Snehal Rai married to 21 year older politicianSnehal Rai: 21 ವರ್ಷ ಹಿರಿಯ ರಾಜಕಾರಣಿ ಜತೆ ಕಿರುತೆರೆಯ ಖ್ಯಾತಿ ನಟಿ ಮದುವೆಯಾಗಲು ಇದೆ ಕಾರಣ! - Vistara News

ಕಿರುತೆರೆ

Snehal Rai: 21 ವರ್ಷ ಹಿರಿಯ ರಾಜಕಾರಣಿ ಜತೆ ಕಿರುತೆರೆಯ ಖ್ಯಾತಿ ನಟಿ ಮದುವೆಯಾಗಲು ಇದೆ ಕಾರಣ!

Snehal Rai: ಮಿಸಸ್​ ಎಂದ ಮೇಲೆ ಮದುವೆಯಾಗಬೇಕಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, 10 ವರ್ಷಗಳ ಹಿಂದೆಯೇ ಮದುವೆಯಾಗಿದ್ದನ್ನು ಬಹಿರಂಗಪಡಿಸಿದ್ದಾರೆ ನಟಿ ಸ್ನೇಹಲ್ ರೈ.

VISTARANEWS.COM


on

Snehal Rai married
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʻಇಷ್ಕ್ ಕಾ ರಂಗ್ ಸಫೇದ್ʼ ಖ್ಯಾತಿಯ ನಟಿ ಸ್ನೇಹಲ್ ರೈ (Snehal Rai) ಅವರು 10 ವರ್ಷಗಳ ಹಿಂದೆಯೇ ತಾವು ರಾಜಕಾರಣಿಯನ್ನು ಮದುವೆಯಾಗಿರುವುದಾಗಿ ಬಹಿರಂಗಪಡಿಸಿದ್ದಾರೆ. ಇದೀಗ ನಟಿ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಬಗ್ಗೆ ಬರೆದುಕೊಂಡಿದ್ದಾರೆ. ತಾವು ಮಿಸಸ್​ ಬ್ಯೂಟಿ ಕಾಂಟೆಸ್ಟ್​ನಲ್ಲಿ (Mrs beauty contest) ಭಾಗವಹಿಸಲು ರೆಡಿಯಾಗಿರುವುದಾಗಿ ಹೇಳಿದ್ದಾರೆ. ಮಿಸಸ್​ ಎಂದ ಮೇಲೆ ಮದುವೆಯಾಗಬೇಕಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, 10 ವರ್ಷಗಳ ಹಿಂದೆಯೇ ಮದುವೆಯಾಗಿದ್ದನ್ನು ಬಹಿರಂಗಪಡಿಸಿದ್ದಾರೆ.

ಇಷ್ಕ್ ಕಾ ರಂಗ್ ಸಫೇದ್, ಜನ್ಮೋ ಕಾ ಬಂಧನ್, ಇಚ್ಛಪ್ಯಾರಿ ನಾಗಿನ್ ನಂತಹ ಟಿವಿ ಶೋಗಳಲ್ಲಿ ಸ್ನೇಹಲ್ ರೈ ನಟಿಸಿ ಖ್ಯಾತಿ ಗಳಿಸಿದ್ದರು. ಮಧ್ವೇಂದ್ರ ರೈ ಅವರೊಂದಿಗೆ ಲಾಂಗ್‌ ಡಿಸ್ಟೆನ್ಸ್‌ ರಿಲೇಶನ್‌ಶಿಪ್‌ ನಮ್ಮದಾಗಿದ್ದು, ನನ್ನ ವೃತ್ತಿ ಜೀವನಕ್ಕೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ. ನೀನು ಗೆಲ್ಲುತ್ತೀಯೋ ಇಲ್ಲವೋ ಆದರೆ ಎಂದೂ ರಾಣಿಯಾಗಿ ನನ್ನ ಹೃದಯವನ್ನು ಆಳುತ್ತಿ ಎಂದಿದ್ದರು. ಇದು ನನಗೆ ತುಂಬಾ ಇಷ್ಟವಾಯಿತು ಎಂದಿದ್ದಾರೆ. ನಟಿಯಾಗಿ ತಾನು ಮಾಧವೇಂದ್ರ ಹಾಗೂ ಅವರ ಕುಟುಂಬದಿಂದ ಸಾಕಷ್ಟು ಬೆಂಬಲ ಹಾಗೂ ಪ್ರೀತಿಯನ್ನು ಪಡೆಯುತ್ತಿದ್ದೇನೆ ಎಂದು ಸ್ನೇಹಲ್ ರೈ (Snehal Rai) ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Deepa Katte: ವೈವಾಹಿಕ ಜೀವನಕ್ಕೆ ಕಾಲಿಟ್ಟ `ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಖ್ಯಾತಿಯ ನಟಿ ದೀಪಾ ಕಟ್ಟೆ

ಇವರಿಬ್ಬರು ಭೇಟಿಯಾಗಿದ್ದು ಹೇಗೆ?

