Harshika Poonacha : ಹರ್ಷಿಕಾ ಪೂಣಚ್ಚಗೆ ಮದುವೆಗೆ ಮುನ್ನವೇ ಭರ್ಜರಿ ಗಿಫ್ಟ್‌; ಜಯಮಾಲಾಗೆ ಚಿಟ್ಟೆ ಮೇಲೆ ಯಾಕಿಷ್ಟು ಪ್ರೀತಿ? - Vistara News

Latest

Harshika Poonacha : ಹರ್ಷಿಕಾ ಪೂಣಚ್ಚಗೆ ಮದುವೆಗೆ ಮುನ್ನವೇ ಭರ್ಜರಿ ಗಿಫ್ಟ್‌; ಜಯಮಾಲಾಗೆ ಚಿಟ್ಟೆ ಮೇಲೆ ಯಾಕಿಷ್ಟು ಪ್ರೀತಿ?

Harshika Poonacha : ಖ್ಯಾತ ನಟಿ ಜಯಮಾಲಾ ಅವರು ಆಮಂತ್ರಣ ಕೊಡಲು ಬಂದ ಹರ್ಷಿಕಾ ಪೂಣಚ್ಚಗೆ ಕಿವಿಯೋಲೆ ಉಡುಗೊರೆ ಕೊಟ್ಟಿದ್ದಾರೆ. ಹಾಗಿದ್ದರೆ ಜಯಮಾಲಾಗೆ ಹರ್ಷಿಕಾ ಮೇಲೆ ಇಷ್ಟೊಂದು ಪ್ರೀತೀನಾ? ಈ ವರದಿ ನೋಡಿ

VISTARANEWS.COM


on

Harshika poonacha Marriage gift
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕ್ಯೂಟ್‌ ಜೋಡಿ ಹರ್ಷಿಕಾ ಪೂಣಚ್ಚ (Harshika poonacha) ಮತ್ತು ಭುವನ್‌ ಪೊನ್ನಪ್ಪ (Bhuvan Ponnappa) ಅವರು ಹಸೆಮಣೆ ಏರಲಿರುವ ಮುಹೂರ್ತ ಹತ್ತಿರವಾಗುತ್ತಿದೆ. ಆಗಸ್ಟ್‌ 24ರಂದು ವಿರಾಜಪೇಟೆಯ ‘ಅಮ್ಮತಿ ಕೊಡವ ಸಮಾಜ’ದ ಸಭಾಂಗಣದಲ್ಲಿ ಈ ಸ್ಟಾರ್‌ ಜೋಡಿಯ ಮದುವೆ (Harshika Poonacha Bhuvan Ponnappa Marriage) ಕೊಡವ ಶೈಲಿಯಲ್ಲಿ ಅದ್ಧೂರಿಯಾಗಿ (Marriage in Kodava style) ನಡೆಯಲಿದೆ. ಆವತ್ತು ಸ್ನೇಹಿತರು, ಬಂಧುಗಳು, ಅಭಿಮಾನಿಗಳು ಅವರಿಗೆ ಉಡುಗೊರೆ ಕೊಡಲು, ಜೋಡಿಯ ಚೆಲುವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಮದುವೆಗೆ ಮೊದಲೇ ಹರ್ಷಿಕಾ ಪೂಣಚ್ಚಗೆ ಒಂದು ಭರ್ಜರಿ ಉಡುಗೊರೆ (Harshika got best gift) ಸಿಕ್ಕಿದೆ.

ಈ ಭರ್ಜರಿ ಗಿಫ್ಟ್‌ ಕೊಟ್ಟಿದ್ದು ಬೇರೆ ಯಾರೂ ಅಲ್ಲ, ಕನ್ನಡದ ಖ್ಯಾತ ಅಭಿನೇತ್ರಿ ಜಯಮಾಲಾ (Actress Jayamala) ಅವರು. ನಾಯಕಿ ನಟಿಯಾಗಿ ಗಮನ ಸೆಳೆದಿದ್ದಲ್ಲದೆ, ರಾಜಕಾರಣಿಯಾಗಿ, ರಾಜ್ಯದ ಸಚಿವೆಯಾಗಿಯೂ ಗಮನ ಸೆಳೆದ ನಟಿ ಜಯಮಾಲಾ ಅವರು ಹರ್ಷಿಕಾಗೆ ವಿಶೇಷ ಗಿಫ್ಟ್‌ ಕೊಟ್ಟಿದ್ದಾರೆ.

Harshika Jayamala

ಹರ್ಷಿಕಾ ಪೂಣಚ್ಚ ಮತ್ತು ಭುವನ್‌ ಪೊನ್ನಪ್ಪ ಜೋಡಿ ತಮ್ಮ ದೀರ್ಘ ಕಾಲದ ಸ್ನೇಹಕ್ಕೆ, ಪ್ರೀತಿಯ ತಿರುವು ನೀಡಿ ಇದೀಗ ಮದುವೆಯ ಸಂಭ್ರಮಕ್ಕೆ ಅಣಿಯಾಗಿದ್ದಾರೆ. ಈ ಖುಷಿಯ ಕ್ಷಣದಲ್ಲಿ ನೀವು ಬಂದು ಹರಸಬೇಕು ಎಂದು ಸಿನಿಮಾ ತಾರೆಯರಿಗೆ, ರಾಜಕಾರಣಿಗಳಿಗೆ ಪ್ರೀತಿಯ ಆಹ್ವಾನ ನೀಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳಾ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ.ಎಸ್‌. ಯಡಿಯೂರಪ್ಪ ಅವರ ಮನೆಗೆ ಹೋಗಿ ಆಮಂತ್ರಣ ನೀಡಲಾಗಿದೆ. ಎಲ್ಲ ನಾಯಕರು ಈ ಸುಂದರ ಜೋಡಿಗೆ ಶುಭಾಶಯ ಕೋರಿ ಹರಸಿದೆ.

