ನನ್ನ ದೇಶ ನನ್ನ ದನಿ ಅಂಕಣ: ಅಂಬೇಡ್ಕರ್, ಮುಸ್ಲಿಂ ಲೀಗ್ ಒತ್ತಾಯಿಸಿದರೂ ಜನಸಂಖ್ಯಾ ವಿನಿಮಯ ಆಗಲಿಲ್ಲ! - Vistara News

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಅಂಬೇಡ್ಕರ್, ಮುಸ್ಲಿಂ ಲೀಗ್ ಒತ್ತಾಯಿಸಿದರೂ ಜನಸಂಖ್ಯಾ ವಿನಿಮಯ ಆಗಲಿಲ್ಲ!

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳನ್ನು ರೂಪಿಸಿದವರು, ಸತ್ಯಸಂಗತಿಗಳನ್ನು ಮುಚ್ಚಿಟ್ಟು, ಬರೀ “ಅಹಿಂಸೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿತು” ಎಂಬ ಸುಳ್ಳನ್ನೇ ಹಾಡುತ್ತಾ ಬಂದಿದ್ದಾರೆ. ಇಂದಿಗೂ ಭಾರತೀಯ ಜನಮಾನಸದಲ್ಲಿ ಗಾಂಧಿ – ನೆಹರೂ ಹೆಸರಿನ ಇಂತಹ ಮಿಥ್ಯಾ ಪೂರ್ವಗ್ರಹಗಳೇ ತುಂಬಿಕೊಂಡಿವೆ. ದೇಶದ ಶತ್ರುಗಳು ನಮ್ಮಿಂದ ಮುಚ್ಚಿಟ್ಟ ನಿಜೇತಿಹಾಸದ ಗರ್ಭದಲ್ಲಿ ಇನ್ನೇನೇನು ಭಯಾನಕ ಸಂಗತಿಗಳು ಅಡಗಿವೆಯೋ!

VISTARANEWS.COM


on

nanna desha nanna dani column ambedkar jinnah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ಪಾಕಿಸ್ತಾನಕ್ಕೆ (pakistan) ಸಂಬಂಧಿಸಿದಂತೆ, 1940ರಷ್ಟು ಹಿಂದೆಯೇ, ಡಾ।। ಅಂಬೇಡ್ಕರ್ (Dr Ambedkar) ಅವರು ಜನಸಂಖ್ಯಾ ವಿನಿಮಯವನ್ನು ಪ್ರಸ್ತಾಪಿಸಿದ್ದರು. ಕ್ವಾಯಿಡ್-ಏ-ಆಜಂ (ಮಹಾನ್ ನಾಯಕ) ಎಂದೇ ಹೆಸರಾದ ಮೊಹಮ್ಮದ್ ಅಲಿ ಜಿನ್ನಾ (Mohammed Ali Jinnah) ಪಾಕಿಸ್ತಾನದ ನಿರ್ಮಾತೃ. ಪಾಕಿಸ್ತಾನದ ನಿರ್ಮಾಣದ ಅನಂತರ ಅವರು ಅಲ್ಲಿನ ಗವರ್ನರ್ ಜನರಲ್ ಆದರು. ಆ ಪದವಿ ಎಂದರೆ “ಸಶಸ್ತ್ರ ಪಡೆಗಳ ಮಹಾ ದಂಡನಾಯಕ” ಎಂದರ್ಥ. ಅದು ಬಹಳ ಬಹಳ ಮಹತ್ತ್ವದ್ದು ಎಂಬುದು ಜಿನ್ನಾಗೆ ಗೊತ್ತಿತ್ತು. ಭಾರತದ “ನಮ್ಮ” ನಾಯಕರು, ಯಾವುದಕ್ಕೂ ಹೇಸದ ನೀಚ – ಕುತಂತ್ರಿ ಮೌಂಟ್ ಬ್ಯಾಟನ್ ನನ್ನೇ ಇಲ್ಲಿನ ಗವರ್ನರ್ ಜನರಲ್ ಆಗಿ ಉಳಿಸಿಕೊಂಡುದರಿಂದ ಬಹಳ ಬಹಳ ತೊಂದರೆಯಾಯಿತು. ನವನಿರ್ಮಿತ ಇಸ್ಲಾಮಿಕ್ ದೇಶ ಪಾಕಿಸ್ತಾನದ ಕಡೆಯಿಂದ ಕಾಶ್ಮೀರವನ್ನು (Kashmir) ಆಕ್ರಮಿಸಿಕೊಳ್ಳಲು, ವಶಪಡಿಸಿಕೊಳ್ಳಲು ಪಾಕ್ ಸೇನೆ ನುಗ್ಗಿ ಬರುತ್ತಿದ್ದರೂ ನಮ್ಮ ಸೇನಾ ಪ್ರತ್ಯಾಕ್ರಮಣಕ್ಕೆ ಮೌಂಟ್ ಬ್ಯಾಟನ್ ಅನುಮತಿ ನೀಡಲೇ ಇಲ್ಲ. ಅವನು ಮೂಲಭೂತವಾಗಿ ಅಂತಹ ನೀಚನೇ, ಧೂರ್ತನೇ. ಹಾಗಾಗಿ ಕಾಶ್ಮೀರದ ಮೂರನೆಯ ಒಂದು ಭಾಗ ಇಂದಿಗೂ ಪಾಕಿಸ್ತಾನದಲ್ಲಿಯೇ ಇದೆ. ನಮ್ಮ “ಮಹಾನ್” ನಾಯಕರು ಮಾಡಿದ ಇಂತಹ ಅವಿವೇಕಗಳು ಒಂದು, ಎರಡು ಅಲ್ಲ.

ಜಿನ್ನಾ ಪಾಕಿಸ್ತಾನದ “ಫಾದರ್ ಆಫ್ ದ ನೇಷನ್” ಸಹ ಆದರು. ಅವರ ಚಿತ್ರವೇ ಪಾಕಿಸ್ತಾನದ ಕರೆನ್ಸಿ ನೋಟುಗಳ ಮೇಲೆ ಇಂದಿಗೂ ರಾರಾಜಿಸುತ್ತಿದೆ. ಪಾಕ್ ನಿರ್ಮಾಣಕ್ಕೆ ಮೊದಲೇ, ಅವಿಭಜಿತ ಭಾರತದಲ್ಲಿಯೇ ಜಿನ್ನಾ 1941ರಲ್ಲಿ “ದ ಡಾನ್” ಇಂಗ್ಲಿಷ್ ಪತ್ರಿಕೆಯನ್ನು ಹುಟ್ಟುಹಾಕಿದರು. “ದ ಡಾನ್” ಮುಸ್ಲಿಂ ಲೀಗಿನ ಮುಖವಾಣಿಯಾಗಿ ಬೆಳೆಯಿತು. ಅಭಿಲೇಖಾಗಾರಗಳಲ್ಲಿ (Archives) ದೊರೆಯುವ ಈ ಪತ್ರಿಕೆಯ ಸಂಚಿಕೆಗಳು, ಪ್ರಚಲಿತ ಸುಳ್ಳು ಇತಿಹಾಸವನ್ನೇ ಓದುತ್ತ ಬಂದವರಿಗೆ ಆಘಾತವನ್ನೇ ಉಂಟುಮಾಡುತ್ತವೆ.

1946-47ರ ಅತ್ಯಂತ ಭಯಾನಕ ಕಾಲಘಟ್ಟದಲ್ಲಿ ಜಿನ್ನಾ ಮತ್ತು ಮುಸ್ಲಿಂ ಲೀಗ್ ಕಾರಣದಿಂದ, 20ಲಕ್ಷಕ್ಕೂ ಹೆಚ್ಚು ಜನರ ಹತ್ಯೆ, ಆ ಕಾಲಕ್ಕೆ ಅತಿ ದೊಡ್ಡ ಸಂಖ್ಯೆ ಎನಿಸುವ ಎರಡು ಕೋಟಿ ಜನರು ಮನೆಮಠ ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿ ವಲಸೆ ಹೋಗಿದ್ದು, ಅಕ್ಷರಶಃ ಅನೇಕ ಲಕ್ಷ ಹೆಣ್ಣುಮಕ್ಕಳ ಮೇಲೆ ಬರ್ಬರ ಅತ್ಯಾಚಾರ ಆದುದು ಕಟುವಾಸ್ತವ. ವಿಭಜನೆಯ ಮಹಾಕ್ಷೋಭೆಯನ್ನು ನಿರ್ವಹಿಸಲು “ಬ್ರಿಟಿಷರ ಪ್ರೀತಿಪಾತ್ರ”ರಂತೂ ಸಂಪೂರ್ಣವಾಗಿ ಅಸಮರ್ಥರಾಗಿದ್ದರು ಮತ್ತು ಗಮನಿಸಿ ನೋಡಿದರೆ, ಅವರ ಎಲ್ಲ ನಿರ್ಧಾರ – ಉದ್ದೇಶಗಳೂ ಅನುಮಾನಕ್ಕೆ ಕಾರಣವಾಗುತ್ತವೆ. ಪ್ರಸ್ತುತ ಬಾಂಗ್ಲಾದೇಶಕ್ಕೆ ಸೇರಿಹೋಗಿರುವ ಇಡೀ ನೋವಾಖಾಲೀ ಪ್ರದೇಶದಲ್ಲಿ ನಡೆದ ಮುಸ್ಲಿಮರ ದೌರ್ಜನ್ಯ, ಅತ್ಯಾಚಾರ, ಜಿಜಿಯಾ ತೆರಿಗೆ ಹಾಕುವುದು, ನರಸಂಹಾರಗಳು ಬೀಭತ್ಸ ಸ್ವರೂಪದವು. ವಿಚಿತ್ರವೆಂದರೆ, ಅಲ್ಲಿನ ಹಿಂದೂಗಳು ರೋಸಿಹೋಗಿ ಪ್ರತ್ಯಾಘಾತ ನೀಡಲು ಉದ್ಯುಕ್ತರಾದಾಗ, ಮಹಾತ್ಮರು ಅಲ್ಲಿಗೇ “ಶಾಂತಿಸ್ಥಾಪನೆಗೆಂದು ಹೋಗಿ” ಹಿಂದೂಗಳ ಕೈಕಟ್ಟಿಹಾಕಿದರು. ಅಂತೆಯೇ, ಬಿಹಾರದ ಮುಸ್ಲಿಮರ ಹಿಂಸೆ ಅತ್ಯಾಚಾರಗಳು ಮಿತಿಮೀರಿ, ಅಲ್ಲಿನ ಹಿಂದೂಗಳೂ ತಿರುಗೇಟು ನೀಡಲು ಪ್ರಾರಂಭಿಸಿದಾಗ ನೆಹರೂ ಅವರು ಬಿಹಾರದ ಮೇಲೆ ಬಾಂಬ್ ಹಾಕುವುದಾಗಿ ಘರ್ಜಿಸಿದರು.

ನಿಜೇತಿಹಾಸದ ಪುಟಗಳನ್ನು ಗಮನಿಸಿ ವಿಶ್ಲೇಷಿಸಿದಾಗ, ಹಿಂದೂ ಸಮಾಜಕ್ಕೆ ತನ್ನ “ಸ್ವಯಂಘೋಷಿತ ಶತ್ರುಗಳು” ಯಾರು, “ಅಘೋಷಿತ ಶತ್ರುಗಳು” ಯಾರು ಎನ್ನುವುದು ಅಂದಿಗೂ ಗೊತ್ತಾಗಿಲ್ಲ, ಇಂದಿಗೂ ಅರ್ಥವಾಗುತ್ತಿಲ್ಲ, ಎನಿಸಿ ವಿಷಾದವೆನಿಸಿಬಿಡುತ್ತದೆ.

ಡಾ|| ಅಂಬೇಡ್ಕರ್ ಅವರು ಪ್ರಸ್ತಾಪಿಸಿದ ಜನಸಂಖ್ಯಾ ವಿನಿಮಯವನ್ನು ಕಾಂಗ್ರೆಸ್ ಒಪ್ಪಿದ್ದರೆ ಕೋಟಿಗಟ್ಟಲೆ ಹಿಂದೂಗಳ ಮಾನಹಾನಿ, ಪ್ರಾಣಹಾನಿಗಳನ್ನು ತಪ್ಪಿಸಬಹುದಿತ್ತು. ವಿಚಿತ್ರ ನೋಡಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ, ವಿಭಜನೆಯ ಮಹಾದುರಂತಕ್ಕೆ ಮೊದಲೇ ಮುಸ್ಲಿಂ ಲೀಗ್ ಸಹ, ಜನಸಂಖ್ಯಾ ವಿನಿಮಯಕ್ಕೆ (Exchange of Population) ಒತ್ತಾಯಿಸಿತ್ತು. ಅಷ್ಟೇ ಅಲ್ಲ, “ಕಾಂಗ್ರೆಸ್ ರಕ್ತಪಾತವನ್ನು ಬಯಸುತ್ತದೆ” ಎಂದು ಟೀಕಿಸಿತ್ತು. “ಡಾನ್” ಪತ್ರಿಕೆಯ 1946ರ ಡಿಸೆಂಬರ್ 3ರ ಸಂಚಿಕೆಯನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. ಲಾಹೋರ್ ಮೂಲದ ಈ ಸುದ್ದಿ ಮತ್ತು “Exchange of Population – A most practicable solution” ಮತ್ತು “Congress prefers Bloodshed to Peaceful Settlement” ಎನ್ನುವ ಶೀರ್ಷಿಕೆಗಳು ನಮ್ಮ ದುಃಖವನ್ನು ಮಡುಗಟ್ಟಿಸಿಬಿಡುತ್ತವೆ. ಸ್ವತಃ ಮುಸ್ಲಿಂ ಲೀಗ್ ಈ ವಿನಿಮಯಕ್ಕೆ ಒತ್ತಾಯಿಸಿದರೂ, ನಮ್ಮ ನಾಯಕರು ಬೇಕೆಂದೇ ವಿನಿಮಯವನ್ನು ಅನುಷ್ಠಾನಗೊಳಿಸದೇ, ಎಂತಹ ಅಕಾರ್ಯವನ್ನೆಸಗಿಬಿಟ್ಟರಲ್ಲಾ ಎನಿಸಿಬಿಡುತ್ತದೆ.

ಇದಕ್ಕೂ ಮೊದಲೇ ಇದೇ “ಡಾನ್” ಪತ್ರಿಕೆಯ (ದಿನಾಂಕ 26ನೆಯ ನವೆಂಬರ್ 1946) ಕರಾಚಿ ಮೂಲದ ಸುದ್ದಿಯಲ್ಲಿಯೂ “Exchange of Population Question must be taken up immediately” (ಹಿಂದೂ – ಮುಸ್ಲಿಂ ಜನಸಮುದಾಯದ ವಿನಿಮಯವನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು) ಎನ್ನುವ ಒತ್ತಾಯವಿದೆ. ಆದರೂ ಗಾಂಧೀ – ನೆಹರೂ ಮತ್ತು ಕಾಂಗ್ರೆಸ್ಸಿಗರ ಹೃದಯ ಹಿಂದೂಗಳಿಗಾಗಿ ಕರಗಲೇ ಇಲ್ಲ, ಮರುಗಲೇ ಇಲ್ಲ.

partition

ಅಂಬೇಡ್ಕರ್ ಅವರು ಪ್ರತಿಪಾದಿಸಿದ ಮತ್ತು ಸ್ವತಃ ಮುಸ್ಲಿಂ ಲೀಗ್ ಒತ್ತಾಯಿಸಿದ ಜನಸಂಖ್ಯಾ ವಿನಿಮಯ ಏಕೆ ಆಗಲಿಲ್ಲ? ವಿಭಜನೆಯನ್ನೇ ಒಪ್ಪುವುದಿಲ್ಲ, ಎನ್ನುತ್ತಿದ್ದ ಗಾಂಧೀಜಿಯವರು ಜೂನ್ 1947ರ ಕಾಂಗ್ರೆಸ್ ಸಭೆಯಲ್ಲಿ ಯಾವುದೇ ಪ್ರತಿಭಟನೆ ಪ್ರತಿರೋಧಗಳನ್ನು ಮಾಡದೆಯೇ ವಿಭಜನೆಯನ್ನು ಏಕೆ ಒಪ್ಪಿಕೊಂಡರು, ಎನ್ನುವುದನ್ನೂ ಪ್ರಶ್ನಿಸಬೇಕಾಗುತ್ತದೆ. ದೇಶವಿಭಜನೆಗೆ, ಹತ್ಯಾಕಾಂಡಕ್ಕೆ ಕಾಂಗ್ರೆಸ್ಸಿಗರು RSS – ಸಾವರ್ಕರ್ – ಹಿಂದೂ ಮಹಾಸಭಾಗಳನ್ನು ಅಂದಿಗೂ ದೂಷಿಸುತ್ತಿದ್ದರು, ಇಂದಿಗೂ ಹೊಣೆ ಮಾಡುತ್ತಾರೆ. ಡಾ।। ಲೋಹಿಯಾ ತಮ್ಮ “GUILTY MEN OF PARTITION” ಗ್ರಂಥದಲ್ಲಿ ದಾಖಲಿಸಿರುವ ಸಂಗತಿಗಳು ಓದಿದವರ ರಕ್ತವನ್ನೇ ಹೆಪ್ಪುಗಟ್ಟಿಸುತ್ತವೆ. ವಿಭಜನೆಯ ನಿರ್ಧಾರದ ಮುಖ್ಯ ಪಾತ್ರಧಾರಿಗಳಾದ ನೆಹರೂ ಮತ್ತು ಇನ್ನಿತರ ಕಾಂಗ್ರೆಸ್ಸಿಗರನ್ನು ಲೋಹಿಯಾ ಖಂಡತುಂಡವಾಗಿ ಟೀಕಿಸಿದ್ದಾರೆ. ದೇಶವನ್ನು ತುಂಡು ತುಂಡು ಮಾಡಲು ಕಾತರರಾಗಿದ್ದ ಮತ್ತು ಅಧಿಕಾರ ಗ್ರಹಣಕ್ಕೆ ಹಾತೊರೆಯುತ್ತಿದ್ದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಆ ಐತಿಹಾಸಿಕ (ಜೂನ್ 1947) ಸಭೆಗೆ ಸಮಾಜವಾದಿಗಳಾದ ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣರು ವಿಶೇಷ ಆಹ್ವಾನಿತರಾಗಿ ಹೋಗಿದ್ದರು. ಅಂದಿನ ವಿಶೇಷವೆಂದರೆ, ಇವರೀರ್ವರೂ ವಿಭಜನೆಯನ್ನು ವಿರೋಧಿಸಿದರು (ಪುಟ 9). ಸಾರ್ವಜನಿಕ ಭಾಷಣಗಳಲ್ಲಿ “ದೇಶ ತುಂಡು ಮಾಡುವ ಮುನ್ನ, ನನ್ನ ದೇಹವನ್ನು ತುಂಡರಿಸಲಿ” ಎನ್ನುತ್ತಿದ್ದ ಗಾಂಧೀಜಿಯವರು ಮಾತ್ರ ಆ ನಿರ್ಣಾಯಕ ಸಭೆಯಲ್ಲಿ ವಿಭಜನೆಯನ್ನು ವಿರೋಧಿಸಲೇ ಇಲ್ಲ. ನೆಹರೂ, ಪಟೇಲ್ ನೇತೃತ್ವವು ಆ ಸಭೆಗೆ ಮೊದಲೇ ಎಲ್ಲವನ್ನೂ ತೀರ್ಮಾನಿಸಿಬಿಟ್ಟಿತ್ತು. ಆ ಸಭೆಯು ಕೇವಲ ಔಪಚಾರಿಕವಾಗಿಹೋಗಿತ್ತು. ಅಧಿಕಾರಕ್ಕಾಗಿ ನೆಹರೂ (ಪುಟ 12) ಬ್ರಿಟಿಷರೊಂದಿಗೆ ಕೈಜೋಡಿಸಿಬಿಟ್ಟಿದ್ದರು, ಎಂದು ವಿಷಾದಿಸಿದ್ದರು, ಡಾ।। ಲೋಹಿಯಾ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

