ಗುರು ಗ್ರಹ ನೀಡುವ ಭಾವಫಲಗಳ ಬಗ್ಗೆ ಮಾಹಿತಿ ಇದೆಯೇ? - Vistara News

ಪ್ರಮುಖ ಸುದ್ದಿ

ಗುರು ಗ್ರಹ ನೀಡುವ ಭಾವಫಲಗಳ ಬಗ್ಗೆ ಮಾಹಿತಿ ಇದೆಯೇ?

ಜಾತಕದಲ್ಲಿರುವ 9 ಗ್ರಹಗಳು ಒಂದೊಂದು ಮನೆಯಲ್ಲಿ ಒಂದೊಂದು ಗುಣವನ್ನು ಹೊಂದಿರುತ್ತವೆ. ಅದರಂತೆ ನಿಮ್ಮ ಜೀವನದಲ್ಲೂ ಆ ಗುಣಗಳು ಪ್ರತಿಬಿಂಬಿಸುತ್ತವೆ. ಗುರು ಗ್ರಹ ನೀಡುವ ಫಲದ ಬಗ್ಗೆ ಮಾಹಿತಿ ಇಲ್ಲಿದೆ

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜ್ಯೋತಿಷ ಶಾಸ್ತ್ರದಲ್ಲಿ ಗುರು ಗ್ರಹ ನಾಲ್ಕನೇಯದ್ದು. ಹಾಗೆಯೇ ಬಹಳ ಪ್ರಾಮುಖ್ಯತೆ ಹೊಂದಿರುವ ಗ್ರಹ. ಈ ಗುರು ಲಗ್ನದಲ್ಲಿದ್ದರೆ ಪ್ರಬಲ. ಬುಧ ಗ್ರಹ ಅನೇಕ ಶುಭಫಲಗಳನ್ನು ಪ್ರಾಪ್ತಿಸುತ್ತದೆ. ವಿವಿಧ ಸ್ಥಾನಗಳಲ್ಲಿ ವಿವಿಧ ಫಲಗಳನ್ನು ನೀಡುತ್ತಾನೆ. ಗುರುವಿನ ಭಾವಫಲದ ಬಗ್ಗೆ ಮಾಹಿತಿ ಇಲ್ಲಿದೆ:

ಭಾವಶ್ರಿತ ರಾಶಿಫಲ:

ಗುರುವು ಲಗ್ನದಲ್ಲಿ ಬಲಿಷ್ಠ. ಈ ಜಾತಕದವರು ಸುಂದರವಾಗಿರುತ್ತಾರೆ ಹಾಗೂ ಭಾಗ್ಯಶಾಲಿಯಾಗಿರುತ್ತಾರೆ. ಇವರಿಗೆ ಸಂತತಿಯ ಸುಖ ಪ್ರಾಪ್ತವಾಗಲಿದೆ. ಈ ಜಾತಕದವರು ಧೈರ್ಯವಂತರು ಹಾಗೂ ನಿರ್ಭಯವಾಗಿರುತ್ತಾರೆ.

ದ್ವಿತೀಯ ಭಾವದಲ್ಲಿ ಗುರುವಿದ್ದ ಜಾತಕದವರಿಗೆ ವಾಕ್ಚಾತುರ್ಯವಿರುತ್ತದೆ. ಇವರು ಧನವಂತನು ಮತ್ತು ಸಕಲಶಾಸ್ತ್ರ ಪಾರಂಗತರು ಆಗುತ್ತಾರೆ. ತೇಜಸ್ವಿಯಾಗಿ ಇತರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಇವರಿಗುರತ್ತದೆ. ಉತ್ತಮ ಭೋಜನ ಇವರಿಗೆ ಪ್ರಿಯವಾಗಿರುತ್ತದೆ. .

ತೃತೀಯ ಭಾವದಲ್ಲಿ ಗುರುವಿರುವ ಜಾತಕದವರು ಕೃಪಣ ಹಾಗೂ ಪರಾಕ್ರಮಿಯಾಗಿದ್ದರೂ ಸಮಸ್ಯೆಗೆ ಸಿಲುಕಿಕೊಳ್ಳಬಹುದಾಗಿದೆ. ಇವರ ಪಾಪಕರ್ಮ ಮತ್ತು ದುರ್ಬುದ್ಧಿ ಇವರನ್ನು ಇತರರು ತಿರಸ್ಕೃತ ದೃಷ್ಟಿಯಿಂದ ನೋಡುತ್ತಾರೆ. ಇವರು ಅಪಖ್ಯಾತಿಯುಳ್ಳ ಇನ್ನೋರ್ವ ಸಹೋದರ ಹೊಂದಿರುತ್ತಾರೆ.

ಗುರುವು ಚತುರ್ಥಭಾವದಲ್ಲಿದ್ದರೆ, ಇವರಿಗೆ ತಾಯಿ, ಪತ್ನಿ-ಸುತರಿಂದೊಡಗೂಡಿ ಸುಖವಾಗಿ ಬಾಳುವ ಸಂದರ್ಭವಿರುತ್ತದೆ. ಈ ಜಾತಕದವರು ಧನ ಧಾನ್ಯಗಳಿಂದ ಸಂಪನ್ನರಾಗಿ ಸುಖಮಯ ಜೀವನವ್ನು ಸಾಗಿಸುತ್ತಾರೆ.

ಪಂಚಮದಲ್ಲಿ ಗುರುವು ಸಾಧಾರಣ ಫಲವನ್ನು ಪ್ರಾಪ್ತಿಸುತ್ತಾನೆ. ಈ ಜಾತಕದವರು ಬುದ್ಧಿವಂತರು ಮತ್ತು ರಾಜನ ಸಚಿವರಾಗುವ ಸೌಭಾಗ್ಯ ಹೊಂದಿರುತ್ತಾರೆ. ಆದರೆ, ಇವರಿಗೆ ಪುತ್ರರ ಕಾರಣದಿಂದಾಗಿ ದುಃಖವನ್ನು ಅನುಭವಿಸುವ ಸಂದರ್ಭ ಎದುರಾಗುತ್ತದೆ.

