navavidha bhakti about pada sevanam bhakti you should know in kannadaNavavidha Bhakti : ಪಾದಸೇವೆಯಿಂದಲೂ ಭಕ್ತಿಯ ವೃದ್ಧಿ - Vistara News

ಪ್ರಮುಖ ಸುದ್ದಿ

Navavidha Bhakti : ಪಾದಸೇವೆಯಿಂದಲೂ ಭಕ್ತಿಯ ವೃದ್ಧಿ

ಭಕ್ತಿಯ ಸ್ವರೂಪವನ್ನು ಒಂಬತ್ತು ರೀತಿಯಲ್ಲಿ ವಿಂಗಡಿಸಲಾಗಿದೆ. ಈ ಸ್ವರೂಪಗಳನ್ನು ಪರಿಚಯಿಸುವ ʻನವವಿಧ ಭಕ್ತಿʼ (Navavidha Bhakti) ಲೇಖನ ಮಾಲೆಯ ಆರನೇ ಲೆಖನ ಇಲ್ಲಿದೆ. ಇಂದು ಭಕ್ತಿಯ ಮತ್ತೊಂದು ರೂಪವಾದ ಪಾದಸೇವೆಯ ಕುರಿತು ವಿವರಿಸಲಾಗಿದೆ.

VISTARANEWS.COM


on

navavidha bhakti about pada sevanam bhakti you should know in kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಡಾ. ಸಿ. ಆರ್. ರಾಮಸ್ವಾಮಿ
ನವಧಾಭಕ್ತಿಯಲ್ಲಿ (Navavidha Bhakti) ನಾಲ್ಕನೆಯ ಹೆಜ್ಜೆ “ಪಾದಸೇವನಂ”. ‘ಪಾದಸೇವನಂ’ ಎಂದರೆ ಭಗವಂತನ ಪಾದಗಳನ್ನು ಸೇವಿಸುವುದು. ಸೇವಿಸುವುದು, ಸೇವೆ ಮಾಡುವುದೆಂದರೆ ಸಾಷ್ಟಾಂಗ ನಮಸ್ಕಾರ ಮಾಡುವುದು ಅಥವಾ ಅವನ ಪಾದವನ್ನು ಒತ್ತುವುದು ಎನ್ನುವ ಅರ್ಥದಲ್ಲಿದೆ. ಪಾದಸ್ಪರ್ಶ ಮಾಡುವುದು, ಪಾದಪೂಜೆ ಮಾಡುವುದು ಮುಂತಾದ ವಿಷಯಗಳು ಭಾರತೀಯರ ಸಂಪ್ರದಾಯದಲ್ಲುಂಟು.

ಸಾಕ್ಷಾತ್ ಮಹಾಲಕ್ಷ್ಮೀಯು ಸದಾಕಾಲದಲ್ಲಿಯೂ ವೈಕುಂಠದಲ್ಲಿ ಭಗವಂತನ ಪಾದಸೇವೆಯನ್ನು ಮಾಡುತ್ತಿರುತ್ತಾಳೆ ಎಂಬುದನ್ನು ಪುರಾಣಗಳಿಂದ ತಿಳಿಯುತ್ತೇವೆ. “ಸರ್ವಾಭೀಷ್ಟಫಲಪ್ರದೆ”ಯಾಗಿರುವ (ಎಲ್ಲರಿಗೂ ಎಲ್ಲ ಅಭಿಲಾಷೆಗಳನ್ನೂ ದಯಪಾಲಿಸುವವಳು) ಆ ಮಹಾಮಾತೆಯು ಸೇವೆ ಮಾಡುವುದು ಯಾವ ಫಲಕ್ಕಾಗಿಯೂ ಅಲ್ಲ – ಸ್ವಯಂ ಪ್ರೇರಿತಳಾಗಿ, ಸ್ವಂತ ಸುಖಕ್ಕಾಗಿ. ಮಹಾಲಕ್ಷ್ಮೀಗೆ ಯಾವ ಫಲದ ಅಪೇಕ್ಷೆಯೂ ಇಲ್ಲವಷ್ಟೇ. ಏಕೆಂದರೆ, ಧನ-ಧಾನ್ಯ-ಸಂತಾನ-ವಿದ್ಯಾ ಮುಂತಾದ ಅಷ್ಟೈಶ್ವರ್ಯಗಳಿಗೂ ಸ್ವಾಮಿನಿ ಶ್ರೀಲಕ್ಷ್ಮೀ ಅವಳೇ.

ಪಾದವೇ ಏಕೆ?

ವೈಕುಂಠದಲ್ಲಿ ಮಹಾಲಕ್ಷ್ಮೀಯು ಪಾದಸೇವೆ ಮಾಡಿದರೆ ಆ ಪಾದಸೇವೆಯನ್ನು ಸ್ಮರಣೆಮಾಡಿಕೊಳ್ಳುವುದೇ ನಾವು ಮಾಡುವ ಪಾದಸೇವೆಯಾಗುತ್ತದೆ. ಅದೇ ನಿಜವಾಗಲೂ ನಮ್ಮನ್ನು ಮೂಲಕ್ಕೆ ಕರೆದುಕೊಂಡು ಹೋಗುವುದು. ಉನ್ನತವಾದ-ಶಿರಸ್ಥಾನದಲ್ಲಿ ಇರುವ ಸಹಸ್ರಾರದಲ್ಲಿ ಜೀವ-ದೇವರ ಯೋಗ ಉಂಟಾಗುತ್ತದೆ ಎಂಬುದನ್ನು ಹಿಂದೆಯೇ ಸ್ಮರಿಸಿಕೊಂಡಿದ್ದೆವು. ಹಾಗೆ ಶಿರಸ್ಸಿನ ಸ್ಥಾನಕ್ಕೆ ನೇರವಾಗಿ ಆರೋಹಣ ಮಾಡುವುದು ಕಷ್ಟಸಾಧ್ಯವಾದದ್ದು. ಆದರೆ, ಅವನ ಪಾದವನ್ನು ಹಿಡಿದುಕೊಂಡಾಗ ಅವನೇ ನಮ್ಮನ್ನು ಮೇಲಕ್ಕೆತ್ತಿ ಸಹಸ್ರಾರದ ಸ್ಥಾನಕ್ಕೆ ಕರೆದೊಯ್ಯುತ್ತಾನೆ. ಆ ಯೋಗವನ್ನು ದಯಪಾಲಿಸುತ್ತಾನೆ.

