navavidha bhakti about smarana bhakti you should know in kannada Navavidha Bhakti : ಭಕ್ತಿ- ಮುಕ್ತಿಗಳನ್ನೀವ ಭಗವಂತನ ಸ್ಮರಣೆ - Vistara News

ಧಾರ್ಮಿಕ

Navavidha Bhakti : ಭಕ್ತಿ- ಮುಕ್ತಿಗಳನ್ನೀವ ಭಗವಂತನ ಸ್ಮರಣೆ

ಭಕ್ತಿಯ ಸ್ವರೂಪವನ್ನು ಒಂಬತ್ತು ರೀತಿಯಲ್ಲಿ ವಿಂಗಡಿಸಲಾಗಿದೆ. ಈ ಸ್ವರೂಪಗಳನ್ನು ಪರಿಚಯಿಸುವ ʻನವವಿಧ ಭಕ್ತಿʼ (Navavidha Bhakti) ಲೇಖನ ಮಾಲೆಯ ಐದನೇ ಲೆಖನ ಇಲ್ಲಿದೆ. ಇಂದು ಸ್ಮರಣಾ ಭಕ್ತಿಯ ಕುರಿತು ವಿವರಿಸಲಾಗಿದೆ.

VISTARANEWS.COM


on

navavidha bhakti about smarana bhakti you should know in kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಡಾ. ಸಿ. ಆರ್. ರಾಮಸ್ವಾಮಿ
ಸ್ಮರಣೆಯೆಂದರೆ ನೆನಪಿಸಿಕೊಳ್ಳುವುದು. ಏಕಾಂತ ಸ್ಥಳದಲ್ಲಿ ಕುಳಿತು, ಕೇಳಿದ ಭಗವದ್ವಿಷಯಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದೇ ಸ್ಮರಣಭಕ್ತಿ. ಇದೂ ಸಹ ನಮ್ಮನ್ನು ಸಾಧ್ಯಭಕ್ತಿಯ (ಭಕ್ತಿಯಪರಾಕಾಷ್ಠೆಯ) (Navavidha Bhakti) ಮಾರ್ಗದಲ್ಲಿ ನಯನ ಮಾಡುವುದೇ ಆಗಿದೆ. ಸ್ಮರಣೆಯೆಂಬ ಪದಕ್ಕೆ ಯೋಗಶಾಸ್ತ್ರವು ನೀಡುವ ವಿವರಣೆ–ಅನುಭೂತ ವಿಷಯಾsಸಂಪ್ರಮೋಷ: ಸ್ಮೃತಿಃ; ಅನುಭವಿಸಿದ ವಿಷಯವನ್ನು ಮತ್ತೆ ನೆನೆಪಿಸಿಕೊಳ್ಳುವುದು. ಆದರೆ ಅನುಭವವೇ ಇಲ್ಲದಿದ್ದರೆ ಸ್ಮರಣೆಗೆ ವಿಷಯವೇ ಇರುವುದಿಲ್ಲವೆಂದಾಗುವುದು!

ಭಗವಂತನ ಸ್ಮರಣೆ ಸಾಧ್ಯವೇ?

ನಾವು ಭಗವಂತನನ್ನು ಕಂಡೇ ಇಲ್ಲದಿರುವಾಗ ಸ್ಮರಣೆ ಮಾಡುವುದಾದರೂ ಹೇಗೆ? ಎಂಬ ಪ್ರಶ್ನೆ ಸಹಜ. ಆದರೆ ಎಲ್ಲ ಜೀವಿಗಳೂ ಪ್ರಾರಂಭದಲ್ಲಿ ಭಗವಂತನ ಮಡಿಲಲ್ಲೇ ಇದ್ದು ಅಲ್ಲಿಂದ ಪ್ರಕೃತಿಗೆ ಇಳಿದಿವೆ ಎಂಬುದು ಜ್ಞಾನಿಗಳ ಮತ. ಆದರೆ ಆ ಹಳೆಯ ನೆನಪು ನಮ್ಮಲ್ಲಿ ಉಳಿದಿಲ್ಲವಷ್ಟೇ. ಭಗವಂತನು ಎಲ್ಲ ಮಾನವರಿಗೂ ಗರ್ಭವಾಸದ ಎಂಟನೆಯ ತಿಂಗಳಲ್ಲಿ ತನ್ನ ಜ್ಯೋತಿಸ್ವರೂಪವನ್ನು ತೋರಿಸುತ್ತಾನೆ ಎಂಬುದನ್ನು ಗರ್ಭೋಪನಿಷತ್ತು ಸ್ಪಷ್ಟವಾಗಿ ಹೇಳುತ್ತದೆ. ಇಷ್ಟಿದ್ದರೂ ತಾಯಿಯ ಗರ್ಭದಿಂದ ಹೊರಬಂದಕೂಡಲೇ ಮಗುವು ‘ಶಠ’ವೆಂಬ ಮಾಯೆಯಿಂದ ಆವರಿಸಲ್ಪಟ್ಟಕಾರಣ ಅದಕ್ಕೆ ಹಿಂದಿನ ಜ್ಯೋತಿರ್ದರ್ಶನದ ಮಧುರ ಅನುಭವವು ಮರೆಯಾಗುತ್ತದೆ. ಆದ್ದರಿಂದಲೇ, ಹುಟ್ಟಿದ ಕೂಡಲೇ ಅದು ರೋದಿಸುತ್ತದೆ.

ನಮ್ಮಾಳ್ವಾರ್ ಎಂಬ ಭಕ್ತರು ಹುಟ್ಟಿದಾಗ ಅಳಲೇ ಇಲ್ಲವಂತೆ! ನಂತರ ವರ್ಷಗಳು ಕಳೆದಮೇಲೂ ಮಾತನಾಡಲಿಲ್ಲವಂತೆ. ಮುಂದೆ ಜ್ಞಾನಿಯೊಬ್ಬರು ಇವರನ್ನು ಗುರುತಿಸಿ ಮಾತಾಡಿಸಿದಾಗ ಮಾತನಾಡಲು ಪ್ರಾರಂಭಿಸಿದರಂತೆ. ಅಂದರೆ ಆ ಮಗುವು ಗರ್ಭದಿಂದ ಹೊರಬಂದಮೇಲೂ ಸಂಸ್ಕಾರಬಲದಿಂದ, ‘ಶಠ’ವೆಂಬ ಮಾಯೆಗೆ ವಶವಾಗದಿದ್ದರಿಂದ ಗರ್ಭದಲ್ಲಿ ಕಂಡ ಮಧುರಅನುಭವವೇ ನಂತರವೂ ಮುಂದುವರಿದು ಅದರಲ್ಲೇ ತಲ್ಲೀನವಾಗಿದ್ದಿತು. ಆದ್ದರಿಂದಲೇ ಹುಟ್ಟಿದಕೂಡಲೇ ರೋದಿಸಲಿಲ್ಲ. ಶಠವನ್ನು ದೂರಮಾಡಿದ್ದರಿಂದ ಇವರಿಗೆ “ಶಠಕೋಪ”ನೆಂಬ ಬಿರುದು ಬಂದಿತೆಂಬುದು ಐತಿಹ್ಯ.

ನಾವು ಮಾಯೆಯ ಪ್ರಭಾವದಿಂದ ಒಳಾನುಭವವನ್ನು ಮರೆತಿದ್ದೇವೆ. ಅದನ್ನು ಸ್ಮರಿಸುವ ಕ್ರಮವೆಂದರೆ ಭಾಗವತರಿಂದ ಆತನ ರೂಪ-ಗುಣ-ಮಹಿಮೆಗಳನ್ನು ಕೇಳಿ, ಹಾಗೆ ಶ್ರವಣ ಮಾಡಿದ್ದನ್ನು ಮತ್ತೆಮತ್ತೆ ಮನನ ಮಾಡುವುದರ ಮೂಲಕ ಭಗವಂತನ ಸ್ಮರಣೆಯನ್ನು ಮಾಡುವುದು. ಸ್ಮರಣಭಕ್ತಿಯಲ್ಲಿ ಭಕ್ತರ ಒಡನಾಟವೇ-ಸಹಧರ್ಮಿಗಳ ಸಹವಾಸವೇ ಭಕ್ತಿಗೆ ಪುಷ್ಟಿಯನ್ನು ನೀಡುತ್ತದೆ.

ಸ್ಮರಣೆಗೆ ನಾನಾ ಕಾರಣಗಳು

ಸ್ಮರಣೆಯ ಕುರಿತ ಈ ಲೇಖನವನ್ನು ಇಲ್ಲಿ ನೋಡಿ!

