ತರುಣ ಪದ ಅಂಕಣ: ವಿದೇಶದಲ್ಲಿ ಕುಳಿತಿರುವ ಭಾರತದ ವಿರೋಧಿಗಳನ್ನು ಇನ್ನೂ ಸಹಿಸಿಕೊಳ್ಳಬೇಕೆ? Vistara News

ಅಂಕಣ

ತರುಣ ಪದ ಅಂಕಣ: ವಿದೇಶದಲ್ಲಿ ಕುಳಿತಿರುವ ಭಾರತದ ವಿರೋಧಿಗಳನ್ನು ಇನ್ನೂ ಸಹಿಸಿಕೊಳ್ಳಬೇಕೆ?

. ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ತ್ಯಾಗದ ನಾಯಕರೆಂದು ಪರಿಗಣಿಸುವ ದೇಶದಲ್ಲಿ ಬ್ರಿಟನ್‌ನ ದುರಹಂಕಾರವನ್ನು ಎಂದಿಗೂ ಒಪ್ಪಿಕೊಳ್ಳಲಾಗುವುದಿಲ್ಲ. ಬ್ರಿಟನ್ ಮತ್ತು ಕೆನಡಾದಲ್ಲಿ ಕುಳಿತಿರುವ ಭಾರತ ವಿರೋಧಿ ದೇಶದ್ರೋಹಿಗಳನ್ನು ಸುಮ್ಮನಾಗಿಸುವ ಸಮಯ ಬಂದಿದೆ.

VISTARANEWS.COM


on

India Summons Canada High Commissioner Over Khalistan Protests in Canada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
taruna pada logo

ದೇಶದ ಒಳಗಾಗಲೀ ಹೊರಗಾಗಲೀ ರಾಷ್ಟ್ರದ ಗೌರವದೊಂದಿಗೆ ಯಾರಾದರೂ ಆಟವಾಡುವುದನ್ನು ಒಪ್ಪಿಕೊಳ್ಳಲು ಮತ್ತು ಸಹಿಸಲು ಸಾಧ್ಯವಿಲ್ಲ. ʼʼನೀವು ಆಸಿಡ್ ಮತ್ತು ದ್ವೇಷದಿಂದ ಪ್ರೀತಿಯ ಕಾವ್ಯವನ್ನು ಬರೆಯಲು ಸಾಧ್ಯವಿಲ್ಲ. ಅಥವಾ ದುಷ್ಟರನ್ನು ಕಾವ್ಯದಿಂದ ಮೌನಗೊಳಿಸಲು ಸಾಧ್ಯವಿಲ್ಲ. ಒಳ್ಳೆಯವರಿಗೆ ಒಳ್ಳೆಯದನ್ನು ಮಾಡಿ ಮತ್ತು ಕೆಟ್ಟವರಿಗೆ ಕೆಟ್ಟದ್ದನ್ನು ಮಾಡಿʼʼ ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಜನ ಬ್ರಿಟಿಷರ ದಬ್ಬಾಳಿಕೆಗೂ ಹೆದರದೆ ಲಂಡನ್‌ಗೆ ಹೋಗುತ್ತಿದ್ದರು. ಇಂದು ಲಂಡನ್‌ನಲ್ಲಿದ್ದುಕೊಂಡು ಭಾರತದ ವಿರುದ್ಧ ದನಿ ಎತ್ತುವವರ ಬಗ್ಗೆ ಮೃದು ಧೋರಣೆ ತಾಳುವ ಬ್ರಿಟೀಷ್ ಭಕ್ತರಿದ್ದಾರೆ ಎನ್ನುವುದೇ ವಿಸ್ಮಯ!

ಲಂಡನ್‌ನಲ್ಲಿ ನಡೆದ ಭಾರತ ವಿರೋಧಿ ಕೃತ್ಯಗಳ ಬಗ್ಗೆ, ಅದಕ್ಕೆ ಒದಗಿಬರುತ್ತಿರುವ ವಿದೇಶಿ ಹಣದ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರುತ್ತಲೇ ಇರುವ ನಕಲಿ ರೈತ ಮುಖಂಡರ ಬಾಯಿಂದ ಒಂದೇ ಒಂದು ಮಾತು ಹೊರಬರಲಾರದು.

ಕೆಲ ತಿಂಗಳುಗಳಿಂದ ಇಂಗ್ಲೆಂಡ್, ಕೆನಡಾ ಮೊದಲಾದ ದೇಶಗಳಲ್ಲಿ ಭಾರತೀಯರ ವಿರುದ್ಧ ದಾಳಿಯ ಸುದ್ದಿಗಳು ನಿರಂತರವಾಗಿ ಬರುತ್ತಿವೆ. ಲಂಡನ್‌ನಲ್ಲಿರುವ ನಮ್ಮ ಹೈಕಮಿಷನ್ ಮೇಲೆ ದಾಳಿ ನಡೆಸಲಾಯಿತು ಮತ್ತು ರಾಷ್ಟ್ರಧ್ವಜವನ್ನು ಅಪವಿತ್ರಗೊಳಿಸಲಾಯಿತು. ಅಲ್ಲಿ ನಮ್ಮ ಹೈಕಮಿಷನ್‌ಗೆ ಬ್ರಿಟಿಷ್ ಸರ್ಕಾರ ಸೂಕ್ತ ಭದ್ರತೆಯನ್ನೂ ನೀಡಿರಲಿಲ್ಲ. ದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನರ್ ನಿವಾಸದಿಂದ ಭಾರತವು ಭದ್ರತಾ ಬ್ಯಾರಿಕೇಡ್‌ಗಳನ್ನು ತೆಗೆದು ಹಾಕಿದಾಗ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮುಂದೆ ಭದ್ರತೆ ಕಾಣಿಸಿಕೊಂಡಿತು. ಆದರೆ ಅದು ಕೇವಲ ಪ್ರದರ್ಶನವಾಗಿತ್ತು. ಇಲ್ಲಿಯವರೆಗೆ ಬ್ರಿಟಿಷ್ ಸರ್ಕಾರವು ಹೈಕಮಿಷನ್ ಮೇಲೆ ದಾಳಿ ಮಾಡಿದ ತನ್ನ ನಾಗರಿಕರನ್ನು ಬಂಧಿಸಿಲ್ಲ. ಗೃಹ ಸಚಿವ ಅಮಿತ್ ಶಾ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ದಾಳಿಕೋರರು ಮತ್ತು ಪಂಜಾಬ್‌ನಲ್ಲಿ ಕುಳಿತಿರುವ ಅವರ ಸಂಬಂಧಿಕರ ಗುರುತನ್ನು ತನಿಖೆ ಮಾಡುವಂತೆ ಪಂಜಾಬ್ ಪೊಲೀಸರಿಗೆ ಆದೇಶಿಸಿದ್ದಾರೆ. ಈ ದೇಶದ್ರೋಹಿಗಳು ಭಾರತಕ್ಕೆ ಬರುವ ಎಲ್ಲಾ ಮಾರ್ಗಗಳು ಮುಚ್ಚಿಹೋಗಬಹುದು.

ಭಾರತ ವಿರೋಧಿ ಜಿಹಾದಿಗಳು, ಖಲಿಸ್ತಾನಿಗಳು ಮತ್ತು ಪಾಕಿಸ್ತಾನದ ನೆರವು ಪಡೆದ ಕಾಶ್ಮೀರಿ ಮುಸ್ಲಿಮರಿಗೆ ಬ್ರಿಟನ್ ಆಶ್ರಯವಾಗಿದೆ. ಅವರು ಪ್ರತಿದಿನ ಭಾರತದ ವಿರುದ್ಧ ವಿಷ ಉಗುಳುತ್ತಾರೆ ಮತ್ತು ಭಾರತದ ಪರ ಸಮಾವೇಶಗಳಲ್ಲಿ ಭಾಗವಹಿಸುತ್ತಾರೆ. ಕೆನಡಾದಲ್ಲಿಯೂ ಇದೇ ಪರಿಸ್ಥಿತಿ ಇದೆ. ಅಲ್ಲಿ ಮಾಜಿ ರಕ್ಷಣಾ ಸಚಿವರನ್ನು ಖಲಿಸ್ತಾನ್ ಪರ ಎಂದು ಘೋಷಿಸಲಾಯಿತು. ಅಲ್ಲಿ ಹಿಂದೂಗಳು, ಹಿಂದೂ ದೇವಾಲಯಗಳು ಮತ್ತು ಭಾರತದ ಹೈಕಮಿಷನ್‌ ವಿರುದ್ಧ ಇನ್ನೂ ಅನೇಕ ದಾಳಿಗಳು ಮತ್ತು ಪ್ರದರ್ಶನಗಳು ನಡೆದಿವೆ. ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದ ದಾಳಿಯ ಘಟನೆಗಳೂ ಆಘಾತಕಾರಿ.

ಈ ಘಟನೆಗಳಲ್ಲಿ ದಾಳಿ ಮಾಡಿದ ಪೇಟಾಧಾರಿಗಳು ಸಿಖ್ಖರೆಂದು ಬಿಂಬಿಸಲ್ಪಡುತ್ತಿದ್ದಾರೆ. ವಾಸ್ತವವಾಗಿ, ಅವರಿಗೆ ಸಿಖ್ ಪಂಥ್‌ದೊಂದಿಗೆ ಯಾವುದೇ ಸಂಬಂಧವಿಲ್ಲ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಸಿಖ್ಖರು ಚಿತ್ರಹಿಂಸೆಗೊಳಗಾದಾಗ, ಅವರ ಹೆಣ್ಣುಮಕ್ಕಳನ್ನು ಹಿಂಸೆಗೆ ಒಳಪಡಿಸಿದಾಗ, ಸಿಕ್ಖರು ಶ್ರೀ ಗುರು ಗ್ರಂಥ ಸಾಹಿಬ್‌ನ ಪಾವಿತ್ರ್ಯವನ್ನು ಉಳಿಸಿಕೊಳ್ಳಲು ಭಾರತಕ್ಕೆ ಬರಬೇಕಾದಾಗ, ಅಂಥವರ ಬಗ್ಗೆ ಈ ನಕಲಿ ಪೇಟಧಾರಿಗಳಲ್ಲಿ ಒಬ್ಬನೂ ಯಾವುದೇ ಕಾಳಜಿ ತೋರಿಸಲಿಲ್ಲ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಸಿಖ್ಖರನ್ನು ದೌರ್ಜನ್ಯದಿಂದ ರಕ್ಷಿಸಲು ಕಟ್ಟುನಿಟ್ಟಾದ ಕಾರ್ಯಕ್ರಮಗಳನ್ನು ಮೋದಿ ಸರ್ಕಾರ ರೂಪಿಸಿ ಶೋಷಿತ ಸಿಕ್ಖರನ್ನು ಗೌರವದಿಂದ ಭಾರತಕ್ಕೆ ಕರೆತಂದಿತು. ಕೇಂದ್ರ ಸಚಿವರು ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡರು. ಶ್ರೀ ಗುರು ಗ್ರಂಥ ಸಾಹಿಬ್ ಅನ್ನು ತಲೆಯ ಮೇಲೆ ಹೊತ್ತರು.

ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ರಾಷ್ಟ್ರೀಯವಾದಿ ನಾಯಕರ ನಾಯಕತ್ವದಲ್ಲಿ ಈ ದೇಶ ನಡೆಯುತ್ತಿದೆ. ಬ್ರಿಟನ್ ಮತ್ತು ಕೆನಡಾ ಭಾರತದ ಪ್ರಗತಿಯನ್ನು ಎಂದಿಗೂ ಒಪ್ಪಿಕೊಳ್ಳಲಾರದಾಗಿವೆ. ವಾಸ್ತವವಾಗಿ ಈ ದೇಶಗಳು ಕ್ರೂರಿ ಆಡಳಿತಗಾರ, ವಸಾಹತುಶಾಹಿಗಳ ನೆಲೆ.

ಇದೇ ಬ್ರಿಟನ್, ಮಹಾರಾಜ ರಂಜಿತ್ ಸಿಂಗ್ ಅವರ ಕಿರಿಯ ರಾಣಿ ಮಹಾರಾಣಿ ಜಿಂದ್ ಕೌರ್ ಅವರ ಆರು ವರ್ಷದ ಮಗ ಮಹಾರಾಜ ದುಲೀಪ್ ಸಿಂಗ್ ಅವರನ್ನು ಬಲವಂತವಾಗಿ ಇಂಗ್ಲೆಂಡ್‌ಗೆ ಕರೆದೊಯ್ದು ಅಲ್ಲಿ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಿ, ಮದ್ಯಪಾನಕ್ಕೆ ವ್ಯಸನಿಯಾಗುವಂತೆ ಮಾಡಿತು. ಮಹಾರಾಣಿ ಜಿಂದ್ ಕೌರ್ ಕುರುಡಳಾದ ಬಳಿಕ ವಾರಕ್ಕೊಮ್ಮೆ ಮಾತ್ರ ದುಲೀಪ್ ಸಿಂಗ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ಇಷ್ಟೆಲ್ಲಾ ದೌರ್ಜನ್ಯ ಎಸಗಿದ ಬ್ರಿಟಿಷ್ ಸರ್ಕಾರದ ಗುಲಾಮರಾದ ಪೇಟಧಾರಿಗಳನ್ನು ಸಿಖ್ಖರೆಂದು ಕರೆಯಬಹುದೇ?

