Kannada New Movie: ಸೆಟ್ಟೇರಿತು ’ಕೃಷ್ಣಾ ನೀ ಬೇಗನೆ ಬಾರೋ’ ಸಿನಿಮಾ! - Vistara News

ಸಿನಿಮಾ

Kannada New Movie: ಸೆಟ್ಟೇರಿತು ’ಕೃಷ್ಣಾ ನೀ ಬೇಗನೆ ಬಾರೋ’ ಸಿನಿಮಾ!

Kannada New Movie: ನಿರ್ಮಾಪಕರ ಸೋದರ ಹೈದರಬಾದ್ ಉದ್ಯಮಿ ಶ್ರೀನಿಬಾಬು ಪುಲ್ಲೆಟ್ ಕ್ಯಾಮೆರ ಆನ್ ಮಾಡಿದರು. ದುಬೈನ ಎಸ್.ನೀಲಕಂಠ ಮತ್ತು ಚಲಪತಿರಾಜು ಜಂಟಿಯಾಗಿ ನೀಲಕಂಠ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ.

VISTARANEWS.COM


on

krishna nee begane baro Movie on set
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 80ರ ದಶಕದಲ್ಲಿ ಡಾ. ವಿಷ್ಣುವರ್ಧನ್ ಅಭಿನಯದ (Kannada New Movie) ’ಕೃಷ್ಣಾ ನೀ ಬೇಗನೆ ಬಾರೋ’ ಚಿತ್ರವು ಬಿಡುಗಡೆಗೊಂಡು ಸೂಪರ್‌ಹಿಟ್ ಆಗಿತ್ತು. ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸೆಟ್ಟೇರಿದೆ. ಪ್ರೇಮಿಗಳ ದಿನದಂದು ಬಲಮುರಿ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು. ನಟರಾದ ಅನೀಶ್‌ ತೇಜಶ್ವರ್ ಮತ್ತು ಇಶಾನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ನಿರ್ಮಾಪಕರ ಸೋದರ ಹೈದರಾಬಾದ್ ಉದ್ಯಮಿ ಶ್ರೀನಿಬಾಬು ಪುಲ್ಲೆಟ್ ಕ್ಯಾಮೆರಾ ಆನ್ ಮಾಡಿದರು. ದುಬೈನ ಎಸ್. ನೀಲಕಂಠ ಮತ್ತು ಚಲಪತಿರಾಜು ಜಂಟಿಯಾಗಿ ನೀಲಕಂಠ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಟಾಲಿವುಡ್‌ನ ಜಿ. ಸೂರ್ಯತೇಜ ನಿರ್ದೇಶಕರಾಗಿ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಕಥೆಗೆ ಪೂರಕವಾಗುವಂತೆ, ಇದೇ ಶೀರ್ಷಿಕೆ ಇಡಲಾಗಿದೆ. ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದ್ದು, ಒಂದೊಂದು ಉಪಕಥೆಯು ಆಯಾ ಊರಿನಲ್ಲಿ ನಡೆಯಲಿದೆ. ಕೃಷ್ಣನಿಗೆ ಗೋಪಿಕಾ ಸ್ತ್ರೀಯರು ಇರುತ್ತಾರೆ. ಆದರೆ ನಮ್ಮ ಸಿನಿಮಾದ ಕೃಷ್ಣನಿಗೆ ಯಾವುದೇ ಹುಡುಗೀರು ಇರುವುದಿಲ್ಲ. ಕೃಷ್ಣ ಎನ್ನುವ ಹೆಸರಿಗೆ ಅರ್ಥವಿಲ್ಲದಂತೆ ಇರುತ್ತಾನೆ. ಹೀಗಿರುವಾಗ ನಾಲ್ಕು ಹುಡುಗೀರು ಹೇಗೆ ಕನೆಕ್ಟ್ ಆಗುತ್ತಾರೆ. ಅವರಿಗೂ ಇವನಿಗೂ ಏನು ಸಂಬಂಧ? ಮುಂದೆ ಹೀಗೆ ಇರುತ್ತಾನಾ? ಅಥವಾ ಬದಲಾವಣೆಗೊಳ್ಳುತ್ತಾನಾ ಎಂಬುದನ್ನು ಹಾಸ್ಯದ ಮೂಲಕ ತೋರಿಸಲಾಗುತ್ತಿದೆ. ಬೆಂಗಳೂರು, ಗೋವಾ, ಕೇರಳ ಹಾಗೂ ಹಾಡಿಗಾಗಿ ವಿದೇಶಕ್ಕೆ ಹೋಗುವ ಇರಾದೆ ಇದೆ. ಕನ್ನಡ,ತೆಲುಗು,ತಮಿಳು ಮತ್ತು ಭೋಜಪುರಿ ಭಾಷೆಗಳಲ್ಲಿ ಸಿದ್ದಗೊಳ್ಳಲಿದೆ. ಭೋಜಪುರಿಯಲ್ಲಿ ಕೃಷ್ಣನ ಭಕ್ತರು ಹೆಚ್ದಿಗೆ ಇರುವುದರಿಂದ ಅಲ್ಲಿನ ಭಾಷೆಗೆ ಡಬ್ ಮಾಡಲಾಗುತ್ತಿದೆ.

