ಜ್ಯೂಸ್‌ ಕುಡಿದರೆ 40% ತೆರಿಗೆ! - Vistara News

ವಾಣಿಜ್ಯ

ಜ್ಯೂಸ್‌ ಕುಡಿದರೆ 40% ತೆರಿಗೆ!

ಈ ಸೆಖೆಗೆ ಮೊದಲು ನೆನಪಾಗುವುದು ತಂಪು ಪಾನೀಯಗಳು. ಅದರಲ್ಲೂ ಫ್ರುಟ್‌ ಜ್ಯೂಸ್‌ಗಳಿಗೆ ನಿರಂತರ ಬೇಡಿಕೆ. ಆದರೆ, ಇದಕ್ಕೆ ಹಾಕುವ ಜಿಎಸ್‌ ಟಿ ಕೇಳಿದರೆ ನೀವೂ ಅಚ್ಚರಿಪಡಲಿದ್ದೀರಿ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ:  ಈಗ ಸೆಖೆಯೋ ಸೆಖೆ. ಎಷ್ಟು ನೀರು ಕುಡಿದರೂ ಸಾಕಾಗಲ್ಲ. ಕೂಲ್‌ಡ್ರಿಂಕ್ಸ್‌ ಕಂಡ್ರೆ ಮನಸು ಹುಚ್ಚೆದ್ದು ಕುಣಿಯುತ್ತದೆ.   ಆದರೆ, ಈ ಕೋಲ್ಡ್‌ಡ್ರಿಂಕ್ಸ್‌ಗೆ ಹಾಕ್ತಾ ಇರುವ ತೆರಿಗೆ ಲೆಕ್ಕಾಚಾರ ನೋಡಿದ್ರೆ ಕೋಲ್ಡ್‌ಡ್ರಿಂಕ್‌ಕೂಡಾ ಗಂಟಲಿಗೆ ಇಳಿಯುವಾಗ ಬಿಸಿ ಆಗುತ್ತದೆ.

ನಾವೀಗ ಹೇಳುತ್ತಿರುವುದು ಸಾಮಾನ್ಯ ಕೂಲ್‌ಡ್ರಿಂಕ್ಸ್‌ ಅಲ್ಲ. ಪ್ರುಟ್‌ಜ್ಯೂಸನ್ನು ಕಾರ್ಬೋನೇಟ್‌ ಮಾಡಿರುತ್ತಾರಲ್ಲಾ.. ಅಂಥ  ಫಿಜ್ಜಿ (fizzy) ಮಾದರಿಯ ಪಾನೀಯಗಳು.

ನಾವು ಕುಡಿಯುವ ಹಣ್ಣಿನ ಪಲ್ಪ್‌ಮಾದರಿಯ ಜ್ಯೂಸ್‌ನ ಬಾಟಲಿ ಅಥವಾ ಟೆಟ್ರಾ ಪ್ಯಾಕ್‌ಗೆ ಶೇಕಡಾ 12 ಜಿಎಸ್‌ಟಿ ಹಾಕಲಾಗುತ್ತದೆ.  ಅದೇ  ಹಣ್ಣನ್ನು ಆಧರಿಸಿದ ಕಾರ್ಬೊನೇಟೆಡ್‌ಪಾನೀಯಗಳಿಗೆ ಜಿಎಸ್‌ಟಿಯೇ ಶೇ. 28 ಇದೆ ಮತ್ತು ಹೆಚ್ಚುವರಿಯಾಗಿ ಕಂಪನ್ಸೇಷನ್‌ ಸೆಸ್‌ ಹೆಸರಲ್ಲಿ ಶೇ. 12 ಕಟ್ಟಬೇಕು. ಅಂದರೆ ಒಟ್ಟಾರೆಯಾಗಿ ಶೇಕಡಾ 40 ತೆರಿಗೆ ವಿಧಿಸಲಾಗುತ್ತದೆ. ಕಂಪನ್ಸೇಷನ್‌ ಸೆಸ್‌ ಎನ್ನುವುದು ರಫ್ತು ಮಾಡುವ ಆಯ್ದ ವಸ್ತುಗಳಿಗೆ ವಿಧಿಸಲಾಗುವ ಮೇಲ್ತೆರಿಗೆಯಾಗಿದೆ.

ಈ ರೀತಿ ಅಧಿಕ ತೆರಿಗೆಯನ್ನು ವಿಧಿಸುತ್ತಿರುವುದನ್ನು ಹಲವು ರಾಜ್ಯಗಳು ಆಕ್ಷೇಪಿಸಿದೆ. ಜಿಎಸ್‌ಟಿ ಮಂಡಳಿ ಸಭೆಯಲ್ಲೂ ಚರ್ಚೆಯಾಗಿದೆ. ತಂಪು ಪಾನೀಯ ತಯಾರಿಕೆ ಕಂಪನಿಗಳು ಕೂಡಾ ತಗಾದೆ ಎತ್ತಿವೆ.

2021ರ ಸೆಪ್ಟೆಂಬರ್‌13ರಂದು ಈ ವಿಷಯ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಚರ್ಚೆಗೆ ಬಂದ ಬಳಿಕ ಮಂಡಳಿಯು ಒಂದು ಸ್ಪಷ್ಟೀಕರಣವನ್ನು ನೀಡಿದೆ. ಅದರಲ್ಲಿ ಹೇಳಿರುವ ಪ್ರಕಾರ, ʻಹಣ್ಣಿನ ರಸಗಳ ಕಾರ್ಬೊನೇಟೆಡ್‌ಪಾನೀಯಗಳು ಮತ್ತು ಹಣ್ಣಿನ ರಸಗಳನ್ನು ಆಧರಿಸಿದ ಕಾರ್ಬೊನೇಟೆಡ್‌ಪಾನೀಯಗಳಿಗೆ ಶೇ. 28 ಜಿಎಸ್‌ಟಿ ಮತ್ತು ಶೇ. 12ರಷ್ಟು ಪರಿಹಾರಾತ್ಮಕ ಮೇಲ್ತೆರಿಗೆ ವಿಧಿಸಲಾಗುತ್ತದೆ . ಇದನ್ನು ಜಿಎಸ್‌ಟಿ ದರ ಪಟ್ಟಿಯಲ್ಲೇ ಅತ್ಯಂತ ಸ್ಪಷ್ಟವಾಗಿ ತಿಳಿಸಲಾಗಿದೆ!