Khalistani separatist Amrit Pal Bate, further tough action is needed

ಲಂಡನ್‌ನ ಖಲಿಸ್ತಾನಿಗಳು, ಹುತಾತ್ಮ ಭಗತ್ ಸಿಂಗ್ ವಿರುದ್ಧ ವಿಷವನ್ನು ಉಗುಳುತ್ತವೆ. ಅವರಿಗೆ ಭಾರತದ ಪ್ರತಿಯೊಬ್ಬ ಶತ್ರುವೂ ಗೌರವಕ್ಕೆ ಅರ್ಹರು. ಇಡೀ ಬ್ರಿಟನ್ ಇಂದು ಭಾರತದಿಂದ ಲೂಟಿ ಮಾಡಿದ ಸಂಪತ್ತಿನಲ್ಲಿ ಪ್ರಗತಿ ಸಾಧಿಸಿದೆ ಎಂಬುದನ್ನು ಅವರು ಮರೆಯುತ್ತಾರೆ. ಬ್ರಿಟನ್‌ನ ಪ್ರತಿಯೊಂದು ಬೆಳವಣಿಗೆಯಲ್ಲೂ ಭಾರತದ ಲಕ್ಷಾಂತರ ಜನರ ರಕ್ತ ಬೆರೆತಿದೆ. ಬ್ರಿಟನ್‌ನ ಅಂದಿನ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರು ಉದ್ದೇಶಪೂರ್ವಕವಾಗಿ ಅಳವಡಿಸಿಕೊಂಡ ಆಹಾರ ನೀತಿಯಿಂದಾಗಿ ಬಂಗಾಳದ ಮೂವತ್ತು ಲಕ್ಷ ಮಂದಿ 1930ರಲ್ಲಿ ಸಾಯಬೇಕಾಯಿತು. ಇದು ವಿಶ್ವದ ಅತ್ಯಂತ ಕೆಟ್ಟ ಮಾನವ ನಿರ್ಮಿತ ಕ್ಷಾಮ. ಇದನ್ನು ಬ್ರಿಟಿಷ್ ನಿರ್ಮಿತ ಕ್ಷಾಮ ಎಂದೂ ಕರೆಯುತ್ತಾರೆ. ಇಂತಹ ಕಳ್ಳ ಮತ್ತು ಬರ್ಬರ ದೇಶದ ಬಗ್ಗೆ ಭಾರತದಲ್ಲಿ ಎಂದಿಗೂ ಸಹಾನುಭೂತಿ ಇರಲು ಸಾಧ್ಯವಿಲ್ಲ.

ಬ್ರಿಟನ್ ಪ್ರಜೆಗಳು ಭಾರತೀಯ ಹೈಕಮಿಷನ್ ಮೇಲೆ ದಾಳಿ ನಡೆಸಿದ ಬಳಿಕ ಇದೀಗ ಮತ್ತೊಮ್ಮೆ ಭಾರತ ಬ್ರಿಟನ್ ಕಾಮನ್‌ವೆಲ್ತ್‌ನಿಂದ ಹೊರ ಬರಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಇದು ಬ್ರಿಟನ್‌ನ ಹಿಂದಿನ ಗುಲಾಮ ರಾಷ್ಟ್ರಗಳ ಏಕೈಕ ಕ್ಲಬ್. ಬ್ರಿಟನ್ನಿನ ರಾಣಿ ಅಥವಾ ರಾಜ ಇದರಲ್ಲಿ ಮುಖ್ಯ. ಭಾರತವು ಈ ಕಾಮನ್‌ವೆಲ್ತ್‌ನ ಸದಸ್ಯನಾಗಿರುವುದು ಅವಮಾನಕರ.

ಇದನ್ನೂ ಓದಿ: ಬಿಗಿ ಭದ್ರತೆ ನಡುವೆಯೂ ಕೆನಡಾದಲ್ಲಿ ಖಲಿಸ್ತಾನಿಗಳ ಪ್ರತಿಭಟನೆ; ನಮ್ಮ ದೇಶದಲ್ಲಿರುವ ಹೈಕಮಿಷನರ್​ಗೆ ಸಮನ್ಸ್​ ನೀಡಿದ ಭಾರತ

ಭಾರತೀಯ ಮತ್ತು ಯುರೋಪಿಯನ್ ಬರಹಗಾರರು ಭಾರತದ ಮೇಲೆ ಬ್ರಿಟಿಷರ ದೌರ್ಜನ್ಯದ ಅನೇಕ ಕಥೆಗಳನ್ನು ಬರೆದಿದ್ದಾರೆ. ಅಂತಹ ಕೆಲವು ಸತ್ಯಪೂರ್ಣ ಗ್ರಂಥಗಳ ಮಾಹಿತಿಯನ್ನು ಕೆಲವು ಕೊಂಡಿಗಳ ಮೂಲಕ ಇಲ್ಲಿ ನೀಡುತ್ತಿದ್ದೇನೆ.

ಶ್ರೀ ತೀರ್ಥಂಕರ ರಾಯರು ಬರೆದ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

ಗ್ರಾವಿಟಾಸ್ ಈ ವಿಷಯದ ಮೇಲೆ ನೀಡಿದ ಪರಿಣಾಮಕಾರಿ ಕಾರ್ಯಕ್ರಮ ವಿವರ.

ನೊಬೆಲ್ ಪ್ರಶಸ್ತಿ ವಿಜೇತ ಲೇಖಕ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಲೇಖನಕ್ಕಾಗಿ ಕ್ಲಿಕ್ ಮಾಡಿ.

ಶಶಿ ತರೂರ್ ಅವರ ಪುಸ್ತಕ

ಬ್ರಿಟಿಷರನ್ನು ಹಾಡಿ ಹೊಗಳುವವರು ಭಾರತದಲ್ಲಿ ಇಂದಿಗೂ ಇದ್ದಾರೆ. ಅವರೆಲ್ಲರೂ ಎಡಪಂಥೀಯ ಬರಹಗಾರರ ಇತಿಹಾಸ ಪುಸ್ತಕಗಳನ್ನು ಅಥವಾ ರೊಮಿಲಾ ಥಾಪರ್ ಅಂಥವರ ತಪ್ಪುದಾರಿಗೆಳೆಯುವ ನಿರೂಪಣೆಗಳನ್ನು ಓದಿದವರು. ವಸಾಹತುಶಾಹಿ ಚಿಂತನೆಯನ್ನು ಕೊನೆಗೊಳಿಸುವುದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅತ್ಯಗತ್ಯ. ಬ್ರಿಟಿಷರ ದಲ್ಲಾಳಿಗಳನ್ನು ಬಯಲಿಗೆಳೆದು ಭಾರತದ ನಿಜವಾದ ಭಕ್ತರಿಗೆ ಗೌರವ ನೀಡೋಣ. ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ತ್ಯಾಗದ ನಾಯಕರೆಂದು ಪರಿಗಣಿಸುವ ದೇಶದಲ್ಲಿ ಬ್ರಿಟನ್‌ನ ದುರಹಂಕಾರವನ್ನು ಎಂದಿಗೂ ಒಪ್ಪಿಕೊಳ್ಳಲಾಗುವುದಿಲ್ಲ. ಬ್ರಿಟನ್ ಮತ್ತು ಕೆನಡಾದಲ್ಲಿ ಕುಳಿತಿರುವ ಭಾರತ ವಿರೋಧಿ ದೇಶದ್ರೋಹಿಗಳನ್ನು ಸುಮ್ಮನಾಗಿಸುವ ಸಮಯ ಬಂದಿದೆ.

ಇದನ್ನೂ ಓದಿ: ತರುಣ ಪದ ಅಂಕಣ: ಬಲೂಚಿಸ್ತಾನದಿಂದ ಬೆಂಗಳೂರಿಗೆ ಹಿಂಗ್ಲಾಜ್‌ ದೇವಿಯ ಭವ್ಯ ಯಾತ್ರೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್‌ ಕಂಪನಿ ಸಿಇಓ!

Raja Marga Column : ಅವರು 16ನೇ ವರ್ಷಕ್ಕೆ ಮದುವೆಯಾಗಿ ಗಂಡನ ಮನೆ ಸೇರಿದ್ದರು. 18ಕ್ಕೆ ಎರಡು ಮಕ್ಕಳ ತಾಯಿ. ಕೊನೆಗೆ ಅನಾಥೆಯಾದ ಆಕೆ ಈಗ ಇರುವ ಸ್ಥಾನ ನೋಡಿದರೆ ನೀವು ಬೆಚ್ಚಿ ಬೀಳುತ್ತೀರಿ. ಯಾರವರು?

VISTARANEWS.COM


on

Jyothi Reddy CEO of American Company
Koo
RAJAMARGA

ಆಕೆಯ ಹೆಸರು ಜ್ಯೋತಿ ರೆಡ್ಡಿ (Jyothi Reddy). ಆಕೆ ಆಂಧ್ರಪ್ರದೇಶದ ವಾರಂಗಲ್‌ನ ಅತ್ಯಂತ ಬಡ ಕುಟುಂಬದ ಹುಡುಗಿ. ಆಕೆಯ ಹೆತ್ತವರಿಗೆ ಮೂರು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಬಡತನ, ಹಸಿವು ಹೆಚ್ಚಾದ ಕಾರಣ ಅವಳ ಹೆತ್ತವರು ಇಬ್ಬರು ಹೆಣ್ಣು ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದರು. ಮತ್ತೆ ಅವರನ್ನು ನೊಡಲಿಕ್ಕೂ ಬರಲಿಲ್ಲ! ಹಿರಿಯ ಮಗಳಾದ ಜ್ಯೋತಿ ರೆಡ್ಡಿ ಅನಾಥ ಮಕ್ಕಳ ಸರಕಾರಿ ಶಾಲೆಗೆ (School for orphan) ಹೋಗಿ 12ನೆಯ ತರಗತಿ ಪಾಸಾದಳು. ಅದರ ಬೆನ್ನಿಗೆ ಅವರ ಕಸಿನ್ ಜೊತೆಗೆ ಮದುವೆ ನಡೆದು ಹೋಯಿತು. ಆಗ ಅವರಿಗೆ 16 ವರ್ಷ (Raja Marga Column).

ಹಸಿವು ಎಲ್ಲ ಕೆಲಸಗಳನ್ನೂ ಮಾಡಿಸಿತು

ಹದಿನೆಂಟು ತುಂಬುವಾಗ ಎರಡು ಹೆಣ್ಣು ಮಕ್ಕಳ ತಾಯಿ! ಗಂಡನಿಗೆ ಎಲ್ಲಿಯೂ ಪರ್ಮನೆಂಟ್ ಕೆಲಸ ಇರಲಿಲ್ಲ. ಆಗ ಮಕ್ಕಳ ಜವಾಬ್ದಾರಿ ಕೂಡ ಅವರೇ ಹೊತ್ತರು. ಬತ್ತದ ಗದ್ದೆಯಲ್ಲಿ ನೇಜಿ ನೆಡುವ ಕೆಲಸ, ಕಲ್ಲನ್ನು ಒಡೆಯುವ ಕೆಲಸ ಕೂಡ ಅವರು ಮಾಡಿದರು. ತನ್ನ ಜೀವನದಲ್ಲಿ ಸ್ವಾವಲಂಬಿ ಆಗಬೇಕು ಎನ್ನುವ ತುಡಿತವು ಅವರನ್ನು ಅಂತಹ ಕೆಲಸಕ್ಕೆ ದೂಡಿತು.