“ಡಾನ್” ಪತ್ರಿಕೆಯ 4ನೆಯ ಡಿಸೆಂಬರ್ 1946ರ ಪತ್ರಿಕೆಯಲ್ಲಿ ಲಕ್ನೋ (ಇಂದಿನ ಉತ್ತರ ಪ್ರದೇಶದ ರಾಜಧಾನಿ) ಮೂಲದ ಸುದ್ದಿಯಲ್ಲಿ ಅಂದಿನ ಸಿಂಧ್ ಪ್ರಾಂತದ ಮುಸ್ಲಿಂ ಲೀಗ್ ಮುಖಂಡ ಗುಲಾಮ್ ಹುಸೇನ್ ಹಿದಾಯತುಲ್ಲಾ “ಸಿಂಧ್ ಪ್ರಾಂತದಲ್ಲಿ ನೆಲೆಸುವ ಉತ್ತರ ಪ್ರದೇಶದ ಮುಸ್ಲಿಮರಿಗಾಗಿ ಕೃಷಿ ಭೂಮಿ ನೀಡಲು ವ್ಯವಸ್ಥೆ” ಮಾಡುವುದಾಗಿ ಹೇಳಿದ್ದ. ಇತಿಹಾಸ ಬಹಳ ಬಹಳ ವಿಚಿತ್ರವಾದುದು. ಪಾಕಿಸ್ತಾನದ ಕಲ್ಪನೆ ಅಂಕುರಿಸಿದ್ದೇ ಉತ್ತರಪ್ರದೇಶದಲ್ಲಿ. ಇಂದಿಗೂ ಅಲ್ಲಿ ರಾರಾಜಿಸುತ್ತಿರುವ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿಯೇ “ಹಿಂದೂ ಮುಸ್ಲಿಂ ಸಹಬಾಳ್ವೆ ಸಾಧ್ಯವಿಲ್ಲ. ಮುಸ್ಲಿಮರಿಗೆ ಪ್ರತ್ಯೇಕ ದೇಶವೇ ಬೇಕು” ಎಂಬ ಪರಿಕಲ್ಪನೆ ಹುಟ್ಟಿಕೊಂಡಿದ್ದು. ಶತಮಾನದ ಕಾಲ ಸೈಯದ್ ಅಹಮದ್ ಖಾನ್, ಮೊಹಮ್ಮದ್ ಇಕ್ಬಾಲ್ ಮೊದಲಾದವರು ಮುಸ್ಲಿಂ ಪ್ರತ್ಯೇಕತೆಯನ್ನೇ ಪೋಷಿಸಿಕೊಂಡು ಬಂದರು. ಆದರೂ, ದೆಹಲಿ, ಬಿಹಾರ, ಮುಖ್ಯವಾಗಿ ಉತ್ತರಪ್ರದೇಶ ಮುಂತಾದ ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಂದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲು ಗಾಂಧಿ – ನೆಹರೂ ಜೋಡಿ ಬಿಡಲೇ ಇಲ್ಲ. ದೊಡ್ಡ ಸಂಖ್ಯೆಯ ಮುಸ್ಲಿಮರನ್ನು ಇಲ್ಲೇ ಉಳಿಸಿಕೊಂಡರು ಮತ್ತು ಸಂವಿಧಾನದ ಕೆಲವು ಅನುಚ್ಛೇದಗಳಲ್ಲಿ (ಅನುಚ್ಛೇದ 29, 30 ಇತ್ಯಾದಿ) ಅಲ್ಪಸಂಖ್ಯಾತರ ಹೆಸರಿನಲ್ಲಿ ಅಪರಿಮಿತ ಹಕ್ಕುಗಳನ್ನೂ ಸೌಲಭ್ಯಗಳನ್ನೂ ನೀಡಿದರು. ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಅನೇಕ ಮುಸ್ಲಿಮರು, ಅಲ್ಲಿ ಅವರಿಗೆ “ಸರಿಹೋಗದೆ” ಮತ್ತೆ ಭಾರತಕ್ಕೆ ಹಿಂತಿರುಗಿ ಬಂದಾಗ, ಅವರ ಎಲ್ಲ ಆಸ್ತಿಪಾಸ್ತಿ ಉಳಿಸಿಕೊಟ್ಟರು, ವಾಪಸ್ ಕೊಡಿಸಿದರು. ಎರಡೂ ದೇಶಗಳ ಹಿಂದೂಗಳು ಮಾತ್ರ ತುಂಬಾ ತುಂಬಾ ದುರದೃಷ್ಟಶಾಲಿಗಳು. ಪಶ್ಚಿಮ ಪಾಕಿಸ್ತಾನದಲ್ಲಿ ಇದ್ದ ಬಹುಪಾಲು ಎಲ್ಲ ಹಿಂದೂಗಳ ಕಗ್ಗೊಲೆಯಾಯಿತು, ಬಲವಂತದ ಮತಾಂತರವಾಯಿತು, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳಂತೂ ಅವರ್ಣನೀಯ. ಅಲ್ಲಿ ಅಳಿದುಳಿದ ಸಿಖ್ಖರ ಸ್ಥಿತಿಯೂ ತೀರಾ ಹೀನಾಯ.

ನಮ್ಮ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳನ್ನು ರೂಪಿಸಿದವರು, ಈ ಎಲ್ಲ ಸತ್ಯಸಂಗತಿಗಳನ್ನು ಮುಚ್ಚಿಟ್ಟು, ಬರೀ “ಅಹಿಂಸೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿತು” ಎಂಬ ಸುಳ್ಳನ್ನೇ ಹಾಡುತ್ತಾ ಬಂದಿದ್ದಾರೆ. ಪ್ರತಿಯೊಂದು ಹಳ್ಳಿ, ಪಟ್ಟಣ ಮತ್ತು ನಗರಗಳಲ್ಲಿ ಗಾಂಧಿ – ನೆಹರೂ ಹೆಸರಿನಲ್ಲಿ ಬಡಾವಣೆಗಳು, ರಸ್ತೆಗಳು, ವೃತ್ತಗಳು, ಶಾಲೆಗಳು, ಸಂಸ್ಥೆಗಳನ್ನು ಹುಟ್ಟುಹಾಕಿದರೆ, ಸಹಜವಾಗಿ ಇಡೀ ಜನಕೋಟಿ “ಇವರೇ ಈ ದೇಶವನ್ನು ಕಟ್ಟಿ ಬೆಳೆಸಿದವರು, ಇವರೇ ಕಡಿದು ಕಟ್ಟೆಹಾಕಿದವರು” ಎಂದುಕೊಂಡುಬಿಡುತ್ತದೆ. ನಮಗೆಲ್ಲ ಆದುದೂ ಅದೇ! ಇಂದಿಗೂ ಭಾರತೀಯ ಜನಮಾನಸದಲ್ಲಿ ಇಂತಹ ಮಿಥ್ಯಾ ಪೂರ್ವಗ್ರಹಗಳೇ ತುಂಬಿಕೊಂಡಿವೆ.

ಪುಣ್ಯಕ್ಕೆ ಈಚಿನ ವರ್ಷಗಳಲ್ಲಿ ಮಹತ್ತ್ವದ ಅನೇಕ ಸತ್ಯಸಂಗತಿಗಳು, ದಾಖಲೆಗಳು ಜನರ ಮುಂದೆ ಕಾಣಿಸಿಕೊಳ್ಳುತ್ತಿವೆ. ಆ ಎಲ್ಲ ಬಹುಪಾಲು ದಾಖಲೆಗಳೂ ನಮ್ಮೊಳಗೆ ಉತ್ಪಾತವನ್ನೇ ಮಾಡುತ್ತಿವೆ, ಮಾಡಿಬಿಡುತ್ತವೆ. ದೇಶದ ಶತ್ರುಗಳು ನಮ್ಮಿಂದ ಮುಚ್ಚಿಟ್ಟ ನಿಜೇತಿಹಾಸದ ಗರ್ಭದಲ್ಲಿ ಇನ್ನೇನೇನು ಭಯಾನಕ ಸಂಗತಿಗಳು ಅಡಗಿವೆಯೋ!

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: “ನೀವು ಭಾರತೀಯರೋ, ರಾಷ್ಟ್ರೀಯರೋ?” ಎಮರ್ಜೆನ್ಸಿಯ ಕರಾಳ ನೆನಪು

ನನ್ನ ದೇಶ ನನ್ನ ದನಿ ಅಂಕಣ: ಇದೆಲ್ಲಾ ನಡೆದು ನಲವತ್ತೇಳು ವರ್ಷಗಳೇ ಉರುಳಿವೆ. ಕರಾಳ ತುರ್ತುಪರಿಸ್ಥಿತಿಯ ನೂರೆಂಟು ನೆನಪುಗಳು ಕಣ್ಮುಂದೆ ಸುತ್ತುತ್ತವೆ. ಇಡೀ ದೇಶದಲ್ಲಿ ಈ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ MP, MLA, MLC ಸತ್ಯಾಗ್ರಹ ಮಾಡಲಿಲ್ಲ, ಪ್ರತಿಭಟಿಸಲಿಲ್ಲ, ಬಂಧನಕ್ಕೆ ಒಳಗಾಗಲಿಲ್ಲ. ನಾವೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ಬ್ರಿಟಿಷರಿಂದ ನಾವೇ ಸ್ವಾತಂತ್ರ್ಯವನ್ನು ಪಡೆದೆವು, ಎಂದು ದಶಕಗಳಿಂದ ಸುಳ್ಳು ಹೇಳಿಕೊಂಡೇ ಬಂದ ಕಾಂಗ್ರೆಸ್ಸಿನವರಿಗೆ ಇದು ಪ್ರಜಾದ್ರೋಹ, ಇದು ಸ್ವಾತಂತ್ರ್ಯಹರಣ, ಈ ತುರ್ತುಪರಿಸ್ಥಿತಿಯು ಅನ್ಯಾಯದ ಪರಮಾವಧಿ ಎಂದು ಅನ್ನಿಸಲೇ ಇಲ್ಲ!

VISTARANEWS.COM


on

indira gandhi ನನ್ನ ದೇಶ ನನ್ನ ದನಿ
Koo

ಇಂದು ತುರ್ತುಪರಿಸ್ಥಿತಿ ಹೇರಿಕೆಯ ʼಚಿನ್ನದ “ಹಬ್ಬʼ !

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ಅವು ತುರ್ತುಪರಿಸ್ಥಿತಿಯ (internal Emergency) ದಿನಗಳು. ತಮ್ಮ ಅಧಿಕಾರ ಉಳಿಸಿಕೊಳ್ಳುವ ಏಕೈಕ ದುರುದ್ದೇಶದಿಂದ ಇಂದಿರಾ ಗಾಂಧಿಯವರು (Indira Gandhi) ದೇಶದಾದ್ಯಂತ ಆಂತರಿಕ ತುರ್ತುಪರಿಸ್ಥಿತಿ ಹೇರಿದ್ದರು. ಎಲ್ಲ ಮಾಧ್ಯಮದವರು, ಓರಾಟಗಾರರು, ಬುದ್ಧಿಜೀವಿಗಳು, ಬಹುತೇಕ ವಿರೋಧ ಪಕ್ಷಗಳವರು ಶರಣಾಗತರಾಗಿಬಿಟ್ಟಿದ್ದರು, ಅಷ್ಟೇ ಅಲ್ಲ, ಮನೆಯಲ್ಲಿ ಮಂಚದ ಅಡಿಯಲ್ಲಿ ಅಡಗಿಕೊಂಡುಬಿಟ್ಟಿದ್ದರು. ತುರ್ತುಪರಿಸ್ಥಿತಿಯನ್ನು ರಾಷ್ಟೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಪರಿವಾರ ಸಂಘಟನೆಗಳು ಮಾತ್ರವೇ ವಿರೋಧಿಸುತ್ತಿದ್ದುದರಿಂದ ಇಂದಿರಾ ಗಾಂಧಿಯವರು ಆರೆಸ್ಸೆಸ್ ಎಂದರೆ ಸಿಡಿಮಿಡಿಗೊಳ್ಳುತ್ತಿದ್ದರು.

1975ರ ಆ ವರ್ಷದ ಗಾಂಧೀ ಜಯಂತಿ (Gandhi Jayanthi) ಒಂದು ವಿಶೇಷ ಸಂದೇಶ ಹೊತ್ತು ತಂದಿತು. ಆದರೆ ಆ ಸಂದೇಶ, ಸರಕಾರದ ಕಾರ್ಯಕ್ರಮಗಳ ಭಾಗವಾಗಿ ಮೂಡಿಬಂದಿರಲಿಲ್ಲ. ಆ ದಿನಗಳಲ್ಲಿ ಗಾಂಧೀಜಯಂತಿ ಆಚರಿಸಿದವರು ಸಂಘದ ಭೂಗತ ಕಾರ್ಯಕರ್ತರು. ಎದೆಯ ಮೇಲೆ ಧರಿಸಲು ಗಾಂಧೀ ಬಿಲ್ಲೆಗಳು, ಗೋಡೆಗಳನ್ನು ಅಲಂಕರಿಸಲು ಗಾಂಧೀ ಭಿತ್ತಿಚಿತ್ರಗಳು. ಎರಡರಲ್ಲೂ ಗಾಂಧೀ ಚಿತ್ರದ ಕೆಳಗೆ “ಅಸತ್ಯ, ಅನ್ಯಾಯ, ದಬ್ಬಾಳಿಕೆಗಳಿಗೆ ತಲೆಬಾಗುವುದು ಹೇಡಿತನ” ಎನ್ನುವ ಗಾಂಧೀ ಉಕ್ತಿ. ಆದರೆ ಅಂದಿನ ಇಂದಿರಾ – ದೇವರಾಜ ಅರಸು ಅವರ ಕಾಂಗ್ರೆಸ್ ಸರ್ಕಾರಗಳಿಗೆ ಗಾಂಧಿಯ ಚಿತ್ರ, ಗಾಂಧಿಯ ಉಕ್ತಿ, ಗಾಂಧಿಯ ನೆನಪು ಎಲ್ಲಾ ನಿಷಿದ್ಧವಾಗಿತ್ತು.

ಗಾಂಧೀ ಭಿತ್ತಿಪತ್ರ ಅಂಟಿಸುತ್ತಿದ್ದ ಹಲವಾರು ಜನರನ್ನು ಪೊಲೀಸರು ಬಂಧಿಸಿದರು. ಅಹಿಂಸೆ, ಅಹಿಂಸೆ ಎಂದವರ ಚಿತ್ರ ಹಿಡಿದಿದ್ದಕ್ಕೆ ಹೊಡೆದು ಬಡಿದು ಬಂಧಿಸಿ, ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ಆಪಾದಿತರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸಿದಾಗ, ನ್ಯಾಯಾಧೀಶರು ತಮ್ಮ ಕಣ್ಣು – ಕಿವಿಗಳನ್ನು ನಂಬದಾದರು. “ಏನು, ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಕ್ರಿಮಿನಲ್ ಅಪರಾಧವಾಯಿತೇ?” ಎಂದು ಪ್ರಶ್ನಿಸಿದರು. ಇದಕ್ಕೆ ಪೊಲೀಸಿನವರು ಏನು ಹೇಳಿಯಾರು! “ಇವರೆಲ್ಲಾ ಆರೆಸ್ಸೆಸ್ ಕಾರ್ಯಕರ್ತರು” ಎಂಬ ನೆಪ ಹೇಳಿದರು. “ಇರಬಹುದು, ಆದರೆ ಇವರು ಮಾಡಿದ ಅಪರಾಧವೇನು?” ಎಂದ ನ್ಯಾಯಾಧೀಶರ ಪ್ರಶ್ನೆಗಳಿಗೆ ಪೊಲೀಸರು ನಿರುತ್ತರರಾದರು. ನ್ಯಾಯಾಧೀಶರು (ಕೆಲವೆಡೆ) ಪೊಲೀಸರಿಗೆ ಛೀಮಾರಿ ಹಾಕಿ ಬಂಧಿತರನ್ನು ಬಿಡುಗಡೆ ಮಾಡಿದರು.

