Kannada New Movie | ʻಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಚಿತ್ರದ ಪ್ರೊಟೆಸ್ಟ್‌ ಸಾಂಗ್‌ ರಿಲೀಸ್‌! Vistara News

ಸಿನಿಮಾ

Kannada New Movie | ʻಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಚಿತ್ರದ ಪ್ರೊಟೆಸ್ಟ್‌ ಸಾಂಗ್‌ ರಿಲೀಸ್‌!

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ (Kannada New Movie ) ಹಾಸ್ಟೆಲ್‌ ಪ್ರೊಟೆಸ್ಟ್‌ ಸಾಂಗ್‌ ಬಿಡುಗಡೆಗೊಂಡಿದೆ. ಸಂಗೀತ ಸಂಯೋಜನೆಯನ್ನು ಅಜನೀಶ್‌ ಲೋಕನಾಥ್‌ ಮಾಡಿದ್ದಾರೆ.

VISTARANEWS.COM


on

Kannada New Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ (Kannada New Movie ) ಹಾಸ್ಟೆಲ್‌ ಪ್ರೊಟೆಸ್ಟ್‌ ಸಾಂಗ್‌ ಬಿಡುಗಡೆಗೊಂಡಿದೆ. ನೋಡುಗರು ಹಾಡನ್ನು ಮೆಚ್ಚಿ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ ಅವರಿಂದ ಸಿನಿಮಾ ಪ್ರಮೋಷನಲ್ ಕಂಟೆಂಟ್ ಮಾಡಿಸಿ ಗಮನ ಸೆಳೆದಿತ್ತು. ಸ್ಟಾರ್ ನಟರ ಮೂಲಕ ಸಿನಿಮಾ ಪ್ರಚಾರ ಒಂದು ಕಡೆಯಾದರೆ, ಇಂಟರೆಸ್ಟಿಂಗ್ ಪ್ರಮೋಷನಲ್ ಕಂಟೆಂಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಸಖತ್ ಇಂಪ್ರೆಸ್ ಮಾಡಿತ್ತು.

ಹಾಸ್ಟೆಲ್‌ ಪ್ರೊಟೆಸ್ಟ್‌ ಸಾಂಗ್‌ ಸಂಗೀತ ಸಂಯೋಜನೆಯನ್ನು ಅಜನೀಶ್‌ ಲೋಕನಾಥ್‌ ಮಾಡಿದ್ದಾರೆ. ವರುಣ್‌ ಸ್ಟುಡಿಯೋಸ್‌ ಹಾಗೂ ಪ್ರಜ್ವಲ್ ಬಿ. ಪಿ ಅವರ ಗುಲ್‌ಮೊಹರ್ ಫಿಲ್ಮ್ಸ್‌ ಬ್ಯಾನರ್‌ನಡಿ ನಿರ್ಮಾಣವಾಗಿರುವ ಮೊದಲ ಸಿನಿಮಾ ಇದಾಗಿದೆ. ಚಿತ್ರತಂಡ ಈ ಸಿನಿಮಾ ಚಿತ್ರೀಕರಣಕ್ಕೂ ಮೊದಲು ಅಪ್ಪು ಅವರ ಬಳಿ ಹೋಗಿ ಮಾತುಕತೆ ನಡೆಸಿದೆ. ಕಥೆ ಕೇಳಿ ಸಖತ್ ಇಂಪ್ರೆಸ್ ಆದ ಅಪ್ಪು ಅವರು ಸಿನಿಮಾ ಮಾಡಿ ಎಂದು ಇಡೀ ತಂಡಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ್ದರು. ಅವರ ಆಶೀರ್ವಾದದೊಂದಿಗೆ ಸಿನಿಮಾ ಚಿತ್ರೀಕರಣ ಆರಂಭಿಸಿದ್ದೇವೆ ಎಂದು ನಿರ್ಮಾಪಕ ವರುಣ್ ಕುಮಾರ್ ಹಾಗೂ ಪ್ರಜ್ವಲ್ ಬಿ ಪಿ ತಿಳಿಸಿದ್ದಾರೆ.

ಇದನ್ನೂ ಓದಿ | Ramya Actress | ʻಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಚಿತ್ರಕ್ಕೆ ಮೋಹಕ ತಾರೆ ರಮ್ಯಾ ಸಾಥ್‌!

ಯೂತ್‌ ಸಬ್ಜೆಕ್ಟ್ ಒಳಗೊಂಡ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭಾವಂತರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರ ಜತೆಗೆ ಸ್ಯಾಂಡಲ್‌ವುಡ್‌ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಚಿತ್ರದಲ್ಲಿರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನವರಿಯಲ್ಲಿ ಸಿನಿಮಾ ತೆರೆಗೆ ತರುವ ಯೋಜನೆ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ | Actress Ramya | ನಟಿ ರಮ್ಯಾಗಾಗಿ ಹಾಸ್ಟೆಲ್‌ ಹುಡುಗರ ಪ್ರತಿಭಟನೆ: ವೈರಲ್‌ ಆಯ್ತು ವಿಡಿಯೊ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸಿನಿಮಾ

Masha And The Bear: ಬೆಂಗಳೂರಿಗೆ ಬರ್ತಿದ್ದಾರೆ ʻಮಾಶಾ ಆ್ಯಂಡ್‌ ದಿ ಬೇರ್ʼ!