ನೆರವಿಗೆ ಬಂದ ನೆಹರೂ ಯುವ ಕೇಂದ್ರ

ಆಗ ಅವರ ನೆರವಿಗೆ ಬಂದದ್ದು ‘ನೆಹರೂ ಯುವ ಕೇಂದ್ರ’ ಎನ್ನುವ ಸರಕಾರದ ಅಧೀನ ಸಂಸ್ಥೆ. ಅದರಲ್ಲಿ ಸ್ವಯಂಸೇವಕಿಯಾಗಿ ಮಕ್ಕಳಿಗೆ ಪಾಠ ಮಾಡುವ ಕೆಲಸ ಮಾಡಿದರು. ಅಂಬೇಡ್ಕರ್ ಮುಕ್ತ ವಿವಿಯ ಮೂಲಕ ಪದವಿ, ಸ್ನಾತಕೋತ್ತರ ಪದವಿ ಎರಡನ್ನೂ ಮುಗಿಸಿದರು. ಕಂಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ ಕೂಡ ಪೂರ್ತಿ ಆಯಿತು. ಆಗ ಅವರಿಗೆ ಸರಕಾರಿ ಶಾಲೆಯ ಟೀಚರ್ ಕೆಲಸ ದೊರೆಯಿತು. ತಿಂಗಳಿಗೆ 6,000 ರೂಪಾಯಿ ಸಂಬಳ. ಪುಟ್ಟ ಬಾಡಿಗೆ ಮನೆ. ಆ ಸಂಬಳ ಯಾವುದಕ್ಕೂ ಸಾಲುತ್ತಿರಲಿಲ್ಲ. ಶಾಲೆಗೆ ಎರಡು ಗಂಟೆ ನಡೆದು ಹೋಗುವ ಕಷ್ಟ ಬೇರೆ. ಆಗ ದಾರಿಯಲ್ಲಿ ಸೀರೆ ಮಾರುತ್ತ ಒಂದಿಷ್ಟು ಹಣ ಗಳಿಸಿದರು. ಮನೆಯಲ್ಲಿ ಒಂದು ಹೊಲಿಗೆ ಯಂತ್ರ ಇಟ್ಟುಕೊಂಡು ಸ್ವಲ್ಪ ಸಂಪಾದನೆ ಮಾಡಿದರು.

ಅಮೆರಿಕದಲ್ಲಿ ಕೆಲಸದ ಹುಸಿ ಭರವಸೆ

2001ರ ಹೊತ್ತಿಗೆ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಬಂದಿತು. ಅವರ ಸೋದರ ಮಾವ ಒಬ್ಬರು ಅಮೆರಿಕದಿಂದ ಊರಿಗೆ ಬಂದವರು ಜ್ಯೋತಿ ರೆಡ್ಡಿ ಅವರನ್ನು ಭೇಟಿ ಮಾಡಿದರು. ಅಮೆರಿಕದಲ್ಲಿ ಉದ್ಯೋಗದ ಭರವಸೆ ನೀಡಿದರು. ಆಗ ಅವರ ಮನಸ್ಸಿನಲ್ಲಿ ಗೊಂದಲವು ಆರಂಭ ಆಯಿತು.

ಒಂದು ಕಡೆ ಸಂಸಾರದ ಜವಾಬ್ದಾರಿ. ಇನ್ನೊಂದು ಕಡೆ ಸರಕಾರಿ ನೌಕರಿ. ಮತ್ತೊಂದು ಕಡೆ ಅವರದ್ದೇ ಆದ ಬಹಳ ‘ದೊಡ್ಡ ಕನಸು’. ಅವುಗಳಲ್ಲಿ ಯಾವುದನ್ನು ಆರಿಸುವುದು? ಕೊನೆಗೆ ಅವರು ಗಟ್ಟಿ ನಿರ್ಧಾರ ಮಾಡಿ ಮೂರನೆಯದನ್ನು ಆರಿಸಿಕೊಂಡರು. ಪ್ರೀತಿಸುವ ಎರಡು ಹೆಣ್ಣು ಮಕ್ಕಳನ್ನು ಒಂದು ಮಿಷನರಿ ಹಾಸ್ಟೆಲಿನಲ್ಲಿ ಬಿಟ್ಟರು. ವೀಸಾ ಮಾಡಿಸಲು ತುಂಬಾ ಕಷ್ಟಪಟ್ಟರು. ಕೊನೆಗೆ ಧೈರ್ಯ ಜೋಡಿಸಿಕೊಂಡು ವಾರಂಗಲ್ ಟು ಅಮೆರಿಕ ವಿಮಾನದಲ್ಲಿ ಹಾರಿದರು!

Jyothi Reddy: old and New avtar
ಹೇಗಿದ್ದ ಜ್ಯೋತಿ ರೆಡ್ಡಿ ಹೇಗಾದರು ನೋಡಿ

ಈಗ ಅವರಿಗೆ ನಿಜವಾದ ಸಮಸ್ಯೆಗಳು ಆರಂಭವಾದವು. ಕೆಲಸ ಕೊಡಿಸುವ ಭರವಸೆ ಕೊಟ್ಟಿದ್ದ ಸೋದರ ಮಾವ ಅಲ್ಲಿ ಕೈ ಎತ್ತಿ ಬಿಟ್ಟರು. ಮಹಾನಗರದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಬಿಟ್ಟ ಅನುಭವ ಅವರಿಗೆ ಆಯಿತು. ಅವರು ಯಾವತ್ತೂ ಅಮೆರಿಕ ನೋಡಿದವರೇ ಅಲ್ಲ! ಹಿಂದೆ ಬರುವ ಬಾಗಿಲು ಕೂಡ ಮುಚ್ಚಿತ್ತು.

ಆದರೆ ಗುಂಡಿಗೆಯಲ್ಲಿ ಧೈರ್ಯ ಇತ್ತು. ತಮ್ಮ ಪದವಿ, ಸ್ಟೇಟಸ್ ಎಲ್ಲವನ್ನೂ ಮರೆತು ಗ್ಯಾಸ್ ಸ್ಟೇಶನ್, ಬೇಬಿ ಸಿಟ್ಟಿಂಗ್, ವಿಡಿಯೋ ಗೇಮ್ಸ್ ಶಾಪ್ ಎಲ್ಲಾ ಕಡೆ ದುಡಿದರು. ಆಗ ಸೂಕ್ಷ್ಮವಾಗಿ ಅಮೆರಿಕದ ಜನ ಜೀವನವನ್ನು, ಉದ್ಯೋಗದ ಅವಕಾಶಗಳನ್ನು ಅಭ್ಯಾಸ ಮಾಡಿದರು. ಅವರು ಒಂದೂವರೆ ವರ್ಷದಲ್ಲಿ 40,000 ಅಮೆರಿಕನ್ ಡಾಲರ್ ಸಂಪಾದನೆ ಮಾಡಿದ್ದರು! ಅಮೆರಿಕಾ ಎಂಬ ಮಾಯಾನಗರದ ದೇಶದಲ್ಲಿ ಒಬ್ಬಳೇ ಹೆಂಗಸು ಯಾರ ನೆರವೂ ಇಲ್ಲದೆ ದುಡಿಯುತ್ತಿದ್ದರು ಎಂದರೆ ನಮಗೆ ಅವರ ಸಾಹಸದ ಅರಿವಾಗುತ್ತದೆ.

ಅಮೆರಿಕಾದಲ್ಲಿ ಅವಕಾಶಗಳ ಹುಡುಕಾಟ

ತನ್ನ ಸಂಪಾದನೆಯನ್ನು ಬಂಡವಾಳ ಮಾಡಿಕೊಂಡು ಅಮೆರಿಕದ ಫೀನಿಕ್ಸ್ ಎಂಬಲ್ಲಿ ಒಂದು ಕಚೇರಿ ತೆರೆದು ‘KEY SOFTWARE SOLUTIONS’ ಎಂಬ ಕನ್ಸಲ್ಟೆನ್ಸಿ ಕಂಪೆನಿ ತೆರೆದರು. ಅವರು ಕಲಿತಿದ್ದ ಕಂಪ್ಯೂಟರ್ ತರಬೇತಿಯು ಈಗ ಅವರಿಗೆ ಸಹಾಯಕ್ಕೆ ಬಂದಿತು. ಅಮೆರಿಕದಲ್ಲಿ ಹೊರಗಿಂದ ಬರುವವರಿಗೆ ಅಲ್ಲಿನ ಉದ್ಯೋಗದ ಅವಕಾಶಗಳ ಬಗ್ಗೆ, ವೀಸಾ ಇತ್ಯಾದಿ ಪಡೆಯುವ ಬಗ್ಗೆ ಮಾರ್ಗದರ್ಶನ ನೀಡುವ ಸಂಸ್ಥೆಯಾಗಿ ತಮ್ಮ ಸಂಸ್ಥೆಯನ್ನು ಬೆಳೆಸಿದರು. ಒಬ್ಬರೇ ಹೆಣ್ಣು ಮಗಳು ಅಮೆರಿಕದಲ್ಲಿ ಮಾಡಿದ ಭಾರಿ ಹೋರಾಟ ಕೊನೆಗೂ ಫಲ ನೀಡಿತು. ಅವರ ಕಠಿಣ ಪರಿಶ್ರಮ, ಬದ್ಧತೆ, ಬಲವಾದ ನಂಬಿಕೆ ಇವುಗಳು ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದವು.

ಭಾರತದಿಂದ ಬಂದ ಅನಾಥ ಹುಡುಗಿ ಅಮೇರಿಕನ್ ಕಂಪೆನಿಯ ಸಿಇಒ ಆದರು

ಕೇವಲ ಒಂದು ದಶಕದಲ್ಲಿ ಈಗ ಅವರ ಕಂಪೆನಿಯು ವಾರ್ಷಿಕ ಹದಿನೈದು ಮಿಲಿಯನ್ ಡಾಲರ್ಸ್ ಟರ್ನ್ ಓವರನ್ನು ಹೊಂದಿತು. ನೂರಾರು ಮಂದಿಗೆ ಉದ್ಯೋಗ ನೀಡಿತು. ಅವರ ಇಬ್ಬರು ಮಕ್ಕಳನ್ನು ಕೂಡ ಜ್ಯೋತಿ ರೆಡ್ಡಿ ಅಲ್ಲಿಗೆ ಕರೆಸಿ ಸಾಫ್ಟವೇರ್ ಎಂಜಿನಿಯರ್ ಆಗಿ ಓದಿಸಿ ಮದುವೆಯನ್ನು ಕೂಡ ಮಾಡಿದ್ದಾರೆ. ಅವರಿಗೆ ಅಮೆರಿಕದಲ್ಲಿ NRI OF THE YEAR ಪ್ರಶಸ್ತಿ ದೊರೆತಿದೆ!

Jyothi Reddy- Raja Marga column
Jyothi Reddi

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಬಾರ್‌ ಡ್ಯಾನ್ಸರ್‌ to ಕಥೆಗಾರ್ತಿ; ಲೇಖಕಿ ಶಗುಫ್ತ ರಫೀಕ್ ಬರ್ಬಾದಿ ಬದುಕಿನ ರೋಚಕ ಕಥೆ!

ಭಾರತದ ಬಡ ಮಕ್ಕಳ ನೆರವಿಗೆ ನಿಂತಿದ್ದಾರೆ ಜ್ಯೋತಿ

ವಿಶೇಷ ಎಂದರೆ ಜ್ಯೋತಿ ರೆಡ್ಡಿ ಇಂದಿಗೂ ತನ್ನ ಬಾಲ್ಯದ ಕಷ್ಟಗಳನ್ನು ಮರೆತಿಲ್ಲ. ವರ್ಷಕ್ಕೊಮ್ಮೆ ಆದರೂ ಭಾರತಕ್ಕೆ ಬಂದೇ ಬರುತ್ತಾರೆ. ಅನಾಥಾಶ್ರಮಗಳಿಗೆ ಭೇಟಿ ನೀಡಿ ನೆರವು ನೀಡುತ್ತಾರೆ. ಸರಕಾರಿ ಶಾಲೆಯ ಮಕ್ಕಳ ಶಿಕ್ಷಣದ ವೆಚ್ಚವನ್ನು ತುಂಬಿಸುತ್ತಾರೆ. ತಮ್ಮ ವಾರಂಗಲ್ ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಬಡಮಕ್ಕಳಿಗೆ ತಲಾ ಐದು ಸಾವಿರ ರೂಪಾಯಿ ಬಹುಮಾನ ಕೊಟ್ಟು ಬೆನ್ನು ತಟ್ಟುತ್ತಾರೆ.

“ಬಾಲ್ಯದ ಬಡತನ ನನ್ನ ಮನಸ್ಸು ಮತ್ತು ಹೃದಯವನ್ನು ನೋಯಿಸಿತ್ತು. ಆದರೆ ಭಾರತದ ಪ್ರತಿ ಅನಾಥ ಮಗು ನನ್ನಂತೆ ಬೆಳೆಯಬೇಕು ಎಂದು ಆಸೆ ಪಡುತ್ತೇನೆ” ಎಂದು ಆಕೆ ಹೇಳುವಾಗ ಅವರ ಕಣ್ಣಲ್ಲಿ ಗೆದ್ದ ಖುಷಿ ಇತ್ತು!

