ರಾಜಮಾರ್ಗ ಅಂಕಣ: ನಾಲ್ಕನೇ ತರಗತಿ ಮಾತ್ರ ಓದಿದ ಎನ್ ನರಸಿಂಹಯ್ಯ 550 ಪತ್ತೇದಾರಿ ಕಾದಂಬರಿ ಬರೆದರು! - Vistara News

ಅಂಕಣ

ರಾಜಮಾರ್ಗ ಅಂಕಣ: ನಾಲ್ಕನೇ ತರಗತಿ ಮಾತ್ರ ಓದಿದ ಎನ್ ನರಸಿಂಹಯ್ಯ 550 ಪತ್ತೇದಾರಿ ಕಾದಂಬರಿ ಬರೆದರು!

ರಾಜಮಾರ್ಗ ಅಂಕಣ: ಓದುಗರಿಗೆ ಎನ್ ನರಸಿಂಹಯ್ಯ ಯಾರು ಎಂದು ಗೊತ್ತಿರಲಿಲ್ಲ. ಅವರು ಜನರ ನಡುವೆ ಇದ್ದರೂ ಅವರ ಗುರುತು ಯಾರಿಗೂ ಆಗುತ್ತಲೇ ಇರಲಿಲ್ಲ! ಆದರೆ ಅವರೇ ಸೃಷ್ಟಿ ಮಾಡಿದ ಪತ್ತೇದಾರ ಪುರುಷೋತ್ತಮನ ಪಾತ್ರ ಎಲ್ಲರಿಗೂ ಗೊತ್ತಿತ್ತು! ಅವರ ಪುಸ್ತಕಗಳು ವಿದೇಶದ ಭಾಷೆಗಳೂ ಸೇರಿ ಭಾರತದ ವಿವಿಧ ಭಾಷೆಗಳಿಗೆ ಅನುವಾದ ಆದವು!

VISTARANEWS.COM


on

ರಾಜಮಾರ್ಗ ಅಂಕಣ n narasimhaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಸ್ ಕಂಡಕ್ಟರ್, ಕ್ಲೀನರ್ ಆಗಿದ್ದ ಅವರು ʼಕನ್ನಡದ ಕಾನನ್ ಡಯಲ್’ ಆದದ್ದು ಹೇಗೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಕನ್ನಡದಲ್ಲಿ ʼಪತ್ತೇದಾರಿ ಕಾದಂಬರಿಗಳ ಜನಕ ‘ (detective novels) ಎಂದು ಕರೆಸಿಕೊಂಡ ಎನ್ ನರಸಿಂಹಯ್ಯ (N Narasimhaiah) ಬರೆದು ಮುಗಿಸಿದ್ದು ಬರೋಬ್ಬರಿ 550 ಪತ್ತೇದಾರಿ ಕಾದಂಬರಿಗಳನ್ನು ಮತ್ತು 50 ಸಾಮಾಜಿಕ ಕಾದಂಬರಿಗಳನ್ನು ಅಂದರೆ ನಂಬುವುದು ಕಷ್ಟ! ಅದರಲ್ಲಿಯೂ ಬಡತನಕ್ಕೆ ಕಾರಣವಾಗಿ ನಾಲ್ಕನೇ ತರಗತಿಗೆ ಶಾಲೆ ತೊರೆದ ಅವರು ಅಷ್ಟೊಂದು ಪತ್ತೇದಾರಿ ಕಾದಂಬರಿ ಬರೆದರೆಂದರೆ ಅಂದರೆ ಅದು ನಿಜಕ್ಕೂ ಸಾಹಿತ್ಯದ ವಿಸ್ಮಯ ಮತ್ತು ಬರವಣಿಗೆಯ ಬೆರಗು!

ಪತ್ತೇದಾರ ಪುರುಷೋತ್ತಮನ ಜನಕ

1925 ಸೆಪ್ಟೆಂಬರ್ 18ರಂದು ಬೆಂಗಳೂರಿನಲ್ಲಿ ಜನಿಸಿದ ಎನ್ ನರಸಿಂಹಯ್ಯ ಅವರ ತಂದೆ ಸಿ. ನಂಜಪ್ಪನವರು ಜನಪದ ಕವಿ ಆಗಿದ್ದರು. ಬಾಲ್ಯದಲ್ಲಿ ಅಪ್ಪ ತೀರಿಹೋದ ಕಾರಣ ಅವರು ನಾಲ್ಕನೇ ತರಗತಿಗೆ ಶಾಲೆ ಬಿಡಬೇಕಾಯಿತು. ಅಲ್ಲಿಂದ ಮುಂದೆ ತಾಯಿ ಊರಾದ ಚಿಕ್ಕಮಗಳೂರಿಗೆ ಬಂದು ಒಂದೆರಡು ವರ್ಷ ಕಾಫಿ ತೋಟದಲ್ಲಿ ಕೆಲಸ ಮಾಡಿದರು.

ಮತ್ತೆ ಬೆಂಗಳೂರಿಗೆ ಬಂದು ಬಸ್ ಕ್ಲೀನರ್, ಬಸ್ ಕಂಡಕ್ಟರ್ ಕೂಡ ಆದರು. ಅದು ಹೊಟ್ಟೆಪಾಡಿಗೆ ಅನಿವಾರ್ಯ ಆಗಿತ್ತು. ಬಿಡುವು ದೊರೆತಾಗಲೆಲ್ಲ ಸಿಕ್ಕಾಪಟ್ಟೆ ಓದುತ್ತಿದ್ದರು. ಹಾಗೆಯೇ ಮುಂದೆ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಮೊಳೆ ಜೋಡಿಸುವ ಕೆಲಸ ದೊರೆಯಿತು. ಆಗೆಲ್ಲ ಪ್ರಿಂಟಿಂಗ್ ಬರುವ ಎಲ್ಲ ಪುಸ್ತಕಗಳನ್ನು ಓದುವ ಲಾಭ ದೊರೆಯಿತು. ಮುಂದೆ ಬೆಂಗಳೂರಿನಲ್ಲಿ ಒಂದು ಸಣ್ಣ ಅಂಗಡಿ ಬಾಡಿಗೆಗೆ ಪಡೆದು ಒಂದು ಲೈಬ್ರೆರಿ ತೆರೆದರು. ಅದು ಎಂಟಾಣೆ ತಿಂಗಳ ಚಂದಾ ಇರುವ ಲೈಬ್ರರಿ. ಆಗ ಮ.ನ.ಮೂರ್ತಿ ಅವರ ಪತ್ತೇದಾರಿ ಕಾದಂಬರಿ ಓದಿ ನಾನೂ ಈ ರೀತಿಯ ಕಾದಂಬರಿಯನ್ನು ಬರೆಯಬಹುದಲ್ಲಾ ಎಂದು ಅನ್ನಿಸಿತ್ತು. ಅವರ ಆಸೆಗೆ ಪೂರಕವಾಗಿ ಟಿ ನಾರಾಯಣ ಅಯ್ಯಂಗಾರ್ ಎಂಬ ಪ್ರಕಾಶಕರ ನೆರವನ್ನು ಪಡೆದು ಮೊದಲನೇ ಪತ್ತೇದಾರಿ ಕಾದಂಬರಿ ಬರೆದರು. ಅದು ‘ಪುರುಷೋತ್ತಮನ ಸಾಹಸ’ (1952). ಆ ಪುಸ್ತಕವು ಎಷ್ಟು ಜನಪ್ರಿಯ ಆಯಿತೆಂದರೆ ಒಂದು ತಿಂಗಳ ಒಳಗೆ ಪ್ರತಿಗಳು ಖಾಲಿ ಆಗಿ ಮತ್ತೆ ಮತ್ತೆ ಪ್ರಿಂಟ್ ಆಯಿತು! ಅಲ್ಲಿಂದ ನರಸಿಂಹಯ್ಯ ಮತ್ತೆ ಹಿಂದೆ ನೋಡುವ ಪ್ರಸಂಗವೇ ಬರಲಿಲ್ಲ.

ಪುರುಷೋತ್ತಮ, ಮಧುಸೂದನ, ಅರಿಂಜಯ, ಗಾಳಿರಾಯ…

ಅಲ್ಲಿಂದ ಒಂದು ದಿನವೂ ಬಿಡುವು ಕೊಡದೆ ನರಸಿಂಹಯ್ಯ ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಾ ಹೋದರು. ಅವರ ಎಲ್ಲ ಕಾದಂಬರಿಗಳು ಬಿಸಿ ದೋಸೆಯ ಹಾಗೆ ಮಾರಾಟವಾದವು. ಅವರು ಬರೆದ ಎಲ್ಲ ಪುಸ್ತಕಗಳು ಮತ್ತೆ ಮತ್ತೆ ಪ್ರಿಂಟ್ ಆದವು. ಪ್ರಕಾಶಕರ ಒತ್ತಡವು ಹೆಚ್ಚಾದಂತೆ ನರಸಿಂಹಯ್ಯ ರಾತ್ರಿ ಹಗಲು ಕೂತು ಬರೆಯುತ್ತಾ ಹೋದರು. ಕೆಲವೊಮ್ಮೆ ದಿನಕ್ಕೆ 200 ಪುಟಗಳನ್ನು ಬರೆದದ್ದೂ ಇತ್ತು! ಮೂರು ದಿನಕ್ಕೆ ಒಂದು ಪತ್ತೇದಾರಿ ಕಾದಂಬರಿಯನ್ನು ಬರೆದು ಮುಗಿಸಿದ್ದೂ ಇದೆ! ಬಳೆಪೇಟೆಯ ಪ್ರಕಾಶಕರ ಅಂಗಡಿಯಲ್ಲಿ ಕುಳಿತು ಊಟ ತಿಂಡಿ ಮರೆತು ಬರೆದದ್ದೂ ಇದೆ! ಅವರು ಬರೆದ ಎಲ್ಲ ಪುಸ್ತಕಗಳೂ ಪ್ರಿಂಟ್ ಆಗಿ ಖಾಲಿ ಆಗಿ ಮತ್ತೆ ಮತ್ತೆ ಮುದ್ರಣ ಆಗುತ್ತಿದ್ದವು. ಓದುಗರಿಗೆ ಎನ್ ನರಸಿಂಹಯ್ಯ ಯಾರು ಎಂದು ಗೊತ್ತಿರಲಿಲ್ಲ. ಅವರು ಜನರ ನಡುವೆ ಇದ್ದರೂ ಅವರ ಗುರುತು ಯಾರಿಗೂ ಆಗುತ್ತಲೇ ಇರಲಿಲ್ಲ! ಆದರೆ ಅವರೇ ಸೃಷ್ಟಿ ಮಾಡಿದ ಪತ್ತೇದಾರ ಪುರುಷೋತ್ತಮನ ಪಾತ್ರ ಎಲ್ಲರಿಗೂ ಗೊತ್ತಿತ್ತು! ಅವರ ಪುಸ್ತಕಗಳು ವಿದೇಶದ ಭಾಷೆಗಳೂ ಸೇರಿ ಭಾರತದ ವಿವಿಧ ಭಾಷೆಗಳಿಗೆ ಅನುವಾದ ಆದವು!

ಅವರು 150 ಪುಸ್ತಕಗಳನ್ನು ಮುಗಿಸಿದ ನಂತರ ಇನ್ನೋರ್ವ ಪತ್ತೇದಾರ ಮಧುಸೂದನ ಅವರ ಲೇಖನಿಯಿಂದ ಜನ್ಮ ತಾಳಿದನು. ಮತ್ತೆ ನೂರಾರು ಪುಸ್ತಕ ಆದ ನಂತರ ಅರಿಂಜಯ ಎಂಬ ಇನ್ನೊಬ್ಬ ಪತ್ತೇದಾರನ ಪ್ರವೇಶ ಆಯಿತು. ಕೊನೆಗೆ ಗಾಳಿರಾಯ ಎಂಬ ಪತ್ತೇದಾರನ ಆವಿರ್ಭಾವ ಕೂಡ ಆಯಿತು. ಬರೆದು ಮುಗಿಸಿದ್ದು 550 ಪತ್ತೇದಾರಿ ಕಾದಂಬರಿಗಳನ್ನು! ಅದ್ಯಾವುದರ ಲೆಕ್ಕ ಅವರು ಇಟ್ಟದ್ದೂ ಇಲ್ಲ. ಬರೆಯುವುದನ್ನು ನಿಲ್ಲಿಸಿದ್ದೂ ಇಲ್ಲ. ಎಷ್ಟೋ ಕಾದಂಬರಿಗಳನ್ನು ಅವರು ಪ್ರಿಂಟಿಂಗ್ ಮೆಶಿನ್ ಮುಂದೆ ಕೂತು ಬರೆದದ್ದು ಉಂಟು!

ಪತ್ತೇದಾರಿ ಕಾದಂಬರಿ ಬರೆಯುವುದು ಅಷ್ಟು ಸುಲಭವಾ?

ಖಂಡಿತ ಸುಲಭ ಅಲ್ಲ. ತುಂಬಾ ವೇಗವಾಗಿ ಬರೆಯುತ್ತಿದ್ದ ಕಾರಣ ಏಕತಾನತೆ ಕಾಪಾಡುವುದು ದೊಡ್ಡ ಸವಾಲು ಆಗಿತ್ತು. ಮತ್ತೆ ಭಾರತೀಯ ದಂಡ ಸಂಹಿತೆಯ ವಿವರಗಳು, ಪೊಲೀಸ್ ತನಿಖೆಯ ಹಂತಗಳು, ಸಿಐಡಿಗಳು ಮಾಡುವ ವಿವರಣೆಯ ಆಯಾಮಗಳು, ಕೋರ್ಟು ಕಲಾಪಗಳು ಇವೆಲ್ಲವೂ ಕೇವಲ ನಾಲ್ಕನೇ ಕ್ಲಾಸ್ ಕಲಿತ ನರಸಿಂಹಯ್ಯ ಅವರಿಗೆ ಅರ್ಥ ಆದದ್ದು ಹೇಗೆ? ಅನೂಹ್ಯ ತಿರುವುಗಳು, ಸೊಗಸಾದ ನಿರೂಪಣೆ, ಸರಳವಾದ ಭಾಷೆ, ಕುತೂಹಲವನ್ನು ಕಾಪಾಡಿಕೊಂಡು ಹೋಗುವ ಕಥನ ಕಲೆ ಅವರ ಪತ್ತೆದಾರಿ ಕಾದಂಬರಿಗಳ ಹೆಚ್ಚುಗಾರಿಕೆ! ಒಮ್ಮೆ ಅವರ ಪುಸ್ತಕ ಓದಲು ಆರಂಭ ಮಾಡಿದರೆ ಅದು ಮುಗಿಯದೆ ನಮಗೆ ಪುಸ್ತಕ ಕೆಳಗಿಡಲು ಮನಸ್ಸೇ ಬರುತ್ತಿರಲಿಲ್ಲ! ಇದು ಎನ್ ನರಸಿಂಹಯ್ಯ ಅವರ ತಾಕತ್ತು! ಅವರು ಬರೆದ ಪ್ರತೀಯೊಂದು ಕಾದಂಬರಿಯಲ್ಲಿ ನ್ಯಾಯಕ್ಕೆ ಗೆಲುವು ದೊರೆಯುತ್ತಿತ್ತು. ಇದರಿಂದಾಗಿ ಅವರನ್ನು ‘ಕನ್ನಡದ ಕಾನನ್ ಡಾಯ್ಲ್ ‘ ಎಂದು ಅಭಿಮಾನಿ ಓದುಗರು ಕರೆದರು.