ಸ್ಮರಣೆ ಎನ್ನುವುದು ಜೀವನದಲ್ಲಿ ನಾನಾ ಸಂದರ್ಭಗಳಲ್ಲಿ ಬರಬಹುದು. ಉದಾಹರಣೆಗೆ ‘ಸಂಕಟ ಬಂದಾಗ ವೆಂಕಟರಮಣ’ ಎಂಬಂತೆ, ಸಂಕಟಗಳು ಒದಗಿಬಂದಾಗ, ಅವುಗಳಿಂದ ಪಾರಾಗುವ ಬಗೆ ತಿಳಿಯದಿದ್ದಾಗ, ಮನಸ್ಸು ತಾನಾಗಿಯೇ ಭಗವಂತನನ್ನು ನೆನೆಯುವುದುಂಟು. ಅಂತೆಯೇ ಭಗವಂತನಲ್ಲಿ ಉತ್ಕಟವಾದ ವಿರಹ-ಭಯ-ದ್ವೇಷಗಳು ಮನಸ್ಸಿನಲ್ಲಿ ಎಡೆಮಾಡಿಕೊಂಡಾಗಲೂ ಆತನ ಸ್ಮರಣೆ ಸಹಜವಾಗಿಯೇ ಮೂಡಿಬರುತ್ತದೆ. ಹೀಗೆ ನಾನಾ ಸನ್ನಿವೇಶಗಳ ಮೂಲಕ ಸ್ಮರಣೆಯನ್ನು ತಂದುಕೊಂಡವರ ಉದಾಹರಣೆಗಳನ್ನು ಪುರಾಣೇತಿಹಾಸಗಳಲ್ಲಿ ಕಾಣಬಹುದಾಗಿದೆ.

1. ಪ್ರಹ್ಲಾದ: ಸ್ಮರಣಭಕ್ತಿಗೆ ಉತ್ತಮ ಉದಾಹರಣೆಯೆಂದರೆ ಪ್ರಹ್ಲಾದ. ಸಂಕಟಬಂದಾಗಷ್ಟೇ ಅಲ್ಲದೆ ಸದಾಕಾಲವೂ, ನಿರಂತರವಾಗಿ ಶ್ರೀಹರಿಯ ಸ್ಮರಣೆಯನ್ನು ಮಾಡಿದಂತಹ ಭಾಗವತೋತ್ತಮನು. ಪರಮಭಾಗವತರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಳಿಸಿರುವ ಮಹಾನುಭಾವ. ತಂದೆ ಹಿರಣ್ಯಕಶಿಪುವಿನಿಂದ ಊಹಿಸಲಸಾಧ್ಯವಾದ ಸಂಕಷ್ಟಗಳು ಒಂದರಮೇಲೊಂದರಂತೆ ಒದಗಿಬಂದರೂ ಹರಿಸ್ಮರಣೆಯನ್ನು ಬಿಡದವನು. ಸಾಮಾನ್ಯವಾಗಿ ಭಾಗವತರೆಲ್ಲರೂ ಭಗವಂತನ ಸ್ಮರಣೆಯಿಂದ ಭಾಗವತರಾದರೆ “ಪ್ರಹ್ಲಾದೋ ಜನ್ಮವೈಷ್ಣವಃ” ಎಂಬಂತೆ, ಪ್ರಹ್ಲಾದನು ಹುಟ್ಟಿನಿಂದಲೇ ಭಾಗವತನಾದವನು. ತಾಯಿಯ ಗರ್ಭದಲ್ಲಿದ್ದಾಗ ನಾರದಮಹರ್ಷಿಗಳಿಂದ ಕೇಳಿದ ನಾರಾಯಣನ ಮಹಿಮೆಯನ್ನು ಹುಟ್ಟಿದ ನಂತರವೂ ಮರೆಯದೇ ಅಂತೆಯೇ ಉಳಿಸಿಕೊಂಡ ಮಹಾವೈಷ್ಣವ. ಸದಾಕಾಲವೂ ಸ್ಮರಣೆಯಿಂದ ಭಗವಂತನ ತಾದಾತ್ಮ್ಯವನ್ನು ಹೊಂದಿ ಸಂತುಷ್ಟನಾಗಿದ್ದವನು.

2. ಚೈತನ್ಯಮಹಾಪ್ರಭುಗಳು: ಶ್ರೀರಂಗಕ್ಷೇತ್ರಕ್ಕೆ ದಯಮಾಡಿಸಿದಾಗ ಒಂದಕ್ಷರವನ್ನೂ ಓದಲಾಗದ ಅವಿದ್ಯಾವಂತಬ್ರಾಹ್ಮಣನೊಬ್ಬನು ಕೈಯಲ್ಲಿ ಭಗವದ್ಗೀತೆಯ ಪುಸ್ತಕವನ್ನು ಹಿಡಿದು, ಕುಳಿತು ಕಣ್ಣೀರುಸುರಿಸುತ್ತಿದ್ದ. ನೆರೆದಿದ್ದ ಜನರು ಆತನನ್ನು ವ್ಯಂಗ್ಯಮಾಡಿ ನಗುತ್ತಿದ್ದರು. ಚೈತನ್ಯರು ಆತನನ್ನು ಓದಲರಿಯದ ಮೇಲೆ ಪುಸ್ತಕವೇಕೆ? ಅಳುತ್ತಿರುವುದೇಕೆಂದು ಕೇಳಿದಾಗ ಆತ ಹೇಳಿದ; “ಗುರುವಿನಾಜ್ಞೆಯಂತೆ ಗೀತೆಯನ್ನೋದಲು ಸಾಧ್ಯವಾಗುತ್ತಿಲ್ಲವಾದರೂ ಪುಸ್ತಕ ಹಿಡಿದಿದ್ದೇನೆ. ಆದರೆ ಪುಸ್ತಕವನ್ನು ಹಿಡಿದ ಕೂಡಲೇ ಗುರುವು ತಿಳಿಸಿದ ಕಥೆಯ ಸ್ಮರಣೆಯಿಂದ ಪಾರ್ಥಸಾರಥಿಯ ಚಿತ್ರವು ಕಣ್ಣಮುಂದೆ ಬಂದು ಆನಂದಭಾಷ್ಪವು ಸುರಿಯುತ್ತಿದೆ” ಎಂದ. ಚೈತನ್ಯರು “ಗೀತಾಸಾರವನ್ನು ಪಂಡಿತರಿಗಿಂತಲೂ ಚೆನ್ನಾಗಿ ತಿಳಿದಿರುವೆ”ಯೆಂದು ಆತನನ್ನು ಬಾಚಿ ತಬ್ಬಿಕೊಂಡರು. ಇದು ನಿಷ್ಠೆ-ಪ್ರಾಮಾಣಿಕತೆಗಳಿಂದ ಮಾಡುವ ಸ್ಮರಣೆಯ ಫಲವೇ ಆಗಿದೆ.

ವಿರಹದಲ್ಲಿ ಸ್ಮರಣೆ-ಭಕ್ತಿ

ಮೀರಾಬಾಯಿ: ಸಕಲಸುಖ-ಭೋಗಗಳೊಂದಿಗೆ ಅರಮನೆಯಲ್ಲಿ ವಾಸಮಾಡುವ ಯೋಗ ಈಕೆಗಿತ್ತು. ಹಿರಿಯರ ಶುಶ್ರೂಷೆಗಳನ್ನೂ ಮಾಡುತ್ತಲೇ ತನ್ನ ಪ್ರಿಯತಮನಾದ ಕೃಷ್ಣನ ಸ್ಮರಣೆಯನ್ನು ಭಜನೆಗಳ ಮೂಲಕ ಅನುಸ್ಯೂತವಾಗಿ ಮಾಡಿ ಅವನಲ್ಲೇ ತಲ್ಲೀನಳಾಗುತ್ತಿದ್ದಳು. ಆತನ ಸ್ಮರಣೆಗೆ ಭಂಗ ಬಂದಾಗ ಎಲ್ಲ ಸುಖಗಳನ್ನೂ ತ್ಯಜಿಸಿ ಬೃಂದಾವನದೆಡೆಗೆ ಹೊರಟುಬಿಟ್ಟಳು! ಆಕೆಗೆ ಜೀವನದಲ್ಲಿ ಭಗವಂತ ಮತ್ತು ಅವನ ಸ್ಮರಣೆಯಷ್ಟೇ ಬೇಕಾದ ವಸ್ತುಗಳಾಗಿದ್ದವು.

