Ozone day | ಸದ್ಯದ ತುರ್ತು ಹೊಣೆ, ಓಝೋನ್ ರಕ್ಷಣೆ - Vistara News

ಪರಿಸರ

Ozone day | ಸದ್ಯದ ತುರ್ತು ಹೊಣೆ, ಓಝೋನ್ ರಕ್ಷಣೆ

ತೂತು ತೂತಾಗುತ್ತಿರುವ ಓಝೋನ್‌ ಪದರದಿಂದ ಚರ್ಮದ ಕ್ಯಾನ್ಸರ್‌ ಹೆಚ್ಚಳವಾಗುವುದು ಗ್ಯಾರಂಟಿ. ಇದರಿಂದ ಪಾರಾಗಲು ಓಝೋನ್‌ ಪದರ ರಕ್ಷಣೆಯೊಂದೇ ದಾರಿ. ಇಂದು ಜಾಗತಿಕ ಓಝೋನ್‌ ಸಂರಕ್ಷಣಾ ದಿನ.

VISTARANEWS.COM


on

ozone layer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
someshwara

– ಸೋಮೇಶ್ವರ ಗುರುಮಠ

ಪ್ರತಿವರ್ವೂ ಸೆಪ್ಟೆಂಬರ್ ೧೬ರಂದು “ಅಂತಾರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನʼʼವನ್ನು ಆಚರಿಸಲಾಗುತ್ತದೆ. ೧೯೮೭ರ ಸೆಪ್ಟೆಂಬರ್ ೧೬ರಂದು ಕೆನಡಾದ ಮಾಂಟ್ರಿಯಲ್ ನಗರದಲ್ಲಿ ಓಝೋನ್ ಪದರ ಉಳಿಸುವುದಕ್ಕೆ ಸಂಬಂಧಿಸಿದಂತೆ ಕೆಲವು ದೇಶಗಳ ನಡುವೆ ಒಪ್ಪಂದವೊಂದು ನಡೆದಿತ್ತು. ಈ ಐತಿಹಾಸಿಕ ಒಪ್ಪಂದದ ನೆನಪಿಗಾಗಿ ವಿಶ್ವಸಂಸ್ಥೆಯು ೧೯೯೪ರಿಂದ ಈ ದಿನವನ್ನು ಪ್ರತಿವರ್ಷ ಆಚರಿಸಲು ನಿರ್ಧರಿಸಿತು. ಅಂತೆಯೇ ಈ ವರ್ಷದ ಓಝೋನ್ ದಿನದ ಘೋಷವಾಕ್ಯ “ಭೂಮಿಯ ಮೇಲಿನ ಜೀವಸಂರಕ್ಷಣೆಗಾಗಿ ಜಾಗತಿಕ ಸಹಕಾರ” ಎಂಬುದಾಗಿದೆ.

ಈ “ಓಝೋನ್” ಎಂದರೇನು? ಓಝೋನ್, ಆಮ್ಲಜನಕದ ಒಂದು ರೂಪ. ಓಝೋನಿನ ಒಂದು ಅಣುವಿನಲ್ಲಿ ಆಮ್ಲಜನಕದ ಮೂರು ಪರಮಾಣುಗಳು ಬಂಧಗೊಂಡಿರುತ್ತವೆ. ಆಮ್ಲಜನಕದ ಒಂದು ಅಣುವಿನಲ್ಲಿ, ಆಮ್ಲಜನಕದ ಎರಡು ಪರಮಾಣುಗಳು ಬಂಧಗೊಂಡಿರುತ್ತವೆ. ಭೂಮಿಯ ಮೇಲಿನ ಹವಾಗೋಲವನ್ನು ದಾಟಿ ಹೋದಂತೆಲ್ಲ ಶಾಖ ಕಡಿಮೆಯಾಗುತ್ತ ಹೋಗುತ್ತದೆ. ಗಾಳಿ ವಿರಳವಾಗುತ್ತಿರುತ್ತದೆ. ಇದನ್ನು ʻಸ್ತರಗೋಲ’ ಎನ್ನಲಾಗುತ್ತದೆ. ಈ ಸ್ತರಗೋಲದ ಮೇಲ್ಭಾಗವೇ ಓಝೋನ್ ಪದರವಾಗಿದೆ. ಇದು ಸಾಮಾನ್ಯವಾಗಿ ೧೫ರಿಂದ ೩೦ ಕಿಲೋಮೀಟರ್ ಎತ್ತರದಲ್ಲಿರುತ್ತದೆ. ಅಂದಾಜು ೨ರಿಂದ ೫ ಮಿ.ಮೀ. ದಪ್ಪದ ಹೊದಿಕೆಯಾದ ಓಝೋನ್ ತುಂಬಾ ಅಸ್ಥಿರವಾದದ್ದು. ಏಕೆಂದರೆ, ಸೂರ‍್ಯನ ಕಿರಣಗಳಲ್ಲಿ ಕಂಡುಬರುವ ೨೪೦ ನ್ಯಾನೋ ಮೀಟರ್‌ಗಳಿಗಿಂತ ಹೆಚ್ಚು ಅಲೆಯುದ್ದವನ್ನು ಹೊಂದಿರುವ ಯು.ವಿ. ಕಿರಣಗಳನ್ನು ಹೀರಿಕೊಂಡು ಆಮ್ಲಜನಕದ ಅಣು ಮತ್ತು ಪರಮಾಣುಗಳಾಗಿ ಒಡೆಯುತ್ತದೆ. ಈ ಆಮ್ಲಜನಕದ ಅಣು ಮತ್ತು ಪರಮಾಣುಗಳು ೨೪೦ ನ್ಯಾನೋ ಮೀಟರ್‌ಗಳಿಗಿಂತ ಕಡಿಮೆ ಅಲೆಯುದ್ದದ ಯು.ವಿ. ಕಿರಣಗಳನ್ನ ಹೀರಿಕೊಂಡು ‘ಓಝೋನ್’ ಅಣುವಾಗಿ ಪರಿವರ್ತನೆಯಾಗುತ್ತದೆ. ಈ ರೀತಿ ಆಮ್ಲಜನಕ ಮತ್ತು ಓಝೋನ್ ಸಂತುಲನ ಸ್ಥಿತಿಯನ್ನು ಹೊಂದಿರುತ್ತವೆ. ಭೂಮಿಯ ಮೇಲಿನ ಜೀವ ಜಂತುಗಳನ್ನು ಅತ್ಯಂತ ಅಪಾಯಕಾರಿಯಾಗಿರುವ ಯು.ವಿ. ಕಿರಣಗಳಿಂದ ರಕ್ಷಿಸುತ್ತದೆ.

ನಮಗೆಲ್ಲ ಅರಿವಿರುವಂತೆ ಈ ಯು.ವಿ. ಕಿರಣಗಳು ಭೂಮಿಗೆ ಬಿದ್ದುದೇ ಆದರೆ ಬೆಳೆಗಳು ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತವೆ. ಮಾನವನಿಗೆ ಚರ್ಮದ ಕ್ಯಾನ್ಸರ್, ದೃಷ್ಟಿಯ ದೋಷ ಕೂಡ ಉಂಟಾಗಬಹುದು. ಅಂತೆಯೇ ಈ ಓಝೋನ್ ಪದರವಿಲ್ಲದಿದ್ದರೆ ಭೂಮಿಯು ಮತ್ತಷ್ಟು ತಾಪಮಾನದಿಂದ ಕುದಿಯಬೇಕಾಗುತ್ತದೆ. ಓಝೋನ್ ಪದರಕ್ಕೆ ಆಗುತ್ತಿರುವ ಹಾನಿಯು ಸಂಪೂರ್ಣವಾಗಿ ಮಾನವನಿಂದಲೇ ಆಗುತ್ತಿದೆ. ಇಂಗಾಲದ ಡೈ ಆಕ್ಸೈಡ್ ವಿಸರ್ಜನೆ, ಪಳೆಯುಳಿಕೆ ಇಂಧನಗಳನ್ನು ಸುಡುವುದು, ಸಾರಜನಕದ ಆಕ್ಸೈಡ್ ರಚನೆಯಾಗುವಂತೆ ಮಾಡುವುದು, ರೆಫ್ರಿಜರೇಟರ್, ರೋಗ ನಿರೋಧಕ ಔಷಧಿಗಳು, ಶುಚಿಕಾರಕಗಳು, ಪ್ಲಾಸ್ಟಿಕ್ ನೊರೆಯಲ್ಲಿ ಪ್ರಚೋದಕಗಳನ್ನಾಗಿ ಕ್ಲೋರೋಫ್ಲೋರೋ ಇಂಗಾಲದ ಸಂಯೋಜನಾ ಅಂಶಗಳನ್ನು ಬಳಸುವುದು ಇತ್ಯಾದಿಗಳು ಕಾರಣವಾಗುತ್ತಿವೆ.

