Ram Setu | ಇದೀಗ ಅಕ್ಷಯ್‌ ಕುಮಾರ್‌ ಪುರಾತತ್ವಶಾಸ್ತ್ರಜ್ಞ: ರಾಮ ಸೇತು ಬಿಡುಗಡೆ ದಿನಾಂಕ ಪ್ರಕಟ, ಹೇಗಿದೆ ಟೀಸರ್‌? - Vistara News

ಬಾಲಿವುಡ್

Ram Setu | ಇದೀಗ ಅಕ್ಷಯ್‌ ಕುಮಾರ್‌ ಪುರಾತತ್ವಶಾಸ್ತ್ರಜ್ಞ: ರಾಮ ಸೇತು ಬಿಡುಗಡೆ ದಿನಾಂಕ ಪ್ರಕಟ, ಹೇಗಿದೆ ಟೀಸರ್‌?

ಅಕ್ಷಯ್‌ ಕುಮಾರ್‌ ನಟನೆಯ ರಾಮ್‌ (Ram Setu)ಸೇತು ಸಿನಿಮಾ ಬಿಡುಗಡೆಯ ದಿನಾಂಕ ಪ್ರಕಟಗೊಂಡಿದೆ. ಪುರಾತತ್ವಶಾಸ್ತ್ರಜ್ಞನ ಪಾತ್ರವನ್ನು ಅಕ್ಷಯ್‌ ಕುಮಾರ್‌ ನಿರ್ವಹಿಸಲಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ನಟನೆಯ ಬಹುನಿರಿಕ್ಷಿತ ಚಿತ್ರ ʻರಾಮ ಸೇತುʼ (Ram Setu) ಬಿಡುಗಡೆಯ ದಿನಾಂಕ ಪ್ರಕಟಗೊಂಡಿದೆ. ಚಿತ್ರದ ಫಸ್ಟ್‌ಲುಕ್‌ ಅನ್ನು ಚಿತ್ರತಂಡ ರಿವೀಲ್‌ ಮಾಡಿದೆ. ಸಿನಿಮಾ ಅಕ್ಟೋಬರ್‌ 25ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ರಾಮಸೇತುವನ್ನು ಅನ್ವೇಷಿಸುವ ಮತ್ತು ಉಳಿಸುವ ಉದ್ದೇಶದಲ್ಲಿರುವ ಪುರಾತತ್ವಶಾಸ್ತ್ರಜ್ಞನ ಪಾತ್ರವನ್ನು ಅಕ್ಷಯ್‌ ಕುಮಾರ್‌ ನಿರ್ವಹಿಸಲಿದ್ದಾರೆ.

ಭಾರತೀಯ ಪರಂಪರೆಯ ಈ ಸ್ತಂಭವನ್ನು ದುಷ್ಟ ಶಕ್ತಿಗಳು ನಾಶಪಡಿಸುವ ಮೊದಲು, ರಾಮಸೇತುವಿನ ನಿಜವಾದ ಅಸ್ತಿತ್ವವನ್ನು ಸಾಬೀತುಪಡಿಸುವ ಉದ್ದೇಶದಲ್ಲಿರುವ ಪುರಾತತ್ವ ಶಾಸ್ತ್ರಜ್ಞನೊಬ್ಬನ ಕಥೆಯನ್ನು ಹೇಳಲಿದೆ ಈ ಸಿನಿಮಾ. ಈ ಹಿಂದೆ ‘ಪರ್ಮಾಣು’, ‘ತೇರೆ ಬಿನ್ ಲಾಡೆನ್’ ಚಿತ್ರಗಳನ್ನು ನಿರ್ದೇಶಿಸಿದ್ದ ಅಭಿಷೇಕ್ ಶರ್ಮಾ ರಾಮ್ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸತ್ಯದೇವ್ ಕಂಚರಣ, ನುಶ್ರತ್ ಭರುಚ್ಚ, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಎಂ. ನಾಸರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಊಟಿ, ದಮನ್ ಮತ್ತು ದಿಯು ಮತ್ತು ಮುಂಬೈನಲ್ಲಿ ಶೂಟಿಂಗ್‌ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ | Akshay Kumar | ಸಿನಿಮಾಗಳೆಲ್ಲವೂ ಫ್ಲಾಪ್‌: ಅಕ್ಷಯ್‌ ಕುಮಾರ್‌ ತೆಗೆದುಕೊಂಡ ನಿರ್ಧಾರ ಏನು?