ಷಷ್ಟಮ ಭಾವದಲ್ಲಿ ಗುರುವಿದ್ದರೆ ಆಲಸ್ಯ ಆವರಿಸುತ್ತದೆ. ಆದರೆ, ಈ ಜಾತಕದವರು ಶತ್ರುಗಳನ್ನು ದಮನ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಮಾಟ ಮಂತ್ರಾದಿ ಅಭಿಚಾರ ಕಾರ್ಯನಿರತರಾಗಿರುತ್ತಾರೆ. ಇವರು ಸಾಮನ್ಯವಾಗಿ ಅವಮಾನಕ್ಕೀಡಾಗಿ ತಿರಸ್ಕೃತರು ಆಗಿರುತ್ತಾರೆ.

ಗುರುವು ಸಪ್ತಮ ಭಾವದಲ್ಲಿರುವ ಜಾತಕದವರು ಬಹುತೇಜಸ್ವಿಯಾಗಿರುತ್ತಾರೆ. ಇವರಿಗೆ ಸುಂದರ ಪತ್ನಿ-ಪುತ್ರವುಳ್ಳುತ್ತಾರೆ.ಇವರು ತನ್ನ ಪೂರ್ವಜರಿಗಿಂತಲೂ ಅಧಿಕ ಉದಾರತೆ ತೋರುವವರಾಗಿರುತ್ತಾರೆ.

ಗುರುವು ಅಷ್ಟಮದಲ್ಲಿರುವಾಗ, ಜಾತಕದವರು ದೀನರಾಗಿರುತ್ತಾರೆ. ಜೀವನೋಪಾಯಕ್ಕಾಗಿ ಸೇವೆ ಮಾಡುತ್ತಾರೆ, ಆದರೆ ಪಾಪಾತ್ಮರಾಗಿರುತ್ತರೆ. ಇವರಿಗೆ ದೀರ್ಘಾಯುವು ಪ್ರಾಪ್ತವಾಗಿರುತ್ತದೆ.

ಗುರುವು ನವಮದಲ್ಲಿರುವ ಜಾತಕದವರು ಪ್ರಖ್ಯಾತ ಮಂತ್ರಿಯಾಗಿ ಬಾಳುತ್ತಾರೆ. ಸನ್ಮಾರ್ಗದಿಂದ ಆರ್ಜಿತ ಧನಸಂಪತ್ತನ್ನೂ ಹೊಂದುತ್ತಾರೆ. ಇವರಿಗೆ ಪುತ್ರ ಸಂಪತ್ತು ಪ್ರಾಪ್ತಿಸಲಿದೆ ಹಾಗೂ ಇವರು ಧಾರ್ಮಿಕ ಆಚರಣೆಯನ್ನು ಪಾಲಿಸುವವರಾಗಿರುತ್ತಾರೆ.

ದಶಮ ಭಾವದಲ್ಲಿ ಗುರುವಿರುವ ಜಾತಕದವರು ಸದಾಚಾರಿಯಾಗಿರುತ್ತಾರೆ. ಇವರು ಅತ್ಯಂತ ಧನವಂತರಾಗಿರುತ್ತಾರೆ. ಇವರ ಸದ್ಗುಣದಿಂದ ರಾಜನ ಪ್ರೀತಿಗೆ ಪಾತ್ರರಾಗುತ್ತಾರೆ.

ಗುರುವು ಏಕಾದಶ ಭಾವದಲ್ಲಿದ್ದರೆ ಧನಸಂಪತ್ತು ಪ್ರಾಪ್ತವಾಗುತ್ತದೆ. ಈ ಜಾತಕದವರು ನಿರ್ಭಯವವಾಗಿರುತ್ತಾರೆ. ಆದರೆ, ಇವರು ಅಲ್ಪಸಂತತಿಯುಳ್ಳವವರಾಗಿರುತ್ತಾರೆ. ಇವರು ದೀರ್ಘಾಯುವಾಗಿರುತ್ತಾರೆ ಹಾಗೂ ವಾಹನಸುಖ ಸಂಪನ್ನರಾಗಿರುತ್ತಾರೆ.

ದ್ವಾದಶದಲ್ಲಿ ಗುರುವಿದ್ದರೆ, ಇವರು ಅನ್ನದಿಂದ ದ್ವೇಷಿಸಲ್ಪಡುವವರಾಗಿರುತ್ತಾರೆ. ಈ ಜಾತಕದವರು ಅವಾಚ್ಯ ಮಾತುಗಳನ್ನಾಡುವವರಯ, ಪಾಪಕರ್ಮ ಹೊಂದಿರುವವಾರಾಗಿರುತ್ತಾರೆ. ಹೀನ ಕರ್ಮಗಳನ್ನು ಮಾಡುತ್ತ ಬದುಕುವವರು, ಆಲಸಿಯು ಹಾಗೂ ಸಂತತಿಹೀನರಾಗುತ್ತಾರೆ.

ಇದನ್ನೂ ಓದಿ: ಬಹುತೇಕ ಶುಭಫಲಗಳನ್ನೇ ನೀಡುವ ಬುಧನ ಭಾವಫಲಗಳು ಹೀಗಿವೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

PM Narendra Modi: ಬೆಂಗಳೂರಿನಲ್ಲಿ ಇಂದು ಮೋದಿ; ಸಂಚಾರಕ್ಕೆ ಪರ್ಯಾಯ ರಸ್ತೆಗಳ ಸೂಚನೆ

PM Narendra Modi: ವಾಹನ ಸವಾರರಿಗೆ ಅಡಚಣೆಯಾಗದಂತೆ ಸಂಚಾರಿ ಪೊಲೀಸರು ಕ್ರಮ ಜರುಗಿಸಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ. ಇಂದು ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಹಲವು ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ.

