ವಿಸ್ತಾರ ಅಂಕಣ: ಭಾರತವು ವಿಶ್ವ ಗುರು ಪಟ್ಟ ಉಳಿಸಿಕೊಳ್ಳಬೇಕಾ, ಇಲ್ಲ ಸೂಪರ್ ಪವರ್ ಆಗಬೇಕಾ? Vistara News

ಅಂಕಣ

ವಿಸ್ತಾರ ಅಂಕಣ: ಭಾರತವು ವಿಶ್ವ ಗುರು ಪಟ್ಟ ಉಳಿಸಿಕೊಳ್ಳಬೇಕಾ, ಇಲ್ಲ ಸೂಪರ್ ಪವರ್ ಆಗಬೇಕಾ?

ಜ್ಞಾನಕ್ಕೆ ಯಾವುದೇ ಗಡಿ, ಕಟ್ಟುಪಾಡು ಇರಕೂಡದು ಎಂಬ ಭಾರತದ ಪುರಾತನ ಮೌಲ್ಯವು ನರೇಂದ್ರ ಮೋದಿಯವರ ಮೂಲಕ ಇಂದು ಜಗತ್ತಿನಲ್ಲಿ ಮತ್ತೆ ಅನುರಣಿಸಿದೆ. ನಮ್ಮತನವನ್ನು ಅರಿತು ಭಾರತವನ್ನು ವಿಶ್ವಗುರುವನ್ನಾಗಿಸಲು ನಾವೆಲ್ಲರೂ ಕಾರ್ಯತತ್ಪರರಾಗೋಣ.

VISTARANEWS.COM


on

Narendra Modi Yoga
Follow us on
Koo
Vistara Column @ Hariprakash Konemane

“ಭಾರತವು ನಮ್ಮ ಜನಾಂಗದ ಮಾತೃಭೂಮಿ ಹಾಗೂ ಸಂಸ್ಕೃತವು ಯುರೋಪಿನ ಭಾಷೆಗಳ ತಾಯಿ. ಅವಳು(ಭಾರತ) ನಮ್ಮ ತತ್ತ್ವಶಾಸ್ತ್ರದ ತಾಯಿ, ಅರಬ್ಬರ ಮೂಲಕ ನಮ್ಮ ಬಹುತೇಕ ಗಣಿತ ನೀಡಿದ ತಾಯಿ, ಬುದ್ಧನ ಮೂಲಕ ಕ್ರೈಸ್ತ ಮತದಲ್ಲಿ ಅಡಕವಾಗಿರುವ ಆದರ್ಶಗಳನ್ನು ಒದಗಿಸಿದ ತಾಯಿ. ಸ್ವಯಂ ಶಾಸನದ ಗ್ರಾಮೀಣ ಸಮುದಾಯಗಳ ಮೂಲಕ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ನಮ್ಮ ತಾಯಿ. ತಾಯಿ ಭಾರತಿಯು ಅನೇಕ ರೂಪದಲ್ಲಿ ನಮಗೆಲ್ಲ ತಾಯಿ”

ಈ ಮಾತನ್ನು ಹೇಳಿದವರು ಅಮೆರಿಕದ ಪ್ರಸಿದ್ಧ ತತ್ತ್ವಜ್ಞಾನಿ ವಿಲ್ ಡುರಾಂಟ್. ವಿಲ್ ಡುರಾಂಟ್ ಅವರ ವಾಕ್ಯವನ್ನೇ -ಭಾರತವು ನಮಗೆಲ್ಲ ತಾಯಿ ( India- Mother of us All) ಕೃತಿಯನ್ನು ಚಮನ್ ಲಾಲ್ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ, ಭಾರತದ ಕುರಿತು ಅನೇಕರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನೂ ದಾಖಲಿಸಿದ್ದಾರೆ.

ಜಪಾನ್ ನ ಪ್ರೊಫೆಸರ್ ಎಚ್. ನಕಮುರ ಅವರು ಈ ರೀತಿ ಹೇಳುತ್ತಾರೆ: “ಭಾರತವು ಸಾಂಸ್ಕೃತಿಕವಾಗಿ ನಮ್ಮ ತಾಯಿ. ತನ್ನದೇ ವಿಶಿಷ್ಟ ರೂಪದಲ್ಲಿ ಅನೇಕ ಶತಮಾನಗಳವರೆಗೆ, ಈಗಲೂ ಜಪಾನ್ನ ಆಲೋಚನೆ ಹಾಗೂ ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತಲೇ ಇದೆ”.

ಇಂದು ಇಡೀ ವಿಶ್ವ ಭಾರತದ ಕಡೆಗೆ ಬೆರಗುಗಣ್ಣಿನಿಂದ ನೋಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ದೇಶಕ್ಕೆ ಮೊದಲ ರಾಜತಾಂತ್ರಿಕ ಭೇಟಿ ಮಾಡುತ್ತಿರುವ ಸಂದರ್ಭದಲ್ಲಿ ಅವರಿಗೆ ದೊರಕುತ್ತಿರುವ ಗೌರವ, ವೇದಿಕೆಯನ್ನು ಕಂಡು ಭಾರತೀಯರಾದ ನಮ್ಮೆಲ್ಲರ ಆತ್ಮವಿಶ್ವಾಸ ಕನಿಷ್ಠ ಹತ್ತು ಪಟ್ಟು ಹೆಚ್ಚಾಗಲೇಬೇಕು. ಏಕೆಂದರೆ ಅಲ್ಲಿ ದೊರಕುತ್ತಿರುವ ಗೌರವ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಗುತ್ತಿದ್ದರೂ, ಅಮೆರಿಕದವರ ಕಣ್ಣ ಮುಂದೆ ಇರುವುದು ಇಡೀ ದೇಶದ 130 ಕೋಟಿಗೂ ಹೆಚ್ಚಿನ ಜನರು, ಇಲ್ಲಿನ ವೈವಿಧ್ಯತೆ, ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರ. ಎಲ್ಲಕ್ಕಿಂತ ಹೆಚ್ಚಾಗಿ ಈ ಎಲ್ಲ ಆದರ್ಶಗಳನ್ನೂ ದೇಶ ವಿದೇಶಗಳಲ್ಲಿ ಪಾಲನೆ ಮಾಡಿಕೊಂಡು ಬರುತ್ತಿರುವ ಜೀವಂತ ಸಮಾಜ.

ಭಾರತದ ಕಡೆಗೆ ವಿಶ್ವ ಈ ರೀತಿ ನೋಡಲು ಆರಂಭಿಸಿದ್ದು ಈಗಿನ ಕಥೆಯಲ್ಲ. ಯಾವಾಗ ಯುರೋಪ್ ಹಾಗೂ ಅಮೆರಿಕ ಹಣದ ಮತ್ತಿನಲ್ಲಿ ನೆಮ್ಮದಿಯನ್ನು ಕಳೆದುಕೊಂಡವೋ ಆಗಲೇ ಅವುಗಳಿಗೆ ಭಾರತದ ಅವಶ್ಯಕತೆ ಮನವರಿಕೆಯಾಯಿತು.

ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಈ ಕುರಿತು ಉಲ್ಲೇಖಿಸಿದ್ದಾರೆ. ಅದರ ಸಾರಾಂಶ ಹೀಗಿದೆ. “ಜನರು ಇಂದು ರಾಜಕಾರಣಿಯನ್ನಾಗಲಿ, ಮುತ್ಸದ್ಧಿಯನ್ನಾಗಲಿ, ತಥಾಕಥಿತ ಆಧ್ಯಾತ್ಮಿಕ ಗುರುವನ್ನಾಗಲಿ ಆಲಿಸಲು ಇಷ್ಟಪಡುವುದಿಲ್ಲ. ಮನುಷ್ಯನನ್ನು ಮನುಷ್ಯನ ವಿರುದ್ಧ, ರಾಷ್ಟ್ರವನ್ನು ರಾಷ್ಟ್ರದ ವಿರುದ್ಧ ಎತ್ತಿಕಟ್ಟುತ್ತಿರುವ ಭಂಜಕ ಶಕ್ತಿಗಳಿಂದ ವಿಶ್ವಕ್ಕೆ ಪರಿಹಾರ ಬೇಕಾಗಿದೆ. ಹಾಗೂ, ಬಹುಶಃ ಈ ಸಮಸ್ಯೆಗೆ ಪರಿಹಾರ ಭಾರತದಲ್ಲಿ ಮಾತ್ರ ಇದೆ. ಸಂಕಟದಲ್ಲಿ ಬಳಲುತ್ತಿರುವ ಮಾನವತೆಗೆ ಸಾಂತ್ವನ ಹೇಳುವ ಸಂದೇಶಕ್ಕಾಗಿ, ಪ್ರೀತಿ, ಸೇವೆಗಾಗಿ ಇಡೀ ವಿಶ್ವ ಈಗ ಭಾರತದ ಕಡೆಗೆ ನೋಡುತ್ತಿದೆ. ಅಚಾನಕ್ಕಾಗಿ ಎದ್ದುನಿಂತ ಅನೇಕ ದೇಶಗಳು ವೈಜ್ಞಾನಿಕ ಸಂಶೋಧನೆಗಳಲ್ಲಿ ಮುಂಚೂಣಿಯಲ್ಲಿದ್ದರೂ, ಆಧ್ಯಾತ್ಮಿಕ ಜೀವನ ಹಾಗೂ ದೈವಿಕತೆಯಲ್ಲಿ ಖಾಲಿಯಾಗಿರುವುದು ಮನವರಿಕೆಯಾಗಿದೆ. ಸ್ವತಃ ಅಮೆರಿಕವೂ ಇಂದು ಈ ಬಡತನದಿಂದ ಬಳಲುತ್ತಿದೆ”.

ಇಂದು ಭಾರತವನ್ನು ಸೂಪರ್ ಪವರ್ ಮಾಡಬೇಕು ಎಂಬ ಮಾತುಗಳು ಕೇಳಿಬರುತ್ತವೆ. ಈ ಸೂಪರ್ ಪವರ್ ಎಂದರೆ ಏನು? ಮಿಲಿಟರಿಯಲ್ಲಿ ಇಡೀ ಜಗತ್ತಿನಲ್ಲೆ ಯಾವ ದೇಶದಲ್ಲೂ ಇಲ್ಲದಷ್ಟು ಸೈನಿಕರು, ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದುವದೇ? ಜಗತ್ತಿನ ಯಾವುದೇ ದೇಶದಲ್ಲಿ ಇಲ್ಲದಷ್ಟು ಧನ ಸಂಪತ್ತು ಹೊಂದುವುದೇ? ಪ್ರಪಂಚಕ್ಕೆ ಮುಂದಿನ ನೂರು ವರ್ಷಕ್ಕಾಗುವಷ್ಟು ಇಂಧನದ ದಾಸ್ತಾನನ್ನು ಹೊಂದಿ, ಎಲ್ಲರನ್ನೂ ನಿಯಂತ್ರಿಸುವುದೇ? ಶತಕೋಟಿ ಡಾಲರ್ ಮೌಲ್ಯದ ಕಂಪನಿಗಳ ಮೂಲಕ ವಿವಿಧ ದೇಶಗಳ ಮಾರುಕಟ್ಟೆಯನ್ನು ಕಬಳಿಸಿ ಲಾಭ ಮಾಡಿಕೊಳ್ಳುವುದೇ? ಇಂದಿನ ಅನೇಕರು ಮಾತನಾಡುವುದು ಇಂತಹ ಭಾಷೆಯಲ್ಲೆ.

ಇನ್ನೊಬ್ಬರನ್ನು ನಿಯಂತ್ರಣಕ್ಕೆ ಇರಿಸಿಕೊಳ್ಳುವುದು, ಮತ್ತೊಬ್ಬರು ನಮ್ಮನ್ನು ನೋಡಿದರೆ ಭಯ ಪಡಬೇಕು, ಇದೇ ಶಕ್ತಿ ಎಂದು ಅನೇಕರು ತಿಳಿದಿದ್ದಾರೆ. ಬಹುಶಃ ಐರೋಪ್ಯ ದೇಶಗಳು, ಈಗಿನ ಕಮ್ಯುನಿಸ್ಟ್ ಚೀನಾ, ಅಮೆರಿಕದಂತಹ ದೇಶಗಳನ್ನು ತಿಳಿದವರಿಗೆ ಇದು ಸರಿ ಎನ್ನಿಸುತ್ತದೆ. ಏಕೆಂದರೆ ಈ ದೇಶಗಳಿಗೆ ಸೂಪರ್ ಪವರ್ ಆಗುವುದು ಎಂದರೆ ಇನ್ನೊಬ್ಬರನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಎಂದೇ ಅರ್ಥ. ಆದರೆ ಭಾರತದ ಮಟ್ಟಿಗೆ ಇದು ಅಪ್ಪಟ ಸುಳ್ಳು.

ʼಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯʼ, ʼಕೃಣ್ವಂತೋ ವಿಶ್ವಂ ಆರ್ಯಂʼ, ʼವಸುಧೈವ ಕುಟುಂಬಕಂʼಎಂಬ ವಾಕ್ಯಗಳು ಭಾರತದಲ್ಲಿ ಮಾತ್ರವೇ ಕೇಳಲು ಸಿಗುವಂಥವು. ಇವು ಸಂಸ್ಕೃತ ಭಾಷೆಯಲ್ಲಿವೆ, ಹಾಗಾಗಿ ಭಾರತ ಬಿಟ್ಟು ಇನ್ನೇನು ಅಮೆರಿಕದಲ್ಲೋ, ಇಟಲಿಯಲ್ಲೋ ಈ ವಾಕ್ಯಗಳು ಇರಲು ಸಾಧ್ಯವೇ ಎಂದು ಯಾರಾದರೂ ಹಾಸ್ಯ ಮಾಡಬಹುದು. ನಾವಿಲ್ಲಿ ಹೇಳುತ್ತಿರುವುದು ಈ ಸಂಸ್ಕೃತದ ಸಾಲುಗಳಲ್ಲ, ಬದಲಿಗೆ ಆ ಸಾಲುಗಳಲ್ಲಿರುವ ಸಾರ, ಉದಾತ್ತಯನ್ನು. ಇದನ್ನು ಆ ಸಂಸ್ಕೃತಿಗಳಲ್ಲಿ ಕಾಣಲು ಸಿಗುವುದಿಲ್ಲ. ಹಾಗೆ ನೋಡಿದರೆ, ಇದು ಇದು ಅವರ ತಪ್ಪಲ್ಲ. ಅವರ ಸ್ವಭಾವವೇ ಹಾಗೆ.

guru shisya

ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯಚ ಎಂದು ಸ್ವಾಮಿ ವಿವೇಕಾನಂದರು ಹೇಳಿದರು. ಆತ್ಮದ ಮೋಕ್ಷವೂ ಆಗಬೇಕು, ಜಗತ್ತಿನ ಹಿತವೂ ಆಗುವಂತೆ ನಮ್ಮ ಜೀವನ ಇರಬೇಕು ಎಂದರು. ಹಾಗಾದರೆ ವಿಶ್ವಕ್ಕೆ ಜ್ಞಾನ ಕೊಡಲು ಮಾತ್ರ ನಾವು ಇರುವುದೇ? ಇಲ್ಲ. ವಿಶ್ವದಿಂದಲೂ ನಾವು ಪಡೆಯಬೇಕು. ಅದಕ್ಕಾಗಿಯೇ ಆನೋ ಭದ್ರಾ ಕೃತವೋ ಯಂತು ವಿಶ್ವತಃ ಎಂದು ನಮ್ಮ ಪೂರ್ವಜರು ತಿಳಿಸಿಕೊಟ್ಟರು. ಅಂದರೆ ಒಳ್ಳೆಯ ವಿಚಾರಗಳು ಜಗತ್ತಿನ ಯಾವುದೇ ಮೂಲೆಯಿಂದ ಬಂದರೂ, ಅದನ್ನು ಪಡೆಯಬೇಕು. “ಸರ್ವಜ್ಞನೆಂಬುವನು ಗರ್ವದಿಂದಾದವನೇ? ಸರ್ವರೊಳು ಒಂದೊಂದು ನುಡಿಗಲಿತು, ವಿದ್ಯೆಯ ಪರ್ವತವೆ ಆದ ಸರ್ವಜ್ಞ” ಎನ್ನುವ ನುಡಿಯಂತೆ ಭಾರತವು ಜಗತ್ತಿನ ಎಲ್ಲೆಡೆಯಿಂದಲೂ ವಿಚಾರಗಳನ್ನು ಸ್ವೀಕರಿಸುತ್ತ ತಾನೂ ಬೆಳೆಯಿತು, ಜಗತ್ತನ್ನೂ ಬೆಳಗಿತು. ಹಾಗಾಗಿಯೇ ವಿದೇಶಗಳ ವಿದ್ವಾಂಸರೂ ಭಾರತದ ಕಡೆಗೆ ಗೌರವದ ದೃಷ್ಟಿಯಿಂದ ನೋಡುತ್ತಾರೆ.

