ಸವಿಸ್ತಾರ ಅಂಕಣ | ʼಸಪ್ತಬಂದಿʼಯಲ್ಲಿ ಬಂಧಿಯಾದ ಹಿಂದು ಸಮಾಜ ಮುಕ್ತವಾಗಬೇಕು ಎಂದವರು ಸಾವರ್ಕರ್ - Vistara News

ಅಂಕಣ

ಸವಿಸ್ತಾರ ಅಂಕಣ | ʼಸಪ್ತಬಂದಿʼಯಲ್ಲಿ ಬಂಧಿಯಾದ ಹಿಂದು ಸಮಾಜ ಮುಕ್ತವಾಗಬೇಕು ಎಂದವರು ಸಾವರ್ಕರ್

ಸ್ವಾತಂತ್ರ್ಯ ಹೋರಾಟ ವೀರ ಸಾವರ್ಕರರ ಒಂದು ಮುಖವಾದರೆ, ಸಮಾಜ ಸುಧಾರಣೆ, ಅಸ್ಪೃಶ್ಯತೆ ನಿವಾರಣೆಯ ಕಾರ್ಯಗಳು ಇನ್ನೊಂದು ಮುಖ. ನಿಷ್ಪಕ್ಷಪಾತಿ ಇತಿಹಾಸಕಾರರು ಇದ್ದಿದ್ದರೆ ಅವರಿಗೆ ನ್ಯಾಯ ಸಲ್ಲುತ್ತಿತ್ತೋ ಏನೋ.

VISTARANEWS.COM


on

veer savarkar
ವೀರ ಸಾವರ್ಕರ್‌, ಅವರು ಸ್ಥಾಪಿಸಿದ ಪತಿತ ಪಾವನ ಮಂದಿರ ಹಾಗೂ ಮಂದಿರದ ಗರ್ಭಗುಡಿಯ ಮೂರ್ತಿಗಳು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಧರ್ಮದ ಜಾಗ ಹೃದಯದಲ್ಲೋ, ಹೊಟ್ಟೆಯಲ್ಲೋ?

savistara column

ಅಸ್ಪೃಶ್ಯತೆ ಎನ್ನುವುದು ಅಸ್ಪೃಶ್ಯತೆಗೆ ತುತ್ತಾದ ನನ್ನ ಜನರಿಗೆ ನಾಚಿಕೆ ಉಂಟುಮಾಡುವ ಸಂಗತಿಯಲ್ಲ. ಬದಲಿಗೆ, ಸುಧಾರಣೆಯ ಪರವಾಗಿರುವ ಹಿಂದು ಸಮಾಜ ಸುಧಾರಕರಿಗೆ ನಾಚಿಕೆಯ ವಿಷಯ.

— ಇದು ಮಹಾತ್ಮ ಗಾಂಧೀಜಿಯವರ ಮಾತು. 1932ರಲ್ಲಿ ಲಂಡನ್ನಿನಲ್ಲಿ ನಡೆದ ಎರಡನೇ ದುಂಡುಮೇಜಿನ ಸಭೆಯಲ್ಲಿ ಈ ನೋವು ಹಂಚಿಕೊಂಡ ಗಾಂಧಿ, ಇದರ ನಿರ್ಮೂಲನೆಗಾಗಿ ಭಾರತದಲ್ಲಿ ಒಂದು ದೊಡ್ಡ ಪಾದಯಾತ್ರೆಯನ್ನೇ ನಡೆಸಿದರು. ಜಾಗೃತಿಯನ್ನೂ ಮೂಡಿಸಿದರು. ಸ್ವರಾಜ್ಯ ಮತ್ತು ಸಾಮಾಜಿಕ ಬದಲಾವಣೆ ಎಂಬುದು ಜತೆಜತೆಯಲ್ಲಿಯೇ ಸಾಗಬೇಕು ಎಂಬುದು ಗಾಂಧಿ ಅವರ ದೊಡ್ಡ ನಂಬಿಕೆಯಾಗಿತ್ತು. ಅದರಂತೆ ನಡೆದರು ಕೂಡ.

ಹೆಚ್ಚು ಕಡಿಮೆ, ಸಾಮಾಜಿಕ ಸುಧಾರಣೆ ಮತ್ತು ಅಸ್ಪೃಶ್ಯತೆ ಕುರಿತು ವಿನಾಯಕ ದಾಮೋದರ ಸಾವರ್ಕರ್ ಕೂಡ ಗಾಂಧಿಯಂತೆ ದನಿ ಎತ್ತಿದ್ದರು ಮತ್ತು ಅವರಿಗಿಂತ ಮುಂಚೆಯೇ ಕೆಲಸ ಮಾಡಿದ್ದರು. ಹಾಗೆ ನೋಡಿದರೆ, ಹಿಂದೂ ಧರ್ಮದ ಕುರಿತು ಅವರ ನಿಲುವು ಗಾಂಧಿ ಅವರಿಗಿಂದಲೂ ಪ್ರಖರವಾಗಿತ್ತು. ಈ ಕುರಿತು ಸಾವರ್ಕರ್ ಹೇಳುತ್ತಾರೆ, “ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆ ಆಚರಣೆ ಮತ್ತು ಹಿಂದೂಗಳನ್ನು ನುಂಗಿ ನೊಣೆಯುತ್ತಿರುವ ಮೌಢ್ಯಗಳನ್ನು ಕಿತ್ತೊಗೆಯಬೇಕಿದೆ. ಎಲ್ಲರನ್ನೂ ಒಳಗೊಳ್ಳುವ ಹಾಗೂ ವೈಜ್ಞಾನಿಕ ಮನೋಧರ್ಮ ಹಿಂದೂ ಧರ್ಮದಲ್ಲಿ ಬೆಳೆಸಿಕೊಳ್ಳಬೇಕಿದೆ !”

1927ರಲ್ಲಿ ʼನನ್ನ ಜೀವನ ಪಯಣʼ ಹಾಗೂ ʼಹಿಂದುತ್ವದ ಪಂಚಪ್ರಾಣʼ ಎಂಬ ಲೇಖನಗಳಲ್ಲಿ ಸಾವರ್ಕರ್ ಬರೆದಿರುವ ಮುಂದಿನ ಸಾಲು ಬಹಳ ಆಸಕ್ತಿದಾಯಕವಾಗಿದೆ. “ಹಿಂದುಗಳು ಮಾಡಿದ ಅಡುಗೆಯನ್ನು ಸೇವಿಸಿದ ಕೂಡಲೆ ಮುಸ್ಲಿಂ ಅಥವಾ ಕ್ರಿಶ್ಚಿಯನ್ನರು ಹಿಂದುಗಳಾಗಿಬಿಡುವುದಿಲ್ಲ. ಅವರು ಮುಸ್ಲಿಂ ಅಥವಾ ಕ್ರೈಸ್ತರಾಗಿಯೇ ಇರುತ್ತಾರೆ. ಹಾಗಾದ ಮೇಲೆ ಮುಸ್ಲಿಮರು ಮಾಡಿದ ಆಹಾರ ಸೇವಿಸಿದ ಕೂಡಲೆ ನಿನ್ನ ಧರ್ಮ ಹೇಗೆ ಕೊಚ್ಚಿಕೊಂಡು ಹೋಗಿಬಿಡುತ್ತದೆ? ನಿಮ್ಮ ಧರ್ಮದ ಜೀರ್ಣ ಶಕ್ತಿ ಅದೇಕೆ ಅಷ್ಟೊಂದು ದುರ್ಬಲವಾಯಿತು? ಸಹೋದರರೇ ಕೇಳಿ, ವಿಶ್ವದಲ್ಲಿ ಯಾರೇ ತಯಾರಿಸಿದ ಆಹಾರವನ್ನು ಸೇವಿಸಿ ಜೀರ್ಣಿಸಿಕೊಳ್ಳಿ, ಹಿಂದುಗಳಾಗಿಯೇ ಇರಿ. ಆಗ ಮಾತ್ರ ಈ ಸಮಾಜಕ್ಕೆ ಏನಾದರೂ ಆಶಾಭಾವನೆ ಉಳಿಯುತ್ತದೆ. ಧರ್ಮದ ಜಾಗ ಹೃದಯದಲ್ಲಿರಬೇಕೆ ವಿನಃ ಹೊಟ್ಟೆಯಲ್ಲಲ್ಲ…”

ಹಿಂದೂ ಸಮಾಜವನ್ನು ಎಷ್ಟು ಪ್ರೀತಿಸುತ್ತಿದ್ದರೋ, ಇಲ್ಲಿನ ದುಷ್ಟ ಆಚರಣೆಗಳನ್ನು ತೊಡೆದುಹಾಕಬೇಕು ಎಂಬ ಉತ್ಕಟ ಬಯಕೆ ಅಷ್ಟೇ ಪ್ರಮಾಣದಲ್ಲಿ ಸಾವರ್ಕರರಿಗಿತ್ತು. ದಲಿತರನ್ನು ತಮ್ಮ ಹತ್ತಿರಕ್ಕೆ ಬಿಟ್ಟುಕೊಳ್ಳದ ಅಸ್ಪೃಶ್ಯತೆಯಷ್ಟೆ ಅಲ್ಲದೆ ಮೇಲ್ಜಾತಿಯ ಸಮುದಾಯಗಳ ಒಳಗಿನ ಸಮಸ್ಯೆಗಳೂ ಸಾವರ್ಕರ್‌ ಅವರ ಚಿಂತೆಯ ಕಾರಣಗಳಾಗಿದ್ದವು. ಹಿಂದು ಧರ್ಮ ತನ್ನನ್ನು ತಾನು ಏಳು ರೀತಿಯಲ್ಲಿ ಬಂಧಿಸಿಕೊಂಡಿದೆ ಎಂದು ಸಾವರ್ಕರ್ ನಂಬಿದ್ದರು. ಅವುಗಳನ್ನು ಸಾವರ್ಕರ್ ʼಬಂದಿ (bandi)ʼ ಎಂದು ಕರೆದಿದ್ದರು.

pathita pavana
ಪತಿತ ಪಾವನ ಮಂದಿರದ ಒಳಾಂಗಣ

ಆ ಏಳು ಬಂದಿಗಳೆಂದರೆ, 1. ಸ್ಪರ್ಶಬಂದಿ (ಅಸ್ಪೃಶ್ಯತೆ ಆಚರಣೆ), 2. ರೋಟಿಬಂದಿ (ಕೆಲವು ಸಮುದಾಯಗಳೊಂದಿಗೆ ಕುಳಿತು ಊಟ ಸೇವಿಸಬಾರದು ಎಂಬ ನಿರ್ಬಂಧ), 3. ಬೇಟಿಬಂದಿ (ಅಂತರ್ಜಾತಿ ವಿವಾಹಗಳ ನಿಷೇಧ), 4. ವ್ಯವಸಾಯಬಂದಿ (ಕೆಲವು ಉದ್ಯೋಗಗಳನ್ನು ಇಂಥದ್ದೇ ವರ್ಗ ಮಾಡಬೇಕು, ಬೇರೆಯವರು ಮಾಡಬಾರದು ಎಂಬ ನಿರ್ಬಂಧ), 5. ಸಿಂಧುಬಂದಿ (ಈಗ ಕೇಳಿದರೆ ನಂಬಲು ಸಾಧ್ಯವಾಗದ ನಿರ್ಬಂಧ ಇದು. ಸಿಂಧು ನದಿಯನ್ನಾಗಲಿ, ಸಮುದ್ರವನ್ನಾಗಲಿ ದಾಟಿ ಹೋದರೆ ಅಂಥವರ ಸಾಮಾಜಿಕ ಮೌಲ್ಯ ಕಳೆದುಹೋಗುತ್ತದೆ ಎಂಬ ನಂಬಿಕೆ. ಸಮುದ್ರಯಾನ ಮಾಡುವ ಸಂದರ್ಭದಲ್ಲಿ ನಿತ್ಯ ಪೂಜೆಯನ್ನು ನಡೆಸುವುದು ತಪ್ಪುತ್ತದೆ ಎನ್ನುವುದು ಒಂದು ಕಾರಣವಾದರೆ, ಸಮುದ್ರದಲ್ಲಿ ಹೆಚ್ಚು ಪ್ರಯಾಣಿಸುವ ಮ್ಲೇಚ್ಛರ ಸಂಪರ್ಕವಾಗಿ ಧರ್ಮಾಚರಣೆಗೆ ಧಕ್ಕೆಯಾಗುತ್ತದೆ ಎಂಬ ಮತ್ತೊಂದು ಆತಂಕ), 6. ವೇದೋಕ್ತಬಂದಿ (ಹೋಮ, ಹವನ ಸೇರಿ ವೇದೋಕ್ತ ಆಚರಣೆಗಳನ್ನು ಕೆಲವರು ಮಾತ್ರವೇ ಮಾಡಬೇಕೆಂಬ ನಿರ್ಬಂಧ), 7. ಶುದ್ಧಿಬಂದಿ (ಮುಸಲ್ಮಾನರ ಆಳ್ವಿಕೆಯಿರಬಹುದು, ಕ್ರೈಸ್ತರ ಆಕ್ರಮಣವಿರಬಹುದು ಎಲ್ಲ ಸಮಯದಲ್ಲೂ ಮತಾಂತರ ನಡೆದೇ ಇದೆ. ಈ ಸಮಯದಲ್ಲಿ ಭಯದಿಂದಲೊ, ಆಮಿಷದಿಂದಲೋ ಮತಾಂತರವಾಗಿದ್ದವರು ಮೂರ್ನಾಲ್ಕು ವರ್ಷದ ನಂತರ ಮಾತೃ ಧರ್ಮಕ್ಕೆ ವಾಪಸಾಗಬೇಕು ಎಂದು ಬಯಸಿದರೆ ಅದಕ್ಕೆ ಅವಕಾಶ ಇರಲಿಲ್ಲ.).

ಇದನ್ನೂ ಓದಿ | ಸವಿಸ್ತಾರ ಅಂಕಣ | ಗಡಿಗಳ ಎಲ್ಲೆ ಮೀರಿ ಮನ್ನಣೆ ಗಳಿಸಿದ್ದ ಸಾವರ್ಕರ್! ಅವರ ಪರ ಹೋರಾಡಿದ್ದ ಮಾರ್ಕ್ಸ್ ಮೊಮ್ಮಗ!

ಒಂದು ಕ್ಷಣ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿದ, ಆಚರಿಸಿದ ಸಪ್ತಪಾಪಗಳನ್ನು ನೆನಪಿಸಿಕೊಳ್ಳಿ. ಸಮಾಜದ ಕೆಡುಕುಗಳನ್ನು ತೊಡೆದುಹಾಕಲು ಅವರು ಪಟ್ಟಿ ಮಾಡಿರುವ ಸಪ್ತ ಪಾಪಗಳು- 1. ದುಡಿಮೆಯಿಲ್ಲದೆ ಗಳಿಸಿದ ಸಂಪತ್ತು, 2. ಆತ್ಮಸಾಕ್ಷಿಯಿಲ್ಲದ ಭೋಗ, 3. ಚಾರಿತ್ರ್ಯವಿಲ್ಲದ ಜ್ಞಾನ, 4. ನೀತಿಯಿಲ್ಲದ ವ್ಯಾಪಾರ, 5. ಮಾನವೀಯತೆಯಿಲ್ಲದ ವಿಜ್ಞಾನ, 6. ತ್ಯಾಗವಿಲ್ಲದ ಧರ್ಮ, 7. ನೀತಿಯಿಲ್ಲದ ರಾಜಕೀಯ. ಸ್ವತಃ ತಮ್ಮ ಜೀವನವನ್ನೇ ಪ್ರಯೋಗಶಾಲೆಯನ್ನಾಗಿಸಿಕೊಂಡು, ಸತ್ಯದೊಂದಿಗೆ ನನ್ನ ಪ್ರಯೋಗಗಳು ಎಂದು ಗಾಂಧೀಜಿ ಕರೆದರು.

