Karan Johar | ತಮ್ಮ ಬಯೋಪಿಕ್‌ನಲ್ಲಿ ಯಾರು ನಟಿಸಬೇಕೆಂದು ಬಹಿರಂಗಪಡಿಸಿದ ಕರಣ್ ಜೋಹರ್! - Vistara News

ಬಾಲಿವುಡ್

Karan Johar | ತಮ್ಮ ಬಯೋಪಿಕ್‌ನಲ್ಲಿ ಯಾರು ನಟಿಸಬೇಕೆಂದು ಬಹಿರಂಗಪಡಿಸಿದ ಕರಣ್ ಜೋಹರ್!

ಕರಣ್‌ ಜೋಹರ್‌ (Karan Johar ) ತಮ್ಮ ಬಯೋಪಿಕ್‌ನಲ್ಲಿ ಯಾರು ನಟಿಸಬೇಕೆಂಬ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಬಾಲ್ಯದ ಕುರಿತೂ ಮಾತನಾಡಿದ್ದಾರೆ.

VISTARANEWS.COM


on

Karan Johar biopic news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ‘ಬಯೋಪಿಕ್’ನ ಭಾಗವಾಗಬೇಕೆಂದು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ (Karan Johar) ಬಹಿರಂಗಪಡಿಸಿದ್ದಾರೆ. ಇದಕ್ಕೆ ಕಾರಣವನ್ನು ನೀಡಿರುವ ಕರಣ್‌, ನಟ ರಣವೀರ್‌ ಸಿಂಗ್‌ ನನ್ನ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಬಲ್ಲರು. ಅವರು ನನ್ನ ಬಾಲ್ಯವನ್ನು ತೆರೆಯ ಮೇಲೆ ತೋರಿಸಬೇಕೆಂದು ಬಯಸುತ್ತಿದರು ಎನ್ನುವುದನ್ನು ಬಹಿರಂಗಪಡಿಸಿದರು.

ರೊಪೊಸೊ ಲೈವ್ ಶೋನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ಕರಣ್‌ ಜೋಹರ್‌, ನಾನು ಅದ್ಭುತ ಬಾಲ್ಯದ ನೆನಪುಗಳನ್ನು ಹೊಂದಿದ್ದು, ಪೋಷಕರು ನನಗೆ ಎಲ್ಲವನ್ನೂ ಚೆನ್ನಾಗಿ ಕಲಿಸಿಕೊಟ್ಟಿದ್ದಾರೆ ಎಂದಿದ್ದಾರೆ. ತಮ್ಮ ಬಯೋಪಿಕ್‌ನಲ್ಲಿ ಯಾರು ಉತ್ತಮವಾಗಿ ನಟಿಸಬಹುದು ಎನ್ನುವುದಕ್ಕೆ ಕರಣ್‌ ಜೋಹರ್‌ ಪ್ರತಿಕ್ರಿಯೆ ನೀಡಿ ʻʻ”ನನ್ನ ಪ್ರಕಾರ ರಣವೀರ್ ಸಿಂಗ್ʼʼ ಎಂದಿದ್ದಾರೆ.

ಇದನ್ನೂ ಓದಿ | ಕರಣ್‌ ಜೋಹರ್‌ ಬರ್ತ್‌ ಡೇ ಪಾರ್ಟಿಗೆ ಹೋಗಿದ್ದ 50ಕ್ಕೂ ಹೆಚ್ಚು ಮಂದಿಗೆ ಏನಾಯ್ತು?; ಜೋರಾಗಿದೆ ಚರ್ಚೆ

“ನನಗೆ ಅದ್ಭುತವಾದ ಬಾಲ್ಯವಿತ್ತು. ನನ್ನ ಹೆತ್ತವರು ನನಗೆ ಅತ್ಯಂತ ಅದ್ಭುತವಾದ ಜೀವನ ಪಾಠಗಳನ್ನು ಕಲಿಸಿದ್ದಾರೆ. ನಾನು ಮಗುವಾಗಿದ್ದಾಗ ಕೆಲವು ಭಾವನೆಗಳನ್ನು ಹೊಂದಿದ್ದೆ. ಇತರರಿಗೆ ಹೋಲಿಸಿದರೆ ನಾನು ಭಿನ್ನವಾಗಿರುವುದರಿಂದ ಅದಕ್ಕೆ ಬೆಲೆ ತೆರಬೇಕಾಯಿತು. ಇದು ಕಠಿಣವಾಗಿತ್ತು. ಆ ಹಂತದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆʼʼ ಎಂದು ಕರಣ್‌ ಹೇಳಿದರು.

ಕರಣ್ ಅವರನ್ನು KJo ಎಂದು ಕರೆಯಲಾಗುತ್ತದೆಯಾದರೂ ಅವರು ಆ ಅಡ್ಡ ಹೆಸರನ್ನು ಇಷ್ಟಪಡುವುದಿಲ್ಲ. ಜನರು ಅವರನ್ನು ಕರಣ್ ಎಂದು ಕರೆಯಲು ಬಯಸುತ್ತಾರೆ ಎನ್ನುವುದನ್ನು ಬಹಿರಂಗಪಡಿಸಿದರು. ತಮ್ಮ ಟಾಕ್‌ ಶೋನಲ್ಲಿ ಅಂತಾರಾಷ್ಟ್ರೀಯ ತಾರೆಗಳಾದ ಎಲ್ಲೆನ್ ಡಿಜೆನೆರೆಸ್ ಮತ್ತು ಮೆರಿಲ್ ಸ್ಟ್ರೀಪ್ ಅತಿಥಿಗಳಾಗಿ ಬರಬೇಕೆಂಬ ಆಶಯವನ್ನು ಹಂಚಿಕೊಂಡರು.