Harshika Poonacha Jayamala

ಶಿವರಾಜ್ ಕುಮಾರ್, ರವಿಚಂದ್ರನ್, ಅಶ್ವಿನಿ ಪುನೀತ್ ರಾಜ್‌ಕುಮಾರ್‌, ಗಣೇಶ್ , ದೊಡ್ಡಣ್ಣ, ಶ್ರೀನಾಥ್, ಸುಧಾರಾಣಿ, ತಾರಾ, ಮಾಲಾಶ್ರೀ, ಅನುಪ್ರಭಾಕರ್, ಅಮೂಲ್ಯ, ದಿಗಂತ್ ಸೇರಿದಂತೆ ಹಲವರಿಗೆ ಖುದ್ದಾಗಿ ಆಮಂತ್ರಣ ತಲುಪಿಸಿ ಪ್ರೀತಿಯ ಅಪ್ಪುಗೆಯನ್ನು ಸ್ವೀಕರಿಸಿದೆ ಈ ಜೋಡಿ.

ಇದನ್ನೂ ಓದಿ: Harshika Poonacha: ಯಾರಿಗೆಲ್ಲ ವಿವಾಹ ಆಮಂತ್ರಣ ನೀಡಿದ್ರು ಹರ್ಷಿಕಾ-ಭುವನ್?

ಅಂತೆಯೇ ಭುವನ್‌ ಮತ್ತು ಹರ್ಷಿಕಾ ಅವರು ಖ್ಯಾತ ನಟಿ ಜಯಮಾಲಾ ಅವರ ಮನೆಗೂ ಹೋಗಿದ್ದಾರೆ. ಅಲ್ಲಿ ಅವರಿಗೆ ಅಚ್ಚರಿಯೊಂದು ಕಾದಿತ್ತು.

Harshika Jayamala
ನೋವಾಯ್ತಾ ಮಗು…

ಜಯಮಾಲಾ ಅವರು ಯಾವತ್ತೂ ಹಾಗೆಯೇ. ಕಂಡೊಡನೆ ಆತ್ಮೀಯವಾಗಿ ಆದರಿಸುವ ಸ್ವಭಾವದವರು. ಬಾಯಿ ತುಂಬ ಮಾತು. ಹೀಗೆ ಭುವನ್‌ ಮತ್ತು ಹರ್ಷಿಕಾ ಅವರು ಮದುವೆಯ ಆಮಂತ್ರಣ ಕೊಡಲು ಹೋದಾಗೂ ಜನ್ಮಾಂತರದ ಬಂಧುಗಳೆಂಬಂತೆ ಕರೆದು ಆಧರಿಸಿ ಸತ್ಕರಿಸಿದ್ದಾರೆ. ಹರ್ಷಿಕಾರನ್ನಂತೂ ಮಗುವಿನಂತೆ ಅವಚಿ ಹಿಡಿದು ಖುಷಿಪಟ್ಟಿದ್ದಾರೆ. ಭುವನ್‌ ಮತ್ತು ಹರ್ಷಿಕಾ ಕೂಡಾ ಪ್ರೀತಿಯಿಂದ ಅಮ್ಮನಂತೆ ತಬ್ಬಿ ಖುಷಿಪಟ್ಟಿದ್ದಾರೆ.

ಇದೆಲ್ಲದರ ನಡುವೆ ಜಯಮಾಲಾ ಅವರು ಆಹ್ವಾನ ಪತ್ರಿಕೆ ನೀಡಿದ ಹರ್ಷಿಕಾಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ವಿಶೇಷ ಉಡುಗೊರೆ ಕೊಟ್ಟು ಆಶೀರ್ವದಿಸಿದ್ದು ಮಾತ್ರವಲ್ಲ ತಾವೇ ಕೈಯಾರೆ ತೊಡಿಸಿ ಸಂಭ್ರಮಿಸಿದ್ದಾರೆ.

ಜಯಮಾಲಾ ಅವರು ಹರ್ಷಿಕಾ ಪೂಣಚ್ಚಗೆ ಕೊಟ್ಟಿದ್ದು ಚಿನ್ನದ ಓಲೆ. ಕಿವಿಯ ಓಲೆಗಳನ್ನು ಪಕ್ಕದಲ್ಲಿ ಮಗಳಂತೆ ಕೂರಿಸಿಕೊಂಡು ಕೈಯಾರೆ ಅದನ್ನು ತೊಡಿಸಿ ಖುಷಿಪಟ್ಟರು.

ಚಿನ್ನದ ಕಿವಿಯೋಲೆ ತೊಡಿಸಿ, ಸರಿಯಾಯ್ತಾ ಅಂತ ನೋಡಿದ ಜಯಮಾಲಾ ಅವರು ಮುತ್ತಿಕ್ಕಿ ಮುದ್ದು ಮಾಡಿದರು. ಇದಕ್ಕೆ ಪ್ರತಿಯಾಗಿ ಹರ್ಷಿಕಾ ಪೂಣಚ್ಚ ಕೂಡಾ ಖುಷಿಯಿಂದ ಮುತ್ತು ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಜಯಮಾಲಾ ಅವತ ಪುತ್ರಿ ಸೌಂದರ್ಯ ಕೂಡಾ ಜತೆಗಿದ್ದು ಈ ಜಯಮಾಲಾ- ಹರ್ಷಿಕಾ ಅವರ ಖುಷಿಯ ಕ್ಷಣಗಳಿಗೆ ಸಾಕ್ಷಿಯಾದರು.

Harshika poonacha and Jayamala
ಭುವನ್‌ ಪೊನ್ನಪ್ಪ, ಹರ್ಷಿಕಾ ಜೋಡಿಗೆ ಜಯಮಾಲಾ ಆಶೀರ್ವಾದ. ಸೌಂದರ್ಯ ಜಯಮಾಲಾ ಜತೆಗಿದ್ದಾರೆ.

ಇದನ್ನೂ ಓದಿ: Harshika Poonacha: ಮದುವೆಗೂ ಮುಂಚೆ ಗುಡ್‌ ನ್ಯೂಸ್‌ ಕೊಟ್ಟ ಹರ್ಷಿಕಾ- ಭುವನ್ ಜೋಡಿ!