ಇದನ್ನೂ ಓದಿ: Kannada New Movie: ಡಿ.ಸತ್ಯಪ್ರಕಾಶ್ ನಿರ್ದೇಶನದ “X&Y” ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ

ಭಾರ್ಗವ್.ಬಿವಿ.ಗೆ ನಾಯಕನಾಗಿ ಏಳನೇ ಚಿತ್ರವಂತೆ. ಬಾಂಬೆ ಮೂಲದ ಊರ್ವಶಿ ಪರದೇಶಿ, ಚೈತ್ರಾ, ಪ್ರಿಯಾಂಕ, ಆಶುರೆಡ್ಡಿ ನಾಯಕಿಯರು. ಉಳಿದಂತೆ ತಾರಾ, ಅಚ್ಯುತಕುಮಾರ್, ಬಲರಾಜವಾಡಿ, ಕಬೀರ್‌ದುಹಾನ್‌ಸಿಂಗ್, ಅಜಯ್‌ರತ್ನಂ ಮುಂತಾದವರು ನಟಿಸುತ್ತಿದ್ದಾರೆ. ನಾಲ್ಕು ಹಾಡುಗಳಿಗೆ ರಾಗ ಒದಗಿಸಲು ಸಂಗೀತ ಸಂಯೋಜಕರ ಆಯ್ಕೆ ಸದ್ಯದಲ್ಲೆ ಮುಗಿಯಲಿದೆ. ಛಾಯಾಗ್ರಹಣ ಆರ್ಯ ಅವರದಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Ranbir Kapoor: ಮುದ್ದಿನ ಮಡದಿ ಅಲಿಯಾ ಕುರಿತ ಸೀಕ್ರೆಟ್ ಮಾಹಿತಿ ಹಂಚಿಕೊಂಡ ರಣಬೀರ್!

ಪಾಡ್ ಕಾಸ್ಟ್ ಸಂದರ್ಶನದಲ್ಲಿ ಇತ್ತೀಚೆಗೆ ರಣಬೀರ್ ಕಪೂರ್ (Ranbir Kapoor) ಅವರು ಆಲಿಯಾ ಅವರೊಂದಿಗಿನ ಮದುವೆಯ ಬಗ್ಗೆ, ಮಗಳು ರಹಾ ಬಗ್ಗೆ, ಅಲಿಯಾ ಮತ್ತು ತಮ್ಮ ನಡುವೆ ಇರುವ ವಯಸ್ಸಿನ ಅಂತರ, ಸಂಬಂಧಗಳ ಕುರಿತಾಗಿ ನಿಖಿಲ್ ಕಾಮತ್ ಅವರೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.

VISTARANEWS.COM


on

By

Ranbir Kapoor
Koo

ಬಾಲಿವುಡ್‌ನ ಕ್ಯೂಟ್ ಕಪಲ್ (Bollywood Cute couple) ಎಂದೇ ಕರೆಯಲ್ಪಡುವ ರಣಬೀರ್ ಕಪೂರ್ (Ranbir Kapoor) ಮತ್ತು ಅಲಿಯಾ ಭಟ್ (Alia Bhatt) 2022ರಲ್ಲಿ ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆದಿದ್ದು, ಇವರಿಗೆ ಮುದ್ದಾದ ಮಗಳಿದ್ದಾಳೆ. ಇತ್ತೀಚೆಗೆ ಪಾಡ್ ಕಾಸ್ಟ್ ಸಂದರ್ಶನದಲ್ಲಿ (Podcast interview) ರಣಬೀರ್ ಕಪೂರ್ ಅವರು ಆಲಿಯಾ ಅವರೊಂದಿಗಿನ ಮದುವೆಯ ಬಗ್ಗೆ, ತಮ್ಮ ನಡುವೆ ಇರುವ ವಯಸ್ಸಿನ ಅಂತರ ಕುರಿತು ನಿಖಿಲ್ ಕಾಮತ್ ಅವರೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.

ತಮ್ಮ ಮಾತಿನಲ್ಲಿ ರಣಬೀರ್, ನಾನು ತುಂಬಾ ಅದೃಷ್ಟಶಾಲಿ. ನಾನು ಮದುವೆಯಾಗಿರುವವರೊಂದಿಗೆ ಸ್ನೇಹಿತರಂತೆ ತುಂಬಾ ಹತ್ತಿರವಾಗಿದ್ದೇನೆ. ಅವರೊಂದಿಗೆ ನಾನು ಚಾಟ್ ಮಾಡಬಹುದು, ನಗಬಹುದು. ಅವಳು ನನ್ನ ಬೆಸ್ಟ್ ಫ್ರೆಂಡ್ ಹಾಗೆ. ಹೀಗಾಗಿ ನಾನು ನಿಜವಾಗಿಯೂ ಅದೃಷ್ಟಶಾಲಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಆಲಿಯಾ ಅದ್ಭುತ ವ್ಯಕ್ತಿ. ನನಗಿಂತ 11 ವರ್ಷ ಚಿಕ್ಕವಳು. ಇದು ತುಂಬಾ ತಮಾಷೆಯಾಗಿದೆ; ಸಂಜಯ್ ಲೀಲಾ ಬನ್ಸಾಲಿಯವರು ಬಾಲ್ಯವಿವಾಹದ ಕುರಿತು ‘ಬಾಲಿಕಾ ವಧು’ ಎಂಬ ಚಿತ್ರವನ್ನು ನಿರ್ಮಿಸಲು ಬಯಸಿದ್ದರಿಂದ ನಾನು ಆಲಿಯಾಳನ್ನು 9 ವರ್ಷ ಮತ್ತು ನಾನು 20 ವರ್ಷದವಳಿದ್ದಾಗ ಮೊದಲ ಬಾರಿಗೆ ಭೇಟಿಯಾದೆ. ನಾವು ಒಟ್ಟಿಗೆ ಫೋಟೋಶೂಟ್ ಮಾಡಿದ್ದೇವೆ ಎಂದು ತಿಳಿಸಿದರು.

