weekly horoscope check astrological predictions for all zodiac signs for april first week Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ? - Vistara News

ಪ್ರಮುಖ ಸುದ್ದಿ

Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಈ ವಾರ ಅಂದರೆ ಏಪ್ರಿಲ್‌ 02 ರಿಂದ ಏಪ್ರಿಲ್‌ 08 ರವರೆಗೆ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ (Weekly Horoscope), ಯಾವ ರಾಶಿಯವರ ಅದೃಷ್ಟ ಸಂಖ್ಯೆ ಎಷ್ಟು, ಶುಭ ದಿಕ್ಕು ಯಾವುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೇಷ: ಧೈರ್ಯದಿಂದ ಮುನ್ನುಗ್ಗಿದರೆ ಗೆಲುವು

Weekly Horoscope

ಒಂದು ರೀತಿಯ ಅಸಮಾಧಾನ ಹೊತ್ತುಕೊಂಡೇ ಬದುಕು ಸಾಗುತ್ತಿದೆಯಲ್ಲ ಎಂಬ ಖೇದಕರ ಮನಸ್ಸು ಚಡಪಡಿಕೆಯಲ್ಲೇ ತುಂಬಿರುತ್ತದೆ. ಧೈರ್ಯದಿಂದಲೇ ಗೆಲ್ಲಲು ಮೈ ಚಳಿ ಬಿಟ್ಟು ಹೊರ ಬರಬೇಕು ನೀವು. ಯಾರೆಲ್ಲಾ, ಏನೂ ಪ್ರತಿಭೆ, ಕ್ರಿಯಾಶೀಲತೆ ಇರದಿರುವವರೂ ಮುನ್ನುಗ್ಗುತ್ತಿರುವಾಗ ನೀವು ಹಿಂದೆ ಬೀಳದಿರಿ. ಮುನ್ನುಗ್ಗುವ ಕಾಯಕ, ಅವೇಶದಿಂದ ಹಾರಾಡದಿರುವ ಶಾಂತ ಸ್ವಭಾವ ಒಗ್ಗೂಡಿಸಿಕೊಂಡರೆ ಬಹಳಷ್ಟು ಹೆಜ್ಜೆಗಳನ್ನು ಸಫಲತೆಯಿಂದ ಇಡಬಲ್ಲಿರಿ. ಶ್ರೀ ಗುರು ದತ್ತಾತ್ರೇಯನನ್ನು ಸ್ತುತಿಸಿ.
ಶುಭ ಸಂಖ್ಯೆ: 4 ಶುಭ ದಿಕ್ಕು: ಈಶಾನ್ಯ

ವೃಷಭ: ಹಣ ಕೊಟ್ಟು ಕೋಡಂಗಿಯಾಗಬೇಡಿ!

Weekly Horoscope

ಮಿಂಚಲು ಸಾಧ್ಯವಿರುವ ದಿನಗಳು. ಅಧಿಕಾರ, ಪ್ರಭಾವಿ ಸ್ಥಾನಮಾನ, ವರ್ಚಸ್ವೀ ಸ್ಥಳದಲ್ಲಿ ನಿಮ್ಮ ಮುಂದಾಳತ್ವ ಇತ್ಯಾದಿಯಾಗಿ ಪ್ರಾಬಲ್ಯತೆ ಪಡೆಯಲು ಹೇಳಿ ಮಾಡಿಸಿದ ದಿನಗಳು ಇವು. ಆರ್ಥಿಕ ವಿಚಾರಗಳಲ್ಲಿ ಕೊಂಚ ಬಿಗುವಾಗಿರಲು ಸಜ್ಜಾಗಿ. ಕೆಲವು ಬಾರಿ ʻಸಾಧ್ಯವಾಗದು ಕೊಡಲುʼ ಎಂದು ಹೇಳಲು ಸಾಧ್ಯವಾಗದಂತೆ ಇಕ್ಕಟ್ಟಿನಲ್ಲಿ ತಂದು ಕೂರಿಸುತ್ತಾರೆ ಘಾತಕ ಜನರು. ಹಣಕ್ಕಾಗಿ ಟೋಪಿ ಹಾಕುವವರ ಬಗ್ಗೆ ಎಚ್ಚರ ಇರಲಿ. ನಿರ್ವಿಘ್ನದಾಯಕನಾದ ಗಣೇಶನನ್ನು ಪೂಜಿಸಿ, ಒಳಿತಿದೆ.
ಶುಭ ಸಂಖ್ಯೆ : 2 ಶುಭ ದಿಕ್ಕು: ನೈಋತ್ಯ