ಹಿಂದೆ ಉಪ್ಪಿನ ಸತ್ಯಾಗ್ರಹದಲ್ಲಿ, ಭಾರತ್ ಛೋಡೋ ಚಳವಳಿಯಲ್ಲಿ ಭಾಗವಹಿಸಿ ‘ವಂದೇ ಮಾತರಂ’, ‘ಮಹಾತ್ಮಾ ಗಾಂಧೀ ಕೀ ಜೈ’, ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಿಸುತ್ತಿದ್ದವರ ಮೇಲೆ ಬ್ರಿಟಿಷ್ ಪೊಲೀಸರ ಲಾಠಿಯೇಟು, ಬೂಟಿನೇಟು ಬೀಳುತ್ತಿತ್ತು. ‘ಸ್ವಾತಂತ್ರ್ಯ’ ಬಂದ ಮೇಲೂ ಹಾಗೆ ಘೋಷಣೆ ಕೂಗಿದವರ ಮೇಲೆ, ಕಾಂಗ್ರೆಸ್ ಸರಕಾರದ ಪೊಲೀಸರ ಲಾಠಿಯೇಟು ಬಿದ್ದುದು, ಬರಿಯ ವಿಸ್ಮಯದ – ವಿಷಾದಭಾವದ ಮಾತಲ್ಲ. ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳದೆಯೇ, ಕಾಂಗ್ರೆಸ್ಸಿನಂತಹ ಪಕ್ಷಗಳನ್ನು ಬೆಂಬಲಿಸಿ ಮತ ಹಾಕುವುದರ ದುಷ್ಪರಿಣಾಮಗಳ ಅಂತಿಮ ಹಂತವಿದು.

1975ರ ನವೆಂಬರ್ 14ರಿಂದ ದೇಶಾದ್ಯಂತ ಪ್ರತಿಭಟನೆಯನ್ನು ಆರೆಸ್ಸೆಸ್ ಪರಿವಾರ ಸಂಘಟನೆಗಳು ಹಮ್ಮಿಕೊಂಡಿದ್ದವು. ಬಹುಪಾಲು ರಾಜಕಾರಣಿಗಳು, ನಾಯಕರು ಸೆರೆಮನೆಯಲ್ಲಿದ್ದರು. ಪ್ರತಿಭಟನೆಯನ್ನು ವಿಫಲಗೊಳಿಸಲು ಅಂದಿನ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆಯ ಬಂಧನಗಳಿಗೆ (Preventive Arrests) ಆಜ್ಞೆ ಮಾಡಿತ್ತು. ಆ ಕಾರಣಕ್ಕೆ ನಾವೆಲ್ಲಾ ಬಂಧನಕ್ಕೆ ಒಳಗಾದುದು ನವೆಂಬರ್ 13ರಂದು. ಪೊಲೀಸರು “ನೀವು ಭಾರತೀಯರೋ ರಾಷ್ಟ್ರೀಯರೋ?” ಎಂದು ಪ್ರಶ್ನೆ ಹಾಕಿದಾಗ ನಾನೂ ನನ್ನ ಉಳಿದ ಸ್ವಯಂಸೇವಕ ಬಂಧುಗಳೂ ಕಕ್ಕಾಬಿಕ್ಕಿಯಾದೆವು. ನಮ್ಮ ಮುಂದೆ PSR (Prisoners’ Search Register) ಹರಡಿಕೊಂಡಿತ್ತು. ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಮುಗ್ಧತೆಯಿಂದ “ನಾವೆಲ್ಲಾ ಭಾರತೀಯರೂ ಹೌದು, ರಾಷ್ಟ್ರೀಯರೂ ಹೌದು” ಎಂದೆವು. “ಎರಡರಲ್ಲಿ ಒಂದು ಹೇಳ್ರೀ” ಎಂದು ಅವರು ಅಬ್ಬರಿಸಿದಾಗ ಇನ್ನಷ್ಟು ಗೊಂದಲ. ಕೊನೆಗೆ ಆ ಪ್ರಶ್ನೆ ನಾವು ರಾಷ್ಟೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದವರೋ, ಭಾರತೀಯ ಜನಸಂಘಕ್ಕೆ ಸಂಬಂಧಿಸಿದವರೋ ಎಂಬುದಾಗಿತ್ತು ಎಂದು ತಿಳಿದಾಗ, ಗೊಂದಲದಿಂದ ಪರಿಹಾರ. ನಾವೆಲ್ಲಾ ಒಕ್ಕೊರಲಿನಿಂದ “ನಾವು ರಾಷ್ಟೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು” ಎಂದೆವು. ಅಂದಿನ ದಿನಮಾನಗಳಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಹೆಸರನ್ನು ಸರಿಯಾಗಿ ಉಚ್ಚರಿಸಲು, ಉಲ್ಲೇಖಿಸಲು ಬಹಳ ಜನರಿಗೆ ಬರುತ್ತಿರಲಿಲ್ಲ (ಕೆಲವರಿಗೆ ಈಗಲೂ ಗೊಂದಲ!).

ಇದೆಲ್ಲಾ ನಡೆದು ನಲವತ್ತೇಳು ವರ್ಷಗಳೇ ಉರುಳಿವೆ. ಕರಾಳ ತುರ್ತುಪರಿಸ್ಥಿತಿಯ ನೂರೆಂಟು ನೆನಪುಗಳು ಕಣ್ಮುಂದೆ ಸುತ್ತುತ್ತವೆ. ಇಡೀ ದೇಶದಲ್ಲಿ ಈ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ MP, MLA, MLC ಸತ್ಯಾಗ್ರಹ ಮಾಡಲಿಲ್ಲ, ಪ್ರತಿಭಟಿಸಲಿಲ್ಲ, ಬಂಧನಕ್ಕೆ ಒಳಗಾಗಲಿಲ್ಲ ಎಂಬುದು ಇಂದಿಗೂ ಪ್ರಶ್ನೆಯಾಗಿ ಕಾಡುತ್ತದೆ. ಎಂತಹ ಪಕ್ಷವಿದು. ನಾವೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ಬ್ರಿಟಿಷರಿಂದ ನಾವೇ ಸ್ವಾತಂತ್ರ್ಯವನ್ನು ಪಡೆದೆವು, ಎಂದು ದಶಕಗಳಿಂದ ಸುಳ್ಳು ಹೇಳಿಕೊಂಡೇ ಬಂದ ಕಾಂಗ್ರೆಸ್ಸಿನವರಿಗೆ ಇದು ಪ್ರಜಾದ್ರೋಹ, ಇದು ಸ್ವಾತಂತ್ರ್ಯಹರಣ, ಈ ತುರ್ತುಪರಿಸ್ಥಿತಿಯು ಅನ್ಯಾಯದ ಪರಮಾವಧಿ ಎಂದು ಅನ್ನಿಸಲೇ ಇಲ್ಲ! ಕಾಂಗ್ರೆಸ್ಸಿನ ಒಬ್ಬನೇ ಒಬ್ಬ MP ,MLA, MLC ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಇಲ್ಲ. ಕಾಸು ಮಾಡಿಕೊಳ್ಳುವ ಧಂಧೆಯನ್ನು ಎಲ್ಲ ಕಾಂಗ್ರೆಸ್ಸಿಗರೂ ಇನ್ನಷ್ಟು ನಿರಾಳವಾಗಿ ಮುಂದುವರಿಸಿಕೊಂಡುಹೋದರು. ಕಳೆದ ಏಳೆಂಟು ದಶಕಗಳ ಭಾರತೀಯ ಇತಿಹಾಸವನ್ನು ಅವಲೋಕಿಸಿದರೆ ಈ ಕಾಂಗ್ರೆಸ್ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷವಾಗಿರದೆ, ದೇಶಕ್ಕೆ ಅಂಟಿದ ಒಂದು ಶಾಪ, ಒಂದು ರೋಗ ಎಂಬುದು ಖಚಿತವಾಗುತ್ತದೆ.

ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಪ್ಯಾರೇಲಾಲರು, ‘Mahatma Gandhi : The Last Phase’ ಎನ್ನುವ ಬೃಹತ್ ಗ್ರಂಥ ರಚಿಸಿದ್ದಾರೆ. ಅದನ್ನು ಗಾಂಧೀವಾದಿ ಕೆ.ವಿ.ಶಂಕರಗೌಡರು ‘ಮಹಾತ್ಮಾಗಾಂಧಿ: ಅಂತಿಮ ಹಂತ’ ಎಂದು ಅನುವಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯವು ಹೊರತಂದಿರುವ ಈ ಸಂಪುಟಗಳು ಓದಲೇಬೇಕಾದ ಅಪೂರ್ವ ಮಾಹಿತಿಗಳನ್ನು ದಾಖಲೆಗಳನ್ನು ಸಂಗತಿಗಳನ್ನು ಒಳಗೊಂಡಿದೆ.

“ವಿಧಾನ ಪರಿಷತ್ತು ಮತ್ತು ವಿಧಾನಸಭೆಯ ಸದಸ್ಯರನೇಕರು, ಗಾಳಿ ಬಂದಾಗ ತೂರಿಕೋ ಎನ್ನುವ ರೀತಿಯಲ್ಲಿ ಹಣ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‍ನಲ್ಲಿ ತಲೆದೋರಿರುವ ಗುಂಪುಗಾರಿಕೆ ಮತ್ತು ಮಂತ್ರಿಗಳ ದೌರ್ಬಲ್ಯವನ್ನು ಕಂಡ ಜನರಲ್ಲಿ ಒಂದು ಬಗೆಯ ದಂಗೆಯ ಮನೋಭಾವ ಮೂಡುತ್ತಿದೆ. ಜನರು ಬ್ರಿಟಿಷ್ ಸರ್ಕಾರವೇ ವಾಸಿಯಾಗಿತ್ತು ಎನ್ನುತ್ತಿದ್ದಾರಲ್ಲದೆ, ಕಾಂಗ್ರೆಸ್ಸನ್ನು ಹಳಿಯುತ್ತಿದ್ದಾರೆ” ಎಂದರು. ಗಾಂಧೀಜಿ. ಸರಿಯಾಗಿ ಗಮನಿಸಿ. ಇದು ಸ್ವಾತಂತ್ರ್ಯ ಬಂದ ಕೆಲವೇ ದಿನಗಳ ಅನಂತರ ಗಾಂಧೀಜಿಯವರು ಹೇಳಿದ ಮಾತುಗಳು. ಡಿಸೆಂಬರ್ 1947ರಲ್ಲಿ ಮತ್ತೆ ಗಾಂಧೀಜಿ ಹೇಳಿದರು “ಕಾಂಗ್ರೆಸ್‍ನಂತಹ ಬೃಹತ್ ಸಂಸ್ಥೆಗಳಿಂದ ಭ್ರಷ್ಟಾಚಾರ, ಅಸತ್ಯ ಮುಂತಾದ ಪೀಡೆಗಳನ್ನು ಉಚ್ಚಾಟಿಸದೇ ಹೋದರೆ, ನಾಲ್ಕೂ ಕಡೆಗಳಿಂದ ಸ್ವಾರ್ಥಿಗಳು ಕಾಂಗ್ರೆಸ್ಸನ್ನು ಮುತ್ತಿ, ಈ ಸಂಸ್ಥೆಯು ಧೂಳೀಪಟವಾಗುತ್ತದೆ ಮತ್ತು ಹಾಗಾದಾಗ ನಾನು ಒಂದು ತೊಟ್ಟು ಕಣ್ಣೀರನ್ನೂ ಸುರಿಸುವುದಿಲ್ಲ. ದೊಡ್ಡ ರೋಗದಿಂದ ಬಳಲುತ್ತಿರುವ ರೋಗಿಯನ್ನು ಗುಣಮಾಡಲು ಸಾಧ್ಯವಿಲ್ಲದೆ ಹೋದರೆ, ರೋಗಿ ಸಾಯುವುದು ಮೇಲು” (ಪುಟ 721).

ಈ ಪರಿಪ್ರೇಕ್ಷ್ಯದಲ್ಲಿ, ತುರ್ತುಪರಿಸ್ಥಿತಿಯ ಹೇರಿಕೆಯ (25/6/1975) ವಾರ್ಷಿಕೋತ್ಸವದ ಕಹಿನೆನಪುಗಳ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯದ ಪರಿಕಲ್ಪನೆಯ ಮೂಲದ್ರವ್ಯವು ನಮ್ಮಲ್ಲಿ ಅರ್ಥಪೂರ್ಣ ವಿಚಾರಗಳನ್ನು ಹೊಮ್ಮಿಸಲಿ.

ಇತಿಹಾಸ, ಸ್ವಾತಂತ್ರ್ಯ ಹೋರಾಟಗಳ ಸರಿಯಾದ ವಿಮರ್ಶಾತ್ಮಕ ವಿಶ್ಲೇಷಣೆಗಳು ನಮ್ಮ ಮೇಲೆ ಬೆಳಕು ಚೆಲ್ಲಲಿ, ನಮ್ಮನ್ನು ಕವಿದಿರುವ ಕತ್ತಲನ್ನು ಮತ್ತೊಮ್ಮೆ ನೀಗಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ʼಹಿಂದೂಗಳೇ ಕೊಲೆಗಾರರುʼ ಎಂಬ ಭಾರತ ವಿರೋಧಿ ಬಹುಸಂಖ್ಯಾತ-ವಾದ

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಸೂರ್ಯವಂಶದ ಮುಂಗಾಣ್ಕೆಯನು ಅರಿತ ಸಾಧಕ- ಸುಮಂತ್ರ

ಸುಮಂತ್ರನ ಕುರಿತು ಅಭ್ಯಾಸ ಮಾಡುತಾ ಹೋದಂತೆ ಆತನ ಕಾರ್ಯದಕ್ಷತೆ ಮತ್ತು ಕುಶಲಿತನದ ಕುರಿತು ಅಚ್ಚರಿ ಮೂಡಿಸುವ ವಿಷಯಗಳಿವೆ. ದಶರಥನಿಂದ ತೊಡಗಿ ಸೀತಾವಿಯೋಗದ ವರೆಗೆ ಆತ ಮಹತ್ವದ ಪಾತ್ರ ವಹಿಸಿಯೂ ಮರೆಯಲ್ಲಿ ಇದ್ದಾನೆ.

VISTARANEWS.COM


on

ಧವಳ ಧಾರಿಣಿ dhavala dharini sumantra
Koo

ಅಬ್ಬರಿಸಿದರೂ ಅತಿಕ್ರಮಿಸದ ಸಂಯಮಿ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸುಮಂತ್ರ (Sumantra) ಅಯೋಧ್ಯೆಯ (Ayodhya) ಆಧಾರ ಸ್ತಂಭಗಳಲ್ಲಿ ಒಂದಾಗಿದ್ದ ಮತ್ತು ದಶರಥನ (Dasharatha) ಆಪ್ತನೂ ಆಗಿದ್ದನೆನ್ನುವ ವಿಷಯವನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಈಗ ಮುಂದಿನ ಭಾಗ.

ನೇರ ನಿಷ್ಠುರ ರಾಜನೀತಿಜ್ಞ

ಸುಮಂತ್ರನ ರಾಜ ನಿಷ್ಠೆ ಮತ್ತು ನಿಷ್ಠುರ ಸ್ವಭಾವ ಎದ್ದು ಕಾಣುವುದು ಕೈಕೇಯಿಯ ಅರಮನೆಯಲ್ಲಿ. ಅಯೋಧ್ಯೆಯಲ್ಲಿ ರಾಮನಿಗೆ ಪಟ್ಟಾಭಿಷೇಕದ ಸಂಭ್ರಮವೆಂದು ತಿಳಿದ ಪ್ರಜೆಗಳ ಸಂತೋಷ ಮೇರೆ ಮೀರಿತ್ತು. ಅದೇ ಕಾಲಕ್ಕೆ ಕೈಕೇಯಿಯ ಅರಮನೆಯಲ್ಲಿ ದೊರೆ ದಶರಥ ಧರ್ಮವೆನ್ನುವ ಹಗ್ಗದಿಂದ ಬಿಗಿಯಲ್ಪಟ್ಟಿದ್ದ. ರಾಮನನ್ನು ಒಮ್ಮೆ ನೋಡಬೇಕೆಂದು ಚಡಪಡಿಸುತ್ತಿದ್ದ. ವಶಿಷ್ಠರು ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ಸುವಸ್ತುಗಳನ್ನು ಸಿದ್ಧಮಾಡಿಕೊಂಡಿದ್ದರು. ಮುಹೂರ್ತ ಮೀರಿ ಹೋಗದಂತೆ ರಾಜನನ್ನು ಕೈಕೇಯಿಯ ಅರಮನೆಯಿಂದ ಗೌರವದ ಬಿನ್ನವತ್ತಳೆಯ ಮೂಲಕ ಕರೆತರುವ ಹೊಣೆ ಮಂತ್ರಿಯದಾಗಿತ್ತು. ಆತ ಕೈಕೇಯಿಯ ಅರಮನೆಗೆ ಹೋಗಿ ದಶರಥನನ್ನು ಸ್ತುತಿಮಾಡುತ್ತಾ “ಇಂದ್ರನ ಸಾರಥಿಯಾದ ಮಾತಲಿಯು ದೇವರಾಜನನ್ನು ಎಚ್ಚರಗೊಳಿಸುವಂತೆ ನಾನು ನಿನ್ನನ್ನು ಪಟ್ಟಾಭಿಷೇಕದ ಸುಮೂಹರ್ತಕ್ಕಾಗಿ ಆಗಮಿಸಲು ವಿನಂತಿಸುವುತ್ತಿದ್ದೇನೆ, ಈ ಕೂಡಲೇ ಸಿದ್ಧನಾಗು” ಎಂದು ಹೊರಗಡೆಯಿಂದಲೇ ಬಗೆಬಗೆಯಾಗಿ ಹೊಗಳುತ್ತಾನೆ. ಅವೆಲ್ಲವೂ ರಾಜನಿಗೆ ತನ್ನ ಮರ್ಮಸ್ಥಳವನ್ನು ಕತ್ತರಿಸುವ ಆಯುಧಗಳಾಗಿ ಇರಿಯುತ್ತಿದ್ದವು. ಆತನಲ್ಲಿ ಮಾತು ಹೊರಡುತ್ತಿರಲಿಲ್ಲ. ಆಗ ಕೈಕೇಯಿ “ನಿಮ್ಮ ಮಹಾರಾಜ ರಾಮನ ಪಟ್ಟಾಭಿಷೇಕಮಾಡಬೇಕೆನ್ನುವ ಉತ್ಸಾಹದಲ್ಲಿ ರಾತ್ರಿಯೆಲ್ಲಾ ಎಚ್ಚರಗೊಂಡಿದ್ದನು. ಯಶೋವಂತನಾದ ರಾಜನಿಗೆ ಇದೀಗ ಆಯಾಸದಿಂದ ನಿದ್ರೆ ಹತ್ತುತ್ತಿದೆ. ರಾಮನನ್ನು ಒಮ್ಮೆ ಇಲ್ಲಿಗೆ ಬರುವಂತೆ ಹೇಳು” ಎನ್ನುತ್ತಾಳೆ.

