Oscar Academy : ಆಸ್ಕರ್‌ ಅಕಾಡೆಮಿ ಸದಸ್ಯರಾಗಲು ಜೂ. ಎನ್‌ಟಿಆರ್‌, ರಾಮ್‌ಚರಣ್‌ಗೆ ಆಹ್ವಾನ; ರಾಜಮೌಳಿಗೆ ಆಮಂತ್ರಣವಿಲ್ಲವೇಕೆ? - Vistara News

ಸಿನಿಮಾ

Oscar Academy : ಆಸ್ಕರ್‌ ಅಕಾಡೆಮಿ ಸದಸ್ಯರಾಗಲು ಜೂ. ಎನ್‌ಟಿಆರ್‌, ರಾಮ್‌ಚರಣ್‌ಗೆ ಆಹ್ವಾನ; ರಾಜಮೌಳಿಗೆ ಆಮಂತ್ರಣವಿಲ್ಲವೇಕೆ?

ಆಸ್ಕರ್‌ ಅಕಾಡೆಮಿಯು (Oscar Academy) ಆರ್‌ಆರ್‌ಆರ್‌ ನಟರಾದ ರಾಮ್‌ಚರಣ್‌, ಜೂ.ಎನ್‌ಟಿಆರ್‌ ಸೇರಿ ಸಿನಿಮಾ ವಿಭಾಗಗಳ ಅನೇಕರಿಗೆ ಸದಸ್ಯತ್ವಕ್ಕೆ ಆಹ್ವಾನ ನೀಡಿದೆ. ಆದರೆ ಅದರಲ್ಲಿ ರಾಜಮೌಳಿ ಅವರಿಗೆ ಆಮಂತ್ರಣ ನೀಡಲಾಗಿಲ್ಲ.

VISTARANEWS.COM


on

Ram Charan, Jr NTR
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ ಅಕಾಡೆಮಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡು, ಭಾರತಕ್ಕೆ ಹೆಮ್ಮೆ ತಂದುಕೊಟ್ಟಿದೆ. ಅದರ ಬೆನ್ನಲ್ಲೇ ಇದೀಗ ಆಸ್ಕರ್‌ ಅಕಾಡೆಮಿಯು ಆರ್‌ಆರ್‌ಆರ್‌ ಸಿನಿಮಾದ ನಟರಿಗೆ ಅಕಾಡೆಮಿಯ (Oscar Academy) ಸದಸ್ಯರಾಗಲು ಆಮಂತ್ರಣವನ್ನು ಕಳಹಿಸಿಕೊಟ್ಟಿದೆ.

ಅಕಾಡೆಮಿ ಸದಸ್ಯರಾಗಲು ಆರ್‌ಆರ್‌ಆರ್‌ ನಟರಾದ ಜೂ. ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ಅವರಿಗೆ ಆಹ್ವಾನ ಕಳುಹಿಸಿಕೊಡಲಾಗಿದೆ. ಅದರ ಜತೆಯಲ್ಲಿ ಸಂಗೀತ ವಿಭಾಗದಲ್ಲಿ ಎಂ.ಎಂ.ಕೀರವಾಣಿ ಮತ್ತು ಚಂದ್ರಬೋಸ್‌, ಪ್ರೊಡಕ್ಷನ್‌ ಡಿಸೈನ್‌ ವಿಭಾಗದಲ್ಲಿ ಸಾಬು ಸಿರಿಲ್‌, ನಿರ್ದೇಶನದ ವಿಭಾಗದಲ್ಲಿ ಮಣಿರತ್ನಂ ಮತ್ತು ಚೈತನ್ಯ ತಮ್ಹಾನೆ, ಡಾಕ್ಯುಮೆಂಟರಿ ವಿಭಾಗದಲ್ಲಿ ಶೌನಕ್‌ ಸೇನ್‌, ನಿರ್ಮಾಪಕರ ವಿಭಾಗದಲ್ಲಿ ಸಿದ್ಧಾರ್ಥ್‌ ರಾಯ್‌ ಕಪೂರ್‌ ಮತ್ತು ಕರಣ್‌ ಜೋಹರ್‌, ವಿಎಫ್‌ಎಕ್ಸ್‌ ವಿಭಾಗದಲ್ಲಿ ಹರೇಶ್‌ ಹಿಂಗೋರಾಣಿ ಮತ್ತು ಪಿ.ಸಿ.ಸನತ್‌, ಉತ್ಪಾದನೆ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಕ್ರಾಂತಿ ಶರ್ಮಾ ಅವರಿಗೆ ಅಕಾಡೆಮಿಯ ಸದಸ್ಯರಾಗಲು ಆಮಂತ್ರಣ ನೀಡಲಾಗಿದೆ.