ಆಲಿಯಾಳನ್ನು ನಾನು ಭೇಟಿಯಾದ ವಿಶೇಷ ವ್ಯಕ್ತಿ ಎಂದೇ ಭಾವಿಸಿದೆ. ನಟ, ಕಲಾವಿದ, ವ್ಯಕ್ತಿ, ಮಗಳು ಮತ್ತು ಸಹೋದರಿಯಾಗಿ ನನಗೆ ಅವಳ ಬಗ್ಗೆ ಅಪಾರ ಗೌರವವಿದೆ. ಅವಳು ನಿಜವಾಗಿಯೂ ನನ್ನನ್ನು ನಗಿಸುತ್ತಾಳೆ. ನಾನು ಅವಳೊಂದಿಗೆ ರಜೆಯಲ್ಲಿ ಹೋಗಲು ಇಷ್ಟಪಡುತ್ತೇನೆ. ಅಂತೆಯೇ ನಾನು ಅವಳೊಂದಿಗೆ ಮನೆಯಲ್ಲಿರಲು ಇಷ್ಟಪಡುತ್ತೇನೆ ಎಂದು ಹೇಳಿದರು.

Ranbir Kapoor
Ranbir Kapoor


ಅಲಿಯಾ ಮಹತ್ವಾಕಾಂಕ್ಷೆಯುಳ್ಳವಳು ಮತ್ತು ಅತಿಯಾಗಿ ಸಾಧಿಸುವವಳು. ಕೆಲಸವೆಂದರೆ ಅವಳು ತುಂಬಾ ಉತ್ಸಾಹಭರಿತಳು. ಅತ್ಯಂತ ಭಾವೋದ್ರಿಕ್ತ, ಅತ್ಯಂತ ಬುದ್ಧಿವಂತೆಯೂ ಹೌದು. ನಾನು ಮಾತನಾಡುವಾಗ ಅವಳು ಕೇಳುತ್ತಾಳೆ. ನಮ್ಮಿಬ್ಬರ ಸಂಬಂಧದಲ್ಲಿ ಅವಳು ಹೆಚ್ಚು ಪ್ರಯತ್ನ ಮಾಡಿದ್ದಾಳೆ ಎಂದು ತಿಳಿಸಿದರು.

ಆಲಿಯಾ ತನಗಾಗಿ ಹೆಚ್ಚು ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಒಪ್ಪಿಕೊಂಡ ರಣಬೀರ್, ನಾನು ಅವಳಿಗಾಗಿ ಬದಲಾದದ್ದಕ್ಕಿಂತ ಅವಳು ನನಗಾಗಿ ಹೆಚ್ಚು ಬದಲಾಗಿದ್ದಾಳೆ. ನಾನು ಅದನ್ನು ಒಪ್ಪಿಕೊಳ್ಳುತ್ತಿದ್ದೇನೆ. ಆದರೆ ನಾನು ಅವಳಿಗಾಗಿ ಏನಾದರೂ ಮಾಡಬೇಕು, ನಾನು ಸ್ವಲ್ಪ ಬದಲಾಗಬೇಕು…


ಅವಳು ತುಂಬಾ ಜೋರಾಗಿ ಮಾತನಾಡುತ್ತಿದ್ದಳು. ನನ್ನ ತಂದೆಯ ಸ್ವರವು ಗಟ್ಟಿಯಾಗಿದ್ದ ಕಾರಣ ಯಾವಾಗಲೂ ನಮ್ಮ ನಡುವೆ ಗಲಾಟೆ ನಡೆಯುತ್ತಿತ್ತು. ಆದ್ದರಿಂದ ಅವಳು ನಿಜವಾಗಿಯೂ ಬದಲಾಯಿಸಲು ಪ್ರಯತ್ನಗಳನ್ನು ಮಾಡಿದಳು ಮತ್ತು ಅದು ಸುಲಭವಲ್ಲ. ಜೀವನದ 30 ವರ್ಷಗಳನ್ನು ನಿರ್ದಿಷ್ಟ ರೀತಿಯಲ್ಲಿ ಮಾತನಾಡುತ್ತಿದ್ದುದನ್ನು ಬದಲಾಯಿಸುವುದು ಸುಲಭವಲ್ಲ. ಅವಳು ನನಗೆ ನಿರಾಳವಾಗಿಸುವ ಕೆಲವು ವಿಷಯಗಳನ್ನು ಮಾಡುತ್ತಾಳೆ. ಅವಳ ಹುಟ್ಟುಹಬ್ಬದಂದು ನಾನು ಒಮ್ಮೆ ಕೇಕ್ ಅನ್ನು ತಯಾರಿಸಿದೆ ಎಂಬುದನ್ನು ಈ ವೇಳೆ ಹಂಚಿಕೊಂಡರು.

ಇದನ್ನೂ ಓದಿ: Martin Movie: ಆ.4ಕ್ಕೆ ಮಾರ್ಟಿನ್ ಚಿತ್ರದ ಟ್ರೈಲರ್‌ 1 ರಿಲೀಸ್‌; ವಿಎಫ್‌ಎಕ್ಸ್‌ ವಂಚನೆ ಬಗ್ಗೆ ನಿರ್ಮಾಪಕ ಹೇಳಿದ್ದೇನು?

ನಾವು ಡೇಟಿಂಗ್ ಪ್ರಾರಂಭಿಸಿದ ಮೊದಲ ವರ್ಷದಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ. 2018ರಲ್ಲಿ ಬ್ರಹ್ಮಾಸ್ತ್ರ ಎಂಬ ಚಿತ್ರವನ್ನು ಮಾಡಿದ್ದೇವೆ. ಸಾಂಕ್ರಾಮಿಕ ಸಮಯದಲ್ಲಿ ನಾವು ಒಟ್ಟಿಗೆ ವಾಸಿಸುತ್ತಿದ್ದಾಗ ನಮ್ಮ ಸಂಬಂಧವು ಗಟ್ಟಿಯಾಯಿತು ಎಂದು ಅವರು ಹೇಳಿದರು.

