ನಾ ಕಂಡ ಕಾಂತಾರ | ನಕಲಿ ನಾಸ್ತಿಕ ಜಗತ್ತು ಮತ್ತು ಅಸಲಿ ಆಸ್ತಿಕ ಜಗತ್ತಿನ ನಡುವಿನ ಹೋರಾಟ! - Vistara News

ಅಂಕಣ

ನಾ ಕಂಡ ಕಾಂತಾರ | ನಕಲಿ ನಾಸ್ತಿಕ ಜಗತ್ತು ಮತ್ತು ಅಸಲಿ ಆಸ್ತಿಕ ಜಗತ್ತಿನ ನಡುವಿನ ಹೋರಾಟ!

ಕಥೆಯ ಮೂಲಕ, ಭಾವನೆಗಳ ಮೂಲಕ, ಅಭಿನಯದ ಮೂಲಕ, ಭಾಷೆಯ ಗಡಿಯನ್ನು ದಾಟಿ, ಸಂಸ್ಕೃತಿಯ ವೈವಿಧ್ಯತೆ ವ್ಯತ್ಯಾಸಗಳನ್ನು ಮೀರಿ ಕಾಂತಾರ ಗೆದ್ದಿದೆ.

VISTARANEWS.COM


on

Kantara Review
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
nityananda

| ನಿತ್ಯಾನಂದ ವಿವೇಕವಂಶಿ

ಕಾಂತಾರ ಚಿತ್ರ ಇಡೀ ದೇಶದಾದ್ಯಂತ ಸುದ್ದಿ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಬದಲಾದ ಪ್ರಪಂಚದಲ್ಲಿ ಸಿನಿಮಾದ ಯಶಸ್ಸನ್ನು ಅದು ಎಷ್ಟು ದುಡ್ಡು ಗಳಿಸುತ್ತಿದೆ ಎಂಬುದರ ಆಧಾರದ ಮೇಲೆ ನಿರ್ಧರಿಸಲು ಆರಂಭಿಸಿದ ಮೇಲೆ ಸಿನಿಮಾ ಒಂದು ಕಲೆಯಾಗಿ ಮತ್ತು ಮಾಧ್ಯಮವಾಗಿ ತನ್ನ ಪಾವಿತ್ರ್ಯವನ್ನು ಕಳೆದುಕೊಂಡಿದೆ. ಅಬ್ಬರದ ಪ್ರಚಾರ ಸಿನಿಮಾವನ್ನು ಒಂದು ಮಾರಾಟದ ಸರಕಾಗಿಸಿದೆ. ಪ್ರಚಾರವನ್ನು ಅತಿ ಎನ್ನಿಸುವಷ್ಟು ಹೆಚ್ಚು ಮಾಡಿ, ಟಿಕೆಟ್‌ಗಳಿಗೆ ಡಿಮ್ಯಾಂಡ್ ಹುಟ್ಟಿಸಿ, ಫಸ್ಟ್ ಡೇ ಫಸ್ಟ್ ಶೋ ಹಪಹಪಿ ಹುಟ್ಟಿಸಿ, ಟಿಕೆಟ್ ಬೆಲೆಯನ್ನು ಯದ್ವಾ ತದ್ವಾ ಫಿಕ್ಸ್ ಮಾಡಿ, ತಮ್ಮದೇ ಅಭಿಮಾನಿಗಳ ವರ್ಗದಿಂದ ಟೇಕಾಫ್ ಮಾಡಿಸಿ, ಚಿತ್ರದಲ್ಲೇನೂ ಕಂಟೆಂಟ್ ಇದ್ದರೂ ಇಲ್ಲದಿದ್ದರೂ, ಕೆಲವೇ ದಿನಗಳಲ್ಲಿ ಕೋಟಿ ಕ್ಲಬ್ ಸೇರಿಸಿ ಚಿತ್ರ ಯಶಸ್ವಿಯಾಯಿತು ಎಂದು ಬೆನ್ನು ತಟ್ಟಿಕೊಳ್ಳುವ ವಿಚಿತ್ರ ಮಾರ್ಕೆಟಿಂಗ್ ಪದ್ಧತಿ ಶುರುವಾಗಿದೆ. ಚಿತ್ರ ನೋಡದವರಿಗೆ ನೀವಿನ್ನೂ ನೋಡಿಲ್ವಾ? ಅನ್ನುವ ಕೀಳರಿಮೆ ಹುಟ್ಟಿಸಿ, ಚಿತ್ರಮಂದಿರಕ್ಕೆ ಸೆಳೆತಂದು ದುಡ್ಡು ಕೀಳುವ ವಿಚಿತ್ರ ತಂತ್ರವದು. ಅದು ಕೆಜಿಎಫ್ ಇರಲಿ, ವಿಕ್ರಾಂತ್ ರೋಣ ಇರಲಿ ಅಥವಾ ಕಾಂತಾರವೇ ಇರಲಿ ಪ್ರಚಾರ ಸಿನಿಮಾ ಲೋಕವನ್ನು ಆಳುತ್ತಿದೆ ಅನ್ನೋದು ಶುದ್ಧ ಸತ್ಯ. ಆದರೆ ಇದೆಲ್ಲದರ ನಡುವೆ ಸಿನಿಮಾ ಮಂದಿರಕ್ಕೆ ಹೋಗಿ ಕುಳಿತ ಪ್ರೇಕ್ಷಕ ಮಹಾಪ್ರಭುವಿಗೆ ಕೊಟ್ಟ ದುಡ್ಡಿಗೆ ಮೋಸವಿಲ್ಲ ಅಂತ ಅನ್ನಿಸುವಂತೆ ಮಾಡುವುದು ಅತ್ಯಂತ ದೊಡ್ಡ ಸವಾಲು. ಈ ಸವಾಲಿನಲ್ಲಿ ಕಾಂತಾರ ನಿಜಕ್ಕೂ ಗೆದ್ದಿದೆ. ಚಿತ್ರ ನೋಡಿದ ಪ್ರೇಕ್ಷಕನಿಗೆ ಕೊಟ್ಟ ದುಡ್ಡಿಗೆ ಚೂರೂ ಮೋಸವಿಲ್ಲದ ಹಾಗೆ ಹೊಸದೊಂದು ತುಂಬು ಅನುಭವವನ್ನು ನೀಡುವಲ್ಲಿ ಚಿತ್ರ ಯಶಸ್ವಿಯಾಗಿದೆ.

ಸಾಮಾನ್ಯವಾಗಿ ದೈವಭಕ್ತಿ ಅಂದ್ರೆ ದೇವರ ಮೇಲಿನ ಭಕ್ತಿ ಅಂತ ಅರ್ಥವೇ ಹೊರತು ಇಲ್ಲಿ “ದೈವ” ಅನ್ನೋ ಪದವೊಂದಕ್ಕೆ ಬೇರೆ ಅರ್ಥವಿರಬಹುದು ಎಂಬ ಕಲ್ಪನೆಯೂ ಕೆಲವೇ ವಾರಗಳ ಹಿಂದೆ ಅನೇಕರಿಗೆ ಇರಲಿಲ್ಲ. ಕರಾವಳಿ ಭಾಗದ ಜನಗಳಿಗೆ ಸುಪರಿಚಿತವಾಗಿರುವ ಈ “ದೈವ” ಕರಾವಳಿಯನ್ನು ದಾಟಿ ಪಶ್ಚಿಮ ಘಟ್ಟಗಳನ್ನು ಇಳಿದು ಬಯಲುಸೀಮೆಗೆ ಬಂದಿಳಿದರೆ ಸಂಪೂರ್ಣ ಅಪರಿಚಿತ. ಸಮುದ್ರದಿಂದ ನೂರು ಕಿಲೋಮೀಟರ್ ಹಿಂದೆ ನಡೆದು ಬಂದುಬಿಟ್ಟರೆ ಯಾರಿಗೂ ಗೊತ್ತಿಲ್ಲದ ಈ ದೈವದ ಕುರಿತಾದ ಕಥೆಯನ್ನು ಹಿಡಿದು ದೈವವನ್ನೇ ಚಿತ್ರದ ಕೇಂದ್ರವಾಗಿಸಿ, ಇಡೀ ದೇಶವೇ ಅದನ್ನು ತುದಿಗಾಲಲ್ಲಿ ನಿಂತು ನೋಡುವಂತೆ ಮಾಡಿರುವುದು ಕಾಂತಾರ ಚಿತ್ರದ ಅತಿದೊಡ್ಡ ಯಶಸ್ಸು!

ಹೌದು! ಜನರಿಗೆ ಗೊತ್ತಿಲ್ಲದ ವಿಷಯವನ್ನು ಸಿನಿಮಾ ಮೂಲಕ ಗೊತ್ತುಮಾಡಿಸುವುಷ್ಟೇ ಅಲ್ಲದೇ, ಇಷ್ಟವಾಗುವಂತೆ ಮಾಡುವುದು ಸಾಮಾನ್ಯದ ಕೆಲಸವಲ್ಲ. ಬಹುಪಾಲು ನಿರ್ದೇಶಕರು ಜನರಿಗೆ ಅರ್ಥಮಾಡಿಸಲು ಹೋಗಿ ಇಷ್ಟವಾಗಿಸುವುದರಲ್ಲಿ ವಿಫಲವಾಗುತ್ತಾರೆ. ಕೆಲವರು ಇಷ್ಟಪಡಿಸಲು ಹೋಗಿ ಅರ್ಥವೇ ಆಗದಂತೆ ಮಾಡಿಬಿಡುತ್ತಾರೆ. ಆದರೆ ನಿರ್ದೇಶಕ ರಿಷಬ್ ಅರ್ಥ ಮಾಡಿಸಲೂ ಹೋಗದೇ, ಇಷ್ಟ ಪಡಿಸಲೂ ಹೋಗದೇ, ಅರ್ಥವನ್ನೂ ಮಾಡಿಸಿ, ಇಷ್ಟಪಡುವಂತೆಯೂ ಮಾಡಿಬಿಟ್ಟಿದ್ದಾರೆ. ಇನ್ ಫ್ಯಾಕ್ಟ್ ಕಾಂತಾರದಂತಾ ಚಿತ್ರವನ್ನು ಕರಾವಳಿಯನ್ನು ಹೊರತುಪಡಿಸಿ, ಬಯಲು ಸೀಮೆಯ ಅಥವಾ ದೈವ ಅನ್ನುವ ಕಾನ್ಸೆಪ್ಟಿನ ಬಗ್ಗೆ ಎಬಿಸಿಡಿ ಗೊತ್ತಿಲ್ಲದ ದೇಶದ ಇನ್ನಿತರ ಭಾಗದ ಪ್ರೇಕ್ಷಕರಿಗೆ ಅರ್ಥ ಮಾಡಿಸಲು ಚಿತ್ರವನ್ನು ತೋರಿಸುವ ಮೊದಲು ದೈವ ಅಂದರೇನು? ಅದರ ಹಿನ್ನೆಲೆ, ಆರಾಧನೆ, ನಂಬಿಕೆ ಇತ್ಯಾದಿ ಇತ್ಯಾದಿಗಳ ಬಗ್ಗೆ ಒಂದು ಪ್ರಾಥಮಿಕ ಮಾಹಿತಿ ಇರುವ ಒಂದು ಪುಟ್ಟ ಡಾಕ್ಯುಮೆಂಟರಿ ತೋರಿಸಬೇಕಾಗಿತ್ತು. ಪಂಜುರ್ಲಿ, ಕಾರಣಿಕ, ಗಗ್ಗರ, ಕೋಲ, ಲಗಾಡಿ, ಬೊಜ್ಜ ಇತ್ಯಾದಿ ಇತ್ಯಾದಿ ಪದಗಳ ಅರ್ಥ ತಿಳಿಸುವ ಚಿಕ್ಕ ಎಕ್ಸರ್ಸೈಸ್ ಅನ್ನೇ ಮಾಡಬೇಕಿತ್ತೇನೋ. ಒಂಥರಾ ಬ್ರಿಡ್ಜ್ ಕೋರ್ಸ್ ಮಾಡಿದಂತೆ! ಆದರೆ ಇದ್ಯಾವುದೂ ಇಲ್ಲದೇ ಕೇವಲ ಕಥೆಯ ಮೂಲಕ, ಭಾವನೆಗಳ ಮೂಲಕ, ಅಭಿನಯದ ಮೂಲಕ, ಭಾಷೆಯ ಗಡಿಯನ್ನು ದಾಟಿ, ಸಂಸ್ಕೃತಿಯ ವೈವಿಧ್ಯತೆ ವ್ಯತ್ಯಾಸಗಳನ್ನು ಮೀರಿ ಕಾಂತಾರ ಗೆದ್ದಿದೆ. ಇದಕ್ಕಾಗಿ ಕರಾವಳಿಗೆ ಸೇರದ ಹೊರವಲಯದ ಒಬ್ಬ ಪ್ರೇಕ್ಷಕನಾಗಿ ಚಿತ್ರರಸಿಕನಾಗಿ ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಚಿತ್ರದ ಹೆಸರೇ ಹೇಳುವಂತೆ ಅರಣ್ಯದೊಳಗಿನ ಗ್ರಾಮವೊಂದರಲ್ಲಿ ನಡೆವ ದೈವದ ಕಥೆ ಇದು. ಹಿಂದೆ ರಂಗಿತರಂಗ ಮತ್ತು ವಿಕ್ರಾಂತ್ ರೋಣ ಇದೇ ಪ್ಯಾಟರ್ನಿನ ಚಿತ್ರಗಳಾಗಿ ತೆರೆಕಂಡಿದ್ದರೂ ಅವೆರಡರಲ್ಲೂ ದೈವ ಅಥವಾ ಇನ್ನಿತರ ಶಕ್ತಿಗಳು ಒಂದು ಸಪೋರ್ಟಿವ್ ಸಬ್ಜೆಕ್ಟ್ ಆಗಿತ್ತು. ಆದರೆ ಈ ಚಿತ್ರದಲ್ಲಿ ಇಡೀ ಚಿತ್ರವೇ ದೈವದ ಮೇಲೆ ನಿಂತಿದೆ ಎಂದರೂ ತಪ್ಪಾಗಲಾರದು. ಟ್ರೈಲರ್‌ನಲ್ಲಿ ನೀವೆಲ್ಲಾ ನೋಡಿರುವ ಹಾಗೆ ಚಿತ್ರದ ಶೀರ್ಷಿಕೆಯಲ್ಲಿ (0) ಸೊನ್ನೆಯ ರೂಪದಲ್ಲಿ ಪಂಜು ಹಿಡಿದು ಸುತ್ತುವ ದೈವವನ್ನು ಸಾಂಕೇತಿಕವಾಗಿ ಕಾಣಿಸುವಂತೆ ಹೇಗೆ ಮಾಡಿದ್ದಾರೋ, ಹಾಗೆಯೇ ಇಡೀ ಚಿತ್ರವೇ ದೈವಕೇಂದ್ರಿತವಾಗಿ ನಿರ್ಮಿತವಾಗಿದೆ. ಆದರೆ ಅದರ ನಡುವಲ್ಲಿ ಶಿವನೆಂಬ ಸಾಮಾನ್ಯ ಮುಗ್ಧ ಆದರೆ ಒರಟ ಯುವಕನೊಬ್ಬನ ಪಾತ್ರ ಮತ್ತು ಅವನೊಟ್ಟಿಗೆ ನಿಷ್ಠಾವಂತ ಅರಣ್ಯಾಧಿಕಾರಿಯೊಬ್ಬನ ಪಾತ್ರ ಮತ್ತು ಗೋಮುಖ ವ್ಯಾಘ್ರನಾಗಿರುವ ಊರಿನ ಧಣಿ ಅಂದರೆ ಜಮೀನ್ದಾರನೊಬ್ಬನ ಪಾತ್ರಗಳು ಪ್ರಧಾನ ಭೂಮಿಕೆಯಲ್ಲಿವೆ. ಚಿತ್ರದುದ್ದಕ್ಕೂ ಈ ಮೂರು ಪ್ರಮುಖ ಪಾತ್ರಗಳು ದೈವವೆಂಬ ಆಟಮ್ಮಿನ ಒಳಗೆ ಪ್ರೋಟಾನ್ ನ್ಯೂಟ್ರಾನ್ ಮತ್ತು ಎಲೆಕ್ಟ್ರಾನುಗಳಂತೆ ನಿಲ್ಲುವ, ಓಡಾಡುವ ಅಥವಾ ಸುತ್ತುವ ಕಾರ್ಯದಲ್ಲಿ ನಿರತವಾಗಿರುತ್ತವೆ. ಆದರೆ ಕಡೆಗೆ ಆ ಎಲ್ಲ ಪಾತ್ರಗಳೂ ದೈವದ ಅಬ್ಬರದ ಒಳಗೆ ಕರಗಿಹೋಗುತ್ತವೆ. ಅಂತಿಮವಾಗಿ ವರಾಹ ರೂಪದ ದೈವವು ಇಡೀ ಕಾಡಿನ ರಕ್ಷಕನಾಗಿ ತಾನೇ ತಾನಾಗಿ ವಿಜೃಂಭಿಸುತ್ತದೆ. ಇದು ಚಿತ್ರದ ಒಂದು ರಫ್ ಸ್ಕೆಚ್. ಆದರೆ ಇಷ್ಟರೊಳಗೆ ನಿರ್ದೇಶಕರು ಕಟ್ಟಿಕೊಟ್ಟಿರುವ ವರ್ಣರಂಜಿತ ಅದ್ಭುತ ಮಾಯಾಲೋಕ ಅವರ ಅಪಾರವಾದ ಸೃಜನಶೀಲತೆಗೆ ಹಿಡಿದ ಕೈಗನ್ನಡಿ. ಅದನ್ನು ಚಿತ್ರ ನೋಡಿಯೇ ಅನುಭವಿಸಬೇಕು.

