My unschooled year | SSLC ನಂತರ ಒಂದು ವರ್ಷ ಬ್ರೇಕ್‌ ತಗೊಳ್ಳಿ! ಇದು ಸಾಗರಿಕಾ ಸ್ಫೂರ್ತಿಕತೆ! - Vistara News

ಪ್ರಮುಖ ಸುದ್ದಿ

My unschooled year | SSLC ನಂತರ ಒಂದು ವರ್ಷ ಬ್ರೇಕ್‌ ತಗೊಳ್ಳಿ! ಇದು ಸಾಗರಿಕಾ ಸ್ಫೂರ್ತಿಕತೆ!

ತಮಿಳುನಾಡಿನ ಹುಡುಗಿ ಸಾಗರಿಕಾ ಶಿವಕುಮಾರ್‌ ಎಸ್ಸೆಸ್ಸೆಲ್ಸಿ ಪರೀಕ್ಷೆ ನಂತರ ಒಂದು ವರ್ಷ ಬ್ರೇಕ್‌ ತೆಗೆದುಕೊಂಡಳು. ಆ ಬ್ರೇಕ್‌ ಅವಳ ಜೀವನ. ಚಿಂತನೆ ಎಲ್ಲವನ್ನೂ ಬದಲಾಯಿಸಿತು. ಓದಿ ಈಕೆಯ ಸ್ಫೂರ್ತಿಕತೆ.

VISTARANEWS.COM


on

sagarikka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
  • ರಾಧಿಕಾ ವಿಟ್ಲ

ಇದೊಂದು ಅಪರೂಪದ ಸ್ಫೂರ್ತಿಕತೆ. ೧೦ನೇ ತರಗತಿಯ ನಂತರ ಒಂದು ವರ್ಷದ ಬ್ರೇಕ್‌ ತೆಗೆದುಕೊಂಡು ತನಗೆ ಮಾಡಬೇಕಾದ್ದನ್ನು ಮಾಡಿ ಕಲಿತು, ಪುಸ್ತಕವೊಂದನ್ನೂ ಬರೆದು ಹಲವಾರು ಹೆತ್ತವರಿಗೆ, ಮಕ್ಕಳಿಗೆ ಸ್ಫೂರ್ತಿಯಾದ ಸಾಮಾನ್ಯ ಹುಡುಗಿಯ ಕತೆ.

೧೦ನೇ ತರಗತಿಯಾಯ್ತು. ಮುಂದೇನು? ಇದು ಎಲ್ಲರನ್ನೂ ಒಂದು ಹಂತದಲ್ಲಿ ಕಾಡುವ ಪ್ರಶ್ನೆ. ಶಿಕ್ಷಣದ ಒಂದು ಘಟ್ಟ ಮುಗಿದು ಮತ್ತೊಂದಕ್ಕೆ ಹೊರಳಲು ನಮ್ಮ ಆಸಕ್ತಿಗಳ ಅನ್ವಯ ನಿರ್ಧಾರ ಮಾಡಬೇಕಾದ ಸಮಯ. ಬಹಳ ಮಂದಿ ಇಲ್ಲಿಯೇ ಎಡವಿ ಬಿಡುತ್ತಾರೆ. ಇನ್ನೂ ಕೆಲವರು ದ್ವಂದ್ವದಲ್ಲಿ ಆರಿಸಿದ ವಿಷಯದಿಂದಾಗಿ ಪಾಸು ಮಾಡಿಕೊಳ್ಳಲಾಗದೆ, ಜೀವವನ್ನೂ ಬಲಿಕೊಡುತ್ತಾರೆ. ಇನ್ನೂ ಬಹುತೇಕರು, ತಮ್ಮ ನಿಜವಾದ ಆಸಕ್ತಿಗಳನ್ನು ಗುರುತಿಸಲು ಅಸಮರ್ಥರಾಗುವುದರಿಂದಲೋ, ಹೆತ್ತವರ, ಸುತ್ತಮುತ್ತಲ ಪರಿಸರ ಒತ್ತಡವೋ ಮಕ್ಕಳು ಮುಂದಿನ ಹಾದಿಯನ್ನು ಆಯ್ಕೆ ಮಾಡಿಕೊಂಡು ಮುಂದೊಂದು ದಿನ ನಾನು ತಪ್ಪು ಮಾಡಿಬಿಟ್ಟೆ ಎಂದು ಸಂಕಟ ಪಡುತ್ತಾರೆ.

sagarikka

ಆದರೆ, ಎಲ್ಲೋ ಸಾವಿರದಲ್ಲೋ, ಲಕ್ಷದಲ್ಲೋ ಒಬ್ಬರು ಸಾಗರಿಕಾಳಂತೆ ಯೋಚಿಸುತ್ತಾರೆ. ತನ್ನ ಯೋಚನೆಯನ್ನು ಹೆತ್ತವರ ಮುಂದಿಡುತ್ತಾರೆ. ಅದಕ್ಕೇ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ಸಿಕ್ಕಿದರೆ ಈಕೆಯಂತೆಯೇ ಆತ್ಮವಿಶ್ವಾಸಿ ಪ್ರಜೆಯಾಗಿ ರೂಪುಗೊಳ್ಳುತ್ತಾರೆ. ಯಶಸ್ಸಿನ ಹಾದಿಯಲ್ಲಿ ಧೈರ್ಯದಿಂದ ಮುನ್ನುಗ್ಗುತ್ತಾರೆ.

ತಮಿಳುನಾಡಿನ ಸಾಗರಿಕಾ ಶಿವಕುಮಾರ್‌ಗೂ ಕೂಡಾ ೨೦೧೬ರಲ್ಲಿ ೧೦ನೇ ತರಗತಿ ಮುಗಿಸಿದ ಮೇಲೆ ಎಲ್ಲ ಮಕ್ಕಳಂತೆ ಮುಂದೇನು ಎಂಬ ಪ್ರಶ್ನೆ ಕಾಡಿತ್ತು. ಆಕೆ ಹೇಳುತ್ತಾಳೆ, “ನಾನು ಸಣ್ಣವಳಿದ್ದಾಗಿಂದ ತರಗತಿಯಲ್ಲಿ ಕೂತು ಪಾಠ ಕೇಳಿದ್ದಕ್ಕಿಂತ ಹೆಚ್ಚು ಮೈದಾನದಲ್ಲಿ ಆಟವಾಡುತ್ತಾ, ಇತರ ಚಟುವಟಿಕೆಗಳಲ್ಲಿ ಸ್ಪರ್ಧೆಗಳಲ್ಲಿ ಭಾಗಿಯಾಗುತ್ತಾ ಕಳೆದಿದ್ದೇ ಹೆಚ್ಚು. ಹಾಗಾಗಿ ನಾನು ಸಾಧಾರಣ ಮಾರ್ಕ್ಸ್‌ ಪಡೆದೆ. ಈ ಸಂದರ್ಭ ನನಗೊಂದು ಬ್ರೇಕ್‌ ಬೇಕು ಎನಿಸಿತು. ಬೇರೆ ಕಲಿಯುವುದು ಬಹಳಷ್ಟಿದೆ ಅನಿಸಿತು. ನನ್ನ ಯೋಜನೆಗಳ ಬಗ್ಗೆ ನನ್ನ ಹೆತ್ತವರೊಂದಿಗೆ ಮಾತನಾಡಿದೆ. ಅವರು ಈ ಕುರಿತು ಮಾರ್ಗದರ್ಶನದೊಂದಿಗೆ ಪ್ರೋತ್ಸಾಹವನ್ನೂ ನೀಡಿದರು. ಅದರ ಫಲವೇ ಇದು” ಎನ್ನುತ್ತಾಳೆ ಆತ್ಮವಿಶ್ವಾಸದಿಂದ.