ಅಂತಹ ಸಾಮರ್ಥ್ಯ ಭಗವಂತನ ಪಾದಕ್ಕೆ-ಪಾದಸ್ಪರ್ಶಕ್ಕುಂಟು. ಪಾದಾಂಗುಷ್ಠಕ್ಕೂ ಶಿರಸ್ಸಿಗೂ (ಸಹಸ್ರಾರಕ್ಕೂ)ಒಂದು ನೇರ-ಸಂಬಂಧ ಉಂಟು ಎಂದು ನಾಡೀಶಾಸ್ತ್ರವು ತಿಳಿಸುತ್ತದೆ. ಭಗವಂತನ ಅಥವಾ ಬ್ರಹ್ಮಜ್ಞಾನಿಗಳ ಪಾದಾಂಗುಷ್ಠವನ್ನು ಮುಟ್ಟಿದಕೂಡಲೇ ಸ್ಪರ್ಶಿಸಿದವರ ಮನಸ್ಸು ಮತ್ತು ಪ್ರಾಣಗಳು ಊರ್ಧ್ವಮುಖವಾಗುವುದು. ಉನ್ನತಸ್ಥಾನಕ್ಕೇರುವುದು. ಆದ್ದರಿಂದಲೇ ಪಾದಸ್ಪರ್ಶವೆನ್ನುವುದು ವಿಶೇಷವೆಂದು ಗುರುತಿಸಲ್ಪಟ್ಟಿದೆ.

ಅವತಾರ ಕಾಲದಲ್ಲಿ ಹೇಗಿತ್ತು?

ಭಗವಂತನ ಅವತಾರವಾದ ರಾಮಾವತಾರ, ಕೃಷ್ಣಾವತಾರ ಮುಂತಾದವುಗಳಲ್ಲಿ ಅವನ ಪಾದಸ್ಪರ್ಶ ಮಾಡಿದವರು ಅನೇಕ ಮಂದಿ. ಸಾಧ್ವಿನಿಯಾದ ಅಹಲ್ಯೆಗೆ ಶಾಪವಿಮೋಚನವಾಗಿದ್ದುದು ಶ್ರೀರಾಮನ ಪಾದಸ್ಪರ್ಶಮಾತ್ರದಿಂದಲೇ ಅಲ್ಲವೇ. ಈ ಘಟನೆಯನ್ನು ಸ್ಮರಿಸಿ, ರಾಮನ ಪಾದದಲ್ಲಿರುವ ವಿಶೇಷ ಮೂಲಿಕೆಯ ಸ್ಪರ್ಶದಿಂದ ಶಿಲೆಯೂ ಸ್ತ್ರೀ ರೂಪತಾಳಿತೆಂದು ಊಹಿಸಿದವ ಭಕ್ತಶಿರೋಮಣಿಯೂ ರಾಮನ ಪರಮ ಮಿತ್ರನೂ ಆದ ಗುಹ. ಆದುದರಿಂದಲೇ ಆ ಪಾದಸ್ಪರ್ಶದಿಂದ ತನ್ನ ಹಡಗೂ ಸ್ತ್ರೀಯಾದರೆ ತನ್ನ ವೃತ್ತಿಗೇ ಅಪಾಯವಾದೀತೆಂದು ವಿನೋದದಿಂದ ನುಡಿದು ಆ ಪರಮಪಾವನವಾದ ಪಾದಗಳನ್ನು ತೊಳೆದೇ ನಾವೆಯಲ್ಲಿ ಕೂರಿಸಿದ ನಾವಿಕಶ್ರೇಷ್ಠ ಗುಹಮಹಾಶಯ!

“ಸರ್ವತೀರ್ಥಗಳೂ ತನ್ನ ಪಾದದಲ್ಲೇ ನೆಲೆಸಿವೆ” ಎಂಬ ತತ್ತ್ವಾರ್ಥವನ್ನು– ಕೈಗಳನ್ನು ತನ್ನ ಪಾದಗಳ ಕಡೆಗೆ ನಿರ್ದೇಶಿಸುವುದರ ಮೂಲಕ ಬಲರಾಮರಿಗೆ ಬೋಧಿಸಿದವನು ಶ್ರೀಕೃಷ್ಣ. ಹಿಂದೆ ತ್ರಿವಿಕ್ರಮಾವತಾರದಲ್ಲಿ ತನ್ನ ಒಂದು ಪಾದ ಬ್ರಹ್ಮಲೋಕವನ್ನು ವ್ಯಾಪಿಸಿದಾಗ ಬ್ರಹ್ಮದೇವರು ತಮ್ಮ ಕಮಂಡಲದ ಗಂಗೆಯಿಂದ ಆ ಪಾದಗಳನ್ನು ತೊಳೆದರಂತೆ. ಆ ಪಾದೋದಕವೇ ಮುಂದೆ ಧರೆಗಿಳಿದು ಲೋಕವನ್ನೆಲ್ಲಾ ಪಾವನಮಾಡಿದ ಗಂಗೆ ಎಂಬುದೂ ಸುಪ್ರಸಿದ್ಧ.

ಪಾದ ಸಿಗದಿದ್ದರೆ ಪಾದುಕೆಗಳ ಪೂಜೆ

navavidha bhakti about pada sevanam bhakti you should know in kannada

ಭಗವಂತನ ಪಾದುಕೆಗಳಿಗೆ ಪೂಜೆ ಮಾಡುವುದು ಮತ್ತೊಂದು ಕ್ರಮ. ಅದಕ್ಕೂ ಕೂಡ ಅಷ್ಟೇ ಬೆಲೆ ಉಂಟು ಎಂಬುದಾಗಿ ಜ್ಞಾನಿಗಳು ಹೇಳುತ್ತಾರೆ. ಸಂಪ್ರದಾಯದಲ್ಲೂ ಪಾದುಕೆಗಳಿಗೆ ಪೂಜೆಮಾಡುವ ಕ್ರಮವುಂಟು. ಅದನ್ನು ಪೂಜೆ ಮಾಡಿದರೂ ಅದು ಭಗವಂತನ ಪಾದಕ್ಕೆ ಮಾಡುವಂತಹ ಸೇವೆಯೇ ಆಗುತ್ತದೆ.

ಇದಕ್ಕೆ ಪ್ರಸಿದ್ಧವಾದ ಉದಾಹರಣೆಯೊಂದನ್ನು ಶ್ರೀಮದ್ರಾಮಾಯಾಣದಲ್ಲಿ ನೋಡಬಹುದಾಗಿದೆ. ಶ್ರೀರಾಮನು ವನವಾಸದ ಪ್ರಾರಂಭದಲ್ಲಿ ಚಿತ್ರಕೂಟದಲ್ಲಿರುವಾಗ ಭರತನು ರಾಮನನ್ನು ಅಯೋಧ್ಯೆಗೆ ಹಿಂತಿರುಗುವಂತೆ ಪ್ರಾರ್ಥಿಸಲು ಅಲ್ಲಿಗೆ ಬರುತ್ತಾನೆ. ಇಬ್ಬರಿಗೂ ಒಂದು ತರಹದ ಪ್ರೀತಿಯ-ವಾಗ್ಯುದ್ಧವೇ ನಡೆಯುತ್ತದೆ. ಭರತ ಪರಮಭಕ್ತ. ಅತ್ಯಂತ ಪ್ರೀತಿಯಿಂದ ರಾಮನನ್ನು “ನೀನೇ ರಾಜ್ಯವನ್ನಾಳಬೇಕು. ನನಗೆ ಆ ಯೋಗ್ಯತೆ ಇಲ್ಲ” ಎಂದು ಹೇಳಿ ಅವನನ್ನು ಆಯೋಧ್ಯೆಗೆ ಕರೆದೊಯ್ಯಲು ನಾನಾರೀತಿಯ ಪ್ರೇಮಭರಿತ ಮಾತುಗಳಿಂದ ಕಟ್ಟಿಹಾಕುತ್ತಾನೆ.