ಇದನ್ನೂ ಓದಿ: Viral Video: ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿದ ನದಿ; ಆತಂಕದ ಮಧ್ಯೆಯೇ ಕಾರಣ ಹೇಳಿದ ಬಿಯರ್​ ಫ್ಯಾಕ್ಟರಿ
ವಿಶೇಷವೆಂದರೆ ಅಕಾಡೆಮಿಯು ಆಸ್ಕರ್‌ ಗೆದ್ದ ಆರ್‌ಆರ್‌ಆರ್‌ ಸಿನಿಮಾದ ನಿರ್ದೇಶಕ ರಾಜಮೌಳಿ ಅವರಿಗೇ ಸದಸ್ಯರಾಗಲು ಆಮಂತ್ರಣವನ್ನು ನೀಡಿಲ್ಲ. ಈ ವಿಚಾರ ಅನೇಕ ಕಡೆಗಳಲ್ಲಿ ಚರ್ಚೆಯಾಗುತ್ತಿದೆ.

ರಾಜಮೌಳಿ ಅವರು ಸದ್ಯದಲ್ಲೇ SSMB 29 ಸಿನಿಮಾದ ಕೆಲಸ ಪ್ರಾರಂಭಿಸಲಿದ್ದಾರೆ. ಮಹೇಶ್‌ ಬಾಬು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದು ಮಹೇಶ್‌ ಬಾಬು ಮತ್ತು ರಾಜಮೌಳಿ ಕಾಂಬಿನೇಶನ್‌ನ ಮೊದಲನೇ ಸಿನಿಮಾವಾಗಿರಲಿದೆ. ಇದೊಂದು ಆಕ್ಷನ್‌ ಸಿನಿಮಾ ಎಂದು ಹೇಳಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸ್ಯಾಂಡಲ್ ವುಡ್

Srinidhi Shetty: ಕೋಲ ಸೇವೆ ಸಲ್ಲಿಸಿದ ಕೆಜಿಎಫ್‌ ಬೆಡಗಿ; ಶ್ರೀನಿಧಿ ಶೆಟ್ಟಿಗೆ ದೈವ ಅಭಯ ನೀಡಿದ್ದೇನು?

Srinidhi Shetty: ತುಳುನಾಡಿನ ಅನೇಕ ಕಲಾವಿದರು ಸಿನಿಮಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಅವರಲ್ಲಿ ಕೆಜಿಎಫ್‌ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಅವರೂ ಕೂಡ ಒಬ್ಬರು. ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್‌ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. ಶ್ರೀನಿಧಿ ಶೆಟ್ಟಿಯವರು ತನ್ನ ಕುಟುಂಬದ ದೈವಗಳಿಗೆ ಹೇಳಿದ್ದ ಹರಕೆಯ ನೇಮೋತ್ಸವವನ್ನು ನೆರವೇರಿಸಿದ್ದಾರೆ. ಮಂಗಳೂರಿನ ಹೊರವಲಯದ ಕಿನ್ನಿಗೋಳಿ ತಮ್ಮ ಕುಟುಂಬದ ಮನೆ ತಾಳಿಪಾಡಿಗುತ್ತುವಿನಲ್ಲಿ ಈ ಹರಕೆ ನೇಮೋತ್ಸವ ನಡೆಸಿದ್ದಾರೆ.

VISTARANEWS.COM


on

Srinidhi Shetty Attends Daiva Kola Festivities in Mangalore
Koo

‘ಕೆಜಿಎಫ್’​ ಸಿನಿಮಾ ನಾಯಕಿ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರ ಹುಟ್ಟೂರು ಮಂಗಳೂರು. ಇದೀಗ ನಟಿ ತಮ್ಮ ಕುಟುಂಬದ ದೈವಗಳಿಗೆ ಹೇಳಿಕೊಂಡಿದ್ದ ಹರಕೆಯನ್ನು ತೀರಿಸಿದ್ದಾರೆ.

ಮಂಗಳೂರಿನ ಹೊರವಲಯದಲ್ಲಿರೋ ಕಿನ್ನಿಗೋಳಿಯ ತಾಳಿಪಾಡಿ ಗುತ್ತುವಿನಲ್ಲಿ ಈ ಹರಕೆ ನೇಮೋತ್ಸವ ನಡೆದಿದೆ.

ಇದನ್ನೂ ಓದಿ: Ramana Avatara Movie: ಬಂಪರ್ ಆಫರ್; ಕೇವಲ 99 ರೂ.ಗೆ ಸಿಗಲಿದೆ ‘ರಾಮನ ಅವತಾರ’ ಸಿನಿಮಾ ಟಿಕೆಟ್

ಜಾರಾಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಸಲಾಯಿತು. ಇದರಲ್ಲಿ ಶ್ರೀನಿಧಿ ಶೆಟ್ಟಿ ಹಾಗೂ ಅವರ ಕುಟುಂಬದವರು, ಸಂಬಂಧಿಕರು ಪಾಲ್ಗೊಂಡರು.

