ರಾಜಮಾರ್ಗ ಅಂಕಣ: ಹೇಗಿದ್ದವನು ಹೇಗಾಗಿ ಹೋದ ಕ್ರಿಕೆಟರ್ ವಿನೋದ್ ಕಾಂಬ್ಳಿ? - Vistara News

ಅಂಕಣ

ರಾಜಮಾರ್ಗ ಅಂಕಣ: ಹೇಗಿದ್ದವನು ಹೇಗಾಗಿ ಹೋದ ಕ್ರಿಕೆಟರ್ ವಿನೋದ್ ಕಾಂಬ್ಳಿ?

ರಾಜಮಾರ್ಗ ಅಂಕಣ: ಒಬ್ಬ ಅತ್ಯಂತ ಪ್ರತಿಭಾವಂತ ಕ್ರಿಕೆಟರ್ ಹೇಗೆಲ್ಲ ತನ್ನ ಬದುಕನ್ನು ಮತ್ತು ಕೆರಿಯರನ್ನು ಕೆಡಿಸಿಕೊಂಡ? ಹೇಗೆ ನೈತಿಕ ಅಧಃಪತನ ಹೊಂದಿದ? ಎಂಬುದಕ್ಕೆ ಒಂದು ಸಮರ್ಪಕ ನಿದರ್ಶನ ಕೊಡಬೇಕು ಅಂತಾದರೆ ನೀವು ವಿನೋದ್ ಕಾಂಬ್ಳಿ ಹೆಸರು ಹೇಳಬಹುದು!

VISTARANEWS.COM


on

vinod-kambli-1 ರಾಜಮಾರ್ಗ ಅಂಕಣ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಒಬ್ಬ ಚಾಂಪಿಯನ್ ಕ್ರಿಕೆಟರ್ ಈ ರೀತಿ ನೈತಿಕ ಅಧಃಪತನ ಹೊಂದಲು ಕಾರಣವೇನು?

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ಭಾರತದ ಮಾಜಿ ಕ್ರಿಕೆಟರ್, ಬಲಿಷ್ಠ ಎಡಗೈ ದಾಂಡಿಗ ವಿನೋದ್ ಕಾಂಬ್ಳಿಗೆ (Vinod Kambli) ಸಂಬಂಧಪಟ್ಟ ಇತ್ತೀಚಿನ ಒಂದು ವಿಡಿಯೋ ನೋಡಿ ಕರುಳು ಕಿತ್ತು ಬಂತು! ಒಂದು ಬೈಕಿಗೆ ಸ್ಟ್ಯಾಂಡ್ ಹಾಕಲೂ ಆಗದೆ ದೇಹದ ಬ್ಯಾಲೆನ್ಸ್ ತಪ್ಪಿದಾಗ ಆತನನ್ನು ಕೆಲವು ದಾರಿಹೋಕರು ಎತ್ತಿಹಿಡಿದು ನಡೆಸಿಕೊಂಡು ಹೋಗುವ ವಿಡಿಯೋ ನಿಜವಾಗಿಯೂ ನೋವು ಕೊಟ್ಟಿತು.

ಅದೇ ವಿನೋದ್ ಕಾಂಬ್ಳಿ ಕಳೆದ ವರ್ಷ ಟಿವಿ ಕ್ಯಾಮೆರಾದ ಮುಂದೆ ಬಂದು ನನಗೆ ತೀವ್ರ ಆರ್ಥಿಕ ಸಮಸ್ಯೆ ಇದೆ, ಬದುಕು ಸಂಭಾಳಿಸುವುದೆ ಕಷ್ಟ ಆಗ್ತಾ ಇದೆ ಎಂದು ಗಳಗಳನೆ ಅತ್ತಿದ್ದರು! ತೀರಾ ಹತಾಶೆ ತೋಡಿಕೊಂಡಿದ್ದರು!

ನನ್ನ ಮನಸ್ಸು ಆಗ 38 ವರ್ಷಗಳ ಹಿಂದಕ್ಕೆ ಓಡಿತು.

ಗೆಳೆಯರಿಬ್ಬರ ದಾಖಲೆಯ ಇನ್ನಿಂಗ್ಸ್!

ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರು ಮುಂಬೈಯ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಕಾಂಬ್ಳಿಯು ಸಚಿನಗಿಂತ ಎರಡು ವರ್ಷ ದೊಡ್ಡವನು.

1988ರ ಒಂದು ದಿನ ಇಬ್ಬರೂ ಸೇರಿ ತಮ್ಮ ಶಾರದಾಶ್ರಮ ಶಾಲೆಯ ಪರವಾಗಿ ಒಂದು ಪಂದ್ಯದಲ್ಲಿ 664 ರನ್ನುಗಳ ಜೊತೆಯಾಟ ಮಾಡಿ ಇಡೀ ಭಾರತದ ಗಮನ ಸೆಳೆದಿದ್ದರು. ಅಂದು ಇಬ್ಬರದೂ ತ್ರಿಶತಕವು ದಾಖಲು ಆಗಿತ್ತು! ಆಗ ಸಚಿನಗೆ 14 ವರ್ಷ. ಕಾಂಬ್ಳಿಗೆ 16 ವರ್ಷ!

ನಂತರ ಇಬ್ಬರೂ ತಮ್ಮ ಶಾಲೆಯನ್ನು ಬಿಟ್ಟು ಖ್ಯಾತ ಕ್ರಿಕೆಟ್ ಕೋಚ್ ರಮಾಕಾಂತ್ ಆಚರೇಕರ್ ಅವರ ಕೋಚಿಂಗ್ ಕ್ಯಾಂಪ್ ಸೇರಿದರು. ಮಹಾಗುರುಗಳಾದ ಆಚರೇಕರ್ ಸರ್ ತಮ್ಮ ಇಬ್ಬರು ಶಿಷ್ಯರ ಬಗ್ಗೆ ಹೇಳಿದ ಮಾತು ತುಂಬಾ ಮುಖ್ಯ ಆದದ್ದು.

“ಸಚಿನ್ ತುಂಬಾ ಬದ್ಧತೆಯ ಹುಡುಗ. ಹೇಳಿದ ಸಮಯಕ್ಕೆ ಮೊದಲೇ ಕ್ಯಾಂಪಿಗೆ ಬರುತ್ತಿದ್ದ. ನಾನು ಹೇಳಿದ್ದನ್ನು ಚಾಚೂ ತಪ್ಪದೇ ಗಮನಿಸುತ್ತಿದ್ದ. ಹೇಳಿದ್ದನ್ನು ಪೂರ್ತಿಯಾಗಿ ಕಲಿತು ಬರುತ್ತಿದ್ದ. ಅವನ ಶ್ರದ್ಧೆ ಮತ್ತು ನನ್ನ ಬಗ್ಗೆ ಇದ್ದ ಗೌರವಗಳು ಎರಡೂ ಅದ್ಭುತ ಆಗಿತ್ತು”

“ಆದರೆ ಈ ವಿನೋದ್ ಕಾಂಬ್ಳಿ ಶಿಸ್ತಿಲ್ಲದ ಹುಡುಗ. ಆಗಲೇ ಶೋಕಿ ಮಾಡುವುದನ್ನು ಕಲಿತಿದ್ದ. ನನ್ನ ತರಗತಿಗೆ ತಡವಾಗಿ ಬರುತ್ತಿದ್ದ. ಕ್ಲಾಸು ಮುಗಿಯುವ ಮೊದಲೇ ಬೈಕನ್ನು ಏರಿ ವೇಗವಾಗಿ ಓಡುತ್ತಿದ್ದ. ಸಿಗರೇಟ್, ಕುಡಿತ ಎಲ್ಲ ಚಟಗಳನ್ನು ಕಲಿತಿದ್ದ. ಹುಡುಗಿಯರನ್ನು ಇಂಪ್ರೆಸ್ ಮಾಡಲು ಪ್ರಯತ್ನ ಪಡುತ್ತಿದ್ದ”

ಸಚಿನ್ ತೆಂಡೂಲ್ಕರಗಿಂತ ಹೆಚ್ಚು ಬಲಿಷ್ಠ ಆಟಗಾರ

“ಪ್ರತಿಭೆಯಲ್ಲಿ ಆತನು ಸಚಿನಗಿಂತ ಒಂದು ತೂಕ ಹೆಚ್ಚೇ ಇದ್ದನು. ಬಲಿಷ್ಠ ಎಡಗೈ ಆಟಗಾರ. ಹೆಚ್ಚು ಆಕ್ರಮಣಕಾರಿ ಆಟಗಾರ. ಆದರೆ ಬದ್ಧತೆ ಮತ್ತು ನಿರಂತರತೆ ಇಲ್ಲ. ಬಹಳ ಮುಖ್ಯವಾಗಿ ಫೋಕಸ್ ಇರಲಿಲ್ಲ. ನನ್ನ ಮಾತು ಕೇಳುತ್ತಲೇ ಇರಲಿಲ್ಲ. ಪರಿಣಾಮವಾಗಿ ಆತ ತನ್ನ ಕ್ರಿಕೆಟ್ ಭವಿಷ್ಯವನ್ನು ಹಾಳು ಮಾಡಿಕೊಂಡ!”

ಮುಂದೆ ಗುರುಗಳು ಹೇಳಿದ ಭವಿಷ್ಯದ ಮಾತು ಅಷ್ಟೂ ನಿಜ ಆಯಿತು.

ಕಾಂಬ್ಳಿ ಆರಂಭದ ಜೋರು ಅಬ್ಬರ!

ಸಚಿನ್ ಮತ್ತು ಕಾಂಬ್ಳಿ ಹೆಚ್ಚು ಕಡಿಮೆ ಒಂದೇ ವರ್ಷದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ಕಾಂಬ್ಳಿ ಆರಂಭದಲ್ಲಿ ಭಾರೀ ಅಬ್ಬರಿಸಿದ. ಸತತವಾಗಿ ನಾಲ್ಕು ಶತಕ ಸಿಡಿಸಿದ! ಅದರಲ್ಲಿ ಎರಡು ಡಬ್ಬಲ್ ಸೆಂಚುರಿಗಳು! ಕೇವಲ 14 ಇನ್ನಿಂಗ್ಸಗಳಲ್ಲಿ ಸಾವಿರ ರನ್ ಗಳ ಗಡಿಯನ್ನು ದಾಟಿದ! ಏಕದಿನ ಪಂದ್ಯದಲ್ಲಿ ಕೂಡ ದಾಖಲೆ ಮಾಡಿದ.

ಆತನ ಆರಂಭಿಕ ಅಬ್ಬರ ನೋಡಿದಾಗ ಭಾರತೀಯ ಕ್ರಿಕೆಟ್ ತಂಡಕ್ಕೆ ಒಬ್ಬ ಚಾಂಪಿಯನ್ ಆಟಗಾರ ಸಿಕ್ಕಿದ ಎಂದು ಲೀಡ್ ಪತ್ರಿಕೆಗಳು ಬರೆದವು!

ಹಿಸ್ ಆಟಿಟ್ಯೂಡ್ ವಾಸ್ ರಾಂಗ್!

ಆದರೆ ಆತ ಬಹುಬೇಗನೆ ತನ್ನ ಫೋಕಸನ್ನು ಕಳೆದುಕೊಂಡ. ಚಟಗಳು ಮುಂದುವರೆದವು. ಶೋಕಿಯು ಮಿತಿಮೀರಿತು. ಕುಡಿತ, ಜೂಜು, ಸಿಗರೇಟ್ ಎಲ್ಲವೂ ಆತನನ್ನು ಖಾಲಿ ಮಾಡಿದವು. ಪರಿಣಾಮವಾಗಿ ಆತನ ಚಾಪಿಯನ್ ಆಟ ತನ್ನ ಆಕರ್ಷಣೆ ಕಳೆದುಕೊಂಡಿತು! ಕೇವಲ 23ನೆಯ ವಯಸ್ಸಿನಲ್ಲಿ ಟೆಸ್ಟ್ ತಂಡದಿಂದ ಹೊರಬಿದ್ದ! ಆಗ ಆತನ ಬ್ಯಾಟಿಂಗ್ ಸರಾಸರಿ ಭಾರತದಲ್ಲಿಯೇ ಅತಿ ಹೆಚ್ಚು (54)ಇತ್ತು! ಒಂದೆರಡು ವರ್ಷಗಳಲ್ಲಿ ಏಕದಿನದ ಅವಕಾಶಗಳು ಬರಿದಾದವು.

ಆತ ಭಾರೀ ಜಗಳಗಂಟ. ಸಹ ಆಟಗಾರರ ಜೊತೆ, ಆಯ್ಕೆ ಸಮಿತಿಯವರ ಜೊತೆಗೆ, ಕೋಚ್ ಜೊತೆ, ಹೀಗೆ ಎಲ್ಲರ ಜೊತೆಗೆ ಕಾಲುಕೆರೆದು ಜಗಳಕ್ಕೆ ನಿಂತ! ಅವನ ಮೇಲೆ ಎಲ್ಲರಿಗೂ ಇದ್ದ ಸಿಂಪತಿ ಖಾಲಿ ಆಯ್ತು! ಪರಿಣಾಮವಾಗಿ ತಂಡದಿಂದ ಮತ್ತೆ ಮತ್ತೆ ಹೊರಬಿದ್ದ!