Masha And The Bear: ಜನಪ್ರಿಯ ಕಾರ್ಟೂನ್‌ ಸಿರೀಸ್‌ ‘ಮಾಶಾ ಆ್ಯಂಡ್‌ ದಿ ಬೇರ್’ ಅನ್ನು ರಂಗವೇದಿಕೆಗೆ ಅಳವಡಿಸಿ ಭಾರತದ ಪ್ರಮುಖ ನಗರಗಳಲ್ಲಿ ಪ್ರದರ್ಶನ ಮಾಡಲು ಎಲ್ಲ ಸಿದ್ಧತೆಗಳೂ ನಡೆದಿವೆ. ಈ ಬಾರಿ ತಮ್ಮ ಅಭಿಮಾನಿ ಚಿಣ್ಣರ ಎದುರು ನೇರವಾಗಿ ಕಾಣಿಸಿಕೊಳ್ಳಲಿರುವ ಅವರು, ಪತ್ತೇದಾರಿ ಕಥೆಯೊಂದನ್ನು ರಂಗದ ಮೇಲೆ ಪ್ರಸ್ತುತಪಡಿಸಲಿದ್ದಾರೆ.

VISTARANEWS.COM


on

Masha And The Bear in banglore
Koo

ಬೆಂಗಳೂರು: ವಿಶಿಷ್ಟವಾದ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಕೊಡುವಲ್ಲಿ ಮುಂಚೂಣಿಯಲ್ಲಿರುವ ವಯಕಾಮ್‌ 18 ಲೈವ್‌, ಇದೀಗ ತನ್ನ ದಾರಿಯಲ್ಲಿ ಇನ್ನೊಂದು ಮಹತ್ವದ ಹೆಜ್ಜೆಯನ್ನು ಇಡುತ್ತಿದೆ. ಪುಟ್ಟ ಮಕ್ಕಳಿಗೆಲ್ಲ ಚಿರಪರಿಚಿತವಾಗಿರುವ ಮಾಶಾ ಆ್ಯಂಡ್‌ ದಿ ಬೇರ್​ (Masha And The Bear) ತಮ್ಮ ಅಭಿಮಾನಿಗಳನ್ನು ಭೇಟಿಯಾಗಲು, ಅವರ ಮುಂದೆ ಲೈವ್ ಪ್ರದರ್ಶನ ನೀಡಲು ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ವೇದಿಕೆ ಸಜ್ಜುಗೊಂಡಿದೆ.

ಜನಪ್ರಿಯ ಕಾರ್ಟೂನ್‌ ಸಿರೀಸ್‌ ‘ಮಾಶಾ ಆ್ಯಂಡ್‌ ದಿ ಬೇರ್’ ಅನ್ನು ರಂಗವೇದಿಕೆಗೆ ಅಳವಡಿಸಿ ಭಾರತದ ಪ್ರಮುಖ ನಗರಗಳಲ್ಲಿ ಪ್ರದರ್ಶನ ಮಾಡಲು ಎಲ್ಲ ಸಿದ್ಧತೆಗಳೂ ನಡೆದಿವೆ. ಈ ಬಾರಿ ತಮ್ಮ ಅಭಿಮಾನಿ ಚಿಣ್ಣರ ಎದುರು ನೇರವಾಗಿ ಕಾಣಿಸಿಕೊಳ್ಳಲಿರುವ ಅವರು, ಪತ್ತೇದಾರಿ ಕಥೆಯೊಂದನ್ನು ರಂಗದ ಮೇಲೆ ಪ್ರಸ್ತುತಪಡಿಸಲಿದ್ದಾರೆ.
ವಯಕಾಮ್18 ಲೈವ್ ನಿರ್ಮಾಣ ಮಾಡಿರುವ, ಎಸ್‌ಎಸ್‌ಬಿಸಿ ಇಂಡಿಯಾ ಪ್ರಸ್ತುತಪಡಿಸುತ್ತಿರುವ ಈ ಲೈವ್‌ ಷೋ ಟೂರ್‌, ಡಿಸೆಂಬರ್ 23ರಂದು ಮುಂಬೈನಿಂದ ಪ್ರಾರಂಭಗೊಳ್ಳಲಿದೆ. ನಂತರ ಭಾರತದ ಪ್ರಮುಖ ಮಹಾನಗರಗಳಾದ ದೆಹಲಿ, ಹೈದರಾಬಾದ್‌ ಮತ್ತು ಬೆಂಗಳೂರುಗಳಲ್ಲಿಯೂ ಪ್ರದರ್ಶನ ನೀಡಿ ಮತ್ತೆ ಮುಂಬೈನಲ್ಲಿಯೇ ಈ ಲೈವ್‌ಷೋ ಟೂರ್ ಕೊನೆಗೊಳ್ಳಲಿದೆ.

ಪತ್ತೇದಾರಿ ಕಥೆಯಲ್ಲಿ ನಿಮ್ಮ ಪಾಲೂ ಇರಲಿದೆ!