ಈ ಗರಿಷ್ಠ ತೆರಿಗೆ ಮತ್ತು ಮೇಲ್ತೆರಿಗೆಯನ್ನು ಪ್ರಶ್ನಿಸಿ ಕೋಲ್ಡ್‌ಡ್ರಿಂಕ್‌ ಕಂಪನಿಯೊಂದು  ದಾವೆಯನ್ನು ಸಲ್ಲಿಸಿತ್ತು. ಅದಕ್ಕೆ ಉತ್ತರಿಸಿರುವ ಜಿಎಸ್‌ಟಿ ಪ್ರಾಧಿಕಾರದ ಗುಜರಾತ್‌ ಪೀಠ, ಆಪಲ್‌ಕೋಲಾ ಫಿಜ್ಜಿ ಮತ್ತು ಮಾಲ್ಟ್‌ಕೋಲಾ ಫಿಜ್ಜಿ ಕಂಪನಿಗಳು ತಯಾರಿಸಿರುವ ಕಾರ್ಬೊನೇಟೆಡ್‌ ಪಾನೀಯಗಳಿಗೆ ಶೇ. 28 ಜಿಎಸ್‌ಟಿ ಮತ್ತು ಶೇ. 12 ಮೇಲ್ತೆರಿಗೆ ಪಾವತಿ  ಕಡ್ಡಾಯ ಎಂದು ಸ್ಪಷ್ಟಪಡಿಸಿತು. ಇದೇ ವಿಷಯದಲ್ಲಿ ತಮಿಳುನಾಡಿನ ಪ್ರಾಧಿಕಾರವೂ ಇದೇ ರೀತಿಯ ನಿಲುವನ್ನು ತಾಳಿದೆ. ಅಲ್ಲಿ ಫಿಜ್ಜಿ ಗ್ರೇಪ್‌ಜ್ಯೂಸ್‌ವಿಚಾರದಲ್ಲಿ ತಗಾದೆ ಎತ್ತಲಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Bengaluru News: ಸಿಎಸ್‌ಆರ್‌ ಮಹತ್ವದ ಸಾಧನೆಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಪ್ರಶಂಸೆ

Bengaluru News: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಅತ್ಯುತ್ತಮ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ಕಾರ್ಯಗಳಿಗೆ ಈಚೆಗೆ ನಡೆದ 18 ನೇ ಸಿಐಐ-ಐಟಿಸಿ ಸಸ್ಟೈನಬಲ್ ಅವಾರ್ಡ್ ಸಮಾರಂಭದ ’ಮಹತ್ವದ ಸಾಧನೆಗೆ ಪ್ರಶಂಸೆ”ವಿಭಾಗದಲ್ಲಿ ಗುರುತಿಸಿಕೊಂಡಿದೆ.

VISTARANEWS.COM


on

18th CII ITC Sustainable Award Ceremony
Koo

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಅತ್ಯುತ್ತಮ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ಕಾರ್ಯಗಳಿಗೆ ಈಚೆಗೆ ನಡೆದ 18ನೇ ಸಿಐಐ-ಐಟಿಸಿ ಸಸ್ಟೈನಬಲ್ ಅವಾರ್ಡ್ ಸಮಾರಂಭದ ’ಮಹತ್ವದ ಸಾಧನೆಗೆ ಪ್ರಶಂಸೆ” ವಿಭಾಗದಲ್ಲಿ (Bengaluru News) ಗುರುತಿಸಿಕೊಂಡಿದೆ.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ (ಟಿಕೆಎಂ) ನ ಸಿಎಸ್‌ಆರ್ ಚಟುವಟಿಕೆಗಳನ್ನು ಸಿಐಐ-ಐಟಿಸಿ ಮೌಲ್ಯಮಾಪಕರು ಹಲವು ಮಾನದಂಡಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗಿದ್ದು, ಎಲ್ಲಾ ಸಿಎಸ್‌ಆರ್ ಯೋಜನೆಗಳಲ್ಲಿ ಅಳವಡಿಸಿಕೊಂಡ ಕಲಿಕೆ ಮತ್ತು ಇನ್ನೋವೇಷನ್‌ಗಳು ಇದರಲ್ಲಿ ಸೇರಿವೆ. ಕಂಪನಿಯ ಸಾಮಾಜಿಕ ಕಾರ್ಯಕ್ರಮಗಳು ಈ ಮಾನದಂಡಗಳಿಗೆ ಅನುಗುಣವಾಗಿ ಅನುಷ್ಠಾನವಾಗಿವೆ. ಇದಲ್ಲದೆ, ಟಿಕೆಎಂ ತನ್ನ ಸಿಎಸ್‌ಆರ್ ಅನುಷ್ಠಾನದ ಭಾಗವಾಗಿ, ಪರಿಣಾಮಗಳನ್ನು ಸಕ್ರೀಯವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಸಮಗ್ರ ಅಧ್ಯಯನ, ವಸ್ತುನಿಷ್ಠತೆ, ವಿಶ್ವಾಸಾರ್ಹತೆ ಮತ್ತು ಅನುಷ್ಠಾನದ ಬದ್ಧತೆಯನ್ನು ಬೋರ್ಡ್ ಮಟ್ಟದ ಸಿಎಸ್‌ಆರ್ ಸಮಿತಿಯ ಮೇಲ್ವಿಚಾರಣೆಗೆ ಒಳಪಡಲಿದ್ದು, ಮೌಲ್ಯಮಾಪನವನ್ನೂ ಸಹ ಮಾಡಲಾಗುತ್ತದೆ.

ಹಲವು ವರ್ಷಗಳಲ್ಲಿ ಕಂಪನಿಯು ತನ್ನ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಮತ್ತು ಸುಸ್ಥಿರ ಕಾರ್ಯಕ್ರಮಗಳ ಮೂಲಕ ಸಮುದಾಯ ವರ್ಧನೆ ಮತ್ತು ಪರಿಸರ ನಿರ್ವಹಣೆಯನ್ನು ಹೆಚ್ಚಿಸಲು ವಿಶೇಷ ಮೌಲ್ಯಮಾಪನ ಸಾಧನ ಮತ್ತು ವ್ಯವಸ್ಥೆಗಳನ್ನು ಜಾರಿಗೆ ತಂದಿದೆ.

ಇದನ್ನೂ ಓದಿ: Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?