ಸ್ನೇಹಲ್ ರೈ ಆಯೋಜಿಸುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಮಧ್ವೇಂದ್ರ ಅವರ ಜತೆ ನಟಿ ಮೊದಲ ಬಾರಿಗೆ ಭೇಟಿಯಾದರು. ಮಧ್ವೇಂದ್ರ ಅವರು ಕಾರ್ಯಕ್ರಮಕ್ಕೆ ವಿಐಪಿ ಅತಿಥಿಯಾಗಿದ್ದರು ಎಂದು ಸ್ನೇಹಲ್ ಬಹಿರಂಗಪಡಿಸಿದ್ದಾರೆ. ಆಗಲೇ ಪ್ರೀತಿ ಚಿಗುರಿತ್ತು. ನಂತರ ವಿಮಾನ ಒಂದರಲ್ಲಿ ಇಬ್ಬರೂ ಭೇಟಿಯಾದಾಗ ಪ್ರೀತಿ ಹೆಚ್ಚಾಗಿತ್ತು. ನಂತರ ನಟಿ ಹಲವಾರು ಸಲ ಮಧ್ವೇಂದ್ರ ಅವರ ಇವೆಂಟ್ ಮ್ಯಾನೇಜ್​ಮೆಂಟ್ ಕಂಪೆನಿಯ ಹೋಸ್ಟ್ ಆಗಿ ಕೆಲಸ ಮಾಡಿ ನಂತರ ಮದುವೆಯಾದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕಿರುತೆರೆ

Rupanjana Mitra: ತನಗಿಂತ 6 ವರ್ಷ ಚಿಕ್ಕವನ ಜತೆ ಮಗನ ಸಮ್ಮುಖದಲ್ಲಿ ಎರಡನೇ ಮದುವೆಯಾದ ನಟಿ!

Rupanjana Mitra: ಕಳೆದ ವರ್ಷ ಡಾರ್ಜಿಲಿಂಗ್‌ನಲ್ಲಿ ರೂಪಂಜನಾ ಮತ್ತು ರತುಲ್ ಡಾರ್ಜಿಲಿಂಗ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಫೋಟೊಗಳಿಗೆ ಪೋಸ್ ನೀಡಿ ಸಾಮಾಜಿಕ ಜಾಲತಾಣದಲ್ಲಿ ಸಂತಸದ ಕ್ಷಣಗಳನ್ನು ಹಂಚಿಕೊಂಡಿತ್ತು. ರೂಪಾಂಜನಾ ಅವರ ಸಹನಟರು, ಸ್ನೇಹಿತರು, ಹಿತೈಷಿಗಳು ಅಭಿನಂದಿಸಿದ್ದರು.

VISTARANEWS.COM


on

Rupanjana Mitra
Koo

ಬೆಂಗಳೂರು: 43 ವರ್ಷದ ಕಿರುತೆರೆ ನಟಿ ರೂಪಂಜನಾ ಮಿತ್ರಾ (Rupanjana Mitra) ಅವರು ಏಪ್ರಿಲ್ 19ರಂದು ತಮಗಿಂತ 6 ವರ್ಷ ಚಿಕ್ಕವರಾದ ರತುಲ್‌ ಮುಖರ್ಜಿ ಅವರನ್ನು ವಿವಾಹವಾಗಿದ್ದಾರೆ. ಬಂಗಾಳಿ ಸಂಪ್ರದಾಯದಲ್ಲಿ ನಟಿ ವಿವಾಹವಾದರು. ವಿಶೇಷ ಅಂದರೆ ನಟಿ ಮಗನ ಎದುರೇ ನಟಿ ಎರಡನೇ ವಿವಾಹವಾಗಿದ್ದಾರೆ. ನಟಿ ಕೆಂಪು ಬಣ್ಣದ ಬನಾರಸ್‌ ಸೀರೆಯಲ್ಲಿ ಕಂಗೊಳಿಸಿದರೆ, ರತುಲ್‌ ಅವರು ಧೋತಿಯಲ್ಲಿ ಕಂಡು ಬಂದರು.

ರೂಪಾಂಜನಾ ಅವರ ಮಗ ರಿಯಾನ್ ಕೆಂಪು ಪಂಜಾಬಿಯನ್ನು ಧರಿಸಿದ್ದ. ರೂಪಂಜನಾ ಮಿತ್ರಾ ಹಾಗೂ ರತುಲ್‌ ಮುಖರ್ಜಿ ಮದುವೆಗೂ ಮುಂಚೆ ಆರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ರತುಲ್‌ ಅವರು ರೂಪಂಜನಾ ಮಿತ್ರಾಗಿಂತ ಆರು ವರ್ಷ ಚಿಕ್ಕವರು.

ಕಳೆದ ವರ್ಷ ಡಾರ್ಜಿಲಿಂಗ್‌ನಲ್ಲಿ ರೂಪಂಜನಾ ಮತ್ತು ರತುಲ್ ಡಾರ್ಜಿಲಿಂಗ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಫೋಟೊಗಳಿಗೆ ಪೋಸ್ ನೀಡಿ ಸಾಮಾಜಿಕ ಜಾಲತಾಣದಲ್ಲಿ ಸಂತಸದ ಕ್ಷಣಗಳನ್ನು ಹಂಚಿಕೊಂಡಿತ್ತು. ರೂಪಾಂಜನಾ ಅವರ ಸಹನಟರು, ಸ್ನೇಹಿತರು, ಹಿತೈಷಿಗಳು ಅಭಿನಂದಿಸಿದ್ದರು.