Vinod Kambli
Vinod Kambli

ಅದೇ ಹೊತ್ತಿಗೆ ಸಚಿನ್ ಹೇಗೆ ತನ್ನ ಕ್ರಿಕೆಟ್ ಕೆರಿಯರ್ ಗ್ರಾಫ್ ಏರಿಸಿದ, ಯಾವ ರೀತಿ ದಾಖಲೆಗಳ ಮೇಲೆ ದಾಖಲೆ ಬರೆದ, ಹೇಗೆ ಗಾಡ್ ಆಫ್ ಕ್ರಿಕೆಟ್ ಆದ? ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ! ಆದರೆ ಅವನಿಗಿಂತ ಹೆಚ್ಚು ಪ್ರತಿಭೆ ಮತ್ತು ತಾಕತ್ತು ಹೊಂದಿದ್ದ ವಿನೋದ್ ಕಾಂಬ್ಳಿ ಹೇಗೆ ದಾರಿ ತಪ್ಪಿದ ಅನ್ನುವುದನ್ನು ಕೂಡ ಎಂದು ನಾವು ನೋಡಿದ್ದೇವೆ!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತೀಯ ಸೋದರತೆಯ ಮಹಾ ಪರ್ವ – ರಕ್ಷಾ ಬಂಧನ

ಖಾಸಗಿ ಜೀವನದಲ್ಲಿ ನೂರಾರು ಎಡವಟ್ಟುಗಳು

ತನ್ನ ಖಾಸಗಿ ಜೀವನದಲ್ಲಿಯೂ ಕಾಂಬ್ಳಿ ಒಂದರ ಮೇಲೊಂದು ಎಡವಟ್ಟುಗಳನ್ನೇ ಮಾಡಿಕೊಂಡನು! ಹೋಟೆಲ್ ರಿಸೆಪ್ಶನಿಷ್ಟ ಒಬ್ಬಳನ್ನು ಹಾರಿಸಿಕೊಂಡು ಹೋಗಿ ಮದುವೆ ಆದ. ತಾನೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ. ನಂತರ ಆಕೆಗೆ ಡೈವೋರ್ಸ್ ಕೊಟ್ಟು ಎರಡನೇ ಮದುವೆ ಆದ. ಕುಡಿತ, ಜೂಜು, ಸಿಗರೇಟ್ ಎಲ್ಲವೂ ನಿರಂತರವಾಗಿ ಮುಂದುವರೆದವು. ಚಟಕ್ಕೆ ಬಿದ್ದು ದೊಡ್ಡ ದೊಡ್ಡ ಬ್ಯಾಂಕ್ ಸಾಲ ಮಾಡಿದ. ಬ್ಯಾಂಕಿನವರು ಹುಡುಕಿಕೊಂಡು ಬಂದಾಗ ಅಡಗಿ ಕೂತ!

ಒಂದು ಸಣ್ಣ ರಾಜಕೀಯ ಪಕ್ಷವನ್ನು ಸೇರಿ ಮುಂಬೈಯ ವಿಧಾನಸಭಾ ಚುನಾವಣೆಗೆ ನಿಂತ. ತುಂಬಾನೆ ಖರ್ಚು ಮಾಡಿದ. ಆದರೆ ಚುನಾವಣೆಯಲ್ಲಿ ಹೀನಾಯವಾಗಿ ಸೋತುಹೋದ! ಒಮ್ಮೆ ಹಾರ್ಟ್ ಅಟ್ಯಾಕ್ ಆಗಿ ಆಂಜಿಯೋಪ್ಲಾಸ್ಟಿ ಕೂಡ ಆಯ್ತು. ಇನ್ನೊಮ್ಮೆ ಕಾರು ಡ್ರೈವ್ ಮಾಡಿಕೊಂಡು ಹೋಗಿ ತೀವ್ರ ಆಕ್ಸಿಡೆಂಟ್ ಮಾಡಿಕೊಂಡ!

ವೈದ್ಯರು ಇನ್ನು ಕುಡಿಯಲೇ ಬಾರದು. ಕುಡಿದರೆ ಆಸ್ಪತ್ರೆಗೆ ಅಡ್ಮಿಟ್ ಮಾಡುವುದಿಲ್ಲ ಎಂದು ಬೈದು ಕಳಿಸಿದರು! ಆತ ಕುಡಿಯುವುದು ನನ್ನ ಜನ್ಮಸಿದ್ಧ ಹಕ್ಕು ಎಂದು ಅಬ್ಬರಿಸಿ ಹೊರಬಂದ!

ಎರಡು ಹಿಂದೀ, ಒಂದು ಕನ್ನಡ ಸಿನೆಮಾದಲ್ಲಿ ಸಣ್ಣ ಸಣ್ಣ ಪಾತ್ರ ಮಾಡಿದ. ಅಲ್ಲೂ ಹೆಸರು ಕೆಡಿಸಿಕೊಂಡ. ಇತ್ತೀಚೆಗೆ ಕ್ಯಾಮೆರಾದ ಮುಂದೆ ಬಂದು ನನಗೆ ಹೊಟ್ಟೆಪಾಡು ಕಷ್ಟ ಆಗ್ತಾ ಇದೆ ಎಂದು ಕಣ್ಣೀರು ಹಾಕಿದ್ದಾನೆ!
ಅದಕ್ಕಿಂತ ಶೋಚನೀಯ ಎಂದರೆ ಇತ್ತೀಚಿನ ವಿಡಿಯೋ.

ವಿನೋದ್ ಕಾಂಬ್ಳಿ – ದ ಲೋಸ್ಟ್ ಹೀರೋ!

ಪತ್ರಕರ್ತ ಕುಣಾಲ್ ಪುರಂದರೆ ಅವರು ಬರೆದಿರುವ ಆತನ ಬದುಕಿನ ಕತೆಯ ಪುಸ್ತಕದ ಹೆಸರು ಅವನ ದುರಂತ ಬದುಕಿಗೆ ಅನ್ವರ್ಥ ಆಗಿದೆ. ಅದು THE LOST HERO!

ಒಬ್ಬ ಅತ್ಯಂತ ಪ್ರತಿಭಾವಂತ ಕ್ರಿಕೆಟರ್ ಹೇಗೆಲ್ಲ ತನ್ನ ಬದುಕನ್ನು ಮತ್ತು ಕೆರಿಯರನ್ನು ಕೆಡಿಸಿಕೊಂಡ? ಹೇಗೆ ನೈತಿಕ ಅಧಃಪತನ ಹೊಂದಿದ? ಎಂಬುದಕ್ಕೆ ಒಂದು ಸಮರ್ಪಕ ನಿದರ್ಶನ ಕೊಡಬೇಕು ಅಂತಾದರೆ ನೀವು ವಿನೋದ್ ಕಾಂಬ್ಳಿ ಹೆಸರು ಹೇಳಬಹುದು!

ಇದನ್ನೂ ಓದಿ: ENG VS NZ: ವಿನೋದ್​ ಕಾಂಬ್ಳಿ ಹೆಸರಿನಲ್ಲಿದ್ದ ವಿಶ್ವ ದಾಖಲೆ ಮುರಿದ ಹ್ಯಾರಿ ಬ್ರೂಕ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಇಂದು ಬಾಂಗ್ಲಾದೇಶದ ಹಿಂದೂ ಉಳಿದರೆ, ನಾಳೆ ಹಿಂದೂ-ಭಾರತ ಉಳಿದೀತು!

ನನ್ನ ದೇಶ ನನ್ನ ದನಿ ಅಂಕಣ: ಬಾಂಗ್ಲಾದೇಶದ (Bangladesha) ಹಿಂದೂಗಳ (Hindus) ಮೇಲಾಗುತ್ತಿರುವ ಹೇಯ ಹಿಂಸೆ, ಅತ್ಯಾಚಾರಗಳಿಗೆ ಅಂತ್ಯ ಹಾಡಬೇಕಾದರೆ, ಪರಿಣಾಮಕಾರಿಯಾದ “ಸರ್ಜಿಕಲ್ ವಾರ್” ಆಗಬೇಕೆಂಬುದನ್ನು ಸೇನಾಧಿಕಾರಿಗಳಾಗಿದ್ದವರೇ ಹೇಳಿದ್ದಾರೆ.

VISTARANEWS.COM


on

ನನ್ನ ದೇಶ ನನ್ನ ದನಿ ಅಂಕಣ bangladesh hindus
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

:: ಅಜ್ಜಂಪುರ ಮಂಜುನಾಥ

ನನ್ನ ದೇಶ ನನ್ನ ದನಿ ಅಂಕಣ: ಇದು 1948ರ ಮಾತು. ಶ್ರೀಪ್ರಕಾಶರು ಪಾಕಿಸ್ತಾನದಲ್ಲಿ (Pakistan) ಭಾರತದ (India) ಹೈಕಮಿಷನರ್ (ರಾಯಭಾರಿ) ಆಗಿದ್ದರು. ಪಾಕಿಸ್ತಾನವು ಅದಾಗಲೇ ಇಸ್ಲಾಮೀ ಪ್ರಭುತ್ವವೆಂದು (Islamic country) ಘೋಷಿಸಿಕೊಂಡಾಗಿತ್ತು. ಹಿಂದೂಗಳ ಮೇಲೆ, ಸಿಖ್ಖರ ಮೇಲೆ ದಾಳಿ, ಅತ್ಯಾಚಾರ, ಹತ್ಯಾಕಾಂಡ, ಅಂಗಡಿ ಮನೆಗಳಿಗೆ – ದೇವಾಲಯಗಳಿಗೆ – ಗುರುದ್ವಾರಗಳಿಗೆ ಬೆಂಕಿ ಹಚ್ಚುವುದು ಆ ಭೂಪ್ರದೇಶದಲ್ಲಿ ಬಹಳ ಕಾಲದಿಂದಲೂ ನಡೆದೇ ಇತ್ತು. ಆದರೆ, 1948ರ ವೇಳೆಗೆ ಒಂದಿಷ್ಟು ಕಡಿಮೆ ಆಗಿತ್ತು. ಪ್ರಾಯಶಃ ದಾಳಿಮಾಡಲು ಮುಸ್ಲಿಮೇತರರೇ ಸಿಕ್ಕುತ್ತಿರಲಿಲ್ಲವೆಂದು ಕಾಣುತ್ತದೆ. ಒಂದು ದಿನ ಹಿಂದೂ ದೇವಾಲಯವೊಂದರ (Hindu Temple) ಮೇಲೆ ದಾಳಿಯಾದ ಸುದ್ದಿ ಬಂದಿತು. ಅಲ್ಲಿದ್ದ ಕೆಲವು ವಸ್ತುಗಳು ಕಳವು ಆದ ಮತ್ತು ದೇವಾಲಯಕ್ಕೆ ಹಾನಿಯಾದ ಸುದ್ದಿ ಬಂದಿತು. ಶ್ರೀಪ್ರಕಾಶರು ಪೊಲೀಸರನ್ನು ಮತ್ತು ಉಳಿದ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಸಂಪರ್ಕಿಸಿದರು. ಅದ್ಭುತವಾದ ಉತ್ತರ ಬಂದಿತು: “ಇದು ಇಸ್ಲಾಮೀ ಪ್ರಭುತ್ವ. ಇಲ್ಲಿ ಕಳ್ಳತನ ಇತ್ಯಾದಿ ಜರುಗುವುದೇ ಇಲ್ಲ. ಏನೂ ಆಗಿಯೇ ಇಲ್ಲ”. ಶ್ರೀಪ್ರಕಾಶರು ವಿಚಾರಿಸಿದಾಗ, ಪೊಲೀಸರು ಯಾವುದೇ ದೂರು ಸಹ ಸ್ವೀಕರಿಸಿರಲಿಲ್ಲ. FIR ಸಹ ಹಾಕಿರಲಿಲ್ಲ ಎಂಬುದು ತಿಳಿದುಬಂದಿತು. ಶ್ರೀಪ್ರಕಾಶರಿಗೆ ದಿಗ್ಭ್ರಮೆಯಾಯಿತು. ಇಸ್ಲಾಮೀ ಪ್ರಭುತ್ವಗಳು ಹೇಗಿರುತ್ತವೆ, ಅಲ್ಲಿ ಮುಸ್ಲಿಮೇತರರ ಪಾಡೇನು ಎಂಬುದು ಅವರಿಗೇನೋ ತಿಳಿಯಿತು. ಆದರೆ, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಿದ ಭಾರತದ ಇಲ್ಲಿನ ಸರ್ಕಾರಕ್ಕೆ, ಪಕ್ಷಕ್ಕೆ, ಅಧಿಕಾರಾರೂಢರಿಗೆ ಅರ್ಥವಾಗಲೇ ಇಲ್ಲ. ಅವರು ಕೇಳಿಸಿಕೊಳ್ಳುತ್ತಲೂ ಇರಲಿಲ್ಲ. 76 ವರ್ಷಗಳ ಅನಂತರವೂ ಇಂದಿಗೂ, ಪರಿಸ್ಥಿತಿಯಲ್ಲಿ ತುಂಬ ಬದಲಾವಣೆಯೇನೂ ಆಗಿಲ್ಲ.