ರಾಮಸೇತು ವಾಸ್ತವವಾಗಿ ತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿರುವ ರಾಮೇಶ್ವರಂ ದ್ವೀಪ ಎಂದು ಕರೆಯಲ್ಪಡುವ ಪಂಬನ್ ದ್ವೀಪ ಮತ್ತು ಶ್ರೀಲಂಕಾದ ವಾಯುವ್ಯ ಕರಾವಳಿಯಲ್ಲಿರುವ ಮನ್ನಾರ್ ದ್ವೀಪದ ನಡುವಿನ ಸುಣ್ಣದ ಕಲ್ಲುಗಳ ಸರಪಳಿಯಾಗಿದೆ. ರಾಮಾಯಣದ ಪ್ರಕಾರ, ಇದು ರಾಮನ ಸೇನೆಯು ತನ್ನ ಪತ್ನಿ ಸೀತೆಯನ್ನು ರಕ್ಷಿಸಲು ಲಂಕಾವನ್ನು ತಲುಪಲು ನಿರ್ಮಿಸಿದ ಸೇತುವೆಯಾಗಿದೆ. ಕೇಪ್ ಆಫ್ ಗುಡ್ ಫಿಲ್ಮ್ಸ್ ಜತೆ ಅಮೆಜಾನ್ ಪ್ರೈಮ್ ವಿಡಿಯೊ, ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್ ಮತ್ತು ಲೈಕಾ ಪ್ರೊಡಕ್ಷನ್ಸ್ ಸಹ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ. ಅಕ್ಷಯ್‌ ಕುಮಾರ್‌ ಪೋಸ್ಟರ್‌ ಹಂಚಿಕೊಂಡಿದ್ದು ʻʻಭಾರತೀಯರು ರಾಮನ ಆದರ್ಶಗಳನ್ನು ಜೀವಂತವಾಗಿಡಲು ಪ್ರಯತ್ನಿಸೋಣ” ಎಂದು ಬರೆದುಕೊಂಡಿದ್ದಾರೆ.

ಅಕ್ಟೋಬರ್‌ 24ರಂದು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಅಜಯ್ ದೇವಗನ್ ಅಭಿನಯದ ‘ಥ್ಯಾಂಕ್ ಗಾಡ್’ ಸಿನಿಮಾ ರಿಲೀಸ್‌ ಆಗುತ್ತಿದ್ದು ಈ ಎರಡೂ ಸಿನಿಮಾಗಳು ಒಟ್ಟಿಗೆ ತೆರೆಗೆ ಅಪ್ಪಳಿಸಲಿವೆ.

ಇದನ್ನೂ ಓದಿ | Akshay Kumar | ಬೇಗ ಬೆಳೆಯುತ್ತಿದ್ದೀಯಾ ಮಗಳೆ ಎಂದ ಅಕ್ಷಯ್‌ ಕುಮಾರ್‌: ಮಗಳ ಜನುಮದಿನಕ್ಕೆ ಸ್ಪೆಷಲ್‌ ವಿಡಿಯೊ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Alia Bhatt: ಲಂಡನ್‌ ʻಹೋಪ್ ಗಾಲಾʼದಲ್ಲಿ ಆಲಿಯಾ ಭಟ್‌ ಧರಿಸಿದ ವಜ್ರದ ನೆಕ್ಲೇಸ್ ಬೆಲೆ ಎಷ್ಟು?

Alia Bhatt: ಆಲಿಯಾ ಭಟ್‌ ಒಂದಲ್ಲ ಒಂದು ಸುದ್ದಿಯಲ್ಲಿದ್ದಾರೆ. ಆಲಿಯಾ ಭಟ್‌ ಎಲ್ಲೇ ಕಾಣಿಸಿಕೊಂಡರೂ ಹೈಲೈಟ್‌ ಆಗೋದು ಅವರ ಫ್ಯಾಷನ್‌. ಇದೀಗ ಲಂಡನ್‌ನಲ್ಲಿ ನಡೆದ ಹೋಪ್ ಗಾಲಾದಲ್ಲಿ ಆಲಿಯಾ ಇಟಾಲಿಯನ್ ಆಭರಣ ಲೇಬಲ್‌ನ ನೆಕ್ಲೇಸ್ ಮತ್ತು ಉಂಗುರ ಧರಿಸಿದ್ದರು. ಇದೀಗ ಈ ಇಟಾಲಿಯನ್ ಆಭರಣ ಲೇಬಲ್‌ನ ನೆಕ್ಲೇಸ್ ಮತ್ತು ಉಂಗುರಗಳ ಬೆಲೆ ಬರೋಬ್ಬರಿ 20 ಕೋಟಿ ರೂ. ಎಂದು ವರದಿಯಾಗಿದೆ.

VISTARANEWS.COM


on

Alia Bhatt wore diamond jewellery
Koo

ಬೆಂಗಳೂರು: ಭಾರತದಲ್ಲಿರುವ ಬಡ ಯುವಜನರಿಗಾಗಿ (underprivileged adolescents) ಹಣವನ್ನು ಸಂಗ್ರಹಿಸಿ ಸಲಾಮ್ ಬಾಂಬೆ ಫೌಂಡೇಶನ್‌ಗೆ ನೀಡಿದ್ದಾರೆ ಆಲಿಯಾ (Alia Bhatt). ಈ ಕಾರ್ಯಕ್ರಮ ಲಂಡನ್‌ನಲ್ಲಿ ಗುರುವಾರ (ಮಾ.28) ಸಂಜೆ ನಡೆದಿದೆ. ಈ ಹೋಪ್ ಗಾಲಾ (Hope Gala) ಕಾರ್ಯಕ್ರಮದಲ್ಲಿ ಹೈಲೈಟ್‌ ಆಗಿದ್ದು ಆಲಿಯಾ ಅವರ ವಜ್ರದ ನೆಕ್ಲೇಸ್. ಆಲಿಯಾ ಧರಿಸಿದ್ದ ಇಟಾಲಿಯನ್ ಆಭರಣ ಲೇಬಲ್‌ನ ನೆಕ್ಲೇಸ್ ಮತ್ತು ಉಂಗುರಗಳ ಬೆಲೆ ಬರೋಬ್ಬರಿ 20 ಕೋಟಿ ರೂ. ಎಂದು ವರದಿಯಾಗಿದೆ.