ಇದನ್ನೂ ಓದಿ: Ramana Avatara: ಬಿಡುಗಡೆ ದಿನಾಂಕ ಘೋಷಣೆ ಮಾಡಿದ ರಿಷಿ ಅಭಿನಯದ ‘ರಾಮನ ಅವತಾರ’ ಸಿನಿಮಾ

ಇದನ್ನೂ ಓದಿ: Physical Abuse : ಬೆಂಗಳೂರಲ್ಲೊಂದು ಪೈಶಾಚಿಕ ಕೃತ್ಯ; 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ರೂಪಾಂಜನಾ ಅವರು 2007ರಲ್ಲಿ ರಜಾಲ್‌ ಹಕಿಯನ್ನು ವಿವಾಹವಾಗಿದ್ದರು. ರಿಯಾನ್‌ ಎಂಬ ಮಗ ಜನಿಸಿದ. 2018ರಲ್ಲಿ ಜೋಡಿ ವಿಚ್ಛೇದನ ಪಡೆದಿತ್ತು. ಅಂದಿನಿಂದ ಮಗ ತಾಯಿಯ ಜತಗೆ ಇದ್ದಾನೆ. ಪತಿಯಿಂದ ವಿಚ್ಛೇದನ ಪಡೆದ ನಂತರ ರೂಪಾಂಜನಾ ಅವರು ರತುಲ್‌ ಅವರನ್ನು ಪ್ರೀತಿಸುತ್ತಿದ್ದರು.

ಇದೀಗ ಜೋಡಿ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ವೈರಲ್‌ ಆಗುತ್ತಿರುವ ನವಜೋಡಿಗೆ ಹಲವರು ಶುಭ ಹಾರೈಸುತ್ತಿದ್ದಾರೆ. ರೂಪಂಜನಾ ಬಂಗಾಳಿ ದೂರದರ್ಶನದಲ್ಲಿ ಪ್ರಸಿದ್ಧ ನಟಿ. ಬೆಂಗಾಲಿ ಟಿವಿ ಶೋ ‘ಏಕ್ ಆಕಾಶೇರ್ ನಿಚೆ’ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದರು. ಹಲವಾರು ಸಿನಿಮಾಗಳು ಮತ್ತು ಮತ್ತು ವೆಬ್ ಸಿರೀಸ್‌ನಲ್ಲಿ ನಟಿ ಕಾಣಿಸಿಕೊಂಡಿದ್ದರು.

Continue Reading

ಕಿರುತೆರೆ

Mahanati Show: ಸ್ವಾಭಿಮಾನಿ ಅಜ್ಜಿಯ ಕಷ್ಟಕ್ಕೆ ನೆರವಾದ ಅನುಶ್ರೀ; ದಿನಸಿ ವ್ಯವಸ್ಥೆ ಮಾಡಿದ ತರುಣ್ ಸುಧೀರ್!

Mahanati Show: ಕೋಲಾರ ಮೂಲದ ಭಾಗ್ಯಲಕ್ಷ್ಮಮ್ಮ ಅವರ ಜೀವನದ ಕಷ್ಟಗಳನ್ನು ಕೇಳಿ ನಿರೂಪಕಿ ಅನುಶ್ರೀ ಭಾವುಕರಾದರು. ಮಾತ್ರವಲ್ಲ ಭಾಗ್ಯಲಕ್ಷ್ಮಮ್ಮ ಅವರ ಮನೆ ಬಾಡಿಗೆಯನ್ನು ಅನುಶ್ರೀ ಕಟ್ಟುವುದಾಗಿ ವೇದಿಕೆಯಲ್ಲಿ ಹೇಳಿಕೊಂಡರು. ಇನ್ನು ರಮೇಶ್‌ ಅರವಿಂದ್‌ ಅವರು ಕೂಡ ʻವೀಕೆಂಡ್‌ ವಿತ್‌ ರಮೇಶ್‌ʼ ರೀತಿ ನಿರೂಪಣೆ ಮಾಡಿ, ಭಾಗ್ಯಲಕ್ಷ್ಮಮ್ಮ ಅವರು ಇಂದಿನ ಸಾಧಕರು ಎಂದು ಗೌರವ ನೀಡಿದರು.