ಈಗ ಮತ್ತೆ ಸಾವರ್ಕರ್ ಅವರ ಸಪ್ತಬಂದಿಗಳತ್ತ ಕಣ್ಣಾಯಿಸಿ. ಆ ಎಲ್ಲವೂ ಸುಸ್ಪಷ್ಟ. ಯಾವ ಮಾತಿಗೂ ಬೋಧನೆಯ ಹಂಗಿಲ್ಲ. ಎಲ್ಲವೂ ಕಪ್ಪು-ಬಿಳುಪಿನಂತೆ ಖಚಿತ. ಬಹಳ ಫೋಕಸ್ ಆಗಿ ಇಂಥವನ್ನೆಲ್ಲಾ ಎಲ್ಲರೂ ಮಾಡಬೇಕು, ಮಾಡಲು ಸಾಧ್ಯ, ಮಾಡಿದರೆ ಮಾತ್ರ ಉದ್ಧಾರ ಸಾಧ್ಯ ಎಂಬ ದೃಢತೆಗಳು ಅಲ್ಲಿ ಕಾಣುತ್ತದೆ.

ಸಾವರ್ಕರ್‌ ಸಮಾಜದಲ್ಲಿದ್ದ ಕೆಟ್ಟ ಆಚರಣೆಗಳನ್ನು ತೊಡೆದುಹಾಕಬೇಕು ಎಂದು ಸಪ್ತಬಂದಿಗಳನ್ನು ಪಟ್ಟಿ ಮಾಡಿ ಸುಮ್ಮನೇ ಕೂರಲಿಲ್ಲ. ನೇರ ಕಾರ್ಯಾಚರಣೆಗೆ ಇಳಿದರು. ೧೯೨೪ರಲ್ಲಿ ರತ್ನಗಿರಿಯಲ್ಲಿ ನಡೆದ ಗಣೇಶೋತ್ಸವ ಜಾತಿ ರಹಿತ ಕಟ್ಟುಪಾಡುಗಳೇ ಇಲ್ಲದೆ ನಡೆಯಿತು. ಅಲ್ಲಿಯವರೆಗೂ ಗಣೇಶನ ವಿಸರ್ಜನೆಯಲ್ಲಿ ಬ್ರಾಹ್ಮಣರಿಗಷ್ಟೇ ಮಹತ್ವವಿತ್ತು. ಅವರಷ್ಟೇ ಗಣೇಶನನ್ನು ಹೊರಬೇಕಾಗಿತ್ತು. ಆದರೆ, ಆ ವರ್ಷ ತಳಸಮುದಾಯದ ಮಹಾರ್, ಜಾಡಮಾಲಿಗಳು ಕೂಡ ಗಣೇಶ ಮೆರವಣಿಗೆಯಲ್ಲಿ ಹೆಗಲು ನೀಡಿದರು. ದಸರೆ ಹಬ್ಬದ ಸಂದರ್ಭದಲ್ಲಿ ಸಾವರ್ಕರ್ ದಲಿತರ ಮನೆಗೆ ಹೋಗಿ ಸಾಮೂಹಿಕ ಭೋಜನದಲ್ಲಿ ಭಾಗವಹಿಸಿದರು. ರತ್ನಗಿರಿ ಜಿಲ್ಲೆಯಲ್ಲಿ ದಲಿತ ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆಗಳನ್ನು ತೆರೆದರು. ಮಹಾರ್ ಮತ್ತು ಚಮ್ಮಾರರಿಗೆ ವೇದಗಳನ್ನು ಕಲಿಸಿಕೊಟ್ಟರು. ಅಂತರ್ಜಾತೀಯ ವಿವಾಹಕ್ಕೆ ಬೆಂಬಲ ನೀಡಿದರು. ಗೋ ಪೂಜೆಯನ್ನು ಸಾವರ್ಕರ್ ಯಾವತ್ತೂ ಒಪ್ಪಿಕೊಂಡೇ ಇರಲಿಲ್ಲ.

pathita pavana
ಪತಿತ ಪಾವನ ಮಂದಿರದ ಮೂರ್ತಿಗಳು

ಕಾಶಿ ವಿಶ್ವನಾಥನ ಮಂದಿರವಿರಬಹುದು, ಪುರಿ ಜಗನ್ನಾಥನ ಮಂದಿರವಿರಬಹುದು, ದ್ವಾರಕಾಧೀಶನ ಮಂದಿರವಿರಬಹುದು, ಎಲ್ಲ ಹಿಂದುಗಳಿಗೂ ಪ್ರವೇಶ ಕಲ್ಪಿಸಬೇಕು ಎಂಬುದು ಸಾವರ್ಕರ್ ಹೇಳುತ್ತಿದ್ದರು. ಆದರೆ ಅದಕ್ಕೆ ಸಮಯ ಪಕ್ವವಾಗುವವರೆಗೆ, ಹಿಂದು ಸಮಾಜದ ಎಲ್ಲರೂ ದರ್ಶನ ಮಾಡಬಹುದಾದ ದೇವಸ್ಥಾನ ಇರಬೇಕು ಎಂದು ರತ್ನಗಿರಿಯಲ್ಲಿ ಪತಿತಪಾವನ ಮಂದಿರವನ್ನು ಸ್ಥಾಪಿಸಿದರು. ಈ ಮಂದಿರದ ಟ್ರಸ್ಟ್‌ನಲ್ಲಿ ಎಲ್ಲ ವರ್ಗದವರೂ ಇದ್ದರು. ಪೂಜಾ ಪದ್ಧತಿಯನ್ನು ತಿಳಿದಿರುವ ಯಾವುದೇ ಹಿಂದು ಅರ್ಚಕ ಆಗಬಹುದಾಗಿತ್ತು.

ಎಲ್ಲ ದೇವಸ್ಥಾನಗಳಿಗೂ ಎಲ್ಲ ಹಿಂದುಗಳ ಪ್ರವೇಶಕ್ಕೆ ಅವಕಾಶ ಇರಬೇಕು ಎಂದು ಸಾವರ್ಕರ್ ನಂಬಿದ್ದರು. ಅದಕ್ಕಾಗಿ ಅನೇಕ ಪ್ರಯತ್ನ ಮಾಡಿದರು. ಆದರೆ ಸಮಾಜ ಸುಧಾರಣೆ ಎನ್ನುವುದು ಒಂದು ದಿನದಲ್ಲಿ ಯಾವುದೋ ಸರಕಾರಿ ಆದೇಶದಿಂದ ಆಗುವ ಕೆಲಸವಲ್ಲ. ಅದಕ್ಕೆ ಮನಸ್ಸುಗಳ ಬದಲಾವಣೆ ಆಗಬೇಕಾಗುತ್ತದೆ. ಈ ರೀತಿಯೂ ಆಗಬಹುದು ಎಂದು ಉದಾಹರಣೆ ಮೂಲಕ ತೋರಿಸಿಕೊಟ್ಟಿದ್ದರು. ಸ್ವಾರಸ್ಯ ಅಂದರೆ, ಸಾವರ್ಕರ್ ಅವರ ಈ ಎಲ್ಲ ಕೆಲಸದ ಬಗ್ಗೆ ಅ ಕಾಲದ ಸಂಪ್ರದಾಯಸ್ಥ ಬ್ರಾಹ್ಮಣರು ಕೆರಳಿ ಕೆಂಡವಾಗಿದ್ದರು.

ಇದನ್ನೂ ಓದಿ | ಸವಿಸ್ತಾರ ಅಂಕಣ | ಇತಿಹಾಸದ ಕಣ್ತೆರೆಸಿ ಸ್ವಾತಂತ್ರ್ಯ ಜ್ಯೋತಿ ಬೆಳಗಿಸಿದವರು ಸಾವರ್ಕರ್

ಹೀಗೆ ಸಾವರ್ಕರ್ ರತ್ನಗಿರಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸುಧಾರಣಾ ಕೆಲಸವನ್ನೇ ಮಾಡಿದರು. “ಸಮಾಜ ಸುಧಾರಕ ಎಂದರೆ, ಒಣ ಭಾಷಣಗಳನ್ನು ಬಿಟ್ಟು, ತಾನು ನಂಬಿದ ಸುಧಾರಣೆಗಳನ್ನು ಬೇರೆಯವರು ಹಿಂಬಾಲಿಸುತ್ತಾರೆಯೋ ಇಲ್ಲವೊ ಎನ್ನುವುದನ್ನು ಲೆಕ್ಕಿಸದೇ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವವನು. ಸುಧಾರಣೆಗಳನ್ನು ಕೇವಲ ಬೌದ್ಧಿಕ ಚರ್ಚೆಯಲ್ಲೆ ಇರಿಸದೆ, ಆದಷ್ಟು ಬೇಗನೆ ಅವುಗಳನ್ನು ಆಚರಣೆಗೆ ತರುವವನು. ಆಚರಣೆ ಮಾಡಿ ತೋರಿಸುವುದರ ಮೂಲಕ, ಅನುಮಾನ ಉಳ್ಳವರಿಗೆ ಉತ್ತರ ನೀಡುವವನು,” ಎಂದಿದ್ದರು. ಅದೆಂಥಾ ಗಟ್ಟಿ ನಿಲುವಿದು !

ಆದರೆ, ಸಾವರ್ಕರ್ ಕೈಗೊಂಡ ಈ ಎಲ್ಲ ಕೆಲಸಗಳು ರತ್ನಗಿರಿ ಜಿಲ್ಲೆಗೆ ಸೀಮಿತವಾಗಿದ್ದವು. ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಹಾಗೂ ರತ್ನಗಿರಿ ಜಿಲ್ಲೆಯಿಂದ ಹೊರಗೆ ಬರುವಂತಿಲ್ಲ ಎಂದು ಬ್ರಿಟಿಷರು ಹೇಳಿದ ನಂತರ ಸಂಪೂರ್ಣ ಸಾಮಾಜಿಕ ಸುಧಾರಣೆಯಲ್ಲಿ ತೊಡಗಿಸಿಕೊಂಡ ಸಾವರ್ಕರ್, ತಮ್ಮ ಜೀವನದ ಪ್ರಮುಖ ಆಶಯವಾಗಿ ಅಸ್ಪೃಶ್ಯತೆಯನ್ನು ತೊಡೆದುಹಾಕುವ ಪಣ ತೊಟ್ಟಿದ್ದರು.

ಸಾವರ್ಕರ್ ಅವರ ಸಾಮಾಜಿಕ ಕೆಲಸದ ಬಗ್ಗೆ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರಿಗೆ ಮೆಚ್ಚುಗೆ ಇತ್ತು. ಅಂಬೇಡ್ಕರ್ ಅವರ ಐತಿಹಾಸಿಕ ಮಹಾಡ್ ಜಿಲ್ಲೆಯ ಕೆರೆ ಹೋರಾಟಕ್ಕೆ ಸಾವರ್ಕರ್ ಬೆಂಬಲ ನೀಡಿದ್ದರು. ಮಾತ್ರವಲ್ಲ, ೧೯೩೧ರಲ್ಲಿ ತಾವು ನಿರ್ಮಿಸಿದ ಪತಿತಪಾವನ ಮಂದಿರವನ್ನು ಉದ್ಘಾಟಿಸಲು ಬಾಬಾ ಸಾಹೇಬರನ್ನು ಸಾವರ್ಕರ್ ಆಹ್ವಾನಿಸಿದ್ದರು. ಆದರೆ ಅಂಬೇಡ್ಕರ್ ಪೂರ್ವ ನಿಯೋಜಿತ ಕಾರ್ಯಕ್ರಮದಿಂದಾಗಿ ಈ ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ. ಬದಲಿಗೆ, ಪತ್ರ ಬರೆದು ಸಾವರ್ಕರ್ ಅವರ ಸಾಮಾಜಿಕ ಸುಧಾರಣೆಯ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸಿದರು.

cellular jail
ಅಂಡಮಾನ್‌ನಲ್ಲಿ ಸಾವರ್ಕರರನ್ನು ಬಂಧಿಸಿ ಇಟ್ಟಿದ್ದ ಕೋಣೆ

ಸಾವರ್ಕರರನ್ನು ವಿರೋಧಿಸುವ ಕೆಲವರು, ಅವರ ಬದುಕಿನ ಕೆಲವೇ ಘಟನೆಗಳನ್ನು ಉಲ್ಲೇಖಿಸುತ್ತಾರೆ. ಬ್ರಿಟಿಷರಿಗೆ ಪತ್ರ ಬರೆದರು ಎನ್ನುವುದೊಂದನ್ನು ಹಿಡಿದುಕೊಂಡು ಅವರ ಚಾರಿತ್ರ್ಯ ಹರಣದ ಪ್ರಯತ್ನಕ್ಕೆ ಮುಂದಾಗುತ್ತಾರೆ. ಇನ್ನು ಸಾವರ್ಕರರನ್ನು ಆರಾಧಿಸುವ ಅನೇಕರಲ್ಲೂ ಪೂರ್ಣ ಕಲ್ಪನೆ ಇಲ್ಲ. ಸಾವರ್ಕರರು ಹಿಂದುತ್ವವನ್ನು ಅಪ್ಪಿಕೊಂಡಷ್ಟೇ ಗಾಢವಾಗಿ ಅಲ್ಲಿನ ಕೆಟ್ಟ ಆಚರಣೆಗಳ ದ್ವೇಷಿಯಾಗಿದ್ದರು. ಅವುಗಳಲ್ಲಿ ಮೊದಲನೆಯದು ಅಸ್ಪೃಶ್ಯತೆ ನಿವಾರಣೆ. ಅಸ್ಪೃಶ್ಯತೆ ನಿವಾರಣೆ ಆಗದ ಹೊರತು ಹಿಂದು ಧರ್ಮಕ್ಕಾಗಲಿ, ಹಿಂದುತ್ವಕ್ಕಾಗಲಿ ಅರ್ಥವಿಲ್ಲ ಎಂದು ನಂಬಿದ್ದವರು. ಸಾವರ್ಕರರನ್ನು ವಿರೋಧಿಸುತ್ತಿರುವವರಿಗಿಂತಲೂ ಹೆಚ್ಚಾಗಿ, ಅವರನ್ನು ಆರಾಧಿಸುವವರು ಈ ಮಾತನ್ನು ಹೆಚ್ಚು ಅಳವಡಿಸಿಕೊಳ್ಳಬೇಕು. ತಮ್ಮ ಮೂಗಿನ ನೇರಕ್ಕೆ ಮಾತ್ರ ಸಾವರ್ಕರ್ ಅವರನ್ನು ಸ್ವೀಕರಿಸಿ ಉಳಿದವುಗಳ ಕಡೆ ಜಾಣ ಕುರುಡು ಪ್ರದರ್ಶನ ಆಗಬಾರದು.