“ನನಗೆ ಬಹಳ ಸಾರಿ ಅನ್ನಿಸುತ್ತದೆ, ೧೦ನೇ ತರಗತಿಯ ನಂತರ ನಮ್ಮ ಶಿಕ್ಷಣ ವ್ಯವಸ್ಥೆ ನಮಗೆ ಬದುಕಿನ ನಿಜವಾದ ಸವಾಲುಗಳನ್ನು ಎದುರಿಸುವ ಶಿಕ್ಷಣ ನೀಡುವುದಕ್ಕಿಂತ ಹೆಚ್ಚು ಪ್ರಾಕ್ಟಿಕಲ್‌ ಅಲ್ಲದ ವಿಷಯಗಳಿಗೆ ಹೆಚ್ಚು ಗಮನ ನೀಡುತ್ತದೆ ಎಂದು. ನನಗೆ ಬದುಕಿಗೆ ಬೇಕಾದ ಬೇರೇನನ್ನೋ ಕಲಿಯಬೇಕಿದೆ ಅನಿಸಿ ತೆಗೆದುಕೊಂಡ ಈ ಬ್ರೇಕ್‌ ಅವಧಿಯಲ್ಲಿ ನನ್ನನ್ನು ನಾನು ಸಾಕಷ್ಟು ವಿಷಯಗಳಲ್ಲಿ ತೊಡಗಿಸಿಕೊಂಡೆ. ಮುಖ್ಯವಾಗಿ ದಿನವೂ ಎದ್ದು ಪೇಪರ್‌ ಓದೋದು, ಪುಸ್ತಕಗಳನ್ನು ಓದುವುದುದ, ಹೊಸ ಹೊಸ ಶಬ್ದಗಳು, ಅವುಗಳ ಬಳಕೆಯ ಕಲಿಕೆ… ಹೀಗೆ ನನ್ನ ಮೇಲೆ ಸ್ವಲ್ಪ ವರ್ಕ್‌ ಮಾಡಿದೆ. ನೂರಾರು ಮಂದಿಯನ್ನು ಭೇಟಿಯಾದೆ. ಕೆಲವೊಂದು ಸಮ್ಮೇಳನಗಳಲ್ಲಿ ಭಾಗಿಯಾದೆ, ಕಲಿಯಬೇಕೆನಿಸಿದ ಕೆಲವೊಂದಕ್ಕೆ ಸ್ವಲ್ಪ ಹೆಚ್ಚು ಸಮಯ ಹಾಕಿ ಕಲಿತೆ. ನನ್ನದೇ ವೆಬ್ಸೈಟ್‌ ಆರಂಭಿಸಿದೆ. ಹಲವಾರು ಜಾಗಗಳಲ್ಲಿ ಸುತ್ತಾಡಿದೆ. ೧೫ನೇ ವಯಸ್ಸಿನಲ್ಲಿ ನನ್ನದೇ ವಿಸಿಟಿಂಗ್‌ ಕಾರ್ಡ್‌ ಕೂಡಾ ಮಾಡಿಸುವಂತಾಯಿತು” ಎಂದಿದ್ದಾಳೆ.

ಇದನ್ನೂ ಓದಿ: Kargil Vijay Divas | ನಾನು ಶಕುಂತಲಾ ಅಜಿತ್‌ ಭಂಡಾರ್ಕರ್: ಸೈನಿಕನ ಪತ್ನಿ ಮತ್ತು ಸೈನಿಕರ ಅಮ್ಮ!

“ಮೋಟಾರು ಕಂಪನಿಗಳಿಂದ ಹಿಡಿದು ಆಸ್ಪತ್ರೆಗಳವರೆಗೆ ಹಲವೆಡೆ ಇಂಟರ್ನ್‌ ಆಗಿ ಕೆಲಸ ಮಾಡಿದೆ. ಪುಟ್ಟ ಮಕ್ಕಳ ನರ್ಸರಿ ಕ್ಲಾಸುಗಳಲ್ಲಿ ಪಾಠ ಮಾಡಿದೆ. ಇದರ ನಡುವೆ ಶಾಲೆಯ ವಿಷಯಗಳ ಹಿಡಿತ ತಪ್ಪದಂತೆ ಅಪ್ಪ ಅವುಗಳ ಬಗ್ಗೆಯೂ ಗಮನ ಹರಿಸುತ್ತಿದ್ದರು. ಒಟ್ಟಿನಲ್ಲಿ, ನೂರಾರು ಜನರ ಭೇಟಿ, ಹಲವು ಕ್ಷೇತ್ರಗಳಲ್ಲಿ ಕೆಲಸ, ಓದು, ಭಾಷಾ ಕಲಿಕೆ, ಕೋಡಿಂಗ್‌, ಬ್ಯಾಡ್ಮಿಂಟನ್‌ ಆಟ ಹೀಗೆ ಆಸಕ್ತಿಯಿರುವ ಎಲ್ಲದರಲ್ಲೂ ಕೈಯಾಡಿಸಿದೆ. ಇದು ನನ್ನ ಸರ್ವತೋಮುಖ ಅಭಿವೃದ್ಧಿಯಲ್ಲಿ ನಿಜಕ್ಕೂ ಪ್ರಮುಖ ಪಾತ್ರ ವಹಿಸಿತು. ಬದುಕಿಗೊಂದು ದಿಕ್ಕು ಸಿಕ್ಕಿತು” ಎನ್ನುತ್ತಾಳೆ.

“ಆ ಒಂದು ವರ್ಷದ ಅವಧಿಯಲ್ಲಿ ನಾನು ಎಲ್ಲ ಮಾದರಿಯ ಕೆಲಸವನ್ನೂ ಮಾಡಿದೆ. ಮಲ್ಟಿ ಲೆವೆಲ್‌ ಮಾರ್ಕೆಟಿಂಗ್‌ ಸಂಸ್ಥೆಯಲ್ಲೂ ಒಂದೆರಡು ವಾರ ಕೆಲಸ ಮಾಡಿ ವಸ್ತುಗಳನ್ನು ಮಾರಾಟ ಮಾಡಿದೆ. ಆಗ ನಾನು ಕಲಿತದ್ದು ಬಹಳ. ಬಹಳಷ್ಟು ಮಕ್ಕಳಿಗೆ ಇಂತಹ ಬ್ರೇಕ್‌ ಬೇಕಿದ್ದರೂ ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ. ಆದರೆ ನನಗದು ಸಿಕ್ಕಿದ್ದಕ್ಕೆ ಖುಷಿಯಿದೆ” ಎನ್ನುತ್ತಾಳೆ.

ಈ ಸಂದರ್ಭ ಹಲವೆಡೆ ಪ್ರವಾಸವನ್ನೂ ಮಾಡಿದ್ದು, ಮೌಂಟ್‌ ಕೈಲಾಶ್‌ಗೆ ಚಾರಣವನ್ನೂ ಮಾಡಿದ್ದಾಳೆ. ಈ ಕುರಿತು ತಾನೇ ಡಾಕ್ಯುಮೆಂಟರಿಯನ್ನೂ ಮಾಡಿದ್ದಾಳೆ ಈ ಸಾಗರಿಕಾ. ಈ ನಡುವೆ ೨೦೧೬ರಲ್ಲಿ ಹಿಂದು ಲಿಟರರಿ ಫೆಸ್ಟಿವಲ್‌ನಲ್ಲೂ ಭಾಗವಹಿಸಿದ್ದ ಈಕೆ, ಖ್ಯಾತ ಲೇಖಕ ಅಲೆಕ್ಸಾಂಡರ್‌ ಮೆಕ್‌ಕಾಲ್‌ ಸ್ಮಿತ್‌ ಅವರ ಭಾಷಣದಿಂದ ಸ್ಪೂರ್ತಿ ಪಡೆದು ಪ್ರತಿದಿನವೂ ಸ್ವಲ್ಪ ಹೊತ್ತು ಬರವಣಿಗೆಗೂ ಮೀಸಲಿಡಲು ಆರಂಭಿಸಿದಳು. ಇದರ ಫಲವೇ ʻಮೈ ಅನ್‌ಸ್ಕೂಲ್ಡ್‌ ಈಯರ್‌ʼ ಎಂಬ ಹೆಸರಿನ ಪುಸ್ತಕ.