ಆಕೆಗೆ ದೊರೆ ತನ್ನ ಕೈಯಿಂದ ಜಾರಿಹೋದರೆ ಕೆಲಸ ಕೆಡುತ್ತದೆ, ಪ್ರಜೆಗಳೆಲ್ಲ ರಾಮನ ಪರವಾಗಿ ನಿಂತು ತನ್ನನ್ನೇ ತಿರಸ್ಕರಿಸಬಹುದು ಎನ್ನುವ ಭಯಕಾಡುತ್ತಿತ್ತು. ಸುಮಂತ್ರನಿಗೆ ಅಲ್ಲಿನ ನಡತೆಯನ್ನು ನೋಡಿ ಸಂಶಯವುಂಟಾಯಿತು. ರಾಜನ ಅಭಿಪ್ರಾಯ ತಿಳಿಯದೇ ತಾನು ಹೇಗೆ ಹೋಗಲಿ ಎನ್ನುತ್ತಾನೆ. ಆಗ ದಶರಥ ವಿವಶನಾಗಿ “ಸುಂದರನಾದ ರಾಮನನ್ನು ತಾನು ನೋಡಬೇಕೆಂದಿದ್ದೇನೆ. ಅವನನ್ನು ಕರೆದುಕೊಂಡು ಬಾ” ಎನ್ನುತ್ತಾನೆ. ಕೈಕೇಯಿ “ಯಶೋವಂತನಾದ ರಾಮನನ್ನು ಶೀಘ್ರವಾಗಿ ಕರೆತಾ” ಎನ್ನುವ ಮಾತುಗಳು ಆತನನ್ನು ಯೋಚಿಸುವಂತೆ ಮಾಡಿದವು. ರಾಮನನ್ನು ಕರೆತರಲು ಸಭೆಗೆ ಹೊರಟವನಿಗೆ ಸಮಾಧಾನವಾಗಲಿಲ್ಲ. ರಾಮನಲ್ಲಿಗೆ ಬರದೇ ನೇರವಾಗಿ ಸಭಗೆ ಬರುತ್ತಾನೆ. ವಿಷಯ ಎಲ್ಲಿಯೋ ಹದತಪ್ಪುತ್ತಿದೆಯೆಂದು ಆತನಿಗೆ ಎನಿಸುತ್ತಿತ್ತು. ಅಲ್ಲಿ ನೆರೆದ ರಾಜರು ರಾಜ ಮತ್ತು ರಾಮ ಇಬ್ಬರು ಇನ್ನೂ ಬರಲಿಲ್ಲವಲ್ಲವೆಂದು ತಮ್ಮತಮ್ಮಲ್ಲೇ ಮಾತಾಡಿಕೊಳ್ಳುತ್ತಿರುವಾಗ ಸುಮಂತ್ರ ಅವರೆಲ್ಲರೂ ರಾಜನನ್ನು ಕಾಯುತ್ತಿದ್ದಾರೆ ಎನ್ನುವುದನ್ನು ತಿಳಿಸುವ ನೆವದಿಂದ ಮತ್ತೊಮ್ಮೆ ಕೈಕೇಯಿಯ ಅರಮನೆಗೆ ಬಂದ. ರಾಜನನ್ನು ಇಂದ್ರ-ವರುಣ-ಕುಬೇರರಿಗೆ ಹೋಲಿಸಿ ಆತನ್ನು ಕಾಣುವ ಉದ್ಧೇಶದಿಂದ ಅರಮನೆಯ ದ್ವಾರದಲ್ಲಿ ಋಷಿಪ್ರಮುಖರು, ರಾಜರುಗಳೂ, ಪೌರಜಪದರೂ ಕಾಯುತ್ತಿದ್ದಾರೆ, ಬೇಗ ಸಿದ್ಧನಾಗುವಂತೆ ಸ್ತೋತ್ರಮಾಡತೊಡಗಿದ. ಒಳಗಡೆ ಇರುವ ರಾಜನ ಮುಖದರ್ಶನವಾಗಲಿಲ್ಲ. ಕೈಕೇಯಿಯ ಪ್ರೇರಣೆಗೆ ಒಳಗಾದ ರಾಜನಿಗೆ ರಾಮ ಬರಲಿ ಎಂದು ಅನಿಸಿತ್ತು. ಅದನ್ನು ತಪ್ಪಿದ ಸುಮಂತ್ರನಿಗೆ “ತನ್ನ ಆಜ್ಞಾನುಸಾರವಾಗಿ ರಾಮನನ್ನು ಶೀಘ್ರವಾಗಿ ಇಲ್ಲಿಗೆ ಕರೆದು ತಾ” ಎಂದು ಸಿಡುಕಿದ.

ಈಗ ಮಾತ್ರ ಸುಮಂತ್ರನಿಗೆ ಬೇರೆ ವಿಕಲ್ಪಗಳಿರಲಿಲ್ಲ. ಅನಿವಾರ್ಯವಾಗಿ ರಾಮನ ಅರಮನೆಗೆ ಹೋಗಿ “ರಾಜ ನಿನ್ನನ್ನು ಶೀಘ್ರವಾಗಿ ಒಮ್ಮೆ ಅಲ್ಲಿಗೆ ಬರಹೇಳಿದ್ದಾನೆ” ಎನ್ನುತ್ತಾನೆ. ಕೈಕೇಯಿಯಲ್ಲಿಗೆ ಹೋದ ರಾಮನಿಗೆ ನಡೆದ ವಿಷಯ ಮನದಟ್ಟಾಗುತ್ತದೆ. ರಾಜ ಮಾತನ್ನೇ ಆಡಲಿಲ್ಲ. ಯಾವ ಕೈಕೇಯಿ ರಾಮನನ್ನು ಮಾತೆಯೆನ್ನುವ ಭಾವದಿಂದ ಇದುತನಕ ನೋಡುತ್ತಿಳೋ ಅವಳ ಮಾತು ಅರಣ್ಯವಾಸದೆಡೆಗೆ ತನ್ನನ್ನು ಕಳುಹಿಸುತ್ತಿದೆ ಎನ್ನುವದನ್ನು ತಿಳಿದಾಗ ರಾಮ ಕೊಂಚವೂ ಯೋಚಿಸುವುದಿಲ್ಲ. ತನ್ನ ತಾಯಿಯನ್ನು, ಇತರ ಪರಿವಾರದವರನ್ನೂ ಸಮಾಧಾನಿಸಿ ಅರಣ್ಯಕ್ಕೆ ಹೋಗಲು ತಂದೆಯ ಅಪ್ಪಣೆಯನ್ನು ಪಡೆಯಲು ಬರುತ್ತಾನೆ. ಆದರೆ ಈ ವೇಳೆಗೆ ಸುಮಂತ್ರ ಕೈಕೇಯಿಯ ಅರಮನೆಯ ಹೊರಗೆ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ರಾಜನನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಸಿದ್ಢತೆಯನ್ನು ಮಾಡಿಕೊಂಡು ರಾಜನ ಅನುಮತಿ ಸಿಕ್ಕಿತೋ ಎಂದು ಕಾಯುತ್ತಿರುತ್ತಾನೆ. ಆತನ ಎಲ್ಲ ನಿರೀಕ್ಷೆಗೆ ವಿರುದ್ದವಾಗಿ ರಾಮ ತನ್ನ ತಂದೆಯ ಹತ್ತಿರ,

ನೈವಾಹಂ ರಾಜ್ಯಮಿಚ್ಛಾಮಿ ನ ಸುಖಂ ನ ಚ ಮೈಥಿಲೀಮ್.
ನೈವ ಸರ್ವಾನಿಮಾನ್ ಕಾಮಾ ನ್ನಸ್ವರ್ಗಂ ನೈವ ಜೀವಿತಮ್৷৷ಅಯೋ.34.47৷৷

ನನಗೆ ಸತ್ಯದ ಹೊರತಾಗಿ ರಾಜ್ಯ, ಸುಖ, ಜೀವನ ಹೆಚ್ಚೇನು ಸೀತೆಯೂ ಸಹ ಬೇಕಾಗಿಲ್ಲವೆನ್ನುವ ಮಾತನ್ನು ಹೇಳಿದನೋ, ಅದನ್ನು ಕೇಳಿದ ಸುಮಂತ್ರನ ಕೈ ಕಟ್ಟಿಹೋಯಿತು. ಆದರೆ ತನ್ನ ಪ್ರಾಣಕ್ಕಿಂತ ಪ್ರಿಯನಾದ ರಾಮ ನಾರುಮಡಿಯನ್ನು ಧರಿಸಿ ಅರಣ್ಯಕ್ಕೆ ಹೋಗುವುದನ್ನು ಕಲ್ಪಿಸಿಕೊಳ್ಳಲಾಗದ ದಶರಥ ಅಸಹಾಯಕತೆಯಿಂದ ಮೂರ್ಛೆಹೋದಾಗ ಸುಮಂತ್ರನೂ ಒಮ್ಮೆ ಮೂರ್ಛಿತನಾದ. ಸಾವರಿಸಿಕೊಂಡು ಎದ್ದವನಿಗೆ ತಡೆಯಲಾಗಲಿಲ್ಲ. ಪರೋಕ್ಷವಾಗಿ ಕೈಕೇಯಿಯ ದಾಸನಾಗಿ ಇತರ ರಾಣಿಯರನ್ನು ಕಡೆಗಣಿಸಿದ ದಶರರಥ ಮಾವಿನ ಮರವನ್ನು ಕಡಿದು ಬೇವಿನಮರವನ್ನು ಬೆಳೆಸಿದುದರ ಫಲವಿದು ಎಂದು ಕೈಕೇಯಿಯನ್ನು ದೂಷಿಸುತ್ತಾನೆ. ನಿನ್ನ ಮಗನೇ ರಾಜನಾಗಲಿ, ನಾವೆಲ್ಲರೂ ಶ್ರೀರಾಮನನ್ನು ಅನುಸರಿಸಿ ಆತ ಹೋಗುವಲ್ಲಿಗೇ ಹೋಗುತ್ತೇವೆ, ಮರ್ಯಾದೆಗೆಟ್ಟವಳು ನೀನು ಎನ್ನುವ ಮಾತುಗಳನ್ನು ದಿಟ್ಟತನದಿಂದ ರಾಜನ ಎದುರೇ ಆಡುತ್ತಾನೆ. ಹೀಗೆ ಹೇಳುವಾಗ ಕೈಕೇಯಿಯ ತಾಯಿಗೂ ಇಂತಹುದೇ ಕೆಟ್ಟಗುಣವಿತ್ತು ಎನ್ನುತ್ತಾ ಒಂದು ಕಥೆಯನ್ನು ಹೇಳುತ್ತಾನೆ.

ಅಶ್ವಪತಿ ರಾಜನಿಗೆ ಸಾಧುವೊಬ್ಬ ಪ್ರಾಣಿಗಳ ಭಾಷೆಯನ್ನು ಅರ್ಥಮಾಡಿಕೊಳ್ಳುವ ವರವನ್ನು ಕೊಟ್ಟಿದ್ದ. ಅದನ್ನು ಯಾವ ಕಾರಣಕ್ಕೂ ಇನ್ನೊಬ್ಬರಿಗೆ ಹೇಳಬಾರದೆನ್ನುವ ನಿಬಂಧನೆಯನ್ನು ಹಾಕಿದ್ದ. ಒಮ್ಮೆ ತನ್ನ ಪಲ್ಲಂಗದ ಕೆಳಗೆ ಹರಿದಾಡುತ್ತಿದ್ದ ಇರುವೆಗಳ ಮಾತನ್ನು ಕೇಳಿ ಆತನಿಗೆ ನಗು ಬಂತು. ಕೈಕೇಯಿಯ ತಾಯಿಗೆ ಆತ ತನ್ನ ಕುರಿತು ನಗುತ್ತಿದ್ದಾನೆನ್ನುವ ಸಂಶಯ! ರಾಜನಲ್ಲಿ ನಕ್ಕಿದ್ದು ಯಾಕೆ ಎಂದು ಕೇಳಿದಳು. ರಾಜ “ಇದು ಗುಟ್ಟು, ಹೇಳಲಾಗದು. ಹೇಳಿದರೆ ನನಗೆ ಒಡನೆಯೇ ಮರಣ ಸಂಭವಿಸುತ್ತದೆ” ಎಂದು ಹೇಳಿದ. ಆದರೆ ಸಂಶಯ ಸ್ವಭಾವದವಳಾಗಿದ್ದ ರಾಣಿ “ಶಂಸ ಮೇ ಜೀವ ವಾ ಮಾ ವಾ ನ ಮಾಮಪಹಸಿಷ್ಯಸಿ” ನೀನು ಬದುಕು ಇಲ್ಲವೇ ಸಾಯಿ, ಈ ಗುಟ್ಟು ತನಗೆ ಹೇಳಲೇಬೇಕು ಎಂದು ಹಟಹಿಡಿದ ಗಯ್ಯಾಳಿಯಾಗಿದ್ದಳು. ರಾಜ ಮತ್ತೊಮ್ಮೆ ತನಗೆ ಕಲಿಸಿದ ಸಾಧುವನ್ನು ಈ ವಿಷಯದಲ್ಲಿ ಕೇಳಿದಾಗ ಆತ ನಿನ್ನ ಪತ್ನಿ ಸತ್ತುಹೋದರೂ, ಹಾಳಾಗಿ ಹೋದರೂ ಈ ವಿಷಯವನ್ನು ಹೇಳಕೂಡದು ಎಂದು ಎಚ್ಚರಿಸಿದ. ಆಗ ಅಶ್ವಪತಿ ಕೈಕೇಯಿಯ ತಾಯಿಯನ್ನು ಪರಿತ್ಯಜಿಸಿ ನೆಮ್ಮದಿಯಿಂದ ಬದುಕಿದ. ಈ ಕಥೆ ಕೈಕೇಯಿಯನ್ನು ದೂಷಿಸಿದಂತೆ ಕಂಡುಬಂದರೂ ಅದರ ಗುರಿ ದಶರಥನಾಗಿದ್ದ. ಈಗಲಾದರೂ ಧೈರ್ಯತೆಗೆದುಕೊಂಡು ಕೈಕೇಯಿಯನ್ನು ತ್ಯಜಿಸಿ ರಾಜ್ಯವನ್ನು ಉಳಿಸು ಎನ್ನುವ ಸೂಚನೆ ಅದರಲ್ಲಿ ಇತ್ತು.

ಈ ವಿವರಗಳು ಕೈಕೇಯಿಯಲ್ಲಿ ಯಾವ ಪರಿಣಾಮವನ್ನೂ ಬೀರದೇ ಇರುವುದನ್ನು ನೋಡಿ ಕೊನೆಯ ಅಸ್ತ್ರವಾಗಿ ದೀನನಾಗಿ “ಸನ್ಮಾರ್ಗಪ್ರವರ್ತಕನಾದ ರಾಮನನ್ನು ದುಷ್ಟೆಯಾದ ಕೈಕೇಯಿಯು ಅರಣ್ಯಕ್ಕೆ ಕಳುಹಿಸಿದಳು ಎನ್ನುವ ದೊಡ್ಡ ಅಪವಾದಕ್ಕೆ ಗುರಿಯಾಗಬೇಡ” ಎಂದು ಬೇಧನೀತಿಯನ್ನು ಬೋಧಿಸುತ್ತಾನೆ. ಒಮ್ಮೆ ಸಾಮದಿಂದ ಇನ್ನೊಮ್ಮೆ ಬೇಧದಿಂದ ಮಗದೊಮ್ಮೆ ದಯೆತೋರು ಎಂದು ಕೊನೆಗೆ ದಂಡಪ್ರಯೋಗದವರೆಗೂ ಸುಮಂತ್ರ ಪರಿಸ್ಥಿತಿಯನ್ನು ಸಂಭಾಳಿಸಲು ಪ್ರಯತ್ನಿಸುತ್ತಾನೆ. ಆದರೆ ಯಾವಾಗ ರಾಮ ಅರಣ್ಯಕ್ಕೆ ಹೋಗಲು ಸಿದ್ಧನಾಗುತ್ತಾನೋ ಆಗ ಆತ ಹತಾಶೆಯಿಂದ ಮೌನವಾಗಬೇಕಾಗುತ್ತದೆ. ದಶರಥನ ಆಜ್ಞೆಯಂತೆ ರಥದ ಸೂತನಾಗಿ ರಾಮನನ್ನು ಅರಣ್ಯಕ್ಕೆ ಬಿಡಲು ಹೊರಡುತ್ತಾನೆ. ಸುಮಂತ್ರ ರಾಜ್ಯಕ್ಕಾಗಿ ಕರ್ತವ್ಯನಿಷ್ಟನೇ ಹೊರತೂ ವಯಕ್ತಿಕವಾಗಿ ರಾಜನಿಗೆ ಅಲ್ಲ. ರಾಮನನ್ನು ರಥದಲ್ಲಿ ಕುಳ್ಳಿರಿಸಿ ಹೊರಡುವಾಗ ದಶರಥ ತನ್ನ ಪತ್ನಿಯಾದ ಕೌಸಲ್ಯೆ ಮತ್ತು ಸುಮಿತ್ರೆಯರ ಸಂಗಡ ರಥದ ಹಿಂದೆ ಓಡೋಡಿ ಬರುತ್ತಿದ್ದರೆ ಸುಮಂತ್ರ ರಾಮನ ಆಜ್ಞೆಯಂತೆ ಶೀಘ್ರವಾಗಿ ರಥವನ್ನು ಓಡಿಸಿಕೊಂಡು ಹೋಗುತ್ತಾನೆ.