ಈ ನಡುವೆ ಜಯಮಾಲಾ ಅವರು ಹರ್ಷಿಕಾಗೆ ಅಷ್ಟೊಂದು ಪ್ರೀತಿಯಿಂದ ಕಿವಿಯೋಲೆ ಉಡುಗೊರೆ ಕೊಡಲು ಕಾರಣವೇನು? ಮೊದಲೇ ತಂದು ಇಟ್ಟುಕೊಂಡಿದ್ದಾರೆ ಎಂದರೆ ಏನಾದರೂ ಕಾರಣ ಇರಲೇಬೇಕಲ್ಲ ಎಂಬ ಚರ್ಚೆ ಹುಟ್ಟಿಕೊಂಡಿದೆ. ತುಂಬ ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲೆ ಬಂದಿರುವ ಜಯಮಾಲಾ ಅವರು ಹೆಣ್ಣು ಮಕ್ಕಳ ಸಬಲತೆಯ ಪರವಾಗಿ ವಾದ ಮಾಡುವ ಗಟ್ಟಿಗಿತ್ತಿ. ಹೀಗಾಗಿ ಚಿತ್ರರಂಗದಲ್ಲಿ ಸಾಧನೆ ಮಾಡುವ ಹೆಣ್ಮಕ್ಕಳ ಬಗ್ಗೆ ಅವರು ಅಕ್ಕರೆ ಇಟ್ಟುಕೊಂಡಿದ್ದಾರೆ. ಅದರಲ್ಲಿ ಚಿಟ್ಟೆ ಹರ್ಷಿಕಾ ಪೂಣಚ್ಚ ಅವರೂ ಒಬ್ಬರು. ಹೀಗಾಗಿ ತುಂಬ ಖುಷಿಯಿಂದ ಉಡುಗೊರೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Latest

IIT Bombay: ಹಿಂದೂ ದೇವರ ಅವಹೇಳನಕಾರಿ ನಾಟಕ; ಐಐಟಿ ವಿದ್ಯಾರ್ಥಿಗಳಿಗೆ ದಂಡ

IIT Bombay: ಧರ್ಮ ಹಾಗೂ ದೇವರುಗಳ ವಿಷಯ ತುಂಬಾ ಸೂಕ್ಷ್ಮವಾದದ್ದು. ಇದನನು ಕೆದಕಿದರೆ ದೇಶದಲ್ಲಿನ ಶಾಂತಿ ಕದಡಿದ ಹಾಗೆ.ಅದರಲ್ಲೂ ದೇಶದ ಪ್ರಜೆಗಳಾದ ವಿದ್ಯಾರ್ಥಿಗಳು ಈ ವಿಷಯದ ಕುರಿತು ಹೆಚ್ಚಿನ ನಿಗಾವಹಿಸಬೇಕು. ಐಐಟಿ ಬಾಂಬೆಯ ಬಯಲು ರಂಗಮಂದಿರದಲ್ಲಿ ನಡೆದ ಇನ್ ಸ್ಟಿಟ್ಯೂಟ್ ನ ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್ ನಲ್ಲಿ “ರಾಹೋವನ್” ಶೀರ್ಷಿಕೆಯ ನಾಟಕವಾಡಿದ ವಿದ್ಯಾರ್ಥಿಗಳು ಇದರಲ್ಲಿ ಹಿಂದೂ ಧರ್ಮಕ್ಕೆ ಅಗೌರವ ತೋರಿದಲ್ಲದೇ ರಾಮ ಮತ್ತು ಸೀತೆಯನ್ನು ಅವಹೇಳನ ಮಾಡಿದ್ದರು. ಇದಕ್ಕೆ ತೀವ್ರವಾದ ವಿರೋಧ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಐಐಟಿ ವಿದ್ಯಾರ್ಥಿಗಳಿಗೆ ದಂಡ ವಿಧಿಸಿದೆ.

VISTARANEWS.COM


on

IIT Bombay
Koo

ಮುಂಬೈ : ರಾಮ ಮತ್ತು ಸೀತೆ ಹಿಂದೂ(Hindu)ಗಳ ಆರಾಧ್ಯ ದೇವರು. ಹಾಗಾಗಿ ಈ ದೇವರ ಹೆಸರಿಗೆ ಅವಮಾನ ಮಾಡಿದರೆ ಯಾರೂ ಸುಮ್ಮನೆ ಇರುವುದಿಲ್ಲ. ಆದರೆ ಇದೀಗ ಐಐಟಿ ಬಾಂಬೆಯಲ್ಲಿ (IIT Bombay) ಹಿಂದೂ ದೇವರಿಗೆ ಅವಹೇಳನ ಮಾಡುವಂತಹ ನಾಟಕವಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ (Student) ದಂಡ ವಿಧಿಸಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಬಾಂಬೆಯ ಬಯಲು ರಂಗಮಂದಿರದಲ್ಲಿ ಈ ವರ್ಷ ಮಾರ್ಚ್ 31ರಂದು ನಡೆದ ಇನ್‌ಸ್ಟಿಟ್ಯೂಟ್‌ನ ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್‌ನಲ್ಲಿ “ರಾಹೋವನ್” ಶೀರ್ಷಿಕೆಯ ನಾಟಕದಲ್ಲಿ ವಿದ್ಯಾರ್ಥಿಗಳು ರಾಮಾಯಣದ ಕಥಾ ಹಂದರವನ್ನು ಹೊಂದಿರುವ ನಾಟಕವಾಡಿದ್ದರು. ಇದರಲ್ಲಿ ಹಿಂದೂ ಧರ್ಮಕ್ಕೆ ಅಗೌರವ ತೋರಿದಲ್ಲದೇ ರಾಮ ಮತ್ತು ಸೀತೆಯನ್ನು ಅವಹೇಳನ ಮಾಡಿದ್ದರು.