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಫೋಟೊಗಳು, ಸೆಲ್ಫಿಗಳು, ಮತ್ತು ರೀಲ್ಸ್‌ಗಳ ನಿಯಂತ್ರಣ

ಮ್ಮ ಫೋಟೊ ಮತ್ತು ರೀಲ್ಸ್‌ಗಳನ್ನು ಕ್ರಿಮಿನಲ್‌ಗಳು ದುರುಪಯೋಗಿಸದಂತೆ ಸುರಕ್ಷತೆಗೊಳಿಸಿಕೊಳ್ಳಿ. ಜಾಗರೂಕರಾಗಿ ನಿಮ್ಮ ಸೋಷಿಯಲ್‌ ಪ್ರೊಫೈಲನ್ನು ಕಾಯ್ದುಕೊಳ್ಳಿ.

VISTARANEWS.COM


on

cyber security
Koo
cyber safty logo

ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್‌ನ ಅವಲಂಬನೆ ಮತ್ತು ಅದರಲ್ಲಿರುವ ಆ್ಯಪ್‌ಗಳನ್ನು ಮತ್ತು ಮಾಹಿತಿಯನ್ನು ವಿವಿಧ ರೀತಿಯ ಫಿಷಿಂಗ್‌ (Fishing) ದಾಳಿಗಳಿಂದ ಸುರಕ್ಷಿತಗೊಳಿಸುವುದರ ಬಗ್ಗೆ
‘ಅಂಗೈಯಲ್ಲಿ ಅಂತರ್ಜಾಲ, ಅರಿವಿದೆಯೇ ಅಪಾಯ?’ದಲ್ಲಿ ಹೇಳಿದ್ದೆ. ಇಂಟರ್ನೆಟ್ ನಮಗೆ ಎಲ್ಲೆಡೆ ಲಭ್ಯವಾಗುತ್ತಿರುವಾಗ ನಮ್ಮ ದೈನಂದಿನ ಹಣಕಾಸಿನ ವ್ಯವಹಾರಗಳಿಗೆ ನಮ್ಮ ಮೊಬೈಲನ್ನೇ ಅವಲಂಬಿಸಿದ್ದೇವೆ. ಹಾಗಾಗಿ ನಿಮ್ಮ ಮೊಬೈಲಿನ ಸುರಕ್ಷತೆ ಹೆಚ್ಚಿಸಲು ವೈರಸ್ ಗುರುತಿಸುವ ಸಾಫ್ಟ್‌ವೇರ್‌(Anti-virus) ಬಳಸುವ ಬಗ್ಗೆ ತಿಳಿಸಿದ್ದೆ. ಮರೆತಿದ್ದರೆ ಮೇಲಿನ ಲಿಂಕ್ ಒತ್ತಿ ಪುನರಾವಲೋಕನ ಮಾಡಿ. ಕಳೆದ ವಾರ ನಿಮ್ಮ “ಸೋಶಿಯಲ್ ಮೀಡಿಯಾದಿಂದಲೇ ನಿಮ್ಮ ಸುರಕ್ಷತೆಗೆ ಅಪಾಯ!” ಲೇಖನದಲ್ಲಿ ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಅಪ್‌ಲೋಡ್ ಆಗುತ್ತಿರುವ ನಿಮ್ಮ ಫೋಟೊಗಳು, ವೀಡಿಯೊಗಳು, ಸೆಲ್ಫಿಗಳು, ರೀಲ್ಸ್‌ಗಳನ್ನು ದುರ್ಮಾರ್ಗಿಗಳು ದುರುಪಯೋಗಿಸಿಕೊಂಡರೆ ಎನಾಗಬಹುದು ಎನ್ನುವುದರ ಬಗ್ಗೆ ನಿಮ್ಮ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೆ. ಜೊತೆಗೆ ಆಂಡ್ರಾಯಿಡ್ ಫೇಸ್ಬುಕ್ ಆ್ಯಪ್ ಬಳಸುತ್ತಿರುವವರು ತಮ್ಮ ಗೌಪ್ಯತೆಯನ್ನು ರಕ್ಷಿಸಿಕೊಳ್ಳುವುದರ ಬಗ್ಗೆ ತಿಳಿಸಿದ್ದೆ.

ಇವತ್ತು ನಿಮ್ಮ ಇನ್ಸಸ್ಟಾಗ್ರಾಂ ಪೋಸ್ಟ್‌ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದರ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಪೋಸ್ಟ್‌ಗಳನ್ನು ಯಾರು ನೋಡಬಹುದು, ನಿಮ್ಮ ಪೋಸ್ಟ್‌ಗಳಿಗೆ ಯಾರು ಕಾಮೆಂಟ್ ಮಾಡಬಹುದು ಮತ್ತು ನಿಮ್ಮನ್ನು ಯಾರು ಅನುಸರಿಸಬಹುದು ಎಂಬುದು ಇನ್‌ಸ್ಟಾಗ್ರಾಂ ಆ್ಯಪ್‌ನ ಸುರಕ್ಷತಾ ಸೆಟ್ಟಿಂಗಿನ ಮೇಲೆ ಅವಲಂಬಿತವಾಗಿದೆ. ನಿಮ್ಮಂದಿಗೆ ಇತರರು ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ಸಹ ನೀವು ಸೆಟ್ಟಿಂಗಿನ ಮೂಲಕ ಮಿತಿಗೊಳಿಸಬಹುದು.

ಇನ್ಸಸ್ಟಾಗ್ರಾಂ ಸಹಾಯ ವಿಭಾಗದಲ್ಲಿ, ಗೌಪ್ಯತೆ ಸೆಟ್ಟಿಂಗ್‌ಗಳು ಮತ್ತು ಮಾಹಿತಿ ವಿಭಾಗದಲ್ಲಿ ಈ ಕೆಳಗಿನ ವಿಷಯಗಳನ್ನು ವಿವರಿಸಲಾಗಿದೆ.

ಮೊದಲನೆಯದಾಗಿ ನಿಮ್ಮ ಖಾತೆಯನ್ನು ‘ಖಾಸಗಿ’ ಅಥವಾ ‘ಸಾರ್ವಜನಿಕ’ವನ್ನಾಗಿಸುವುದು.

ನೀವು ಇನ್ಸಸ್ಟಾಗ್ರಾಂನಲ್ಲಿ ಖಾತೆ ತೆರೆದಾಗ (ಸೈನ್ ಅಪ್ ಮಾಡಿದಾಗ) ನೀವು 16 ವರ್ಷದೊಳಗಿನವರಾಗಿದ್ದರೆ, ಸಾರ್ವಜನಿಕ ಅಥವಾ ಖಾಸಗಿ ಖಾತೆಯ ನಡುವೆ ಆಯ್ಕೆ ಮಾಡುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. ಆದರೆ ಡೀಫಾಲ್ಟ್ ಆಯ್ಕೆ ಖಾಸಗಿ ಎಂದೇ ಇರುತ್ತದೆ.

ನೀವು 16 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ನಿಮ್ಮ Instagram ಖಾತೆಯು ಡಿಫಾಲ್ಟ್ ಆಗಿ ಸಾರ್ವಜನಿಕವಾಗಿರುತ್ತದೆ. ನಿಮ್ಮ ಖಾತೆಯನ್ನು ಯಾವುದೇ ಸಮಯದಲ್ಲಿ ಖಾಸಗಿಯಾಗಿ ಮಾಡಲು ನೀವು ಬಯಸಿದರೆ ಈ ಕೆಳಗಿನ ಕ್ರಮಗಳನ್ನು ನಿಮ್ಮ ಆ್ಯಪ್‌ನಲ್ಲಿ ಕೈಗೊಳ್ಳಿ. ಈ ಕ್ರಮಗಳು ಐಫೋನ್ ಮತ್ತು ಆಂಡ್ರಯಾಡ್‌ಗಳಲ್ಲಿನ ಇನ್‌ಸ್ಟಾಗ್ರಾಂ ಆ್ಯಪಿನಲ್ಲಿ ಬಹುತೇಕ ಒಂದೇ ರೀತಿಯಲ್ಲಿದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಬೆಳಕಿನ ಹಬ್ಬದ ಕರಾಳ ಮುಖ

ನಿಮ್ಮ ಫೋನಿನಲ್ಲಿ ಇನ್‌ಸ್ಟಾಗ್ರಾಂ ಆ್ಯಪನ್ನು ತೆರೆಯಿರಿ. ಇದರ ಮೇಲೆ ಕ್ಲಿಕ್ ಮಾಡಿ ಅದಲ್ಲಿರುವ ಸೆಟ್ಟಿಂಗ್ಸ್ ಆಯ್ಕೆ ಮಾಡಿ. ಅದರಲ್ಲಿ ನಿಮ್ಮ ಖಾತೆಯನ್ನು ಯಾರು ನೋಡಬಹುದು ಎನ್ನುವುದರ ಕೆಳಗೆ ಇರುವ ಅಕೌಂಟ್ ಗೌಪ್ಯತೆಯ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿ ನಿಮ್ಮ ಖಾತೆಯನ್ನು ಪ್ರೈವೇಟ್ ಮಾಡಿ. ನಂತರ ಪ್ರೈವೇಟಿಗೆ ಬದಲಾಗುವುದನ್ನು ಖಚಿತ ಪಡಿಸಿ.

ಹೀಗೆ ಸರವಾಗಿ ನಿಮ್ಮ ಗೌಪ್ಯತೆಯನ್ನು ಲಾಕ್ ಮಾಡಿಕೊಳ್ಳಬಹುದು. ನಿಮ್ಮ ಖಾತೆಯನ್ನು ನೀವು ಸಾರ್ವಜನಿಕವಾಗಿ ಇರಿಸಿಕೊಂಡು ಅದರ ಭದ್ರತೆಯನ್ನು ಹೆಚ್ಚಿಸಿಕೊಳ್ಳಬಹುದು.

ಯಾರಾದರೂ ಮುಜುಗರವನ್ನುಂಟುಮಾಡುವಂತಹ ಫೋಟೊ ಅಥವಾ ವೀಡಿಯೊ ಶೇರ್ ಮಾಡಿದ್ದರೆ ಅವರನ್ನು ಅನ್‌ಫಾಲ್‌ ಮಾಡಬಹುದು. ನಿಮ್ಮನ್ನು ಯಾರಾದರೂ ಹಿಂಬಾಲಿಸುತ್ತಿದ್ದರೆ ಅಥವಾ ಹೆದರಿಸುತ್ತಿದ್ದರೆ ನಿಮ್ಮ ಶಿಕ್ಷಕರ ಅಥವಾ ತಂದೆತಾಯಿಯ ಸಹಾಯ ಪಡೆಯಬಹದು. ಸೈಬರ್ ಕ್ರೈಮ್ ಇಂಟರ್‌ವೆಂಷನ್‌ ಆಫೀಸರ್‌ಗಳ ಸಹಾಯವನ್ನೂ ಪಡೆಯಬಹದು. ನಿಮ್ಮ ಫೋಟೊ ಮತ್ತು ರೀಲ್ಸ್‌ಗಳನ್ನು ಕ್ರಿಮಿನಲ್‌ಗಳು ದುರುಪಯೋಗಿಸದಂತೆ ಸುರಕ್ಷತೆಗೊಳಿಸಿಕೊಳ್ಳಿ. ಜಾಗರೂಕರಾಗಿ ನಿಮ್ಮ ಸೋಷಿಯಲ್‌ ಪ್ರೊಫೈಲನ್ನು ಕಾಯ್ದುಕೊಳ್ಳಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಇಂಟರ್ನೆಟ್ ಬ್ಯಾಂಕಿಂಗ್ ವಂಚನೆ‌ ತಡೆಯಲು ಕೆಲವು ಟಿಪ್ಸ್

Continue Reading

ಅಂಕಣ

Raja Marga Column : ಚೆನ್ನಾಗಿದ್ದ ಸಂಬಂಧಗಳು ಕೆಡೋದ್ಯಾಕೆ? ಇಲ್ಲಿವೆ 12 ಕಾರಣಗಳು

Raja Marga Column : ತುಂಬಾ ಚೆನ್ನಾಗಿರುತ್ತದೆ ಸಂಬಂಧ. ಆದರೆ, ಒಮ್ಮಿಂದೊಮ್ಮೆಗೆ ಹದಗೆಡುತ್ತದೆ. ಯಾಕೆ ಅಂತಾನೇ ಗೊತ್ತಾಗಲ್ಲ.. ಹೀಗೆ ಆಗುವುದಕ್ಕೆ ಕಾರಣ ಇಲ್ಲಿದೆ.

