Sapthami Gowda: ಮಾಲ್ಡೀವ್ಸ್​ನಲ್ಲಿ ಸಖತ್‌ ಹಾಟ್‌ ಆಗಿ ಕಂಡ ಸಪ್ತಮಿ ಗೌಡ! - Vistara News

ಸಿನಿಮಾ

Sapthami Gowda: ಮಾಲ್ಡೀವ್ಸ್​ನಲ್ಲಿ ಸಖತ್‌ ಹಾಟ್‌ ಆಗಿ ಕಂಡ ಸಪ್ತಮಿ ಗೌಡ!

ಕಾಂತಾರ ಸಿನಿಮಾ ನಟಿ ಸಪ್ತಮಿ ಗೌಡ (Sapthami Gowda) ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೊ ಹಂಚಿಕೊಳ್ಳುತ್ತಿರುತ್ತಾರೆ. ಮಾಲ್ಡೀವ್ಸ್​ನಲ್ಲಿ ಹಾಲಿಡೇ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.

VISTARANEWS.COM


on

Sapthami Gowda
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ಕಾಂತಾರ ಸಿನಿಮಾ ನಟಿ ಸಪ್ತಮಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೊ ಹಂಚಿಕೊಳ್ಳುತ್ತಿರುತ್ತಾರೆ.

ಕಾಂತಾರ ಸಿನಿಮಾ ನಟಿ ಸಪ್ತಮಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೊ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ನಟಿ ಕಲರ್​ಫುಲ್​ ಆಗಿ ಕಂಡಿದ್ದಾರೆ. ಮಾಲ್ಡೀವ್ಸ್​ನಲ್ಲಿ ಹಾಲಿಡೇ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.

ಬೋಲ್ಡ್‌ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ ಕಾಂತಾರ ಚೆಲುವೆ. ಸಪ್ತಮಿ ಗೌಡ ಬಗೆ ಬಗೆಯ ಪೋಸ್ ಕೊಟ್ಟಿದ್ದು, ಮಾಲ್ಡೀವ್ಸ್​ನಲ್ಲಿ ಕಾಂತಾರ ಬೆಡಗಿ ಮಸ್ತ್ ಮಜಾ ಮಾಡಿದ್ದಾರೆ.

Sapthami Gowda

ಫೋಟೊಗಳನ್ನು ನೋಡಿ ನೆಟ್ಟಿಗರು ಪಾಸಿಟಿವ್- ನೆಗೆಟಿವ್‌ ಕಮೆಂಟ್‌ ಜತೆಗೆ ಸಖತ್‌ ಲುಕ್‌ ಅಂತಿದ್ದಾರೆ. ಕಾಂತಾರ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಸಪ್ತಮಿ ಗೌಡ.

Sapthami Gowda

ಕಾಂತಾರ ಸಿನಿಮಾ ಬಳಿಕ ಸಪ್ತಮಿ ಗೌಡ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

ಕಾಂತಾರ ಸಿನಿಮಾ ಬಳಿಕ ಅನೇಕ ಸಿನಿಮಾಗಳು ಸಪ್ತಮಿ ಗೌಡ ಕೈಯಲ್ಲಿದ್ದು, ಸಿನಿಮಾ ಶೂಟಿಂಗ್ ಬ್ಯುಸಿ ಶೆಡ್ಯೂಲ್ ನಡುವೆ ನಟಿ ಸಪ್ತಮಿ ಗೌಡ ಹಾಲಿ ಡೇ ಎಂಜಾಯ್ ಮಾಡುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Kangana Ranaut: ವಿಶೇಷ ಗೆಟಪ್ ನಲ್ಲಿ ಮತದಾರರ ಸೆಳೆಯುತ್ತಿರುವ ಕಂಗನಾ ರಣಾವತ್

Kangana Ranaut: ನಟಿ ಕಂಗನಾ ರಣಾವತ್ ಸಿನಿಮಾಕ್ಕಿಂತ ಹೆಚ್ಚು ವಿವಾದಗಳಿಂದಲೇ ಗುರುತಿಸಿಕೊಂಡಿದ್ದಾರೆ. ಇದೀಗ ಲೋಕಸಭಾ ಚುನಾವಣೆಗೆ ಜನರ ಮನವೊಲಿಸಲು ನಟಿ ಕಂಗನಾ ರಣಾವತ್ ಅವರು ಸ್ಥಳೀಯ ಚಂಬಾ ಗಡ್ಡಿ ಸಮುದಾಯದ ಸಾಂಪ್ರದಾಯಿಕ ಉಡುಪುನ್ನು ಧರಿಸಿ ಎಲ್ಲರ ಹುಬ್ಬೆರುವಂತೆ ಮಾಡಿದ್ದಾರೆ.