VISTARANEWS.COM


on

Mahanati Show Anushree helped the hagyalakshmi ajji Tarun Sudhir arranged the groceries
Koo

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಹಲವು ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಿವೆ. ಈ ಮೂಲಕ ಹಲವು ಪ್ರತಿಭೆಗಳನ್ನು ಕರುನಾಡಿಗೆ ಪರಿಚಯಿಸಿದ ಕೀರ್ತಿ ಈ ವಾಹಿನಿಗೆ ಸಲ್ಲುತ್ತದೆ. ಕನ್ನಡ ಚಿತ್ರರಂಗಕ್ಕೆ ಯುವ ನಾಯಕ ನಟಿಯರನ್ನು ನೀಡುವ ಕೆಲಸವನ್ನು ಈ ‘ಮಹಾನಟಿ’ ರಿಯಾಲಿಟಿ ಶೋ (Mahanati Show) ಮಾಡುತ್ತಿದೆ. ಈ ವಾರ ಜೀವನಕ್ಕೆ ಸ್ಪೂರ್ತಿ ತುಂಬುವ ಸಾಮಾನ್ಯ ಸಾಧಕರನ್ನು ಬೆಳಕಿಗೆ ತರುವ ಪ್ರಯತ್ನ ಮಾಡಿದೆ ವಾಹಿನಿ. ಕೋಲಾರ ಮೂಲದ ಭಾಗ್ಯಲಕ್ಷ್ಮಮ್ಮ ಅವರ ಜೀವನದ ಕಷ್ಟಗಳನ್ನು ಕೇಳಿ ನಿರೂಪಕಿ ಅನುಶ್ರೀ ಭಾವುಕರಾದರು. ಮಾತ್ರವಲ್ಲ ಭಾಗ್ಯಲಕ್ಷ್ಮಮ್ಮ ಅವರ ಮನೆ ಬಾಡಿಗೆಯನ್ನು ಅನುಶ್ರೀ ಕಟ್ಟುವುದಾಗಿ ವೇದಿಕೆಯಲ್ಲಿ ಹೇಳಿಕೊಂಡರು.

ಕೋಲಾರ ಮೂಲದ ಭಾಗ್ಯಲಕ್ಷ್ಮಮ್ಮ ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳು. ಒಬ್ಬ ಮಗ. ಮಗನ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಕುಟುಂಬ ಬರುತ್ತದೆ. ಆಗ ಮಗನಿಗೆ ಎರಡೂ ಕಿಡ್ನಿ ಫೆಲ್ಯೂರ್‌ ಆಗುತ್ತೆ. ವಿಚಾರಿಸಿದಾಗ ಕಿಡ್ನಿ ಇದೆ. ಆದರೆ 10-12 ಲಕ್ಷ ರೂ. ಖರ್ಚು ಆಗುತ್ತದೆ ಎಂದು ತಿಳಿದಾಗ, ಭಾಗ್ಯಲಕ್ಷ್ಮಮ್ಮ ಹಣದ ವ್ಯವಸ್ಥೆ ಮಾಡಲು ತುಂಬ ಕಷ್ಟ ಪಡುತ್ತಾರೆ. ತಮ್ಮ ಒಂದು ಕಿಡ್ನಿಯನ್ನು ಮಗನಿಗೆ ಕೊಟ್ಟು ಮಗನ ಜೀವ ಉಳಿಸುತ್ತಾರೆ. ಆಪರೇಷನ್ ಆಗಿ ಎರಡೇ ವರ್ಷದಲ್ಲಿ ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಳ್ಳುತ್ತಾರೆ. ಮಗ ಇಲ್ಲ ಎನ್ನುವ ದುಖಃದಲ್ಲಿ ಕೊರಗುತ್ತಿದ್ದ ಪತಿ ತೀರಿಕೊಳ್ಳುತ್ತಾರೆ. ಭಾಗ್ಯಲಕ್ಷ್ಮಮ್ಮ ಅವರ ಈ ಜೀವನದ ಕಥೆ ಕೇಳಿ ಮಹಾನಟಿ ವೇದಿಕೆಯಲ್ಲಿ ಎಲ್ಲರೂ ಭಾವುಕರಾದರು.

ಇದನ್ನೂ ಓದಿ: Arun Yogiraj: ಕಿರುತೆರೆಗೆ ಕಾಲಿಟ್ಟ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್‌; ಯಾವ ಕಾರ್ಯಕ್ರಮ?

ಭಾಗ್ಯಲಕ್ಷ್ಮಮ್ಮ ಅವರಿಗೆ ತಾನು ಸ್ವಾಭಿಮಾನಿಯಾಗಿಯೇ ಬದುಕಬೇಕೆಂಬ ಹಠ. ಹೀಗಿರುವಾಗ ಅನುಶ್ರೀ ಅವರು ವೇದಿಕೆಯಲ್ಲಿ ಭಾಗ್ಯಲಕ್ಷ್ಮಮ್ಮ ಅವರಿಗೆ ʻʻನಾನು ನಿಮ್ಮ ಮೊಮ್ಮಗಳು ತರ ಅಲ್ವಾ? ನಾನು ಬದುಕಿರುವವರೆಗೂ ನಿಮ್ಮ ಮನೆ ಬಾಡಿಗೆ ಕಟ್ಟುತ್ತೇನೆ. ನಿಮಗೆ ಇಷ್ಟ ಇರುವ ಮನೆಯಲ್ಲಿ ಇರಿʼʼಎಂದು ಭಾವುಕರಾದರು ಅನುಶ್ರೀ. ಮಾತ್ರವಲ್ಲ ತರುಣ್‌ ಸುಧೀರ್‌ ಅವರು ಅಜ್ಜಿಯ ಸಂಪೂರ್ಣ ದಿನಸಿ ಸಾಮಾಗ್ರಿ ಖರ್ಚನ್ನು ಹೊತ್ತುಕೊಳ್ಳುವುದಾಗಿ ಹೇಳಿದರು.