ಇದನ್ನೂ ಓದಿ | ದೃಶ್ಯ ಕಾವ್ಯ | ಕಾಂತಾರ ಸಿನೆಮಾ ನನಗೇಕೆ ಇಷ್ಟವಾಯಿತು?

ಚಿತ್ರದಲ್ಲಿ ನನಗೆ ವಯಕ್ತಿಕವಾಗಿ ಇಷ್ಟವಾದದ್ದು:

೧. ಕಥೆಯ ಆಯ್ಕೆ: ಸಹಿಪ್ರಾ ಶಾಲೆ ಕಾಸರಗೋಡು ಚಿತ್ರದಲ್ಲೇ ರಿಷಬ್ ಶೆಟ್ಟಯವರ ಅನನ್ಯತೆ ಅರ್ಥವಾಗಿತ್ತು. ಶಂಕರ್‌ನಾಗ್ ನಂತರ ಕನ್ನಡ ಚಿತ್ರರಂಗ ಕಾಣುತ್ತಿರುವ ಅಪರೂಪದ ಪ್ರತಿಭೆ ರಿಷಬ್. ಸದಭಿರುಚಿಯ ಸವಾಲಿನ ಕಥೆಗಳನ್ನು ಆರಿಸುವ ಅವರ ಇಂಥಾ ಆಸಕ್ತಿ ಬಹುವಾಗಿ ಇಷ್ಟವಾಯಿತು. ಕಾಂತಾರವೂ ಅಂತಹುದೇ ಒಂದು ಸದಭಿರುಚಿಯ ಚಿತ್ರ. ಕನ್ನಡ ಸಿನಿಮಾ ಲೋಕದಲ್ಲಿ ಕೇವಲ ಮಚ್ಚು ಕೊಚ್ಚು ಹೊಡಿ ಬಡಿಗಳು ಕಡಿಮೆಯಾಗಿ ಇಂಥಾ ಕಥಾಕೇಂದ್ರಿತ ಸಿನಿಮಾಗಳು ಇನ್ನಷ್ಟು ಬರಲಿ ಎಂಬ ಹಾರೈಕೆ ನನ್ನದು.

೨. ಅಭಿನಯ: ಕೊನೆಯ 20 ನಿಮಿಷಗಳ ರಿಷಬ್‌ರ ಅಭಿನಯ ನಮ್ಮ ಮನಸ್ಸಿನಿಂದ ರಿಷಬ್‌ರನ್ನೇ ಮರೆಸುತ್ತದೆ ಎಂದರೆ ನಟನಾಗಿ ಅವರ ಯಶಸ್ಸನ್ನು ನೀವು ಅಳತೆ ಮಾಡಬಹುದು. ದೈವ ನರ್ತಕನಾಗಿ ಕ್ಷೇತ್ರರಕ್ಷಕನಾಗಿ ಅವರ ಅಭೂತಪೂರ್ವ ಅಭಿನಯ ಅವರನ್ನು ಕನ್ನಡ ಚಿತ್ರರಂಗದ ಪ್ರಮುಖ ನಟರ ಸಾಲಿಗೆ ತಂದು ನಿಲ್ಲಿಸಿದೆಯೆಂದರೆ ಅತಿಶಯೋಕ್ತಿಯಲ್ಲ. ರಿಷಬ್ ಮಾತ್ರವಲ್ಲದೇ ಅಭಿನಯಿಸಿರುವ ತಾರಾಗಣದ ಎಲ್ಲರದ್ದೂ ಸಹಜ ಹಾಗೂ ಪರಿಪೂರ್ಣ ಅಭಿನಯ. ಅರಣ್ಯಾಧಿಕಾರಿ ಮುರಳಿಯ ಪಾತ್ರದಲ್ಲಿ ಕಿಶೋರ್, ಧಣಿಯ ಪಾತ್ರದಲ್ಲಿ ಅಚ್ಯುತ್, ಶಿವನ ತಾಯಿಯ ಪಾತ್ರದಲ್ಲಿ ಮಾನಸಿ ಸುಧೀರ್, ಪ್ರೇಯಸಿಯ ಪಾತ್ರದಲ್ಲಿ ಸಪ್ತಮಿ ಗೌಡ, ಶಿವನ ಗೆಳೆಯರ ಪಾತ್ರ, ಧಣಿಯ ಹಿಂಬಾಲಕರ ಪಾತ್ರ, ಪ್ರತಿಯೊಬ್ಬರೂ ತಮ್ಮ ಸಂಪೂರ್ಣ ಅಭಿನಯ ಸಾಮರ್ಥ್ಯವನ್ನು ಸಮರ್ಪಿಸಿದ್ದಾರೆ. ಚಿತ್ರದ ಆರಂಭದಲ್ಲಿನ ರಾಜನ ಪಾತ್ರ, ಅವನೆದುರು ನಿಲ್ಲುವ ದೈವದ ಪಾತ್ರ ಪ್ರತಿಯೊಬ್ಬ ನಟನ ಆಯ್ಕೆಯೂ ಪಾತ್ರಕ್ಕೆ 100% ಒಪ್ಪುವಂಥವೇ ಆಗಿದೆ. ಅದರಲ್ಲೂ ಗುರುವನ ಪಾತ್ರಕ್ಕೆ ಸ್ವರಾಜ್ ಶೆಟ್ಟಿ ಎಂಬ ಹುಡುಗನ ಆಯ್ಕೆ ಹೇಳಿ ಮಾಡಿಸಿದಂತಿದೆ. ಮುಗ್ಧತೆ ಮತ್ತು ದೈವಿಕತೆಯೇ ತುಂಬಿರುವ ಆ ಪಾತ್ರ ಚಿಕ್ಕದಾಗಿದ್ದರೂ ನೆನಪಿನಲ್ಲಿ ಉಳಿಯುತ್ತದೆ.

೩. ಛಾಯಾಗ್ರಹಣ: ಅರಣ್ಯದೊಳಗಿನ ಕ್ಯಾಮೆರಾದ ಚಲನೆ ಅದ್ಭುತವಾಗಿದೆ. ಹಾಗೆಯೇ ಕಂಬಳದ ಗದ್ದೆಯೊಳಗೂ ಸಹಾ! ಬೆಳಕು ಮತ್ತು ಕತ್ತಲೆಯ ನಡುವೆ ನಡೆಯುವ ಆಟ ಕಣ್ಣಿಗೆ ಮುದ ನೀಡುತ್ತದೆ. ಕೊನೆಯ ದೃಶ್ಯಗಳಲ್ಲಿ ದೈವದ ಅಬ್ಬರವನ್ನು ಹೇಗೆ ತೋರಿಸಿದೆಯೋ ಅಷ್ಟೇ ಅದ್ಭುತವಾಗಿ ಕೋಲದ ದೈವದ ಕಳೆಯನ್ನೂ ಅಷ್ಟೇ ವರ್ಣರಂಜಿತವಾಗಿ ಕಟ್ಟಿಕೊಟ್ಟಿದೆ.

೪. ಸಂಕಲನ: ಇತ್ತೀಚಿನ ಬಹು ಯಶಸ್ವಿ ಸಿನಿಮಾಗಳಂತೆ ಒಂದು ಸೆಕೆಂಡಿನ ದೃಶ್ಯವನ್ನು ಹತ್ತು ಭಾಗ ಮಾಡದಿರುವುದು ಛಾಯಾಗ್ರಾಹಕರ ಹೆಗ್ಗಳಿಕೆ. ಅವಶ್ಯಕತೆ ಇಲ್ಲದ ಕಡೆ ತಂತ್ರಜ್ಞಾನದ ಹೆಸರಿನಲ್ಲಿ ಕತ್ತರಿ ಹಾಕುವ ಅಂಟಿಸುವ ಅನವಶ್ಯಕ ಕೆಲಸ ಇಲ್ಲಿ ನಡೆದಿಲ್ಲ. ಅದೇ ಸಂಕಲನಕಾರನ ಯಶಸ್ಸು.

೫. ಸಾಹಸ: ಸಂಪೂರ್ಣ ಸಹಜವಾಗಿದೆ. ಗಾಳಿಯಲ್ಲಿ ಹಾರುವ, ಎತ್ತಿ ಕಿಲೋಮೀಟರ್ ದೂರಕ್ಕೆ ಬಿಸಾಡುವ ಅಸಹಜ ಸ್ಟಂಟ್‌ಗಳಿಲ್ಲ. ಸಹಜ ಹೊಡೆದಾಟವನ್ನೇ ರೋಚಕವಾಗಿ‌ ಕಟ್ಟಿಕೊಟ್ಟಿದ್ದಾರೆ. ಕಮ್ಮಾರನ ಅಂಗಡಿಯ ಹೊಡೆದಾಟ ಮತ್ತು ಕಂಬಳ ಗದ್ದೆಯ ಹೊಡೆದಾಟವೆರಡೂ ರೋಚಕವಾಗಿವೆ‌.

೬. ಸಂಗೀತ: ಚಿತ್ರದ ಮಹತ್ವದ ಅಂಶಗಳಲ್ಲಿ ಒಂದು. ಇಡೀ ಚಿತ್ರದಲ್ಲಿ ಆವರಿಸಿಕೊಳ್ಳುವ ಮೂರು ಹಿನ್ನೆಲೆ ಸಂಗೀತ ಅಥವಾ ಬಿಜಿಎಂ ಅತ್ಯಂತ ಆಕರ್ಷಕವಾಗಿವೆ. ಕಥೆಯ ಓಟಕ್ಕೆ ಪೂರಕವಾಗಿದೆ. ವರಾಹ ರೂಪಂ ಅಂತೂ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ದೈವಿಕತೆಯ ಭಾವಕ್ಕೆ ಏರಿಸುತ್ತದೆ. ಹೀಗಾಗಿ ಈ ಗೀತೆ ಅದಾಗಲೇ ಸೂಪರ್ ಹಿಟ್ ಆಗಿದೆ. ಇನ್ನು ಶಿವ ಹಾಗೂ ಲೀಲಾರ ಪ್ರಣಯ ಸನ್ನಿವೇಶದ ಹಿನ್ನೆಲೆ ಗೀತೆಯೂ ಯುವ ಮನಸ್ಸುಗಳಿಗೆ ಮುದ ನೀಡುತ್ತದೆ.