VISTARANEWS.COM


on

Kangana Ranaut
Koo

ಬೆಂಗಳೂರು: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರು ಆಗಾಗ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದರು. ಆದರೆ ಇದೀಗ ಅವರು ತಾವು ಧರಿಸಿದ ಉಡುಪೊಂದರಿಂದ ಸುದ್ದಿಯಾಗಿದ್ದಾರೆ. ಕಂಗನಾ ರಣಾವತ್ ಅವರ ಇತ್ತೀಚಿನ ಧರ್ಮಶಾಲಾ ಪ್ರವಾಸವು ಜನರ ಗಮನ ಸೆಳೆದಿದೆ. ಹಾಗೇ ಅವರು ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈಲಾಮಾ ಅವರನ್ನು ಭೇಟಿ ಮಾಡಿದ್ದಾರೆ. ಅವರು ರಾಜಕೀಯ ಆಕಾಂಕ್ಷೆಗಳ ನಡುವೆ ಆಧ್ಯಾತ್ಮಿಕತೆಯ ಕಡೆಗೆ ಗಮನ ಹರಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ತಮ್ಮ ರಾಜಕೀಯ ಚಟುವಟಿಕೆಗಳ ನಡುವೆ ನಟಿ ಕಂಗನಾ ರಣಾವತ್ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಕೆಲವು ಪೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಮಂಡಿ ಕ್ಷೇತ್ರದ ಭರ್ಮೌರ್ ಗೆ ಭೇಟಿ ನೀಡಿರುವುದು ತಿಳಿದುಬಂದಿದೆ. ತಮ್ಮ ಪೋಸ್ಟ್ ನಲ್ಲಿ ಅವರು ಸ್ಥಳೀಯರೊಂದಿಗೆ ಸಂವಹನ ಮತ್ತು 7ನೇ ಶತಮಾನದಷ್ಟು ಹಿಂದಿನ ಪ್ರಸಿದ್ಧ ಚೌರಾಸಿ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಿರುವ ಬಗ್ಗೆ ವಿವರಿಸಿದ್ದಾರೆ. ಮತ್ತು ಪ್ರಾಚೀನ ಕಲಾಕೃತಿಗಳಿಗೆ ಸಾಕ್ಷಿಯಾದ ಮತ್ತು ಸಾವಿನ ನಂತರದ ಜೀವನದ ರಹಸ್ಯಗಳ ಬಗ್ಗೆ ಕಲಿಯುವ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಈ ವೇಳೆ ಅವರು ಚಂಬಾ ಗಡ್ಡಿ ಸಮುದಾಯದ ಸಾಂಪ್ರದಾಯಿಕ ಉಡುಪುನ್ನು ಧರಿಸಿದ್ದು, ಇದರಲ್ಲಿ ಉದ್ದನೆಯ ಕಸೂತಿ ಕುರ್ತಾ ಮತ್ತು ಸಡಿಲ ಪೈಜಾಮಾ ಮತ್ತು ಪ್ಯಾಟಿ ಟೋಪಿ ಇರುವುದಾಗಿ ಅವರು ಉಲ್ಲೇಖಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ನಟಿ ಕಂಗನಾ ಅವರು ಗಮನಾರ್ಹ ರಾಜಕೀಯ ಇತಿಹಾಸವನ್ನು ಹೊಂದಿರುವ ಹಿಮಾಚಲ ಪ್ರದೇಶದ ಮಂಡಿಯಿಂದ ಸ್ಪರ್ಧಿಸಲು ಆಯ್ಕೆ ಮಾಡಿರುವುದು ಕುತೂಹಲವನ್ನು ಹೆಚ್ಚಿಸುತ್ತಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಮಂಡಿಯಲ್ಲಿ ರಾಜಕೀಯ ರಂಗಕ್ಕೆ ಕಾಲಿಡುತ್ತಿದ್ದ ರಣಾವತ್ ಅವರಿಗೆ ಕಠಿಣ ಸವಾಲನ್ನು ಒಡ್ಡಿತ್ತು. ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸುವ ಗುರಿ ಹೊಂದಿರುವ ಬಿಜೆಪಿ 2019ರಂತೆ ತನ್ನ ಯಶಸ್ಸನ್ನು ಪುನರಾವರ್ತಿಸುವ ಭರವಸೆಯಲ್ಲಿದೆ.