ಇಂದು ಭಾರತವನ್ನು ವಿಶ್ವ ನೋಡುತ್ತಿರುವುದೂ ಅದೇ ಕಣ್ಣುಗಳಿಂದ. ಯೋಗ ಎನ್ನುವುದು ಇಡೀ ವಿಶ್ವದಲ್ಲಿ ಇಂದು ಆವರಿಸಿದೆ. ಇಂದಿನ ಈ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗಲ್ಲದೆ ಬೇರೆ ಯಾರಿಗೂ ಆ ಶ್ರೇಯವನ್ನು ನೀಡಲಾಗದು. ವಿಶ್ವಸಂಸ್ಥೆಯೇ ಯೋಗ ಕಾರ್ಯಕ್ರಮ ಆಯೋಜನೆ ಮಾಡುವುದರ ಜತೆಗೆ ಜಗತ್ತಿನ ಎಲ್ಲ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳೂ ಒಟ್ಟಿಗೆ ಯೋಗ ಮಾಡಿ ಗಿನ್ನೆಸ್ ದಾಖಲೆಯನ್ನೂ ಬರೆದಿದ್ದಾರೆ. ಜಗತ್ತು ಇಂದು ಹಣದ ಹಿಂದೆ ಓಡುತ್ತಿದೆ, ಉದ್ಯಮದ ಹಿಂದೆ ಓಡುತ್ತಿದೆ, ರಾಜಕೀಯ ಶಕ್ತಿಯ ಹಿಂದೆ ಓಡುತ್ತಿದೆ. ಆದರೆ ಅದೇ ಜಗತ್ತು ಭಾರತದ ಕಡೆಗೆ ತಿರುಗಿ ನೋಡುತ್ತಿದೆ. ಇದಕ್ಕೆ ಕಾರಣ, ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ವರ್ಷ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳನ್ನು ಮನವೊಲಿಸಿದ್ದು. ಅದಕ್ಕಾಗಿ ಅವರಿಗೆ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕು.

ಆದರೆ ನರೇಂದ್ರ ಮೋದಿಯವರು ಯೋಗದ ಕುರಿತು ಮನವರಿಕೆ ಮಾಡುವ ಮುನ್ನ ಆ ದೇಶಗಳಲ್ಲಿ ಅದಾಗಲೇ ಸಾಕಷ್ಟು ಪ್ರಮಾಣದಲ್ಲಿ ಯೋಗ ಅಭ್ಯಾಸ ನಡೆಯುತ್ತಿತ್ತು. ಅದಕ್ಕೆ ಕರ್ನಾಟಕದವರೇ ಆದ ಬಿ.ಕೆ.ಎಸ್. ಅಯ್ಯಂಗಾರ್ ಅವರಿಂದ ಬಾಬಾ ರಾಮದೇವ್, ಶ್ರೀ ಶ್ರೀ ರವಿಶಂಕರ್ ಗುರೂಜಿವರೆಗಿನ ಪ್ರಮುಖ ನೂರಾರು ಸಾಧು ಸಂತರು ಸಾಧಕರು, ಸಾವಿರಾರು ಯೋಗಪಟುಗಳ ಪರಿಶ್ರಮ ಇತ್ತು. ಯೋಗವೆಂದರೆ ಕೇವಲ ಯಾವುದೋ ಖಾಯಿಲೆಗೆ ಪರಿಹಾರವಲ್ಲ, ಬದಲಿಗೆ ಅದು ಒಂದು ಆರೋಗ್ಯಕರ ಜೀವನಶೈಲಿಯ ಕೀಲಿಕೈ ಎಂದು ಇವರೆಲ್ಲರೂ ತಿಳಿಸಿಕೊಟ್ಟಿದ್ದರು. ನರೇಂದ್ರ ಮೋದಿಯವರು ಇವರೆಲ್ಲರ ಶ್ರಮಕ್ಕೆ ಕಲಶಪ್ರಾಯವೆಂಬಂತೆ ವಿಶ್ವಸಂಸ್ಥೆಯಲ್ಲಿ ಮಾನ್ಯತೆ ದೊರಕಿಸಿಕೊಟ್ಟರು.

ಭಾರತವು ಮುಂದಿನ ಕೆಲ ವರ್ಷಗಳಲ್ಲಿ 5 ಟ್ರಿಲಿಯನ್ ಆರ್ಥಿಕತೆ ಆಗಬೇಕು ಎಂಬ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ, ಅದಕ್ಕಾಗಿ ದೇಶದ ಎಲ್ಲರನ್ನೂ ಹುರಿದುಂಬಿಸುತ್ತಿದ್ದಾರೆ. ಅದು ಅಗತ್ಯವೂ ಹೌದು. ಇಷ್ಟು ದೊಡ್ಡ ಸಂಖ್ಯೆಯ ಯುವಕರನ್ನು ಹೊಂದಿರುವ ದೇಶವು ಇಂದು ಶ್ರಮವಹಿಸಿ ದುಡಿಯಬೇಕೆ ವಿನಃ ಸೋಮಾರಿಗಳಾಗಿ ತಿನ್ನುತ್ತ ಕೂರಬಾರದು. ಏಕೆಂದರೆ ಮುಂದಿನ 30-40 ವರ್ಷದಲ್ಲಿ ಇದೇ ಯುವ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಮುದುಕರು ತುಂಬಿಕೊಂಡಿರುತ್ತಾರೆ. ಆಗ ಕೆಲಸ ಮಾಡುವ ಶಕ್ತಿ ಇರುವುದಿಲ್ಲ. ಆಗಿನ ಯುವ ಪೀಳಿಗೆಯ ಮೇಲೆ ಹೆಚ್ಚಿನ ಹೊರೆಯನ್ನು ಕಡಿಮೆ ಮಾಡಬೇಕು ಎಂದರೆ ಈಗಿನ ಯುವಕರು ಆದಷ್ಟು ದುಡಿದು ಮುಂದಿನ ಪೀಳಿಗೆಗೂ ಉಳಿಸಬೇಕು. ಆದರೆ ಹಣವನ್ನು ದುಡಿಯುವುದು ಭಾರತದ ಗುರುತು ಅಲ್ಲ. ಅದು ಅನಿವಾರ್ಯ ಅಷ್ಟೆ.

ಭಾರತದ ಆತ್ಮ ಎಂದರೆ ಅದು ವಿಶ್ವಶಾಂತಿಗೆ ಜ್ಞಾನ, ಸೇವೆಯನ್ನು ನೀಡುವುದು. ಸದ್ಯಕ್ಕೆ ಯೋಗವು ವಿಶ್ವಕ್ಕೆ ಭಾರತ ಇತ್ತೀಚಿಗೆ ನೀಡಿದ ಅತ್ಯಮೂಲ್ಯ ಕೊಡುಗೆ. ಸಾವಿರಾರು ವರ್ಷ ಗುಲಾಮಿತನದಲ್ಲಿದ್ದ ಭಾರತವು ಅಂತರ್ಗತದಲ್ಲಿಯಾದರೂ ಇಂತಹ ಗುಣಗಳನ್ನು ಕಾಪಾಡಿಕೊಂಡು ಬಂದಿದೆ. ಸಂಸ್ಕೃತ ಭಾಷೆ, ಅದರಲ್ಲಿರುವ ಸಂಪತ್ತು, ವಿಜ್ಞಾನದ ಸಂಶೋಧನೆ, ನೌಕಾಯಾನ, ಖಗೋಳಶಾಸ್ತ್ರ, ಗಣಿತದಲ್ಲಿ ಭಾರತವು ವಿಶ್ವಕ್ಕೆ ಕೊಡಲು ಇನ್ನೂ ಸಾಕಷ್ಟು ಸರಕುಗಳಿವೆ. ಭಾರತವು ಎಂದಿಗೂ ಶಾಂತಿಯ ದೇಶವೇ ಆಗಿತ್ತು.

yoga by foreigners

ಹೀಗೆಂದ ಕೂಡಲೆ ಕೆಲವರ ಕಣ್ಣು ಕೆಂಪಾಗಬಹುದು. ಶಾಂತಿ ಮಂತ್ರ ಜಪಿಸಿದ್ದರಿಂದಲೇ ನಾವು ಸಾವಿರ ವರ್ಷ ಗುಲಾಮರಾಗಿದ್ದೆವು, ಕ್ಷಾತ್ರ ತೇಜಸ್ಸು ಇಂದಿನ ಅವಶ್ಯಕತೆ ಎನ್ನಬಹುದು. ಅದೂ ಸರಿಯೆ. ಕ್ಷಾತ್ರ ಎನ್ನುವುದು ಎಂದಿಗೂ ಅತ್ಯಗತ್ಯವಾದ ಗುಣ. ಆದರೆ ಭಾರತದ ನಿಜವಾದ ಗುಣ ಶಾಂತಿ. ಶಾಂತಿಯ ಕಡೆಗೇ ನಮ್ಮ ಒಲವು. ನಾವಾಗಿ ಎಂದಿಗೂ ಯಾರ ಮೇಲೆಯೂ ದಂಡೆತ್ತಿ ಹೋದವರಲ್ಲ. ಋಷಿ ಮುನಿಗಳು, ರಾಜ ಮಹಾರಾಜರು, ವ್ಯಾಪಾರಿಗಳು, ಬುದ್ಧನೂ ದೇಶದೇಶಗಳನ್ನು ದಾಟಿ ಹಿಂದು ಧರ್ಮವನ್ನು ಪ್ರಸಾರ ಮಾಡಿದ್ದು ಕೈಯಲ್ಲಿ ಒಂದು ಕಮಂಡಲ ಹಿಡಿದು, ನಗುಮೊಗದಿಂದಲೇ ವಿನಃ ಕತ್ತಿ ಕೋವಿಗಳಿಂದ ಅಲ್ಲ. ಎದುರಾಳಿ ದಾಳಿ ಮಾಡಿದಾಗಲೂ ಶಾಂತಿ ಜಪಿಸುತ್ತ ಕೂರಬೇಕು ಎನ್ನುವುದಕ್ಕೆ ಆಕ್ಷೇಪ ಇದೆ. ಅದು ಭಾರತದ ಗುಣ ಅಲ್ಲ. ನಡುವೆ ಎಲ್ಲೋ ತೂರಿಕೊಂಡ ದೋಷ. ಒಟ್ಟಾರೆ, ಜಗತ್ತಿನಲ್ಲಿ ಎಲ್ಲವೂ ಶಾಂತಿಯಿಂದ ಇರಬೇಕು, ನಾವೂ ಶಾಂತಿಯಿಂದ ಬಾಳಬೇಕು ಎನ್ನುವುದೇ ಭಾರತದ ಗುಣ, ಇದರಲ್ಲಿ ವ್ಯತ್ಯಾಸವಿಲ್ಲ. ಯಜುರ್ವೇದದಲ್ಲಿನ ಶಾಂತಿ ಮಂತ್ರದ ನಡುವಿನ ಸಾಲುಗಳು “…ಪೃಥಿವೀ ಶಾಂತಿಃ ಆಪಃ ಶಾಂತಿಃ, ಓಷಧಯ ಶಾಂತಿಃ, ವನಸ್ಪತಯಃ ಶಾಂತಿಃ…” ಕೇವಲ ಮನುಷ್ಯನಿಗೆ ಮಾತ್ರ ಶಾಂತಿಯನ್ನು ಕೋರುವುದಲ್ಲ, ಬದಲಿಗೆ ಭೂಮಿಗೆ ಶಾಂತಿ, ಗಿಡ, ಮರ, ಬಳ್ಳಿಗಳಲ್ಲೂ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇವೆ.

ಈಗಲೂ ಭಾರತದ ಈ ಗುಣ ಬದಲಾಗಿಲ್ಲ. ಅಣ್ವಸ್ತ್ರ ತಯಾರಿಸುವ ಸಾಮರ್ಥ್ಯ ಭಾರತಕ್ಕೆ ಇದೆ, ಭಾರತದ ಬಳಿ ಅಣ್ವಸ್ತ್ರವೂ ಇದೆ. ಆದರೆ ಭಾರತದ ಘೋಷಣೆ ಏನು? ʼಮೊದಲು ಬಳಕೆ ಇಲ್ಲʼ ಎನ್ನುವುದು. ನಾವಂತೂ ಮೊದಲಿಗರಾಗಿ ಅಣ್ವಸ್ತ್ರವನ್ನು ಬಳಸಿ ವಿಶ್ವಶಾಂತಿಯನ್ನು ಕದಡುವುದಿಲ್ಲ. ಆದರೆ ಬೇರೆ ಯಾರಾದರೂ ನಮ್ಮ ಮೇಲೆ ಅಣ್ವಸ್ತ್ರ ಪ್ರಯೋಗಿಸಿದರೆ ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ ಎನ್ನುವುದು ನಮ್ಮ ನೀತಿ.