VISTARANEWS.COM


on

Healthy relationship
Koo
RAJAMARGA

ಉತ್ತಮ ಸಂಬಂಧವನ್ನು (Good Realationship) ಪ್ರತಿಯೊಬ್ಬರೂ ಹೊಂದಲು ಆಸೆ ಪಡುತ್ತಾರೆ. ಆರೋಗ್ಯಪೂರ್ಣ ಸಂಬಂಧಗಳು (Healthy Relationship) ನಮ್ಮೆಲ್ಲರ ಬದುಕನ್ನು ಸುಂದರವಾಗಿ ಮಾಡುತ್ತವೆ. ಆದರೆ ಒಂದು ಸದೃಢವಾದ ದೋಣಿಯಲ್ಲಿ ಸಣ್ಣ ಬಿರುಕು ಉಂಟಾದ ಹಾಗೆ, ಒಂದು ತೊಟ್ಟು ಹುಳಿಯು ಒಂದು ಪಾತ್ರೆ ಹಾಲನ್ನು ಕೆಡಿಸಿದ ಹಾಗೆ, ಒಂದು ಬಿಂದು ವಿಷವು ನಮ್ಮನ್ನು ಪೂರ್ತಿ ಸಾಯಿಸುವ ಹಾಗೆ ಒಮ್ಮೆ ಸಣ್ಣ ಅಪನಂಬಿಕೆಯು ಉಂಟಾದರೆ ಆ ಸಂಬಂಧಗಳು ನಿಧಾನವಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಇದರಿಂದ ನಮ್ಮ ಬದುಕು ಅರ್ಥಹೀನ ಆಗುತ್ತದೆ. ಉತ್ತಮ ಸಂಬಂಧವನ್ನು ಕದಡುವ ಈ ಕೆಳಗಿನ ಅಂಶಗಳು ನಮ್ಮ ಗಮನದಲ್ಲಿ ಇರಲಿ (Raja Marga Column).

1. ಫೇಕ್ ವ್ಯಕ್ತಿತ್ವ ಸಂಬಂಧಗಳಿಗೆ ಕೊಡಲಿ ಏಟು (Fake Personality)

ನಮ್ಮ ನಡೆ, ನುಡಿಯಲ್ಲಿ ಅಗಾಧವಾದ ವ್ಯತ್ಯಾಸಗಳು ನಮ್ಮ ಸಂಬಂಧಗಳಿಗೆ ಕೊಡಲಿಯ ಏಟು ಆಗುತ್ತವೆ. ನಮ್ಮ ನಡೆ, ನುಡಿ ಮತ್ತು ಭಾವನೆಗಳು ಒಂದೇ ಆಗಿಸುವ ಪ್ರಯತ್ನವನ್ನು ಮಾಡಿ ನೋಡಿ. ಅದೆಷ್ಟು ಕಷ್ಟ ಎಂದು ನಮ್ಮ ಗಮನಕ್ಕೆ ಬರುತ್ತವೆ. ಮುಖವಾಡ ಹಾಕಿದ ಬದುಕು ದೀರ್ಘ ಕಾಲ ಉಳಿಯಲು ಸಾಧ್ಯವೇ ಇಲ್ಲ!

Relationships

2. ಬೇಜವಾಬ್ದಾರಿತನದಿಂದ ನಿರ್ಲಕ್ಷ್ಯ ಮಾಡ್ತೀರಾ? (Irresponsible Behaviour)

ತನ್ನ ಪ್ರೀತಿ ಪಾತ್ರರನ್ನು ಪದೇಪದೆ ನಿರ್ಲಕ್ಷ್ಯ ಮಾಡುವ, ಅವರ ಭಾವನೆಗಳನ್ನು ಅವಗಣನೆ ಮಾಡುವ ನಮ್ಮ ವರ್ತನೆಗಳು ತುಂಬಾ ಅಪಾಯಕಾರಿ. ನಮ್ಮ ಪ್ರೀತಿಯ ವ್ಯಕ್ತಿಗಳನ್ನು ನಮ್ಮ ಆದ್ಯತೆಯ ಪಟ್ಟಿಯಲ್ಲಿ ಇರಿಸುವ ಕೆಲಸವೂ ತುಂಬಾ ಮುಖ್ಯ. ಈ ವಿಷಯದಲ್ಲಿ ಮೈ ಮರೆವು ಖಂಡಿತ ಸಮರ್ಥನೀಯ ಅಲ್ಲ!

3. ವಿಪರೀತವಾದ ಇಗೋವನ್ನು ಯಾರು ಒಪ್ತಾರೆ? (Ego kills relationship)

ಊಟದ ರುಚಿಗೆ ತಕ್ಕ ಉಪ್ಪು ಇರುವ ಹಾಗೆ ಇಗೋ ಇಲ್ಲದೆ ನಾವ್ಯಾರೂ ಬದುಕಲು ಸಾಧ್ಯ ಇಲ್ಲ. ಆದರೆ ಬೇರೆ ಯಾರನ್ನೂ ಒಪ್ಪದೇ ಇರುವ ಮನಸ್ಥಿತಿಯು ತುಂಬಾ ಅಪಾಯಕಾರಿ. ನಾನು ಹೇಳಿದ ಹಾಗೆ ಎಲ್ಲರೂ ಇರಬೇಕು ಎನ್ನುವ ಮೈಂಡ್ ಸೆಟ್ ನಮ್ಮನ್ನು ಅಪಾಯದ ಅಂಚಿಗೆ ದೂಡಬಲ್ಲದು.

Relationship

4. ಸಂಬಂಧಗಳ ಅಸ್ಪಷ್ಟತೆ ಗೊಂದಲಕ್ಕೆ ತಳ್ಳುತ್ತದೆ (Conflict in relationship)

ನಾವು ಯಾರ ಜೊತೆಗಾದರೂ ಎರಡೇ ರೀತಿಯ ಸಂಬಂಧ ಹೊಂದಿರುವುದು ಸಾಧ್ಯ ಇದೆ. ಒಂದು ಆಫಿಷಿಯಲ್ ಮತ್ತು ಇನ್ನೊಂದು ಭಾವನಾತ್ಮಕ! ಯಾರ ಜೊತೆ ಯಾವ ಸಂದರ್ಭದಲ್ಲೆಲ್ಲಾ ಆಫಿಶಿಯಲ್ ಆಗಿರಬೇಕು ಮತ್ತು ಯಾವ ಸಂದರ್ಭದಲ್ಲಿ ಎಮೋಷನಲ್ ಆಗಿರಬೇಕು ಎಂದು ನಿರ್ಧಾರ ಮಾಡುವವರು ನಾವೇ! ಇಲ್ಲಿ ಎಡವಿದರೆ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ.

5. ತಪ್ಪುಗಳ ಸಮರ್ಥನೆ ಮಾಡುವುದು ಡೇಂಜರ್‌ (Mistakes and argument)

ತಪ್ಪು ಮಾಡುವುದು ಅತ್ಯಂತ ಸಹಜ. ತಪ್ಪನ್ನು ನಾವೆಲ್ಲರೂ ಮಾಡುತ್ತೇವೆ. ಆದರೆ ತಪ್ಪನ್ನು ಒಪ್ಪಿಕೊಳ್ಳದೆ ಸಮರ್ಥನೆ ಮಾಡಲು ಹೊರಡುವುದು ಅಥವಾ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದು ಅಥವಾ ತಪ್ಪುಗಳನ್ನು ರಿಪೀಟ್ ಮಾಡುವುದು ನಮ್ಮ ಸಂಬಂಧಗಳನ್ನು ತೇಪೆ ಹಾಕಲೂ ಆಗದಷ್ಟು ಕೆಡಿಸಿಬಿಡುತ್ತವೆ. ಒಮ್ಮೆ ಕ್ಷಮೆಯನ್ನು ಕೇಳುವುದರಿಂದ ನಮ್ಮ ಸಂಬಂಧಗಳು ಉಳಿಯುತ್ತವೆ ಅಂತಾದರೆ ನಾನು ತಪ್ಪು ಮಾಡದಿದ್ದರೂ ಎಷ್ಟೋ ಬಾರಿ ಸಾರಿ ಕೇಳಿ ನಮ್ಮ ಸಂಬಂಧ ಉಳಿಸಿಕೊಂಡಿದ್ದೇನೆ.

relationship meter

6. ವಿಪರೀತ ಮೋಹ ಮತ್ತು ಅವಲಂಬನೆ ಬೇಕಾ? (Over Possessiveness)

ತಾನು ಪ್ರೀತಿಸುವವರು ತನ್ನನ್ನು ಮಾತ್ರ ಪ್ರೀತಿಸಬೇಕು ಎನ್ನುವ ಮೋಹ ಮತ್ತು ಭಾವನಾತ್ಮಕ ಅವಲಂಬನೆಯು ನಮ್ಮ ಸಂಬಂಧಗಳಿಗೆ ಅಪಾಯಕಾರಿ. ವಿಪರೀತ ಎನಿಸುವ ಅವಲಂಬನೆಯು ನಮ್ಮನ್ನು ದೂರ ಮಾಡುತ್ತದೆ.

7. ಕೃತಘ್ನತೆಯಿಂದ ಬೀಳುತ್ತೆ ಹೊಡೆತ (Ingratitude perosonality)

ನಮ್ಮ ಜೀವನದಲ್ಲಿ ಸಣ್ಣ ಸಣ್ಣ ಸಹಾಯ ಮಾಡಿದವರು ಮತ್ತು ಕೊಡುಗೆಗಳನ್ನು ನೀಡಿದವರು ನಮ್ಮ ಭಾವಕೋಶದಲ್ಲಿ ಶಾಶ್ವತ ಸ್ಥಾನ ಪಡೆಯಬೇಕು. ನಮಗೆ ಐದು ನಿಮಿಷ ಹ್ಯಾಪಿನೆಸನ್ನು ಕೊಟ್ಟವರು ಕೂಡ ನಮ್ಮ ಪ್ರೀತಿಯ ಹಕ್ಕುದಾರರು ಆಗಿರಬೇಕು. ಅಂತವರನ್ನು ಮರೆತರೆ ಸಂಬಂಧ ಬಿರುಕು ಬಿಡುವುದು ಖಂಡಿತ.

8. ಪದೇಪದೆ ಬದಲಾಗುವ ನಿಷ್ಠೆಯಿಂದ ಅಪಾಯ (Loyalty must)

ನಮ್ಮ ಆದ್ಯತೆಗಳು ಪದೇಪದೆ ಬದಲಾಗುತ್ತ ಹೋದಂತೆ ನಮ್ಮ ಸಂಬಂಧಗಳ ಒಳಗೆ ಒಡಕು ಉಂಟಾಗಬಹುದು. ತುಂಬಾ ಪ್ರೀತಿಪಾತ್ರರಿಗೆ ನಾವು ಕೊಡುವ ಸಮಯ, ಪ್ರೀತಿ ಮತ್ತು ಭಾವನೆಗಳಲ್ಲಿ ಕೊರತೆ ಉಂಟಾದಾಗ ಉತ್ತಮ ಸಂಬಂಧಗಳು ನಮ್ಮಿಂದ ದೂರ ಆಗುತ್ತವೆ.

Relationship problems

9. ಸಂವಹನದ ಕೊರತೆ ಮಾಡಿಕೊಳ್ಳಬೇಡಿ (Communication problem)

ನಮ್ಮಲ್ಲಿ ಎಷ್ಟೋ ತಪ್ಪು ಕಲ್ಪನೆ ಉಂಟಾಗಲು ಕಾರಣ ಸಂವಹನದ ಕೊರತೆ. ನಮ್ಮ ಪ್ರೀತಿ ಪಾತ್ರರ ಜೊತೆಗೆ ಉತ್ತಮ ಸಂವಹನ ನಡೆಯದೆ ಹೋದರೆ ತಪ್ಪು ಕಲ್ಪನೆಗಳು ಉಂಟಾಗಿ ಸಂಬಂಧಗಳು ಅರ್ಥವನ್ನೇ ಕಳೆದುಕೊಳ್ಳುತ್ತವೆ. ಪ್ರೀತಿ ಪಾತ್ರರೊಂದಿಗೆ ಮನಸು ಬಿಚ್ಚಿ ಮಾತಾಡುವ ಸಮಯ ಮತ್ತು ಸಂದರ್ಭಗಳನ್ನು ನಾವೇ ಸೃಷ್ಟಿ ಮಾಡಿಕೊಳ್ಳಬೇಕು.

10. ಸುಳ್ಳು ಹೇಳಿದರೆ ಸಾವಿರ ಸಂಕಷ್ಟ (Lies prove dangerous)

ಪದೇಪದೆ ಸುಳ್ಳು ಹೇಳುವವರಿಗೆ ಹೆಚ್ಚು ಮೆಮೊರಿಯ ಪವರ್ ಇರಬೇಕು ಅನ್ನುತ್ತದೆ ಒಂದು ಚೈನೀಸ್ ಗಾದೆ! ಒಂದೆರಡು ಸುಳ್ಳುಗಳು ನಮ್ಮನ್ನು ಆ ಕಾಲಕ್ಕೆ ಸೇಫ್ ಮಾಡಬಹುದು. ಆದರೆ ಮುಂದೆ ಅದೇ ಸುಳ್ಳುಗಳು ಬಯಲಾಗುತ್ತ ಹೋದಂತೆ ನಮ್ಮ ವಿಶ್ವಾಸಾರ್ಹತೆಯು ಕಡಿಮೆ ಆಗುತ್ತದೆ. ನಾವು ಸವಕಲು ನಾಣ್ಯ ಆಗಿಬಿಡುತ್ತೇವೆ.