ಟಿಕೆಎಂನ ಸಿಎಸ್‌ಆರ್ “ಸಮುದಾಯಗಳನ್ನು ಸಬಲೀಕರಣಗೊಳಿಸುವುದು” ಮತ್ತು “”ಪರಿಸರವನ್ನು ಸಮೃದ್ಧಗೊಳಿಸುವುದು” ಎಂಬ ಎರಡು ಅಂಶಗಳನ್ನು ಒಳಗೊಂಡಿದ್ದು, ನಾವೀನ್ಯತೆಯಿಂದ ಚಾಲನೆ ಪಡೆದುಕೊಳ್ಳುವ ಮತ್ತು ನಿರಂತರ ಸುಧಾರಣೆ ತತ್ವದಿಂದ ಮಾರ್ಗದರ್ಶನ ಪಡೆದ ಟಿಕೆಎಂನ ಸಿಎಸ್‌ಆರ್ ಯೋಜನೆಗಳು ಕೌಶಲ್ಯ ಅಭಿವೃದ್ಧಿ, ರಸ್ತೆ ಸುರಕ್ಷತೆ, ಶಿಕ್ಷಣ, ಪರಿಸರ, ಆರೋಗ್ಯ ಮತ್ತು ನೈರ್ಮಲ್ಯ ಮತ್ತು ವಿಪತ್ತು ನಿರ್ವಹಣೆ ಎಂಬ ಆರು ಪ್ರಮುಖ ಕ್ಷೇತ್ರಗಳಲ್ಲಿ ಅನುಷ್ಠಾನಗೊಳ್ಳುತ್ತವೆ. ಟಿಕೆಎಂನ ಸುಸ್ಥಿರ ಸಿಎಸ್‌ಆರ್ ಮಾದರಿಯು ಸಮುದಾಯ ಮಾಲೀಕತ್ವ, ಏಕೀಕೃತ ಮಧ್ಯಸ್ಥಿಕೆಗಳು, ವರ್ತನೆಯ ಬದಲಾವಣೆಗಳು (Behavior Changes) ಮತ್ತು ಭಾಗೀದಾರರ ಪಾಲ್ಗೊಳ್ಳುವಿಕೆಯನ್ನು ಸಾರಿ ಹೇಳಿದೆ.

ಟಿಕೆಎಂನ ಕಾರ್ಪೊರೇಟ್ ವ್ಯವಹಾರಗಳು ಮತ್ತು ಆಡಳಿತದ ಕಂಟ್ರಿ ಹೆಡ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಈ ಕುರಿತು ಮಾತನಾಡಿ, “18 ನೇ ಸಿಐಐ-ಐಟಿಸಿ ಸುಸ್ಥಿರತೆ ಪ್ರಶಸ್ತಿಯನ್ನು ಸ್ವೀಕರಿಸಲು ನಮಗೆ ಗೌರವವಿದೆ. ವ್ಯಾಪಾರ ಬೆಳವಣಿಗೆ ಮತ್ತು ಸಾಮಾಜಿಕ ಪ್ರಗತಿಯ ನಡುವೆ ಇರುವ ಬಲವಾದ ಸಂಪರ್ಕ ಮತ್ತು ಪಾಲ್ಗೊಳ್ಳುವಿಕೆಯನ್ನು ನಾವು ದೃಢವಾಗಿ ನಂಬುತ್ತೇವೆ. ಶಾಶ್ವತ ಮಧ್ಯಸ್ಥಿಕೆಗಳ ಮೇಲೆ ಗಮನ ಹರಿಸಿರುವ ನಾವು ವಿಶೇಷವಾಗಿ ಚೈಲ್ಡ್ ಟು ಕಮ್ಯೂನಿಟಿ ವಿಧಾನದ ಮೂಲಕ ಸಕಾರಾತ್ಮಕ ವರ್ತನೆಯ ಬದಲಾವಣೆಗಳನ್ನು ಹೆಚ್ಚಿಸಲು ಮುಂದಾಗಿದ್ದೇವೆ.

ಇದನ್ನೂ ಓದಿ: Utthana Essay Competition 2023: ಉತ್ಥಾನ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬೆಂಗಳೂರಿನ ಕಾವ್ಯಜೋಗಿ ಪ್ರಥಮ

ಸಮಾಜದೊಂದಿದೆ ಸಕ್ರೀಯವಾಗಿ ತೊಡಗಿಸಿಕೊಳ್ಳುವುದು, ಅವರ ಅಗತ್ಯಗಳು, ಆಕಾಂಕ್ಷೆಗಳು ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸುಸ್ಥಿರತೆಯೊಂದಿಗೆ ಅವರು ಎದುರಿಸುತ್ತಿರುವ ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಚಿಂತನೆಯ ಕಾರ್ಯಕ್ರಮಗಳನ್ನು ರೂಪಿಸುವುದು ನಮ್ಮ ನಿರಂತರ ಪ್ರಯತ್ನಗಳಾಗಿವೆ ಎಂದು ತಿಳಿಸಿದ್ದಾರೆ.

ದೀರ್ಘಕಾಲೀನ ಕಾರ್ಯತಂತ್ರ ಯೋಜನೆಯನ್ನು ಅಳವಡಿಸಿಕೊಳ್ಳುವ ಮೂಲಕ ಸಹಯೋಗ ಮತ್ತು ಬೆಂಬಲಕ್ಕಾಗಿ ಮಧ್ಯಸ್ಥಗಾರರನ್ನು ತೊಡಗಿಸಿಕೊಳ್ಳುವುದು, ಸಮಯೋಚಿತ ಯೋಜನೆಯ ಕಾರ್ಯಗತಗೊಳಿಸುವಿಕೆ, ಯೋಜನೆಯ ಪ್ರಗತಿಯನ್ನು ಪತ್ತೆಹಚ್ಚಲು ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕಾರ್ಯವಿಧಾನಗಳನ್ನು ಜಾರಿಗೆ ತರುವ ಮೂಲಕ ಸಿಎಸ್‌ಆರ್‌ನಲ್ಲಿ ಸುಸ್ಥಿರತೆಯನ್ನು ಸಾಧಿಸುವಲ್ಲಿ ಟಿಕೆಎಂ ಯಶಸ್ವಿಯಾಗಿದೆ.

ಸಮುದಾಯದಲ್ಲಿ ಅರ್ಥಪೂರ್ಣ ಸಕಾರಾತ್ಮಕ ಬದಲಾವಣೆಯನ್ನು ತರುವ ಟೊಯೋಟಾದ ಬದ್ಧತೆಯನ್ನು ಈ ಪ್ರಶಸ್ತಿ ಪುನರುಚ್ಚರಿಸುತ್ತದೆ. ಈವರೆಗೆ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಾವು 2.3 ದಶಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ತಲುಪಿದ್ದೇವೆ. ನಾವು ವಿಕಸನ ಮತ್ತು ಹೊಂದಿಕೊಳ್ಳುವುದನ್ನು ಮುಂದುವರೆವರೆಸುತ್ತೇವೆ. ಸಾಮಾಜಿಕ ಅಭಿವೃದ್ಧಿಗೆ ಬಲವಾದ ಮತ್ತು ಅರ್ಥಪೂರ್ಣ ಮಧ್ಯಸ್ಥಿಕೆಯ ಮೂಲಕ ನಮ್ಮ ಎಲ್ಲಾ ಸಿಎಸ್‌ಆರ್ ಯೋಜನೆಗಳಿಗೆ ಗರಿಷ್ಠ ಸಂಪನ್ಮೂಲ ಹಂಚಿಕೆ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ.