ಇದನ್ನೂ ಓದಿ:Malika Arora: ನೀನು ವರ್ಜಿನ್ನಾ? ಮಗನಿಗೆ ಬೋಲ್ಡ್‌ ಆಗಿ ಪ್ರಶ್ನಿಸಿದ ನಟಿ ಮಲೈಕಾ!

ನಟಿ ಕಂಗನಾ ರಣಾವತ್ ಅವರು ತಮ್ಮ ಮುಂಬರುವ ಚಿತ್ರ ‘ಎಮರ್ಜೆನ್ಸಿ’ ಗಾಗಿ ಸಜ್ಜಾಗುತ್ತಿದ್ದಾರೆ. ಇದು ಅವರ ನಿರ್ದೇಶನಕ ಚೊಚ್ಚಲ ಚಿತ್ರವಾಗಿದೆ. ಹಾಗೇ ನಟಿ ಇತ್ತೀಚೆಗೆ ಅಯೋಧ್ಯೆಯಲ್ಲಿ ಹೊಸದಾಗಿ ಉದ್ಘಾಟಿಸಲಾದ ರಾಮಮಂದಿರಕ್ಕೂ ಭೇಟಿ ನೀಡಿದ್ದಾರೆ. ಹಾಗೂ ದೀರ್ಘಕಾಲದಿಂದ ಕಾಯುತ್ತಿದ್ದ ಅನೇಕ ಸಮರ್ಪಿತ ವ್ಯಕ್ತಿಗಳ ಕನಸು ಇಂದು ನನಸಾಗಿದೆ ಎಂದು ಅವರು ತಿಳಿಸಿದ್ದಾರೆ.

Continue Reading

ಬಾಲಿವುಡ್

Salman Khan: ನಟ ಸಲ್ಮಾನ್ ಖಾನ್ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ಮನೆ ನೋಡಿ ಅಭಿಮಾನಿಗಳಿಗೆ ಫುಲ್ ಶಾಕ್!

Actor Salman Khan: ಬಾಲಿವುಡ್ ನ ಪ್ರಸಿದ್ಧ ನಟರಾಗಿರುವ ಇವರು ಒಂದು ಸಿನಿಮಾಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಇನ್ನು ಇವರ ಲೈಫ್ ಸ್ಟೈಲ್ ಹೇಗಿರುತ್ತದೆ ಎಂದು ಜನರು ಊಹಿಸಲು ಕೂಡ ಸಾಧ್ಯವಿಲ್ಲ. ಅಂತಹದರಲ್ಲಿ ಇತ್ತೀಚೆಗೆ ನಟ ಸಲ್ಮಾನ್ ಖಾನ್ ಅವರ ಮನೆಯ ಒಳಗಿನ ವಿಡಿಯೊ ನೋಡಿ ಜನರು ಸಖತ್ ಶಾಕ್ ಆಗಿದ್ದಾರೆ.

VISTARANEWS.COM


on

Salman Khan
Koo

ನಟ ಸಲ್ಮಾನ್ ಖಾನ್ (Salman Khan) ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ….? ನಟನೆಯ ಹೊರತಾಗಿಯೂ ಅವರು ಸಿಕ್ಕಾಪಟ್ಟೆ ಫೇಮಸ್. ಹುಡುಗಿಯರ ಕಣ್ಣಲ್ಲಿ ಈಗಲೂ ಅವರು ಸೂಪರ್! ಬಾಲಿವುಡ್ ನ ಪ್ರಸಿದ್ಧ ನಟರಾಗಿರುವ ಇವರು ಒಂದು ಸಿನಿಮಾಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಇನ್ನು ಇವರ ಲೈಫ್ ಸ್ಟೈಲ್ ಹೇಗಿರುತ್ತದೆ ಎಂದು ಜನರು ಊಹಿಸಲು ಕೂಡ ಸಾಧ್ಯವಿಲ್ಲ. ಅಂತಹದರಲ್ಲಿ ಇತ್ತೀಚೆಗೆ ನಟ ಸಲ್ಮಾನ್ ಖಾನ್ ಅವರ ಮನೆಯ ಒಳಗಿನ ವಿಡಿಯೊ ನೋಡಿ ಜನರು ಅಚ್ಚರಿಗೊಂಡಿದ್ದಾರೆ.