ಇನ್ನು ಕ್ಲೋರೋಫ್ಲೋರೋಗಳು ಭೂಮಿಯ ಮೇಲೆ ಹಾನಿ ಅಥವಾ ವಿಷಕಾರಿಯಾಗಿರುವುದಿಲ್ಲ, ಬದಲಿಗೆ ಇದು ವಾಯುಮಂಡಲ ಸೇರಿದಾಗ ಅಲ್ಲಿ ಸಂಚಯಗೊಂಡು ಓಝೋನ್ ಪದರದ ನಾಶಕ್ಕೆ ನಾಂದಿ ಹಾಡುತ್ತವೆ. ಆಶ್ಚರ್ಯವೆಂಬಂತೆ ಇವುಗಳು ಭೂಮಿಯಿಂದ ವಾಯುಮಂಡಲ ತಲುಪಲು ವರ್ಷಗಳನ್ನು ತೆಗೆದುಕೊಳ್ಳುತ್ತವಾದರೂ, ಅಲ್ಲಿ ಸೇರಿದ ನಂತರ ಓಝೋನ್ ಪದರವನ್ನು ರಂಧ್ರಗೊಳಿಸಿಬಿಡುತ್ತವೆ. ಈ ಪ್ರಕ್ರಿಯೆ ಹೇಗಿರುತ್ತದೆಂದರೆ – ವಾಯುಮಂಡಲ ಸೇರಿದ ಕ್ಲೋರೋಫ್ಲೋರೋಗಳು ಅದೃಶ್ಯ ಕಿರಣಗಳ ಬಲವಾದ ವಿಕಿರಣಕ್ಕೆ ಒಳಗಾಗಿ, ಒಡೆದು ಪ್ರತ್ಯೇಕವಾಗುತ್ತವೆ. ಆಗ ಬಿಡುಗಡೆಯಾಗುವ ಕ್ಲೋರಿನ್ ಅನಿಲವು ಓಝೋನ್ ಕಣದ ಮೇಲೆ ದಾಳಿ ಮಾಡಿ, ಅಲ್ಲಿರುವ ಮೂರು ಆಮ್ಲಜನಕ ಅಣುಗಳಲ್ಲಿ ಒಂದನ್ನು ದೂರ ತಳ್ಳುತ್ತದೆ. ಇದರ ಫಲವಾಗಿ ಕ್ಲೋರಿನ್ ಮಾನಾಕ್ಸೈಡ್ ಕಣ ರಚಿತವಾಗುತ್ತದೆ. ಓಝೋನ್ ಪದರ ನಾಶವಾಗುತ್ತದೆ.

ಇದನ್ನೂ ಓದಿ | ಸಕ್ಕರೆ ಕಡಿಮೆ ತಿನ್ನಿ, ಪರಿಸರ ಉಳಿಸಿ ಎನ್ನುತ್ತಿದ್ದಾರೆ ಸ್ಪೇನ್​​ ವಿಜ್ಞಾನಿಗಳು !; ಅದು ಹೇಗೆ ಸಾಧ್ಯ?

ಈ ರೀತಿಯ ನಾಶ ಪ್ರಕ್ರಿಯೆ ಮುಂದುವರಿದಂತೆಲ್ಲ, ಮುಕ್ತವಾಗಿರುವ ಒಂದು ಆಮ್ಲಜನಕದ ಕಣವು ಹೊಸದಾಗಿ ರಚಿತವಾದ ಕ್ಲೋರಿನ್ ಮಾನಾಕ್ಸೈಡ್ ಜೊತೆ ಸೇರಿ ಮತ್ತೊಂದು ಆಮ್ಲಜನಕದ ಕಣವನ್ನು ದೂರ ತಳ್ಳುತ್ತದೆ. ಇದರ ಪರಿಣಾಮವಾಗಿ ಕ್ಲೋರಿನ್ ಕಣ ಸ್ವತಂತ್ರವಾಗಿ ಚಕ್ರಸ್ವರೂಪವನ್ನು ಪುನರ್ ಪ್ರಾರಂಭಿಸುತ್ತದೆ. ಇದರಿಂದ ಓಝೋನ್ ಕಣಗಳು ಹೆಚ್ಚಿನ ಪ್ರಮಾಣದಲ್ಲಿ ಶಿಥಿಲವಾಗಿ ಪದರವು ಬರಿದಾಗುತ್ತದೆ.

ಇನ್ನು ಕ್ಲೋರಿಕ್ ಮತ್ತು ಬ್ರೋಮಿನ್ ಒಳಗೊಂಡ ಕ್ಲೋರೋಫ್ಲೋರೋ ಕಾರ್ಬನ್ ಹಾಗೂ ಹ್ಯಾಲೋಜನ್ ರಾಸಾಯನಿಕಗಳು ಓಝೋನ್ ಪದರ ನಾಶಕ್ಕೆ ಕಾರಣವಾಗುವಂಥವು. ನಾವು ನಿತ್ಯ ಬಳಸುವ ರೆಫ್ರಿಜೆರೇಟರ್ ಮತ್ತು ಹವಾನಿಯಂತ್ರಕಗಳಲ್ಲಿ ಮುಖ್ಯವಾಗಿ ಕ್ಲೋರೋಫ್ಲೋರೋ ಕಾರ್ಬನ್ನನ್ನು ಬಳಸಲಾಗುತ್ತದೆ. ಫ್ರಿಜ್ ಹಳೆಯದಾಯಿತೆಂದು ಎಸೆದಾಗಲೂ ಅದರಿಂದ ಕ್ಲೋರೋಫ್ಲೋರೋ ಕಾರ್ಬನ್ ಉತ್ಪತ್ತಿಯಾಗಿ ಓಝೋನ್ ಪದರ ನಾಶಕ್ಕೆ ಕಾರಣವಾಗುತ್ತದೆ. ದುರಂತವೆಂದರೆ ಒಂದು ಕ್ಲೋರೋಫ್ಲೋರೋ ಕಾರ್ಬನ್ ಅಣು ೧೦೦ ವರ್ಷಗಳ ಕಾಲ ಭಿನ್ನವಾಗದೆ ಹಾಗೇ ಉಳಿಯಬಲ್ಲದ್ದಾಗಿದೆಯಲ್ಲದೇ, ಇಂಥ ಒಂದು ಕಣ ೨೦ ಸಾವಿರ ಓಝೋನ್ ಅಣುಗಳನ್ನು ನಾಶಗೊಳಿಸಬಲ್ಲ ಸಾಮರ್ಥ್ಯ ಹೊಂದಿದೆ. ಜೊತೆಗೆ ಓಝೋನ್ ನಾಶ ತಾಪಮಾನ ಏರಿಕೆಗೂ ಮತ್ತು ʻಹಸಿರುಮನೆ’ ಪರಿಣಾಮಕ್ಕೂ ಕಾರಣವಾಗಬಲ್ಲದು.

ಹಿಂದೊಮ್ಮೆ ೧೯೭೪ರಲ್ಲಿ ಅಂಟಾರ್ಟಿಕಾ ಪ್ರದೇಶದ ಮೇಲೆ ಓಝೋನ್ ಪದರದ ರಂಧ್ರವು ಕಾಣಿಸಿಕೊಂಡಾಗಿನಿಂದ ಇದರ ಕುರಿತ ಜಾಗರೂಕತೆಯನ್ನು ಹೆಚ್ಚಿಸಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ಸರಹದ್ದನ್ನು ಮೀರಿದ ಪರಿಸರ ಮಾಲಿನ್ಯ ನಿಯಂತ್ರಿಸುವ ಬಗ್ಗೆ ೧೯೭೪ರಲ್ಲಿ ಜರುಗಿದ ಹೆಲ್ಸಿಂಕಿ ಸಮಾವೇಶದಲ್ಲಿ ಬಾಲ್ಟಿಕ್ ಸಮುದ್ರಕ್ಕೆ ತ್ಯಾಜ್ಯ ವಸ್ತುಗಳನ್ನು ಎಸೆದಿರುವ ಬಗ್ಗೆ ಹಲವಾರು ರಾಷ್ಟ್ರಗಳು ಒಪ್ಪಂದಕ್ಕೆ ಬಂದಿದ್ದವು. ಜೊತೆಗೆ ೧೯೮೯ರಲ್ಲಿ ಜರುಗಿದ್ದ ಮಾಂಟ್ರಿಯಲ್ ಒಪ್ಪಂದದ ಪ್ರಕಾರ ಅಮೆರಿಕವು ವಿಶ್ವದ ೨೪ ಕೈಗಾರಿಕಾ ಪ್ರಧಾನ ರಾಷ್ಟ್ರಗಳೊಡನೆ ಓಝೋನ್ ಪದರ ಬರಿದಾಗಲು ಕಾರಣವಾಗುವ ಅನಿಲ ವಿಸರ್ಜನಾ ನಿಯಂತ್ರಣಕ್ಕೆ ಒಪ್ಪಿಗೆ ಸೂಚಿಸಿತ್ತಂತೆ. ಆದರೆ ಇಂದಿನ ಸ್ಥಿತಿಗತಿಗಳೇ ಇನ್ನೂ ವಿಭಿನ್ನ ರೀತಿಯಲ್ಲಿ ಪ್ರಕೃತಿ ವಿನಾಶದ ಬಗ್ಗೆ ಮುನ್ಸೂಚನೆ ನೀಡುತ್ತಿವೆ. ವಿಶ್ವದ ದೊಡ್ಡಣ್ಣ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ʻಹವಾಮಾನ ವೈಪರೀತ್ಯ’ ಸಮಾವೇಶಗಳು ಫಲ ನೀಡುತ್ತಿಲ್ಲ, ಭಾರತೀಯ ಸರ್ಕಾರದ ಪರಿಸರ ಸಂರಕ್ಷಣಾ ನೀತಿಗಳು ಜನಮನವನ್ನು ತಲುಪಿಲ್ಲ ಎಂಬುದಕ್ಕೆ ಅವರ ಅಸಹಕಾರಗಳೇ ನಿದರ್ಶನವಾಗುತ್ತಿವೆ. ಇಂತಿರುವಾಗ ಈಗ ಎಚ್ಚೆತ್ತುಕೊಳ್ಳದಿದ್ದರೆ ನಾಳೆ ನಮ್ಮ ಜೀವಪದರಕ್ಕೆ ಹಾನಿ ಕಟ್ಟಿಟ್ಟ ಬುತ್ತಿ. ಹೀಗಾಗಿ ಸದ್ಯದ ತುರ್ತು ಹೊಣೆ ಓಝೋನ್ ರಕ್ಷಣೆ ಎನ್ನುವುದನ್ನು ಮರೆಯುವಂತಿಲ್ಲ.

ಇದನ್ನೂ ಓದಿ | ಪರಿಸರದಿಂದ ನಾವೆಲ್ಲರೂ ಬಹಳಷ್ಟು ಪಾಠ ಕಲಿಯಬಹುದು; ಶಿವಾನಂದ ಕಳವೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Ancient snake: ಭಾರತದಲ್ಲಿತ್ತು 1000 ಕಿಲೋ ತೂಕ, 50 ಅಡಿ ಉದ್ದದ ʼವಾಸುಕಿʼ ಹಾವು!