ಇದನ್ನೂ ಓದಿ: ವಿಸ್ತಾರ ಅಂಕಣ: ದೇಶವನ್ನು ಹರಾಜು ಹಾಕಲು ಈ ರಾಜಕೀಯ ಪಕ್ಷಗಳಿಗೆ ಯಾರೂ ಅಧಿಕಾರ ಕೊಟ್ಟಿಲ್ಲ

ಇಷ್ಟೆಲ್ಲ ಜ್ಞಾನ ಪರಂಪರೆಯು ಭಾರತದಲ್ಲಿ ಇದೆಯಾದರೂ ಅದ್ಯಾವುದಕ್ಕೂ ಪೇಟೆಂಟ್ ತೆಗೆದುಕೊಳ್ಳಬೇಕು ಎಂಬ ಆಲೋಚನೆಯೇ ಬರಲಿಲ್ಲ. ಸುಶ್ರುತ, ಆರ್ಯಭಟ್ಟ, ಬೋಧಾಯನರಂಥವರು ತಮ್ಮ ಸಂಶೋಧನೆಗಳಿಗೆ ಪೇಟೆಂಟ್ ಪಡೆಯಲು ಆರಂಭಿಸಿದ್ದರೆ ಇಂದು ಪಾಶ್ಚಿಮಾತ್ಯರಿಗೆ ಸಂಶೋಧನೆ ಮಾಡಲು ಅವಕಾಶವೇ ಆಗುತ್ತಿರಲಿಲ್ಲ. ಭಾರತವು ಕೇವಲ ಪೇಟೆಂಟ್ನಿಂದ ಬರುವ ಹಣದಿಂದಲೇ ಬದುಕಬಹುದಿತ್ತು. ಇದೇ ಕಾರಣಕ್ಕೆ ಯೋಗದ ಕುರಿತು ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಇದೇ ಮಾತನ್ನು ಉಲ್ಲೇಖಿಸಿದ್ದಾರೆ. ಯೋಗಕ್ಕೆ ಹಕ್ಕುಸ್ವಾಮ್ಯ ಇಲ್ಲ. ಯೋಗಕ್ಕೆ ಪೇಟೆಂಟ್ ಇಲ್ಲ. ಯೋಗಕ್ಕೆ ರಾಯಲ್ಟಿ ನೀಡಬೇಕಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇದರಲ್ಲಿ ಎರಡು ವಿಚಾರಗಳಿವೆ.

ಯೋಗವು ಪ್ರಸಿದ್ಧಿ ಆಗುತ್ತಿರುವಂತೆಯೇ ಪಾಶ್ಚಿಮಾತ್ಯರ ವ್ಯಾಪಾರಿ ಬುದ್ಧಿ ಬಲಿಯಲು ಆರಂಭಿಸಿದೆ. 2007ರಲ್ಲೇ ಅಮೆರಿಕವು ಯೋಗದ ಕೆಲವು ಆಸನಗಳಿಗೆ, ʼಉತ್ಪನ್ನʼಗಳಿಗೆ ಪೇಟೆಂಟ್ ದಯಪಾಲಿಸಿ ಕೆಲವರದ್ದೇ ಸ್ವತ್ತಾಗಿಸುವ ಪ್ರಯತ್ನ ನಡೆಸಿತ್ತು. ಈಗಲೂ ಕೆಲವು ಆಸನಗಳಿಗೆ ಒಂದಷ್ಟು ಹೊಸ ಶಬ್ದ, ಸ್ಥಿತಿ ಸೇರಿಸಿ ಪೇಟೆಂಟ್ ಮಾಡಿಕೊಳ್ಳುವ ಸಂಚಿನಲ್ಲಿದ್ದಾರೆ. ಅಂಥವರಿಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಯೋಗದ ಪೇಟೆಂಟ್ ಭಾರತದ ಬಳಿಯೇ ಇರಲಿದೆ, ಹಾಗೂ ಅದು ವಿಶ್ವದ ಎಲ್ಲರಿಗೂ ಮುಕ್ತವಾಗಿರಲಿಲ್ಲ ಎಂಬ ಮಾತನ್ನು ಪರೋಕ್ಷವಾಗಿ ಹೇಳಿದ್ದಾರೆ. ಜ್ಞಾನವನ್ನು ಹಂಚುವುದರ ಜತೆಗೆ, ಜ್ಞಾನದ ಮೂಲವು ಯಾರೋ ಒಬ್ಬರ ಸ್ವತ್ತಾಗದಂತೆ ತಡೆಯುವ ಕರ್ತ್ಯವನ್ನೂ ನರೇಂದ್ರ ಮೋದಿಯವರು ಮೆರೆದಿದ್ದಾರೆ.

ಜ್ಞಾನಕ್ಕೆ ಯಾವುದೇ ಗಡಿ, ಕಟ್ಟುಪಾಡು ಇರಕೂಡದು ಎಂಬ ಭಾರತದ ಪುರಾತನ ಮೌಲ್ಯವು ನರೇಂದ್ರ ಮೋದಿಯವರ ಮೂಲಕ ಇಂದು ಜಗತ್ತಿನಲ್ಲಿ ಮತ್ತೆ ಅನುರಣಿಸಿದೆ. ಭಾರತವು ಹಣದಿಂದಾಗಲಿ, ಅಧಿಕಾರದಿಂದಾಗಲಿ ಸೂಪರ್ ಪವರ್ ಆಗಲು ಎಂದೂ ಬಯಸಿಲ್ಲ, ಭಾರತದ ಗುಣಧರ್ಮವನ್ನು ನೋಡಿದರೆ ಅದು ಸಾಧ್ಯವೂ ಇಲ್ಲ, ಅಗತ್ಯವೂ ಇಲ್ಲ. ವಿಶ್ವವು ಅಂಧಕಾರದಲ್ಲಿ ಮುಳುಗಿದ್ದಾಗ ಜ್ಯೋತಿಯನ್ನು ತೋರಿಸುವ ವಿಶ್ವ ಗುರುವಿನ ಸ್ಥಾನವನ್ನಷ್ಟೆ ಭಾರತವು ಅಲಂಕರಿಸಬೇಕಿದೆ. ಆ ಸ್ಥಾನಕ್ಕೆ ಭಾರತವನ್ನು ಬಿಟ್ಟರೆ ಬೇರೆ ಯಾರಿಗೂ ಅರ್ಹತೆ ಇದೆ ಎಂದೂ ಹೇಳಲಾಗದು. ನಮ್ಮತನವನ್ನು ಅರಿತು, ಅದನ್ನೇ ಬದುಕು, ಮೆರೆಯವುದರ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸಲು ನಾವೆಲ್ಲರೂ ಕಾರ್ಯತತ್ಪರರಾಗೋಣ.

ಇದನ್ನೂ ಓದಿ: ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಅಂಕಣ

Raja Marga Column : ನಮ್ಮದು ಯುವ ಭಾರತ; ಇಷ್ಟೊಂದು ಯುವ ಶಕ್ತಿ ಯಾವ ದೇಶದಲ್ಲೂ ಇಲ್ಲ!

Raja Marga Column: ನನ್ನ ‘ ಯುವ ಭಾರತ’ ಇಂದು ಪ್ರಕಾಶಿಸುತ್ತಿದೆ.
‘ವಿಶ್ವ ಗುರು’ ಆಗುವ ಹೊಸ್ತಿಲಲ್ಲಿ ನಿಂತಿದೆ. ಇದಕ್ಕೆ ಕಾರಣ ನಮ್ಮ ಯುವಜನತೆ. ಅತೀ ಹೆಚ್ಚು ಯುವಜನತೆಯನ್ನು ಹೊಂದಿರುವ ರಾಷ್ಟ್ರ ಇಂದು ಭಾರತ ಮತ್ತು ಭಾರತ ಮಾತ್ರ.

VISTARANEWS.COM


on

Yuva Bharat : power of Young INDIA
Koo
RAJAMARGA Rajendra Bhat

ಇಡೀ ಜಗತ್ತು ಇವತ್ತು ಭಾರತದ ಕಡೆಗೆ ಮಾತ್ಸರ್ಯದಿಂದ ನೋಡಲು ತೊಡಗಿದೆ! ಅದಕ್ಕೆ ಕಾರಣ ನನ್ನ ಭಾರತ ಈಗ ‘ಯುವ ಭಾರತ’ (Young India) ಆಗಿ ಹೊಮ್ಮುತ್ತಿರುವುದೇ ಆಗಿದೆ. ಹೌದು, ನನ್ನ ಭಾರತ ಇಂದು ದೊಡ್ಡ ಮಟ್ಟದಲ್ಲಿ ಬದಲಾಗುತ್ತಿದೆ. ಈಗಿನ ಭಾರತದ ಜನಸಂಖ್ಯೆಯಲ್ಲಿ (Population of India) 35 ವರ್ಷದ ಒಳಗಿನ ಯುವಜನರ ಪ್ರಮಾಣ 66%! ಅದರಲ್ಲಿಯೂ 25 ವರ್ಷದ ಒಳಗಿನ ಯುವಜನರ ಸಂಖ್ಯೆ 50%! (Raja Marga Column)

ಈ ಅನುಪಾತವು ಜಗತ್ತಿನ ಬೇರೆ ಯಾವ ದೇಶದಲ್ಲಿಯೂ ಇಲ್ಲ. ಆದ್ದರಿಂದ ನನ್ನ ಭಾರತ ‘ಯುವ ಭಾರತ’ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಶೈಕ್ಷಣಿಕ ಮಟ್ಟ (Education level) ಕೂಡ ಏರಿಕೆ ಆಗಿದೆ. ಶಾಲಾ, ಪ್ರೌಢಶಾಲಾ ಹಂತಗಳಲ್ಲಿ ಮಕ್ಕಳ ಡ್ರಾಪ್ ಔಟ್ ಪ್ರಮಾಣವು (School Dropout) ತುಂಬಾ ಕಡಿಮೆ ಆಗಿದೆ. ಭಾರತದಲ್ಲಿ ಇಂದು 15 ಲಕ್ಷ ಶಾಲೆಗಳು, 95 ಲಕ್ಷ ಶಿಕ್ಷಕರು, 26.5 ಕೋಟಿ ವಿದ್ಯಾರ್ಥಿಗಳು ಇದ್ದಾರೆ! ಇದು ಕೂಡ ಜಾಗತಿಕ ದಾಖಲೆ.

ಅದರ ಪರಿಣಾಮವಾಗಿ ಭಾರತದ ‘ಮಾನವ ಸಂಪನ್ಮೂಲ ರೇಟಿಂಗ್’ (Human resource rating) ಏರಿಕೆ ಆಗಿದೆ ಎಂದು ಸಮೀಕ್ಷೆಗಳು ತೋರಿಸಿವೆ. ಆದ್ದರಿಂದ ನನ್ನ ಭಾರತ ಬದಲಾಗುತ್ತಿದೆ.

ನನ್ನ ಭಾರತ- ಕೌಶಲ ಭಾರತ (Skill India)

yuva Bharat

ನಮ್ಮ ಯುವಜನತೆಯು ‘ಸ್ಕಿಲ್ ಇಂಡಿಯಾ’ ವಿಭಾಗದಲ್ಲಿ ದಾಪುಗಾಲನ್ನು ಹಾಕಿ ಮುನ್ನಡೆಯುತ್ತಿದೆ. ಭಾರತದಲ್ಲಿ ಬೇಸಿಕ್ ಸೈನ್ಸ್ ಕಲಿಯುವ ವಿದ್ಯಾರ್ಥಿಗಳು ಇಂದು ಜಾಸ್ತಿ ಆಗುತ್ತಿದ್ದಾರೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಇಂದು ಭಾರತದ್ದೇ ಸಿಂಹಪಾಲು. ಒಂದು ಕಾಲದಲ್ಲಿ ತನ್ನ ಉಪಗ್ರಹಗಳನ್ನು ಹಾರಿಸಲು ರಷ್ಯಾ ಅಥವಾ ಅಮೆರಿಕಾದ ಮುಂದೆ ಕೈಕಟ್ಟಿಕೊಂಡು ನಿಲ್ಲುತ್ತಿದ್ದ ಭಾರತ ಇಂದು ನೂರಾರು ವಿದೇಶದ ಉಪಗ್ರಹಗಳನ್ನು ಹಾರಿಸುವ ಮಟ್ಟಕ್ಕೆ ಏರಿದ್ದು ಸಣ್ಣ ಸಾಧನೆ ಅಲ್ಲ. ಮಂಗಳ ಯಾನ, ಚಂದ್ರ ಯಾನ, ಸೌರ ಯಾನ, ಕ್ಷಿಪಣಿ ತಂತ್ರಜ್ಞಾನ…..ಈ ಯಾವ ವಿಭಾಗ ಆರಿಸಿದರೂ ಭಾರತ ಇಂದು ಕ್ರಾಂತಿಕಾರಕ ಸಾಧನೆ ಮಾಡುತ್ತಿದೆ. ಇಂದು ಭಾರತದ ಗುರಿಯು
‘Developing India’ ಅಲ್ಲವೇ ಅಲ್ಲ. ಅದು ‘Developed India ‘ ಅನ್ನೋದು ಜಗತ್ತಿಗೆ ಅರ್ಥ ಆಗಿದೆ!

ನನ್ನ ಭಾರತ ಇಂದು ‘ಉದ್ಯೋಗ ಭಾರತ’

Yuva Bharat : power of Young INDIA

ಒಂದು ಕಾಲದಲ್ಲಿ ಅಮೆರಿಕಾದ ಮಗು ಅಳುತ್ತಿದ್ದಾಗ ಅಲ್ಲಿಯ ಅಮ್ಮ ಹೇಳುತ್ತಿದ್ದರು – ಅಳಬೇಡ, ಭಾರತದ ಹಸಿದ ಮಗು ಬರ್ತಾ ಇದೆ, ನಿನ್ನ ತುತ್ತು ಕಸಿದು ಕೊಳ್ಳುತ್ತಿದೆ ಎಂದು! ಇಂದು ಅದೇ ಅಮ್ಮ ಹೇಳುತ್ತಿದ್ದಾರೆ – ಚೆನ್ನಾಗಿ ಓದು ಮಗನೇ, ಭಾರತದ ಕಲಿತ ಮಗು ಬರ್ತಾ ಇದೆ. ನಿನ್ನ ಉದ್ಯೋಗವನ್ನು ಕಿತ್ತುಕೊಳ್ಳುತ್ತಿದೆ ಎಂದು!

ಅಷ್ಟರಮಟ್ಟಿಗೆ ನನ್ನ ಭಾರತವು ಬದಲಾಗುತ್ತಿದೆ. ಭಾರತದಲ್ಲಿ ಈಗಾಗಲೇ ಡಿಜಿಟಲ್ ಕ್ರಾಂತಿ, ಸ್ಟಾರ್ಟಪ್ ಕ್ರಾಂತಿ ಮತ್ತು ನಾವೀನ್ಯತೆ ಕ್ರಾಂತಿಗಳು ಆಗ್ತಾ ಇವೆ. ಮುದ್ರಾ ಯೋಜನೆಯ ಮೂಲಕ ಯುವಜನತೆಗೆ 23,00,000 ಕೋಟಿ ನೆರವು ಈಗಾಗಲೇ ನೀಡಲಾಗಿದೆ. ಸ್ಟಾರ್ಟಪ್‌ಗಳ ಮೂಲಕ ಹತ್ತು ಲಕ್ಷ ಯುವ ಉದ್ಯಮಿಗಳು ಹೊಸದಾಗಿ ಹೊರಹೊಮ್ಮಿದ್ದಾರೆ. ಎಂಟರಿಂದ ಒಂಬತ್ತು ಕೋಟಿ ಯುವಕರು ಸ್ವಂತ ಉದ್ಯೋಗ ಈಗಾಗಲೇ ಪಡೆದುಕೊಂಡಿದ್ದಾರೆ. ಉದ್ಯೋಗ ಪರ್ವ ಮುಂದುವರೆಯುತ್ತಿದೆ. ನನ್ನ ಭಾರತ ಬಲಿಷ್ಠ ಆಗುತ್ತಿದೆ.