‘ಅ ವೆರಿ ಡಿಟೆಕ್ಟೀವ್ ಸ್ಟೋರಿ’ ಎನ್ನುವುದು ಈ ಷೋಗೆ ನೀಡಿರುವ ಅಡಿಟಿಪ್ಪಣಿ. ಹೌದು, ಈ ಲೈವ್‌ ಷೋದಲ್ಲಿ ಮಾಶಾ ಮತ್ತು ಬೇರ್ ಸೇರಿಕೊಂಡು ಮನೆಯಲ್ಲಿ ಕಳೆದುಹೋಗಿರುವ ವಸ್ತುವೊಂದನ್ನು ಹುಡುಕುವ ಪತ್ತೇದಾರಿ ಕೆಲಸ ಮಾಡಲಿದ್ದಾರೆ. ಪತ್ತೇಧಾರಿ ಕಥೆ ಅಂದಮೇಲೆ ಕೇಳಬೇಕೆ? ಸಾಕಷ್ಟು ರೋಚಕತೆ, ಕುತೂಹಲ, ಪನ್‌ ಎಲ್ಲವೂ ಇರಲಿದೆ. ಅಷ್ಟೇ ಅಲ್ಲ, ತಮ್ಮ ಪತ್ತೇಧಾರಿಕೆಯಲ್ಲಿ ಮಾಶಾ ಮತ್ತು ಬೇರ್ ಪ್ರೇಕ್ಷಕರ ಎದುರು ಕೂತಿರುವವರ ಸಹಾಯವನ್ನೂ ಪಡೆಲಿದ್ದಾರೆ! ಅಂದರೆ ಪ್ರೇಕ್ಷಕನೂ ಈ ಷೋದ ಪಾತ್ರಧಾರಿ ಆಗಿರುತ್ತಾನೆ? ಪ್ರೇಕ್ಷಕರ ಜೊತೆ ಮಾತಾಡುತ್ತ, ಅವರನ್ನು ನಗಿಸುತ್ತ, ಅವರಲ್ಲಿ ಕುತೂಹಲ ಕೆರಳಿಸುತ್ತ ಸಾಗುವ ಹಾಗೆಯೇ ಇಡೀ ಷೋವನ್ನು ವಿನ್ಯಾಸಗೊಳಿಸಲಾಗಿದೆ. ವಿಶಾಲ್ ಅಸ್ರಾಣಿ ಈ ಷೋವನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: Darshan Thoogudeepa: ಭಾರಿ ಮೊತ್ತಕ್ಕೆ ಕಾಟೇರ ಡಿಜಿಟಲ್‌, ಸ್ಯಾಟಲೈಟ್ ಮಾರಾಟ!

ಯಾರು ಯಾರೆಲ್ಲ ಇರ್ತಾರೆ?

ʻಮಾಶಾ ಆ್ಯಂಡ್‌ ದಿ ಬೇರ್ʼ ಬಗ್ಗೆ ಪುಟಾಣಿಗಳಿಗೆ ಹೇಳುವುದೇ ಬೇಕಿಲ್ಲ. ಎಲ್ಲ ಮಕ್ಕಳಿಗೂ ಗೊತ್ತಿರುವ, ಎಲ್ಲ ಮಕ್ಕಳೊಟ್ಟಿಗೆ ಹಿರಿಯರಿಗೂ ಪರಿಚಿತವಾಗಿರುವ ಕಾರ್ಟೂನ್‌ ಕ್ಯಾರೆಕ್ಟರ್‌ಗಳು ಅವು. ಆದರೆ ಷೋದಲ್ಲಿ ಬರೀ ಆ ಎರಡು ಪಾತ್ರಗಳು ಮಾತ್ರವಲ್ಲ. ಸೀರೀಸ್‌ನಲ್ಲಿ ಕಾಣುವ, ಪ್ರೊಫೆಸರ್ ನಾನ್‌ಬೆಲೆವಿಯಸ್‌, ರೋಸಿ, ಪಾಂಡಾ, ಸ್ಲೈ ಫಾಕ್ಸ್‌ ಮತ್ತು ಸಿಲ್ಲಿ ಫಾಕ್ಸ್ ಸೇರಿದಂತೆ ಇನ್ನೂ ಹಲವು ಪಾತ್ರಗಳು ಈ ಷೋದ ಭಾಗವಾಗಿರುತ್ತವೆ.

ಯಾವಾಗ ಎಲ್ಲಿ?

ಮಾಶಾ ಆ್ಯಂಡ್‌ ದಿ ಬೇರ್ ಲೈವ್ ಷೋ ಟೂರ್ ಡಿಸೆಂಬರ್ 23ರಂದು ಮುಂಬೈನಲ್ಲಿ ಆರಂಭಗೊಳ್ಳುತ್ತದೆ. 24ರಂದೂ ಮುಂಬೈನಲ್ಲಿಯೇ ಪ್ರದರ್ಶನ ಇರುತ್ತದೆ. 2024 ಜನವರಿ 20 ಮತ್ತು 21ರಂದು ದೆಹಲಿಯಲ್ಲಿ ಎರಡು ದಿನಗಳ ಷೋ ಆಯೋಜಿಸಲಾಗಿದೆ. ಫೆಬ್ರುವರಿ 3 ಮತ್ತು 4ರಂದು ಹೈದರಾಬಾದ್‌ನಲ್ಲಿ ಪ್ರದರ್ಶನ ನಡೆಯಲಿದೆ.
ಫೆಬ್ರುವರಿ 10-11ರಂದು ‘ಮಾಶಾ ಆಂಡ್‌ ದಿ ಬೇರ್’ ತಂಡ ಬೆಂಗಳೂರಿಗೆ ಬರಲಿದೆ. ಬೆಂಗಳೂರಿನ ಮಾಶಾ, ಬೇರ್ ಅಭಿಮಾನಿಗಳಿಗಾಗಿ ಎರಡು ದಿನ ಹಲವು ಪ್ರದರ್ಶನಗಳು ನಡೆಯಲಿವೆ.