ಇದನ್ನೂ ಓದಿ: Heat Stroke: ನೀರು ಕುಡಿದು ತಂಪಾಗಿರಿ, ಹೀಟ್‌ ಸ್ಟ್ರೋಕ್‌ ತಪ್ಪಿಸಿಕೊಳ್ಳಿ

ಜಾಗತಿಕ ದೃಷ್ಟಿಕೋನದಲ್ಲಿ ಬೇರೂರಿರುವ ಟಿಕೆಎಂನ ಸಿಎಸ್‌ಆರ್ ಕಾರ್ಯಕ್ರಮಗಳು ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಸಮಾಜವನ್ನು ಬೆಳೆಸಲು ಸಮರ್ಪಿತವಾಗಿವೆ ಎಂದು ಅವರು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?

ಹೂಡಿಕೆ ಮಾಡುವಾಗ ಪ್ರತಿಯೊಬ್ಬರು ಸಮಗ್ರ ಮತ್ತು Income Tax: ದೀರ್ಘಕಾಲೀನ ಯೋಜನೆಯನ್ನು ಅಳವಡಿಸಿಕೊಳ್ಳಬೇಕು. ಹೂಡಿಕೆ ಮೇಲಿನ ಆದಾಯ, ಲಾಕ್-ಇನ್ ಅವಧಿ ಸೇರಿದಂತೆ ಹಲವಾರು ಮಾನದಂಡಗಳನ್ನು ಹೊಂದಿರುವ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ತೆರಿಗೆ ಲಾಭ ದೊರೆಯುವುದು. ಉದಾಹರಣೆಗೆ ಪಿಪಿಎಫ್ ತೆರಿಗೆ ಮುಕ್ತ ಉತ್ತಮ ಆದಾಯ ನೀಡುತ್ತದೆ. ಆದರೆ ತೆರಿಗೆದಾರರು ವಾರ್ಷಿಕವಾಗಿ ಕನಿಷ್ಠ 500 ರೂ.ಗಳನ್ನು ಪಾವತಿ ಮಾಡಲೇಬೇಕು. ಆದರೆ ಇದಕ್ಕೆ 15 ವರ್ಷಗಳ ಲಾಕ್-ಇನ್ ಅವಧಿಯೂ ಇದೆ. ಒಂದು ಬಾರಿ ಹೂಡಿಕೆ ಮಾಡಿ ಮತ್ತೆ ನಿಲ್ಲಿಸಿದರೆ ಅಥವಾ ಮಧ್ಯದಲ್ಲಿಯೇ ವಾಪಸ್ ಪಡೆಯಲು ಪ್ರಯತ್ನಿಸಿದರೆ ನಷ್ಟವೇ ಹೆಚ್ಚು.

VISTARANEWS.COM


on

income Tax - how to save tax
Koo

ಬೆಂಗಳೂರು: 2023-24ರ ಹಣಕಾಸು ವರ್ಷವು ಮಾರ್ಚ್ 31 ಕ್ಕೆ ಕೊನೆಗೊಳ್ಳಲಿದೆ. ಇದೇ ವೇಳೆ ಆದಾಯ ತೆರಿಗೆ (Income Tax) ಕಟ್ಟುವವರಿಗೆ ಹಣಕಾಸು ವರ್ಷದಲ್ಲಿ ತಮ್ಮ ಟ್ಯಾಕ್ಸ್​ಗಳನ್ನು (Tax Savings) ಉಳಿಸಲು ಕೊನೆಯ ಅವಕಾಶ ಇದು. ಆದರೆ ಸಾಕಷ್ಟು ಮಂದಿ ಕೊನೆಯ ಕ್ಷಣದ ಅವಸರದಲ್ಲಿ ತಪ್ಪುಗಳನ್ನು ಮಾಡುತ್ತಾರೆ. ಈ ಬಾರಿ ಆ ರೀತಿ ಮಾಡಬೇಡಿ. ಮಾರ್ಚ್ 31ರ ಗಡುವು ಹತ್ತಿರದಲ್ಲಿರುವುದರಿಂದ ಏನು ಮಾಡಬೇಕು ಎಂಬುದನ್ನು ಪರಿಣತರ ಅಭಿಪ್ರಾಯಗಳನ್ನು ಇಲ್ಲಿ ನೀಡಲಾಗಿದೆ.

ಮಾರ್ಚ್ 31ರಿಂದ ಕೇವಲ ಒಂದೆರಡು ದಿನಗಳು ಮಾತ್ರ ಇರುವುದರಿಂದ ಹೂಡಿಕೆ ಸಲಹೆಗಾರರು, ತೆರಿಗೆ ಸಲಹೆಗಾರರು ಮತ್ತು ತೆರಿಗೆದಾರರು ಬ್ಯುಸಿಯಾಗಿರುತ್ತಾರೆ. ಹೀಗಾಗಿ ತೆರಿಗೆ ಲಾಭವನ್ನು ಪಡೆಯಲು ತೆರಿಗೆ ಉಳಿತಾಯ ಹೂಡಿಕೆಗಳಲ್ಲಿ ಹಣವನ್ನು ಹೂಡಿಕೆ ಮಾಡಲೇಬೇಕು ಎಂದು ಹೇಳುತ್ತಾರೆ.

ಆದಾಯ ತೆರಿಗೆ ಕಾಯ್ದೆ, 1961, ಪಿಪಿಎಫ್, ಎಲ್ಐಸಿ ಪ್ರೀಮಿಯಂಗಳು, ಫಿಕ್ಸೆಡ್​ ಡೆಪಾಸಿಟ್​ಗಳು, ಇಎಲ್ಎಸ್ಎಸ್, ಯುಲಿಪ್, ಎನ್ಎಸ್ಸಿ ಮುಂತಾದ ನಿರ್ದಿಷ್ಟ ಸೆಕ್ಯುರಿಟಿಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿಸಬಹುದು ಎಂದು ರೌಟೆ ಹೇಳುತ್ತಾರೆ.