Ancient snake: 2005ರಲ್ಲಿ ಗುಜರಾತ್‌ನಲ್ಲಿ ಪತ್ತೆಯಾದ ಪಳೆಯುಳಿಕೆಗಳು, ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವಿನದ್ದು ಆಗಿವೆ. ಇದನ್ನು ಸಂಶೋಧಕರು “ವಾಸುಕಿ ಇಂಡಿಕಸ್” ಎಂದು ಹೆಸರಿಸಿದ್ದಾರೆ. ಇದು 4.7 ಕೋಟಿ ವರ್ಷಗಳ ಹಿಂದೆ ಕಚ್‌ನ ಜವುಗು ಪ್ರದೇಶಗಳಲ್ಲಿ ವಾಸಿಸಿತ್ತು.

VISTARANEWS.COM


on

Ancient snake vasuki indicus
Koo

ಹೊಸದಿಲ್ಲಿ: ಜಗತ್ತಿನ ಅತೀ ದೊಡ್ಡ, ಭಾರೀ ಗಾತ್ರದ ಹಾವು (big snake) ಭಾರತದಲ್ಲಿ ಬದುಕಿತ್ತು ಎಂಬುದು ಇದೀಗ ಸಂಶೋಧನೆಯಿಂದ ಗೊತ್ತಾಗಿದೆ. ಗುಜರಾತ್‌ನಲ್ಲಿ ಪತ್ತೆಯಾದ ಪ್ರಾಚೀನ ಹಾವೊಂದರ (Ancient snake) ಪಳೆಯುಳಿಕೆಗಳು (follisls) ಅದರ ಭಾರೀ ಗಾತ್ರ ಹಾಗೂ ತೂಕವನ್ನು ತಿಳಿಯಪಡಿಸಿವೆ. ಅದು ಸುಮಾರು 50 ಅಡಿ ಉದ್ದ ಹಾಗೂ 1,000 ಕೆಜಿ ತೂಕವಿತ್ತಂತೆ!

2005ರಲ್ಲಿ ಗುಜರಾತ್‌ನಲ್ಲಿ ಪತ್ತೆಯಾದ ಪಳೆಯುಳಿಕೆಗಳು, ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವಿನದ್ದು ಆಗಿವೆ. ಇದನ್ನು ಸಂಶೋಧಕರು “ವಾಸುಕಿ ಇಂಡಿಕಸ್” ಎಂದು ಹೆಸರಿಸಿದ್ದಾರೆ. ಇದು 4.7 ಕೋಟಿ ವರ್ಷಗಳ ಹಿಂದೆ ಕಚ್‌ನ ಜವುಗು ಪ್ರದೇಶಗಳಲ್ಲಿ ವಾಸಿಸಿತ್ತು. ನಿನ್ನೆ ವಿಜ್ಞಾನ ಪತ್ರಿಕೆಗಳಲ್ಲಿ ಇದು ವರದಿಯಾಗಿದೆ. ಈ ಜಾತಿಯ ಹಾವು 36ರಿಂದ ಸುಮಾರು 50 ಅಡಿ ಉದ್ದದವರೆಗೂ ಬೆಳೆಯುತ್ತಿತ್ತು.

ಗಾತ್ರದಲ್ಲಿ ʼವಾಸುಕಿʼಯ ಗಾತ್ರ ಹಾಗೂ ತೂಕ ಈಗ ಅಳಿವಿನಂಚಿನಲ್ಲಿರುವ ʼಟೈಟಾನೊಬೊವಾʼವನ್ನು ಮೀರಿರಬಹುದು. ಇದು 42 ಅಡಿ ಅಳತೆಯ ಅತಿದೊಡ್ಡ ಹಾವು. ಇದು 1 ಟನ್ ಅಥವಾ 1,000 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿರಬಹುದು ಎಂದು ಸಂಶೋಧಕರು ಹೇಳುತ್ತಾರೆ. ಇಂದು ಜೀವಂತವಾಗಿರುವ ಅತಿದೊಡ್ಡ ಹಾವೆಂದರೆ ಏಷ್ಯಾದ 33 ಅಡಿ ಉದ್ದದ ರೆಟಿಕ್ಯುಲೇಟೆಡ್ ಹೆಬ್ಬಾವು.

“ಅದರ ದೊಡ್ಡ ಗಾತ್ರವನ್ನು ಪರಿಗಣಿಸಿದರೆ, ವಾಸುಕಿಯು ನಿಧಾನವಾಗಿ ಚಲಿಸುವ ಹೊಂಚುದಾಳಿ ಪರಭಕ್ಷಕವಾಗಿತ್ತು. ಅದು ಅನಕೊಂಡಗಳು ಮತ್ತು ಹೆಬ್ಬಾವುಗಳಂತೆ ಸುತ್ತುವರಿದು ಬಿಗಿಯುವಿಕೆಯ ಮೂಲಕ ತನ್ನ ಬೇಟೆಯನ್ನು ಪಡೆಯುತ್ತಿತ್ತು” ಎಂದು ಐಐಟಿ-ರೂರ್ಕಿಯಲ್ಲಿ ಪ್ಯಾಲಿಯಂಟಾಲಜಿಯ ಪೋಸ್ಟ್‌ ಡಾಕ್ಟರಲ್ ಸಂಶೋಧಕ ಮತ್ತು ಅಧ್ಯಯನದ ಪ್ರಮುಖ ಲೇಖಕ ದೇಬಜಿತ್ ದತ್ತಾ ಹೇಳುತ್ತಾರೆ. “ಈ ಹಾವು ಕರಾವಳಿಯ ಸಮೀಪವಿರುವ ಜೌಗು ಪ್ರದೇಶದಲ್ಲಿ ಜಾಗತಿಕ ತಾಪಮಾನವು ಇಂದಿನಕ್ಕಿಂತ ಹೆಚ್ಚಿರುವ ಸಮಯದಲ್ಲಿ ವಾಸಿಸುತ್ತಿತ್ತು” ಎಂದಿದ್ದಾರೆ.

ಹಿಂದೂ ಪುರಾಣಗಳಲ್ಲಿ ʼವಾಸುಕಿʼ ಎಂಬ ಭಾರೀ ನಾಗರಾಜನ ಕತೆಗಳು ಇವೆ. ಇದನ್ನು ಸಾಮಾನ್ಯವಾಗಿ ಶಿವನ ಕುತ್ತಿಗೆಗೆ ಸುತ್ತುವಂತೆ ಚಿತ್ರಿಸಲಾಗುತ್ತದೆ. ಸಮುದ್ರ ಮಥನಕ್ಕೆ ಈ ಹಾವನ್ನು ಬಳಸಿಕೊಳ್ಳಲಾಗಿತ್ತು ಎಂದು ಕತೆಯಿದೆ. ಈ ಹಿನ್ನೆಲೆಯಲ್ಲಿ ಸಂಶೋಧಕರು ಇದಕ್ಕೆ ʼವಾಸುಕಿ ಇಂಡಿಕಸ್ʼ ಎಂಬ ಹೆಸರನ್ನು ನೀಡಿದ್ದಾರೆ.

“ಇದು ಬಹಳ ಸಾಂಕೇತಿಕವಾಗಿದೆ” ಎಂದು ನಾಮಕರಣದ ನಂತರ ದತ್ತ ಹೇಳಿದ್ದಾರೆ. “ವಾಸುಕಿ ನಮ್ಮ ಸರ್ಪರಾಜ. ಹೀಗಾಗಿ ಇಲ್ಲಿರುವ ಅಸಾಧಾರಣವಾದ ದೊಡ್ಡ ಗಾತ್ರದ ಹಾವೂ ಅದೇ” ಎಂದು ಅವರು ವಿವರಿಸಿದರು.

ವಾಸುಕಿ ಇಂಡಿಕಸ್‌ನ ಪಳೆಯುಳಿಕೆಯನ್ನು IIT-ರೂರ್ಕಿಯ ಪ್ರಾಗ್ಜೀವಶಾಸ್ತ್ರದ ಪ್ರಾಧ್ಯಾಪಕ ಸುನಿಲ್ ಬಾಜಪೇಯಿ ಅವರು 2005ರಲ್ಲಿ ಕಂಡುಹಿಡಿದರು. ಅವರು ಕಚ್‌ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಅವಶೇಷಗಳನ್ನು ಪತ್ತೆಹಚ್ಚಿದರು.

ಆ ಸಮಯದಲ್ಲಿ, ʼಸೈಂಟಿಫಿಕ್ ಅಮೇರಿಕನ್ʼ ಪ್ರಕಾರ, ಅವಶೇಷಗಳು ಈಗಾಗಲೇ ತಿಳಿದಿರುವ ಇತಿಹಾಸಪೂರ್ವ ಜಾತಿಯ ಮೊಸಳೆಗೆ ಸೇರಿವೆ ಎಂದು ಬಾಜಪೇಯಿ ನಂಬಿದ್ದರು. 2022ರವರೆಗೆ ಪಳೆಯುಳಿಕೆ ಅವರ ಪ್ರಯೋಗಾಲಯದಲ್ಲಿ ಇತ್ತು. ಅದೇ ವರ್ಷ ಪ್ರಯೋಗಾಲಯಕ್ಕೆ ಸೇರಿದ ದತ್ತಾ ಅವುಗಳನ್ನು ಪರೀಕ್ಷಿಸಲು ಪ್ರಾರಂಭಿಸಿದರು. ಆ ಚೂರುಗಳು ಬೇರೆ ಜಾತಿಗೆ ಸೇರಿದವು ಎಂದು ಇಬ್ಬರಿಗೂ ಅರಿವಾಯಿತು.