‘ಮುಂದೆ ಇನ್ನಷ್ಟು ಎತ್ತರಕ್ಕೆ ಏರುತ್ತೀರಿ’ ಎಂದು ದೈವಗಳು ಇದೇ ಸಂದರ್ಭ ಶ್ರೀನಿಧಿ ‌ಶೆಟ್ಟಿಗೆ ಅಭಯ ನೀಡಿವೆಯಂತೆ. ಕರಾವಳಿ ಮೂಲದ ಬಂಟ ಮನೆತನಕ್ಕೆ ಸೇರಿದ ಇವರು ಅಪಾರ ದೈವಭಕ್ತೆ ಕೂಡಾ. ಸಿನೆಮಾ ರಂಗದಲ್ಲಿ ಬ್ಯುಸಿಯಾಗಿದ್ದರೂ, ಸದಾ ದೈವ ದೇವರ ಕಾರ್ಯಗಳಲ್ಲಿ ಭಾಗವಹಿಸುತ್ತಲೇ ಬಂದಿದ್ದಾರೆ.
Continue Reading

ಸಿನಿಮಾ

Actor Darshan: ಮೇ 10ಕ್ಕೆ ಗುಡ್‌ನ್ಯೂಸ್‌ ಕೊಡ್ತಿದ್ದಾರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌! ಏನದು?

Actor Darshan: ಈಗಾಗಲೇ ʻಡೆವಿಲ್‌ʼ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌ ಆಗಿದೆ. ರಗಡ್‌ ಲುಕ್‌ನಲ್ಲಿ ದರ್ಶನ್‌ ಕಂಡಿದ್ದಾರೆ. ಚಿತ್ರದ ತಾರೆಗಳ ಬಗ್ಗೆ ಇನ್ನೂ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಕೆಲವೇ ದಿನಗಳಲ್ಲಿ ಚಿತ್ರದಲ್ಲಿರುವ ಉಳಿದ ತಾರೆಯರ ಲುಕ್ ಬಹಿರಂಗವಾಗುವ ಸಾಧ್ಯತೆ ಇದೆ. ಡೆವಿಲ್’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಇದೆ. ಡೆವಿಲ್’ ಪಕ್ಕಾ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ ಎಂದು ನಿರ್ದೇಶಕರು ಈಗಾಗಲೇ ಹೇಳಿದ್ದಾರೆ.

VISTARANEWS.COM


on

Actor Darshan devil starring making video release on may 10
Koo

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅವರ ಮುಂಬರುವ ಸಿನಿಮಾಗಳ ಕೆಲಸ ನಿಂತು ಹೋಗಿತ್ತು. ಇದೀಗ ದರ್ಶನ್‌ ಅವರು ತಮ್ಮ ಆಪ್ತ ಸಚ್ಚಿದಾನಂದ ಜತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ದರ್ಶನ್ ಅವರಿಗೆ ಕಟ್ಟಲಾದ ಬ್ಯಾಂಡೇಜ್‌ ಕೂಡ ಮಾಯವಾಗಿದೆ. ಹೀಗಾಗಿ ದರ್ಶನ್‌ ಫ್ಯಾನ್ಸ್‌ ಖುಷಿಯಲ್ಲಿ ಇದ್ದಾರೆ. ಜತೆಗೆ ಶೀಘ್ರದಲ್ಲೇ ಮತ್ತೆ ‘ಡೆವಿಲ್’ ಸಿನಿಮಾ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ನಿರ್ದೇಶಕ ಮಿಲನಾ ಪ್ರಕಾಶ್ ಮತ್ತು ತಂಡ ಫ್ಯಾನ್ಸ್‌ಗೆ ಸರ್‌ಪ್ರೈಸ್ ನೀಡಿದೆ. ಮೇ 10ಕ್ಕೆ ಚಿತ್ರದ ಮೇಕಿಂಗ್ ವಿಡಿಯೊ ಬಿಡುಗಡೆಯಾಗಲಿದೆ ಎಂದು ಪೋಸ್ಟರ್‌ ಜತೆ ಮಾಹಿತಿ ಹಂಚಿಕೊಂಡಿದೆ.