ಇತ್ತೀಚೆಗಷ್ಟೇ ನಟ ಸಲ್ಮಾನ್ ಖಾನ್ ಅವರ ಮುಂಬೈ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನಲ್ಲಿರುವ ಮನೆಯ ಹೊರಗೆ ದುರ್ಷ್ಕರ್ಮಿಗಳು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮುಂಬೈ ಬಾಂದ್ರಾದಲ್ಲಿರುವ ನಟ ಸಲ್ಮಾನ್ ಖಾನ್ ಅವರ ಮನೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಏಪ್ರಿಲ್ 16ರಂದು ಭೇಟಿ ನೀಡಿದ್ದಾರೆ. ಗುಂಡಿನ ದಾಳಿ ನಡೆದ ನಂತರ ನಟನಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಹಾಗಾಗಿ ನಟ ಸಲ್ಮಾನ್ ಖಾನ್ ಅವರ ಮನೆಯಲ್ಲಿ ಅವರು ಹಾಗೂ ಅವರ ಕುಟುಂಬ ಸಿಎಂ ಅವರನ್ನು ಭೇಟಿ ಮಾಡಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅನೇಕರು ನಟನ ಮನೆಯ ಸರಳ ಮತ್ತು ಮಧ್ಯಮ ಮಟ್ಟದ ಅಲಂಕಾರ ನೋಡಿ ಆಶ್ಚರ್ಯಗೊಂಡಿದ್ದಾರೆ.

ಅವರ ಮನೆಯಲ್ಲಿ ಸಾಮಾನ್ಯವಾದ ಗ್ಲಾಸ್ ಸೆಂಟರ್ ಟೇಬಲ್ ಮತ್ತು ಗ್ರೇ ಪ್ರಿಂಟೆಡ್ ಸೋಫಾ ಸೇರಿದಂತೆ ಕಡಿಮೆ ಪ್ರಮಾಣದಲ್ಲಿ ಪೀಠೋಪಕರಣಗಳು ಮತ್ತು ಅಲಂಕಾರಗಳು ಕಂಡುಬಂದವು. ನಟ ಸಲ್ಮಾನ್ ಖಾನ್ ಅವರು ಐಷಾರಾಮಿ ಜೀವನ ನಡೆಸಬೇಕಾಗಿದ್ದ ವ್ಯಕ್ತಿ ಸಾಮಾನ್ಯರಂತೆ ಜೀವನ ನಡೆಸುತ್ತಿರುವುದನ್ನು ಕಂಡು ಜನರು ಇದೇನಪ್ಪಾ ಎಂದು ಆಶ್ವರ್ಯಗೊಂಡಿದ್ದಾರೆ.

ಇದನ್ನೂ ಓದಿ: Ulajh Teaser: `ಉಲಾಜ್ ಟೀಸರ್’ ರಿಲೀಸ್; ʻರಾಯಭಾರಿʼ ಪಾತ್ರದಲ್ಲಿ ಮಿಂಚಿದ ಜಾನ್ವಿ ಕಪೂರ್

ಚಿತ್ರಗಳ ಹೊರತಾಗಿ ನಟ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡುತ್ತಾರೆ. ವರದಿಗಳ ಪ್ರಕಾರ ನಟ ಸಲ್ಮಾನ್ ಖಾನ್ 2023ರ 16 ನೇ ಸೀಸನ್ ಅನ್ನು ನಿರೂಪಣೆ ಮಾಡಲು ವಾರಕ್ಕೆ 12 ಕೋಟಿ ಚಾರ್ಜ್ ಮಾಡಿದ್ದರು ಎನ್ನಲಾಗಿದೆ.

Continue Reading

ಸಿನಿಮಾ

Deepika Padukone: ತಾಯ್ತತನದ ಜೊತೆಗೆ ವೃತ್ತಿ ಜೀವನ ನಿಭಾಯಿಸುತ್ತಿರುವ ದೀಪಿಕಾ ಪಡುಕೋಣೆ

Deepika Padukone ಇತ್ತೀಚೆಗಷ್ಟೇ ತಾಯಿಯಾಗುತ್ತಿರುವ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ನಟಿ ದೀಪಿಕಾ ಪಡುಕೋಣೆಯವರು ಇದೀಗ ‘ಸಿಂಗಂ ಅಗೇನ್’ ಚಿತ್ರದ ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಮೂಲಜ ತಾಯ್ತನದ ಜತೆಗೇನೆ ವೃತ್ತಿ ಜೀವನವನ್ನೂ ಯಶಸ್ವಿಯಾಗಿ ಮತ್ತು ದಿಟ್ಟವಾಗಿ ನಿಭಾಯಿಸುತ್ತಿದ್ದಾರೆ