Young India Skill india Yuva Bharat

ಭಾರತಕ್ಕೆ ಎರಡು ಶಕ್ತಿಗಳು ಇವೆ

ಒಂದು ಜನಸಂಖ್ಯೆ. ಇನ್ನೊಂದು ಪ್ರಜಾಪ್ರಭುತ್ವ. ನಮ್ಮ ಯುವಜನತೆ ಸ್ವತಂತ್ರವಾಗಿ ಯೋಚನೆ ಮಾಡಲು ಕಲಿತಿದ್ದಾರೆ. ನವೀನತೆಯ ಕೋರ್ಸುಗಳ ಕಡೆಗೆ ಯುವಜನತೆ ಹೊರಳುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ಮೊದಲಾದ ಹೊಸ ತಂತ್ರಜ್ಞಾನ ಭಾರತಕ್ಕೆ ಬಂದು ಇಂದು ತುಂಬಾ ವರ್ಷಗಳು ಆಗಿವೆ. ಭಾರತದ ಯುವಜನತೆಯು ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತಾಡುತ್ತಿರುವುದು ಭಾರತಕ್ಕೆ ದೊಡ್ಡ ವರವೇ ಆಗಿದೆ. ಜನಸಂಖ್ಯೆಯ ಸ್ಫೋಟದ ಬಗ್ಗೆ ಇಂದು ಭಾರತದಲ್ಲಿ ಯಾರೂ ತಲೆ ಕೆಡಿಸಿಕಳ್ಳುವುದಿಲ್ಲ. ಅದರ ಬದಲಾಗಿ ಮಾನವ ಸಂಪನ್ಮೂಲದ ಅಭಿವೃದ್ಧಿಯ ಬಗ್ಗೆ ಭಾರತ ಇಂದು ಅಧಿಕಾರಯುತ ಆಗಿ ಮಾತಾಡುತ್ತಿದೆ. ಯುವಜನತೆ ಇಂದು ರಾಜಕೀಯದಲ್ಲಿ ಹೆಚ್ಚು ಸಹಭಾಗಿತ್ವ ಮಾಡಲು ತೊಡಗಿದ ನಂತರ ಕೇಂದ್ರ ಮತ್ತು ರಾಜ್ಯಗಳಲ್ಲಿ ಹೆಚ್ಚು ಸ್ಥಿರ ಸರಕಾರಗಳು ರಚನೆ ಆಗುತ್ತಿವೆ.

ಸಾಂಸ್ಕೃತಿಕ ಭಾರತ – ನಮ್ಮ ಹೆಮ್ಮೆ

yuva Bharat Rich in culture

ಇತ್ತೀಚೆಗೆ ಸ್ವಲ್ಪ ಕಣ್ಣು ತೆರೆದು ನಾವು ಯೋಚನೆ ಮಾಡಿದಾಗ ನಮ್ಮ ಗಮನಕ್ಕೆ ಬರುವುದು ಏನೆಂದರೆ ನಮ್ಮ ಯುವಜನತೆಯು ಇಂದು ನಿಧಾನವಾಗಿ ಭಾರತೀಯ ಸಂಸ್ಕೃತಿ, ಕಲೆ, ಸಂಗೀತ, ನೃತ್ಯ ಮತ್ತು ಸಂಪ್ರದಾಯಗಳ ಕಡೆಗೆ ಹೊರಳುತ್ತಿದೆ ಅನ್ನುವುದು. ಎಷ್ಟೋ ಜನ ಯುವಕ, ಯುವತಿಯರು ಐಟಿ ಕ್ಷೇತ್ರದ ಉದ್ಯೋಗವನ್ನು ತೊರೆದು ಕೃಷಿ ಕ್ಷೇತ್ರಕ್ಕೆ ಬರುತ್ತಿದ್ದಾರೆ. ನೃತ್ಯ, ಸಂಗೀತ ವಿಭಾಗಗಳಲ್ಲಿ ಮೊದಲಿಗಿಂತ ಈಗ ಹೆಚ್ಚು ಯುವಕ, ಯುವತಿಯರು ಭಾಗವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಶಾಸ್ತ್ರೀಯ ವಿಭಾಗದ ವೇದಿಕೆಯ ಪ್ರದರ್ಶನಗಳಿಗೆ ಇಂದು ಯುವ ಪ್ರೇಕ್ಷಕರೂ ಹೆಚ್ಚುತ್ತಿದ್ದಾರೆ. ಎಲ್ಲ ಸಾಧನಾ ಕ್ಷೇತ್ರಗಳಲ್ಲಿ ಇಂದು ಯುವ ಸಾಧಕರ ಸಂಖ್ಯೆಯು ಹೆಚ್ಚುತ್ತಿದೆ. ಭಾರತೀಯ ಸೇನೆಗೆ ಹೆಚ್ಚು ಯುವ ಜನತೆ ಸ್ವಂತ ಇಚ್ಛೆಯಿಂದ ನೇಮಕ ಆಗುತ್ತಿದ್ದಾರೆ.

ನನ್ನ ಭಾರತ – ಯುವ ಸಾಧಕರ ಭಾರತ

yuva bharat

ಎಲ್ಲ ಸಾಧನಾ ಕ್ಷೇತ್ರಗಳಲ್ಲೂ ಇಂದು ಭಾರತದಲ್ಲಿ ಯುವ ಸಾಧಕರ ಸಂಖ್ಯೆಯು ಹೆಚ್ಚುತ್ತಿದೆ. ಯುವ ಬರಹಗಾರರು, ಕಥೆಗಾರರು, ಸಾಹಿತಿಗಳು, ಸಂಗೀತ ಕಲಾವಿದರು, ಕ್ರೀಡಾಪಟುಗಳು, ಬ್ಲಾಗರ್ ಗಳು, ಸಾಹಸಿಗರು, ನೃತ್ಯ ಪಟುಗಳು, ವಿಜ್ಞಾನಿಗಳು, ಯುವ ತಂತ್ರಜ್ಞರು, ಯುವ ಪತ್ರಕರ್ತರು…..ಇಂದು ಹೆಚ್ಚುತ್ತಿದ್ದಾರೆ. ನಮ್ಮ ಯುವಕರು ಇಂದು ಅವಕಾಶಗಳಿಗೆ ಕಾಯುವುದನ್ನು ಬಿಟ್ಟಿದ್ದಾರೆ ಮತ್ತು ಅವಕಾಶಗಳನ್ನು ಸೃಷ್ಟಿಸಲು ಕಲಿತಿದ್ದಾರೆ. ಮಂಗಳ ಯಾನ ಮತ್ತು ಚಂದ್ರಯಾನ ಟೀಂಗಳಲ್ಲಿ 75% ವಿಜ್ಞಾನಿಗಳು ಯುವಕ, ಯುವತಿಯರೇ ಇದ್ದರು ಎನ್ನುವಲ್ಲಿಗೆ ನನ್ನ ಯುವ ಭಾರತವು ‘ಸಾಧಕ ಭಾರತ’ ಆಗುತ್ತಿದೆ.

ಯುವ ಜನತೆಗೆ ಒಂದಿಷ್ಟು ಕಿವಿ ಮಾತುಗಳು

yuva Bharat

1. ವಿಭಿನ್ನವಾಗಿ ಯೋಚಿಸಿ.
2. ಧೈರ್ಯ ಮಾಡಿ ಮುನ್ನುಗ್ಗಿ.
3. ರಿಸ್ಕ್ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಬೇಡಿ.
4. ಆವಿಷ್ಕಾರಗಳನ್ನು ಮಾಡಿ.
5. ಹೊಸ ಐಡಿಯಾಗಳು ಕೋಟಿ ಕೋಟಿ ಬೆಲೆ ಬಾಳುತ್ತವೆ. ಅವುಗಳನ್ನು ಬರೆದಿಡಿ ಮತ್ತು ಅನುಷ್ಠಾನಕ್ಕೆ ತನ್ನಿ.
6. ನಿಮ್ಮ ಹಿಂದಿನ ಸಾಧನೆಗಳ ಜೊತೆ ಕಾಂಪೀಟ್ ಮಾಡಿ. ಬೇರೆ ಯಾರ ಜೊತೆಗೂ ನೀವು ಸ್ಪರ್ಧೆ ಮಾಡುವ ಅಗತ್ಯ ಇಲ್ಲ.
7. ಹೊಸ ಹಾದಿಯಲ್ಲಿ ಮುನ್ನಡೆಯಿರಿ.
8. ಅಸಾಧ್ಯವಾದ ಸಂಗತಿಗಳನ್ನು ಹುಡುಕಿ.
9. ಸಮಸ್ಯೆಗಳನ್ನು ಪರಿಹಾರ ಮಾಡಿ. ಸಮಸ್ಯೆಗಳನ್ನು ದೊಡ್ಡದು ಮಾಡಬೇಡಿ.
10. ನೀವು ಪಡೆದ ಯಶಸ್ಸನ್ನು ಸಂಭ್ರಮಿಸಿ ಮತ್ತು ಇನ್ನೊಬ್ಬರ ಜೊತೆ ಹಂಚಿಕೊಳ್ಳಿ.

ನಿಮಗೆ ಶುಭವಾಗಲಿ.

ಇದನ್ನೂ ಓದಿ: Raja Marga Column : ಗಾಂಧಿ ಕ್ಲಾಸ್‌ ಹೆಸರು ಬಂದಿದ್ದು ಹೇಗೆ?; ನೀವೆಂದೂ ಕೇಳಿರದ 25 ಸಂಗತಿಗಳು

Continue Reading

ಅಂಕಣ

Lal Bahadur Shastri Jayanti: ಲಾಲ್‌ ಬಹದ್ದೂರ್‌ ಶಾಸ್ತ್ರಿ ನೆನಪು; ಕಿರು ಮೂರ್ತಿಯ ಅಳಿಯದ ಕೀರ್ತಿ

ಮಾತು, ಮನಸ್ಸು ಹಾಗೂ ಕೆಲಸ ಮೂರನ್ನು ಶುದ್ಧವಾಗಿಟ್ಟುಕೊಂಡ ನಾಯಕನ ಕೇವಲ 17 ತಿಂಗಳು ಪ್ರಧಾನ ಮಂತ್ರಿ ಪಟ್ಟದಲ್ಲಿದ್ದರೂ ಯಾರಿಂದಲೂ ಮಾಡಲಾಗದ ಸಾಧನೆಗಳನ್ನು ಮಾಡಿ ಇತಿಹಾಸದ ಪುಟದಲ್ಲಿ ಅಚ್ಚಳಿಯದ ನೆನಪಾಗಿ ಕಾಡುವವರು ನಮ್ಮ ನೆಚ್ಚಿನ ಆದರ್ಶ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ lal bahadur shastri,

VISTARANEWS.COM


on

lal bahaddur shastri
Koo
DC Ramachandra

:: ಡಾ. ಡಿ.ಸಿ. ರಾಮಚಂದ್ರ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಅನ್ವರ್ಥರಾದವರು ಹಲವರು. ಶಿವಾಜಿಯದು ಎತ್ತರದ ನಿಲುವಲ್ಲ, ಆದರೆ ತನ್ನ ಧೈರ್ಯ, ಸಾಹಸಗಳಿಂದ ಸಾಮ್ರಾಜ್ಯವನ್ನು ಕಟ್ಟಿ ಜನರ ಮನಸಿನಾಳದಲ್ಲಿ ನೆಲೆಯಾದವನು. ನೆಪೋಲಿಯನ್ ಕುಳ್ಳ ಜಗತ್ತನ್ನೇ ನಡುಗಿಸಿದವನು. ಲಾಲ್ ಬಹದ್ದೂರ್ ಶಾಸ್ತ್ರಿ (lal bahadur shastri) ಅವರು ಇವರೆಲ್ಲರಿಗಿಂತ ಎತ್ತರದವರೂ ಅಲ್ಲ. ಆದರೆ ಸಾಹಸ, ಸಹನೆ, ಚಾತುರ್ಯ, ಬುದ್ಧಿವಂತಿಕೆ ಹಾಗೂ ಕೌಶಲ್ಯಗಳಿಗೆ ಇವರಾರಿಗೂ ಕಮ್ಮಿಯಿಲ್ಲ. ಈ ಎಲ್ಲಾ ಗುಣಗಳು ಒಂದೆರಡು ದಿನಗಳಲ್ಲಿ ಬೆಳೆಸಿಕೊಂಡಂತಹ ಗುಣಗಳಲ್ಲ. ಅವರು ಬೆಳೆದು ಬಂದ ಪರಿಸರ ಹಾಗೂ ಪರಿಸ್ಥಿತಿಯ ಪರಿಣಾಮವಾಗಿ ಮೈಗೂಡಿಸಿಕೊಂಡ ಗುಣಗಳೇ ಕಾರಣ. ಅವರ ಜಯಂತಿಯ (lal bahadur shastri jayanti) ಹಿನ್ನೆಲೆಯಲ್ಲಿ ಒಂದು ನೆನಪು.

ಲಾಲ್ ಬಹದ್ದೂರ್‌ರವರಿಗಿನ್ನೂ ಒಂದು ವರ್ಷವಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಮುಂದೆ ಇವರ ಅಜ್ಜ ಜವಾಬ್ದಾರಿ ತೆಗೆದುಕೊಂಡರು. ಅಜ್ಜ ಇವರಿಗೆ 6ನೇ ತರಗತಿಯವರೆಗೆ ಅವರ ಊರಿನಲ್ಲಿ ವಿದ್ಯಾಭ್ಯಾಸ ಕೊಡಿಸಿದರು. ಆಮೇಲೆ ಕಾಶಿಯಲ್ಲಿ ಓದಲು ವ್ಯವಸ್ಥೆ ಮಾಡಿದರು. ಅವರಲ್ಲಿದ್ದ ಧೈರ್ಯ, ಆತ್ಮಾಭಿಮಾನ ಬಾಲ್ಯದಿಂದಲೇ ಬಂದ ಗುಣಗಳು. ಬಾಲ್ಯದ ಘಟನೆಗಳು ಮಕ್ಕಳ ಮನಸ್ಸಿನ ಮೇಲೆ ಯಾವಾಗಲೂ ಅಳಿಸಲಾಗದ ಪರಿಣಾಮವನ್ನುಂಟು ಮಾಡುತ್ತವೆ.