ಪಾಲ್ಗೊಳ್ಳುವುದು ಹೇಗೆ?

‘ಮಾಶಾ ಆ್ಯಂಡ್‌ ದಿ ಬೇರ್’ ಷೋದಲ್ಲಿ ನೀವೂ ಪಾಲ್ಗೊಳ್ಳಬಹುದು. ನಿಮ್ಮ ಟಿಕೆಟ್‌ಗಳನ್ನು www.kidsdayout.co ದಲ್ಲಿ ಈಗಲೇ ಬುಕ್ ಮಾಡಬಹುದು. ಎಚ್‌ಎಸ್‌ಬಿಸಿ ಕಾರ್ಡ್‌ ಇರುವವರಿಗೆ ಷೋ ಪ್ರಾರಂಭವಾಗುವ 72 ಗಂಟೆಗಳಿಗೂ ಮುನ್ನ ತಮ್ಮ ಇಷ್ಟದ ಸೀಟ್‌ ಬುಕ್ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೇ ಷೋದ ಪಾತ್ರಗಳನ್ನು ಭೇಟಿಯಾಗಿ ಶುಭಾಶಯ ಕೋರುವ ಅವಕಾಶವನ್ನೂ ನೀಡಲಾಗುತ್ತಿದೆ. ಟಿಕೆಟ್ ದರದಲ್ಲಿಯೂ ವಿಶೇಷ ರಿಯಾಯತಿ ಇರುತ್ತದೆ. ಟಿಕೆಟ್ ಬುಕ್ ಮಾಡಿಕೊಂಡವರಿಗೆ ಪ್ರದರ್ಶನದ ಸ್ಥಳ, ಸಮಯದ ಮಾಹಿತಿಯನ್ನು ನೀಡಲಾಗುವುದು.

ಮಾಶಾ ಆ್ಯಂಡ್‌ ದಿ ಬೇರ್ ಭಾರತದಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯವಾಗಿರುವ ಕಾರ್ಟೂನ್ ಸೀರೀಸ್‌. ಚಿಣ್ಣರ ಜತೆಯಲ್ಲಿ ಪೋಷಕರೂ ಕೂತು ನೋಡುವ ಈ ರಿಯಾಲಿಟಿ ಷೋದ ಪಾತ್ರಗಳೂ ಎಲ್ಲರಿಗೂ ಪರಿಚಿತವೇ ಆಗಿವೆ. ಈಗ ವಯಕಾಮ್‌ 18ಲೈವ್‌ ಅವುಗಳನ್ನು ನೇರವಾಗಿ ನೋಡುವ ಅವಕಾಶವನ್ನೂ ಮಾಡಿಕೊಡುತ್ತಿದೆ. ಕಳೆದ ವರ್ಷ, ‘ಪೆಪ್ಪಾ ಪಿಗ್‌ ಲೈವ್‌ ಷೋ’ ಕೂಡ ಇದೇ ರೀತಿ ಭಾರತದ ಬೇರೆ ಬೇರೆ ನಗರಗಳಲ್ಲಿ ಲೈವ್‌ ಪ್ರದರ್ಶನಗಳನ್ನು ನೀಡಿ ಯಶಸ್ವಿಯಾಗಿತ್ತು. ಅದೇ ದಾರಿಯಲ್ಲಿ ಈಗ ಮಾಶಾ ಆ್ಯಂಡ್‌ ದಿ ಬೇರ್ ಕೂಡ ನಡೆಯುತ್ತಿದ್ದು, ಜನರಿಗೆ ಮನರಂಜನೆಯ ರಸದೂಟವನ್ನು ಬಡಿಸಲು ಸರ್ವಸನ್ನದ್ಧವಾಗಿದೆ.

Continue Reading

ಬಾಲಿವುಡ್

Vidyut Jammwal: ಬೆತ್ತಲಾಗಿ ಹಿಮಾಲಯದಲ್ಲಿದ್ದಾರೆ ಈ ಫೇಮಸ್‌ ನಟ! ಸೋಷಿಯಲ್‌ ಮೀಡಿಯಾದಲ್ಲಿ ಫೋಟೊ!

Vidyut Jammwal: ದಕ್ಷಿಣ ಭಾರತದ ಕೆಲವು ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ಖಳನಾಯಕನಾಗಿಯೂ ನಟಿಸಿದ್ದಾರೆ. ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಸಂತನಂತೆ ಹಿಮಾಲಯದ ಕಾಡು ಮತ್ತು ನದಿಗಳಲ್ಲಿ ಆದಿವಾಸಿಯಂತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

VISTARANEWS.COM


on

Vidyut Jammwal
Koo

ಬೆಂಗಳೂರು; ದಳಪತಿ ವಿಜಯ್ ನಟಿಸಿದ ʼತುಪಾಕಿʼ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿ ಗಮನ ಸೆಳೆದಿದ್ದ ನಟ ವಿದ್ಯುತ್ ಜಮ್ವಾಲ್ (Vidyut Jammwal) ಹಿಮಾಲಯದಲ್ಲಿ ಸನ್ಯಾಸಿಯಂತೆ ಮೈ ಮೇಲೆ ಬಟ್ಟೆ ಧರಿಸದೆ ತಿರುಗಾಡುತ್ತಿದ್ದಾರೆ. ಇದೀಗ ಬೆತ್ತಲೆಯಾಗಿರುವ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟನ ಈ ಅವತಾರ ಕಂಡು ಅವರ ಫ್ಯಾನ್ಸ್‌ ಶಾಕ್‌ಗೆ ಒಳಗಾಗಿದ್ದಾರೆ. ಈ ರೀತಿ ನಟ ಇರುವುದಕ್ಕೂ ಕಾರಣ ಕೂಡ ಇದೆ.