ಮಿಥುನ: ಪ್ರಮೋಷನ್‌ ಪಡೆಯುವ ಕಾಲ

Weekly Horoscope

ಬೇಕಾಗಿರುವ ವೇಳೆಯಲ್ಲಿ ಕೋಪ ಪ್ರದರ್ಶಿಸಿ ಜನರ ಕ್ರೋಧ ಅಥವಾ ನಿರ್ಲಕ್ಷಕ್ಕೆ ತುತ್ತಾಗದಿರಿ. ನಿಮ್ಮ ಮೈಪರಚಿಕೊಳ್ಳುವ ಸ್ಥಿತಿ ಬಂದಾಗಲೂ ಶಾಂತ ಭಾವದಿಂದಲೇ ವರ್ತಮಾನವನ್ನು ಎದುರಿಸಿ ನಿಲ್ಲಿ. ನಿಮ್ಮ ಖಚಿತ ನಿರ್ಣಯಗಳು ನಿಮ್ಮನ್ನು ಗೌರವಾದಾರಗಳಿಗೆ ದಾರಿ ಮಾಡಿಕೊಡುವ ಶಕ್ತಿ ಪಡೆದಿವೆ. ಹಾಗೆಯೇ ವಿರೋಧಿಗಳಿಂದಲೇ ಬೆಂಬಲ ಪಡೆಯುವ ಅವಕಾಶವನ್ನು ಜಾಣ್ಮೆಯಿಂದಲೇ ಪಡೆಯಿರಿ. ಇದು ಕೆಲಸ ಮಾಡುವ ಆಫೀಸ್‌ ಇರಬಹುದು, ರಾಜಕಾರಣವೇ ಇರಬಹುದು. ವಿವೇಚನೆಯಿಂದ ಗೆಲ್ಲಿ. ಗಣೇಶನನ್ನು ಸ್ತುತಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪೂರ್ವ

ಕಟಕ: ಶಾಂತಿ, ಸಮಾಧಾನವೇ ನಿಮ್ಮ ಅಸ್ತ್ರ

Weekly Horoscope

ಧೈರ್ಯವೇ ಎಲ್ಲದಕ್ಕೂ ಏರುವ ಏಣಿ ಎಂದು ಅಂದುಕೊಂಡಿದ್ದ ನಿಮಗೆ ಧೈರ್ಯವೇ ಎಲ್ಲೋ ಕೈಕೊಡುವ ಹಂತ ಬೆಳವಣಿಗೆಯಲ್ಲಿದೆ. ಶನೈಶ್ವರ ಸ್ವಾಮಿ ಮುನಿದಿದ್ದಾನೆ. ಮುನಿಸು ಎದುರಿಸುವ ವಿವೇಕವನ್ನು ನೀವು ಪ್ರದರ್ಶಿಸಿ. ಅನಾವಶ್ಯಕವಾದ ವಾದ, ಚರ್ಚೆಗಳ ಪಾಲಿಗೆ ಹೋಗದೇ ಒಂದು ಹಂತದಲ್ಲಿ ಶಾಂತರಾಗಿ ಬಿಡಿ. ಸಾಮಾಜಿಕ ಜೀವನವೇ ಇರಲಿ, ಕೌಟುಂಬಿಕ ವಚಾರಗಳೇ ಇರಲಿ. ನೀವು ಶಾಂತರಾಗುವ ಕಲೆಯನ್ನು ಕರಗತಗೊಳಿಸಿಕೊಳ್ಳಲೇಬೇಕು. ಶ್ರೀರಾಮರಕ್ಷಾ ಸ್ತೋತ್ರ ಪಠಿಸಿ. ಇದರಿಂದ ಗೆಲುವು.
ಶುಭ ಸಂಖ್ಯೆ : 9 ಶುಭ ದಿಕ್ಕು: ಆಗ್ನೇಯ

ಸಿಂಹ: ನಿಮಗೆ ಈ ವಾರ ದೈವದ ಬೆಂಬಲವಿದೆ!