ಇದನ್ನೂ ಓದಿ | ಸವಿಸ್ತಾರ ಅಂಕಣ | ನಮ್ಮ ನ್ಯಾಷನಲ್‌ ಹೀರೊಗಳನ್ನು ನಾವು ಗೌರವಿಸುವುದು ತಪ್ಪಾ?

ಇಂದು ಸಾವರ್ಕರ್ ಅವರ ಬಗ್ಗೆ ಆರ್‌ಎಸ್‌ಎಸ್ ಸ್ವಯಂಸೇವಕರು, ಅಭಿಮಾನಿಗಳ ಬಹಳ ಪ್ರೀತಿ-ಅಭಿಮಾನದಿಂದ ಮಾತನಾಡುತ್ತಾರೆ. ಇದರಲ್ಲಿ ತಪ್ಪೇನೂ ಇಲ್ಲ. ಅದರೆ, ಸಾವರ್ಕರ್ ತಮ್ಮ ಜೀವಿತ ಅವಧಿಯಲ್ಲಿ ಆರ್‌ಎಸ್‌ಎಸ್ ಸೇರಲಿಲ್ಲ. ಅವರು ಹಿಂದೂ ಧರ್ಮವನ್ನು ಆರ್‌ಎಸ್‌ಎಸ್‌ಗಿಂತ ಹೆಚ್ಚು ವೈಜ್ಞಾನಿಕವಾಗಿ, ವೈಚಾರಿಕವಾಗಿ ಸುಧಾರಣೆ ಮಾಡಬೇಕೆಂದು ಹಂಬಲಿಸಿದ್ದರು. ಈ ಕಾರಣವೇ ಇರಬೇಕು. ಅವರು ಸಂಘದಿಂದ ದೂರ ಉಳಿಯಲು !

ಸ್ವರಾಜ್ಯ, ಅಸ್ಪೃಶ್ಯತೆ ನಿರ್ಮೂಲನೆ, ಹಿಂದೂ ಮುಸ್ಲಿಂ ಐಕ್ಯ- ಈ ಮೂರು ಸಂಗತಿಗಳು ಮಹಾತ್ಮ ಗಾಂಧೀಜಿ ಅವರ ಸಾರ್ವಜನಿಕ ಬದುಕಿನ ಮೂರು ಮಹಾಧ್ಯೇಯಗಳಾಗಿದ್ದವು. ಇವುಗಳ ಸಾಕಾರಕ್ಕೆ ಅವರು ಆಯ್ಕೆ ಮಾಡಿಕೊಂಡ ದಾರಿ ಅಹಿಂಸೆ ಮತ್ತು ಸತ್ಯಾಗ್ರಹ ಎಂಬ ಅಪರೂಪದ ಅಸ್ತ್ರವಾಗಿದ್ದವು. ಸಾವರ್ಕರ್ ಅವರನ್ನು ಅಧ್ಯಯನ ಮಾಡಿದರೆ, ಅವರ ಸಾರ್ವಜನಿಕ ಬದುಕಿನ ಧ್ಯೇಯಗಳು ಆರಂಭಿಕ ದಿನಗಳಲ್ಲಿ ಈ ಮೂರೇ ಆಗಿದ್ದವು. ದೇಶಕ್ಕೆ ಸ್ವಾತಂತ್ರ್ಯ ತರಬೇಕೆಂಬ ಅವರ ಸ್ವರಾಜ್ಯದ ಕುರಿತು ಯಾರದ್ದೂ ತಕರಾರು ಇರಲಿಕ್ಕಿಲ್ಲ. (ಜೈಲಿನಿಂದ ಬಿಡುಗಡೆ ಮಾಡಿ ಎಂದು ಪತ್ರ ಬರೆದರು ಎಂಬುದಷ್ಟೇ ಕೆಲವರ ಕೊಂಕು) ಅಸ್ಪೃಶ್ಯತೆ ನಿರ್ಮೂಲನೆ ಎಂಬುದು ಸಾವರ್ಕರ್ ಪಾಲಿಗೆ ಬೋಧನೆಯ ವಿಷಯವಾಗಿರಲಿಲ್ಲ. ಗಾಂಧಿಯಂತೆ ಅವರು ಮಾಡಿ ತೋರಿಸಿದರು. ಹಿಂದೂ ಮುಸ್ಲಿಂ ಐಕ್ಯತೆ ವಿಷಯದಲ್ಲೂ ಅವರು ಆರಂಭದಲ್ಲಿ ಗಾಂಧಿಯ ಭಾಷೆಯಲ್ಲಿಯೇ ಮಾತನಾಡುತ್ತಿದ್ದರು. ಸೆಲ್ಯೂಲಾರ್ ಜೈಲಿಗೆ ಹೋಗುವ ಮುನ್ನ ಸಾವರ್ಕರ್ ಕೂಡ ಹಿಂದೂ-ಮುಸ್ಲಿಂ ಐಕ್ಯತೆಯ ಪ್ರಬಲ ಪ್ರತಿಪಾದಕರೇ ಆಗಿದ್ದರು. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ನಡೆಸಿದ ಅವಧ್‌ನ ಸುಲ್ತಾನ ವಾಜಿದ್ ಆಲಿ, ರೋಹಿಲ್ ಖಂಡದ ಖಾನ್ ಬಹದ್ದೂರ್‌ ಖಾನ್ ಸೇರಿದಂತೆ ಅನೇಕ ಮುಸ್ಲಿಂ ಬಂಡುಕೋರರ ಬಗ್ಗೆ ಬಹಳ ಪ್ರೀತಿಯಿಂದ ಹಾಡಿ ಬರೆದಿದ್ದಾರೆ. ಆದರೆ, ಅಂಡಮಾನ್ ಜೈಲಿನಿಂದ ಬಂದ ಬಳಿಕ ಅವರ ಧೋರಣೆಯಲ್ಲಿ ಬದಲಾವಣೆಯಾಯಿತು. ಕಾರಣಗಳು ಏನೇ ಇರಲಿ ಇದು ಇತಿಹಾಸದ ಸತ್ಯ. ಉಳಿದಂತೆ, ಸಾವರ್ಕರ್ ತಮ್ಮ ಸ್ವಾತಂತ್ರ್ಯದ ಧ್ಯೇಯದ ಸಾಕಾರಕ್ಕೆ ಕಂಡುಕೊಂಡ ಮಾರ್ಗ ಮಾತ್ರ ಹಿಂಸೆ ಮತ್ತು ಬಂಡುಕೋರತನವೇ ಆಗಿತ್ತು. ಇಬ್ಬರಿಗೂ ಇದ್ದ ವ್ಯತ್ಯಾಸ ಹಿಂಸೆ ಮತ್ತು ಅಹಿಂಸೆಯ ಮಾರ್ಗದ್ದಷ್ಟೆ.

ಕ್ರಾಂತಿಕಾರಿಗಳ ಪಾಲಿಗೆ ಮಹಾನ್ ನಾಯಕರೇ ಆಗಿದ್ದರು. ಬ್ರಿಟಿಷರಂತೂ ಬಹುವಾಗಿ ಹೆದರಿದ್ದು ಗಾಂಧಿ ಮತ್ತು ಸಾವರ್ಕರ್‌ಗೆ ಮಾತ್ರ ! ಹಾಗಾಗಿ, ಹಿಂದೂ ಮುಸ್ಲಿಂ ಐಕ್ಯತೆಯ ಬಗ್ಗೆ ಸಾವರ್ಕರ್ ಅವರು ತಮ್ಮ ಆರಂಭಿಕ ದಿನಗಳ ಧೋರಣೆಯನ್ನೇ ಉಳಿಸಿಕೊಂಡಿದ್ದರೆ, ಈ ದೇಶದ ಮಾರ್ಕ್ಸ್‌ವಾದಿ ಹಾಗೂ ಬ್ರಿಟಿಷ್ ಪ್ರಭಾವಿತ ಇತಿಹಾಸಕಾರರು ಸಾವರ್ಕರ್ ಅವರಿಗೆ ಗಾಂಧಿ ನಂತರದ ಸ್ಥಾನವನ್ನು ಇತಿಹಾಸದಲ್ಲಿ ನೀಡುತ್ತಿದ್ದರೇನೋ ? ಯಾವುದೇ ಇಸಂ, ಪಂಥದ ಹಂಗು-ಗೊಡವೆಗಳಿಲ್ಲದ ಇತಿಹಾಸಕಾರರು ಇತಿಹಾಸ ಬರೆದಿದ್ದರೆ, ಸಾವರ್ಕರ್ ಅವರಿಗೆ ಈಗಿನಷ್ಟು ಅನ್ಯಾಯ ಆಗುತ್ತಿರಲಿಲ್ಲವೇನೋ?

ಇಂಗ್ಲಿಷ್‌ನಲ್ಲಿ ಒಂದು ಮಾತಿದೆ. Great minds think alike ಎಂಬುದು ಆ ಮಾತು. ಉನ್ನತ ಆದರ್ಶಗಳನ್ನು ಪಾಲಿಸುವ ವ್ಯಕ್ತಿಗಳ ಗುರಿ ಒಂದೇ ಆಗಿರುತ್ತದೆ. ಮಾನವನ ಒಳಿತನ್ನೇ ಬಯಸುವವರು ಅದೆಷ್ಟೇ ದೂರವಿದ್ದರೂ, ಅವರ ನಡುವೆ ಅದೆಷ್ಟೇ ವರ್ಷಗಳ ವ್ಯತ್ಯಾಸವಿದ್ದರೂ ಅನೇಕ ಆಲೋಚನೆಗಳು ಸಮಾನವಾಗಿರುತ್ತವೆ. ಅಂತೆಯೇ, ಮಹಾಪುರುಷರ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದಾಗಲೂ ಅವರ ಆಲೋಚನೆಗಳಲ್ಲಿ ಸಮಾನ ಅಂಶಗಳಿರುತ್ತವೆ.

ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಸಮಾಜಕ್ಕೆ, ದೇಶಕ್ಕಾಗಿ ಕೆಲಸ ಮಾಡುವ ಎಲ್ಲರೂ ಒಂದು ಸರಪಳಿಯಲ್ಲಿರುವ ಕೊಂಡಿಗಳು. ಹಿಂದಿನಿಂದಲೂ ಬಂದ ಆಲೋಚನೆ, ಸಂಪ್ರದಾಯ, ನಡವಳಿಕೆ, ಆದರ್ಶಗಳನ್ನು ಹೊಸ ಕಾಲಕ್ಕೆ ತಕ್ಕಂತೆ ಶುದ್ಧಗೊಳಿಸಿ, ಮತ್ತಷ್ಟು ಗಟ್ಟಿಯಾಗಿಸಿ ಮುಂದಿನ ಪೀಳಿಗೆಗೆ ವರ್ಗಾವಣೆ ಮಾಡಬೇಕಿದೆಯಷ್ಟೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಸಾವನ್ನೇ ಆಹ್ವಾನಿಸಿದ ಸುಂದರಿ ಝೋರಯಾ ಟರ್ ಬ್ರೀಕ್

ರಾಜಮಾರ್ಗ ಅಂಕಣ: ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

VISTARANEWS.COM


on

ರಾಜಮಾರ್ಗ ಅಂಕಣ euthanasia zoraya ter beek
Koo

ನೆದರ್‌ಲ್ಯಾಂಡ್ ದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಆಕೆ ಲೋಕೋತ್ತರ ಸುಂದರಿ. ವಯಸ್ಸು ಇನ್ನೂ 28. ಆಕೆ ಉತ್ಸಾಹದ ಖಣಿ. ಮೇಲ್ನೋಟಕ್ಕೆ 100% ಫಿಟ್ ಮತ್ತು ಆರೋಗ್ಯಪೂರ್ಣ ಆಗಿದ್ದಾರೆ. ಆದರೆ ಆಕೆ ತನ್ನ ದೇಶದ ಕಾನೂನಿನ ನೆರವು ಪಡೆದುಕೊಡು ತನ್ನ ಜೀವನಕ್ಕೊಂದು ಪೂರ್ಣವಿರಾಮ ಇಡಲು ನಿರ್ಧಾರ ಮಾಡಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡ ವಿಧಾನ ಅಂದರೆ ದಯಾಮರಣ (euthanasia)! ಅಂದರೆ ತನ್ನ ಇಷ್ಟದ ಪ್ರಕಾರ, ಇಷ್ಟದ ಜಾಗದಲ್ಲಿ, ಇಷ್ಟದ ಜನರ ಮುಂದೆ, ಇಷ್ಟದ ರೀತಿಯಲ್ಲಿ ಸಾಯುವುದು..!

ದಯಾಮರಣ – ನೆದರ್‌ಲ್ಯಾಂಡ್‌ನಲ್ಲಿ ಕಾನೂನು ಸಮ್ಮತ

ನೆದರ್‌ಲ್ಯಾಂಡ್ (Netherlands) ದೇಶವು ದಯಾಮರಣಕ್ಕೆ ಕಾನಾನು ಸಮ್ಮತಿ ನೀಡಿ 22 ವರ್ಷಗಳೇ ಸಂದಿವೆ! ಅಸಹನೀಯ ನೋವು, ಗುಣಪಡಿಸಲು ಆಗದ ಕಾಯಿಲೆ, ಮಾನಸಿಕ ಅಸ್ವಾಸ್ಥ್ಯ ಸೇರಿದಂತೆ ಆರು ಕಾರಣಕ್ಕೆ ಸರಕಾರ ದಯಾಮರಣಕ್ಕೆ ಅನುಮತಿಯನ್ನು ನೀಡುತ್ತದೆ. 2022ರಲ್ಲಿ ಆ ದೇಶದಲ್ಲಿ ಕಾನೂನಿನ ನೆರವು ಪಡೆದು 8730 ಮಂದಿ ದಯಾಮರಣದ ಮೂಲಕ ತಮ್ಮ ಬದುಕನ್ನು ಕೊನೆಗೊಳಿಸಿದ್ದಾರೆ! ಇದು ಕಳೆದ ವರ್ಷಕ್ಕಿಂತ 14% ಅಧಿಕ ಎಂದು ಅಲ್ಲಿನ ಸರಕಾರ ಹೇಳಿದೆ.

ಝೋರಯಾಗೆ ಮಾನಸಿಕ ಕಾಯಿಲೆ

ಈ ಚಂದದ ಹುಡುಗಿ ಝೊರೆಯಾ (Zoraya Ter Beek) ಬಳಲುತ್ತಿರುವುದು ಖಿನ್ನತೆ, ಉದ್ವೇಗ ಆಕೆಯ ಬಾಲ್ಯದ ಒಡನಾಡಿಗಳು. ಇತ್ತೀಚೆಗೆ ಆಟಿಸಂ ಕೂಡ ಸೇರಿಕೊಂಡು ಆಕೆಗೆ ಬದುಕೇ ಅಸಹನೀಯವಾಗುತ್ತು. ಯಾವುದೆಲ್ಲ ಔಷಧಿ, ಚಿಕಿತ್ಸಾ ವಿಜ್ಞಾನ ಮತ್ತು ಕೌನ್ಸೆಲಿಂಗ್ ನಡೆದರೂ ಅವಳಿಗೆ ಅದ್ಯಾವುದೂ ರಿಲೀಫ್ ಕೊಡಲಿಲ್ಲ. ವೈದ್ಯರೂ ʼಇನ್ನು ಸಾಧ್ಯವಿಲ್ಲ’ ಎಂದು ಹೇಳಿದ ನಂತರ ಆಕೆ ಆರಿಸಿಕೊಂಡದ್ದು ಸಾವನ್ನು! ಆತ್ಮಹತ್ಯೆ ಮಾಡಿ ಸಾಯಲು ಮನಸಿಲ್ಲ ಎಂದಾಕೆ ಗಟ್ಟಿಯಾದ ನಿರ್ಧಾರ ತೆಗೆದುಕೊಂಡ ನಂತರ ಆಕೆಗೆ ಉಳಿದದ್ದು ಒಂದೇ ಪರಿಹಾರ – ಅದು ದಯಾಮರಣ! ಆಕೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದು 2020ರಲ್ಲಿ. ಅದೀಗ ಪರ ವಿರೋಧ ಚರ್ಚೆಯಾಗಿ ಈಗ ತೀರ್ಪು ಆಕೆಯ ಪರವಾಗಿ ಬಂದಿದೆ. ಅಂದರೆ ದಯಾಮರಣಕ್ಕೆ ಅನುಮತಿ ದೊರೆತಿದೆ.