ವಿದ್ಯುತ್ ಜಮ್ವಾಲ್ ಅವರು ಇಂದು (ಡಿಸೆಂಬರ್ 10) 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಈ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಸಂತನಂತೆ ಹಿಮಾಲಯದ ಕಾಡು ಮತ್ತು ನದಿಗಳಲ್ಲಿ ಆದಿವಾಸಿಯಂತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಲ್ಲೇ ಸುಮಾರು 10 ದಿನಗಳ ಕಾಲ ಹೀಗೆ ಜೀವನ ನಡೆಸುವುದಾಗಿ ಹೇಳಿಕೊಂಡಿದ್ದಾರೆ.

ʻವಿದ್ಯುತ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಮೂರು ಫೋಟೊಗಳನ್ನು ಹಂಚಿಕೊಂಡರು. ಮೊದಲನೆಯದಲ್ಲಿ ಬಟ್ಟೆಯಿಲ್ಲದೆ ನದಿಯ ಪಕ್ಕ ಕುಳಿತಿರುವುದು. ನೀರಿನಲ್ಲಿ ಸೂರ್ಯ ನಮಸ್ಕಾರವನ್ನು ಮಾಡುತ್ತಿರುವ, ಅಡುಗೆ ಮಾಡುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಈ ಬಗ್ಗೆ ನಟ ಹೇಳಿಕೊಂಡಿದ್ದು, ʻʻದೈವಿಕ ವಾಸಸ್ಥಾನ.. 14 ವರ್ಷಗಳ ಹಿಂದೆ ಈ ಅಭ್ಯಾಸ ಶುರುವಾಯ್ತು. ನನಗಿದು ಅರಿವಿಗೆ ಬರುವ ಮೊದಲೇ ಪ್ರತಿ ವರ್ಷ 7-10 ದಿನಗಳನ್ನು ಏಕಾಂಗಿಯಾಗಿ ಕಳೆಯುವುದು ನನ್ನ ಜೀವನದ ಅವಿಭಾಜ್ಯ ಅಂಗವಾಯಿತು.” ಎಂದು ವಿದ್ಯುತ್ ಹೇಳಿದ್ದಾರೆ.

ತಮ್ಮ ಆಚರಣೆಯನ್ನು ವಿವರಿದ ನಟ , “ಐಷಾರಾಮಿ ಜೀವನದಿಂದ ಕಾಡಿಗೆ ಬಂದ ನಾನು ನನ್ನ ಏಕಾಂತತೆಯನ್ನು ಕಂಡುಕೊಂಡಿದ್ದೇನೆ. ‘ನಾನು ಯಾರು’ ಎಂದು ತಿಳಿದುಕೊಳ್ಳುವ ಮೊದಲ ಹೆಜ್ಜೆ ಇದು. ನಿಸರ್ಗ ಒದಗಿಸಿದ್ದರಲ್ಲೇ ನನ್ನನ್ನು ನಾನೇ ರಕ್ಷಣೆ ಮಾಡಿಕೊಳ್ಳುತ್ತೇನೆ.” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅನಿಮಲ್‌ ಸಿನಿಮಾ ನೋಡಿ ಪರ್ಸ್‌ ಬಿಟ್ಟು ಬಂದಳು; ವಾಪಸ್‌ ತರಲು ಹೋದಾಗ ಸೆಕ್ಯುರಿಟಿ ಗಾರ್ಡ್‌ಗೆ ಒದ್ದಳು!

ದಕ್ಷಿಣ ಭಾರತದ ಕೆಲವು ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ಖಳನಾಯಕನಾಗಿಯೂ ನಟಿಸಿದ್ದಾರೆ. ‘ಕಮಾಂಡೋ 2’ ಹಾಗೂ ‘ಕಮಾಂಡೋ 3’ ಅಂತಹ ಸೂಪರ್ ಸಿನಿಮಾಗಳನ್ನು ನೀಡಿದ ಬಳಿಕ ಇತ್ತೀಚೆಗಷ್ಟೇ ‘IB71’ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ನಟನ ಬಾಲಿವುಡ್ ಸಿನಿಮಾಗಳಾದ ‘ಶೇರ್ ಸಿಂಗ್ ರಾಣಾ’ ಹಾಗೂ ‘ಕ್ರ್ಯಾಕ್’ ಚಿತ್ರೀಕರಣ ನಡೆಯುತ್ತಿದೆ.

Continue Reading

South Cinema

Prajwal Devaraj: ಕೋಣದ ಮೇಲೆ ಪ್ರಜ್ವಲ್ ಸವಾರಿ; ‘ಕರಾವಳಿ’ ಟೀಸರ್ ಔಟ್‌!