೭. ಸಂಭಾಷಣೆ: ಸಂಭಾಷಣೆಯು ಭಾಷೆಯ ಕಾರಣದಿಂದ ಎಲ್ಲರಿಗೂ ಅರ್ಥವಾಗುವುದು ಕಷ್ಟ. ಕೆಲವೊಮ್ಮೆ ಅಡಿಯಲ್ಲಿ ಸಬ್ ಟೈಟಲ್ ಕೊಡುವುದರಿಂದ ಅನುಕೂಲವಾಗಿದೆ. ಆದರೆ ಸಹಜವಾಗಿ ಮೂಡಿಬರಬೇಕೆನ್ನುವ ಕಾರಣಕ್ಕೋ ಏನೋ ವೇಗದ ಮಾತುಗಳು ಸ್ಥಳೀಯರಿಗಲ್ಲದೇ ಬೇರೆಯವರಿಗೆ ಅರ್ಥವಾಗದ ಪದಗಳು ಮಧ್ಯೆ ಮಧ್ಯೆ ಪ್ರೇಕ್ಷಕನಿಗೆ ಕಿರಿಕಿರಿ ಮಾಡುವುದು ಸತ್ಯ. ತಮಿಳು, ತೆಲುಗು, ಹಿಂದಿ, ಮಲಯಾಳಂಗೆ ಡಬ್‌ ಮಾಡಿದಂತೆ ಮೈಸೂರು ಕನ್ನಡಕ್ಕೂ ಡಬ್ ಮಾಡಿದರೆ ಇನ್ನೂ ಚೆನ್ನಾಗಿ ಅರ್ಥವಾಗುತ್ತದೇನೋ ಎನ್ನುವಷ್ಟು ಸಮಸ್ಯೆಯಾಗುತ್ತದೆ. ಆದರೆ ಹಾಗೆ ಮಾಡಿದರೆ ಚಿತ್ರದ ಮೂಲ ಸೊಗಡೇ ಮರೆಯಾಗಿಬಿಡುವ ಅಪಾಯವಿರುತ್ತದೆ. ಹೀಗಾಗಿ ಎರಡು ಮೂರು ಸಲ ಚಿತ್ರ ನೋಡುವುದೊಂದೇ ಚಿತ್ರವನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳಲು ಇರುವ ಪರಿಹಾರ.

ಇದನ್ನೂ ಓದಿ | ತ್ರಯಸ್ಥ ಅಂಕಣ | ಮೋದಿಯಿಸಂನ ಉಚ್ಛ್ರಾಯ ಕಾಲದಲ್ಲಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?

೮. ಹಾಸ್ಯ: ಇಡೀ ಸಿನಿಮಾ ಗಂಭೀರ ಕಥೆಯಿಂದ ಕೂಡಿದ್ದರೂ ತಿಳಿ ಹಾಸ್ಯದಿಂದ ತುಂಬಿಹೋಗಿದೆ. ಹೀಗಾಗಿಯೇ ಇಡೀ ಸಿನಿಮಾ ಎಲ್ಲೂ ಬೋರ್ ಆಗುವುದಿಲ್ಲ. ಕೆಲವು ಕಡೆಗಳಲ್ಲಿ ಅಶ್ಲೀಲವೆನಿಸುವ ಸಂಭಾಷಣೆ ಮತ್ತು ಹಾಸ್ಯ ಸನ್ನಿವೇಶಗಳಿದ್ದರೂ ಕಥೆಗೆ ಮತ್ತು ಅಲ್ಲಿನ ಸನ್ನಿವೇಶಕ್ಕೆ ಅದು ಪೂರಕವಾಗಿರುವುದರಿಂದ ನೈಜತೆಯ ಸ್ಪರ್ಶವನ್ನು ನೀಡಿದೆ. ಕಾಡಿನ ಅವಿದ್ಯಾವಂತ ಜನರ ನಡುವೆ ಸಹಜವಾಗಿ ನಡೆಯುವ ಇಂಥಾ ಹಾಸ್ಯಗಳು ಅಶ್ಲೀಲವಾಗಿದ್ದರೂ ಸಹಜವಾಗಿರುವುದರಿಂದ ಅದನ್ನು ತಪ್ಪೆನ್ನಲಾಗದು.

೯. ವೇಷಭೂಷಣ, ಮೇಕಪ್ ಮತ್ತು ಸೆಟ್: ಅದ್ಭುತ ಮತ್ತು ಪರಿಪೂರ್ಣತೆಯನ್ನು ಅವಾಹಿಸಿಕೊಂಡಿದೆ. ದೈವದ ಸುಂದರ ಅರಿಶಿನ ಮುಖಬಣ್ಣ ಮತ್ತು ವೈಭವಯುತ ವೇಷಭೂಷಣ ಹಾಗೂ ಆಭರಣದಷ್ಟೇ ಸುಂದರವಾಗಿ ಕಂಬಳದಲ್ಲಿ ಓಡುವಾಗ ಶಿವನ ಬಾಯ ಕೆಂಪು ಮತ್ತು ಹಲ್ಲಿನ ಹಳದಿ ಅತ್ಯಂತ ಸಹಜವಾಗಿ ತೋರಿಸಲ್ಪಟ್ಟಿದೆ. ಧಣಿಯ ಶುಭ್ರ ಬಟ್ಟೆ, ಗುರುವನ ಶ್ವೇತವಸ್ತ್ರ, ಶಿವನ ತಾಯಿಯ ಹರಿದ ಕೊಳಕು ಬಟ್ಟೆ ಮತ್ತು ಲೀಲಾಳ ಡೀಗ್ಲಾಮರಸ್ ಮುಖದ ಬಣ್ಣ ಅನೇಕ ಸಣ್ಣ ಸಣ್ಣ ಸಂಗತಿಗಳನ್ನು ಹೇಳುವ ಮೂಲಕ ಚಿತ್ರಕ್ಕೆ ನೈಜತೆ ಮತ್ತು ಸಹಜತೆಗಳ ಉಡುಗೊರೆ ನೀಡಿದೆ. ಹಳ್ಳಿಯ ಮನೆಗಳು, ರಸ್ತೆಗಳು, ಕೈಲಾಸವೆಂಬ ಮರದ‌ ಮೇಲಿನ ಅಟ್ಟಣಿಗೆ ಎಲ್ಲವೂ ನೈಜ ಮತ್ತು ಸುಂದರ.

೧೦. ನೀತಿ: ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ರಕ್ಷೆ. ಸತ್ಯಮೇವ ಜಯತೇ ಎಂಬ ಸನಾತನ ಸತ್ಯವನ್ನು ಸಿನಿಮಾದ‌ ಮೂಲಕ ಸಾರಲಾಗಿದೆ. ನಂಬಿದ ದೈವ ನಂಬಿದವರನ್ನು ಖಂಡಿತಾ ಕಾಯುತ್ತದೆ ಎಂಬ ಕರಾವಳಿ ಮಾತ್ರವಲ್ಲದೇ ಭಾರತೀಯ ಅಥವಾ ವಿಶ್ವದ ಆಸ್ತಿಕ ಸಮುದಾಯದ ನಂಬಿಕೆ ಚಿತ್ರದಲ್ಲಿ ಪ್ರತಿಧ್ವನಿಸಿದೆ. ಹಿಂದು ಧರ್ಮದ ವಿಶಿಷ್ಠ ನಂಬಿಕೆಯಾದ ವೈಜ್ಞಾನಿಕ ಕರ್ಮ ಸಿದ್ಧಾಂತ ಈ ಕಥೆಯಲ್ಲಿ ಸತ್ಯವೆಂದು ನಿರೂಪಿಸಲ್ಪಟ್ಟು ಪ್ರೇಕ್ಷಕರ ನಂಬಿಕೆ ಹಾಗೂ ಭಾವನೆಗಳ ಬೇರುಗಳನ್ನು ಗಟ್ಟಿಗೊಳಿಸುತ್ತದೆ. ಚಿತ್ರದ ಕೊನೆಗೆ ಪ್ರೇಕ್ಷಕರು ಸ್ವಯಂಪ್ರೇರಿತರಾಗಿ ತಮಗರಿವಿಲ್ಲದೇ ಜೋರಾಗಿ ತಟ್ಟುವ ಚಪ್ಪಾಳೆಗಳೇ ಇದಕ್ಕೆ ಸಾಕ್ಷಿ. ಇನ್ನು ಚಿತ್ರದಲ್ಲಿ ಮಾರ್ಮಿಕವಾಗಿ ತೋರಿರುವ ಸಮಾಜದ ಮೇಲು‌ ಕೀಳು ಭಾವನೆಯ ಕುರಿತಾದ ದೃಶ್ಯ ಮತ್ತು ಸಂಭಾಷಣೆಗಳು ಮಾರ್ಮಿಕವಾಗಿವೆ. ಧಣಿಗಳು ಸಾಮಾನ್ಯ ಜನರನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುವುದು. ಮನುಷ್ಯನನ್ನು ನಾಯಿಯಂತೆ ಕಾಣುವುದು. ಶಿವ ಧಣಿಯ ಮನೆಯೊಳಗೆ ಪ್ರವೇಶ ಮಾಡಿ ಅವನ‌ ಸಮ ಕೂತು ಊಟ ಮಾಡಿ ಅದಕ್ಕೆಲ್ಲಾ ಉತ್ತರ ನೀಡುವ ಬಂಡಾಯಗಾರನಂತೆ ಕಂಡರೂ ಅದರ ಗೂಡಾರ್ಥ ಬೇರೆ ಇದೆ. ದೈವಾಕರ್ಷಣೆಯಾದ ನಂತರದ “ಶುದ್ಧ”ವಾದ ಶಿವನ ಕೈಲಿ ಈ ಕೆಲಸವನ್ನು ಮಾಡಿ ತೋರಿಸುವ ಮೂಲಕ ದೇವರಿಗೆ ಅಥವಾ ದೈವಕ್ಕೆ ಜಾತಿಬೇಧ ಇನ್ನಿತರ ಯಾವುದೇ ಬೇಧಭಾವಗಳಿಲ್ಲ ಇದೆಲ್ಲಾ ಮನುಷ್ಯ ತಾನೇ ಸೃಷ್ಟಿಸಿಕೊಂಡಿರುವುದಷ್ಟೇ ಎನ್ನುವುದನ್ನು ಪ್ರತಿಪಾದಿಸುವುದೇ ಆಗಿದೆ. ಕೊಟ್ಟ ಮಾತಿಗೆ ತಪ್ಪುವುದು ಇಂದಿನ ಆಧುನಿಕ ಯುಗದಲ್ಲಿ ಸರ್ವೇಸಾಮಾನ್ಯವಾಗಿದ್ದರೂ, ಅದೆಲ್ಲಕ್ಕೂ ಮೀರಿದ ಸದಾ ಕಾಲ ಉಳಿಯುವ ಸರ್ವಕಾಲಿಕ ಸತ್ಯ ಮತ್ತು ಮೌಲ್ಯವೊಂದಿರುತ್ತದೆ ಎಂಬುದನ್ನು ಚಿತ್ರದ ಮೂಲಕ ತೋರಿಸಿ ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಿದೆ.

ಇದನ್ನೂ ಓದಿ | Kantara Movie | ವರ್ಲ್ಡ್‌ ಆಫ್‌ ಕಾಂತಾರ -ಭಾಗ 1 ವಿಡಿಯೊ ಹಂಚಿಕೊಂಡ ಹೊಂಬಾಳೆ : ಕಂಬಳ ಪ್ರಮುಖ ಹೈಲೈಟ್‌!

ಇನ್ನುಳಿದಂತೆ, ಎಲ್ಲ ಚಿತ್ರಗಳಂತೆ ಈ ಚಿತ್ರವೂ ನ್ಯೂನತೆಗೆ ಹೊರತಾದುದೇನಲ್ಲ. ಮೊದಲನೇ ನ್ಯೂನತೆ ಏನೆಂದರೆ ಚಿತ್ರದ ವಾರಸುದಾರರೆಂದು ಭಾವಿಸುತ್ತಿರುವ ಸ್ಥಳೀಯರೇ ಆಗಿದ್ದಾರೆ. ತಮಗೆ ಇಷ್ಟವಾದ ಚಿತ್ರ ಜಗತ್ತಿಗೇ ಇಷ್ಟವಾಗಬೇಕೆನ್ನುವ ಮನಸ್ಥಿತಿಯೇ ಮತಾಂಧತೆಯಾಗಿದೆ. ಹೇಗೆ ಕೆಲವು ಸಿನಿಮಾ ನಟರ ಭಕ್ತರು, ಟೀಕೆ ಅಥವಾ ವಿಮರ್ಶೆಗೆ ಸಲುವಾಗಿ ತಮ್ಮ ನೆಚ್ಚಿನ ನಟನ ಹೆಸರೆತ್ತಿದರೂ ಉರಿದು ಬೀಳುತ್ತಾರೋ ಹಾಗೆ ಕೆಲವರು ಈ ಸಿನಿಮಾದ ವಿಮರ್ಶೆಗೂ ಅವಕಾಶ ನೀಡದಂತೆ ಮುಗಿಬೀಳುತ್ತಿರುವುದು ಚಿತ್ರಕ್ಕೆ ಹಿನ್ನಡೆಯನ್ನು ತರುತ್ತದೆಯೇ ಹೊರತು ಮುನ್ನಡೆಯನ್ನಲ್ಲ. ವೈವಿಧ್ಯತೆಯನ್ನು ಗೌರವಿಸಿದಾಗ ಮಾತ್ರ ನಮ್ಮ ಸಂಸ್ಕೃತಿ ಪರರಿಗೆ ಇಷ್ಟವಾಗುತ್ತದೆಯೇ ಹೊರತು ಹೇರಿಕೆ ಅಥವಾ ಒತ್ತಾಯದ ಮೂಲಕವಲ್ಲ ಎಂಬುದನ್ನು ಅಭಿಮಾನಿ ದೇವರುಗಳು ಅರ್ಥ ಮಾಡಿಕೊಳ್ಳಬೇಕಾಗಿದೆ! ಇದು ಚಿತ್ರಕ್ಕೆ ಅಥವಾ ಚಿತ್ರತಂಡಕ್ಕೆ ಸಂಬಂಧಿಸಿಲ್ಲವಾದರೂ ಈ ಥರದ ಅಭಿಮಾನಿಗಳ ಅತಿರೇಕದ ನಡೆಗಳು ಚಿತ್ರಕ್ಕೆ ಸಲ್ಲುವ ಪೂರ್ಣ ಗೌರವವನ್ನು ಕಳಂಕಿತಗೊಳಿಸುತ್ತದೆ. ಅದು ಕೆಜಿಎಫ್ ಇರಬಹುದು, ವಿಕ್ರಾಂತ್ ರೋಣ ಇರಬಹುದು ಅಥವಾ ಕಾಂತಾರವೇ ಇರಬಹುದು. ಕೆಲವರಿಗೆ ಇಷ್ಟವಾಗಬಹುದು ಇಷ್ಟವಾಗದೇ ಇರಬಹುದು ಅದನ್ನು ಒಪ್ಪುವ ಅಥವಾ ಅದನ್ನು ಬದಿಗಿಡುವ ಸೌಜನ್ಯ ನಮ್ಮ ಸಂಸ್ಕೃತಿಗೆ ಇನ್ನಷ್ಟು ಗೌರವ ತಂದುಕೊಡುತ್ತದೆ.