ಗೋದಾದೇವೀ: ಬಾಲ್ಯದಿಂದಲೇ ಕೃಷ್ಣನಲ್ಲಿ ಅತ್ಯಂತ ಪ್ರೀತಿ-ಭಕ್ತಿಗಳನ್ನು ಬೆಳೆಸಿಕೊಂಡು, ತನ್ನ ಜೀವನದುದ್ದಕ್ಕೂ ಅದನ್ನು ಉಳಿಸಿ-ಬೆಳೆಸಿಕೊಂಡವಳು. ಆತನನ್ನೇ ಪತಿಯನ್ನಾಗಿ ಹೊಂದಬೇಕೆಂಬ ದೃಢನಿರ್ಧಾರದೊಂದಿಗೆ ಆತನ ಸ್ಮರಣೆಯನ್ನು ನಿರಂತರವಾಗಿ ಮಾಡುತ್ತಾ ಕೊನೆಗೆ ಅವನಲ್ಲೇ ಐಕ್ಯಳಾದಳು.

ಸದಾಕಾಲದಲ್ಲೂ ತನ್ನನ್ನೇ ಸ್ಮರಿಸಿದವರಿಗೆ ತಾನು ಪ್ರಾಪ್ತನಾಗುತ್ತೇನೆಂಬುದಾಗಿ ಭಗವಂತನು ಗೀತೆಯಲ್ಲಿ ಅಪ್ಪಣೆಕೊಡಿಸಿರುವುದೂ ಸ್ಮರಣೀಯ.

ಭಯದಿಂದ ಸ್ಮರಣೆ

ಕಂಸ: ತಂಗಿಯಾದ ದೇವಕಿಯ ಎಂಟನೆಯ ಮಗುವು ತನಗೆ ಮೃತ್ಯುವಾಗುವುದೆಂಬ ಅಶರೀರವಾಣಿಯನ್ನು ಕೇಳಿದಾಗಲಿಂದಲೂ ಮೃತ್ಯುಭಯವು ಆತನನ್ನು ಪೀಡಿಸತೊಡಗಿತು. ಕೃಷ್ಣಜನನವಾದಾಗಿನಿಂದಲೂ ಭಯದಿಂದ ಸದಾ ಕೃಷ್ಣಸ್ಮರಣೆಯೇ ಅವನಿಗೆ. ಕೃಷ್ಣನನ್ನು ಹೇಗೆ ಸಂಹರಿಸುವುದೆಂಬ ಚಿಂತನೆಯಲ್ಲೇ ಅನವರತವೂ ತೊಡಗಿದ್ದನು. ಭಯದಿಂದ ಮಾಡಿದ ಕೃಷ್ಣಸ್ಮರಣೆಯಿಂದಲೇ ಮುಕ್ತಿಯನ್ನು ಪಡೆದವನು ಕಂಸ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ದ್ವೇಷದಿಂದ ಸ್ಮರಣೆ

ಶಿಶುಪಾಲ: ಶಿಶುಪಾಲನು ಸದಾಕಾಲವೂ ಕೃಷ್ಣನಮೇಲೆ ದ್ವೇಷವನ್ನೇ ಕಾರುತ್ತಿದ್ದವನು. ಧರ್ಮರಾಜನ ರಾಜಸೂಯಯಾಗದಲ್ಲಿ ಆತನ ದ್ವೇಷವು ಪೂರ್ಣರೂಪದಿಂದ ಹೊರಹೊಮ್ಮಿ ಕೃಷ್ಣನನ್ನು ಆಡಬಾರದ ಮಾತುಗಳಿಂದ ನಿಂದಿಸಿದವನು. ಆತನ ನೂರು ತಪ್ಪುಗಳನ್ನು ಮಾತ್ರವೇ ತಾನು ಸಹಿಸಿಕೊಳ್ಳುತ್ತೇನೆಂದು ಕೃಷ್ಣನು ಎಚ್ಚರಿಸಿದ್ದನ್ನೂ ಲಕ್ಷಿಸದೇ ಬೈಗುಳಗಳ ಸುರಿಮಳೆಗೈದವ ಶಿಶುಪಾಲ. ಕೃಷ್ಣನು ಎಲ್ಲವನ್ನೂ ಸಹಿಸಿಕೊಂಡ ನಂತರ ಚಕ್ರಾಯುಧದಿಂದ ಆತನನ್ನು ಸಂಹರಿಸಿ ಮುಕ್ತಿಯನ್ನು ದಯಪಾಲಿಸಿದ. ಹೀಗೆ ದ್ವೇಷದಿಂದಲೇ ನಿರಂತರ ಕೃಷ್ಣಸ್ಮರಣೆ ಮಾಡಿ ಮುಕ್ತಿಗಳಿಸಿದವನು ಶಿಶುಪಾಲ.

“ಸ್ಪರ್ಧೆಯಿಂದ ಕೃಷ್ಣನಂತೆ ಆಗುತ್ತೇನೆಂದು ಕೃಷ್ಣನ ಹೃದಯವನ್ನು-ಶೀಲವನ್ನು-ಯೋಗವನ್ನು ತನ್ಮಯತೆಯಿಂದ ಅನುಕರಣೆ ಮಾಡಿದವರಿಗೆ ಮೋಕ್ಷಸಿಗುತ್ತದೆ” ಎಂಬ ಶ್ರೀರಂಗಮಹಾಗುರುವಿನ ವಾಣಿಯು ಇಲ್ಲಿ ಸ್ಮರಣೀಯ. ಪೌಂಡ್ರಕವಾಸುದೇವ ಈ ಗುಂಪಿಗೆ ಸೇರಿದವನು.
(ಮುಂದುವರಿಯುವುದು)

– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ
, ಬೆಂಗಳೂರು

ಇದನ್ನೂ ಓದಿ: Navavidha Bhakti : ಭಕ್ತಿಯ ಪರಾಕಾಷ್ಠೆಗೆ ಕೀರ್ತನವೆಂಬ ಸಾಧನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

Ram Navami : ರಾಮ ನವಮಿಯಂದು ಸಾಮಾನ್ಯವಾಗಿ ರಾಮ ಭಕ್ತರು (Ram Bhaktas) ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಉಪವಾಸ (fasting) ವ್ರತವನ್ನು ಆಚರಿಸುತ್ತಾರೆ. ದೇವಾಲಯಗಳಲ್ಲಿ (temple) ಆಧ್ಯಾತ್ಮಕ ಪ್ರವಚನ, ಭಜನೆ, ಸಂಕೀರ್ತನೆಗಳನ್ನು ಆಯೋಜಿಸಲಾಗುತ್ತದೆ. ತೊಟ್ಟಿಲಲ್ಲಿ ಪುಟ್ಟ ರಾಮನನ್ನು ಇಟ್ಟು ತೂಗಿ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಈ ದಿನ ಎಲ್ಲರೂ ರಾಮನ ಭಕ್ತಿಯಲ್ಲಿ ಮಿಂದೇಳುತ್ತಾರೆ.

VISTARANEWS.COM


on

Ram Navami
Koo

ಪ್ರತಿ ವರ್ಷದಂತೆ ಈ ಬಾರಿಯು ಭಗವಾನ್ ಶ್ರೀ ರಾಮನ (sriram) ಜನ್ಮ ದಿನವಾದ ರಾಮ ನವಮಿ (Ram Navami) ಮತ್ತೆ ಬಂದಿದೆ. ದೇಶಾದ್ಯಂತ ರಾಮ ನವಮಿ ಉತ್ಸವಕ್ಕೆ ರಾಮ ಭಕ್ತರು ಸಜ್ಜಾಗಿದ್ದಾರೆ. ರಾಮ ಮಂದಿರಗಳನ್ನೂ (ram mandir) ಸುಂದರವಾಗಿ ಅಲಂಕರಿಸಿ ಅತ್ಯಂತ ವೈಭವದಿಂದ ಉತ್ಸವವನ್ನು ಆಚರಿಸಲು ಸಿದ್ದತೆಗಳು ಭರದಿಂದ ಸಾಗುತ್ತಿದೆ.