ಮಾವಿನಮರ ಕಲಿಸಿದ ಪಾಠ

ಲಾಲ್ ಬಹದ್ದೂರ್ ಜೀವನದ ಮೇಲೆ ಪ್ರಭಾವ ಬೀರಿದ ಒಂದು ಘಟನೆ ಹೀಗಿದೆ ನೋಡಿ. ಒಂದಷ್ಟು ಹುಡುಗರು ಹಣ್ಣಿನ ತೋಟಕ್ಕೆ ನುಗ್ಗಿದರು. ಅವರಲ್ಲಿ ಸಣ್ಣ ಹುಡುಗ ಲಾಲ್ ಬಹಾದ್ದೂರ್. ಉಳಿದವರೆಲ್ಲಾ ಮರ ಹತ್ತಿ ಹಣ್ಣುಗಳನ್ನು ಕೊಯ್ದು ಗಲಾಟೆ ಮಾಡುತ್ತಿದ್ದರೆ ಈ ಪುಟ್ಟ ಬಾಲಕ ಪಕ್ಕದಲ್ಲಿದ್ದ ಹೂವನ್ನು ಕೊಯ್ದು ಕೈಯಲ್ಲಿ ಹಿಡಿದುಕೊಂಡು ನೋಡುತ್ತಿದ್ದ. ಅದೇ ಹೊತ್ತಿಗೆ ತೋಟದ ಮಾಲಿ ಕೋಲು ಹಿಡಿದುಕೊಂಡು ಬಂದ. ಅವನನ್ನು ನೋಡಿ ದೊಡ್ಡ ಮಕ್ಕಳು ಓಡಿ ಹೋಗಿ ಪೆಟ್ಟಿನಿಂದ ತಪ್ಪಿಸಿಕೊಂಡರು. ಕೈಗೆ ಸಿಕ್ಕ ಹುಡುಗನಿಗೆ ಚೆನ್ನಾಗಿ ಬಾರಿಸಿದನು ಮಾಲಿ. ಹುಡುಗ ಅಳುತ್ತಾ ನಾನು ತಂದೆ ಇಲ್ಲದ ಹುಡುಗ ಹೊಡೆಯಬೇಡಿ ಎಂದು ಅಳಲಾಂಭಿಸಿದ, ಕರುಣೆಯಿಂದ ನೋಡುತ್ತಾ ಮಾಲಿ “ತಂದೆಯಿಲ್ಲದ ಹುಡುಗನಾದ್ದರಿಂದ ಒಳ್ಳೆಯ ಗುಣ, ನಡತೆ ಕಲಿಯಬೇಕಪ್ಪಾ” ಎಂದ ಮಾಲಿಯ ಮಾತು ಗಾಢವಾದ ಪರಿಣಾಮವನ್ನು ಬೀರಿತು. ಇನ್ನು ಮುಂದೆ ಯಾವತ್ತೂ ಕೆಟ್ಟ ಕೆಲಸ ಮಾಡಲಾರೆ, ತಪ್ಪು ಹೆಜ್ಜೆಯನ್ನು ಇಡಲಾರೆ ಎಂಬ ಧೃಡ ನಿರ್ಧಾರವನ್ನು ಆ ಸಂದರ್ಭದಲ್ಲಿಯೇ ತೆಗೆದುಕೊಂಡರು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: Gandhi Jayanthi: ಅಹಿಂಸೆಗೊಂದು ಅಸ್ಮಿತೆಯನ್ನು ಕೊಟ್ಟ ಸನಾತನಿ

ಈಜಿ ದಡ ದಾಟಿದ ನಾವಿಕ

ಮತ್ತೊಂದು ದಿನ ಶಾಲೆಯನ್ನು ಬಿಟ್ಟು ಸಂಜೆ ಮನೆಗೆ ಬರುವಾಗ ದೋಣಿಯಲ್ಲಿ ಹೋಗಲು ದುಡ್ಡಿಲ್ಲದೆ ಹೋದಾಗ, ಸಹಪಾಠಿಗಳು ಭಿಕ್ಷೆ ಬೇಡಿ ದುಡ್ಡು ಸಂಗ್ರಹಿಸಿ ದೋಣಿಯಲ್ಲಿ ದಡ ಮುಟ್ಟುತ್ತಾರೆ. ವಾಮನ ಮೂರ್ತಿ ಲಾಲ್‌ ಬಹದ್ದೂರ್ ಬೇರೆಯವರ ಬಳಿ ಹಣಕ್ಕಾಗಿ ಕೈ ಚಾಚದೆ, ಪುಸ್ತಕ ಚೀಲವನ್ನು ತಲೆಯ ಮೇಲಿಟ್ಟುಕೊಂಡು ನದಿಯನ್ನೇ ಈಜಿ ದಡಸೇರಿದ ಅವರ ಬಾಲ್ಯದ ನಿಷ್ಠೆ ಇಂದಿನ ಭ್ರಷ್ಠರಿಗೆ ಪಾಠವೇ ಸರಿ. ದೇಶದ ಏಳಿಗೆಗಾಗಿ ಒಬ್ಬ ವ್ಯಕ್ತಿ ಎಷ್ಟೆಲ್ಲಾ ತ್ಯಾಗ ಮಾಡಬಹುದೋ ಅದೆಲ್ಲವನ್ನೂ ಮಾಡಿದವರು ಲಾಲ್ ಬಹಾದ್ದೂರ್ ಶಾಸ್ತ್ರಿಯವರು. ಸ್ವಂತಕ್ಕಾಗಿ ಮನೆಯನ್ನೂ ಬಯಸದ ವ್ಯಕ್ತಿ. “ಗೃಹವಿಲ್ಲದ ಗೃಹಮಂತ್ರಿ” ಎಂದೇ ಖ್ಯಾತರಾದವರು. ತೀವ್ರ ಸ್ವರೂಪದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುತ್ತಿದ್ದ ಬಹದ್ದೂರ್ ಒಟ್ಟು ಏಳು ಬಾರಿ ಜೈಲು ಶಿಕ್ಷೆ ಅನುಭವಿಸಿದರು. ಮಗಳ ಅಸೌಖ್ಯ ಮಗನ ಕಾಯಿಲೆ ಯಾವುದಕ್ಕೂ ಜೈಲು ಶಿಕ್ಷೆಯಲ್ಲಿ ರಿಯಾಯಿತಿ ಇರಲಿಲ್ಲ. ಮಗಳಿಗೆ ಹುಷಾರಿಲ್ಲವೆಂದು ರಜೆ ಕೇಳಿ, ಅದು ಸಿಕ್ಕಿ ಮನೆಗೆ ಬಂದಾಗ ಮಗಳು ಇಹಲೋಕ ತ್ಯಜಿಸಿಯಾಗಿತ್ತು. ಇನ್ನು ಮಗನ ಆರೋಗ್ಯ ಸುಧಾರಣೆಯಾಗುವುದರೊಳಗೆ ಜೈಲಿಗೆ ಮತ್ತೆ ಹೋಗಬೇಕಾಯಿತು. ವೈಯಕ್ತಿಕ ವಿಷಯಗಳನ್ನೆಲ್ಲಾ ಬದಿಗಿಟ್ಟು ದೇಶವೇ ಮುಖ್ಯವಾಗಿತ್ತು ಲಾಲ್ ಬಹದ್ದೂರ್ ಅವರಿಗೆ. ದೇಶದ ನಾಯಕನಿಗೆ ಇರಲೇ ಬೇಕಾದ ಗುಣಗಳು ನಿಷ್ಠೆ ಮತ್ತು ದಕ್ಷತೆ. ಎಂತಹ ಕಠಿಣ ಸಮಯದಲ್ಲೂ ಕೂಡ ತಮ್ಮ ಗುರಿಯನ್ನು ಬಿಟ್ಟು ಕೊಡದ ನಿಶ್ಚಲತೆ ಲಾಲ್ ಬಹಾದ್ದೂರ್ ಅವರದ್ದು.

ರಾಜಕೀಯ ಜೀವನದಲ್ಲಿ ಮುಂದೆ ಮಂತ್ರಿಯಾದಾಗ, ಆಮೇಲೆ ಭಾರತದ ಪ್ರಧಾನ ಮಂತ್ರಿಯಾದಾಗಲೂ ವೈಭವದ ಜೀವನಕ್ಕೆ ಮನಸೋಲಲಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಹೀನಾಯ ಸ್ಥಿತಿಗೆ ತಲುಪಿದಾಗ ವಾರದ ಒಂದು ಹೊತ್ತು ಉಪವಾಸ ಮಾಡುವ ನಿರ್ಧಾರ ಕೈಗೊಂಡರು, ಅಲ್ಲದೇ ದೇಶವಾಸಿಗಳಲ್ಲೂ ಮನವಿ ಮಾಡಿದರು. ಅದಕ್ಕೆ ದೇಶದ ಜನತೆ ಸ್ಪಂದಿಸಿದರು. ಪ್ರತಿ ಸೋಮವಾರದಂದು ಉಪವಾಸ ಮಾಡಲು ಇಡೀ ದೇಶವೇ ಕೈ ಜೋಡಿಸಿತು.

ಭಾರತ-ಪಾಕ್, ಭಾರತ- ಚೀನಾ ಯುದ್ಧಗಳ ನಿರ್ಣಾಯಕ ಸಂದರ್ಭದಲ್ಲಿ ಯಾವುದೇ ಅಂಜಿಕೆ ಅಳುಕಿಲ್ಲದೆ ಧೃಡ ನಿರ್ಧಾರ ತೆಗೆದುಕೊಂಡು ಸಫಲನಾದ ನಾಯಕ. ಯುದ್ಧದ ಸಂಧರ್ಭದಲ್ಲಿ ವಿಶ್ವಸಂಸ್ಥೆಯ ಕದತಟ್ಟದೆ, ಅಂತಾರಾಷ್ಟ್ರೀಯ ಬೆದರಿಕೆಗಳಿಗೆ ಬಗ್ಗದೆ ತಕ್ಷಣ ಸೈನ್ಯಗಳಿಗೆ ಮಾರ್ಗದರ್ಶನ ಮಾಡಿದವರು. “ಜೈ ಜವಾನ್ ಜೈ ಕಿಸಾನ್” ಎಂಬ ಧ್ಯೇಯ ವಾಕ್ಯದಂತೆ ನಡೆದವರು. ಮಾತು, ಮನಸ್ಸು ಹಾಗೂ ಕೆಲಸ ಮೂರನ್ನು ಶುದ್ಧವಾಗಿಟ್ಟುಕೊಂಡ ನಾಯಕನ ಕೇವಲ 17 ತಿಂಗಳು ಪ್ರಧಾನ ಮಂತ್ರಿ ಪಟ್ಟದಲ್ಲಿದ್ದರೂ ಯಾರಿಂದಲೂ ಮಾಡಲಾಗದ ಸಾಧನೆಗಳನ್ನು ಮಾಡಿ ಇತಿಹಾಸದ ಪುಟದಲ್ಲಿ ಅಚ್ಚಳಿಯದ ನೆನಪಾಗಿ ಕಾಡುವವರು ನಮ್ಮ ನೆಚ್ಚಿನ ಆದರ್ಶ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ, ಅವರಿಗೆ ಅವರ ಬಾಲ್ಯದ ಮಹತ್ವ ಘಟನೆಗಳೇ ಅವರನ್ನು ಇಂತಹದೊಂದು ಮಹಾನ್ ಕಾರ್ಯಮಾಡಲು ದಾರಿ ತೊರಿಸಿತೆಂದರೆ ತಪ್ಪಾಗದು.

ಇದನ್ನೂ ಓದಿ: ಸ್ಮರಣೆ: ಕಾರ್ಗಿಲ್‌ ಕದನ ಕಲಿ ಕ್ಯಾಪ್ಟನ್ ವಿಕ್ರಂ ಬಾತ್ರಾ

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಉಪ್ಪಿನ ಸತ್ಯಾಗ್ರಹದ ವೈಭವೀಕರಣವೇನೋ ಸರಿ, ಉಪ್ಪಿನ ಮೇಲಿನ ತೆರಿಗೆ ಕಡಿಮೆಯಾಯಿತೇ?

ಉಪ್ಪಿನ ಸತ್ಯಾಗ್ರಹದ ಪ್ರಮುಖ ಗುರಿ ಈಡೇರಿತೇ, ಎಂಬುದನ್ನು ನಾವು ತಿಳಿದುಕೊಳ್ಳಲು ಪ್ರಯತ್ನಪಡಲೇ ಇಲ್ಲ. ಇಷ್ಟೇ ಅಲ್ಲ, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಇಂತಹ ನೂರಾರು ಸತ್ಯಸಂಗತಿಗಳ ಬಗೆಗೆ ನಮ್ಮನ್ನು ಇನ್ನೂ ಅಂಧಕಾರವೇ ಕವಿದಿದೆ.

VISTARANEWS.COM


on

dandi march
Koo

ಈ ಅಂಕಣವನ್ನು ಇಲ್ಲಿ ಕೇಳಿ:

ajjampura manjunath

ಅನೇಕ ದಶಕಗಳಿಂದ ಜನವರಿ 26ಕ್ಕೆ (Republic Day), ಆಗಸ್ಟ್ 15ಕ್ಕೆ (Independence Day), ಅಕ್ಟೋಬರ್ 2ಕ್ಕೆ (Gandhi Jayanthi), ಅಷ್ಟೇಕೆ, ಇನ್ನೂ ಹಲವಾರು ಪ್ರಮುಖ ರಾಷ್ಟ್ರೀಯ ದಿನಗಳಲ್ಲಿ ದೂರದರ್ಶನದ ವಾಹಿನಿಗಳಲ್ಲಿ ಒಂದನ್ನಂತೂ ನಾವು ತಪ್ಪದೇ ನೋಡುತ್ತೇವೆ. ಅದೆಂದರೆ, ಮಹಾತ್ಮಾ ಗಾಂಧೀ (Mahatma gandhi) ಹಾಗೂ ಸರೋಜಿನಿ ನಾಯಿಡು ಅವರು ಉಪ್ಪಿನ ಸತ್ಯಾಗ್ರಹಕ್ಕೆ (Salt satyagraha) ಜೊತೆಯಾಗಿ ಹೆಜ್ಜೆ ಹಾಕುತ್ತಿರುವ (Dandi March) ವೀಡಿಯೋ ತುಣುಕು. ಚಿತ್ರಮಂದಿರಗಳಲ್ಲಿ, ಕಿರುತೆರೆಯಲ್ಲಿ ನಾನೇ ಕಳೆದ ಅರ್ಧ ಶತಮಾನದಲ್ಲಿ ಕನಿಷ್ಠ ಒಂದು ಸಾವಿರ ಬಾರಿಯಾದರೂ ಇದನ್ನು ನೋಡಿರಬಹುದು. ಕೈಮುಗಿದು ಗಾಂಧೀಜಿಯವರನ್ನು ನೋಡುತ್ತಿದ್ದ ನಮಗೆಲ್ಲಾ (ನಿಮಗೂ ಸಹ) ಇದು ಚಿರಪರಿಚಿತ ದೃಶ್ಯಾವಳಿ.