ಯಾವ ಚಿತ್ರವೇ ಆಗಲಿ ಅದು ಸಮಾಜಸೇವೆ ಮಾಡುವುದಿಲ್ಲ. ಅದರಲ್ಲೂ ಇತ್ತೀಚಿಗಂತೂ ಹಣಗಳಿಕೆಯೇ ಪ್ರಧಾನವಾಗಿರುತ್ತದೆ. ದೊಡ್ಡ ಮನಸ್ಸು ಮಾಡಿ ಕಲಾವಿದರೋ ನಿರ್ದೇಶಕರೋ ಪ್ಯಾಶನ್‌ಗೆ ಮಾಡಿದ್ದಾರೆ ಎಂದುಕೊಂಡುಬಿಟ್ಟರೂ ಚಿತ್ರಕ್ಕೆ ಹಣ ಹೂಡಿದ ನಿರ್ಮಾಪಕ ಅಥವಾ ನಿರ್ಮಾಣ ಸಂಸ್ಥೆಯು ಸಮಾಜೋದ್ಧಾರವನ್ನೇ ಪ್ರಧಾನವನ್ನಾಗಿಸಿಕೊಂಡು ಚಿತ್ರ ಮಾಡಿರುವುದಿಲ್ಲ. ಹೀಗಾಗಿ ಜನಸಾಮಾನ್ಯರೇ ಯಾವುದೋ ಭಾವನಾತ್ಮಕ ಕಾರಣಗಳನ್ನಿಟ್ಟುಕೊಂಡು ಚಿತ್ರದ ಗೆಲುವಿಗಾಗಿ ಕಾಲಾಳುಗಳಂತೆ ಬಡಿದಾಡುವುದು ಅಷ್ಟು ಸೆನ್ಸಿಬಲ್ ಅನ್ನಿಸುವುದಿಲ್ಲ. ಈ ಚಿತ್ರದ ಮೂಲಕ ರಿಷಬ್ ಶೆಟ್ಟಿಯವರು ಹಿಂದು ಧರ್ಮದ ಪುನರುತ್ಥಾನ ಮಾಡಿಬಿಟ್ಟರು ಎನ್ನುವಷ್ಟು ಮರುಳಾಗುವುದು ಪ್ರಾಕ್ಟಿಕಲ್ ಅಲ್ಲ. ಅಭಿಮಾನದ ಅತಿರೇಕ ಕೆಲವೊಮ್ಮೆ ಹಾಗೆ ಮಾಡಿಸುತ್ತದೆ. ಆದರೆ ಬುದ್ಧಿವಂತ ಜನರಾದರೂ ಇದರಿಂದ ಹೊರಗಿರಲಿ ಎಂಬುದಷ್ಟೇ ಬಯಕೆ. ಪೇಯ್ಡ್ ರಿವ್ಯೂಗಳು, ಪೇಯ್ಡ್ ಪ್ರಚಾರಗಳು ಇಂದು ಸೋಷಿಯಲ್ ಮೀಡಿಯಾವನ್ನೂ ಬಿಟ್ಟಿಲ್ಲ. ಟ್ರೋಲರ್‌ಗಳನ್ನು ಇನ್ಫ್ಲೂಯೆನ್ಸರ್‌ಗಳನ್ನು ಖರೀದಿಸುವ ಕಾಲ ಆರಂಭವಾಗಿ ಅದ್ಯಾವುದೋ ಕಾಲವಾಗಿದೆ. ಮೂವಿ ಪ್ರಮೋಷನ್‌ಗಳು ಟಿವಿಯಲ್ಲಿ ಬರುವ ಜಾಹಿರಾತುಗಳಷ್ಟೇ ಹಗುರವಾಗಿಬಿಟ್ಟಿವೆ. ಇಂತಹಾ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಂದದ್ದೇ ಸತ್ಯವೆಂದುಕೊಳ್ಳುವುದು ದಡ್ಡತನ ಅಥವಾ ಒಳ್ಳೆಯ ಪದಗಳಲ್ಲಿ ಹೇಳುವುದಾದರೆ ಮುಗ್ಧತೆಯಷ್ಟೇ. ಬಹುಶಃ ರಿಷಬ್ ಕಾಲಿಗೆ ಬಿದ್ದು ನನ್ನ ಗರ್ಲ್‌ಫ್ರೆಂಡ್‌ಗಿಂತಾ ನೀವೇ ಇಷ್ಟ ಎನ್ನುವ ಯೂಟ್ಯೂಬರ್ ಸ್ವತಃ ರಿಷಬ್‌ಗೇ ಮುಜುಗರವುಂಟುಮಾಡಿರಬಹುದು! ಇನ್ನು ಈ ಘಟನೆಯಲ್ಲಿ ಹಿಂದಿ ಯೂಟ್ಯೂಬರ್‌ನನ್ನು ಸಮಸ್ತ ಬಾಲಿವುಡ್ ಗೆ ಹೋಲಿಸಿ ಸ್ಯಾಂಡಲ್‌ವುಡ್ ಕಾಲಿಗೆ ಬಿದ್ದ ಬಾಲಿವುಡ್ ಎಂಬಂತೆ ಚಿತ್ರಿಸುತ್ತಿರುವ ಅಭಿಮಾನಿ ವರ್ಗ ಕೆಜಿಎಫ್ ಅನ್ನು ಹಾಡಿ ಹೊಗಳಿದ ಸೈಕ್ ನವಾಜ್, ತಂದಾನಿತಾನೇ, ಇನ್ನೊಬ್ಬ ಬ್ರದರ್‌ಗಳು ಆಮೇಲೆ ಇನ್ನೂ ಎಂಥೆಂಥಾ ಚಿತ್ರಗಳಿಗೆ ಪೇಯ್ಡ್ ಪ್ರಚಾರ ಕೊಟ್ಟರು ಎಂಬುದನ್ನು ಗಮನಿಸಬೇಕು! ಈ ಥರದ ಪ್ರಚಾರಗಳನ್ನು ಕೇಳಿ ನೋಡಿ ಓದಿ ಹೋಗಿದ್ದರಿಂದ ಮೊದಲ ಸಲ ಚಿತ್ರ ನೋಡಿದಾಗ ನಿರಾಶೆಯಾಯಿತು. ಅಸಹಜವಾದ ನಿರೀಕ್ಷೆಗಳ ಉದ್ದೀಪನೆ ಒಳ್ಳೆಯ ಚಿತ್ರಕ್ಕೆ ನಿಜಕ್ಕೂ ಹಿನ್ನಡೆ ತರುತ್ತದೆ.

ಇನ್ನುಳಿದಂತೆ ಚಿತ್ರದಲ್ಲಿ ನನಗೆ ಕೊರತೆ ಅನ್ನಿಸಿದ್ದು ಅರಣ್ಯಾಧಿಕಾರಿಯ ಪಾತ್ರವೊಂದೇ. ಶಿವನನ್ನು ಮುಖ್ಯ ಪಾತ್ರವಾಗಿಸುವ ಹಂಬಲದಲ್ಲೋ ಅಥವಾ ಕಥೆಯನ್ನು ಸರಿದೂಗಿಸುವ ಪ್ರಯತ್ನದಲ್ಲೋ ಅರಣ್ಯಾಧಿಕಾರಿಯ ಪಾತ್ರ ಪದೇ ಪದೇ ಆರಕ್ಕೇರಿ ಮೂರಕ್ಕಿಳಿಯುವ ಪಾತ್ರವಾಗಿ ಹೋಗಿದೆ. ಶಿವನಿಗೆ ಕೊಟ್ಟ ಹೀರೋಯಿಸಂ ಅನ್ನು ಅಷ್ಟೇ ಪ್ರಧಾನ ಪಾತ್ರವಾಗಿದ್ದ ಮುರಳಿ ಪಾತ್ರಕ್ಕೆ ಕೊಟ್ಟಂತೆ ಮಾಡಿ, ಕೊಡುವ ಹಂತಕ್ಕೆ ಹೋಗಿ, ಮತ್ತೆ ವಾಪಾಸು ತೆಗೆದುಕೊಂಡಂತೆ ಅನಿಸುತ್ತದೆ. ಇಡೀ ಚಿತ್ರ ಸಂಪೂರ್ಣ ಲಾಜಿಕಲ್ಲಾಗಿ ಇರುವಾಗ ಕ್ಲೈಮ್ಯಾಕ್ಸ್‌ನಲ್ಲಿ ಊರವರ ಸಶಸ್ತ್ರ ಹೋರಾಟದಲ್ಲಿ ಅರಣ್ಯಾಧಿಕಾರಿಯ ಸೇರ್ಪಡೆ ಸ್ವಲ್ಪ ಇಂಪ್ರಾಕ್ಟಿಕಲ್ ಅಥವಾ ಇಲ್ಲಾಜಿಕಲ್ ಅನ್ನಿಸಿತು. ನಿರ್ದೇಶಕರು ಇದಕ್ಕೆ ಚಿತ್ರದಲ್ಲೇ ಒಂದು ಚಿಕ್ಕ ಸ್ಪಷ್ಟನೆಯನ್ನೋ ಲಾಜಿಕ್ಕನ್ನೋ ಸೇರಿಸಿದ್ದಿದ್ದರೆ ಇನ್ನಷ್ಟು ಪೂರ್ಣವಾಗುತ್ತಿತ್ತೇನೋ ಅನ್ನಿಸಿತು. ಹಾಗೆಯೇ ಶಿವ ಮತ್ತು ಅರಣ್ಯಾಧಿಕಾರಿಯ ಕಾಂಪ್ರಮೈಸ್ ದೃಶ್ಯ ಪರಿಣಾಮಕಾರಿಯಾಗಲು ಇನ್ನಷ್ಟು ಸಮಯ ಬೇಕಿತ್ತು. ಆದರೆ ಅದು ಚುಟುಕಾಯಿತು ಎನಿಸಿತು. ಇವೆಲ್ಲವೂ ವೈಯಕ್ತಿಕ ಅಭಿಪ್ರಾಯಗಳು. ನೂರಕ್ಕೆ ನೂರು ಸರಿ ಅಂತಲೂ ಅಲ್ಲ. ಎಲ್ಲರಿಗೂ ಒಪ್ಪಿಗೆಯಾಗಬೇಕೆಂದೂ ಇಲ್ಲ.

ಅದು ಬಿಟ್ಟರೆ ಇಡೀ ಸಿನಿಮಾ ಆವರಿಸಿಕೊಳ್ಳುವ ಎಣ್ಣೆ ಮತ್ತು ಬೀಡಿಗಳು ಕಥೆಗೆ ಪಾತ್ರಕ್ಕೆ ಪೂರಕವಾಗಿ ಬೇಕಿತ್ತು ಹಾಗಾಗಿ ತಪ್ಪೆನ್ನಲಾಗುವುದಿಲ್ಲ. ಆದರೆ ಕೊನೆಯಲ್ಲಿ ಧಣಿ ನೀಡುವ ಹೆಂಡವನ್ನು ನಿರಾಕರಿಸಿ “ಶುದ್ಧವಾಗಿದ್ದೇನೆ ಆದ್ದರಿಂದ ಮುಟ್ಟುವುದಿಲ್ಲ” ಎಂಬ ಡೈಲಾಗ್ ಇಡೀ ಸಿನಿಮಾದಿಂದ ಮದ್ಯಪಾನ ವಿರೋಧಿ ಸಂದೇಶವನ್ನು ಹೊರಡಿಸಿದೆ. ಇದು ಮೆಚ್ಚತಕ್ಕ ಅಂಶ. ಇನ್ನು ನಾಯಕ ನಾಯಕಿಯ ಪ್ರಣಯ ಸನ್ನಿವೇಶಗಳೂ ಸಹಾ ಕಥೆಗೆ ಪೂರಕವಾಗಿಯೇ ಇದ್ದು, ಮಕ್ಕಳನ್ನು ಬಿಟ್ಟು ಯುವಕರು ಮತ್ತು ವಯಸ್ಕರು ಅಸ್ವಾದಿಸಬಹುದಾಗಿದೆ.