ರಾಮ ನವಮಿಯಂದು ಸಾಮಾನ್ಯವಾಗಿ ರಾಮ ಭಕ್ತರು (Ram Bhaktas) ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಉಪವಾಸ (fasting) ವ್ರತವನ್ನು ಆಚರಿಸುತ್ತಾರೆ. ದೇವಾಲಯಗಳಲ್ಲಿ (temple) ಆಧ್ಯಾತ್ಮಕ ಪ್ರವಚನ, ಭಜನೆ, ಸಂಕೀರ್ತನೆಗಳನ್ನು ಆಯೋಜಿಸಲಾಗುತ್ತದೆ. ತೊಟ್ಟಿಲಲ್ಲಿ ಪುಟ್ಟ ರಾಮನನ್ನು ಇಟ್ಟು ತೂಗಿ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಈ ದಿನ ಎಲ್ಲರೂ ರಾಮನ ಭಕ್ತಿಯಲ್ಲಿ ಮಿಂದೇಳುತ್ತಾರೆ.

ರಾಮ ನವಮಿ ಆಚರಣೆ ಯಾವಾಗ?

ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಜನಿಸಿದ್ದಾನೆ. ಹೀಗಾಗಿ ಹಿಂದೂ ಚಾಂದ್ರಮಾನ ಪಂಚಾಂಗದಲ್ಲಿ ಬರುವ ಏಪ್ರಿಲ್ 17 ಬುಧವಾರದಂದು ರಾಮನವಮಿಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ:

ರಾಮ ನವಮಿ ದಿನ ಮಧ್ಯಾಹ್ನ ಗಂಟೆ 11.03 ರಿಂದ 1.38 ವಿಶೇಷವೆಂದು ಪರಿಗಣಿಸಲಾಗಿದೆ. ರಾಮ ನವಮಿ ತಿಥಿಯು ಏಪ್ರಿಲ್ 16ರಂದು ಬೆಳಗ್ಗೆ 1.23ಕ್ಕೆ ಪ್ರಾರಂಭವಾಗಿ ಏಪ್ರಿಲ್ 17ರಂದು ರಾತ್ರಿ 3.14 ಕ್ಕೆ ಮುಕ್ತಾಯವಾಗುತ್ತದೆ.

ರಾಮ ನವಮಿಯ ಇತಿಹಾಸವೇನು?

ಹಿಂದೂ ಪುರಾಣಗಳಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿಯೆಂದೇ ಪರಿಗಣಿಸಲ್ಪಟ್ಟಿರುವ ಭಗವಾನ್ ರಾಮನ ರಾಮ ನವಮಿಯಂದು ಜನ್ಮ ತಾಳಿದ್ದನು. ಹಿಂದೂ ಕ್ಯಾಲೆಂಡರ್‌ನಲ್ಲಿ ಸಾಂಪ್ರದಾಯಿಕವಾಗಿ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮ ನವಮಿಯನ್ನು ಆಚರಿಸಲಾಗುತ್ತದೆ. ಶ್ರೀರಾಮನು ವಿಷ್ಣುವಿನ ಏಳನೇ ಅವತಾರವೆಂದು ನಂಬಲಾಗುತ್ತದೆ. ಸದಾಚಾರ ಮತ್ತು ಸದ್ಗುಣಗಳ ಪ್ರತಿಪಾದಕನೆಂದು ರಾಮನನ್ನು ಕರೆಯಲಾಗುತ್ತದೆ. ಅನೇಕ ಶತಮಾನಗಳಿಂದ ರಾಮ ನವಮಿಯನ್ನು ಅತ್ಯಂತ ವೈಭವಾಗಿ ಆಚರಿಸಲಾಗುತ್ತದೆ.

ರಾಮ ನವಮಿ ಆಚರಣೆ ಏಕೆ ?

ಪ್ರಪಂಚದಾದ್ಯಂತದ ಹಿಂದೂಗಳು ಅಪಾರ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ. ರಾಮ ನವಮಿಯು ಧರ್ಮ ಅಥವಾ ಸದಾಚಾರದ ನಿರಂತರ ಮೌಲ್ಯಗಳನ್ನು ಗೌರವಿಸುವ ಆಚರಣೆಯಾಗಿದೆ. ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಇದು ಸೂಚಿಸುತ್ತದೆ. ಭಗವಾನ್ ರಾಮನ ಕರ್ತವ್ಯ, ಗೌರವ ಮತ್ತು ತ್ಯಾಗದ ಉದಾಹರಣೆಯು ಜನರಲ್ಲಿ ನೈತಿಕ ತತ್ತ್ವ ಗಳನ್ನು ಸಂರಕ್ಷಿಸಲು ಮತ್ತು ಸದ್ಗುಣಶೀಲ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ.

ಹೇಗೆ ಆಚರಣೆ ?

ರಾಮ ನವಮಿಯನ್ನು ಭಾರತದಲ್ಲಿ ಜನರು ಬಹಳ ಉತ್ಸಾಹ ಮತ್ತು ಆಸಕ್ತಿಯಿಂದ ಆಚರಿಸುತ್ತಾರೆ. ಭಗವಾನ್ ರಾಮನ ಸಣ್ಣ ವಿಗ್ರಹವನ್ನು ಪೀಠದ ಮೇಲೆ ಇರಿಸಲಾಗುತ್ತದೆ. ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಅಲಂಕರಿಸಲಾಗುತ್ತದೆ. ಮನೆ ಬಾಗಿಲಲ್ಲಿ ರಂಗೋಲಿಗಳನ್ನು ಬರೆಯಲಾಗುತ್ತದೆ. ಭಗವಾನ್ ರಾಮನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಉಪವಾಸ, ಮೆರವಣಿಗೆ, ಮಹಾಕಾವ್ಯ ರಾಮಾಯಣ ಪಠಿಸುವುದು ಮತ್ತು ಕೇಳುವುದು, ಹವನಗಳಂತ ವಿವಿಧ ಆಚರಣೆಗಳಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ರಾಮ ನವಮಿಯು ಒಂಬತ್ತು ದಿನಗಳ ಚೈತ್ರ ನವರಾತ್ರಿ ಉತ್ಸವದ ಅಂತ್ಯವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಜಾತಿ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಮೀರಿ ಎಲ್ಲ ಸಮುದಾಯಗಳು ಏಕತೆ ಮತ್ತು ಸಾಮರಸ್ಯದಿಂದ ಹಬ್ಬದಲ್ಲಿ ಪಾಲ್ಗೊಳ್ಳುತ್ತದೆ.

ಅಯೋಧ್ಯೆಯತ್ತ ಎಲ್ಲರ ಚಿತ್ತ

ಉತ್ತರಪ್ರದೇಶದ ಅಯೋಧ್ಯೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಯಾಕೆಂದರೆ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಬಳಿಕ ಮೊದಲ ಬಾರಿಗೆ ಹೊಸ ಮಂದಿರದಲ್ಲಿ ರಾಮನ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಈಗಾಗಲೇ ಇಲ್ಲಿ ಸಾಕಷ್ಟು ತಯಾರಿಗಳು ನಡೆದಿದ್ದು, ವಿಶ್ವದ ಗಮನ ಸೆಳೆದಿದೆ. ಹೊರದೇಶಗಳಲ್ಲೂ ಆಚರಣೆ ರಾಮ ಜನ್ಮದಿನವನ್ನು ಭಾರತದಲ್ಲಿ ಮಾತ್ರವಲ್ಲ ನೇಪಾಳ, ಬಾಂಗ್ಲಾದೇಶದ ಹಿಂದೂಗಳೂ ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಉತ್ತರ ಅಮೆರಿಕ ಮತ್ತು ಯುರೋಪ್ ನ ಕೆಲವು ರಾಷ್ಟ್ರಗಳಲ್ಲೂ ರಾಮನವಮಿಯನ್ನು ಆಚರಿಸಲಾಗುತ್ತದೆ.