ಈ ನಾಟಕವನ್ನು ವಿರೋಧಿಸಿ ಕಾಲೇಜಿನ ಒಂದು ವಿಭಾಗ ಪ್ರತಿಭಟನೆ ಮಾಡಿತ್ತು. ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್‌ನಲ್ಲಿನ ‘ಐಐಟಿ ಬಿ ಫಾರ್ ಭಾರತ್’ ಹ್ಯಾಂಡಲ್‌ನಲ್ಲಿ ಈ ನಾಟಕವನ್ನು ಖಂಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಐಐಟಿ ವಿದ್ಯಾರ್ಥಿಯೊಬ್ಬನಿಗೆ 1.2 ಲಕ್ಷ ರೂ. ದಂಡ ವಿಧಿಸಿದೆ. ಇತರ ಏಳು ವಿದ್ಯಾರ್ಥಿಗಳಿಗೆ ತಲಾ 40,000 ರೂ. ದಂಡ ವಿಧಿಸಲಾಗಿದೆ.

ಇದನ್ನೂ ಓದಿ: Murder Case: ಅಶ್ಲೀಲ ವಿಡಿಯೊ ಚಟ; ಮಗಳನ್ನೇ ಲೈಂಗಿಕಕ್ರಿಯೆಗೆ ಒತ್ತಾಯಿಸಿ ಕೊಂದ ಪಾಪಿ ತಂದೆ

ಅಲ್ಲದೇ ನಾಟಕಕ್ಕೆ ಸಂಬಂಧಿಸಿದ ದೂರುಗಳ ಪರಿಹಾರಕ್ಕೆ ಶಿಸ್ತು ಸಭೆ ಕರೆದ ಐಐಟಿ ಅಲ್ಲಿನ ಚರ್ಚೆಗಳ ಆಧಾರದ ಮೇಲೆ ಶಿಕ್ಷಾರ್ಹ ಕ್ರಮಗಳನ್ನು ಶಿಫಾರಸು ಮಾಡಿದೆ. ಅದರಂತೆ ಜುಲೈ 20, 2024ರಂದು ವಿದ್ಯಾರ್ಥಿ ವ್ಯವಹಾರ ಡೀನ್ ಕಚೇರಿ ಯಲ್ಲಿ ರೂ. 1.2ಲಕ್ಷ ದಂಡವನ್ನು ಪಾವತಿಸಬೇಕಾಗಿ ಹೇಳಿದೆ. ಮತ್ತು ಸಂಸ್ಥೆಯ ಜಿಮ್ಖಾನಾ ಪ್ರಶಸ್ತಿಗಳಿಂದ ಯಾವುದೇ ಮಾನ್ಯತೆ ಪಡೆಯದಂತೆ ನಿರ್ಬಂಧ ಹೇರಿದರೆ ಕಿರಿಯ ಏಳು ವಿದ್ಯಾರ್ಥಿಗಳಿಗೆ 40,000 ದಂಡದ ಜೊತೆಗೆ ಹಾಸ್ಟೆಲ್ ಸೌಲಭ್ಯದಿಂದ ಅಮಾನತುಗೊಳಿಸಲಾಗಿದೆ. ಒಂದು ವೇಳೆ ದಂಡವನ್ನು ತಪ್ಪಿಸಿದರೆ ಮತ್ತಷ್ಟು ನಿರ್ಬಂಧಕ್ಕೆ ಒಳಪಡಿಸುವುದಾಗಿ ತಿಳಿಸಿದೆ.

Continue Reading

Latest

Genitals Removed Case: ಮಲಗುವಾಗ ಗಂಡಾಗಿದ್ದ, ಎದ್ದಾಗ ಹೆಣ್ಣಾಗಿದ್ದ! ಬಲವಂತದಿಂದ ಲಿಂಗ ಪರಿವರ್ತನೆ

Genitals Removed Case ಕಾಲ ಕೆಟ್ಟೋಗಿದೆ ಎಂದು ಆಗಾಗ ಹಿರಿಯರು ಹೇಳುತ್ತಿರುವ ಮಾತು ಈಗ ನಿಜವಾಗುತ್ತಿದೆ. ಈ ಕಾಲದಲ್ಲಿ ಯಾರನ್ನೂ ನಂಬದೇ ಇರುವಂತಹ ಪರಿಸ್ಥಿತಿ ಉಂಟಾಗಿದೆ. ಉತ್ತರ ಪ್ರದೇಶದ ಮುಜಾಹಿದ್ ಎಂಬ ಯುವಕನೊಬ್ಬನ ರಾತ್ರಿ ಬೆಳಗಾಗುವುದರೊಳಗೆ ಯುವತಿ ಆಗಿದ್ದಾನೆ. ಏನಿದು ಹುಚ್ಚಾಟ ಏನಿಸಬಹುದು ಆದರೆ ನಿಜ! ಈತನ ಪರಿಚಯದ ವ್ಯಕ್ತಿಯೊಬ್ಬ ಸ್ಥಳೀಯ ವೈದ್ಯಕೀಯ ಕಾಲೇಜಿನ ವೈದ್ಯರೊಂದಿಗೆ ಸೇರಿಕೊಂಡು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಮೋಸ ಮಾಡಿದ್ದಾನೆ.. ಹಾಗಾಗಿ ಈ ಪ್ರಕರಣದ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