VISTARANEWS.COM


on

Modi In Karnataka
Koo

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನ ಅರಮನೆಗೆ ಮೈದಾನಕ್ಕೆ (Palace ground) ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಆಗಮಿಸಲಿದ್ದು, ಹಲವಾರು ಪ್ರಮುಖ ರಸ್ತೆಗಳ ಸಂಚಾರ ಬದಲಾವಣೆ (Traffic Change) ಮಾಡಲಾಗಿದೆ. ಸಾರ್ವಜನಿಕರು ಇದನ್ನು ಗಮನಿಸುವಂತೆ ಟ್ರಾಫಿಕ್‌ ಇಲಾಖೆ (traffic police) ಸೂಚಿಸಿದೆ.

ಮೋದಿ ನಗರ ಭೇಟಿಯ ವೇಳೆ ಅಹಿತಕರ ಘಟನೆ ಆಗದಂತೆ ನಗರ ಪೊಲೀಸರು ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಬಂದೋಬಸ್ತ್​​ಗಾಗಿ‌ ಎರಡು ಸಾವಿರ ಪೊಲೀಸರ ನಿಯೋಜನೆ ಮಾಡಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ನೇತೃತ್ವದಲ್ಲಿ ಭದ್ರತೆ ನಿಯೋಜನೆಗೊಂಡಿದೆ. ಸಮಾವೇಶ ನಡೆಯುವ ಅರಮನೆ ಮೈದಾನ, ಹೆಲಿಪ್ಯಾಡ್, ಮೇಕ್ರಿ ಸರ್ಕಲ್ ಹಾಗೂ ಬಳ್ಳಾರಿ ರಸ್ತೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ‌‌‌.

ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆಯಿದ್ದು, ಮೇಕ್ರಿ ಸರ್ಕಲ್‌ನಲ್ಲಿ ಚೊಂಬು ಪ್ರದರ್ಶಿಸಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಈ ಹಿನ್ನೆಲೆ ಸರ್ಕಲ್‌ನಲ್ಲಿ ಹೆಚ್ಚುವರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೇಕ್ರಿ ಸರ್ಕಲ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಅವಕಾಶವಿಲ್ಲ. ಪ್ರತಿಭಟನೆ ನಡೆಸಲು ಮುಂದಾದರೆ ಕೂಡಲೇ ವಶಕ್ಕೆ ಪಡೆದು ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

ಸಂಚಾರ ವ್ಯತ್ಯಯ

ಸಮಾವೇಶದ ನಂತರ ರಸ್ತೆ ಮಾರ್ಗವಾಗಿ ಮೋದಿ ಹೆಚ್.ಎ .ಎಲ್. ತಲುಪಲಿರುವರು. ಹೆಚ್.ಎ.ಎಲ್ ಮಾರ್ಗದಲ್ಲೂ ಕೂಡ ಹೆಜ್ಜೆ ಹಜ್ಜೆಗೆ ಪೊಲೀಸರು ನಿಯೋಜನೆಗೊಳ್ಳಲಿದ್ದಾರೆ. ಇದೇ ವೇಳೆ, ವಾಹನ ಸವಾರರಿಗೆ ಅಡಚಣೆಯಾಗದಂತೆ ಸಂಚಾರಿ ಪೊಲೀಸರು ಕ್ರಮ ಜರುಗಿಸಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ. ಇಂದು ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಹಲವು ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ.

ಪ್ಯಾಲೇಸ್ ರಸ್ತೆ, ಜಯಮಹಲ್, ರಮಣಮಹರ್ಷಿ ರಸ್ತೆ, ಮೌಂಟ್ ಕಾರ್ಮೆಲ್ ರಸ್ತೆ, ಜಯರಾಮ್ ರಸ್ತೆ, ಸಿ ವಿ ರಾಮನ್ ರಸ್ತೆ, ನಂದಿದುರ್ಗ ರಸ್ತೆ, ಮೇಕ್ರಿ ಸರ್ಕಲ್, ವಸಂತನಗರ, ಬಳ್ಳಾರಿ ರಸ್ತೆ ಮತ್ತು ತರಳಬಾಳು ರಸ್ತೆ ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸೂಚಿಸಲಾಗಿದೆ. ಸರಕು ಸಾಗಣೆ ವಾಹನಗಳ ಸಂಚಾರ ನಿಷೇಧವಿದ್ದು, ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸರಕು ಸಾಗಣೆ ವಾಹನಗಳಕ್ಕೆ ನಿರ್ಬಂಧ ಹೇರಲಾಗಿದೆ. ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ. ಸಿಎಂಐಟಿ ಜಂಕ್ಷನ್, ನ್ಯೂ ಬಿಇಎಲ್ ಜಂಕ್ಷನ್, ಮೈಸೂರು ಬ್ಯಾಂಕ್ ಜಂಕ್ಷನ್, ಬಿಹೆಚ್ಇಎಲ್ ಜಂಕ್ಷನ್, ಹೆಬ್ಬಾಳ ಜಂಕ್ಷನ್, ಬಸವೇಶ್ವರ ಜಂಕ್ಷನ್ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ.