Continue Reading

ದೇಶ

Ayodhya Ram Mandir: ನಾಳೆ ಅಯೋಧ್ಯೆ ಶ್ರೀರಾಮನಿಗೆ ಸೂರ್ಯ ತಿಲಕ; ಮನೆಯಲ್ಲೇ ಕೂತು ಹೀಗೆ ಕಣ್ತುಂಬಿಕೊಳ್ಳಿ

Ayodhya Ram Mandir: ನಾಳೆ (ಏಪ್ರಿಲ್‌ 17) ರಾಮ ನವಮಿ. ಉತ್ತರ ಪ್ರದೇಶದ ಭವ್ಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲಕ ರಾಮನಿಗೆ ಇದು ಮೊದಲ ರಾಮ ನವಮಿ. ಹೀಗಾಗಿ ಈ ಬಾರಿಯ ಹಬ್ಬ ಇನ್ನೂ ವಿಶೇಷ ಎನಿಸಿಕೊಂಡಿದೆ. ಜತೆಗೆ ರಾಮನಿಗೆ ‘ಸೂರ್ಯ ಅಭಿಷೇಕ / ಸೂರ್ಯ ತಿಲಕʼವೂ ನಾಳೆ ನೆರವೇರಲಿದೆ. ಇದನ್ನು ಮನೆಯಲ್ಲೇ ಕೂತು ನೀವೂ ವೀಕ್ಷಿಸಬಹುದು. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

Ayodhya Ram Mandir
Koo

ಅಯೋಧ್ಯೆ: ನಾಳೆ (ಏಪ್ರಿಲ್‌ 17) ರಾಮ ನವಮಿ  (Ram Navami). ಹೀಗಾಗಿ ದೇಶಾದ್ಯಂತ ರಾಮನ ಭಕ್ತರು ಆಚರಣೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಭವ್ಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲಕ ರಾಮನಿಗೆ ಇದು ಮೊದಲ ರಾಮ ನವಮಿ (Ayodhya Ram Mandir). ಹೀಗಾಗಿ ಈ ಬಾರಿಯ ಹಬ್ಬ ಇನ್ನೂ ವಿಶೇಷ ಎನಿಸಿಕೊಂಡಿದೆ. ಜತೆಗೆ ರಾಮನಿಗೆ ‘ಸೂರ್ಯ ಅಭಿಷೇಕ / ಸೂರ್ಯ ತಿಲಕʼವೂ ನಾಳೆ ನೆರವೇರಲಿದೆ.

ಏನಿದು ಸೂರ್ಯ ತಿಲಕ ?

ಈ ಸುಂದರ ರಾಮ ವಿಗ್ರಹದ ಹಣೆಯ ಮೇಲೆ 3ರಿಂದ 5 ನಿಮಿಷಗಳ ಕಾಲ ಸೂರ್ಯನ ಕಿರಣಗಳು ಮಧ್ಯಾಹ್ನ 12. 16ಕ್ಕೆ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ಮೊದಲ ಬಾರಿಗೆ ಬಾಲರಾಮನ ಹಣೆಯಲ್ಲಿ ಸೂರ್ಯ ತಿಲಕ ಕಂಗೊಳಿಸಲಿದ್ದು, ಇದಕ್ಕೆ ಬೇಕಾದ ವಿಶಿಷ್ಟ ವೈಜ್ಞಾನಿಕ ತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಪ್ರತಿ ವರ್ಷ ರಾಮ ನವಮಿಯಂದು ಈ ಚಮತ್ಕಾರ ನಡೆಯಲಿದೆ.

ಹೀಗೆ ಕಣ್ತುಂಬಿಕೊಳ್ಳಿ

‘ಸೂರ್ಯತಿಲಕ’ ಏಪ್ರಿಲ್ 17ರ ಬೆಳಗ್ಗೆ 11.58ಕ್ಕೆ ಪ್ರಾರಂಭವಾಗಲಿದೆ ಮತ್ತು ಮಧ್ಯಾಹ್ನ 12.03ರ ವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ರಾಮ ಭಕ್ತರಿಗಾಗಿ ಪ್ರಸಾರ ಭಾರತಿ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದ್ದು, ಮನೆಯಲ್ಲೇ ವೀಕ್ಷಿಸಬಹುದು. ರಾಮ ನವಮಿಯಂದು ಅಯೋಧ್ಯೆ ತಲುಪಲು ಸಾಧ್ಯವಾಗದೇ ಇದ್ದರೆ ಮನೆಯಲ್ಲಿ ಕುಳಿತು ಈ ಸೂರ್ಯ ಅಭಿಷೇಕವನ್ನು ವೀಕ್ಷಿಸಬಹುದು. ಈ ಸಂಪೂರ್ಣ ಕಾರ್ಯಕ್ರಮ ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ ಅಯೋಧ್ಯೆ ಸೇರಿದಂತೆ ಹಲವು ನಗರಗಳಲ್ಲಿ ದೊಡ್ಡ ಎಲ್‌ಇಡಿ ಪರದೆಗಳನ್ನು ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ಡಿಡಿ ನ್ಯೂಸ್ ಮತ್ತು ಡಿಡಿ ನ್ಯಾಷನಲ್ ಯೂಟ್ಯೂಬ್ ಚಾನಲ್‌ನಲ್ಲಿಯೂ ಲೈವ್ ಕವರೇಜ್ ಲಭ್ಯ. ಹೆಚ್ಚುವರಿಯಾಗಿ ಪಿವಿಆರ್ ಐನಾಕ್ಸ್, ಮಾಧ್ಯಮ ಚಾನಲ್‌ಗಳ ಸಹಯೋಗದೊಂದಿಗೆ ಭಾರತದ 70 ಕ್ಕೂ ಹೆಚ್ಚು ನಗರಗಳಲ್ಲಿ ತನ್ನ 160+ ಚಿತ್ರಮಂದಿರಗಳಲ್ಲಿ ಸಮಾರಂಭವನ್ನು ನೇರ ಪ್ರಸಾರ ಮಾಡಲಿದೆ.

ಪ್ರಯೋಗ ಯಶಸ್ವಿ

ರಾಮ ನವಮಿಗೆ ಮುಂಚಿತವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಯೋಧ್ಯೆಯೊಳಗಿನ ಶ್ರೀ ರಾಮಲಲ್ಲಾ ವಿಗ್ರಹಕ್ಕೆ ಎರಡನೇ ಬಾರಿ ಯಶಸ್ವಿಯಾಗಿ ಸೂರ್ಯ ತಿಲಕ ಅಥವಾ ಸೂರ್ಯಾಭಿಷೇಕವನ್ನು ನಡೆಸಿದೆ. ಈ ಹಿಂದೆ ಏಪ್ರಿಲ್ 8ರಂದು ಮೊದಲ ಬಾರಿಗೆ ಇದರ ಪ್ರಯೋಗ ನಡೆಸಲಾಗಿತ್ತು. ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು ದೇವರ ಮೇಲೆ ಎರಡರಿಂದ ಎರಡೂವರೆ ನಿಮಿಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಬೀಳಲಿದೆ. ಬಳಿಕ ಮತ್ತೆ ಎರಡೂವರೆ ನಿಮಿಷ ಭಾಗಶಃ ಬೀಳುತ್ತದೆ ಎಂದು ಆರ್‌ಎಸ್‌ಎಸ್ ಹಿರಿಯ ನಾಯಕ ಗೋವಿಂದ್ ರಾವ್ ತಿಳಿಸಿದ್ದಾರೆ.

ಏನಿದು ತಂತ್ರಜ್ಞಾನ?

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಆಸ್ಟ್ರೋಫಿಸಿಕ್ಸ್‌ ಸಹಭಾಗಿತ್ವದಲ್ಲಿ ಒಪ್ಟಿಕಾ ಎಂಬ ಕಂಪನಿ ಈ ಯೋಜನೆಯನ್ನು ರೂಪಿಸಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ಯಂತ್ರ ಅಭಿವೃದ್ಧಿಪಡಿಸಲಾಗಿದೆ. ಒಂದಿಷ್ಟು ನಿಮಿಷ ರಾಮನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳಲಿದೆ. ಇಲ್ಲಿ ಅಳವಡಿಸಲಾದ ಆಪ್ಟೋಮೆಕಾನಿಕಲ್ ಸಿಸ್ಟಮ್ ಅತಿಗೆಂಪು ಫಿಲ್ಟರ್‌ನಿಂದ ಮಾಡಲ್ಪಟ್ಟಿದೆ. ಇದಕ್ಕೆ ನಿಖರ ಮಸೂರ ಮತ್ತು ಕನ್ನಡಿಗಳನ್ನು ಬಳಸಿ ವಿಶಿಷ್ಟ ವಿನ್ಯಾಸವನ್ನು ಒದಗಿಸಲಾಗಿದೆ. ಈ ಅಂಶಗಳು ನೈಸರ್ಗಿಕ ಸೂರ್ಯನ ಬೆಳಕನ್ನು ಬಳಸಿಕೊಂಡು ದೈವಿಕ ಸಂಕೇತವಾಗಿ ತಿಲಕವನ್ನು ಉಂಟು ಮಾಡುತ್ತವೆ.