Continue Reading

ಸಿನಿಮಾ

Raayan Movie: ಸೂಪರ್‌ ಹಿಟ್‌ ಚಿತ್ರಗಳನ್ನು ನಕಲಿಸಿ ಮಾರುವ ಕುಖ್ಯಾತ ಪೈರಸಿ ಗ್ಯಾಂಗ್‌ ರೂವಾರಿ ಬಂಧನ

ಧನುಷ್ ಅಭಿನಯದ ʼರಾಯನ್ʼ ಚಿತ್ರ (Raayan Movie) ಇತ್ತೀಚೆಗೆ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಚಿತ್ರದಲ್ಲಿ ನಟಿಸುವುದನ್ನು ಹೊರತುಪಡಿಸಿ ಇದು ಅವರ ಎರಡನೇ ನಿರ್ದೇಶನದ ಚಿತ್ರವಾಗಿದೆ. ಜನಪ್ರಿಯತೆ ಮತ್ತು ಸಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಈ ಚಿತ್ರವೂ ಪೈರಸಿಗೆ ತುತ್ತಾಗಿದೆ. ಪ್ರಮುಖ ಚಿತ್ರಗಳನ್ನು ಕದ್ದು ಹಂಚುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

VISTARANEWS.COM


on

By

Raayan Movie
Koo

ತಮಿಳು ನಟ ಧನುಷ್ (Tamil actor Dhanush) ಅಭಿನಯದ ‘ರಾಯನ್’ ಚಿತ್ರದ (Raayan Movie) ದೃಶ್ಯಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ಪೈರಸಿ ಸೈಟ್ ತಮಿಳ ರಾಕರ್ಸ್ ನ (Tamil Rockers ) ಸದಸ್ಯ ಜೆಬ್ ಸ್ಟೀಫನ್ ರಾಜ್ ನನ್ನು ಬಂಧಿಸಲಾಗಿದೆ. ʼರಾಯನ್ʼ ಹೊರತಾಗಿ ʼಮಹಾರಾಜʼ (maharaj) ಮತ್ತು ʼಕಲ್ಕಿ 2898ಎಡಿʼ (kalki 2898AD) ಚಿತ್ರದ ನಕಲಿ ಪ್ರತಿಗಳನ್ನು ಈತ ತಯಾರಿಸಿದ್ದ ಎಂದು ಆರೋಪಿಸಲಾಗಿದೆ.

ಧನುಷ್ ಅಭಿನಯದ ರಾಯನ್ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಚಿತ್ರದಲ್ಲಿ ನಟಿಸುವುದನ್ನು ಹೊರತುಪಡಿಸಿ ಇದು ಅವರ ಎರಡನೇ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರವೂ ಪೈರಸಿಗೆ ತುತ್ತಾಗಿದೆ.

ಮಧುರೈನ ಕುಖ್ಯಾತ ತಮಿಳು ರಾಕರ್ಸ್ ಸದಸ್ಯ ಜೆಬ್ ಸ್ಟೀಫನ್ ರಾಜ್ ಅವರು ಸ್ಟ್ರೀಮಿಂಗ್ ವೆಬ್‌ಸೈಟ್‌ನಲ್ಲಿ ಅಕ್ರಮವಾಗಿ ರಾಯನ್ ಅನ್ನು ರೆಕಾರ್ಡ್ ಮಾಡಿ ಅಪ್‌ಲೋಡ್ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಅನಂತರ ಕೇರಳ ಸೈಬರ್ ಕ್ರೈಮ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಜೆಬ್ ಸ್ಟೀಫನ್ ರಾಜ್ ವೆಬ್‌ಸೈಟ್‌ನ ನಿರ್ವಾಹಕರೂ ಆಗಿದ್ದಾರೆ. ಹಲವು ವರ್ಷಗಳಿಂದ ಸಿನಿಮಾಗಳನ್ನು ಈ ರೀತಿ ಸೋರಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕೇರಳದ ಸೈಬರ್ ಕ್ರೈಮ್ ಪೊಲೀಸರು ಇತ್ತೀಚೆಗೆ ಪೃಥ್ವಿರಾಜ್ ಸುಕು ಕುಮಾರನ್ ಅವರ ಇತ್ತೀಚಿನ ಮಲಯಾಳಂ ಚಿತ್ರ ʼಗುರುವಾಯೂರಪ್ಪನ್ ಅಂಬಲನಾಡೈʼ ಬಿಡುಗಡೆಯಾದ ಕೇವಲ ಒಂದೇ ದಿನದ ಅನಂತರ ಪೈರೇಟೆಡ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿತ್ತು. ಬಳಿಕ ಈ ಕುರಿತು ತನಿಖೆ ನಡೆಸಲಾಗಿತ್ತು. ಈ ಎರಡು ಚಲನಚಿತ್ರಗಳ ಹೊರತಾಗಿ ಮಹಾರಾಜ ಮತ್ತು ಕಲ್ಕಿ 2898ಎಡಿ ನ ಪ್ರತಿಗಳು ಕೂಡ ಪೈರೇಟೆಡ್ ವೆಬ್ ಸೈಟ್‌ನಲ್ಲಿ ಕಾಣಿಸಿಕೊಂಡಿತ್ತು.