ಆದರೂ ಶ್ರೀರಾಮನ ಧರ್ಮದ ಕಟ್ಟು ಸಡಿಲವಾಗುವುದಿಲ್ಲ. ಇವರಿಬ್ಬರ ನಡುವೆ ಸಂಭವಿಸಿದ ಪ್ರೇಮ-ಧರ್ಮದ ’ಸಂಗ್ರಾಮ’ವು ಜನಕ-ವಸಿಷ್ಠಾದಿಗಳನ್ನೂ ಮೂಕವಿಸ್ಮಯರನ್ನಾಗಿಸುತ್ತದೆ. “ಧರ್ಮವನ್ನು ಪಾಲಿಸಬೇಕು. ತಂದೆಯ ಮಾತನ್ನು ಉಳಿಸಬೇಕು” ಎಂದು ಹೇಳಿ ರಾಮನು ಹಿಂತಿರುಗಲು ಒಪ್ಪುವುದಿಲ್ಲ. ಕೊನೆಗೆ ಒಂದು ಒಪ್ಪಂದವಾಗುತ್ತದೆ. ಅದರಂತೆ ಸ್ವರ್ಣಾಲಂಕೃತವಾದ ಪಾದುಕೆಗಳ ಮೇಲೆ ಶ್ರೀರಾಮನು ತನ್ನ ಪಾದಗಳನ್ನಿರಿಸಿ ಭರತನಿಗೆ ಅನುಗ್ರಹಿಸಿ ಕೊಡುತ್ತಾನೆ. ಭರತನು ಆ ಪಾದುಕೆಗಳನ್ನು ಶಿರಸ್ಸಿನಲ್ಲಿ ಧರಿಸಿ ನಂದಿಗ್ರಾಮದಲ್ಲಿ ಅವುಗಳಿಗೆ ಪಟ್ಟಾಭಿಷೇಕವನ್ನು ಮಾಡುತ್ತಾನೆ. ರಾಜ್ಯದ ಸಕಲ ವ್ಯವಹಾರಗಳನ್ನೂ ಪಾದುಕೆಗಳಿಗೆ ನಿವೇದಿಸಿ ತಾನು ಅದರ ದಾಸನಾಗಿ ಕಾರ್ಯನಿರ್ವಹಿಸುತ್ತಾನೆ.

ಪಾದುಕೆ ಜಡವಸ್ತುವಲ್ಲವೇ? ಅದಕ್ಕೆ ಪಟ್ಟಾಭಿಷೇಕವೆಂದರೇನು? ರಾಜ್ಯದ ವ್ಯವಹಾರಗಳನ್ನು ನಿವೇದಿಸುವು ದೆಂದರೇನು? ಎಲ್ಲವೂ ಹಾಸ್ಯಾಸ್ಪದವಲ್ಲವೇ? ಎನ್ನಿಸಬಹುದು. ಶ್ರೀರಂಗಮಹಾಗುರುಗಳ ಮಾತುಗಳು ಇಲ್ಲಿ ಸ್ಮರಣೀಯ: ವ್ಯವಹಾರದಲ್ಲಿ ಜಡವಸ್ತುವೇ ಆಗಿದ್ದರೂ ಅದರಲ್ಲಿ ಒಂದು ಮುದ್ರೆಯನ್ನು ಒತ್ತಿದ್ದರೆ ಅದಕ್ಕೆ ಬೆಲೆಕೊಡುವುದಿಲ್ಲವೇ ನಾವು? ರಾಷ್ಟ್ರಧ್ವಜ ಕಾಗದದ ರೂಪದಲ್ಲೋ ಬಟ್ಟೆಯ ರೂಪದಲ್ಲೋ ಇರಬಹುದು. ಅದನ್ನು ಹರಿದರೆ ರಾಷ್ಟ್ರದ್ರೋಹಿಗಳೆನ್ನುತ್ತಾರೆ. ಅಲ್ಲಿ ಬೆಲೆ ಕಾಗದ/ಬಟ್ಟೆಗಲ್ಲ. ಅದರ ಮೇಲಿರುವ ರಾಷ್ಟ್ರದ ಭಾವಕ್ಕಾಗಿ. ಅಂತೆಯೇ ಸಂಕಲ್ಪ ಪೂರ್ವಕವಾಗಿ ರಾಮನು ತನ್ನ ಶಕ್ತಿಯನ್ನು ಅದರಲ್ಲಿ ಮುದ್ರಿಸಿದ್ದರೆ ಆಗ ಅವು ಬರಿ ಮರದ ಪಾದುಕೆಗಳಲ್ಲ. ಅವನ ಶಕ್ತಿಯನ್ನು ಹೊತ್ತ ಪಾದುಕೆಗಳಿಗೆ ಅವನಿಗೆ ಕೊಡುವ ಮರ್ಯಾದೆ-ಗೌರವಾದರಗಳನ್ನೇ ಸಲ್ಲಿಸಬೇಕು. “ಮರದ ಪಾದುಕೆಗಳಂತೆ ಕಂಡರೂ ಅವು ಅಮರಭಾವಕ್ಕೆ (ನಾಶವಿಲ್ಲದ ಸ್ಥಿತಿಗೆ) ಕೊಂಡೊಯ್ಯುವಂತಹವುಗಳು”.

‘ಪಾದಸೇವನಂ’ ಕುರಿತು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ.

ಪಾದುಕಾಸಹಸ್ರ ಬಗ್ಗೆ ಗೊತ್ತೇ?