ರಾಜಮಾರ್ಗ ಅಂಕಣ euthanasia zoraya ter beek

ದಯಾಮರಣ ಹೇಗೆ?

ಅರ್ಜಿದಾರರು ಇಷ್ಟಪಡುವ ಸ್ಥಳದಲ್ಲಿ, ಇಷ್ಟಪಡುವ ಸನ್ನಿವೇಶವನ್ನು ಕ್ರಿಯೇಟ್ ಮಾಡಿ ನಿಗದಿ ಪಡಿಸಿದ ದಿನದಂದು ವೈದ್ಯರು ಆಕೆಗೆ ಒಂದು ಅರಿವಳಿಕೆಯ ಇಂಜೆಕ್ಷನ್ ನೀಡುತ್ತಾರೆ. ಆಕೆ ಕೋಮಾ ತಲುಪುವುದನ್ನು ಕಾಯುವ ವೈದ್ಯರು ನಂತರ ಹೃದಯವು ನಿಧಾನವಾಗಿ ನಿಲ್ಲುವ ಔಷಧಿ ಕೊಡುತ್ತಾರೆ. ಒಂದಿಷ್ಟೂ ನೋವು ಪಡದೆ ಅರ್ಜಿದಾರರು ನಿಧಾನವಾಗಿ ಶಾಶ್ವತ ನಿದ್ದೆಗೆ ಜಾರುತ್ತಾರೆ. ಆಗ ದಯಾಮರಣ ಸಮಿತಿಯು ಅವರನ್ನು ಪರಿಶೀಲನೆ ಮಾಡಿ ಸಾವು ಸಂಭವಿಸಿದೆ ಎಂದು ಘೋಷಣೆ ಮಾಡಿದಲ್ಲಿಗೆ ಪ್ರಕ್ರಿಯೆ ಪೂರ್ತಿ ಆಗುತ್ತದೆ.

ಸಾವನ್ನು ಸ್ವಾಗತಿಸಲು ಮಾನಸಿಕ ಸಿದ್ಧತೆ

ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

`ನನಗೆ ಪಾಪಪ್ರಜ್ಞೆ ಕಾಡುತ್ತಿಲ್ಲ. ನನಗಾಗಿ ಯಾರೂ ಕಣ್ಣೀರು ಸುರಿಸುವ ಅಗತ್ಯ ಇಲ್ಲ. ಇದು ನಾನೇ ಆರಿಸಿಕೊಂಡ ಸಾವು. ಹಾಗಾಗಿ ನನಗೆ ಯಾವ ವಿಷಾದವೂ ಇಲ್ಲ’ ಎಂದಾಕೆ ನಗುನಗುತ್ತಾ ಹೇಳುವಾಗ ಯಾರ ಮನಸ್ಸಾದರೂ ಕರಗದೆ ಇರದು!

ಹೋಗಿ ಬಾ ಝೊರೆಯಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

ಧವಳ ಧಾರಿಣಿ ಅಂಕಣ (Dhavall Dharini): ಗೌತಮ ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು. ಇಂದು ಬುದ್ಧ ಪೂರ್ಣಿಮಾ (Buddha Purnima) ಹಿನ್ನೆಲೆಯಲ್ಲಿ ಆತನ ಚಿಂತನೆಗಳ ಬಗ್ಗೆ ಒಂದು ಅವಲೋಕನ.

VISTARANEWS.COM


on

dhavala dharini column buddha ಧವಳ ಧಾರಿಣಿ
Koo
dhavala dharini by Narayana yaji

­ಧವಳ ಧಾರಿಣಿ ಅಂಕಣ: ಭಾರತದ ಇತಿಹಾಸದಲ್ಲಿ ಗೌತಮ ಬುದ್ಧ (Gautama Buddha) ಮಹತ್ವದ ಸ್ಥಾನ ಪಡೆಯುವುದು ಆತ ಹೊಸ ಧರ್ಮವನ್ನು ಸ್ಥಾಪಿಸಿದ್ದಾನೆ ಎನ್ನುವುದಕ್ಕೆ ಅಲ್ಲ. ಬೌದ್ಧ ಧರ್ಮವನ್ನು (buddhism) ನೇರವಾಗಿ ಬುದ್ಧನೇ ಸ್ಥಾಪಿಸಲಿಲ್ಲ. ಆತನ ನಿರ್ವಾಣದ ನಂತರದ ಇನ್ನೂರು ವರ್ಷಗಳ ನಂತರ ಆತನ ಶಿಷ್ಯರು ಒಂದೆಡೆ ಸೇರಿ ಬುಧ್ದನ ತತ್ತ್ವಕ್ಕೆ ಒಂದು ಧಾರ್ಮಿಕ ಸ್ವರೂಪವನ್ನು ಕೊಟ್ಟರು. ಶಾಕ್ಯಮುನಿ ಗೌತಮನಿಗೆ ಲೋಕದ ಜನತೆ ಬದುಕುತ್ತಿರುವ ವಿಧಾನದಲ್ಲಿ ಬದಲಾವಣೆ ತರಬೇಕಾಗಿತ್ತು. ವರ್ಣವ್ಯವಸ್ಥೆಯ ಮೂಲಕ ಅಸ್ತಿತ್ವಕ್ಕೆ ಬಂದ ಬ್ರಾಹ್ಮಣಿಕೆಯೆನ್ನುವುದು ಅದಾಗ ಜಾತಿಯಾಗಿ ಬದಲಾವಣೆಯಾಗಿತ್ತು. ಆದರೂ ಅದು ಅಷ್ಟು ಗಟ್ಟಿಯಾಗಿ ಅನುಷ್ಟಾನಕ್ಕೆ ಬಂದಿರಲಿಲ್ಲ. ಬ್ರಾಹ್ಮಣರ ಪಾರಮ್ಯವೆನ್ನುವುದು ಧಾರ್ಮಿಕ ರಂಗದಲ್ಲಿ ಇತ್ತು. ಆತನ ಜನನದ ಕಾಲಘಟ್ಟವಾದ ಸುಮಾರು ಕ್ರಿ. ಪೂ. 623 ಶತಮಾನದಲ್ಲಿ ಭಾರತ ಧಾರ್ಮಿಕವಾಗಿ ಹಲವು ಪಲ್ಲಟಗಳನ್ನು ಅನುಭವಿಸಿತ್ತು. ಸನಾತನ ಧರ್ಮದ ಆಚರಣೆಯಲ್ಲಿ ಸಮಗ್ರವಾದ ದಿಕ್ಕುಗಳನ್ನು ತೋರಿಸುವವರು ಇರಲಿಲ್ಲ. ಧಾರ್ಮಿಕ ನಾಯಕತ್ವವೆನ್ನುವದು ತತ್ವಜ್ಞಾನಿಗಳು ತಮಗೆ ತೋಚಿದ ದಿಕ್ಕಿನಲ್ಲಿ ಅರ್ಥೈಸಿಕೊಂಡು ಅದನ್ನೇ ಬೋಧಿಸುತ್ತಿದ್ದರು. ಈ ಕಾಲಘಟ್ಟದಲ್ಲಿಯೇ ತಂತ್ರಶಾಸ್ತ್ರ, ಅಘೋರಿಗಳು, ಕಾಪಾಲಿಕರು ಹೀಗೆ ಸಾಧನೆಗಳಿಗೆ ಸಾತ್ವಿಕಮಾರ್ಗಗಳ ಜೊತೆಗೆ ಹಟಯೋಗವೂ ಸೇರಿಹೋಗಿತ್ತು. ರಾಜರುಗಳು ಯಾವ ಹಾದಿಯನ್ನು ಹಿಡಿಯುತ್ತಿದ್ದಾರೋ ಅದೇ ಹಾದಿಯನ್ನು ಜನಸಾಮಾನ್ಯರು ನಡೆದುಕೊಳ್ಳುತ್ತಿದ್ದರು.

ಇಂತಹ ಹೊತ್ತಿನಲ್ಲಿ ಪ್ರವೇಶ ಮಾಡಿದ ಬುದ್ಧನ ಉಪದೇಶಗಳು ಸನಾತನ ಧರ್ಮಕ್ಕೇ ಹೊಸ ವ್ಯಾಖ್ಯಾನವನ್ನು ಕೊಟ್ಟವು. ಹಾಗಂತ ಆತ ಭಾರತೀಯ ದರ್ಶನ ಶಾಸ್ತ್ರಕ್ಕೆ ವಿಲೋಮವಾದದ್ದನ್ನು ತನ್ನು ಬೋಧನೆಯಲ್ಲಿ ಹೇಳಲಿಲ್ಲ. ಬುದ್ಧ ಅರ್ಥವಾಗಬೇಕಾದರೆ ಭಾರತೀಯ ತತ್ತ್ವಶಾಸ್ತ್ರ ಅರ್ಥವಾಗಬೇಕು. ಸ್ವರ್ಗಕಾಮಕ್ಕಾಗಿ ಯಜ್ಞ ಯಾಗಾದಿಗಳು ಎಂದು ಸಾರುತ್ತಿದ ಪುರಾಣಗಳ ನಡುವೆ ವೇದಾಂತದ ಪರಮ ಸತ್ಯವನ್ನು ಆತನ ಉಪದೇಶಗಳಲ್ಲಿ ಗಮನಿಸಬಹುದಾಗಿದೆ. “ವೇದಗಳಲ್ಲಿ ಅಡಗಿದ್ದ ಸತ್ಯಗಳನ್ನು ಹೊರತಂದು ಜಗತ್ತಿಗೆಲ್ಲ ಘಂಟಾಘೋಷವಾಗಿ ಸಾರಿದ ವಿಶಾಲಹೃದಯಿಯಾಗಿ ಬುದ್ದ ಕಾಣಿಸಿಸಿಕೊಳ್ಳುತ್ತಾನೆ ಎಂದು ವಿವೇಕಾನಂದರು ಹೇಳುತ್ತಾರೆ. “ಕಿಸಾಗೌತಮಿಗೆ ಆಕೆಯ ಮಗನ ಸಾವಿನ ನೋವನ್ನೂ ಮರೆಯಿಸಿ ಭವಚಕ್ರಗಳ ಬಂಧನದ ಜಗತ್ತಿನ ಮಾಯೆಯನ್ನು ಹೋಗಲಾಡಿಸಿದ ಬುದ್ಧ ಬಿಡಿಸಿದಷ್ಟೂ ಬಿಡಿಸಲಾಗದ ಒಗಟು”. ಸನಾತನ ಧರ್ಮದ ಸಾರವೇ ಬುದ್ಧನ ಉಪದೇಶವೆನ್ನಬಹುದಾಗಿದೆ. ಅದಕ್ಕೇ ಸ್ವಾಮಿ ವಿವೇಕಾನಂದರು ತಮ್ಮ ಕೃತಿಶ್ರೇಣಿಯಲ್ಲಿ “ಭಾರತದಲ್ಲಿ ಬೌದ್ಧಧರ್ಮವು ನಾಶವಾಗಲಿಲ್ಲ, ಉಪನಿಷತ್ತುಗಳಲ್ಲಿ ಹುಟ್ಟಿದೆ. ಅದು ನವಯುಗದ ಹಿಂದೂ ಧರ್ಮವಾಯಿತು” ಎನ್ನುತ್ತಾರೆ.