In fact, ದೆಹಲಿಯ “ಗಾಂಧೀ ಮ್ಯೂಸಿಯಮ್”ನಲ್ಲಿರುವ ಅಪೂರ್ವ ಪೇಪರ್ ಕಟ್ಟಿಂಗ್ಸ್ ಮತ್ತು ಛಾಯಾಚಿತ್ರಗಳನ್ನು ಹಲವು ಹತ್ತು ಬಾರಿ ನೋಡಿದ್ದೇನೆ. 1980ರಲ್ಲಿ ನಾನು ದೆಹಲಿಯಲ್ಲಿದ್ದಾಗ ಈ ಮ್ಯೂಸಿಯಮ್ ಅಧ್ಯಯನ ಮಾಡುವುದರಲ್ಲಿ, ಪ್ರಮುಖ ಸಂಗತಿಗಳನ್ನು ಟಿಪ್ಪಣಿ ಮಾಡಿಕೊಳ್ಳುವುದರಲ್ಲಿ ಒಂದು ಇಡೀ ದಿನ ಮಗ್ನನಾಗಿದ್ದೆ. ಆದರೆ, ಅನಂತರದ ಸ್ವಾತಂತ್ರ್ಯ ಹೋರಾಟ ಕುರಿತ ವಿಮರ್ಶಾತ್ಮಕ ವಿಶ್ಲೇಷಣೆ ಮತ್ತು ಪರಾಮರ್ಶೆಗಳು ನೋವು ದುಃಖಗಳನ್ನೇ ತಂದವು. ಏಕೆಂದರೆ, ಈ ಮ್ಯೂಸಿಯಮ್ ನಲ್ಲಿರುವ ಬಹುಪಾಲು ಪೇಪರ್ ಕಟ್ಟಿಂಗ್ಸ್ “ಬಾಂಬೆ ಕ್ರಾನಿಕಲ್” ಎಂಬ ಪತ್ರಿಕೆಯಲ್ಲಿ ಪ್ರಕಟವಾದಂತಹವು. ಈ ಪತ್ರಿಕೆಯನ್ನು ಪ್ರಾರಂಭಿಸಿದವರು ಸರ್ ಫಿರೋಜ್ ಶಾ ಮೆಹ್ತಾ. ಮೆಹ್ತಾ ಅವರು ಬ್ರಿಟಿಷರ ಪರಮಾಪ್ತರು. ಬ್ರಿಟಿಷರೇ ಪ್ರಾರಂಭಿಸಿದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಸ್ಥಾಪಕ ಸದಸ್ಯರು ಮತ್ತು 1890ರಲ್ಲಿ ಕಾಂಗ್ರೆಸ್ ಅಧ್ಯಕ್ಷರೂ (ಕೋಲ್ಕತಾ ಅಧಿವೇಶನ) ಆಗಿದ್ದರು. ಅಂದಿನ ಕಾಲವೇ ಹಾಗಿತ್ತು. ಪತ್ರಿಕೆಗಳನ್ನು ಹುಟ್ಟು ಹಾಕುವುದಿರಲಿ, ಮೂವೀ ಕ್ಯಾಮೆರಾಗಳನ್ನು ಕೊಳ್ಳುವುದಿರಲಿ, ಸಾಧಾರಣವಾದ ಸ್ಟಿಲ್ ಕ್ಯಾಮೆರಾವನ್ನೂ ಸಾಮಾನ್ಯ ಜನರು ಯಾರೂ ಕೊಳ್ಳಲು ಸಾಧ್ಯವಿರಲಿಲ್ಲ. ಬ್ರಿಟಿಷ್ ಆಳ್ವಿಕೆಯ ಭಾರತವೆಂದರೆ ದೀನ ದರಿದ್ರರ, ತಿನ್ನಲು ಏನೂ ಇರದ ನತದೃಷ್ಟರ ದೇಶ. “ಬಾಂಬೆ ಕ್ರಾನಿಕಲ್” ಮತ್ತು ಇತರ ಅನೇಕ ಪತ್ರಿಕೆಗಳು ಬ್ರಿಟಿಷರ ಆಶ್ರಯದಲ್ಲಿದ್ದವು. ಪ್ರತ್ಯಕ್ಷವಾಗಿ ಮಾತ್ರವಲ್ಲ ಪರೋಕ್ಷವಾಗಿಯೂ ಅಲ್ಲಿ ಬ್ರಿಟಿಷರ ಪಾತ್ರವಿರುತ್ತಿತ್ತು, ಕಾರ್ಯತಂತ್ರವಿರುತ್ತಿತ್ತು, ಷಡ್ಯಂತ್ರವಿರುತ್ತಿತ್ತು, ಅಭಿಪ್ರಾಯಗಳಿರುತ್ತಿದ್ದವು.

ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 1915ರಲ್ಲಿ ಹಿಂದಿರುಗಿದರು. ಸುಮಾರು 32 ವರ್ಷಗಳ ಕಾಲ ಭಾರತದ ರಾಜಕಾರಣವನ್ನು, ಕಾಂಗ್ರೆಸ್ಸನ್ನು ನಿಯಂತ್ರಿಸಿದರು. ರಾಮಕೃಷ್ಣ ಪರಮಹಂಸರಂತೆ, ರಮಣ ಮಹರ್ಷಿಗಳಂತೆ, ಭಾರತೀಯ ಸಂತರಂತೆ ಅವರು ಸರಳ ಶ್ವೇತವಸ್ತ್ರಧಾರಿಯಾದರು. ಭಾರತೀಯರ ಕಣ್ಮಣಿಯಾದರು. ಅವರ ಮಾತಿಗೆ, ಅವರ ಒಂದು ಕರೆಗೆ ಓಗೊಟ್ಟು ಲಕ್ಷ ಲಕ್ಷ ಜನ ಸತ್ಯಾಗ್ರಹ ಮಾಡುತ್ತಿದ್ದರು, ಹೋರಾಟ ಮಾಡುತ್ತಿದ್ದರು, ಸೆರೆವಾಸಕ್ಕೆ ಅಣಿಯಾಗುತ್ತಿದ್ದರು. ಆ ಕಾಲಘಟ್ಟದಲ್ಲಿ ಬ್ರಿಟಿಷ್ ಪ್ರಣೀತ ಪತ್ರಿಕೆ ಮತ್ತು ರೇಡಿಯೋಗಳು ಜನರ ಮೇಲೆ ದಟ್ಟವಾದ ಪ್ರಭಾವ ಬೀರುತ್ತಿದ್ದವು ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಭಾರತೀಯರ ಅಭಿಮತ, ಅಭಿಪ್ರಾಯ ಮತ್ತು ಮನೋಧರ್ಮಗಳನ್ನು ರೂಪಿಸುತ್ತಿದ್ದವು.

Mahatma gandhi satyagrah

1882ರ ಬ್ರಿಟಿಷರ ಕರಾಳ ಕಾಯಿದೆಯ ಅನುಸಾರವಾಗಿ, ಭಾರತೀಯರು ಉಪ್ಪನ್ನು ತಯಾರಿಸುವಂತೆಯೇ ಇರಲಿಲ್ಲ. ತೆರಿಗೆಯೂ ಅತ್ಯಧಿಕ. ಮಹಾತ್ಮಾ ಗಾಂಧೀ ಹಾಗೂ ಸರೋಜಿನಿ ನಾಯಿಡು ಅವರು ದಾಂಡೀ ಯಾತ್ರೆಯಲ್ಲಿ ಜೊತೆಯಾಗಿ ಪಾಲ್ಗೊಂಡು ಮಾಡಿದ ಉಪ್ಪಿನ ಸತ್ಯಾಗ್ರಹದ ವೀಡಿಯೋ ತುಣುಕುಗಳು ಸಹಜವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಇವರೆಲ್ಲರ ಪಾತ್ರ ಬಹಳ ದೊಡ್ಡದು ಎನ್ನುವ ತೀರ್ಮಾನಕ್ಕೆ ಭಾರತೀಯರು ಇಂದಿಗೂ ಬರುವಂತೆ ಮಾಡುತ್ತವೆ. ನಮಗೆಲ್ಲಾ 1965ರಲ್ಲಿ ಪ್ರೌಢಶಾಲೆಯಲ್ಲಿ ಸರೋಜಿನಿ ನಾಯಿಡು ಅವರ ಬಗೆಗಿನ “ಸರೋಜಿನಿ ದೇವಿ” ಎಂಬ ಪುಸ್ತಕವು ಉಪಪಠ್ಯವಾಗಿತ್ತು (Non-detailed Text). ನಾನು ಚೆನ್ನೈ ಮೂಲದ “ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ”ದ ಪರೀಕ್ಷೆಯೊಂದನ್ನೂ ಕಟ್ಟಿದ್ದೆ. ಅಲ್ಲಿಯೂ ಅದೇ ಹೆಸರಿನ ಹಿಂದೀ ಭಾಷೆಯ ಪಠ್ಯಪುಸ್ತಕವಿತ್ತು. ಇದರಿಂದ ನಾವೆಲ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಸರೋಜಿನಿ ನಾಯಿಡು ಅವರದ್ದು ಬಹಳ ಪ್ರಮುಖವಾದ ಪಾತ್ರ ಎಂದೇ ಪರಿಭಾವಿಸಿಬಿಟ್ಟಿದ್ದೆವು. ಆದರೆ, ಅನಂತರದ ವರ್ಷಗಳಲ್ಲಿ ಅವರದ್ದು ತೀರಾ ಅಲ್ಪಮಾತ್ರದ ಕೊಡುಗೆ ಎಂಬುದು ತಿಳಿದು ವಿಷಾದವೆನಿಸಿತು. ಹೈದರಾಬಾದ್ ನಿಜಾಮ ಮತ್ತು ಅವನ ರಜಾಕಾರರ ಪಡೆಯು, ನಮ್ಮ ಕಲ್ಯಾಣ ಕರ್ನಾಟಕದ ಅನೇಕ ಭಾಗಗಳೂ ಸೇರಿದಂತೆ ಅನೇಕ ಕಡೆ, ಹಿಂದೂಗಳ ನರಮೇಧ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಸುಲಿಗೆ, ಲೂಟಿಗಳಿಗೆ ಕಾರಣವಾಯಿತು. ಸರದಾರ್ ಪಟೇಲರ ಸೈನಿಕಕ್ರಮದಿಂದ ನಿಜಾಮನು ಶರಣಾಗುವವರೆಗೆ ಈ ಹತ್ಯಾಕಾಂಡ ನಡೆಯಿತು. ಈ ಕುರಿತ ವಿವರಗಳು ಬರೆಯಲಾಗದಷ್ಟು ಭಯಾನಕ. ಆದರೆ, ಸರೋಜಿನಿ ನಾಯಿಡು ಅವರು ನಿಜಾಮನ ಪರವಾಗಿದ್ದರು ಮತ್ತು ಅವನ ಸ್ತುತಿಯಲ್ಲಿ ತಮ್ಮ ಕವಿತಾ ರಚನಾ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದರು. ಇಂತಹ ವಿವರಗಳು ಮತ್ತು ಸಾಕ್ಷ್ಯಾಧಾರಗಳು ನಮ್ಮಂತಹವರ ನೋವಿಗೆ ಕಾರಣವಾಗುತ್ತವೆ.

ಉಪ್ಪಿನ ಸತ್ಯಾಗ್ರಹದ ಬಗೆಗೆ ನಮ್ಮ ಕಾಂಗ್ರೆಸ್ ಪ್ರಣೀತ ಇತಿಹಾಸದ ಪಠ್ಯಪುಸ್ತಕಗಳಲ್ಲಿ ನಾವೆಲ್ಲ ತುಂಬ ತುಂಬ ಓದಿದೆವು. ಸುಮಾರು ಅರುವತ್ತು ಸಾವಿರ ಜನ ಸತ್ಯಾಗ್ರಹಿಗಳು ಸೆರೆಮನೆ ಸೇರಬೇಕಾಯಿತು. ಕರ್ನಾಟಕದ ಪಾತ್ರವೂ ಈ ಸತ್ಯಾಗ್ರಹದಲ್ಲಿ ಬಹಳ ದೊಡ್ಡದು. ಕರ್ನಾಟಕದಲ್ಲಿ ಸದಾಶಿವರಾವ್‌, ಗಂಗಾಧರ ರಾವ್ ದೇಶಪಾಂಡೆ, ಆರ್‌.ಆರ್‌. ದಿವಾಕರ್‌, ಬಿ.ಎಸ್‌.ನಾಯಕ್‌, ಎನ್.ಎಸ್‌.ಹರ್ಡೀಕರ್‌, ಕಡಪ ರಾಘವೇಂದ್ರ ರಾವ್‌, ಹನುಮಂತರಾವ್‌ ಕೌಜಲಗಿ, ಎಂ.ಪಿ.ನಾಡಕರ್ಣಿ ಮೊದಲಾದವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯಿತು. ಅಂಕೋಲ, ಮಂಗಳೂರು, ಉಡುಪಿ, ಕುಂದಾಪುರ ಮತ್ತು ಬಸನಾಳ ಮುಂತಾದ 30 ಕೇಂದ್ರಗಳಲ್ಲಿ ಸತ್ಯಾಗ್ರಹ ನಡೆಯಿತು. 1931ರ ಮಾರ್ಚ್ ತಿಂಗಳಲ್ಲಿ ನಡೆದ ಗಾಂಧೀ – ಅರ್ವಿನ್ ಒಪ್ಪಂದದಂತೆ ಸತ್ಯಾಗ್ರಹಿಗಳ ಬಿಡುಗಡೆಯಾಯಿತು ಮತ್ತು ಸತ್ಯಾಗ್ರಹವನ್ನು ಹಿಂದೆಗೆದುಕೊಳ್ಳಲು ಗಾಂಧೀಜಿಯವರು ಒಪ್ಪಂದಕ್ಕೆ ಸಹಿ ಹಾಕಿದರು.

dandi march

ನಾವು ಭಾರತೀಯರು ತುಂಬಾ ತುಂಬಾ ಮುಗ್ಧರು, ಅಮಾಯಕರು. ಉಪ್ಪಿನ ಸತ್ಯಾಗ್ರಹದ ವೈಭವೀಕರಣವೇನೋ ಸರಿ, ಉಪ್ಪಿನ ಮೇಲಿನ ತೆರಿಗೆ ಕಡಿಮೆಯಾಯಿತೇ? ಎನ್ನುವುದನ್ನು ಕೇಳುವುದನ್ನೂ ಮರೆತೆವು, ತಿಳಿದುಕೊಳ್ಳಲೂ ಹೋಗಲಿಲ್ಲ. ನೋವಿನ ಸಂಗತಿಯೆಂದರೆ, 1947ರವರೆಗೆ ಉಪ್ಪಿನ ಮೇಲಿನ ತೆರಿಗೆಯು ಕಡಿಮೆಯಾಗಲೂ ಇಲ್ಲ. ಉಪ್ಪಿನ ಸತ್ಯಾಗ್ರಹದ ಪ್ರಮುಖ ಗುರಿ ಈಡೇರಿತೇ, ಎಂಬುದನ್ನು ನಾವು ಸಹ ತಿಳಿದುಕೊಳ್ಳಲು ಪ್ರಯತ್ನಪಡಲೇ ಇಲ್ಲ. ಇಷ್ಟೇ ಅಲ್ಲ, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಇಂತಹ ನೂರಾರು ಸತ್ಯಸಂಗತಿಗಳ ಬಗೆಗೆ ನಮ್ಮನ್ನು ಇನ್ನೂ ಅಂಧಕಾರವೇ ಕವಿದಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಬೌದ್ಧ ನಿರ್ಮಾಣಗಳನ್ನು ಹಿಂದೂಗಳು ನಾಶ ಮಾಡಿದರೇ?