ನಾನು ದಾವಣಗೆರೆಯಲ್ಲಿದ್ದೆ. ಕಾರ್ಗಿಲ್ (Kargil War) ಮೇಲೆ ಪಾಕ್ ದಾಳಿ ಮಾಡಿತ್ತು. ಯುದ್ಧದ ಸಂದರ್ಭದಲ್ಲಿ ಆಯೋಜಿತವಾದ ಕಾರ್ಯಕ್ರಮವೊಂದರಲ್ಲಿ ನಿವೃತ್ತ ಸೇನಾಧಿಕಾರಿಯೊಬ್ಬರು ಮಾತನಾಡುತ್ತಿದ್ದರು ಮತ್ತು ಬಹಳ ಮಹತ್ತ್ವದ ಮಾತನ್ನೂ ಹೇಳಿದರು. “ನೋಡಿ, ಇಲ್ಲಿ ನೀವು ಇದು ಪಾಕಿಸ್ತಾನದ 4ನೆಯ ಆಕ್ರಮಣ ಎಂದು ಹೇಳುತ್ತಿದ್ದೀರಿ. ನಾನೊಬ್ಬ ನಿವೃತ್ತ ಸೇನಾಧಿಕಾರಿ. ಗಡಿಯಲ್ಲಿ ಇದ್ದೆ ಮತ್ತು ಯುದ್ಧಗಳಲ್ಲಿ ಸ್ವತಃ ಭಾಗವಹಿಸಿದ್ದೇನೆ. ಪಾಕಿಸ್ತಾನದ ಆಕ್ರಮಣವು 1947ರಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಬೇರೆಬೇರೆ ರೂಪದಲ್ಲಿ, ದಾಳಿ ನಡೆಯುತ್ತಲೇ ಇದೆ. ಇಂದಿಗೂ ನಿಂತೇ ಇಲ್ಲ, ಒಮ್ಮೆಯೂ ನಿಂತಿಲ್ಲ”. ನಾವೆಲ್ಲ ಅವಾಕ್ಕಾದೆವು. ನಿಜ. ಪಾಕಿಸ್ತಾನವೇ ಅನೇಕ ಬಾರಿ ಘೋಷಿಸಿರುವಂತೆ ಅದು, ಎಂದೆಂದಿಗೂ ಮುಗಿಯದ ಇಸ್ಲಾಮೀ ಆಕ್ರಮಣ. ಆದರೆ, ನಮಗೆ, ಭಾರತೀಯರಿಗೆ ಅದು ಅರ್ಥವಾಗಿಯೇ ಇಲ್ಲ.

    1947ರ ದೇಶವಿಭಜನೆಗೆ (Partition) ಮೊದಲು ಮತ್ತು ಅನಂತರ, ಬಂಗಾಳದಲ್ಲಿ ಆದ – ಆಗುತ್ತಿರುವ ಅತ್ಯಾಚಾರ, ದಾಳಿ, ವಿಧ್ವಂಸಗಳಿಗೆ ಕೊನೆ ಮೊದಲಿಲ್ಲ. 1971ರ ಬಾಂಗ್ಲಾ ದೇಶದ ವಿಮೋಚನೆಗೆ ಮೊದಲು ಹಿಂದೂಗಳ ಮೇಲೆ, ಬೌದ್ಧರ ಮೇಲೆ ಆದ ನರಮೇಧ, ಅತ್ಯಾಚಾರಗಳು ಅನೂಹ್ಯ ಪ್ರಮಾಣದವು. ವಿಮೋಚನೆಯ ಅನಂತರ ಕೆಲಕಾಲ ಸ್ವಲ್ಪ ಕಡಿಮೆಯಾಗಿತ್ತು, ಎನ್ನಬಹುದು, ಅಷ್ಟೇ. ಜಿಯಾಉರ್ ರೆಹಮಾನ್, ಖಲೀದಾ ಜಿಯಾ ಅವರ ಅವಧಿಯಲ್ಲಿ ಈ ಹಿಂಸೆ ಕಿರುಕುಳಗಳು ಮತ್ತೆ ಮಿತಿ ಮೀರಿದವು. “ದುರದೃಷ್ಟವಶಾತ್” ನಮ್ಮ ಪತ್ರಕರ್ತರು, ಲೇಖಕರು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಗಳಲ್ಲಾದ ಭೀಕರ ಹಿಂಸಾಚಾರಗಳನ್ನು ವರದಿ ಮಾಡಲೂ ಇಲ್ಲ, ಪುಸ್ತಕ ಬರೆಯಲೂ ಇಲ್ಲ. ಈ ಕಾರಣಕ್ಕೆ, ಅವಿಭಜಿತ ಬಂಗಾಳ ಎನ್ನಲಾಗುತ್ತಿದ್ದ ಆ ಪ್ರದೇಶದಲ್ಲಿ ಕಳೆದ ಎಂಟು ದಶಕಗಳಲ್ಲಿ ನಡೆದ ಮತೀಯ ವಿಧ್ವಂಸ ಮತ್ತು ನರಹತ್ಯಾಕಾಂಡಗಳ ಬಗೆಗೆ ಸಮರ್ಪಕವಾದ ಮತ್ತು ಸಮಗ್ರವಾದ ದಾಖಲೆಗಳೇ ಸಿಕ್ಕುವುದಿಲ್ಲ. ಸಹಸ್ರ ಸಹಸ್ರ ವರ್ಷಗಳ ಖ್ಯಾತಿಯ ಸಂಸ್ಕೃತಿ, ಸಂಗೀತ, ಸಾಹಿತ್ಯ, ನೃತ್ಯ, ವಿದ್ವತ್ತುಗಳ ಅತ್ಯದ್ಭುತವಾದ ಬಂಗಾಳವು ಈಗಲೂ ನಿರಂತರವಾಗಿ ನಾಶವಾಗುತ್ತಲೇ ಇದೆ. ಕ್ರಾಂತಿಕಾರಿಗಳ, ಸುಭಾಷ್ ಚಂದ್ರ ಬೋಸ್, ರವೀಂದ್ರನಾಥ ಟ್ಯಾಗೋರ್ ಅವರ, ರಾಮಕೃಷ್ಣ ಪರಮಹಂಸ – ವಿವೇಕಾನಂದರ, ಬಂಕಿಮಚಂದ್ರರ, ಸತ್ಯಜಿತ್ ರಾಯ್ ಅವರ ಪ್ರತಿಭಾನ್ವಿತ ಬಂಗಾಳವು ಅನಿಯಂತ್ರಿತ ಮತಾಂತರದ ಪರಿಪ್ರೇಕ್ಷ್ಯದಲ್ಲಿ ಜಿಹಾದೀ ಪಶುಗಳ ಕೊಂಪೆಯಾಗಿಹೋಗಿದೆ.

    ಹಿಂದೂ-ಭಾರತ ಇನ್ನಾದರೂ ಕಣ್ಣುಬಿಡಬೇಕಾಗಿದೆ. ಬಂಗಾಳ, ಕೇರಳ, ಕಾಶ್ಮೀರಗಳನ್ನು ಉಳಿಸಿಕೊಳ್ಳಲೇಬೇಕಾಗಿದೆ.

    ಇತಿಹಾಸಕಾರ, ಅಪರೂಪದ ಚಿಂತಕ, ಸೀತಾರಾಮ ಗೋಯಲ್ ಅವರು ಮಹತ್ತ್ವದ ದಾಖಲೆಗಳ ಮತ್ತು ಮಾಹಿತಿಗಳ ತಮ್ಮ “Hindu Temples : What Happened To Them” (Volume 1 – A preliminary Survey) ಗ್ರಂಥದಲ್ಲಿ ಬಹಳ ಮುಖ್ಯವಾದ ಸಾಕ್ಷ್ಯಾಧಾರಗಳನ್ನು ನೀಡಿದ್ದಾರೆ. 1989ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು (ಆ ಸಂದರ್ಭದ ರಾಜಕೀಯ ಲಾಭ ಪಡೆಯಲು) ರಾಮಜನ್ಮಭೂಮಿ ಆವರಣದಲ್ಲಿ ಶಿಲಾನ್ಯಾಸಕ್ಕೆ ಅನುಮತಿ ನೀಡಿದರು. ಆಗಿನ್ನೂ ಬಾಬ್ರಿ ಮಸೀದಿಯ ವಿವಾದಿತ ಕಟ್ಟಡ ಇತ್ತು (ಅದರ ಧ್ವಂಸ ಆಗಿದ್ದು 6ನೆಯ ಡಿಸೆಂಬರ್ 1992ರಲ್ಲಿ). ಇಷ್ಟಕ್ಕೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಹಿಂದೂ ಮಂದಿರಗಳ ಮೇಲೆ ದಾಳಿಗಳಾದವು, ಹಿಂದೂಗಳ ಮೇಲೆ ಅತ್ಯಾಚಾರ ನರಹತ್ಯೆಗಳು ಮುಗಿಬಿದ್ದವು. ಭಾರತದ ಹಿಂದೂಗಳ ಬೆಂಬಲದಿಂದ, ರಕ್ತ ಬೆವರುಗಳ ನೆರವಿನಿಂದ ಹುಟ್ಟಿಕೊಂಡ ಈ ಬಾಂಗ್ಲಾದೇಶದಲ್ಲಿ ಅಕ್ಷರಶಃ ನೂರಾರು ದೇವಾಲಯಗಳ ಧ್ವಂಸವಾಯಿತು, ಹಿಂದೂಗಳ ನರಮೇಧವಾಯಿತು, ಅಂಗಡಿ – ಮನೆಗಳನ್ನು ಸುಟ್ಟುಹಾಕಲಾಯಿತು. ಇನ್ನು ಮಹಿಳೆಯರ ಮೇಲೆ ಅನೂಹ್ಯ ಪ್ರಮಾಣದಲ್ಲಿ ಅತ್ಯಾಚಾರ ನಡೆಯಿತು. ಗೋಯಲ್ ಅವರು ಈ ಮಹತ್ತ್ವದ ಗ್ರಂಥದ 7ನೆಯ ಅಧ್ಯಾಯದಲ್ಲಿ ಈ ವಿಧ್ವಂಸದ ವಿವರಗಳನ್ನು ಪಟ್ಟಿ ಮಾಡಿದ್ದಾರೆ. ಪಾಪ, ಉಳಿದ ಅನೇಕ ಪತ್ರಕರ್ತರು, ಲೇಖಕರು ಪಟ್ಟಿ ಮಾಡುವುದಿರಲಿ, ಗ್ರಂಥರಚನೆಯಿರಲಿ, ಮಾತು ಸಹ ಆಡಲಿಲ್ಲ, ಖಂಡಿಸಲೂ ಇಲ್ಲ, ಪ್ರತಿಕ್ರಿಯಿಸಲೂ ಇಲ್ಲ.

    Bangladesh Unrest
    Bangladesh Unrest

    ಶಿಕಾಗೋ ಮೂಲದ ಡಾ|| ರಿಚರ್ಡ್ ಎಲ್. ಬೆನ್ ಕಿನ್ ದಾಖಲಿಸಿರುವ “A Quiet Case of Ethnic Cleansing” (ಮೊದಲ ಆವೃತ್ತಿ 2012) ಬಹಳ ಮಹತ್ತ್ವದ ಮತ್ತು ಅಪರೂಪದ ಗ್ರಂಥ. ಇಲ್ಲಿ ಬಂಗಾಳದ ಪ್ರದೇಶದ ಮತೀಯ ವಿಧ್ವಂಸ ಮತ್ತು ನರಹತ್ಯಾಕಾಂಡಗಳ ಬಗೆಗೆ ಅನೇಕ ಪ್ರಾತಿನಿಧಿಕ ದಾಖಲೆಗಳೇ ಇವೆ. ಈ ಗ್ರಂಥದ ಅನುಬಂಧ 1 ರಲ್ಲಿ ರಿಚರ್ಡ್ ಅವರು 2009 ಈ ಒಂದು ವರ್ಷದಲ್ಲಾದ ಹಲವು ಪ್ರಮುಖ ಭಯಾನಕ ಘಟನೆಗಳನ್ನು ಕೋಷ್ಟಕ (Table) ರೂಪದಲ್ಲಿ ನೀಡಿದ್ದಾರೆ. ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸುವುದು, ಒತ್ತೆಯಿಟ್ಟುಕೊಂಡು ಹಣ ಕೀಳುವುದು, ಅತ್ಯಾಚಾರ ಮಾಡುವುದು, ಬಲವಂತದ ಮತಾಂತರ ಮಾಡುವುದು, ಹತ್ಯೆ ಮಾಡುವುದು, ಅದೇರೀತಿ ಹಿಂದೂಗಳ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ, ಹಿಂದೂಗಳ ನರಹತ್ಯೆ, ಮತಾಂತರ ಇತ್ಯಾದಿಗಳ ವಿವರಗಳಿಲ್ಲಿವೆ. ಈ ಪ್ರಕರಣಗಳಲ್ಲಿ ಬಾಂಗ್ಲಾದೇಶದ ಇಸ್ಲಾಮೀ ಪ್ರಭುತ್ವದ ಪೊಲೀಸರು ದೂರುಗಳನ್ನು ಕೈಗೆ ಸ್ವೀಕರಿಸಲೂ ಇಲ್ಲ, ಸ್ವೀಕರಿಸಿದರೂ FIR ಹಾಕಲಿಲ್ಲ, ಇನ್ನು ಕ್ರಮ ತೆಗೆದುಕೊಳ್ಳುವುದಂತೂ ಇಲ್ಲವೇ ಇಲ್ಲ. ಇಸ್ಲಾಮೀ ಪ್ರಭುತ್ವದ ದೇಶಗಳು ಇರುವುದೇ ಹಾಗೆ, ಅಲ್ಲಿ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯವೂ ಇಲ್ಲ, ಕನಿಷ್ಠ ಮರ್ಯಾದೆಯೂ ಇಲ್ಲ, ಅಸ್ತಿತ್ವವೂ ಇಲ್ಲ.