ಹೂಡಿಕೆ ಮಾಡುವಾಗ ಪ್ರತಿಯೊಬ್ಬರು ಸಮಗ್ರ ಮತ್ತು ದೀರ್ಘಕಾಲೀನ ಯೋಜನೆಯನ್ನು ಅಳವಡಿಸಿಕೊಳ್ಳಬೇಕು. ಹೂಡಿಕೆ ಮೇಲಿನ ಆದಾಯ, ಲಾಕ್-ಇನ್ ಅವಧಿ ಸೇರಿದಂತೆ ಹಲವಾರು ಮಾನದಂಡಗಳನ್ನು ಹೊಂದಿರುವ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ತೆರಿಗೆ ಲಾಭ ದೊರೆಯುವುದು. ಉದಾಹರಣೆಗೆ ಪಿಪಿಎಫ್ ತೆರಿಗೆ ಮುಕ್ತ ಉತ್ತಮ ಆದಾಯ ನೀಡುತ್ತದೆ. ಆದರೆ ತೆರಿಗೆದಾರರು ವಾರ್ಷಿಕವಾಗಿ ಕನಿಷ್ಠ 500 ರೂ.ಗಳನ್ನು ಪಾವತಿ ಮಾಡಲೇಬೇಕು. ಆದರೆ ಇದಕ್ಕೆ 15 ವರ್ಷಗಳ ಲಾಕ್-ಇನ್ ಅವಧಿಯೂ ಇದೆ. ಒಂದು ಬಾರಿ ಹೂಡಿಕೆ ಮಾಡಿ ಮತ್ತೆ ನಿಲ್ಲಿಸಿದರೆ ಅಥವಾ ಮಧ್ಯದಲ್ಲಿಯೇ ವಾಪಸ್ ಪಡೆಯಲು ಪ್ರಯತ್ನಿಸಿದರೆ ನಷ್ಟವೇ ಹೆಚ್ಚು.

ತೆರಿಗೆ ಉಳಿತಾಯ ಅನುಕೂಲ ನೀಡುವ ಸ್ಥಿರ ಠೇವಣಿಗಳು ಕಡಿಮೆ ಬಡ್ಡಿದರವನ್ನು ನೀಡುತ್ತವೆ. ಆದರೆ ಇದು ಸುಮಾರು 5 ವರ್ಷಗಳವರೆಗೆ ಲಾಕ್-ಇನ್ ಹೊಂದಿರುತ್ತವೆ. ಹೀಗಾಗಿ, ಸರಿಯಾದ ಆಯ್ಕೆಯನ್ನು ಮಾಡಲು ಮತ್ತು ನಿಮ್ಮ ಪ್ರಯೋಜನಗಳನ್ನು ಉತ್ತಮಗೊಳಿಸಲು ನಿರ್ದಿಷ್ಟ ಹೂಡಿಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ. ತೆರಿಗೆ ಉಳಿತಾಯವನ್ನು ಹೆಚ್ಚಿಸಲು ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಮಾಡುವ ತಪ್ಪುಗಳು

ಸೆಕ್ಷನ್ 80 ಸಿ ನಿರ್ಲಕ್ಷಿಸುವುದು: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ತೆರಿಗೆ ಉಳಿತಾಯ ಹೂಡಿಕೆಗಳಿಗೆ ಇಎಲ್ಎಸ್ಎಸ್ (ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್), ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್), ಎನ್ಎಸ್ಸಿ (ನ್ಯಾಷನಲ್ ಸೇವಿಂಗ್ಸ್​ ಸರ್ಟಿಫೀಕೇಟ್​) ಮುಂತಾದ ವಿವಿಧ ಮಾರ್ಗಗಳಿವೆ. ಅನೇಕ ತೆರಿಗೆದಾರರು ಸೆಕ್ಷನ್ 80 ಸಿ ಅಡಿಯಲ್ಲಿ ಲಭ್ಯವಿರುವ 1.5 ಲಕ್ಷ ರೂ.ಗಳ ಸಂಪೂರ್ಣ ಮಿತಿಯನ್ನು ಬಳಸಿಕೊಳ್ಳಲು ವಿಫಲರಾಗುತ್ತಾರೆ. ಎಲ್ಲಾ ಆಯ್ಕೆಗಳನ್ನು ಮೌಲ್ಯಮಾಪನ ಮಾಡಿ ಮತ್ತು ಈ ವಿಭಾಗದ ಅಡಿಯಲ್ಲಿ ತೆರಿಗೆ ಉಳಿತಾಯ ಮಾಡುವಂಥ ಹೂಡಿಕೆ ಮಾಡಿ.

ಇದನ್ನೂ ಓದಿ : LIC Offices: ವೀಕೆಂಡ್‌ನಲ್ಲೂ ಕಾರ್ಯನಿರ್ವಹಿಸಲಿವೆ ಎಲ್‌ಐಸಿ ಕಚೇರಿಗಳು; ಕಾರಣ ಇಲ್ಲಿದೆ

ಅಪೂರ್ಣ ದಾಖಲೆಗಳು: ತೆರಿಗೆ ಉಳಿತಾಯ ಹೂಡಿಕೆಗಳಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳು ಚಾಲ್ತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಿ. ಇದರಲ್ಲಿ ಹೂಡಿಕೆ ರಸೀದಿಗಳು, ಪ್ರೀಮಿಯಂ ಪಾವತಿ ಪ್ರಮಾಣಪತ್ರಗಳು, ಸಾಲ ಪ್ರಮಾಣಪತ್ರಗಳು ಇತ್ಯಾದಿಗಳು ಸೇರಿಕೊಂಡಿವೆ. ಅಪೂರ್ಣ ದಾಖಲೆಗಳು ತೆರಿಗೆ ಕಡಿತದ ಅವಕಾಶ ಸಿಗದಂತೆ ಮಾಡಬಹುದು. ಹೀಗಾಗಿ ನಿಮ್ಮ ಹೂಡಿಕೆಗಳು ಮತ್ತು ಕಡಿತಗಳ ದಾಖಲೆಗಳನ್ನು ಇರಿಸಿಕೊಳ್ಳಿ. ಯಾಕೆಂದರೆ ನಿಮ್ಮ ತೆರಿಗೆ ಫೈಲಿಂಗ್ ಗಳನ್ನು ಪರಿಶೀಲಿಸಲು ಐಟಿ ಇಲಾಖೆ ದಾಖಲೆಗಳ ಮರುಪರಿಶೀಲನೆ ಮಾಡುವ ಸಾಧ್ಯತೆಗಳಿವೆ.