ಒಟ್ಟಿನಲ್ಲಿ ಕಾಂತಾರ ಸಿನಿಮಾ ಒಂದು ಸುಂದರ ಚಿತ್ರವಾಗಿದ್ದು ಕೆಜಿಎಫ್‌ಗಿಂತ ಹತ್ತಾರು ಪಟ್ಟು ಸುಂದರವಾಗಿದೆ. ಇದು ಬಹಳ ಕಾಲ ಸಿನಿಪ್ರಿಯರ ಮನಸ್ಸಿನಲ್ಲಿ ಉಳಿದುಕೊಳ್ಳುವುದಷ್ಟೇ ಅಲ್ಲದೇ, ಭಾರತೀಯರ ವೈವಿಧ್ಯಮಯ ನಂಬಿಕೆಗಳ ಬೇರುಗಳನ್ನು ಗಟ್ಟಿಗೊಳಿಸುವಲ್ಲಿಯೂ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಕನ್ನಡ ಸಿನಿಮಾ ರಂಗವನ್ನು ಜಗತ್ತು ತಿರುಗಿ ನೋಡುವಂತೆ ಮಾಡಿದೆ. ಜೊತೆಗೆ ರಿಷಬ್ ಶೆಟ್ಟಿ ಎಂಬ ಕಲಾದೈತ್ಯನ ಮೇಲೆ ಹೊಸಾ ಭರವಸೆಗಳನ್ನು ಕನಸುಗಳನ್ನೂ ನಿರೀಕ್ಷೆಗಳನ್ನೂ ಕಟ್ಟುವಂತಾಗಿದೆ. ಕಂಗ್ರಾಟ್ಸ್ ರಿಷಬ್ ಶೆಟ್ಟಿಯವರೇ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್- ಆಯ್ಕೆ ಮಂಡಳಿ ನಿರ್ಧಾರ ಸರಿ ಇದೆಯೇ?

ರಾಜಮಾರ್ಗ ಅಂಕಣ: ಸ್ಟ್ರಾಟಜಿಯ ದೃಷ್ಟಿಯಿಂದ ಈ ಬಾರಿ ವಿಶ್ವಕಪ್‌ ಟಿ20 ಪಂದ್ಯಾಟಗಳಿಗೆ ಆರಿಸಿದ ಭಾರತ ಕ್ರಿಕೆಟ್ ತಂಡವು ಹೆಚ್ಚು ಸಮತೋಲಿತ ಎಂದು ಖಂಡಿತವಾಗಿ ಹೇಳಬಹುದು.‌ ಆದರೆ ಅದರಲ್ಲಿ ಒಂದಿಷ್ಟು ಅಪಸ್ವರ, ಒಂದಿಷ್ಟು ಭಿನ್ನ ಧ್ವನಿಗಳು ಬರುವುದು ಸಹಜವೇ ಆಗಿದೆ.

VISTARANEWS.COM


on

rajamarga column t20 world cup team
Koo

ಕೆ.ಎಲ್ ರಾಹುಲ್, ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ಮಿಸ್ ಆದದ್ದು ಹೇಗೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಆಲ್ ದ ಬೆಸ್ಟ್ ಟೀಮ್ ಇಂಡಿಯಾ!

ಐಪಿಎಲ್ (IPL) ಕಾರಣಕ್ಕೆ ಭಾರತದಲ್ಲಿ ನೂರಾರು ಕ್ರಿಕೆಟ್ (Cricket) ಪ್ರತಿಭೆಗಳು ಪ್ರಕಾಶನಕ್ಕೆ ಬಂದಿವೆ. ಹತ್ತು ಕ್ರಿಕೆಟ್ ಟೀಮ್ ರಚಿಸಲು ಸಾಧ್ಯ ಇರುವಷ್ಟು ಆಟಗಾರರು ಈಗ ಭಾರತದಲ್ಲಿ ಇದ್ದಾರೆ! ಅದರಿಂದಾಗಿ ಈ ಬಾರಿ ಕ್ರಿಕೆಟ್ ಆಯ್ಕೆ ಮಂಡಳಿಯು ಸಾಕಷ್ಟು ಅಳೆದು ತೂಗಿ ಒಂದು ಬಲಿಷ್ಠವಾದ ಟಿ 20 (T20) ತಂಡವನ್ನು ವಿಶ್ವಕಪ್‌ಗೆ (World Cup) ಆಯ್ಕೆ ಮಾಡಿದೆ. ಅದರಲ್ಲಿ ಒಂದಿಷ್ಟು ಅಪಸ್ವರ, ಒಂದಿಷ್ಟು ಭಿನ್ನ ಧ್ವನಿಗಳು ಬರುವುದು ಸಹಜವೇ ಆಗಿದೆ.

ಆದರೆ ಸ್ಟ್ರಾಟಜಿಯ ದೃಷ್ಟಿಯಿಂದ ಈ ಬಾರಿ ಆರಿಸಿದ ತಂಡವು ಹೆಚ್ಚು ಸಮತೋಲಿತ ಎಂದು ಖಂಡಿತವಾಗಿ ಹೇಳಬಹುದು.

ರೋಹಿತ್ ಶರ್ಮ – ಉತ್ತಮ ಕ್ಯಾಪ್ಟನ್

ರೋಹಿತ್ ಶರ್ಮ (Rohit Sharama) ಸದ್ಯಕ್ಕೆ ಭಾರತದ ಯಶಸ್ವೀ ಕ್ಯಾಪ್ಟನ್. ಐದು ಬಾರಿ ಐಪಿಲ್ ಟ್ರೋಫಿ ಎತ್ತಿದ ಸಾಧನೆ ಆತನದ್ದು. ಹಾಗೆಯೇ ಮೊನ್ನೆ ನಡೆದ ಕ್ರಿಕೆಟ್ ವಿಶ್ವಕಪ್ಪಿನಲ್ಲಿ ಅದ್ಭುತವಾಗಿ ಆಡಿ ಫೈನಲ್ ತನಕ ಬಂದ ಸಾಧನೆಯು ಸಣ್ಣದಲ್ಲ. ಆರಂಭಿಕ ಆಟಗಾರನಾಗಿ ಸಲೀಸಾಗಿ ಬೌಂಡರಿ, ಸಿಕ್ಸರ್ ಎತ್ತುವ ಛಾತಿ ಆತನಿಗೆ ಇದೆ. ಆದ್ದರಿಂದ ರೋಹಿತ್ ಶರ್ಮಾ ಆಯ್ಕೆಯು ನಿರ್ವಿವಾದ.

ಉಪನಾಯಕನಾಗಿ ಸಂಜು ಸ್ಯಾಮ್ಸನ್ ಅಥವಾ ರಿಷಭ್ ಪಂತ್ ಅವರಿಗೆ ಹೊಣೆ ನೀಡುವ ನಿರೀಕ್ಷೆ ಇತ್ತು. ಆದರೆ ಆಯ್ಕೆ ಮಂಡಳಿ ರಿಸ್ಕ್ ತೆಗೆದುಕೊಳ್ಳಲು ಹೋಗದೆ ಪಾಂಡ್ಯ ಅವರನ್ನೇ ಮುಂದುವರೆಸಿದೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಆತನ ನಾಯಕತ್ವದ ಹೆಚ್ಚಿನ ನಿರ್ಧಾರಗಳು ಟೀಕೆಗೆ ಗುರಿಯಾಗಿವೆ. ಆದರೆ ಪಾಂಡ್ಯ ಒಬ್ಬ ಆಲರೌಂಡರ್ ಮತ್ತು ಹೋರಾಟಗಾರ ಎಂಬ ಕಾರಣಕ್ಕೆ ಆತನಿಗೆ ತಂಡದಲ್ಲಿ ಸ್ಥಾನ ದೊರೆತಿದೆ ಎನ್ನುತ್ತದೆ ಆಯ್ಕೆ ಮಂಡಳಿ. ಆತನ ಬದಲಿಗೆ ತಿಲಕ್ ವರ್ಮ, ಸಾಯಿ ಸುದರ್ಶನ್ ಅಥವಾ ರುಥುರಾಜ್ ಗಾಯಕವಾಡ್ ಆಯ್ಕೆ ಆಗಿದ್ದರೆ ಚೆನ್ನಾಗಿತ್ತು ಎಂದು ಕ್ರಿಕೆಟ್ ಪ್ರೇಮಿಗಳು ಗಟ್ಟಿಯಾಗಿ ಹೇಳುತ್ತಿದ್ದಾರೆ. ಒಬ್ಬ ಬೌಲಿಂಗ್ ಆಲ್ರೌಂಡರ್ ಎಂಬ ದೃಷ್ಟಿಯಿಂದ ಹಾರ್ದಿಕ್ ಆಯ್ಕೆ ಆಗಿರಬಹುದು.

rajamarga column t20 world cup team

ಯಶಸ್ವೀ ಜೈಸ್ವಾಲ್ ಆಯ್ಕೆಯಲ್ಲಿ ಯಾರಿಗೂ ಅಚ್ಚರಿ ಆಗಲು ಸಾಧ್ಯವೇ ಇಲ್ಲ. ಕ್ರಿಕೆಟಿನ ಮೂರೂ ಫಾರ್ಮಾಟಗಳಲ್ಲಿ ಆತನ ನಿರ್ವಹಣೆಯು ತುಂಬಾ ಚೆನ್ನಾಗಿದೆ. ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆತ ವಿಫಲನಾದರೂ ಈಗ ನಿಧಾನಕ್ಕೆ ಫಾರ್ಮ್ ಕಂಡು ಕೊಂಡಿದ್ದಾರೆ. ಆತನ ಆಕ್ರಮಣಶೀಲತೆ ಮತ್ತು ಹೊಡೆತಗಳ ಆಯ್ಕೆ ಚೆನ್ನಾಗಿರುವ ಕಾರಣ ಆತನ ಮೇಲೆ ಆಯ್ಕೆ ಮಂಡಳಿ ಭರವಸೆ ಇಟ್ಟ ಹಾಗಿದೆ.

ಕೊಹ್ಲಿ ಆಯ್ಕೆಯು ನಿರೀಕ್ಷಿತ

ವಿಶ್ವ ಕ್ರಿಕೆಟಿನ ಅತ್ಯದ್ಭುತ ಆಟಗಾರ ವಿರಾಟ್ ಕೊಹ್ಲಿ ಆಯ್ಕೆ ನಿರೀಕ್ಷಿತ. ಅದರೆ ಈ ಬಾರಿಯ ಐಪಿಲ್ ಪಂದ್ಯಗಳಲ್ಲಿ ಆತನ ಆಕ್ರಮಣಶೀಲತೆಯು ಕಡಿಮೆ ಆಗಿದೆ(?) ಎಂಬಂತೆ ಕಾಣುತ್ತಿರುವ ಕಾರಣ ಆತನನ್ನು ನಂಬರ್ 3 ಸ್ಥಾನಕ್ಕೆ ಆಡಿಸಬಹುದು ಅಥವಾ ನಂಬರ್ 3 ಸ್ಥಾನಕ್ಕೆ ಸಂಜು ಸಾಮ್ಸನ್ ಆಯ್ಕೆ ಪಡೆಯಬಹುದು. ಆದರೂ 90% ಭಾರತದ ಕ್ರಿಕೆಟ್ ಪ್ರೇಮಿಗಳು ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಬೇಕು ಎಂದು ಆಸೆ ಪಡುತ್ತಾರೆ.

ಸೂರ್ಯಕುಮಾರ್ ಯಾದವ್ ಟಿ 20 ಫಾರ್ಮಾಟಿಗೆ ಹೇಳಿ ಮಾಡಿಸಿದ ಆಟಗಾರ. ಒಮ್ಮೆ ಕುದುರಿಕೊಂಡರೆ ಸರಾಸರಿಯನ್ನು ಸಲೀಸಾಗಿ 200 ದಾಟಿಸುವ ಶಕ್ತಿ ಇದೆ. ಆದರೆ ದೀರ್ಘ ಅವಧಿಗೆ ಗಾಯಾಳು ಆಗಿ ಹೊರಗೆ ಕೂತ ಕಾರಣ ಆತನ ತಲೆಯ ಮೇಲೆ ತೂಗುಕತ್ತಿ ಇದ್ದೇ ಇತ್ತು. ಆದರೆ ಆಯ್ಕೆ ಮಂಡಳಿ ಆತನ ಹಿಂದಿನ ಸಾಧನೆಯ ಮೇಲೆ ಭರವಸೆ ಇಟ್ಟ ಹಾಗಿದೆ. ನಂಬರ್ 3 ಸ್ಥಾನಕ್ಕೆ ಆಯ್ಕೆಗಳು ಹೆಚ್ಚಿದ್ದ ಕಾರಣ ಸಹಜವಾಗಿ ಕೆ ಎಲ್ ರಾಹುಲ್ ಹೊರಗೆ ಕೂರಬೇಕಾಯಿತು ಅಷ್ಟೇ.

rajamarga column t20 world cup team

ಸಂಜು ಸ್ಯಾಮ್ಸನ್ ದಶಕಗಳಿಂದ ಐಪಿಲ್ ಆಡುತ್ತಾ ಇದ್ದಾರೆ. ಈ ಐಪಿಎಲ್ ಟೂರ್ನಿಯಲ್ಲಿ ಆತನ ಸರಾಸರಿ ಮತ್ತು ಕನ್ಸಿಸ್ಟೇನ್ಸಿಗಳು ತುಂಬಾ ಚೆನ್ನಾಗಿ ಇದ್ದ ಕಾರಣ ಅವರ ಆಯ್ಕೆ ಸಲೀಸಾಯ್ತು. ರಾಹುಲ್ ಬ್ಯಾಟಿಂಗ್ ಮತ್ತು ಕೀಪಿಂಗ್ ಚೆನ್ನಾಗಿದ್ದರೂ ಡ್ರಾಪ್ ಆದರು. ಈ ನೋವು ಕನ್ನಡಿಗರನ್ನು ಕಾಡದೇ ಇರದು. ಸಂಜು ಸ್ಯಾಮ್ಸನ್ ಅವರಿಗೊಂದು ಅವಕಾಶ ಕೊಡಲೇಬೇಕು ಎಂದು ದೀರ್ಘಕಾಲದಿಂದ ಭಾರತ ಆಸೆ ಪಡುತ್ತಿತ್ತು.