ತನಿಖಾಧಿಕಾರಿಗಳ ಪ್ರಕಾರ, ಪೈರಸಿ ಸೈಟ್ ಪಾಪ್-ಅಪ್ ಜಾಹೀರಾತುಗಳು ಮತ್ತು ಸದಸ್ಯತ್ವ ಶುಲ್ಕಗಳ ಮೂಲಕ ಹಣವನ್ನು ಗಳಿಸುತ್ತದೆ. ಅವರು ಮೊದಲು ಚಿತ್ರಮಂದಿರಗಳಲ್ಲಿ ರಹಸ್ಯವಾಗಿ ರೆಕಾರ್ಡ್ ಮಾಡಿದ ಚಲನಚಿತ್ರಗಳ ಪ್ರತಿಗಳನ್ನು ಇದರಲ್ಲಿ ಬಿಡುಗಡೆ ಮಾಡುತ್ತಾರೆ. ಅನಂತರ ಅವುಗಳನ್ನು ನವೀಕರಿಸುತ್ತಾರೆ.

Raayan Movie
Raayan Movie


ಧನುಷ್ ಬರೆದು ನಿರ್ದೇಶಿಸಿರುವ ಚಿತ್ರ ʼರಾಯನ್ʼ

ʼರಾಯನ್ʼ ತಮಿಳು ಭಾಷೆಯ ಚಿತ್ರವಾಗಿದ್ದು, ಧನುಷ್ ಬರೆದು ನಿರ್ದೇಶಿಸಿದ್ದಾರೆ. ಇದು ತನ್ನ ಕುಟುಂಬದ ಹತ್ಯೆಗೆ ಸೇಡು ತೀರಿಸಿಕೊಳ್ಳಲು ತರಬೇತಿ ಪಡೆಯುವ ಯುವಕನ ಕಥೆಯನ್ನು ಹೇಳುತ್ತದೆ. ಅವನು ನ್ಯಾಯವನ್ನು ಹುಡುಕುವ ಅನ್ವೇಷಣೆಯಲ್ಲಿ ತೊಡಗುತ್ತಾನೆ, ಅದು ಅವನನ್ನು ಭೂಗತ ಜಗತ್ತಿಗೆ ಕರೆದೊಯ್ಯುತ್ತದೆ.


ಸಾಹಸಮಯ ಚಿತ್ರದಲ್ಲಿ ದುಶಾರ ವಿಜಯನ್, ಸಂದೀಪ್ ಕಿಶನ್, ಅಪರ್ಣಾ ಬಾಲಮುರಳಿ, ಕಾಳಿದಾಸ್ ಜಯರಾಮ್, ನಿತ್ಯಾ ಮೆನೆನ್, ಅಮಲಾ ಪೌಲ್, ಎಸ್‌ಜೆ ಸೂರ್ಯ ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಮೊದಲಾದವರು ನಟಿಸಿದ್ದಾರೆ.

ಇದನ್ನೂ ಓದಿ: Kannada New Movie: ಭಾರಿ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾ ಆಡಿಯೊ ಹಕ್ಕು

ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ರಾಯನ್ 47.90 ಕೋಟಿ ರೂ. ಗಳಿಸಿದೆ. ಆರಂಭಿಕ ವಾರಾಂತ್ಯದಲ್ಲಿ ಯುಎಸ್ ಬಾಕ್ಸ್ ಆಫೀಸ್‌ನಲ್ಲಿ ರಾಯನ್ ಟಾಪ್ 10ರಲ್ಲಿ ಸ್ಥಾನವನ್ನು ಪಡೆದುಕೊಂಡಿತು. ʼರಾಯನ್ʼ ಯಶಸ್ವಿ ಪ್ರದರ್ಶನದ ಅನಂತರ ಧನುಷ್ ಮುಂದಿನ ಬಾರಿ ʼಕುಬೇರʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 6ನಿರ್ಮಾಪಕರು ಇತ್ತೀಚೆಗೆ ನಟನ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದರು. ಚಿತ್ರದಲ್ಲಿ ಧನುಷ್ ಹೊರತಾಗಿ, ರಶ್ಮಿಕಾ ಮಂದಣ್ಣ, ನಾಗಾರ್ಜುನ ಮತ್ತು ಜಿಮ್ ಸರ್ಭ್ ನಟಿಸಲಿದ್ದಾರೆ.

Continue Reading

ಸಿನಿಮಾ

Aryan Khan: ದಿಲ್ಲಿಯ ಸಣ್ಣ ಮನೆಯಲ್ಲಿದ್ದ ಶಾರುಖ್‌ ದಂಪತಿ; ಅಲ್ಲಿನ ಬಂಗಲೆಯನ್ನು 37 ಕೋಟಿ ರೂ.ಗೆ ಖರೀದಿಸಿದ ಪುತ್ರ!

ಆರ್ಯನ್ ಖಾನ್ (Aryan Khan) ಅವರು ದಕ್ಷಿಣ ದೆಹಲಿಯ ಪಂಚಶೀಲ್ ಪಾರ್ಕ್‌ನಲ್ಲಿ 37 ಕೋಟಿ ರೂ. ಮೌಲ್ಯದ ಎರಡು ಮಹಡಿಯ ಬಂಗಲೆಯನ್ನು ಖರೀದಿಸಿದ್ದಾರೆ. ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ತಮ್ಮ ಆರಂಭಿಕ ದಿನಗಳಲ್ಲಿ ಇದೇ ಕಟ್ಟಡದ ನೆಲಮಾಳಿಗೆ ಮತ್ತು ನೆಲಮಹಡಿಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

VISTARANEWS.COM


on

By

Aryan Khan
Koo

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರ ಪುತ್ರ (son of shah rukh khan) ಆರ್ಯನ್ ಖಾನ್ (Aryan Khan:) ತಮ್ಮ ಚೊಚ್ಚಲ ನಿರ್ದೇಶನದ ಶೋ ‘ಸ್ಟಾರ್‌ಡಮ್’ (stardom) ಮೂಲಕ ಬಾಲಿವುಡ್‌ಗೆ (bollywood) ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಈ ನಡುವೆ ಅವರು ಈಗ ದೆಹಲಿಯಲ್ಲಿ 37 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯನ್ನು (luxury property) ಖರೀದಿಸಿದ್ದಾರೆ.