ಅವರು ಅದೇ ವೇಗದಲ್ಲಿ 50 ಸಾಮಾಜಿಕ ಕಾದಂಬರಿಗಳನ್ನು ಕೂಡ ಬರೆದರು. ಅವುಗಳೂ ಜನಪ್ರಿಯ ಆದವು.

ಅವರ ತುಂಬಾ ಪ್ರಸಿದ್ಧವಾದ ಪುಸ್ತಕಗಳು

ಭಯಂಕರ ಬೈರಾಗಿ, ಸಾವಿನ ಸೋಲು, ಕನ್ನಡಿಯ ಮುಂದೆ, ಮಾಟಗಾತಿಯ ಮಗಳು, ಕಾಮದ ಗೊಂಬೆ, ನೀಲಿ ಕೋಟು, ವಿಚಿತ್ರ ಕೊಲೆಗಾರ, ಕಲಿಯುಗದ ಪಾಂಚಾಲಿ, ಗಿಣಿ ಕಚ್ಚಿದ ಹಣ್ಣು, ಅವಳಿ ಜವಳಿ, ಎರಡು ತಲೆ ಹಾವು, ಸ್ಮಶಾನ ಬೈರಾಗಿ, ಪಂಜರದ ಪಿಶಾಚಿ ಇವುಗಳು ಅವರ ಅತ್ಯಂತ ಜನಪ್ರಿಯ ಪುಸ್ತಕಗಳು.

ಹಾದಿ ತಪ್ಪಿದ ಹೆಣ್ಣು, ಜೀವನ ಸಂಗಾತಿ, ಪಂಚವರ್ಣದ ಗಿಣಿ ಇವು ಅವರ ಜನಪ್ರಿಯ ಸಾಮಾಜಿಕ ಕಾದಂಬರಿಗಳು. ಅವರು ಅಗಲಿದ ನಂತರವೂ ಅವರ ಪುಸ್ತಕಗಳು ಮತ್ತೆ ಮತ್ತೆ ಮುದ್ರಣ ಆಗುತ್ತಿರುವುದು ನಿಜಕ್ಕೂ ಗ್ರೇಟ್!

ಅಷ್ಟೊಂದು ಬರೆದರೂ ಬಡತನ ಬೆನ್ನು ಬಿಡಲಿಲ್ಲ!

ಮೊದಲ 150 ಕಾದಂಬರಿಗಳು ಮುಗಿಯುವತನಕ ಅವರು ಒಂದು ಕಾದಂಬರಿಗೆ ಪಡೆಯುತ್ತಿದ್ದ ಗೌರವ ಧನ 50-60 ರೂಪಾಯಿ ಮಾತ್ರ ಎಂದರೆ ನಾವು ನಂಬಲೇ ಬೇಕು. ಮುಂದೆ ತನ್ನ ಪುಸ್ತಕಗಳ ಬೆಲೆಯ 10% ಗೌರವಧನಕ್ಕೆ ಅವರು ಬೇಡಿಕೆ ಇಟ್ಟರೂ ಎಷ್ಟೋ ಪ್ರಕಾಶಕರು ಅವರಿಗೆ ಮೋಸ ಮಾಡಿದರು. ಒಂದು ಸಾವಿರ ಪ್ರತಿಗಳು ಎಂದು ಹೇಳಿ ಐದರಿಂದ ಹತ್ತು ಸಾವಿರ ಪ್ರತಿಗಳನ್ನು ಪ್ರಿಂಟ್ ಮಾಡಿ ಮಾರುತ್ತಿದ್ದರು! ನರಸಿಂಹಯ್ಯ ಅವರಿಗೆ ಹೇಳದೆ ಅವರ ಪುಸ್ತಕ ಮರುಮುದ್ರಣ ಆಗುತ್ತಿತ್ತು. ಸಂತನ ಹಾಗೆ ಸರಳವಾಗಿ ಬದುಕುತ್ತಿದ್ದ ನರಸಿಂಹಯ್ಯ ಅಷ್ಟು ಪುಸ್ತಕ ಬರೆದರೂ ದಾರಿದ್ರ್ಯದಲ್ಲಿ ಬದುಕಿದರು. ಬಡತನದಲ್ಲಿಯೇ ಕಣ್ಣು ಮುಚ್ಚಿದರು (2011).

ಆದರೆ ಅವರ ಕಾದಂಬರಿಗಳನ್ನು ಪ್ರಕಾಶನ ಮಾಡಿದವರು ಎಷ್ಟೋ ಮಂದಿ ಕೋಟ್ಯಾಧಿಪತಿ ಆದರು ಅನ್ನೋದು ಕನ್ನಡದ ದುರಂತ!

ಇದನ್ನೂ ಓದಿ: ರಾಜಮಾರ್ಗ ಅಂಕಣ: 28 ಒಲಿಂಪಿಕ್ ಪದಕಗಳ ವಿಶ್ವದಾಖಲೆ- ಮೈಕೆಲ್ ಫೆಲ್ಪ್ಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡ ಭಾಗ 2: ದೀಪದ ಬುಡದಲ್ಲಿ ಕತ್ತಲೆ

ಧವಳ ಧಾರಿಣಿ ಅಂಕಣ: ಸುಗ್ರೀವನಿಗೆ ಸಮಗ್ರ ಭೂಮಂಡಲದ ಪರಿಚಯ ಹೇಗಾಯಿತು ಎನ್ನುವ ಕುತೂಹಲ ರಾಮನಿಗೆ ಇತ್ತು. “ಕಥಂ ಭವಾನ್ವಿಜಾನೀತೇ ಸರ್ವಂ ವೈ ಮಣ್ಡಲಂ ಭುವಃ” ಇಡೀ ಭೂಮಂಡಲದ ಪರಿಚಯ ನಿನಗೆ ಹೇಗಾಯಿತು ಎಂದು ಕೇಳಿದಾಗ ಸುಗ್ರೀವ ರಾಮನಲ್ಲಿ ತನ್ನ ಭೂಮಂಡಲದ ಯಾತ್ರೆಯ ಕಥೆಯನ್ನು ಹಂಚಿಕೊಂಡ.

VISTARANEWS.COM


on

vali sugreeva ಧವಳ ಧಾರಿಣಿ
Koo

ವಾಲಿಯ ಪರಾಕ್ರಮಕ್ಕೆ ಋಷ್ಯಮೂಕ ಎರವಾಗದ ಬಗೆ

dhavala dharini by Narayana yaji

ಧವಳ ಧಾರಿಣಿ ಅಂಕಣ: ವಾನರೇನ್ದ್ರೋ ಮಹಾವೀರ್ಯಸ್ತೇಜೋವಾನಮಿತಪ್ರಭಃ
ಸತ್ಯಸನ್ಧೋ ವಿನೀತಶ್ಚ ಧೃತಿಮಾನ್ಮತಿಮಾನ್ಮಹಾನ್৷৷ಅ.72.13৷৷

ವಾನರೇಂದ್ರನಾದ ಅವನು (ಸುಗ್ರೀವನು), ಮಹಾವೀರ್ಯನು, ತೇಜಸ್ಸುಳ್ಳವನು, ಅಮಿತವಾದ ಕಾಂತಿಯುಳ್ಳವನು, ಸತ್ಯಸಂಧನು, ವಿನಯಶೀಲನು, ಧರ್ಯವಂತನು, ಬುದ್ಧಿವಂತನು, ಮಹಾತ್ಮನು, ಕಾರ್ಯದಕ್ಷನು, ವಾಗ್ಮಿಯು, ಮಹಾಬಲಿಷ್ಠನು ಮತ್ತು ಅತಿಶಯವಾದ ಪರಾಕ್ರಮವುಳ್ಳವನು.

ಮಹಾಕಾವ್ಯವನ್ನು ಖಂಡವಾಗಿ ಓದುವುದರಿಂದ ಅಥವಾ ಅದರ ಯಾವುದೋ ಒಂದು ಭಾಗದ ಕಥೆ ಜನಪ್ರಿಯವಾಗಿರುವುದರಿಂದ ಅದರಲ್ಲಿ ಬರುವ ಪಾತ್ರದ ಗುಣಗಳನ್ನೇ ಆ ಪಾತ್ರದ ನಿಜವಾದ ಗುಣಾವಗುಣಗಳೆಂದು ಜನಮಾನಸದಲ್ಲಿ ಬಿಂಬಿತವಾಗಿಬಿಡುತ್ತದೆ. ರಾಮಾಯಣದಲ್ಲಿ (Ramayana) ಬಹುಚರ್ಚಿವಾಗುವ ಸಂಗತಿ ಎಂದರೆ ವಾಲಿವಧಾ (Vali Vadha) ಪ್ರಕರಣ. ಇಲ್ಲಿ ಬರುವ ಮೂರು ಮುಖ್ಯಪಾತ್ರಗಳಲ್ಲಿ ಮೊದಲನೆಯದು ವಾಲಿ, ಎರಡನೆಯದು ಹನುಮಂತ (Hanuman) ನಂತರ ಸುಗ್ರೀವ (Sugreeva). ಈ ಮೂರೂ ಪಾತ್ರಗಳೂ ರಾಮನಲ್ಲಿ ಮುಖಾಮುಖಿಯಾಗುತ್ತವೆ. ಹನುಮಂತ ರಾಮನ ದಾಸನಾಗಿ ತನ್ನ ಜೀವನವನ್ನು ಸವೆಸಿದರೆ ಸುಗ್ರೀವ ರಾಮನಿಗೆ ಸ್ನೇಹಿತನಾಗಿ ಕಿಷ್ಕಿಂಧಾ ರಾಜ್ಯವನ್ನೂ, ಪತ್ನಿಯನ್ನೂ ಅಣ್ಣನಿಂದ ಪಡೆದುಕೊಳ್ಳುತ್ತಾನೆ. ಈ ಇಬ್ಬರ ನಡುವೆ ವಾಲಿ ರಾಮನಲ್ಲಿ ಕೇಳುವ ಪ್ರಶ್ನೆಗಳು ಅದಕ್ಕೆ ರಾಮ ಕೊಡುವ ಉತ್ತರಗಳು ನಿರಂತರವಾಗಿ ರಾಮನ ವ್ಯಕ್ತಿತ್ವಕ್ಕೆ ಸವಾಲುಗಳನ್ನು ಎಸೆಯುತ್ತಲೇ ಬಂದಿವೆ. ಇದಕ್ಕೆ ಕಾರಣ ಮಹಾಕಾವ್ಯಕ್ಕಿಂತ, ಅದನ್ನು ಆಧರಿಸಿ ಬರೆದ ರೂಪಕಗಳಾದ ನಾಟಕ, ಯಕ್ಷಗಾನ ಮೊದಲಾದವುಗಳು. ಭಟ್ಟತೌತನದ್ದೆಂದು ನಂಬಲಾದ ಒಂದು ಶ್ಲೋಕದಲ್ಲಿ ಕಾವ್ಯ ಮತ್ತು ನಾಟಕಗಳ ಕುರಿತು ಹೀಗೆ ಹೇಳಲಾಗಿದೆ.

ಅನುಭಾವವಿಭಾವಾನಾಂ ವರ್ಣನಾ ಕಾವ್ಯಮುಚ್ಯತೇ I
ತೇಷಾಮೇವ ಪ್ರಯೋಗಸ್ತು ನಾಟ್ಯಂ ಗೀತಾದಿರಂಜಿತಂ II

ಅನುಭಾವ ವಿಭಾವಗಳ ವರ್ಣನೆಗೆ ಕಾವ್ಯವೆಂದು ಹೆಸರು; ಇವುಗಳನ್ನೇ ಗಾನಾದಿಗಳಿಂದ ರಂಜನೆಗೊಳಿಸಿ ಆಡಿ ತೋರಿಸಿದರೆ ನಾಟ್ಯವಾಗುತ್ತದೆ. (ಕೃಪೆ:- ತೀನಂಶ್ರೀಯವರ ಭಾರತೀಯ ಕಾವ್ಯಮೀಮಾಂಸೆಯಿಂದ).

ಇಲ್ಲಿ ರಂಜನೆಗಾಗಿ ನಾಟಕಕಾರ ಕಾವ್ಯವನ್ನು ತನಗೆ ಬೇಕಾದ ರೀತಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡರೆ ಅದು ನಾಟ್ಯವಾಗಿ ರಂಗದಮೇಲೆ ಬಂದಾಗ ಆ ಪಾತ್ರಗಳು ಮೂಲ ಕಾವ್ಯದ ಮೂಸೆಯಲ್ಲಿ ಇದ್ದಂತೆ ಮೂಡಿಬಂದವುಗಳು ಎಂದು ಅಂದುಕೊಳ್ಳುತ್ತೇವೆ.

ಅಪಾರೇ ಕಾವ್ಯಸಂಸಾರೆ ಕವಿರೇವ ಪ್ರಜಾಪತಿಃ
ಯಥಾಸ್ಮೈ ರೋಚತೇ ವಿಶ್ವಂ ತಥೇದಂ ಪರಿವರ್ತತೇ II

ಕಾವ್ಯವೇ ಇರಲಿ ನಾಟಕ ರೂಪಕಗಳೇ ಇರಲಿ, ಇಲ್ಲಿ ಕವಿಯೇ ಸೃಷ್ಟಿಕರ್ತ. ತನಗೆ ಹೇಗೆ ರುಚಿಸುವುದೋ ಹಾಗೇ ವಿಶ್ವವನ್ನು ರೂಪಾಂತರಗೊಳಿಸುತ್ತಾನೆ ಎಂದು ಆನಂದವರ್ಧನ ತನ್ನ ಧ್ವನ್ಯಾಲೋಕದಲ್ಲಿ ಹೇಳುವುದನ್ನು ಗಮನಿಸಬಹುದು. ಈ ರೂಪಾಂತರಗೊಳಿಸಿದುದರ ಪರಿಣಾಮವೇ ಮಹಾಕಾವ್ಯಗಳ ಪ್ರತಿನಾಯಕಪಾತ್ರಗಳು ಉದಾತ್ತೀಕರಣಗೊಂಡು ನಾಯಕ ಪಾತ್ರಗಳು ಅವುಗಳ ಎದುರು ಮಂಕಾಗಿಹೋಗಿದೆ. ಅಂತಹ ಪಾತ್ರಗಳಲ್ಲಿ ಸುಗ್ರೀವನೂ ಓರ್ವ.