ಜೀವನದ ನಶ್ವರತೆಯೆನ್ನುವುದು ಬುದ್ಧನ ಬದುಕಿನಲ್ಲಿ ಬಂದ ಮೊದಲ ತಿರುವು. ಪ್ರಸಿದ್ಧವಾದ ಆತನ ವಾಕ್ಯ “ಆಸೆಯೇ ದುಃಖಕ್ಕೆ ಕಾರಣ” ಎನ್ನುವುದು ನೋಡಲು ಸರಳವಾಗಿ ಕಂಡರೂ ಈ ಸತ್ಯವನ್ನು ಮನಗಾಣುವಲ್ಲಿ ಬುದ್ಧ ಸುಮಾರು ಆರುವರ್ಷಗಳ ಕಾಲ ಹುಡುಕಾಡಿದ್ದಾನೆ. ತನ್ನ ಕುಲಗುರು ಅಸಿತದೇವಲನಿಂದ ಹಿಡಿದು ಆಲಾರಾ ಕಲಮ್, ಉದ್ಧತ ರಾಮಪುತ್ತ ಮುಂತಾದ ಅನೇಕರ ಹತ್ತಿರ ಈ ವಿಷಯವನ್ನು ಚರ್ಚಿಸಿದ್ದಾನೆ. ಹಿಮಾಲಯದ ತಪ್ಪಲಿನ ಕೆಲ ಸನ್ಯಾಸಿಗಳು ಪ್ರಾಪಂಚಿಕ ಸುಖ ಮತ್ತು ದುಃಖಗಳ ಕಾರಣವನ್ನು ಅರಿತು ವೇದೋಪನಿಷತ್ತುಗಳ ನಿಜವಾದ ಅರ್ಥಗಳನ್ನು ತಿಳಿದು ಅದನ್ನೇ ಬೊಧಿಸುತ್ತಿದ್ದರು. ಅವರೆಲ್ಲರೂ ಈತನಿಗೆ ತಮ್ಮಲ್ಲಿದ ವಿದ್ಯೆಯನ್ನು ಧಾರೆ ಎರೆದರೂ ಅವೆಲ್ಲವೂ ಬದುಕಿನ ಪರಮ ಸತ್ಯವನ್ನು ಸಾಧಿಸುವತ್ತ ಪ್ರಯೋಜನಕ್ಕೆ ಬಾರದವುಗಳು ಎನ್ನುವುದು ಅರಿವಾಯಿತು. ಉದ್ಧಕ ರಾಪಪುತ್ತನ ಹತ್ತಿರ ಸಮಾಧಿಗೆ ಹೋಗುವ ತಂತ್ರವನ್ನು ಕೇವಲ ಹದಿನೈದನೇ ದಿನಗಳಲ್ಲಿ ಕಲಿತ. ಆಗ ಅವನಿಗೆ ಅರಿವಾಗಿದ್ದು ಎಚ್ಚರಕ್ಕೂ ಮತ್ತು ಸಮಾಧಿಗೂ ಇರುವ ಸ್ಥಿತಿಯೆಂದರೆ ಗ್ರಹಿಕೆ ಮತ್ತು ಗ್ರಹಿಕೆಯಲ್ಲದ ಸ್ಥಿತಿ ಎನ್ನುವುದು. ಆದರೆ ಎಚ್ಚರಾದ ಮೇಲೆ ಮತ್ತೆ ಈ ಲೋಕದ ಅವಸ್ಥೆಗಳಲ್ಲೇ ಇರುತ್ತೇವೆ ಎನ್ನುವುದು ಅರಿತಾಗ ಸಮಾಧಿಯೆನ್ನುವುದು ಸ್ವಪ್ನ ಅಥವಾ ಸುಷುಪ್ತಿಯ ಅವಸ್ಥೆಗಳಲ್ಲಿರುವ ಸ್ಥಿತಿಯೇ ಹೊರತೂ ಬೇರೆನೂ ಅಲ್ಲವೆಂದು ಅರಿವಿಗೆ ಬಂತು. ಪರಿಪೂರ್ಣ ಜ್ಞಾನವೆನ್ನುವುದನ್ನು ಸಾಧಿಸಿದ ವ್ಯಕ್ತಿಗೆ ಮತ್ತೆ ಲೌಕಿಕ ಬಾಧಿಸಬಾರದು. ಹಾಗಾಗಿ ಯಾವುದು ಸ್ಥಾಯಿ ಸ್ವರೂಪವಲ್ಲವೋ ಅವೆಲ್ಲವೂ ಅವಿದ್ಯೆ ಎನ್ನುವ ತೀರ್ಮಾನಕ್ಕೆ ಬಂದವ ಗಯಾಕ್ಕೆ ಬಂದು ಅಲ್ಲಿನ ಸ್ಮಶಾನದಲ್ಲಿರುವ ಬೋಧಿವೃಕ್ಷದ ಕೆಳಗೆ ಧ್ಯಾನಮಾಡಲು ತೊಡಗಿದ. ಜ್ಞಾನವೆನ್ನುವದು ಪ್ರಾಪಂಚಿಕ ವಸ್ತುಗಳಿಂದ ವಿಮುಖನಾಗುವದಲ್ಲ, ನಮ್ಮ ಉಸಿರು, ಹಕ್ಕಿಯ ಹಾಡು, ಎಲೆ, ಸೂರ್ಯನ ಕಿರಣ ಇವೆಲ್ಲವೂ ಧ್ಯಾನಕ್ಕೆ ಸಾಧನವಾಗಬಹುದೆಂದು ಆತನಿಗೆ ಅನಿಸಿತು. ಒಂದು ಧೂಳಿನ ಕಣದಿಂದಲೇ ಸಮಗ್ರವಾಗಿ ಬ್ರಹ್ಮಾಂಡದ ಲಕ್ಷಣವನ್ನು ಅರಿಯಬಹುದೆನ್ನುವ ವಿಷಯ ಹೊಳೆಯಿತು. ಜ್ಞಾನೋದಯವೆನ್ನುವದು ವಾಸ್ತವ ಪ್ರಪಂಚದಲ್ಲಿದೆಯೇ ಹೊರತು ಕಾಣದ ಆತ್ಮ ಅಥವಾ ಬ್ರಹ್ಮದ ವಿಷಯದಲ್ಲಿ ಇಲ್ಲ. ಆತ್ಮ ಪ್ರತ್ಯೇಕವೆನ್ನುವ ಭಾವನೆಯನ್ನು ಮೀರಿ ಪ್ರಕೃತಿಯ ಪ್ರತೀ ವಸ್ತುವಿನಲ್ಲಿ ಸೌಂದರ್ಯವಿದೆಯೆನ್ನುವದನ್ನು ಗೌತಮನ ಅರಿತುಕೊಂಡ. ಪ್ರಪಂಚವೇ ಪರಸ್ಪರ ಅವಲಂಬಿತ ಮತ್ತು ಸ್ವಯಂ ಸ್ವಭಾವವುಳ್ಳ ಸತ್ಯವೆನ್ನುವ ಸೂತ್ರ ಆತನಿಗೆ ಅರಿವಾಯಿತು. ಜ್ಞಾನವೆನ್ನುವದು ಒಳಗಣ್ಣು ಎನ್ನುವ ಭ್ರಮೆಗಿಂತ ಹೊರಗಣ್ಣಿಗೆ ಕಾಣುವ ಪ್ರಪಂಚದ ಸಮಸ್ಥವಸ್ತುವಿನಲ್ಲಿ ಇದೆ ಎನ್ನುವದು ಸ್ಪಷ್ಟವಾಯಿತು.

buddha Purnima 2023

ಬುದ್ಧನ ಬೋಧನೆಗಳು ಮೊದಲನೆಯದಾಗಿ ಜೀವನವು ದುಃಖದಿಂದ ಕೂಡಿದೆ. ಜನನ, ಮರಣ, ರೋಗ, ವೃದ್ಧಾಪ್ಯ, ವಿರಹ, ಮನಸ್ಸು ಮತ್ತು ದೇಹಗಳ ವ್ಯವಸ್ಥೆಯೇ ದುಃಖಮಯ, ಎರಡನೆಯದಾಗಿ ಈ ದುಃಖಕ್ಕೆ ಕಾರಣವಿದೆ. ಮನುಷ್ಯ ತನ್ನ ಮೂಲರೂಪವನ್ನು ಅರಿಯದಿರುವದು, ಈ ಅಜ್ಞಾನಗಳಿಂದಾಗಿಯೇ ಆತ ದೇಹ-ಮನಸ್ಸುಗಳಿಗೆ ಅಂಟಿಕೊಳ್ಳುತ್ತಾನೆ. ಈ ಕಾರ್ಯಕಾರಣ ಸಂಬಂಧದಿಂದಾಗಿ ಕರ್ಮಚಕ್ರಗಳ ಮೂಲಕ ಪುನರ್ಜನದ ಭವಚಕ್ರಗಳಿಗೆ ಸಿಕ್ಕುಬೀಳುತ್ತಾನೆ, ಈ ಯಾತನೆಗಳಿಗೆ ಕಾರಣ ಆಯಾ ವ್ಯಕ್ತಿಯೇ ಹೊರತೂ ವಿಧಿ, ಆಕಸ್ಮಿಕ ಇತ್ಯಾದಿಗಳೆಲ್ಲ ಸುಳ್ಳು. ಮೂರನೆಯದು ಈ ಭವಚಕ್ರಗಳಿಂದ ಬಿಡುಗಡೆ. ಬುದ್ಧ ಇದು ಅವಿದ್ಯೆ, ಅಜ್ಞಾನಾವಸ್ಥೆಯೆನುತ್ತಾನೆ. ಲೋಕದಲ್ಲಿನ ಎಲ್ಲಾ ಅವಸ್ಥೆಗಳಿಗೂ ಇದೇ ಕಾರಣ, ಇದೇ “ಪ್ರತ್ಯೀತ್ಯಸಮುತ್ಪಾದ” ಸಿದ್ಧಾಂತ. ನಾಲ್ಕನೆಯದೇ ಈ ಭವಚಕ್ರಗಳಿಂದ ಬಿಡುಗಡೆಯ ಮಾರ್ಗವೆಂದರೆ ಈ ದುಃಖದಿಂದ ಬಿಡುಗಡೆ. ಅದೇ ಅವಿಧ್ಯಾ ಜಿವನದಿಂದ ಬಿಡುಗಡೆ. ಇದನ್ನು ಸಾಧಿಸಲು ಅಷ್ಟಾಂಗಿಕ ಮಾರ್ಗಗಳಾದ ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್ಕು, ಸಮ್ಯಕ್ ಕ್ರಿಯಾ ಸಮ್ಯಕ್ ಆಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ ಮತ್ತು ಸಮ್ಯಕ ಸಮಾಧಿಯ ಮೂಲಕ ಸಾಧಿಸಬಹುದು. ಈ ಅಷ್ಟಾಂಗ ಮಾರ್ಗವೆಂದರೆ ನೈತಿಕತೆ, ಸಾಧನೆ, ಸಾಕ್ಷಾತ್ಕಾರ, ಸ್ವಾರ್ಥವನ್ನು ತ್ಯಜಿಸುವದು, ಬೂತದಯೆಗಳು. ಬುದ್ದ ಇದನ್ನು ಸ್ವಯಂ ತನ್ನ ಕೊನೆಯಕ್ಷಣದವರೆಗೂತಾನೇ ಆಚರಿಸಿದ್ದನು. ಕುಂಡ ಕಮ್ಮಾರಪುತ್ತ ನೀಡಿದ ವಿಷಯುಕ್ತ ಆಹಾರದಿಂದ ಸಾಯುವ ಸಂದರ್ಭದಲ್ಲಿಯೂ ಅವನನ್ನು ಕ್ಷಮಿಸಿದನು. ಪ್ರಪಂಚದಲ್ಲಿ ಕಾಣುವ ವಸ್ತುಗಳನ್ನು ಅವು ಇರುವಂತೆಯೇ ತಿಳಿದವ ಬುದ್ಧ. ಹಾಗಂತ ಇದು ಚಾರ್ವಾಕ ಮತಕ್ಕೆ ಹತ್ತಿರವಾದಂತೆ ಕಂಡರೂ ಆತ ನಾಸ್ತಿಕವಾದಿಯಲ್ಲ. ಬುದ್ಧ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾನೆ, ಅದು ಅದ್ವೈತವನ್ನು ಹೋಲುತ್ತದೆ. ಬೌದ್ಧರು ಆತ್ಮದ ಅಸ್ತಿತ್ವವನ್ನು ಒಪ್ಪುವದಿಲ್ಲ ಎನ್ನುವ ಸಾಮಾನ್ಯ ನಂಬಿಕೆ. ಆದರೆ ಇದಕ್ಕೆ ಆಧಾರವಿಲ್ಲ.

ಬೌದ್ಧ ದರ್ಶನಗಳಲ್ಲಿ ಬುದ್ಧತ್ತ್ವಕ್ಕೆ ಏರುವುದು ಅಂದರೆ ಅದು ತುರೀಯಾವಸ್ಥೆ. ಸಾಮಾನ್ಯ ವ್ಯಕ್ತಿ ಬುದ್ಧನಾಗಲಿಕ್ಕೆ ಅನೇಕ ಜನ್ಮಗಳನ್ನು ಪಡೆಯಬೇಕಾಗುತ್ತದೆ. ಅದರಲ್ಲಿಯೂ ಕೊನೆಯ ಮೂರು ಹಂತಗಳಾದ ಅರಿಹಂತ, ಪಚ್ಛೇಕ ಬುದ್ಧತ್ವವನ್ನು ಸಾಧಿಸಿದ ಮೇಲೆ ಗೌತಮ ಬುದ್ಧ ತಲುಪಿದ ಸ್ಥಿತಿ ಸಮ ಸಂಬುದ್ಧತ್ವದ ಸ್ಥಿತಿ. ಜಾತಕದ ಕತೆಗಳಲ್ಲಿ ಬುದ್ಧನ ಹಿಂದಿನ ಜನ್ಮದ ವಿವರಗಳು ಕಥೆಯ ರೂಪದಲ್ಲಿ ಬರುವುದನ್ನು ಗಮನಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮದ ಅಸ್ತಿತ್ವವನ್ನು ಬುದ್ಧ ಒಪ್ಪುವದೂ ಇಲ್ಲ ಅಥವಾ ನಿರಾಕರಿಸುವುದೂ ಇಲ್ಲ. ವಚ್ಚಗೋತ್ತ ಎನ್ನುವ ಬ್ರಾಹ್ಮಣ ಇದೇ ವಿಷಯದಲ್ಲಿ ಬುದ್ಧನ ಹತ್ತಿರ ಕೇಳುವ ಪ್ರಶ್ನೆ ತೆವಿಜ್ಜ ಸುತ್ತದಲ್ಲಿ ಬರುತ್ತದೆ. ಆತ ಬುದ್ಧನಲ್ಲಿ ಕೇಳುವ ಆತ್ಮವಿದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆಗೆ ಆತ ಮೌನವಾಗಿಬಿಡುತ್ತಾನೆ. ಆತನ ಪ್ರಕಾರ ಆತ್ಮವಿದೆ ಎಂದು ಸಾರಿದ್ದರೆ ಅನಿತ್ಯಕ್ಕೇ ನಿತ್ಯವೆಂದು ಆತನ ಶಿಷ್ಯರು ಪರಿಗಣಿಸಬಹುದು, ಇಲ್ಲವೆಂದರೆ ಉಚ್ಛೇದವಾದ (ವಿನಾಶವಾದ)ವನ್ನು ಉಪದೇಶಿಸುವ ದಾರ್ಶನಿಕರು ಹೇಳಿದ್ದು ಸತ್ಯವೆಂದು ಅವರು ನಂಬುತ್ತಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಇದರ ಅರ್ಥವಿಷ್ಟೇ ಬುದ್ಧ ಅಸ್ತಿತ್ವವಾದಿಯಾಗಿದ್ದ. ತನ್ನ ಶಿಷ್ಯರಿಗೆ “ನಿಮಗೆ ನೀವೇ ಬೆಳಕಾಗಿರಿ” ಎಂದು ಉಪದೇಶವನ್ನು ಮಾಡಿದ್ದ. ಬದುಕಿನಲ್ಲಿ ಕಾಣುವ ವಸ್ತುಗಳಲ್ಲಿಯೇ ಆನಂದವಿದೆ ಎನ್ನುವದರ ಮೂಲಕವೇ ಆತನಿಗೆ ಜ್ಞಾನೋದಯವಾದದ್ದರಿಂದ ಆತ “ತಿವಿಜ್ಜಸುತ್ತ”ದಲ್ಲಿ ಹೇಳುವಂತೆ. “ಹಳೆಯ ಓಲೆಗರಿಯಲ್ಲಿ ಹೇಳಿದೆ ಎನ್ನುವ ಮಾತ್ರಕ್ಕೆ ನಂಬಬಾರದು. ಎಲ್ಲವನ್ನೂ ವಿಚಾರಣೆ ಮಾಡಿ ವಿಶ್ಲೇಷಿಸಿ ಅದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದಾದರೆ ಅದರಂತೆ ನೀವೂ ಬಾಳಿ” ಎಂದಿದ್ದಾನೆ. ಬುದ್ಧನ ಪ್ರಕಾರ ನಿರ್ವಾಣವೆಂದರೆ ಅದು ‘ಸಂವೇದನೆ ಮತ್ತು ಭಾವನೆಗಳು ನಿಂತುಹೋಗುವ ಕ್ರಿಯೆ’. ಇದು ಜ್ಞಾತ್ರಾಜ್ಞೇಯದ ಸಂಬಂಧದ ಆಭಾವ. ಈ ನಿರ್ವಾಣಕ್ರಿಯೆಯನ್ನು ಮಾಂಡುಕ್ಯೋಪನಿಷತ್ತಿನ ತುರೀಯಾವಸ್ಥೆಗೆ ಹೋಲಿಸಬಹುದು. (ನಾಂತಃಪ್ರಜ್ಞಂ ನ ಬಹಿಃಪ್ರಜ್ಞಂ..ಮಾಂಡೂಕ್ಯ-7) ಇವೆರಡರಲ್ಲೂ ಭಾವನಾತ್ಮಕವಾದ ವಿಷಯಗಳಿಲ್ಲ. ಅವು ವಿಷಯ, ವಿಷಯಿ ಸಂಬಂಧ, ದೇಶ ಕಾಲ ನಿಮಿತ್ತ ಇವುಗಳಿಗೆ ಅತೀತವಾಗಿದೆ. ಇವೆರಡರಲ್ಲೂ ಚೇತನಾವಿಷಯಗಳಿಲ್ಲ; ಚೈತನ್ಯಸ್ವರೂಪವಿದೆ. ಪಾಲಿ ಭಾಷೆಯಲ್ಲಿರುವ ತೇರವಾದ ಬೌದ್ಧಗ್ರಂಥ ‘ಉದಾನ”ದಲ್ಲಿ “ಅಜವೂ ಅನಾದಿಯೂ ಅಕೃತವೂ ಅಸಂಯುಕ್ತವೂ ಆದುದೊಂದಿದೆ. ಎಲೈ ಭಿಕ್ಕು, ಅದಿಲ್ಲವಾದರೆ ಹುಟ್ಟುಳ್ಳದ್ದೂ, ಸಾದಿಯೂ ಕೃತವೂ ಸಂಯುಕ್ತವೂ ಆದ ಜಗತ್ತಿನಿಂದ ಮುಕ್ತಿಯೇ ಇರುವದಿಲ್ಲ” (ಉದಾನ 8-3) ಎಂದಿದ್ದಾನೆ. ಆತ ನಿರ್ವಿಕಾರವೂ ಶಾಶ್ವತವೂ ಆದ ಶಾಶ್ವತ ಸತ್ಯವನ್ನು ಒಪ್ಪುತ್ತಾನೆಂಬುದು ಇದರಿಂದ ಸ್ಪಷ್ಟ. ಇದಲ್ಲದಿದ್ದರೆ ಅವನ ನಿರ್ವಾಣವಾದವೇ ಬಿದ್ದುಹೋಗುತ್ತದೆ. ಆತ ಹೇಳಿದ್ದು “ಆತ್ಮ ಮತ್ತು ಬ್ರಹ್ಮ ವಿಷಯಕವಾದ ವಿಚಾರಗಳಿಂದ ಯಾವ ಪ್ರಯೋಜನವೂ ಇಲ್ಲ, ಒಳ್ಳೆಯದನ್ನು ಮಾಡಿರಿ; ಒಳ್ಳೆಯವರಾಗಿರಿ, ಇದೇ ನಿಮ್ಮನ್ನು ನಿರ್ವಾಣಕ್ಕೆ ಕೊಂಡೊಯ್ಯುತ್ತದೆ”. ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