ಬಲಿಷ್ಠ ಮಿಡಲ್ ಆರ್ಡರ್

ಭಾರತಕ್ಕೆ ಅಗತ್ಯವಾಗಿ ಬೇಕಾಗಿದ್ದ ಬಲಿಷ್ಠ ಮಿಡಲ್ ಆರ್ಡರ್ ಈ ಬಾರಿ ನಿಸ್ಸಂಶಯವಾಗಿಯೂ ದೊರೆತಿದೆ. ರಿಶಭ್ ಪಂತ್ ಮತ್ತು ಶಿವಂ ದುಬೆ ಅಲ್ಲಿ ಮಿಂಚು ಹರಿಸುವುದು ಖಂಡಿತ. ಇನ್ನಷ್ಟು ಬಲಿಷ್ಠ ಮಾಡಲು ರವೀಂದ್ರ ಜಡೇಜಾ ಇದ್ದೇ ಇರುತ್ತಾರೆ.

ಇಡೀ ಐಪಿಲ್ ಪಂದ್ಯಾಟದಲ್ಲಿ ಮಿಂಚಿದ ತಿಲಕ್ ವರ್ಮ, ರಥುರಾಜ್ ಗಾಯಕವಾಡ, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್, ರಿಯಾನ್ ಪರಾಗ್ ಯಾಕೆ ಮಿಸ್ ಆದರು?ಎಂಬ ಪ್ರಶ್ನೆಯು ನಿಮ್ಮ ಮನಸಿಗೆ ಕೂಡ ಬಂದಿರಬಹುದು. ಅವರು ಮುಂದಿನ ವಿಶ್ವಕಪ್ ತನಕ ಕಾಯಲೇಬೇಕು ಅನ್ನುವುದು ವಾಸ್ತವ.

rajamarga column t20 world cup team

ಬೌಲಿಂಗ್ ವಿಭಾಗ ಅಚ್ಚರಿ ಇಲ್ಲ

ಜಸ್ಪ್ರೀತ್ ಬುಮ್ರಾ, ಆರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗದ ಅಸ್ತ್ರಗಳು. ಖಲೀಲ್ ಅಹ್ಮದ್ ಮತ್ತು ಆವೇಶ್ ಖಾನ್ ಅವರು ಮೀಸಲು ಆಟಗಾರರಾಗಿ ಇರುವ ಕಾರಣ ಇಲ್ಲಿ ಅಚ್ಚರಿಯ ಮುಖಗಳು ಇಲ್ಲ. ಹಾರ್ದಿಕ ಪಾಂಡ್ಯ ಕೂಡ ಮಿದು ವೇಗದ ಬೌಲಿಂಗ್ ಮಾಡಬಲ್ಲರು. ದಾಖಲೆ ವೇಗದಲ್ಲಿ ಎಸೆಯಬಲ್ಲ ಮಯಾಂಕ್ ಯಾದವ್ ಫಿಟ್ನೆಸ್ ಕಾರಣಕ್ಕೆ ಡ್ರಾಪ್ ಆದ ಕಾರಣ ಸಿರಾಜ್ ಆಯ್ಕೆ ಸುಲಭ ಆಯ್ತು. ಸ್ಪಿನ್ ವಿಭಾಗದಲ್ಲಿ ಐಪಿಎಲನ ಗರಿಷ್ಠ ವಿಕೆಟ್ ಕಿತ್ತಿರುವ ಯಜುವೇಂದ್ರ ಚಹಲ್, ಯಾವ ಮೈದಾನದಲ್ಲಿಯೂ ಬಾಲ್ ಸ್ಪಿನ್ ಮಾಡುವ ಶಕ್ತಿ ಇರುವ ಕುಲದೀಪ್ ಯಾದವ್, ಆಕ್ಷರ್ ಪಟೇಲ್ ಇರುತ್ತಾರೆ. ರವಿ ಬಿಷ್ಣೊಯಿ ಇರಬೇಕಿತ್ತು ಎಂಬುದು ಹಲವರ ಅಭಿಪ್ರಾಯ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

ಭಾರತವು ಮೂರು ವೇಗ ಪ್ಲಸ್ ಎರಡು ಸ್ಪಿನ್ ಸಂಯೋಜನೆಯ ಜೊತೆಗೆ ಆಡಲು ಇಳಿಯಬಹುದು. ಇನ್ನು ಫಿನಿಶರ್ ಸ್ಥಾನಕ್ಕೆ ಶಿವಂ ದುಬೆ, ರಿಶಬ್ ಪಂತ್, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಘ್ (ಮೀಸಲು) ಇರುವ ಕಾರಣ ದಿನೇಶ್ ಕಾರ್ತಿಕ್ ಡ್ರಾಪ್ ಆದರು ಅನ್ನಿಸುತ್ತದೆ. ಆತನ ಪ್ರಾಯ ಕೂಡ ಇಲ್ಲಿ ನಿರ್ಣಾಯಕ ಆಗಿರಬಹುದು.

2024ರ ವಿಶ್ವಕಪ್‌ಗೆ ಇದು ಡ್ರೀಮ್ ಟೀಮ್

ಧೋನಿ ನಾಯಕತ್ವದಲ್ಲಿ ಚೊಚ್ಚಲ T20 ವಿಶ್ವಕಪ್ ಗೆದ್ದು ಸಾಧನೆ ಮಾಡಿದ್ದ ಭಾರತ ಈ ಬಾರಿ ಇನ್ನೂ ಬಲಿಷ್ಠ ತಂಡದ ಜೊತೆಗೆ ಆಡಲು ಇಳಿಯುತ್ತಿದೆ. ಈ ತಂಡದಲ್ಲಿ ಆಕ್ರಮಣ, ಅನುಭವ, ಪರಿಣತಿ, ವೇಗ, ತಂತ್ರಗಾರಿಕೆ… ಎಲ್ಲವೂ ಇದೆ. ಉತ್ತಮ ಆಲ್ರೌಂಡರ್ ಆಟಗಾರರೂ ಇದ್ದಾರೆ. ಒತ್ತಡ ತಡೆಕೊಳ್ಳುವ ಶಕ್ತಿ ಇದ್ದವರು ಮಾತ್ರ ವಿಶ್ವಕಪ್ ಗೆಲ್ಲುತ್ತಾರೆ.

ಆದರೆ ಐಪಿಎಲ್ 2024ರಲ್ಲಿ ಸಖತ್ ಮಿಂಚುತ್ತಿರುವ ವಿದೇಶಿ ಆಟಗಾರರಾದ ಫಿಲ್ ಸಾಲ್ಟ್, ವಿಲ್ ಜಾಕ್ಸ್, ಮಾರ್ಕಸ್ ಸ್ಟಾಯಿನಿಸ್, ಟಿಮ್ ಡೇವಿಡ್, ಮೊಹಮ್ಮದ್ ನಬಿ, ಹೆನ್ರಿ ಕ್ಲಾಸೆನ್, ಜೋಸ್ ಬಟ್ಲರ್ ……ಮೊದಲಾದವರು ಬ್ಯಾಟ್ ಬೀಸುವ ವೇಗವನ್ನು ನೋಡುವಾಗ ಭಾರತೀಯರ ಎದೆಬಡಿತವು ಸ್ವಲ್ಪ ಹೆಚ್ಚಾಗಬಹುದು. ಏನಿದ್ದರೂ ಭಾರತಕ್ಕೆ ‘ಆಲ್ ದ ಬೆಸ್ಟ್’ ಹೇಳೋದಕ್ಕೆ ನಾವು ಖಂಡಿತ ಕಂಜೂಸ್ ಮಾಡುವುದಿಲ್ಲ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

Continue Reading

ಅಂಕಣ

ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

ರಾಜಮಾರ್ಗ ಅಂಕಣ: ಕುರುಡರಾಗಿ ಹುಟ್ಟಿದ ಕಾರಣಕ್ಕೆ ನೋವು, ತಿರಸ್ಕಾರ ಅನುಭವಿಸುತ್ತಿದ್ದ ಶ್ರೀಕಾಂತ್‌ ಬೊಳ್ಳಾ ಹಿಡಿದ ಛಲದ ಹಾದಿ ಇಂದು ಅವರನ್ನು ದೊಡ್ಡ ಕಂಪನಿಗಳ ಮಾಲಿಕರಾಗುವತ್ತ, ನೂರಾರು ದಿವ್ಯಾಂಗರಿಗೆ ಕೆಲಸ ನೀಡುವವರೆಗೆ ಮುನ್ನಡೆಸಿದೆ. ನಾವೆಲ್ಲರೂ ಓದಿ ರೋಮಾಂಚಿತರಾಗಬಹುದಾದ ಸ್ಫೂರ್ತಿ ಕಥೆಯಿದು.

VISTARANEWS.COM


on

rajamarga column srikant bolla
Koo

ಕಣ್ಣಿಲ್ಲ ಎಂಬ ಕಾರಣಕ್ಕೆ ಐಐಟಿ ರಿಜೆಕ್ಟ್ ಆಗಿದ್ದ ಯುವಕನು ಕೋಟಿ ಕೋಟಿ ಸಂಪಾದನೆ ಮಾಡಿದ್ದು ಹೇಗೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮೂರು ವರ್ಷಗಳ ಹಿಂದೆ ಇವರನ್ನು ಬೆಂಗಳೂರಿನ ಒಂದು ಬಿಸಿನೆಸ್ ಸಮ್ಮೇಳನದ ವೇದಿಕೆಯಲ್ಲಿ ಭೇಟಿಯಾಗಿದ್ದೆ. ಅವರ ಹೋರಾಟದ ಕಥೆಯನ್ನು ಅವರ ಮಾತಲ್ಲೇ ಕೇಳಿ ರೋಮಾಂಚನವಾಗಿತ್ತು.

ಶ್ರೀಕಾಂತ್ ಬೊಳ್ಳ ಅವರ ಹೋರಾಟದ ಅದ್ಭುತವಾದ ಕಥೆಯನ್ನು ಅವರದ್ದೇ ಮಾತುಗಳಲ್ಲಿ ಕೇಳೋಣ.

ನಾನು ಹುಟ್ಟಿದ್ದು ಆಂಧ್ರಪ್ರದೇಶದ ಮಚಲಿ ಪಟ್ಟಣದ ಒಂದು ಪುಟ್ಟ ಗ್ರಾಮದಲ್ಲಿ (1992). ನನ್ನ ಹುಟ್ಟು ಕುರುಡುತನ ನನ್ನ ಕೃಷಿಕ ಕುಟುಂಬಕ್ಕೆ ದೊಡ್ಡ ಸವಾಲು ಆಗಿತ್ತು. ನಮ್ಮ ಕುಟುಂಬದ ವಾರ್ಷಿಕ ಆದಾಯ 20,000 ರೂಪಾಯಿಗಿಂತ ಕಡಮೆ ಇದ್ದ ಕಾಲ ಅದು!

ಅಪಮಾನ, ತಿರಸ್ಕಾರ ಮತ್ತು ತಾರತಮ್ಯ

ನಾನು ಕುರುಡ ಎಂಬ ಕಾರಣಕ್ಕೆ ತಿರಸ್ಕಾರ, ಅಪಮಾನ ತುಂಬಾ ನೋವು ಕೊಡುತ್ತಿತ್ತು. ತರಗತಿಯಲ್ಲಿ ಕೊನೆಯ ಬೆಂಚು ಖಾಯಂ. ಆಟಕ್ಕೆ ಅವಕಾಶವನ್ನೇ ಕೊಡುತ್ತಿರಲಿಲ್ಲ. ಇದರಿಂದ ಅಪ್ಪ ನೊಂದುಕೊಂಡು ನನ್ನನ್ನು ಹೈದರಾಬಾದ್ ನಗರದ ವಿಶೇಷ ಮಕ್ಕಳ ಶಾಲೆಗೆ ಸೇರಿಸಿದರು. ಅಲ್ಲಿ ನನ್ನ ಜೀವನದ ಹಲವು ಟರ್ನಿಂಗ್ ಪಾಯಿಂಟಗಳು ಆರಂಭ! ಕಲಿಕೆಯಲ್ಲಿ ನಾನು ನನ್ನ ತರಗತಿಗೆ ಪ್ರಥಮ ಬರಲು ಆರಂಭಿಸಿದೆ. ಕುರುಡು ಮಕ್ಕಳ ಕ್ರಿಕೆಟ್ ತಂಡದಲ್ಲಿ ನಾನು ರಾಷ್ಟ್ರೀಯ ತಂಡದಲ್ಲಿ ಆಡಿದೆ.

ಅಬ್ದುಲ್ ಕಲಾಂ ಭೇಟಿ ಮಿಂಚು ಹರಿಸಿತು

ನಾನು ಪ್ರೌಢಶಾಲೆಯಲ್ಲಿ ಓದುವಾಗ ನಮ್ಮ ಶಾಲೆಗೊಮ್ಮೆ ಅಬ್ದುಲ್ ಕಲಾಂ ಭೇಟಿ ನೀಡಿದರು. ಅವರ ಮಾತುಗಳಿಂದ ನಾನು ಪ್ರಭಾವಿತನಾದೆ. ಅವರ ‘ಲೀಡ್ ಇಂಡಿಯಾ 2020’ ಎಂಬ ವಿದ್ಯಾರ್ಥಿ ಅಭಿಯಾನಕ್ಕೆ ನಾನು ಸದಸ್ಯತನ ಪಡೆದೆ. ನನಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 90% ಅಂಕಗಳು ಬಂದವು. ವಿಜ್ಞಾನದಲ್ಲಿ ಪಿಯುಸಿ ಮಾಡಬೇಕೆಂದು ನನ್ನ ಆಸೆ. ಆದರೆ ನಾನು ಕುರುಡ ಎಂಬ ಕಾರಣಕ್ಕೆ ನನಗೆ ಯಾವುದೇ ಕಾಲೇಜಿನಲ್ಲಿ ವಿಜ್ಞಾನದ ಸೀಟ್ ಸಿಗಲಿಲ್ಲ.