ಮೇಲೆ ಹೇಳಿದ “ಹನ್ನೆರಡು ಗುಣಗಳು ಸುಗ್ರೀವನಲ್ಲಿ ಇದೆ ಹಾಗಾಗಿ ನೀನು ಆತನೊಡನೆ ಸ್ನೇಹವನ್ನು ಮಾಡು’ ಎಂದು ರಾಮನಿಗೆ ಹೇಳುವುದು ಕಬಂಧನೆನ್ನುವ ರಾಕ್ಷಸ. ಕಬಂಧ ಸುಗ್ರೀವನ ಗುಣಗಳ ಕುರಿತು ಹೇಳುವಾಗ ಬಹಳ ಮುಖ್ಯವಾದ ಸಂಗತಿಯೊಂದನ್ನು ತಿಳಿಸುವುದು “ಎಲ್ಲಿಯವರೆಗೆ ಸೂರ್ಯನ ಬೆಳಕು ಪ್ರಸರಿರುವುದೋ ಅಲ್ಲಿಯವರೆಗೂ ಈ ಭೂಮಂಡಲದಲ್ಲಿ ಸುಗ್ರೀವನಿಗೆ ತಿಳಿಯದ ಸಂಗತಿಗಳು ಯಾವುದೋ ಇಲ್ಲ. ಪತ್ನಿವಿಯೋಗದಿಂದ ದುಃಖಪಡುತ್ತಿರುವ ನಿನ್ನ ಈ ಶೋಕವನ್ನು ಪರಿಹರಿಸಲು ಅವನೇ ಸಮರ್ಥನು. ಸುಂದರಿಯಾದ ಸೀತೆಯು ಮೇರುಪರ್ವತದ ತುತ್ತತುದಿಯಲ್ಲಿರಲಿ, ಪಾತಾಳದಲ್ಲಿಯೇ ಆಶ್ರಯ ಪಡೆದಿರಲಿ, ಯಾವದಿಕ್ಕಿನಲ್ಲಿಯೇ ಇರಲಿ, ಮಹಾಕಾಯರಾದ ವಾನರನ್ನು ಎಲ್ಲದಿಕ್ಕುಗಳಿಗೂ ಕಳುಹಿಸಿ ಸೀತೆಯನ್ನು ಹುಡುಕಿಸಿಕೊಡಬಲ್ಲ. ರಾವಣನ ಅರಮನೆಯಲ್ಲಿ ನಿನ್ನ ಮೈಥಿಲಿ ಇರಲಿ, ಅಲ್ಲಿಯೂ ಆತ ಸೀತೆಯನು ಹುಡುಕಿಸಬಲ್ಲ. ಅಗತ್ಯಬಿದ್ದರೆ ರಾಕ್ಷಸರನ್ನು ಸಂಹರಿಸಬಲ್ಲ” ಎನ್ನುವ ಮಾತುಗಳು ಸುಗ್ರೀವನ ನಿಪುಣತೆಯನ್ನು ತಿಳಿಸುತ್ತದೆ. ಇಲ್ಲಿ ಬರುವ ಒಂದು ವಾಕ್ಯ “ಸುಗ್ರೀವನಿಗೆ ಸೂರ್ಯನ ಕಿರಣಬೀಳುವ ಎಲ್ಲಾ ಪ್ರದೇಶಗಳ ಪರಿಚಯವಿದೆ” ಎನ್ನುವ ಮಾತಿನ ಹಿಂದೆ ಒಂದು ಘಟನೆಯ ಹಿನ್ನೆಲೆಯಿದೆ. ಅದು ವಾಲಿ ಮತು ಸುಗ್ರೀವರ ಪ್ರಸಿದ್ಧವಾದ ಜಗಳ.

ವಾನರರು ಎಂದರೆ ಮಂಗಗಳು ಎನ್ನುವುದಕ್ಕಿಂತ ಮುಖ್ಯವಾಗಿ ಅವರೊಂದು ಜನಾಂಗವಾಗಿರಬಹುದು ಎನ್ನುವ ವಿವರಣೆ ಕೆಲವುಕಡೆ ಇದೆ. ವಾಲ್ಮೀಕಿರಾಮಾಯಣದಲ್ಲಿ ಇದಕ್ಕೆ ಪುಷ್ಟಿಕೊಡುವ ಕೆಲಶ್ಲೋಕಗಳು ಇದೆ. ಆದರೂ ಹೆಚ್ಚಿನ ಕಡೆಯಲ್ಲಿ ಅವರನ್ನು ವಾನರರು, ಕಪಿಗಳು ಎಂದೆಲ್ಲ ವರ್ಣಿಸಿರುವುದರಿಂದ ಅವರು ಯಾವುದೋ ಒಂದು ಬುಡಕಟ್ಟು ಜನಾಂಗವೆನ್ನುವದನ್ನು ಸಿದ್ಢಪಡಿಸಲು ಸಾಕಾಗುವುದಿಲ್ಲ. ಹಾಗಂತ ಅಲ್ಲವೆಂದು ಹೇಳುವಂತೆಯೂ ಇಲ್ಲ. ವಾನರರ ಹಿನ್ನೆಲೆಯನ್ನು ಗಮನಿಸುವಾಗ ವಾಲಿ ಮತ್ತು ಸುಗ್ರೀವ ಇವರೆಲ್ಲರೂ ಬ್ರಹ್ಮನಿಗೆ ನೇರ ಸಂಬಂಧವುಳ್ಳವರು. ಅವರ ತಂದೆ ಋಕ್ಷರಜಸ್ ಎನ್ನುವಾತ. ಬ್ರಹ್ಮನೊಮ್ಮೆ ಮೇರುಪರ್ವತದಲ್ಲಿ ತಪಸ್ಸನ್ನು ಆಚರಿಸುವಾಗ ಆತನ ಕಣ್ಣಿನಿಂದ ಬಿದ್ದ ಒಂದು ಹನಿ ವಾನರರೂಪದ ಪುರಷಾಕಾರ ತಾಳಿತು. ಅಲ್ಲಿಯೇ ಆತ ವೇದಗಳನ್ನು ಕಲಿತ. ಒಂದು ದಿವಸ ಆತ ಮೇರು ಪರ್ವತದಲ್ಲಿ ತಿರುಗಾಡುತ್ತಿರುವಾಗ ಸರೋವರವೊಂದರಲ್ಲಿ ತನ್ನ ಪ್ರತಿಬಿಂಬವನ್ನು ನೋಡಿ, ಯಾರೋ ಬೇರೆಯವನೆಂದು ಭಾವಿಸಿ ಅವನನ್ನುಹಿಡಿಯಲು ಸರೋವರದೊಳಗೆ ಧುಮುಕಿದ. ಅಲ್ಲಿಂದ ಮೇಲೆ ಬರುವಾಗ ಆತ ಸುಂದರಿಯಾದ ಸ್ತ್ರೀರೂಪವನ್ನು ತಾಳಿದ್ದ. ಸಂಜೆಯಾಗುತ್ತಿತ್ತು. ಅಸ್ತಮಿಸುತ್ತಿರುವ ಸೂರ್ಯ ಮತ್ತು ಬ್ರಹ್ಮನ ಸಂದರ್ಶನಕ್ಕಾಗಿ ಹೋಗುತ್ತಿರುವ ಇಂದ್ರ ಇಬ್ಬರೂ ಆತನನ್ನು ನೋಡಿ ಮೋಹಗೊಂಡರು. ಇಂದ್ರನ ತೇಜಸ್ಸು ಆತನ ಬಾಲದ ಮೇಲೆಯೂ, ಸೂರ್ಯನ ತೇಜಸ್ಸು ಕುತ್ತಿಗೆಯ ಮೇಲೂ ಬಿತ್ತು. ಅದರ ಪರಿಣಾಮ ಬಾಲದಿಂದ ವಾಲಿ, ಗ್ರೀವ-ಕುತ್ತಿಗೆಯಿಂದ ಸುಗ್ರೀವ ಜನಿಸಿದರು. ಮಾರನೆಯ ದಿನ ಬೆಳಗಾಗುತ್ತಿರುವಂತೆ ಋಕ್ಷರಜಸ್ ಪುನಃ ಗಂಡಸಾದ. ಆತನ ಅವಸ್ಥೆಯನ್ನು ಗಮನಿಸಿದ ಬ್ರಹ್ಮ, ಋಕ್ಷರಜಸ್ಸನಿಗೆ ಅಲ್ಲಿಂದ ಕಿಷ್ಕಿಂಧೆಗೆ ಹೋಗಿ ರಾಜ್ಯಭಾರಮಾಡುವಂತೆ ಅಪ್ಪಣೆಯಿತ್ತ.

ಆತ ತನ್ನ ಮಕ್ಕಳಾದ ವಾಲಿ ಸುಗ್ರೀವರೊಂದಿಗೆ ಕಿಷ್ಕಿಂಧೆಗೆ ಬಂದು ವಾನರರ ಸಾಮ್ರಾಜ್ಯವನ್ನು ಸ್ಥಾಪಿಸಿದ. ಕೆಲಕಾಲದ ನಂತರ ವಾಲಿಗೆ ಪಟ್ಟವನ್ನು, ಸುಗ್ರೀವನಿಗೆ ಯುವರಾಜ ಪಟ್ಟವನ್ನು ಕಟ್ಟಿ ತಪಸ್ಸಿಗೆ ತೆರಳಿದ. ವಾಲಿ ಕಿಷ್ಕಿಂಧೆಯಲ್ಲಿ ರಾಜನಾದ ಮೇಲೆ ಚದುರಿಹೋಗಿದ್ದ ವಾನರರನ್ನೆಲ್ಲಾ ಒಂದುಗೂಡಿಸಿ ಬಲಿಷ್ಠವಾದ ಸಾಮ್ರಾಜ್ಯವನ್ನು ಕಟ್ಟಿದ. ವಾನರರ ಆಚಾರಗಳೆಲ್ಲವೂ ಮನುಷ್ಯರ ನಡವಳಿಕೆಯಂತೆಯೇ ಇದ್ದವು. ಪಟ್ಟಾಭಿಷೇಕ, ಪಾಣಿಗ್ರಹಣಪೂರ್ವಕ ವಿವಾಹ, ಕುಟುಂಬಪದ್ಧತಿ, ರಾಜನೀತಿ ಇವೆಲ್ಲದರಲ್ಲಿಯೂ ಅವರ ಆಚಾರಗಳು ಅಗಸ್ತ್ಯರಿಂದ ಪ್ರಭಾವಿತರಾಗಿರಬಹುದು ಎನಿಸುತ್ತದೆ. ಸುಗ್ರೀವ ಅನೇಕ ಸಾರಿ ಅಗಸ್ತ್ಯರ ಆಶ್ರಮದ ವಿಷಯವನ್ನು ಪ್ರಸ್ತಾಪಿಸುತ್ತಾನೆ. ಸೀತಾನ್ವೇಷಣೆಗೆ ವಾನರರನ್ನು ಕಳಿಸುವಾಗ ಅಗಸ್ತ್ಯರ ಆಶ್ರಮದ ಸಮೀಪ ಯಾವಕಾರಣಕ್ಕೂ ಅಪಮಾನಕ್ಕೆ ಕಾರಣವಾಗಬಹುದಾದ ಕಾರ್ಯವನ್ನು ಎಸಗಬೇಡಿ ಎನ್ನುತ್ತಾನೆ. ಅವರ ಆಶ್ರಮದೆಡೆಗೆ ರಾಕ್ಷಸರು ಅಪ್ಪಿತಪ್ಪಿಯೂ ಕಾಲಿಡಿಸುತ್ತಿರಲಿಲ್ಲ. ಮುನಿಗಳು ರಾಕ್ಷಸರನ್ನು ಜನಸ್ಥಾನದಿಂದ ನಿಗ್ರಹಿಸಲು ವಾನರರನ್ನು ಉಪಯೋಗಿಸಕೊಳ್ಳಬೇಕೆಂದಿದ್ದರೇನೋ; ಆದರೆ ವಾಲಿ ಮತ್ತು ರಾವಣರ ಗೆಳೆತನದಿಂದಾಗಿ ಕಾರ್ಯಸಾಧ್ಯವಾಗದೇ ಹೋಗಿರಬೇಕು. ಈ ಹಂತದಲ್ಲಿಯೇ ಅಗಸ್ತ್ಯರು ಮತ್ತು ವಾನರರಿಗೆ ಸಂಪರ್ಕ ದೂರವಾಯಿತು. ಪರಿಣಾಮ ವಾನರರಿಗೆ ಅರ್ಷೇಯ ಮತ್ತು ಬುಡಕಟ್ಟು ಎರಡೂ ಸೇರಿದ ಅನುಕೂಲಕರ ಮಿಶ್ರ ಪದ್ಧತಿಗಳ ಆಚರಣೆ ರೂಢಿಗೆಬಂತು ಎನ್ನಬಹುದು.