ಕರಣ್ ಜೋಹರ್ ಅವರು ಚಲನಚಿತ್ರ ನಿರ್ಮಾಪಕರಾದ ಯಶ್ ಜೋಹರ್ ಮತ್ತು ಹಿರೂ ಜೋಹರ್ ದಂಪತಿ ಪುತ್ರ. ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದ್ದರು. ʻಕಭಿ ಖುಷಿ ಕಭಿ ಗಮ್’, ‘ಕಭಿ ಅಲ್ವಿದಾ ನಾ ಕೆಹೆನಾ’, ‘ಮೈ ನೇಮ್ ಇಸ್ ಖಾನ್’, ‘ಸ್ಟೂಡೆಂಟ್ ಆಫ್ ದಿ ಇಯರ್’ ಹೀಗೆ ಅನೇಕ ಹಿಟ್‌ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ | Star Week | ದೀಪಾವಳಿ ಪಾರ್ಟಿಗೆ ಬಾಲಿವುಡ್ ತಾರೆಯರ ಪ್ರಭಾವಳಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Jolly LLB 3: ಬರ್ತಿದೆ ಅಕ್ಷಯ್‌ ಕುಮಾರ್‌ ನಟನೆಯ ಜಾಲಿ ಎಲ್‌ಎಲ್‌ಬಿ 3; ಈ ಬಾರಿ ಇದೆ ಸರ್‌ಪ್ರೈಸ್!

Jolly LLB 3: ಜಾಲಿ ಎಲ್‌ಎಲ್‌ಬಿ 3 ಸಿನಿಮಾ ಶೂಟಿಂಗ್‌ ಆರಂಭವಾಗಿರುವ ಕುರಿತು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಾರಿ ಅರ್ಷದ್‌ ವಾರ್ಸಿ ಹಾಗೂ ಅಕ್ಷಯ್‌ ಕುಮಾರ್‌ ಅವರು ಪಾರ್ಟ್‌ 3ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

VISTARANEWS.COM


on

Jolly LLB 3
Koo

ಮುಂಬೈ: ಅರ್ಷದ್‌ ವಾರ್ಸಿ ನಟನೆಯ ಜಾಲಿ ಎಲ್‌ಎಲ್‌ಬಿ (Jolly LLB) ಹಾಗೂ ಅಕ್ಷಯ್‌ ಕುಮಾರ್‌ (Askhay Kumar) ಅಭಿನಯದ ಜಾಲಿ ಎಲ್‌ಎಲ್‌ಬಿ 2 (Jolly LLB 2) ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದವು. ಕೋರ್ಟ್‌ ಡ್ರಾಮಾ ಜಾನರ್‌ನ ಈ ಸಿನಿಮಾಗಳು ಕಾಮಿಡಿ ದಿಸೆಯಲ್ಲೂ ಜನರ ಮನಸೂರೆಗೊಳಿಸಿದ್ದವು. ಸೌರಭ್‌ ಶುಕ್ಲಾ ಅವರ ಮನೋಜ್ಞ ನಟನೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ, ನಟ ಅಕ್ಷಯ್‌ ಕುಮಾರ್‌ ಅವರು ಜಾಲಿ ಎಲ್‌ಎಲ್‌ಬಿ 3 (Jolly LLB 3) ಸಿನಿಮಾ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ.

ಹೌದು, ಜಾಲಿ ಎಲ್‌ಎಲ್‌ಬಿ 3 ಸಿನಿಮಾ ಶೂಟಿಂಗ್‌ ಶುರುವಾಗಿರುವ ಕುರಿತು ಅಕ್ಷಯ್‌ ಕುಮಾರ್‌ ಅವರು ವಿಡಿಯೊ ಸಮೇತ ಮಾಹಿತಿ ನೀಡಿದ್ದಾರೆ. “ಈಗ ಅಸಲಿ ಯಾರು, ನಕಲಿ ಯಾರು ಎಂಬುದು ಗೊತ್ತಿಲ್ಲ. ಆದರೆ, ಇದು ನಿಮಗೆ ಅತ್ಯುತ್ತಮ ಸಿನಿ ಪಯಣ ಆಗಲಿದೆ. ನನ್ನ ಅಪ್‌ಡೇಟ್‌ಗಳಿಗಾಗಿ ಕಾಯುತ್ತಿರಿ. ಜೈ ಮಹಾಕಾಳ್”‌ ಎಂಬುದಾಗಿ ಅಕ್ಷಯ್‌ ಕುಮಾರ್‌ ಅವರು ವಿಡಿಯೊ ಜತೆಗೆ ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಕ್ಷಯ್‌ ಕುಮಾರ್‌ ಘೋಷಣೆ ಬಳಿಕ ಅಭಿಮಾನಿಗಳು ಖುಷಿಯಾಗಿದ್ದಾರೆ.