ತಜ್ಞರ ಉಪಸ್ಥಿತಿ

ಸೂರ್ಯ ತಿಲಕದ ಪ್ರಯೋಗವನ್ನು ನಡೆಸಿದ ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಬಿಆರ್‌ಐ) ತಜ್ಞರು ರಾಮ ನವಮಿಯಂದು ‘ಸೂರ್ಯ ಅಭಿಷೇಕ’ ಯಶಸ್ವಿ ನೆರವೇರಿಸಲು ಅಯೋಧ್ಯೆಯಲ್ಲೇ ಉಪಸ್ಥಿತರಿದ್ದಾರೆ. ಸಿಬಿಆರ್ ಐ ಯ ನಿರ್ದೇಶಕ ರೂರ್ಕಿ, ಪ್ರೊ. ಪ್ರದೀಪ್ ಕುಮಾರ್ ರಾಮಂಚಾರ್ಲಾ ಮತ್ತು ಪ್ರೊ. ದೇವದತ್ ಘೋಷ್ ಸೂರ್ಯ ತಿಲಕ ಯೋಜನೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ: Ayodhya Ram Mandir: ಜನ್ಮದಿನದ ಸಂಭ್ರಮಕ್ಕೆ ಕಾತರ; ರಾಮಲಲ್ಲಾನಿಗೆ ಸೂರ್ಯ ಕಿರಣ ಅಭಿಷೇಕ ಪ್ರಯೋಗ ಸಕ್ಸೆಸ್!

Continue Reading

ಧಾರ್ಮಿಕ

Ram Navami: ನಾಳೆ ದೇಶಾದ್ಯಂತ ರಾಮ ನವಮಿ ಸಂಭ್ರಮ; ಈ ದಿನದ ಮಹತ್ವವೇನು ಗೊತ್ತೇ ?

Ram Navami: ಈಗ ಪ್ರತಿಯೊಬ್ಬರ ಮನದಲ್ಲೂ ರಾಮನಾಮ ಮೊಳಗುತ್ತಿದೆ. ಯಾಕೆಂದರೆ ರಾಮ ಜನ್ಮ ದಿನದ ಉತ್ಸವ ರಾಮ ನವಮಿ ಆಚರಣೆಗೆ ದೇಶವೇ ಸಜ್ಜಾಗಿದೆ. ದೇಶಾದ್ಯಂತ ಇರುವ ರಾಮ ಮಂದಿರಗಳು ಅಲಂಕಾರಗೊಂಡು ವೈಭವದಿಂದ ರಾಮನ ಹುಟ್ಟುಹಬ್ಬ ಆಚರಣೆಗೆ ಕಾಯುತ್ತಿದೆ.

VISTARANEWS.COM


on

By

Ram Navami
Koo

ಪ್ರತಿ ವರ್ಷದಂತೆ ಈ ಬಾರಿಯು ಭಗವಾನ್ ಶ್ರೀ ರಾಮನ (sriram) ಜನ್ಮ ದಿನವಾದ ರಾಮ ನವಮಿ (Ram Navami) ಮತ್ತೆ ಬಂದಿದೆ. ದೇಶಾದ್ಯಂತ ರಾಮ ನವಮಿ ಉತ್ಸವಕ್ಕೆ ರಾಮ ಭಕ್ತರು ಸಜ್ಜಾಗಿದ್ದಾರೆ. ರಾಮ ಮಂದಿರಗಳನ್ನೂ (ram mandir) ಸುಂದರವಾಗಿ ಅಲಂಕರಿಸಿ ಅತ್ಯಂತ ವೈಭವದಿಂದ ಉತ್ಸವವನ್ನು ಆಚರಿಸಲು ಸಿದ್ದತೆಗಳು ಭರದಿಂದ ಸಾಗುತ್ತಿದೆ.

ರಾಮ ನವಮಿಯಂದು ಸಾಮಾನ್ಯವಾಗಿ ರಾಮ ಭಕ್ತು (Ram Bhaktas) ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಉಪವಾಸ (fasting) ವ್ರತವನ್ನು ಆಚರಿಸುತ್ತಾರೆ. ದೇವಾಲಯಗಳಲ್ಲಿ (temple) ಆಧ್ಯಾತ್ಮಕ ಪ್ರವಚನ, ಭಜನೆ, ಸಂಕೀರ್ತನೆಗಳನ್ನು ಆಯೋಜಿಸಲಾಗುತ್ತದೆ. ತೊಟ್ಟಿಲಲ್ಲಿ ಪುಟ್ಟ ರಾಮನನ್ನು ಇಟ್ಟು ತೂಗಿ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಈ ದಿನ ಎಲ್ಲರೂ ರಾಮನ ಭಕ್ತಿಯಲ್ಲಿ ಮಿಂದೇಳುತ್ತಾರೆ.

ರಾಮ ನವಮಿ ಆಚರಣೆ ಯಾವಾಗ?

ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಜನಿಸಿದ್ದಾನೆ. ಹೀಗಾಗಿ ಹಿಂದೂ ಚಾಂದ್ರಮಾನ ಪಂಚಾಂಗದಲ್ಲಿ ಬರುವ ಏಪ್ರಿಲ್ 17 ಬುಧವಾರದಂದು ರಾಮನವಮಿಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: Ram Mandir : ರಾಮನವಮಿಯಂದು ವಿತರಿಸಲು ಅಯೋಧ್ಯೆಗೆ 1,11,111 ಕೆ.ಜಿ ಲಡ್ಡು ಕಳುಹಿಸಿದ ರಾಮಭಕ್ತರು

ರಾಮ ನವಮಿ ದಿನ ಮಧ್ಯಾಹ್ನ ಗಂಟೆ 11.03 ರಿಂದ 1.38 ವಿಶೇಷವೆಂದು ಪರಿಗಣಿಸಲಾಗಿದೆ. ರಾಮ ನವಮಿ ತಿಥಿಯು ಏಪ್ರಿಲ್ 16ರಂದು ಬೆಳಗ್ಗೆ 1.23ಕ್ಕೆ ಪ್ರಾರಂಭವಾಗಿ ಏಪ್ರಿಲ್ 17ರಂದು ರಾತ್ರಿ 3.14 ಕ್ಕೆ ಮುಕ್ತಾಯವಾಗುತ್ತದೆ.


ರಾಮ ನವಮಿಯ ಇತಿಹಾಸವೇನು?

ಹಿಂದೂ ಪುರಾಣಗಳಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿಯೆಂದೇ ಪರಿಗಣಿಸಲ್ಪಟ್ಟಿರುವ ಭಗವಾನ್ ರಾಮನ ರಾಮ ನವಮಿಯಂದು ಜನ್ಮ ತಾಳಿದ್ದನು. ಹಿಂದೂ ಕ್ಯಾಲೆಂಡರ್‌ನಲ್ಲಿ ಸಾಂಪ್ರದಾಯಿಕವಾಗಿ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮ ನವಮಿಯನ್ನು ಆಚರಿಸಲಾಗುತ್ತದೆ. ಶ್ರೀರಾಮನು ವಿಷ್ಣುವಿನ ಏಳನೇ ಅವತಾರವೆಂದು ನಂಬಲಾಗುತ್ತದೆ. ಸದಾಚಾರ ಮತ್ತು ಸದ್ಗುಣಗಳ ಪ್ರತಿಪಾದಕನೆಂದು ರಾಮನನ್ನು ಕರೆಯಲಾಗುತ್ತದೆ. ಅನೇಕ ಶತಮಾನಗಳಿಂದ ರಾಮ ನವಮಿಯನ್ನು ಅತ್ಯಂತ ವೈಭವಾಗಿ ಆಚರಿಸಲಾಗುತ್ತದೆ.

ರಾಮ ನವಮಿ ಆಚರಣೆ ಏಕೆ ?

ಪ್ರಪಂಚದಾದ್ಯಂತದ ಹಿಂದೂಗಳು ಅಪಾರ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ. ರಾಮ ನವಮಿಯು ಧರ್ಮ ಅಥವಾ ಸದಾಚಾರದ ನಿರಂತರ ಮೌಲ್ಯಗಳನ್ನು ಗೌರವಿಸುವ ಆಚರಣೆಯಾಗಿದೆ. ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಇದು ಸೂಚಿಸುತ್ತದೆ. ಭಗವಾನ್ ರಾಮನ ಕರ್ತವ್ಯ, ಗೌರವ ಮತ್ತು ತ್ಯಾಗದ ಉದಾಹರಣೆಯು ಜನರಲ್ಲಿ ನೈತಿಕ ತತ್ತ್ವ ಗಳನ್ನು ಸಂರಕ್ಷಿಸಲು ಮತ್ತು ಸದ್ಗುಣಶೀಲ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ.