VISTARANEWS.COM


on

Genitals Removed Case
Koo

ಮಲಗುವಾಗ ಪುರುಷನಾಗಿದ್ದ ವ್ಯಕ್ತಿ ನಿದ್ರೆಯಿಂದ ಎಚ್ಚರವಾಗುವಷ್ಟರಲ್ಲಿ ಮಹಿಳೆ(woman)ಯಾಗಿ ಬದಲಾದರೆ? ಈ ರೀತಿ ಲಿಂಗ ಬದಲಾಣೆಯಾದ (Genitals Removed Case) ಘಟನೆ ಇದೀಗ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮುಜಾಹಿದ್ ಎಂಬ 20 ವರ್ಷದ ಯುವಕ ಇಂತಹ ಘೋರ ಕೃತ್ಯಕ್ಕೆ ಒಳಗಾದ ವ್ಯಕ್ತಿ. ಈತನಿಗೆ ವ್ಯಕ್ತಿಯೊಬ್ಬ ಉತ್ತರ ಪ್ರದೇಶದ ಮುಜಾಫರ್ ನಗರದ ಸ್ಥಳೀಯ ವೈದ್ಯಕೀಯ ಕಾಲೇಜಿನ ವೈದ್ಯರೊಂದಿಗೆ ಸೇರಿಕೊಂಡು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಮೋಸ ಮಾಡಿದ್ದಾನೆ. ಇದು ಆತನ ಜೀವನಕ್ಕೊಂದು ಭಯಾನಕ ತಿರುವು ನೀಡಿದಂತಾಗಿದೆ. ಈ ಪ್ರಕರಣದ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈ ಭಯಾನಕ ಕೃತ್ಯದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಯೂನಿಯನ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಮುಜಾಹಿದ್ ಸಂಜಕ್ ಗ್ರಾಮದ ವ್ಯಕ್ತಿಯಾಗಿದ್ದ. ಓಂಪ್ರಕಾಶ್ ಎಂಬ ವ್ಯಕ್ತಿ ಮನ್ಸೂರ್ ಪುರದ ಬೇಗ್ರಾಜ್‌ಪುರ ವೈದ್ಯಕೀಯ ಕಾಲೇಜಿನ ವೈದ್ಯರಿಗೆ ಮುಜಾಹಿದ್‌ಗೆ ಶಸ್ತ್ರಚಿಕಿತ್ಸೆ ಮಾಡುವಂತೆ ಹೇಳಿದ್ದಾನೆ. ಆತನ ಮಾತು ಕೇಳಿ ವೈದ್ಯರು ಮುಜಾಹಿದ್‌ನ ಜನನಾಂಗವನ್ನು ತೆಗೆದುಹಾಕಿ ಬಲವಂತವಾಗಿ ಲಿಂಗ ಬದಲಾವಣೆ ಮಾಡಿದ್ದಾರೆ.

ಮುಜಾಹಿದ್ ಗೆ ವೈದ್ಯಕೀಯ ಸಮಸ್ಯೆ ಇದೆ. ಹಾಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಕಳೆದ ಎರಡು ವರ್ಷಗಳಿಂದ ಓಂಪ್ರಕಾಶ್ ಕಿರುಕುಳ ನೀಡುತ್ತಿದ್ದ. ತನ್ನನ್ನು ಆಸ್ಪತ್ರೆಗೆ ಕರೆತಂದು ನಂತರ ಅರವಳಿಕೆ ಇಂಜೆಕ್ಷನ್ ನೀಡಿ ಲಿಂಗ ಬದಲಾವಣೆಯ ಸರ್ಜರಿ ಮಾಡಿದ್ದಾರೆ ಎಂದು ಮುಜಾಹಿದ್ ಆರೋಪಿಸಿದ್ದಾನೆ. ಅಷ್ಟೇ ಅಲ್ಲದೇ ಇನ್ನು ಮುಂದೆ ತನ್ನ ಕುಟುಂಬದವರು ತನ್ನನ್ನು ಸ್ವೀಕರಿಸುವುದಿಲ್ಲ. ಹಾಗಾಗಿ ತನ್ನ ಜೊತೆ ಇರುವಂತೆ , ತನ್ನನ್ನೇ ಮದುವೆಯಾಗುವಂತೆ ಓಂಪ್ರಕಾಶ್ ಬೆದರಿಕೆ ಹಾಕಿರುವುದಾಗಿ ಮುಜಾಹಿದ್ ತಿಳಿಸಿದ್ದಾನೆ.

ಈ ಬಗ್ಗೆ ರೈತ ಮುಖಂಡರು, ಕಿಸಾನ್‌ ಸಂಘದ ಕಾರ್ಯಕರ್ತರು ವೈದ್ಯಕೀಯ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಲ್ಲಿ ನಡೆಯುವ ಮಾನವ ಅಂಗಗಳ ಕಳ್ಳಸಾಗಾಣಿಕೆಯಂತಹ ದುಷ್ಕೃತ್ಯಗಳನ್ನು ನಿಲ್ಲಿಸಬೇಕು. ಅದಕ್ಕಾಗಿ ಓಂಪ್ರಕಾಶ್ ಮತ್ತು ವೈದ್ಯಕೀಯ ಕಾಲೇಜಿನ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಮುಜಾಹಿದ್ ಗೆ ಕನಿಷ್ಠ 2 ಕೋಟಿ ಪರಿಹಾರ ನೀಡಬೇಕೆಂದು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಅಶ್ಲೀಲ ವಿಡಿಯೊ ಚಟ; ಮಗಳನ್ನೇ ಲೈಂಗಿಕಕ್ರಿಯೆಗೆ ಒತ್ತಾಯಿಸಿ ಕೊಂದ ಪಾಪಿ ತಂದೆ

ಈ ಬಗ್ಗೆ ಮುಜಾಹಿದ್ ಪೊಲೀಸರಿಗೆ ದೂರು ನೀಡಿದ ಕಾರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓಂಪ್ರಕಾಶ್ ನನ್ನು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Continue Reading

Latest

Working Hours: ಅತಿ ಹೆಚ್ಚು ಕೆಲಸದ ಸಮಯ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

Working Hours: ಜೀವನ ನಡೆಸುವುದು ಸುಲಭದ ಮಾತಲ್ಲ. ಮನೆಸಾಲ, ಆಸ್ಪತ್ರೆ ಖರ್ಚು, ಮಕ್ಕಳ ವಿದ್ಯಾಭ್ಯಾಸ, ಅಕ್ಕ-ತಂಗಿಯ ಮದುವೆ ಹೀಗೆ ಯಾವುದ್ಯಾವುದೋ ಕಮಿಟ್‌ಮೆಂಟ್‌ಗಳಿಗೆ ತಮ್ಮ ಬದುಕನ್ನು ಒಡ್ಡಿಕೊಂಡಿರುವ ವ್ಯಕ್ತಿಗೆ ಕೆಲಸದ ಅವಶ್ಯಕತೆ ತೀರಾ ಇರುತ್ತದೆ. ಇನ್ನು ಸಂಬಳ ಬೇಕು ಅನ್ನುವವರಿಗೆ ಕಚೇರಿಯ ನೀತಿ, ನಿಯಮಗಳಿಗೂ ಬದ್ಧನಾಗಿರಬೇಕಾಗುತ್ತದೆ. ಆದರೆ ಈ ಕೆಲಸದ ಅವಧಿ ಒಂದೊಂದು ದೇಶದಲ್ಲಿ ಒಂದೊಂದು ರೀತಿ! ಅತಿ ಹೆಚ್ಚು ಕೆಲಸದ ಸಮಯ ಇರುವ ದೇಶಗಳ ಪಟ್ಟಿ ಇಲ್ಲಿದೆ.