Continue Reading

ಅಂಕಣ

ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

ರಾಜಮಾರ್ಗ ಅಂಕಣ: ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು.

VISTARANEWS.COM


on

rajamarga column mangalore flight crash 1
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ (Mangalore Airport) 14 ವರ್ಷಗಳ ಹಿಂದೆ ಇದೇ ದಿನ (2010 ಮೇ 22) ನಡೆದ ಆ ಒಂದು ದುರ್ಘಟನೆಯು (Mangalore flight crash) ದೇಶದಾದ್ಯಂತ ಉಂಟುಮಾಡಿದ ನೋವಿನ ಅಲೆಗಳನ್ನು ಈಗ ಕಲ್ಪನೆ ಮಾಡಲೂ ಭಯವಾಗುತ್ತದೆ! ದಕ್ಷಿಣ ಭಾರತದ ಅತೀ ದೊಡ್ಡ ವಿಮಾನ ದುರಂತವದು.

ಅಂದು ಮೇ 22, 2010 ಮಧ್ಯರಾತ್ರಿ…

ದುಬೈಯಿಂದ ಹೊರಟ ಭಾರತದ ವೈಭವದ ಬೋಯಿಂಗ್ 737-800 ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಅದರಲ್ಲಿ ಎಲ್ಲ ಪ್ರಾಯದವರೂ ಇದ್ದರು. ಹೆಚ್ಚಿನವರು ಕರ್ನಾಟಕ ಮತ್ತು ಕೇರಳದವರು. ನೂರಾರು ಕನಸುಗಳನ್ನು ಹೊತ್ತು ತಮ್ಮ ತಾಯ್ನೆಲಕ್ಕೆ ಹೊರಟವರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂಜಾನೆ ಸೂರ್ಯೋದಯಕ್ಕೆ ಮೊದಲು ಅವರು ಮಂಗಳೂರು ತಲುಪಿ ತಮ್ಮ ತಮ್ಮ ಊರಿಗೆ ಟ್ಯಾಕ್ಸಿ ಏರಬೇಕಾಗಿತ್ತು. ಆದರೆ ವಿಧಿಯ ಆಟ ಬೇರೆಯೇ ಇತ್ತು.

ಟೇಬಲ್ ಟಾಪ್ ರನ್ ವೇ…

ಮುಂಜಾನೆ ಆರು ಘಂಟೆಯ ಹೊತ್ತಿಗೆ ಜನರು ಕಣ್ಣುಜ್ಜಿ ಹೊರಗೆ ನೋಡಲು ತೊಡಗಿದಾಗ ವಿಮಾನ ಬಜಪೆ ವಿಮಾನ ನಿಲ್ದಾಣದ ರನ್ ವೇ ಸ್ಪರ್ಶ ಮಾಡಿ ಓಡತೊಡಗಿತ್ತು. ಅದು ಟೇಬಲ್ ಟಾಪ್ ರನ್ ವೇ. ಅಂದರೆ ಎತ್ತರದ ಪರ್ವತದ ಮೇಲೆ ಸಮತಟ್ಟು ಮಾಡಿ ನಿರ್ಮಿಸಿದ್ದ ರನ್ ವೇ. ವಿಮಾನದ ಕ್ಯಾಪ್ಟನ್ ಗ್ಲುಸಿಕಾ (Glusica) ಮತ್ತು ಫಸ್ಟ್ ಆಫೀಸರ್ ಹರಿಂದರ್ ಸಿಂಘ್ ಅಹ್ಲುವಾಲಿಯಾ ಇಬ್ಬರೂ ಅನುಭವಿಗಳು. ಅದರಲ್ಲಿ ಕ್ಯಾಪ್ಟನ್ ಗ್ಲುಸಿಕಾ ಅದೇ ರನ್ ವೇ ಮೇಲೆ ಹಿಂದೆ 16 ಬಾರಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ದಾಖಲೆ ಹೊಂದಿದ್ದರು. 2448 ಮೀಟರ್ ಉದ್ದವಾದ ರನ್ ವೇಯಲ್ಲಿ ವಿಮಾನವನ್ನು ನಿಯಂತ್ರಣಕ್ಕೆ ತಂದು ನಿಲ್ಲಿಸುವುದು ಕಷ್ಟ ಆಗಿರಲಿಲ್ಲ. ವಾತಾವರಣವೂ ಪೂರಕವಾಗಿತ್ತು. ಬಜಪೇ ವಿಮಾನ ನಿಲ್ದಾಣದಿಂದ ಪೂರಕ ಸಂಕೇತಗಳು ದೊರೆಯುತ್ತಿದ್ದವು.

ಕಣ್ಣು ಮುಚ್ಚಿ ತೆರೆಯುವ ಒಳಗೆ..

ಈ ಬಾರಿ ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು. ಆಕಾಶದ ಎತ್ತರಕ್ಕೆ ಬೆಂಕಿ ಮತ್ತು ಹೊಗೆ ಏರುತ್ತಾ ಹೋದಂತೆ ಒಳಗಿದ್ದ ಪ್ರಯಾಣಿಕರಿಗೆ ಏನಾಗ್ತಾ ಇದೆ ಎಂದು ಅರಿವಾಗುವ ಮೊದಲೇ ಇಡೀ ವಿಮಾನ ಸುಟ್ಟು ಹೋಯಿತು. ಸಣ್ಣಗೆ ಮಳೆ ಸುರಿಯುತ್ತಿದ್ದರೂ ವಿಮಾನದ ಬೆಂಕಿ ಆರಲಿಲ್ಲ.

ರೆಸ್ಕ್ಯೂ ಆಪರೇಶನ್ ಆರಂಭ.

ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಮಂಗಳೂರಿನಿಂದ ಅಗ್ನಿ ಶಾಮಕ ವಾಹನಗಳು, ಆಂಬ್ಯುಲೆನ್ಸಗಳು ಸ್ಥಳಕ್ಕೆ ಧಾವಿಸಿ ಬಂದವು. ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಜೀವದ ಹಂಗು ತೊರೆದು ಸ್ಥಳಕ್ಕೆ ಧಾವಿಸಿದರು. ಬೆಂಕಿ ಆರಿಸುವ ಪ್ರಯತ್ನವು ಹಲವು ಘಂಟೆ ನಡೆಯಿತು. ವಿಮಾನದಿಂದ ಸುಟ್ಟು ಕರಕಲಾದ ಶವಗಳನ್ನು ಹೊರಗೆ ತೆಗೆಯುವುದೇ ಕಷ್ಟ ಆಯಿತು. ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಂದು ಸುಟ್ಟು ಹೋದವರ ಸಂಖ್ಯೆಯೇ 158!

ವಿಮಾನದಲ್ಲಿ ಇದ್ದ ಪ್ರಯಾಣಿಕರ ಸಂಖ್ಯೆ 166. ಆರು ಜನ ಕ್ರೂ (Crew) ಸದಸ್ಯರು ಬೇರೆ ಇದ್ದರು. ಅಂದು ಬದುಕಿ ಉಳಿದವರ ಸಂಖ್ಯೆ 8 ಮಾತ್ರ. ತೀವ್ರವಾಗಿ ಗಾಯಗೊಂಡವರ ಸಂಖ್ಯೆ 8. ಅಂದರೆ 158 ಜನರು ಸುಟ್ಟು ಕರಕಲಾಗಿ ಹೋಗಿದ್ದರು! ಕ್ರೂ (Crew) ಸದಸ್ಯರೂ ಬೂದಿ ಆಗಿದ್ದರು. ಶವಗಳನ್ನು ಗುರುತು ಹಿಡಿಯುವುದು ತುಂಬಾನೇ ಕಷ್ಟ ಆಯಿತು. ಒಂದೊಂದು ಶವವನ್ನು ಎತ್ತಿ ಆಂಬುಲೆನ್ಸಗೆ ಸಾಗಿಸುವಾಗ ಜನರ ಆಕ್ರಂದನ ಹೃದಯ ವಿದ್ರಾವಕ ಆಗಿತ್ತು.

ಆಸ್ಪತ್ರೆಗೆ ಧಾವಿಸಿ ತಮ್ಮವರನ್ನು ಶವಗಳ ರಾಶಿಯಲ್ಲಿ ಹುಡುಕುತ್ತಾ ಅಳುವವರ ದೃಶ್ಯವು ನಿಜಕ್ಕೂ ಕರುಣಾಜನಕ ಆಗಿತ್ತು. ಅದರಲ್ಲಿಯೂ 12 ಶವಗಳ ಗುರುತು ಹಿಡಿಯುವುದೇ ಕಷ್ಟವಾಗಿ ಅವುಗಳನ್ನು ಮುಂದೆ ಕೂಳೂರಿನ ಫಲ್ಗುಣಿ ನದಿ ತೀರದಲ್ಲಿ ಸಾಮೂಹಿಕವಾಗಿ ಸಂಸ್ಕಾರ ಮಾಡಲಾಯಿತು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತದಲ್ಲಿ ಕಡ್ಡಾಯ ಮತದಾನ ಕಾನೂನು ಯಾಕೆ ಸಾಧ್ಯವಿಲ್ಲ?

ಪೈಲಟ್ ನಿದ್ದೆ ರೆಕಾರ್ಡ್ ಆಗಿತ್ತು!

ಇಂತಹ ಅಪಘಾತಗಳು ನಡೆದಾಗ ಗಂಭೀರವಾದ ವಿಚಾರಣೆಗಳು ನಡೆಯುತ್ತವೆ. ಕಾಕ್‌ಪಿಟ್ ರೆಕಾರ್ಡರ್‌ನಲ್ಲಿ ಪೈಲಟ್ ಕ್ಯಾಪ್ಟನ್ ಗ್ಲುಸಿಕಾ ಅವರ ನಿದ್ದೆ ರೆಕಾರ್ಡ್ ಆಗಿತ್ತು. ಅಂದರೆ 55 ವರ್ಷ ಪ್ರಾಯದ ಆತನು ಸುಮಾರು ಹೊತ್ತು ವಿಮಾನದ ಹಾರಾಟದ ಅವಧಿಯಲ್ಲಿ ಮಲಗಿದ್ದು ನಿಚ್ಚಳವಾಯಿತು! ಇದೇ ಅಪಘಾತಕ್ಕೆ ಕಾರಣ ಎಂದು ಧೃಡವಾಗಿತ್ತು.

ಮುಂದೆ ಏನಾಯಿತು?

ರಾಜ್ಯ ಮತ್ತು ಕೇಂದ್ರ ಸರಕಾರಗಳು ಮೃತರಾದವರಿಗೆ ಪರಿಹಾರ ಕೊಟ್ಟವು. ವಿಮಾನ ಯಾನ ಸಂಸ್ಥೆ ಮತ್ತು ಖಾಸಗಿ ವಿಮಾ ಕಂಪೆನಿಗಳು ಪರಿಹಾರಗಳನ್ನು ನೀಡಿದವು. ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ದುರಂತದ ಸ್ಮಾರಕವನ್ನು ನಿರ್ಮಾಣ ಮಾಡಿ ಮೃತರಾದವರಿಗೆ ಶ್ರದ್ಧಾಂಜಲಿ ಕೊಟ್ಟಿತ್ತು. ಆದರೆ ತಮ್ಮವರನ್ನು ಕಳೆದುಕೊಂಡು ಇಂದಿಗೂ ರೋಧಿಸುತ್ತಿರುವ, ನೋವು ಪಡುತ್ತಿರುವ ಮಂದಿಗೆ ಈ ದುರಂತವು ಮರೆತು ಹೋಗುವುದು ಹೇಗೆ? ಅಂದು ಮಡಿದ ನೂರಾರು ಮಂದಿಗೆ ಒಂದು ಹನಿ ಕಣ್ಣೀರು ಸುರಿಸಿ ಶ್ರದ್ಧಾಂಜಲಿ ಕೊಡೋಣ ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಅಂಬೇಡ್ಕರ್, ಮುಸ್ಲಿಂ ಲೀಗ್ ಒತ್ತಾಯಿಸಿದರೂ ಜನಸಂಖ್ಯಾ ವಿನಿಮಯ ಆಗಲಿಲ್ಲ!

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳನ್ನು ರೂಪಿಸಿದವರು, ಸತ್ಯಸಂಗತಿಗಳನ್ನು ಮುಚ್ಚಿಟ್ಟು, ಬರೀ “ಅಹಿಂಸೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿತು” ಎಂಬ ಸುಳ್ಳನ್ನೇ ಹಾಡುತ್ತಾ ಬಂದಿದ್ದಾರೆ. ಇಂದಿಗೂ ಭಾರತೀಯ ಜನಮಾನಸದಲ್ಲಿ ಗಾಂಧಿ – ನೆಹರೂ ಹೆಸರಿನ ಇಂತಹ ಮಿಥ್ಯಾ ಪೂರ್ವಗ್ರಹಗಳೇ ತುಂಬಿಕೊಂಡಿವೆ. ದೇಶದ ಶತ್ರುಗಳು ನಮ್ಮಿಂದ ಮುಚ್ಚಿಟ್ಟ ನಿಜೇತಿಹಾಸದ ಗರ್ಭದಲ್ಲಿ ಇನ್ನೇನೇನು ಭಯಾನಕ ಸಂಗತಿಗಳು ಅಡಗಿವೆಯೋ!