ಅತ್ಯಂತ ಕ್ರೂರಿ, ಭಾರತ-ದ್ವೇಷಿ ಚರ್ಚಿಲ್ ಬ್ರಿಟಿಷ್ ಪ್ರಧಾನಮಂತ್ರಿಯಾಗಿದ್ದ. 1943ರಲ್ಲಿ ತನ್ನ ಸೈನಿಕರಿಗಾಗಿ ಇಡೀ ಬಂಗಾಳದ ದವಸ ಧಾನ್ಯಗಳನ್ನು ಒಂದು ಕಾಳೂ ಬಿಡದಂತೆ ಬಲವಂತವಾಗಿ ಲೂಟಿ ಮಾಡಿದ. ಬಿತ್ತನೆಯ ಬೀಜಗಳಿಗೂ ಧಾನ್ಯಗಳನ್ನು ಉಳಿಸಲಿಲ್ಲ. ಮೂವತ್ತು ಲಕ್ಷ ಜನ ಭಾರತೀಯರು ಹಸಿವಿನಿಂದಾಗಿ ಸತ್ತುಹೋದರು. ಕೋಲ್ಕತ್ತಾದ ಬೀದಿಬೀದಿಗಳಲ್ಲಿ ಹಸಿವಿನಿಂದ ಸತ್ತವರ ಹೆಣಗಳು ರಾಶಿ ರಾಶಿ ಬಿದ್ದಿದ್ದವು. ತಮ್ಮ ಉಪವಾಸವನ್ನು ಬ್ರಹ್ಮಾಸ್ತ್ರದಂತೆ ಬಳಸುತ್ತಿದ್ದ ಮಹಾತ್ಮಾ ಗಾಂಧೀಜಿಯವರು ಈ ಕುರಿತಂತೆ ಆಮರಣಾಂತ ಉಪವಾಸ ಸತ್ಯಾಗ್ರಹವನ್ನೇನೂ ಹಮ್ಮಿಕೊಳ್ಳಲಿಲ್ಲ. 1946ರಲ್ಲಿ ಕೋಲ್ಕತ್ತಾದಲ್ಲಿ ಜಿನ್ನಾ – ಸುಹ್ರವರ್ದಿ ಪ್ರಾಯೋಜಿಸಿದ ಹಿಂದೂ ಹತ್ಯಾಕಾಂಡ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಸುಲಿಗೆ, ಲೂಟಿ, ಬೆಂಕಿ ಹಚ್ಚುವುದು ಇತ್ಯಾದಿ ನಡೆಯಿತು. ಗಾಂಧೀಜಿಯವರು ಈ ಕುರಿತಂತೆಯೂ ಉಪವಾಸ ಸತ್ಯಾಗ್ರಹ ಮಾಡಲಿಲ್ಲ.

dandi march

ತಥಾಕಥಿತ ಸ್ವಾತಂತ್ರ್ಯ ಬಂದ ಮೇಲೆ, ಹೊಸ ಇಸ್ಲಾಮೀ ದೇಶ ಪಾಕಿಸ್ತಾನವು ತಕ್ಷಣವೇ ಕಾಶ್ಮೀರವನ್ನು ಕಬಳಿಸುವ ಕುತಂತ್ರವನ್ನು ಮಾಡಿತು. ಕಾಶ್ಮೀರದ ಮೇಲೆ ಸೈನಿಕ ಆಕ್ರಮಣವೇ ಪ್ರಾರಂಭವಾಗಿಬಿಟ್ಟಿತು. ಗಾಂಧೀಜಿಯವರ ಮಾನಸಪುತ್ರ, ರಾಜಕೀಯ ಉತ್ತರಾಧಿಕಾರಿ ಎನಿಸಿದ್ದ ಜವಾಹರ ಲಾಲ್ ನೆಹರೂ ಅವರೇ, ಸೂಕ್ತ ಕ್ರಮ ಕೈಗೊಂಡು ಪಾಕಿಸ್ತಾನಕ್ಕೆ ಕೊಡಬೇಕಿದ್ದ ೫೫ ಕೋಟಿ ರೂಪಾಯಿಗಳನ್ನು ತಡೆಹಿಡಿದರು. ಏಕೆಂದರೆ, ಆ ಹಣದಿಂದ ಪಾಕಿಸ್ತಾನವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶಸ್ತ್ರಾಸ್ತ್ರಗಳನ್ನು ಕೊಳ್ಳುತ್ತದೆ, ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ, ಜನವರಿ 1948ರಲ್ಲಿ, ಗಾಂಧೀಜಿಯವರು ಹಣ ಬಿಡುಗಡೆಗೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡರು. ಆಗ ಅನಿರ್ವಾಹವಾಗಿ ನೆಹರೂ ಅವರು ಆ ಹಣವನ್ನು ಬಿಡುಗಡೆ ಮಾಡಲು ಒಪ್ಪಬೇಕಾಯಿತು. ಅಂದಿನ ಕೇಂದ್ರ ಸರ್ಕಾರದ ಮಂತ್ರಿಮಂಡಲದ ಸಭೆ ಎಲ್ಲಿ ನಡೆಯಿತು ಊಹಿಸುವಿರಾ? ಗಾಂಧೀಜಿಯವರು ಆಗ ವಾಸಿಸುತ್ತಿದ್ದ “ಬಿರ್ಲಾ ಭವನ”ದಲ್ಲಿಯೇ (ಈಗ ಅದೇ ಕಟ್ಟಡ “ಗಾಂಧೀ ಸ್ಮೃತಿ” ಎಂಬ ಹೆಸರಿನಲ್ಲಿ ಸ್ಮಾರಕವಾಗಿದೆ) ಸಭೆ ನಡೆಯಿತು ಮತ್ತು 1948ರ ಜನವರಿ 16ರ ಪ್ರಾರ್ಥನಾ ಸಭೆಯಲ್ಲಿ, ಪಾಕಿಸ್ತಾನಕ್ಕೆ ಹಣ ಬಿಡುಗಡೆ ಮಾಡಿದ ಈ ನಿರ್ಧಾರವನ್ನು ಗಾಂಧೀಜಿಯವರು ಮುಕ್ತಕಂಠದಿಂದ ಶ್ಲಾಘಿಸಿದರು.

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ನಿಜ-ಚಿತ್ರಗಳೇ ಹೀಗೆ. ವಿಷಾದ, ದುಃಖ, ನೋವುಗಳನ್ನೇ ತರುತ್ತವೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: Gandhi Jayanthi: ಅಹಿಂಸೆಗೊಂದು ಅಸ್ಮಿತೆಯನ್ನು ಕೊಟ್ಟ ಸನಾತನಿ

Continue Reading

ಅಂಕಣ

Raja Marga Column : ಗಾಂಧಿ ಕ್ಲಾಸ್‌ ಹೆಸರು ಬಂದಿದ್ದು ಹೇಗೆ?; ನೀವೆಂದೂ ಕೇಳಿರದ 25 ಸಂಗತಿಗಳು

Raja Marga Column : ಮಹಾತ್ಮಾ ಗಾಂಧಿ ಎಂಬ ಒಬ್ಬ ವ್ಯಕ್ತಿ ಆ ರೀತಿಯಾಗಿ ಇದ್ದರು ಎಂದು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದಂತೆ ಅವರು ಬದುಕಿದರು. ಅವರ ಚಿಂತನೆ, ಅವರ ನಡೆ ನುಡಿ, ಇಡೀ ದೇಶ ಮಾತ್ರವಲ್ಲ, ಜಗತ್ತನ್ನು ಆವರಿಸಿಕೊಂಡ ರೀತಿ ಕಲ್ಪನಾತೀತ. ಅವರ 154ನೇ ಜನ್ಮದಿನದ ಸಂದರ್ಭದಲ್ಲಿ ಗಾಂಧೀಜಿ ಅವರ ಬದುಕಿನ ಕುತೂಹಲಕರ ಸಂಗತಿಗಳು ಇಲ್ಲಿವೆ.

VISTARANEWS.COM


on

Mahatma gandhi biirthday
Koo
RAJAMARGA

ಇಂದು ಗಾಂಧಿ ಜಯಂತಿ. ಮಹಾತ್ಮಾ ಗಾಂಧಿ ಯವರ (Mahatma Gandhi) 154ನೆಯ ಹುಟ್ಟುಹಬ್ಬ. ಗುಜರಾತಿನ ಪೋರಬಂದರಿನಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ವ್ಯಕ್ತಿ ಇಡೀ ಜಗತ್ತನ್ನು ಪ್ರಭಾವಿಸಿದ್ದು ಸಾಮಾನ್ಯ ಸಂಗತಿ ಅಲ್ಲ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ (Fight for Indian Independence) 33 ಕೋಟಿ ಭಾರತೀಯರು ಗಾಂಧಿಯವರ ಮಾತುಗಳನ್ನು ಆಲಿಸುತ್ತಿದ್ದರು ಅಂದರೆ ಅದೂ ಆಶ್ಚರ್ಯವೇ. ಅದರ ಬೆಳಕಿನಲ್ಲಿ ಗಾಂಧಿಯವರ ಬದುಕಿನ ಕೆಲವು ರೋಚಕ ಸಂಗತಿಗಳು ಇಲ್ಲಿವೆ.

1. ಗಾಂಧೀಜಿ ಹುಟ್ಟು ಹಬ್ಬವನ್ನು ವಿಶ್ವ ಅಹಿಂಸಾ ದಿನವಾಗಿ (World Non violence day) ಜಗತ್ತು ಆಚರಿಸುತ್ತದೆ. 2007ರಿಂದ ವಿಶ್ವ ಸಂಸ್ಥೆಯು ಗಾಂಧಿಗೆ ಕೊಟ್ಟ ಗೌರವ ಇದು.

2. ಜಗತ್ತಿನ ಅತೀ ಹೆಚ್ಚು ದೇಶಗಳು ಗಾಂಧಿಯವರ ಫೋಟೊ ಇರುವ ಸ್ಟಾಂಪ್ ಬಿಡುಗಡೆ ಮಾಡಿವೆ. ಈ ದಾಖಲೆಯಲ್ಲಿ ಕೂಡ ಗಾಂಧಿ ಎಲ್ಲರಿಗಿಂತ ಮುಂದೆ ಇದ್ದಾರೆ.

3. ಗಾಂಧಿಯವರನ್ನು ಬ್ರಿಟಿಷರು ‘ಅರೆ ನಗ್ನ ಫಕೀರ’ ಎಂದು ಕರೆದರು. ಗಾಂಧಿಯವರ ಡ್ರೆಸ್ ಕೋಡ್ ಹಾಗೆಯೇ ಇತ್ತು. ಅದೇ ಡ್ರೆಸ್ಸಲ್ಲಿ ಗಾಂಧಿ ಇಂಗ್ಲೆಂಡಿಗೆ ದುಂಡು ಮೇಜಿನ ಪರಿಷತ್ತಿಗೆ ಹೋಗಿ ಬಂದರು.

Half Naked Fakeera Mahatma Gandhi

4. ಗಾಂಧಿ ಜೊತೆ ಒಂದೇ ಟೇಬಲ್ ಮೇಲೆ ಊಟ ಮಾಡಲು ಇಂಗ್ಲೆಂಡ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ (Winston Churchil) ಒಪ್ಪಲಿಲ್ಲ. ಗಾಂಧೀಜಿ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.

5. ಅಹಿಂಸೆ ಮತ್ತು ಸತ್ಯಾಗ್ರಹ (Nonviolence and Satyagrah) ಎಂಬ ಎರಡು ಅಸ್ತ್ರಗಳನ್ನು ಗಾಂಧೀಜಿ ಸ್ವಾತಂತ್ರ್ಯ ಹೋರಾಟದಲ್ಲಿ ಬಳಸಿದರು. ಅದರಲ್ಲಿಯೂ ಸತ್ಯಾಗ್ರಹ ಎಂಬ ಹೋರಾಟವು ಜಗತ್ತಿನ ಹಲವು ಮಹಾ ನಾಯಕರ ಗಮನ ಸೆಳೆಯಿತು. ಮುಂದೆ ಹಲವು ದೇಶಗಳ ಸ್ವಾತಂತ್ರ್ಯ ಹೋರಾಟಕ್ಕೆ ಸತ್ಯಾಗ್ರಹವು ಪ್ರೇರಣೆ ಕೊಟ್ಟಿತು.

6. ಮಾರ್ಟಿನ್ ಲೂಥರ್ ಕಿಂಗ್ ಅವರು ಗಾಂಧೀಜಿಯವರನ್ನು ತನ್ನ ಐಕಾನ್ ಆಗಿ ಆರಿಸಿಕೊಂಡಿದ್ದರು. ಅವರ ಕಚೇರಿಯಲ್ಲಿ ಅವರ ಎದುರಿನ ಗೋಡೆಯಲ್ಲಿ ಗಾಂಧಿಯ ಫೋಟೊ ಇತ್ತು.

Mahatma gandhi preaches

7. ಯಾವ ದಕ್ಷಿಣ ಆಫ್ರಿಕ ಗಾಂಧಿ ಅವರನ್ನು ಕರಿಯ (ಬ್ಲಾಕ್) ಎಂಬ ಕಾರಣಕ್ಕೆ ಟ್ರೈನಿಂದ ಹೊರಗೆ ದೂಡಿ ಅಪಮಾನ ಮಾಡಿತ್ತಾ, ಅದೇ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮುಂದೆ ಗಾಂಧಿ ಪ್ರೇರಣೆ ಕೊಟ್ಟರು.

8. ಗಾಂಧಿಯವರು ಮದ್ಯಪಾನ ನಿಷೇಧ ಮತ್ತು ಗೋಹತ್ಯೆ ನಿಷೇಧಗಳ ಪರವಾಗಿ ಬಲವಾಗಿ ನಿಂತಿದ್ದರು.

9. ಜಗತ್ತಿನ ಅತ್ಯಂತ ಜನಪ್ರಿಯ ಪತ್ರಿಕೆ ‘ಟೈಮ್ಸ್ ಮ್ಯಾಗಜೀನ್’ ಗಾಂಧಿಯವರನ್ನು ‘ವರ್ಷದ ವ್ಯಕ್ತಿ ಪ್ರಶಸ್ತಿ’ (Times man of the year) ಮೂಲಕ ಗೌರವಿಸಿತು. ಆ ಗೌರವ ಪಡೆದ ಮೊದಲ ಮತ್ತು ಏಕೈಕ ಭಾರತೀಯ ಅಂದರೆ ಅದು ಗಾಂಧಿ.