ವಾನರರ ಸಾಮ್ರಾಜ್ಯವೆನ್ನುವುದು ಕೇವಲ ಕಿಷ್ಕಿಂಧೆಗೆ ಮಾತ್ರ ಸೀಮಿತವಾಗಿತ್ತೇ ಎನ್ನುವ ಪ್ರಶ್ನೆಗೆ ಉತ್ತರ ರಾಮಾಯಣದಲ್ಲಿಯೇ ಸಿಗುತ್ತದೆ. ವಾನರರ ಸಾಮ್ರಾಜ್ಯ ಮಹೇಂದ್ರಪರ್ವತ, ಹಿಮವತ್ಪರ್ವತ, ಕೈಲಾಸ ಪರ್ವತ, ವಿಂಧ್ಯಪರ್ವತ ಮತ್ತು ಬಿಳಿಯ ಬಣ್ಣದ ಶಿಖರಗಳಿರುವ ಮಂದರ ಪರ್ವತ ಇಲ್ಲೆಲ್ಲ ಹಂಚಿಹೋಗಿತ್ತು. ಇವುಗಳಲ್ಲಿ ಮಂದರ ಪರ್ವತ ಯಾವುದಾಗಿತ್ತು ಎನ್ನುವುದು ಸಿಗುತ್ತಿಲ್ಲ. (ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿರುವವರು ತಮ್ಮದು ವಾಲಿ ಹುಟ್ಟಿದ ಪ್ರದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಲ್ಲಿನ ದ್ವೀಪಗಳು ಪರ್ವತ ಮತ್ತು ದಿಣ್ಣೆಗಳಿಂದ ತುಂಬಿದೆ. ಉಲುವಾಟು ದೇವಾಲಯದಲ್ಲಿ ಪ್ರತಿನಿತ್ಯ ರಾಮಾಯಣ ನೃತ್ಯ ನಡೆಯುತ್ತದೆ. ಇಲ್ಲಿ ವಿಷಯಾಂತರವಾಗುವುದರಿಂದ ಆ ಕುರಿತು ಹೆಚ್ಚು ವಿವರಿಸುವುದಿಲ್ಲ). ಈ ಪ್ರದೇಶದ ವಾನರರ ಪ್ರಬೇಧಗಳ ವಿಷಯ ಕಿಷ್ಕಿಂಧಾ ಕಾಂಡದ್ದುದ್ದಕ್ಕೂ ಅಲ್ಲಲ್ಲಿ ವಿವರಿಸಿದೆ. ಅವರೆಲ್ಲರೂ ಕಾಮರೂಪಿಗಳಾಗಿದ್ದರು. ಮಹಾಬಲಿಷ್ಠರಾಗಿದ್ದರು. ಪರ್ವತಗಳಲ್ಲಿ ವಾಸಿಸುತ್ತಿದ್ದರು ಮತ್ತು ಅವರ್ಯಾರೂ ಮಂಸಾಹಾರಿಗಳಾಗಿರಲಿಲ್ಲ. ಅವರ ಭಾಷೆಗಳು ಸಂಸ್ಕೃತವನ್ನು ಹೋಲುತ್ತಿರುವ ಪ್ರಾಕೃತವಾಗಿತ್ತು. ಆದರೆ ವಾನರ ಮತ್ತು ಋಕ್ಷಪ್ರಮುಖರಿಗೆ ಗೀರ್ವಾಣ ಭಾಷೆ ಚನ್ನಾಗಿ ಬರುತ್ತಿತ್ತು ಎನ್ನುವುದು ಬಲುಮಹತ್ವವಾದ ಸಂಗತಿ.

ಹನುಮಂತ ಅಶೋಕವನದಲ್ಲಿ ಸೀತೆಯೊಡನೆ ತಾನು “ವಾಚಂ ಚೋದಾಹರಿಷ್ಯಾಮಿ ಮಾನಿಷೀಮಿಹ ಸಂಸ್ಕೃತಾಂ- ಸೀತೆಯಲ್ಲಿ ತಾನು ಮನುಷ್ಯರಾಡುವ ಸಂಸ್ಕೃತದಲ್ಲಿಯೇ ಮಾತಾಡುತ್ತೇನೆ, ದ್ವಿಜರಾಡುವ ಸಂಸ್ಕೃತದಲ್ಲಿ ಮಾತನ್ನಾಡಿಸಿದರೆ ಆಕೆ ತನ್ನನ್ನು ರಾವಣನೆಂದೇ ತಿಳಿದು ಭಯಪಡುತ್ತಾಳೆ” ಎನ್ನುತ್ತಾನೆ. ಈ ಎಲ್ಲದರೆ ಅರ್ಥ ವಾನರರೆಂದರೆ ಬುಡಕಟ್ಟು ಜನಾಂಗವೆನ್ನುವುದನ್ನು ಪುಷ್ಟೀಕರಿಸುತ್ತದೆ. ಇನ್ನು ಬಾಲಗಳ ವಿಷಯಕ್ಕೆ ಬಂದರೆ ಯುದ್ಧಕಾಂಡದಲ್ಲಿ ಕೆಂಪು, ಹಳದಿ, ಬಿಳಿ, ಮಿಶವರ್ಣದವು ಮೊದಲಾದ ಬಾಲಗಳಿರುವ ವಿಷಯ ಬರುತ್ತದೆ. ಕೆಲವು ವಾನರರು ಗೋಲಾಂಗುಲ- ಹಸುವಿನ ಬಾಲದ ಪುಚ್ಛವನ್ನು ಹೊಂದಿದವು, ಮತ್ತೆ ಕೆಲವು ಕಪಿಗಳು ಎಂದಿದೆ. ರಾಮ ಯುದ್ಧಕಾಂಡದಲ್ಲಿ ಇನ್ನು ನೀವು ಮನುಷ್ಯರೂಪದಲ್ಲಿ ಕಾಣಿಸಿಕೊಳ್ಳದೇ ವಾನರರ ಚಿನ್ಹೆ, ಲಕ್ಷಣದಲ್ಲೇ ಇರತಕ್ಕದ್ದು ಎನ್ನುತ್ತಾನೆ. ಸುಗ್ರೀವ ತನ್ನವರೆಲ್ಲರನ್ನೂ ಕಾಮರೂಪಿಗಳು ಎಂದು ಮೊದಲೇ ವರ್ಣಿಸಿದ್ದಾನೆ.

ವಿಶೇಷವೆಂದರೆ ವಾನರರ ಸ್ತ್ರೀಯರಿಗೆ ಬಾಲವಿರಲಿಲ್ಲ. ತಾರೆಯ ಸೌಂದರ್ಯದ ಕುರಿತು “ತಾರಾ ತಾರಾಧಿಪ ನಿಭಾನನಾ- ತಾರಾಧಿಪನಾದ ಚಂದ್ರನ ಕಾಂತಿಗೆ ಸಮಾನವಾದ ಮುಖಕಾಂತಿಯಿಂದ ಬೆಳಗುತ್ತಿದ್ದ ತಾರೆಯು” ಎಂದು ವರ್ಣಿಸಲಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಗೋಲಾಂಗೂಲವಾಗಲೀ, ಬಣ್ಣಬಣ್ಣದ ಬಾಲಗಳ ಪುಚ್ಛಗಳು ಅವರ ಚಿನ್ಹೆಗಳು ಎಂದು ದೇವದತ್ತ ಪಟ್ಟನಾಯಕ ಮೊದಲಾದ ವಿದ್ವಾಂಸರು ತರ್ಕಿಸುತ್ತಾರೆ. ವಿಕಾಸವಾದದ ಹಾದಿಯಲ್ಲಿ ಗಮನಿಸುವಾಗ ವಿಕಸನವಾದ ಅಂಗಗಳು ಮತ್ತೆ ಪೂರ್ವ ಸ್ವರೂಪಕ್ಕೆ ತಿರುಗುವುದಿಲ್ಲ. ಹಾಗಾಗಿ ಮಾತನ್ನಾಡಬಲ್ಲ ಮಂಗಗಳು ಮತ್ತೆ ಮಂಗನ ಭಾಷೆಯನ್ನು ಮಾತಾಡುವುದಿಲ್ಲ. ಈ ಎಲ್ಲ ಕಾರಣಗಳಿಂದ ಇನ್ನು ಋಕ್ಷ ಎಂದರೆ ಕರಡಿ. ವಾಲಿ ಸುಗ್ರೀವರ ತಂದೆ ತಾಯಿಯಾದ ಋಕ್ಷ ಕರಡಿಯಾಗಿ ಆತನ ಮಕ್ಕಳು ಮಂಗಗಳ ಜಾತಿಗೆ ಸೇರಿದವು ಎನ್ನುವುದು ಅಸಾಧ್ಯವೂ ಹೌದು. ಈ ಎಲ್ಲ ಹಿನ್ನೆಲೆಯಲ್ಲಿ ವಾಲಿ ಸುಗ್ರೀವ ಎನ್ನುವ ಸಹೋದರರ ವಿಷಯದಲ್ಲಿ ಹೋಲಿಸಿದಾಗ ಇವರು ವನದಲ್ಲಿರುವ ನರರು ಅಥವಾ Humanoid ಜಾತಿಯ ಪಳೆಯುಳಿಕೆಗಳು ಸಿಕ್ಕಿರುವುದರಿಂದ ಆ ಜಾತಿಗೆ ಸೇರಿರಬಹುದೆನ್ನುವುದು ಸೂಕ್ತ (Morphologically -similar to human but not identical).

ಪ್ರಪಂಚದಲ್ಲೆಲ್ಲ ಹರಡಿದ್ದ ವಾನರ ಸಾಮ್ರಾಜ್ಯವನ್ನು ವಾಲಿ ಮತ್ತು ಸುಗ್ರೀವರು ಕಿಷ್ಕೆಂಧೆಯಿಂದ ನಿಯಂತ್ರಿಸುತ್ತಿದ್ದರು. ವಾಲಿ ಮಹಾ ಪರಾಕ್ರಮಿಯಾಗಿದ್ದ. ತನ್ನ ತಮ್ಮನಾದ ಸುಗ್ರೀವನಲ್ಲಿ ಅಮಿತವಾದ ಪ್ರೀತಿಯೂ ಆತನಿಗೆ ಇತ್ತು. ತಾನೇ ಮುಂದೆ ನಿಂತು ತಾರನ ಮಗಳಾದ ರುಮೆಯನ್ನು ಸುಗ್ರೀವನಿಗೆ ಮದುವೆ ಮಾಡಿಸಿದ್ದನು. ಸಾಹಸಿಯಾಗಿದ್ದರೂ ಆತ ಅನ್ಯಾಕ್ರಮಣವನ್ನು ಮಾಡುತ್ತಿರಲಿಲ್ಲ. ವಾಲಿಯ ದೊಡ್ಡದಾದ ದೌರ್ಬಲ್ಯವೆಂದರೆ ಹೆಣ್ಣಿನ ಮೋಹ. ಒಮ್ಮೆ ಮಾಯಾವಿ ಎನ್ನುವ ರಾಕ್ಷಸನಿಗೂ ಮತ್ತು ವಾಲಿಗೂ ಹೆಣ್ಣಿನ ವಿಷಯದಲ್ಲಿ ಮಹಾವೈರವುಂಟಾಯಿತು.

ಮಾಯಾವೀ ನಾಮ ತೇಜಸ್ವೀ ಪೂರ್ವಜೋ ದುನ್ದುಭೇಃ ಸುತಃ.
ತೇನ ತಸ್ಯ ಮಹದ್ವೈರಂ ಸ್ತ್ರೀಕೃತಂ ವಿಶ್ಶ್ರುತಂ ಪುರಾ IIಕಿ. 9-4II

ದುಂದುಭೀರಾಕ್ಷಸನ ಅಣ್ಣನಾದ ಮಯಾಸುರನ ಮಗನಾದ ಮಾಯಾವಿ ಎನ್ನುವವ ಮಹಾಬಲಿಷ್ಠನಾಗಿದ್ದನು. ಅವನಿಗೂ ವಾಲಿಗೂ ಹೆಂಗಸೊಬ್ಬಳ ವಿಷಯದಲ್ಲಿ ಮಹಾವೈರವುಂಟಾಯಿತು. ಹೀಗೆ ಜಗಳಕ್ಕೆ ಕಾರಣವಾದ ಹೆಂಗಸು ಯಾರೆನ್ನುವ ವಿವರ ರಾಮಾಯಣದಲ್ಲಿಲ್ಲ. ಇದು ವಾಲಿಗಿರುವ ಸ್ತ್ರೀಯರ ಮೇಲಿರುವ ದೌರ್ಬಲ್ಯವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಈ ವೈರ ಪ್ರಕರಣ ಎಲ್ಲಿಯೋ ಬೇರೆಕಡೆ ಆಗಿರಬೇಕು, ಅದರಲ್ಲಿ ವಾಲಿ ಮಾಯಾವಿ ಕಣ್ಣುಹಾಕಿದ್ದ ಹೆಂಗಸನ್ನು ತಾನು ಅನುಭವಿಸಿರಬೇಕು. ಆ ಸೇಡನ್ನು ತೀರಿಸಿಕೊಳ್ಳಲು ಮಾಯಾವಿ ರಾತ್ರಿಕಾಲದಲ್ಲಿ ಕಿಷ್ಕಿಂಧಾ ಪಟ್ಟಣಕ್ಕೆ ಬಂದು ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದ. ವಾಲಿ ಹುಂಬತನದಿಂದ ಆತನೊಡನೆ ಯುದ್ಧಕ್ಕೆ ಧಾವಿಸಿದ. ಅವನನ್ನು ನೋಡಿ ಭಯಗೊಂಡು ಮಾಯಾವಿ ಪಲಾಯನ ಮಾಡಿ ಬಹುದೂರಕ್ಕೆ ಓಡಿದರೆ ಆತನನ್ನು ಅಟ್ಟಿಸಿಕೊಂಡು ವಾಲಿಯೂ ಅವನನ್ನು ಅನುಸರಿಸಿ ಸುಗ್ರೀವನೂ ಧಾವಿಸಿದರು.

ರಾಕ್ಷಸ ಬಹುದೂರಕ್ಕೆ ಓಡುತ್ತಾ ಹೋಗಿ ಪರ್ವತದ ಗುಹೆಯೊಂದನ್ನು ಹೊಕ್ಕ. ಅದು ಮಾಯಾವಿಯ ಪಟ್ಟಣವಾಗಿತ್ತು. ವಾಲಿ ಆತನನ್ನು ಕೊಲ್ಲುತ್ತೇನೆ ಎಂದು ಗುಹೆಯನ್ನು ಹೊಕ್ಕಿರುವುದು ಮತ್ತು ಹೊರಗಡೆ ಗುಹಾದ್ವಾರವನ್ನು ಕಾಯಲು ಸುಗ್ರೀವನನ್ನು ನಿಲ್ಲಿಸಿದ ಕಥೆ ಎಲ್ಲರಿಗೂ ಗೊತ್ತು. ಒಂದು ವರ್ಷವಾದರೂ ವಾಲಿ ಬರದೇ ಇರುವುದನ್ನು ಗಮನಿಸಿದ ಸುಗ್ರೀವ ಕಳವಳಗೊಂಡ. ಇದ್ದಕ್ಕಿದ್ದಂತೆ ರಕ್ತ ನೊರೆನೊರೆಯಾಗಿ ಹೊರಬಂದಾಗ ಅದು ವಾಲಿಯೇ ಇರಬೇಕು ಎಂದುಕೊಂಡ ಸುಗ್ರೀವ ಗುಹಾದ್ವಾರಕ್ಕೆ ದೊಡ್ಡದಾದ ಬಂಡೆಯನ್ನು ಮುಚ್ಚಿ, ಅಣ್ಣ ತೀರಿಕೊಂಡ ಎಂದು ಆತನಿಗೆ ತರ್ಪಣವನ್ನೂ ಬಿಟ್ಟು ಕಿಷ್ಕಿಂಧೆಗೆ ಮರಳಿ ಸುಮ್ಮನಿದ್ದ. ಮಂತ್ರಿಗಳು ಪ್ರಯತ್ನಪೂರ್ವಕವಾಗಿ ಈ ವಿಷಯತಿಳಿದುಕೊಂಡರು. ಸುಗ್ರೀವನನ್ನೇ ರಾಜನನ್ನಾಗಿ ಅಭಿಷೇಕಮಾಡಿದರು. ತಾರೆ ಮತ್ತು ರುಮೆಯ ಸಹಿತ ಸುಗ್ರೀವ ರಾಜನಾಗಿ ಆಳತೊಡಗಿದ. ವಾಲಿ ಪುನಃ ಬಂದರೆ ಈ ದೃಶ್ಯವನ್ನು ನೋಡಿ ಇದೆಲ್ಲ ಸುಗ್ರೀವನಿಗೆ ರಾಜ್ಯದ ಆಸೆಗಾಗಿ ಮಾಡಿದ ಬಂಡಾಯವೆಂದು ಅಂದುಕೊಂಡವನೇ ಆತನನ್ನು ಕೊಲ್ಲಲೆಂದು ಮೈಮೇಲೆ ಏರಿಬಂದ.