ಭಾಗ್ಯಲಕ್ಷ್ಮಮ್ಮ ವೇದಿಕೆಯಲ್ಲಿ ಮಾತನಾಡಿ ʻʻನಾನು ಮತ್ತು ಮಗಳು ಒಟ್ಟಿಗೆ ಇದ್ದೇವೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಮಗಳು ಊದು ಬತ್ತಿಯನ್ನು ಮಾಡುತ್ತಾಳೆ. ಮನೆ ಬಾಡಿಗೆಗೆ 5 ಸಾವಿರ ಬೇಕು. ವಯಸ್ಸಾದವರಿಗೆ 1200 ರೂ. ಬರತ್ತೆ. ಹೀಗೆ ಬತ್ತಿ ಮಾರಿ ಆ ಹಣದಲ್ಲೇ ಬದುಕುತ್ತಿದ್ದೇವೆ. ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕಬೇಕು. ದೇವರು ಮೆಚ್ಚುವಂತಹ ಕೆಲಸ ಮಾಡಬೇಕುʼʼಎಂದರು.

ಇನ್ನು ರಮೇಶ್‌ ಅರವಿಂದ್‌ ಅವರು ಕೂಡ ʻವೀಕೆಂಡ್‌ ವಿತ್‌ ರಮೇಶ್‌ʼ ರೀತಿ ನಿರೂಪಣೆ ಮಾಡಿ, ಭಾಗ್ಯಲಕ್ಷ್ಮಮ್ಮ ಅವರು ಇಂದಿನ ಸಾಧಕರು ಎಂದು ಗೌರವ ನೀಡಿದರು.

ಇದನ್ನೂ ಓದಿ: Ramana Avatara: ಬಿಡುಗಡೆ ದಿನಾಂಕ ಘೋಷಣೆ ಮಾಡಿದ ರಿಷಿ ಅಭಿನಯದ ‘ರಾಮನ ಅವತಾರ’ ಸಿನಿಮಾ

ಜೀ ಕನ್ನಡ ಪೋಸ್ಟ್‌

‘ಮಹಾನಟಿ’ ರಿಯಾಲಿಟಿ ಶೋಗೆ ಈ ಬಾರಿ ಮೂರು ಹೊಸ ತೀರ್ಪುಗಾರರು ವೇದಿಕೆಯನ್ನ ಅಲಂಕರಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ, ನಟ ರಮೇಶ್‌ ಅರವಿಂದ್‌, ಖ್ಯಾತ ನಾಯಕ ನಟಿ ಪ್ರೇಮಾ, ‘ಕಾಟೇರ’ದಂತಹ ಯಶಸ್ವಿ ಚಿತ್ರಕೊಟ್ಟ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಯುವ ನಾಯಕ ನಟಿ ನಿಶ್ವಿಕಾ ನಾಯ್ಡು ಈ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Continue Reading

ಕಿರುತೆರೆ

Comedy Khiladigalu Premier League: ಈ ಬಾರಿ ಕಾಮಿಡಿ ಕಿಲಾಡಿ ಶೋನಲ್ಲಿ ಯಾರೂ ನಗಂಗಿಲ್ಲ! ಏನಿದು ಹೊಸ ಶೋ?

Comedy Khiladigalu Premier League:
ಕಾಮಿಡಿ ಕಿಲಾಡಿಗಳು ಮುಂದಿನ ಸೀಸನ್‌ ವಿಶೇಷವಾಗಿರಲಿದೆ. ​. ʻಈ ಬಾರಿ ನಗುವ ಹಾಗೆ ಇಲ್ವಂತೆ. ನಕ್ಕರೆ ಲಾಸು, ನಗಿಸೋರಿಗೆ ಕೈತುಂಬಾ ಕಾಸುʼ ಎನ್ನುತ್ತಲೇ ನವರಸ ನಾಯಕ ಜಗ್ಗೇಶ್ ವೀಕ್ಷಕರಿಗೆ ಕುತೂಹಲ ಕೆರಳಿಸಿದ್ದಾರೆ.ಪ್ರತಿ ಬಾರಿಯಂತೆ ಈ ಬಾರಿಯೂ ನವರಸನಾಯಕ ಜಗ್ಗೇಶ್‌, ನಟಿ ರಕ್ಷಿತಾ ಪ್ರೇಮ್‌ ಕಾಮಿಡಿ ಕಿಲಾಡಿಗೆ ತೀರ್ಪುಗಾರರಾಗಿರಲಿದ್ದಾರೆ ಎಂದೇ ವರದಿಯಾಗಿದೆ.