ರಾಮಭಾವದಲ್ಲಿ ತನ್ನತನ ಮರೆತ

ಸಚಿವ, ಆಪ್ತ, ಸೂತ ಹೀಗೆ ಹಲವು ವಿಧಗಳಲ್ಲಿ ಅಯೋಧ್ಯೆಯ ರಾಜಮನೆತನವನ್ನು ಸೇವಿಸಿದ ಸುಮಂತ್ರ ರಾಮನನ್ನು ಶೃಂಗಬೇರಪುರದಿಂದ ಅರಣ್ಯಕ್ಕೆ ಕಳಿಸುವಾಗ ಮಾತ್ರ ಚಿಕ್ಕಮಗುವಿನಂತೆ ಅಳುತ್ತಾನೆ. ರಾಮನ ಗುಣ ಸುಮಂತ್ರನನ್ನು ಆತನ ಬಾಲ್ಯದ ನಡವಳಿಕೆಯಿಂದಲೇ ಸೆಳೆದಿತ್ತು. ರಾಮರಾಜ್ಯವನ್ನು ನೋಡಬೇಕೆಂದು ಆತ ದಶರಥನಿಗೆ ಎಲ್ಲಾಬಗೆಯ ಸಹಕಾರವನ್ನು ನೀಡಿದ್ದ. ಅರಣ್ಯದಲ್ಲಿ ಸುಮಂತ್ರ ರಾಮನ ಸಂಗದಲ್ಲಿ ತನ್ನನ್ನೇ ಮರೆಯುತ್ತಾನೆ. ರಾಮನ ಬಾಯಲ್ಲಿ ತನ್ನ ಕುರಿತಾಗಿ “ಸುಮಂತ್ರ! ಭವ ಮೇ ಪ್ರತ್ಯನನ್ತರಃ- ಸುಮಂತ! ನೀನು ನನ್ನ ಸಮೀಪದಲ್ಲಿಯೇ ಇರು” ಎನ್ನುವ ಮಾತುಗಳನ್ನು ಕೇಳಲು ಬಯಸಿದ್ದ. ಆತನಿಗೆ ಅಯೋಧ್ಯೆಯ ಯಾವ ಅಧಿಕಾರವೂ ಬೇಡವಾಗಿತ್ತು. ನೀನೇನಾದರೂ ತನ್ನನ್ನು ತ್ಯಜಿಸಿದರೆ ಅಯೋಧ್ಯೆಯ ಪ್ರಜಾವರ್ಗ ತನ್ನನ್ನು ರಾಮನನ್ನು ಅರಣ್ಯಕ್ಕೆ ಕಳುಹಿಸಿಬಂದವನೆಂದು ದೂಷಿಸುತ್ತಾರೆ. ಅದರ ಬದಲು ತಾನು ಕುದೆರಗಳ ಸಮೇತ ಬೆಂಕಿಯಲ್ಲಿ ಬಿದ್ದು ಸಾಯುತ್ತೇನೆ ಎಂದು ಅಲವತ್ತುಕೊಳ್ಳುತ್ತಾನೆ. ರಾಮ ಸ್ತಿತಪ್ರಜ್ಞ; ಯಾವಾಗ ಆತ ಗಂಗಾನದಿಯನ್ನು ದಾಟಲು ಹೊರಟನೋ ಆಗ ಸುಮಂತ್ರನಿಗೆ ದುಃಖ ತಡೆದುಕೊಳ್ಳಲಾಗಲಿಲ್ಲ. ತನ್ನತನವನ್ನೇ ಮರೆಯುತ್ತಾನೆ. ರಾಮ ಆತನಿಗೆ ಅಯೋಧ್ಯೆಯಲ್ಲಿ ರಾಜನನ್ನು ಮತ್ತು ತಾಯಂದಿರನ್ನು ಜಾಗರೂಕನಾಗಿ ರಕ್ಷಿಕೊಂಡಿರು ಎನ್ನುವ ಆದೇಶವನ್ನು ನೀಡುತ್ತಾನೆ. ಎಲ್ಲಿಯಾದರೂ ಭರತ ಮತ್ತು ಕೈಕೇಯಿಯಿಂದ ಅವರಿಗೆ ತೊಂದರೆಯುಂಟಾದೀತೋ ಎನ್ನುವ ಸಂಶಯ ರಾಮನಿಗೆ ಇದ್ದೇ ಇತ್ತು. ರಾಜನಿಷ್ಟೆಯುಳ್ಳ ಸುಮಂತ್ರ ಅವರನ್ನು ರಕ್ಷಿಸಬಲ್ಲನೆನ್ನುವ ನಂಬಿಕೆಯಿತ್ತು. ಅದನ್ನು ವಿವರವಾಗಿ ತಿಳಿಸುತ್ತಾನೆ. ಜೊತೆಗೆ ಸುಮಂತ್ರ ಓರ್ವನೇ ಹಿಂದಿರುಗಿರುವುದನ್ನು ಗಮನಿಸಿದ ಕೈಕೇಯಿಗೆ ರಾಮ ಬೇರೆಲ್ಲಿಯೂ ಹೋಗದೇ ಅರಣ್ಯಕ್ಕೆ ಹೋಗಿದ್ದಾನೆ ಎನ್ನುವ ನಂಬಿಕೆ ಬರುತ್ತದೆ.

ಬರಿದಾದ ರಥವನ್ನು ತೆಗೆದುಕೊಂಡು ಅರಮನೆಗೆ ಬಂದು ದಶರಥನನ್ನು ನೋಡಿದಾಗ ಸುಮಂತ್ರನಿಗೆ ರಾಮನ ಅಗಲುವಿಕೆಯ ನೋವು ತಡೆದುಕೊಳ್ಳಲಾಗುವುದಿಲ್ಲ. ದಶರಥ ರಾಮ, ಸೀತೆ ಲಕ್ಷ್ಮಣರ ಸಂದೇಶ ಏನಿತ್ತು ಎಂದು ಕೇಳಿದಾಗ ಭರತನಿಗೆ ಕೈಕೇಯಿಯನ್ನು ನೋಡುವಂತೆ ಕೌಸಲ್ಯೆ ಮತ್ತು ಸುಮಿತ್ರೆಯರನ್ನೂ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿರುವುದನ್ನು ಮತ್ತು ಲಕ್ಷ್ಮಣನ ಕ್ರೋಧದ ಮಾತುಗಳನ್ನು ಯಥಾವತ್ತಾಗಿ ಹೇಳಿದರೂ ಸೀತೆ ಕೈಕೇಯಿಯ ವಿಷಯದಲ್ಲಿ ಹೇಳಿರುವ ದೂರನ್ನು ಮಾತ್ರ ಬಹಿರಂಗಪಡಿಸುವುದಿಲ್ಲ. ಮುಂದೆ ಕೈಕೇಯಿಯ ಅಧೀನದಲ್ಲಿ ಇರಬೇಕಾದ ಕಾರಣ, ಸೀತೆ ಹೇಳಿದ ಕೈಕೇಯಿಯ ಸಂಬಂಧಿತ ದೂರನ್ನು ಕೇಳಿದ ಅವಳು ತೊಂದರೆಕೊಟ್ಟಾಳು ಎನ್ನುವ ಪ್ರಜ್ಞೆ ಸುಮಂತ್ರನಿಗಿತ್ತು. ವಾಲ್ಮೀಕಿಯೂ ಕೈಕೇಯಿಯ ವಿಷಯದಲ್ಲಿ ಸೀತೆಯ ಅಭಿಪ್ರಾಯವನ್ನು ತಿಳಿಸದೇ ಗೂಢವಾಗಿಟ್ಟಿದ್ದಾನೆ. ನಂದೀಗ್ರಾಮದಲ್ಲಿ ಭರತ ಆಳುವಾಗ ಆತನಿಗೆ ಕೋಶ ಮತ್ತು ರಾಜ್ಯದ ಆಡಳಿತದ ವಿಷಯದಲ್ಲಿ ನೆರವನ್ನು ಸಮರ್ಥವಾಗಿಯೇ ಸುಮಂತ್ರ ನೀಡುತ್ತಾನೆ.

ಧವಳ ಧಾರಿಣಿ ಅಂಕಣ dasharatha sumantra

ಭೂತ ಭವಿಷ್ಯತ್ತನ್ನು ಬಲ್ಲ ಪ್ರಾಜ್ಞ

ಸುಮಂತ್ರ ರಾಮ ವನವಾಸದಿಂದ ಪುನಃ ಬಂದು ಅಯೋಧ್ಯೆಯ ಪಟ್ಟವನ್ನು ಏರಿದಮೇಲೂ ಅವನ ಅಮಾತ್ಯನಾಗಿಯೇ ಮುಂದುವರಿಯುತ್ತಾನೆ. ಹೇಗೆ ಕರ್ತವ್ಯ ನಿಷ್ಠನೋ, ಅದೇ ರೀತಿ ಮಹಾತ್ಮರ ಒಲವನ್ನೂ ಆತ ಗಳಿಸಿಕೊಂಡಿದ್ದ. ಅವರು ಹೇಳಿದ ವಿಷಯಗಳನ್ನು ಸಂದರ್ಭ ಬಂದಾಗ ಮಾತ್ರ ಹೇಳುತ್ತಿದ್ದ. ಈ ಹಿಂದೆ ಮಹಾತ್ಮರಾದ ಸನತ್ಕುಮಾರರು ದಶರಥನಿಗೆ ಋಷ್ಯಶೃಂಗರಿಂದ ಪುತ್ರಕಾಮೇಷ್ಟಿಯಾಗವನ್ನು ಮಾಡಿಸಿದರೆ ಮಕ್ಕಳಾಗುವರು ಎನ್ನುವುದನ್ನು ತಿಳಿಸಿದಂತೆ ಆತನಿಗೆ ರಾಮನ ನಂತರದ ಅಯೋಧ್ಯೆ ಹೇಗಿರಬಹುದೆನ್ನುವ ವಿಷಯವೂ ತಿಳಿದಿತ್ತು. ಅದರ ವಿವರ ಹೀಗಿದೆ.

ರಾಮ ಜನಪಾವದಕ್ಕೆ ಅಂಜಿ ಸೀತೆಯನ್ನು ಅರಣ್ಯಕ್ಕೆ ಬಿಟ್ಟುಬರುವಂತೆ ಲಕ್ಷ್ಮಣನಿಗೆ ಆಜ್ಞೆಮಾಡುತ್ತಾನೆ. ಅಣ್ಣನ ಆಜ್ಞೆಯನ್ನು ಶಿರಸಾವಹಿಸಿ ಲಕ್ಷ್ಮಣ ಆಕೆಯನ್ನು ವಾಲ್ಮೀಕಿ ಋಷಿಗಳ ಆಶ್ರಮದ ಹತ್ತಿರ ಬಿಡಲು ಹೋಗುವಾಗ ಆ ರಥವನ್ನು ನಡೆಸುವ ಸೂತನಾದವ ಸುಮಂತ್ರನೇ. ಸೀತೆಯನ್ನು ಬಿಟ್ಟು ಬರುವಾಗ ಲಕ್ಷ್ಮಣನ ಸುಮಂತ್ರನ ಹತ್ತಿರ ಗೋಳಾಡುತ್ತಾನೆ. ಈ ಮೊದಲು ರಾಮ ಲಕ್ಷ್ಮಣ ಮತ್ತು ಸೀತೆಯರನ್ನು ಅರಣ್ಯಕ್ಕೆ ಬಿಟ್ಟುಬರುವಾಗ ದುಃಖಿಯಾಗಿದ್ದ ಸುಮಂತ್ರ ಇಲ್ಲಿ ಮಾತ್ರ ಶೋಕಪಡುವುದಿಲ್ಲ ಬದಲಾಗಿ ಲಕ್ಷ್ಮಣನಿಗೆ ಹೀಗೆ ಆಗಬೇಕಾದದ್ದು ಬಲು ಹಿಂದೆಯೇ ನಿರ್ಧಾರಿತವಾಗಿದೆ ಎನ್ನುತ್ತಾನೆ. ಒಂದು ಸಂದರ್ಭದಲ್ಲಿ ದಶರಥನನ್ನು ನೋಡಲು ದೂರ್ವಾಸರು ಬಂದಿದ್ದರು. ದಶರಥ ಕುತೂಹಲದಿಂದ ತನ್ನ ವಂಶ ಎಲ್ಲಿಯತನಕ ಮುಂದುವರೆಯುತ್ತದೆ ಎನ್ನುವ ಭವಿಷ್ಯವನ್ನು ದೂರ್ವಾಸರಲ್ಲಿ ಕೇಳಿದ್ದ. ಅದಕ್ಕೆ ದೂರ್ವಾಸರು ಮಕ್ಕಳಿಲ್ಲದ ದಶರಥನಿಗೆ ನಿನ್ನ ಉದರದಲ್ಲಿ ಮಹಾವಿಷ್ಣುವೇ ಜನಿಸುತ್ತಾನೆ ಎನ್ನುತ್ತಾರೆ. ಅಷ್ಟೇ ಅಲ್ಲ; ಭೃಗು ಮಹರ್ಷಿಯ ಹೆಂಡತಿಯಾದ ಖ್ಯಾತಿಯನ್ನು ಶ್ರೀಮನ್ನಾರಾಯಣ ಕೊಂದಿರುವ ಕಾರಣ ಭೂಮಿಯಲ್ಲಿ ಜನಿಸಿ ವಿರಹದುಃಖವನ್ನು ತನ್ನಂತೆಯೇ ಅನುಭವಿಸು ಎಂದು ಭೃಗು ಕೊಟ್ಟ ಶಾಪದ ವಿಷಯವನ್ನು ತಿಳಿಸುತ್ತಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

ಈ ಕಾರಣದಿಂದ ಆತ ಭೂಮಿಯಲ್ಲಿ ಅವತರಿಸಿದರೂ ತನ್ನ ಪತ್ನಿಯ ವಿರಹದ ನೋವನ್ನು ಅನುಭವಿಸಬೇಕಾಗುತ್ತದೆ. ಆತನ ಕಾಲದಲ್ಲಿ ಅಯೋಧ್ಯೆ ತುಂಬಾ ಪ್ರವರ್ಧಮಾನಕ್ಕೆ ಬರುತ್ತದೆ. ಹನ್ನೊಂದು ಸಾವಿರ ವರ್ಷಗಳಕಾಲ ಆತ ರಾಜ್ಯಭಾರವನ್ನು ಮಾಡಿ ಬ್ರಹ್ಮಲೋಕಕ್ಕೆ ಹೋಗುತ್ತಾನೆ. ಆತನಿಗೆ ಇಬ್ಬರು ಗಂಡುಮಕ್ಕಳು ಜನಿಸುತ್ತಾರೆ ಎಂದು ದೂರ್ವಾಸರು ಸುಮ್ಮನಾದರು. ಆದರೆ ಸುಮಂತ್ರ ಅವರನ್ನು ಪ್ರತ್ಯೇಕವಾಗಿ ಭೇಟಿಮಾಡಿ ಪ್ರಾರ್ಥಿಸಿ ಇನ್ನೂ ಮುಂದಿನ ಗುಟ್ಟನ್ನು ಹೇಳಬೇಕೆಂದು ಕೇಳಿಕೊಂಡಾಗ “ರಾಮ ಇಬ್ಬರೂ ಗಂಡುಮಕ್ಕಳಿಗೂ ಅಯೋಧ್ಯೆಯಲ್ಲಿ ಪಟ್ಟಾಭಿಷೇಕಮಾಡುವುದಿಲ್ಲ, ಬೇರೆಯದೇ ಆದ ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡುತ್ತಾನೆ ಎಂದಿದ್ದಾರೆ” ಎಂದು ನುಡಿದು ಇದೆಲ್ಲವೂ ದೈವಸಂಕಲ್ಪ, ಶೋಕಪಡಬೇಡ ಎಂದು ಸಮಾಧಾನ ಮಾಡುತ್ತಾನೆ. ದೇವಗೌಪ್ಯತೆಯನ್ನು ಮತ್ತು ಋಷಿ ಗೌಪ್ಯತೆಯನ್ನು ಕಾಪಾಡುವ ಮಹತ್ವದ ಹೊಣೆಗಾರಿಕೆಯನ್ನು ಬಲ್ಲ ಸುಮಂತ್ರನಂತವ ಅಯೋಧ್ಯೆಯ ಬಲಿಷ್ಟ ಸಾಮ್ರಾಜ್ಯದ ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದ.

ಮಹಾಕಾವ್ಯದಲ್ಲಿ ನಾಯಕನ ಪಾತ್ರ ರೂಪುಗೊಳ್ಳಬೇಕಾದರೆ ಅದಕ್ಕೆ ಪೂರಕವಾದ ಪೋಷಕ ಪಾತ್ರಗಳಿರಬೇಕಾಗುತ್ತದೆ. ಅಮಾತ್ಯನ ಪಾತ್ರ ಅಂತಹದು. ಸಚಿವನಾಗಿರಬೇಕಾದವ ಉದಾರಚರಿತ, ಕುಲೀನತೆಯಲ್ಲಿ ಶ್ರೇಷ್ಠ, ಕಾರ್ಯದಕ್ಷತೆ, ಜಿತೇಂದ್ರಿಯತೆ, ಸತ್ಕುಲಪ್ರಸೂತರೊಡನೆ ಸಂಪರ್ಕ, ಶೌರ್ಯ, ಕೃತಜ್ಞತೆ ಮತ್ತು ಸತ್ಯನಿಷ್ಠೆ ಇವುಗಳಿಂದ ಕೂಡಿರಬೇಕಾಗಿರುತ್ತದೆ. ಸುಮಂತ್ರನಲ್ಲಿ ಇವೆಲ್ಲಗುಣಗಳಿದ್ದವು. ಅದರೆ ಆತನ ಜನ್ಮ ಮತ್ತು ತಂದೆತಾಯಿಗಳ ವಿವರ ಸಿಗುವುದಿಲ್ಲ. ಅವೆಲ್ಲವೂ ಮಹಾಕಾವ್ಯದ ನಾಯಕನ ನೆರಳಿನಲ್ಲಿ ಅಡಗಿ ಕುಳಿತಿವೆ. ರಾಮ ನಿರ್ಯಾಣಗೈಯುವ ಕಾಲಕ್ಕೆ ಈತನೂ ಸಹ ರಾಮನೊಂದಿಗೇ ಸರಯೂ ನದಿಯಲ್ಲಿ ಐಕ್ಯನಾಗಿ ಸಾಂತಾನಿಕವೆನ್ನುವ ಲೋಕವನ್ನು ಪಡೆಯುತ್ತಾನೆ.