ನನಗೆ ಅಬ್ದುಲ್ ಕಲಾಂ ಅವರ ಮಾತುಗಳು ನೆನಪಾದವು – ಹಕ್ಕಿ ಹಾರುವುದು ರೆಕ್ಕೆಗಳ ಬಲದಿಂದಲ್ಲ. ಅದು ಹಾರುವುದು ಭರವಸೆಗಳ ಬಲದಿಂದ!

ಸರಕಾರದ ವಿರುದ್ಧ ಬೀದಿಗೆ ಇಳಿದು ಹೋರಾಟ.

ನಾನು ಹೈದರಾಬಾದ್ ಸರಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆಯನ್ನು ಮಾಡಿದೆ. ಆರು ತಿಂಗಳ ನಂತರ ನನಗೆ ವಿಜ್ಞಾನದ ಸೀಟ್ ದೊರೆಯಿತು. ಸತತವಾಗಿ ಕಷ್ಟ ಪಟ್ಟೆ. ಬ್ರೈಲ್ ಲಿಪಿಯಲ್ಲಿ ಪರೀಕ್ಷೆಯನ್ನು ಬರೆದು ದ್ವಿತೀಯ ಪಿಯುಸಿಯಲ್ಲಿ ನನಗೆ 98% ಅಂಕಗಳು ಬಂದವು!

ಐಐಟಿ ಸಂಸ್ಥೆಗಳು ಬಾಗಿಲು ತೆರೆಯಲಿಲ್ಲ

ನನಗೆ ಐಐಟಿಯಲ್ಲಿ BE ಮಾಡುವ ಆಸೆ. ಆದರೆ ಭಾರತದ ಯಾವುದೇ ಐಐಟಿ ಕಾಲೇಜುಗಳು ನನಗೆ ಕುರುಡ ಎಂಬ ಕಾರಣಕ್ಕೆ ಎಂಟ್ರೆನ್ಸ್ ಪರೀಕ್ಷೆಗೂ ಅವಕಾಶ ನೀಡಲಿಲ್ಲ. ನಾನು ಕೈಚೆಲ್ಲಲಿಲ್ಲ. ಅಮೆರಿಕಾದ ನಾಲ್ಕು ಪ್ರಸಿದ್ಧವಾದ ಯೂನಿವರ್ಸಿಟಿಗಳ ಬಾಗಿಲು ಬಡಿದೆ. ಎಲ್ಲವೂ ಆಹ್ವಾನ ನೀಡಿದವು.

ನಾನು ಮಸ್ಸಾಚುಸೆಟ್ಸ್ ವಿವಿ ಆರಿಸಿಕೊಂಡೆ. ಅಮೆರಿಕಾದ ವಿವಿಯಲ್ಲಿ BE ಪ್ರವೇಶ ಪಡೆದ ಜಗತ್ತಿನ ಮೊದಲ ಕುರುಡ ವಿದ್ಯಾರ್ಥಿ ನಾನಾಗಿದ್ದೆ! ನನಗೆ ಇಷ್ಟವಾದ BE ಕೋರ್ಸನ್ನು ಮುಗಿಸಿದೆ. ಅಲ್ಲಿ ಈಜು ಮತ್ತು ಡೈವಿಂಗಲ್ಲಿ ವಿವಿ ದಾಖಲೆ ಕೂಡ ಮಾಡಿದ್ದೆ. ಅಮೆರಿಕಾದ ಕೆಲವು ಕಾರ್ಪೊರೇಟ್ ಕಂಪೆನಿಗಳು ನನಗೆ ಉದ್ಯೋಗ ನೀಡಲು ಮುಂದೆ ಬಂದವು.

ಆದರೆ ನನ್ನ ಕನಸುಗಳು ಭಾರತದಲ್ಲಿ ಇದ್ದವು!

2011ರಲ್ಲಿ ಭಾರತಕ್ಕೆ ಬಂದು ಮತ್ತೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದೆ. ಅವರ ಸಲಹೆಯಂತೆ ಬಹು ವಿಕಲತೆಯ ಮಕ್ಕಳಿಗಾಗಿ “ಸಮನ್ವೈ ಸೆಂಟರ್” ಎಂಬ ಸೇವಾ ಸಂಸ್ಥೆ ಆರಂಭಿಸಿದೆ. ಬ್ರೈಲ್ ಪ್ರಿಂಟಿಂಗ್ ಪ್ರೆಸ್ ತೆರೆದೆ. 3000 ಅಶಕ್ತ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗೆ ನಿಂತೆ. ಅಷ್ಟಕ್ಕೇ ಸುಮ್ಮನಾಗಲಿಲ್ಲ.

ಆರಂಭ ಆಯಿತು ಅವರದ್ದೇ ಕಂಪೆನಿ

2011ರಲ್ಲಿ ‘ BOLLANT INDUSTRY’ ಎಂಬ ಸಣ್ಣ ಉದ್ಯಮವನ್ನು ಆರಂಭಿಸಿದೆ. ನಗರಪಾಲಿಕೆಯ ತ್ಯಾಜ್ಯ ವಸ್ತುಗಳಿಂದ ಮತ್ತು ಆಡಕೆಯಿಂದ ಕ್ರಾಫ್ಟ್ ಪೇಪರ್ ತಯಾರಿಸುವ ಕಂಪೆನಿ ಅದು. ಹಣ ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. ನನ್ನ ಕಂಪೆನಿಯಲ್ಲಿ ಕುರುಡರಿಗೆ ಮತ್ತು ವಿಕಲಚೇತನರಿಗೆ ಉದ್ಯೋಗ ನೀಡಿದೆ. ರತನ್ ಟಾಟಾ ಅವರು ನನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದರು. ನನ್ನ ಐಕಾನ್ ಎಪಿಜೆ ಅಬ್ದುಲ್ ಕಲಾಂ ಅವರು ಬಂದು ದೀಪ ಹಚ್ಚಿದರು. ಮುಂದೆ ಆ ಕಂಪೆನಿಯು ಪ್ರತೀ ತಿಂಗಳು 20% ಪ್ರಗತಿ ದಾಖಲಿಸುತ್ತಾ ಬಂದಿತು.

ದಿವ್ಯಾಂಗರಿಗೆ ಉದ್ಯೋಗ ನೀಡಿದರು

ಇಂದು ನನ್ನ ಕಂಪೆನಿಗೆ ನಾಲ್ಕು ರಾಜ್ಯಗಳಲ್ಲಿ 20 ಶಾಖೆಗಳು ಇವೆ. 100 ಕೋಟಿ ರೂಪಾಯಿ ವಾರ್ಷಿಕ ಟರ್ನ್ ಓವರ್ ಇದೆ! ನೂರಕ್ಕೆ ನೂರು ಸೌರಶಕ್ತಿ ಆಧಾರಿತವಾಗಿದೆ ಮತ್ತು ಪರಿಸರಸ್ನೇಹಿ ಆಗಿದೆ. ಅಶಕ್ತ ದಿವ್ಯಾಂಗರಿಗೆ ಸ್ವಾವಲಂಬಿ ಬದುಕಿನ ಅವಕಾಶವನ್ನು ನೀಡಿದ ಖುಷಿ ಇದೆ. ಭಾರತದ ಸಮಸ್ಯೆಗಳಾದ ಬಡತನ, ನಿರಕ್ಷರತೆ, ನಿರುದ್ಯೋಗಗಳ ನಿವಾರಣೆಗೆ ನಮ್ಮಿಂದಾದಷ್ಟು ಪ್ರಯತ್ನ ಪ್ರತಿಯೊಬ್ಬರೂ ಮಾಡಬೇಕು. ‘ಪಂಚೀ ಉಡತೀ ಹೈ ಪಂಖೋ ಕೀ ತಾಕತ್ ಸೆ ನಹೀಂ. ಹೌಸಲೆ ಸೇ!’ ಎಂಬ ಅಬ್ದುಲ್ ಕಲಾಂ ಅವರ ಮಾತಿನೊಂದಿಗೆ ಅವರು ತನ್ನ ಮಾತು ನಿಲ್ಲಿಸಿದರು. ಅವರ ಆಳವಾದ ಕಣ್ಣುಗಳಲ್ಲಿ ಗೆದ್ದ ಖುಷಿ ಇತ್ತು.

ಭರತ ವಾಕ್ಯ

ಅಂದ ಹಾಗೆ ಶ್ರೀಕಾಂತ್ ಅವರಿಗೆ ಫೋರ್ಬ್ಸ್ ಮಾಗಜ್ಹಿನ್ 2017ರಲ್ಲಿ ನಡೆಸಿದ ಏಷಿಯಾದ 30 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನವನ್ನು ದೊರೆತಿದೆ. ‘NDTV ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿ, ‘ಪ್ರೈಡ್ ಆಫ್ ತೆಲಂಗಾಣ’ ಪ್ರಶಸ್ತಿ, ‘ಟಿವಿ 9 ನವನಕ್ಷತ್ರ’ ಪ್ರಶಸ್ತಿ……. ಮೊದಲಾದ ನೂರಾರು ಪ್ರಶಸ್ತಿಗಳು ಅವರಿಗೆ ದೊರೆತಿವೆ. ಶ್ರೀಕಾಂತ್ ಬೊಳ್ಳ ಅವರ ಬದುಕು ಸಾವಿರಾರು ಯುವಕ ಯುವತಿಯರಿಗೆ ಸ್ಫೂರ್ತಿ ನೀಡಿದೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

Continue Reading

ಅಂಕಣ

ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

ರಾಜಮಾರ್ಗ ಅಂಕಣ: ಆಕ್ರಮಣಕಾರಿ ರಿಶಭ್ ಪಂತ್ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಅರ್ಧ ಹೆಣವಾಗಿ ಮಲಗಿದ್ದ! ಯಾರಿಗೂ ಆತ ಮರಳಿ ಕ್ರಿಕೆಟ್ ಆಡುವ ಭರವಸೆ ಇರಲಿಲ್ಲ. ಆದರೆ ಈಗ, ಈ ಐಪಿಎಲ್ ಸೀಸನ್‌ನಲ್ಲಿ ವಿಕೆಟ್ ಮುಂದೆ ಮತ್ತು ಹಿಂದೆ ಆತ ಆಕ್ರಮಣಕಾರಿ ಆಗಿ ಆಡುತ್ತಿರುವುದನ್ನು ನೀವು ನೋಡಿಯೇ ನೋಡಿರುತ್ತೀರಿ!

VISTARANEWS.COM


on

Rishabh Pant
Koo

ಹೋರಾಟಗಾರ ಕ್ರಿಕೆಟರ್ ಕ್ರಿಟಿಕಲ್ ಇಂಜುರಿ ಗೆದ್ದು ಬಂದ ಕಥೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: 2022 ಡಿಸೆಂಬರ್ 30ರ ಮಧ್ಯರಾತ್ರಿ ರೂರ್ಕಿ ಎಂಬಲ್ಲಿ ಆ ಕ್ರಿಕೆಟರ್ ಕಾರು ಅಪಘಾತಕ್ಕೆ ಒಳಗಾಗಿತ್ತು. ಆ ಅಪಘಾತದ ತೀವ್ರತೆಯನ್ನು ನೋಡಿದವರು ಆತ ಬದುಕಿದ್ದೇ ಗ್ರೇಟ್ ಅಂದಿದ್ದರು. ಬಲಗಾಲಿನ ಮಂಡಿ ಚಿಪ್ಪು ಸಮೇತ 90 ಡಿಗ್ರೀಯಷ್ಟು ತಿರುಗಿ ನಿಂತಿತ್ತು! ಮೈಯೆಲ್ಲಾ ಗಾಯಗಳು ಮತ್ತು ಎಲುಬು ಮುರಿತಗಳು! ಡೆಹ್ರಾಡೂನ್ ಆಸ್ಪತ್ರೆಯ ವೈದ್ಯರು ಆತನ ದೇಹದಲ್ಲಾದ ಗಾಯ ಮತ್ತು ಮೂಳೆ ಮುರಿತಗಳನ್ನು ನೋಡಿದಾಗ ‘ನೀನಿನ್ನು ಕ್ರಿಕೆಟ್ ಆಡೋದು ಕಷ್ಟ’ ಅಂದಿದ್ದರು. ಒಬ್ಬರಂತೂ ‘ನೀನು ನಿನ್ನ ಕಾಲುಗಳ ಮೇಲೆ ನಿಂತರೆ ಅದೇ ದೊಡ್ಡ ಸಾಧನೆ’ ಅಂದಿದ್ದರು!

ಅಮ್ಮಾ ನನಗೆ ಸಹಾಯ ಮಾಡು, ನಾನು ವಿಶ್ವಕಪ್ ಆಡಬೇಕು!

ಆ ಕ್ರಿಕೆಟಿಗ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಚೀರಿ ಚೀರಿ ಹಾಗೆ ಹೇಳುತ್ತಿದ್ದರೆ ನರ್ಸ್ ಮತ್ತು ವೈದ್ಯರು ಕಣ್ಣೀರು ಸುರಿಸುತ್ತಿದ್ದರು! ಕ್ರಿಕೆಟ್ ವಿಶ್ವಕಪ್ ಆರಂಭವಾಗಲು ಕೇವಲ ಒಂದೂವರೆ ವರ್ಷ ಬಾಕಿ ಇತ್ತು. ವೈದ್ಯರು ‘ಅನಿವಾರ್ಯ ಆದರೆ ಆತನ ಒಂದು ಕಾಲು ತುಂಡು ಮಾಡಬೇಕಾಗಬಹುದು!’ ಎಂದು ಅವನ ಅಮ್ಮನ ಕಿವಿಯಲ್ಲಿ ಪಿಸುಗುಟ್ಟಿದ್ದು, ಆತನ ಅಮ್ಮ ಬಾತ್ ರೂಮ್ ಒಳಗೆ ಹೋಗಿ ಕಣ್ಣೀರು ಸುರಿಸಿದ್ದು ಎಲ್ಲವೂ ನಡೆದು ಹೋಗಿತ್ತು!