ಈಗಾಗಲೇ ʻಡೆವಿಲ್‌ʼ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌ ಆಗಿದೆ. ರಗಡ್‌ ಲುಕ್‌ನಲ್ಲಿ ದರ್ಶನ್‌ ಕಂಡಿದ್ದಾರೆ. ಚಿತ್ರದ ತಾರೆಗಳ ಬಗ್ಗೆ ಇನ್ನೂ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಕೆಲವೇ ದಿನಗಳಲ್ಲಿ ಚಿತ್ರದಲ್ಲಿರುವ ಉಳಿದ ತಾರೆಯರ ಲುಕ್ ಬಹಿರಂಗವಾಗುವ ಸಾಧ್ಯತೆ ಇದೆ. ಈಗಾಗಲೇ ತಂಡ ಮೊದಲನೇ ಹಂತದ ಚಿತ್ರೀಕರಣ ಮುಗಿಸಿತ್ತು. ಇನ್ನೂ ಡೆವಿಲ್ ಚಿತ್ರದ ಮೂಲಕ ಹತ್ತೊಂಬತ್ತು ವರ್ಷದ ನಂತರ ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಕನ್ನಡಕ್ಕೆ ಬರುತ್ತಿದ್ದಾರೆ. ಚಿತ್ರದ ನಾಯಕಿ ಯಾರು ಎಂದು ಇದುವೆರೆಗೆ ತಿಳಿದು ಬಂದಿಲ್ಲ. ಬಿಡುಗಡೆಯಾಗಲಿರುವ ಮೇಕಿಂಗ್ ನಲ್ಲಿ ನಾಯಕಿಯ ಸುಳಿವು ಸಿಗುತ್ತಾ ಎಂಬ ಕುತೂಹಲ ಕೂಡ ಅನೇಕರಲ್ಲಿದೆ.

ಇದನ್ನೂ ಓದಿ: Actor Darshan: ಗೆದ್ದ ಎತ್ತಿನ ಬಾಲ ಹಿಡಿಯಬಾರದು ಎಂದ ದರ್ಶನ್‌! ಕಾಟೇರ 2 ಬರತ್ತಾ?

‘ಡೆವಿಲ್’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಇದೆ. ಡೆವಿಲ್’ ಪಕ್ಕಾ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ ಎಂದು ನಿರ್ದೇಶಕರು ಈಗಾಗಲೇ ಹೇಳಿದ್ದಾರೆ. ʻಡೆವಿಲ್’ ಚಿತ್ರಕ್ಕೆ ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ‘ವಂಶಿ’, ‘ಮಿಲನ’ ಮೊದಲಾದ ಚಿತ್ರಗಳಿಗೆ ಅವರು ಆ್ಯಕ್ಷನ್ ಕಟ್ ಹೇಳಿದ್ದರು. ದರ್ಶನ್ ಜೊತೆ 2017ರಲ್ಲಿ ‘ತಾರಕ್’ ಸಿನಿಮಾ ಮಾಡಿದ್ದರು. ಈಗ ಎರಡನೇ ಬಾರಿಗೆ ಇವರು ಒಂದಾಗಿದ್ದಾರೆ.ಶ್ರೀ ಜೈಮಾತಾ ಕಂಬೈನ್ಸ್ ಹಾಗೂ ವೈಷ್ಣೋ ಸ್ಟುಡಿಯೋ ಸಂಸ್ಥೆಗಳು ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

ಡೆವಿಲ್ ಚಿತ್ರದ ನಂತರ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ‘ರಾಬರ್ಟ್’ ಹಾಗೂ ‘ಕಾಟೇರ’ ಬಳಿಕ ಮತ್ತೆ ತರುಣ್ ಸುಧೀರ್ ನಿರ್ದೇಶನದ ಚಿತ್ರಕ್ಕೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Continue Reading

ಮಾಲಿವುಡ್

Actor Sathyaraj: `ಬಾಹುಬಲಿ’ ಕಟ್ಟಪ್ಪನ ತೊಡೆ ಮೇಲೆ ಕುಳಿತ ಈ ಕ್ಯೂಟ್‌ ನಟ ಯಾರು? ಹೇಳಿ ನೋಡೋಣ!

Actor Sathyaraj: ಸತ್ಯರಾಜ್ ಅವರು 240 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ಮತ್ತು ಎಸ್‌.ಎಸ್ ರಾಜಮೌಳಿ ಅವರ ಬಾಹುಬಲಿ ಸಿನಿಮಾದ ಕಟ್ಟಪ್ಪ ಪಾತ್ರಕ್ಕಾಗಿ ಸತ್ಯರಾಜ್ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದರು. ಅವರು ಇನ್ನೂ ಅನೇಕ ಪ್ರೇಕ್ಷಕರಿಗೆ ಕಟ್ಟಪ್ಪ ಎಂತಲೇ ಪರಿಚಿತರಾಗಿದ್ದಾರೆ. ಈಗ ಮಲಯಾಳ ಖ್ಯಾತ ನಟನ ಬಾಲ್ಯದ ಫೋಟೊ ವೈರಲ್‌ ಆಗಿದೆ. ಮೇ 7ರಂದು, MUBI ಇಂಡಿಯಾದ ಅಧಿಕೃತ ಎಕ್ಸ್‌ ಖಾತೆ ಫೋಟೊ ಶೇರ್‌ ಮಾಡಿಕೊಂಡಿದೆ.