ಆರ್ಯನ್ ಖಾನ್ ಅವರು ದಕ್ಷಿಣ ದೆಹಲಿಯ ಪಂಚಶೀಲ್ ಪಾರ್ಕ್‌ನಲ್ಲಿ 37 ಕೋಟಿ ರೂ. ಮೌಲ್ಯದ ಎರಡು ಮಹಡಿಯ ಬಂಗಲೆಯನ್ನು ಖರೀದಿಸಿದ್ದಾರೆ. ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ತಮ್ಮ ಆರಂಭಿಕ ದಿನಗಳಲ್ಲಿ ಇದೇ ಕಟ್ಟಡದ ನೆಲಮಾಳಿಗೆ ಮತ್ತು ನೆಲಮಹಡಿಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಆರ್ಯನ್ ಖಾನ್ ಅವರ ಖರೀದಿಯ ವಹಿವಾಟನ್ನು ಮೇ 2024ರಲ್ಲಿ ನೋಂದಾಯಿಸಲಾಗಿದ್ದು 2.64 ಕೋಟಿ ರೂಪಾಯಿಗಳ ಮುದ್ರಾಂಕ ಶುಲ್ಕವನ್ನು ಪಾವತಿಸಲಾಗಿದೆ. ವರದಿಯ ಪ್ರಕಾರ, ಆರ್ಯನ್ ಅವರ ತಾಯಿ ಪ್ರಸಿದ್ಧ ಇಂಟೀರಿಯರ್ ಡಿಸೈನರ್ ಗೌರಿ ಖಾನ್ ಅವರು ಮನೆಯನ್ನು ವಿನ್ಯಾಸಗೊಳಿಸಿದ್ದಾರೆ. ಇದು ದಂಪತಿಗೆ ಭಾವನಾತ್ಮಕ ಮಹತ್ವವನ್ನು ಹೊಂದಿದೆ. ಯಾಕೆಂದರೆ ಇದು ಅವರು ಮೊದಲು ಭೇಟಿಯಾದ ನಗರವಾಗಿದೆ.

Aryan Khan
Aryan Khan


ಶಾರುಖ್ ಖಾನ್ ಅವರು ಪಂಚಶೀಲ್ ಪಾರ್ಕ್‌ನಲ್ಲಿ 27,000 ಚದರ ಅಡಿ ವಿಸ್ತೀರ್ಣ ಹೊಂದಿರುವ ಹೆರಿಟೇಜ್ ವಿಲ್ಲಾವನ್ನು ಹೊಂದಿದ್ದಾರೆ. ಅವರು 2001ರಲ್ಲಿ 13 ಕೋಟಿ ರೂ. ಗೆ ಈ ಆಸ್ತಿಯನ್ನು ಖರೀದಿಸಿದ್ದರು. ಅದರ ಮೌಲ್ಯ ಈಗ ಸುಮಾರು 200 ಕೋಟಿ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Bollywood Divorce Case: ವಿಚ್ಛೇದನದ ಬಳಿಕ ಪತ್ನಿಗೆ ದುಬಾರಿ ʼಜೀವನಾಂಶʼ ನೀಡಿದ ಬಾಲಿವುಡ್ ಸ್ಟಾರ್‌ಗಳಿವರು!


ಆರ್ಯನ್ ಖಾನ್ ತಮ್ಮ ನಿರ್ದೇಶನದ ಚೊಚ್ಚಲ ವೆಬ್‌ ಸಿರೀಸ್‌ ʼಸ್ಟಾರ್‌ಡಮ್‌ʼನೊಂದಿಗೆ ತೆರೆಗೆ ಬರಲು ಸಿದ್ಧರಾಗಿದ್ದಾರೆ. ಇದರಲ್ಲಿ ಅವರು ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಶಾರುಖ್ ಖಾನ್, ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ಅತಿಥಿ ಪಾತ್ರದಲ್ಲಿ ಬಾಬಿ ಡಿಯೋಲ್ ಮತ್ತು ಮೋನಾ ಕಪೂರ್ ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

Continue Reading

ಕರ್ನಾಟಕ

Martin Movie: ಆ.4ಕ್ಕೆ ಮಾರ್ಟಿನ್ ಚಿತ್ರದ ಟ್ರೈಲರ್‌ 1 ರಿಲೀಸ್‌; ವಿಎಫ್‌ಎಕ್ಸ್‌ ವಂಚನೆ ಬಗ್ಗೆ ನಿರ್ಮಾಪಕ ಹೇಳಿದ್ದೇನು?

Martin Movie: ನಟ ಧ್ರುವ ಸರ್ಜಾ ಅಭಿನಯದ ʼಮಾರ್ಟಿನ್ʼ ಸಿನಿಮಾದ ಟ್ರೈಲರ್‌ 1 ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಆಗಸ್ಟ್ 4ರಂದು ಹಾಗೂ ಮುಂಬೈನಲ್ಲಿ ಆಗಸ್ಟ್ 5ರಂದು ರಿಲೀಸ್ ಆಗಲಿದೆ. ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.

VISTARANEWS.COM


on

Martin Movie
Koo

ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ʼಮಾರ್ಟಿನ್ʼ ಸಿನಿಮಾ (Martin Movie) ಅ.11ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಪಂಚ ಭಾಷೆಗಳಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿರುವ ಎ.ಪಿ.ಅರ್ಜುನ್‌ ನಿರ್ದೇಶನದ ಈ ಚಿತ್ರದ ಟ್ರೈಲರ್‌ 1 ರಿಲೀಸ್ ಮಾಡಲು ನಿಗದಿ ಮಾಡಿದೆ. ಮುಂಬೈ ಮತ್ತು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಟ್ರೈಲರ್‌ 1 ರಿಲೀಸ್‌ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆ.