ಬೆಂಗಳೂರಿನ ಅರಮನೆ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಮೊದಲು ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಅಲ್ಲಿಯೂ ಸಹ ಬಿಗಿ ಪೊಲೀಸ್​ ಬಂದೋಬಸ್ತ್ ಕೈಗೊಳ್ಳಲಾಗಿದೆ. ಉಭಯ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: Modi in Karnataka: ರಾಜ್ಯದಲ್ಲಿಂದು ಮೋದಿ ಮೋಡಿ; ಚಿಕ್ಕಬಳ್ಳಾಪುರದಲ್ಲಿ ಬೃಹತ್‌ ಸಮಾವೇಶ, ಬೆಂಗಳೂರಲ್ಲಿ ರೋಡ್‌ ಶೋ

Continue Reading

ಪ್ರಮುಖ ಸುದ್ದಿ

MS Dhoni : ಧೋನಿ ಆಡಲು ಇಳಿದಾಗ ಸ್ಟೇಡಿಯಮ್​ನಲ್ಲಿ ಶಬ್ದ ಮಾಲಿನ್ಯ; ಡಿಕಾಕ್ ಹೆಂಡತಿಯ ಪೋಸ್ಟ್​ ವೈರಲ್​

MS Dhoni: ಸಶಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ವಾಚ್​​ನ ಚಿತ್ರವನ್ನು ಹಂಚಿಕೊಂಡಿದ್ದು, ತನ್ನ ಸ್ಮಾರ್ಟ್ ವಾಚ್​​ನಲ್ಲಿ ತೋರಿಸಿರುವಂತೆ ಧ್ವನಿ ಮಟ್ಟವು 95 ಡೆಸಿಬಲ್​​ಗಳನ್ನು ದಾಟಿತ್ತು ಎಂದು ಬಹಿರಂಗಪಡಿಸಿದೆ. ಆದಾಗ್ಯೂ, ನಂತರದ ಸಂದೇಶವು ಎಲ್ಲರ ಗಮನ ಸೆಳೆಯಿತು. ಈ ಶಬ್ದದ ಮಟ್ಟದಲ್ಲಿ ಕೇವಲ 10 ನಿಮಿಷಗಳು ಕಳೆದರೆ ತಾತ್ಕಾಲಿಕ ಶ್ರವಣ ದೋಷ ಉಂಟಾಗಬಹುದು ಎಂದು ಸ್ಮಾರ್ಟ್ ವಾಚ್ ಅಲರ್ಟ್​ ನೀಡಿತ್ತು.

VISTARANEWS.COM


on

MS Dhoni
Koo

ಲಖನೌ: ಲಕ್ನೊ ಸೂಪರ್​ ಜೈಂಟ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ಪಂದ್ಯದ (IPL 2024) ವೇಳೆ ಎಂಎಸ್ ಧೋನಿ (MS Dhoni) ಬ್ಯಾಟಿಂಗ್​ಗೆ ಬಂದಾಗ ಲಕ್ನೋದ ಎಕಾನಾ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಅಬ್ಬರ ಏಕಾಏಕಿ ಜಾಸ್ತಿಯಾಗಿತ್ತು . ಅದು ಎಷ್ಟರ ಮಟ್ಟಿಗೆ ಎಂದರೆ ಆ್ಯಪಲ್​ ವಾಚ್​ ಶಬ್ದ ಮಾಲಿನ್ಯ ಮಿತಿಮೀರಿದೆ ಎಂದು ಅಲರ್ಟ್​ ಕೊಡುವ ತನಕ. ಈ ಮಾಹಿತಿಯನ್ನು ಲಕ್ನೊ ತಂಡದ ವಿಕೆಟ್​ ಕೀಪಿಂಗ್ ಬ್ಯಾಟರ್​ ಕ್ವಿಂಟನ್ ಡಿ ಕಾಕ್ ಅವರ ಪತ್ನಿ ಸಶಾ ಅವರು ಏಪ್ರಿಲ್ 19, ಶುಕ್ರವಾರ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಕಟಿಸಿದ್ದಾರೆ. ಧೋನಿ ಸ್ಟೇಡಿಯಮ್​​ಗೆ ಬ್ಯಾಟಿಂಗ್​ಗಾಗಿ ನಡೆದಾಗ ಕ್ರೀಡಾಂಗಣದಲ್ಲಿದ್ದ ಧ್ವನಿ ಮಟ್ಟವನ್ನು ಬಹಿರಂಗಪಡಿಸಿದ್ದಾರೆ.

ಸಶಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ವಾಚ್​​ನ ಚಿತ್ರವನ್ನು ಹಂಚಿಕೊಂಡಿದ್ದು, ತನ್ನ ಸ್ಮಾರ್ಟ್ ವಾಚ್​​ನಲ್ಲಿ ತೋರಿಸಿರುವಂತೆ ಧ್ವನಿ ಮಟ್ಟವು 95 ಡೆಸಿಬಲ್​​ಗಳನ್ನು ದಾಟಿತ್ತು ಎಂದು ಬಹಿರಂಗಪಡಿಸಿದೆ. ಆದಾಗ್ಯೂ, ನಂತರದ ಸಂದೇಶವು ಎಲ್ಲರ ಗಮನ ಸೆಳೆಯಿತು. ಈ ಶಬ್ದದ ಮಟ್ಟದಲ್ಲಿ ಕೇವಲ 10 ನಿಮಿಷಗಳು ಕಳೆದರೆ ತಾತ್ಕಾಲಿಕ ಶ್ರವಣ ದೋಷ ಉಂಟಾಗಬಹುದು ಎಂದು ಸ್ಮಾರ್ಟ್ ವಾಚ್ ಅಲರ್ಟ್​ ನೀಡಿತ್ತು.

ಅಬ್ಬರದ ವಾತಾವರಣ. ಶಬ್ದ ಮಟ್ಟವು 95 ಡೆಸಿಬಲ್ ಗಳನ್ನು ದಾಟಿದೆ. ಈ ಮಟ್ಟದಲ್ಲಿ ಕೇವಲ 10 ನಿಮಿಷಗಳು ತಾತ್ಕಾಲಿಕ ಶ್ರವಣ ನಷ್ಟಕ್ಕೆ ಕಾರಣವಾಗಬಹುದು” ಎಂದು ಸಾಶಾ ಡಿ ಕಾಕ್ ತಮ್ಮ ಸ್ಮಾರ್ಟ್ ವಾಚ್ ನಲ್ಲಿನ ಅಲರ್ಟ್​ ಅನ್ನು ಬಹಿರಂಗ ಮಾಡಿದ್ದಾರ. ಧೋನಿ ಮತ್ತೊಂದು ಸುಂಟರಗಾಳಿ ಸಿಕ್ಸರ್​ಗಳೊಂದಿಗೆ ಏಕಾನಾ ಕ್ರೀಡಾಂಗಣದಲ್ಲಿ ಪ್ರೇಕ್ಷಕರನ್ನು ಸಂಪೂರ್ಣವಾಗಿ ರಂಜಿಸಿದರು.