11. ವಿಪರೀತ ಸಿಟ್ಟು ಮತ್ತು ಸಿಡುಕುವುದು (Anger Management)

ಸಿಟ್ಟು ಎಷ್ಟೋ ಬಾರಿ ಒಳ್ಳೆಯ ಉದ್ದೇಶಕ್ಕೆ ಬಂದರೂ ಕೆಟ್ಟದಾದ ಪರಿಣಾಮವನ್ನು ಬಿಟ್ಟು ಹೋಗುತ್ತದೆ. ನಮ್ಮ ಪ್ರೀತಿ ನಿಜ ಎಂದಾದರೆ, ನಮ್ಮಲ್ಲಿ ಅವರನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ ಎಂದಾದರೆ, ನಾವು ಅವರ ಸ್ಥಳದಲ್ಲಿ ಕುಳಿತು ಯೋಚನೆ ಮಾಡುತ್ತೇವೆ ಅಂತಾದರೆ ನಮಗೆ ಸಿಟ್ಟು ಬರಲು ಸಾಧ್ಯವೇ ಇಲ್ಲ!

ಇದನ್ನೂ ಓದಿ: Raja Marga : ಜಗತ್ತು ನೆನಪಿಡುವುದು ಮೊದಲಿಗರನ್ನು ಮಾತ್ರ! ನಿಮಗೂ ಹಲವು ಕ್ಷೇತ್ರಗಳು ಕಾದಿವೆ

12. ವಿಪರೀತವಾದ ನಿರೀಕ್ಷೆ ಇಟ್ಟುಕೊಳ್ತೀರಾ? (Over Expectations)

ನಮ್ಮ ಪ್ರೀತಿಯ ವ್ಯಕ್ತಿಗಳ ಬಗ್ಗೆ ನಮ್ಮ ಅತಿಯಾದ ನಿರೀಕ್ಷೆಗಳು ಎಲ್ಲ ಬಣ್ಣ ಮಸಿ ನುಂಗಲು ಕಾರಣ ಆಗುತ್ತದೆ. ನಾವು ನಿರೀಕ್ಷೆ ಮಾಡಿದ ಹಾಗೆ ಎಲ್ಲರೂ ಇರಬೇಕು ಎನ್ನುವ ಹಠ ತುಂಬಾ ಅಪಾಯಕಾರಿ. ನಮ್ಮ ಪ್ರೀತಿಯ ವ್ಯಕ್ತಿಗಳನ್ನು ಬದಲಾವಣೆ ಮಾಡಲು ಹೋಗದೆ ಹಾಗೆಯೇ ಪ್ರೀತಿಸುವುದು ಉತ್ತಮ ನಿರ್ಧಾರ. ನಮ್ಮದಾದ ಅಭಿಪ್ರಾಯಗಳನ್ನು ಬೇರೆಯವರ ಮೇಲೆ ಹೇರುವುದು ಖಂಡಿತ ಸರಿ ಅಲ್ಲ.

ಉತ್ತಮವಾದ ಆರೋಗ್ಯಪೂರ್ಣ ಸಂಬಂಧಗಳು ನಮ್ಮನ್ನು ಖಂಡಿತವಾಗಿ ಬೆಳೆಸುತ್ತವೆ ಅನ್ನುವುದು ನೂರಕ್ಕೆ ನೂರು ನಿಜ. ನಮ್ಮನ್ನು ಪ್ರೀತಿ ಮಾಡುವವರ ಬಗ್ಗೆ ಸ್ವಾರ್ಥ ಇಲ್ಲದ ಪ್ರೀತಿ, ಒಂದು ಹಿಡಿಯಷ್ಟು ಕಾಳಜಿ, ಸದಾ ಜಾಗೃತವಾದ ನಂಬಿಕೆ ಮತ್ತು ಅವುಗಳ ಜೊತೆಗೆ ಒಂದಿಷ್ಟು ಕೊರತೆ ಆಗದ ಗೌರವವೂ ಇದ್ದರೆ ನಮಗೆ ಅಪರಿಮಿತವಾದ ಯಶಸ್ಸು ದೊರೆಯುವುದು ಖಂಡಿತ. ಏನಂತೀರಿ?

ಈ ಲೇಖನದ ಬಗ್ಗೆ ನಿಮಗೆ ಏನನಿಸುತ್ತದೆ? ಕಮೆಂಟ್‌ ಮಾಡಿ ತಿಳಿಸಿ

Continue Reading

ಅಂಕಣ

ವಿಸ್ತಾರ ಅಂಕಣ: ಕನ್ನಡ ಶಾಲೆ ಉಳಿವಿಗೆ ಎಸ್ಇಪಿ ಜಾರಿಯೇ ಅಡ್ಡಿ!

ಎನ್‌ಇಪಿ (NEP) ಹಾಗೂ ರಾಜಕೀಯ ಪ್ರತಿಷ್ಠೆಗಾಗಿ ತರಲಾಗುತ್ತಿರುವ ಎಸ್‌ಇಪಿಗಳ (SEP) ನಡುವಿನ ಸಮರದಲ್ಲಿ ಬಡವಾಗುವವರು ರಾಜ್ಯದ ಬಡ, ಸರ್ಕಾರಿ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು. ಇದು ಕನ್ನಡ ಶಾಲೆಗಳನ್ನು ಉಳಿಸುವ ದಾರಿಯೂ ಅಲ್ಲ.

VISTARANEWS.COM


on

kannada school
Koo
Vistara Column @ Hariprakash Konemane

ನಮ್ಮ ಶಿಕ್ಷಣ ವ್ಯವಸ್ಥೆ (Education system) ಸರಿ ಇಲ್ಲ. ಇದರಲ್ಲಿ ಎಳ್ಳಷ್ಟು ನೈತಿಕ ಶಿಕ್ಷಣ ಇಲ್ಲ. ಪ್ರಾಯೋಗಿಕ ಶಿಕ್ಷಣದ ಸೋಂಕಿಲ್ಲ. ಇಂಥಾ ಶಿಕ್ಷಣ ಹೆಚ್ಚಾದಂತೆ ನಿರುದ್ಯೋಗ ಪ್ರಮಾಣವೂ ಹೆಚ್ಚಾಗುತ್ತದೆ. ಇಂಥಾ ಶಿಕ್ಷಣ ಸುಧಾರಣೆಯಾಗಲೇಬೇಕು…!

ನಮ್ಮ ನಾಡಿನ ಶಿಕ್ಷಣ ತಜ್ಞರು, ಚಿಂತಕರು ಇಂಥಾ ಮಾತನ್ನು ಹೇಳುತ್ತಲೇ ಇರುತ್ತಾರೆ. ಅವರ ಬರಹ, ಭಾಷಣ- ಎಲ್ಲೆಲ್ಲೂ ಈ ಕೊರಗನ್ನು ಕಾಣಬಹುದು. ಹಾಗೆ ನೋಡಿದರೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಥಿ ವೇತನ ಯೋಜನೆಗಳಿವೆ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲೆಂದೇ ಈ ಯೋಜನೆಗಳು ವಿನ್ಯಾಸಗೊಂಡಿವೆ. ಶಿಕ್ಷಣ ಹಕ್ಕೂ (Education right) ಕೂಡ ಜಾರಿಯಾಗಿ ದಶಕಗಳೇ ಸಂದಿವೆ. ಆದರೂ ಉನ್ನತ ಶಿಕ್ಷಣದ ದಾಖಲಾತಿಯ ಸರಾಸರಿ ಪ್ರಮಾಣ ನಿರೀಕ್ಷಿಸಿದಷ್ಟು ಹೆಚ್ಚುತ್ತಿ,ಲ್ಲ. ಹಾಗಾಗಿ ಶಿಕ್ಷಣದ ವ್ಯವಸ್ಥೆ ತಳ ಸಮುದಾಯದ ಮಕ್ಕಳ ಅಭಿವೃದ್ಧಿಗೆ ಸಹಕಾರಿಯಾಗಿಲ್ಲ ಎಂಬುದು ಇನ್ನೂ ಕೆಲವರು ಮುಂದಿಡುವ ಕೊರಗು. ಒಂದಿಷ್ಟು ಮಂದಿಯಂತೂ, ನಮ್ಮ ರ್ಯಾಂಕ್‌ಗಳನ್ನೇ ಗೇಲಿ ಮಾಡುವುದುಂಟು. “ರ್ಯಾಂಕ್ ಬಂದ ಮಕ್ಕಳು ಅಗ್ರ ಶ್ರೇಯಾಂಕಿತರೇ ಹೊರತು ಬುದ್ಧಿವಂತರಲ್ಲ, ಕೌಶಲಿಗಳೂ ಅಲ್ಲ!” ಎಂದು ಮೂಗು ಮುರಿಯುತ್ತಾರೆ.

ಅಂದರೆ ಏನು? ಈಗಿನ ನಮ್ಮ ಶಿಕ್ಷಣದಲ್ಲಿ ಏನೋ ಸಮಸ್ಯೆ ಇದೆ ಎನ್ನುವುದು ಎಲ್ಲರೂ ಒಪ್ಪುವ ಮಾತು. ಮೊದಲನೆಯದಾಗಿ ಶಿಕ್ಷಣದ ಗುಣಮಟ್ಟ ಸರಿಯಿಲ್ಲ. ಎರಡನೆಯದಾಗಿ, ಗುಣಮಟ್ಟದ ಶಿಕ್ಷಣವು ಬಡವರ ಕೈಗೆ ಸಿಗುತ್ತಿಲ್ಲ. ಮೂರನೆಯದಾಗಿ, ಈ ಶಿಕ್ಷಣವು ವಿದ್ಯಾರ್ಥಿಗಳನ್ನು ಮಕ್ಕಿ ಕಾ ಮಕ್ಕಿ ಗಿರಾಕಿಗಳನ್ನಾಗಿ ಮಾಡಿದೆಯೇ ಹೊರತು ಜ್ಞಾನವಂತರನ್ನಾಗಿ ಅಲ್ಲ. ಇದೆಲ್ಲವೂ ಅನೇಕರು ಒಪ್ಪುವ ಮಾತು. ಇದೇ ಕಾರಣಕ್ಕೆ, ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ.

ಭಾರತದಲ್ಲಿ 34 ವರ್ಷಗಳ ನಂತರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National education policy) ಜಾರಿಗೆ ತರಲಾಗಿದೆ. ನೆನಪಿರಲಿ, ಈ ಮೂರೂವರೆ ದಶಕದಲ್ಲಿ ಶರವೇಗದಲ್ಲಿ ಬದಲಾಗಿದೆ (2000ರ ಹಿಂದಿನ ಸಾವಿರಾರು ವರ್ಗಗಳಲ್ಲಿ ಘಟಿಸದ ಬದಲಾವಣೆಯ ವೇಗದ ಪ್ರಮಾಣ, ಆ ನಂತರದ ಎರಡೂವರೆ ದಶಕದ ಅವಧಿಯಲ್ಲಿ ಸಾವಿರ ಪಟ್ಟು ಹೆಚ್ಚಿದೆ ಎಂಬ ಮಾತಿದೆ). ಬದಲಾಗದೇ ಉಳಿದಿದ್ದು ನಮ್ಮ ಅಧಿಕೃತ ಶಿಕ್ಷಣ ನೀತಿ. ಇದೇ ಇರಲಿ, ಈ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಏಕಾಏಕಿ ಜಾರಿ ಮಾಡಿದೆಯೇ? ಹಾಗೇನೂ ಇಲ್ಲ. 2015 ಫೆಬ್ರವರಿಯಲ್ಲಿ ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಪತ್ರಿಕಾಗೋಷ್ಠಿ ನಡೆಸಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಬಗ್ಗೆ ಘೋಷಿಸಿದ್ದರು. ಭಾರತದ ಶಿಕ್ಷಣಕ್ಕೆ ಸಂಬಂಧಿಸಿದ 39 ಅಂಶಗಳನ್ನು ಜನರ ಮುಂದೆ ಇಡುತ್ತಿದ್ದೇವೆ, ದೇಶದ ಎಲ್ಲ ಜನರೂ ಇದಕ್ಕೆ ಸಲಹೆ ಕೊಡಬೇಕು, ಅದೆಲ್ಲದರ ಆಧಾರದಲ್ಲಿ ಶಿಕ್ಷಣ ನೀತಿ ರೂಪಿಸುತ್ತೇನೆ ಎಂದು ಸಾರ್ವಜನಿಕವಾಗಿ ಪ್ರಕಟಿಸಿದ್ದರು. ನಂತರ ಐದು ವರ್ಷ ವಿಚಾರ ಮಂಥನ ನಡೆಸಲಾಗಿದೆ.