ಈ ಹೋಪ್ ಗಾಲಾ (Hope Gala) ಕಾರ್ಯಕ್ರಮದಲ್ಲಿ (Salaam Bombay foundation) ಸಂಗೀತಗಾರ ಹರ್ಷದೀಪ್ ಕೌರ್, ಹಾಸ್ಯನಟ ರೋಹನ್ ಜೋಶಿ ಮತ್ತು ನಿರ್ದೇಶಕ ಗುರಿಂದರ್ ಚಡ್ಡಾ ಭಾಗಿಯಾಗಿದ್ದರು.

ಗಾಲಾ ಆಯೋಜಿಸಲಾದ ಸ್ಥಳವಾದ ಮ್ಯಾಂಡರಿನ್ ಓರಿಯಂಟಲ್, ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಶೇರ್‌ ಮಾಡಿಕೊಂಡಿದೆ. ವಿಡಿಯೊದಲ್ಲಿ ಆಲಿಯಾ ಎರಡು ವಿಭಿನ್ನ ನೋಟದಲ್ಲಿ ಕಂಡರು. ರೆಡ್ ಕಾರ್ಪೆಟ್‌ನಲ್ಲಿ ಆಲಿಯಾ, ಮರೂನ್ ಉಡುಪನ್ನು ಧರಿಸಿದ್ದರೆ, ಗಾಲಾಗಾಗಿ ಕ್ರೀಮ್ ಕಲರ್‌ ಸೀರೆಗೆಯುಟ್ಟಿದ್ದರು. ಆಲಿಯಾ ಬುಧವಾರ ರಾತ್ರಿ (ಮಾ.26) ಲಂಡನ್‌ಗೆ ತೆರಳುವಾಗ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.

ಇನ್ನು ಹೋಪ್ ಗಾಲಾದಲ್ಲಿ ಗುರಿಂದರ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹರ್ಷದೀಪ್ ಅವರ ಸಂಗೀತ ಕಾರ್ಯಕ್ರಮಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ, ಹರ್ಷದೀಪ್ ಅವರ ಹಿಟ್ ಹಾಡುಗಳಲ್ಲಿ ಒಂದನ್ನು ಪ್ರದರ್ಶಿಸುವುದನ್ನು ಕಾಣಬಹುದು. ಈವೆಂಟ್‌ನಲ್ಲಿ ಆಲಿಯಾ ಉದ್ಯಮಿ ನತಾಶಾ ಪೂನಾವಾಲಾ ಅವರೊಂದಿಗೆ ಪೋಸ್ ನೀಡಿದ್ದರು.

ಆಲಿಯಾ (Alia Bhatt) ಇತ್ತೀಚೆಗಷ್ಟೇ ಜಿಗ್ರಾ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ, ಇದರಲ್ಲಿ ʻದಿ ಆರ್ಚೀಸ್ʼ ಖ್ಯಾತಿಯ ವೇದಾಂಗ್ ರೈನಾ ಕೂಡ ನಟಿಸಿದ್ದಾರೆ.

ನಿರ್ದೇಶಕ ಫರ್ಹಾನ್ ಅಖ್ತರ್ ಅವರ ʻಜೀ ಲೇ ಜರಾʼ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಚಿತ್ರವು ʻದಿಲ್ ಚಾಹ್ತಾ ಹೈʼ ಮತ್ತು ʻಜಿಂದಗಿ ನಾ ಮಿಲೇಗಿ ದೊಬಾರಾʼ ರೀತಿಯ ಸ್ನೇಹದ ಮತ್ತೊಂದು ಕಥೆಯಾಗಿದೆ ಎಂದು ವರದಿಯಾಗಿದೆ. ಸಿನಿಮಾದ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ.

ಇದನ್ನೂ ಓದಿ: Alia Bhatt: ಲಂಡನ್‌ನಲ್ಲಿ `ಹೋಪ್ ಗಾಲಾ’ ಹೋಸ್ಟ್‌ ಮಾಡಿದ ಆಲಿಯಾ; ಏನಿದರ ಉದ್ದೇಶ?

ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನಲ್ಲಿ ಆಲಿಯಾ ಭಟ್‌!