    ಪ್ರಸ್ತುತ ಬಾಂಗ್ಲಾದೇಶದಲ್ಲಿ ಬೀಭತ್ಸ ಹಿಂಸಾಪರ್ವ ವಿಜೃಂಭಿಸುತ್ತಿದೆ. ಬೆಂಕಿ ಹಚ್ಚುವುದು, ದೇವಾಲಯಗಳ ನಾಶ, ನರಹತ್ಯೆಗಳಿರಲಿ, ಅಲ್ಲಿನ ಜಿಹಾದಿಗಳು ತಾವು ಹಿಂದೂ ಹೆಣ್ಣುಮಕ್ಕಳ ಮೇಲೆ ಎಸಗುತ್ತಿರುವ ಭಯಾನಕ ಅತ್ಯಾಚಾರದ ವೀಡಿಯೋಗಳನ್ನು ಸ್ವತಃ ಅವರೇ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

    ಇದು ಬರಿಯ ಯುದ್ಧವಲ್ಲ, ಬರಿಯ ಆಕ್ರಮಣವಲ್ಲ, ಇದು ಅವೆಲ್ಲವುಗಳನ್ನು ಮೀರಿದ ಘನಘೋರವಾದ ಅಮಾನವೀಯ ಅತ್ಯಾಚಾರ, ಹಿಂಸಾಚಾರ. ಇಂತಹ ಈ ಜಿಹಾದೀ ದುಷ್ಟಜಂತುಗಳನ್ನು ಕ್ಷಣಮಾತ್ರವೂ ತಡ ಮಾಡದೇ ಕೊಂದುಹಾಕುವುದೇ ಸರಿಯಾದ ಕ್ರಮ. ಪ್ರಸಕ್ತ ಭಾರತದ ಆಶಾಕಿರಣ ಯೋಗಿ ಆದಿತ್ಯನಾಥರು. ಅವರು “ವಿಷಕ್ರಿಮಿಗಳಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಬೇಕು, ಬೇರೆ ಯಾವುದೂ ಅವರಿಗೆ ಅರ್ಥ ಆಗುವುದಿಲ್ಲ” ಎನ್ನುತ್ತಿರುತ್ತಾರೆ. 20ನೆಯ ಶತಮಾನದ ಆರಂಭದಲ್ಲಿಯೇ ಪಾಕಿಸ್ತಾನದ ದುಷ್ಟ ಪರಿಕಲ್ಪನೆ ಹುಟ್ಟಿದ್ದೇ ಅಲಿಗಢ ವಿಶ್ವವಿದ್ಯಾಲಯದಲ್ಲಿ. ಮುಸ್ಲಿಂ ಬಾಹುಳ್ಯದ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಬಹಳ ಬಹಳ ಕಷ್ಟದ ಕೆಲಸ. ಎಲ್ಲ ರಾಜಕೀಯ ಪಕ್ಷಗಳೂ ಇಡೀ ದೇಶವನ್ನು, ಮುಖ್ಯವಾಗಿ ಉತ್ತರ ಪ್ರದೇಶವನ್ನು ಕಳೆದ ಏಳು ದಶಕಗಳಿಂದ ಕುಲಗೆಡಿಸುತ್ತಲೇ ಇವೆ. ಈ ಪರಿಪ್ರೇಕ್ಷ್ಯದಲ್ಲಿ ಅಭಿವೃದ್ಧಿಯ ಜೊತೆಯಲ್ಲಿ, ಅತ್ಯದ್ಭುತವಾದ ಕಾನೂನು ಮತ್ತು ಸುವ್ಯವಸ್ಥೆಗಳು ಸಾಧ್ಯವಾಗಿರುವುದು ಯೋಗಿಜೀ ಅವರ ಹೆಗ್ಗಳಿಕೆ. ಅವರಿಂದಾಗಿ ಬರೀ ಉತ್ತರ ಪ್ರದೇಶ ಮಾತ್ರವಲ್ಲ, ಪರೋಕ್ಷವಾಗಿ ಭಾರತವೂ ಉಳಿಯಲು ಸಾಧ್ಯವಾಗಿದೆ.

    ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಂತಹ ಇಸ್ಲಾಮೀ ಪ್ರಭುತ್ವಗಳಿಗೆ ಸಂದೇಶ ಕಳುಹಿಸುವುದು, ವಿನಂತಿ ಸಲ್ಲಿಸುವುದು, ಎಚ್ಚರಿಕೆ ನೀಡುವುದು, ಮಾತುಕತೆ – ಚರ್ಚೆ ಮಾಡುವುದು, ಯಾವುದೂ ಅರ್ಥವಾಗುವುದಿಲ್ಲ. ಅವೆಲ್ಲಾ ಸಂಪೂರ್ಣ ನಿಷ್ಪ್ರಯೋಜಕ. ಕೈಲಾಗದ ಹೇಡಿಗಳನ್ನು ನೋಡಿ ಜಿಹಾದಿಗಳು ಗಹಗಹಿಸಿ ನಗುವ ನೂರಾರು ವೀಡಿಯೋಗಳನ್ನು ನಾವೆಲ್ಲರೂ ನೋಡಿಯೇಇದ್ದೇವೆ.

    ಸೆಪ್ಟೆಂಬರ್ 2016ರಲ್ಲಿ ಭಾರತದ “ಸರ್ಜಿಕಲ್ ಸ್ಟ್ರೈಕ್” ಪಾಕಿಸ್ತಾನಕ್ಕೆ ಅರ್ಥವಾಯಿತು. ಬೇರೆ ಯಾವ ಭಾಷೆಯೂ ಇಂತಹವರಿಗೆ ಅರ್ಥ ಆಗುವುದಿಲ್ಲ, ಎನ್ನುವ ಮಾತೂ ರುಜುವಾತಾಯಿತು. ಈಗ ಬಾಂಗ್ಲಾದೇಶದ ಹಿಂದೂಗಳ ಮೇಲಾಗುತ್ತಿರುವ ಹೇಯ ಹಿಂಸೆ, ಅತ್ಯಾಚಾರಗಳಿಗೆ ಅಂತ್ಯ ಹಾಡಬೇಕಾದರೆ, ಪರಿಣಾಮಕಾರಿಯಾದ “ಸರ್ಜಿಕಲ್ ವಾರ್” ಆಗಬೇಕೆಂಬುದನ್ನು ಸೇನಾಧಿಕಾರಿಗಳಾಗಿದ್ದವರೇ ಹೇಳಿದ್ದಾರೆ. ಗೂಟದ ಕಾರುಗಳಲ್ಲಿ ಕುಳಿತವರು, ತಮಗೆ ಬೆಂಬಲ ನೀಡಿದ ಹಿಂದೂ-ಭಾರತವನ್ನು ಗೌರವಿಸಲಾದರೂ ತಕ್ಷಣ ಕ್ರಮ ತೆಗೆದುಕೊಳ್ಳಬೇಕಾಗಿದೆ.

    ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜಿಹಾದಿ, ಮಿಷನರಿಗಳ ಸಾವಿರ ಹಿರೋಷಿಮಾಗಳು ಕಾಯುತ್ತಿವೆ

    Continue Reading

    ಪ್ರಮುಖ ಸುದ್ದಿ

    ರಾಜಮಾರ್ಗ ಅಂಕಣ: ಭಾರತೀಯ ಸೋದರತೆಯ ಮಹಾ ಪರ್ವ – ರಕ್ಷಾ ಬಂಧನ

    ರಾಜಮಾರ್ಗ ಅಂಕಣ: ಹಲವು ನೂಲಿನ ದಾರಗಳನ್ನು ಒಂದೇ ಗಟ್ಟಿ ದಾರದ ಮೂಲಕ ಬಂಧಿಸುವುದೇ ರಕ್ಷೆ. ಅಂದರೆ ಜಾತಿ, ವರ್ಣಬೇಧಗಳನ್ನು ಮೆಟ್ಟಿ ನಿಂತು ಇಡೀ ಹಿಂದೂಸಮಾಜವು ಒಗ್ಗಟ್ಟಾಗಿ ನಿಲ್ಲಬೇಕು ಎನ್ನುವುದು ಈ ರಕ್ಷಾಬಂಧನ ಹಬ್ಬದ ಅಲ್ಟಿಮೇಟ್ ಸಂದೇಶ.

    VISTARANEWS.COM


    on

    raksha bandhan 2024 ರಾಜಮಾರ್ಗ ಅಂಕಣ
    Koo

    ಅದರ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಆಯಾಮ

    :: ರಾಜೇಂದ್ರ ಭಟ್ ಕೆ.

    Rajendra-Bhat-Raja-Marga-Main-logo

    ರಾಜಮಾರ್ಗ ಅಂಕಣ: ನಾಡಿನ ಸಮಸ್ತ ಸೋದರ, ಸೋದರಿಯವರಿಗೆ ರಕ್ಷಾಬಂಧನ (Raksha bandhan) ಹಬ್ಬದ ಶುಭಾಶಯಗಳು. ಶ್ರಾವಣ ಪೌರ್ಣಮಿಯ ಈ ದಿನ ಪ್ರತಿಯೊಬ್ಬ ಸೋದರಿಯೂ ತನ್ನ ಸೋದರನಿಗೆ ರಕ್ಷೆ ಕಟ್ಟಿ ತನ್ನ ಮಾನ, ಪ್ರಾಣ ಮತ್ತು ಸ್ವಾಭಿಮಾನದ ರಕ್ಷಣೆ ಮಾಡು ಅಣ್ಣಾ ಎಂದು ವಿನಂತಿಸುವ ಹಬ್ಬವೇ ರಕ್ಷಾಬಂಧನ (Rakhi Festival 2024). ಅದನ್ನು ನಿಭಾಯಿಸಬೇಕಾದದ್ದು ಪ್ರತಿಯೊಬ್ಬ ಅಣ್ಣನ ಕರ್ತವ್ಯ.

    ನಾವು ಆಚರಿಸುವ ಫಾದರ್ಸ್ ಡೇ, ಮದರ್ಸ್ ಡೇ, ಲವರ್ಸ್ ಡೇ ಇವೆಲ್ಲವೂ ಪಾಶ್ಚಾತ್ಯ ಅನುಕರಣೆಯಿಂದ ಬಂದ ಹಬ್ಬಗಳು. ಆದರೆ ರಕ್ಷಾಬಂಧನ (ಅಥವಾ ರಾಖೀ ಹಬ್ಬ) ಅಪ್ಪಟ ಭಾರತೀಯ ಸಂಸ್ಕೃತಿಯ ಹಬ್ಬ ಎಂಬ ಕಾರಣಕ್ಕೆ ಅದು ನಮಗೆ ಹೆಚ್ಚು ಆಪ್ತವಾಗಬೇಕು. ಇಲ್ಲಿ ಸೋದರತೆಯು ರಕ್ತ ಸಂಬಂಧವನ್ನು ಮೀರಿದ್ದು, ಜಾತಿ, ಮತ, ಭಾಷೆ, ರಾಷ್ಟ್ರಗಳ ಸೀಮೆಗಳನ್ನು ಮೀರಿದ್ದು ಎನ್ನುವುದು ನೂರಾರು ಬಾರಿ ಸಾಬೀತಾಗಿದೆ.

    ಪುರಾಣಗಳ ಹಿನ್ನೆಲೆ

    ಮಹಾಭಾರತದಲ್ಲಿ ಯಾವುದೋ ಸನ್ನಿವೇಶದಲ್ಲಿ ಯುದ್ಧ ಮಾಡುತ್ತಿರುವಾಗ ಕೃಷ್ಣ ದೇವರ ಬೆರಳಿಗೆ ಗಾಯವಾಗಿ ರಕ್ತ ಹರಿಯುತ್ತದೆ. ಆಗ ಸಮೀಪದಲ್ಲಿ ಇದ್ದ ದ್ರೌಪದಿ ಆತಂಕಗೊಂಡು ತನ್ನ ಕೇಸರಿ ಬಣ್ಣದ ಸೀರೆಯ ಸೆರಗನ್ನು ಹರಿದು ಅದನ್ನು ಕೃಷ್ಣ ದೇವರ ಬೆರಳಿಗೆ ಕಟ್ಟಿದ್ದೇ ರಕ್ಷೆ ಆಯಿತು. ಕೃಷ್ಣ ದ್ರೌಪದಿಯನ್ನು ಆ ಕ್ಷಣಕ್ಕೆ ಸೋದರಿಯಾಗಿ ತೆಗೆದುಕೊಳ್ಳುತ್ತಾನೆ. ಮುಂದೆ ಕೌರವನ ಆಸ್ಥಾನದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಪ್ರಸಂಗ ಬಂದಾಗ ಅದೇ ಕೃಷ್ಣನು ದ್ರೌಪದಿಗೆ ಅಕ್ಷಯಾಂಬರವನ್ನು ನೀಡಿ ತನ್ನ
    ಸೋದರತ್ವದ ಋಣವನ್ನು ತೀರಿಸಿದನು ಅನ್ನುವುದು ಮಹಾಭಾರತದ ಕಥೆ. ಹಾಗೆಯೇ ಮುಂದೆ ದ್ರೌಪದಿಯು ಆಸೆ ಪಟ್ಟಂತೆ ಕೃಷ್ಣನು ಕುರುಕ್ಷೇತ್ರದ ಯುದ್ಧವನ್ನು ಪೂರ್ತಿ ಮಾಡಿಕೊಟ್ಟದ್ದೂ ತನ್ನ ಸೋದರಿಯ ಮೇಲಿನ ಪ್ರೀತಿಯಿಂದ.