ಬಹುಶಃ ಜಗತ್ತಿನಲ್ಲಿ ಯಾವುದೇ ಶಿಕ್ಷಣ ನೀತಿ ರೂಪಿಸುವಾಗ ಇಷ್ಟು ಪ್ರಮಾಣದ ಚರ್ಚೆ, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ನಡೆದಿಲ್ಲ. ದೇಶದ 30 ಕೋಟಿ ಜನರ ಬಳಿಗೆ ಇದನ್ನು ಕೊಂಡೊಯ್ಯಲಾಗಿದೆ. ಹರಿದು ಬಂದ 2 ಲಕ್ಷಕ್ಕಿಂತ ಅಧಿಕ ಸಲಹೆಗಳನ್ನು ಸೇರಿಸಿದ್ದರೆ, ಅದರ ಒಟ್ಟು ಪುಟಗಳ ಸಂಖ್ಯೆ 50 ಸಾವಿರ ದಾಟುತ್ತಿತ್ತು. ನಿವೃತ್ತ ವಿಜ್ಞಾನಿ ಡಾ. ಕಸ್ತೂರಿ ರಂಗನ್ ಅವರ ನೇತೃತ್ವದ ಸಮಿತಿ ಇದೆಲ್ಲವನ್ನೂ ದತ್ತಾಂಶ ರೂಪಕ್ಕೆ ಇಳಿಸಿಕೊಂಡು ಎಲ್ಲವನ್ನೂ ಅಧ್ಯಯನ ಮಾಡಿ ಕರಡು ನೀತಿಯೊಂದನ್ನು ರೂಪಿಸಿತು. ಬಳಿಕ ಮತ್ತೆ ಸಾರ್ವಜನಿಕರ ಚರ್ಚೆಗೆ ಬಿಡಲಾಯಿತು. ಅಲ್ಲಿಂದ ಬಂದ ಸಲಹೆಗಳನ್ನೂ ಅಳವಡಿಸಿ ಕೊನೆಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಘೋಷಣೆ ಮಾಡಲಾಯಿತು.

ನಮ್ಮ ದೇಶದ ರಾಜಕಾರಣಿಗಳ ಬಗ್ಗೆ ಇರುವ ಪ್ರಮುಖ ದೂರು ಯಾವುದು? ಅವರು ಮುಖ್ಯವಾಗಿ ಇರುವುದೇ ನೀತಿ ನಿರೂಪಣೆ ಮಾಡಲು. ಆದರೆ ಸಂಸತ್ತಿನಲ್ಲಿ ಕಾನೂನು ರಚನೆ, ತಿದ್ದುಪಡಿಯಂತಹ ಶಾಸನ ರಚನಾ ಕೆಲಸಕ್ಕೆ ಅವರ ಬಳಿ ಸಮಯವೇ ಇರುವುದಿಲ್ಲ. ಸಂಸತ್ತು ಹಾಗೂ ವಿಧಾನಮಂಡಲಗಳಲ್ಲಿ ಗದ್ದಲ, ಆರೋಪ-ಪ್ರತ್ಯಾರೋಪ ಮಾಡಿಕೊಂಡಿರುತ್ತಾರೆ ಎನ್ನುವುದು. ಆದರೆ ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಅತ್ಯಂತ ವಿಸ್ತೃತವಾದ ಚರ್ಚೆ, ಸಾರ್ವಜನಿಕ ಸಹಭಾಗಿತ್ವ ನಡೆಸಲಾಗಿದೆ. ಆದರೂ ಕೇಂದ್ರದಲ್ಲಿ ಪ್ರತಿಪಕ್ಷಗಳು ಹಾಗೂ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಇದರ ವಿರುದ್ಧ ಮಾತನಾಡುತ್ತಿದೆ.

kids study

ಕರ್ನಾಟಕದಲ್ಲಂತೂ ಒಂದು ಹೆಜ್ಜೆ ಮುಂದೆ ಹೋಗಿ, ರಾಜ್ಯ ಶಿಕ್ಷಣ ನೀತಿ ಜಾರಿ (state education policy) ಮಾಡುವುದಾಗಿಯೂ ಘೊಷಣೆ ಮಾಡಲಾಗಿದೆ. ಇದಕ್ಕಾಗಿ ಸಮಿತಿಯನ್ನೂ ರಚಿಸಿ ಮೊದಲ ಸಭೆಯೂ ನಡೆದಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತದೆ ಎನ್ನುವುದು ಸಚಿವರ ಹಾಗೂ ಸ್ವತಃ ಮುಖ್ಯಮಂತ್ರಿಗಳ ವಾದ. ಎಲ್ಲಿ ಅನ್ಯಾಯವಾಗುತ್ತದೆ ಎಂದು ಕೇಳಿದರೆ, ಇದರಲ್ಲಿ ಹಿಂದುತ್ವ ಹೇರುವ ಪಠ್ಯವಿದೆ, ನಾವು ಸಮಾನತೆಯನ್ನು ಸಾರುವ ಪಠ್ಯ ರೂಪಿಸುತ್ತೇವೆ ಎನ್ನುತ್ತಾರೆ. ಅಸಲಿಗೆ ಇವರಿಗೆಲ್ಲ, ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ ಏನು ಎನ್ನುವುದೇ ಅರ್ಥವಾಗಿಲ್ಲ ಅಥವಾ ಅರ್ಥವಾಗಿದ್ದರೂ ಈ ರೀತಿ ನಟಿಸುತ್ತಿದ್ದಾರೆ. ಏಕೆಂದರೆ ʼನೀತಿʼಗೂ ʼಪಠ್ಯʼಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನೀತಿ ಎನ್ನುವುದು ಒಟ್ಟಾರೆ ಶಿಕ್ಷಣದ ವ್ಯವಸ್ಥೆ, ಅದಕ್ಕೆ ಬೇಕಾದ ಮಾನವ ಸಂಪನ್ಮೂಲ, ಭಾಷಾ ದೃಷ್ಟಿಕೋನ, ವಿಜ್ಞಾನದ ಕುರಿತು ದೃಷ್ಟಿಕೋನ, ಸಂಶೋಧನೆಗೆ ನೀಡುವ ಒತ್ತು, ಮೂಲಸೌಕರ್ಯ ಸೇರಿ ಅನೇಕ ವಿಚಾರಗಳಲ್ಲಿ ಇರುತ್ತದೆ. ಹೆಚ್ಚೆಂದರೆ ದೇಶದ ಘನತೆ, ಸಾರ್ವಭೌಮತೆ, ಗಣತಂತ್ರದ ಮಹತ್ವ ಸಾರುವ ಪಠ್ಯ ಸೇರಿಸಬೇಕು ಎಂದಿರಬಹುದೇ ಹೊರತು, ಇಂಥದ್ದೇ ಪಠ್ಯವನ್ನು ಸೇರಿಸಿ ಎಂದಿರುವುದಿಲ್ಲ. ಇದನ್ನೇ ಹಿಂದುತ್ವ, ಕೇಸರೀಕರಣ ಎನ್ನುವುದು ಸರಿಯಲ್ಲ. ವಾಸ್ತವವಾಗಿ ಶಿಕ್ಷಣ ನೀತಿ, ಪಠ್ಯ ಹೇಗಿರಬೇಕು ಎಂಬುದನ್ನು ಹೇಳಿದಿಯೇ ಹೊರತು, ಯಾವುದಿರಬೇಕು ಎಂಬುದನ್ನು ಹೇಳುವುದಿಲ್ಲ. ಇದನ್ನು ನಿರ್ಧಾರ ಮಾಡುವುದು ಆಯಾ ರಾಜ್ಯಗಳ ಪಠ್ಯಪುಸ್ತಕ ರಚನಾ ಸಮಿತಿಗಳು. ಹಾಗಾಗಿ, ರಾಷ್ಟ್ರೀಯ ಶಿಕ್ಷಣ ನೀತಿಯು ಕೇಸರೀಕರಣದ ಪ್ರಯತ್ನ ಎನ್ನುವುದು ಒಪ್ಪುವ ಮಾತಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಸಾಮಾನ್ಯವಾಗಿ ಪೋಷಕರ ಮನೋಭಾವವನ್ನು ನೋಡೋಣ. ಕರ್ನಾಟಕದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಿಸಬೇಕು ಎಂಬ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲಾಗಿತ್ತು. ಈ ಪ್ರಕರಣದಲ್ಲಿ ಸರ್ಕಾರಕ್ಕೆ ಸೋಲಾಗಿ, ಶಿಕ್ಷಣ ಮಾಧ್ಯಮ ಯಾವುದು ಎನ್ನುವುದನ್ನು ಪೋಷಕರು ನಿರ್ಧರಿಸಬೇಕೆ ವಿನಃ ಸರ್ಕಾರವಲ್ಲ ಎಂದು ತೀರ್ಪು ಬಂದಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸುತ್ತಿರುವ ಪೋಷಕರಿಗೆ ಕನ್ನಡ ಅಭಿಮಾನ ಇಲ್ಲ ಎಂದು ಅರ್ಥವೇ? ತಮ್ಮ ಮಕ್ಕಳು ದೇಶದ ಮಟ್ಟದಲ್ಲಿ, ವಿಶ್ವದ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸಲು ಸಿದ್ಧವಾಗಬೇಕು ಎನ್ನುವುದು ಎಲ್ಲ ಪೋಷಕರ ಆಸೆ, ಅದು ಸಹಜವೂ ಹೌದು. ಕನ್ನಡದಲ್ಲಿ ಓದಿದರೆ ಅವಕಾಶಗಳು ಕಡಿಮೆ ಎನ್ನುವುದು ಅವರ ಅನಿಸಿಕೆ. ಅವರ ಅನಿಸಿಕೆ ಸರಿಯೋ ತಪ್ಪೋ ಎನ್ನುವುದು ಬೇರೆ ಚರ್ಚೆಯ ವಿಷಯ. ಆದರೆ ತಮ್ಮ ಮಕ್ಕಳು ಉನ್ನತ ಮಟ್ಟದ ಸ್ಪರ್ಧೆಗೆ ಸಿದ್ಧರಾಗಬೇಕು ಎನ್ನುವುದು ಪೋಷಕರ ಆಸೆ.

kids playing in school

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿವಿಧ ರಾಜ್ಯಗಳು ಅನುಷ್ಠಾನ ಮಾಡುತ್ತವೆ. ಹಾಗೂ ವಿಶ್ವವಿದ್ಯಾಲಯಗಳಲ್ಲೂ ಜಾರಿ ಮಾಡಲಾಗುತ್ತದೆ. ಅಲ್ಲಿನ ಬೋಧನಾ ಪದ್ಧತಿ, ಪರೀಕ್ಷೆ, ಮೌಲ್ಯಮಾಪನ, ಅಂಕನೀಡಿಕೆಗಳು ಇದೀಗ ವಿಶ್ವದ ಮಟ್ಟದಲ್ಲಿ ಇರುವ ವ್ಯವಸ್ಥೆಗೆ ಅನುಗುಣವಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ನಾಲ್ಕು ವರ್ಷದ ಪದವಿ ಇದೆ. ಆದರೆ ಭಾರತದಲ್ಲಿ ಮಾತ್ರ ಮೂರು ವರ್ಷದ ಪದವಿ ಕೋರ್ಸ್‌ಗಳಿವೆ. ವಿದೇಶಿ ವ್ಯಾಸಂಗಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಈಗಾಗಲೆ ಅದು ಸಮಸ್ಯೆಯಾಗುತ್ತಿದೆ. ಮೂರು ವರ್ಷ ಪದವಿಯನ್ನು ಪದವಿ ಎಂದೇ ಅನೇಕ ದೇಶಗಳು ಪರಿಗಣಿಸದೇ ಇರುವುದರಿಂದ, ಸ್ನಾತಕೋತ್ತರ ಪದವಿಗೆ ಸೇರ್ಪಡೆಯಾಗಲು ಅಡ್ಡಿಯಾಗುತ್ತಿದೆ. ಹಾಗಾಗಿ ಎನ್ಇಪಿಯಲ್ಲಿ ನಾಲ್ಕು ವರ್ಷದ ಪದವಿಯನ್ನು ಪ್ರಸ್ತಾಪಿಸಲಾಗಿದೆ. ಇದೇನೂ ಕಡ್ಡಾಯವಲ್ಲ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಅನುಕೂಲಕ್ಕೆ ತಕ್ಕಂತೆ ಕೋರ್ಸ್‌ನ ಯಾವುದೇ ವರ್ಷ ಹೊರನಡೆಯಬಹುದು. ಆಯಾ ವರ್ಷಕ್ಕೆ ಅನುಗುಣವಾಗಿ ಪ್ರಮಾಣಪತ್ರ, ಡಿಪ್ಲೊಮಾ ಮುಂತಾದ ಮಾನ್ಯತೆಯನ್ನು ನೀಡಲಾಗುತ್ತದೆ. ಉನ್ನತ ವ್ಯಾಸಂಗ ಮಾಡಬೇಕು, ವಿದೇಶಕ್ಕೆ ತೆರಳಬೇಕು ಎನ್ನುವುವವರು ನಾಲ್ಕು ವರ್ಷ ಪೂರೈಸುತ್ತಾರೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಉಪರಾಷ್ಟ್ರೀಯತೆಯನ್ನು ಬೆಂಬಲಿಸುವ ರಾಷ್ಟ್ರೀಯ ಕಾಂಗ್ರೆಸ್‌!