Weekly Horoscope

ಮಾತು ಮಾಣಿಕ್ಯ ಎಂಬುದು ವಾಸ್ತವವಾದರೂ ಮೌನ ಬಂಗಾರ ಎಂಬ ರೂಢಿಯ ಮಾತನ್ನು ಮರೆಯದಿರಿ. ಹೀಗಾಗಿ ಅವಶ್ಯಕವಾದ ಮಾತುಗಳು ನಿಮ್ಮ ಪಾಲಿಗೆ ಸಂಜೀವಿನಿಯಾಗಲಿ. ಬೇಕಾಗಿರದ ಮಾತುಗಳನ್ನು ನಿಯಂತ್ರಿಸಿ. ಸರ್ಪದ ಬಾಧೆ ಹೊತ್ತಿರುತ್ತೀರಿ. ಪ್ರಾಪ್ತಿಯ ವಿಚಾರ ಲಭ್ಯವಿದೆ. ಆದರೆ ಸ್ಪಷ್ಟವಾದ ಪ್ರಯತ್ನಗಳು ಸೂಕ್ತವಾದ ರೀತಿಯಲ್ಲಿ ನಿಮ್ಮಿಂದ ಒಗ್ಗೂಡಿ ಬರುವಂತಿರಲಿ. ದೈವದ ಬೆಂಬಲವಿದೆ. ರಾಹುಪೀಡಾ ನಿವಾರಣಾ ಸ್ತೋತ್ರ ಓದಿ. ಗಣೇಶನ ಅನುಗ್ರಹಕ್ಕಾಗಿ ಅವನನ್ನು ಸ್ತುತಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಉತ್ತರ

ಕನ್ಯಾ: ಹಣಕಾಸಿನ ವಿಚಾರದಲ್ಲಿ ಜಾಗ್ರತೆ

Weekly Horoscope

ಹಣಕಾಸಿನ ವಿಚಾರದಲ್ಲಿ ಜಾಗ್ರತೆ. ಅವಸರದಿಂದ ವಾಗ್ದಾನ ಮಾಡಲು ಮುಂದಾಗದಿರಿ. ಒಳ್ಳೆಯ ಕೆಲಸ ಹುಡುಕಬೇಕು ಎಂಬ ಮಹತ್ವಾಕಾಂಕ್ಷೆಗೆ ಪ್ರಯತ್ನ ನಡೆಯಲಿ. ಇರುವ ಕೆಲಸ ಸರ್ರನೆ ಬಿಡಬೇಡಿ. ಶ್ರೀದೇವಿಯ ದಿವ್ಯಾನುಗ್ರಹದಿಂದ ಒಳ್ಳೆಯ ಕೆಲಸ ಸಿಗುವ ಅವಕಾಶ ವಿಪುಲವಾಗಿದೆ. ಮನೆಯಲ್ಲಿನ ಶಾಂತಿ ಸಹಕಾರ ನಿಮ್ಮ ಪಾಲಿಗೆ ಸಂಜೀವಿನಿಯೇ ಆಗಿದೆ. ನಿಮ್ಮ ಮಾತಿನ ಜಾಣ್ಮೆ ಚೆನ್ನಾಗಿಯೇ ಇದೆಯೆಂಬುದರಲ್ಲಿ ಸಂಶಯವಿಲ್ಲ. ಅನ್ಯರು ಆಡುವ ಮಾತಿನ ಬಗೆಗೂ ಲಕ್ಷ್ಯವಿರಲಿ. ಶ್ರೀ ಲಲಿತಾಳನ್ನು ಸ್ತುತಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಆಗ್ನೇಯ