“೨೦೦ ಪುಟಗಳಲ್ಲಿ ನನ್ನ ಒಂದು ವರ್ಷದ ಬ್ರೇಕ್‌ನಲ್ಲಿ ನನ್ನಲ್ಲಾದ ಬದಲಾವಣೆಯ ಅನುಭವವನ್ನು ಈ ಪುಸ್ತಕದಲ್ಲಿ ಬರೆದಿದ್ದೇನೆ. ಈವರೆಗೆ ಈ ಪುಸ್ತಕದ ಆರು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಇದು ಹಲವಾರು ಹೆತ್ತವರಿಗೂ, ನನ್ನಂತ ಮಕ್ಕಳಿಗೂ ಸ್ಪೂರ್ತಿಯಾಗಿರುವ, ಆಗುತ್ತಿರುವ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ ಎಂದು ಆಕೆ ಹೇಳಿದ್ದಾಳೆ.

ಈಕೆ ಹೇಳುವಂತೆ ಈಕೆಯ ಈ ಎಲ್ಲ ಸಾಧನೆಯ ಹಿಂದಿರುವ ಶಕ್ತಿ ಈಕೆಯ ಹೆತ್ತವರು. “ನನ್ನ ಹೆತ್ತವರು ನನ್ನ ಮೇಲೆ ಯಾವುದನ್ನೂ ಹೇರಲಿಲ್ಲ. ನನ್ನ ಇಷ್ಟವನ್ನು ನಾನು ಮಾಡಲು ಸಂಪೂರ್ಣ ಮನಸ್ಸಿನಿಂದ ಒಪ್ಪಿಗೆ ಕೊಟ್ಟರು. ಕಲಿಕೆಯ ಸಮಯದಲ್ಲಿ ಕೇವಲ ಅಂಕಗಳು ಮಾತ್ರ ಬೇಕು ಎಂದು ಅಂಕಗಳ ಹಿಂದೆ ಬಿದ್ದು ನನ್ನ ಮೇಲೆ ಒತ್ತಡ ಯಾವತ್ತೂ ತಂದಿಲ್ಲ. ಅವರಿಗೆ ನನ್ನ ಸರ್ವತೋಮುಖ ಅಭಿವೃದ್ಧಿ ಮುಖ್ಯ. ನನ್ನ ಈ ನಿಲುವಿನಿಂದ ಸಂಬಂಧಿಕರು, ಹಿತೈಷಿಗಳು, ಗೆಳೆಯರಿಂದ ಅವರು ಸಾಕಷ್ಟು ಮಾತುಗಳನ್ನು ಕೇಳುವಂತಾಗಿದೆ. ಬಹುತೇಕರು ನನ್ನ ಹೆತ್ತವರು ನನ್ನನ್ನು ಹಾಳು ಮಾಡಿದರು ಎಂದು ನಗೆಯಾಡಿದರು. ಆದರೂ ಇವೆಲ್ಲ ಮಾತುಗಳಿಗೆ ಕಿವಿಕೊಡದೆ, ನೋವಾದರೂ ಸಹಿಸಿಕೊಂಡು ನನ್ನ ಆಸಕ್ತಿಗೆ ಬೆಂಬಲವಾಗಿ ನಿಂತರು. ಅವರಿಗೆ ಈಗ ನಾನು ಆ ಇಡೀ ಒಂದು ವರ್ಷವನ್ನು ಅದ್ಭುತವಾಗಿ ಬಳಸಿಕೊಂಡದ್ದರ ಬಗ್ಗೆ ತೃಪ್ತಿಯಿದೆ ಎನ್ನುತ್ತಾಳೆ.

“೧೦ನೇ ತರಗತಿಯಲ್ಲಿ ಸಾಧಾರಣ ಅಂಕ ತೆಗೆದ ನಾನು ಆ ಒಂದು ವರ್ಷದ ಬ್ರೇಕ್‌ನ ನಂತರ ಮತ್ತೆ ಕಾಲೇಜು ಸೇರಿದೆ. ನನ್ನ ಜೊತೆ ಓದಿದ ಮಕ್ಕಳೆಲ್ಲ ಮುಂದಿನ ತರಗತಿಗೆ ಹೋಗಿದ್ದರು, ಪ್ರಸಿದ್ಧ ಕೋರ್ಸುಗಳನ್ನು ಆಯ್ಕೆ ಮಾಡಿದ್ದರು. ನಾನು ಮುಂದೆ ನನ್ನ ಆಯ್ಕೆಯ ವಿಷಯವಾದ ಬಿಬಿಎ ಕಡೆಗೆ ಹೊರಳಿದೆ. ಕಾಲೇಜಿನಲ್ಲಿ ಟಾಪರ್‌ ಆದೆ” ಎನ್ನುತ್ತಾಳೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ | ಆ ಕನ್ನಡಿಗ ನ್ಯಾಯಮೂರ್ತಿ ಸಿಡಿದರೆ ಕೋರ್ಟು ಕಟ್ಟಡವೇ ನಡುಗುತ್ತಿತ್ತು!

“ಈವರೆಗೆ ಹಲವು ಸಂಸ್ಥೆಗಳಲ್ಲಿ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಷಣಗಳನ್ನು ಮಾಡಿದ್ದೇನೆ. ಹಲವು ಶಾಲೆ ಕಾಲೇಜುಗಳ ಕಾರ್ಯಾಗಾರಗಳಲ್ಲಿ, ಸಮಾವೇಶಗಳಲ್ಲಿ ನನ್ನ ಪ್ರಬಂಧಗಳನ್ನು ಮಂಡಿಸಿದ್ದೇನೆ. ಸುಮಾರು ೨೦,೦೦೦ ಮಂದಿ ಸೇರಿದ್ದ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದೇನೆ. ಮಕ್ಕಳಿಗೆ ಜಂಕ್‌ ಫುಡ್‌ ತಿನ್ನಿಸುವುದರಿಂದಾಗುವ ಹಾನಿಯ ಬಗೆಗೆ ಡಾಕ್ಯುಮೆಂಟರಿಯನ್ನೂ ಮಾಡಿದ್ದೇನೆ. ಸದ್ಯ ಇನ್ನೊಂದು ಪುಸ್ತಕ ಬರೆಯುವ ಯೋಚನೆಯಲ್ಲಿದ್ದೇನೆ. ಮಕ್ಕಳಿಗೆ, ಹದಿಹರೆಯದ ಮಂದಿಗೆ, ಮುಖ್ಯವಾಗಿ ಹೆತ್ತವರಿಗೆ ಮಾರ್ಗದರ್ಶಿಯಾಗುವ, ಸ್ಪೂರ್ತಿಯಾಗುವ ಪುಸ್ತಕದ ನಿಟ್ಟಿನಲ್ಲಿ ನನ್ನ ಕೆಲಸ ಸಾಗಿದೆ. ಮುಂದೊಂದು ದಿನ ನಾನೊಬ್ಬ ಯಶಸ್ವೀ ಬ್ಯುಸಿನೆಸ್‌ ವುಮನ್‌ ಆಗಿ ಹಲವರಿಗೆ ಸ್ಪೂರ್ತಿಯಾಗುವ ಗುರಿಯನ್ನು ಹೊಂದಿದ್ದೇನೆ” ಎಂದು ತನ್ನ ಆಶಾವಾದವನ್ನು ವ್ಯಕ್ತಪಡಿಸುತ್ತಾರೆ ಈ ದಿಟ್ಟೆ.