ಸಿನಿ ಪ್ರೇಮಿಗಳಿಗೆ ಸರ್‌ಪ್ರೈಸ್‌

ಜಾಲಿ ಎಲ್‌ಎಲ್‌ಬಿ ಸಿನಿಮಾದಲ್ಲಿ ಅಭಿಮಾನಿಗಳಿಗೆ ಅಕ್ಷಯ್‌ ಕುಮಾರ್‌ ಸರ್‌ಪ್ರೈಸ್‌ ನೀಡಿದ್ದಾರೆ. ಜಾಲಿ ಎಲ್‌ಎಲ್‌ಬಿ ಸರಣಿಯ ಮೊದಲ ಸಿನಿಮಾದಲ್ಲಿ ಅರ್ಷದ್‌ ವಾರ್ಸಿ ಅವರು ಹೀರೊ ಆಗಿದ್ದರೆ, ಎರಡನೇ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್‌ ಹೀರೊ ಆಗಿದ್ದರು. ಆದರೆ, ಮೂರನೇ ಭಾಗದಲ್ಲಿ ಅಕ್ಷಯ್‌ ಕುಮಾರ್‌ ಹಾಗೂ ಅರ್ಷದ್‌ ವಾರ್ಸಿ ಇಬ್ಬರೂ ಇದ್ದಾರೆ. ಎಂದಿನಂತೆ ಸೌರಭ್‌ ಶುಕ್ಲಾ ಅವರು ನ್ಯಾಯಾಧೀಶರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಿನಿಮಾಗೆ ಯಾರು ನಾಯಕಿ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಅಕ್ಷಯ್‌ ಕುಮಾರ್‌ ಹಾಗೂ ಅರ್ಷದ್‌ ವಾರ್ಸಿ ಅವರು ಇದಕ್ಕೂ ಮೊದಲು ಎರಡು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 2002ರಲ್ಲಿ ಬಿಡುಗಡೆಯಾದ ಜಾನಿ ದುಷ್ಮನ್: ಏಕ್‌ ಅನೋಖಿ ಕಹಾನಿ ಹಾಗೂ 2022ರಲ್ಲಿ ಬಿಡುಗಡೆಯಾದ ಬಚ್ಚನ್‌ ಪಾಂಡೆ ಸಿನಿಮಾದಲ್ಲಿ ಇಬ್ಬರೂ ಜತೆಯಾಗಿ ನಟಿಸಿದ್ದರು. ಅರ್ಷದ್‌ ವಾರ್ಸಿ ಅವರ ಜಾಲಿ ಎಲ್‌ಎಲ್‌ಬಿ 2013ರಲ್ಲಿ ಬಿಡುಗಡೆಯಾಗಿತ್ತು. ಅಕ್ಷಯ್‌ ಕುಮಾರ್‌ ನಟನೆಯ ಜಾಲಿ ಎಲ್‌ಎಲ್‌ಬಿ 2 ಸಿನಿಮಾ 2017ರಲ್ಲಿ ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದನ್ನೂ ಓದಿ: Akshay Kumar: ತೆಲುಗು ಚಿತ್ರಕ್ಕೆ ಎಂಟ್ರಿ ಕೊಟ್ಟ ಅಕ್ಷಯ್‌ ಕುಮಾರ್‌; ಜತೆಗಿರಲಿದ್ದಾರೆ ಶಿವಣ್ಣ!

Continue Reading

ಬಾಲಿವುಡ್

Deepika Padukone: ಸಖತ್‌ ಗ್ಲೋ ಆದ ಪ್ರೆಗ್ನೆಂಟ್‌ ದೀಪಿಕಾ: ಜ್ಯೂನಿಯರ್‌ ಆರ್ಟಿಸ್ಟ್‌ ಕೊಟ್ಟ ಸ್ಪೆಷಲ್‌ ಗಿಫ್ಟ್‌ ಏನು?

Deepika Padukone: ದೀಪಿಕಾ ತನ್ನೊಂದಿಗೆ ಕೆಲಸ ಮಾಡುವ ಜ್ಯೂನಿಯರ್‌ ಕಲಾವಿದರೊಂದಿಗೆ ಪೋಸ್ ನೀಡಿದ್ದಾರೆ. ಜ್ಯೂನಿಯರ್‌ ಕಲಾವಿದರು ನಟಿಗಾಗಿ ಮಾಡಿದ ಸ್ಕೆಚ್ ಮತ್ತು ಹೂಗುಚ್ಛವನ್ನು ನೀಡಿದ್ದಾರೆ. ಫೋಟೊ ಶೇರ್‌ ಮಾಡಿ ʻʻನಮ್ಮ ನಾಯಕಿ ಲೇಡಿ ಸಿಂಗಮ್ಗೆ” ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ. ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ.ಈ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.

VISTARANEWS.COM


on

Deepika Padukone
Koo

ಬೆಂಗಳೂರು: ತಾಯಿಯಾಗಲಿರುವ ದೀಪಿಕಾ ಪಡುಕೋಣೆ ( Deepika Padukone) ಸದ್ಯ `ಸಿಂಗಂ ಅಗೇನ್’ ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಸೆಟ್‌ನಲ್ಲಿದ್ದಾಗ, ದೀಪಿಕಾ ತನ್ನೊಂದಿಗೆ ಕೆಲಸ ಮಾಡುವ ಜ್ಯೂನಿಯರ್‌ ಕಲಾವಿದರೊಂದಿಗೆ ಪೋಸ್ ನೀಡಿದ್ದಾರೆ. ಫೋಟೊದಲ್ಲಿ ದೀಪಿಕಾ ಪಡುಕೋಣೆ ಅವರ ಮುಖ ಗ್ಲೋ ಆಗಿ ಕಂಡಿದೆ. ಇದೀಗ ದೀಪಿಕಾ ಫ್ಯಾನ್ಸ್‌ ಮೆಚ್ಚಿನ ನಟಿಯನ್ನು ಕಂಡು ಸಂತಸ ಹೊರಹಾಕುತ್ತಿದ್ದಾರೆ.

ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ʻಸಿಂಗಮ್ ಅಗೇನ್ʼ ಚಿತ್ರದಲ್ಲಿ ಲೇಡಿ ಸಿಂಗಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ, ದೀಪಿಕಾ ಅವರೊಂದಿಗೆ ಕೆಲಸ ಮಾಡಿದ ಜ್ಯೂನಿಯರ್‌ ಕಲಾವಿದರು ನಟಿಯೊಂದಿಗಿನ ಸೆಲ್ಫಿಯನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಜ್ಯೂನಿಯರ್‌ ಕಲಾವಿದರು ನಟಿಗಾಗಿ ಮಾಡಿದ ಸ್ಕೆಚ್ ಮತ್ತು ಹೂಗುಚ್ಛವನ್ನು ನೀಡಿದ್ದಾರೆ. ಫೋಟೊ ಶೇರ್‌ ಮಾಡಿ ʻʻನಮ್ಮ ನಾಯಕಿ ಲೇಡಿ ಸಿಂಗಮ್‌”ಗೆ ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.