“ಪಳೆಯುಳಿಕೆಯು 2005ರಲ್ಲಿ ಕಂಡುಬಂದಿದೆ, ಆದರೆ ನಾನು ಬೇರೆ ಬೇರೆ ಪಳೆಯುಳಿಕೆಗಳ ಮೇಲೆ ಕೆಲಸ ಮಾಡುತ್ತಿರುವುದರಿಂದ, ಅದು ಹಾಗೇ ಉಳಿಯಿತು. 2022ರಲ್ಲಿ ನಾವು ಪಳೆಯುಳಿಕೆಯನ್ನು ಮರು-ಪರಿಶೀಲಿಸಲು ಪ್ರಾರಂಭಿಸಿದ್ದೇವೆ. ಆರಂಭದಲ್ಲಿ ಅದರ ಗಾತ್ರದಿಂದಾಗಿ, ಇದು ಮೊಸಳೆ ಎಂದು ನಾನು ಭಾವಿಸಿದೆ. ಆದರೆ ನಂತರ ಅದು ಹಾವಿನದ್ದಾಗಿದೆ ಎಂದು ಅರಿತುಕೊಂಡೆವು” ಎಂದು ಬಾಜಪೇಯಿ ತಿಳಿಸಿದರು.

ಇದನ್ನೂ ಓದಿ: Hottest Year: 1.25 ಲಕ್ಷ ವರ್ಷಗಳಲ್ಲೇ 2023 ಅತಿ ಬಿಸಿಯಾದ ವರ್ಷ, ಕಾರಣ ಏನು?

Continue Reading

ಕೊಡಗು

Elephant Death: ಕ್ಯೂಟ್‌ ಆಗಿ ಆಟವಾಡುತ್ತಿದ್ದ ತಬ್ಬಲಿ ಮರಿಯಾನೆಗೆ ಕೊನೆಗೂ ಸಿಗಲಿಲ್ಲ ತಾಯಿ

Elephant Death: ಕೊಡಗಿನ ಕಾಫಿ ತೋಟಕ್ಕೆ ದಾಳಿ ಮಾಡಿದ್ದ ಆನೆ ಹಿಂಡನ್ನು ಓಡಿಸುತ್ತಿದ್ದಾಗ, ಮರಿಯಾನೆ ಅದರ ತಾಯಿಯಿಂದ ಬೇರ್ಪಟ್ಟಿತ್ತು. ತಾಯಿಯಿಂದ ಬೇರ್ಪಟ್ಟು ಅಲೆದಾಡುತ್ತಿದ್ದ ಈ ಆನೆಯನ್ನು ಅದರ ತಾಯಿಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು.

VISTARANEWS.COM


on

elephant death in dubare camp
Koo

ಕೊಡಗು: ತಾಯಿ ಕಾಡಾನೆಯಿಂದ ಬೇರ್ಪಟ್ಟು ತಬ್ಬಲಿಯಾಗಿದ್ದ ಮರಿಯಾನೆ (Elephant cub) ಕೊನೆಗೂ ತಾಯಿಯನ್ನು ಕಾಣದೆ ಸಾವು (Elephant Death) ಕಂಡಿದೆ. ಕೊಡಗು ಜಿಲ್ಲೆಯ ದುಬಾರೆ (Dubare) ಸಾಕಾನೆ ಶಿಬಿರದಲ್ಲಿ (Elephant camp) ಘಟನೆ ನಡೆದಿದೆ.

ಕೊಡಗಿನ ಕಾಫಿ ತೋಟಕ್ಕೆ ದಾಳಿ ಮಾಡಿದ್ದ ಆನೆ ಹಿಂಡನ್ನು ಓಡಿಸುತ್ತಿದ್ದಾಗ, ಮರಿಯಾನೆ ಅದರ ತಾಯಿಯಿಂದ ಬೇರ್ಪಟ್ಟಿತ್ತು. ತಾಯಿಯಿಂದ ಬೇರ್ಪಟ್ಟು ಅಲೆದಾಡುತ್ತಿದ್ದ ಈ ಆನೆಯನ್ನು ಅದರ ತಾಯಿಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು.

ತಾಯಿಗಾಗಿ ಅಲೆದು ನಿತ್ರಾಣಗೊಂಡಿದ್ದ 5 ತಿಂಗಳ ಮರಿಯಾನೆಯನ್ನು ರಕ್ಷಿಸಿ ದುಬಾರೆ ಶಿಬಿರಕ್ಕೆ ಶಿಫ್ಟ್ ಮಾಡಲಾಗಿತ್ತು. ಗಂಜಿ ಹಾಲು ನೀಡಿ ಆರೈಕೆ ಮಾಡಲು ಯತ್ನಿಸಲಾಗಿತ್ತು. ವನ್ಯಜೀವಿ ವೈದ್ಯ ಡಾ. ಚೆಟ್ಟಿಯಪ್ಪ ಚಿಕಿತ್ಸೆ ನೀಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ಕೊಂಚ ಚೇತರಿಸಿಕೊಂಡಿದ್ದ ಮರಿ ಆನೆ ಇದಿಗ ದಿಢೀರ್ ಸಾವು ಕಂಡಿದೆ.

ಅರಣ್ಯ ಇಲಾಖೆಯಿಂದ ಮೃತ ಆನೆ ಮರಿಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿದೆ. 25 ದಿನಗಳಿಂದ ಮರಿಯಾನೆ ತಾಯಿಗಾಗಿ ಕಾಡು- ಊರು ಅಲೆದಿತ್ತು. ಎಲ್ಲಿಯೂ ತಾಯಿ ಸಿಗದ ಹಿನ್ನೆಲೆಯಲ್ಲಿ ಒಂಟಿಯಾಗಿದ್ದ ಮರಿ ಆನೆ ಆಹಾರ ಸೇವಿಸುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ರಕ್ಷಣೆಯಾದರೂ ಕೂಡ ಬದುಕುಳಿಯದ ಮರಿ‌ ಆನೆ ದುರಂತ ಅಂತ್ಯ ಕಂಡಿದೆ. ದುಬಾರೆ ಶಿಬಿರದ ಸಿಬ್ಬಂದಿ ಮರಿಯಾನೆಗಾಗಿ ಕಣ್ಣೀರು ಮಿಡಿದಿದ್ದಾರೆ.

ಕುಡಿಯಲು ನೀರು ಸಿಗದೆ ಕಾಡಾನೆಗಳು ಸಾವು

ರಾಮನಗರ: ಕನಕಪುರ ತಾಲೂಕಿನ ಯಲವನತ್ತ ಅರಣ್ಯಪ್ರದೇಶ ಹಾಗೂ ಬೆಟ್ಟಹಳ್ಳಿ ಬೀಟ್‌ನಲ್ಲಿ ಕಾಡಾನೆಗಳು (Elephants Death) ಮೃತಪಟ್ಟಿವೆ. 35 ಹಾಗೂ 14 ವರ್ಷದ ಎರಡು ಕಾಡಾನೆಗಳು ಉಸಿರು ನಿಲ್ಲಿಸಿದೆ. ಬಿಸಿಲಿನ ಬೇಗೆ ತಾಳಲಾರದೆ ಕಾಡಾನೆಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ರಾಮನಗರದ ಕನಕಪುರ ವಲಯದ ಬೆಟ್ಟಹಳ್ಳಿ ಬೀಟ್‌ನಲ್ಲಿ ಘಟನೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ 14 ವರ್ಷದ ಒಂಟಿ ಸಲಗ ನಿತ್ರಾಣಗೊಂಡಿತ್ತು. ನಿತ್ರಾಣಗೊಂಡಿದ್ದ ಕಾಡಾನೆಯನ್ನು ಗಮನಿಸಿದ ಅರಣ್ಯ ಸಿಬ್ಬಂದಿ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿದ್ದರು. ಆದರೆ ಇದೀಗ ಕಾಡಂಚಿನಲ್ಲಿ ಕೊನೆಯುಸಿರೆಳೆದಿದೆ.

ಸ್ಥಳಕ್ಕೆ ಡಿಎಫ್‌ಓ ರಾಮಕೃಷ್ಣಪ್ಪ, ಕನಕಪುರ ಎಸಿಎಫ್ ಗಣೇಶ್ ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಕಾಡಾನೆ ಸಾವಿನ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ.

elephants Death in Ramanagara

ಕಾಡಿನಲ್ಲಿ ಕುಡಿಯಲು ನೀರು ಸಿಗದೆ ಪರದಾಡಿ ನಿತ್ರಾಣಗೊಂಡು ಮೃತಪಟ್ಟಿರುವ ಶಂಕೆ ಇದೆ. 14 ವರ್ಷದ ಕಾಡಾನೆ ಕಳೆದ ಮೂರು ದಿನಗಳ ಹಿಂದೆ ನಿತ್ರಾಣಗೊಂಡಿತ್ತು. ಇದೀಗ ನಿತ್ರಾಣಗೊಂಡಿದ್ದ ಕಾಡಾನೆ ಸೇರಿ ಮತ್ತೊಂದು 35 ವರ್ಷದ ಕಾಡಾನೆಯೂ ಮೃತಪಟ್ಟಿದೆ. ಕನಕಪುರ -ತಮಿಳುನಾಡು ಗಡಿಭಾಗ ಯಲವನತ್ತ ಕಾಡಂಚಿನಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Elephant Attack: ವಾಕಿಂಗ್‌ ಹೋಗುತ್ತಿದ್ದ ವ್ಯಕ್ತಿ ಮೇಲೆರಗಿ ಕೊಂದುಹಾಕಿದ ಒಂಟಿ ಸಲಗ

Continue Reading

ಅಂಕಣ

ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

ದಶಮುಖ ಅಂಕಣ: ವಸಂತ ಎನ್ನಿ, ಬೈಸಾಖಿ ಎನ್ನಿ, ಸ್ಪ್ರಿಂಗ್ (Spring) ಎನ್ನಿ, ಹೆಸರು ಯಾವುದಾದರೇನು… ಎಲ್ಲವೂ ಒಂದೇ ಋತುವಿಗೆ ಸಂಬಂಧಿಸಿದ್ದು. ʻಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯʼ ತರುವುದಕ್ಕೆ ಪ್ರಕೃತಿಗೆ ಗಡಿ, ಸೀಮೆಗಳ ಹಂಗಿಲ್ಲ. ಇದೇ ಹಿನ್ನೆಲೆಯಲ್ಲಿ ಹೊಸತನಕ್ಕೂ ವಸಂತನಿಗೂ ಇರುವ ಅಂಟು ಕುತೂಹಲಕ್ಕೆ ಕಾರಣವಾಗಿದೆ.