VISTARANEWS.COM


on

Working Hours
Koo

ಬದುಕಿನ ಬಂಡಿ ಸಾಗಿಸುವುದು ಎನ್ನುವುದು ಸುಲಭದ ಕೆಲಸವಲ್ಲ. ಕಷ್ಟಪಟ್ಟು ಹಗಲು ರಾತ್ರಿ ಎನ್ನದೇ ಕೆಲಸ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಜನರು ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆ ಅಥವಾ ರಾತ್ರಿ ವೇಳೆಗೆ ಮನೆಗೆ ಮರಳುವುದು ಸಹಜ. ಕೆಲಸದ ಅವಧಿ ಸಾಮಾನ್ಯವಾಗಿ 8ರಿಂದ 9 ಗಂಟೆ ಇರುತ್ತದೆ. ಇದು ಸಾಮಾನ್ಯ ಅವಧಿ. ಆದರೆ ಕೆಲಸದ ಅವಧಿ (Working Hours) ಒಂದೊಂದು ದೇಶದಲ್ಲಿ ಒಂದೊಂದು ರೀತಿ ಇರುತ್ತದೆ. ಒಂದೊಂದು ಕೆಲಸಕ್ಕೂ ಒಂದೊಂದು ಅವಧಿ ಇರುತ್ತದೆ. ಕೆಲವು ಕೆಲಸಗಳು ದಿನದಲ್ಲಿ 7 ಗಂಟೆಗಳ ಕಾಲ ಇದ್ದರೆ, ಇನ್ನು ಕೆಲವು ಕೆಲಸಗಳು 8-9 ಗಂಟೆಗಳ ಕಾಲ ನಡೆಯುತ್ತದೆ.

ಇನ್ನು ದೇಶಗಳ ಬಗ್ಗೆ ಹೇಳುವುದಾದರೆ ಕೆಲವು ದೇಶಗಳಲ್ಲಿ ಹಣದುಬ್ಬರ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಹಾಗಾಗಿ ಅಂತಹ ದೇಶಗಳಲ್ಲಿ ಅತಿ ಹೆಚ್ಚು ಕೆಲಸದ ಅವಧಿಯನ್ನು ನಿಗದಿಪಡಿಸಿರುತ್ತಾರೆ. ಇದೀಗ 2024ರಲ್ಲಿ ವಿಶ್ವದ ಅತಿ ಹೆಚ್ಚು ಕೆಲಸದ ಸಮಯವನ್ನು ಹೊಂದಿರುವ ದೇಶಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಂಕಿಅಂಶಗಳ ಆಧಾರದ ಮೇಲೆ 2024ರಲ್ಲಿ ವಿಶ್ವದ ಅತಿ ಹೆಚ್ಚು ಕೆಲಸದ ಸಮಯವನ್ನು ಹೊಂದಿರುವ 10 ದೇಶಗಳ ಪಟ್ಟಿ ಹೀಗಿದೆ.

Working Hours

ಇದರಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ) ವಾರಕ್ಕೆ ಸರಾಸರಿ 52 ಗಂಟೆಗಳ ಕೆಲಸದೊಂದಿಗೆ ಅತಿ ಹೆಚ್ಚು ಕೆಲಸದ ಸಮಯವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಟಾಪ್‌ 10 ದೇಶಗಳ ಪಟ್ಟಿ ಇಲ್ಲಿದೆ.

  1. 1. ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ): ವಾರಕ್ಕೆ ಸರಾಸರಿ 52 ಗಂಟೆ

2. ಪಾಕಿಸ್ತಾನ: ವಾರಕ್ಕೆ 46.6 ಗಂಟೆ ಕೆಲಸ

3. ಭಾರತ: ವಾರಕ್ಕೆ 46 ಗಂಟೆ

4. ಬಾಂಗ್ಲಾದೇಶ: ವಾರಕ್ಕೆ 45.8 ಗಂಟೆ

5. ಈಜಿಪ್ಟ್: ವಾರಕ್ಕೆ 45.5 ಗಂಟೆ

6. ಚೀನಾ: ವಾರಕ್ಕೆ 45 ಗಂಟೆ

7. ಅಲ್ಜೀರಿಯಾ: ವಾರಕ್ಕೆ 44 ಗಂಟೆ

8. ಟರ್ಕಿ: ವಾರಕ್ಕೆ 43.7 ಗಂಟೆ

9. ನೈಜೀರಿಯಾ: ವಾರಕ್ಕೆ 43.4 ಗಂಟೆ

10. ಮೆಕ್ಸಿಕೊ: ವಾರಕ್ಕೆ 42.7 ಗಂಟೆ

ಇದನ್ನೂ ಓದಿ: Actor Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಪವಿತ್ರಾ ಗೌಡ ಮಾಜಿ ಪತಿಯಿಂದ ಕೇಸ್!

ಹಾಗಾಗಿ ವಿದೇಶಗಳಲ್ಲಿ ಕೆಲಸಕ್ಕೆ ಹೋಗಲು ಬಯಸುವವರು ಒಮ್ಮೆ ಈ ಪಟ್ಟಿಯ ಬಗ್ಗೆ ತಿಳಿದುಕೊಳ್ಳಿ. ಯಾಕೆಂದರೆ ಕೆಲಸದ ಅವಧಿ ಅತಿಯಾದರೆ ಅದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಇದರಿಂದ ನಿಮಗೆ ವಿಶ್ರಾಂತಿ ಸಿಗುವುದಿಲ್ಲ. ಇದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತದೆ. 50ನೇ ವಯಸ್ಸಿನಲ್ಲಿ ನೀವು ಮಧುಮೇಹ, ಹೃದ್ರೋಗ, ಬೊಜ್ಜಿನ ನಂತಹ ದೀರ್ಘಕಾಲದ ಸಮಸ್ಯೆಗೆ ಒಳಗಾಗಬಹುದು.