ಎರಡು ತಲೆಮಾರಿನ ತನಕ ಅಯೋಧ್ಯೆಯನ್ನು ಎಲೆಯ ಮರೆಯಲ್ಲಿ ರಕ್ಷಿಸಿದವ ಸುಮಂತ್ರ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸಾಕೇತದ ಅಮಾತ್ಯ ಸುಮಂತ್ರ, ರಾಮಾಯಣದ ರಹಸ್ಯನಿಧಿ

Continue Reading

ಅಂಕಣ

ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿತ್ತು!

ರಾಜಮಾರ್ಗ ಅಂಕಣ: ಮದುವೆಯ ನಂತರ ಆಕೆಗೆ ಇನ್ನೂ ಕೆಲವು ಐಡೆಂಟಿಟಿಗಳು ಸೇರಿದವು. ಇಂತವನ ಹೆಂಡತಿ, ಇಂತವನ ಅತ್ತಿಗೆ, ಇಂತವರ ಸೊಸೆ, ಇಂತವರ ತಾಯಿ, ಇಂತವರ ನಾದಿನಿ……. ಹೀಗೆ! ಅಲ್ಲಿಯೂ ಯಾರೂ ಆಕೆಯ ಹೆಸರು ಹಿಡಿದು ಕರೆಯಲಿಲ್ಲ. ಸಂಪ್ರದಾಯಸ್ಥರ ಮನೆ ಎಂಬ ನೆಪದಲ್ಲಿ ತಿಂಗಳ ಮೂರು ದಿನ ಹೊರಗೆ ಕುಳಿತುಕೊಳ್ಳುವುದು ತಪ್ಪಲಿಲ್ಲ.

VISTARANEWS.COM


on

ರಾಜಮಾರ್ಗ ಅಂಕಣ she 1
Koo

ಈಗಲೂ ಆಕೆಗೆ ಕಾಡುವ ಪ್ರಶ್ನೆ – ನಾನು ಯಾರು?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮನೆಯೊಳಗೆ ಆಕೆಯನ್ನು (she) ಎಲ್ಲರೂ ಅತ್ತಿಗೆ, ಮಾಮಿ, ಅಕ್ಕ ಎಂದೆಲ್ಲ ಕರೆಯುತ್ತಾರೆ. ಆಕೆಯ ಮಕ್ಕಳು (children) ಅಮ್ಮ (mother) ಎಂದು ಕರೆಯುತ್ತಾರೆ. ಮೊಮ್ಮಕ್ಕಳು ಅವರನ್ನು ಅಜ್ಜಿ ಎನ್ನುತ್ತಾರೆ. ಮೊಮ್ಮಕ್ಕಳ ಗೆಳೆಯರು ಮನೆಗೆ ಬಂದರೆ ಅವರೂ ಅಜ್ಜಿ ಎನ್ನುತ್ತಾರೆ. ಹೊರಗಿನವರು ಯಾರು ಬಂದರೂ ಆಕೆಯನ್ನು ಆಂಟಿ (Aunty) ಎಂದೇ ಕರೆಯುತ್ತಾರೆ. ಕೈ ಹಿಡಿದ ಗಂಡ (Husband) ಆಕೆಯನ್ನು ‘ಓ ಇವಳೇ’ ಎಂದು ಕರೆಯುತ್ತಾನೆ. ಮನೆಯ ಹೊರಗೆ ಬಂದರೆ ಅಲ್ಲಿ ಕೂಡ ಆಕೆಯು ಇಂತವನ ಹೆಂಡತಿ (wife) ಎಂದೇ ರಿಜಿಸ್ಟರ್ ಆಗಿದ್ದಾಳೆ. ಅವಳಿಗೆ ತನ್ನ ಸ್ವಂತ ಹೆಸರೇ ಮರೆತು ಹೋಗಿದೆ! ಅವಳಿಗೆ ಸ್ವಂತ ಐಡೆಂಟಿಟಿಯು (Identity) ಇಲ್ಲದೆ ಎಷ್ಟೋ ವರ್ಷಗಳೇ ಆಗಿ ಹೋಗಿವೆ.

ಆಕೆಯ ಬಾಲ್ಯವೂ ಹಾಗೇ ಇತ್ತು!

ಆಕೆ ಮೊದಲ ಬಾರಿಗೆ ಕಣ್ಣು ತೆರೆದು ಈ ಜಗತ್ತಿಗೆ ಬಂದಾಗ ಕೇಳಿದ ಮೊದಲ ಉದ್ಗಾರ – ಛೇ! ಈ ಬಾರಿಯೂ ಹೆಣ್ಣು! ಆಗ ಅದು ಅವಳಿಗೆ ಅರ್ಥ ಆಗದ ವಯಸ್ಸು.

ಅವಳನ್ನು ತೊಟ್ಟಿಲಲ್ಲಿ ಮಲಗಿಸಿ ಆಕೆಯ ಕಿವಿಯಲ್ಲಿ ಯಾವುದೋ ಒಂದು ಹೆಸರನ್ನು ಹೆತ್ತವರು ಉಸಿರಿದ್ದರು. ಅದೂ ಅವಳಿಗೆ ನೆನಪಿಲ್ಲ. ಮನೆಯವರು ಅಪ್ಪ, ಅಮ್ಮ ಎಲ್ಲರೂ ಆಕೆಯನ್ನು ಪೂರ್ತಿ ಹೆಸರಿನಿಂದ ಕರೆದದ್ದು ಇಲ್ಲವೇ ಇಲ್ಲ. ಅಮ್ಮಿ, ಅಮ್ಮು, ಪುಟ್ಟಿ, ಚಿನ್ನು…. ಹೀಗೆ ತರಹೇವಾರಿ ಹೆಸರುಗಳು. ಮನೆಯಲ್ಲಿ ತುಂಬಾ ಹೆಣ್ಣು ಮಕ್ಕಳಿದ್ದ ಕಾರಣ ಆಕೆಗೇ ಕೆಲವು ಬಾರಿ ಗೊಂದಲ ಆದದ್ದು ಇದೆ.

ಶಾಲೆಯಲ್ಲಿಯೂ ಆಕೆಗೆ ಐಡೆಂಟಿಟಿ ಇರಲಿಲ್ಲ!

ಆಕೆಯನ್ನು ಶಾಲೆಗೆ ಸೇರಿಸುವಾಗ ಯಾವುದೋ ಒಂದು ಹೆಸರು ಇಟ್ಟಿದ್ದರು. ಆದರೆ ಆ ಹೆಸರು ಶಾಲೆಯಲ್ಲಿ ಬಳಕೆ ಆದದ್ದು ಕಡಿಮೆ. ಹಾಜರಿಯನ್ನು ಕರೆಯುವಾಗ ಟೀಚರ್ ನಂಬರ್ ಕರೆಯುತ್ತಿದ್ದರು. ಪೇಪರ್ ಕೊಡುವಾಗಲೂ ನಂಬರ್. ಅಸೆಂಬ್ಲಿಯಲ್ಲಿಯೂ ನಂಬರ್. ಅಲ್ಲಿ ಕೂಡ ಟೀಚರ್ ಇಂತವರ ಮಗಳು, ಇಂತವರ ತಂಗಿ ಎಂದು ಪರಿಚಯ ಮಾಡುತ್ತಿದ್ದರು. ಸ್ಪರ್ಧೆಗೆ ಹೆಸರು ಕೊಟ್ಟಾಗಲೂ ನಂಬರ್ ಕರೆಯುತ್ತಿದ್ದರು. ಆಕೆಯು ಅವಳ ಅಣ್ಣನಷ್ಟು, ಅಕ್ಕನಷ್ಟು ಪ್ರತಿಭಾವಂತೆ ಆಗಿರಲಿಲ್ಲ. ಮಾರ್ಕ್ಸ್ ಕಡಿಮೆ ಬಂದಾಗ ಶಿಕ್ಷಕರು ‘ ನಿನಗೆ ಅಣ್ಣನಷ್ಟು ಯಾಕೆ ಮಾರ್ಕ್ ಬಂದಿಲ್ಲ? ಅಕ್ಕನ ಹಾಗೆ ಯಾಕೆ ಮಾರ್ಕ್ ಬರೋದಿಲ್ಲ?’ ಎಂದು ಕೇಳಿದಾಗ ಆಕೆಗೆ ಸಿಟ್ಟು ಬರುತ್ತಿತ್ತು.

‘ನಾನು ನಾನೇ ‘ಎಂದು ಕಿರುಚಿ ಹೇಳಬೇಕು ಎಂದು ಹಲವು ಬಾರಿ ಅನ್ನಿಸುತ್ತಿತ್ತು. ಆದರೆ ಆಗುತ್ತಲೇ ಇರಲಿಲ್ಲ. ಆಗಲೇ ಆಕೆಯು ಐಡೆಂಟಿಟಿ ಕಳೆದುಕೊಂಡಾಗಿತ್ತು.

ರಾಜಮಾರ್ಗ ಅಂಕಣ she 1

ಮುಂದೆ ಹೈಸ್ಕೂಲಿಗೆ ಬಂದಾಗಲೂ ಐಡೆಂಟಿಟಿ ಇರಲಿಲ್ಲ!

ಹೈಸ್ಕೂಲ್ ವಿದ್ಯಾಬ್ಯಾಸಕ್ಕೆ ಆಕೆ ಬಂದಾಗ ಇನ್ನೂ ಕೆಲವು ಕಿರುಕುಳಗಳು ಆರಂಭ ಆದವು. ಮೂರು ದಿನ ಹೊರಗೆ ಕೂರಲೇಬೇಕು ಎಂದು ಅಮ್ಮ ಅಪ್ಪಣೆ ಕೊಡಿಸಿದರು. ಆಗ ಶಾಲೆಗೆ ಬಂದಾಗಲೂ ಆಕೆಯು ಮೈಯನ್ನು ಮುದ್ದೆ ಮಾಡಿ ಕುಳಿತುಕೊಳ್ಳುತ್ತಿದ್ದಳು. ಆಗೆಲ್ಲ ಕೀಳರಿಮೆ ಹೆಚ್ಚಾಯಿತು. ಭಯ ಹೆಚ್ಚಾಯಿತು. ಮಾರ್ಕ್ ಮತ್ತೂ ಕಡಿಮೆ ಆಯಿತು.

ಒಮ್ಮೆ ಒಬ್ಬ ಓರಗೆಯ ಹುಡುಗ ಟಿಫಿನ್ ಬಾಕ್ಸನಲ್ಲಿ ಒಂದು ಲವ್ ಲೆಟರ್ ಇಟ್ಟು ನನ್ನನ್ನು ಪ್ರೀತಿ ಮಾಡುತ್ತಿಯಾ? ಎಂದು ಬರೆದಿದ್ದ. ಆಗ ಇನ್ನೂ ಭಯವು ಹೆಚ್ಚಾಯಿತು. ಮದುವೆ ಆಗ್ತೀಯಾ ಎಂದು ಕೇಳಿದಾಗ ಅವನು ʼಅದೆಲ್ಲ ಬೇಡ, ಪ್ರೀತಿ ಮಾತ್ರ ಮಾಡೋಣ’ ಅಂದನು. ಆಕೆಗೆ ಅದೆಲ್ಲ ಅರ್ಥವೇ ಆಗಲಿಲ್ಲ. ಮನೆಗೆ ಬಂದಾಗ ಅಮ್ಮ ಪ್ರತೀ ದಿನ ಆಕೆಯ ಶಾಲೆಯ ಬ್ಯಾಗ್ ಚೆಕ್ ಮಾಡುತ್ತಾ ಇದ್ದರು. ಜೋರಾಗಿ ಪ್ರತಿಭಟಿಸಬೇಕು ಅನ್ನಿಸಿದರೂ ಆಕೆಗೆ ಧ್ವನಿಯೇ ಬರಲಿಲ್ಲ.

ಎಲ್ಲರೂ ಡಾಮಿನೇಟ್ ಮಾಡುವವರು!

ಆಕೆಯ ತಿಂಗಳ ಆ ಡೇಟ್ ಆಕೆಗೆ ಮರೆತು ಹೋದರೂ ಅಮ್ಮನಿಗೆ ನೆನಪು ಇರುತ್ತಿತ್ತು. ಆಕೆಯ ತಂಗಿ, ತಮ್ಮ ಕೂಡ ಆಕೆಯ ಮೇಲೆ ಡಾಮಿನೇಟ್ ಮಾಡ್ತಾ ಇದ್ದರು. ಆಕೆಗೆ ಸ್ವಾಭಿಮಾನ ಎಂಬ ಶಬ್ದದ ಅರ್ಥವೇ ಮರೆತುಹೋಗಿತ್ತು.

ಕಡಿಮೆ ಮಾರ್ಕ್ ಬಂದ ಕಾರಣ ಆಕೆಯು ಕಾಲೇಜಿನ ಮೆಟ್ಟಲು ಹತ್ತಲಿಲ್ಲ. ‘ಗಂಡನ ಮನೆಗೆ ಹೋದ ನಂತರ ಅಡುಗೆ ಮಾಡಬೇಕಲ್ಲ’ ಎಂದು ಆಕೆಯ ಅಮ್ಮ ಅದನ್ನೇ ಚಂದ ಮಾಡಿ ಕಲಿಸಿದರು. ಮನೆಯ ನಾಲ್ಕು ಕೋಣೆಗಳ ನಡುವೆ ಆಕೆಯ ಧ್ವನಿ ಮತ್ತು ಐಡೆಂಟಿಟಿಗಳು ನಿರಂತರ ಉಸಿರುಗಟ್ಟುತ್ತಿದ್ದವು.

ಮದುವೆಯ ನಂತರ…

ಮದುವೆಯ ನಂತರ ಆಕೆಗೆ ಇನ್ನೂ ಕೆಲವು ಐಡೆಂಟಿಟಿಗಳು ಸೇರಿದವು. ಇಂತವನ ಹೆಂಡತಿ, ಇಂತವನ ಅತ್ತಿಗೆ, ಇಂತವರ ಸೊಸೆ, ಇಂತವರ ತಾಯಿ, ಇಂತವರ ನಾದಿನಿ……. ಹೀಗೆ! ಅಲ್ಲಿಯೂ ಯಾರೂ ಆಕೆಯ ಹೆಸರು ಹಿಡಿದು ಕರೆಯಲಿಲ್ಲ. ಸಂಪ್ರದಾಯಸ್ಥರ ಮನೆ ಎಂಬ ನೆಪದಲ್ಲಿ ತಿಂಗಳ ಮೂರು ದಿನ ಹೊರಗೆ ಕುಳಿತುಕೊಳ್ಳುವುದು ತಪ್ಪಲಿಲ್ಲ.

ಚಂದ ಅಡುಗೆ ಮಾಡ್ತೀ ಎಂಬ ಪ್ರಶಸ್ತಿ ಕೊಟ್ಟು ಆಕೆಯನ್ನು ಅಡುಗೆ ಮನೆಯ ಮಹಾರಾಣಿಯನ್ನಾಗಿ ಮಾಡಿಬಿಟ್ಟರು. ‘ಅನ್ನಪೂರ್ಣೆ ‘ ಎಂಬ ಬಿರುದು ಆಕೆಗೆ ಮುಳ್ಳಿನ ಕಿರೀಟ ಆಗಿ ಬಿಟ್ಟಿತು. ಇಡೀ ದಿನ ಊಟ, ತಿಂಡಿ, ಪಾತ್ರೆ, ಬಟ್ಟೆ, ಸ್ವಚ್ಛತೆ, ಒಂದಿಷ್ಟು ನೆಂಟರು, ಹಬ್ಬಗಳು, ಮದುವೆ, ಮುಂಜಿ, ಗೃಹ ಪ್ರವೇಶ, ಸೀಮಂತ ಇಷ್ಟರಲ್ಲಿ ಆಕೆಯ ದಿನಚರಿಯು ಮುಗಿದು ಹೋಗುತ್ತಿತ್ತು. ಒಂದೆರಡು ಧಾರಾವಾಹಿಗಳು ಸ್ವಲ್ಪ ರಿಲೀಫ್ ಕೊಡುತ್ತಿದ್ದವು. ಆಗೆಲ್ಲ ನನ್ನ ಬದುಕು ಆ ಧಾರಾವಾಹಿಗಳ ಕಥೆಯ ಹಾಗೆ ಇಲ್ಲವಲ್ಲ ಎಂಬ ದುಃಖವೂ ಆಕೆಯನ್ನು ಕಾಡುತ್ತಿತ್ತು.

ರಾಜಮಾರ್ಗ ಅಂಕಣ she 1

ಈಗಲೂ ಆಕೆಗೆ ಐಡೆಂಟಿಟಿ ಇಲ್ಲ!

ಮೊಮ್ಮಕ್ಕಳು ಅಜ್ಜಿ ಅಂತ ಕರೆದು ತಿಂಡಿಗಾಗಿ ಓಡಿ ಬರುತ್ತಾರೆ. ಈ ಪಾಠ ಹೇಳಿಕೊಡು, ಈ ಪಾಠ ಹೇಳಿಕೊಡು ಎಂದು ದುಂಬಾಲು ಬೀಳುತ್ತಾರೆ. ಆಗ ಆಕೆಗೆ ಅರ್ಥ ಆಗದೆ ಹೋದಾಗ ‘ ಏನಜ್ಜಿ? ನಿನಗೆ ಏನೂ ಗೊತ್ತಿಲ್ಲ. ಹೋಗಜ್ಜಿ’ ಎಂದು ಅಣಕಿಸಿದಾಗ ನೋವಾಗುತ್ತದೆ. ನೆರೆಹೊರೆಯವರ ಜೊತೆಗೆ ಮಾತಿಗೆ ನಿಂತರೆ ಸಿನೆಮಾ, ಗಾಸಿಪ್, ಫ್ಯಾಷನ್ ಎಂದೆಲ್ಲ ಮಾತಾಡುತ್ತಾರೆ. ಆಗೆಲ್ಲ ಆಕೆಯ ಅಜ್ಞಾನವು ಆಕೆಯನ್ನು ಅಣಕಿಸುತ್ತದೆ. ಆಕೆ ಈಗ ಮನೆಯಿಂದ ಹೊರಗೆ ಹೋಗೋದನ್ನು ಬಿಟ್ಟಿದ್ದಾರೆ. ತವರು ಮನೆಗೆ ಹೋಗದೆ ಎಷ್ಟೋ ವರ್ಷಗಳು ಕಳೆದಿವೆ.