ವೇದಾಂತದೇಶಿಕರೆಂಬ ಶ್ರೀವೈಷ್ಣವ ಆಚಾರ್ಯರು ಪರಮಭಾಗವತರೂ-ಮಹಾವಿದ್ವಾಂಸರೂ ಆಗಿದ್ದರು. ಆಶುಕವಿತ್ವವನ್ನು ಹೊಂದಿದ್ದ ಮಹಾಕವಿಗಳೂ ಆಗಿದ್ದರು. ಒಂದು ರಾತ್ರಿಯಲ್ಲಿಯೇ ಭಗವಂತನ ಪಾದುಕೆಗಳನ್ನು ಕುರಿತು “ಪಾದುಕಾಸಹಸ್ರ”ವೆಂಬ ಒಂದು ಸಾವಿರ ಶ್ಲೋಕಗಳನ್ನು ರಚಿಸಿದ ಭಕ್ತ-ಕವಿಪುಂಗವರು. ಅಂದೇ ಅವರು ‘ಕವಿತಾರ್ಕಿಕಸಿಂಹ’ ಎಂಬ ಬಿರುದನ್ನು ಪಡೆದರು. ಈ ಕೃತಿಯಲ್ಲಿ, ಭಕ್ತಿಗೆ-ಭಕ್ತರಿಗೆ ಪ್ರಥಮ ಉದಾಹರಣೆಯಾಗಿಯೂ, ಶ್ರೀರಾಮನ ಪಾದುಕಾಪ್ರಭಾವವನ್ನು ಮೊಟ್ಟಮೊದಲು ಲೋಕಕ್ಕೆಲ್ಲ ಕೊಟ್ಟವನು ಭರತನು ಎಂಬುದಾಗಿಯೂ ಕೊಂಡಾಡುತ್ತಾರೆ.

ಮಹಾತ್ಮರ-ಭಕ್ತರ-ಜ್ಞಾನಿಗಳ-ಪಾದಸ್ಪರ್ಶವೂ ಪಾವನವಾದುದು. ಅವು ನಮ್ಮನ್ನು ಮುಕ್ತಿಮಾರ್ಗಕ್ಕೆ ಕರೆದೊಯ್ಯಲು ಸಹಾಯಕವಾಗುತ್ತದೆ. ಆದ್ದರಿಂದ ಇದೂ ಸಹ ಸಾಧಕನಿಗೆ ಭಕ್ತಿಯನ್ನು ವೃದ್ಧಿ ಮಾಡುವ ಉತ್ತಮ ಮಾರ್ಗವಾಗುತ್ತದೆ. ಇಷ್ಟಲ್ಲದೇ ಭಗವಂತನಲ್ಲಿ ತನ್ಮಯತೆಯನ್ನು ಹೊಂದಿದ ಭಾಗವತರ-ಸದ್ಗುರುಗಳ-ಆಚಾರ್ಯಶ್ರೇಷ್ಠರ ಪಾದುಕೆಗಳೂ ಸಹ ಪೂಜನೀಯವೇ.
(ಮುಂದುವರಿಯುವುದು)

– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ
, ಬೆಂಗಳೂರು

ಇದನ್ನೂ ಓದಿ: Navavidha Bhakti : ಭಕ್ತಿ- ಮುಕ್ತಿಗಳನ್ನೀವ ಭಗವಂತನ ಸ್ಮರಣೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Prajwal Revanna Case: ನನ್ನ ಸಾಯಿಸ್ತಾರೆ; ಪ್ರಜ್ವಲ್‌ ವಿದೇಶದಲ್ಲಿದ್ದರೂ ಸಂತ್ರಸ್ತೆಗೆ ಭಯ, ಪೊಲೀಸರಿಗೂ ಮಾಹಿತಿ ನೀಡಲು ಹಿಂಜರಿಕೆ!

Prajwal Revanna Case: ಅಪಹರಣಕ್ಕೀಡಾದ ಸಂತ್ರಸ್ತೆಯು ಪ್ರಾಣಭಯದಿಂದ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸದಂತಹ ಸ್ಥಿತಿಗೆ ತಲುಪಿದ್ದಾರೆ. ಎಸ್‌ಐಟಿ ಅಧಿಕಾರಿಗಳ ಭದ್ರತೆ ಇದ್ದರೂ, ಅವರನ್ನು ಬೆಂಗಳೂರಿಗೆ ಕರೆಸಿಕೊಂಡರೂ, ರೇವಣ್ಣ ಕುಟುಂಬಸ್ಥರ ದೌರ್ಜನ್ಯದ ಕುರಿತು ಅವರು ಯಾವುದೇ ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಎಚ್‌.ಡಿ.ರೇವಣ್ಣ (HD Revanna) ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ (Prajwal Revanna) ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇಡೀ ಪ್ರಕರಣವು ಜೆಡಿಎಸ್‌ ಹಾಗೂ ಬಿಜೆಪಿಗೆ ಮುಜುಗರ ತಂದಿದೆ. ಇದರ ಬೆನ್ನಲ್ಲೇ, ಅಪಹರಣಕ್ಕೀಡಾದ ಸಂತ್ರಸ್ತೆಯು ಪ್ರಾಣಭಯದಿಂದ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸದಂತಹ ಸ್ಥಿತಿಗೆ ತಲುಪಿದ್ದಾರೆ.

ಹೌದು, ಎಚ್‌.ಡಿ.ರೇವಣ್ಣ ಸಂಬಂಧಿಯಾದ ಸತೀಶ್‌ ಬಾಬಣ್ಣ ಎಂಬಾತನು ಲೈಂಗಿಕ ದೌರ್ಜನ್ಯಕೀಡಾದ ಸಂತ್ರಸ್ತೆಯನ್ನು ಅಪಹರಿಸಿ, ಹುಣಸೂರಿನ ಕಾಳೇನಹಳ್ಳಿಯ ತೋಟದ ಮನೆಯಲ್ಲಿ ಇರಿಸಿದ್ದು, ಮಹಿಳೆಯನ್ನು ಎಸ್‌ಐಟಿ ಅಧಿಕಾರಿಗಳು ರಕ್ಷಿಸಿದ್ದಾರೆ. ಭದ್ರತೆ ದೃಷ್ಟಿಯಿಂದ ಮಹಿಳೆಯನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಅವರು ತನಿಖಾಧಿಕಾರಿಗಳ ಎದುರು ಎಲ್ಲವನ್ನೂ ಹೇಳಲು ಆಗುತ್ತಿಲ್ಲ. ಇದರಿಂದಾಗಿ ಪ್ರಕರಣದಲ್ಲಿ ಮಹತ್ವದ ಪ್ರಗತಿ ಸಾಧಿಸಲು ಎಸ್‌ಐಟಿ ಅಧಿಕಾರಿಗಲು ಹೆಣಗಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಂತ್ರಸ್ತೆಯನ್ನು ಅಪಹರಿಸಿ ಇರಿಸಲಾಗಿದ್ದ ಹುಣಸೂರಿನ ತೋಟದ ಮನೆ.