Continue Reading

Latest

Murder Case: ಅಶ್ಲೀಲ ವಿಡಿಯೊ ಚಟ; ಮಗಳನ್ನೇ ಲೈಂಗಿಕಕ್ರಿಯೆಗೆ ಒತ್ತಾಯಿಸಿ ಕೊಂದ ಪಾಪಿ ತಂದೆ

Murder Case: ಮಗಳ ಪಾಲಿಗೆ ಅಪ್ಪನೇ ಮೊದಲ ಹೀರೋ. ಹೆಣ್ಣುಮಕ್ಕಳು ನಂಬುವ ಮೊದಲ ಜೀವ. ಆದರೆ ಇಲ್ಲಿ ಮಗಳ ಪಾಲಿಗೆ ಹೀರೋ ಆಗಬೇಕಿದ್ದ ಅಪ್ಪನೇ ವಿಲನ್ ಆಗಿದ್ದಾನೆ. ಪೋರ್ನ್ ವಿಡಿಯೊ ನೋಡುವ ಚಟವಿರುವ ಅಪ್ಪ ತನ್ನ ಸ್ವಂತ ಮಗಳ ಜೀವವನ್ನೇ ಬಲಿ ತೆಗೆದುಕೊಂಡಿದ್ದಾನೆ. ನೀಚ ತಂದೆಯೊಬ್ಬ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ 13 ವರ್ಷದ ಮಗಳನ್ನು ದಾರುಣವಾಗಿ ಕೊಂದಿರುವ ಆಘಾತಕಾರಿ ಘಟನೆ ಹೈದರಾಬಾದ್‌ನ ನಾಡಿಗಡ್ಡ ತಾಂಡಾದಲ್ಲಿ ನಡೆದಿದೆ.

VISTARANEWS.COM


on

Murder Case
Koo

ಹೈದರಾಬಾದ್ : ತಾಯಿ ಜೀವ ಕೊಟ್ಟರೆ ತಂದೆ ಜೀವನ ಕೊಡುತ್ತಾನೆ ಎಂಬ ಮಾತಿದೆ. ಹಾಗಾಗಿ ತಂದೆ ತಾಯಿಯನ್ನು ದೇವರೆಂದು ಪರಿಗಣಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ತಂದೆ ತಮ್ಮ ರಕ್ಷಕನೆಂದೇ ಭಾವಿಸುತ್ತಾರೆ. ತಂದೆ ಕೆಟ್ಟವರ ಕಣ್ಣು ತಮ್ಮ ಮಕ್ಕಳ ಮೇಲೆ ಬೀಳದಂತೆ ರಕ್ಷಿಸುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಹೆಣ್ಣುಮಕ್ಕಳು ತಮ್ಮ ತಂದೆಯೊಂದಿಗೆ ಧೈರ್ಯದಿಂದ ಇರುತ್ತಾರೆ. ಆದರೆ ಇಂತಹ ತಂದೆಯೇ ತನ್ನ ಮಗಳ ಮೇಲೆ ನೀಚತನ ತೋರಿದರೆ ಆಕೆಯನ್ನು ಕಾಪಾಡುವವರು ಯಾರು? ಇಂತಹ ನೀಚ ತಂದೆಯೊಬ್ಬ ಕಾಮದಾಹಕ್ಕೆ ತನ್ನ ಮಗಳನ್ನೇ ಕೊಲೆ (Murder Case )ಮಾಡಿದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.

ಹೈದರಾಬಾದ್‌ನ ನಾಡಿಗಡ್ಡ ತಾಂಡಾದಲ್ಲಿ 35 ವರ್ಷದ ನೀಚ ತಂದೆಯೊಬ್ಬ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ 13 ವರ್ಷದ ಮಗಳನ್ನು ದಾರುಣವಾಗಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.
ಮಹಬೂಬಾಬಾದ್ ಜಿಲ್ಲೆಯ ನಿವಾಸಿ ನರೇಶ್ (35) ಆರೋಪಿ ತಂದೆ. ಈತ ಕಿರಾಣಿ ಕಂಪನಿಯಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡಲು ತನ್ನ ಪತ್ನಿ ಹಾಗೂ ಮಗಳ ಜೊತೆ ನಗರಕ್ಕೆ ಬಂದಿದ್ದ. ಈತನಿಗೆ ಅಶ್ಲೀಲ ವಿಡಿಯೊ ನೋಡುವ ಚಟವಿತ್ತು. ಹಾಗಾಗಿ ಲೈಂಗಿಕತೆಯ ಬಗ್ಗೆ ಕೀಳು ಆಸಕ್ತಿ ಹೊಂದಿದ್ದ ಆತ ತನ್ನ ಚಟವನ್ನು ತೀರಿಸಿಕೊಳ್ಳಲು ತನ್ನ ಮಗಳ ಮೇಲೆಯೇ ಕಣ್ಣು ಹಾಕಿದ. ಅದಕ್ಕಾಗಿ ಆಕೆಯನ್ನು ಕಟ್ಟಿಗೆ ತರುವ ಹತ್ತಿರದ ಕಾಡಿಗೆ ಕರೆದೊಯ್ದ. ಅಲ್ಲಿ ಆಕೆಯ ಜೊತೆ ಲೈಂಗಿಕ ಸಂಬಂಧ ಹೊಂದಲು ಪ್ರಯತ್ನಿಸಿದಾಗ ಆಕೆ ಅದನ್ನು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಆತ ಆಕೆಯ ತಲೆಯನ್ನು ಬಂಡೆಗೆ ಅಪ್ಪಳಿಸಿ ಕೊಲೆ ಮಾಡಿ ಮನೆಗೆ ಮರಳಿದ್ದಾನೆ.