“ಸೋಲಿನಿಂದ ಅಧೀರರಾಗಬಾರದು. ಅದನ್ನೇ ಮೆಟ್ಟಿಲಾಗಿ ಬಳಸಬೇಕು. ಜನರು ನಮ್ಮ ಮೇಲೆ ಟೊಮೇಟೋ ಬಿಸಾಕಿದರೆ, ನಾವು ಕೆಚಪ್‌ ಮಾಡಿಬಿಡಬೇಕು, ಅಷ್ಟೇ. ಇದು ನಾನು ಜೀವನದಲ್ಲಿ ಕಲಿತ ಪಾಠ” ಎಂದು ಹೇಳಿ, ಸ್ವತಃ ಅದನ್ನು ಸಾಧಿಸಿ ತೋರಿಸಿರುವ ಈ ಸಾಗರಿಕಾ ಸದ್ಯ ೨೨ನೇ ವಯಸ್ಸಿನಲ್ಲಿದ್ದು, ತಮಿಳುನಾಡಿನ ತ್ರಿಚಿಯಲ್ಲಿ ಡೇಟಾ ಸೈನ್ಸ್‌ ಓದುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

AC Blast : ಕಲ್ಯಾಣ್​ ಜ್ಯುವೆಲರಿಯಲ್ಲಿ ಭಾರಿ ಅವಘಡ; ಏರ್​ ಕಂಡೀಷನರ್​ ಬ್ಲಾಸ್ಟ್​ ಆಗಿ ಮೂವರಿಗೆ ಗಾಯ

AC Blast: ಜ್ಯುವೆಲ್ಲರಿಯಲ್ಲಿರುವ ಎಸಿ ವ್ಯವಸ್ಥೆಗೆ ಗ್ಯಾಸ್ ಮರುಪೂರಣ ಮಾಡಲು ಹೋದಾಗ ಘಟನೆ ಸಂಭವಿಸಿದೆ. ಈ ವೇಳೆ ಶಾರ್ಟ್​ ಸರ್ಕೀಟ್​ ಉಂಟಾಗಿದ್ದು ಏಕಾಏಕಿ ಬ್ಲಾಸ್ಟ್ ಎಸಿ ಬ್ಲಾಸ್ಟ್​ ಆಗಿ ಕಿಟಕಿ ಗಾಜುಗಳು ಎಲ್ಲೆಡೆ ಸಿಡಿದು ಬಿದ್ದಿವೆ. ಈ ಕೆಲಸಕ್ಕಾಗಿ ಬಂದಿದ್ದ ಮೂವರು ಕಾರ್ಮಿಕರಿಗೆ ಗಾಯವಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭಿರವಾಗಿ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

AC Blast
Koo

ಬಳ್ಳಾರಿ: ಶಾರ್ಟ್ ಸರ್ಕ್ಯೂಟ್​ನಿಂದಾಗಿ ಏರ್​ ಕಂಡೀಷನರ್​ ಯಂತ್ರ (AC Blast) ಸ್ಫೋಟಗೊಂಡು ಮೂವರು ಗಾಯಗೊಂಡ ಘಟನೆ ನಡಿದೆ. ಬಳ್ಳಾರಿಯ ಕಲ್ಯಾಣ್ ಜುವೆಲರ್ಸ್ ನಲ್ಲಿ ಘಟನೆ ನಡೆದಿದೆ. ಬಳ್ಳಾರಿಯ ತೇರು ಬೀದಿಯ ರಸ್ತೆಯಲ್ಲಿ ಇರುವ ಕಲ್ಯಾಣ ಜ್ಯುವೆಲರ್ಸ್​ನಲ್ಲಿ ಶಾ್ಟ್​ ಸರ್ಕೀಟ್​ನಿಂದಾಗಿ ಎಸಿ ಸ್ಫೋಟಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜ್ಯುವೆಲ್ಲರಿಯಲ್ಲಿರುವ ಎಸಿ ವ್ಯವಸ್ಥೆಗೆ ಗ್ಯಾಸ್ ಮರುಪೂರಣ ಮಾಡಲು ಹೋದಾಗ ಘಟನೆ ಸಂಭವಿಸಿದೆ. ಈ ವೇಳೆ ಶಾರ್ಟ್​ ಸರ್ಕೀಟ್​ ಉಂಟಾಗಿದ್ದು ಏಕಾಏಕಿ ಬ್ಲಾಸ್ಟ್ ಎಸಿ ಬ್ಲಾಸ್ಟ್​ ಆಗಿ ಕಿಟಕಿ ಗಾಜುಗಳು ಎಲ್ಲೆಡೆ ಸಿಡಿದು ಬಿದ್ದಿವೆ. ಈ ಕೆಲಸಕ್ಕಾಗಿ ಬಂದಿದ್ದ ಮೂವರು ಕಾರ್ಮಿಕರಿಗೆ ಗಾಯವಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭಿರವಾಗಿ ಎಂದು ಮೂಲಗಳು ತಿಳಿಸಿವೆ.

ಗಾಯಗಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಎಸಿ ಬ್ಲಾಸ್ಟ್ ಆದ ಹಿನ್ನೆಲೆಯಲ್ಲಿ ಶಾಪ್ ನಲ್ಲಿ ದಟ್ಟ ಹೊಗೆ ಆವರಿಸಿತ್ತು.

ಪೊಲೀಸ್‌ ಸ್ಟೇಷನ್‌ನಲ್ಲೇ ಇನ್‌ಸ್ಪೆಕ್ಟರ್‌ ಕಪಾಳಕ್ಕೆ ಹೊಡೆದ ಮಹಿಳೆ

ಬೆಂಗಳೂರು: ಪೊಲೀಸ್ ಠಾಣಾ ಆವರಣದಲ್ಲೇ ಮಹಿಳೆಯೊಬ್ಬಳು ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ (Assault Case) ಮಾಡಿದ್ದಾಳೆ. ಸೈಟು ವಿಚಾರಕ್ಕೆ (Site Dispute) ಎರಡು ಗುಂಪುಗಳ ಮಧ್ಯೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಜ್ಞಾನಭಾರತಿ ಠಾಣೆಗೆ ಬಂದಿದ್ದರು. ಈ ವೇಳೆ ಎರಡು ಗುಂಪುಗಳ ಸದಸ್ಯರು ಮಾತಿಗೆ ಮಾತು ಬೆಳೆಸಿ ಕಿತ್ತಾಡಲು ಮುಂದಾಗಿದ್ದರು. ಹೀಗಾಗಿ ಮಧ್ಯಪ್ರವೇಶಿಸಿ ಗಲಾಟೆ ಮಾಡದಂತೆ ಎಚ್ಚರಿಸಲು ಹೋದ ಇನ್‌ಸ್ಪೆಕ್ಟರ್‌ಗೆ ಮಹಿಳೆಯೊಬ್ಬಳು ಕಪಾಳಕ್ಕೆ ಹೊಡೆದಿದ್ದಾಳೆ.