“ನಮ್ಮನ್ನೆಲ್ಲ ಅವರು ಸಾಯಿಸಿಬಿಡ್ತಾರೆ. ನನಗೆ ಭಯವಾಗುತ್ತಿದೆ” ಎಂದಷ್ಟೇ ಮಹಿಳೆಯು ಹೇಳುತ್ತಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಭದ್ರತೆ ಕುರಿತು ಎಷ್ಟು ಹೇಳಿದರೂ ಮಹಿಳೆಯು ಮಾನಸಿಕವಾಗಿ ಕುಗ್ಗಿದ್ದಾರೆ. ಅವರಿಗೆ ಎಚ್‌.ಡಿ.ರೇವಣ್ಣ ಕುಟುಂಬಸ್ಥರು ಏನಾದರೂ ಮಾಡಿಬಿಡುತ್ತಾರೆ ಎಂಬ ಭಯ ಕಾಡುತ್ತಿದೆ. ಇದರ ಬೆನ್ನಲ್ಲೇ, ಕೆ.ಆರ್‌.ನಗರ ಪೊಲೀಸ್‌ ಠಾಣೆಯಲ್ಲಿ ಅಪಹರಣದ ಕುರಿತು ಕೇಸ್‌ ದಾಖಲಿಸಿದ ಪುತ್ರನಿಗೂ ಜೀವ ಭಯ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದಲ್ಲಿ ಮಹತ್ತರ ಮುನ್ನಡೆ ಸಾಧಿಸಲು ಎಸ್‌ಐಟಿ ಅಧಿಕಾರಿಗಳು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಸೂಕ್ತ ಭದ್ರತೆ ಒದಗಿಸುವ ಕುರಿತು ಭರವಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜ್ವಲ್‌ ಶರಣಾಗತಿ?

“ಎಸ್‌ಐಟಿ ಅಧಿಕಾರಿಗಳು ಎಚ್‌.ಡಿ.ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಕಾನೂನು ಪ್ರಕಾರ ಯಾವ ಪ್ರಕ್ರಿಯೆ ಅನುಸರಿಸಬೇಕೋ, ಅದೆಲ್ಲವನ್ನೂ ಅನುಸರಿಸಲಾಗುತ್ತದೆ. ಕಾನೂನು ಪ್ರಕಾರ ಅವರು ನಡೆದುಕೊಳ್ಳುತ್ತಾರೆ. ಇನ್ನು, ಪ್ರಜ್ವಲ್‌ ರೇವಣ್ಣ ಕೂಡ ಆಗಮಿಸಲಿದ್ದಾರೆ. ಅವರು ಪೊಲೀಸರಿಗೆ ಶರಣಾಗಲಿದ್ದಾರೆ” ಎಂಬುದಾಗಿ ಜೆಡಿಎಸ್‌ ನಾಯಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮಾಹಿತಿ ನೀಡಿದ್ದಾರೆ. ಆದರೆ, ಪ್ರಜ್ವಲ್‌ ರೇವಣ್ಣ ಯಾವಾಗ ಭಾರತಕ್ಕೆ ವಾಪಸಾಗಲಿದ್ದಾರೆ ಎಂಬುದರ ಕುರಿತು ಅವರು ಮಾಹಿತಿ ನೀಡಿಲ್ಲ.

ಇದನ್ನೂ ಓದಿ: HD Revanna: ಫಲಿಸಲಿಲ್ಲ ಜ್ಯೋತಿಷಿ ಭವಿಷ್ಯ, ಹೋಮ; ರೇವಣ್ಣರನ್ನು ‘ನಿಂಬೆಹಣ್ಣೂ’ ಕಾಪಾಡಲಿಲ್ಲ!

Continue Reading

Latest

IPL 2024 : ಪುತ್ರ ಅಕಾಯ್​ ಹುಟ್ಟಿದ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ

IPL 2024: ನಟಿ ಇತ್ತೀಚೆಗೆ ತನ್ನ ಹುಟ್ಟುಹಬ್ಬವನ್ನು ವಿರಾಟ್ ಮತ್ತು ಅವರ ಸಹ ಆರ್​​ಸಿಬಿ ಆಟಗಾರರೊಂದಿಗೆ ಆಚರಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಫಾಫ್ ಡು ಪ್ಲೆಸಿಸ್ ಹಂಚಿಕೊಂಡಿರುವ ಫೋಟೋದಲ್ಲಿ ಅನುಷ್ಕಾ ಶರ್ಮಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

VISTARANEWS.COM


on

IPL 2024
Koo

ಬೆಂಗಳೂರು: ವಿರಾಟ್​ ಕೊಹ್ಲಿಯ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ತಮ್ಮ ಮಗ ಅಕಾಯ್ ಕೊಹ್ಲಿ (AkaI kohli) ಜನಿಸಿದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್​ (IPL 2024) ಪಂದ್ಯದ ವೇಳೆ ಗ್ಯಾಲರಿಯಲ್ಲಿದ್ದ ಅನುಷ್ಕಾ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ನಡೆದಿದ್ದು, ಆರ್​ಸಿಬಿ ಗುಜರಾತ್​ ತಂಡವನ್ನು ಎದುರಿಸುತ್ತಿದೆ.

ನಟಿ ಸ್ಟ್ಯಾಂಡ್ ಗಳಲ್ಲಿ ಕುಳಿತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ತನ್ನ ಪತಿ ಆಡುವುದನ್ನು ನೀಡಿ ಅವರು ನಗುತ್ತಿರುವುದನ್ನು ಕಾಣಬಹುದು.

ನಟಿ ಇತ್ತೀಚೆಗೆ ತನ್ನ ಹುಟ್ಟುಹಬ್ಬವನ್ನು ವಿರಾಟ್ ಮತ್ತು ಅವರ ಸಹ ಆರ್​​ಸಿಬಿ ಆಟಗಾರರೊಂದಿಗೆ ಆಚರಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಫಾಫ್ ಡು ಪ್ಲೆಸಿಸ್ ಹಂಚಿಕೊಂಡಿರುವ ಫೋಟೋದಲ್ಲಿ ಅನುಷ್ಕಾ ಶರ್ಮಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ನಟಿ ಮೇ 1ರಂದು ಬುಧವಾರ ತನ್ನ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅನುಷ್ಕಾ ತನ್ನ ಹುಟ್ಟುಹಬ್ಬದಂದು ಬೆಂಗಳೂರಿನಲ್ಲಿದ್ದರು ಮತ್ತು ಆತ್ಮೀಯ ಪಾರ್ಟಿ ಆಯೋಜಿಸಿದ್ದರು ಎಂದು ಕ್ರಿಕೆಟಿಗರು ಬಹಿರಂಗಪಡಿಸಿದ್ದರು.

ಅನುಷ್ಕಾ ಅವರ ಹುಟ್ಟುಹಬ್ಬದಂದು, ವಿರಾಟ್ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ತಮ್ಮ ಹೆಂಡತಿಯ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದರು. ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಟಿಪ್ಪಣಿಯನ್ನು ಬರೆದಿದ್ದರು. “ನಿನು ನನಗೆ ಸಿಗದಿದ್ದರೆ ನಾನು ಸಂಪೂರ್ಣವಾಗಿ ಕಳೆದುಹೋಗುತ್ತಿದ್ದೆ. ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದು ಕೆಂಪು ಹೃದಯದ ಎಮೋಜಿಗಳನ್ನು ಹಾಕಿದ್ದರು.