VISTARANEWS.COM


on

nanna desha nanna dani column ambedkar jinnah
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ಪಾಕಿಸ್ತಾನಕ್ಕೆ (pakistan) ಸಂಬಂಧಿಸಿದಂತೆ, 1940ರಷ್ಟು ಹಿಂದೆಯೇ, ಡಾ।। ಅಂಬೇಡ್ಕರ್ (Dr Ambedkar) ಅವರು ಜನಸಂಖ್ಯಾ ವಿನಿಮಯವನ್ನು ಪ್ರಸ್ತಾಪಿಸಿದ್ದರು. ಕ್ವಾಯಿಡ್-ಏ-ಆಜಂ (ಮಹಾನ್ ನಾಯಕ) ಎಂದೇ ಹೆಸರಾದ ಮೊಹಮ್ಮದ್ ಅಲಿ ಜಿನ್ನಾ (Mohammed Ali Jinnah) ಪಾಕಿಸ್ತಾನದ ನಿರ್ಮಾತೃ. ಪಾಕಿಸ್ತಾನದ ನಿರ್ಮಾಣದ ಅನಂತರ ಅವರು ಅಲ್ಲಿನ ಗವರ್ನರ್ ಜನರಲ್ ಆದರು. ಆ ಪದವಿ ಎಂದರೆ “ಸಶಸ್ತ್ರ ಪಡೆಗಳ ಮಹಾ ದಂಡನಾಯಕ” ಎಂದರ್ಥ. ಅದು ಬಹಳ ಬಹಳ ಮಹತ್ತ್ವದ್ದು ಎಂಬುದು ಜಿನ್ನಾಗೆ ಗೊತ್ತಿತ್ತು. ಭಾರತದ “ನಮ್ಮ” ನಾಯಕರು, ಯಾವುದಕ್ಕೂ ಹೇಸದ ನೀಚ – ಕುತಂತ್ರಿ ಮೌಂಟ್ ಬ್ಯಾಟನ್ ನನ್ನೇ ಇಲ್ಲಿನ ಗವರ್ನರ್ ಜನರಲ್ ಆಗಿ ಉಳಿಸಿಕೊಂಡುದರಿಂದ ಬಹಳ ಬಹಳ ತೊಂದರೆಯಾಯಿತು. ನವನಿರ್ಮಿತ ಇಸ್ಲಾಮಿಕ್ ದೇಶ ಪಾಕಿಸ್ತಾನದ ಕಡೆಯಿಂದ ಕಾಶ್ಮೀರವನ್ನು (Kashmir) ಆಕ್ರಮಿಸಿಕೊಳ್ಳಲು, ವಶಪಡಿಸಿಕೊಳ್ಳಲು ಪಾಕ್ ಸೇನೆ ನುಗ್ಗಿ ಬರುತ್ತಿದ್ದರೂ ನಮ್ಮ ಸೇನಾ ಪ್ರತ್ಯಾಕ್ರಮಣಕ್ಕೆ ಮೌಂಟ್ ಬ್ಯಾಟನ್ ಅನುಮತಿ ನೀಡಲೇ ಇಲ್ಲ. ಅವನು ಮೂಲಭೂತವಾಗಿ ಅಂತಹ ನೀಚನೇ, ಧೂರ್ತನೇ. ಹಾಗಾಗಿ ಕಾಶ್ಮೀರದ ಮೂರನೆಯ ಒಂದು ಭಾಗ ಇಂದಿಗೂ ಪಾಕಿಸ್ತಾನದಲ್ಲಿಯೇ ಇದೆ. ನಮ್ಮ “ಮಹಾನ್” ನಾಯಕರು ಮಾಡಿದ ಇಂತಹ ಅವಿವೇಕಗಳು ಒಂದು, ಎರಡು ಅಲ್ಲ.

ಜಿನ್ನಾ ಪಾಕಿಸ್ತಾನದ “ಫಾದರ್ ಆಫ್ ದ ನೇಷನ್” ಸಹ ಆದರು. ಅವರ ಚಿತ್ರವೇ ಪಾಕಿಸ್ತಾನದ ಕರೆನ್ಸಿ ನೋಟುಗಳ ಮೇಲೆ ಇಂದಿಗೂ ರಾರಾಜಿಸುತ್ತಿದೆ. ಪಾಕ್ ನಿರ್ಮಾಣಕ್ಕೆ ಮೊದಲೇ, ಅವಿಭಜಿತ ಭಾರತದಲ್ಲಿಯೇ ಜಿನ್ನಾ 1941ರಲ್ಲಿ “ದ ಡಾನ್” ಇಂಗ್ಲಿಷ್ ಪತ್ರಿಕೆಯನ್ನು ಹುಟ್ಟುಹಾಕಿದರು. “ದ ಡಾನ್” ಮುಸ್ಲಿಂ ಲೀಗಿನ ಮುಖವಾಣಿಯಾಗಿ ಬೆಳೆಯಿತು. ಅಭಿಲೇಖಾಗಾರಗಳಲ್ಲಿ (Archives) ದೊರೆಯುವ ಈ ಪತ್ರಿಕೆಯ ಸಂಚಿಕೆಗಳು, ಪ್ರಚಲಿತ ಸುಳ್ಳು ಇತಿಹಾಸವನ್ನೇ ಓದುತ್ತ ಬಂದವರಿಗೆ ಆಘಾತವನ್ನೇ ಉಂಟುಮಾಡುತ್ತವೆ.

1946-47ರ ಅತ್ಯಂತ ಭಯಾನಕ ಕಾಲಘಟ್ಟದಲ್ಲಿ ಜಿನ್ನಾ ಮತ್ತು ಮುಸ್ಲಿಂ ಲೀಗ್ ಕಾರಣದಿಂದ, 20ಲಕ್ಷಕ್ಕೂ ಹೆಚ್ಚು ಜನರ ಹತ್ಯೆ, ಆ ಕಾಲಕ್ಕೆ ಅತಿ ದೊಡ್ಡ ಸಂಖ್ಯೆ ಎನಿಸುವ ಎರಡು ಕೋಟಿ ಜನರು ಮನೆಮಠ ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿ ವಲಸೆ ಹೋಗಿದ್ದು, ಅಕ್ಷರಶಃ ಅನೇಕ ಲಕ್ಷ ಹೆಣ್ಣುಮಕ್ಕಳ ಮೇಲೆ ಬರ್ಬರ ಅತ್ಯಾಚಾರ ಆದುದು ಕಟುವಾಸ್ತವ. ವಿಭಜನೆಯ ಮಹಾಕ್ಷೋಭೆಯನ್ನು ನಿರ್ವಹಿಸಲು “ಬ್ರಿಟಿಷರ ಪ್ರೀತಿಪಾತ್ರ”ರಂತೂ ಸಂಪೂರ್ಣವಾಗಿ ಅಸಮರ್ಥರಾಗಿದ್ದರು ಮತ್ತು ಗಮನಿಸಿ ನೋಡಿದರೆ, ಅವರ ಎಲ್ಲ ನಿರ್ಧಾರ – ಉದ್ದೇಶಗಳೂ ಅನುಮಾನಕ್ಕೆ ಕಾರಣವಾಗುತ್ತವೆ. ಪ್ರಸ್ತುತ ಬಾಂಗ್ಲಾದೇಶಕ್ಕೆ ಸೇರಿಹೋಗಿರುವ ಇಡೀ ನೋವಾಖಾಲೀ ಪ್ರದೇಶದಲ್ಲಿ ನಡೆದ ಮುಸ್ಲಿಮರ ದೌರ್ಜನ್ಯ, ಅತ್ಯಾಚಾರ, ಜಿಜಿಯಾ ತೆರಿಗೆ ಹಾಕುವುದು, ನರಸಂಹಾರಗಳು ಬೀಭತ್ಸ ಸ್ವರೂಪದವು. ವಿಚಿತ್ರವೆಂದರೆ, ಅಲ್ಲಿನ ಹಿಂದೂಗಳು ರೋಸಿಹೋಗಿ ಪ್ರತ್ಯಾಘಾತ ನೀಡಲು ಉದ್ಯುಕ್ತರಾದಾಗ, ಮಹಾತ್ಮರು ಅಲ್ಲಿಗೇ “ಶಾಂತಿಸ್ಥಾಪನೆಗೆಂದು ಹೋಗಿ” ಹಿಂದೂಗಳ ಕೈಕಟ್ಟಿಹಾಕಿದರು. ಅಂತೆಯೇ, ಬಿಹಾರದ ಮುಸ್ಲಿಮರ ಹಿಂಸೆ ಅತ್ಯಾಚಾರಗಳು ಮಿತಿಮೀರಿ, ಅಲ್ಲಿನ ಹಿಂದೂಗಳೂ ತಿರುಗೇಟು ನೀಡಲು ಪ್ರಾರಂಭಿಸಿದಾಗ ನೆಹರೂ ಅವರು ಬಿಹಾರದ ಮೇಲೆ ಬಾಂಬ್ ಹಾಕುವುದಾಗಿ ಘರ್ಜಿಸಿದರು.

ನಿಜೇತಿಹಾಸದ ಪುಟಗಳನ್ನು ಗಮನಿಸಿ ವಿಶ್ಲೇಷಿಸಿದಾಗ, ಹಿಂದೂ ಸಮಾಜಕ್ಕೆ ತನ್ನ “ಸ್ವಯಂಘೋಷಿತ ಶತ್ರುಗಳು” ಯಾರು, “ಅಘೋಷಿತ ಶತ್ರುಗಳು” ಯಾರು ಎನ್ನುವುದು ಅಂದಿಗೂ ಗೊತ್ತಾಗಿಲ್ಲ, ಇಂದಿಗೂ ಅರ್ಥವಾಗುತ್ತಿಲ್ಲ, ಎನಿಸಿ ವಿಷಾದವೆನಿಸಿಬಿಡುತ್ತದೆ.

ಡಾ|| ಅಂಬೇಡ್ಕರ್ ಅವರು ಪ್ರಸ್ತಾಪಿಸಿದ ಜನಸಂಖ್ಯಾ ವಿನಿಮಯವನ್ನು ಕಾಂಗ್ರೆಸ್ ಒಪ್ಪಿದ್ದರೆ ಕೋಟಿಗಟ್ಟಲೆ ಹಿಂದೂಗಳ ಮಾನಹಾನಿ, ಪ್ರಾಣಹಾನಿಗಳನ್ನು ತಪ್ಪಿಸಬಹುದಿತ್ತು. ವಿಚಿತ್ರ ನೋಡಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ, ವಿಭಜನೆಯ ಮಹಾದುರಂತಕ್ಕೆ ಮೊದಲೇ ಮುಸ್ಲಿಂ ಲೀಗ್ ಸಹ, ಜನಸಂಖ್ಯಾ ವಿನಿಮಯಕ್ಕೆ (Exchange of Population) ಒತ್ತಾಯಿಸಿತ್ತು. ಅಷ್ಟೇ ಅಲ್ಲ, “ಕಾಂಗ್ರೆಸ್ ರಕ್ತಪಾತವನ್ನು ಬಯಸುತ್ತದೆ” ಎಂದು ಟೀಕಿಸಿತ್ತು. “ಡಾನ್” ಪತ್ರಿಕೆಯ 1946ರ ಡಿಸೆಂಬರ್ 3ರ ಸಂಚಿಕೆಯನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. ಲಾಹೋರ್ ಮೂಲದ ಈ ಸುದ್ದಿ ಮತ್ತು “Exchange of Population – A most practicable solution” ಮತ್ತು “Congress prefers Bloodshed to Peaceful Settlement” ಎನ್ನುವ ಶೀರ್ಷಿಕೆಗಳು ನಮ್ಮ ದುಃಖವನ್ನು ಮಡುಗಟ್ಟಿಸಿಬಿಡುತ್ತವೆ. ಸ್ವತಃ ಮುಸ್ಲಿಂ ಲೀಗ್ ಈ ವಿನಿಮಯಕ್ಕೆ ಒತ್ತಾಯಿಸಿದರೂ, ನಮ್ಮ ನಾಯಕರು ಬೇಕೆಂದೇ ವಿನಿಮಯವನ್ನು ಅನುಷ್ಠಾನಗೊಳಿಸದೇ, ಎಂತಹ ಅಕಾರ್ಯವನ್ನೆಸಗಿಬಿಟ್ಟರಲ್ಲಾ ಎನಿಸಿಬಿಡುತ್ತದೆ.

ಇದಕ್ಕೂ ಮೊದಲೇ ಇದೇ “ಡಾನ್” ಪತ್ರಿಕೆಯ (ದಿನಾಂಕ 26ನೆಯ ನವೆಂಬರ್ 1946) ಕರಾಚಿ ಮೂಲದ ಸುದ್ದಿಯಲ್ಲಿಯೂ “Exchange of Population Question must be taken up immediately” (ಹಿಂದೂ – ಮುಸ್ಲಿಂ ಜನಸಮುದಾಯದ ವಿನಿಮಯವನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು) ಎನ್ನುವ ಒತ್ತಾಯವಿದೆ. ಆದರೂ ಗಾಂಧೀ – ನೆಹರೂ ಮತ್ತು ಕಾಂಗ್ರೆಸ್ಸಿಗರ ಹೃದಯ ಹಿಂದೂಗಳಿಗಾಗಿ ಕರಗಲೇ ಇಲ್ಲ, ಮರುಗಲೇ ಇಲ್ಲ.

