವರ ಪೀಠವು 35 ಪುಟಗಳ ಆದೇಶದಲ್ಲಿ ತಿಳಿಸಿದೆ. ಕಾರಾಗೃಹ ಅನುಭವಿಸುತ್ತಿದ್ದ 27 ವರ್ಷದ ಚಂದನ್‌ಜಿ ಠಾಕೂರ್ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಪೀಠವು ಈ ಆದೇಶವನ್ನು ನೀಡಿದೆ.

ಜೈಲು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೈಕೋರ್ಟ್ ಆದೇಶದ ಹೊರತಾಗಿಯೂ ಜೈಲಿನಲ್ಲಿಯೇ ಉಳಿದಿರುವ ಅರ್ಜಿದಾರರ ದುರವಸ್ಥೆಯನ್ನು ಪರಿಗಣಿಸಿ, ಸುಮಾರು ಮೂರು ವರ್ಷಗಳ ಕಾಲ ಅಕ್ರಮವಾಗಿ ಜೈಲಿನಲ್ಲಿದ್ದಕ್ಕಾಗಿ ಪರಿಹಾರವನ್ನು ನೀಡಲು ನಾವು ಒಲವು ತೋರಿದ್ದೇವೆ. ಅರ್ಜಿದಾರರನ್ನು ಸಾಮಾನ್ಯ ಜಾಮೀನಿನ ಮೇಲೆ ಬಿಡುಗಡೆ ಮಾಡುವ ಈ ನ್ಯಾಯಾಲಯವು ಸೆಪ್ಟೆಂಬರ್ 2020 ರ ಜಾಮೀನು ಆದೇಶದ ಬಗ್ಗೆ ಹೈಕೋರ್ಟ್‌ನ ನೋಂದಾವಣೆ ಜೈಲು ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದೆ. ಜೈಲು ಅಧಿಕಾರಿಗಳಿಗೆ ಆದೇಶದ ಇ-ಮೇಲ್ ಬಂದಿಲ್ಲ ಎಂಬುದು ನಿಜವಲ್ಲ.ಅವರು ಇ-ಮೇಲ್ ಸ್ವೀಕರಿಸಿದ್ದರೂ, ಅಟ್ಯಾಚ್‌ಮೆಂಟ್ ಓಪನ್ ಮಾಡಲು ಸಾಧ್ಯವಾಗಿಲ್ಲ ಎಂದು ಕೋರ್ಟ್ ಹೇಳಿದೆ.

ಈ ಸುದ್ದಿಯನ್ನೂ ಓದಿ: Congress Guarantee : ಗೃಹಲಕ್ಷ್ಮಿ, ಗೃಹಜ್ಯೋತಿ ಜಾಹೀರಾತಿನಲ್ಲಿ ಸಿಎಂ, ಡಿಸಿಎಂ ಫೋಟೊ ಬಳಕೆ ಪ್ರಶ್ನಿಸಿದ ಅರ್ಜಿ ವಜಾ

ಜಾಮೀನು ಆದೇಶವನ್ನು ಒಳಗೊಂಡಿರುವ ಇಮೇಲ್ ಅನ್ನು ಮೆಹ್ಸಾನಾದ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಆದೇಶದ ಸರಿಯಾದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಯಾವುದೇ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿಲ್ಲ. ದುರದೃಷ್ಟವಶಾತ್, ನಿನ್ನೆಯವರೆಗೆ ಈ ವಿಷಯದ ಬಗ್ಗೆ ಯಾರೂ ತಲೆಯೇ ಕೆಡಿಸಿಕೊಂಡಿಲ್ಲ. ಆದ್ದರಿಂದ, ನ್ಯಾಯದ ಹಿತದೃಷ್ಟಿಯಿಂದ ಮತ್ತು ಜೈಲು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅರ್ಜಿದಾರರು ಜೈಲಿನಲ್ಲಿ ಉಳಿಯುಂತಾಯಿತು. ಹಾಗಾಗಿ ಅವರಿಗೆ 1 ಲಕ್ಷ ರೂ. ಪರಿಹಾರವನ್ನು ನೀಡುವಂತೆ ರಾಜ್ಯಕ್ಕೆ ನಿರ್ದೇಶಿಸುತ್ತಿದ್ದೇವೆ. ಲಕ್ಷ. 14 ದಿನಗಳ ಅವಧಿಯೊಳಗೆ ಪಾವತಿಸಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಜೈಲು ದಾಖಲೆಗಳ ಪ್ರಕಾರ, ಅರ್ಜಿದಾರರು ಈಗಾಗಲೇ ಐದು ವರ್ಷಗಳಿಗಿಂತ ಹೆಚ್ಚು ಅವಧಿಯನ್ನು ಜೈಲಿನಲ್ಲಿ ಕಳೆದಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
Kiran Bedi tihar jail
ಅಂಕಣ8 mins ago