ಇದನ್ನೂ ಓದಿ: IPL 2024 : ಭಾರೀ ಭದ್ರತಾ ಲೋಪ; ಎಸ್​ಆರ್​​ಎಚ್​ ವಿದೇಶಿ ಆಟಗಾರನ ಮೇಲೆ ಮುಗಿಬಿದ್ದ ಸಾರ್ವಜನಿಕರು!

ವಿರಾಟ್ ಮತ್ತು ಅನುಷ್ಕಾ 2013 ರಲ್ಲಿ ಶಾಂಪೂ ಬ್ರಾಂಡ್​ನ ಜಾಹೀರಾತಿನ ಚಿತ್ರೀಕರಣಕ್ಕಾಗಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಅವರು 2017 ರಲ್ಲಿ ಇಟಲಿಯ ಟಸ್ಕನಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮದುವೆಯಾಗಿದ್ದರು. 2021 ರಲ್ಲಿ, ಅವರು ತಮ್ಮ ಮೊದಲ ಮಗು ವಮಿಕಾಳನ್ನು ಸ್ವಾಗತಿಸಿದ್ದರು. ಈ ವರ್ಷದ ಆರಂಭದಲ್ಲಿ ಅನುಷ್ಕಾ ಮತ್ತು ವಿರಾಟ್ ತಮ್ಮ ಎರಡನೇ ಮಗು ಅಕಾಯ್​​ ಕೊಹ್ಲಿಯ ಆಗಮನವನ್ನು ಘೋಷಿಸಿದ್ದರು.

ಅನುಷ್ಕಾ ಶರ್ಮಾ ಮುಂದಿನ ಚಿತ್ರ ಚಕ್ಡಾ ಎಕ್ಸ್​ಪ್ರೆಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಕ್ಡಾ ಎಕ್ಸ್​​ಪ್ರೆಸ್​ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರ. ಈ ಚಿತ್ರವು ಸುಮಾರು ೪ ವರ್ಷಗಳ ನಂತರ ಅವರು ಚಲನಚಿತ್ರಕ್ಕೆ ಮರಳಿದ್ದಾರೆ. ಅವರು ಕೊನೆಯ ಬಾರಿಗೆ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

Continue Reading

ಪ್ರಮುಖ ಸುದ್ದಿ

Paytm : ಪೇಟಿಎಂ ಸಿಒಒ ಭವೇಶ್ ಗುಪ್ತಾ ಏಕಾಏಕಿ ರಾಜೀನಾಮೆ

Paytm: ಪೇಟಿಎಂ ಮನಿ ಮುಖ್ಯಸ್ಥರಾಗಿದ್ದ ವರುಣ್ ಶ್ರೀಧರ್ ಅವರನ್ನು ಮ್ಯೂಚುವಲ್ ಫಂಡ್ ಮತ್ತು ಇತರ ಸಂಪತ್ತು ನಿರ್ವಹಣಾ ಉತ್ಪನ್ನಗಳ ವಿತರಣೆಯಲ್ಲಿ ವ್ಯವಹರಿಸುವ ಪೇಟಿಎಂ ಸರ್ವೀಸಸ್ ನ ಸಿಇಒ ಆಗಿ ಕಂಪನಿಯು ವರ್ಗಾಯಿಸಿದೆ.

VISTARANEWS.COM


on

Paytm
Koo

ನವದೆಹಲಿ: ಪೇಟಿಎಂನ (Paytm) ಮಾತೃ ಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಷನ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ಕಂಪನಿಗೆ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿಯ ಅಧಿಕೃತ ಹೇಳಿಕೆ ಶನಿವಾರ ತಿಳಿಸಿದೆ. ನಾಯಕತ್ವ ಬದಲಾವಣೆಯ ಭಾಗವಾಗಿ, ಫಿನ್ಟೆಕ್ ಸಂಸ್ಥೆ ಪೇಟಿಎಂ ರಾಕೇಶ್ ಸಿಂಗ್ ಅವರನ್ನು ಪೇಟಿಎಂ ಮನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿದೆ.

ಪೇಟಿಎಂ ಮನಿ ಮುಖ್ಯಸ್ಥರಾಗಿದ್ದ ವರುಣ್ ಶ್ರೀಧರ್ ಅವರನ್ನು ಮ್ಯೂಚುವಲ್ ಫಂಡ್ ಮತ್ತು ಇತರ ಸಂಪತ್ತು ನಿರ್ವಹಣಾ ಉತ್ಪನ್ನಗಳ ವಿತರಣೆಯಲ್ಲಿ ವ್ಯವಹರಿಸುವ ಪೇಟಿಎಂ ಸರ್ವೀಸಸ್ ನ ಸಿಇಒ ಆಗಿ ವರ್ಗಾಯಿಸಲಾಗಿದೆ.

ಪಾವತಿ ಮತ್ತು ಸಾಲ ನೀಡುವ ವ್ಯವಹಾರಗಳ ಮೇಲ್ವಿಚಾರಣೆ ನಡೆಸುತ್ತಿದ್ದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ವೈಯಕ್ತಿಕ ಕಾರಣಗಳಿಂದಾಗಿ ವೃತ್ತಿ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಅವರು ಸಲಹಾ ಪಾತ್ರಕ್ಕೆ ಪರಿವರ್ತನೆಗೊಳ್ಳಲಿದ್ದು ವರ್ಷದ ಅಂತ್ಯದವರೆಗೆ ಪೇಟಿಎಂನ ಬೆಳವಣಿಗೆಯ ಉಪಕ್ರಮಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Lok Sabha Election : ಚುನಾವಣೆ ಖರ್ಚಿಗೆ ಹಣ ಕೊಡದ್ದಕ್ಕೆ ಟಿಕೆಟ್​ ವಾಪಸ್​ ಕೊಟ್ಟ ಕಾಂಗ್ರೆಸ್​ ಅಭ್ಯರ್ಥಿ!

ಕಂಪನಿಯ ನಿರ್ದೇಶಕರ ಮಂಡಳಿಯು ಮೇ 04, 2024 ರಂದು ನಡೆದ ಸಭೆಯಲ್ಲಿ ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ಮೇ 04, 2024 ರ ಪತ್ರದ ಮೂಲಕ ಸಲ್ಲಿಸಿದ ರಾಜೀನಾಮೆಯನ್ನು ಪುರಸ್ಕರಿಸಿದೆ. ಮೇ 31, 2024 ರಂದು ವ್ಯವಹಾರದ ಸಮಯ ಮುಗಿಯುವುದರಿಂದ ಅವರನ್ನು ಕಂಪನಿಯ ಸೇವೆಗಳಿಂದ ಮುಕ್ತಗೊಳಿಸಲಾಗುವುದು ಎಂದು ಪೇಟಿಎಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪೇಟಿಎಂ ಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಈ ಕುರತು ಪ್ರತಿಕ್ರಿಯಿಸಿ, ಭವೇಶ್ ಅವರ ಕೊಡುಗೆಗಳಿಗಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಪಾವತಿಗಳು ಮತ್ತು ಸಾಲ ನೀಡುವಿಕೆಯ ಮೇಲೆ ನಮ್ಮ ಗಮನವು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮತ್ತು ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ನಮ್ಮ ಪ್ರತಿಯೊಂದು ವ್ಯವಹಾರಗಳಲ್ಲಿ ನಾವು ಹೊಂದಿರುವ ಅನುಭವಿ ನಾಯಕರೊಂದಿಗೆ ನಾನು ಕೆಲಸ ಮುಂದುವರಿಸಲಿದ್ದೇವೆ ಎಂದು ಹೇಳಿದರು.