VISTARANEWS.COM


on

Actor Sathyaraj throwback picture of with veteran actor
Koo

ಬೆಂಗಳೂರು: ಬಾಹುಬಲಿ ಸಿನಿಮಾ ಕಟ್ಟಪ್ಪ (Baahubali Actor Sathyaraj) ಪಾತ್ರದ ಮೂಲಕ ಹೆಸರುವಾಸಿಯಾಗಿರುವ ತಮಿಳು ಮತ್ತು ತೆಲುಗು ನಟ ಸತ್ಯರಾಜ್ (Actor Sathyaraj) ಜತೆ ಫಹಾದ್ ಫಾಸಿಲ್ ಪೋಸ್‌ (Fahadh Faasil) ಕೊಟ್ಟಿದ್ದಾರೆ. ಇದು 80ರ ದಶಕದ ಫೋಟೊ. ಆಗ ಫಹಾದ್ ಫಾಸಿಲ್ ತುಂಬ ಚಿಕ್ಕವರಿದ್ದರು. ಸತ್ಯರಾಜ್ ತೊಡೆ ಮೇಲೆ ಕುಳಿತು ಫಹಾದ್ ಫಾಸಿಲ್ ಕ್ಯೂಟ್‌ ಆಗಿ ಸ್ಮೈಲ್‌ ಕೊಟ್ಟಿದ್ದಾರೆ. ಈ ಫೋಟೊ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನಟ ಸತ್ಯರಾಜ್ ಅವರು ಫಹಾದ್ ಅವರ ತಂದೆ ಫಾಸಿಲ್ ಜತೆ ತುಂಬ ಕ್ಲೋಸ್‌ ಇದ್ದರು. ಫಹಾದ್ ಅವರ ತಂದೆ ಫಾಸಿಲ್ ಹಾಗೂ ಸತ್ಯರಾಜ್‌ ‘ಎನ್ ಬೊಮ್ಮುಕುಟ್ಟಿ ಅಮ್ಮಾವುಕ್ಕು’ ಮತ್ತು ‘ಪೂವಿಜಿ ವಸಲಿಲೆ’ ಎಂಬ ತಮಿಳು ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು.

ಮೇ 7ರಂದು, MUBI ಇಂಡಿಯಾದ ಅಧಿಕೃತ ಎಕ್ಸ್‌ ಖಾತೆ ಸತ್ಯರಾಜ್ ಮತ್ತು ಫಹಾದ್ ಫಾಸಿಲ್ ಅವರ ಈ ಅಪರೂಪದ ಫೋಟೊವನ್ನು ಹಂಚಿಕೊಂಡಿದೆ. “1980ರ ದಶಕದಲ್ಲಿ ಸತ್ಯರಾಜ್ ಮತ್ತು ಫಹಾದ್ ಫಾಸಿಲ್ ” ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದೆ. ಫಹಾದ್ ಫಾಸಿಲ್ ಜನಪ್ರಿಯ ನಿರ್ದೇಶಕ, ನಿರ್ಮಾಪಕ, ಮತ್ತು ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ.ಎರಡು ತಮಿಳು ಚಿತ್ರಗಳಲ್ಲಿ ಸತ್ಯರಾಜ್ ಜತೆಗೂ ಫಹಾದ್ ಫಾಸಿಲ್ ತೆರೆ ಹಂಚಿಕೊಂಡಿದ್ದರು. ಆ ಎರಡೂ ಸಿನಿಮಾಗಳ ಬ್ಲಾಕ್ಬಸ್ಟರ್ ಹಿಟ್ ಕಂಡಿವೆ.

ಇದನ್ನೂ ಓದಿ: Kanakalatha Passes Away: 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ಇನ್ನಿಲ್ಲ

ನಟ ಫಹಾದ್ ಫಾಸಿಲ್ (Fahad Faasil) ಅವರು ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅವರೆಂದಿಗೂ ಬಾಲಿವುಡ್​ನತ್ತ ಮುಖ ಮಾಡಿಲ್ಲ. ಪರಭಾಷೆಯ ‘ಸೂಪರ್ ಡಿಲಕ್ಸ್’, ‘ವಿಕ್ರಮ್’, ‘ಪುಷ್ಪ’ ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಅವರಿಗೆ ಈ ಮೊದಲು ಹಿಂದಿ ಆಫರ್​ಗಳು ಬಂದಿದ್ದವು. ಆದರೆ, ಅವರಿಗೆ ಯಾವುದೂ ಇಷ್ಟ ಆಗಿಲ್ಲ.