ಎಲ್ಎಸ್​ಜಿ ಮತ್ತು ಸಿಎಸ್​​ಕೆ ಮುಖಾಮುಖಿಯಲ್ಲಿ ಧೋನಿಯ ಪ್ರದರ್ಶನ ಹೇಗಿತ್ತು?


ಸಿಎಸ್​ಕೆ 17.5 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ಧೋನಿ ಕೇವಲ 9 ಎಸೆತಗಳಲ್ಲಿ 28 ರನ್ ಗಳಿಸಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಸಿಎಸ್​ಕೆ ತಂಡ 176 ರನ್​ ಗಳಿಸಲು ನೆರವಾದರು.

ಸಿಎಸ್​ಕೆ ಸ್ಟಾರ್ ಬೌಂಡರಿ ಮೂಲಕ ಇನಿಂಗ್ಸ್ ಆರಂಭಿಸಿದರು. ನಂತರ ಸಿಕ್ಸರ್ ಮೂಲಕ ರಂಜಿಸಿದರು. ಯಶ್ ಠಾಕೂರ್ ಅವರ ಅಂತಿಮ ಓವರ್​ನಲ್ಲಿ ಧೋನಿ ವಿಕೆಟ್​ಗಳ ನಡುವೆ ಓಡುವುದು ಸಹ ಸಂವೇದನಾಶೀಲವಾಗಿತ್ತು. ನಂತರ ಧೋನಿ 101 ಮೀಟರ್ ಸಿಕ್ಸರ್ ಬಾರಿಸಿ ಪ್ರೇಕ್ಷಕರನ್ನು ತಮ್ಮ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು. ಅವರು ತಮ್ಮ ದಿನದ ಕೆಲಸವನ್ನು ಮುಗಿಸಲು ಇನ್ನೂ ಒಂದೆರಡು ಬೌಂಡರಿಗಳನ್ನು ಹೊಡೆಯುತ್ತಿದ್ದರು.

Continue Reading

ಕ್ರೀಡೆ

Impact Player Rule : ಇಂಪ್ಯಾಕ್ಟ್​ ಪ್ಲೇಯರ್​​ ಸಿಕ್ಕಾಪಟ್ಟೆ ವಿರೋಧ; ಇದೀಗ ಋತುರಾಜ್​ ಸರದಿ

Impact Player Rule: ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ದೊಡ್ಡ ಅಭಿಮಾನಿಯಲ್ಲ. ಇದು ಆಲ್ರೌಂಡರ್​ಗಳನ್ನು ಹಾಳು ಮಾಡಲಿದೆ. ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಆಟಗಾರರು ಬೌಲಿಂಗ್ ಮಾಡಲು ಸಿಗುತ್ತಿಲ್ಲ. ಇದು ನಮಗೆ ಒಳ್ಳೆಯದಲ್ಲ. 12 ಆಟಗಾರರು ಇರುವುದರಿಂದ ಇದು ಮನರಂಜನೆಯಷ್ಟೇ ಎಂದು ರೋಹಿತ್ ಹೇಳಿದ್ದರು.

VISTARANEWS.COM


on

Impact Player Rule
Koo

ಲಖನೌ: ಐಪಿಎಲ್​​ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ (Impact Player Rule) ಅಗತ್ಯವಿದೆಯೇ? ಈ ರೀತಿಯ ಚರ್ಚೆಯೊಂದು ಜೋರಾಗಿ ಹುಟ್ಟಿಕೊಂಡಿದೆ. ಅದಕ್ಕೆ ಹಾಲಿ ಆಟಗಾರರು ಧ್ವನಿಗೂಡಿಸಿದ್ದಾರೆ. ಪಂದ್ಯದ ಯಾವುದೇ ಹಂತದಲ್ಲಿ ಆಟಗಾರನನ್ನು ಬದಲಿ ಆಟಗಾರನನ್ನಾಗಿ ಮಾಡಲು ತಂಡಕ್ಕೆ ಅವಕಾಶ ನೀಡುವ ಹೊಸ ಆವಿಷ್ಕಾರವು ತೀವ್ರವಾಗಿ ಟೀಕೆಗೆ ಒಳಗಾಗಿದೆ. ಮೊದಲು ಅಭಿಮಾನಿಗಳು ಮತ್ತು ತಜ್ಞರು ಈಗಾಗಲೇ ಇದಕ್ಕೆ ವಿರುದ್ಧವಾಗಿದ್ದರು. ಇದೀಗ ಆಟಗಾರರು ಅದನ್ನು ತೀವ್ರವಾಗಿ ವಿರೋಧ ಮಾಡುತ್ತಿದ್ದಾರೆ. ಋತುರಾಜ್​ ಗಾಯಕ್ವಾಡ್​ ಆ ಬಗ್ಗೆ ಧ್ವನಿ ಎತ್ತಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಾಯಕ ಋತುರಾಜ್ ಗಾಯಕ್ವಾಡ್ ತಮ್ಮ ತಂಡಕ್ಕೆ ಆರಾಮದಾಯಕ ಸೋಲಿನ ನಂತರ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ ವಿರುದ್ಧ ಕಠಿಣ ಪಿಚ್​​ನಲ್ಲಿ 176 ರನ್ ಗಳಿಸಿದರೂ, ಸಿಎಸ್​ಕೆ 8 ವಿಕೆಟ್​​ಗಳ ಹೀನಾಯ ಸೋಲನ್ನು ಅನುಭವಿಸಿತು. ಪಂದ್ಯದ ನಂತರ ನೀಡಿದ ಸಂದರ್ಶನದಲ್ಲಿ ರುತುರಾಜ್ ಹೀಗೆ ಹೇಳಿದ್ದಾರೆ:

ಅಷ್ಟೊಂದು ರನ್ ಬಾರಿಸಿದರೂ ಗೆಲುವು ಕಷ್ಟವಾಗುತ್ತಿದೆ. ಇಂಪ್ಯಾಕ್ಟ್ ಸಬ್ ರೂಲ್​ನೊಂದಿಗೆ 10-15 ಅಥವಾ 20 ರನ್​​ಗಳು ಹೆಚ್ಚುವರಿಯಾಗಿ ಬೇಕಾಗುತ್ತವೆ ಎಂದು ಹೇಳಿದ್ದಾರೆ.

ಆಲ್​ರೌಂಡರ್​ಗಳ ಬೆಳವಣಿಗೆಗೆ ಅಡ್ಡಿ

ಋತುರಾಜ್ ಗಾಯಕ್ವಾಡ್ ಕೂಡ ಇಂಪ್ಯಾಕ್ಟ್​ ಪ್ಲೇಯರ್​ನಿಂದ ಆಟದ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ಹೇಳಿದ್ದಾರೆ. ಈ ನಿಯಮದಿಂದಾಗಿ ಆಲ್​ರೌಂಡರ್​ಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಈ ಹಿಂದೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದ್ದಾರೆ.

ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ದೊಡ್ಡ ಅಭಿಮಾನಿಯಲ್ಲ. ಇದು ಆಲ್ರೌಂಡರ್​ಗಳನ್ನು ಹಾಳು ಮಾಡಲಿದೆ. ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಆಟಗಾರರು ಬೌಲಿಂಗ್ ಮಾಡಲು ಸಿಗುತ್ತಿಲ್ಲ. ಇದು ನಮಗೆ ಒಳ್ಳೆಯದಲ್ಲ. 12 ಆಟಗಾರರು ಇರುವುದರಿಂದ ಇದು ಮನರಂಜನೆಯಷ್ಟೇ ಎಂದು ರೋಹಿತ್ ಹೇಳಿದ್ದರು.

ಇದನ್ನೂ ಓದಿ: KL Rahul : ಐಪಿಎಲ್​ನಲ್ಲಿ ಧೋನಿಯ ದಾಖಲೆಯೊಂದನ್ನು ಮುರಿದ ಕೆ. ಎಲ್ ರಾಹುಲ್​

ವಿಶ್ವದ ಅತ್ಯುತ್ತಮ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ನಿಯಮದ ಬಗ್ಗೆ ಹೆಚ್ಚು ಸಂತೋಷವಾಗಿಲ್ಲ. ಬೌಲರ್ ಆಗಿ, ನಿಯಮವು ಬ್ಯಾಟರ್​​ಗಳಿಗೆ ಹೆಚ್ಚಿನ ನೆರವು ನೀಡುತ್ತದೆ ಎಂದು ಹೇಳಿದ್ದಾರೆ.

“ಸಮಯದ ನಿರ್ಬಂಧಗಳು ಮತ್ತು ಆಟಗಾರರ ನಿಯಮಗಳಿಂದಾಗಿ ಬೌಲರ್​ಗಳಿಗೆ ಕಷ್ಟವಾಗುತ್ತದೆ. ಇದು ಬೌಲರ್​​ಗಲ ಸಂಯಮ ಹಾಳು ಮಾಡಲು ಬ್ಯಾಟರ್​ಗಳಿಗೆ ನೆರವಾಗುತ್ತದೆ. ಈ ನಿಯಮದಿಂದಾಗಿ ಬೌಲರ್ ಶಕ್ತಿ ಅರ್ಧದಷ್ಟು ಇಳಿಯುತ್ತದೆ ಎಂದು ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

KL Rahul : ಐಪಿಎಲ್​ನಲ್ಲಿ ಧೋನಿಯ ದಾಖಲೆಯೊಂದನ್ನು ಮುರಿದ ಕೆ. ಎಲ್ ರಾಹುಲ್​

KL Rahul: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲುವಿನ ನಗೆ ಬೀರಿತು. ಎಲ್ಎಸ್​ಜಿ ನಾಯಕ ಆಕ್ರಮಣಕಾರಿ ಇನ್ನಿಂಗ್ಸ್ ಪ್ರಾರಂಭಿಸಿದರು. ಅವರ 82 ರನ್ ಗಳು ಎಲ್​​ಎಸ್​​ಜಿ ಗೆಲುವಿನಲ್ಲಿ ಪ್ರಮುಖ ಅಂಶವಾಗಿದೆ. ರವೀಂದ್ರ ಜಡೇಜಾ ಅವರ ಅದ್ಭುತ ಕ್ಯಾಚ್​ನಿಂದಾಗಿ ಔಟ್ ಆಗುವ ಮೊದಲು ಅವರು 9 ಬೌಂಡರಿಗಳು ಮತ್ತು 3 ಸಿಕ್ಸರ್​ಗಳನ್ನು ಬಾರಿಸಿದ್ದರು.