Mahatma Gandhi TIMES cover in 1930

10. ವಿದೇಶಗಳಲ್ಲಿ ಗಾಂಧಿ ಹೆಸರಿನ 48 ರಸ್ತೆಗಳು ಇವೆ. ಭಾರತದಲ್ಲಿ 53 ದೊಡ್ಡ ರಸ್ತೆಗಳು ಗಾಂಧಿ ಅವರ ಹೆಸರು ಪಡೆದಿವೆ. ಇನ್ನು ಗಾಂಧಿ ಭವನ್, ಗಾಂಧಿ ಪ್ರತಿಮೆ, ಗಾಂಧಿ ಮೈದಾನ, ಗಾಂಧಿ ಚೌಕ….ಇವುಗಳನ್ನು ಲೆಕ್ಕ ಮಾಡಲು ಸಾಧ್ಯವೇ ಇಲ್ಲ!

11. ಗಾಂಧಿಯವರ ಹೆಸರು ನೊಬೆಲ್ ಶಾಂತಿ ಪುರಸ್ಕಾರಕ್ಕೆ (Nobel Peace Award) ಐದು ಬಾರಿ ಶಿಫಾರಸು ಆಗಿತ್ತು. ಆದರೆ ಅದರದ್ದೇ ಒಂದು ಕಾರಣಕ್ಕೆ ಅದು ನಿರಾಕರಣೆ ಆಯ್ತು.

12. ಜಾಗತಿಕ ಅತೀ ದೊಡ್ಡ ಫೌಂಡೇಶನ್ ಆದ ‘ಹೆನ್ರಿ ಫೋರ್ಡ್ ಫೌಂಡೇಶನ್’ ಗಾಂಧಿಯವರನ್ನು ತನ್ನ ಆದರ್ಶವಾಗಿ ತೆಗೆದುಕೊಂಡಿದೆ. ಆ ಫೌಂಡೇಶನ್ ಪ್ರಕಾರ ಗಾಂಧಿಯವರು ‘ಜಾಗತಿಕ ಐಕಾನ್’ (Universal Icon).

Mahatma gandhi with assistants

13. ಗಾಂಧಿಯವರನ್ನು ಮೊದಲ ಬಾರಿಗೆ ‘ಮಹಾತ್ಮ’ ಎಂದು ಕರೆದದ್ದು ರಾಷ್ಟ್ರಕವಿ ರವೀಂದ್ರನಾಥ್ ಠಾಗೋರ್ ಅವರು.

14. ಗಾಂಧಿಯವರ ಇಂಗ್ಲಿಷ್ ಭಾಷಣದಲ್ಲಿ ಐರಿಷ್ ಅಸೆಂಟ್ ಇತ್ತು. ಅದಕ್ಕೆ ಕಾರಣ ಅವರ ಮೊದಲ ಇಂಗ್ಲಿಷ್ ಟೀಚರ್ ಒಬ್ಬರು ಐರಿಷ್ ಆಗಿದ್ದರು.

15. ಗಾಂಧಿಯವರು ಒಳ್ಳೆಯ ಭಾಷಣಕಾರ ಆಗಿರಲಿಲ್ಲ. ಅವರ ಧ್ವನಿಯೂ ಕೀರಲು ಇತ್ತು. ಆದರೆ ಆ ಭಾಷಣವು ಹೆಚ್ಚು ಪ್ರಭಾವಶಾಲಿ ಆಗಿತ್ತು. ಗಾಂಧಿ ತಮ್ಮ ಭಾಷಣದಲ್ಲಿ ಏನಾದರೂ ಕರೆಕೊಟ್ಟರೆ ಸೇರುತ್ತಿದ್ದ ಸಾವಿರಾರು ಜನರು ಅದನ್ನು ಪ್ರಶ್ನಾತೀತವಾಗಿ ಪಾಲನೆ ಮಾಡುತ್ತಿದ್ದರು. ಗಾಂಧಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುತ್ತಾರೆ ಎಂದು ಆಗ ಬಹುಪಾಲು ಭಾರತೀಯರು ನಂಬಿದ್ದರು.

Mahatma gandhi satyagrah

16. ಮುಂದೆ ಬಾಂಗ್ಲಾ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೋಬೆಲ್ ಪ್ರಶಸ್ತಿ ಪಡೆದ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಆರಿಸಿಕೊಂಡದ್ದು ಅಹಿಂಸಾ ಮಾರ್ಗವನ್ನು. ಅದಕ್ಕೆ ಪ್ರೇರಣೆ ಗಾಂಧಿ.

17. ಗಾಂಧಿ ಕರ್ನಾಟಕವನ್ನು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ 18 ಬಾರಿ ಭೇಟಿ ಕೊಟ್ಟಿದ್ದರು. ಅದರಲ್ಲಿ ಉಡುಪಿಗೆ ಬಂದದ್ದು ಒಂದು ಬಾರಿ (ಫೆಬ್ರುವರಿ 25, 1934). ಆಗ ಕೃಷ್ಣ ಮಠದ ಬೀದಿಯಲ್ಲಿ ಗಾಂಧಿ ನಡೆದುಕೊಂಡು ಹೋದರೂ ಕೃಷ್ಣ ಮಠದ ಒಳಗೆ ಅವರು ಬರಲಿಲ್ಲ. ಅಜ್ಜರಕಾಡು ಮೈದಾನದಲ್ಲಿ ಗಾಂಧಿಯವರ ಭಾಷಣವನ್ನು 3000 ಮಂದಿ ಸೇರಿ ಕೇಳಿದ್ದರು. ಆ ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದು ಕಾರ್ಪೋರೇಶನ್ ಬ್ಯಾಂಕ್ ಸ್ಥಾಪನೆ ಮಾಡಿದ್ದ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲ ಸಾಹೇಬರು. ಕಾಡಬೆಟ್ಟು ಎಂಬಲ್ಲಿ ಗಾಂಧೀಜಿ ಒಂದು ಖಾದಿ ಭಂಡಾರವನ್ನು ಉದ್ಘಾಟನೆ ಮಾಡಿದ್ದರು.

18. ಗಾಂಧಿ ಅದೇ ಅವಧಿಯಲ್ಲಿ ಮಂಗಳೂರಿಗೆ ಮೂರು ಬಾರಿ ಭೇಟಿ ನೀಡಿದ್ದರು. 1920, 1927, 1934 ಹೀಗೆ ಮೂರು ಭೇಟಿಗಳು. ಗಾಂಧಿಯವರ 1934ರ ಭೇಟಿಯಲ್ಲಿ 10,000 ಮಂದಿ ಸೇರಿದ್ದರು. ಆಗ ಅವರು ಕೆನರಾ ಶಾಲೆಯಲ್ಲಿ ಕೃಷ್ಣ ಮಂದಿರ ಉದ್ಘಾಟನೆ ಮಾಡಿದ್ದರು. ಅವರ ಮಂಗಳೂರು ಸಭೆಗಳನ್ನು ವ್ಯವಸ್ಥೆ ಮಾಡಿದ್ದು ಕಾರ್ನಾಡ್ ಸದಾಶಿವ ರಾಯರು ಮತ್ತು ಆಗಿನ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿದ್ದ ಎಂ.ಡಿ ಅಧಿಕಾರಿಯವರು. ಅವರು ನನ್ನ ಕಾರ್ಕಳ ತಾಲೂಕಿನವರು.

Mahatma gandhi dandi satyaghraha

19. ಗಾಂಧೀಜಿಯವರು ಸಾಮೂಹಿಕ ಪ್ರಾರ್ಥನೆಯನ್ನು ಮತ್ತು ಶ್ರೀ ರಾಮನ ಭಜನೆಗಳನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದರು ಮತ್ತು ಆಚರಣೆ ಮಾಡಿದರು. ‘ವೈಷ್ಣವ ಜನತೋ’ ಅವರು ಅತೀ ಹೆಚ್ಚು ಬಾರಿ ಆಲಿಸಿದ ಪದ್ಯ. ರಾಮರಾಜ್ಯದ ಸುಂದರ ಕಲ್ಪನೆಯ ಬಗ್ಗೆ ಅವರು ಹಲವಾರು ಲೇಖನಗಳನ್ನು ಬರೆದಿದ್ದಾರೆ.

20. ಗಾಂಧಿಯವರು ಎಡಗೈಯಿಂದ ಬರೆಯುತ್ತಿದ್ದರು. ಅವರ ಜೊತೆ ಯಾವಾಗಲೂ ಇರುತ್ತಿದ್ದದ್ದು ಒಂದು ಗಡಿಯಾರ.

Mahatma Gandhi

21. ತನಗೆ ಪತ್ರ ಬರೆಯುತ್ತಿದ್ದ ಪ್ರತಿಯೊಬ್ಬರಿಗೂ ಗಾಂಧೀಜಿ ಅವರು ತಮ್ಮ ಕೈ ಬರಹದಲ್ಲಿ ಉತ್ತರ ಬರೆಯುತ್ತಿದ್ದರು.

22. ಗಾಂಧಿ ತಮ್ಮ ಬದುಕಿನ ಉದ್ದಕ್ಕೂ ರೈಲಿನಲ್ಲಿ ದ್ವಿತೀಯ ದರ್ಜೆಯ ಡಬ್ಬಿಯಲ್ಲಿ ಪ್ರಯಾಣ ಮಾಡಿದ್ದರು. ಮುಂದೆ ಅದನ್ನು ಜನರು `ಗಾಂಧಿ ಕ್ಲಾಸ್’ ಎಂದು ಕರೆದರು.

ಇದನ್ನೂ ಓದಿ: Raja Marga Column : ಅಂದು ಜಿ.ಆರ್‌ ವಿಶ್ವನಾಥ್‌ ಅವರಿಂದಾಗಿ ಭಾರತ ಸೋತಿತ್ತು, ಆದರೆ ಕ್ರಿಕೆಟ್‌ ಗೆದ್ದಿತ್ತು!

23. ಗಾಂಧೀಯವರ ಹತ್ಯೆಯನ್ನು ನಾಥೂರಾಮ್ ಗೋಡ್ಸೆ ಮಾಡಿದಾಗ ಅವರ ಬಾಯಿಂದ ಬಂದ ಮೊದಲ ಶಬ್ದ ಹೇ ರಾಮ್. ಎರಡನೇ ಶಬ್ದ – ಉಸ್ಕೋ ಚೋಡ್ ದೋ!

Mahatma Gandhi memoir at Raj Ghat

24. ಗಾಂಧಿಯವರ ಅಂತಿಮ ಯಾತ್ರೆಯಲ್ಲಿ ಅಂದು ಭಾಗವಹಿಸಿದ ಜನರ ಸಂಖ್ಯೆಯೂ ಮಹಾ ದಾಖಲೆ. ಆಗ ಎಂಟು ಕಿಲೋಮೀಟರ್ ಉದ್ದವಾದ ಅಂತಿಮ ಯಾತ್ರೆಯು ಸಾಗಿ ಬಂದಿತ್ತು.

25. ಯಾವುದೇ ಸಾಮಾಜಿಕ ಜಾಲ ತಾಣ ಮತ್ತು ದೂರದರ್ಶನ ಇಲ್ಲದ ಕಾಲದಲ್ಲಿ ಕೂಡ ಒಬ್ಬ ವ್ಯಕ್ತಿ ಇಡೀ ಭಾರತವನ್ನು ತಲುಪಿದ್ದು ಮತ್ತು ಇಡೀ ವಿಶ್ವದ ಮೇಲೆ ಪ್ರಭಾವ ಬೀರಿದ್ದು ದೊಡ್ಡ ಸಾಧನೆಯೇ ಹೌದು. ಅದಕ್ಕಾಗಿ ಅವರು ಮಹಾತ್ಮ ಆದದ್ದು.

Continue Reading
Advertisement
dina bhavishya
ಪ್ರಮುಖ ಸುದ್ದಿ20 mins ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ

Sphoorti Salu
ಸುವಚನ20 mins ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Vivek Ramaswamy offering rs 80 lakh to nanny Says media report
ಪ್ರಮುಖ ಸುದ್ದಿ5 hours ago

ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸಕ್ಕೆ 80 ಲಕ್ಷ ರೂ. ಸ್ಯಾಲರಿ ಆಫರ್!

MLC TA Sharavana
ಬೆಂಗಳೂರು5 hours ago

TA Sharavana: ಅನಾಮಿಕರಾಗಿದ್ದ ಜಮೀರ್‌ಗೆ ರಾಜಕೀಯ ಬದುಕು ಕೊಟ್ಟಿದ್ದೇ ಜೆಡಿಎಸ್: ಟಿ.ಎ.ಶರವಣ

Justin Trudeau
ದೇಶ6 hours ago

India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

Netherlands cricket team
ಕ್ರಿಕೆಟ್6 hours ago

ICC World Cup 2023 : ವಿಶ್ವ ಕಪ್​ನಲ್ಲಿ ಆಡಲಿರುವ ನೆದರ್ಲ್ಯಾಂಡ್ಸ್​​ ತಂಡದ ಬಲವೇನು? ದೌರ್ಬಲ್ಯವೇನು?

Modi and KTR
ದೇಶ6 hours ago

ಎನ್‌ಡಿಎಗೆ ಸೇರಿಸಿಕೊಳ್ಳಿ ಎಂದಿದ್ದ ಕೆಸಿಆರ್; ಮೋದಿ! ಬಿಜೆಪಿ ಜತೆ ಹೋಗಲು ನಮಗೇನು ಹುಚ್ಚು ನಾಯಿ ಕಚ್ಚಿದೆಯಾ; ಕೆಟಿಆರ್

Child dies
ಕರ್ನಾಟಕ6 hours ago

Anekal News: ಮಹಡಿ ಮೇಲಿಂದ ಬಿದ್ದು 2 ವರ್ಷದ ಮಗು ಸಾವು

MB Patil visits america
ಕರ್ನಾಟಕ7 hours ago

MB Patil : ಬೆಂಗಳೂರಿನಲ್ಲಿ 800 ಕೋಟಿ ರೂ. ಹೂಡಲು ಕ್ರಿಪ್ಟನ್ ಸೊಲ್ಯೂಷನ್ಸ್ ಒಲವು: ಎಂ.ಬಿ. ಪಾಟೀಲ್

Top 10 news
ಟಾಪ್ 10 ನ್ಯೂಸ್7 hours ago

VISTARA TOP 10 NEWS : ಜಾತಿ ಗಣತಿಗೆ ಮೋದಿ ವಿರೋಧ, ಶಿವಮೊಗ್ಗದಲ್ಲಿ ಪೊಲೀಸರಿಗೇ ಬೆದರಿಕೆ ಹಾಕಿದ್ದ ಕಿಡಿಗೇಡಿಗಳು ಮತ್ತಿತರ ದಿನದ ಪ್ರಮುಖ ಸುದ್ದಿಗಳು

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

dina bhavishya
ಪ್ರಮುಖ ಸುದ್ದಿ20 mins ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ

The maintenance train finally lifted Metro services as usual
ಕರ್ನಾಟಕ14 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ15 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ2 days ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ3 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

ಟ್ರೆಂಡಿಂಗ್‌