Continue Reading

ಕರ್ನಾಟಕ

HD Revanna: ಫಲಿಸಲಿಲ್ಲ ಜ್ಯೋತಿಷಿ ಭವಿಷ್ಯ, ಹೋಮ; ರೇವಣ್ಣರನ್ನು ‘ನಿಂಬೆಹಣ್ಣೂ’ ಕಾಪಾಡಲಿಲ್ಲ!

HD Revanna: ಹೊಳೆನರಸಿಪುರದಲ್ಲಿರುವ ಎಚ್‌.ಡಿ.ರೇವಣ್ಣ ನಿವಾಸದಲ್ಲಿ ಗಣಪತಿ ಹೋಮ ಮಾಡಿಸಲಾಗಿತ್ತು. ಅಲ್ಲದೆ, ನಿರೀಕ್ಷಣಾ ಜಾಮೀನು ಸಿಕ್ಕೇ ಸಿಗುತ್ತದೆ. ಚಿಂತೆ ಬೇಡ ಎಂಬುದಾಗಿ ಜ್ಯೋತಿಷಿಯೊಬ್ಬರು ಹೇಳಿದ್ದರು. ಇದರಿಂದಾಗಿ ತುಸು ನಿರಾಳರಾಗಿದ್ದ ಎಚ್‌.ಡಿ.ರೇವಣ್ಣ ಅವರು ಎಚ್‌.ಡಿ.ದೇವೇಗೌಡರ ನಿವಾಸದಲ್ಲಿಯೇ ನಿಶ್ಚಿಂತೆಯಿಂದ ಇದ್ದರು. ಯಾವ ಪ್ರಯತ್ನವೂ ಫಲಿಸಲಿಲ್ಲ. ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸುತ್ತಲೇ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದರು.

VISTARANEWS.COM


on

HD Revanna
Koo

ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಎಚ್‌.ಡಿ.ರೇವಣ್ಣ (HD Revanna) ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಿಐಡಿ ಕಚೇರಿಯಲ್ಲಿ ವೈದ್ಯಕೀಯ ಪರೀಕ್ಷೆ (Medical Test) ನಡೆಸಲಾಗುತ್ತಿದೆ. ಇನ್ನು, ಪ್ರಕರಣದಲ್ಲಿ ಯಾವುದೇ ತೊಂದರೆಯಾಗದಿರಲಿ ಎಂದು ಎಚ್‌.ಡಿ.ರೇವಣ್ಣ ಅವರು ಮಾಡಿಸಿದ ಹೋಮ, ಇವರ ಕುರಿತು ಜ್ಯೋತಿಷಿ ನೀಡಿದ ಭವಿಷ್ಯ ಸುಳ್ಳಾಗಿದೆ. ಅವರು ಯಾವಾಗಲೂ ಹಿಡಿದುಕೊಂಡು ತಿರುಗಾಡುತ್ತಿದ್ದ ನಿಂಬೆ ಹಣ್ಣು ಕೂಡ ಮತ್ತಷ್ಟು ಹುಳಿ ಆಗಿದೆ.

ಹೌದು, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಯಾವುದೇ ಸಮಸ್ಯೆ ಎದುರಾಗದಿರಲಿ, ಮಗ ಬಚಾವಾಗಲಿ, ಜಾಮೀನು ಸಿಗಲಿ ಎಂಬುದು ಸೇರಿ ಹಲವು ದೃಷ್ಟಿಯಿಂದ ಬುಧವಾರ (ಮೇ 1) ಸಂಜೆ ಹೊಳೆನರಸಿಪುರದಲ್ಲಿರುವ ಎಚ್‌.ಡಿ.ರೇವಣ್ಣ ನಿವಾಸದಲ್ಲಿ ಗಣಪತಿ ಹೋಮ ಮಾಡಿಸಲಾಗಿತ್ತು. ಅಲ್ಲದೆ, ನಿರೀಕ್ಷಣಾ ಜಾಮೀನು ಸಿಕ್ಕೇ ಸಿಗುತ್ತದೆ. ಚಿಂತೆ ಬೇಡ ಎಂಬುದಾಗಿ ಜ್ಯೋತಿಷಿಯೊಬ್ಬರು ಹೇಳಿದ್ದರು. ಇದರಿಂದಾಗಿ ತುಸು ನಿರಾಳರಾಗಿದ್ದ ಎಚ್‌.ಡಿ.ರೇವಣ್ಣ ಅವರು ಎಚ್‌.ಡಿ.ದೇವೇಗೌಡರ ನಿವಾಸದಲ್ಲಿಯೇ ನಿಶ್ಚಿಂತೆಯಿಂದ ಇದ್ದರು. ಜಾಮೀನು ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವೂ ಅವರದ್ದಾಗಿತ್ತು ಎಂದು ತಿಳಿದುಬಂದಿದೆ.

ರೇವಣ್ಣ ಅಂದುಕೊಂಡಂತೆ ಯಾವುದೂ ಆಗಲಿಲ್ಲ. ಸುದೀರ್ಘ ವಾದ-ಪ್ರತಿವಾದ ಆಲಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಎಚ್‌.ಡಿ.ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಇದಾದ ಕೆಲ ಹೊತ್ತಿನಲ್ಲೇ ಎಚ್‌.ಡಿ.ದೇವೇಗೌಡರ ನಿವಾಸಕ್ಕೆ ತೆರಳಿದ ಎಸ್‌ಐಟಿ ಅಧಿಕಾರಿಗಳು ಎಚ್‌.ಡಿ.ರೇವಣ್ಣ ಅವರನ್ನು ವಶಪಡಿಸಿಕೊಂಡರು.