ಸುಗ್ರೀವನಲ್ಲಿ ಈ ಲೇಖನದ ಮೊದಲು ತಿಳಿಸಿದ ಗುಣಗಳಿರುವಂತೆಯೇ ವಾನರಸಹಜವಾದ ಅವಸರದ ಗುಣಗಳೂ ಇದ್ದವು. ಅದರಿಂದಲೇ ಆತ ತೊಂದರೆಗೆ ಸಿಕ್ಕುಬಿದ್ದಿದ್ದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಮಂಗೋಪಿಯಾದ ವಾಲಿಗೆ ಇಷ್ಟೇ ಸಾಕಾಯಿತು. ಆತ ಸುಗ್ರೀವನನ್ನು ಕೊಂದೇ ತೀರುತ್ತೇನೆ ಎಂದು ಅಟ್ಟಿಸಿಕೊಂಡು ಹೋದ. ಆತನ ಪತ್ನಿಯಾದ ರುಮೆಯನ್ನು ಬಲತ್ಕಾರದಿಂದ ಇಟ್ಟುಕೊಂಡ. ಜೀವ ಉಳಿಸಿಕೊಳ್ಳಲು ಸುಗ್ರೀವ ಓಡುವುದೂ, ವಾಲಿ ಆತನನ್ನು ಮುಗಿಸಿಯೇ ಬೀಡುವೆನೆಂದು ಬೆನ್ನಟ್ಟಿ ಬರುವುದೂ ನಡೆದಾಗ ಸುಗ್ರೀವ ಆಕಾಶಕ್ಕೆ ಹಾರಿದ. ಭೂಮಿ ಆತನಿಗೆ,

ಆದರ್ಶತಲಸಙ್ಕಾಶಾ ತತೋ ವೈ ಪೃಥಿವೀ ಮಯಾ.
ಅಲಾತಚಕ್ರಪ್ರತಿಮಾ ದೃಷ್ಟಾ ಗೋಷ್ಪದವತ್ತದಾ৷৷ಕಿ.46.13৷৷

ಅಲಾತಚಕ್ರದಂತೆ (ಬೆಂಕಿಹಚ್ಚಿದ ಕೊಳ್ಳಿಯನ್ನು ತಿರುಗಿಸಿದಾಗ ಕಾಣುವ ಚಕ್ರದಂತೆ) ಗೋಪಾದದಷ್ಟು ಚಿಕ್ಕದಾಗಿ ಕಂಡಿತು ಎನ್ನುತ್ತಾನೆ. ಅಂತರಿಕ್ಷದಿಂದ ಭೂಮಿಯನ್ನು ನೋಡಿದಾಗ ಭೂಮಿಕಾಣಿಸುವ ಬಗೆಯನ್ನು ಇಲ್ಲಿ ವರ್ಣಿಸಲಾಗಿದೆ. ಆತನ ಜೊತೆಯಲ್ಲಿ ಹನುಮಂತನೂ ಇದ್ದ. ಹೀಗೆ ವಾಲಿಯ ಭಯದಲ್ಲಿ ಅವರು ಪ್ರಪಂಚವನ್ನೆಲ್ಲಾ ಸುತ್ತಿ ಸುತ್ತಿ ಸಾಗುತ್ತಿರುವಾಗ ಬದುಕುವ ಸಾಧ್ಯತೆಯನ್ನೇ ಬಿಟ್ಟ. ಹೀಗೆ ಢಾವಿಸುವಾಗ ಇಡೀ ಭೂಮಂಡಲವನ್ನೇ ಅನೇಕ ಸಾರೆ ಪೂರ್ವದಿಂದ ಪಶ್ಚಿಮಕ್ಕೂ ಉತ್ತರದಿಂದ ದಕ್ಷಿಣಕ್ಕೂ, ಹಿಮಾಲಯದಿಂದ ಉತ್ತರಕುರು ಪ್ರದೇಶಕ್ಕೂ, ಹೀಗೆ ಭೂಮಿಯ ಎಲ್ಲಿಯಾದರೂ ತನಗೆ ಆಶ್ರಯಸಿಗುವುದೋ ಎಂದು ಹುಡುಕಾಡಿದ. ಅಲ್ಲಿಗೂ ಅವನನ್ನು ಕೊಲ್ಲಲು ವಾಲಿ ಘರ್ಜಿಸುತ್ತಾ ಬಂದಾಗ ಬದುಕುವ ಆಸೆಯನ್ನೇ ಬಿಟ್ಟ. ಪ್ರಾಣರಕ್ಷಣೆಗಾಗಿ ಭೂಮಂಡಲದ ಎಲ್ಲಾ ಸ್ಥಳವನ್ನೂ ಅಲೆದಿದ್ದ. ಅಂತಹ ಹೊತ್ತಿನಲ್ಲಿ ಹನುಮಂತ ಆತನಿಗೆ ಋಷ್ಯಮೂಕ ಪರ್ವತದ ಕಥೆಯನ್ನು ಹೇಳಿ ಅಲ್ಲಿಗೆ ವಾಲಿ ಬರುವುದಿಲ್ಲ: ಮತಂಗ ಮುನಿಗಳು ವಾಲಿ ಅಥವಾ ಆತನ ಮಂತ್ರಿಗಳೇನಾದರೂ ಋಷ್ಯಮೂಕ ಪರ್ವತಕ್ಕೆ ಬಂದರೆ ಆತನ ತಲೆಯು ನೂರು ಹೋಳಾಗಲಿ ಎನ್ನುವ ಶಾಪಕೊಟ್ಟ ವಿಷಯವನ್ನು ತಿಳಿಸಿದ. ಆ ಪ್ರದೇಶಕ್ಕೆ ವಾಲಿ ಬರಲಾರದ ಕಾರಣ ಅಲ್ಲಿ ಮಾತ್ರ ಸುರಕ್ಷಿತವಾಗಿ ಇರಬಹುದು ಎಂದು ಹೇಳಿದಾಗ, ಲಗುಬಗೆಯಿಂದ ಮತಂಗಮಹರ್ಷಿಗಳ ಆಶ್ರಮಮಂಡಲದಲ್ಲಿ ಉಳಿದುಕೊಂಡ.

ಸುಗ್ರೀವನಿಗೆ ಸಮಗ್ರ ಭೂಮಂಡಲದ ಪರಿಚಯ ಹೇಗಾಯಿತು ಎನ್ನುವ ಕುತೂಹಲ ರಾಮನಿಗೆ ಇತ್ತು. “ಕಥಂ ಭವಾನ್ವಿಜಾನೀತೇ ಸರ್ವಂ ವೈ ಮಣ್ಡಲಂ ಭುವಃ” ಇಡೀ ಭೂಮಂಡಲದ ಪರಿಚಯ ನಿನಗೆ ಹೇಗಾಯಿತು ಎಂದು ಕೇಳಿದಾಗ ಸುಗ್ರೀವ ರಾಮನಲ್ಲಿ ತನ್ನ ಭೂಮಂಡಲದ ಯಾತ್ರೆಯ ಕಥೆಯನ್ನು ಹಂಚಿಕೊಂಡ. ಪ್ರಚಲಿತದಲ್ಲಿರುವಂತೆ ಆತ ಸೂರ್ಯನಲ್ಲಿ ಆಶ್ರಯ ಕೋರಿ ಆತನ ಬೆನ್ನ ಹಿಂದೆ ಅಡಗಿಕೊಂಡಿದ್ದ ಎನ್ನುವುದು ಮೂಲ ರಾಮಾಯಣದಲ್ಲಿ ಇಲ್ಲ.

ಮುಂದಿನ ಭಾಗದಲ್ಲಿ ಕಿಷ್ಕಿಂಧಾಕಾಂಡದ ಇನ್ನಷ್ಟು ರೋಚಕ ವಿಷಯಗಳನ್ನು ಗಮನಿಸೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡದಲ್ಲಿನ ರಾಜನೀತಿಯ ವಿಲಕ್ಷಣ ಘಟನೆ

Continue Reading

ಅಂಕಣ

ರಾಜಮಾರ್ಗ ಅಂಕಣ: 28 ಒಲಿಂಪಿಕ್ ಪದಕಗಳ ವಿಶ್ವದಾಖಲೆ- ಮೈಕೆಲ್ ಫೆಲ್ಪ್ಸ್

ರಾಜಮಾರ್ಗ ಅಂಕಣ: ಭಗವಂತನು ಆತನನ್ನು ಈಜುವುದಕ್ಕಾಗಿ ಸೃಷ್ಟಿ ಮಾಡಿದ್ದ ಅನ್ನಿಸುತ್ತದೆ. ಆರು ಅಡಿ ನಾಲ್ಕು ಇಂಚು ಎತ್ತರ, ಮೀನಿನ ಹಾಗೆ ಬೆಂಡ್ ಆಗುವ ದೇಹ, ಭಾರೀ ಬಲಿಷ್ಟವಾದ ತೋಳುಗಳು, ನೀರನ್ನು ರಭಸವಾಗಿ ಹಿಂದೆ ತಳ್ಳಿ ಮುಂದೆ ಹೋಗುವ ದೋಣಿ ಆಕಾರದ ದೇಹ ಇದೆಲ್ಲವೂ ಆತನಿಗೆ ದೈವದತ್ತವಾಗಿ ಬಂದಿದ್ದವು.

VISTARANEWS.COM


on

Michel Phelps ರಾಜಮಾರ್ಗ ಅಂಕಣ
Koo

ಜಗತ್ತಿನ ಮಹೋನ್ನತ ಸ್ವಿಮ್ಮರ್ ನೀರಿಗೆ ಇಳಿದರೆ ದಾಖಲೆ ಮತ್ತು ದಾಖಲೆಗಳೇ ನಿರ್ಮಾಣ ಆಗುತ್ತಿದ್ದವು!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಒಲಿಂಪಿಕ್ಸ್ (Olympics) ವೇದಿಕೆಗಳಲ್ಲಿ ಒಂದೋ ಅಥವಾ ಎರಡೋ ಪದಕಗಳನ್ನು (medals) ಗೆಲ್ಲುವ ಕನಸು ಕಂಡವರು, ಅದನ್ನು ಸಾಧನೆ ಮಾಡಿದವರು ಲೆಜೆಂಡ್ ಅಂತ ಅನ್ನಿಸಿಕೊಳ್ಳುತ್ತಾರೆ. ಆದರೆ ಈ ಅಮೇರಿಕನ್ ಈಜುಗಾರ (Swimmer) ಒಟ್ಟು ನಾಲ್ಕು ಒಲಿಂಪಿಕ್ ಕೂಟಗಳಲ್ಲಿ ಭಾಗವಹಿಸಿ ಗೆದ್ದದ್ದು ಬರೋಬ್ಬರಿ 28 ಒಲಿಂಪಿಕ್ ಪದಕಗಳನ್ನು ಅಂದರೆ ನಂಬಲು ಸಾಧ್ಯವೇ ಇಲ್ಲ! ಅದರಲ್ಲಿ ಕೂಡ 23 ಹೊಳೆಯುವ ಚಿನ್ನದ ಪದಕಗಳು! ಆತನು ನೀರಿಗೆ ಇಳಿದರೆ ಸಾಕು ದಾಖಲೆಗಳು ಮತ್ತು ದಾಖಲೆಗಳು ಮಾತ್ರ ನಿರ್ಮಾಣ ಆಗುತ್ತಿದ್ದವು.

ಆತನು ಅಮೇರಿಕಾದ ಮಹೋನ್ನತ ಈಜುಗಾರ ಮೈಕೆಲ್ ಫೆಲ್ಪ್ಸ್ (Michel Phelps).

ಭಗವಂತನು ಆತನನ್ನು ಈಜುವುದಕ್ಕಾಗಿ ಸೃಷ್ಟಿ ಮಾಡಿದ್ದ ಅನ್ನಿಸುತ್ತದೆ. ಆರು ಅಡಿ ನಾಲ್ಕು ಇಂಚು ಎತ್ತರ, ಮೀನಿನ ಹಾಗೆ ಬೆಂಡ್ ಆಗುವ ದೇಹ, ಭಾರೀ ಬಲಿಷ್ಟವಾದ ತೋಳುಗಳು, ನೀರನ್ನು ರಭಸವಾಗಿ ಹಿಂದೆ ತಳ್ಳಿ ಮುಂದೆ ಹೋಗುವ ದೋಣಿ ಆಕಾರದ ದೇಹ ಇದೆಲ್ಲವೂ ಆತನಿಗೆ ದೈವದತ್ತವಾಗಿ ಬಂದಿದ್ದವು. ಸತತವಾಗಿ ನಾಲ್ಕು ಒಲಿಂಪಿಕ್ಸ್ ಕೂಟಗಳಲ್ಲಿ ಆತ ಭಾಗವಹಿಸಿದ್ದು ಮಾತ್ರವಲ್ಲ ಪ್ರತೀ ಬಾರಿ ನೀರಿಗೆ ಇಳಿದಾಗ ಒಂದಲ್ಲ ಒಂದು ದಾಖಲೆ, ಒಂದಲ್ಲ ಒಂದು ಪದಕ ಗೆಲ್ಲದೆ ಆತ ಮೇಲೆ ಬಂದ ಉದಾಹರಣೆಯೇ ಇಲ್ಲ!

ಬಾಲ್ಟಿಮೋರ್‌ನ ಬುಲ್ಲೆಟ್!