ತೆರಿಗೆ ಯೋಜನೆಗಳನ್ನು ನಿರ್ಲಕ್ಷಿಸುವುದು: ಸೆಕ್ಷನ್ 80 ಸಿ ಹೊರತುಪಡಿಸಿ, ತೆರಿಗೆ ಪ್ರಯೋಜನಗಳನ್ನು ಪಡೆಯಬಹುದಾದ 80 ಡಿ (ಆರೋಗ್ಯ ವಿಮಾ ಪ್ರೀಮಿಯಂ), 80 ಇ (ಶಿಕ್ಷಣ ಸಾಲದ ಬಡ್ಡಿ) ಮತ್ತು 80 ಜಿ (ನಿರ್ದಿಷ್ಟ ನಿಧಿಗಳಿಗೆ ದೇಣಿಗೆ) ನಂತಹ ಇತರ ವಿಭಾಗಗಳಿವೆ. ಈ ಲಾಭವನ್ನು ನಿರ್ಲಕ್ಷಿಸುವುದರಿಂದ ತೆರಿಗೆ ಉಳಿಸುವ ಅವಕಾಶಗಳನ್ನು ಕಳೆದುಕೊಳ್ಳಬಹುದು.

ದೀರ್ಘಾವಧಿಯ ಹಣಕಾಸು ಗುರಿಯ ನಿರ್ಲಕ್ಷ್ಯ: ತೆರಿಗೆ ಉಳಿತಾಯ ಹೂಡಿಕೆಗಳು ನಿಮ್ಮ ದೀರ್ಘಾವಧಿಯ ಹಣಕಾಸು ಉದ್ದೇಶಗಳಿಗೆ ಹೊಂದಿಕೆಯಾಗಬೇಕು. ತೆರಿಗೆ ಲಾಭ ಪಡೆಯುವ ಉದ್ದೇಶದಿಂದ ಮಾತ್ರ ಹೂಡಿಕೆ ಮಾಡಿದರೆ ಅದು ನಿಮ್ಮ ಹಣಕಾಸಿನ ಅಗತ್ಯಕ್ಕೆ ಅದು ಹೊಂದಿಕೆಯಾಗದೇ ಹೋದರೆ ಅದರಿಂದ ಹೆಚ್ಚಿನ ಲಾಭವು ಸಿಗುವುದಿಲ್ಲ.

Continue Reading

ದೇಶ

LIC Offices: ವೀಕೆಂಡ್‌ನಲ್ಲೂ ಕಾರ್ಯನಿರ್ವಹಿಸಲಿವೆ ಎಲ್‌ಐಸಿ ಕಚೇರಿಗಳು; ಕಾರಣ ಇಲ್ಲಿದೆ

LIC Offices: ಮಾರ್ಚ್‌ 30 ಹಾಗೂ 31ರಂದು ಬ್ಯಾಂಕ್‌ಗಳು ಮಾತ್ರವಲ್ಲ ಭಾರತೀಯ ಜೀವ ವಿಮಾ ನಿಗಮದ ಕಚೇರಿಗಳು ಕಾರ್ಯನಿರ್ವಹಿಸಲಿವೆ.

VISTARANEWS.COM


on

LIC
Koo

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ದಿನವು ಭಾನುವಾರವೇ ಇರುವುದರಿಂದ ಬ್ಯಾಂಕ್‌ಗಳು (Banks) ಶನಿವಾರ ಹಾಗೂ ಭಾನುವಾರವೂ (ಮಾರ್ಚ್‌ 30, 31) ಕಾರ್ಯನಿರ್ವಹಿಸಲಿವೆ. ಬ್ಯಾಂಕ್‌ಗಳು ಮಾತ್ರವಲ್ಲ, ಭಾರತೀಯ ಜೀವ ವಿಮಾನ ನಿಗಮದ (LIC Offices) ಕಚೇರಿಗಳು ಕೂಡ ಶನಿವಾರ ಹಾಗೂ ಭಾನುವಾರ ಕಾರ್ಯನಿರ್ವಹಿಸಲಿವೆ. ಮಾರ್ಚ್‌ 30 ಹಾಗೂ 31 ಪ್ರಸಕ್ತ ಹಣಕಾಸು ವರ್ಷದ (Fiscal Year) ಕೊನೆಯ ದಿನಗಳಾಗಿರುವ ಕಾರಣ ಗ್ರಾಹಕರಿಗೆ ತೊಂದರೆಯಾಗಬಾರದು ಎಂದು ವೀಕೆಂಡ್‌ನಲ್ಲೂ ಎಲ್‌ಐಸಿ ಕಚೇರಿಗಳು ಕಾರ್ಯನಿರ್ವಹಿಸಲಿವೆ.

ವಿತ್ತೀಯ ವರ್ಷದ ಕೊನೆಯ ಎರಡು ದಿನಗಳಂದು ಆದಾಯ ತೆರಿಗೆ ಇಲಾಖೆ ಕಚೇರಿಗಳು ಕೂಡ ಕಾರ್ಯನಿರ್ವಹಿಸಲಿವೆ. ಹಣಕಾಸು ಚಟುವಟಿಕೆಯ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕಚೇರಿಗಳು ಕೂಡ ತೆರೆದಿರಲಿವೆ. ಎಲ್‌ಐಸಿ ಕಚೇರಿಗಳ ಕಾರ್ಯನಿರ್ವಹಣೆ ಕುರಿತು ಎಲ್‌ಐಸಿಯೇ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Job Alert: ಎಸ್‌ವಿಸಿ ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಏ. 9ರೊಳಗೆ ಅರ್ಜಿ ಸಲ್ಲಿಸಿ

2023-24ರ ಹಣಕಾಸು ವರ್ಷದ (ಎಫ್​ಎ) ಕೊನೆಯ ದಿನ ಭಾನುವಾರ ಬರುವುದರಿಂದ ಈ ಸೂಚನೆ ಬಂದಿದೆ. ಅಧಿಕೃತ ಹೇಳಿಕೆಯಲ್ಲಿ, “2023-24ರ ಹಣಕಾಸು ವರ್ಷದಲ್ಲಿ ತೆರಿಗೆ ಪಾವತಿಗಳಿಗೆ ಸಂಬಂಧಿಸಿದ ಎಲ್ಲ ವಹಿವಾಟುಗಳನ್ನು ಲೆಕ್ಕಹಾಕಲು ಮಾರ್ಚ್ 31, 2024 ರಂದು (ಭಾನುವಾರ) ಸರ್ಕಾರಿ ರಸೀದಿಗಳು ಮತ್ತು ಪಾವತಿಗಳನ್ನು ವ್ಯವಹರಿಸುವ ಬ್ಯಾಂಕುಗಳ ಎಲ್ಲಾ ಶಾಖೆಗಳನ್ನು ವಹಿವಾಟುಗಳಿಗೆ ತೆರೆದಿಡಲು ಭಾರತ ಸರ್ಕಾರ ವಿನಂತಿಸಿದೆ” ಎಂದು ಆರ್​​ಬಿಐ ಹೇಳಿದೆ.