ಫಹಾದ್ ಫಾಸಿಲ್ ಕೊನೆಯದಾಗಿ ನಿರ್ದೇಶಕ ಜಿತು ಮಾಧವನ್ ಅವರ ‘ಆವೇಶಂ’ ನಲ್ಲಿ ಕಾಣಿಸಿಕೊಂಡರು. ಇದು ವಿಶ್ವಾದ್ಯಂತ ರೂ 150 ಕೋಟಿ ರೂ, ಗಳಿಕೆ ಕಂಡಿದೆ. ಫಹಾದ್ ಫಾಸಿಲ್ ನಟನೆಯ ‘ಪುಷ್ಪ: ದಿ ರೂಲ್’, ‘ಮಾರೀಸನ್’ ಮತ್ತು ರಜನಿಕಾಂತ್ ಅವರ ‘ವೆಟ್ಟೈಯನ್’ ಸೇರಿದಂತೆ ಮೂರು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.

ಸತ್ಯರಾಜ್ ಕೊನೆಯದಾಗಿ ತಮಿಳು ಚಿತ್ರ ‘ಸಿಂಗಪುರ ಸಲೂನ್’ ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ‘ತೋಜರ್ ಚೆಗುವೇರಾ’ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ. ಸತ್ಯರಾಜ್ ಅವರು 240 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ಮತ್ತು ಎಸ್‌.ಎಸ್ ರಾಜಮೌಳಿ ಅವರ ಬಾಹುಬಲಿ ಸಿನಿಮಾದ ಕಟ್ಟಪ್ಪ ಪಾತ್ರಕ್ಕಾಗಿ ಸತ್ಯರಾಜ್ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದರು. ಅವರು ಇನ್ನೂ ಅನೇಕ ಪ್ರೇಕ್ಷಕರಿಗೆ ಕಟ್ಟಪ್ಪ ಎಂತಲೇ ಪರಿಚಿತರಾಗಿದ್ದಾರೆ.

Continue Reading

ಬಾಲಿವುಡ್

Alia Bhatt Deep Fake: ಆಲಿಯಾ ಭಟ್‌ ಡೀಪ್‌ಫೇಕ್‌ ವಿಡಿಯೊ ವೈರಲ್‌! ಅಸಲಿ ಮುಖ ಯಾರದ್ದು?

Alia Bhatt Deep Fake: ಆಲಿಯಾ ಭಟ್ ಅವರು ಡೀಪ್​ಫೇಕ್ ವಿಡಿಯೊಗೆ ಬಲಿ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಬೇರೆ ವಿಡಿಯೊ ಹಾಗೂ ಫೋಟೋಗಳಿಗೆ ಆಲಿಯಾ ಮುಖವನ್ನು ಅಂಟಿಸುವ ಕೆಲಸ ಮಾಡಲಾಗಿತ್ತು. ಇದೀಗ ಮತ್ತೆ ಆಲಿಯಾ ಅವರ ಈ ಡೀಪ್‌ಫೇಕ್‌ ವಿಡಿಯೊ ವೈರಲ್‌ ಆಗಿದ್ದು ಅನೇಕರು ಈ ಬಗ್ಗೆ ಖಂಡಿಸಿದ್ದಾರೆ.