    ಬಲಿ ಚಕ್ರವರ್ತಿಗೆ ಲಕ್ಷ್ಮಿದೇವಿಯು ರಕ್ಷೆ ಕಟ್ಟಿದ್ದು ಯಾಕೆ?

    ಮಹಾಪರಾಕ್ರಮಿಯಾದ ದಾನವ ಬಲಿ ಚಕ್ರವರ್ತಿಗೆ ಲಕ್ಷ್ಮಿಯು ಕೇಸರಿ ಬಣ್ಣದ ನೂಲಿನ ದಾರವನ್ನು ಕಟ್ಟಿ ಕೈಮುಗಿದು ನಿಲ್ಲುತ್ತಾಳೆ. ಆಗ ಬಲಿಯು ಕರಗಿ ಏನಾಗಬೇಕು ತಂಗಿ? ಎಂದು ಕೇಳುತ್ತಾನೆ. ಆಗ ಲಕ್ಷ್ಮಿಯು ನನ್ನ ಗಂಡ ಮಹಾವಿಷ್ಣುವು ಶಾಪಗ್ರಸ್ತನಾಗಿ ನಿನ್ನ ದ್ವಾರಪಾಲಕ ಆಗಿದ್ದಾನೆ. ಆತನನ್ನು ಬಿಡುಗಡೆ ಮಾಡಿ ಅಣ್ಣ ಎನ್ನುತ್ತಾಳೆ. ಒಂದು ಕ್ಷಣವೂ ವಿಳಂಬ ಮಾಡದೆ ವಿಷ್ಣುವನ್ನು ಬಿಡುಗಡೆ ಮಾಡಿ ಲಕ್ಷ್ಮಿಯ ಜೊತೆಗೆ ವೈಕುಂಠಕ್ಕೆ ಕಳುಹಿಸಿಕೊಟ್ಟನು ಅನ್ನುವುದು ಇನ್ನೊಂದು ಉಲ್ಲೇಖ. ಇಂತಹ ನೂರಾರು ಉಲ್ಲೇಖಗಳು ನಮ್ಮ ಪುರಾಣಗಳಲ್ಲಿ ದೊರೆಯುತ್ತವೆ.

    ರಕ್ಷೆಯ ಐತಿಹಾಸಿಕ ಹಿನ್ನೆಲೆ

    ಭಾರತದ ಮೇಲೆ ಅಲೆಕ್ಸಾಂಡರ್ ದಂಡೆತ್ತಿ ಬಂದಾಗ ಅಳುಕಿದ್ದು ವಾಯುವ್ಯದ ದೊರೆ ಪುರೂರವನ ಬಲಿಷ್ಠ ಸೇನೆಯನ್ನು ನೋಡಿ. ಆಗ ಅಲೆಕ್ಸಾಂಡರನ ಪತ್ನಿ ರೋಕ್ಸಾನಾ ಪುರೂರವನ ಬಳಿಗೆ ಬಂದು ರಕ್ಷೆಯನ್ನು ಕಟ್ಟಿ ಪತಿಯ ಪ್ರಾಣ ಭಿಕ್ಷೆಯನ್ನು ಬೇಡಿದ್ದಳು. ಮುಂದೆ ಯುದ್ಧ ನಡೆದು ಅಲೆಕ್ಸಾಂಡರ್ ಸೋತು ಧರಾಶಾಯಿಯಾದಾಗ ಅದೇ ಪುರೂರವ ಆತನ ಪ್ರಾಣರಕ್ಷೆ ಮಾಡಿ ತನ್ನ ಸೋದರನ ಕರ್ತವ್ಯವನ್ನು ನಿಭಾಯಿಸಿದ್ದನು!

    ಅದೇ ರೀತಿ ರಜಪೂತ ರಾಣಿ ಕರ್ಣಾವತಿಯು ತನ್ನ ಗಂಡನನ್ನು ಕಳೆದುಕೊಂಡರೂ ಧೃತಿಗೆಡದೆ ಮೇವಾಡವನ್ನು ಅಳುತ್ತಿದ್ದಳು. ಆಗ ಗುಜರಾತ್ ದೊರೆ ಬಹಾದ್ದೂರ್ ಶಾ ದುರಾಸೆಯಿಂದ ಮೇವಾಡದ ಮೇಲೆ ದಂಡೆತ್ತಿಕೊಂಡು ಬರುತ್ತಾನೆ. ಆಗ ಅಭಯವನ್ನು ಕೇಳಿ ರಾಣಿಯು ಪತ್ರವನ್ನು ಬರೆದು ರಕ್ಷೆ ಕಳುಹಿಸಿದ್ದು ಮೊಘಲ್ ದೊರೆ ಹುಮಾಯೂನನಿಗೆ. ಅದಕ್ಕೆ ಗೌರವ ಕೊಟ್ಟು ಹುಮಾಯೂನ್ ಆಕೆಯ ರಕ್ಷಣೆಗೆ ಓಡೋಡಿ ಬಂದ ಘಟನೆಯು ಇತಿಹಾಸದಲ್ಲಿ ಇದೆ.

    Raksha Bandhan 2024
    Raksha Bandhan 2024

    ಬಂಗಾಳವನ್ನು ಒಗ್ಗೂಡಿಸಿದ ರಕ್ಷೆ!

    1905ರಲ್ಲಿ ಬ್ರಿಟಿಷರು ಬಲಿಷ್ಠ ಬಂಗಾಳ ಪ್ರಾಂತ್ಯವನ್ನು ಒಡೆದು ಭಾರತೀಯರ ಐಕ್ಯತೆಯನ್ನು ಒಡೆದರು. ಆಗ ಹಿಂದೂ ಮುಸಲ್ಮಾನರು ಬೀದಿಗೆ ಇಳಿದು ಪರಸ್ಪರ ರಕ್ತ ಚೆಲ್ಲುವ ಕೆಲಸ ಆರಂಭ ಆಯಿತು. ಆಗ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರರು ಶ್ರಾವಣ ಹುಣ್ಣಿಮೆಯಂದು ಹಿಂದೂ ಮುಸಲ್ಮಾನರು ಪರಸ್ಪರ ರಕ್ಷೆಯನ್ನು ಕಟ್ಟಿ ಸೋದರತೆಯ ಸಂದೇಶವನ್ನು ಸಾರಬೇಕು ಎಂದು ಕರೆನೀಡಿದರು. ಬ್ರಿಟಿಷ್ ಸರಕಾರ ಈ ಆಚರಣೆಯನ್ನು ತಡೆಯಲು ಶತಪ್ರಯತ್ನ ಮಾಡಿದರೂ ಇಡೀ ಬಂಗಾಳ ರಕ್ಷಾಬಂಧನದ ಹಬ್ಬ ಆಚರಣೆ ಮಾಡಿ ಐಕ್ಯತೆಯ ಸಂದೇಶವನ್ನು ಸಾರಿತು!

    ಕೇಸರಿ ಬಣ್ಣವು ತ್ಯಾಗದ ಸಂಕೇತ, ರಕ್ಷೆಯು ಐಕ್ಯತೆಯ ಸಂಕೇತ

    ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಕೇಸರಿ ಬಣ್ಣವು ತ್ಯಾಗ ಮತ್ತು ಬಲಿದಾನದ ಸಂಕೇತ. ಹಿಂದೆ ಋಷಿಮುನಿಗಳು ಧರಿಸುತ್ತಿದದ್ದು ಕಾವಿ ( ಕೇಸರಿ) ಬಣ್ಣದ ದಿರಿಸು. ಅವರು ಮಾಡುತ್ತಿದ್ದ ಯಜ್ಞದ ಅಗ್ನಿಯ ಬಣ್ಣ ಕೇಸರಿ. ಸೂರ್ಯ ಬೆಳಿಗ್ಗೆ ಉದಯಿಸುವಾಗ, ಸಂಜೆ ಮುಳುಗುವಾಗ ಅದೇ ಕೇಸರಿ ಬಣ್ಣವನ್ನು ಪಡೆಯುತ್ತಾನೆ. ಇಲ್ಲಿನ ಮಣ್ಣಿನ ಬಣ್ಣವೂ ಕೇಸರಿ.

    ಹಾಗೆಯೇ ಹಲವು ನೂಲಿನ ದಾರಗಳನ್ನು ಒಂದೇ ಗಟ್ಟಿ ದಾರದ ಮೂಲಕ ಬಂಧಿಸುವುದೇ ರಕ್ಷೆ. ಅಂದರೆ ಜಾತಿ, ವರ್ಣಬೇಧಗಳನ್ನು ಮೆಟ್ಟಿ ನಿಂತು ಇಡೀ ಹಿಂದೂಸಮಾಜವು ಒಗ್ಗಟ್ಟಾಗಿ ನಿಲ್ಲಬೇಕು ಎನ್ನುವುದು ಈ ರಕ್ಷಾಬಂಧನ ಹಬ್ಬದ ಅಲ್ಟಿಮೇಟ್ ಸಂದೇಶ.

    ಬದಲಾದ ಸಾಮಾಜಿಕ ಘಟ್ಟದಲ್ಲಿ ರಕ್ಷೆ

    ಸ್ತ್ರೀಯು ದುರ್ಬಲಳು ಅಥವಾ ಪರಾಧೀನಳು ಎಂದು ಭಾವಿಸಿದ ಕಾಲ ಒಂದಿತ್ತು. ಈಗ ಕಾಲವು ಸಂಪೂರ್ಣ ಬದಲಾವಣೆ ಆಗಿದೆ. ಈಗ ಸ್ತ್ರೀ ಸ್ವಯಂಭೂ ಶಕ್ತಿಸಂಪನ್ನೆಯಾಗಿ ಇರುವ ಈ ಆಧುನಿಕ ಕಾಲದಲ್ಲಿಯೂ ಆಕೆ ತನ್ನ ಮಾನ, ಪ್ರಾಣ, ಸ್ವಾಭಿಮಾನಗಳ ರಕ್ಷಣೆಗಾಗಿ ರಕ್ಷೆಯನ್ನು ಕಟ್ಟುತ್ತಾಳೆ ಎನ್ನುವುದಕ್ಕಿಂತ ಆ ರಕ್ಷೆಯು ಸೋದರರ ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸಗಳ ಪ್ರತೀಕವಾಗಿ ಬದಲಾಗಿದೆ. ಪ್ರತೀ ವರ್ಷವೂ ಈ ಹಬ್ಬ ಬಂದಾಗ ತನ್ನ ಅಣ್ಣನನ್ನು (ಇಲ್ಲಿ ಮತ್ತೆ ರಕ್ತಸಂಬಂಧ ಮೀರಿದ್ದು ಕೂಡ ಹೌದು) ಹುಡುಕಿಕೊಂಡು ಬಂದು ರಕ್ಷೆ ಕಟ್ಟಿ ,ಆರತಿ ಎತ್ತಿ, ಸಿಹಿ ತಿನ್ನಿಸಿ ಇಡೀ ವರ್ಷ ಅಣ್ಣಾ ಎಂದು ಬಾಯ್ತುಂಬ ಕರೆಯುವ ತಂಗಿಯರ ಸಂಭ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗೆಯೇ ಅಂಚೆಯ ಮೂಲಕ ರಕ್ಷೆ ಕಳುಹಿಸಿಕೊಟ್ಟು ಕೂಡ ಅಣ್ಣನ ನೆನಪು ಮಾಡುವ ಸೋದರಿಯರು ಇದ್ದಾರೆ.

    ಹಾಗೆಯೇ ಅವಳು ನನ್ನ ತಂಗಿ, ಇವಳು ನನ್ನ ತಂಗಿ ಕಣೋ ಎಂದು ಜಂಬದಲ್ಲಿ ಹೇಳಿಕೊಂಡು ಅಂಗೈ ತುಂಬಾ ಕೇಸರಿಯ ರಕ್ಷೆಗಳನ್ನು ಕಟ್ಟಿಕೊಂಡು ಸಂಭ್ರಮಿಸುವ ಅಣ್ಣಂದಿರಿಗೇನೂ ಕಡಿಮೆ ಇಲ್ಲ!

    ಬದಲಾದ ಕಾಲಘಟ್ಟದಲ್ಲಿ ಕೂಡ ಈ ರಕ್ಷಾಬಂಧನದ ಹಬ್ಬವು ಹಿಂದೂ ಸಂಸ್ಕೃತಿಯನ್ನು ಜಾಗೃತಿ ಮಾಡುತ್ತದೆ ಎಂಬ ಕಾರಣಕ್ಕೆ ಪ್ರಾಮುಖ್ಯತೆ ಪಡೆಯುತ್ತದೆ.