VISTARANEWS.COM


on

Comedy Khiladigalu Premier League Coming Soon
Koo

ಬೆಂಗಳೂರು: ಜೀ ಕನ್ನಡ ವಾಹಿನಿಯ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಅಂದರೆ ಅದುವೇ ʻಕಾಮಿಡಿ ಕಿಲಾಡಿಗಳುʼ ಶೋ. (Comedy Khiladigalu Premier League) “ಸೈಡ್‌ಗಿಡ್ರಿ ನಿಮ್‌ ಟೆನ್ಷನ್‌ಗಳು, ಮತ್ತೆ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು” ಎಂಬ ಸ್ಲೋಗನ್‌ ಮೂಲಕ ವಾರಾಂತ್ಯದಲ್ಲಿ ಕರುನಾಡನ್ನೇ ನಗೆಗಡಲಲ್ಲಿ ತೇಲಿಸುವ ಕೀರ್ತಿ ಈ ಕಾರ್ಯಕ್ರಮಕ್ಕೆ ಸಲ್ಲುತ್ತದೆ. ಇದೀಗ ಸೀಸನ್‌ 5 ಪ್ರೇಕ್ಷಕರ ಮುಂದೆ ಬರುತ್ತಿದೆ. ಇದೀಗ ವಾಹಿನಿ ಹೊಸ ಪ್ರೋಮೊ ಹಂಚಿಕೊಂಡಿದ್ದು, ನೋಡಲು ತುಂಬ ವಿಶೇಷವಾಗಿದೆ. ʻಈ ಬಾರಿ ನಗುವ ಹಾಗೆ ಇಲ್ವಂತೆ. ನಕ್ಕರೆ ಲಾಸು, ನಗಿಸೋರಿಗೆ ಕೈತುಂಬಾ ಕಾಸುʼ ಎನ್ನುತ್ತಲೇ ನವರಸ ನಾಯಕ ಜಗ್ಗೇಶ್ ವೀಕ್ಷಕರಿಗೆ ಕುತೂಹಲ ಕೆರಳಿಸಿದ್ದಾರೆ.

ಕಾಮಿಡಿ ಕಿಲಾಡಿಗಳು ಮುಂದಿನ ಸೀಸನ್‌ ವಿಶೇಷವಾಗಿರಲಿದೆ. ​ಗನ್ ಹಿಡಿದು ಕೆಲವರು ಜಗ್ಗೇಶ್‌ ಹಿಂದೆ ನಿಂತು ಸೀರಿಯಸ್ ಆಗಿದ್ದಾರೆ. ಜಗ್ಗಣ್ಣ ನಕ್ಕು ಬಿಡಿ ಅಂದಾಗ, ಇವರೆಲ್ಲ ಗುಂಡು ಹಾರಿಸಿ ಇಡೀ ವಾತಾವರಣ ರಣರಂಗ ಮಾಡಿ ಬಿಡುತ್ತಾರೆ. ಆಗ ಒಟ್ಟಿಗೆ ನಗುತ್ತಾರೆ. ಕಾಮಿಡಿ ಶೋ ಇರುವುದು ನಗೋಕೆ ಮತ್ತು ನಗಿಸೋಕೆ. ಆದರೆ ಈ ಸಲ ನಗೋ ಹಾಗಿಲ್ಲ ಅನ್ನೋದೇ ಕಾನ್ಸೆಪ್ಟ್ ಅನಿಸುತ್ತದೆ. ಹಾಗಾಗಿಯೇ ಈ ಶೋ ಮೊದಲ ಪ್ರೋಮೊ ಇದೀಗ ವಿಶೇಷವಾಗಿಯೇ ಕಾಣಿಸುತ್ತಿದೆ. ಇದರ ಪ್ರೀಮಿಯರ್​ ಶೋ ಶೀಘ್ರದಲ್ಲಿ ಎಂದು ಹಂಚಿಕೊಳ್ಳಲಾಗಿದೆ. ಆದರೆ ಇದನ್ನ ನೋಡುವ ಪ್ರೇಕ್ಷಕರು ಮತ್ತು ನಿರ್ಣಾಯಕರು ನಗಬಹುದು ಎನ್ನುವುದನ್ನೂ ಇಂಟರೆಸ್ಟಿಂಗ್ ಆಗಿಯೇ ಜಗ್ಗೇಶ್​ ಅವರು ಹೇಳಿದ್ದಾರೆ.

ಇದನ್ನೂ ಓದಿ: Comedy khiladi Nayana: ಹೆಣ್ಣು ಮಗುವಿಗೆ ತಾಯಿಯಾದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ!

ಸೀಸನ್ 4 ಈಗಾಗಲೇ ಮುಕ್ತಾಯಗೊಂಡಿದೆ. ಸೀಸನ್‌ 4ರ ವಿಜೇತರಾಗಿ ಹರೀಶ್ ಹಿರಿಯೂರು, ಮೊದಲನೇ ರನ್ನರ್ ಅಪ್ ಆಗಿ ಮಂಡ್ಯದ ಗಿಲ್ಲಿ ನಟ ಮತ್ತು ಎರಡನೇ ರನ್ನರ್ ಆಫ್ ಆಗಿ ಶುಭಾ ಸ್ಥಾನ ಪಡೆದಿದ್ದರು. ಒಟ್ಟು 12 ಜನ ಟಾಪ್​ ಫೈನಲಿಸ್ಟ್‌ಗಳ ನಡುವೆ ಈ ಮೂವರು ವಿಶೇಷ ಸ್ಥಾನ ಪಡೆದಿದ್ದರು.