VISTARANEWS.COM


on

dashamukha column spring time
Koo

ಈ ಅಂಕಣವನ್ನು ಇಲ್ಲಿ ಓದಿ:

dashamukha column logo

ದಶಮುಖ ಅಂಕಣ: ಋತುಗಳು (Seasons) ವಿಶ್ವದೆಲ್ಲೆಡೆ ಒಂದೇ ತೆರನಾಗಿಲ್ಲ. ಕೆನಡಾ, ಅಮೆರಿಕದ ಬೇಸಿಗೆಯ (Summer) ಋತುವಿನಲ್ಲಿ ಭಾರತದಲ್ಲಿ ಮಳೆಗಾಲ (monsoon); ಈ ದಿನಗಳಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯದಲ್ಲಿ ಚಳಿಗಾಲ (winter)! ಭೌಗೋಳಿಕವಾಗಿ ಆ ದೇಶಗಳು ಎಲ್ಲೆಲ್ಲಿವೆ ಎನ್ನುವುದರ ಮೇಲೆ ಯಾವ ದಿನಗಳಲ್ಲಿ ಯಾವ ಋತು ಎನ್ನುವುದು ನಿರ್ಧಾರವಾಗುವುದು ಸಾಮಾನ್ಯ ವಿದ್ಯಮಾನ. ಸ್ಪ್ರಿಂಗ್ ಟೈಮ್ ಅಥವಾ ಹೂ ಬಿಡುವ ದಿನಗಳು ಸಹ ಸಹಜವಾಗಿ ಭಿನ್ನವೇ ಆಗಿರುತ್ತದೆ. ದಿನಗಳು ಬೇರೆಯಾದರೂ, ಆ ದಿನಗಳಲ್ಲಿ ಪ್ರಕೃತಿಯಲ್ಲಿ ನಡೆಯುವ ಚಟುವಟಿಕೆಗಳು ಬೇರೆಯಲ್ಲವಲ್ಲ. ನಮ್ಮಲ್ಲಿದು ವಸಂತ ಋತು. ವಸಂತ ಎನ್ನಿ, ಬೈಸಾಖಿ ಎನ್ನಿ, ಸ್ಪ್ರಿಂಗ್ (Spring) ಎನ್ನಿ, ಹೆಸರು ಯಾವುದಾದರೇನು… ಎಲ್ಲವೂ ಒಂದೇ ಋತುವಿಗೆ ಸಂಬಂಧಿಸಿದ್ದು. ʻಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯʼ ತರುವುದಕ್ಕೆ ಪ್ರಕೃತಿಗೆ ಗಡಿ, ಸೀಮೆಗಳ ಹಂಗಿಲ್ಲ. ಇದೇ ಹಿನ್ನೆಲೆಯಲ್ಲಿ ಹೊಸತನಕ್ಕೂ ವಸಂತನಿಗೂ ಇರುವ ಅಂಟು ಕುತೂಹಲಕ್ಕೆ ಕಾರಣವಾಗಿದೆ.

ನಮ್ಮ ವಸಂತ ಋತುವಿಗೂ ಹೊಸತನಕ್ಕೂ ಇರುವುದು ಅಂಟು, ನಂಟು- ಎರಡೂ ಹೌದು. ಹಾಗೆಂದೇ ಭಾರತದ ಒಳಗಿನ ಲೆಕ್ಕವಿಲ್ಲದಷ್ಟು ಜಾತಿ, ಭಾಷೆ, ಪ್ರಾಂತ್ಯಗಳ ಜನ ವಸಂತ ಋತುವಿನುದ್ದಕ್ಕೂ ಹೊಸ ವರ್ಷ ಇಲ್ಲವೇ ಸುಗ್ಗಿಯ ಹಬ್ಬವನ್ನಾಚರಿಸುತ್ತಾರೆ. ಸಾಮಾನ್ಯವಾಗಿ ಕೇಳಿಬರುವ ಯುಗಾದಿ, ಗುಡಿಪಡ್ವಾಗಳ ಹೊರತಾಗಿ ಸಿಖ್ ಬಾಂಧವರು ಆಚರಿಸುವ ಬೈಸಾಖಿ, ಅಸ್ಸಾಂನ ಬೋಹಾಗ್ ಬಿಹು ಅಥವಾ ರಂಗೋಲಿ ಬಿಹು, ಬಂಗಾಳದ ಪೊಲೇಹ ಬೊಐಸಾಖ್, ಕಾಶ್ಮೀರದ ನವ್ರಿ, ಸಿಂಧಿ ಜನರ ಚೇತಿ ಚಾಂದ್, ಸೌರಮಾನ ಯುಗಾದಿ ಅಥವಾ ವಿಶು, ಹಿಮಾಚಲ ಪ್ರದೇಶದ ದೋಗ್ರಾ, ಒಡಿಸ್ಸಾದ ವಿಶು ಸಂಕ್ರಾಂತಿ, ಮಣಿಪುರದ ಚೈರೋಬ… ಅಂತೂ ದೇಶದ ಉದ್ದಗಲಕ್ಕೂ ಒಂದಿಲ್ಲೊಂದು ಹೆಸರಿನಿಂದ ವಸಂತನ ಆಗಮನವನ್ನು ಹೊಸವರ್ಷವೆಂದೇ ಸಂಭ್ರಮಿಸುತ್ತಾರೆ. ಶಿಶಿರದಲ್ಲಿ ಬೋಳಾಗಿ ನಿಂತ ಪ್ರಕೃತಿಯೆಲ್ಲ ಹಸಿರು ಧರಿಸಿ, ಲೋಕಕ್ಕೆಲ್ಲ ಉಸಿರು ತುಂಬುವ ಈ ದಿನಗಳಲ್ಲಿ ನಾವು ಮಾತ್ರವೇ ಯುಗಾದಿ ಆಚರಿಸುತ್ತೇವೆ ಎಂದು ಭಾವಿಸುವಂತಿಲ್ಲ. ವಿಶ್ವದ ಎಷ್ಟೊಂದು ಸಂಸ್ಕೃತಿಗಳು ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತವೆ ಗೊತ್ತೆ?

ಹೌದು, ಭಾರತದಲ್ಲಿ ಮಾತ್ರವೇ ಅಲ್ಲ, ಇನ್ನೂ ಬಹಳಷ್ಟು ದೇಶಗಳಲ್ಲಿ ವಸಂತ ಋತುವಿನಲ್ಲೇ ಹೊಸ ವರ್ಷದ ಆಚರಣೆಯಿದೆ. ಜನವರಿ ಮೊದಲ ತಾರೀಖಿನ ಹೊಸವರ್ಷವೆಂಬುದು ಬೇರೆಯದೇ ಆದ ಕ್ಯಾಲೆಂಡರಿನ ಲೆಕ್ಕಾಚಾರ. ಆದರೆ ಪ್ರಕೃತಿಯ ಎಣಿಕೆಗೆ ಸ್ಪಂದಿಸುವುದು ನಮ್ಮ ಯುಗಧರ್ಮ. ಪ್ರಕೃತಿಯಂತೆಯೇ ಶತಶತಮಾನಗಳಿಂದ ನಡೆದು ಬಂದಂಥ ನಿರಂತರತೆಯಿದು. ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎಂಬ ತತ್ವ ಬಹುಶಃ ನಾಗರೀಕತೆಯಷ್ಟೇ ಹಳೆಯದಿರಬೇಕು. ಈ ಮಾತಿನ ವ್ಯಾಪ್ತಿಯನ್ನು ತಿಳಿಯುವುದಕ್ಕೆ ಫೆಬ್ರವರಿಯಿಂದ ಪ್ರಾರಂಭವಾಗಿ ಎಪ್ರಿಲ್ವರೆಗಿನ ದಿನಗಳಲ್ಲಿ ಬರುವ ಬೇರೆಬೇರೆ ದೇಶಗಳ ಸಾಂಪ್ರದಾಯಿಕ ಹೊಸವರ್ಷಗಳನ್ನು ಸಹ ತಿಳಿಯಬೇಕು ನಾವು. ಚೀನಾ, ಕೊರಿಯ, ವಿಯೆತ್ನಾಂ, ಟಿಬೆಟ್, ಇರಾನ್, ಕಜಕಿಸ್ತಾನ, ಉಜ್ಬೆಕಿಸ್ತಾನ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್, ಲಾವೊಸ್, ಕಾಂಬೋಡಿಯ, ಥಾಯ್ಲೆಂಡ್… ಪಟ್ಟಿ ಇನ್ನೂ ಉದ್ದವಿದೆ. ಈ ಎಲ್ಲಾ ದೇಶಗಳಲ್ಲಿ ಕ್ಯಾಲೆಂಡರ್ ಹೊಸ ವರ್ಷದ ಹೊರತಾಗಿ ಹೂ ಬಿಡುವ ಕಾಲದಲ್ಲಿ ಸಾಂಪ್ರದಾಯಿಕವಾದ ಬೇರೆಯದೇ ರೀತಿಯಲ್ಲಿ ನವವರ್ಷವನ್ನು ಸ್ವಾಗತಿಸುತ್ತಾರೆ.