    ಇದನ್ನೂ ಓದಿ: ರಾಜಮಾರ್ಗ ಅಂಕಣ: ಕನ್ನಡ ಚಿತ್ರರಂಗದ ಬಂಗಾರದ ಹುಡುಗ ರಿಶಬ್ ಶೆಟ್ಟಿ

    Continue Reading

    ಅಂಕಣ

    ರಾಜಮಾರ್ಗ ಅಂಕಣ: ಕನ್ನಡ ಚಿತ್ರರಂಗದ ಬಂಗಾರದ ಹುಡುಗ ರಿಶಬ್ ಶೆಟ್ಟಿ

    ರಾಜಮಾರ್ಗ ಅಂಕಣ: ರಾಷ್ಟ್ರಪ್ರಶಸ್ತಿಗಳು ಆರಂಭವಾಗಿ 75 ವರ್ಷಗಳಲ್ಲಿ ಕನ್ನಡಕ್ಕೆ ದೊರೆತದ್ದು ಕೇವಲ ನಾಲ್ಕನೆಯ ಪ್ರಶಸ್ತಿ ಇದು! 1975ರಲ್ಲಿ ಚೋಮನ ದುಡಿ ಸಿನೆಮಾದಲ್ಲಿ ಎಂ.ವಿ. ವಾಸುದೇವ್ ರಾವ್, 1986ರಲ್ಲಿ ತಬರನ ಕಥೆ ಸಿನೆಮಾದಲ್ಲಿ ಚಾರುಹಾಸನ್, 2014ರಲ್ಲಿ ನಾನು ಅವನಲ್ಲ, ಅವಳು ಸಿನೆಮಾದಲ್ಲಿ ಸಂಚಾರಿ ವಿಜಯ್ ಈವರೆಗೆ ಅಭಿನಯಕ್ಕಾಗಿ ಪ್ರಶಸ್ತಿಗಳನ್ನು ಗೆದ್ದವರು.

    VISTARANEWS.COM


    on

    ರಾಜಮಾರ್ಗ ಅಂಕಣ kantara Movie
    Koo

    75 ವರ್ಷಗಳಲ್ಲಿ ಕನ್ನಡಕ್ಕೆ ದೊರಕಿದ ಕೇವಲ ನಾಲ್ಕನೇ ಪ್ರಶಸ್ತಿ ಇದು!

    Rajendra-Bhat-Raja-Marga-Main-logo

    :: ರಾಜೇಂದ್ರ ಭಟ್ ಕೆ.

    ರಾಜಮಾರ್ಗ ಅಂಕಣ: ಕೋರೋನಾ ಮಹಾಮಾರಿಯಿಂದ ರಾಡಿ ಆಗಿದ್ದ ಕನ್ನಡದ ಮನಸ್ಸುಗಳಿಗೆ 2022ರಲ್ಲಿ ಒಂದು ಬಿಗ್ ಎಕ್ಸೈಟ್‌ಮೆಂಟ್ ಕೊಡುವ ಸಿನೆಮಾ ಆಗಿ ಬಂದದ್ದು ಕಾಂತಾರ! ಆ ಸಿನೆಮಾ (Kantara Movie) ಯಾವ ರೀತಿ ಹಿಟ್ ಆಯ್ತು ಅಂದರೆ ನೋಡಿದವರೇ ಮತ್ತೆ ಮತ್ತೆ ನೋಡಿದರು. ಹೊಂಬಾಳೆ ಫಿಲಂಸ್ (Hombale Films) ಕೇವಲ 16 ಕೋಟಿ ದುಡ್ಡಲ್ಲಿ ನಿರ್ಮಾಣ ಮಾಡಿದ ಈ ಸಿನೆಮಾ 450 ಕೋಟಿ ದುಡಿಯಿತು! ಆರಂಭದಲ್ಲಿ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಆದ ಸಿನೆಮಾ ಒಂದು ವರ್ಷದ ಅವಧಿಯಲ್ಲಿ ತಮಿಳು, ತೆಲುಗು, ಮಲಯಾಳಂ, ತುಳು, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಡಬ್ ಅಥವಾ ರೀಮೇಕ್ ಆಗಿ ಪಾನ್ ಇಂಡಿಯಾ ಹಿಟ್ ಆಯ್ತು. ರಿಷಬ್ ಶೆಟ್ಟಿ (Rishab Shetty) ಪಾನ್ ಇಂಡಿಯಾ ಸ್ಟಾರ್ (Pan India) ಆದರು. ಕನ್ನಡದಲ್ಲಿ ಅತೀ ಹೆಚ್ಚು ದುಡ್ಡು ಮಾಡಿದ ಎರಡನೇ ಸಿನಿಮಾ ಆಗಿ ಕಾಂತಾರ ರಿಜಿಸ್ಟರ್ ಆಯ್ತು. ಅದರಲ್ಲಿ ಮೂಡಿಬಂದಿದ್ದ ಗ್ರಾಮೀಣ ಸೊಗಡಿನ ದೃಶ್ಯಗಳು, ಕರಾವಳಿಯ ಸಂಸ್ಕೃತಿ ಮತ್ತು ದೈವದ ಮೇಲಿನ ನಂಬಿಕೆ, ಸುಂದರವಾದ ಹಾಡುಗಳು ಎಲ್ಲವೂ ಅದ್ಭುತವಾಗಿಯೇ ಇದ್ದವು.

    ಆ ಸಿನೆಮಾದ ಮಾಸ್ಟರ್ ಬ್ರೈನ್ ಮತ್ತು ಸ್ಟಾರ್ ಆಕರ್ಷಣೆ ಆಗಿದ್ದರು ರಿಶಭ್! 80% ಸ್ಥಳೀಯ ಕಲಾವಿದರು ಅದ್ಭುತವಾಗಿ ಅಭಿನಯ ಮಾಡಿದ್ದು ಕೂಡ ಸಿನೆಮಾದ ಹೆಚ್ಚುಗಾರಿಕೆ.

    75 ವರ್ಷಗಳಲ್ಲಿ ಕನ್ನಡಕ್ಕೆ ಇದು ಕೇವಲ 4ನೆಯ ರಾಷ್ಟ್ರಪ್ರಶಸ್ತಿ!

    ಶುಕ್ರವಾರ 70ನೆಯ ಸಿನೆಮಾ ರಾಷ್ಟ್ರಪ್ರಶಸ್ತಿಗಳ ಘೋಷಣೆ ಆಗಿದ್ದು ಕಾಂತಾರ ಸಿನೆಮಾಕ್ಕೆ 2 ಪ್ರಶಸ್ತಿಗಳು ದೊರೆತಿವೆ. ಅದರಲ್ಲಿ ಬೆಲೆ ಕಟ್ಟಲು ಸಾಧ್ಯವೇ ಇಲ್ಲದ್ದು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ! ಏಕೆಂದರೆ ರಾಷ್ಟ್ರಪ್ರಶಸ್ತಿಗಳು ಆರಂಭವಾಗಿ 75 ವರ್ಷಗಳಲ್ಲಿ ಕನ್ನಡಕ್ಕೆ ದೊರೆತದ್ದು ಕೇವಲ ನಾಲ್ಕನೆಯ ಪ್ರಶಸ್ತಿ ಇದು! 1975ರಲ್ಲಿ ಚೋಮನ ದುಡಿ ಸಿನೆಮಾದಲ್ಲಿ ಎಂ.ವಿ. ವಾಸುದೇವ್ ರಾವ್, 1986ರಲ್ಲಿ ತಬರನ ಕಥೆ ಸಿನೆಮಾದಲ್ಲಿ ಚಾರುಹಾಸನ್, 2014ರಲ್ಲಿ ನಾನು ಅವನಲ್ಲ, ಅವಳು ಸಿನೆಮಾದಲ್ಲಿ ಸಂಚಾರಿ ವಿಜಯ್ ಈವರೆಗೆ ಅಭಿನಯಕ್ಕಾಗಿ ಪ್ರಶಸ್ತಿಗಳನ್ನು ಗೆದ್ದವರು. ಕನ್ನಡಕ್ಕೆ ರಿಶಭ್ ಶೆಟ್ಟಿ ಮೂಲಕ ನಾಲ್ಕನೆಯ ರಾಷ್ಟ್ರಪ್ರಶಸ್ತಿಯು ಈ ವಿಭಾಗದಲ್ಲಿ ಬಂದಿದೆ. ಅದರಲ್ಲಿಯೂ ರಿಶಭ್ ಈ ಬಾರಿ ಮಲಯಾಳಂ ಲೆಜೆಂಡ್ ನಟ ಮಮ್ಮುಟ್ಟಿ ಜೊತೆಗೆ ಸ್ಪರ್ಧೆಯಲ್ಲಿ ಇದ್ದರು ಅಂದಾಗ ಪ್ರಶಸ್ತಿಯ ಮೌಲ್ಯವು ಭಾರೀ ಎತ್ತರಕ್ಕೆ ತಲುಪುತ್ತದೆ. ಕಾಂತಾರ ಸಿನೆಮಾ ನೋಡಿದವರು ಆಗಲೇ ಕಾಡಬೆಟ್ಟು ಶಿವನ ಅಭಿನಯಕ್ಕೆ ಫಿದಾ ಆಗಿದ್ದರು. ಅದರಲ್ಲಿಯೂ ಸಿನೆಮಾದ ಕೊನೆಯ 20 ನಿಮಿಷಗಳ ಕ್ಲೈಮ್ಯಾಕ್ಸ್ ಕನ್ನಡಕ್ಕೆ ಹೊಸದಾಗಿತ್ತು. ಅದು ಮೈ ರೋಮಾಂಚನ ಮಾಡುವ ಅಭಿನಯ ಆಗಿತ್ತು. ಅದಕ್ಕೆ ಅರ್ಹವಾಗಿ ರಿಶಭ್ ಶೆಟ್ಟರಿಗೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಅದರಲ್ಲಿ ಕೂಡ ತಾನೇ ನಿರ್ದೇಶಿಸಿ, ಅಭಿನಯ ಮಾಡಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ನಟ ಎನ್ನುವ ಕೀರ್ತಿ ನಮ್ಮ ಕುಂದಾಪುರದ ಹೈದನಿಗೆ ಸಿಕ್ಕಿದೆ. ಇನ್ನೇನು ಬೇಕು?

    Rishab Shetty cinema Journey before Kantara
    Kantara Movie Massive Set Constructed In Kundapura

    ರಿಶಭ್ ಸಾಗಿ ಬಂದ ದಾರಿ ಕೇವಲ ಹೂವಿನದ್ದು ಆಗಿರಲಿಲ್ಲ!

    1983ರಲ್ಲಿ ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ರಿಶಭ್ ಶೆಟ್ಟಿ ಅಲ್ಲಿಯೇ ತಮ್ಮ ಬಾಲ್ಯವನ್ನು, ಶಿಕ್ಷಣವನ್ನು ಸಂಭ್ರಮಿಸಿದವರು. ಮುಂದೆ ಪದವಿ ಪಡೆಯಲು ಬೆಂಗಳೂರು ವಿಜಯಾ ಕಾಲೇಜಿಗೆ ಸೇರಿದಾಗ ನಾಟಕ, ಯಕ್ಷಗಾನಗಳ ಸೆಳೆತ ತೀವ್ರವಾಯಿತು. ಹೊಟ್ಟೆಪಾಡಿಗಾಗಿ ನೀರಿನ ಬಾಟಲಿ ವ್ಯಾಪಾರ, ಸಣ್ಣ ಹೋಟೆಲ್, ರಿಯಲ್ ಎಸ್ಟೇಟ್ ಮಾಡಿದರೂ ವ್ಯವಹಾರ ಕೈಗೆ ಹತ್ತಲಿಲ್ಲ. ಸಿನೆಮಾಗಳ ಮೂಲಕವೇ ಅದೃಷ್ಟ ಪರೀಕ್ಷೆ ಮಾಡಬೇಕು ಎಂದು ನಿರ್ಧರಿಸಿ ಆರಂಭದಲ್ಲಿ ಕ್ಲಾಪ್ ಬಾಯ್, ಸ್ಪಾಟ್ ಬಾಯ್, ಸಹಾಯಕ ನಿರ್ದೇಶಕ…..ಹೀಗೆಲ್ಲ ಮುಂದುವರೆದರು. ಸಿನೆಮಾ ನಿರ್ದೇಶನದಲ್ಲಿ ಡಿಪ್ಲೊಮಾ ಪದವಿ ಪಡೆದದ್ದು ಇದೇ ಹಸಿವಿನ ದಿನಗಳಲ್ಲಿ!

    ಆಗ ಅವರಿಗೆ ದೊರೆತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಗೆಳೆತನ ಅವರ ಬದುಕಿನ ದಾರಿಯನ್ನೇ ಬದಲಾಯಿಸಿತು. ಈ ಇಬ್ಬರು ಶೆಟ್ಟರು ಸೇರಿ ಕನ್ನಡ ಸಿನೆಮಾಗಳನ್ನು ನೆಕ್ಸ್ಟ್ ಲೆವಲಿಗೆ ತೆಗೆದುಕೊಂಡು ಹೋಗುವ ಕನಸು ಕಂಡರು.

    2012, ಸ್ಪ್ಲೆಂಡರ್ ಬೈಕ್, ಗೆಳೆಯರು ಮತ್ತು ತುಫಲಕ್!

    ಇಬ್ಬರು ಶೆಟ್ಟರು ತುಂಬಾ ಆಸೆ ಪಟ್ಟು ಮಾಡಿದ ಸಿನೆಮಾ ಅಂದರೆ ಅದು ತುಘಲಕ್. ಅದರ ಮೊದಲ ದಿನ ಸಿನೆಮಾ ಥಿಯೇಟರಗೆ ಬೈಕಲ್ಲಿ ಬಂದು ಗೆಳೆಯರು ಸಿಗರೇಟ್ ಸೇದುತ್ತಾ ಪ್ರೇಕ್ಷಕರನ್ನು ಕಾದು ನಿಂತಿದ್ದರು. ಎಷ್ಟು ಸಿಗರೇಟ್ ಖಾಲಿಯಾದರೂ ಥಿಯೇಟರಿಗೆ ಪ್ರೇಕ್ಷಕರೇ ಬರಲಿಲ್ಲ! ಇದು ರಿಶಭ್ ಅವರ ಓಪನಿಂಗ್ ಇನ್ನಿಂಗ್ಸ್! ಮುಂದೆ ಲೂಸಿಯಾ, ಉಳಿದವರು ಕಂಡಂತೆ, ರಿಕ್ಕಿ ಯಾವುದೂ ಆರ್ಥಿಕವಾಗಿ ಗೆಲ್ಲಿಸಲಿಲ್ಲ. ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿ ಅವರಿಗೆ ಭಾರೀ ಬ್ರೇಕ್ ಕೊಟ್ಟರೂ ದುಡ್ಡು ಮಾಡಲಿಲ್ಲ. ರಿಶಭ್ ಹೀರೋ ಆಗಿ ಅಭಿನಯಿಸಿದ ಬೆಲ್ ಬಾಟಮ್ ಸಿನೆಮಾ ನಿರ್ಮಾಪಕರನ್ನು ಗೆಲ್ಲಿಸಿತ್ತು.