ಪ್ರತಿ ಬಾರಿಯಂತೆ ಈ ಬಾರಿಯೂ ನವರಸನಾಯಕ ಜಗ್ಗೇಶ್‌, ನಟಿ ರಕ್ಷಿತಾ ಪ್ರೇಮ್‌ ಕಾಮಿಡಿ ಕಿಲಾಡಿಗೆ ತೀರ್ಪುಗಾರರಾಗಿರಲಿದ್ದಾರೆ ಎಂದೇ ವರದಿಯಾಗಿದೆ. ಈ ಕಾರ್ಯಕ್ರಮದ ಮೂಲಕ ಹೆಸರು ಪಡೆದವರು ಅದೆಷ್ಟೋ ಸ್ಟಾರ್‌ ನಟರ ಜತೆ, ಬೆಳ್ಳಿ ಪರದೆಯಲ್ಲಿ ಕಲಾವಿದರಾಗಿ ಮಿಂಚುತ್ತಿದ್ದಾರೆ. ಮೆಗಾ ಆಡಿಷನ್‌ನಲ್ಲಿ ಈ ಬಾರಿಯೂ ವಿವಿಧ ಭಾಗದ ಬೇರೆ ಬೇರೆ ಕಲಾವಿದರು ಆಯ್ಕೆಯಾಗಿದ್ದಾರೆ. ತಮ್ಮ ವಿಶೇಷ ಪ್ರತಿಭೆಗಳಿಂದ ನೋಡುಗರನ್ನು ರಂಜಿಸಲಿದ್ದಾರೆ.‌ ಈ ಕಾರ್ಯಕ್ರಮದ (Comedy Khiladigalu) ಎಲ್ಲ ಸೀಸನ್‌ಗಳಲ್ಲಿಯೂ ಅದ್ಭುತವಾಗಿ ನಿರೂಪಣೆ ಮಾಡಿರುವ ಮಾಸ್ಟರ್‌ ಆನಂದ್‌ ಈ ಬಾರಿಗೂ ನಿರೂಪಣೆ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎನ್ನಲಾಗಿದೆ.

Continue Reading

ಕಿರುತೆರೆ

Tarak Ponnappa: ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ಧಾರಾವಾಹಿಗೆ ವಿದಾಯ ಹೇಳಿದ ʻಕೆಜಿಎಫ್‌ʼ ಖ್ಯಾತಿಯ ನಟ!

Tarak Ponnappa: ಅಜರಾಮರ’ ಸಿನಿಮಾದ ಮೂಲಕ ಹಿರಿತೆರೆಗೆ ಪದಾರ್ಪಣೆ ಮಾಡಿದ ತಾರಕ್‌ ಮುಂದೆ ‘ಬೃಹಸ್ಪತಿ’ ಸಿನಿಮಾದಲ್ಲಿ ನಟಿಸಿದ್ದರು. ‘ಕೆಜಿಎಫ್’ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್ ಆಗಿ ಅಭಿನಯಿಸಿದ ತಾರಕ್ ‘ಮೋಕ್ಷ’, ‘ಯುವರಾಜ’ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ದಲ್ಲಿ ರೇಣು ಮಹಾರಾಜನ ಪಾತ್ರದಲ್ಲಿ ತಾರಕ್ ಪೊನ್ನಪ್ಪ (Tarak Ponnappa) ಪಾತ್ರ ನಿರ್ವಹಿಸಿದ್ದರು.ಕಾರಣಾಂತರಗಳಿಂದ ಈ ಧಾರಾವಾಹಿಗೆ ತಾರಕ್ ಪೊನ್ನಪ್ಪ ವಿದಾಯ ಹೇಳಿದ್ದಾರೆ.

VISTARANEWS.COM


on

Tarak Ponnappa out of udho udho sri renuka yellamma serial
Koo

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ದಲ್ಲಿ ರೇಣು ಮಹಾರಾಜನ ಪಾತ್ರದಲ್ಲಿ ತಾರಕ್ ಪೊನ್ನಪ್ಪ (Tarak Ponnappa) ಪಾತ್ರ ನಿರ್ವಹಿಸಿದ್ದರು.

ಕಾರಣಾಂತರಗಳಿಂದ ಈ ಧಾರಾವಾಹಿಗೆ ತಾರಕ್ ಪೊನ್ನಪ್ಪ ವಿದಾಯ ಹೇಳಿದ್ದಾರೆ. ಇನ್ನು ಮುಂದೆ ರೇಣು ಮಹಾರಾಜನ ಪಾತ್ರವನ್ನು ನಟ ಹರೀಶ್ ಪ್ರಭಾತ್ ನಿಭಾಯಿಸಲಿದ್ದಾರೆ.

ಈ ಧಾರಾವಾಹಿ ಶುರುವಾದಾಗಿನಿಂದಲೂ ತಾರಕ್ ಪೊನ್ನಪ್ಪ ಅವರು ರೇಣು ಮಹಾರಾಜನ ಪಾತ್ರವನ್ನು ನಿರ್ವಹಿಸಿದ್ದರು. ಅವರ ಘನತೆ ಗಾಂಭೀರ್ಯ ಅದ್ಭುತ ನಟನೆಗೆ ಜನರು ಖುಷಿಪಟ್ಟಿದ್ದರು.