ಯಾವುದೇ ದೇಶದಲ್ಲಾದರೂ, ವಸಂತವೆಂದರೆ ಹಿತವಾದ ಕಾಲ. ಚಳಿಯ ಆರ್ಭಟವೆಲ್ಲಾ ಮುಗಿದಿದೆ, ಆದರೆ ಬಿಸಲಿನ ಪ್ರಕೋಪವಿನ್ನೂ ಜೋರಾಗಿಲ್ಲ ಎಂಬಂಥ ದಿನಗಳು. ಹೊಸ ಹಸಿರಿನ ನಡುವೆ ನಾನಾ ವರ್ಣ ಮತ್ತು ವಿನ್ಯಾಸಗಳ ಹೂ-ಮಿಡಿಗಳ ವೈಭೋಗ. ಶಿಶಿರ ಸುರಿಯುವ ಕಸಿವಿಸಿಯನ್ನು ಸಂಪೂರ್ಣವಾಗಿ ತೊಡೆದು, ಎಲ್ಲೆಡೆ ಆಹ್ಲಾದ, ಉತ್ಸಾಹ, ಉಲ್ಲಾಸಗಳನ್ನು ಚೆಲ್ಲುವುದರಲ್ಲಿ ನಮ್ಮ ವಸಂತ ಲೋಭ ತೋರುವವನೇ ಅಲ್ಲ. ಹಾಗಾದರೆ ವಸಂತ ಎಂದರೆ ಸಂತಸ ಮಾತ್ರವೇ? ಏನೆಲ್ಲಾ ಭಾವಗಳು ಬೆರೆತಿವೆ ಇದೊಂದು ಋತುವಿನೊಂದಿಗೆ? ಹೊಸತನ, ಏಳಿಗೆ, ಸಮೃದ್ಧಿ, ನಿರೀಕ್ಷೆ, ಭರವಸೆ, ಹರುಷ, ಪ್ರೀತಿ, ಒಲವು, ಶೃಂಗಾರ, ಝೇಂಕಾರ, ಕವಿಸಮಯ- ಹೇಳುತ್ತಿದ್ದರೆ ಇನ್ನೂ ಎಷ್ಟೊಂದು ಇದೆಯಲ್ಲ. ಅಲ್ಲಿಗೆ ವಸಂತನಿಗೂ ಹೊಸತನಕ್ಕೂ ತಳುಕು ಹಾಕುವುದು ಗಡಿ, ಸೀಮೆಗಳನ್ನು ಮೀರಿದ ಭಾವ; ಇಡೀ ಯುಗಧರ್ಮದ ಸ್ವಭಾವ ಎಂದಾಯಿತು.

Spring Tourism

ವಸಂತನ ಋತುವಿನ ಅಥವಾ ಚೈತ್ರಮಾಸದ ವರ್ಣನೆಗಳು ಸಂಸ್ಕೃತ ಕಾವ್ಯಗಳಿಂದ ತೊಡಗಿ, ಹಳೆಗನ್ನಡ ಕಾವ್ಯಗಳಿಂದ ಹಿಡಿದು, ಇಂದಿನವರೆಗೂ ಕಂಡುಬರುತ್ತದೆ. ಇವೆಲ್ಲವುಗಳಲ್ಲಿ ಕಾಣುವುದು ಪ್ರಕೃತಿಯಲ್ಲಿರುವ, ಆ ಮೂಲಕ ನಮ್ಮಲ್ಲೂ ಇರುವಂಥ ಹೊಸತನ. ಈ ವಿಷಯಗಳಲ್ಲಿ ಮೊದಲು ನೆನಪಾಗುವುದು ನಮ್ಮ ಕಾಳಿದಾಸ. ಆತನ ʻಮಾಳವಿಕಾಗ್ನಿ ಮಿತ್ರʼದಲ್ಲಿ ವಸಂತನ ಒಂದಿಷ್ಟು ವರ್ಣನೆಗಳನ್ನು ಕಾಣಬಹುದು. ಆದರೆ ಎಲ್ಲಕ್ಕಿಂತ ಮನಸೆಳೆಯುವುದು ಆತನ ʻಋತುಸಂಹಾರʼದಲ್ಲಿನ ವರ್ಣನೆಗಳು. ವರುಷದ ಆರೂ ಋತುಗಳನ್ನು ವರ್ಣಿಸುವ ಈ ಖಂಡಕಾವ್ಯದ ಕೊನೆಯ ಸರ್ಗದಲ್ಲಿ ಬರುವ ವಸಂತನ ವರ್ಣನೆಗಳ ಕನ್ನಡಾನುವಾದ (ಕೃಪೆ- ಹಂಸಾನಂದಿ) ಹೀಗಿವೆ- “ಹೊಮ್ಮಿರುವ ಮಾಂದಳಿರ ಮೊನಚು ಬಾಣಗಳನ್ನು/ ಚಿಮ್ಮಿಸಲು ದುಂಬಿಸಾಲಿನ ಬಿಲ್ಲ ಹೆದೆಯ/ ಹಮ್ಮುಗೊಳಿಸುತ ಯೋಧ ಬಂದಿಹ ವಸಂತನಿವ/ ನೊಮ್ಮೆಗೇ ಪ್ರಣಯಿಗಳ ಮನವ ಪೀಡಿಸಲು// ಕುಸುಮಿಸಿಹ ವೃಕ್ಷಗಳು ಕೊಳದಲ್ಲಿ ಕಮಲಗಳು/ ನಸುಗಂಪು ಗಾಳಿ; ಜೊತೆ ಬಯಸುವೆಣ್ಣುಗಳು/ ಮಸುಕು ಸಂಜೆಯ ನಲಿವು ಹಾಯಾದ ಹಗಲುಗಳು/ ಎಸೆದಾವು ಮಿಗೆ ಗೆಳತಿ ಹಿತ ವಸಂತದಲಿ”

ಹಳೆಗನ್ನಡದ ವಿಷಯಕ್ಕೆ ಬಂದರೆ ಮೊದಲು ನೆನಪಾಗುವವನು ಪಂಪ. ʻನೀನೇ ಭುವನಕ್ಕಾರಾಧ್ಯನೈ, ಭೃಂಗ ಕೋಕಿಳ ಕೀರ ಪ್ರಿಯ ಚೂತರಾಜ, ತರುಗಳ್ ನಿನ್ನಂತೆ ಚೆನ್ನಂಗಳೇʼ ಎಂದು ವಸಂತದಲ್ಲಿ ತೂಗುವ ಮಾವಿನ ಮರವನ್ನು ಕೊಂಡಾಡುತ್ತಾನೆ. ಅಭಿನವ ಪಂಪನೆಂದೇ ಹೆಸರಾಗಿದ್ದ ನಾಗಚಂದ್ರನ ರಾಮಚಂದ್ರಚರಿತ ಪುರಾಣದಲ್ಲಿನ ರಾಮ, ಕಳೆದು ಹೋದ ತನ್ನ ಸೀತೆಯನ್ನು ಹುಡುಕುತ್ತಾ, ʻತಳಿರೇ ತಾಮರೆಯೇ ಮೃಗಾಳಿ ಸಂಕುಲಮೇ ಮತ್ತ ಕೋಕಿಲಮೇ ಕಂಡಿರೇ ಪಲ್ಲವಾಧರೆಯʼ ಎಂದು ಸುತ್ತಲಿನ ಪ್ರಕೃತಿಯನ್ನು ಕೇಳುತ್ತಾ ಹೋಗುವ ವರ್ಣನೆಯಿದೆ. ಹಿಂದಿನವರು ನಿಸರ್ಗದೊಂದಿಗೆ ಇಷ್ಟೊಂದು ನಿಕಟವಾಗಿ ಬೆರೆತು ಬದುಕಿದ್ದರ ಹಿನ್ನೆಲೆಯಲ್ಲೇ, ಪ್ರಕೃತಿಗೆ ಹೊಸತನ ಬಂದ ಕಾಲದಲ್ಲಿ ಅವರಿಗೂ ಹೊಸತನ ಬಂದಂತೆನಿಸಿದ್ದರಲ್ಲಿ ಅಚ್ಚರಿಯಿಲ್ಲ. ಹರಿಹರ, ಕುಮಾರವ್ಯಾಸನಿಂದ ತೊಡಗಿ ಅವರಿಗಿಂತ ಇತ್ತೀಚಿನ ಜಯದೇವ ಕವಿಯ ಕಾವ್ಯಗಳೆಲ್ಲ ವಸಂತನಿಂದ, ಚೈತ್ರದಿಂದ ಸಿಂಗಾರಗೊಂಡಂಥವು.