ಇದನ್ನೂ ಓದಿ: Murder Case : ನಡುರಸ್ತೆಯಲ್ಲೆ ಪತ್ನಿಗೆ ಚಾಕು ಇರಿದು ಕೊಂದ ಪತಿ

ನಿನ್ನೆ ಬುಧವಾರ ಸಂಜೆ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್‌ ರವಿ ಅವರಿಗೆ ಫೌಜೀಯಾ ಎಂಬಾಕೆ ಹಲ್ಲೆ ನಡೆಸಿದ್ದಾಳೆ. ಫೌಜೀಯಾ ಹಾಗೂ ಇನ್ನೊಂದು ಗುಂಪು ಸೈಟು ವಿಚಾರಕ್ಕೆ ಜ್ಞಾನಭಾರತಿ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಠಾಣೆ ಆವರಣದಲ್ಲಿ ಎರಡು ಗುಂಪುಗಳು ಏರು ಧ್ವನಿಯಲ್ಲಿ ಕೂಗಾಡುತ್ತಾ ಮಾತನಾಡುತ್ತಿದ್ದರು.

ಕರ್ತವ್ಯದಲ್ಲಿದ್ದ ಇನ್‌ಸ್ಪೆಕ್ಟರ್‌ ರವಿ ಎರಡು ಗುಂಪುಗಳಿಗೆ ಗಲಾಟೆ ಮಾಡದಂತೆ ವಾರ್ನಿಂಗ್‌ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಫೌಜೀಯ ಏಕಾಏಕಿ ಇನ್‌ಸ್ಪೆಕ್ಟರ್‌ ರವಿ ಅವರ ಕಪಾಳಕ್ಕೆ ಹೊಡೆದಿದ್ದಾಳೆ. ಮಾನವ ಹಕ್ಕುಗಳ ಸಂಘಟನೆಯಲ್ಲಿರುವ ಫೌಜೀಯಾ ಹಾಗೂ ಮತ್ತಿಬ್ಬರು ಮಹಿಳೆಯರ ಮೇಲೆ ಎಫ್‌ಐಆರ್ ದಾಖಲಾಗಿದೆ. ರಾತ್ರಿಯೇ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಸದ್ಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Continue Reading

ಪ್ರಮುಖ ಸುದ್ದಿ

Tax Returns: ಪಾಕ್‌ ಜನರಿಗೆ ಬೆಲೆಯೇರಿಕೆ ಬೆನ್ನಲ್ಲೇ ತೆರಿಗೆ ಹೊರೆ; ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ನೋಡಿ!

Tax Returns: ಹಣದುಬ್ಬರದಿಂದ ಪಾಕಿಸ್ತಾನವು ತತ್ತರಿಸಿ ಹೋಗಿದೆ. ಒಂದೆಡೆ, ಪಾಕಿಸ್ತಾನಕ್ಕೆ ಬೇರೆ ದೇಶಗಳಿಂದ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಹಣಕಾಸು ನೆರವು ಸಿಗುತ್ತಿಲ್ಲ. ಇನ್ನೊಂದೆಡೆ, ಹಣದುಬ್ಬರ ನಿಯಂತ್ರಣ ಮಾಡಲು ಆಗುತ್ತಿಲ್ಲ. ಹಾಗಾಗಿ, ಪಾಕಿಸ್ತಾನದ ನಾಗರಿಕರು ಒಂದು ಕೆ.ಜಿ ಗೋಧಿ ಹಿಟ್ಟಿಗೆ 800 ರೂ. ಪಾವತಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಹಣದುಬ್ಬರ ಏರಿಕೆಯು ಅವರ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಇದರ ಬೆನ್ನಲ್ಲೇ, ಸರ್ಕಾರವು ಜನರಿಗೆ ತೆರಿಗೆ ಎಂಬ ಗುರಾಣಿ ಬಳಸಲು ಮುಂದಾಗಿದೆ.

VISTARANEWS.COM


on

Tax Returns
Koo

ಇಸ್ಲಾಮಾಬಾದ್:‌ ಉಗ್ರರ ಪೋಷಣೆ, ಹಣಕಾಸು ನೆರವು, ಅಸಮರ್ಥ ನಾಯಕತ್ವ, ಕೊರೊನಾ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದ ಪಾಕಿಸ್ತಾನ (Pakistan) ದಿವಾಳಿಯಾಗಿದೆ. ಇದೇ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಎದುರು ಹಣಕ್ಕಾಗಿ ಭಿಕ್ಷಾ ಪಾತ್ರೆ ಹಿಡಿದು ನಿಂತಿದೆ. ಸಾಲ ಪಡೆಯಲು ಹೆಣಗಾಡುತ್ತಿದೆ. ಹಣದುಬ್ಬರದ ಏರಿಕೆಯಿಂದಾಗಿ ಜನರ ಜೀವನವೂ ಸಂಕಷ್ಟಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ, ದೇಶದ ನಾಗರಿಕರ ವಿರುದ್ಧ ಪಾಕಿಸ್ತಾನವು ತೆರಿಗೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು, ಆದಾಯ ತೆರಿಗೆ ರಿಟರ್ನ್ಸ್‌ (Tax Returns) ಸಲ್ಲಿಸದ 5 ಲಕ್ಷ ಜನರ ಸಿಮ್‌ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲು ತೀರ್ಮಾನಿಸಿದೆ.

ಪಾಕಿಸ್ತಾನದ ಖಜಾನೆಯಲ್ಲಿ ಹಣವಿಲ್ಲ. ಇದರಿಂದ ಸುಗಮವಾಗಿ ಆಡಳಿತ ನಡೆಸುವುದು ಬಿಡಿ ನೌಕರರಿಗೆ ಸಂಬಳ ಕೊಡಲೂ ಆಗುತ್ತಿಲ್ಲ. ಹಾಗಾಗಿ, ಜನರಿಂದ ತೆರಿಗೆ ಸಂಗ್ರಹಿಸಲು ಪಾಕಿಸ್ತಾನವು ಮುಂದಾಗಿದೆ. ಇದರ ಭಾಗವಾಗಿಯೇ, 2023ರಲ್ಲಿ ಐಟಿ ರಿಟರ್ನ್ಸ್‌ ಸಲ್ಲಿಸದ 5,06,671 ಜನರ ಸಿಮ್‌ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲು ಪಾಕಿಸ್ತಾನದ ಫೆಡರಲ್‌ ಬೋರ್ಡ್‌ ಆಫ್‌ ರೆವೆನ್ಯೂ (FBR) ನಿರ್ಧರಿಸಿದೆ. ಅವರು ಐಟಿ ರಿಟರ್ನ್ಸ್‌ ಸಲ್ಲಿಸಿದ ಬಳಿಕವೇ ಸಿಮ್‌ಕಾರ್ಡ್‌ಗಳನ್ನು ಸಕ್ರಿಯಗೊಳಿಸಲಾಗುವುದು ಎಂದು ಕೂಡ ತಿಳಿಸಿದೆ.