YRF ಸ್ಪೈ ಯೂನಿವರ್ಸ್ ಸಲ್ಮಾನ್ ಖಾನ್ ಅವರ ‘ಏಕ್ ಥಾ ಟೈಗರ್’ (2012), ನಂತರ ‘ಟೈಗರ್ ಜಿಂದಾ ಹೈ’ (2017), ಮತ್ತು ‘ವಾರ್’ (2019), ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟಿಸುವುದರೊಂದಿಗೆ ಪ್ರಾರಂಭವಾಯಿತು. ಆಲಿಯಾ ಭಟ್ (Alia Bhatt) ಅವರ ಸಿನಿಮಾ ‘ಯಶ್ ರಾಜ್ ಫಿಲ್ಮ್ಸ್’ನ ಸ್ಪೈ ಯೂನಿವರ್ಸ್​ನ ಆರನೇ ಚಿತ್ರ ಆಗಲಿದೆ.ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್​ಟಿಆರ್ ನಟನೆಯ ‘ವಾರ್ 2’ ಕೆಲಸಗಳು ನಡೆಯುತ್ತಿವೆ. ‘ಪಠಾಣ್ 2’ ಸಿನಿಮಾ ಕೂಡ ಬರಲಿದೆ. ಇದೀಗ ಈ ಸ್ಪೈ ಯೂನಿವರ್ಸ್‌ಗೆ ಆಲಿಯಾ ಭಟ್ ಅವರು ಭಾಗವಾಗಲಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸಿಇಒ ಅಕ್ಷಯ್ ವಿಧಾನಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ಸಿಇಒ ಅಕ್ಷಯ್ ವಿಧಾನಿ ಮಾತನಾಡಿ ʻ ಆಲಿಯಾ ಭಟ್ ಸ್ಪೈ ಯೂನಿವರ್ಸ್‌’ (Alia Bhatt) ಭಾಗವಾಗಿದ್ದಾರೆ. ಈ ವರ್ಷದ ಅಂತ್ಯಕ್ಕೆ ಚಿತ್ರದ ಶೆಡ್ಯೂಲ್‌ ಶುರುವಾಗಲಿದೆ. ಇನ್ನೂ ಹೆಸರಿಡದ ಚಿತ್ರದಲ್ಲಿ ಶರ್ವರಿ ವಾಘ್ ಜತೆ ಆಲಿಯಾ ಭಟ್ ಜೋಡಿಯಾಗಲಿದ್ದಾರೆ. ಆಕ್ಷನ್ ಎಂಟರ್ಟೈನರ್ ನಲ್ಲಿ ಸೂಪರ್-ಏಜೆಂಟ್‌ಗಳಾಗಿ ನಟಿಸುತ್ತಾರೆ. ಯೂನಿವರ್ಸ್ ಅಡಿಯಲ್ಲಿ ನಾವು ಹಲವು ಸಿನಿಮಾ ಮಾಡುತ್ತಿದ್ದೇವೆ. ಆದರೆ, ಎಲ್ಲವನ್ನೂ ಇಲ್ಲಿ ಹಂಚಿಕೊಳ್ಳಲಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಾಗ ಮಾತನಾಡುತ್ತೇವೆʼʼ ಎಂದು ಹೇಳಿಕೊಂಡಿದ್ದಾರೆ.

Continue Reading

ಬಾಲಿವುಡ್

Alia Bhatt: ಲಂಡನ್‌ನಲ್ಲಿ `ಹೋಪ್ ಗಾಲಾ’ ಹೋಸ್ಟ್‌ ಮಾಡಿದ ಆಲಿಯಾ; ಏನಿದರ ಉದ್ದೇಶ?

Alia Bhatt: ಈ ಹೋಪ್ ಗಾಲಾ (Hope Gala) ಕಾರ್ಯಕ್ರಮದಲ್ಲಿ (Salaam Bombay foundation) ಸಂಗೀತಗಾರ ಹರ್ಷದೀಪ್ ಕೌರ್, ಹಾಸ್ಯನಟ ರೋಹನ್ ಜೋಶಿ ಮತ್ತು ನಿರ್ದೇಶಕ ಗುರಿಂದರ್ ಚಡ್ಡಾ ಭಾಗಿಯಾಗಿದ್ದರು.

VISTARANEWS.COM


on

Alia Bhatt hosts Hope Gala
Koo

ಬೆಂಗಳೂರು: ಭಾರತದಲ್ಲಿರುವ ಬಡ ಯುವಜನರಿಗಾಗಿ (underprivileged adolescents) ಹಣವನ್ನು ಸಂಗ್ರಹಿಸಿ ಸಲಾಮ್ ಬಾಂಬೆ ಫೌಂಡೇಶನ್‌ಗೆ ನೀಡಿದ್ದಾರೆ ಆಲಿಯಾ (Alia Bhatt). ಈ ಕಾರ್ಯಕ್ರಮ ಲಂಡನ್‌ನಲ್ಲಿ ಗುರುವಾರ (ಮಾ.28) ಸಂಜೆ ನಡೆದಿದೆ. ಈ ಹೋಪ್ ಗಾಲಾ (Hope Gala) ಕಾರ್ಯಕ್ರಮದಲ್ಲಿ (Salaam Bombay foundation) ಸಂಗೀತಗಾರ ಹರ್ಷದೀಪ್ ಕೌರ್, ಹಾಸ್ಯನಟ ರೋಹನ್ ಜೋಶಿ ಮತ್ತು ನಿರ್ದೇಶಕ ಗುರಿಂದರ್ ಚಡ್ಡಾ ಭಾಗಿಯಾಗಿದ್ದರು.