Prajwal Devaraj: ‘ಕರಾವಳಿ’ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಾಯಕನಾಗಿ ನಟಿಸುತ್ತಿರುವ ಸಿನಿಮಾ. ಈ ಚಿತ್ರಕ್ಕೆ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಗುರುದತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ.

VISTARANEWS.COM


on

Karavali prajwal devaraj
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ (Prajwal Devaraj) ಕರಾವಳಿ ಭಾಗದ ಸಂಸ್ಕೃತಿ ಸಾರುವ ಮತ್ತೊಂದು ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ‘ಕರಾವಳಿ’ ಹೆಸರಿನಲ್ಲೇ ಹೊಸ ಸಿನಿಮಾ ಅನೌನ್ಸ್ ಆಗಿದ್ದು ಸದ್ಯ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ವಿಶೇಷ ಎಂದರೆ ಕರಾವಳಿ ಭಾಗದ ಬಗ್ಗೆಯೇ ಇರುವ ಈ ಸಿನಿಮಾದ ಟೀಸರ್ ಅ ಮಂಗಳೂರಿನಲ್ಲಿ ಅದ್ಧೂರಿಯಾಗಿ ಲಾಂಚ್ ಮಾಡಲಾಯಿತು. ಅಂದಹಾಗೆ ‘ಕರಾವಳಿ’ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಾಯಕನಾಗಿ ನಟಿಸುತ್ತಿರುವ ಸಿನಿಮಾ. ಈ ಚಿತ್ರಕ್ಕೆ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಗುರುದತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ.

ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಜಗತ್ತಿಗೆ ಎಂಟ್ರಿ ಕೊಡುವ ಎರಡು ಹೊಸ ಜೀವಗಳನ್ನು ನೋಡಬಹುದು. ತಾಯಿ ಮಗುವಿಗೆ ಜನ್ಮ ನೀಡುತ್ತಿರುವ ದೃಶ್ಯದ ಜತೆಗೆಯೇ ಕೋಣ ಕೂಡ ತನ್ನ ಮಗುವಿಗೆ ಜನ್ಮ ನೀಡುತ್ತಿದೆ. ಈ ಟೀಸರ್ ನೋಡುತ್ತಿದ್ದರೆ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಬಗ್ಗೆ ಇರುವ ಸಿನಿಮಾ ಎನ್ನುವುದು ಮೇಲ್ನೋಟಕ್ಕೆ ಗೋತ್ತಾಗುತ್ತಿದೆ. ಬ್ಯಾಗ್ರೌಂಡ್‌ನಲ್ಲಿ ಬರುವ ಯಕ್ಷಗಾನದ ಧ್ವನಿ ಟೀಸರ್‌ನ ತೂಕವನ್ನು ಹೆಚ್ಚಿಸುವ ಜೊತೆಗೆ ಕುತೂಹಲ ದುಪ್ಪಟ್ಟು ಮಾಡಿದೆ.

ಕರಾವಳಿ ಎಂದಮೇಲೆ ಆ ಭಾಗದ ಸಂಸ್ಕೃತಿ, ದೈವ, ಯಕ್ಷಗಾನ ಮುಖ್ಯವಾಗಿ ಕಂಬಳ ಸೇರಿದಂತೆ ಅಲ್ಲಿನ ಆಚಾರ ವಿಚಾರ ಎಲ್ಲವನ್ನು ಈ ಸಿನಿಮಾದಲ್ಲಿ ನೋಡುವ ಕಾತರದಲ್ಲಿದ್ದಾರೆ ಅಭಿಮಾನಿಗಳು. ಇನ್ನು ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಇದನ್ನೂ ಓದಿ; Prajwal Devaraj: ಸೋನಾ ಬೇಬಿ ಜತೆ ಹೆಜ್ಜೆ ಹಾಕಿದ ಪ್ರಜ್ವಲ್ ದೇವರಾಜ್!

ಸದ್ಯ ರಿಲೀಸ್ ಆಗಿರುವ ಟೀಸರ್ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರ ಪಾತ್ರ ನೋಡಿದ್ರೆ ಇದುವರೆಗೂ ಅವರು ಮಾಡಿರುವ ಪಾತ್ರಗಳಲ್ಲಿಯೇ ಅತ್ಯಂತ ವಿಭಿನ್ನವಾಗಿದೆ. ಟೀಸರ್ ನೋಡ್ತಿದ್ರೆ ಪ್ರಜ್ವಲ್ 40ನೇ ಸಿನಿಮಾ ತುಂಬಾ ವಿಶೇಷವಾಗಿ ಮೂಡಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುದರಲ್ಲಿ ಎರಡು ಮಾತಿಲ್ಲ. ಇದೀಗ ಟೀಸರ್ ಮೂಲಕ ಸದ್ದು ಮಾಡುತ್ತಿರುವ ‘ಕರಾವಳಿ’ ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ಶೂಟಿಂಗ್‌ಗೆ ಹೊರಡಲಿದೆ. ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Continue Reading

ಸಿನಿಮಾ

Actress Leelavathi: ಅಜ್ಜಿಯ ಗುಣಗಳು ಮೊಮ್ಮಗನಲ್ಲೂ ಇವೆ; ವಿನೋದ್ ರಾಜ್ ಪತ್ನಿ ಅನು

Actress Leelavathi:  ತಾಯಿ ನೆನಪಿನಲಿಯೇ ಹಾಲು ತುಪ್ಪ ವಿಧಿ ವಿಧಾನಗಳನ್ನು ವಿನೋದ್‌ ರಾಜ್‌ ಅವರು ನೆರವೇರಿಸಿದ್ದಾರೆ, ಅಜ್ಜಿ ನೆನಪಲ್ಲಿ ಸಮಾಧಿಗೆ ಮೊಮ್ಮಗ ಯುವರಾಜ್‌ ಕೂಡ ಹಾಲು ತಪ್ಪ ಬಿಟ್ಟಾಗಿದೆ. ವಿನೋದ್ ರಾಜ್ ಪತ್ನಿ ಅನು ಅವರು ಲೀಲಾವತಿ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು.