ಸಿಐಡಿ ಕಚೇರಿಯಲ್ಲಿ ಆಂಬುಲೆನ್ಸ್‌, ಅಲ್ಲೇ ವೈದ್ಯಕೀಯ ಪರೀಕ್ಷೆ

ಎಚ್‌.ಡಿ.ರೇವಣ್ಣ ಅವರನ್ನು ವಶಪಡಿಸಿಕೊಂಡಿರುವ ಎಸ್‌ಐಟಿ ಅಧಿಕಾರಿಗಳು, ಭದ್ರತಾ ದೃಷ್ಟಿಯಿಂದ ಆಂಬುಲೆನ್ಸ್‌ ಹಾಗೂ ವೈದ್ಯರನ್ನೇ ಸಿಐಡಿ ಕಚೇರಿಗೆ ಕರೆಸಿದ್ದಾರೆ. ಭದ್ರತಾ ದೃಷ್ಟಿಯಿಂದಾಗಿ ವೈದ್ಯಕೀಯ ಪರೀಕ್ಷೆಗಾಗಿ ರೇವಣ್ಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯದೆ, ಆಂಬುಲೆನ್ಸ್‌ಅನ್ನು ಸಿಐಡಿ ಕಚೇರಿಗೆ ಕರೆಸಲಾಗಿದೆ. ಆಂಬುಲೆನ್ಸ್‌ನಲ್ಲಿಯೇ ಎಚ್‌.ಡಿ.ರೇವಣ್ಣ ಅವರ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ.

ಪ್ರಜ್ವಲ್‌ ಶರಣಾಗತಿ?

“ಎಸ್‌ಐಟಿ ಅಧಿಕಾರಿಗಳು ಎಚ್‌.ಡಿ.ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಕಾನೂನು ಪ್ರಕಾರ ಯಾವ ಪ್ರಕ್ರಿಯೆ ಅನುಸರಿಸಬೇಕೋ, ಅದೆಲ್ಲವನ್ನೂ ಅನುಸರಿಸಲಾಗುತ್ತದೆ. ಕಾನೂನು ಪ್ರಕಾರ ಅವರು ನಡೆದುಕೊಳ್ಳುತ್ತಾರೆ. ಇನ್ನು, ಪ್ರಜ್ವಲ್‌ ರೇವಣ್ಣ ಕೂಡ ಆಗಮಿಸಲಿದ್ದಾರೆ. ಅವರು ಪೊಲೀಸರಿಗೆ ಶರಣಾಗಲಿದ್ದಾರೆ” ಎಂಬುದಾಗಿ ಜೆಡಿಎಸ್‌ ನಾಯಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮಾಹಿತಿ ನೀಡಿದ್ದಾರೆ. ಆದರೆ, ಪ್ರಜ್ವಲ್‌ ರೇವಣ್ಣ ಯಾವಾಗ ಭಾರತಕ್ಕೆ ವಾಪಸಾಗಲಿದ್ದಾರೆ ಎಂಬುದರ ಕುರಿತು ಅವರು ಮಾಹಿತಿ ನೀಡಿಲ್ಲ.

ಇದನ್ನೂ ಓದಿ: HD Revanna: ರೇವಣ್ಣ ಬಂಧನದ ಬೆನ್ನಲ್ಲೇ ಪೊಲೀಸರಿಗೆ ಪ್ರಜ್ವಲ್‌ ಶರಣಾಗತಿ? ಸಿ.ಎಸ್.ಪುಟ್ಟರಾಜು ಮಹತ್ವದ ಹೇಳಿಕೆ

Continue Reading
Advertisement
Prajwal Revanna Case
ಕರ್ನಾಟಕ6 mins ago

Prajwal Revanna Case: ನನ್ನ ಸಾಯಿಸ್ತಾರೆ; ಪ್ರಜ್ವಲ್‌ ವಿದೇಶದಲ್ಲಿದ್ದರೂ ಸಂತ್ರಸ್ತೆಗೆ ಭಯ, ಪೊಲೀಸರಿಗೂ ಮಾಹಿತಿ ನೀಡಲು ಹಿಂಜರಿಕೆ!

Bangalore To Belagavi Train
ಕರ್ನಾಟಕ11 mins ago

Bangalore To Belagavi Train: ಮೇ 6ರಂದು ಬೆಂಗಳೂರು-ಬೆಳಗಾವಿ ವಿಶೇಷ ರೈಲು ಸಂಚಾರ

IPL 2024
Latest15 mins ago

IPL 2024 : ಪುತ್ರ ಅಕಾಯ್​ ಹುಟ್ಟಿದ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ

Jai Shri Ram Slogan
ಕರ್ನಾಟಕ1 hour ago

Jai Shri Ram Slogan: ಜೈ ಶ್ರೀರಾಮ್ ಘೋಷಣೆ ಕೂಗಿದ್ರೆ ಬೂಟುಗಾಲಲ್ಲಿ ಒದೆಯಿರಿ ಎಂದಿದ್ದ ಕೈ ಮುಖಂಡ ಅಮಾನತು

Paytm
ಪ್ರಮುಖ ಸುದ್ದಿ1 hour ago

Paytm : ಪೇಟಿಎಂ ಸಿಒಒ ಭವೇಶ್ ಗುಪ್ತಾ ಏಕಾಏಕಿ ರಾಜೀನಾಮೆ

Ballari DC Prashanth kumar Mishra pressmeet about MLC election
ಬಳ್ಳಾರಿ1 hour ago

MLC Election: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ; ಮೇ 9ಕ್ಕೆ ಅಧಿಸೂಚನೆ ಪ್ರಕಟ

HD Revanna
ಕರ್ನಾಟಕ2 hours ago

HD Revanna: ಫಲಿಸಲಿಲ್ಲ ಜ್ಯೋತಿಷಿ ಭವಿಷ್ಯ, ಹೋಮ; ರೇವಣ್ಣರನ್ನು ‘ನಿಂಬೆಹಣ್ಣೂ’ ಕಾಪಾಡಲಿಲ್ಲ!

IPL 2024
Latest2 hours ago

IPL 2024 : ಭಾರೀ ಭದ್ರತಾ ಲೋಪ; ಎಸ್​ಆರ್​​ಎಚ್​ ವಿದೇಶಿ ಆಟಗಾರನ ಮೇಲೆ ಮುಗಿಬಿದ್ದ ಸಾರ್ವಜನಿಕರು!

Ballari DC Prashanth kumar Mishra pressmeet about lok sabha election
ಬಳ್ಳಾರಿ2 hours ago

Lok Sabha Election 2024: ಪಾರದರ್ಶಕ ಚುನಾವಣೆಗೆ ಬಳ್ಳಾರಿ ಜಿಲ್ಲಾಡಳಿತ ಸಜ್ಜು

Shivamogga BJP
ಶಿವಮೊಗ್ಗ2 hours ago

Lok Sabha Election 2024: ಶಿವಮೊಗ್ಗದಲ್ಲಿ ಪ್ರಚಾರದ ವೇಳೆ ಕಿರಿಕ್; ಬಿಜೆಪಿ ವಾಹನ ಹಿಮ್ಮೆಟ್ಟಿಸಿದ ಈಶ್ವರಪ್ಪ ಅಭಿಮಾನಿಗಳು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ18 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ1 day ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