VISTARANEWS.COM


on

Deepika Padukone
Koo

ಬೆಂಗಳೂರು: ತಾಯ್ತತನ ಎನ್ನುವುದು ಹೆಣ್ಣು ಮಕ್ಕಳ ಜೀವನದಲ್ಲಿ ಅತಿ ಮುಖ್ಯವಾದ ಘಟ್ಟ. ಹಾಗಾಗಿ ಈ ಸಂದರ್ಭದಲ್ಲಿ ಮನೆಯೊಳಗೆ ಕುಳಿತು ವಿಶ್ರಾಂತಿ ಪಡೆಯುತ್ತಾರೆ. ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅಂತಹದರಲ್ಲಿ ನಟಿ ದೀಪಿಕಾ ಪಡುಕೋಣೆಯವರು (Deepika Padukone) ತಮ್ಮ ತಾಯ್ತತನದ ಜೊತೆಗೆ ತಮ್ಮ ವೃತ್ತಿ ಜೀವನದ ಜವಾಬ್ದಾರಿಯನ್ನು ನಿಭಾಯಿಸಲು ಮುಂದಾಗಿದ್ದಾರಂತೆ.

ಹೌದು, ಇತ್ತೀಚೆಗಷ್ಟೇ ತಾಯಿಯಾಗುತ್ತಿರುವ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ನಟಿ ದೀಪಿಕಾ ಪಡುಕೋಣೆಯವರು ಇದೀಗ ‘ಸಿಂಗಂ ಅಗೇನ್’ ಚಿತ್ರದ ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರಂತೆ.
ನಿರ್ಮಾಪಕ ರೋಹಿತ್ ಶೆಟ್ಟಿಯವರ ‘ಸಿಂಗಂ ಅಗೇನ್’ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಲೇಡಿ ಸಿಂಗಂ ಆಗಿ ಕಾಣಿಸಿಕೊಳ್ಳಲಿದ್ದು, ಲೇಡಿಸ್ ಪೊಲೀಸ್ ಶಕ್ತಿ ಶೆಟ್ಟಿ ಪಾತ್ರದಲ್ಲಿ ನಟಿಸಲಿದ್ದಾರೆ. ಇತ್ತೀಚೆಗೆ ಆನ್ ಲೈನ್ ನಲ್ಲಿ ಕಂಡುಬರುತ್ತಿರುವ ಪೋಟೊದಲ್ಲಿ ದೀಪಿಕಾ ಪಡುಕೋಣೆ ಖಾಕಿ ಸಮವಸ್ತ್ರದಲ್ಲಿ ಪೊಲೀಸ್ ವೇಷದಲ್ಲಿ ಕಂಡುಬಂದಿದ್ದು, ಕಣ್ಣಿಗೆ ಕಪ್ಪು ಸನ್ ಗ್ಲಾಸ್ ಧರಿಸಿ, ಕೂದಲನ್ನು ಅಚ್ಚುಕಟ್ಟಾಗಿ ಬನ್ ನಲ್ಲಿ ಕಟ್ಟಿ ಬಹಳ ಶಕ್ತಿಯುತವಾಗಿ ಕಾಣಿಸಿಕೊಂಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ರೋಹಿತ್ ಅವರು ಚಿತ್ರದ ಮೊದಲು ಲುಕ್ ಅನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ದೀಪಿಕಾ ಪೊಲೀಸ್ ಡ್ರೆಸ್ ನಲ್ಲಿ ಕೈಯಲ್ಲಿ ಗನ್ ಹಿಡಿಹಿಡಿದು ಲೇಡಿ ಸಿಂಗಂ ಅವತಾರದಲ್ಲಿ ಕಂಡುಬಂದಿದ್ದರು.

‘ಸಿಂಗಂ ಅಗೇನ್’ ಚಿತ್ರದಲ್ಲಿ ದೀಪಿಕಾ ಪಡುಕೋಣೆಯವರ ಜೊತೆಗೆ ಅಜಯ್ ದೇವಗನ್, ಕರೀನಾ ಕಪೂರ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಟೈಗರ್ ಶ್ರಾಫ್, ಜಾಕಿ ಶ್ರಾಫ್ ಮತ್ತು ಅರ್ಜುನ ಕಪೂರ್ ನಟಿಸಲಿದ್ದಾರೆ.