ಎಸ್ಇಪಿ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ, ಒಂದು ಸಮಿತಿಯನ್ನು ನೇಮಿಸಿದೆ. ಈ ಸಮಿತಿಯ ಶಿಫಾರಸಿನಂತೆ ಎನ್ಇಪಿ ಜಾರಿಯನ್ನು ಮಾಡುವುದರಿಂದ ರಾಜ್ಯ ಸರ್ಕಾರ ಹಿಂತೆಗೆಯಿತು ಎಂದೇ ಭಾವಿಸಿಕೊಳ್ಳೋಣ. ಇದು ಯಾರಿಗೆ ಅನ್ವಯವಾಗುತ್ತದೆ? ಸರ್ಕಾರದ ನಿಯಂತ್ರಣದಲ್ಲಿರುವ ಕೆಲವು ವಿಶ್ವವಿದ್ಯಾಲಯಗಳು, ರಾಜ್ಯ ಸರ್ಕಾರದ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ಅಷ್ಟೆ. ಈಗಂತೂ ರಾಜ್ಯದಲ್ಲಿ ಸರ್ಕಾರದಷ್ಟೇ, ಉನ್ನತ ಶಿಕ್ಷಣದಲ್ಲಿ ಸರ್ಕಾರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ಖಾಸಗಿ ಸಂಸ್ಥೆಗಳು ಸೆಳೆಯುತ್ತಿವೆ. ರಾಜ್ಯದ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಎಂದು ಪರಿಗಣಿಸಲ್ಪಡುವ ಖಾಸಗಿ ವಿವಿಗಳು, ಡೀಮ್ಡ್ ವಿವಿಗಳಿಗೆ ಎಸ್ಇಪಿ ಅನ್ವಯವೇ ಆಗುವುದಿಲ್ಲ. ಜಿಲ್ಲೆ, ತಾಲೂಕು ಮಟ್ಟದಲ್ಲೂ ಇರುವ ಖಾಸಗಿ ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮಗಳಿಗೆ ಎಸ್ಇಪಿ ಅನ್ವಯ ಆಗುವುದಿಲ್ಲ. ಜಿಲ್ಲೆಗೊಂದರಂತಿರುವ ಜವಾಹರ ನವೋದಯ ವಿದ್ಯಾರ್ಥಿಗಳು, ಕೇಂದ್ರೀಯ ಶಾಲೆಗಳು, ಸೈನಿಕ ಶಾಲೆಗಳಲ್ಲಿ ಎನ್ಇಪಿಯೇ ಜಾರಿಯಾಗುತ್ತದೆ, ಅಲ್ಲಿಗೂ ಎಸ್ಇಪಿ ಅನ್ವಯ ಆಗುವುದಿಲ್ಲ. ರಾಜ್ಯ ಸರ್ಕಾರದಿಂದಲೇ ನಡೆಸುವ ಕೆಲವು ವಸತಿ ಶಾಲೆಗಳಲ್ಲೂ ಸಿಬಿಎಸ್ಸಿ ಪಠ್ಯವಿದ್ದು, ಅಲ್ಲಿಂದಲೂ ಎಸ್ಇಪಿ ಹೊರಗೇ ಇರಲಿದೆ. ಇಡೀ ದೇಶ ಎನ್ಇಪಿ ರೀತಿಯಲ್ಲಿ ನಡೆಯುತ್ತಿರುವುದರಿಂದ, ಎಸ್ಇಪಿಯಲ್ಲಿ ಓದಿದ ಕರ್ನಾಟಕ ವಿದ್ಯಾರ್ಥಿಗಳಿಗೆ ಹೊರರಾಜ್ಯಗಳಲ್ಲಿ ಉನ್ನತ ಶಿಕ್ಷಣಕ್ಕೆ, ಕೆಲಸಕ್ಕೆ ತೊಂದರೆಯಾಗಬಹುದು. ಇದೇ ಕಾರಣಕ್ಕೆ ವಿದೇಶದಲ್ಲಿ ಶಿಕ್ಷಣ ಪಡೆಯಲೂ ಅಡಚಣೆ ಆಗಬಹುದು. ಆಗ ನಷ್ಟ ಆಗುವುದು ಯಾರಿಗೆ? ಇದೇ ಸರ್ಕಾರಿ ಶಾಲೆಯಲ್ಲಿ, ಸರ್ಕಾರಿ ವಿವಿಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ.

ಈಗಾಗಲೆ ಹೇಳಿದಂತೆ, ಪೋಷಕರ ಮೊದಲ ಆದ್ಯತೆ ತಮ್ಮ ಮಕ್ಕಳ ಏಳಿಗೆ. ತಮ್ಮ ಮಕ್ಕಳು ಎಸ್ಇಪಿಯಲ್ಲಿ ಓದಿದರೆ ಭವಿದ್ಯ ಇಲ್ಲ ಎಂದು ತಿಳಿದರೆ ಅವರೂ ನಿಧಾನವಾಗಿ ಸಿಬಿಎಸ್ಇ ಶಾಲೆಗಳತ್ತ ಹೊರಳುತ್ತಾರೆ. ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಿರುವ ಕಾರಣ, ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳೂ ನಿಧಾನವಾಗಿ ಸಿಬಿಎಸ್ಇ (CBSE) ಮಾನ್ಯತೆಯತ್ತ ಹೆಜ್ಜೆ ಹಾಕುತ್ತವೆ. ಅಲ್ಲಿಗೆ, ಅನುದಾನಿತ ಶಾಲೆಗಳನ್ನು ಹೊರತುಪಡಿಸಿ ಖಾಸಗಿ ವಲಯದಲ್ಲಿ ರಾಜ್ಯ ಪಠ್ಯಕ್ರಮ ದಿನೇದಿನೇ ಕಡಿಮೆಯಾಗುತ್ತದೆ. ಕೊನೆಗೆ ಉಳಿಯುವುದು ಸರ್ಕಾರಿ ಶಾಲೆ, ಕಾಲೇಜುಗಳು, ಅನುದಾನಿತ ಶಾಲೆ ಕಾಲೇಜುಗಳು. ಇವೆಲ್ಲದರಲ್ಲಿ ಓದುವ ಬಡ ಮಕ್ಕಳಿಗೆ ಇದು ಅನ್ಯಾಯ ಆಗುತ್ತದೆ. ತಾನು ಬಡವರ ಪರ, ಬಡವರಿಗಾಗಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ ಇತ್ತ ರಾಜಕೀಯ ಕಾರಣಗಳಿಗೋಸ್ಕರ ಎನ್ಇಪಿಯನ್ನು ವಿರೋಧಿಸುತ್ತಿರುವುದು ಮೇಲ್ನೋಟಕ್ಕೇ ಕಾಣುತ್ತದೆ. ರಾಜಕೀಯ ಉದ್ದೇಶದಿಂದ, ಬಡ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕಲ್ಲು ಹಾಕುವುದು ಸರ್ವಥಾ ಸಮರ್ಥನೀಯವಲ್ಲ. ರಾಜ್ಯ ಸರ್ಕಾರ ಕೂಡಲೆ ಈ ಎನ್ಇಪಿ ವರ್ಸಸ್ ಎಸ್ಇಪಿ ಯುದ್ಧವನ್ನು ಕೊನೆಗೊಳಿಸಬೇಕು ಎಂದು ಪೋಷಕರೆಲ್ಲ ಒತ್ತಾಯ ಮಾಡುವುದೊಂದೇ ಕನ್ನಡ ಶಾಲೆಗಳನ್ನು ಉಳಿಸಲು ಇರುವ ದಾರಿ.

ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತಾಂಬೆಯ ವಿರುದ್ಧ ಆಕೆಯ ತನುಜಾತೆಯನ್ನು ಎತ್ತಿಕಟ್ಟುವುದು ಏಕೆ?

Continue Reading
Advertisement
Foeticide case and pair of pink bunny figurines
ಕರ್ನಾಟಕ20 mins ago

Belagavi Winter Session: ಭ್ರೂಣ ಹತ್ಯೆ ಕೇಸ್‌; ಕೋರ್ಟ್‌ನಲ್ಲಿ ಕೇಸ್‌ ದಾಖಲಿಸಲು ಸದನದಲ್ಲಿ ಒತ್ತಾಯ

Narendra Modi With Women
EXPLAINER21 mins ago

ಚುನಾವಣೆಯಲ್ಲಿ ಹೆಣ್ಣುಮಕ್ಕಳ ಮತಗಳನ್ನು ಸೆಳೆದ ಬಿಜೆಪಿ; ‘ಕ್ವೀನ್ಸ್’‌ ಕಿಂಗ್‌ಮೇಕರ್ಸ್‌ ಆಗಿದ್ದು ಹೇಗೆ?

Foeticide arrest
ಕರ್ನಾಟಕ39 mins ago

Foeticide Case : ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲೂ ಭ್ರೂಣ ಹತ್ಯೆ; ಹೆಡ್‌ ನರ್ಸ್‌ ಉಷಾರಾಣಿ ಬಂಧನ

Tukali imitate sangeetha sringeri
ಬಿಗ್ ಬಾಸ್45 mins ago

BBK SEASON 10: ನಾಯಿಯಾದ ಸಂಗೀತಾ; ಅನುಕರಣೆ ಮಾಡೋದ್ರಲ್ಲಿ ತುಕಾಲಿ ಎತ್ತಿದ ಕೈ!

Revenue Minister Krishna Byre Gowda making coffee
ಕರ್ನಾಟಕ1 hour ago

Belagavi Winter Session: ಕಾವೇರಿದ ಚರ್ಚೆ ನಡುವೆ ಬಿಸಿ ಬಿಸಿ ಕಾಫಿ ಮಾಡಿಕೊಂಡು ಕುಡಿದ ಕೃಷ್ಣ ಬೈರೇಗೌಡ

Car catches fire after hitting bus
ಕರ್ನಾಟಕ1 hour ago

Video Viral : ಬಸ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಪ್ರಾಣ ಉಳಿಸಿದ ಡ್ರೈವರ್‌; ವಿಡಿಯೊ ಇದೆ!

Michaung Cyclone
ಕರ್ನಾಟಕ2 hours ago

ಮೈಚಾಂಗ್‌ ಚಂಡಮಾರುತ; ಭಾರಿ ಮಳೆಗೆ ತಮಿಳುನಾಡಿನಲ್ಲಿ ಇಬ್ಬರ ಸಾವು, ಬೆಂಗಳೂರಿಗೂ ಎಫೆಕ್ಟ್?

Rishab rashmika
South Cinema2 hours ago

Rishab Shetty: ಪರೋಕ್ಷವಾಗಿ ರಶ್ಮಿಕಾ, ಪ್ರಶಾಂತ್‌ ನೀಲ್‌ಗೆ ತಿರುಗೇಟು ಕೊಟ್ರಾ ರಿಷಬ್‌! ಸ್ಪಷ್ಟನೆ ಏನು?

18 bills likely to be introduced in Belagavi Winter Session
ಕರ್ನಾಟಕ2 hours ago

Belagavi Winter Session: ಬೆಳಗಾವಿ ಅಧಿವೇಶನದಲ್ಲಿ ಈ 18 ಬಿಲ್ ಮಂಡನೆ ಸಾಧ್ಯತೆ

Narendra Modi And Share Market
ದೇಶ2 hours ago

ಬಿಜೆಪಿ ಜಯಭೇರಿ ಬೆನ್ನಲ್ಲೇ ನಿಫ್ಟಿ, ಸೆನ್ಸೆಕ್ಸ್‌ ನೆಗೆತ, ಸುಧಾರಿಸಿದ ರೂಪಾಯಿ ಮೌಲ್ಯ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ11 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ1 day ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