ಗಾಲಾ ಆಯೋಜಿಸಲಾದ ಸ್ಥಳವಾದ ಮ್ಯಾಂಡರಿನ್ ಓರಿಯಂಟಲ್, ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಶೇರ್‌ ಮಾಡಿಕೊಂಡಿದೆ. ವಿಡಿಯೊದಲ್ಲಿ ಆಲಿಯಾ ಎರಡು ವಿಭಿನ್ನ ನೋಟದಲ್ಲಿ ಕಂಡರು. ರೆಡ್ ಕಾರ್ಪೆಟ್‌ನಲ್ಲಿ ಆಲಿಯಾ, ಮರೂನ್ ಉಡುಪನ್ನು ಧರಿಸಿದ್ದರೆ, ಗಾಲಾಗಾಗಿ ಕ್ರೀಮ್ ಕಲರ್‌ ಸೀರೆಗೆಯುಟ್ಟಿದ್ದರು. ಆಲಿಯಾ ಬುಧವಾರ ರಾತ್ರಿ (ಮಾ.26) ಲಂಡನ್‌ಗೆ ತೆರಳುವಾಗ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.

ಇನ್ನು ಹೋಪ್ ಗಾಲಾದಲ್ಲಿ ಗುರಿಂದರ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹರ್ಷದೀಪ್ ಅವರ ಸಂಗೀತ ಕಾರ್ಯಕ್ರಮಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ, ಹರ್ಷದೀಪ್ ಅವರ ಹಿಟ್ ಹಾಡುಗಳಲ್ಲಿ ಒಂದನ್ನು ಪ್ರದರ್ಶಿಸುವುದನ್ನು ಕಾಣಬಹುದು.

ಇದನ್ನೂ ಓದಿ: Ranbir Kapoor: ಅತ್ಯಂತ ಕಿರಿಯ ಮತ್ತು ಶ್ರೀಮಂತ ಸ್ಟಾರ್‌ ಕಿಡ್‌ ಆಗಲಿದ್ದಾರಂತೆ ರಣಬೀರ್- ಆಲಿಯಾ ಮಗಳು!

ಆಲಿಯಾ ಇತ್ತೀಚೆಗಷ್ಟೇ ಜಿಗ್ರಾ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ, ಇದರಲ್ಲಿ ʻದಿ ಆರ್ಚೀಸ್ʼ ಖ್ಯಾತಿಯ ವೇದಾಂಗ್ ರೈನಾ ಕೂಡ ನಟಿಸಿದ್ದಾರೆ.

ರಾಮಾಯಣ ಆಧರಿಸಿದ ಸಿನಿಮಾದಲ್ಲಿ ರಣಬೀರ್‌, ಆಲಿಯಾ

ನಿತೇಶ್ ತಿವಾರಿ ರಾಮಾಯಣ ಆಧರಿಸಿ ಸಿನಿಮಾ ಮಾಡಲಿದ್ದಾರೆ. ಈ ಚಿತ್ರದಲ್ಲಿ ಈ ಚಿತ್ರದಲ್ಲಿ ರಣಬೀರ್, ಆಲಿಯಾ ಭಟ್ ಹಾಗೂ ಯಶ್ (Actor Yash) ನಟಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್‌ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್‌ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ.

Continue Reading

ಬಾಲಿವುಡ್

Ranbir Kapoor: ಅತ್ಯಂತ ಕಿರಿಯ ಮತ್ತು ಶ್ರೀಮಂತ ಸ್ಟಾರ್‌ ಕಿಡ್‌ ಆಗಲಿದ್ದಾರಂತೆ ರಣಬೀರ್- ಆಲಿಯಾ ಮಗಳು!

Ranbir Kapoor: ರಣಬೀರ್ ಅವರ ಹೊಸ ಬಂಗಲೆಗೆ 250 ಕೋಟಿ ರೂ. ವೆಚ್ಚ ತಗುಲಿದೆ ಎನ್ನಲಾಗುತ್ತಿದೆ. ಇದು ಮುಂಬೈನ ‘ಅತ್ಯಂತ ದುಬಾರಿ’ ಸೆಲೆಬ್ರಿಟಿ ಬಂಗಲೆಯಾಗಿದೆ ಎಂದು ವರದಿಯಾಗಿದೆ.

VISTARANEWS.COM


on

Ranbir Kapoor Raha Kapoor
Koo

ಬೆಂಗಳೂರು: ರಣಬೀರ್ ಕಪೂರ್ (Ranbir Kapoor), ಆಲಿಯಾ ಭಟ್( Alia Bhatt) ಮತ್ತು ನೀತು ಕಪೂರ್ (Neetu Kapoor) ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿ (Mumbai’s Bandra) ನಿರ್ಮಾಣ ಹಂತದ ಬಂಗಲೆಗೆ ಭೇಟಿ ಕೊಟ್ಟಿದ್ದರು. ಇದೀಗ ವರದಿಯ ಪ್ರಕಾರ, ರಣಬೀರ್ ಮತ್ತು ಆಲಿಯಾ ಮಗಳು ರಾಹಾ ಕಪೂರ್ ಅವರ ಹೆಸರಿನಲ್ಲಿ ಈ ಬಂಗಲೆ ನೋಂದಣಿ ಆಗಲಿದೆ ಎಂದು ವರದಿಯಾಗಿದೆ. ಈ ಮನೆಗೆ ಕನಿಷ್ಠ 250 ಕೋಟಿ ರೂಪಾಯಿ ವೆಚ್ಚ ತಗುಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ರಾಹಾ ಮನೆಯ ಒಡತಿ ಆದರೆ ʻಕಿರಿಯ ಮತ್ತು ಶ್ರೀಮಂತ ಸ್ಟಾರ್‌ ಕಿಡ್‌ʼ (youngest and richest star kid) ಆಗಲಿದ್ದಾರೆ.