ರೋಹಿತ್ ಶೆಟ್ಟಿಯವರ ‘ಸಿಂಗಂ’ 2011ರಲ್ಲಿ ಬಿಡುಗಡೆಯಾಗಿತ್ತು, ನಂತರ ‘ಸಿಂಗಂ ರಿಟರ್ನ್ ‘ 2014ರಲ್ಲಿ ಬಿಡುಗಡೆಯಾಗಿತ್ತು. ಇವೆಲ್ಲವೂ ರೋಹಿತ್ ಅವರ ಕಾಪ್ ಯೂನಿವರ್ಸ್ ನ ಭಾಗವಾಗಿದ್ದು, ಜನರ ಮನಗೆದ್ದಿತ್ತು. ಇದೀಗ ‘ಸಿಂಗಂ ಅಗೇನ್’ ಕೂಡ ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: Ulajh Teaser: `ಉಲಾಜ್ ಟೀಸರ್’ ರಿಲೀಸ್; ʻರಾಯಭಾರಿʼ ಪಾತ್ರದಲ್ಲಿ ಮಿಂಚಿದ ಜಾನ್ವಿ ಕಪೂರ್

ಇಟಲಿಯ ಲೇಕ್ ಕೊಮೊದಲ್ಲಿ 2018ರಲ್ಲಿ ದೀಪಿಕಾ ಮತ್ತು ರಣವೀರ್ ಸಿಂಗ್ ವಿವಾಹವಾದರು.ದೀಪಿಕಾ ಅವರು ಫೆಬ್ರವರಿಯಲ್ಲಿ ತಾವು ತಾಯಿಯಾಗುತ್ತಿರುವ ಸುದ್ದಿ ತಿಳಿಸಿದ್ದಾರೆ. ಈ ದಂಪತಿ ಸೆಪ್ಟೆಂಬರ್ ನಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ.

Continue Reading

ಸಿನಿಮಾ

Ulajh Teaser: `ಉಲಾಜ್ ಟೀಸರ್’ ರಿಲೀಸ್; ʻರಾಯಭಾರಿʼ ಪಾತ್ರದಲ್ಲಿ ಮಿಂಚಿದ ಜಾನ್ವಿ ಕಪೂರ್

Ulajh Teaser ನಟಿ ಜಾನ್ವಿ ಕಪೂರ್ ಹಾಗೂ ಉಲಾಜ್ ಸಿನಿಮಾಕ್ಕೆ ನೆಟ್ಟಿಗರು ಶುಭ ಹಾರೈಸಿದ್ದಾರೆ. ಜಾನ್ವಿ ಕಪೂರ್ ಅವರ ನಟನೆ ತುಂಬಾ ಚೆನ್ನಾಗಿ ಮೂಡಿಬಂದಿರುವುದಾಗಿ ಒಬ್ಬರು ತಿಳಿಸಿದರೆ, ಒಂದರ ನಂತರ ಒಂದರಂತೆ ಹಿಟ್ ಪ್ರದರ್ಶನ ನೀಡುತ್ತಿರುವ ನಿಮ್ಮನ್ನು ಕಂಡು ನಿಮ್ಮ ತಾಯಿ ಹೆಮ್ಮೆ ಪಡುತ್ತಾರೆ ಎಂದು ಹೊಗಳಿದ್ದಾರೆ.

VISTARANEWS.COM


on

Ulajh Teaser
Koo

ಬೆಂಗಳೂರು: ಸಾಮಾನ್ಯ ಹುಡುಗಿಯ ಪಾತ್ರದಲ್ಲಿ ಮಿಂಚಿ ಜನರ ಮನಗೆದ್ದ ನಟಿ ಜಾನ್ವಿ ಕಪೂರ್ ಅವರು ಇದೀಗ `ಉಲಾಜ್’ (Ulajh) ಚಿತ್ರದಲ್ಲಿ ವಿಭಿನ್ನವಾದ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ಬೆರಗುಗೊಳಿಸಲಿದ್ದಾರೆ. ಉಲಾಜ್ (Ulajh Teaser) ಚಿತ್ರದ ಮೂಲಕ ನಟಿ ಜಾನ್ವಿ ಕಪೂರ್ ಅವರು ವಿದೇಶ ನೆಲದಲ್ಲಿ ತಮ್ಮ ದೇಶಭಕ್ತಿಯನ್ನು ಮರೆದಿದ್ದಾರೆ.