1985ನೇ ಜೂನ್ 30ರಂದು ಅಮೇರಿಕಾದ ಬಾಲ್ಟಿಮೋರ್ ಎಂಬ ಪ್ರಾಂತ್ಯದಲ್ಲಿ ಹುಟ್ಟಿದ ಆತ ತನ್ನ ಒಂಬತ್ತನೇ ವಯಸ್ಸಿಗೆ ಅಪ್ಪ ಮತ್ತು ಅಮ್ಮನ ಪ್ರೀತಿಯಿಂದ ವಂಚಿತವಾದನು. ಅದಕ್ಕೆ ಕಾರಣ ಅವರ ವಿಚ್ಛೇದನ. ಅದರಿಂದಾಗಿ ಆತನಿಗೆ ಮಾನಸಿಕ ನೆಮ್ಮದಿ ಹೊರಟುಹೋಯಿತು. ಆತನಿಗೆ Attention Deficit Hyper active Disorder (ADHD) ಎಂಬ ಮಾನಸಿಕ ಸಮಸ್ಯೆಯು ಬಾಲ್ಯದಿಂದಲೂ ತೊಂದರೆ ಕೊಡುತ್ತಿತ್ತು. ರಾತ್ರಿ ನಿದ್ದೆ ಬಾರದೆ ಆತ ಒದ್ದಾಡುತ್ತಿದ್ದನು. ಈ ಸಮಸ್ಯೆಗಳಿಂದ ಹೊರಬರಲು ಆತ ಆರಿಸಿಕೊಂಡ ಮಾಧ್ಯಮ ಎಂದರೆ ಅದು ಸ್ವಿಮ್ಮಿಂಗ್ ಪೂಲ್! ತನ್ನ ಏಳನೇ ವಯಸ್ಸಿಗೆ ನೀರಿಗೆ ಇಳಿದ ಆತನಿಗೆ ಬಾಬ್ ಬೌಮಾನ್ ಎಂಬ ಕೋಚ್ ಸಿಕ್ಕಿದ ನಂತರ ಆತನ ಬದುಕಿನ ಗತಿಯೇ ಬದಲಾಯಿತು. ಆತ ದಿನದ ಹೆಚ್ಚು ಹೊತ್ತನ್ನು ನೀರಿನಲ್ಲಿಯೇ ಕಳೆಯಲು ತೊಡಗಿದನು.

ಆತನ ಕಣ್ಣ ಮುಂದೆ ಇಬ್ಬರು ಸ್ವಿಮ್ಮಿಂಗ್ ಲೆಜೆಂಡ್ಸ್ ಇದ್ದರು. ಒಬ್ಬರು ಒಂದೇ ಒಲಿಂಪಿಕ್ ಕೂಟದಲ್ಲಿ ಏಳು ಚಿನ್ನದ ಪದಕಗಳನ್ನು ಗೆದ್ದ ಮಾರ್ಕ್ ಸ್ಪಿಟ್ಜ್ (1972). ಇನ್ನೊಬ್ಬರು ಆಸ್ಟ್ರೇಲಿಯಾದ ಸ್ವಿಮಿಂಗ್ ದೈತ್ಯ ಇಯಾನ್ ತೋರ್ಪ್. ಅವರಿಂದ ಸ್ಫೂರ್ತಿ ಪಡೆದ ಆತ ಮುಂದೆ ಮಾಡಿದ್ದು ಎಲ್ಲವೂ ವಿಶ್ವ ದಾಖಲೆಯ ಸಾಧನೆಗಳೇ ಆಗಿವೆ. ಜನರು ಆತನನ್ನು ಬಾಲ್ಟಿಮೋರದ ಬುಲೆಟ್ ಎಂದು ಪ್ರೀತಿಯಿಂದ ಕರೆದರು.

ಸತತ ನಾಲ್ಕು ಒಲಿಂಪಿಕ್ಸ್ – 28 ಪದಕಗಳು – ಅದರಲ್ಲಿ 23 ಚಿನ್ನದ ಪದಕಗಳು!

2004ರ ಅಥೆನ್ಸ್ ಒಲಿಂಪಿಕ್ಸ್ – ಒಟ್ಟು ಎಂಟು ಪದಕಗಳು.
2008 ಬೀಜಿಂಗ್ ಒಲಿಂಪಿಕ್ಸ್ – ಒಟ್ಟು ಎಂಟು ಚಿನ್ನದ ಪದಕಗಳು.
2012 ಲಂಡನ್ ಒಲಿಂಪಿಕ್ಸ್ – ನಾಲ್ಕು ಚಿನ್ನ ಮತ್ತು ಎರಡು ಬೆಳ್ಳಿಯ ಪದಕಗಳು.
2016 ರಿಯೋ ಒಲಿಂಪಿಕ್ಸ್ – ಐದು ಚಿನ್ನದ ಪದಕ ಮತ್ತು ಒಂದು ಬೆಳ್ಳಿ.

ಅಂದರೆ ಸತತ ನಾಲ್ಕು ಒಲಿಂಪಿಕ್ಸ್ ಕೂಟಗಳಲ್ಲಿ ಭಾಗವಹಿಸಿ ಒಟ್ಟು 28 ಪದಕಗಳನ್ನು ಬೇರೆ ಯಾರೂ ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ! ಬಟರ್ ಫ್ಲೈ, ಮೆಡ್ಲಿ, ಫ್ರೀ ಸ್ಟೈಲ್, ಬ್ಯಾಕ್ ಸ್ಟ್ರೋಕ್ಸ್…ಹೀಗೆ ಪ್ರತೀಯೊಂದು ವಿಭಾಗಳಲ್ಲಿಯೂ ಮೈಕೆಲ್ ಒಂದರ ಮೇಲೊಂದು ಪದಕಗಳನ್ನು ಗೆಲ್ಲುತ್ತಾ ಹೋಗಿದ್ದಾನೆ! ಆ 16 ವರ್ಷಗಳ ಅವಧಿಯಲ್ಲಿ ಆತನಿಗೆ ಸ್ಪರ್ಧಿಗಳೇ ಇರಲಿಲ್ಲ ಎನ್ನಬಹುದು!

ಮೈಕೆಲ್ ಎಂಬ ಚಿನ್ನದ ಮೀನಿನ ಜಾಗತಿಕ ದಾಖಲೆಗಳು

೧) ಆತನು ತನ್ನ ಜೀವಮಾನದಲ್ಲಿ ಗೆದ್ದ ಒಟ್ಟು ಅಂತಾರಾಷ್ಟ್ರೀಯ ಪದಕಗಳ ಸಂಖ್ಯೆ ಬೆರಗು ಹುಟ್ಟಿಸುತ್ತದೆ. ಒಟ್ಟು 82 ಪದಕಗಳು. ಅದರಲ್ಲಿ 65 ಚಿನ್ನ, 14 ಬೆಳ್ಳಿ ಮತ್ತು 3 ಕಂಚು!
೨) ಒಟ್ಟು 20 ಗಿನ್ನೆಸ್ ದಾಖಲೆಗಳು ಆತನ ಹೆಸರಿನಲ್ಲಿ ಇವೆ!
೩) ಒಟ್ಟು 39 ವಿಶ್ವದಾಖಲೆಗಳು ಆತನ ಹೆಸರಿನಲ್ಲಿ ಇವೆ. ಅದರಲ್ಲಿ 29 ವೈಯಕ್ತಿಕ ಮತ್ತು 10 ರಿಲೇ ಸ್ಪರ್ಧೆಗಳದ್ದು!
೪) 2004ರಿಂದ 2018ರವರೆಗೆ ನಡೆದ ವಿಶ್ವ ಈಜು ಚಾಂಪಿಯನಶಿಪ್ ಸ್ಪರ್ಧೆಗಳಲ್ಲಿ ಆತ ಪದಕಗಳ ಗೊಂಚಲು ಗೆಲ್ಲದೆ ಹಿಂದೆ ಬಂದ ನಿದರ್ಶನವೇ ಇಲ್ಲ!
೫) ಒಟ್ಟು ಎಂಟು ಬಾರಿ ಅವನಿಗೆ ‘ವರ್ಲ್ಡ್ ಸ್ವಿಮ್ಮರ್ ಆಫ್ ದ ಇಯರ್’ ಪ್ರಶಸ್ತಿಗಳು ದೊರೆತಿವೆ!
೬) ಒಟ್ಟು 11 ಬಾರಿ ‘ಅಮೇರಿಕನ್ ಸ್ವಿಮ್ಮರ್ ಆಫ್ ದ ಇಯರ್’ ಪ್ರಶಸ್ತಿಗಳು ದೊರೆತಿವೆ!
೭) ಒಂದೇ ಒಲಿಂಪಿಕ್ ಕೂಟದಲ್ಲಿ ಆತ ಎಂಟು ಚಿನ್ನದ ಪದಕಗಳನ್ನು (2008 ಬೀಜಿಂಗ್) ಗೆದ್ದ ದಾಖಲೆಯನ್ನು ಮುಂದೆ ಕೂಡ ಯಾರೂ ಮುರಿಯುವ ಸಾಧ್ಯತೆ ಇಲ್ಲವೇ ಇಲ್ಲ!
೮) ಆತನಿಗೆ ಜಾಗತಿಕ ಒಲಿಂಪಿಕ್ ಸಮಿತಿಯು ಜಗತ್ತಿನ ಅತ್ಯುತ್ತಮ ಸ್ವಿಮ್ಮರ್ ಪ್ರಶಸ್ತಿ ನೀಡಿ ಗೌರವಿಸಿದೆ!
೯) 100 ಮೀಟರ್ ಬಟರ್ ಫ್ಲೈ, 200 ಮೀಟರ್ ಬಟರ್ ಫ್ಲೈ, 200 ಮೀಟರ್ ಇಂಡಿವಿಜುವಲ್ ಮೆಡ್ಲಿ, 400 ಮೀಟರ್ ಇಂಡಿವಿಜುವಲ್ ಮೆಡ್ಲಿ ಈ ವಿಭಾಗದಲ್ಲಿ ಆತ ಮಾಡಿದ ಜಾಗತಿಕ ದಾಖಲೆಗಳನ್ನು ಮುಂದೆ ಕೂಡ ಯಾರೂ ಮುರಿಯುವ ಸಾಧ್ಯತೆ ಇಲ್ಲ ಎಂದು ಭಾವಿಸಲಾಗುತ್ತಿದೆ!

ಈ ಎಲ್ಲಾ ಸಾಧನೆಗಳಿಗೆ ಕಾರಣ ಆತನ ಈಜುವ ಪ್ಯಾಶನ್!

ಆತನ ಆತ್ಮಚರಿತ್ರೆಯ ಪುಸ್ತಕವನ್ನು ಒಮ್ಮೆ ತಿರುವಿ ಹಾಕಿದಾಗ ಆತನ ಸ್ವಿಮ್ಮಿಂಗ್ ಪ್ಯಾಶನ್ ಬಗ್ಗೆ ಹಲವು ಉದಾಹರಣೆಗಳು ದೊರೆಯುತ್ತವೆ.

ಒಮ್ಮೆ ಏನಾಯಿತೆಂದರೆ 2001 ಸೆಪ್ಟೆಂಬರ್ 11ರಂದು ಅಮೆರಿಕದ ಟ್ವಿನ್ ಟವರ್ ಮೇಲೆ ಭಯೋತ್ಪಾದಕ ಧಾಳಿ ನಡೆದು ಇಡೀ ಟವರ್ ಕುಸಿದು ಹೋದದ್ದು, ಇಡೀ ಅಮೇರಿಕಾ ನಲುಗಿ ಹೋದದ್ದು ನಮಗೆಲ್ಲ ಗೊತ್ತಿದೆ. ಸರಿಯಾಗಿ ಅದೇ ಹೊತ್ತಿಗೆ ಮೈಕೆಲ್ ಸ್ವಿಮ್ಮಿಂಗ್ ಪೂಲನಲ್ಲಿ ಈಜುತ್ತಾ ತನ್ನ ಕೋಚಗೆ ಕಾಲ್ ಮಾಡಿ ಕೇಳಿದ್ದನಂತೆ- ಸರ್, ಎಲ್ಲಿದ್ದೀರಿ? ನಾನು ಪೂಲಲ್ಲಿ ಪ್ರಾಕ್ಟೀಸ್ ಮಾಡ್ತಾ ಇದ್ದೇನೆ!

ಮೈಕೆಲ್ ಫೆಲ್ಫ್ಸ್ ಇಷ್ಟೊಂದು ವಿಶ್ವ ದಾಖಲೆಗಳನ್ನು ಕ್ರಿಯೇಟ್ ಮಾಡಿದ್ದು ಸುಮ್ಮನೆ ಅಲ್ಲ!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕಾರ್ಗಿಲ್, ಇದು‌ ಕೆಚ್ಚಿನ ಕಲಿಗಳ ಸಮರಗಾಥೆ

Continue Reading

ಅಂಕಣ

ರಾಜಮಾರ್ಗ ಅಂಕಣ: ಕಾರ್ಗಿಲ್, ಇದು‌ ಕೆಚ್ಚಿನ ಕಲಿಗಳ ಸಮರಗಾಥೆ

ರಾಜಮಾರ್ಗ ಅಂಕಣ: ಪಾಕಿಸ್ತಾನ (Pakistan) ಎಂಬ ದ್ರೋಹಿ ರಾಷ್ಟ್ರವನ್ನು ಇನ್ನು ಮುಂದೆ ಯಾವಾಗಲೂ ನಂಬಲೇ ಬಾರದು ಎಂಬ ಪಾಠವನ್ನು ಭಾರತಕ್ಕೆ ಕಲಿಸಿಹೋದ ಮೃತ್ಯುಂಜಯ ಯುದ್ಧ ಅದು!

VISTARANEWS.COM


on

ರಾಜಮಾರ್ಗ ಅಂಕಣ Kargil Vijay Diwas 2024
Koo

ಇಂದು ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಭಾರತವು ಗೆದ್ದ ಅತ್ಯಂತ ಕಠಿಣ ಯುದ್ಧ (Kargil Vijay Diwas) ಅದು! 1999ರಲ್ಲಿ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ವಿ.ಪಿ ಮಲಿಕ್ ಬರೆದಿರುವ ‘KARGIL – FROM SURPRISE TO VICTORY’ ಓದುತ್ತಾ ಹೋದಂತೆ ನಾನು ಹಲವಾರು ಬಾರಿ ಬೆಚ್ಚಿಬಿದ್ದಿದ್ದೇನೆ! ಯಾಕೆಂದರೆ ಅದು ಭಾರತವು ಎದುರಿಸಿದ ಅತ್ಯಂತ ಕಠಿಣವಾದ ಯುದ್ಧ (India0 Pakistan War) ಮತ್ತು ದೀರ್ಘಕಾಲದ ಯುದ್ಧ. ಪಾಕಿಸ್ತಾನ (Pakistan) ಎಂಬ ದ್ರೋಹಿ ರಾಷ್ಟ್ರವನ್ನು ಇನ್ನು ಮುಂದೆ ಯಾವಾಗಲೂ ನಂಬಲೇ ಬಾರದು ಎಂಬ ಪಾಠವನ್ನು ಭಾರತಕ್ಕೆ ಕಲಿಸಿಹೋದ ಮೃತ್ಯುಂಜಯ ಯುದ್ಧ ಅದು!