ಜ್ಯೂನಿಯರ್‌ ಆರ್ಟಿಸ್ಟ್‌ಗಳು ಪೋಟೊ ಶೇರ್‌ ಮಾಡಿ ʻದೀಪಿಕಾ ಪಡುಕೋಣೆ ದಿ ಓನ್ಲಿ ಲೇಡಿ ಸಿಂಗಮ್ . ನಿಮ್ಮನ್ನು ಭೇಟಿಯಾಗಿದ್ದು ಸಂತೋಷವಾಗಿದೆ ಮೇಡಮ್. ನನ್ನ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದು. ನಿಮ್ಮೊಂದಿಗೆ ಕೆಲಸ ಮಾಡಿದ್ದು ನಮ್ಮ ಅದೃಷ್ಟ. ಭವಿಷ್ಯದಲ್ಲಿ ನಾವು ಇನ್ನೂ ಹಲವು ಬಾರಿ ನಿಮ್ಮನ್ನು ಭೇಟಿಯಾಗಬೇಕೆಂದು ಪ್ರಾರ್ಥಿಸುತ್ತೇವೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Deepika Padukone: ತಾಯ್ತತನದ ಜೊತೆಗೆ ವೃತ್ತಿ ಜೀವನ ನಿಭಾಯಿಸುತ್ತಿರುವ ದೀಪಿಕಾ ಪಡುಕೋಣೆ

ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಹಲವು ಪ್ರಮುಖ ನಟರು ಇದ್ದಾರೆ. ಲೇಡಿ ಸಿಂಗಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆʼʼಎನ್ನಲಾಗಿತ್ತು.

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ. ಈ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.

Continue Reading

ಬಾಲಿವುಡ್

Amitabh Bachchan: ಅಮಿತಾಭ್‌ ಬಚ್ಚನ್‌ ವ್ಯಾನ್‌ನಲ್ಲಿ ಸುಸ್ಸು ಮಾಡೋದೇ ನನ್ನ ಗುರಿ ಎಂದ ಖ್ಯಾತ ನಿರ್ದೇಶಕ!

Amitabh Bachchan: ವಿಧು ವಿನೋದ್ ಚೋಪ್ರಾ (Vidhu Vinod Chopra) ಜತೆ ಬಚ್ಚನ್‌ ಸಿನಿಮಾ ಮಾಡಲು ಒಪ್ಪಿದರು. ಅಮಿತಾಭ್‌ ಅವರು ಕೂಡ ಉತ್ತಮ ಸ್ಕ್ರಿಪ್ಟ್‌ಗಾಗಿ ಕಾದಿದ್ದರು. ಹೀಗಾಗಿ ಅಂತೂ ಬಚ್ಚನ್‌ ಹಾಗೂ ವಿಧು ವಿನೋದ್ ಚೋಪ್ರಾ ಒಟ್ಟಿಗೆ ಕೈ ಜೋಡಿಸಿ ʻಏಕಲವ್ಯ: ದಿ ರಾಯಲ್ ಗಾರ್ಡ್‌ʼ ಸಿನಿಮಾ (Eklavya: The Royal Guard) ಮಾಡಿ ತೆರೆ ತಂದರು. ವಿಧು ವಿನೋದ್ ಚೋಪ್ರಾ ಮಾತನಾಡಿ ʻʻಅಮಿತಾಭ್‌ ಅವರ ವ್ಯಾನಿಟಿ ವ್ಯಾನ್‌ನಲ್ಲಿ (vanity van) ಮೂತ್ರ ಮಾಡಬೇಕು ಎಂಬುದೇ ನನ್ನ ದೊಡ್ಡ ಮಹತ್ವಾಕಾಂಕ್ಷೆಯಾಗಿತ್ತುʼʼಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Amitabh Bachchan vanity van ambition was to pee by Vidhu Vinod Chopra
Koo

ಬೆಂಗಳೂರು: ಬಾಲಿವುಡ್‌ ಫೇಮಸ್‌ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ಅಮಿತಾಭ್‌ ಬಚ್ಚನ್‌ (Amitabh Bachchan) ಅವರೊಂದಿಗಿನ ಅವರ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಹೃಷಿಕೇಶ್ ಮುಖರ್ಜಿಯವರ ಶಿಫಾರಸು ಮೇರೆಗೆ ಅಮಿತಾಭ್‌ ಅವರನ್ನು ಮೊದಲ ಬಾರಿ ಭೇಟಿ ಮಾಡಿದರು. ಆ ಬಳಿಕ ವಿಧು ವಿನೋದ್ ಚೋಪ್ರಾ (Vidhu Vinod Chopra) ಜತೆ ಬಚ್ಚನ್‌ ಸಿನಿಮಾ ಮಾಡಲು ಒಪ್ಪಿದರು. ಅಮಿತಾಭ್‌ ಅವರು ಕೂಡ ಉತ್ತಮ ಸ್ಕ್ರಿಪ್ಟ್‌ಗಾಗಿ ಕಾದಿದ್ದರು. ಹೀಗಾಗಿ ಅಂತೂ ಬಚ್ಚನ್‌ ಹಾಗೂ ವಿಧು ವಿನೋದ್ ಚೋಪ್ರಾ ಒಟ್ಟಿಗೆ ಕೈ ಜೋಡಿಸಿ ʻಏಕಲವ್ಯ: ದಿ ರಾಯಲ್ ಗಾರ್ಡ್‌ʼ ಸಿನಿಮಾ (Eklavya: The Royal Guard) ಮಾಡಿ ತೆರೆ ತಂದರು.