    ಕಿಸೆ ಮತ್ತು ಹೊಟ್ಟೆ ಖಾಲಿಯಾದಾಗ ಹೆಚ್ಚು ಕ್ರಿಯೇಟಿವ್ ಯೋಚನೆಗಳು ಬರುತ್ತವೆ ಎನ್ನುತ್ತಾರೆ ರಿಶಭ್! ಎಂತಹ ಬಿಕ್ಕಟ್ಟು ಬಂದಾಗಲೂ ರಿಶಭ್ ಮತ್ತು ರಕ್ಷಿತ್ ಧೈರ್ಯ ಕೆಡಲಿಲ್ಲ ಮತ್ತು ಗೆಳೆತನ ಬಿಡಲಿಲ್ಲ.

    Kantara Movie Massive Set Constructed In Kundapura
    Kantara Movie Massive Set Constructed In Kundapura

    ಕಿರಿಕ್ ಪಾರ್ಟಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ!

    ವರ್ಷಾನುಗಟ್ಟಲೆ ಸ್ಕ್ರಿಪ್ಟ್ ಬರೆದು ಆಸ್ತೆಯಿಂದ ಮಾಡಿದ ಸಿನೆಮಾಗಳು ಇವು. ಇಬ್ಬರು ಶೆಟ್ಟರು ಸೇರಿ ಮಾಡಿದ ಇವೆರಡೂ ಸಿನೆಮಾಗಳು ಸಾಂಡಲ್ ವುಡನಲ್ಲಿ ಸುನಾಮಿಯನ್ನೇ ಕ್ರಿಯೇಟ್ ಮಾಡಿದವು. ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳು ಹರಿದು ಬಂದವು. ಹಿಂದಿನ ಸಿನೆಮಾಗಳಲ್ಲಿ ಕೈಕೊಟ್ಟಿದ್ದ ಅದೃಷ್ಟವು ಈಗ ಕೈ ಹಿಡಿಯಿತು.

    ಆಗ ಇನ್ನೊಬ್ಬ ಸೃಜನಶೀಲವಾಗಿ ಯೋಚನೆ ಮಾಡುವ ಶೆಟ್ಟರು ಈ ತಂಡವನ್ನು ಸೇರಿಕೊಂಡರು. ಅದು ರಾಜ್ ಬಿ ಶೆಟ್ಟಿ! ಇವರ ಕಾಂಬಿನೇಶನ್ ಕನ್ನಡ ಸಿನೆಮಾ ಉದ್ಯಮವನ್ನು ಭಾರೀ ಎತ್ತರಕ್ಕೆ ತೆಗೆದುಕೊಂಡು ಹೋಯಿತು. ರಿಶಭ್ ಶೆಟ್ಟರಿಗೆ ಲಕ್ ಖುಲಾಯಿಸಿತು. ಇದೀಗ ಅವರ ಪ್ರತಿಭೆಗೆ ನ್ಯಾಶನಲ್ ಅವಾರ್ಡ್ ಕೂಡ ಒಲಿದಿದೆ. ಮುಂದಿನ ಹತ್ತಾರು ವರ್ಷಗಳ ಕಾಲ ಈ ಮೂವರು ಗೆಳೆಯರು ಸಾಂಡಲ್ ವುಡನ್ನು ರೂಲ್ ಮಾಡುವುದು ಖಂಡಿತ. ರಾಷ್ಟ್ರಪ್ರಶಸ್ತಿ ಗೆದ್ದ ರಿಶಭ್ ಶೆಟ್ಟರಿಗೆ ಅಭಿನಂದನೆಗಳು.

    ಈ ಬಾರಿ ಕನ್ನಡದ ನಾಲ್ಕು ಸಿನೆಮಾಗಳಿಗೆ ದೊರೆತಿವೆ 7 ರಾಷ್ಟ್ರಪ್ರಶಸ್ತಿಗಳು!

    ಕಳೆದ ಒಂದೆರಡು ವರ್ಷಗಳಿಂದ ಪ್ರಖರ ಸೂರ್ಯನಿಗೆ ಮೋಡ ಮುಸುಕಿದ ಹಾಗೆ ಆಗಿದ್ದ ಕನ್ನಡ ಚಿತ್ರರಂಗಕ್ಕೆ ಚೇತೋಹಾರಿ ಸುದ್ದಿ ಇದು. ಬಹಳ ಶ್ರಮದಿಂದ ಜನರ ಮುಂದೆ ಬಂದ ಕೆ ಜಿ ಎಫ್ (ಚಾಪ್ಟರ್ 2) ಚಿತ್ರಕ್ಕೆ ಕೂಡ ಎರಡು ಪ್ರಶಸ್ತಿಗಳು ಬಂದಿವೆ.

    ಪ್ರಶಸ್ತಿ ಗೆದ್ದ ಎಲ್ಲ ಸಿನೆಮಾಗಳಿಗೆ ನಮ್ಮ ಅಭಿನಂದನೆ ಇರಲಿ. ಅಲ್ಲವೇ?

    ಇದನ್ನೂ ಓದಿ: ರಾಜಮಾರ್ಗ ಅಂಕಣ: ಪದಕವೊಂದೇ ಲಕ್ಷ್ಯ – ಲಕ್ಷ್ಯ ಸೇನ್!

    Continue Reading

    ಅಂಕಣ

    ರಾಜಮಾರ್ಗ ಅಂಕಣ: ಪದಕವೊಂದೇ ಲಕ್ಷ್ಯ – ಲಕ್ಷ್ಯ ಸೇನ್!

    ರಾಜಮಾರ್ಗ ಅಂಕಣ: ಇಡೀ ಕೋರ್ಟಿನಲ್ಲಿ ಚಿರತೆಯಂತೆ ಪಾದ ಚಲನೆ ಹೊಂದಿರುವ ಲಕ್ಷ್ಯ ಸೇನ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸನಲ್ಲಿ ಒಂದು ಪದಕಕ್ಕೆ ಲಕ್ಷ್ಯ ಇಡುವುದನ್ನು ಯಾರೂ ತಡೆಯಲು ಅಸಾಧ್ಯ ಎನ್ನುವುದು ಭಾರತೀಯರ ನಂಬಿಕೆ.

    VISTARANEWS.COM


    on

    lakshya sen ರಾಜಮಾರ್ಗ ಅಂಕಣ
    Koo

    ಭಾರತದ ಬ್ಯಾಡ್ಮಿಂಟನ್ ಭರವಸೆಗೆ ಇಂದು ಹುಟ್ಟಿದ ಹಬ್ಬ(ಆಗಸ್ಟ್ 16)

    Rajendra-Bhat-Raja-Marga-Main-logo

    ರಾಜಮಾರ್ಗ ಅಂಕಣ: ಮೊನ್ನೆ ಮುಗಿದುಹೋದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics 2024) ಭಾರತದ (India) ಕನಿಷ್ಠ ಆರು ಕ್ರೀಡಾಪಟುಗಳು ಕೂದಲೆಳೆಯ ಅಂತರದಲ್ಲಿ ಪದಕ ಮಿಸ್ ಮಾಡಿದ್ದರು. ಅದರಲ್ಲಿ ಒಂದು ಪ್ರಮುಖವಾದ ಹೆಸರು ಬ್ಯಾಡ್ಮಿಂಟನ್ (Badminton) ಪ್ರತಿಭೆ ಲಕ್ಷ್ಯ ಸೇನ್ (Lakshya Sen) . ಈ ಒಲಿಂಪಿಕ್ಸ್ ಕೂಟದಲ್ಲಿ ವಿಶ್ವ ಚಾಂಪಿಯನ್ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್ ( Victor Axelsen)ಗೆ ಬೆವರು ಇಳಿಸಿದ ಕೀರ್ತಿ ಈತನದ್ದು. ಇಂದಾತನಿಗೆ 24ನೇ ಹುಟ್ಟಿದ ಹಬ್ಬ (2001,ಆಗಸ್ಟ್ 16).

    ಭಾರತದ ಬ್ಯಾಡ್ಮಿಂಟನ್ ಭರವಸೆ – ಲಕ್ಷ್ಯ ಸೇನ್

    ಉತ್ತರಾಖಂಡ್ ರಾಜ್ಯದ ಅಲ್ಮೋರ ಎಂಬ ನಗರದಲ್ಲಿ ಹುಟ್ಟಿದ ಈತನಿಗೆ ಬಾಲ್ಯದಿಂದಲೂ ಅಪ್ಪ ಡಿ ಕೆ ಸೇನ್ ಅವರೇ ಕೋಚ್. ಹಾಗೆಯೇ ಆತನಿಗೆ ಲೆಜೆಂಡ್ ಪ್ರಕಾಶ್ ಪಡುಕೋಣೆ ಅವರೇ ಸ್ಫೂರ್ತಿ. ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಸಾಗಿದ ದಾರಿಯಲ್ಲಿ ಬೆಳೆಯಬೇಕು ಎಂದು ಹುರುಪು ತುಂಬಿದ್ದೇ ಅಪ್ಪ. ಈ ಹುಡುಗ ಕಠಿಣ ಪರಿಶ್ರಮಿ. ಬೆವರು ಹರಿಸುವುದರಲ್ಲಿ ಹೆಚ್ಚು ನಂಬಿಕೆ. ಈಗ ಅವನ ಕೋಚ್ ಆಗಿರುವ ವಿಮಲ್ ಕುಮಾರ್ ಹೇಳಿದ ಪ್ರತೀಯೊಂದು ಮಾತು ವೇದವಾಕ್ಯ. ‘ನಿನ್ನ ಹಿಂಗೈ ಹೊಡೆತ ಸ್ವಲ್ಪ ವೀಕ್ ಇದೆ ಹುಡುಗಾ’ ಎಂದು ಕೋಚ್ ಹೇಳಿದರೆ ‘ಮೂರು ದಿನ ಟೈಮ್ ಕೊಡಿ ಸರ್. ಸರಿ ಮಾಡಿಕೊಂಡು ಬರುತ್ತೇನೆ ‘ ಎಂದವನು. ನುಡಿದಂತೆಯೇ ನಡೆದವನು.

    ಕೋಚ್ ಆತನಿಗೆ ಹೇಳಿದ ಮಾತುಗಳು

    ಬ್ಯಾಡ್ಮಿಂಟನ್ ಆಟಕ್ಕೆ ದೇಹದ ಕಸುವು ತುಂಬಾ ಮುಖ್ಯ. ಫೋಕಸ್ ಅದಕ್ಕಿಂತ ಮುಖ್ಯ. ಕೊನೆಯ ಸರ್ವಿಸ್ ತನಕ ಆಟವನ್ನು ಕೈ ಚೆಲ್ಲಬಾರದು. ಎಷ್ಟು ಪಾಯಿಂಟ್ ಹಿಂದೆ ಇದ್ದರೂ ನಿನಗೆ ಕಮ್ ಬ್ಯಾಕ್ ಮಾಡಲು ಅವಕಾಶ ಇರುತ್ತದೆ. ಎದುರಾಳಿ ಎಷ್ಟು ಬಲಿಷ್ಠ ಎಂದು ತಲೆಗೆ ತೆಗೆದುಕೊಳ್ಳಬಾರದು. ನಿನ್ನ ಸಾಮರ್ಥ್ಯಗಳ ಮೇಲೆ ಭರವಸೆ ಇಟ್ಟು ಆಡು – ಇದು ಅವರ ಕೋಚ್ ಪದೇ ಪದೇ ಹೇಳುತ್ತಿದ್ದ ಮಾತುಗಳು. ಪ್ಯಾರಿಸ್ ಒಲಿಂಪಿಕ್ಸನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ವಿಕ್ಟರ್ ಅವರನ್ನು
    ಎದುರಿಸುವಾಗಲೂ ಕಿವಿಯಲ್ಲಿ ರಿಬೌಂಡ್ ಆಗ್ತಾ ಇದ್ದದ್ದು ಕೋಚ್ ಹೇಳಿದ ಈ ಮಾತುಗಳೇ.