ಆರ್‌ಬಿಐನ ಏಜೆನ್ಸಿ ಬ್ಯಾಂಕುಗಳಾಗಿ ಪಟ್ಟಿ ಮಾಡಲಾದ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ (ಪಿಎಸ್​ಬಿ) ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ ಸೇರಿವೆ. ಅಂತೆಯೇ, ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಲಿಮಿಟೆಡ್​ನಂತ ಖಾಸಗಿ ಬ್ಯಾಂಕುಗಳು ಏಜೆನ್ಸಿ ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನ ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.

ವಾರಾಂತ್ಯದಲ್ಲಿ ತೆರೆದಿರುವ ಬ್ಯಾಂಕ್​ಗಳ ವಿವರ ಇಲ್ಲಿದೆ

  • ಬ್ಯಾಂಕ್ ಆಫ್ ಬರೋಡಾ
  • ಬ್ಯಾಂಕ್ ಆಫ್ ಇಂಡಿಯಾ
  • ಬ್ಯಾಂಕ್ ಆಫ್ ಮಹಾರಾಷ್ಟ್ರ
  • ಕೆನರಾ ಬ್ಯಾಂಕ್
  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  • ಇಂಡಿಯನ್ ಬ್ಯಾಂಕ್
  • ಇಂಡಿಯನ್ ಓವರ್ಸೀಸ್ ಬ್ಯಾಂಕ್
  • ಪಂಜಾಬ್ ಮತ್ತು ಸಿಂಧ್ ಬ್ಯಾಂಕ್
  • ಪಂಜಾಬ್ ನ್ಯಾಷನಲ್ ಬ್ಯಾಂಕ್
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  • ಯುಕೋ ಬ್ಯಾಂಕ್
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉದ್ಯೋಗ

IT Hiring: ಟಿಸಿಎಸ್‌ನಲ್ಲಿ ಫ್ರೆಶರ್‌ಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ? ಯಾವಾಗ ಕೊನೆಯ ದಿನ?

IT Hiring: 2023-24ರಲ್ಲಿ ಟಿಸಿಎಸ್‌ 40,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿತ್ತು. ಈ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ನೇಮಕ ಆಗಲಿದೆ.

VISTARANEWS.COM


on

tcs jobs IT hiring
Koo

ಹೊಸದಿಲ್ಲಿ: ಭಾರತದ ಅತಿದೊಡ್ಡ ಐಟಿ ಸೇವೆಗಳ (IT services) ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್ – TCS) ನೂತನ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು (IT Hiring) ಪ್ರಾರಂಭಿಸಿದೆ. ಏಪ್ರಿಲ್ 10ರವರೆಗೆ ಹೊಸ ಉದ್ಯೋಗಗಳಿಗಾಗಿ (Job Openings) ಅರ್ಜಿಗಳನ್ನು ಕರೆಯಲಾಗುತ್ತಿದೆ.

ಇದುವರೆಗಿನ ನೇಮಕಾತಿ ಸ್ಥಗಿತದಿಂದ ಸಂಕಷ್ಟದಲ್ಲಿರುವ ಎಂಜಿನಿಯರಿಂಗ್ ಪದವೀಧರರಿಗೆ ಇದು ಸಿಹಿ ಸುದ್ದಿಯಾಗಿದೆ. ಕಲೆದೆರಡು ವರ್ಷಗಳಲ್ಲಿ ವಿವಿಧ ದೊಡ್ಡ ಐಟಿ ಸಂಸ್ಥೆಗಳು ನೇಮಕಾತಿ ನಿಲ್ಲಿಸಿದ್ದವು.

TCS ಏಪ್ರಿಲ್ 26ರಂದು ಪರೀಕ್ಷೆಗಳನ್ನು ನಡೆಸಲಿದೆ. ಕಂಪನಿಯು 2024ರ BTech, BE, MCA, MSc ಮತ್ತು MS ಬ್ಯಾಚ್‌ನಿಂದ ಏಪ್ರಿಲ್ 10ರವರೆಗೆ ಉದ್ಯೋಗ ಅರ್ಜಿಗಳನ್ನು ಆಹ್ವಾನಿಸುತ್ತಿದೆ ಎಂದು TCS ವೆಬ್‌ಸೈಟ್‌ನ ಇತ್ತೀಚಿನ ಪ್ರಕಟಣೆ ತಿಳಿಸಿದೆ. TCS ಮೂರು ವಿಭಾಗಗಳಲ್ಲಿ- ನಿಂಜಾ, ಡಿಜಿಟಲ್ ಮತ್ತು ಪ್ರೈಮ್- ನೇಮಕಾತಿ ಮಾಡುತ್ತಿದೆ.

ನಿಂಜಾ ವರ್ಗವು ವರ್ಷಕ್ಕೆ 3.36 ಲಕ್ಷ ರೂಪಾಯಿಗಳ, ಡಿಜಿಟಲ್ ಮತ್ತು ಪ್ರೈಮ್ ವಿಭಾಗಗಳು ವಾರ್ಷಿಕವಾಗಿ ಕ್ರಮವಾಗಿ 7 ಲಕ್ಷ ಮತ್ತು 9-11.5 ಲಕ್ಷ ರೂ.ಗಳ ಪ್ಯಾಕೇಜ್‌ ಅನ್ನು ನೀಡಲಿವೆ. ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ಟಿಸಿಎಸ್‌ ಬಹಿರಂಗಪಡಿಸಿಲ್ಲ.

ಡಿಸೆಂಬರ್ 2023ರಂದೇ ಸಂಸ್ಥೆ ಹೊಸ ಉದ್ಯೋಗಗಳ ಸೂಚನೆ ನೀಡಿತ್ತು. “ನಾವು ಮುಂದಿನ ವರ್ಷಕ್ಕೆ ನಮ್ಮ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. TCSಗೆ ಸೇರಲು ಫ್ರೆಶರ್‌ಗಳಲ್ಲಿ ಪ್ರಚಂಡ ಉತ್ಸಾಹವನ್ನು ಕಾಣುತ್ತಿದೇವೆ” ಎಂದು TCS ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಹೇಳಿದ್ದರು.

“ಉದ್ಯೋಗಿಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸುವುದು ಕಷ್ಟ” ಎಂದು ಲಕ್ಕಾಡ್ ಹೇಳಿದ್ದರು. ದೊಡ್ಡ ಪ್ರಮಾಣದಲ್ಲಿ ನೇಮಕಾತಿ ಆಗುವ ಸಂಭವ ಇದೆ. 2023-24ರಲ್ಲಿ ಟಿಸಿಎಸ್‌ 40,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿತ್ತು.