ಕೆಲ್ಲಾಗ್ ಮ್ಯಾನೇಜ್‌ಮೆಂಟ್ ಸ್ಕೂಲ್‌ನಲ್ಲಿ ನಡೆದ ಚಾಟ್‌ನಲ್ಲಿ ವಿಧು ವಿನೋದ್ ಚೋಪ್ರಾ ಮಾತನಾಡಿ ʻʻಅಮಿತಾಭ್‌ ಅವರ ವ್ಯಾನಿಟಿ ವ್ಯಾನ್‌ನಲ್ಲಿ (vanity van) ಮೂತ್ರ ಮಾಡಬೇಕು ಎಂಬುದೇ ನನ್ನ ದೊಡ್ಡ ಮಹತ್ವಾಕಾಂಕ್ಷೆಯಾಗಿತ್ತುʼʼಎಂದು ಹೇಳಿಕೊಂಡಿದ್ದಾರೆ. ವಿಧು ವಿನೋದ್ ಚೋಪ್ರಾ ಮಾತನಾಡಿ, “ಅಮಿತಾಭ್‌ ಅವರೊಂದಿಗೆ ಚಲನಚಿತ್ರ ಮಾಡುವುದು ಅವರ ವೈಯಕ್ತಿಕ ವಾಶ್‌ರೂಮ್‌ನಲ್ಲಿ ಮೂತ್ರ ವಿಸರ್ಜಿಸುವಷ್ಟು ಮುಖ್ಯವಾಗಿರಲಿಲ್ಲ” ಎಂದು ನಗುತ್ತ ಹೇಳಿದರು. “ನಾನು ಅಮಿತಾಭ್‌ ಅವರನ್ನು ಮೊದಲು ಅವರ ವ್ಯಾನಿಟಿ ವ್ಯಾನ್‌ನಲ್ಲಿ ಭೇಟಿಯಾದೆ. ಆ ಸಮಯದಲ್ಲಿ, ಅಮಿತಾಭ್‌ ಬಚ್ಚನ್ ಅವರ ವ್ಯಾನಿಟಿ ವ್ಯಾನ್‌ನಲ್ಲಿ ಶೌಚಾಲಯವಿದೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಮೊದಲ ಬಾರಿಯ ಭೇಟಿಯಲ್ಲಿಯೇ ನಾನು ತುಂಬಾ ಅಸಭ್ಯವಾಗಿ ವರ್ತಿಸಿದೆ. ಅಮಿತಾಭ್‌ಗೆ ನಾನು ಹೀಗೆ ಹೇಳಿದೆ. ನನ್ನ ಹೆಸರು ತುಂಬಾ ಪ್ರಭಾವಶಾಲಿಯಾಗಿಲ್ಲದಿರಬಹುದು, ಆದರೆ ನನ್ನ ಚಿತ್ರ….ಇದೆʼʼಎಂದು ಹೇಳಿದಾಗ ಸ್ವಲ್ಪ ನನ್ನನ್ನು ದಿಟ್ಟಿಸಿ ನೋಡಿ ಕೊನೆಗೆ ಸಿನಿಮಾ ಮಾಡಲು ಒಪ್ಪಿದರು ಎಂದರು.

ಇದನ್ನೂ ಓದಿ: Amit Shah: ಅಮಿತ್‌ ಶಾ ತಿರುಚಿದ ವಿಡಿಯೋ ಪ್ರಕರಣ: ಆಪ್‌, ಕಾಂಗ್ರೆಸ್‌ ಪಕ್ಷದ ಮೂವರ ಬಂಧನ

ಮಾತು ಮುಂದುವರಿಸಿ ʻʻಅಮಿತಾಭ್‌, ಹೃಷಿ ಮತ್ತು ನಟಿ ರೇಖಾ ಎಲ್ಲರೂ ಈಗ ಕೆಲಸದಲ್ಲಿ ನಿರತರಾಗಿದ್ದಾರೆ. ಆಗಾಗ ಅವರ ಮಧ್ಯೆ ಕೆಲವು ವಾದಗಳು ನಡೆಯುತ್ತಿತ್ತು. ನಾನು ನನ್ನ ಸಿನಿಮಾ ಮರ್ಡರ್‌ ಅಟ್‌ ಮಂಕಿ ಹಿಲ್‌ (Murder at Monkey Hill) ಸಿನಿಮಾವನ್ನು ಅಮಿತಾಭ್‌ ಅವರಿಗೆ ತೋರಸಿಬೇಕಿತ್ತು. ಸಂಜೆ 4ರ ಸುಮಾರಿಗೆ ನನ್ನ ಸಿನಿಮಾ ಅಮಿತಾಭ್‌ಗೆ ನೋಡಲು ಸಮಯ ಇಲ್ಲ ಎಂದು ಅರಿತುಕೊಂಡೆ. ಸ್ವಲ್ಪ ಸಮಯದ ನಂತರ, ನಾನು ಅಲ್ಲಿಂದ ಹೊರಟೆ. ನಾನು ಹೊರಗೆ ಕುಳಿತಿದ್ದೆ. ಆಗ ನನ್ನ ಭುಜದ ಮೇಲೆ ಒಂದು ಕೈ ಬಂತು. ಅದು ಯಾರದ್ದು ಅಲ್ಲ ಅಮಿತಾಭ್‌ ಅವರದ್ದು. ಅಮಿತಾಭ್ ನನ್ನ ಬಳಿ ಕೇಳಿದರು. ಥಿಯೇಟರ್‌ 5ರವರೆಗೆ ಬುಕ್ಕಿಂಗ್‌ ಆಗಿದೆಯಾ? ಇದ್ದರೆ ಹೋಗೋಣ ಎಂದು. ಮಾತ್ರವಲ್ಲ ನನ್ನ ಜೊತೆಯಲ್ಲಿ ಒಬ್ಬ ಸ್ನೇಹಿತನನ್ನು ಕರೆದುಕೊಂಡು ಬರಬಹುದೇ ಎಂದು ಕೇಳಿದರು. ಅದು ಯಾರು ಅಲ್ಲ. ರೇಖಾ ಆಗಿದ್ದರು. ಬಳಿಕ ನಾವೆಲ್ಲ ಸಿನಿಮಾ ನೋಡಲು ತಯಾರಾದೆವುʼʼಎಂದರು.