ಮರುದಿನ ತಾನು ತಪ್ಪಿಸಿಕೊಳ್ಳಲು ಪೊಲೀಸ್ ಠಾಣೆಗೆ ತೆರಳಿ ಮಗಳು ಕಾಣೆಯಾದ ಬಗ್ಗೆ ದೂರು ನೀಡಿದ್ದಾನೆ. ತನಿಖೆಯ ವೇಳೆ ಪೊಲೀಸರಿಗೆ ಮಗಳ ಶವ ಸಮೀಪದ ಕಾಡಿನಲ್ಲಿ ಸಿಕ್ಕಿದೆ. ತಾಯಿಯ ಮೂಲಕ ಅದು ಅವರ ಮಗಳೆಂದು ಪತ್ತೆ ಮಾಡಿದ ಬಳಿಕ ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಹೋಗುವಾಗ ತಂದೆ ಮಗಳ ಜೊತೆ ಇದ್ದರೆ, ವಾಪಾಸು ಬರುವಾಗ ತಂದೆ ಒಬ್ಬನೇ ಬಂದಿರುವುದು ಕಂಡುಬಂದಿದೆ. ಹಾಗಾಗಿ ಅನುಮಾನಗೊಂಡ ಪೊಲೀಸರು ತಂದೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ: Actor Darshan: ಜೈಲಿನಿಂದ ಹೊರಬಂದ ಬಳಿಕ ದರ್ಶನ್ ಗೆ ರಾಜಕೀಯದಲ್ಲಿ ಉನ್ನತ ಸ್ಥಾನಮಾನ! ಜ್ಯೋತಿಷಿ ಆರ್ಯವರ್ಧನ್ ಭವಿಷ್ಯ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ತಂದೆಯ ಮೇಲೆ ಐಪಿಸಿ ಸೆಕ್ಷನ್ ಗಳು ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂಬುದಾಗಿ ತಿಳಿದುಬಂದಿದೆ.

Continue Reading
Advertisement
Citroen C3 Aircross
ಪ್ರಮುಖ ಸುದ್ದಿ1 min ago

Citroen C3 Aircross : ಧೋನಿ ಹೆಸರಿನಲ್ಲಿ ಬಿಡುಗಡೆಯಾಗಿದೆ ಈ ಕಾರು, ಕೇವಲ 100 ಕಾರಷ್ಟೇ ಉತ್ಪಾದನೆ

Mysuru News
ಮೈಸೂರು3 mins ago

Mysuru News : ಪತ್ನಿ ಶೀಲ ಶಂಕಿಸಿ ಬೆಂಕಿ ಹಚ್ಚಿ ಸುಟ್ಟು ಹಾಕಿದವನಿಗೆ ಜೀವಾವಧಿ ಶಿಕ್ಷೆ

Yuva spoorthi samvaada programme on June 22 in Shivamogga
ಕರ್ನಾಟಕ9 mins ago

Shivamogga News: ಶಿವಮೊಗ್ಗದಲ್ಲಿ ಜೂ.22ರಂದು ಯುವ ಸ್ಫೂರ್ತಿ ಸಂವಾದ ಕಾರ್ಯಕ್ರಮ

IIT Bombay
Latest21 mins ago

IIT Bombay: ಹಿಂದೂ ದೇವರ ಅವಹೇಳನಕಾರಿ ನಾಟಕ; ಐಐಟಿ ವಿದ್ಯಾರ್ಥಿಗಳಿಗೆ ದಂಡ

Manish Pandey
ಕ್ರೀಡೆ29 mins ago

Manish Pandey: ಕ್ರಿಕೆಟಿಗ ಮನೀಷ್​ ಪಾಂಡೆ ದಾಂಪತ್ಯದಲ್ಲಿ ಬಿರುಕು!

Genitals Removed Case
Latest32 mins ago

Genitals Removed Case: ಮಲಗುವಾಗ ಗಂಡಾಗಿದ್ದ, ಎದ್ದಾಗ ಹೆಣ್ಣಾಗಿದ್ದ! ಬಲವಂತದಿಂದ ಲಿಂಗ ಪರಿವರ್ತನೆ

UGC-NET
ದೇಶ33 mins ago

UGC-NET: ಯುದ್ಧವನ್ನೇ ನಿಲ್ಲಿಸುವ ಸಾಮರ್ಥ್ಯವಿರುವ ಮೋದಿ ಪ್ರಶ್ನೆ ಪತ್ರಿಕೆ ಸೋರಿಕೆ ಯಾಕೆ ತಡೆಯುತ್ತಿಲ್ಲ? ರಾಹುಲ್‌ ಗಾಂಧಿ ವ್ಯಂಗ್ಯ

Niveditha Gowda new reels after divorce
ಸಿನಿಮಾ41 mins ago

Niveditha Gowda: ಡಿವೋರ್ಸ್‌ ಬಳಿಕ ಹೊಸ ರೀಲ್ಸ್‌ ಹಂಚಿಕೊಂಡ ನಿವೇದಿತಾ: ಲೈಕ್ಸ್‌ ಸುರಿಮಳೆ!

Darshan Arrested
ಕರ್ನಾಟಕ43 mins ago

Darshan Arrested: ರೇಣುಕಾಸ್ವಾಮಿ ಕೊಲೆ ಕೇಸ್;‌ ಪವಿತ್ರಾ ಗೌಡಗೆ ಜೈಲು, ದರ್ಶನ್‌ ಪೊಲೀಸ್‌ ಕಸ್ಟಡಿಗೆ

Road Construction
ಕರ್ನಾಟಕ1 hour ago

Road Construction: ವಿಶ್ವಬ್ಯಾಂಕ್‌ನಿಂದ ಸಾಲ ತಂದು ಗ್ರಾಮೀಣ ರಸ್ತೆಗಳ ಅಭಿವೃದ್ಧಿ; ಸಿದ್ದರಾಮಯ್ಯ ಸರ್ಕಾರ ನಿರ್ಧಾರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು3 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ4 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ4 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ5 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ6 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ6 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