ರಣಬೀರ್ ಅವರ ಹೊಸ ಬಂಗಲೆಯು 250 ಕೋಟಿ ರೂ. ವೆಚ್ಚ ತಗುಲಿದೆ ಎನ್ನಲಾಗುತ್ತಿದೆ. ಶಾರುಖ್ ಖಾನ್ ಅವರ ಮನ್ನತ್ ಮತ್ತು ಅಮಿತಾಭ್‌ ಬಚ್ಚನ್ ಅವರ ‘ಜಲ್ಸಾ’ ಸಮೀಪವೇ ಇದೆ. ಇದು ಮುಂಬೈನ ‘ಅತ್ಯಂತ ದುಬಾರಿ’ ಸೆಲೆಬ್ರಿಟಿ ಬಂಗಲೆಯಾಗಿದೆ ಎಂದು ವರದಿಯಾಗಿದೆ. “ರಣಬೀರ್ ಮತ್ತು ಆಲಿಯಾ ಇಬ್ಬರೂ ತಮ್ಮ ಕನಸಿನ ಮನೆಯನ್ನು ಮಾಡಲು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸಮಾನವಾಗಿ ಹೂಡಿಕೆ ಮಾಡುತ್ತಿದ್ದಾರೆ. 250 ಕೋಟಿಗೂ ಹೆಚ್ಚು ವೆಚ್ಚ ತಗುಲಿದೆ. ಶಾರುಖ್ ಖಾನ್ ಅವರ ಮನ್ನತ್ ಮತ್ತು ಅಮಿತಾಭ್‌ ಬಚ್ಚನ್ ಅವರ ಜಲ್ಸಾಗೆ ಹೋಲಿಸಿದರೆ ಇದು ಮುಂಬೈನ ಅತ್ಯಂತ ದುಬಾರಿ ಬಂಗಲೆಯಾಗಲಿದೆʼʼ ಎಂದು ವರದಿಯಾಗಿದೆ.

ಈ ಬಂಗಲೆ ಜತೆಗೆ ಆಲಿಯಾ ಮತ್ತು ರಣಬೀರ್ ಇಬ್ಬರೂ ಬಾಂದ್ರಾ ಪ್ರದೇಶದಲ್ಲಿ ನಾಲ್ಕು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಇದರ ಮೌಲ್ಯ 60 ಕೋಟಿ ರೂ.ಗಿಂತ ಹೆಚ್ಚು. ರಣಬೀರ್ ಕಪೂರ್ ಅವರ ತಾಯಿ ನೀತು ಕಪೂರ್ ಇತ್ತೀಚೆಗೆ ಬಾಂದ್ರಾದಲ್ಲಿ 15 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ. ಬಂಗಲೆ ಪೂರ್ಣವಾದ ಬಳಿಕ ಇಡೀ ಕಪೂರ್ ಕುಟುಂಬ, ನೀತು ಸೇರಿದಂತೆ ಇದೇ ಬಂಗಲೆಯಲ್ಲಿ ಇರಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Ranbir Kapoor: ತಮ್ಮ ಐಷಾರಾಮಿ ಬಂಗಲೆಯಲ್ಲಿ ಪೋಸ್‌ ಕೊಟ್ಟ ಆಲಿಯಾ-ರಣಬೀರ್!

2020ರಲ್ಲಿ ರಿಷಿ ಕಪೂರ್ ಸಾಯುವ ಮೊದಲು, ಅವರು ಈ ಸೈಟ್‌ಗೆ ಭೇಟಿ ನೀಡಿದ್ದರು. ಆಲಿಯಾ ಮತ್ತು ರಣಬೀರ್ ಸೆಪ್ಟೆಂಬರ್ 2022ರಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಆಲಿಯಾ ಗರ್ಭಿಣಿಯಾಗಿದ್ದರು.ಆಲಿಯಾ ಮತ್ತು ರಣಬೀರ್ ಅನೇಕ ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2022ರ ಏಪ್ರಿಲ್ 14ರಂದು ಮದುವೆಯಾದರು.

ರಾಮಾಯಣ ಆಧರಿಸಿದ ಸಿನಿಮಾದಲ್ಲಿ ರಣಬೀರ್‌, ಆಲಿಯಾ

ನಿತೇಶ್ ತಿವಾರಿ ರಾಮಾಯಣ ಆಧರಿಸಿ ಸಿನಿಮಾ ಮಾಡಲಿದ್ದಾರೆ. ಈ ಚಿತ್ರದಲ್ಲಿ ಈ ಚಿತ್ರದಲ್ಲಿ ರಣಬೀರ್, ಆಲಿಯಾ ಭಟ್ ಹಾಗೂ ಯಶ್ (Actor Yash) ನಟಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್‌ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್‌ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ.