ಇದೀಗ ಸುಧಾಂಶು ಸರಿಯಾ ನಿರ್ದೇಶನದ ಉಲಾಜ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದು ಭಾರತೀಯ ವಿದೇಶಾಂಗ ಸೇವೆಗಳ(ಐಎಫ್ ಎಸ್) ರೋಚಕ ಜಗತ್ತು ಮತ್ತು ಅದರಲ್ಲಿ ಬರುವ ಎಲ್ಲಾ ರಾಜಕೀಯ ನಾಟಕಗಳ ಬಗ್ಗೆ ನಮಗೆ ಒಂದು ಸಣ್ಣ ಚಿತ್ರಣವನ್ನು ನೀಡುತ್ತದೆ. ಈ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ಅವರು ರಾಜತಾಂತ್ರಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಸರ್ ನಲ್ಲಿ ಜಾನ್ವಿ ಕಪೂರ್ ಅವರು ದೇಶಭಕ್ತರ ಕುಟುಂಬದಿಂದ ಬಂದ ಯುವ ರಾಜತಾಂತ್ರಿಕ ಸುಹಾನಾ ಪಾತ್ರದಲ್ಲಿ ನಟಿಸಿದ್ದಾರೆ. ಅವರು ವಿದೇಶದಲ್ಲಿ ಕೆಲಸ ಮಾಡುವಾಗ ಸುಳ್ಳು, ಮೋಸ ಮತ್ತು ಜೀವ ಬೆದರಿಕೆಗೆ ಸಿಲುಕಿಕೊಳ್ಳುತ್ತಾರೆ. ತನ್ನ ರಾಷ್ಟ್ರವನ್ನು ರಕ್ಷಿಸಲು ಇಂತಹ ದ್ರೋಹದ ಜಾಲದ ಮೂಲಕ ಹೋರಾಡುವಾಗ ಜಾನ್ವಿ ಕಪೂರ್ ಎದುರಿಸುವ ಅಪಾಯಗಳ ಒಂದು ನೋಟವನ್ನು ಟೀಸರ್ ನಲ್ಲಿ ನಮಗೆ ತೋರಿಸಲಾಗಿದೆ. ಸುಹಾನ ಪಾತ್ರದಲ್ಲಿ ಜಾನ್ವಿ ಕಪೂರ್ ನಟನೆ ಪ್ರೇಕ್ಷಕರ ಮನ ಸೆಳೆದಿದೆ.

ಪರ್ವೀಜ್ ಶೇಖ್ ಮತ್ತು ಸುಧಾಂಶು ಸರಿಯಾ ಬರೆದಿರುವ ಈ ಚಿತ್ರಕ್ಕೆ ಅತಿಕಾ ಚೌಹಾಣ್ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದಲ್ಲಿ ಗುಲ್ಶನ್ ದೇವಯ್ಯ ಮತ್ತು ರೋಶನ್ ಮ್ಯಾಥ್ಯೂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಆದಿಲ್ ಹುಸೇನ್, ರಾಜೇಶ್ ತೈಲಾಂಗ್, ಮಿಯಾಂಗ್ ಚಾಂಗ್, ರಾಜೇಂದ್ರ ಗುಪ್ತಾ ಮತ್ತು ಜಿತೇಂದ್ರ ಜೋಶಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರ ಜುಲೈ 5, 2024ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಟಿ ಜಾನ್ವಿ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಉಲಾಜ್ ಚಿತ್ರದ ಟೀಸರ್ ಹಂಚಿಕೊಳ್ಳುವ ಮೂಲಕ, ಜುಲೈ 5ರಂದು ಚಿತ್ರಮಂದಿರಗಳಿಗೆ ಬರುವ # ulajh ಸುಳ್ಳು, ಮೋಸ ಮತ್ತು ದ್ರೋಹದ ಜಗತ್ತಿಗೆ ಸಿದ್ಧರಾಗಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Ott Release This Week: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳು, ವೆಬ್‌ ಸಿರೀಸ್‌!