VISTARANEWS.COM


on

actor vinod rajs wife anu opinion about Actress Leelavathi
Koo

ಬೆಂಗಳೂರು: ನಟಿ ಲೀಲಾವತಿಯವರು (Actress Leelavathi) ಬಾರದ ಲೋಕಕ್ಕೆ ಹೋಗಿ ಮೂರು ದಿನ ಕಳೆದಿದೆ. ತಾಯಿ ನೆನಪಿನಲಿಯೇ ಹಾಲು ತುಪ್ಪ ವಿಧಿ ವಿಧಾನಗಳನ್ನು ವಿನೋದ್‌ ರಾಜ್‌ ಅವರು ನೆರವೇರಿಸಿದ್ದಾರೆ, ಅಜ್ಜಿ ನೆನಪಲ್ಲಿ ಸಮಾಧಿಗೆ ಮೊಮ್ಮಗ ಯುವರಾಜ್‌ ಕೂಡ ಹಾಲು ತಪ್ಪ ಬಿಟ್ಟಾಗಿದೆ. ವಿನೋದ್ ರಾಜ್ ಪತ್ನಿ ಅನು ಅವರು ಲೀಲಾವತಿ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು.

ʻʻಲೀಲಾವತಿ ಅಮ್ಮ ದೊಡ್ಡ ಕಲಾವಿದೆ. ಜೀವನದಲ್ಲಿ ಬಹಳ ಶಿಸ್ತುಬದ್ಧವಾಗಿದ್ದರು. ಅವರ ಗುಣಗಳನ್ನು ನಾನು ನನ್ನ ಮಗನಿಗೂ ಹೇಳಿಕೊಟ್ಟಿದ್ದೇನೆ. ಅತ್ತೆಯವರಿಂದಲೇ ಅಷ್ಟು ಉತ್ತಮ ಗುಣನಡತೆ, ಶಿಸ್ತುಬದ್ಧ ಜೀವನ, ಸಾಧನೆ ಸಾಧ್ಯವಾಯಿತು.ಅವರನ್ನು ನೋಡಿ ಜೀವನದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಅವರಂಥ ಅತ್ತೆ ಪಡೆಯುವುದಕ್ಕೂ ನಾನು ಮತ್ತು ಅವರಂಥ ಅಜ್ಜಿ ಪಡೆಯುವುದಕ್ಕೂ ನನ್ನ ಮಗ ಪುಣ್ಯ ಮಾಡಿದ್ದೇವೆʼʼಎಂದರು.

ಲೀಲಾವತಿ ಅವರು ತೋಟಗಾರಿಕೆಯಲ್ಲಿಯೂ ಅತ್ಯಂತ ಶಿಸ್ತಬದ್ಧವಾಗಿರುತ್ತಿದ್ದರು ಎಂದೂ ಹೇಳಿದರು. ಅವರು ನಟಿಸಿದ ಚಿತ್ರಗಳೆಲ್ಲ ನನಗೆ ಇಷ್ಟ. ಅವರ ಸಾಮಾಜಿಕ ಕಾರ್ಯ ಮಾದರಿ. ಜೀವನವೇ ಬೇರೆಯವರಿಗೆ ಮೀಸಲಿಟ್ಟರು ಎಂದರು. ತಾಯಿ ಕಳೆದುಕೊಂಡಿರುವ ವಿನೋದ್‌ ರಾಜ್‌ ಅವರನ್ನು ಖುಷಿಯಾಗಿರುವಂತೆ ನೋಡಿಕೊಳ್ಳುತ್ತೇವೆ ಎಂದು ಲೀಲಾವತಿ ಅವರ ಚೆನ್ನೈಯಲ್ಲಿ ವಾಸಿಸುತ್ತಿರುವ ಸೊಸೆ ವಿನು ಹೇಳಿದರು.

ಇದನ್ನೂ ಓದಿ: Actress Leelavathi: ವಿನೋದ್​ ರಾಜ್​ ಪುತ್ರನಿಗೆ ಲೀಲಾವತಿ ಅಜ್ಜಿಯೇ ಕನ್ನಡ ಟೀಚರ್​!

ಲೀಲಾವತಿ ಅಜ್ಜಿಯೇ ಕನ್ನಡ ಟೀಚರ್​!