ಸಿಮ್‌ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುವ ಕುರಿತು ಪಾಕಿಸ್ತಾನದ ಟೆಲಿಕಮ್ಯುನಿಕೇಷನ್‌ ಅಥಾರಿಟಿಗೆ (PTA) ನಿರ್ದೇಶನ ನೀಡಲಾಗಿದೆ. ಸಿಮ್‌ ಕಾರ್ಡ್‌ ಬಂದ್‌ ಮಾಡಿರುವ ಕುರಿತು ಮೇ 15ರೊಳಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದಲ್ಲಿ ತೆರಿಗೆ ಪಾವತಿಸದ ಸುಮಾರು 24 ಲಕ್ಷ ತೆರಿಗೆದಾರರನ್ನು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಆರಂಭಿಕ ಹಂತದಲ್ಲಿ 5 ಲಕ್ಷ ತೆರಿಗೆದಾರರ ಸಿಮ್‌ ಕಾರ್ಡ್‌ ನಿಷ್ಕ್ರಿಯಗೊಳಿಸಲು ತೀರ್ಮಾನಿಸಲಾಗಿದೆ.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ

ಪಾಕಿಸ್ತಾನದಲ್ಲಿ ಹಣದುಬ್ಬರದ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯು ಗಗಣಕ್ಕೇರಿದೆ. ಒಂದು ಲೀಟರ್‌ ಹಾಲಿಗೆ 212 ರೂ., ಕೆ.ಜಿ ಅಕ್ಕಿಗೆ 330 ರೂ., ಒಂದು ಕೆ.ಜಿ ಸೇಬಿಗೆ 300 ರೂ., ಒಂದು ಕೆ.ಜಿ ಟೊಮ್ಯಾಟೊಗೆ 125 ರೂ., ಒಂದು ಕೆ.ಜಿ ಈರುಳ್ಳಿ 125 ರೂ., ಒಂದು ಲೀಟರ್‌ ಪೆಟ್ರೋಲ್‌ಗೆ 290 ರೂ. ಇದೆ. ದಿನೇದಿನೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇರುವುದು ಪಾಕಿಸ್ತಾನದ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ ನಂತರದ ದುಸ್ಥಿತಿ ಹೀಗೆಯೇ ಮುಂದುವರಿದಿರುವುದು ಅವರನ್ನು ಆತಂಕಕ್ಕೆ ದೂಡಿದೆ.

ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಲು ಹೆಣಗಾಡುತ್ತಿದೆ. ಈಗಾಗಲೇ ಐಎಂಎಫ್‌ 1.10 ಶತಕೋಟಿ ಡಾಲರ್‌ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಮುಂದಿನ ಮೂರು ವರ್ಷಗಳವರೆಗೆ 6 ಶತಕೋಟಿ ಡಾಲರ್‌ ಸಾಲ ನೀಡಿ ಎಂಬುದಾಗಿ ಪಾಕಿಸ್ತಾನ ಮನವಿ ಮಾಡುತ್ತಿದೆ. ಆದರೆ, ಪಾಕ್‌ನಲ್ಲಿ ದಿನೇದಿನೆ ಹಣದುಬ್ಬರದ ಏರಿಕೆಯಾಗುತ್ತಿರುವ ಕಾರಣ ಸಾಲ ನೀಡಲು ಐಎಂಎಫ್‌ ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Narendra Modi:”ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ…ಅಲ್ಲಿ ಪಾಕಿಸ್ತಾನ ಅಳುತ್ತಾ ಪ್ರಾರ್ಥಿಸುತ್ತಿದೆ”-ಮೋದಿ ಅಟ್ಯಾಕ್‌

Continue Reading

ಪ್ರಮುಖ ಸುದ್ದಿ

M S Dhoni : ಧೋನಿಯನ್ನು ರನ್​ಔಟ್ ಮಾಡಿದ ಜಿತೇಶ್​ ಶರ್ಮಾ ನಿಂದಿಸಿದ ಅಭಿಮಾನಿಗಳು!

M S Dhoni: ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ (ಮೇ 1) ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ. ಈ ಋತುವಿನಲ್ಲಿ ಪಂಜಾಟ್​​ನ ನಾಲ್ಕನೇ ಗೆಲುವಿನ ವೇಳೆ ಜಿತೇಶ್ ಶರ್ಮಾಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಆದಾಗ್ಯೂ, ಸಿಎಸ್​ಕೆ ಬ್ಯಾಟಿಂಗ್ ಸಮಯದಲ್ಲಿ ಧೋನಿಯನ್ನು ರನ್ ಔಟ್ ಮಾಡಿದ್ದರು. ಇದು ಧೋನಿಯ ಅಭಿಮಾನಿಗಳಿಗೆ ಕೋಪ ತರಿಸಿತ್ತು.

VISTARANEWS.COM


on

M S Dhoni
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯದ ನಂತರ ಪಂಜಾಬ್ ಕಿಂಗ್ಸ್ (PBKS) ವಿಕೆಟ್ ಕೀಪರ್ ಬ್ಯಾಟರ್​​ ಜಿತೇಶ್ ಶರ್ಮಾ ಸೋಶಿಯಲ್ ಮೀಡಿಯಾಗಳ ಮೂಲಕ ಬೈಗುಳಗಳನ್ನು ಕೇಳಬೇಕಾಯಿತು. ಅದಕ್ಕೆ ಕಾರಣ ಅವರು ಮಹೇಂದ್ರ ಸಿಂಗ್ ಧೋನಿಯನ್ನು (MS Dhoni) ರನ್​ಔಟ್ ಮಾಡಿರುವುದು. ಜತೇಶ್​ ಅವರ ಇನ್​ಸ್ಟಾಗ್ರಾಮ್​ ಖಾತೆ ಮೂಲಕ ಹಲವಾರು ನಿಂದನಾತ್ಮಕ ಕಾಮೆಂಟ್​ಗಳನ್ನು ಪೋಸ್ಟ್ ಮಾಡಿದ್ದಾರೆ.

ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ (ಮೇ 1) ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ. ಈ ಋತುವಿನಲ್ಲಿ ಪಂಜಾಟ್​​ನ ನಾಲ್ಕನೇ ಗೆಲುವಿನ ವೇಳೆ ಜಿತೇಶ್ ಶರ್ಮಾಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಆದಾಗ್ಯೂ, ಸಿಎಸ್​ಕೆ ಬ್ಯಾಟಿಂಗ್ ಸಮಯದಲ್ಲಿ ಧೋನಿಯನ್ನು ರನ್ ಔಟ್ ಮಾಡಿದ್ದರು. ಇದು ಧೋನಿಯ ಅಭಿಮಾನಿಗಳಿಗೆ ಕೋಪ ತರಿಸಿತ್ತು.

ಜಿತೇಶ್ ಶರ್ಮಾಗೆ ಧೋನಿ ಅಭಿಮಾನಿಗಳಿಂದ ಟಾರ್ಗೆಟ್

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ಎಂಎಸ್ ಧೋನಿ ತಮ್ಮ ವಿಕೆಟ್ ಕಳೆದುಕೊಳ್ಳದ ಗಮನಾರ್ಹ ಸಾಧನೆಯನ್ನು ಪಂಜಾಬ್ ವಿರುದ್ಧ ಕಳೆದುಕೊಂಡರು. ಚೆಂಡು ಥರ್ಡ್​ ಮ್ಯಾನ್​​ ಕಡೆಗೆ ಹೋದ ನಂತರ ಧೋನಿ ಅಪಾಯಕಾರಿ ಎರಡನೇ ರನ್ ಗಳಿಸಲು ಪ್ರಯತ್ನಿಸಿದರು. ಹರ್ಷಲ್ ಪಟೇಲ್ ಆರಂಭದಲ್ಲಿ ತಪ್ಪಾಗಿ ಫೀಲ್ಡಿಂಗ್ ಮಾಡಿದರು. ಆದರೆ ಬೇಗನೆ ಚೇತರಿಸಿಕೊಂಡರು ಮತ್ತು ಚೆಂಡನ್ನು ಬ್ಯಾಟ್ಸ್ ಮನ್ ನ ತುದಿಗೆ ಎಸೆದರು. ಚೆನ್ನೈ ವಿಕೆಟ್ ಕೀಪರ್ ಧೋನಿ ಕ್ರೀಸ್​ ತಲುಪುವ ಮೊದಲೇ ಜಿತೇಶ್​ ಬೇಲ್ಸ್ ಎಗರಿಸಿದರು. ಸಿಎಸ್​ಕೆ ಮಾಜಿ ನಾಯಕ 11 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 14 ರನ್ ಗಳಿಸಿ ಔಟಾದರು. ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡವು 20 ಓವರ್ ಗಳಲ್ಲಿ 162 ರನ್ ಗಳಿಸಲು ಮಾತ್ರ ಯಶಸ್ವಿಯಾಯಿತು.