‘ಅಜರಾಮರ’ ಸಿನಿಮಾದ ಮೂಲಕ ಹಿರಿತೆರೆಗೆ ಪದಾರ್ಪಣೆ ಮಾಡಿದ ತಾರಕ್‌ ಮುಂದೆ ‘ಬೃಹಸ್ಪತಿ’ ಸಿನಿಮಾದಲ್ಲಿ ನಟಿಸಿದ್ದರು. ‘ಕೆಜಿಎಫ್’ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್ ಆಗಿ ಅಭಿನಯಿಸಿದ ತಾರಕ್ ‘ಮೋಕ್ಷ’, ‘ಯುವರಾಜ’ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ದ್ದರು.

ಇದನ್ನೂ ಓದಿ: Junior NTR: ಬಿಗ್‌ ಅಪ್‌ಡೇಟ್‌ ಹಂಚಿಕೊಂಡ ಜ್ಯೂನಿಯರ್‌ ಎನ್‌ಟಿಆರ್‌-ಪ್ರಶಾಂತ್​ ನೀಲ್!

ಈಗ ತಾರಕ್‌ ಅವರಿಗೆ ಬೇರೆ ಕೆಲಸಗಳ, ಕಮಿಟ್‌ಮೆಂಟ್‌ ಗಳಿರುವುದರಿಂದ ತಾರಕ್ ಪೊನ್ನಪ್ಪ ತಮ್ಮ ಪಾತ್ರಕ್ಕೆ ವಿದಾಯ ಹೇಳಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

Continue Reading
Advertisement
dina bhavishya read your daily horoscope predictions for April 25 2024
ಭವಿಷ್ಯ28 seconds ago

Dina Bhavishya : ಇಂದು ಈ ನಾಲ್ಕು ರಾಶಿಯವರಿಗೆ 4 ಲಕ್ಕಿ ನಂಬರ್!

PM
ದೇಶ1 hour ago

ಪ್ರಧಾನಿ ವಿರುದ್ಧ ಪಿತೂರಿ ನಡೆಸುವುದು ದೇಶದ್ರೋಹ; ದೆಹಲಿ ಹೈಕೋರ್ಟ್ ಮಹತ್ವದ ಆದೇಶ

Union Minister Pralhad Joshi Statement in Unakal
ಹುಬ್ಬಳ್ಳಿ1 hour ago

Lok Sabha Election 2024: ಹಿಂದೂ ಧರ್ಮದ ಉಳಿವಿಗಾಗಿ ಮತ್ತೆ ಮೋದಿ ಬೆಂಬಲಿಸಿ: ಪ್ರಲ್ಹಾದ್‌ ಜೋಶಿ

DC vs GT
ಕ್ರೀಡೆ2 hours ago

DC vS GT: ಗುಜರಾತ್​ ವಿರುದ್ಧ ಡೆಲ್ಲಿಗೆ ರೋಚಕ ಗೆಲುವು ; ಪ್ಲೇ ಆಫ್​ ರೇಸ್ ಜೀವಂತ

PUBG Love
ದೇಶ2 hours ago

PUBG Love: ಪಬ್ಜಿ ಆಡುವಾಗ ಸಿಕ್ಕ ಮುಸ್ಲಿಂ ಯುವಕನ ಜತೆ ಹಿಂದು ಯುವತಿ ಮದುವೆ; ಈಗ ಬಾಳೇ ನರಕ!

Nada Gheethe
ಪ್ರಮುಖ ಸುದ್ದಿ2 hours ago

‌Nada Geethe: ನಾಡಗೀತೆ ವಿವಾದ; ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ತಿರಸ್ಕಾರ ಮಾಡಿದ ಹೈಕೋರ್ಟ್

Sachin Tendulkar Birthday
ಕ್ರೀಡೆ2 hours ago

Sachin Tendulkar Birthday: ಎಐ ತಂತ್ರಜ್ಞಾನದ ಮೂಲಕ ತೆಂಡೂಲ್ಕರ್​ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಐಸಿಸಿ

PM Narendra Modi
ಕರ್ನಾಟಕ2 hours ago

PM Narendra Modi: ಪ್ರಧಾನಿ ಮೋದಿಗೆ ‘ಪ್ರಾಮಿಸ್ಡ್ ನೇಷನ್’ ಪುಸ್ತಕ ಅರ್ಪಣೆ

Chikkaballapur Lok Sabha Constituency Congress candidate Raksha Ramaiah election campaign in Nelamangala
ಚಿಕ್ಕಬಳ್ಳಾಪುರ3 hours ago

Lok Sabha Election 2024: ನೆಲಮಂಗಲದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ

Sunetra Pawar
ದೇಶ3 hours ago

Sunetra Pawar: 25 ಸಾವಿರ ಕೋಟಿ ರೂ. ಹಗರಣ; ಅಜಿತ್‌ ಪವಾರ್‌ ಪತ್ನಿ ಸುನೇತ್ರಾಗೆ ಕ್ಲೀನ್‌ಚಿಟ್!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ20 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