VISTARANEWS.COM


on

KL Rahul
Koo

ಲಕ್ನೋ: ಇಲ್ಲಿನ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. 176 ರನ್​ಗಳ ಗುರಿ ಬೆನ್ನತ್ತಿದ ಕೆ. ಎಲ್​ ರಾಹುಲ್ (KL Rahul) 53 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಈ ಮೂಲಕ ಐಪಿಎಲ್​ನಲ್ಲಿ ಹೊಸ ದಾಖಲೆ ಮಾಡಿದರು. ಅವರು ಅತಿ ಹೆಚ್ಚು 50+ ರನ್ ಗಳಿಸಿದ ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿಯ (MS Dhoni) ದಾಖಲೆಯನ್ನು ಮುರಿದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲುವಿನ ನಗೆ ಬೀರಿತು. ಎಲ್ಎಸ್​ಜಿ ನಾಯಕ ಆಕ್ರಮಣಕಾರಿ ಇನ್ನಿಂಗ್ಸ್ ಪ್ರಾರಂಭಿಸಿದರು. ಅವರ 82 ರನ್ ಗಳು ಎಲ್​​ಎಸ್​​ಜಿ ಗೆಲುವಿನಲ್ಲಿ ಪ್ರಮುಖ ಅಂಶವಾಗಿದೆ. ರವೀಂದ್ರ ಜಡೇಜಾ ಅವರ ಅದ್ಭುತ ಕ್ಯಾಚ್​ನಿಂದಾಗಿ ಔಟ್ ಆಗುವ ಮೊದಲು ಅವರು 9 ಬೌಂಡರಿಗಳು ಮತ್ತು 3 ಸಿಕ್ಸರ್​ಗಳನ್ನು ಬಾರಿಸಿದ್ದರು.

ಧೋನಿ ಹಿಂದಿಕ್ಕಿದ ರಾಹುಲ್​

ಕೆಎಲ್ ರಾಹುಲ್ ಐಪಿಎಲ್​​ನಲ್ಲಿ ಹೆಚ್ಚು 50+ ಸ್ಕೋರ್​ಗಳನ್ನು ಗಳಿಸಿದ ವಿಕೆಟ್ ಕೀಪರ್ ಆಗಿ ಸಿಎಸ್​ಕೆ ಮಾಜಿ ನಾಯಕನನ್ನು ಹಿಂದಿಕ್ಕಿದರು. ಇದು ಕೆ.ಎಲ್.ರಾಹುಲ್ ಅವರ 25ನೇ ಅರ್ಧಶತಕ. ಧೋನಿ ಈವರೆಗೆ 24 ಅರ್ಧಶತಕಗಳನ್ನು ಬಾರಿಸಿದ್ದಾರೆ. ಕೆಎಲ್ ರಾಹುಲ್ ಅವರ ಆರಂಭಿಕ ಪಾಲುದಾರ ಕ್ವಿಂಟನ್ ಡಿ ಕಾಕ್ 23 50+ ಸ್ಕೋರ್​​ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಐಪಿಎಲ್​​ನಲ್ಲಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು 50+ ಸ್ಕೋರ್

  • 25- ಕೆಎಲ್ ರಾಹುಲ್
  • 24- ಧೋನಿ
  • 23 – ಡಿ ಕಾಕ್
  • 21 – ಡಿ ಕಾರ್ತಿಕ್
  • 18 – ಉತ್ತಪ್ಪ
  • 17- ರಿಷಭ್ ಪಂತ್
  • 17 – ಸ್ಯಾಮ್ಸನ್
  • 14 – ಸಹಾ
  • 13 – ಗಿಲ್ಕ್ರಿಸ್ಟ್
  • 13 – ಪಾರ್ಥಿವ್
  • 11 – ಇಶಾನ್
  • 10 – ಡಿವಿಲಿಯರ್ಸ್

ಪಂದ್ಯದಲ್ಲಿ ಏನಾಯಿತು?

ಲಖನೌ: ಕೆ. ಎಲ್​. ರಾಹುಲ್​ (82 ರನ್​, 53 ಎಸೆತ, 9 ಫೋರ್, 3 ಸಿಕ್ಸರ್​) ಹಾಗೂ ಕ್ವಿಂಟನ್ ಡಿ ಕಾಕ್​ (54 ರನ್​, 43 ಎಸೆತ, 5 ಫೋರ್​, 1 ಸಿಕ್ಸರ್​) ಜೋಡಿಯ ಅರ್ಧ ಶತಕಗಳ ನೆರವು ಪಡೆದ ಲಕ್ನೊ ಸೂಪರ್ ಜೈಂಟ್ಸ್​ ತಂಡ ಐಪಿಎಲ್​ನ 2024ನೇ (IPL 2024) ಆವೃತ್ತಿಯ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಸತತ ಎರಡು ಸೋಲುಗಳ ಬಳಿಕ ಗೆಲವಿನ ಟ್ರ್ಯಾಕ್​ಗೆ ಮರಳಿದೆ. ಲಕ್ನೊ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕನೇ ಗೆಲುವಾಗಿದೆ. ಅತ್ತ ಚೆನ್ನೈ ತಂಡ ಆಡಿರುವ ಏಳರಲ್ಲಿ ಮೂರನೇ ಸೋಲಿಗೆ ಒಳಗಾಯಿತು.

ಇದನ್ನೂ ಓದಿ: IPL 2024 : ಪಾಂಡ್ಯ ಅಂದ್ರೆ ಡೋಂಟ್​ ಕೇರ್​, ರೋಹಿತ್​ಗೆ ಫುಲ್​ ರೆಸ್ಪೆಕ್ಟ್​; ಯುವ ಬೌಲರ್​ನ ನಡೆ ಫುಲ್ ವೈರಲ್​

ಇಲ್ಲಿನ ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಮಾಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಆರಂಭಿಕ ವಿಕೆಟ್​ಗಳ ನಷ್ಟದ ಹೊರತಾಗಿಯೂ ಕೊನೇ ಹಂತದಲ್ಲಿ ಉತ್ತಮವಾಗಿ ಆಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಲಕ್ನೊ ತಂಡ 19 ಓವರ್​ಗಳಲ್ಲಿ 2ವಿಕೆಟ್ ನಷ್ಟಕ್ಕೆ 180 ರನ್​ ಬಾರಿಸಿ ಗೆಲುವು ಸಾಧಿಸಿತು.