ಆಗಸ್ಟ್ 4ರಂದು ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಹಾಗೂ ಆಗಸ್ಟ್ 5ರಂದು ಮುಂಬೈನಲ್ಲಿ ಟ್ರೈಲರ್‌ 1 ರಿಲೀಸ್ ಆಗಲಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಉದಯ್ ಮೆಹ್ತಾ ಮಾಹಿತಿ ನೀಡಿದ್ದಾರೆ. ಈ ವೇಳೆ ಧ್ರುವ ಸರ್ಜಾ, ಎ.ಪಿ. ಅರ್ಜುನ್ ಉಪಸ್ಥಿತರಿದ್ದರು.

ಮೊದಲು ಕನ್ನಡಿಗರಿಗೆ ಟ್ರೇಲರ್ ತೋರಿಸುತ್ತೇವೆ ಎಂದ ಧ್ರುವ ಸರ್ಜಾ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಧ್ರುವ ಸರ್ಜಾ ಅವರು, ಆಗಸ್ಟ್‌ 4ರಂದು ಮೊದಲು ನಮ್ಮ ಕನ್ನಡಿಗರಿಗೆ ಮಾರ್ಟಿನ್‌ ಚಿತ್ರದ ಟ್ರೈಲರ್‌ 1 ತೋರಿಸುತ್ತೇವೆ. ಆ.5ರಂದು ಮುಂಬೈನಲ್ಲಿ ಟ್ರೇಲರ್ ರಿಲೀಸ್ ಆಗಲಿದೆ. ಕಾರ್ಯಕ್ರಮಕ್ಕೆ 28 ದೇಶಗಳಿಂದ ಮಾಧ್ಯಮದವರು ಬರುತ್ತಿದ್ದಾರೆ. ಅದರ ಜತೆ ಭಾರತದ ವಿವಿಧೆಡೆಯಿಂದ ರಿಪೋರ್ಟರ್ಸ್ ಬರುತ್ತಾರೆ ಎಂದು ತಿಳಿಸಿದರು.

ಆಗಸ್ಟ್ 2ರಿಂದ ಬುಕ್ ಮೈ ಶೋನಲ್ಲಿ ಟ್ರೇಲರ್ ರಿಲೀಸ್‌ ಟಿಕೆಟ್‌ ಬುಕ್ ಮಾಡಬಹುದು. ಆಗಸ್ಟ್ 4ರಂದು ಮಧ್ಯಾಹ್ನ 1 ಗಂಟೆಗೆ ಟ್ರೇಲರ್ ರಿಲೀಸ್ ಆಗಲಿದೆ ಎಂದು ಹೇಳಿದರು.

ನಿರ್ದೇಶಕನ ವಿರುದ್ಧ ದೂರು ನೀಡಿಲ್ಲ: ನಿರ್ಮಾಪಕ ಉದಯ್ ಮೆಹ್ತಾ

ಮಾರ್ಟಿನ್‌ ಚಿತ್ರದ ವಿಎಫ್‌ಎಕ್ಸ್‌ಗಾಗಿ ನಿರ್ದೇಶಕ ಎ.ಪಿ. ಅರ್ಜುನ್‌ 50 ಲಕ್ಷ ರೂ. ಕಮಿಷನ್‌ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿರುವ ವಿಷಯ ಎಲ್ಲರಿಗೂ ಗೊತ್ತಿದೆ. ನಾನು ನೆನ್ನೆ ಭಾರತಕ್ಕೆ ಬಂದೆ, ಈ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡುತ್ತೇನೆ. ನಮ್ಮ ಟೀಮ್‌ನ ಯಾವ ಸದಸ್ಯನ ಮೇಲೂ ಕಂಪ್ಲೇಂಟ್ ಕೊಟ್ಟಿಲ್ಲ. ನಾನು ಕಂಪ್ಲೇಂಟ್ ಕೊಟ್ಟಿರುವುದು ಸತ್ಯ ರೆಡ್ಡಿ ಎಂಬುವವರ ಡಿಜಿಟಲ್ ಕಂಪನಿ ವಿರುದ್ಧ ಎಂದು ತಿಳಿಸಿದರು.

15 ವರ್ಷಗಳಿಂದ ನಾನು ಸಿನಿಮಾ ರಂಗದಲ್ಲಿದೇನೆ. ಇದುವರೆಗೂ ನಾನು ಯಾವುದೇ ವಿವಾದ ಮಾಡಿಲ್ಲ. ನಾನು ಫ್ಯಾಷನೇಟ್ ಪ್ರೊಡ್ಯೂಸರ್, ನನಗೆ ಈ ರೀತಿ ಮೋಸವಾಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇಲ್ಲಿ ಅನುಭವ ಲೆಕ್ಕಕ್ಕೆ ಬರೋಲ್ಲ, ಸಡನ್ ಅಪಘಾತವಾದಾಗ ಏನೂ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.