ಇದನ್ನೂ ಓದಿ: ದಶಮುಖ ಅಂಕಣ: ಮೌನವೆಂಬ ಭಾವಸೇತು

ಹೊಸಗನ್ನಡ ಕವಿಗಳೂ ಹೊಸವರ್ಷದ ಹೊಸತನಕ್ಕೆ ಸೋತವರೇ. ರಸಋಷಿ ಕುವೆಂಪು ಅವರು, “ಗೀತೆಯ ಘೋಷದಿ ನವ ಅತಿಥಿಯ ಕರೆ/ ಹೃದಯ ದ್ವಾರವನಗಲಕೆ ತೆರೆ ತೆರೆ/ ನವಜೀವನ ರಸ ಬಾಳಿಗೆ ಬರಲಿ/ ನೂತನ ಸಾಹಸವೈತರಲಿ” ಎಂದು ತಮ್ಮ ʻಯುಗಾದಿʼ ಎನ್ನುವ ಕವನದಲ್ಲಿ ಆಶಿಸುತ್ತಾರೆ. ಕೆ.ಎಸ್. ನರಸಿಂಹಸ್ವಾಮಿಯವರ ಮಧುಮಾಸದ ಹೊಸತನ ಇದಕ್ಕಿಂತ ಭಿನ್ನವಲ್ಲ. “ಬಾನ್ನೀಲಿಯ ಕೊನೆಯಿಲ್ಲದ ನೀಲಾಂಬರದೊಳಗೆ/ ಬಂದಾಡುವ ಬಿಳಿಮುಗಿಲಿನ ತಣ್ಣೆಳಲಿನ ಕೆಳಗೆ/ ಮಾಂದಳಿರಿನ ತೋರಣವಿಹ ಮುಂಬಾಗಿಲ ಬಳಿಗೆ/ ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ” ಎಂದು ಸಂಭ್ರಮಿಸುತ್ತಾರೆ. ನಿಸಾರ್ ಅಹಮದ್ ಅವರ ʻವರ್ಷಾದಿʼ ಕವಿತೆಯಲ್ಲಿ, “ಹೊಸ ಬಟ್ಟೆಯ ತೊಟ್ಟ ಚೈತ್ರ/ ಜಲದರ್ಪಣ ಮಗ್ನ ನೇತ್ರ/ ಮುಗಿಲಿನ ಪಂಚಾಂಗ ತೆರೆಸಿ/ ಕುಳಿತಿಹ ಫಲ ತಿಳಿಯ ಬಯಸಿ” ಎಂದು ಚೈತ್ರಮಾಸದ ನವ್ಯತೆಯನ್ನು ಭವ್ಯತೆಯನ್ನು ವರ್ಣಿಸುತ್ತಾರೆ. ಜಿ.ಎಸ್.ಶಿವರುದ್ರಪ್ಪನವರ ʻಯುಗಾದಿಯ ಹಾಡʼನ್ನೂ ಕಾಡುವುದು ಚೈತ್ರ ಮಾಸಕ್ಕಿರುವ ಹೊಸ ಸ್ಪರ್ಶವೇ. “ಬಂದ ಚೈತ್ರದ ಹಾದಿ ತೆರೆದಿದೆ/ ಬಣ್ಣ-ಬೆಡಗಿನ ಮೋಡಿಗೆ/ ಹೊಸತು ವರ್ಷದ ಹೊಸತು ಹರ್ಷದ/ ಬೇವು ಬೆಲ್ಲದ ಬೀಡಿಗೆ” ಎಂದು ಹಾಡುತ್ತಾರೆ. ಇವರುಗಳು ಮಾತ್ರವಲ್ಲ, ವರಕವಿ ಬೇಂದ್ರೆ, ಪು.ತಿ.ನರಸಿಂಹಾಚಾರ್, ಗೋಪಾಲಕೃಷ್ಣ ಅಡಿಗರ ಆದಿಯಾಗಿ ನಮ್ಮೆಲ್ಲ ಮೇರು ಕವಿಗಳಿಗೆ ವಸಂತನಿಗೂ ಹೊಸತನಕ್ಕೂ ನಡುವೆ ಪ್ರವಹಿಸುವ ವಾಹಿನಿ ಕಾಡಿದೆ.

ಎಲೆಗಳು ಉದುರುವಾಗಲೂ, ಚಿಗುರುವಾಗಲೂ ಪ್ರಕೃತಿಯದ್ದು ಅದೇ ಹದ. ಈ ನಡುವಿನ ಅವಧಿಯಲ್ಲಿ ಏನು ನಡೆಯುತ್ತದೆಂಬ ಗುಟ್ಟನ್ನೆಂದೂ ಬಿಟ್ಟುಕೊಡದ ನಿಸರ್ಗ, ನಮಗೆ ತೋರಿಸಿ ಕೊಡುವುದು ಹೊಸತನವನ್ನು ಮಾತ್ರ. ಇದನ್ನೇ ಉಂಡು, ಉಟ್ಟು ನಡೆಯೋಣ. ಎಲ್ಲರ ಕಂಗಳಲ್ಲಿ ಪಲ್ಲವಿಸಿರುವ ಹೊಸ ಚಿಗುರು ಬೆಳೆಯಲಿ, ಹೂವಾಗಿ, ಕಾಯಾಗಿ, ಹಣ್ಣಾಗಲಿ. ಪ್ರಕೃತಿಯಂತೆಯೇ ತನ್ನ ನಿರಂತರತೆಯನ್ನು ಕಾಯ್ದುಕೊಳ್ಳಲಿ ಬದುಕು.

ಇದನ್ನೂ ಓದಿ: ದಶಮುಖ ಅಂಕಣ: ಉಪವಾಸದ ಹಿಂದೆ ಎಷ್ಟೊಂದು ನೆನಪುಗಳು!

Continue Reading

ಪರಿಸರ

Tigers fasting: ವಾರದಲ್ಲೊಂದು ದಿನ ಉಪವಾಸ ಮಾಡುತ್ತಿವೆ ಈ ಹುಲಿಗಳು!

Tigers fasting: ನೇಪಾಳದ ಮೃಗಾಲಯವೊಂದರಲ್ಲಿ ಹುಲಿಗಳು ವಾರದಲ್ಲೊಂದು ದಿನ ಉಪವಾಸ ಮಾಡುತ್ತಿದೆ. ಆಹಾರದ ಕೊರತೆ ಇಲ್ಲದೇ ಇದ್ದರೂ ಮಾಂಸಹಾರಿ ಪ್ರಾಣಿಯಾದ ಹುಲಿಗಳು ಇಲ್ಲಿ ಉಪವಾಸ ಮಾಡಲು ಹಲವು ಕಾರಣಗಳಿವೆ. ಅದು ಏನು ಗೊತ್ತೇ ?

VISTARANEWS.COM


on

By

Tigers fasting
Koo

ಹುಲಿ (tiger), ಚಿರತೆ (Leopard), ಸಿಂಹ (lion) ಇವುಗಳನ್ನು ನೋಡಿದರೆ (Tigers fasting) ಎಷ್ಟು ಗಟ್ಟಿ ಹೃದಯವಾದರೂ ಒಮ್ಮೆ ಮೈ ನಡುಗುತ್ತದೆ. ಯಾಕೆಂದರೆ ಇವುಗಳು ಯಾರ ಮೇಲೂ ಕರುಣೆಯನ್ನು ತೋರುವುದಿಲ್ಲ. ಅವುಗಳ ಆಕ್ರಮಣದಿಂದ ಬದುಕಿ ಉಳಿದರೆ ಅದು ಇನ್ನೊಂದು ಜನ್ಮ ಸಿಕ್ಕಿದಂತೆಯೇ.. ಇವುಗಳನ್ನು ಪಳಗಿಸುವುದು,. ಕೂಡಿ ಹಾಕುವುದು ಅಷ್ಟು ಸುಲಭವಲ್ಲ. ಆದರೂ ಪ್ರಾಣಿ ಸಂಗ್ರಹಾಲಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇವುಗಳನ್ನು ಸಂರಕ್ಷಿಸಿ ಇಡಲಾಗುತ್ತದೆ.
ಪ್ರಕೃತಿಯೇ ಕೆಲವೊಂದು ಪ್ರಾಣಿಗಳನ್ನು ಸಂಪೂರ್ಣವಾಗಿ ಮಾಂಸಹಾರಿಗಳನ್ನಾಗಿ ಮಾಡಿದೆ. ಇದರಲ್ಲಿ ಹುಲಿಗಳು ಸೇರಿವೆ. ಇದು ಬೇಟೆಯಾಡುವಾಗ ಮಾತ್ರ ಯಾರ ಮೇಲೂ ಕರುಣೆ ತೋರಿಸುವುದಿಲ್ಲ. ಹೊಟ್ಟೆ ತುಂಬಿದಾಗ ಮಾತ್ರ ಸುಮ್ಮನಿರುತ್ತವೆ.

ಹುಲಿಗಳು ಸಂಪೂರ್ಣವಾಗಿ ಮಾಂಸಾಹಾರಿಗಳು ಮತ್ತು ಬದುಕಲು ಮಾಂಸವನ್ನು ಅವಲಂಬಿಸಿರುತ್ತವೆ. ಆದರೆ ಈ ಹುಲಿಗಳು ಇದೀಗ ಮೃಗಾಲಯದಲ್ಲಿ ವಾರದಲ್ಲಿ ಒಂದು ದಿನ ಉಪವಾಸ (Tigers fasting) ಮಾಡುತ್ತಿವೆ. ಆ ದಿನ ಮಾಂಸಾಹಾರವನ್ನು ಅದು ಸೇವಿಸುವುದೇ ಇಲ್ಲ.


ಎಲ್ಲಿ?

ನೇಪಾಳದ (nepal) ಕೇಂದ್ರ ಮೃಗಾಲಯದಲ್ಲಿರುವ (Central Zoo) ಹುಲಿಗಳು ಉಪವಾಸ ಆಚರಿಸುತ್ತಿರುವುದಾಗಿ ತಿಳಿದು ಬಂದಿದೆ. ಇದು ಆಹಾರದ ಕೊರತೆಯಿಂದ ಅಂತೂ ಅಲ್ಲ.

ಇದನ್ನೂ ಓದಿ: Health Benefits of Walnuts: ವಾಲ್‌ನಟ್‌ ತಿಂದರೆ ಆಗುವ ಪ್ರಯೋಜನಗಳು ಹಲವು!

ಉಪವಾಸ ಯಾಕೆ?

ನೇಪಾಳದ ಮೃಗಾಲಯದಲ್ಲಿ ಹುಲಿಗಳನ್ನು ಉದ್ದೇಶಪೂರ್ವಕವಾಗಿ ವಾರದಲ್ಲಿ ಒಂದು ದಿನ ಉಪವಾಸ ಇರುವಂತೆ ಮಾಡಲಾಗುತ್ತದೆ. ಯಾಕೆಂದರೆ ಇದು ಅವುಗಳ ಅರೋಗ್ಯಕ್ಕಾಗಿ.

ಏನಾಗಿದೆ?