VISTARANEWS.COM


on

Alia Bhatt Deep Fake Wamiqa Gabbi face replaced
Koo

ಬೆಂಗಳೂರು: ಭಾರತೀಯರಲ್ಲಿ (indian’s) ಶೇ. 75ರಷ್ಟು ಮಂದಿ ಡೀಪ್‌ಫೇಕ್‌ (Deep Fakes) ಪಿಡುಗಿಗೆ ಒಳಗಾಗಿದ್ದು, ಶೇಕಡಾ 22ರಷ್ಟು ಮಂದಿಗೆ ಮಾತ್ರ ಇದು ಗಮನಕ್ಕೆ ಬಂದಿದೆ ಎಂದು ಈ ಹಿಂದೆ ವರದಿಯಾಗಿತ್ತು. ಈ ಡೀಪ್‌ಫೇಕ್‌ಗೆ ಹೆಚ್ಚಾಗಿ ನಟಿಯರು ಒಳಗಾಗುತ್ತಿದ್ದಾರೆ. ಇದೀಗ ಮತ್ತೆ ಆ ಸಾಲಿಗೆ ಆಲಿಯಾ ಭಟ್‌ (Alia Bhatt Deep Fake) ಸೇರಿದ್ದಾರೆ. ನಟಿ ವಾಮಿಕಾ ಗಬ್ಬಿ (Wamiqa Gabbi) ವಾರದ ಹಿಂದೆ ಇನ್‌ಸ್ಟಾದಲ್ಲಿ ವಿಡಿಯೊವೊಂದನ್ನು ಶೇರ್‌ ಮಾಡಿಕೊಂಡಿದ್ದರು. ಕೆಂಪು ಸೀರೆಯಲ್ಲಿ ನಟಿ ಹಾಟ್‌ ಆಗಿ ಕಂಡಿದ್ದರು. ಇದೀಗ ಈ ವಿಡಿಯೊಗೆ ಡಿಜಿಟಲ್ ಮ್ಯಾನ್ಯುಪಲೇಷನ್ ಟೆಕ್ನಾಲಜಿ ಬಳಸಿ ವಾಮಿಖಾ ಅವರ ಮುಖಕ್ಕೆ ಆಲಿಯಾ ಮುಖವನ್ನು ಅಂಟಿಸಲಾಗಿದೆ ಎಂದು ವರದಿಯಾಗಿದೆ. ಇದೀಗ ಆಲಿಯಾ ಅವರ ಈ ಡೀಪ್‌ಫೇಕ್‌ ವಿಡಿಯೊ ವೈರಲ್‌ ಆಗಿದ್ದು ಅನೇಕರು ಈ ಬಗ್ಗೆ ಖಂಡಿಸಿದ್ದಾರೆ.

ಈ ವಿಡಿಯೊದಲ್ಲಿ ಆಲಿಯಾ ಅವರನ್ನು ನೋಡಿದಂತೇ ಆಗುತ್ತಿದೆ. ಡೀಪ್‌ಫೇಕ್ ವೀಡಿಯೊವನ್ನು ಅನ್‌ಫಿಕ್ಸ್‌ ಫೇಸ್‌ ಎಂಬ ಖಾತೆ ಶೇರ್‌ ಮಾಡಿಕೊಂಡಿದೆ. ವಿಡಿಯೊದ ಜತೆಗೆ, “ಆಲಿಯಾಭಟ್ ಆಫ್-ಸ್ಕ್ರೀನ್” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಡೀಪ್‌ಫೇಕ್ ವಿಡಿಯೊದಲ್ಲಿ, ಆಲಿಯಾ ಕೆಂಪು ಸೀರೆಯನ್ನು ಧರಿಸಿ ಕೂದಲು ಹೆಣೆದು ನೆಲದ ಮೇಲೆ ಕುಳಿತಿದ್ದಾರೆ. ಈ ಹಿಂದೆ, ಆಮೀರ್ ಖಾನ್ ಕೂಡ ಈ ಡೀಪ್‌ಫೇಕ್‌ಗಳಿಗೆ ಒಳಗಾಗಿದ್ದರು. ಅಲ್ಲಿ ನಟ ರಾಜಕೀಯ ಪಕ್ಷವನ್ನು ಪ್ರಚಾರ ಮಾಡುವಂತಹ ವೀಡಿಯೊ ವೈರಲ್ ಆಗಿತ್ತು. ಇದಾದ ಬಳಿಕ ಆಮೀರ್‌ ಸೈಬರ್ ಕ್ರೈಮ್ ಸೆಲ್‌ಗೆ ದೂರು ಸಲ್ಲಿಸಿದ್ದರು.

ಶೇ. 57ರಷ್ಟು ಸೆಲೆಬ್ರಿಟಿಗಳು

ಡೀಪ್‌ಫೇಕ್ ವಂಚನೆಗೆ ಒಳಗಾದವರಲ್ಲಿ 57 ಪ್ರತಿಶತದಷ್ಟು ಸೆಲೆಬ್ರಿಟಿಗಳಾಗಿದ್ದಾರೆ. ವಿಡಿಯೊ ಚಿತ್ರ ಅಥವಾ ಆಡಿಯೊವನ್ನು ನೋಡಿ ಅದು ನಿಜವೆಂದು ಭಾವಿಸಿ ಶೇ. 31 ರಷ್ಟು ಮಂದಿ ಹಣವನ್ನು ಕಳೆದುಕೊಂಡಿದ್ದಾರೆ. ಶೇ. 40ರಷ್ಟು ಮಂದಿ ಜನರು ತಮ್ಮ ಧ್ವನಿಯನ್ನು ಕಾಪಿ ಮಾಡಲಾಗಿದೆ. ವೈಯಕ್ತಿಕ ಮಾಹಿತಿ ಅಥವಾ ಹಣದ ಲೆಕ್ಕವನ್ನು ಬಹಿರಂಗಪಡಿಸಲು ತಮಗೆ ತಿಳಿದಿರುವ ಯಾರನ್ನಾದರೂ ದಾರಿತಪ್ಪಿಸಲು ಬಳಸುತ್ತಾರೆ ಎಂದು ಕಂಡುಹಿಡಿಯಲಾಗಿದೆ.