ಕಮಿಷನ್‌ ಪಡೆದಿರುವುದು ಸಾಬೀತಾದ್ರೆ 1 ಕೋಟಿ ಕೊಡ್ತೇನೆ: ನಿರ್ದೇಶಕ ಎ.ಪಿ.ಅರ್ಜುನ್

50 ಲಕ್ಷ ಕಮಿಷನ್‌ ಆರೋಪ ಬಗ್ಗೆ ನಿರ್ದೇಶಕ ಪ್ರತಿಕ್ರಿಯಿಸಿ, ಸುದ್ದಿ ಮಾಡುವವರು ಆಧಾರಗಳನ್ನು ಇಟ್ಟುಕೊಟ್ಟು ಪ್ರಸಾರ ಮಾಡಬೇಕು. ನಾನು ಕೇವಲ 5000 ರೂ. ಕಮಿಷನ್‌ ಪಡೆದಿರುವುದು ಸಾಬೀತಾದರೂ ನಿಮಗೆ 1 ಕೋಟಿ ರೂ. ಕೊಡುತ್ತೇನೆ. ಈ ರೀತಿ ಸುಳ್ಳು ಆರೋಪಗಳಿಂದ ನಮ್ಮ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Actor Shahrukh Khan: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

‘ಮಾರ್ಟಿನ್’ ಚಿತ್ರದ ವಿಎಫ್‌ಎಕ್ಸ್‌ ವರ್ಕ್‌ ಜವಾಬ್ದಾರಿಯನ್ನು ಡಿಜಿಟಲ್‌ ಟೆರೇನ್ ಕಂಪನಿಗೆ ನೀಡಲಾಗಿತ್ತು. ಇದಕ್ಕಾಗಿ ನಿರ್ಮಾಪಕ ಉದಯ್‌ ಕೊಟ್ಟಿದ್ದ 2.5 ಕೋಟಿ ರೂ.ಗಳಲ್ಲಿ 50 ಲಕ್ಷ ರೂ.ಗಳನ್ನು ನಿರ್ದೇಶಕ ಎ.ಪಿ.ಅರ್ಜುನ್ ಕಮಿಷನ್‌ ಆಗಿ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ನಿರ್ದೇಶಕ ಎ.ಪಿ.ಅರ್ಜುನ್ ಹಾಗೂ ನಿರ್ಮಾಪಕ ಉದಯ್‌ ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ.

ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಮಾರ್ಟಿನ್‌ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್‌ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್‌ ಪಾಠಕ್‌ ಸಹ ‘ಮಾರ್ಟಿನ್‌’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Continue Reading
Advertisement
IND vs SL
ಪ್ರಮುಖ ಸುದ್ದಿ2 hours ago

IND vs SL : ಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ಜಯ, ಸರಣಿ ಕ್ಲೀನ್ ಸ್ವೀಪ್ ಮಾಡಿದ ಸೂರ್ಯಕುಮಾರ್ ಪಡೆ

CM Siddaramaiah
ಕರ್ನಾಟಕ2 hours ago

CM Siddaramaiah: ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನ ಫೇಲ್; ಖರ್ಗೆ ಭೇಟಿ ಬಳಿಕ ಸಿದ್ದರಾಮಯ್ಯ ಹೇಳಿಕೆ

Rashid Khan
ಪ್ರಮುಖ ಸುದ್ದಿ2 hours ago

Rashid Khan : ಟಿ20 ಕ್ರಿಕೆಟ್​ನಲ್ಲಿ ವಿಕೆಟ್​ಗಳ ಹೊಸ ಮೈಲುಗಲ್ಲು ಸೃಷ್ಟಿಸಿದ ಅಫಘಾನಿಸ್ತಾನ ಬೌಲರ್ ರಶೀದ್ ಖಾನ್​

Anurag Thakur
ದೇಶ3 hours ago

Anurag Thakur: ತಮ್ಮ ಜಾತಿಯೇ ಗೊತ್ತಿರದ ರಾಹುಲ್‌ ಗಾಂಧಿಯಿಂದ ಜಾತಿಗಣತಿ ಪ್ರಸ್ತಾಪ ಎಂದ ಅನುರಾಗ್‌ ಠಾಕೂರ್‌!

ICC T20 ranking
ಪ್ರಮುಖ ಸುದ್ದಿ3 hours ago

ICC T20 ranking : ಐಸಿಸಿ ರ್ಯಾಂಕಿಂಗ್​ನಲ್ಲಿ ಸ್ಮೃತಿ ಮಂಧಾನಾ, ರೇಣುಕಾಗೆ ಭರ್ಜರಿ ಲಾಭ

Asian Cricket Council
ಪ್ರಮುಖ ಸುದ್ದಿ3 hours ago

Asian Cricket Council : ಜಯ್​ ಶಾ ಹೊಂದಿರುವ ಉನ್ನತ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪಾಕಿಸ್ತಾನ ಮೊಹ್ಸಿನ್ ನಖ್ವಿ

Viral video
ವೈರಲ್ ನ್ಯೂಸ್4 hours ago

Viral video: ಪೋಷಕರ ಫೋಟೊ ಶೋಕಿ; ಮೊಸಳೆ ಎದುರು ಮಕ್ಕಳಿಗೆ ಪ್ರಾಣ ಸಂಕಟ! ಆಘಾತಕಾರಿ ವಿಡಿಯೊ

Ranbir Kapoor
ಸಿನಿಮಾ4 hours ago

Ranbir Kapoor: ಮುದ್ದಿನ ಮಡದಿ ಅಲಿಯಾ ಕುರಿತ ಸೀಕ್ರೆಟ್ ಮಾಹಿತಿ ಹಂಚಿಕೊಂಡ ರಣಬೀರ್!

Minister Ramalinga Reddy drives for state level inter school Olympics sports in Bengaluru
ಬೆಂಗಳೂರು4 hours ago

Bengaluru News: ರಾಜ್ಯಮಟ್ಟದ ಅಂತರಶಾಲಾ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ

Decision to release water from Malaprabha Reservoir says minister Lakshmi Hebbalkar
ಕರ್ನಾಟಕ4 hours ago

Lakshmi Hebbalkar: ಸುರಕ್ಷತೆ ದೃಷ್ಟಿಯಿಂದ ಮಲಪ್ರಭಾ ಜಲಾಶಯದಿಂದ ನೀರು ಬಿಡಲು ನಿರ್ಧಾರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ8 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ12 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ13 hours ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 day ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 day ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