ಈ ಕುರಿತು ಮಾಹಿತಿ ನೀಡಿರುವ ಮೃಗಾಲಯದ ಮಾಹಿತಿ ಅಧಿಕಾರಿ ಗಣೇಶ್ ಕೊಯಿರಾಲಾ, ಹುಲಿಗಳ ಆರೋಗ್ಯವನ್ನು ಸುಧಾರಿಸುವ ಸಲುವಾಗಿ ಪ್ರತಿ ಶನಿವಾರ ಉಪವಾಸ ಇರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅವುಗಳಿಂದ ಯಾವುದೇ ಪ್ರಾಣಿಗಳಿಗೂ ತೊಂದರೆಯಾಗುವುದಿಲ್ಲ. ಹುಲಿಗಳನ್ನು ಉಪವಾಸಕ್ಕೆ ಹಾಕಲು ಮುಖ್ಯ ಕಾರಣ ತೂಕ ಹೆಚ್ಚಳ ಸಮಸ್ಯೆ. ಹೀಗಾಗಿ ಅವುಗಳನ್ನು ಒಂದು ದಿನ ಉಪವಾಸವಿಟ್ಟು ಅವುಗಳ ಜೀರ್ಣಕ್ರಿಯೆ ಚೆನ್ನಾಗಿ ಇರುವಂತೆ ನೋಡಿಕೊಳ್ಳಲಾಗುತ್ತದೆ ಎನ್ನುತ್ತಾರೆ.

ಎಷ್ಟು ಆಹಾರ ಸೇವಿಸುತ್ತದೆ?

ಮೃಗಾಲಯದಲ್ಲಿ ಹೆಣ್ಣು ಹುಲಿಗಳಿಗೆ ಐದು ಕೆ.ಜಿ ಎಮ್ಮೆ ಮಾಂಸ ಮತ್ತು ಗಂಡು ಹುಲಿಗಳು ದಿನಕ್ಕೆ 6 ಕೆ.ಜಿ ಮಾಂಸವನ್ನು ತಿನ್ನುತ್ತವೆ. ಆದರೆ ಶನಿವಾರದಂದು ಅವುಗಳ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಮಾಂಸವನ್ನು ತಿನ್ನುವುದಿಲ್ಲ.

ಯಾವ ಸಮಸ್ಯೆ ?

ಮೃಗಾಲಯದ ಹುಲಿಗಳು ಇತ್ತೀಚಿಗೆ ಸ್ಥೂಲಕಾಯ ಸಮಸ್ಯೆಗಳನ್ನು ಎದುರಿಸಿವೆ. ಇದಕ್ಕಾಗಿ ಔಷಧವನ್ನು ಅವಲಂಬಿಸುವುದು ಅವುಗಳ ಅರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ಒಂದು ದಿನ ಉಪವಾಸ ಮಾಡಿಸಿ ಅವುಗಳ ಅರೋಗ್ಯ ರಕ್ಷಣೆ ಮಾಡಲಾಗುತ್ತಿದೆ. ಇದು ಅವುಗಳ ಆರೋಗ್ಯವನ್ನು ನಿರ್ವಹಿಸಲು ಸುಲಭವಾದ ಮಾರ್ಗ. ಇದು ಅವುಗಳ ದೀರ್ಘಾವಧಿಯ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ. ಯಾಕೆಂದರೆ ಮಾಂಸಾಹಾರಿ ಪ್ರಾಣಿಗಳು ಒಂದು ದಿನದ ಉಪವಾಸ ಮಾಡುವಾಗ ಅದು ಅವರ ಆರೋಗ್ಯದ ಮೇಲೆ ಗಮನಾರ್ಹವಾದ ಧನಾತ್ಮಕ ಪರಿಣಾಮ ಬಿರುವುದಾಗಿ ತಜ್ಞರು ಗಮನಿಸಿದ್ದಾರೆ.

ಆಹಾರ ಹೇಗಿರುತ್ತದೆ ?

ಸಾಮಾನ್ಯವಾಗಿ ಹುಲಿಗಳು ಗೆದ್ದಲುಗಳಂತಹ ಸಣ್ಣ ಕೀಟಗಳಿಂದ ಹಿಡಿದು ದೊಡ್ಡ ಆನೆ, ಕರುಗಳನ್ನೂ ಸೇವಿಸುತ್ತದೆ. ಜಿಂಕೆ, ಹಂದಿ, ಹಸು, ಕುದುರೆ, ಎಮ್ಮೆ ಮತ್ತು ಮೇಕೆಗಳಂತಹ ಪ್ರಾಣಿಗಳನ್ನು ಅವು ಬೇಟೆಯಾಡಿ ತಿನ್ನುತ್ತವೆ. ಸಾಮಾನ್ಯವಾಗಿ ಅವುಗಳ ಆಹಾರ ಕನಿಷ್ಠ 20 ಕೆ.ಜಿ. (45 ಪೌಂಡ್) ನಷ್ಟಿರುತ್ತದೆ.
ನೇಪಾಳದ ಕೇಂದ್ರ ಮೃಗಾಲಯ

ನೇಪಾಳದ ಕೇಂದ್ರ ಮೃಗಾಲಯವು ಜವಾಲಾಖೇಲ್‌ನ ಹತ್ತಿರದಲ್ಲಿದೆ. ಇಲ್ಲಿ 109 ವಿಭಿನ್ನ ಜಾತಿಗಳ 969 ಪ್ರಾಣಿಗಳ ಆವಾಸಸ್ಥಾನವಾಗಿದೆ. ಪ್ರಸ್ತುತ ನ್ಯಾಷನಲ್ ಟ್ರಸ್ಟ್ ಫಾರ್ ನೇಚರ್ ಕನ್ಸರ್ವೇಶನ್ (NTNC) ನಿಂದ ನಿರ್ವಹಿಸಲ್ಪಡುತ್ತಿದೆ. 15 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಮೃಗಾಲಯವು ಮೊದಲು ಖಾಸಗಿ ಸಂಸ್ಥೆಯಿಂದ ನಡೆಸಲ್ಪಡುತ್ತಿತ್ತು. 1956 ರಲ್ಲಿ ಇದನ್ನು ಸಾರ್ವಜನಿಕರಿಗಾಗಿ ತೆರೆಯಲಾಯಿತು.

Continue Reading
Advertisement
Modi in Karnataka Govt turns tax city Bengaluru into tanker city and attacks girls too PM Narendra Modi
ಕರ್ನಾಟಕ26 mins ago

Modi in Karnataka: ಟ್ಯಾಕ್ಸ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿ ಮಾಡಿದ ಸರ್ಕಾರ, ಹೆಣ್ಣು ಮಕ್ಕಳ ಮೇಲೂ ಹಲ್ಲೆ: ಮೋದಿ ವಾಗ್ದಾಳಿ

Kalki 2898 AD
ಸಿನಿಮಾ28 mins ago

Kalki 2898 AD: ನಾಳೆ ಮಹತ್ವದ  ಅಪ್‌ಡೇಟ್‌ ನೀಡಲಿದೆ ಪ್ರಭಾಸ್‌ ಅಭಿನಯದ ʼಕಲ್ಕಿ 2898 ಎಡಿʼಚಿತ್ರತಂಡ; ಹೊಸ ರಿಲೀಸ್‌ ದಿನಾಂಕ ಘೋಷಣೆ?

Lok Sabha Election
ದೇಶ37 mins ago

Lok Sabha Election: ನಿನ್ನೆ ಈ ಗ್ರಾಮದ ಒಬ್ಬರೂ ಮತ ಹಾಕಲಿಲ್ಲ; ಇದ್ದಿದ್ದು ಯಾರ ಭಯ?

Ashutosh Sharma
ಕ್ರೀಡೆ37 mins ago

Ashutosh Sharma: ಖಿನ್ನತೆಗೆ ಒಳಗಾಗಿದ್ದ ಬಿಗ್​ ಹಿಟ್ಟರ್​ ಅಶುತೋಷ್‌ ಶರ್ಮ; ಕ್ರಿಕೆಟ್​ ಜರ್ನಿಯೇ ರೋಚಕ

DK Shivakumar
ಕರ್ನಾಟಕ38 mins ago

DK Shivakumar: ಮತಯಾಚನೆ ವೇಳೆ ಬೆದರಿಕೆ ಆರೋಪ; ಡಿಕೆಶಿ ವಿರುದ್ಧ ಎಫ್‌ಐಆರ್‌

Karnataka Weather Forecast
ಮಳೆ54 mins ago

Karnataka Weather : ಎತ್ತಿನ ಬಂಡಿಯಲ್ಲಿ ಬರುವಾಗ ಸಿಡಿಲು ಬಡಿದು ಬಾಲಕ ಸಾವು; ಭಾರಿ ಮಳೆಗೆ ನಲುಗಿದ ಜನರು

Trust Of The Nation 2024
ಪ್ರಮುಖ ಸುದ್ದಿ1 hour ago

Trust Of The Nation 2024 : ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತ; ಡೈಲಿಹಂಟ್ ಸಮೀಕ್ಷೆ

Modi in Karnataka PM Modi to address rally in Bengaluru Here live video
Lok Sabha Election 20242 hours ago

Modi in Karnataka: ಬೆಂಗಳೂರಲ್ಲಿ ಮೋದಿ ಸಮಾವೇಶ; ಇಲ್ಲಿದೆ LIVE ವಿಡಿಯೊ

Narendra Modi
ದೇಶ2 hours ago

Narendra Modi: ಅಮೇಥಿಯಂತೆ ವಯನಾಡಿನಲ್ಲೂ ರಾಹುಲ್‌ ಗಾಂಧಿಗೆ ಸೋಲು; ಮೋದಿ ಭವಿಷ್ಯ!

Horseshoe Septum Ring Fashion
ಫ್ಯಾಷನ್2 hours ago

Horseshoe Septum Ring Fashion: ಅಲ್ಟ್ರಾ ಮಾಡರ್ನ್‌ ಸ್ಟೈಲಿಂಗ್‌ ಪ್ರಿಯರ ಮನಗೆದ್ದ ಹಾರ್ಸ್‌ ಶೂ ಸೆಪ್ಟಮ್‌ ರಿಂಗ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ2 hours ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 hours ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20244 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ6 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ7 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ14 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ2 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ4 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ5 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