Continue Reading

ಬಾಲಿವುಡ್

Kangana Ranaut : ನಾನು, ಶಾರುಖ್‌ ಈ ಯುಗದ ಕೊನೆಯ ಸೂಪರ್‌ಸ್ಟಾರ್‌ಗಳು ಎಂದ ಕಂಗನಾ!

Kangana Ranaut : ನಟಿ ಕಂಗನಾ ರಣಾವತ್ ಹಿಟ್‌ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲ ತಮ್ಮನ್ನು ಹಾಗೂ ಶಾರುಖ್ ಅವರನ್ನು ʻ ಈ ಯುಗದ ಕೊನೆಯ ತಲೆಮಾರಿನ ಸ್ಟಾರ್ಸ್‌ಗಳು’ ಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Kangana Ranaut
Koo

ಬೆಂಗಳೂರು: ನಟಿ ಕಂಗನಾ ರಣಾವತ್ (Kangana Ranaut) ಹಿಟ್ ಸಿನಿಮಾ ನೀಡದೇ ವರ್ಷಗಳೇ ಕಳೆದಿವೆ. ಆದರೆ, ಅವರ ಅಭಿಪ್ರಾಯದಲ್ಲಿ ಇದು ಮುಖ್ಯವಲ್ಲ. ಏಕೆಂದರೆ, ‘ಪಠಾಣ್’ ಮೊದಲು, ಬಾಲಿವುಡ್‌ನ ಸೂಪರ್‌ಸ್ಟಾರ್, ಶಾರುಖ್ ಖಾನ್ (Shah Rukh Khan) ಸಹ ಹತ್ತು ವರ್ಷಗಳ ಕಾಲ ಫ್ಲಾಪ್‌ ಸಿನಿಮಾಗಳನ್ನೇ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ತಮ್ಮನ್ನು ಹಾಗೂ ಶಾರುಖ್ ಅವರನ್ನು ʻ ಈ ಯುಗದ ಕೊನೆಯ ತಲೆಮಾರಿನ ಸ್ಟಾರ್ಸ್‌ಗಳು’ ಎಂದು ಹೇಳಿಕೊಂಡಿದ್ದಾರೆ.

ಟೈಮ್ಸ್ ನೌ ಶೃಂಗಸಭೆ 2024ರಲ್ಲಿ ಮಾತನಾಡಿದ ಕಂಗನಾ, ನಾನು ಮತ್ತು ಶಾರುಖ್ “ಈ ಯುಗದ ಕೊನೆಯ ತಲೆಮಾರಿನ ಸ್ಟಾರ್ಸ್‌ಗಳುʼʼ ಎಂದಿದ್ದಾರೆ. ʻʻಒಟಿಟಿ ವೇದಿಕೆ ಸ್ಟಾರ್‌ಗಳನ್ನು ನಿರ್ಮಾಣ ಮಾಡುವುದಿಲ್ಲ. ದೇವರ ದಯೆಯಿಂದ ನಮಗೆ ತುಂಬಾ ಬೇಡಿಕೆಯಿದೆʼʼ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಂಗನಾ ಅವರು ಅಭಿನಯಿಸಿದ “ತೇಜಸ್‌ʼ ಕೊನೆಯದಾಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಅವರ ‘ಜಡ್ಜ್‌ಮೆಂಟಲ್ ಹೈ ಕ್ಯಾ’, ‘ತಲೈವಿ’, ‘ಧಕಡ್’ ಮತ್ತು ‘ಚಂದ್ರಮುಖಿ 2’ ಚಿತ್ರಗಳು ಅಷ್ಟಾಗಿ ಯಶಸ್ಸು ಕಂಡಿಲ್ಲ. ಶಾರುಖ್ ಅವರ ಉದಾಹರಣೆಯನ್ನು ಉಲ್ಲೇಖಿಸಿ ಸಿನಿಮಾಗಳ ವೈಫಲ್ಯದ ಬಗ್ಗೆ ಕಂಗನಾ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: Kangana Ranaut: ಊರ್ಮಿಳಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸನ್ನಿ ಲಿಯೋನ್‌ ಹೆಸರು ಎಳೆದು ತಂದ ಕಂಗನಾ!

“ಜಗತ್ತಿನ ಯಾವುದೇ ನಟನಿಗೆ ಹಿಟ್‌ಗಳು ಮಾತ್ರ ಸಾಲದು. ಶಾರುಖ್ ಖಾನ್ ಅವರ ಚಿತ್ರಗಳು ಹತ್ತು ವರ್ಷಗಳ ಕಾಲ ಹಿಟ್‌ ಕಂಡೇ ಇಲ್ಲ. ಬಳಿಕ ʻಪಠಾಣ್ʼ ಸಕ್ಸೆಸ್‌ ಆಯಿತು. ನನ್ನ ಚಿತ್ರಗಳು ಏಳೆಂಟು ವರ್ಷಗಳ ಕಾಲ ಯಶಸ್ಸು ಕಾಣಲೇ ಇಲ್ಲ. ನಂತರ ‘ಕ್ವೀನ್’ ಸಿನಿಮಾ ಗೆದ್ದಿತು. 3-4 ವರ್ಷಗಳ ನಂತರ, ʻಮಣಿಕರ್ಣಿಕಾʼ ಕೆಲಸ ಮಾಡಿದೆ. ಈಗ, ʻ ಎಮರ್ಜೆನ್ಸಿʼ ಸಿನಿಮಾ ಬರುತ್ತಿದೆ. ಬಹುಶಃ ಅದು ಹಿಟ್ ಆಗಬಹುದುʼʼ ಎಂದು ಹೇಳಿಕೊಂಡಿದ್ದಾರೆ

ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಕುರಿತಾಗಿನ ಕಥೆ ʻಎಮರ್ಜೆನ್ಸಿʼ ಸಿನಿಮಾದಲ್ಲಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಕಂಗನಾ ನಟಿಯಾಗಿ ನಟಿಸಿರುವುದಷ್ಟೇ ಅಲ್ಲದೆ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಇದನ್ನೂ ಓದಿ: Kangana Ranaut: 37ನೇ ವಸಂತಕ್ಕೆ ಕಾಲಿಟ್ಟ ಕಂಗನಾ ರಣಾವತ್‌!

ಈ ಹಿಂದೆ ನಟಿ “ತಲೈವಿʼ ಸಿನಿಮಾದಲ್ಲಿ ತಮಿಳುನಾಡಿನ ಪ್ರಸಿದ್ಧ ರಾಜಕಾರಣಿ, ಜೆ. ಜಯಲಲಿತಾ ಅವರಾಗಿಯೂ ಕಾಣಿಸಿಕೊಂಡಿದ್ದರು. ಆ ಸಿನಿಮಾ ಕೂಡ ಸಾಕಷ್ಟು ಜನರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. 2024ರ ಜೂನ್‌ 14ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

Continue Reading
Advertisement
Summer Nail Colours Trend
ಫ್ಯಾಷನ್14 mins ago

Summer Nail Colours Trend: ಸಮ್ಮರ್‌ ಸೀಸನ್‌ನಲ್ಲಿ ಬದಲಾಯ್ತು ನೇಲ್‌ ಕಲರ್ಸ್‌ ಟ್ರೆಂಡ್‌

Lok Sabha Election 2024 and BJP files complaint with Election Commission against Yathindra for calling Amit Shah a rowdy and also CM Siddaramaiah in this Photo
Lok Sabha Election 202419 mins ago

Lok Sabha Election 2024: ಅಮಿತ್‌ ಶಾ ರೌಡಿ ಎಂದಿದ್ದ ಯತೀಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Board Exam
ಬೆಂಗಳೂರು24 mins ago

Board Exams: ಬೋರ್ಡ್‌ ಎಕ್ಸಾಂ ವ್ಯಾಲ್ಯುವೇಶನ್‌; 3 ದಿನದ ಗಡುವು ಆದೇಶ ವಾಪಸ್‌

income Tax - how to save tax
ಪ್ರಮುಖ ಸುದ್ದಿ35 mins ago

Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?

Utthana Essay Competition 2023
ಕರ್ನಾಟಕ56 mins ago

Utthana Essay Competition 2023: ಉತ್ಥಾನ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬೆಂಗಳೂರಿನ ಕಾವ್ಯಜೋಗಿ ಪ್ರಥಮ

Lok Sabha Election 2024 R Ashok attack on Yathindra Siddaramaiah for he says Amit Shah is Rowdy and goonda
Lok Sabha Election 202457 mins ago

Lok Sabha Election 2024: ಸಿದ್ದರಾಮಯ್ಯ ಗೂಂಡಾ ಗುರು; ಯತೀಂದ್ರ ಜೈಲಿಗೆ ಹೋಗ್ತಾರೆ: ಆರ್.‌ ಅಶೋಕ್‌ ಕೆಂಡ

Kodagu University
ಕೊಡಗು58 mins ago

Kodagu University : ಉದ್ಯೋಗ ಸೃಷ್ಟಿ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಪ್ರೊ.ಅಶೋಕ್ ಸಂಗಪ್ಪ

Alia Bhatt wore diamond jewellery
ಸಿನಿಮಾ1 hour ago

Alia Bhatt: ಲಂಡನ್‌ ʻಹೋಪ್ ಗಾಲಾʼದಲ್ಲಿ ಆಲಿಯಾ ಭಟ್‌ ಧರಿಸಿದ ವಜ್ರದ ನೆಕ್ಲೇಸ್ ಬೆಲೆ ಎಷ್ಟು?

Heat Stroke
ಆರೋಗ್ಯ1 hour ago

Heat Stroke: ನೀರು ಕುಡಿದು ತಂಪಾಗಿರಿ, ಹೀಟ್‌ ಸ್ಟ್ರೋಕ್‌ ತಪ್ಪಿಸಿಕೊಳ್ಳಿ

Rahul Gandhi And Tejashwi Yadav
Lok Sabha Election 20241 hour ago

Lok Sabha Election: ಬಿಹಾರದಲ್ಲಿ ಕಾಂಗ್ರೆಸ್‌, ಆರ್‌ಜೆಡಿ ಸೀಟು ಹಂಚಿಕೆ; ಯಾರಿಗೆ ಎಷ್ಟು ಕ್ಷೇತ್ರ?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ3 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ4 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