ಉಲಾಜ್ ಟೀಸರ್ ಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಟೀಸರ್ ಬಿಡುಗಡೆಯಾದ ತಕ್ಷಣ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿದ್ದಾರೆ. ಮತ್ತು ನಟಿ ಜಾನ್ವಿ ಕಪೂರ್ ಹಾಗೂ ಉಲಾಜ್ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ. ಜಾನ್ವಿ ಕಪೂರ್ ಅವರ ನಟನೆ ತುಂಬಾ ಚೆನ್ನಾಗಿ ಮೂಡಿಬಂದಿರುವುದಾಗಿ ಒಬ್ಬರು ತಿಳಿಸಿದರೆ, ಒಂದರ ನಂತರ ಒಂದರಂತೆ ಹಿಟ್ ಪ್ರದರ್ಶನ ನೀಡುತ್ತಿರುವ ನಿಮ್ಮನ್ನು ಕಂಡು ನಿಮ್ಮ ತಾಯಿ ಹೆಮ್ಮೆ ಪಡುತ್ತಾರೆ ಎಂದು ಹೊಗಳಿದ್ದಾರೆ.

Continue Reading
Advertisement
EVM
ಪ್ರಮುಖ ಸುದ್ದಿ29 mins ago

ವಿಸ್ತಾರ ಸಂಪಾದಕೀಯ: ಮತ್ತೆ ಮತಪತ್ರಗಳ ‘ಶಿಲಾಯುಗ’ಕ್ಕೆ ಹೋಗಲಾಗದು! ಆಧಾರರಹಿತವಾಗಿ ಮತಯಂತ್ರ ದೂಷಣೆ ಸರಿಯಲ್ಲ

Baking Powder
ಆಹಾರ/ಅಡುಗೆ30 mins ago

Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಇದರ ಹಿನ್ನೆಲೆ ಗೊತ್ತಿರಲಿ

daily horoscope predictions for April 18 2024
ಭವಿಷ್ಯ1 hour ago

Dina Bhavishya : ಈ ರಾಶಿಯವರು ಇಂದು ಕಾರಣಾಂತರಗಳಿಂದ ಮೋಸ ಹೋಗುವ ಸಾಧ್ಯತೆ ಇದೆ!

DD News Logo
ದೇಶ6 hours ago

DD News Logo: ರಾಮನವಮಿ ದಿನವೇ ಡಿಡಿ ನ್ಯೂಸ್‌ ಲೋಗೊ ಕೇಸರಿಮಯ; ತೀವ್ರವಾಯ್ತು ಚರ್ಚೆ!

Jai Shree Ram slogan
ಪ್ರಮುಖ ಸುದ್ದಿ7 hours ago

Jai Shree Ram slogan: ಹಿಂದು ಯುವಕರ ಮೇಲೆ ಹಲ್ಲೆ ಮಾಡಿದ್ದ ಮೂವರ ಬಂಧನ

Union Minister Pralhad Joshi election campaign in Hubli
ಹುಬ್ಬಳ್ಳಿ7 hours ago

Lok Sabha Election 2024: ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ಸ್ವಚ್ಛ ಆಡಳಿತ: ಪ್ರಲ್ಹಾದ್‌ ಜೋಶಿ

Times Influential list 2024
ಕ್ರೀಡೆ7 hours ago

Times Influential list 2024: ಟೈಮ್ಸ್‌ ಪ್ರಭಾವಿ ಪಟ್ಟಿಯಲ್ಲಿ ಸ್ಥಾನ ಪಡೆದ ಸಾಕ್ಷಿ ಮಲಿಕ್,ಆಲಿಯಾ ಭಟ್

Terrorist Attack
ದೇಶ8 hours ago

Terrorist Attack: ಕಾಶ್ಮೀರದಲ್ಲಿ ಬಿಹಾರದ ಕಾರ್ಮಿಕನನ್ನು ಹತ್ಯೆಗೈದ ಉಗ್ರರು; ತಿಂಗಳಲ್ಲಿ 2ನೇ ದಾಳಿ

MP DK Suresh election campaign in various places of Channapattana
ಬೆಂಗಳೂರು ಗ್ರಾಮಾಂತರ8 hours ago

Lok Sabha Election 2024: ಚನ್ನಪಟ್ಟಣದ ವಿವಿಧೆಡೆ ಸಂಸದ ಡಿ.ಕೆ.ಸುರೇಶ್‌ ಮತಯಾಚನೆ

DC vs GT
ಕ್ರೀಡೆ8 hours ago

DC vs GT: ಡೆಲ್ಲಿ ದಾಳಿಗೆ ಚೆಲ್ಲಾಪಿಲ್ಲಿಯಾದ ಗುಜರಾತ್​; 6 ವಿಕೆಟ್​ ಹೀನಾಯ ಸೋಲು

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20243 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ7 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