ಆತ ರಿಶಭ್ ಪಂತ್ – ಆಕ್ರಮಣಕ್ಕೆ ಇನ್ನೊಂದು ಹೆಸರು!

ಅಪಘಾತ ಆಗುವ ಮೊದಲು ಆತ ಭಾರತೀಯ ಕ್ರಿಕೆಟ್ ತಂಡದ ಮೂರೂ ಫಾರ್ಮಾಟಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದ! ಆಕ್ರಮಣಕ್ಕೆ ಹೆಸರಾಗಿದ್ದ. ಸಲೀಸಾಗಿ ಒಂದೇ ಅವಧಿಯಲ್ಲಿ ಡಬಲ್ ಸೆಂಚುರಿ ಹೊಡೆಯುತ್ತಿದ್ದ. ವಿಕೆಟ್ ಹಿಂದೆ ಪಾದರಸದ ಚುರುಕು ಇತ್ತು. ಆತನ ಆಟವನ್ನು ನೋಡಿದವರು ʻಈತ ಧೋನಿಯ ಉತ್ತರಾಧಿಕಾರಿ ಆಗುವುದು ಖಂಡಿತ’ ಅನ್ನುತ್ತಿದ್ದರು!

ಅಂತಹ ರಿಶಭ್ ಪಂತ್ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಅರ್ಧ ಹೆಣವಾಗಿ ಮಲಗಿದ್ದ! ಯಾರಿಗೂ ಆತ ಮರಳಿ ಕ್ರಿಕೆಟ್ ಆಡುವ ಭರವಸೆ ಇರಲಿಲ್ಲ.

ಆತನ ನೆರವಿಗೆ ನಿಂತವರು ಕೇವಲ ನಾಲ್ಕೇ ಜನ

ಮರಳಿ ಕ್ರಿಕೆಟ್ ಮೈದಾನಕ್ಕೆ ಇಳಿಯಬೇಕು ಎಂದು ನಿದ್ದೆಯಲ್ಲಿಯೂ ಕನವರಿಸುತ್ತಿದ್ದ ಆತನ ನೆರವಿಗೆ ನಿಂತವರು ಕೇವಲ ನಾಲ್ಕೇ ಜನ. ಅವರೆಲ್ಲರೂ ಆತನ ಕ್ರಿಕೆಟ್ ದೈತ್ಯ ಪ್ರತಿಭೆಯನ್ನು ಕಂಡವರು. ಒಬ್ಬರು ಆತನಿಗೆ ಶಸ್ತ್ರಚಿಕಿತ್ಸೆ ಮಾಡಿದ ಮುಂಬಯಿಯ ಅಂಬಾನಿ ಆಸ್ಪತ್ರೆಯ ಖ್ಯಾತ ಸರ್ಜನ್ ದಿನ್ ಶಾ ಪಾದ್ರಿವಾಲ. ಇನ್ನೊಬ್ಬರು ಉತ್ತರಾಖಂಡದ ಶಾಸಕ ಉಮೇಶ್ ಕುಮಾರ್. ಇನ್ನೊಬ್ಬರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಕೋಚ್ ಆದ ಧನಂಜಯ್ ಕೌಶಿಕ್. ನಾಲ್ಕನೆಯರು ರಿಷಭನ ತಾಯಿ! ಆಕೆ ನಿಜಕ್ಕೂ ಗಾಡ್ಸ್ ಗ್ರೇಸ್ ಅನ್ನಬಹುದು. ಅವರೆಲ್ಲರಿಗೂ ಆತ ಭಾರತಕ್ಕೆ ಎಷ್ಟು ಅಮೂಲ್ಯ ಆಟಗಾರ ಎಂದು ಗೊತ್ತಿತ್ತು! ಆಸ್ಪತ್ರೆಯ ಹಾಸಿಗೆಗೆ ಒರಗಿ ಆತ ಪಟ್ಟ ಮಾನಸಿಕ ಮತ್ತು ದೈಹಿಕ ನೋವು, ಹೊರಹಾಕಿದ ನಿಟ್ಟುಸಿರು ಎಲ್ಲವೂ ಆ ನಾಲ್ಕು ಮಂದಿಗೆ ಗೊತ್ತಿತ್ತು.

ಆ ಹದಿನೈದು ತಿಂಗಳು…!

Rishabh Panth

ಆ ಅವಧಿಯಲ್ಲಿ ಏಷಿಯಾ ಕಪ್, ವಿಶ್ವ ಟೆಸ್ಟ್ ಚಾಂಪಿಯನಶಿಪ್, ವಿಶ್ವ ಕಪ್ ಎಲ್ಲವೂ ನಡೆದುಹೋಯಿತು! ಭಾರತ ಹಲವು ವಿಕೆಟ್ ಕೀಪರಗಳ ಪ್ರಯೋಗ ಮಾಡಿತು. ಭಾರತ ಒಂದೂ ಕಪ್ ಗೆಲ್ಲಲಿಲ್ಲ. ಭಾರತಕ್ಕೆ ಶಾಶ್ವತವಾದ ವಿಕೆಟ್ ಕೀಪರ್ ಸಿಗಲಿಲ್ಲ! ರಿಷಭ್ ಈ ಎಲ್ಲ ಪಂದ್ಯಗಳನ್ನು ನೋಡುತ್ತಿದ್ದ. ವಿಕೆಟ್ ಹಿಂದೆ ಅವನಿಗೆ ಅವನೇ ಕಾಣುತ್ತಿದ್ದ!

ಹಾಸಿಗೆಯಿಂದ ಎದ್ದು ಕ್ರಚಸ್ ಹಿಡಿದು ನಡೆದದ್ದು, ನಂತರ ಕ್ರಚಸ್ ಬದಿಗೆ ಇಟ್ಟು ಗೋಡೆ ಹಿಡಿದು ನಡೆದದ್ದು, ನಂತರ ಎಲ್ಲವನ್ನೂ ಬಿಟ್ಟು ನಿಧಾನವಾಗಿ ತನ್ನ ಕಾಲ ಮೇಲೆ ಗಟ್ಟಿಯಾಗಿ ನಿಂತದ್ದು, ಜಾಗಿಂಗ್ ಮಾಡಿದ್ದು, ಓಡಿದ್ದು, ಕಾಲುಗಳಿಗೆ ಫಿಸಿಯೋ ಥೆರಪಿ ಆದದ್ದು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಕೌನ್ಸೆಲಿಂಗ್ ನೆರವು ಪಡೆದದ್ದು….ಇವೆಲ್ಲವೂ ಕನಸಿನಂತೆ ಗೋಚರ ಆಗುತ್ತಿದೆ. ಮುಂದೆ ನಿರಂತರ ಕ್ರಿಕೆಟ್ ಕೋಚಿಂಗ್, ಮೈದಾನದಲ್ಲಿ ಬೆವರು ಹರಿಸಿದ್ದು, ಅಪಘಾತವಾದ ಕಾಲು ಬಗ್ಗಿಸಲು ತುಂಬ ಕಷ್ಟಪಟ್ಟದ್ದು ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ ಅನ್ನಿಸುತ್ತಿದೆ.

2024 ಮಾರ್ಚ್ 12….

ಒಬ್ಬ ಕ್ರಿಕೆಟರ್ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ ಮೈದಾನಕ್ಕೆ ಇಳಿಯಲು ಬಿಸಿಸಿಐ ಫಿಟ್ನೆಸ್ ಸರ್ಟಿಫಿಕೇಟ್ ಕೊಡಬೇಕು. ಅದು ಸುಲಭದ ಕೆಲಸ ಅಲ್ಲ. ಅಲ್ಲಿ ಕೂಡ ರಿಶಭ್ ಇಚ್ಛಾಶಕ್ತಿ ಗೆದ್ದಿತ್ತು. ಮಾರ್ಚ್ 12ರಂದು ಆತನು ಕ್ರಿಕೆಟ್ ಆಡಲು ಸಂಪೂರ್ಣ ಫಿಟ್ ಎಂದು ಬಿಸಿಸಿಐ ಘೋಷಣೆ ಮಾಡಿದಾಗ ಆತ ಮೈದಾನದ ಮಧ್ಯೆ ಕೂತು ಜೋರಾಗಿ ಕಣ್ಣೀರು ಹಾಕಿದ್ದನು! ಎರಡೇ ದಿನದಲ್ಲಿ ಡೆಲ್ಲಿ ಐಪಿಎಲ್ ತಂಡವು ಆತನನ್ನು ತೆರೆದ ತೋಳುಗಳಿಂದ ಸ್ವಾಗತ ಮಾಡಿ ನಾಯಕತ್ವವನ್ನು ಕೂಡ ಆತನಿಗೆ ನೀಡಿತ್ತು! ಈ ಐಪಿಎಲ್ ಸೀಸನ್‌ನಲ್ಲಿ ವಿಕೆಟ್ ಮುಂದೆ ಮತ್ತು ಹಿಂದೆ ಆತ ಆಕ್ರಮಣಕಾರಿ ಆಗಿ ಆಡುತ್ತಿರುವುದನ್ನು ನೀವು ನೋಡಿಯೇ ನೋಡಿರುತ್ತೀರಿ!

ಮುಂದಿನ T20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಒಬ್ಬ ಅದ್ಭುತ ಬ್ಯಾಟರ್ ಮತ್ತು ವಿಕೆಟ್ ಕೀಪರ್ ದೊರಕಿದ್ದನ್ನು ನಾವು ಸಂಭ್ರಮಿಸಲು ಯಾವ ಅಡ್ಡಿ ಕೂಡ ಇಲ್ಲ ಎನ್ನಬಹುದು. ಆತನಿಗೆ ಶುಭವಾಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

Continue Reading

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading
Advertisement
Karnataka Weather Forecast
ಮಳೆ5 mins ago

Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಶಾಖದ ಹೊಡೆತ

Chandrayaan 3
ದೇಶ16 mins ago

Chandrayaan 3: ಇತಿಹಾಸ ಸೃಷ್ಟಿಸಿ ಚಂದ್ರನ ಮಡಿಲಲ್ಲಿ ಮಲಗಿದ ವಿಕ್ರಮ್‌ ಲ್ಯಾಂಡರ್‌, ಪ್ರಜ್ಞಾನ್‌ ರೋವರ್; ಇಲ್ಲಿವೆ Photos

Amitabh Bachchan vanity van ambition was to pee by Vidhu Vinod Chopra
ಬಾಲಿವುಡ್17 mins ago

Amitabh Bachchan: ಅಮಿತಾಭ್‌ ಬಚ್ಚನ್‌ ವ್ಯಾನ್‌ನಲ್ಲಿ ಸುಸ್ಸು ಮಾಡೋದೇ ನನ್ನ ಗುರಿ ಎಂದ ಖ್ಯಾತ ನಿರ್ದೇಶಕ!

Prajwal Revanna Case Minister Zameer Ahmed close aide makes Prajwal obscene video pen drive viral
ರಾಜಕೀಯ22 mins ago

Prajwal Revanna Case: ಪ್ರಜ್ವಲ್‌ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ವೈರಲ್‌ ಮಾಡಿದ್ದು ಸಚಿವ ಜಮೀರ್‌ ಅಹ್ಮದ್‌ ಆಪ್ತ?

T20 World Cup
ಕ್ರೀಡೆ27 mins ago

T20 World Cup: ರೋಹಿತ್​, ಅಗರ್ಕರ್​ ಜಂಟಿ ಸುದ್ದಿಗೋಷ್ಠಿಗೆ ಕ್ಷಣಗಣನೆ

Deepak Chahar
ಪ್ರಮುಖ ಸುದ್ದಿ27 mins ago

Deepak Chahar : ಸಹೋದರನನ್ನು ಗೇಲಿ ಮಾಡಿದವರಿಗೆ ತಿರುಗೇಟು ಕೊಟ್ಟ ದೀಪಕ್ ಚಾಹರ್​ ಸಹೋದರಿ!

Viral video
ವೈರಲ್ ನ್ಯೂಸ್31 mins ago

Viral Video:ಶಾಕಿಂಗ್‌ ವಿಡಿಯೋ! ಮಗನನ್ನು ಟ್ರೆಡ್‌ಮಿಲ್‌ನಲ್ಲಿ ಓಡಿಸಿ ಪ್ರಾಣವನ್ನೇ ತೆಗೆದ ಪಾಪಿ ತಂದೆ

assault case in Bengaluru
ಬೆಂಗಳೂರು39 mins ago

Assault Case : ವಿವಾಹಿತೆ ಹಿಂದೆ ಬಿದ್ದ ಪಾಗಲ್‌ ಪ್ರೇಮಿ; ಮದುವೆ ನಿರಾಕರಿಸಿದ್ದಕ್ಕೆ ಮನೆಗೆ ಇಟ್ಟ ಬೆಂಕಿ

Vote Jihad
ದೇಶ51 mins ago

Vote Jihad: ವೋಟ್‌ ಜಿಹಾದ್‌ಗೆ ಕರೆ ನೀಡಿದ್ದು ಇಂಡಿಯಾ ಒಕ್ಕೂಟದ ಮನಸ್ಥಿತಿಗೆ ಕನ್ನಡಿ ಎಂದ ಮೋದಿ

Prajwal Revanna Case PM Modi defends MP accused of rape says Rahul Gandhi
Lok Sabha Election 202457 mins ago

Prajwal Revanna Case: ಮಹಾನ್‌ ರೇಪಿಸ್ಟ್‌ಗೆ ಮೋದಿಯಿಂದ ರಕ್ಷಣೆ; ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ರಾಹುಲ್‌ ಗಾಂಧಿ ಗುಡುಗು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