ಮಾತು ಮುಂದುವರಿಸಿ ʻʻಹೀಗೆ ನಾನು ಅಮಿತಾಭ್‌ ಅವರ ಬಳಿ ನಿಮ್ಮ ವ್ಯಾನಿಟಿ ವ್ಯಾನ್‌ ಶೌಚಾಲಯವನ್ನು ಬಳಸಬಹುದೇ?’ ಎಂದು ಕೇಳಿದೆ, ಅಮಿತಾಭ್‌ ಬಚ್ಚನ್ ಅವರ ವ್ಯಾನ್‌ನಲ್ಲಿ ಮೂತ್ರ ಮಾಡುವುದು ನನ್ನ ಜೀವನದ ದೊಡ್ಡ ಮಹತ್ವಾಕಾಂಕ್ಷೆಯಾಗಿತ್ತು. ಚಿತ್ರವು ವರ್ಕ್ ಔಟ್ ಆಗುತ್ತದೋ ಇಲ್ಲವೋ ಯಾರಿಗೆ ಗೊತ್ತು, ಆದರೆ ಕನಿಷ್ಠ ಅವರ ವ್ಯಾಬಿಟಿ ವ್ಯಾನ್‌ನ ಶೌಚಾಲಯದಲ್ಲಿ ನಾನು ಮೂತ್ರ ವಿಸರ್ಜಿಸಿದ್ದೇನೆ ಅಂತಾದರೂ ಖುಷಿ ಇರತ್ತದಲ್ಲ ಎಂದು ಕೇಳಿದೆ. ಇದಾದ ಬಳಿಕ ಬಚ್ಚನ್ ಅಂತಿಮವಾಗಿ ನನ್ನ ಸಿನಿಮಾ ನೋಡಿದರು. ಒಟ್ಟಿಗೆ ಕೆಲಸ ಮಾಡಬೇಕೆಂದು ಹೇಳಿದರು. ಕೊನೆಗೆ ʻಏಕಲವ್ಯ: ದಿ ರಾಯಲ್ ಗಾರ್ಡ್‌ʼ ಸಿನಿಮಾ ಮಾಡಿದೆವು. ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಯಿತುʼʼಎಂದರು. ಸಿನಿಮಾ ಹಿಟ್‌ ಆದ ಬಳಿಕ ಬಚ್ಚನ್‌ ಅವರು ಚೋಪ್ರಾ ಅವರಿಗೆ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

Continue Reading

ಬಾಲಿವುಡ್

Swara Bhasker: ಕಂಗನಾ- ಸ್ವರಾ ಭಾಸ್ಕರ್ ನಡುವಿನ ದೊಡ್ಡ ವ್ಯತ್ಯಾಸವೇನು? ನಟಿಯ ಬಾಯಲ್ಲೇ ಕೇಳಿ!

Swara Bhasker : ಸ್ವರಾ ಮತ್ತು ಕಂಗನಾ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2011 ರಲ್ಲಿ ʻತನು ವೆಡ್ಸ್ ಮನು’ ಮತ್ತು 2015 ರಲ್ಲಿ `ತನು ವೆಡ್ಸ್ ಮನು ರಿಟರ್ನ್ಸ್’.ಕಂಗನಾ ಹಲವಾರು ಸಂದರ್ಭಗಳಲ್ಲಿ ಸೋಷಿಯಲ್‌ ಮೀಡಿಯಾ ಮೂಲಕ ಸ್ವರಾ ಅವರ ಜತೆ ವಾರ್‌ ಮಾಡಿದ್ದಾರೆ. ಸ್ವರಾ 2023ರಲ್ಲಿ ಸಂದರ್ಶನದ ಸಮಯದಲ್ಲಿ ಕಂಗನಾ ಅವರನ್ನು ಹೊಗಳಿದ್ದು ಇದೆ. ತನು ವೆಡ್ಸ್ ಮನು ಚಿತ್ರೀಕರಣದ ಸಮಯದಲ್ಲಿ ಕಂಗನಾ ಹಾಗೂ ಸ್ವರಾ ಉತ್ತಮ ಸ್ನೇಹಿತರಾಗಿದ್ದರು.

VISTARANEWS.COM


on

Swara Bhasker reveals big difference between Kangana Ranaut and herself
Koo

ಬೆಂಗಳೂರು: ಕಂಗನಾ ರಣಾವತ್ ( Kangana Ranaut ) ಅವರಿಗೆ ಹಿಂದಿ ಚಲನಚಿತ್ರೋದ್ಯಮದ ಅನೇಕ ನಟಿ ನಟಿಯರ ಜತೆ ವೈಮನಸ್ಸು ಇದೆ. ಅವರಲ್ಲಿ ಒಬ್ಬರು ಸ್ವರಾ ಭಾಸ್ಕರ್ (Swara Bhasker). ಕಂಗನಾ ಅವರು ಸ್ವರಾ ಅವರನ್ನು ‘ಬಿ-ಗ್ರೇಡ್ ನಟಿ’ ಎಂದು ಈ ಹಿಂದೆ ಕರೆದಿದ್ದರು. ನಟಿ ಮತ್ತು ರಾಜಕಾರಣಿ ಸ್ವರಾ ಇದೀಗ ಸಂದರ್ಶನವೊಂದರಲ್ಲಿ ತಮಗೆ ಹಾಗೂ ಕಂಗನಾ ನಡುವೆ ಇರುವ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ.