ಯುದ್ಧದ ಹಿನ್ನೆಲೆ – ಮುಷರಫ್ ಕುತಂತ್ರ

ಆಗಷ್ಟೇ ಭಾರತವು ಅಣುಪರೀಕ್ಷೆ ಮಾಡಿ ಜಗತ್ತಿನ ಕಣ್ಣು ಕೋರೈಸುವ ಸಾಧನೆಯನ್ನು ಮಾಡಿತ್ತು. ಪಾಕ್ ಕೂಡ ಅಮೇರಿಕಾದ ನೆರವು ಪಡೆದು ತನ್ನ ಬಳಿ ಅಣುಬಾಂಬು ಇದೆ ಎಂದು ಹೇಳಿಕೊಂಡಿತ್ತು. ಆಗ ಭಾರತದ ಪ್ರಧಾನಿ ಆಗಿದ್ದ ವಾಜಪೇಯಿ (Atal Bihari Vajpayee) ಅವರು ತುಂಬಾ ಮೃದು ನಿಲುವಿನ ನಾಯಕ ಎಂದು ಪಾಕ್ ನಂಬಿ ಕುಳಿತಿತ್ತು. ಪಾಕಿಸ್ಥಾನಕ್ಕೆ ಜಗತ್ತಿನ ಅತೀ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ (Siachin) ವಶಪಡಿಸಿಕೊಳ್ಳಬೇಕು ಎಂಬ ದುರಾಸೆ. ಅಲ್ಲಿಂದ ಮುಂದೆ ಕಾರ್ಗಿಲ್ ಮತ್ತು ಮುಂದೆ ಇಡೀ ಕಾಶ್ಮೀರವನ್ನು ಕಬಳಿಸಬೇಕು ಎನ್ನುವ ಮಾಸ್ಟರ್ ಪ್ಲಾನ್! ಆಗ ಪಾಕಿಸ್ತಾನದ ಸೇನಾ ನಾಯಕ ಪರ್ವೇಜ್ ಮುಷರಫ್ (Parvez Musharraf) ಹೊಂಚು ಹಾಕಿ ಕುಳಿತ ಕಾಲ ಅದು.

ಅದಕ್ಕೆ ಪೂರಕವಾಗಿ 1998ರ ಜೂನ್ ತಿಂಗಳಿಂದಲೇ ಪಾಕಿಸ್ಥಾನದ 5000ರಷ್ಟು ಸೈನಿಕರು ಲೈನ್ ಆಫ್ ಕಂಟ್ರೋಲ್ ದಾಟಿ ಭಾರತದ 4-10 ಕಿ.ಮೀ. ಒಳಗೆ ಬಂದು ಎತ್ತರದ ಪ್ರದೇಶದಲ್ಲಿ ಜಮಾವಣೆ ಆಗತೊಡಗಿದ್ದರು! ಅವರ ಬಳಿಗೆ ಆಧುನಿಕ ಶಸ್ತ್ರಾಸ್ತ್ರಗಳು ಬಂದು ತಲುಪಿದ್ದವು. ಆದರೆ 1999ರ ಮೇ 18ರವರೆಗೆ ಭಾರತ ಸರಕಾರಕ್ಕೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ. ಭಾರತೀಯ ಸೇನಾ ಗೂಢಚಾರ ಸಂಸ್ಥೆಯವರು ಇನ್ನೂ ಸ್ವಲ್ಪ ದಿನ ಮೈಮರೆತಿದ್ದರೆ…! ಆ ಕುರಿಗಾಹಿ ಹುಡುಗರು ಆ ನುಸುಳುಕೋರ ಸೈನಿಕರ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ಕೊಡದೇ ಹೋಗಿದ್ದರೆ…! ನಾನು ಬೆಚ್ಚಿ ಬಿದ್ದದ್ದು ಆಗ.

ಭಾರತದ ಸೈನಿಕರ ಬಳಿ ಯುದ್ಧದ ಸಿದ್ಧತೆಗೆ ಸಮಯ ಇರಲಿಲ್ಲ

ಗಡಿಯ ಒಳಗೆ ಅಷ್ಟು ದೊಡ್ಡ ಸಂಖ್ಯೆಯ ಸೈನಿಕರು ನುಸುಳಿಬಂದ ವಿಷಯ ಭಾರತಕ್ಕೆ ಗೊತ್ತಾಯಿತು ಅಂದಾಗ ಮುಷರಫ್ ಅಲರ್ಟ್ ಆದರು. ಅವರು ನಮ್ಮ ಸೈನಿಕರೇ ಅಲ್ಲ, ಯಾವುದೋ ಭಯೋತ್ಪಾದಕ ಸಂಘಟನೆಯವರು ಎಂದು ಬಿಟ್ಟರು ಮುಷರಫ್! ಆದರೆ ಈಗ ಭಾರತದ ಪ್ರಧಾನಿ ವಾಜಪೇಯಿ, ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸೇನಾ ಮುಖ್ಯಸ್ಥರನ್ನು ಕರೆಸಿ ಯುದ್ಧ ಘೋಷಣೆ ಮಾಡಿಬಿಟ್ಟರು. ಆದರೆ ಭಾರತೀಯ ಸೈನ್ಯಕ್ಕೆ ಆ ಯುದ್ಧಕ್ಕೆ ಸಿದ್ಧತೆ ಮಾಡಲು ದೊರೆತದ್ದು 24 ಘಂಟೆ ಮಾತ್ರ! ಆದರೂ 1999ರ ಮೇ 3ರಂದು ಭಾರತ ಯುದ್ಧ ಘೋಷಣೆ ಮಾಡಿ ಆಗಿತ್ತು!

ಆರಂಭದಲ್ಲಿ ಭಾರತಕ್ಕೆ ಹಿನ್ನಡೆ ಆದದ್ದು ನಿಜ. ಆದರೆ ಮೇ 30 ಆಗುವಾಗ ಭಾರತದ 30,000 ಸೈನಿಕರು ಟೈಗರ್ ಹಿಲ್ ಬಳಿ ಬಂದು ಜಮಾವಣೆ ಮಾಡಿ ಆಗಿತ್ತು. ಭಾರತದ ಭೂಸೈನ್ಯ ಮತ್ತು ವಾಯು ಸೈನ್ಯಗಳು ವೀರಾವೇಶದಿಂದ ಹೋರಾಟಕ್ಕೆ ಇಳಿದಿದ್ದವು. ಎರಡೂ ಕಡೆಯ ಸೈನಿಕರು, ಬಾಂಬುಗಳು, ಮದ್ದುಗುಂಡುಗಳು, ಶೆಲ್‌ಗಳು ಸಿಡಿಯುತ್ತ ಕಾರ್ಗಿಲ್ ಯುದ್ಧಭೂಮಿಯು ರಕ್ತದಲ್ಲಿ ಒದ್ದೆಯಾಗುತ್ತಾ ಹೋಯಿತು. ಟೈಗರ್ ಹಿಲ್ ಏರಿ 10 ಪಾಕ್ ಸೈನಿಕರ ಹತ್ಯೆಯನ್ನು ನಮ್ಮ ಸೈನಿಕರು ಮಾಡಿದಾಗ ಭಾರತವು ಯುದ್ಧದಲ್ಲಿ ಸಣ್ಣ ಮೇಲುಗೈ ಸಾಧಿಸಿತು.

ಅಲ್ಲಿಂದ ಮುಂದೆ ಭಾರತದ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸ್ವತಃ ಯುದ್ಧಭೂಮಿಗೆ ಬಂದು ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಿದ್ದು, ಪ್ರಧಾನಿ ವಾಜಪೇಯಿ ವಾರ್ ರೂಮಿನಲ್ಲಿ ಕುಳಿತು ಸೈನ್ಯಕ್ಕೆ ನಿರ್ದೇಶನವನ್ನು ಕೊಟ್ಟದ್ದು ಭಾರತವನ್ನು ಗೆಲ್ಲಿಸುತ್ತಾ ಹೋದವು. 75 ದಿನಗಳ ಘನಘೋರ ಯುದ್ಧದ ನಂತರ ಭಾರತ ಜುಲೈ 26ರಂದು ದ್ರಾಸ್ ಪರ್ವತದ ತಪ್ಪಲಲ್ಲಿ ಇದ್ದ ಕೊನೆಯ ಪಾಕ್ ಸೈನಿಕನನ್ನೂ ಹೊಸಕಿ ಹಾಕಿದಾಗ ಭಾರತ ವಿಜಯೋತ್ಸವ ಆಚರಣೆ ಮಾಡಿತು. ಕಾರ್ಗಿಲ್ ಮೈದಾನದಲ್ಲಿ ಸೈನಿಕರ ನಡುವೆ ತ್ರಿವರ್ಣಧ್ವಜ ಹಾರಿಸಿದ ಕ್ಷಣವೇ ಕಾರ್ಗಿಲ್ ವಿಜಯ ದಿನ.

Kargil Vijay Diwas 2024
Kargil Vijay Diwas 2024

ಹುತಾತ್ಮರಾದವರು ಭಾರತದ 527 ಸೈನಿಕರು!

ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಸೈನಿಕರ ಬಲಿದಾನ ಭಾರತಕ್ಕೆ ಒಂದು ದೊಡ್ಡ ವಿಜಯವನ್ನು ತಂದುಕೊಟ್ಟಿತ್ತು. ಅದರಲ್ಲಿ ಕರ್ನಾಟಕದ 21 ಸೈನಿಕರೂ ಇದ್ದರು. ಸಾವಿರಾರು ಯೋಧರು ತೀವ್ರವಾಗಿ ಗಾಯಗೊಂಡರು. ಪಾಕಿಸ್ತಾನವೂ ದೊಡ್ಡ ಸಂಖ್ಯೆಯ ಸೈನಿಕರನ್ನು ಕಳೆದುಕೊಂಡಿತ್ತು.

ನಮ್ಮ ಸೈನಿಕರಾದ ಸಿಯಾಚಿನ್ ಹೀರೋ ನಾಯಬ್ ಸುಬೇದಾರ್ ಬಾಣಾ ಸಿಂಗ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಮೇಜರ್ ಪದ್ಮಪಾಣಿ ಆಚಾರ್ಯ, ಗ್ರೆನೆಡಿಯರ್ ಯೋಗೇಂದರ್ ಸಿಂಘ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅನುಜ್ ನಯ್ಯರ್, ಲೆಫ್ಟಿನೆಂಟ್ ಬಲವಾನ್ ಸಿಂಘ್, ರೈಫಲ್ ಮ್ಯಾನ್ ಸಂಜಯ ಕುಮಾರ್, ಕ್ಯಾಪ್ಟನ್ ವಿಜಯವಂತ್ ಥಾಪರ್, ಮೇಜರ್ ಸೋನಂ ವಾಂಗಚುಕ್, ಲೆಫ್ಟಿನೆಂಟ್ ಕರ್ನಲ್ ವೈ.ಕೆ. ಜೋಷಿ ಇವರೆಲ್ಲರೂ ನಿಜವಾದ ಕಾರ್ಗಿಲ್ ಹೀರೋಗಳು. ಅದರಲ್ಲಿ ಹೆಚ್ಚಿನವರು ಹುತಾತ್ಮರಾದವರು. ಅವರಿಗೆಲ್ಲ ವಿವಿಧ ಸೇನಾ ಶೌರ್ಯ ಪ್ರಶಸ್ತಿಗಳನ್ನು ನೀಡಿ ಭಾರತ ಸರಕಾರವು ಗೌರವಿಸಿತು.

ಕಾರ್ಗಿಲ್ ಯುದ್ಧದ ಫಲಶ್ರುತಿ ಏನೆಂದರೆ ಮುಂದೆ ಭಾರತವು ಎಂದಿಗೂ ಪಾಕಿಸ್ತಾನವನ್ನು ನಂಬಲಿಲ್ಲ ಮತ್ತು ಪಾಕಿಸ್ತಾನ ಯಾವತ್ತೂ ಭಾರತದ ಮೇಲೆ ಮತ್ತೆ ದಂಡೆತ್ತಿ ಬರುವ ಸಾಹಸವನ್ನು ಮಾಡಲಿಲ್ಲ!

ಜೈ ಹಿಂದ್.

ಇದನ್ನೂ ಓದಿ: ರಾಜಮಾರ್ಗ ಅಂಕಣ:  ಕನ್ನಡದ ಶ್ರೇಷ್ಠ ಲೇಖಕ ನಿರಂಜನರನ್ನು ನಾಡು ಮರೆತರೆ ಹೇಗೆ?

Continue Reading

ಅಂಕಣ

ರಾಜಮಾರ್ಗ ಅಂಕಣ:  ಕನ್ನಡದ ಶ್ರೇಷ್ಠ ಲೇಖಕ ನಿರಂಜನರನ್ನು ನಾಡು ಮರೆತರೆ ಹೇಗೆ?

ರಾಜಮಾರ್ಗ ಅಂಕಣ: ಕುಳಕುಂದ ಶಿವರಾವ್ ಅಂದರೆ ಯಾರಿಗೂ ಥಟ್ಟನೆ ಪರಿಚಯ ಆಗಲಾರದು. ಆದರೆ ಕನ್ನಡದ ಶ್ರೇಷ್ಠ ಲೇಖಕ ನಿರಂಜನ ಎಂದರೆ ಎಲ್ಲರಿಗೂ ಪರಿಚಯ ಆಗುತ್ತದೆ. ಈ ವರ್ಷ ಅವರ ಜನ್ಮ ಶತಮಾನೋತ್ಸವ.