ಹೇಗೆ ಆಚರಣೆ ?

ರಾಮ ನವಮಿಯನ್ನು ಭಾರತದಲ್ಲಿ ಜನರು ಬಹಳ ಉತ್ಸಾಹ ಮತ್ತು ಆಸಕ್ತಿಯಿಂದ ಆಚರಿಸುತ್ತಾರೆ. ಭಗವಾನ್ ರಾಮನ ಸಣ್ಣ ವಿಗ್ರಹವನ್ನು ಪೀಠದ ಮೇಲೆ ಇರಿಸಲಾಗುತ್ತದೆ. ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಅಲಂಕರಿಸಲಾಗುತ್ತದೆ. ಮನೆ ಬಾಗಿಲಲ್ಲಿ ರಂಗೋಲಿಗಳನ್ನು ಬರೆಯಲಾಗುತ್ತದೆ. ಭಗವಾನ್ ರಾಮನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಉಪವಾಸ, ಮೆರವಣಿಗೆ, ಮಹಾಕಾವ್ಯ ರಾಮಾಯಣ ಪಠಿಸುವುದು ಮತ್ತು ಕೇಳುವುದು, ಹವನಗಳಂತ ವಿವಿಧ ಆಚರಣೆಗಳಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ರಾಮ ನವಮಿಯು ಒಂಬತ್ತು ದಿನಗಳ ಚೈತ್ರ ನವರಾತ್ರಿ ಉತ್ಸವದ ಅಂತ್ಯವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಜಾತಿ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಮೀರಿ ಎಲ್ಲ ಸಮುದಾಯಗಳು ಏಕತೆ ಮತ್ತು ಸಾಮರಸ್ಯದಿಂದ ಹಬ್ಬದಲ್ಲಿ ಪಾಲ್ಗೊಳ್ಳುತ್ತದೆ.


ಅಯೋಧ್ಯೆಯತ್ತ ಎಲ್ಲರ ಚಿತ್ತ

ಉತ್ತರಪ್ರದೇಶದ ಅಯೋಧ್ಯೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಯಾಕೆಂದರೆ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಬಳಿಕ ಮೊದಲ ಬಾರಿಗೆ ಹೊಸ ಮಂದಿರದಲ್ಲಿ ರಾಮನ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಈಗಾಗಲೇ ಇಲ್ಲಿ ಸಾಕಷ್ಟು ತಯಾರಿಗಳು ನಡೆದಿದ್ದು, ವಿಶ್ವದ ಗಮನ ಸೆಳೆದಿದೆ. ಹೊರದೇಶಗಳಲ್ಲೂ ಆಚರಣೆ ರಾಮ ಜನ್ಮದಿನವನ್ನು ಭಾರತದಲ್ಲಿ ಮಾತ್ರವಲ್ಲ ನೇಪಾಳ, ಬಾಂಗ್ಲಾದೇಶದ ಹಿಂದೂಗಳೂ ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಉತ್ತರ ಅಮೆರಿಕ ಮತ್ತು ಯುರೋಪ್ ನ ಕೆಲವು ರಾಷ್ಟ್ರಗಳಲ್ಲೂ ರಾಮನವಮಿಯನ್ನು ಆಚರಿಸಲಾಗುತ್ತದೆ.

Continue Reading

ಪ್ರಮುಖ ಸುದ್ದಿ

Ram Navami 2024: ವನವಾಸದ ವೇಳೆ ಶ್ರೀರಾಮ ಭೇಟಿ ನೀಡಿದ ಈ ಸ್ಥಳಗಳೀಗ ಪವಿತ್ರ

Ram Navami 2024: 14 ವರ್ಷಗಳ ವನವಾಸದ ಸಮಯದಲ್ಲಿ ಶ್ರೀರಾಮನು ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನ ಜೊತೆ ಅನೇಕ ಪ್ರದೇಶಗಳನ್ನು ಸುತ್ತಿದ್ದಾನೆ. ಈ ಬಗ್ಗೆ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಅಂತಹ ಪ್ರಮುಖ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

Sri Rama
Koo

ಶ್ರೀರಾಮನ ಕೋಟ್ಯಂತರ ಹಿಂದೂಗಳ ಆರಾಧ್ಯ ದೇವ. ಹಿಂದೂ ಧರ್ಮದಲ್ಲಿ ದಸರಾ, ರಾಮನವಮಿ, ದೀಪಾವಳಿಯಂತಹ ಹಬ್ಬಗಳನ್ನು ಶ್ರೀರಾಮನ (Sri Rama) ಹೆಸರಿನಿಂದಲೇ ಆಚರಿಸಲಾಗುತ್ತದೆ. ರಾಮಾಯಣವು ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಂದಾಗಿದೆ. ಇದರಲ್ಲಿ ಶ್ರೀರಾಮನ ಜೀವನ ಚರಿತ್ರೆಯನ್ನು ಉಲ್ಲೇಖಿಸಲಾಗಿದೆ. 14 ವರ್ಷಗಳ ವನವಾಸದ ಸಮಯದಲ್ಲಿ ಶ್ರೀರಾಮನು ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನ ಜೊತೆ ಅನೇಕ ಪ್ರದೇಶಗಳನ್ನು ಸುತ್ತಿದ್ದಾನೆ. ಈ ಬಗ್ಗೆ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಆ ಸ್ಥಳಗಳು ಈಗಲೂ ಪ್ರಖ್ಯಾತವಾಗಿವೆ. ಅಂತಹ ಪ್ರಮುಖ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

Sri Rama

ಅಯೋಧ್ಯೆ

ಇದು ಉತ್ತರ ಪ್ರದೇಶದ ಸರಯೂ ನದಿಯ ದಡದ ಮೇಲಿದೆ. ರಾಮಾಯಣದ ಪ್ರಕಾರ ಇದು ಶ್ರೀರಾಮನ ಜನ್ಮಸ್ಥಳವಾಗಿದೆ. ತನ್ನ ತಂದೆಯ ಆಜ್ಞೆಯಂತೆ ಶ್ರೀರಾಮನು 14 ವರ್ಷ ವನವಾಸವನ್ನು ಈ ಸ್ಥಳದಿಂದಲೇ ಪ್ರಾರಂಭಿಸಿದ ಎನ್ನಲಾಗುತ್ತದೆ.

Sri Rama

ಪ್ರಯಾಗರಾಜ್‌

ಇದು ಉತ್ತರ ಪ್ರದೇಶದ ತ್ರಿವೇಣಿ ಸಂಗಮಕ್ಕೆ ಸಮೀಪದಲ್ಲಿರುವ ನಗರವಾಗಿದೆ. ಇದನ್ನು ಮೊದಲ ಅಲಹಾಬಾದ್ ಎಂದು ಕರೆಯಲಾಗುತ್ತಿತ್ತು. ಶ್ರೀರಾಮನು ವನವಾಸದ ಸಮಯದಲ್ಲಿ ಸೀತೆ ಮತ್ತು ಲಕ್ಷ್ಮಣನ ಜೊತೆ ಇಲ್ಲಿ ಋಷಿ ಭಾರದ್ವಾಜರ ಆಶ್ರಮದಲ್ಲಿ ಸ್ವಲ್ಪ ಸಮಯ ಕಳೆದು ನಂತರ ಗಂಗಾ ನದಿಯನ್ನು ದಾಟಿ ತಮ್ಮ ಪ್ರಯಾಣವನ್ನು ಮುಂದುವರಿಸಿದ ಎನ್ನಲಾಗುತ್ತದೆ.

Sri Rama

ಚಿತ್ರಕೂಟ

ಮಧ್ಯಪ್ರದೇಶ ಸತ್ನಾ ಜಿಲ್ಲೆಯಲ್ಲಿರುವ ಚಿತ್ರಕೂಟ ಪವಿತ್ರ ಯಾತ್ರಾ ಸ್ಥಳವಾಗಿದೆ. ವನವಾಸದ ಸಮಯದಲ್ಲಿ ರಾಮ ತನ್ನ ಸಹೋದರ ಭರತನನ್ನು ಇಲ್ಲಿ ಭೇಟಿ ಮಾಡಿದ ಎನ್ನಲಾಗುತ್ತದೆ. ಹಾಗೇ ಈ ಸ್ಥಳದಲ್ಲಿರುವಾಗ ತನ್ನ ತಂದೆ ದಶರಥನ ಸಾವಿನ ಸುದ್ದಿಯನ್ನು ತಿಳಿದು ದುಃಖಿಸಿದನು ಎನ್ನಲಾಗುತ್ತದೆ. ಅಯೋಧ್ಯೆಗೆ ಮರಳಲು ನಿರಾಕರಿಸಿದ ರಾಮನ ಪಾದುಕೆಗಳನ್ನು ಭರತನು ಈ ಸ್ಥಳದಿಂದ ಅಯೋಧ್ಯೆಗೆ ತೆಗೆದುಕೊಂಡು ಹೋಗಿ ಸಿಂಹಾಸನದ ಮೇಲೆ ಇರಿಸಿದ ಎನ್ನಲಾಗುತ್ತದೆ.