Raja Marga Column : ಕಿರಣ್‌ ಬೇಡಿ IPS ; ವರ್ಷ 74 ಆದರೂ ಇಂದಿಗೂ ಅವರು ಯೂತ್ ಐಕಾನ್!

castor oil
ಆರೋಗ್ಯ22 mins ago

Hair Care Tips: ಹರಳೆಣ್ಣೆಯನ್ನು ಹೇಗೆ ಬಳಸುವ ಮೂಲಕ ಉದ್ದವಾದ ಕಪ್ಪುಗೂದಲು ಪಡೆಯಬಹುದು ಗೊತ್ತೇ?

Vistara Editorial, Indian Government must act against Khalistani Terrorists
ದೇಶ1 hour ago

ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಭಯೋತ್ಪಾದಕರ ಹೆಡೆಮುರಿ ಕಟ್ಟಲೇಬೇಕಿದೆ

dina bhavishya September 27
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರಿಗೆ ಇಂದು ಕಿರಿಕಿರಿ, ಆತಂಕದ ಭಾವವೇ ಹೆಚ್ಚು; ಸ್ವಲ್ಪ ಎಚ್ಚರವಹಿಸಿ!

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

S somanath and HD DeveGowda
ಕರ್ನಾಟಕ7 hours ago

Honorary Doctorate: ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌, ಎಚ್‌.ಡಿ ದೇವೇಗೌಡರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್‌

Gujarat High Court
ದೇಶ7 hours ago

ಜಿಮೇಲ್ ಓಪನ್ ಆಗ್ಲಿಲ್ಲ, ಅದ್ಕೆ ಜೈಲಿನಿಂದ ಬಿಡಲಿಲ್ಲ! ಹೈಕೋರ್ಟ್ ಬೇಲ್ ನೀಡಿದ್ರೂ 3 ವರ್ಷ ಜೈಲಿನಲ್ಲೇ ಉಳಿದ ಯುವಕ!

World culture fest
ಕಲೆ/ಸಾಹಿತ್ಯ8 hours ago

World Culture Festival: ಸೆ.29ರಿಂದ ವಾಷಿಂಗ್ಟನ್‌ನಲ್ಲಿ ಸಾಂಸ್ಕೃತಿಕ ಒಲಿಂಪಿಕ್ಸ್; ಶ್ರೀ ರವಿಶಂಕರ್ ಗುರೂಜಿ ಮುಂದಾಳತ್ವ

credit cards
ದೇಶ8 hours ago

Flipkart, Amazon Sale: ಹಬ್ಬದ ಸೀಸನ್‌ ಆನ್‌ಲೈನ್ ಖರೀದಿ, ಕ್ರೆಡಿಟ್‌ ಕಾರ್ಡ್‌ದಾರರು ತಿಳಿದುಕೊಳ್ಳಬೇಕಾದ ಸಂಗತಿಗಳು

virat kohli dance
ಕ್ರಿಕೆಟ್8 hours ago

Viral Video: ಬ್ರೇಕ್​ ಪಡೆದ ಆಸೀಸ್​ ಆಟಗಾರರ ಮುಂದೆ ಬ್ರೇಕ್​ ಡ್ಯಾನ್ಸ್​ ಮಾಡಿದ ವಿರಾಟ್​ ಕೊಹ್ಲಿ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

bangalore bandh
ಕರ್ನಾಟಕ2 days ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

dina bhavishya
ಪ್ರಮುಖ ಸುದ್ದಿ1 day ago

Dina Bhavishya : ನಿಮಗೆ ಆಗದವರು ಪಿತೂರಿ ಮಾಡ್ಬಹುದು ಎಚ್ಚರ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ3 days ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ3 days ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ3 days ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ3 days ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ4 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

ಟ್ರೆಂಡಿಂಗ್‌