ತುಲಾ: ಬೌದ್ಧಿಕ ಚಾತುರ್ಯ ತೋರಿಸಿ

Weekly Horoscope

ನೆನಪಿಡಿ, ಒಂದು ಚಿಕ್ಕ ಮಾತು ಅಥವಾ ಘಟನೆ ನಿಮ್ಮ ಮನಃ ಶಾಂತಿಯನ್ನೇ ಹಾಳು ಮಾಡೀತು. ಆರೋಗ್ಯದ ಬಗೆಗಿನ ವಿಚಾರ ನಿರ್ಲಕ್ಷಕ್ಕೆ ಒಳಗಾಗದಿರಲಿ. ಕೋರ್ಟ್‌, ಕಚೇರಿಯ ವಿಷಯಗಳು ತುಸು ಒತ್ತಡವನ್ನು ತರುತ್ತವೆ ಎಂಬ ವಿಚಾರ ಕೈ ಬಿಡಿ. ಅನಿವಾರ್ಯವಾದರೆ ನ್ಯಾಯಕ್ಕಾಗಿ ಕೋರ್ಟ್‌ ಕಟ್ಟೆ ಏರಲು ಹಿಂಜರಿಯದಿರಿ. ನಿಮ್ಮ ಶಕ್ತಿ ಸಾಮರ್ಥ್ಯವನ್ನು ಬೌದ್ಧಿಕ ಚಾತುರ್ಯದ ಮೂಲಕವೇ ಪ್ರದರ್ಶಿಸಿ. ಎಲ್ಲರೂ ತಿರುಗಿ ಬಿದ್ದಿದ್ದಾರೆ ಎಂಬ ನೋವು, ಅಸಹಾಯಕತೆ ಕಂಡೀತು. ಹನುಮಾನ್‌ ಚಾಲೀಸಾ ಓದಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ದಕ್ಷಿಣ

ವೃಶ್ಚಿಕ: ಅದೃಷ್ಟ ಪ್ರಾಪ್ತಿಯ ಸಮಯ

Weekly Horoscope

ಬಾಳ ಸಂಗಾತಿಯೊಡನೆಯ ಅನೋನ್ಯತೆಯಿಂದಾಗಿ ಹಲವು ರೀತಿಯ ಕೆಲಸ ಕಾರ್ಯಗಳು, ಮನೆಯಲ್ಲಿ ಶುಭ ವಾರ್ತೆ, ಶುಭ ಕೆಲಸಗಳು ಕೇಳಿ ಬರಲು, ಸಂಭವಿಸಲು ಸೂಕ್ತವಾದ ಕಾಲಘಟ್ಟವಾಗಿದೆ ಇದೆ. ಆದರೆ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯಬೇಡ. ಧನಾಗಮನದ ಬಗೆಗೆ ಸೂಚನೆಗಳು ಗೋಚರಿಸುತ್ತಿವೆ. ವಿಶೇಷವಾಗಿ ಗಣೇಶನ ಆರಾಧನೆ, ಸುಬ್ರಹ್ಮಣ್ಯನ ಸ್ತುತಿಯಿಂದ ಅದೃಷ್ಟ ಪ್ರಾಪ್ತಿಗೆ ಅಧಿಕ ಅವಕಾಶಲಭ್ಯ. ಸುಖದ ವಿಚಾರಗಳು ಪ್ರವಾಸವೋ, ಹಲವು ದಿನಗಳ ವ್ಯಾಜ್ಯದ ಸಮಾಪ್ತಿಯಿಂದಲೋ ಅನಿರೀಕ್ಷಿತವಾಗಿ ಸಂಭವಿಸುತ್ತದೆ.
ಶುಭ ಸಂಖ್ಯೆ : 4 ಶುಭ ದಿಕ್ಕು: ಈಶಾನ್ಯ

ಧನಸ್ಸು: ಸಂತೋಷ ತರುವ ಕಾಲ

Weekly Horoscope

ಕಾಡಿ ಕಾಡಿ ಈಗ ಬಿಟ್ಟು ಹೋದ ಶನೈಶ್ವರನೇ ಧೈರ್ಯ ತುಂಬುವ ಮಮತೆಯ ಮಾತೃಹೃದಯಿಯಾಗುತ್ತಿದ್ದಾನೆಂಬುದನ್ನು ನೆನಪಿಡಿ. ನಿಮ್ಮ ಸುಂಸಬದ್ಧವಾದ ಲೆಕ್ಕಾಚಾರಗಳು ಅನುಭವ ಹಾಗೂ ಜಾಣ್ಮೆಯ ಹೆಜ್ಜೆಗಳನ್ನು ಬದುಕಿನಲ್ಲಿರಿಸುವ ಕಾರಣದಿಂದಾಗಿ ಲಾಭಕರವಾಗಿ ನಿಮ್ಮ ಸಂತೋಷಕ್ಕೆ ಕಾರಣ ಆಗಬಲ್ಲವು. ಪಿತ್ರಾರ್ಜಿತವಾದ ಹಲವು ಗಟ್ಟಿ ಅನುಭವ ಅಥವಾ ಪರಂಪರೆಯ ಕಾರಣದಿಂದ ನೀವೇ ನಿಮ್ಮದೇ ಆದ ಸ್ವಯಂ ಉದ್ಯೋಗಕ್ಕೆ ಮುಂದಾಗುವುದರಿಂದಲೂ ಲಾಭಲಭ್ಯ. ಮಹಾಲಕ್ಷ್ಮೀ ಅಷ್ಟಕವನ್ನು ಪಠಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪಶ್ಚಿಮ