ಇದನ್ನೂ ಓದಿ: Chaithra J Achar: ʼಕನ್ನಡದ ಆಲಿಯಾ ಭಟ್‌ʼ ಚೈತ್ರಾ ಆಚಾರ್ – ಕಿಶನ್ ಬಿಳಗಲಿ ಶೃಂಗಾರ ನೃತ್ಯಕ್ಕೆ ಮನಸೋತ ಫ್ಯಾನ್ಸ್‌!

ವೈರಲ್‌ ವಿಡಿಯೊ

ಆಲಿಯಾ ಭಟ್ ಕೊನೆಯದಾಗಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಕಾಣಿಸಿಕೊಂಡರು. ಮುಂದೆ ‘ಜಿಗ್ರಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Continue Reading
Advertisement
Viral video
ವೈರಲ್ ನ್ಯೂಸ್7 mins ago

Viral Video: ಅಂಬಾನಿಗಿಂತಲೂ ರಿಚ್‌ ಈತ.. ಗದ್ದೆ ಉಳುಮೆಗೆ 20 ಲಕ್ಷದ ಕಾರೇ ಬೇಕು..!

Prajwal Revanna Case HD Revanna sent to 7 day judicial custody
ಕ್ರೈಂ11 mins ago

Prajwal Revanna Case: ಎಚ್‌.ಡಿ. ರೇವಣ್ಣಗೆ 7 ದಿನ ನ್ಯಾಯಾಂಗ ಬಂಧನ; ಅಮಾವಾಸ್ಯೆ ದಿನವೇ ಜೈಲಿಗೆ ಶಿಫ್ಟ್‌!

Shakib Al Hasan
ಕ್ರೀಡೆ13 mins ago

Shakib Al Hasan: ಸೆಲ್ಫಿ ತೆಗೆಯಲು ಬಂದ ಅಭಿಮಾನಿಗೆ ಥಳಿಸಲು ಮುಂದಾದ ಶಕಿಬ್; ವಿಡಿಯೊ ವೈರಲ್​

Ram Mandir
ದೇಶ27 mins ago

Ram Mandir: ರಾಮಮಂದಿರ ‘ಯೂಸ್‌ಲೆಸ್’ ಎಂದ ಸಮಾಜವಾದಿ ಪಕ್ಷದ ನಾಯಕ; ಬಿಜೆಪಿ ಆಕ್ರೋಶ

IPL 2024
ಕ್ರೀಡೆ51 mins ago

IPL 2024: ಅಂಪೈರ್​ ಜತೆ ವಾಗ್ವಾದ; ಸಂಜುಗೆ ಬಿತ್ತು ಭಾರೀ ದಂಡ

gold rate today tapasi
ಚಿನ್ನದ ದರ1 hour ago

Gold Rate today: ಇದು ಚಿನ್ನದಂಥಾ ವಿಷಯ! ಬಂಗಾರದ ಬೆಲೆ ತುಸು ಇಳಿಕೆ; ಎಷ್ಟಿದೆ ಇಂದು?

IPL 2024 Points Table
ಕ್ರಿಕೆಟ್1 hour ago

IPL 2024 Points Table: ಡೆಲ್ಲಿಗೆ ಗೆಲುವು ಅಂಕಪಟ್ಟಿಯಲ್ಲಿ ಕುಸಿತ ಕಂಡ ಲಕ್ನೋ

sam pitroda pm narendra modi
ಪ್ರಮುಖ ಸುದ್ದಿ2 hours ago

PM Narendra Modi: “ಚರ್ಮದ ಬಣ್ಣದ ಮೇಲಿನ ಈ ಅವಮಾನವನ್ನು ಸಹಿಸುವುದಿಲ್ಲ…” ಪಿತ್ರೋಡಾಗೆ ಮೋದಿ ತಪರಾಕಿ

ವೈರಲ್ ನ್ಯೂಸ್2 hours ago

Viral Video: ಅಬ್ಬಾ.. ಎಂಥಾ ಭೀಕರ ದೃಶ್ಯ! ಕರೆಂಟ್‌ ಶಾಕ್‌ ಹೊಡೆದು ವ್ಯಕ್ತಿ ಒದ್ದಾಡಿ ಸಾವು

Double Murder Fakirappa stabs brothers to death for falling behind daughter
ಕ್ರೈಂ2 hours ago

Double Murder: ಮಗಳ ಹಿಂದೆ ಬಿದ್ದಿದ್ದಕ್ಕೆ ಸಹೋದರರನ್ನೇ ಚಾಕುವಿನಿಂದ ಇರಿದು ಕೊಂದ ಫಕೀರಪ್ಪ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ19 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ22 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ24 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