ಸ್ವರಾ ಮತ್ತು ಕಂಗನಾ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2011 ರಲ್ಲಿ ʻತನು ವೆಡ್ಸ್ ಮನು’ ಮತ್ತು 2015 ರಲ್ಲಿ `ತನು ವೆಡ್ಸ್ ಮನು ರಿಟರ್ನ್ಸ್’. ಇತ್ತೀಚಿನ ಸಂದರ್ಶನದಲ್ಲಿ, ಸ್ವರಾ ಅವರಿಗೆ ಕಂಗನಾ ಕುರಿತು ಪ್ರಶ್ನೆ ಎದುರಾಯಿತು. ಆಗ ಸ್ವರಾ ಮಾತನಾಡಿ ʻʻಕಂಗನಾ ಹಾಗೂ ನನಗೆ ಬಹಳಷ್ಟು ವ್ಯತ್ಯಾಸವಿದೆ. ಕಂಗನಾ ಪ್ರತಿ ಬಾರಿ ಸರ್ಕಾರದ ಪರವಾಗಿ ಮಾತ್ರ ಧ್ವನಿ ಎತ್ತುತ್ತಾರೆ. ಆದರೆ ನಾನು ಹಾಗಲ್ಲ. ನಾನು ಯಾವಾಗಲೂ ಅಧಿಕಾರದಲ್ಲಿರುವವರನ್ನು ಪ್ರಶ್ನಿಸಲು ಧ್ವನಿ ಎತ್ತುತ್ತೇನೆʼʼಎಂದರು.

ಇದನ್ನೂ ಓದಿ: Parliament Flashback: ಸೋನಿಯಾ ಗಾಂಧಿ-ಸುಷ್ಮಾ ಸ್ವರಾಜ್‌ ಕದನಕ್ಕೆ ಅಖಾಡವಾಗಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರ

ರಾಹುಲ್ ಗಾಂಧಿ ನಾಯಕನಾಗಿ ಇಷ್ಟ

ವಿವಿಧ ರಾಜಕೀಯ ಪಕ್ಷಗಳಿಂದ ಆಫರ್‌ಗಳು ಬರುತ್ತಿರುವ ಬಗ್ಗೆ ಸ್ವರಾ ಮಾತನಾಡಿ ʻನೀವು ಮಾಧ್ಯಮಗಳನ್ನು ನೋಡುವುದಾದರೆ ಅವರ ಪ್ರಕಾರ ನನಗೆ ಹಲವಾರು ಪಕ್ಷಗಳಿಂದ ಆಫರ್‌ಗಳು ಬಂದಿವೆ. ಆದರೆ ಅವೆಲ್ಲ ಸುಳ್ಳು. ನಾನು ರಾಹುಲ್ ಗಾಂಧಿಯನ್ನು ನಾಯಕನಾಗಿ ಇಷ್ಟಪಡುತ್ತೇನೆ. ಅವರ ದೃಷ್ಟಿ, ಅವರು ಧ್ವನಿ ಎತ್ತುವ ಸಮಸ್ಯೆಗಳು ಮತ್ತು ಅವರ ಪ್ರಯತ್ನಗಳು ನಮ್ಮ ದೇಶಕ್ಕೆ ಬಹಳ ಮುಖ್ಯವೆಂದು ನಾನು ಭಾವಿಸುತ್ತೇನೆ. ನಮ್ಮ ದೇಶದ ಬಗ್ಗೆ ಪ್ರೀತಿ ಇರುವ ರಾಜಕಾರಣಿ ಯಾರೇ ಆಗಿರಲಿ ಅವರನ್ನು ನಾನು ಬೆಂಬಲಿಸುತ್ತೇನೆʼʼಎಂದರು.

ಕಂಗನಾ ಹಲವಾರು ಸಂದರ್ಭಗಳಲ್ಲಿ ಸೋಷಿಯಲ್‌ ಮೀಡಿಯಾ ಮೂಲಕ ಸ್ವರಾ ಅವರ ಜತೆ ವಾರ್‌ ಮಾಡಿದ್ದಾರೆ. ಸ್ವರಾ 2023ರಲ್ಲಿ ಸಂದರ್ಶನದ ಸಮಯದಲ್ಲಿ ಕಂಗನಾ ಅವರನ್ನು ಹೊಗಳಿದ್ದು ಇದೆ. ತನು ವೆಡ್ಸ್ ಮನು ಚಿತ್ರೀಕರಣದ ಸಮಯದಲ್ಲಿ ಕಂಗನಾ ಹಾಗೂ ಸ್ವರಾ ಉತ್ತಮ ಸ್ನೇಹಿತರಾಗಿದ್ದರು. ಚಿತ್ರೀಕರಣದ ವೇಳೆ ನನ್ನ ಕೈ ಹಿಡಿದು ನಡೆಸುತ್ತಿದ್ದಳು ಎಂದು ಕಂಗನಾ ಬಗ್ಗೆ ಸ್ವರಾ ಅದೆಷ್ಟೋ ಬಾರಿ ಹೇಳಿಕೊಂಡಿದ್ದೂ ಇದೆ. ಆದರೆ ಬರಬರುತ್ತ ಇಬ್ಬರ ನುಡುವೆ ವೈಮನಸ್ಸು ಹೆಚ್ಚಾಯ್ತು.