ಇಲ್ಲಿನ ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಮಾಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಆರಂಭಿಕ ವಿಕೆಟ್​ಗಳ ನಷ್ಟದ ಹೊರತಾಗಿಯೂ ಕೊನೇ ಹಂತದಲ್ಲಿ ಉತ್ತಮವಾಗಿ ಆಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಲಕ್ನೊ ತಂಡ 19 ಓವರ್​ಗಳಲ್ಲಿ 2ವಿಕೆಟ್ ನಷ್ಟಕ್ಕೆ 180 ರನ್​ ಬಾರಿಸಿ ಗೆಲುವು ಸಾಧಿಸಿತು.

ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಚೆನ್ನೈ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಅಜಿಂಕ್ಯ ರಹಾನೆ 36 ರನ್ ಬಾರಿಸಿದ ಹೊರತಾಗಿಯೂ ರಚಿನ್ ರವಿಂದ್ರ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಋತುರಾಜ್​ 17 ರನ್​ಗೆ ಸೀಮಿತಗೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ರವಿಂದ್ರ ಜಡೇಜಾ ನಿಧಾನವಾಗಿ ಇನಿಂಗ್ಸ್ ಕಟ್ಟಿದರು. ಅವರು 40 ಎಸೆತ ಬಳಸಿಕೊಂಡು 57 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಚೆನ್ನೈತಂಡದ ಆಪತ್ಬಾಂಧವ ಶಿವಂ ದುಬೆ 3 ರನ್​ಗೆ ಸೀಮಿತಗೊಂಡರೆ ರಿಜ್ವಿ ಕೇವಲ 1 ರನ್​ಗೆ ಔಟಾದರು. 90 ರನ್​ಗೆ 5 ವಿಕೆಟ್​ ಕಳೆದುಕೊಂಡ ಚೆನ್ನೈಗೆ ಕೊನೆಯಲ್ಲಿ ಮೊಯಿನ್ ಅಲಿ 30 ರನ್​ ಹಾಗೂ ಮಹೇಂದ್ರ ಸಿಂಗ್ ಧೋನಿ 28 ರನ್ ಬಾರಿಸಿದರು.

Continue Reading
Advertisement
Modi In Karnataka
ಪ್ರಮುಖ ಸುದ್ದಿ19 mins ago

PM Narendra Modi: ಬೆಂಗಳೂರಿನಲ್ಲಿ ಇಂದು ಮೋದಿ; ಸಂಚಾರಕ್ಕೆ ಪರ್ಯಾಯ ರಸ್ತೆಗಳ ಸೂಚನೆ

MS Dhoni
ಪ್ರಮುಖ ಸುದ್ದಿ38 mins ago

MS Dhoni : ಧೋನಿ ಆಡಲು ಇಳಿದಾಗ ಸ್ಟೇಡಿಯಮ್​ನಲ್ಲಿ ಶಬ್ದ ಮಾಲಿನ್ಯ; ಡಿಕಾಕ್ ಹೆಂಡತಿಯ ಪೋಸ್ಟ್​ ವೈರಲ್​

Impact Player Rule
ಕ್ರೀಡೆ57 mins ago

Impact Player Rule : ಇಂಪ್ಯಾಕ್ಟ್​ ಪ್ಲೇಯರ್​​ ಸಿಕ್ಕಾಪಟ್ಟೆ ವಿರೋಧ; ಇದೀಗ ಋತುರಾಜ್​ ಸರದಿ

Tillu Square anupama parameswaran movie tillu square release date
ಒಟಿಟಿ1 hour ago

Tillu Square: ಅನುಪಮಾ ಪರಮೇಶ್ವರನ್‌‌ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಬಹಿರಂಗ

rowdy sheeters attack bangalore
ಕ್ರೈಂ1 hour ago

Rowdy Sheeters: ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಮಚ್ಚು ಲಾಂಗ್, ಬೀದಿಯಲ್ಲೇ ಅಟ್ಟಾಡಿಸಿದರು!

KL Rahul
ಪ್ರಮುಖ ಸುದ್ದಿ1 hour ago

KL Rahul : ಐಪಿಎಲ್​ನಲ್ಲಿ ಧೋನಿಯ ದಾಖಲೆಯೊಂದನ್ನು ಮುರಿದ ಕೆ. ಎಲ್ ರಾಹುಲ್​

Neha Murder Case dhruva sarja priya savadi and kavya shastry condemn
ಸಿನಿಮಾ2 hours ago

Neha Murder Case: ನೇಹಾ ಹತ್ಯೆ: ಅಪರಾಧಿಗೆ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ

IPL 2024
ಕ್ರೀಡೆ2 hours ago

IPL 2024 : ಸೋಲಿನ ಬಳಿಕ ಚೆನ್ನೈ ತಂಡದ ಅಂಕಪಟ್ಟಿಯಲ್ಲಿನ ಸ್ಥಾನವೆಷ್ಟು? ಇಲ್ಲಿದೆ ಎಲ್ಲ ವಿವರ

cet exam karnataka exam authority
ಪ್ರಮುಖ ಸುದ್ದಿ2 hours ago

CET Exam: ಸಿಇಟಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಭಾರೀ ಗೊಂದಲ, ದೂರು ನೀಡಲು ಏ.27ರವರೆಗೆ ಕಾಲಾವಕಾಶ

Ancient snake vasuki indicus
ವೈರಲ್ ನ್ಯೂಸ್2 hours ago

Ancient snake: ಭಾರತದಲ್ಲಿತ್ತು 1000 ಕಿಲೋ ತೂಕ, 50 ಅಡಿ ಉದ್ದದ ʼವಾಸುಕಿʼ ಹಾವು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ19 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20246 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ1 week ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

ಟ್ರೆಂಡಿಂಗ್‌