ಏತನ್ಮಧ್ಯೆ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಶುಕ್ರವಾರ ಅಮೆಜಾನ್ ವೆಬ್ ಸೇವೆಗಳು (AWS) ಜನರೇಟಿವ್ AI (GenAI) ಅನ್ನು ಬಿಡುಗಡೆ ಪಾಲುದಾರನಾಗಿ ಹೊಂದಿದೆ. GenAIನಲ್ಲಿ 350,000ಕ್ಕೂ ಹೆಚ್ಚು ಉದ್ಯೋಗಿಗಳು ಮೂಲಭೂತ ಕೌಶಲ್ಯಗಳ ಬಗ್ಗೆ ತರಬೇತಿ ಪಡೆದಿದ್ದು, TCS ವಿಶ್ವದಲ್ಲೇ ಅತಿ ದೊಡ್ಡ AI ಕಾರ್ಯಪಡೆಗಳಲ್ಲಿ ಒಂದನ್ನು ನಿರ್ಮಿಸಲು ಸಿದ್ಧವಾಗಿದೆ.

TCS ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: TCS NextStep ಪೋರ್ಟಲ್‌ಗೆ ಲಾಗಿನ್ ಮಾಡಿ
ಹಂತ 2: ಡ್ರೈವ್‌ಗಾಗಿ ನೋಂದಾಯಿಸಿ ಮತ್ತು ಅರ್ಜಿ ಸಲ್ಲಿಸಿ
ಸನ್ನಿವೇಶ A: ನೀವು TCS NextStep ಪೋರ್ಟಲ್, ‘IT’ ವರ್ಗದ ಅಡಿಯಲ್ಲಿ ನೋಂದಾಯಿತ ಬಳಕೆದಾರರಾಗಿದ್ದರೆ, ದಯವಿಟ್ಟು ನಿಮ್ಮ TCS ಉಲ್ಲೇಖ ID (CT/ DT ಉಲ್ಲೇಖ ಸಂಖ್ಯೆ) ಒಂದಿಗೆ ಲಾಗಿನ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ. ಸಲ್ಲಿಸಿದ ನಂತರ, ದಯವಿಟ್ಟು Apply For Drive ಮೇಲೆ ಕ್ಲಿಕ್ ಮಾಡಿ.
ಸನ್ನಿವೇಶ B: ನೀವು ಹೊಸ ಬಳಕೆದಾರರಾಗಿದ್ದರೆ, Register Now ಕ್ಲಿಕ್ ಮಾಡಿ. “IT” ವರ್ಗವನ್ನು ಆಯ್ಕೆಮಾಡಿ ಮತ್ತು ನಿಮ್ಮ ವಿವರಗಳನ್ನು ಭರ್ತಿ ಮಾಡಿ. ನಿಮ್ಮ ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತು Apply For Drive ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: Bangalore Water Crisis: “ನೀರು ಕೊಡ್ತೀವಿ, ಪ್ಲೀಸ್‌ ಹೋಗ್ಬೇಡಿ…” ಐಟಿ ಸಂಸ್ಥೆಗಳಿಗೆ ರಾಜ್ಯ ಮನವಿ; ಗಾಳ ಹಾಕಿದ ಕೇರಳ

Continue Reading
Advertisement
Mukthar Ansari
ಪ್ರಮುಖ ಸುದ್ದಿ30 mins ago

Mukhtar Ansari : ನಿಜಕ್ಕೂ ಗ್ಯಾಂಗ್ ಸ್ಟರ್ ಅನ್ಸಾರಿ ಸತ್ತಿದ್ದು ಹೇಗೆ? ಬಂತು ಪೋಸ್ಟ್ ಮಾರ್ಟಮ್ ರಿಪೋರ್ಟ್!

Parliament Flashback
ಕರ್ನಾಟಕ35 mins ago

Parliament Flashback: ದೇಶದಲ್ಲಿ ಇಂದಿರಾ ಗಾಂಧಿ ವಿರೋಧಿ ಅಲೆ ಇದ್ದಾಗಲೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಜಯಭೇರಿ!

Satyendar Jain
ಪ್ರಮುಖ ಸುದ್ದಿ49 mins ago

Satyendar Jain : ಆಪ್​ಗೆ ಇನ್ನಷ್ಟು ಸಂಕಷ್ಟ; ಸತ್ಯೇಂದರ್​ ಜೈನ್ ವಿರುದ್ಧ ಸಿಬಿಐ ತನಿಖೆಗೆ ಆದೇಶ

Karnataka Weather
ಮಳೆ1 hour ago

Karnataka Weather : ಮುಂದಿನ 3 ದಿನ ಏರುತ್ತೆ ಟೆಂಪ್ರೇಚರು

Mussavir Hussain
ಪ್ರಮುಖ ಸುದ್ದಿ1 hour ago

Blast in Bangalore : ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಸುಳಿವು ಕೊಟ್ಟರೆ 10 ಲಕ್ಷ ರೂ. ಇನಾಮು; ಇಲ್ಲಿದೆ ಉಗ್ರರ ಪೋಟೊ ಸಮೇತ ವಿವರ

Provide infrastructure in polling booths says ZP Deputy Secretary Mallikarjuna thodalabagi
ಕೊಪ್ಪಳ1 hour ago

Koppala News: ಮತಗಟ್ಟೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿ; ಜಿ.ಪಂ‌ ಉಪಕಾರ್ಯದರ್ಶಿ

18th CII ITC Sustainable Award Ceremony
ಬೆಂಗಳೂರು1 hour ago

Bengaluru News: ಸಿಎಸ್‌ಆರ್‌ ಮಹತ್ವದ ಸಾಧನೆಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಪ್ರಶಂಸೆ

Car collided with electric pole The photographer died on the spot
ಕ್ರೈಂ1 hour ago

Road Accident: ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ; ಫೋಟೋಗ್ರಾಫರ್‌ ಸ್ಥಳದಲ್ಲೇ ಸಾವು

Ash Gourd Juice Benefits
ಆರೋಗ್ಯ1 hour ago

Ash Gourd Juice Benefits: ಬೂದುಕುಂಬಳಕಾಯಿ ಜ್ಯೂಸ್‌ ಕುಡಿಯುವುದರಿಂದ ಆಗುವ 10 ಪ್ರಯೋಜನಗಳಿವು

Lok Sabha Election 2024
ಕರ್ನಾಟಕ1 hour ago

Lok Sabha Election 2024: ಜೆಡಿಎಸ್ ಪಟ್ಟಿ ಬಿಡುಗಡೆ; ಮಂಡ್ಯದಿಂದ ಎಚ್‌ಡಿಕೆ, ಕೋಲಾರ, ಹಾಸನಕ್ಕೆ ಯಾರು?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ15 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ3 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ4 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