VISTARANEWS.COM


on

ರಾಜಮಾರ್ಗ ಅಂಕಣ
Koo

ಈ ವರ್ಷ (2024) ಲೇಖಕ ನಿರಂಜನರ ಜನ್ಮ ಶತಮಾನೋತ್ಸವ

Rajendra-Bhat-Raja-Marga-Main-logo

ಕುಳಕುಂದ ಶಿವರಾವ್ ಅಂದರೆ ಯಾರಿಗೂ ಥಟ್ಟನೆ ಪರಿಚಯ ಆಗಲಾರದು. ಆದರೆ ಕನ್ನಡದ ಶ್ರೇಷ್ಠ ಲೇಖಕ ನಿರಂಜನ (Niranjana) ಎಂದರೆ ಎಲ್ಲರಿಗೂ ಪರಿಚಯ ಆಗುತ್ತದೆ. ಅವರು 71 ವರ್ಷಗಳ ಕಾಲ ಬದುಕಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು. ಕನ್ನಡದ ಮೊದಲ ಮತ್ತು ಜನಪ್ರಿಯ ಅಂಕಣ ಲೇಖಕರು ಅಂದರೆ ಅದು ನಿರಂಜನ! (ರಾಜಮಾರ್ಗ ಅಂಕಣ)

ಬಾಲ್ಯದಿಂದಲೂ ಬರವಣಿಗೆ

1924 ಜೂನ್ 15ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಳಕುಂದ ಎಂಬ ಗ್ರಾಮದಲ್ಲಿ ಜನಿಸಿದ ಅವರು ಸಣ್ಣ ಪ್ರಾಯದಲ್ಲಿ ಪತ್ರಿಕೆಗಳಿಗೆ ಬರೆಯಲು ತೊಡಗಿದರು. ಮೊದಲು ಕಂಠೀರವ ಪತ್ರಿಕೆ ಅವರಿಗೆ ಬರೆಯಲು ಅವಕಾಶ ಕೊಟ್ಟಿತು. ಮುಂದೆ ಕನ್ನಡದ ಎಲ್ಲ ಪ್ರಸಿದ್ಧ ಪತ್ರಿಕೆಗಳಿಗೆ ಅವರು ಅಂಕಣಗಳನ್ನು ಬರೆಯುತ್ತಾ ಹೋದರು. ರಾಷ್ಟ್ರಬಂಧು ಎಂಬ ಪತ್ರಿಕೆಯ ಪ್ರಮುಖ ಲೇಖಕರಾಗಿ ಅವರು ಸಾವಿರಾರು ಅಂಕಣಗಳನ್ನು ಬರೆದರು. ಅವರ ಅಂಕಣ ಲೇಖನಗಳು ಎಂಟು ಕೃತಿಗಳಾಗಿ ಹೊರಬಂದು ಅವರಿಗೆ ಅಪಾರ ಜನಪ್ರಿಯತೆ ಕೊಟ್ಟವು. ಅವರು ಕನ್ನಡದ ಮೊದಲ ಅಂಕಣಕಾರ ಎಂಬ ದಾಖಲೆಯೂ ನಿರ್ಮಾಣವಾಯಿತು.

ಪ್ರಭಾವಶಾಲಿ ಸಣ್ಣ ಕಥೆಗಳು

ಸಣ್ಣ ಕಥೆಗಳು ಅವರಿಗೆ ಇಷ್ಟವಾದ ಇನ್ನೊಂದು ಪ್ರಕಾರ. ಅವರ 156 ಸಣ್ಣ ಕಥೆಗಳ ಸಂಗ್ರಹವಾದ ‘ಧ್ವನಿ’ ಕನ್ನಡದ ಶ್ರೇಷ್ಠ ಕೃತಿ ಆಗಿದೆ. ಕಾರಂತರ ಸಂಪರ್ಕ, ಲೆನಿನ್ ಬಗ್ಗೆ ಓದು ಅವರನ್ನು ಬೆಳೆಸುತ್ತಾ ಹೋದವು.

ಬಾಪೂಜಿ ಬಾಪು ಅವರ ಅತ್ಯಂತ ಶ್ರೇಷ್ಟವಾದ ಸಣ್ಣ ಕಥೆ. ಗಾಂಧೀಜಿ ಬದುಕಿದ್ದಾಗಲೇ ಅವರು ಸತ್ತಂತೆ ಕಲ್ಪಿಸಿಕೊಂಡು ಬರೆದ ಕಥೆ ಇದು! ರಕ್ತ ಸರೋವರ ಕಾಶ್ಮೀರದ ದಾಲ್ ಸರೋವರದ ಹಿನ್ನೆಲೆಯಲ್ಲಿ ಅರಳಿದ ಅದ್ಭುತವಾದ ಕಥೆ.
ತಿರುಕಣ್ಣನ ಮತದಾನ ರಾಜಕೀಯ ವಿಡಂಬನೆಯ ಕಥೆ. ಅವರ ಸಣ್ಣ ಕಥೆಗಳು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಸಂಸ್ಕೃತಿಯಲ್ಲಿ ಅರಳಿದ ಕಥೆಗಳು. ಕನ್ನಡದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ನಂತರ ಇಷ್ಟೊಂದು ವೈವಿಧ್ಯಮಯವಾದ ಸಣ್ಣ ಕಥೆಗಳನ್ನು ಬರೆದವರು ನಿರಂಜನ ಮಾತ್ರ ಅಂದರೆ ಅದು ಅತಿಶಯೋಕ್ತಿ ಅಲ್ಲ!

ಕಾದಂಬರಿಕಾರರಾಗಿ ನಿರಂಜನರು

ಅವರು ಬರೆದದ್ದು ಒಟ್ಟು 21 ಕಾದಂಬರಿಗಳು. ವರ್ಗ ಸಂಘರ್ಷ ಮತ್ತು ಸಾಮಾಜಿಕ ಸಮಾನತೆ ಅವರ ಹೆಚ್ಚಿನ ಕಾದಂಬರಿಗಳ ಹೂರಣ. 700 ಪುಟಗಳ ಬೃಹತ್ ಕಾದಂಬರಿ ಮೃತ್ಯುಂಜಯ ಅದೊಂದು ಮಾಸ್ಟರಪೀಸ್ ಕಲಾಕೃತಿ. ವಿಮೋಚನೆ, ಬನಶಂಕರಿ, ಅಭಯ, ಚಿರಸ್ಮರಣೆ, ರಂಗಮ್ಮನ ವಟಾರ ಮೊದಲಾದ ಕಾದಂಬರಿಗಳು ಒಮ್ಮೆ ಓದಿದರೆ ಮರೆತುಹೋಗೋದಿಲ್ಲ. ಸುಳ್ಯ ಮತ್ತು ಮಡಿಕೇರಿ ಪ್ರದೇಶದಲ್ಲಿ ಕಲ್ಯಾಣಸ್ವಾಮಿ ಎಂಬಾತ ನಡೆಸಿದ ರಕ್ತಕ್ರಾಂತಿಯ ಹಸಿಹಸಿ ಕಥೆಯನ್ನು ಹೊಂದಿರುವ ಒಂದು ಶ್ರೇಷ್ಟವಾದ ಕಾದಂಬರಿ ಅವರು ಬರೆದಿದ್ದಾರೆ. ನಿರಂಜನರು ಬರೆದ ನಾಟಕಗಳೂ ಜನಪ್ರಿಯವಾಗಿವೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ನೇಪಥ್ಯಕ್ಕೆ ಸರಿದ ರಂಗ ನಿರ್ದೇಶಕ ಸದಾನಂದ ಸುವರ್ಣ

ನಿರಂಜನ ಅವರ ಸಂಪಾದನಾ ಗ್ರಂಥಗಳು

ಇಂದು ಕನ್ನಡ ನಾಡು ನಿರಂಜನರನ್ನು ನೆನಪಿಟ್ಟುಕೊಳ್ಳಲೇ ಬೇಕಾದ ಮುಖ್ಯ ಕಾರಣ ಎಂದರೆ ಅವರ ಸಂಪಾದನೆಯ ಗ್ರಂಥಗಳು. 25 ಸಂಪುಟಗಳ ವಿಶ್ವ ಕಥಾಕೋಶ, ಜ್ಞಾನಗಂಗೋತ್ರಿ ಹೆಸರಿನ ಎಳೆಯರ ಏಳು ಸಂಪುಟಗಳ ವಿಶ್ವ
ಜ್ಞಾನಕೋಶ, ಪುರೋಗಾಮಿ ಪ್ರಕಾಶನದ ಎಂಟು ಪುಸ್ತಕಗಳು, ಜನತಾ ಸಾಹಿತ್ಯಮಾಲೆಯ 25 ಪುಸ್ತಕಗಳು….ಹೀಗೆ ಲೆಕ್ಕ ಮಾಡುತ್ತಾ ಹೋದರೆ ಸಾವಿರಾರು ಪುಟಗಳ ಅದ್ಭುತ ಜ್ಞಾನಕೋಶಗಳು ಅರಳಿದ್ದು ನಿರಂಜನರ ಸಂಪಾದಕತ್ವದಲ್ಲಿ! ಅವರ ಇಡೀ ಜೀವನವನ್ನು ನಿರಂಜನರು ಅಧ್ಯಯನ ಮತ್ತು ಬರವಣಿಗೆಯಲ್ಲಿಯೇ ಕಳೆದರು.

ಇಡೀ ಕುಟುಂಬವು ಸಾಹಿತ್ಯಕ್ಕೆ ಮೀಸಲು

ನಿರಂಜನರ ಪತ್ನಿ ಅನುಪಮಾ ನಿರಂಜನ ಕನ್ನಡದ ಸ್ಟಾರ್ ಕಾದಂಬರಿಕಾರರು. ಹೆಣ್ಣು ಮಕ್ಕಳಾದ ತೇಜಸ್ವಿನಿ ಮತ್ತು ಸೀಮಂತಿನಿ ಇಬ್ಬರೂ ಕನ್ನಡದ ಪ್ರಭಾವೀ ಲೇಖಕರಾಗಿ ಗುರುತಿಸಿಕೊಂಡವರು. ಹಾಗೆ ನಿರಂಜನರ ಇಡೀ ಕುಟುಂಬವು ಕನ್ನಡದ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿತು.

ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಅವರಿಗೆ ದೊರೆತವು. 1995ರಲ್ಲಿ ಅವರು ನಮ್ಮನ್ನು ಅಗಲಿದರು. ಕನ್ನಡ ಸಾಹಿತ್ಯಲೋಕವನ್ನು ಚಂದವಾಗಿ ಬೆಳೆಸಿದ ನಿರಂಜನರ ಜನ್ಮ ಶತಮಾನೋತ್ಸವದ ಈ ವರ್ಷ ಕನ್ನಡ ಸಾರಸ್ವತ ಲೋಕ ಒಂದು ಸ್ಮರಣೀಯ ಕಾರ್ಯಕ್ರಮವನ್ನು ಅವರ ನೆನಪಿನಲ್ಲಿ ಮಾಡಬೇಕು ಎನ್ನುವುದು ನಮ್ಮೆಲ್ಲರ ಆಗ್ರಹ ಆಗಬೇಕು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು

Continue Reading
Advertisement
IND vs SL
ಕ್ರೀಡೆ27 mins ago

IND vs SL: ಗ್ಲೆನ್​ ಮ್ಯಾಕ್ಸ್​ವೆಲ್​ ಟಿ20 ವಿಶ್ವ ದಾಖಲೆ ಮುರಿದ ಸೂರ್ಯಕುಮಾರ್

Gold Rate Today
ಚಿನ್ನದ ದರ41 mins ago

Gold Rate Today: ಆಭರಣ ಖರೀದಿಸುವ ಯೋಚನೆಯಲ್ಲಿದ್ದೀರಾ? ಇಂದಿನ ಬೆಲೆ ಚೆಕ್‌ ಮಾಡಿ

Bigg Boss OTT 3 Anil Kapoor as the worst ever host of Bigg Boss
ಬಿಗ್ ಬಾಸ್45 mins ago

Bigg Boss OTT 3: ಅನಿಲ್​ ಕಪೂರ್ ʻವರ್ಸ್ಟ್‌ ನಿರೂಪಕʼ ಎಂದ ನೆಟ್ಟಿಗರು ; ಬೇಸತ್ತ ವೀಕ್ಷಕರು!

CH Vijayashankar
ಪ್ರಮುಖ ಸುದ್ದಿ58 mins ago

CH Vijayashankar: ಮೇಘಾಲಯ ರಾಜ್ಯಪಾಲರಾಗಿ ಸಿ.ಎಚ್. ವಿಜಯಶಂಕರ್ ನೇಮಕ

Vinay Rajkumar pepe the film A certificate
ಸ್ಯಾಂಡಲ್ ವುಡ್1 hour ago

Vinay Rajkumar: ಸೆನ್ಸಾರ್ ಪಾಸಾದ ‘ಪೆಪೆ’; ವಿನಯ್ ರಾಜ್ ಕುಮಾರ್ ಚಿತ್ರಕ್ಕೆ A’ ಸರ್ಟಿಫಿಕೇಟ್!

INDW vs SLW Final
ಪ್ರಮುಖ ಸುದ್ದಿ1 hour ago

INDW vs SLW Final: ಇಂದು ಭಾರತ-ಲಂಕಾ ಏಷ್ಯಾ ಕಪ್​ ಫೈನಲ್​; 8ನೇ ಟ್ರೋಫಿ ಮೇಲೆ ಕಣ್ಣಿಟ್ಟ ಹರ್ಮನ್​ಪ್ರೀತ್​​ ಪಡೆ  

Suzuki India
ಆಟೋಮೊಬೈಲ್1 hour ago

4 ಲಕ್ಷ ಬೈಕ್‌, ಸ್ಕೂಟರ್‌ ಹಿಂಪಡೆಯಲು ಮುಂದಾದ ಸುಜುಕಿ ಇಂಡಿಯಾ; ಈ ಪಟ್ಟಿಯಲ್ಲಿ ನಿಮ್ಮ ವಾಹನವೂ ಇದ್ಯಾ? ಹೀಗೆ ಚೆಕ್‌ ಮಾಡಿ

rowdysheeters police firing
ಕ್ರೈಂ1 hour ago

Police Firing: ಕೈ ಕಟ್‌ ಮಾಡಿದ ರೌಡಿಗಳ ಕಾಲಿಗೆ ಪೊಲೀಸರ ಗುಂಡೇಟು

ಪ್ರಮುಖ ಸುದ್ದಿ2 hours ago

Olympic Games Paris: ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಸ್ಪರ್ಧೆಗಳ ವಿವರ

Bigg Boss Marathi 5 premiere ritesh deshmukh co star shubhankar tawde
ಬಿಗ್ ಬಾಸ್2 hours ago

Bigg Boss Marathi 5: ಶುರುವಾಯ್ತು ಮರಾಠಿ ಬಿಗ್​ಬಾಸ್ 5; ಈ ಬಾರಿ ರಿತೇಶ್ ದೇಶ್​ಮುಖ್ ನಿರೂಪಕ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ16 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ20 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ21 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ3 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ3 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