ಧೋನಿ ರನೌಟ್ ಅವರ ನಿಷ್ಠಾವಂತ ಅಭಿಮಾನಿಗಳಲ್ಲಿ ನಿರಾಶೆಯನ್ನು ಹುಟ್ಟುಹಾಕಿತು. ಕೆಲವರು ಹತಾಶೆಯನ್ನು ವ್ಯಕ್ತಪಡಿಸಿದರೆ, ಇತರರು ಜಿತೇಶ್ ಶರ್ಮಾ ಅವರ ಪಾತ್ರಕ್ಕಾಗಿ ಟ್ರೋಲ್ ಮಾಡಿದರು. ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಧೋನಿಯನ್ನು ಔಟ್ ಮಾಡುವುದನ್ನು ನೋಡಿದ ಅಭಿಮಾನಿಗಳು ನಾನಾ ರೀತಿ ಪ್ರತಿಕ್ರಿಯಿಸಿದರು.

“ನೀವು ವಿಶ್ವಕಪ್​ಗೆ ಆಯ್ಕೆಯಾಗದಿರುವುದು ಒಳ್ಳೆಯದು, ನೀವು ತಲಾ ಅವರನ್ನು ರನ್ ಔಟ್ ಮಾಡಿದ್ದೀರಿ, ಒಂದು ರನ್ ಏನು ವ್ಯತ್ಯಾಸವನ್ನುಂಟು ಮಾಡುತ್ತದೆ?” ಎಂದು ಬಳಕೆದಾರರೊಬ್ಬರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: KL Rahul : ವಿಶ್ವ ಕಪ್​ ತಂಡದಲ್ಲಿ ರಾಹುಲ್​ಗೆ ಸ್ಥಾನ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಆಯ್ಕೆಗಾರ ಅಜಿತ್ ಅಗರ್ಕರ್​​

“ಗೆಳೆಯ, ಜನರು ಅವನಿಗಾಗಿ ಪಂದ್ಯಗಳನ್ನು ನೋಡುತ್ತಾರೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ನಾವು ಎಷ್ಟು ಕೆಟ್ಟದಾಗಿ ಭಾವಿಸಬೇಕು, ನೀವು ಅವನನ್ನು ರನ್ ಔಟ್ ಮಾಡಿದ್ದೀರಿ. ಇದಲ್ಲದೆ, ಅವನ ಕಾಲಿಗೆ ಗಾಯವಾಗಿದೆ. ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ, ಗೆಳೆಯ” ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

163 ರನ್​ಗಳ ಗುರಿ ಬೆನ್ನತ್ತಿದ ಸ್ಯಾಮ್ ಕರ್ರನ್ ಪಡೆ 17.5 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಜಾನಿ ಬೈರ್​ಸ್ಟೋವ್​ 30 ಎಸೆತಗಳಲ್ಲಿ 46 ರನ್ ಗಳಿಸಿದರೆ, ರಿಲೀ ರೊಸ್ಸೌ 23 ಎಸೆತಗಳಲ್ಲಿ 43 ರನ್ ಗಳಿಸಿದರು. ಈ ಗೆಲುವಿನೊಂದಿಗೆ ಪಿಬಿಕೆಎಸ್ ಎಂಟು ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​​ನಲ್ಲಿ ಏಳನೇ ಸ್ಥಾನಕ್ಕೆ ಏರಿದರೆ, ಸಿಎಸ್ಕೆ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ನಾವು ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ: ಸ್ಯಾಮ್ ಕರ್ರನ್


ಪಿಬಿಕೆಎಸ್ ಸ್ಟ್ಯಾಂಡ್-ಇನ್ ನಾಯಕ ಸ್ಯಾಮ್ ಕರ್ರನ್ ಚೆನ್ನೈನ ಗೆಲುವಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಐಪಿಎಲ್ 2024 ರಲ್ಲಿ ಪ್ಲೇಆಫ್ ಸ್ಥಾನ ಪಡೆಯಲು ತಂಡವು ಉಳಿದ ಎಲ್ಲಾ ಪಂದ್ಯಗಳಲ್ಲಿ ಗೆಲುವುಗಳನ್ನು ಪಡೆಯಲು ಬಯಸುತ್ತದೆ ಎಂದು ಅವರು ಒತ್ತಿ ಹೇಳಿದರು.

ತುಂಬಾ ಸಂತೋಷವಾಗಿದೆ. ಪ್ರತಿ ಬಾರಿ ನೀವು ಚೆನ್ನೈಗೆ ಬಂದು ಎರಡು ಗೆಲುವುಗಳನ್ನು ಪಡೆದಾಗ ಯಾವಾಗಲೂ ವಿಶೇಷ ಭಾವನೆ ಬರುತ್ತದೆ. ಕಳೆದ ವರ್ಷದಂತೆ, ನಾವು ನಮ್ಮ ತವರು ಪಂದ್ಯಗಳಲ್ಲಿ ಬಹಳಷ್ಟು ಸೋತಿದ್ದೇವೆ ಮತ್ತು ಆ ಮೇಲೆ ಗೆದ್ದಿದ್ದೇವೆ ಎಂದು ಹೇಳಿದ್ದಾರೆ.

Continue Reading

ದೇಶ

Rahul Gandhi: ಅಮೇಥಿಯಿಂದ ರಾಹುಲ್‌ ಗಾಂಧಿ, ರಾಯ್‌ಬರೇಲಿಯಲ್ಲಿ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಲ್ಲ; ಯಾರಿಗೆ ಮಣೆ?

Rahul Gandhi: ಅಮೇಥಿ ಹಾಗೂ ರಾಯ್‌ಬರೇಲಿಯಲ್ಲಿ ಮೇ 17ರಂದು ನಡೆಯುವ ಐದನೇ ಹಂತದ ಮತದಾನದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಮೇ 3 ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಸಲು ಇನ್ನೂ ಕೆಲವೇ ಗಂಟೆಗಳು ಬಾಕಿ ಇವೆ. ಇಷ್ಟಾದರೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಲ್ಲ ಎಂದು ತಿಳಿದುಬಂದಿದೆ. ಹಾಗಾಗಿ, ಯಾರಿಗೆ ಮಣೆ ಹಾಕಲಾಗುತ್ತದೆ ಎಂಬ ಕುತೂಹಲ ಜಾಸ್ತಿಯಾಗಿದೆ.