ಆಕೆಯ ಗಂಡ ವಿ ಆರ್ ಎಸ್ ತೆಗೆದುಕೊಂಡು ಈಗ ಮನೆಯಲ್ಲಿಯೇ ಇದ್ದಾರೆ. ಪ್ರತೀ ಅರ್ಧ ಘಂಟೆಗೆ ಒಮ್ಮೆ ‘ ಓ ಇವಳೇ, ಒಂದು ಲೋಟ ಟೀ ಮಾಡಿ ಕೊಡು’ ಎಂದು ಕರೆಯುತ್ತಲೆ ಇರುತ್ತಾರೆ. ಮಗ, ಸೊಸೆ ಸಂಜೆ ಆಫೀಸ್ ಮುಗಿಸಿ ಬಂದು ಲ್ಯಾಪ್ ಟಾಪ್ ಕುಟ್ಟುತ್ತಾ ಕೂರುತ್ತಾರೆ. ಸೊಸೆ ಒಮ್ಮೆ ಕೂಡ ತಿಂಗಳಲ್ಲಿ ಮೂರು ದಿನ ಹೊರಗೆ ಕೂತದ್ದು ಅವಳು ನೋಡಲೇ ಇಲ್ಲ! ಆಗೆಲ್ಲ ನಾನೆಷ್ಟು ಕಳೆದುಕೊಂಡೆ ಎಂಬ ದುಃಖ ಆಕೆಯನ್ನು ಆವರಿಸುತ್ತದೆ. ಮೊಮ್ಮಕ್ಕಳು ಹೊಮ್ ವರ್ಕ್, ಪ್ರಾಜೆಕ್ಟ್, ವಿಡಿಯೋ ಗೇಮ್ ಎಂದು ಮುಳುಗಿರುತ್ತಾರೆ.

ಆಕೆ ʼಇವತ್ತಿನ ಊಟ, ತಿಂಡಿಯ ಮೆನು ಮುಗಿಯಿತು, ನಾಳೆ ಎಂತ ಅಡಿಗೆ ಮಾಡುವುದು?’ ಎಂದು ಲೆಕ್ಕ ಹಾಕುತ್ತ ತಡರಾತ್ರಿ ಹಾಸಿಗೆಗೆ ಒರಗುತ್ತಾರೆ.

ಆಗಲೂ ಆಕೆಗೆ ಕಾಡುವ ಪ್ರಶ್ನೆ – ನಾನು ಯಾರು?

ಇದನ್ನೂ ಓದಿ: ರಾಜಮಾರ್ಗ ಅಂಕಣ : ನನ್ನ ಬದುಕೇ ಬೇರೆ, ನನ್ನ ಸಿನಿಮಾನೇ ಬೇರೆ ಅಂದರೆ ಹೀಗೇ ಆಗೋದು!

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ʼಹಿಂದೂಗಳೇ ಕೊಲೆಗಾರರುʼ ಎಂಬ ಭಾರತ ವಿರೋಧಿ ಬಹುಸಂಖ್ಯಾತ-ವಾದ

ನನ್ನ ದೇಶ ನನ್ನ ದನಿ ಅಂಕಣ:
ಅಂತರಜಾಲದಲ್ಲಿ ಮತ್ತು ಜಾಗತಿಕ ಮಾಧ್ಯಮಗಳಲ್ಲಿ, ಭಾರತ ಕುರಿತಂತೆ, ಭಯಾನಕವಾದ ಮತ್ತು ಅಪ್ಪಟ ಮಿಥ್ಯೆಯ ಮಾಹಿತಿ ದೊರೆಯುತ್ತದೆ. ಲೇಖಕ, ಚಿಂತಕ, ಸಂಶೋಧಕ, ಪ್ರೊಫೆಸರ್ ಕೌಶಿಕ್ ಗಂಗೋಪಾಧ್ಯಾಯ ಅವರು ತಮ್ಮ “ದ ಮೆಜಾರಿಟೇರಿಯನ್ ಮಿಥ್” ಗ್ರಂಥದಲ್ಲಿ ಕೊಟ್ಟಿರುವ ಅಂಕಿ ಅಂಶಗಳು, ಕೋಷ್ಟಕಗಳು (Tables) ಆಘಾತವನ್ನೇ ಉಂಟುಮಾಡುತ್ತವೆ.

VISTARANEWS.COM


on

ನನ್ನ ದೇಶ ನನ್ನ ದನಿ ಅಂಕಣ hindu oppression
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಬಳಿ ಯಾರಾದರೂ ಬಂದು, “ಸನಾತನ ಧರ್ಮ (Sanatan Dharma) ಮತ್ತು ಹಿಂದೂ ಸಮಾಜಗಳು (Hindu community) ಅಪಾಯದಲ್ಲಿವೆ. ವಿಶ್ವದಾದ್ಯಂತ ಇರುವ ಕಮ್ಯೂನಿಸ್ಟರು (Communists), ಇಸ್ಲಾಂ (Islam) ಮತ್ತು ಕ್ರೈಸ್ತ (Christian) ಮತೀಯ ಶಕ್ತಿಗಳು ಭಾರತವನ್ನು (India) ಸಂಪೂರ್ಣವಾಗಿ ನಾಶ ಮಾಡಲು ಪಣ ತೊಟ್ಟಿವೆ. ಕನಿಷ್ಠ ಒಂದು ಶತಮಾನದಿಂದ ಇಂತಹ ಷಡ್ಯಂತ್ರ ನಡೆಯುತ್ತಿದೆ. ಹಿಂದೂ ಸಮಾಜದ ಬೇರೆ ಬೇರೆ ಜಾತಿಗಳ ನಡುವೆ ಅಂತಃಕಲಹ, ವೈಮನಸ್ಯ, ದ್ವೇಷಗಳನ್ನು ಹುಟ್ಟುಹಾಕಲಾಗುತ್ತಿದೆ, ಲಿಂಗಾಯತರನ್ನು – ಸಿಖ್ಖರನ್ನು ಹಿಂದೂಗಳ ಮೇಲೆ ಎತ್ತಿಕಟ್ಟಲಾಗುತ್ತಿದೆ. ಅಮೆರಿಕಾ, ಇಂಗ್ಲೆಂಡ್, ಯೂರೋಪಿನ ಕೆಲವು ದೇಶಗಳು, ಇಸ್ಲಾಮೀ (Islamic) ದೇಶಗಳು ಈ ಗುರಿಯ ಬೆನ್ನುಹತ್ತಿ, ದೆಹಲಿ-ಕೇಂದ್ರಿತ ಲುಟ್ಯೆನ್ಸ್ ನೊಂದಿಗೆ ಷಾಮೀಲಾಗಿ ಕಾರ್ಯನಿರ್ವಹಿಸುತ್ತಿವೆ. ಭಾರತದ ನೆರೆಹೊರೆಯ ಎಲ್ಲ ದೇಶಗಳನ್ನು, ಭಾರತದ ವಿರುದ್ಧವೇ ಎತ್ತಿಕಟ್ಟಲು ಚೀನಾ – ಪಾಕಿಸ್ತಾನಗಳು ಕೆಲಸ ಮಾಡುತ್ತಲೇ ಇವೆ. ಭಾರತದ ವಿರೋಧ ಪಕ್ಷಗಳಿಗೆ ಬೇರೆ ಬೇರೆ ದೇಶಗಳಿಂದ ವಿವಿಧ ಬಗೆಯಲ್ಲಿ ಹಣ ಬರುತ್ತಿದೆ ಮತ್ತು ಚುನಾವಣೆಗಳಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸಲಾಗುತ್ತಿದೆ. ಜಾರ್ಜ್ ಸೋರೋಸ್ ಮೊದಲಾದವರು ಬಹಳ ಬಹಳ ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಭಾರತವನ್ನು ಸರ್ವನಾಶ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಕಮ್ಯೂನಿಸ್ಟರ ನಿಯಂತ್ರಣದ “ನ್ಯೂಯಾರ್ಕ್ ಟೈಮ್ಸ್”, “ವಾಷಿಂಗ್ಟನ್ ಪೋಸ್ಟ್”, ಬಿಬಿಸಿ ಮುಂತಾದ ಮಾಧ್ಯಮ ಲೋಕದ ದುಃಶಕ್ತಿಗಳು ಮತ್ತು ಅಮೇರಿಕಾದ ಕೆಲವು ವಿಶ್ವವಿದ್ಯಾಲಯಗಳೂ ಈ ಮಾಫಿಯಾದ ಭಾಗವಾಗಿವೆ. ಅಂತರಜಾಲದ ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿಯೂ ವ್ಯವಸ್ಥಿತವಾಗಿ ಈ ದುಷ್ಕಾರ್ಯ ನಡೆಯುತ್ತಿದೆ……”

ಎಂದರೆ, ನಾವು ಶತಕೋಟಿ ಭಾರತೀಯರೂ ಗಹಗಹಿಸಿ ನಗುತ್ತೇವೆ. “ಅಯ್ಯಾ, ಇದೇ ರೀತಿಯ ಇನ್ನೊಂದಿಷ್ಟು ಜೋಕುಗಳನ್ನು ಹೇಳು” ಎಂದು ಸಹ ದುಂಬಾಲು ಬೀಳುತ್ತೇವೆ.

ಆದರೆ, ವಾಸ್ತವದಲ್ಲಿ, ನಮಗೆ ಅಂದರೆ ಭಾರತೀಯರಿಗೆ ಮೇಲ್ನೋಟಕ್ಕೆ ಹಾಸ್ಯ ಎನ್ನಿಸುವ ಈ ಎಲ್ಲ ಸಂಗತಿಗಳೂ, ಈ ಎಲ್ಲ ಸಾಲುಗಳೂ ನಿಜ; ಅಕ್ಷರಶಃ ಶತಪ್ರತಿಶತ ಸತ್ಯ.

ನೋಡಿ, ಪಾಕಿಸ್ತಾನವಿದೆ, ಬಾಂಗ್ಲಾದೇಶವಿದೆ. ಎಂಟು ದಶಕಗಳ ಹಿಂದೆ, ಅವು ನಮ್ಮ ದೇಶದ ಭಾಗಗಳೇ ಆಗಿದ್ದವು. ಇಸ್ಲಾಮೀ “ರಿಲಿಜನ್” (“ಧರ್ಮ” ಸೂಕ್ತವಾದ ಪದ ಅಲ್ಲ. ಧರ್ಮದ ವ್ಯಾಖ್ಯೆಯೇ ಬೇರೆ) ಹೆಸರಿನಲ್ಲಿ ಬೇರೆಯೇ ದೇಶ ಬೇಕು ಎಂಬಂತಹ ಹಕ್ಕೊತ್ತಾಯ ಬಂದ ಕ್ಷಣದಿಂದ ಮತ್ತು ಹೊಸ ದೇಶ 1947ರಲ್ಲಿ ಹುಟ್ಟಿಕೊಂಡ ದಿನದಿಂದ, ಅವ್ಯಾಹತವಾಗಿ ಹಿಂದೂಗಳ – ಸಿಖ್ಖರ ಹತ್ಯೆ, ಅತ್ಯಾಚಾರ, ಬಲವಂತದ ಮತಾಂತರ ಆಗುತ್ತಲೇ ಇದೆ. ಭಾರತದ ಹಣ, ಭಾರತದ ಸಹಕಾರ, ಭಾರತದ ಸೈನಿಕರ ರಕ್ತದಿಂದಲೇ ಹುಟ್ಟಿಕೊಂಡ ಬಾಂಗ್ಲಾದೇಶದಲ್ಲಿಯೂ ಹಿಂದೂಗಳ – ಬೌದ್ಧರ ಹತ್ಯಾಕಾಂಡ ಇಂದಿಗೂ ನಡೆಯುತ್ತಲೇ ಇದೆ. ಪಶ್ಚಿಮ ಪಾಕಿಸ್ತಾನದಲ್ಲಂತೂ, 1947ರಲ್ಲಿ 20% ಇದ್ದ ಹಿಂದೂಗಳ ಶೇಕಡಾವಾರು, ಈಗ 2ಕ್ಕಿಂತ ಕಡಿಮೆಯಾಗಿದೆ! ಕಳೆದ ಐವತ್ತು ವರ್ಷಗಳಲ್ಲಿ ಭಾರತವು ಅದೆಷ್ಟು ಸಹಾಯ ಹಸ್ತ ಚಾಚಿದರೂ, ಬಾಂಗ್ಲಾದೇಶದಲ್ಲಿಯೂ ಹಿಂದೂಗಳ – ಬೌದ್ಧರ ಪರಿಸ್ಥಿತಿ ಭಿನ್ನವಾಗಿಲ್ಲ.

ಈ ಎರಡೂ ದೇಶಗಳಲ್ಲಿ, ಅಂದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಆಗುತ್ತಿರುವ ಹಿಂದೂಗಳ – ಸಿಖ್ಖರ – ಬೌದ್ಧರ ಹತ್ಯಾಕಾಂಡಗಳ ಬಗೆಗೆ ವರದಿಗಳೂ, ಚಿತ್ರಗಳೂ, ವೀಡಿಯೋಗಳೂ ಬರುತ್ತಲೇ ಇವೆ.

ಅದೇ ನೋಡಿ, ಭಾರತದಲ್ಲಿರುವ ಮುಸ್ಲಿಮರ ಒಟ್ಟು ಜನಸಂಖ್ಯೆಯಲ್ಲಿ ಮತ್ತು ಶೇಕಡಾವಾರಿನಲ್ಲಿ (Percentage) ಏರಿಕೆ ಆಗುತ್ತಲೇ ಇದೆ. ಒಂದು ಅಂದಾಜಿನ ಪ್ರಕಾರ ಈಗ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 25 ಕೋಟಿ ಇರಬಹುದು. ಕಳೆದ ಏಳೆಂಟು ದಶಕಗಳಲ್ಲಿ ಸಂವಿಧಾನಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ತುಂಬ ತುಂಬ ಸೌಲಭ್ಯಗಳು, ಮೀಸಲಾತಿ, ಅನುಕೂಲಗಳು, ಸಾಲ – ಸಹಾಯಧನಗಳು ಸಹಾ ಅವರಿಗೆ ದೊರೆಯುತ್ತಿವೆ.

ಆದರೆ, ಜಗತ್ತಿನ ಮಾಧ್ಯಮಗಳಲ್ಲಿ (ಕೇವಲ ಭಾರತದ ಮಾಧ್ಯಮಗಳಲ್ಲಿ ಮಾತ್ರವಲ್ಲ) ಮತ್ತು ಅಂತರಜಾಲದ ಅನೇಕ ಮಾಹಿತಿ-ವಿವರಗಳಲ್ಲಿ ಬೇರೆಯೇ ಚಿತ್ರ ಕಂಡುಬರುತ್ತದೆ. ಜಗತ್ತಿನಾದ್ಯಂತ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ, ಹತ್ಯಾಕಾಂಡ ನಡೆಸುತ್ತಿದ್ದಾರೆ, ಕಿರುಕುಳ ಕೊಡುತ್ತಿದ್ದಾರೆ, ಅತ್ಯಾಚಾರ ಎಸಗುತ್ತಿದ್ದಾರೆ ಎಂಬಂತಹ ಸತ್ಯಸಂಗತಿಗಳಿವೆ. ವಿಶೇಷವಾಗಿ ಬಹುತೇಕ ಇಸ್ಲಾಮೀ ದೇಶಗಳಲ್ಲಿ ಕಾಫಿರರಿಗೆ ಕನಿಷ್ಠ ಸ್ವಾತಂತ್ರ್ಯವೂ ಇಲ್ಲ, ಕಾಫಿರರಿಗೆ ಅಲ್ಲಿ ಮನೆಯೊಳಗೂ ತಮ್ಮ ಸ್ವಂತದ ಮತಧರ್ಮಗಳ ಆಚರಣೆಗಳಿಗೂ ಅವಕಾಶವಿಲ್ಲ. ಆದರೆ, ಹಿಂದೂ ಬಹುಸಂಖ್ಯಾತರಿರುವ ಭಾರತದಲ್ಲಿ so called ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರೈಸ್ತರು ತುಂಬ ಚೆನ್ನಾಗಿದ್ದಾರೆ ಮತ್ತು ಅವರಿಗೆ ಇಲ್ಲಿ ಅಪರಿಮಿತ ಸ್ವಾತಂತ್ರ್ಯವಿದೆ; ಹಕ್ಕುಗಳೂ, ಸೌಲಭ್ಯಗಳೂ ಧಂಡಿಯಾಗಿ ಇವೆ.

ವಸ್ತುಸ್ಥಿತಿ ಹೀಗಿದ್ದೂ ಅಂತರಜಾಲದಲ್ಲಿ ಮತ್ತು ಜಾಗತಿಕ ಮಾಧ್ಯಮಗಳಲ್ಲಿ, ಭಾರತ ಕುರಿತಂತೆ, ಭಯಾನಕವಾದ ಮತ್ತು ಅಪ್ಪಟ ಮಿಥ್ಯೆಯ ಮಾಹಿತಿ ದೊರೆಯುತ್ತದೆ. ಲೇಖಕ, ಚಿಂತಕ, ಸಂಶೋಧಕ, ಪ್ರೊಫೆಸರ್ ಕೌಶಿಕ್ ಗಂಗೋಪಾಧ್ಯಾಯ ಅವರು ತಮ್ಮ “ದ ಮೆಜಾರಿಟೇರಿಯನ್ ಮಿಥ್” ಗ್ರಂಥದಲ್ಲಿ ಕೊಟ್ಟಿರುವ ಅಂಕಿ ಅಂಶಗಳು, ಕೋಷ್ಟಕಗಳು (Tables) ಆಘಾತವನ್ನೇ ಉಂಟುಮಾಡುತ್ತವೆ.

“ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಒಂದು ಡಿಜಿಟಲ್ ರಿಸೋರ್ಸ್ ಅಂದರೆ ಅಂಕೀಯ ದತ್ತಾಂಶ ಮಾಹಿತಿಕೋಶ. ಈ ಜಾಲತಾಣದ ಅಭಿಲೇಖಾಗಾರದಲ್ಲಿ (Archives) ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲಾವಧಿಯ ಸುದ್ದಿಗಳ ದತ್ತಾಂಶವು ಸಂಗ್ರಹವಾಗಿದೆ. ಅಮೆರಿಕಾ, ಕೆನಡಾ, ಯೂರೋಪ್, ಆಫ್ರಿಕಾ, ಏಷ್ಯಾ, ದಕ್ಷಿಣ ಅಮೆರಿಕಾ ಖಂಡ, ಆಸ್ಟ್ರೇಲಿಯಾ ಇತ್ಯಾದಿಗಳ ಧ್ವನಿ ಕಡತಗಳು, ವೀಡಿಯೋಗಳು, ಜಾಲತಾಣಗಳು, ಬ್ಲಾಗ್ ಗಳು, ಪಾಡ್ ಕ್ಯಾಸ್ಟ್ ಗಳು, ಗ್ರಂಥಗಳು, ಸಮ್ಮೇಳನಗಳ ನಿರ್ಣಯಗಳು, ವಿಶ್ವಕೋಶಗಳು, ಆಧಾರ ಗ್ರಂಥಗಳು, ನಿಯತಕಾಲಿಕಗಳು, ವೃತ್ತಪತ್ರಿಕೆಗಳು, ಸುದ್ದಿ-ಜಾಲತಾಣಗಳು ಇತ್ಯಾದಿಗಳಲ್ಲಿ ಮೂರು ವರ್ಷಗಳ ಅವಧಿಯಲ್ಲಿ (2020, 2021 ಮತ್ತು 2022) ಪ್ರಕಟವಾದ ಮತ್ತು ದಾಖಲಾದ ಮಾಹಿತಿಯನ್ನು ವಿಶೇಷವಾಗಿ ಬಹುಸಂಖ್ಯಾತ-ವಾದ (Majoritarianism) ಕುರಿತ ದತ್ತಾಂಶಗಳನ್ನು ಆಳವಾಗಿ ಅಭ್ಯಾಸ ಮಾಡಿದಾಗ ಮತ್ತು ವಿಶ್ಲೇಷಿಸಿದಾಗ ದೊರೆಯುವ ಉಪಲಬ್ಧಿಗಳು ಅತ್ಯಂತ ಆಘಾತಕಾರಿಯಾಗಿವೆ. ಜಗತ್ತಿನ ಆರನೆಯ ಒಂದು ಭಾಗದಷ್ಟು ಜನಸಂಖ್ಯೆಯಿರುವ ಭಾರತದಲ್ಲಿ ಹೆಸರಿಗೆ ಬಹುಸಂಖ್ಯಾತರಾಗಿರುವ ಹಿಂದೂಗಳು so called ಅಲ್ಪಸಂಖ್ಯಾತರ ಮೇಲೆ ಮತ, ಭಾಷೆ ಮತ್ತು ಜನಾಂಗದ ಆಧಾರದ ಮೇಲೆ ದೌರ್ಜನ್ಯ ಮೆರೆದಿದ್ದಾರೆ ಎನ್ನುತ್ತವೆ ಈ ದತ್ತಾಂಶಗಳು. ಇನ್ನೂ ಭಯಂಕರವಾದ ಸಂಗತಿಯೆಂದರೆ, ಇಡೀ ಜಗತ್ತಿನ ಇಂತಹ ದತ್ತಾಂಶದಲ್ಲಿ 80% (ಹೌದು ಪ್ರತಿಶತ ಎಂಬತ್ತು) ಹಿಂದೂಗಳ ದೌರ್ಜನ್ಯದ ಮಾಹಿತಿಯೇ ಇಲ್ಲಿ ಪ್ರಧಾನವಾಗಿ ಲಭ್ಯವಾಗುತ್ತದೆ. ಅಂದರೆ, ಜಗತ್ತಿನಲ್ಲಿ ಭಾರತದ ಹಿಂದೂಗಳ ಬಗೆಗೆ, ಹಿಂದೂ-ವಿರೋಧೀ ಮಾಫಿಯಾ ಅದೆಂತಹ ದತ್ತಾಂಶವನ್ನು ದಾಖಲಿಸಿದೆ, ಎಂಬ ಈ ವಿವರಗಳು ನಿಜಕ್ಕೂ ಗಾಬರಿ ತರಿಸುತ್ತವೆ. ಹಿಂದುಗಳನ್ನು ರಾಕ್ಷಸರೆಂಬಂತೆ ಚಿತ್ರಿಸಲಾಗಿದೆ. ಆದರೆ, ಮುಸ್ಲಿಮರನ್ನು – ಕ್ರೈಸ್ತರನ್ನು ದುರುದ್ದೇಶಪೂರ್ವಕವಾಗಿ underplay ಮಾಡಿ, ದಮನಕಾರಿಗಳನ್ನೇ ದಮನಿತರೆಂಬಂತೆ ಬಿಂಬಿಸುವ ಕೆಲಸ ನಡೆಯುತ್ತಿದೆ. ಈ ಎಲ್ಲ ನಿಂದನೀಯ ದುಷ್ಕಾರ್ಯಗಳಲ್ಲಿ ಹಣ ಸಹ ದೊಡ್ಡ ಪಾತ್ರವನ್ನು ನಿರ್ವಹಿಸಿದೆ.

ಅದೇ ನೋಡಿ, ಕಾಫಿರರ ಮೇಲಿನ ಪಾಕಿಸ್ತಾನಿ ಮುಸ್ಲಿಮರ ದೌರ್ಜನ್ಯಗಳು, ಈ ದತ್ತಾಂಶದ ಪ್ರಕಾರ ಕೇವಲ 1.8% ಮಾತ್ರ! ಕನಿಷ್ಠ ಮಾಹಿತಿ, ಕನಿಷ್ಠ ಪ್ರಜ್ಞೆ ಇರುವ ಯಾರಿಗೇ ಆದರೂ, ಇದು ಸುಳ್ಳು ಎಂಬುದು ತಿಳಿಯುತ್ತದೆ. ಆದರೆ, ಇಂಥ ದಾಖಲೆಗಳ – ಸಾಕ್ಷ್ಯಾಧಾರಗಳ ಶಕ್ತಿಯೇ ಶಕ್ತಿ. ನ್ಯಾಯಾಲಯಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ವರದಿಗಳು, ವಿಶ್ವಕೋಶಗಳು ಇಂತಹ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶನ್ನೇ ಆಧರಿಸಿ ತಮ್ಮ ಷರಾ ಬರೆಯುತ್ತವೆ, ತೀರ್ಮಾನಗಳನ್ನು ಮಾಡುತ್ತವೆ. ಈ ಪರಿಪ್ರೇಕ್ಷ್ಯದಲ್ಲಿ ಭಾರತ-ವಿರೋಧೀ ದುಃಶಕ್ತಿಗಳು ಹೇಗೆಲ್ಲಾ ಕೆಲಸ ಮಾಡುತ್ತಿವೆ, ಹೇಗೆಲ್ಲಾ ವಂಚನೆಯಿಂದ ಸಾಕ್ಷ್ಯಾಧಾರಗಳನ್ನು ದಾಖಲಿಸುತ್ತವೆ ಎಂಬುದನ್ನು ಗಮನಿಸುವಾಗ ಆತಂಕವಾಗುತ್ತದೆ.

ಈ ದತ್ತಾಂಶದಲ್ಲಿ, ಕಾಶ್ಮೀರದಲ್ಲಿ ಮುಸ್ಲಿಮರ ದೌರ್ಜನ್ಯಕ್ಕೆ ಸಿಲುಕಿದ ಲಕ್ಷಾವಧಿ ಹಿಂದೂಗಳಿಗೆ ಸಂಬಂಧಿಸಿದಂತೆ; ಅವರ ಹತ್ಯೆ, ಅವರ ಮೇಲಾದ ಅವರ್ಣನೀಯ ಅತ್ಯಾಚಾರಗಳಿಗೆ ಸಂಬಂಧಿಸಿದಂತೆ 1,802 ವರದಿಗಳು ದಾಖಲಾಗಿದ್ದರೆ, ಗುಜರಾತಿನಲ್ಲಾದ 2002ರ ಗಲಭೆಗಳಿಗೆ ಸಂಬಂಧಿಸಿದಂತೆ 29,092 (ಹದಿನಾರು ಪಟ್ಟು) ವರದಿಗಳು ದಾಖಲಾಗಿವೆ. ಗುಜರಾತಿನಲ್ಲಿ ಆಗ ಹತ್ಯೆಯಾದವರ ಸಂಖ್ಯೆ ಅಧಿಕೃತವಾಗಿ 254 ಹಿಂದೂಗಳು ಮತ್ತು 790 ಮುಸ್ಲಿಮರು ಎನ್ನುವುದನ್ನು ಸಹ ಸಾಂದರ್ಭಿಕವಾಗಿ ನಾವಿಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ಇನ್ನೂ ಒಂದು ಉದಾಹರಣೆ ನೋಡಿ. 1984ರಲ್ಲಿ ಸಿಖ್ ಅಂಗರಕ್ಷಕರಿಂದ ಇಂದಿರಾ ಗಾಂಧಿಯವರ ಹತ್ಯೆಯಾಯಿತು. ಆಗ ಪ್ರತೀಕಾರ ರೂಪದಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಿ (ಅಧಿಕೃತವಾಗಿ) ಸತ್ತವರು 3,350 ಮಂದಿ. ಆದರೆ, ಈ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶದಲ್ಲಿ 10,977 (ಕಾಶ್ಮೀರದ ಅಂಕಿ ಅಂಶಗಳ ಐದು ಪಟ್ಟು) ವರದಿಗಳು ದಾಖಲಾಗಿವೆ.

ಕಳೆದ ಏಳೆಂಟು ದಶಕಗಳಲ್ಲಿ ಕಮ್ಯೂನಿಸ್ಟರು – ಜಿಹಾದಿಗಳು ಸೇರಿ ಭಾರತದ ಇತಿಹಾಸವನ್ನೇ ವಿಕೃತವನ್ನಾಗಿ – ವಿಷಪೂರಿತವನ್ನಾಗಿ ಮಾಡಿದ್ದಾರೆ, ಎಂಬುದನ್ನು ಇಲ್ಲಿ ಸ್ಮರಿಸಿದರೆ, ಜಾಗತಿಕ ದಾಖಲೆಗಳ ದತ್ತಾಂಶದ ವಿಷಯದಲ್ಲಿಯೂ ಏನೆಲ್ಲಾ ನಡೆಯುತ್ತಿದೆ ಎಂಬುದು ಗಾಬರಿ ಉಂಟುಮಾಡುತ್ತದೆ. ಶಾಲಾ-ಕಾಲೇಜುಗಳ ಪಠ್ಯಗಳಲ್ಲಿರುವ ಸುಳ್ಳು – ಇತಿಹಾಸದ ದುಷ್ಪರಿಣಾಮದಿಂದ ಭಾರತ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗ ಜಾಗತಿಕ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶಗಳ ಈ ಆಯಾಮವು ಶತಕೋಟಿ ಭಾರತೀಯರಿಗೆ ಎಚ್ಚರಿಕೆಯ ಘಂಟೆಯಾಗಿದೆ.

ಜಗತ್ತೇ ವಿಚಿತ್ರ!

ಒಳಗಿನ ಶತ್ರುಗಳಂತೆಯೇ, ಹೊರಗಿನ ಕಟುಸತ್ಯಗಳು – ಭಾರತವಿರೋಧೀ ದುಃಶಕ್ತಿಗಳು ಸಹ ಅದೆಷ್ಟು ಘೋರ, ಅದೆಷ್ಟು ಭಯಾನಕ! ಅನೇಕ ದಶಕಗಳಿಂದ ಈ ಬಹುಸಂಖ್ಯಾತ-ವಾದ (Majoritarianism) ಎನ್ನುವುದೇ ಭಾರತೀಯ ಹಿಂದುಗಳನ್ನು ಹಣಿಯುವ, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ, ಕಮ್ಯೂನಿಸ್ಟ್ ನೇತೃತ್ವದ ಮಾಫಿಯಾದ ಹುನ್ನಾರವಾಗಿದೆ. ನಮ್ಮಲ್ಲೇ ತುಂಬ ತುಂಬ ಉದಾಹರಣೆಗಳಿವೆ. ಪಾಕಿಸ್ತಾನ್ ಮೂಲದ ಭಯೋತ್ಪಾದಕ ಅಜ್ಮಲ್ ಕಸಬ್ ಮೊದಲಾದವರ ತಂಡವು, ಹಿಂದೂಗಳ ವೇಷದಲ್ಲಿಯೇ ದಾಳಿ ನಡೆಸಿತ್ತು ಮತ್ತು ಮುಂಬಯಿ ಮೇಲಿನ ಈ 2008ರ ಕುಖ್ಯಾತ ದಾಳಿಯ ಹಿಂದೆ ಬಹಳ ದೊಡ್ಡ ಷಡ್ಯಂತ್ರವನ್ನು ರೂಪಿಸಲಾಗಿತ್ತು. ಕಸಬ್ ಅಕಸ್ಮಾತ್ತಾಗಿ ಸೆರೆ ಸಿಕ್ಕು ಬಹಳಷ್ಟು ರಹಸ್ಯಗಳು ಬಯಲಾದವು. ಕೆಲವರಂತೂ ಹಿಂದೂ ರಾಷ್ಟ್ರೀಯ ಸಂಘಟನೆಗಳನ್ನೇ ಗುರಿ ಮಾಡಿ ಪುಸ್ತಕಗಳನ್ನೂ ಬರೆಸಿ, ಹಿಂದೂ-ಭಾರತವನ್ನೇ ಕಟಕಟೆಯಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಿಕೊಂಡಿದ್ದರು.

ಭಾರತೀಯ ಸಮಾಜವು ಸಾವಿರ ಸಾವಿರ ವರ್ಷಗಳ ಯಾತನೆ, ಹಿಂಸೆ, ಹತ್ಯಾಕಾಂಡಗಳನ್ನು ಅನುಭವಿಸಿದ್ದು ಸಾಕು. ಇನ್ನಾದರೂ ಅರಿವಿನ ಬೆಳಕು ನಮ್ಮಲ್ಲಿ ಎಚ್ಚರ, ಜಾಗೃತಿಗಳನ್ನು ಉದ್ದೀಪಿಸಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಬ್ರಿಟಿಷರು ಬರುವ ಮೊದಲು ರಸ್ತೆಗಳೇ ಇರಲಿಲ್ಲವಾದರೆ, ಕೃಷ್ಣದೇವರಾಯನ ಭಾರಿ ಸೈನ್ಯ ಆಕಾಶದಲ್ಲಿ ಹಾರಾಡುತ್ತಿತ್ತೇ?

Continue Reading
Advertisement
Paris Olympics 2024
ಕ್ರೀಡೆ22 mins ago

Paris Olympics 2024 : ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ “ಇಂಡಿಯಾ ಹೌಸ್”

Viral Video
ವೈರಲ್ ನ್ಯೂಸ್26 mins ago

Viral Video: ಅಬ್ಬಾ.. ಎಂಥಾ ಕ್ರೌರ್ಯ! ಮಹಿಳೆ ಮೇಲೆ ಕಿಡಿಗೇಡಿಗಳಿಂದ ಇದೆಂಥಾ ದೌರ್ಜನ್ಯ-ವಿಡಿಯೋ ಇದೆ ನೋಡಿ

Jio Tariffs
ದೇಶ26 mins ago

Jio Tariffs: ಜಿಯೋ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್;‌ ಶೇ.20ರಷ್ಟು ಶುಲ್ಕ ಹೆಚ್ಚಳ, ನೂತನ ದರಪಟ್ಟಿ ಇಲ್ಲಿದೆ

Internet Addiction
ಆರೋಗ್ಯ36 mins ago

Internet Addiction: ಈ 10 ಲಕ್ಷಣಗಳು ನಿಮ್ಮಲ್ಲಿದ್ದರೆ, ನೀವೂ ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ!

Paris Olympics 2024
ಕ್ರೀಡೆ40 mins ago

Paris Olympics 2024: ಒಲಿಂಪಿಕ್ಸ್​ಗೆ ಅರ್ಹತೆ ಪಡೆದ​ ರಾಜ್ಯದ ಇಬ್ಬರು ಸ್ವಿಮ್ಮರ್​ಗಳು

Illegal ganja storage in Ballari Arrest of two accused Rs 19 10 lakh Valuable ganja seized
ಕರ್ನಾಟಕ1 hour ago

Ballari News: ಬಳ್ಳಾರಿಯಲ್ಲಿ ಅಕ್ರಮ ಗಾಂಜಾ ಸಂಗ್ರಹ; ಇಬ್ಬರು ಆರೋಪಿಗಳ ಬಂಧನ

Arvind Kejriwal
ದೇಶ1 hour ago

Arvind Kejriwal: ಪ್ಯಾಂಟ್‌ ಲೂಸ್‌ ಆಗಿದೆ, ಒಂದು ಬೆಲ್ಟ್‌ ಕೊಡಿ; ಕೋರ್ಟ್‌ಗೆ ಅರವಿಂದ್‌ ಕೇಜ್ರಿವಾಲ್‌ ಮನವಿ‌

Karnataka Weather Forecast
ಮಳೆ1 hour ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

Railway New Rules
Latest1 hour ago

Railway New Rules: ರೈಲು ಪ್ರಯಾಣಿಕರೇ, ಬರ್ತ್‌ನಲ್ಲಿ ಮಲಗುವ ಕುರಿತ ಈ ಹೊಸ ರೂಲ್ಸ್‌ ನೆನಪಿನಲ್ಲಿರಲಿ!

Ashada Sale 2024
ಫ್ಯಾಷನ್1 hour ago

Ashada Sale 2024: ಆಷಾಢ ಸೇಲ್‌ನಲ್ಲಿ ಶಾಪಿಂಗ್‌ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ1 hour ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ8 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