    ಪ್ರಕಾಶ್ ಪಡುಕೋಣೆ – ನನ್ನ ಸ್ಫೂರ್ತಿ ದೇವತೆ

    ಯಾಕೆಂದರೆ ಒಂದು ಕಾಲದಲ್ಲಿ ಇಂಡೋನೇಷಿಯಾ ಮತ್ತು ಚೀನಾ ಪ್ರಭುತ್ವ ಸ್ಥಾಪನೆ ಮಾಡಿದ್ದ ಈ ಕ್ರೀಡೆಯನ್ನು ಭಾರತದ ಮಗ್ಗುಲಿಗೆ ತಂದವರೇ ಪಡುಕೋಣೆ ಸರ್. 80ರ ದಶಕದಲ್ಲಿ ಅವರು ವರ್ಲ್ಡ್ ನಂಬರ್ ಒನ್ ಆಗಿದ್ದರು ಮತ್ತು ಅದೇ ವರ್ಷ ಅವರು ಆಲ್ ಇಂಗ್ಲೆಂಡ್ ಓಪನ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾದರು. ಆವಾಗ ಲಕ್ಷ್ಯ ಸೇನ್ ಹುಟ್ಟಿರಲೇ ಇಲ್ಲ. ಮುಂದೆ ಅವರನ್ನು ಅವರ ಟ್ರೈನಿಂಗ್ ಆಕಾಡೆಮಿಯಲ್ಲಿ ಭೇಟಿ ಆದಾಗ ಅವರು ಕೊಟ್ಟ ಟಿಪ್ಸ್, ಆಶೀರ್ವಾದ ನನ್ನನ್ನು ಬೆಳೆಸುತ್ತಿದೆ. ನಾನು ಅವರಿಗೆ ಆಭಾರಿ ಎನ್ನುತ್ತಾರೆ ನಮ್ಮ ಚಾಂಪ್.

    ಈ ಬಾರಿ ಪ್ಯಾರಿಸ್ ಒಲಿಂಪಿಕ್ಸನಲ್ಲಿ..

    ಪ್ರತೀಯೊಂದು ಪಂದ್ಯವು ಅವರಿಗೆ ಸ್ಪರ್ಧಾತ್ಮಕವಾಗಿಯೇ ಇತ್ತು. ಅವುಗಳನ್ನು ಗೆದ್ದು ಸೆಮೀಸ್ ಪ್ರವೇಶ ಮಾಡಿದಾಗ ಭಾರತಕ್ಕೆ ಒಂದಾದರೂ ಪದಕವನ್ನು ಗೆಲ್ಲಬೇಕು ಎಂಬ ಕನಸು ಸ್ಟ್ರಾಂಗ್ ಆಗಿತ್ತು. ಆದರೆ ಪಂದ್ಯದ ಆರಂಭದಲ್ಲಿಯೇ ಮೊಣಕೈಗೆ ಬಲವಾದ ಗಾಯವಾಗಿ ರಕ್ತ ಸುರಿಯಲು ಆರಂಭವಾಯಿತು. ಹಲವು ಬಾರಿ ಫಿಸಿಯೋ ಮೈದಾನಕ್ಕೆ ಕಿಟ್ ತೆಗೆದುಕೊಂಡು ಬಂದರೂ ನೋವು ಕಡಿಮೆ ಆಗಲಿಲ್ಲ. ಆದರೂ ವಿಶ್ವ ಚಾಂಪಿಯನ್ ಆಟಗಾರನಿಗೆ ಫೈಟ್ ಕೊಟ್ಟ ತೃಪ್ತಿ ಇದೆ. ಭಾರತಕ್ಕೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ನೋವು ಅದಕ್ಕಿಂತ ದೊಡ್ಡದು. ಮುಂದಿನ ಒಲಿಂಪಿಕ್ಸ್ ಕೂಟಕ್ಕೆ ಈಗಿನಿಂದಲೇ ಸಿದ್ಧತೆ ಮಾಡುತ್ತೇನೆ ಎಂದು ಲಕ್ಷ್ಯ ಸೇನ್ ಹೇಳಿದ್ದಾರೆ.

    ಆತನ ಬಗ್ಗೆ ವಿಶ್ವಚಾಂಪಿಯನ್ ವಿಕ್ಟರ್ ಹೇಳಿದ ಮಾತುಗಳು ಇನ್ನೂ ಸ್ಫೂರ್ತಿದಾಯಕ ಆಗಿವೆ. ʼನಾನು ಇದುವರೆಗೂ ಎದುರಿಸಿದ ಅತ್ಯಂತ ಕಠಿಣ ಸ್ಪರ್ಧಿ ಎಂದರೆ ಲಕ್ಷ್ಯ ಸೇನ್. ಆತನಿಗೆ ಉಜ್ವಲ ಭವಿಷ್ಯ ಇದೆ. ಮುಂದಿನ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ನಾನು ಇರುವುದಿಲ್ಲ. ಆತನು ಖಂಡಿತವಾಗಿ ಪದಕ ಗೆಲ್ಲುವ ಫೇವರಿಟ್ ಆಗಿರುತ್ತಾನೆ!’ ಈ ಮಾತುಗಳು ಪದಕಕ್ಕಿಂತ ಹೆಚ್ಚು ಮೌಲ್ಯ ಹೊಂದಿವೆ ಎಂದು ನಿಮಗೆ ಅನ್ನಿಸುತ್ತದೆಯಾ?

    ಅದ್ಭುತವಾದ ಟ್ರಾಕ್ ರೆಕಾರ್ಡ್

    ವರ್ಲ್ಡ್ ಜ್ಯೂನಿಯರ್ ವಿಭಾಗದಲ್ಲಿ ಆತನು ನಂಬರ್ ಒನ್ ರಾಂಕ್ ಹೊಂದಿದ್ದ ಆಟಗಾರ. ಯೂತ್ ಒಲಿಂಪಿಕ್ಸನಲ್ಲಿ ಎರಡು ಪದಕ, ವರ್ಲ್ಡ್ ಚಾಂಪಿಯನ್ ಶಿಪ್ ಕೂಟದಲ್ಲಿ ಕಂಚಿನ ಪದಕ, ಥಾಮಸ್ ಕಪ್, ಕಾಮನ್ ವೆಲ್ತ್ ಗೇಮ್ಸ್, ಏಷಿಯನ್
    ಬ್ಯಾಡ್ಮಿಮಿಂಟನ್ ಕೂಟ…ಎಲ್ಲ ಕಡೆಯಲ್ಲಿಯೂ ಲಕ್ಷ್ಯ ಸೇನ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಈಗಾಗಲೇ ಒಟ್ಟು 15 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಅವರ ಸಕ್ಸೆಸ್ ರೇಟ್ 236 ಗೆಲುವು/102 ಸೋಲು! ಇಂದಿನ ದಿನಕ್ಕೆ ಆತನ ವರ್ಲ್ಡ್ ರಾಂಕಿಂಗ್ 16. ಅದು ಇಂಪ್ರೂವ್ ಆಗ್ತಾ ಇದೆ ಅನ್ನೋದು ನಮಗೆ ಸಿಹಿಸುದ್ದಿ.

    ಐದು ಅಡಿ 10 ಇಂಚು ಎತ್ತರದ, ಅಹಂಕಾರದ ಸೊಂಕೂ ಇಲ್ಲದ, ಕೀರ್ತಿ ಶನಿ ಇನ್ನೂ ತಲೆಗೆ ಹತ್ತದೆ ಇರುವ, ಬಲಿಷ್ಠ ಹಿಂಗೈ ಮತ್ತು ಮುಂಗೈ ಹೊಡೆತಗಳ ಆಟಗಾರ, ಇಡೀ ಕೋರ್ಟಿನಲ್ಲಿ ಚಿರತೆಯಂತೆ ಪಾದ ಚಲನೆ ಹೊಂದಿರುವ ಲಕ್ಷ್ಯ ಸೇನ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸನಲ್ಲಿ ಒಂದು ಪದಕಕ್ಕೆ ಲಕ್ಷ್ಯ ಇಡುವುದನ್ನು ಯಾರೂ ತಡೆಯಲು ಅಸಾಧ್ಯ ಎನ್ನುವುದು ಭಾರತೀಯರ ನಂಬಿಕೆ.

    ಆಲ್ ದ ಬೆಸ್ಟ್ ಮತ್ತು ಹ್ಯಾಪಿ ಬರ್ತಡೇ ಚಾಂಪಿಯನ್.

    ಇದನ್ನೂ ಓದಿ: ರಾಜಮಾರ್ಗ ಅಂಕಣ: ಸ್ವಾತಂತ್ರ್ಯದ ಕನವರಿಕೆಯಲ್ಲಿ ಮಿಂದೆದ್ದ ಭಾರತ

    Continue Reading
    Advertisement
    Rishab Shetty
    ಪ್ರಮುಖ ಸುದ್ದಿ15 mins ago

    Rishab Shetty : ಭಾರತವನ್ನು ಕೆಟ್ಟದಾಗಿ ತೋರಿಸುವ ಸಿನಿಮಾಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ ರಿಷಭ್‌ ಶೆಟ್ಟಿ

    food poisoning tumkur
    ತುಮಕೂರು30 mins ago

    Food Poisoning: ಬೀಗರೂಟ ಸೇವಿಸಿ ಮನೆಗೆ ಬಂದವರು ಅಸ್ವಸ್ಥ; 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಪಾಲು

    PM Modi to visits US
    ಪ್ರಮುಖ ಸುದ್ದಿ47 mins ago

    PM Modi US Visit : ಸೆಪ್ಟೆಂಬರ್‌ನಲ್ಲಿ ಅಮೆರಿಕ ಪ್ರವಾಸ ಮಾಡಲಿದ್ದಾರೆ ಮೋದಿ; ಅಮೆರಿಕ ಚುನಾವಣೆ ನಡುವೆ ಕುತೂಹಲ ಮೂಡಿಸಿದೆ ಅವರ ಭೇಟಿ

    Job Alert
    ಕರ್ನಾಟಕ55 mins ago

    Banking Recruitment 2024: ರಾಷ್ಟ್ರೀಯ ಬ್ಯಾಂಕ್‌‌ಗಳಲ್ಲಿ 4455 ಹುದ್ದೆಗೆ ನೇಮಕ: ಅರ್ಜಿ ಸಲ್ಲಿಸಲು ಇಂದು ಅಂತಿಮ ದಿನ

    Bharat Bandh today;
    ಪ್ರಮುಖ ಸುದ್ದಿ1 hour ago

    Bharat Bandh today : ಇಂದು ಭಾರತ್ ಬಂದ್‌; ಯಾವೆಲ್ಲಾ ಸೇವೆ ಇರುತ್ತೆ? ಏನಿರೋದಿಲ್ಲ? ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್‌

    Worlds Oldest Office Worker
    ವಿದೇಶ1 hour ago

    Worlds Oldest Office Worker: ನಿವೃತ್ತಿ ಬಗ್ಗೆ ಇನ್ನೂ ಯೋಚನೆಯನ್ನೇ ಮಾಡಿಲ್ಲವಂತೆ 94ರ ಈ ಅಜ್ಜಿ!

    sanjoy roy Kolkata Doctor Murder Case
    ಕ್ರೈಂ1 hour ago

    Kolkata Doctor Murder Case: ಕೋಲ್ಕತಾ ವೈದ್ಯೆಯ ಅತ್ಯಾಚಾರ- ಕೊಲೆ ಎಸಗುವ ಮುನ್ನ 2 ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಕಾಮುಕ!

    Lashkar-e-Taiba
    ಪ್ರಮುಖ ಸುದ್ದಿ2 hours ago

    Lashkar-e-Taiba : ಎಲ್ಇಟಿ- ಹಮಾಸ್ ಒಂದಾಗುತ್ತಿದೆಯೇ? ಜಾಗತಿಕ ಆತಂಕ ತಂದಿಟ್ಟ ಉಗ್ರಗಾಮಿ ಸಂಘಟನೆಗಳ ಮುಖ್ಯಸ್ಥರ ಭೇಟಿ

    cm siddaramaiah
    ಪ್ರಮುಖ ಸುದ್ದಿ2 hours ago

    CM Siddaramaiah: ಮುಡಾ ತನಿಖೆಯಿಂದ ರಿಲೀಫ್‌ ಪಡೆದ ಸಿಎಂ ಸಿದ್ದರಾಮಯ್ಯ ಅವರಿಂದ ಇಂದು ಕೃಷ್ಣೆಗೆ ಬಾಗಿನ

    Viral Video
    ವೈರಲ್ ನ್ಯೂಸ್2 hours ago

    Viral Video: ಥೇಟ್‌ ನಮ್ಮದೇ ಕೈಬರಹದಂತೆ ಬರೆಯುತ್ತದೆ ಈ ಯಂತ್ರ!

    Sharmitha Gowda in bikini
    ಕಿರುತೆರೆ11 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ10 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Bigg Boss- Saregamapa 20 average TRP
    ಕಿರುತೆರೆ10 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    Kannada Serials
    ಕಿರುತೆರೆ11 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    galipata neetu
    ಕಿರುತೆರೆ9 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ11 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ10 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ8 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    Kannada Serials
    ಕಿರುತೆರೆ11 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    varun
    ಕಿರುತೆರೆ9 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    karnataka Weather Forecast
    ಮಳೆ2 weeks ago

    Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

    Bellary news
    ಬಳ್ಳಾರಿ2 weeks ago

    Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

    Maravoor bridge in danger Vehicular traffic suspended
    ದಕ್ಷಿಣ ಕನ್ನಡ2 weeks ago

    Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

    Wild Animals Attack
    ಚಿಕ್ಕಮಗಳೂರು2 weeks ago

    Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

    Karnataka Weather Forecast
    ಮಳೆ2 weeks ago

    Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

    assault case
    ಬೆಳಗಾವಿ2 weeks ago

    Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

    karnataka rain
    ಮಳೆ3 weeks ago

    Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

    karnataka Rain
    ಮಳೆ3 weeks ago

    Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

    Karnataka Rain
    ಮಳೆ3 weeks ago

    Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

    karnataka Rain
    ಮಳೆ3 weeks ago

    Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

    ಟ್ರೆಂಡಿಂಗ್‌