partition

ಅಂಬೇಡ್ಕರ್ ಅವರು ಪ್ರತಿಪಾದಿಸಿದ ಮತ್ತು ಸ್ವತಃ ಮುಸ್ಲಿಂ ಲೀಗ್ ಒತ್ತಾಯಿಸಿದ ಜನಸಂಖ್ಯಾ ವಿನಿಮಯ ಏಕೆ ಆಗಲಿಲ್ಲ? ವಿಭಜನೆಯನ್ನೇ ಒಪ್ಪುವುದಿಲ್ಲ, ಎನ್ನುತ್ತಿದ್ದ ಗಾಂಧೀಜಿಯವರು ಜೂನ್ 1947ರ ಕಾಂಗ್ರೆಸ್ ಸಭೆಯಲ್ಲಿ ಯಾವುದೇ ಪ್ರತಿಭಟನೆ ಪ್ರತಿರೋಧಗಳನ್ನು ಮಾಡದೆಯೇ ವಿಭಜನೆಯನ್ನು ಏಕೆ ಒಪ್ಪಿಕೊಂಡರು, ಎನ್ನುವುದನ್ನೂ ಪ್ರಶ್ನಿಸಬೇಕಾಗುತ್ತದೆ. ದೇಶವಿಭಜನೆಗೆ, ಹತ್ಯಾಕಾಂಡಕ್ಕೆ ಕಾಂಗ್ರೆಸ್ಸಿಗರು RSS – ಸಾವರ್ಕರ್ – ಹಿಂದೂ ಮಹಾಸಭಾಗಳನ್ನು ಅಂದಿಗೂ ದೂಷಿಸುತ್ತಿದ್ದರು, ಇಂದಿಗೂ ಹೊಣೆ ಮಾಡುತ್ತಾರೆ. ಡಾ।। ಲೋಹಿಯಾ ತಮ್ಮ “GUILTY MEN OF PARTITION” ಗ್ರಂಥದಲ್ಲಿ ದಾಖಲಿಸಿರುವ ಸಂಗತಿಗಳು ಓದಿದವರ ರಕ್ತವನ್ನೇ ಹೆಪ್ಪುಗಟ್ಟಿಸುತ್ತವೆ. ವಿಭಜನೆಯ ನಿರ್ಧಾರದ ಮುಖ್ಯ ಪಾತ್ರಧಾರಿಗಳಾದ ನೆಹರೂ ಮತ್ತು ಇನ್ನಿತರ ಕಾಂಗ್ರೆಸ್ಸಿಗರನ್ನು ಲೋಹಿಯಾ ಖಂಡತುಂಡವಾಗಿ ಟೀಕಿಸಿದ್ದಾರೆ. ದೇಶವನ್ನು ತುಂಡು ತುಂಡು ಮಾಡಲು ಕಾತರರಾಗಿದ್ದ ಮತ್ತು ಅಧಿಕಾರ ಗ್ರಹಣಕ್ಕೆ ಹಾತೊರೆಯುತ್ತಿದ್ದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಆ ಐತಿಹಾಸಿಕ (ಜೂನ್ 1947) ಸಭೆಗೆ ಸಮಾಜವಾದಿಗಳಾದ ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣರು ವಿಶೇಷ ಆಹ್ವಾನಿತರಾಗಿ ಹೋಗಿದ್ದರು. ಅಂದಿನ ವಿಶೇಷವೆಂದರೆ, ಇವರೀರ್ವರೂ ವಿಭಜನೆಯನ್ನು ವಿರೋಧಿಸಿದರು (ಪುಟ 9). ಸಾರ್ವಜನಿಕ ಭಾಷಣಗಳಲ್ಲಿ “ದೇಶ ತುಂಡು ಮಾಡುವ ಮುನ್ನ, ನನ್ನ ದೇಹವನ್ನು ತುಂಡರಿಸಲಿ” ಎನ್ನುತ್ತಿದ್ದ ಗಾಂಧೀಜಿಯವರು ಮಾತ್ರ ಆ ನಿರ್ಣಾಯಕ ಸಭೆಯಲ್ಲಿ ವಿಭಜನೆಯನ್ನು ವಿರೋಧಿಸಲೇ ಇಲ್ಲ. ನೆಹರೂ, ಪಟೇಲ್ ನೇತೃತ್ವವು ಆ ಸಭೆಗೆ ಮೊದಲೇ ಎಲ್ಲವನ್ನೂ ತೀರ್ಮಾನಿಸಿಬಿಟ್ಟಿತ್ತು. ಆ ಸಭೆಯು ಕೇವಲ ಔಪಚಾರಿಕವಾಗಿಹೋಗಿತ್ತು. ಅಧಿಕಾರಕ್ಕಾಗಿ ನೆಹರೂ (ಪುಟ 12) ಬ್ರಿಟಿಷರೊಂದಿಗೆ ಕೈಜೋಡಿಸಿಬಿಟ್ಟಿದ್ದರು, ಎಂದು ವಿಷಾದಿಸಿದ್ದರು, ಡಾ।। ಲೋಹಿಯಾ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

“ಡಾನ್” ಪತ್ರಿಕೆಯ 4ನೆಯ ಡಿಸೆಂಬರ್ 1946ರ ಪತ್ರಿಕೆಯಲ್ಲಿ ಲಕ್ನೋ (ಇಂದಿನ ಉತ್ತರ ಪ್ರದೇಶದ ರಾಜಧಾನಿ) ಮೂಲದ ಸುದ್ದಿಯಲ್ಲಿ ಅಂದಿನ ಸಿಂಧ್ ಪ್ರಾಂತದ ಮುಸ್ಲಿಂ ಲೀಗ್ ಮುಖಂಡ ಗುಲಾಮ್ ಹುಸೇನ್ ಹಿದಾಯತುಲ್ಲಾ “ಸಿಂಧ್ ಪ್ರಾಂತದಲ್ಲಿ ನೆಲೆಸುವ ಉತ್ತರ ಪ್ರದೇಶದ ಮುಸ್ಲಿಮರಿಗಾಗಿ ಕೃಷಿ ಭೂಮಿ ನೀಡಲು ವ್ಯವಸ್ಥೆ” ಮಾಡುವುದಾಗಿ ಹೇಳಿದ್ದ. ಇತಿಹಾಸ ಬಹಳ ಬಹಳ ವಿಚಿತ್ರವಾದುದು. ಪಾಕಿಸ್ತಾನದ ಕಲ್ಪನೆ ಅಂಕುರಿಸಿದ್ದೇ ಉತ್ತರಪ್ರದೇಶದಲ್ಲಿ. ಇಂದಿಗೂ ಅಲ್ಲಿ ರಾರಾಜಿಸುತ್ತಿರುವ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿಯೇ “ಹಿಂದೂ ಮುಸ್ಲಿಂ ಸಹಬಾಳ್ವೆ ಸಾಧ್ಯವಿಲ್ಲ. ಮುಸ್ಲಿಮರಿಗೆ ಪ್ರತ್ಯೇಕ ದೇಶವೇ ಬೇಕು” ಎಂಬ ಪರಿಕಲ್ಪನೆ ಹುಟ್ಟಿಕೊಂಡಿದ್ದು. ಶತಮಾನದ ಕಾಲ ಸೈಯದ್ ಅಹಮದ್ ಖಾನ್, ಮೊಹಮ್ಮದ್ ಇಕ್ಬಾಲ್ ಮೊದಲಾದವರು ಮುಸ್ಲಿಂ ಪ್ರತ್ಯೇಕತೆಯನ್ನೇ ಪೋಷಿಸಿಕೊಂಡು ಬಂದರು. ಆದರೂ, ದೆಹಲಿ, ಬಿಹಾರ, ಮುಖ್ಯವಾಗಿ ಉತ್ತರಪ್ರದೇಶ ಮುಂತಾದ ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಂದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲು ಗಾಂಧಿ – ನೆಹರೂ ಜೋಡಿ ಬಿಡಲೇ ಇಲ್ಲ. ದೊಡ್ಡ ಸಂಖ್ಯೆಯ ಮುಸ್ಲಿಮರನ್ನು ಇಲ್ಲೇ ಉಳಿಸಿಕೊಂಡರು ಮತ್ತು ಸಂವಿಧಾನದ ಕೆಲವು ಅನುಚ್ಛೇದಗಳಲ್ಲಿ (ಅನುಚ್ಛೇದ 29, 30 ಇತ್ಯಾದಿ) ಅಲ್ಪಸಂಖ್ಯಾತರ ಹೆಸರಿನಲ್ಲಿ ಅಪರಿಮಿತ ಹಕ್ಕುಗಳನ್ನೂ ಸೌಲಭ್ಯಗಳನ್ನೂ ನೀಡಿದರು. ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಅನೇಕ ಮುಸ್ಲಿಮರು, ಅಲ್ಲಿ ಅವರಿಗೆ “ಸರಿಹೋಗದೆ” ಮತ್ತೆ ಭಾರತಕ್ಕೆ ಹಿಂತಿರುಗಿ ಬಂದಾಗ, ಅವರ ಎಲ್ಲ ಆಸ್ತಿಪಾಸ್ತಿ ಉಳಿಸಿಕೊಟ್ಟರು, ವಾಪಸ್ ಕೊಡಿಸಿದರು. ಎರಡೂ ದೇಶಗಳ ಹಿಂದೂಗಳು ಮಾತ್ರ ತುಂಬಾ ತುಂಬಾ ದುರದೃಷ್ಟಶಾಲಿಗಳು. ಪಶ್ಚಿಮ ಪಾಕಿಸ್ತಾನದಲ್ಲಿ ಇದ್ದ ಬಹುಪಾಲು ಎಲ್ಲ ಹಿಂದೂಗಳ ಕಗ್ಗೊಲೆಯಾಯಿತು, ಬಲವಂತದ ಮತಾಂತರವಾಯಿತು, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳಂತೂ ಅವರ್ಣನೀಯ. ಅಲ್ಲಿ ಅಳಿದುಳಿದ ಸಿಖ್ಖರ ಸ್ಥಿತಿಯೂ ತೀರಾ ಹೀನಾಯ.

ನಮ್ಮ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳನ್ನು ರೂಪಿಸಿದವರು, ಈ ಎಲ್ಲ ಸತ್ಯಸಂಗತಿಗಳನ್ನು ಮುಚ್ಚಿಟ್ಟು, ಬರೀ “ಅಹಿಂಸೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿತು” ಎಂಬ ಸುಳ್ಳನ್ನೇ ಹಾಡುತ್ತಾ ಬಂದಿದ್ದಾರೆ. ಪ್ರತಿಯೊಂದು ಹಳ್ಳಿ, ಪಟ್ಟಣ ಮತ್ತು ನಗರಗಳಲ್ಲಿ ಗಾಂಧಿ – ನೆಹರೂ ಹೆಸರಿನಲ್ಲಿ ಬಡಾವಣೆಗಳು, ರಸ್ತೆಗಳು, ವೃತ್ತಗಳು, ಶಾಲೆಗಳು, ಸಂಸ್ಥೆಗಳನ್ನು ಹುಟ್ಟುಹಾಕಿದರೆ, ಸಹಜವಾಗಿ ಇಡೀ ಜನಕೋಟಿ “ಇವರೇ ಈ ದೇಶವನ್ನು ಕಟ್ಟಿ ಬೆಳೆಸಿದವರು, ಇವರೇ ಕಡಿದು ಕಟ್ಟೆಹಾಕಿದವರು” ಎಂದುಕೊಂಡುಬಿಡುತ್ತದೆ. ನಮಗೆಲ್ಲ ಆದುದೂ ಅದೇ! ಇಂದಿಗೂ ಭಾರತೀಯ ಜನಮಾನಸದಲ್ಲಿ ಇಂತಹ ಮಿಥ್ಯಾ ಪೂರ್ವಗ್ರಹಗಳೇ ತುಂಬಿಕೊಂಡಿವೆ.

ಪುಣ್ಯಕ್ಕೆ ಈಚಿನ ವರ್ಷಗಳಲ್ಲಿ ಮಹತ್ತ್ವದ ಅನೇಕ ಸತ್ಯಸಂಗತಿಗಳು, ದಾಖಲೆಗಳು ಜನರ ಮುಂದೆ ಕಾಣಿಸಿಕೊಳ್ಳುತ್ತಿವೆ. ಆ ಎಲ್ಲ ಬಹುಪಾಲು ದಾಖಲೆಗಳೂ ನಮ್ಮೊಳಗೆ ಉತ್ಪಾತವನ್ನೇ ಮಾಡುತ್ತಿವೆ, ಮಾಡಿಬಿಡುತ್ತವೆ. ದೇಶದ ಶತ್ರುಗಳು ನಮ್ಮಿಂದ ಮುಚ್ಚಿಟ್ಟ ನಿಜೇತಿಹಾಸದ ಗರ್ಭದಲ್ಲಿ ಇನ್ನೇನೇನು ಭಯಾನಕ ಸಂಗತಿಗಳು ಅಡಗಿವೆಯೋ!

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

Continue Reading
Advertisement
Fire Accident
ಸಂಪಾದಕೀಯ3 hours ago

ವಿಸ್ತಾರ ಸಂಪಾದಕೀಯ: ಗುಜರಾತ್ ಬೆಂಕಿ ದುರಂತ ನಮಗೆ ಎಚ್ಚರಿಕೆಯ ಪಾಠವಾಗಲಿ

election commission
ಪ್ರಮುಖ ಸುದ್ದಿ3 hours ago

Election Commission : ಶೀಘ್ರದಲ್ಲೇ ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ; ಚುನಾವಣಾ ಆಯೋಗ

Fire Accident
ಪ್ರಮುಖ ಸುದ್ದಿ3 hours ago

Fire Accident: 9 ಮಕ್ಕಳು ಸೇರಿ 27 ಜನರ ಸಾವಿಗೆ ಕಾರಣವಾದ ಗೇಮಿಂಗ್‌ ಜೋನ್‌ಗೆ NOCಯೇ ಇರ್ಲಿಲ್ಲ!

Virat kohli
ಪ್ರಮುಖ ಸುದ್ದಿ4 hours ago

Virat kohli : ಕೊಹ್ಲಿ ಹೆಸರು ಕೂಗಿ ಪಾಕಿಸ್ತಾನ ಬೌಲರ್​​ನನ್ನು ಲೇವಡಿ ಮಾಡಿದ ಅಭಿಮಾನಿಗಳು; ಇಲ್ಲಿದೆ ವಿಡಿಯೊ

Union Minister Pralhad Joshi latest statement about channagiri case
ಕರ್ನಾಟಕ4 hours ago

Pralhad Joshi: ನೇಹಾ, ಅಂಜಲಿ ಹತ್ಯೆ ಪ್ರಕರಣದಲ್ಲಿ ಕೈಗೊಳ್ಳದ ಕ್ರಮ ಚನ್ನಗಿರಿ ಪ್ರಕರಣದಲ್ಲಿ ಏಕೆ ಎಂದ ಪ್ರಲ್ಹಾದ್‌ ಜೋಶಿ

childrens summer camp closing ceremony at yallapur
ಉತ್ತರ ಕನ್ನಡ5 hours ago

Uttara Kannada News: ಭಾರತದ ಭವಿಷ್ಯ ಸಣ್ಣ ಸಣ್ಣ ಊರುಗಳಲ್ಲಿದೆ: ಹರಿಪ್ರಕಾಶ್‌ ಕೋಣೆಮನೆ

Hardik Pandya
ಪ್ರಮುಖ ಸುದ್ದಿ5 hours ago

Hardik Pandya : ಮೊದಲ ಲವ್​ ಬ್ರೇಕ್​ಅಪ್​ ಮಾಡಿಕೊಂಡಿದ್ದ ಪಾಂಡ್ಯ; ಇಲ್ಲಿದೆ ಆರಂಭದ ಪ್ರೇಮ ಕಹಾನಿ!

Siddaramaiah
ಕರ್ನಾಟಕ5 hours ago

Siddaramaiah: ನೀವು 2 ಸಾವಿರ ಕೊಟ್ಟಿದ್ದಕ್ಕೆ ದೇವರ ದರ್ಶನ; ಧರ್ಮಸ್ಥಳದಲ್ಲಿ ಸಿದ್ದರಾಮಯ್ಯಗೆ ಸ್ತ್ರೀಯರ ಮೆಚ್ಚುಗೆ

Shikhar Dhawan
ಪ್ರಮುಖ ಸುದ್ದಿ5 hours ago

Shikhar Dhawan : ಶಿಖರ್ ಧವನ್ ಮಿಥಾಲಿ ರಾಜ್ ಮದುವೆ? ಬಗ್ಗೆ ಮೌನ ಮುರಿದ ಭಾರತದ ಸ್ಟಾರ್

Union Minister Pralhad Joshi statement about Prajwal revanna case
ಕರ್ನಾಟಕ5 hours ago

Pralhad Joshi: ಸಿಎಂ ಪತ್ರ ಬರೆದು ರಾಜಕಾರಣ ಮಾಡಿದರೆ ಪ್ರಜ್ವಲ್ ಪಾಸ್‌ಪೋರ್ಟ್ ರದ್ದಾಗಲ್ಲ: ಪ್ರಲ್ಹಾದ್‌ ಜೋಶಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ11 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ7 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ7 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