ಲೋಕಸಭಾ ಚುನಾವಣೆಗೆ ನಟಿ ಕಂಗನಾ ಅವರು ಗಮನಾರ್ಹ ರಾಜಕೀಯ ಇತಿಹಾಸವನ್ನು ಹೊಂದಿರುವ ಹಿಮಾಚಲ ಪ್ರದೇಶದ ಮಂಡಿಯಿಂದ ಸ್ಪರ್ಧಿಸಲು ಆಯ್ಕೆ ಮಾಡಿರುವುದು ಕುತೂಹಲವನ್ನು ಹೆಚ್ಚಿಸುತ್ತಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಮಂಡಿಯಲ್ಲಿ ರಾಜಕೀಯ ರಂಗಕ್ಕೆ ಕಾಲಿಡುತ್ತಿದ್ದ ರಣಾವತ್ ಅವರಿಗೆ ಕಠಿಣ ಸವಾಲನ್ನು ಒಡ್ಡಿತ್ತು. ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸುವ ಗುರಿ ಹೊಂದಿರುವ ಬಿಜೆಪಿ 2019ರಂತೆ ತನ್ನ ಯಶಸ್ಸನ್ನು ಪುನರಾವರ್ತಿಸುವ ಭರವಸೆಯಲ್ಲಿದೆ.

ನಟಿ ಕಂಗನಾ ರಣಾವತ್ ಅವರು ತಮ್ಮ ಮುಂಬರುವ ಚಿತ್ರ ‘ಎಮರ್ಜೆನ್ಸಿ’ ಗಾಗಿ ಸಜ್ಜಾಗುತ್ತಿದ್ದಾರೆ. ಇದು ಅವರ ನಿರ್ದೇಶನಕ ಚೊಚ್ಚಲ ಚಿತ್ರವಾಗಿದೆ. ಹಾಗೇ ನಟಿ ಇತ್ತೀಚೆಗೆ ಅಯೋಧ್ಯೆಯಲ್ಲಿ ಹೊಸದಾಗಿ ಉದ್ಘಾಟಿಸಲಾದ ರಾಮಮಂದಿರಕ್ಕೂ ಭೇಟಿ ನೀಡಿದ್ದಾರೆ.

Continue Reading
Advertisement
Murder case in Bengaluru
ಬೆಂಗಳೂರು3 mins ago

Murder Case : ನಡುರಸ್ತೆಯಲ್ಲೆ ಪತ್ನಿಗೆ ಚಾಕು ಇರಿದು ಕೊಂದ ಪತಿ

Prajwal Revanna Case Locked up as Prajwal arrives at Bengaluru airport
ಹಾಸನ4 mins ago

Prajwal Revanna Case: ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಜ್ವಲ್‌ ಬರುತ್ತಿದ್ದಂತೆ ಲಾಕ್‌! ಏನಿದು SIT ಸೂಚನೆ?

Andre Russell
ಕ್ರಿಕೆಟ್16 mins ago

Andre Russell : ಬ್ರಾವೊ ರೀತಿಯಲ್ಲೇ ಬಾಲಿವುಡ್​ಗೆ ಎಂಟ್ರಿ ಪಡೆದ ಆ್ಯಂಡ್ರೆ ರಸೆಲ್​

Jolly LLB 3
ಸಿನಿಮಾ17 mins ago

Jolly LLB 3: ಬರ್ತಿದೆ ಅಕ್ಷಯ್‌ ಕುಮಾರ್‌ ನಟನೆಯ ಜಾಲಿ ಎಲ್‌ಎಲ್‌ಬಿ 3; ಈ ಬಾರಿ ಇದೆ ಸರ್‌ಪ್ರೈಸ್!

Davanagere lok sabha constituency bjp candidate gayatri siddeshwar election campaign in harapanahalli
ರಾಜಕೀಯ19 mins ago

Lok Sabha Election: ಹರಪನಹಳ್ಳಿಯಲ್ಲಿ ರೋಡ್‌ ಶೋ ನಡೆಸಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್

MLC Chalavadi Narayanaswamy latest Statement in Hubballi
ಹುಬ್ಬಳ್ಳಿ20 mins ago

Lok Sabha Election: ರಾಜ್ಯ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿಲ್ಲ: ಛಲವಾದಿ ನಾರಾಯಣಸ್ವಾಮಿ

Mega Shetty
ಫ್ಯಾಷನ್29 mins ago

Mega Shetty: ದಾವಣಿ-ಲಂಗದಲ್ಲಿ ನಟಿ ಮೇಘಾ ಶೆಟ್ಟಿಯಂತೆ ನೀವೂ ಕಾಣಬೇಕೆ? ಈ ಟಿಪ್ಸ್ ಪಾಲಿಸಿ!

six seats of Karnataka Legislative Council Elections to be held on June 3
ಕರ್ನಾಟಕ30 mins ago

Karnataka legislative council: ವಿಧಾನ ಪರಿಷತ್‌ನ 6 ಕ್ಷೇತ್ರಗಳಿಗೆ ಜೂ.3 ಎಲೆಕ್ಷನ್;‌ ಜೂ. 6ಕ್ಕೆ ಫಲಿತಾಂಶ

Deepika Padukone
ಬಾಲಿವುಡ್33 mins ago

Deepika Padukone: ಸಖತ್‌ ಗ್ಲೋ ಆದ ಪ್ರೆಗ್ನೆಂಟ್‌ ದೀಪಿಕಾ: ಜ್ಯೂನಿಯರ್‌ ಆರ್ಟಿಸ್ಟ್‌ ಕೊಟ್ಟ ಸ್ಪೆಷಲ್‌ ಗಿಫ್ಟ್‌ ಏನು?

Sania Mirza
ಕ್ರೀಡೆ41 mins ago

Sania Mirza: ಹೇಳಲು ತುಂಬಾ ಇದೆ, ಆದರೂ ಮೌನವಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