Sri Rama

ಪಂಚವಟಿ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಪಂಚವಟಿ ಪ್ರಾಚೀನ ನಗರವಾಗಿದೆ. ಇಲ್ಲಿ ಶ್ರೀರಾಮನು ತನ್ನ ವಾಸ ಸ್ಥಳವನ್ನು ನಿರ್ಮಿಸಿ ಸೀತೆ ಮತ್ತು ಲಕ್ಷ್ಮಣನ ಜೊತೆ ವಾಸವಾಗಿದ್ದ ಎನ್ನಲಾಗುತ್ತದೆ. ಸೀತೆ ಮಾಯಾಜಿಂಕೆಯನ್ನು ಈ ಸ್ಥಳದಲ್ಲಿ ನೋಡಿದ್ದಳು ಮತ್ತು ರಾವಣನು ಸೀತೆಯನ್ನು ಇಲ್ಲಿಂದಲೇ ಅಪಹರಿಸಿದ ಎಂಬ ಉಲ್ಲೇಖವಿದೆ. ಇಲ್ಲಿ ಸೀತಾ ಗುಹೆ, ಕಪಾಲೇಶ್ವರ ಮಂದಿರದಂತಹ ಅನೇಕ ಪುರಾತನ ದೇವಾಲಯಗಳಿವೆ.

Sri Rama

ದಂಡಕಾರಣ್ಯ

ಇದು ರಾವಣನ ಸಹೋದರಿ ಶೂರ್ಪನಕಾ ರಾಮನನ್ನು ಭೇಟಿಯಾದ ಸ್ಥಳ. ಈ ಸ್ಥಳದಲ್ಲಿ ರಾಮನನ್ನು ಕಂಡು ಶೂರ್ಪನಕಾ ಮನಸೋತು ವಿವಾಹದ ಬೇಡಿಕೆ ಇಟ್ಟಳು ಎನ್ನಲಾಗುತ್ತದೆ. ಈ ಸ್ಥಳ ಈಗ ಛತ್ತೀಸ್‌ಗಢ, ಒರಿಸ್ಸಾ ಮತ್ತು ಆಂಧ್ರಪ್ರದೇಶದಲ್ಲಿ ಬರುತ್ತದೆ. ಇಲ್ಲಿಗೆ ಪ್ರವಾಸಿಗರು ದೂಧಸಾಗರ ಜಲಪಾತ ಮತ್ತು ಸುಲಾ ದ್ರಾಕ್ಷಿತೋಟ ನೋಡಲು ಬರುತ್ತಾರೆ.

Sri Rama

ಕಿಷ್ಕಿಂದಾ

ರಾಮಾಯಣದ ಪ್ರಕಾರ ಇದು ವಾನರ ರಾಜ್ಯ. ಇಲ್ಲಿ ವಾನರ ರಾಜ ವಾಲಿ ಮತ್ತು ಅವನ ಸಹೋದರ ಸುಗ್ರೀವ ಉತ್ತರಾಧಿಕಾರಿಯಾಗಿದ್ದರು. ಕಿಷ್ಕಿಂದಾ ಕರ್ನಾಟಕದ ಹಂಪಿ ಬಳಿ ತುಂಗಾಭದ್ರಾ ನದಿಯ ಸುತ್ತಮುತ್ತಲಿನ ಸ್ಥಳವಾಗಿದೆ. ಇಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ.

ಇದನ್ನೂ ಓದಿ: Breast Cancer: ಮಹಿಳೆಯರೇ ಹುಷಾರ್‌; 2040ರ ವೇಳೆಗೆ ಸ್ತನ ಕ್ಯಾನ್ಸರ್‌ಗೆ 10 ಲಕ್ಷ ಜನ ಬಲಿಯಾಗಲಿದ್ದಾರಂತೆ!

ರಾಮೇಶ್ವರಂ

ಇದು ತಮಿಳುನಾಡಿನಲ್ಲಿರುವ ದ್ವೀಪ ನಗರವಾಗಿದೆ. ಇಲ್ಲಿ ರಾಮ ತನ್ನ ಪತ್ನಿ ಸೀತೆಯನ್ನು ರಾವಣನಿಂದ ರಕ್ಷಿಸಲು ವಾನರ ಸೇನೆಯ ಸಹಾಯದಿಂದ ಶ್ರೀಲಂಕಾಗೆ ಹೋಗಲು ರಾಮಸೇತುವೆಯನ್ನು ನಿರ್ಮಿಸಿದ ಎನ್ನಲಾಗುತ್ತದೆ. ಈಗಲೂ ಇಲ್ಲಿ ರಾಮಸೇತುವಿನ ಕುರುಹುಗಳಿವೆ. ರಾಮೇಶ್ವರಂಗೆ ಉತ್ತರ ಭಾರತದಿಂದಲೂ ಸಾವಿರಾರು ಯಾತ್ರಿಕರು ಭೇಟಿ ನೀಡುತ್ತಾರೆ.

Continue Reading
Advertisement
UPSC Results 2023
ದೇಶ3 hours ago

ವಿಸ್ತಾರ ಸಂಪಾದಕೀಯ: ಯುಪಿಎಸ್‌ಸಿ ಸಾಧಕರ ಕತೆಗಳು ಇತರರಿಗೆ ಸ್ಫೂರ್ತಿಯಾಗಲಿ

Ram Navami
ಪ್ರಮುಖ ಸುದ್ದಿ3 hours ago

Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

State Administrative Reforms Commission Chairman R V Deshpande statement
ಉತ್ತರ ಕನ್ನಡ4 hours ago

Lok Sabha Election 2024: ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಪದ ಬಳಸುತ್ತಿದ್ದಾರೆ: ಆರ್.ವಿ.ದೇಶಪಾಂಡೆ

IPL 2024
ಪ್ರಮುಖ ಸುದ್ದಿ4 hours ago

IPL 2024 : ಬಟ್ಲರ್ ಮುಂದೆ ಮಂಕಾದ ನರೈನ್​; ಕೆಕೆಆರ್ ವಿರುದ್ಧ ಆರ್​​ಆರ್​ಗೆ 2 ವಿಕೆಟ್ ಜಯ

Murder Case
ಕರ್ನಾಟಕ4 hours ago

Chitradurga News: ಚಿತ್ರದುರ್ಗದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಾಯಿ-ಮಗಳ ಶವ ಪತ್ತೆ

amith shah
ದೇಶ4 hours ago

Amit Shah: ಶೀಘ್ರದಲ್ಲೇ ಭಾರತ ನಕ್ಸಲ್‌ ಮುಕ್ತವಾಗಲಿದೆ; ಅಮಿತ್ ಶಾ

Nitin Gadkari
ದೇಶ5 hours ago

Nitin Gadkari : ನಾಗ್ಪುರ ಕ್ಷೇತ್ರಕ್ಕೆ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ ನಿತಿನ್ ಗಡ್ಕರಿ

UPSC Results 2023
ಕರ್ನಾಟಕ5 hours ago

UPSC Results 2023: ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದ ಶಾಂತಪ್ಪ ಕುರುಬರ; ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡ ಸಾಧಕ!

Dalip Singh Majithia
ಪ್ರಮುಖ ಸುದ್ದಿ5 hours ago

Dalip Singh Majithia : 2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಐಎಎಫ್ ಯೋಧ 103 ನೇ ವಯಸ್ಸಿನಲ್ಲಿ ನಿಧನ

Ayodhya Ram Mandir
ದೇಶ5 hours ago

Ayodhya Ram Mandir: ನಾಳೆ ಅಯೋಧ್ಯೆ ಶ್ರೀರಾಮನಿಗೆ ಸೂರ್ಯ ತಿಲಕ; ಮನೆಯಲ್ಲೇ ಕೂತು ಹೀಗೆ ಕಣ್ತುಂಬಿಕೊಳ್ಳಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ23 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20242 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ5 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ6 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20246 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