VISTARANEWS.COM


on

Rahul Gandhi
Koo

ನವದೆಹಲಿ: ಉತ್ತರ ಪ್ರದೇಶದ ಅಮೇಥಿ (Amethi) ಹಾಗೂ ರಾಯ್‌ಬರೇಲಿಯಲ್ಲಿ (Raebareli) ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ (Rahul Gandhi) ಹಾಗೂ ಪ್ರಿಯಾಂಕಾ ವಾದ್ರಾ (Priyanka Vadra) ಸ್ಪರ್ಧೆ ಕುರಿತ ವರದಿಗಳು ಕೇಳಿಬರುತ್ತಲೇ ಇವೆ. ಗಾಂಧಿ ಕುಟುಂಬದ ಅತ್ಯಾಪ್ತ ಕ್ಷೇತ್ರಗಳಲ್ಲಿ ಇಬ್ಬರೂ ಸ್ಪರ್ಧಿಸುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಎರಡೂ ಕ್ಷೇತ್ರಗಳಲ್ಲಿ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ. ಅಮೇಥಿ ಹಾಗೂ ರಾಯ್‌ಬರೇಲಿಯಲ್ಲಿ ಮೇ 17ರಂದು ನಡೆಯುವ ಐದನೇ ಹಂತದ ಮತದಾನದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಮೇ 3 ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಸಲು ಇನ್ನೂ ಕೆಲವೇ ಗಂಟೆಗಳು ಬಾಕಿ ಇವೆ. ಇಷ್ಟಾದರೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಲ್ಲ ಎಂದು ತಿಳಿದುಬಂದಿದೆ.

ರಾಹುಲ್‌ ಗಾಂಧಿ ಅವರು ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸುತ್ತಿದ್ದು, ಏಪ್ರಿಲ್‌ 26ರಂದು ಮತದಾನ ನಡೆದಿದೆ. ಇನ್ನು ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅಥವಾ ಅವರ ಪತಿ ರಾಬರ್ಟ್‌ ವಾದ್ರಾ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈಗ ಪ್ರಿಯಾಂಕಾ ವಾದ್ರಾ ಅವರು ರಾಯ್‌ಬರೇಲಿಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿದುಬಂದಿದೆ.

Rahul Gandhi And Priyanka Vadra

ರಾಹುಲ್‌ ಗಾಂಧಿ ಅವರು ಅಮೇಥಿಯಿಂದ 2004ರಿಂದಲೂ ಸ್ಪರ್ಧಿಸಿ, ಗೆಲುವು ಸಾಧಿಸುತ್ತಿದ್ದರು. ಆದರೆ, 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಅವರು ಸೋಲನುಭವಿಸಿದ ಕಾರಣ ವಯನಾಡು ಅವರ ಲೋಕಸಭೆ ಕ್ಷೇತ್ರವಾಗಿದೆ. ಈ ಬಾರಿಯೂ ರಾಹುಲ್‌ ಗಾಂಧಿ ಅವರು ಅಮೇಥಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರು ಕೂಡ 2004ರಿಂದ ಸ್ಪರ್ಧಿಸುತ್ತಿದ್ದರು. ಇವರು ಈಗ ರಾಜ್ಯಸಭೆಗೆ ಆಯ್ಕೆಯಾದ ಕಾರಣ ರಾಯ್‌ಬರೇಲಿಯಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಮುಂದುವರಿದಿದೆ.

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತೆರಳದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶ್ರೀರಾಮನ ವಿರೋಧಿ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಇದು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ರಾಮಮಂದಿರಕ್ಕೆ ಭೇಟಿ ನೀಡುವ ಮೂಲಕ ಕಾಂಗ್ರೆಸ್‌ ರಾಮಮಂದಿರ ವಿರೋಧಿ ಅಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶವೂ ಇತ್ತು. ನಾಮಪತ್ರ ಸಲ್ಲಿಕೆಗೂ ಮುನ್ನ ರಾಮಮಂದಿರಕ್ಕೆ ಭೇಟಿ ನೀಡುವ ಯೋಜನೆ ಇತ್ತು. ಈಗ ಇದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ ಭೂಷಣ್‌ಗಿಲ್ಲ ಟಿಕೆಟ್‌; ಮಗನಿಗೆ ಮಣೆ, ರಾಯ್‌ಬರೇಲಿಗೂ ಅಭ್ಯರ್ಥಿ ಘೋಷಿಸಿದ ಬಿಜೆಪಿ

Continue Reading
Advertisement
AC Blast
ಪ್ರಮುಖ ಸುದ್ದಿ38 mins ago

AC Blast : ಕಲ್ಯಾಣ್​ ಜ್ಯುವೆಲರಿಯಲ್ಲಿ ಭಾರಿ ಅವಘಡ; ಏರ್​ ಕಂಡೀಷನರ್​ ಬ್ಲಾಸ್ಟ್​ ಆಗಿ ಮೂವರಿಗೆ ಗಾಯ

Tax Returns
ಪ್ರಮುಖ ಸುದ್ದಿ52 mins ago

Tax Returns: ಪಾಕ್‌ ಜನರಿಗೆ ಬೆಲೆಯೇರಿಕೆ ಬೆನ್ನಲ್ಲೇ ತೆರಿಗೆ ಹೊರೆ; ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ನೋಡಿ!

Dr Vinayaka Prasanna passed away
ಬಳ್ಳಾರಿ1 hour ago

Dr Vinayaka Prasanna: ಡಾ.ವಿನಾಯಕ ಪ್ರಸನ್ನ ವಿಧಿವಶ

Sri Siddhivinayaka Swami SrimanMaharathotsava in Ripponpet
ಶಿವಮೊಗ್ಗ1 hour ago

Shivamogga News: ವಿಜೃಂಭಣೆಯ ರಿಪ್ಪನ್‌ಪೇಟೆ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ರಥೋತ್ಸವ

Minister Santosh Lad latest statement in Dharwad
ಕರ್ನಾಟಕ1 hour ago

Lok Sabha Election 2024: ಮಹಾರಾಷ್ಟ್ರ ಸಿಎಂ ಕರೆಸಿ ಕನ್ನಡಿಗರಿಗೆ ಅವಮಾನ ಮಾಡಿದ ಜೋಶಿ: ಸಂತೋಷ್‌ ಲಾಡ್‌

Voting Awareness for Passengers at Hosapete Railway Station
ವಿಜಯನಗರ1 hour ago

Lok Sabha Election 2024: ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತದಾನ ಜಾಗೃತಿ

BJP workers meeting in Banavasi
ರಾಜಕೀಯ1 hour ago

Lok Sabha Election 2024: ಕೇಂದ್ರದ ಸಾಧನೆಗಳನ್ನು ಮನೆ ಮನೆಗೂ ಪರಿಚಯಿಸಿ: ವಿ. ಸುನೀಲ್ ಕುಮಾರ್

Yakshagana performance for voting awareness in Uttara Kannada district on May 4
ಉತ್ತರ ಕನ್ನಡ1 hour ago

Lok Sabha Election 2024: ಉ.ಕ. ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ಮೇ 4 ರಂದು ಯಕ್ಷಗಾನ

Reliance Retail Tira Beauty launch new brand Nails Our Way
ದೇಶ1 hour ago

Reliance Retail: ರಿಲಯನ್ಸ್ ರಿಟೇಲ್‌ನ ಟಿರಾ ಬ್ಯೂಟಿಯಿಂದ ಹೊಸ ಬ್ರ್ಯಾಂಡ್ ‘ನೈಲ್ಸ್ ಅವರ್ ವೇ’ ಅನಾವರಣ

M S Dhoni
ಪ್ರಮುಖ ಸುದ್ದಿ1 hour ago

M S Dhoni : ಧೋನಿಯನ್ನು ರನ್​ಔಟ್ ಮಾಡಿದ ಜಿತೇಶ್​ ಶರ್ಮಾ ನಿಂದಿಸಿದ ಅಭಿಮಾನಿಗಳು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ17 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