ʻʻಅಜ್ಜಿ ನನಗೆ ಕನ್ನಡ ಹೇಳಿಕೊಟ್ಟಿದ್ದು. ನನಗೆ ಅಷ್ಟಾಗಿ ಮಾತನಾಡಲು ಬರುವುದಿಲ್ಲ. ಅವರು ಇದ್ದಿದ್ದರೆ ಇನ್ನೂ ಕನ್ನಡ ಕಲಿತಾ ಇದ್ದೆ. ಜೀವನದಲ್ಲಿ ಹೇಗೆ ಇರಬೇಕು ಎಂಬುದು ಅಜ್ಜಿ ನನಗೆ ಕಲಿಸಿದ್ದಾರೆ. ತಂದೆ ಅವರು ಕಲಾವಿದರು. ನಾನು ಐಟಿ ಫೀಲ್ಡ್‌ನಲ್ಲಿ ಇದ್ದೇನೆ. ನನ್ನ ಫೇವರೇಟ್‌ ಹೀರೊ ಕೂಡ ನನ್ನ ತಂದೆನೆ’ ಎಂದರು. ಮೊಮ್ಮಗನಿಗೆ ಯುವರಾಜ್​ ಎಂದು ಲೀಲಾವತಿ ಅವರೇ ನಾಮಕರಣ ಮಾಡಿದ್ದರು. ಆ ಎಲ್ಲ ವಿಷಯಗಳನ್ನು ಯುವರಾಜ್​ ಮೆಲುಕು ಹಾಕಿದ್ದಾರೆ. ‘ಅಂದು ನಾನು ಬಂದು ಅಜ್ಜಿ ಎಂದು ಕರೆದಾಗ ಕಣ್ಣು ಬಿಟ್ಟಿದ್ದರು. ಯುವರಾಜಾ ಎಂದು ನನ್ನನ್ನು ಕರೆದಿದ್ದರು. ಅದು ನನಗೆ ತುಂಬ ಫೀಲ್​ ಆಗುತ್ತಿದೆ’ ಎಂದು ಯುವರಾಜ್‌ ಹೇಳಿದ್ದಾರೆ.

ವಿನೋದ್‌ ರಾಜ್‌ ಅವರ ಪುತ್ರ ಯುವರಾಜ್‌, ಚೆನ್ನೈನಲ್ಲಿಯೇ ಅಮ್ಮನ ಜತೆಗೆ ಬೆಳೆಯುತ್ತಿದ್ದಾನೆ. ಚೆನ್ನೈಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

Continue Reading
Advertisement
Chhattisgarh to be CM Vishnu has two deputies and Raman Singh Speaker
ದೇಶ11 mins ago

ಛತ್ತೀಸ್‍‌ಗಢ ಸಿಎಂ ವಿಷ್ಣುಗೆ ಇಬ್ಬರು ಡೆಪ್ಯುಟಿಗಳು; ರಮಣ್ ಸಿಂಗ್ ಸ್ಪೀಕರ್

Rambhapuri seer and MB Patil
ಕರ್ನಾಟಕ28 mins ago

ಎಂ.ಬಿ. ಪಾಟೀಲ್‌ಗೆ ನೀರಾವರಿ ಖಾತೆ ಸಿಗಬೇಕಿತ್ತು; ಡಿಕೆಶಿಗೆ ಕೊಟ್ಟಿದ್ದಕ್ಕೆ ರಂಭಾಪುರಿ ಶ್ರೀ ಬೇಸರ!

India U19 vs Pakistan U19
ಕ್ರಿಕೆಟ್29 mins ago

U19 Asia Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ 8 ವಿಕೆಟ್​ ಸೋಲು

Reliance Retail launches beauty retail store 'Tira' in Bengaluru
ದೇಶ44 mins ago

Reliance Retail: ಯಲಹಂಕದಲ್ಲಿ ರಿಲಯನ್ಸ್ ರೀಟೇಲ್‌ನ ‘ಟಿರಾ’ ಮಳಿಗೆ ಆರಂಭ

South Africa vs India 1
ಕ್ರಿಕೆಟ್1 hour ago

IND vs SA: ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಪಂದ್ಯ ವಿಳಂಬ

Shri Ram Janmabhoomi Mandir carvings are wonderful
ದೇಶ1 hour ago

Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಅದ್ಭುತ ಕಲಾಕೃತಿಗಳು!

Bus-jeep accident
ಉಡುಪಿ1 hour ago

Road Accident: ಕಾರ್ಕಳ ಬಳಿ ಖಾಸಗಿ ಬಸ್‌-ಜೀಪ್ ನಡುವೆ ಭೀಕರ ಅಪಘಾತ; 12 ಮಂದಿಗೆ ಗಂಭೀರ ಗಾಯ

Killers who killed lawyer for property in kalaburagi
ಕರ್ನಾಟಕ2 hours ago

ವಕೀಲನ ಹತ್ಯೆ ಮಾಡಿ ರಕ್ತದ ಕೈಯಲ್ಲೇ ದಂಪತಿಯಿಂದ ಹಣ ಪಡೆದಿದ್ದ ಸುಪಾರಿ ಕಿಲ್ಲರ್ಸ್‌!

air india
ಉದ್ಯೋಗ2 hours ago

Job Alert: ಏರ್‌ ಇಂಡಿಯಾದಲ್ಲಿದೆ ಉದ್ಯೋಗಾವಕಾಶ; ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

man accused of murder wins acquittal after studying law and fighting own Case
ದೇಶ2 hours ago

ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಮಾಯಕ, ಲಾ ಓದಿ ತನ್ನ ಕೇಸನ್ನು ತಾನೇ ಗೆದ್ದ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ5 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ7 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ15 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