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಮಕರ: ಜಾಣ್ಮೆಯಿಂದ ಲಾಭ ಗಳಿಸಿ

Weekly Horoscope

ರಾಶ್ಯಾಧಿಪ ಶನಿ ಮಹಾರಾಜನೇ ಕೊಂಚ ಡೋಲಾಯಮಾನ ಸ್ಥಿತಿಗೆ ಕಾರಣವಾಗುವ ಹಾಗೆ ಚಂದ್ರನ ಉಪಟಳಗಳು ನಿಮ್ಮನ್ನು ಬಾಧಿಸಬಹುದು. ಸಾಡೇಸಾತಿ ದಿನಗಳು ಇವು. ಯುದ್ಧ ಅನಿವಾರ್ಯವೇ ಆದರೆ ಸ್ಪರ್ಧಿಸಿ. ಎದುರಾಳಿಯನ್ನು ಮಣಿಸುವ ತಂತ್ರಗಳನ್ನು ಭೈರವನ ಅನುಗ್ರಹದಿಂದಲೇ ನೀವು ಪಡೆಯಬೇಕು. ಶಾಸನ ಬದ್ಧವಾದ ಹೋರಾಟ, ಚುನಾವಣೆಗಳಲ್ಲಿನ ಸ್ಪರ್ಧೆ ಇತ್ಯಾದಿಗಳಿಂದ ಹಿಂದೆ ಸರಿಯದಿರಿ. ಮುಳಗುವವನಿಗೆ ಹುಲ್ಲು ಕಡ್ಡಿ ಆದಾರವಾಗುವ ಸೋಜಿಗ ಸಾಧ್ಯ. ತಾರ್ಕಿಕವಾಗಿ ಯೋಚಿಸಿ ಮುನ್ನುಗ್ಗಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ

ಕುಂಭ: ಮಾತನಾಡುವಾಗ ಎಚ್ಚರವಿರಲಿ

Weekly Horoscope

ವಿನಾಕಾರಣವಾಗಿ ವಿರೋಧಿ ಕೆಣಕುತ್ತಾನೆ. ನಿಮ್ಮ ಮೌನವನ್ನು ಸೋಲು ಎಂದೇ ಭಾವಿಸುತ್ತಾನೆ. ಆದರೆ ಕೆರಳದಿರಿ. ದೃಢವಾದ ಮನಸ್ಸು ನಿಮ್ಮದೇ ಆದ ಭದ್ರಕೋಟೆ. ಸರ್ರನೆ ಕೋಪದ, ಅತಾರ್ಕಿಕಮಾತುಗಳು ಹೊರ ಬಾರದಂತೆ ಗರಿಷ್ಠ ಎಚ್ಚರ ಹೊಂದಿರಿ. ಮಕ್ಕಳು ಬಿರುಸಾಗಿ ಮಾತನಾಡಬಹುದು. ಮಕ್ಕಳ ವೇದನೆಯ ಮೂಲ ಎಲ್ಲಿದೆ ಎಂಬುದನ್ನು ಜಾಣ್ಮೆಯಿಂದಲೇ ಅರಿತು ರಿಪೇರಿಗೆ ಮುಂದಾಗಿ. ಬರೀ ಮೈಕೈ ಪರಚಿಕೊಳ್ಳುವುದರಿಂದ ಲಾಭವಿಲ್ಲ. ಪರದಾಟವೇ ಗತಿ ಆದೀತು. ಹನುಮಾನ್‌ ಚಾಲೀಸಾ ಓದಿ. ಕ್ಷೇಮವಿದೆ.
ಶುಭ ಸಂಖ್ಯೆ : 7 ಶುಭ ದಿಕ್ಕು: ವಾಯವ್ಯ

ಮೀನ: ಸೋಲೆ ಗೆಲುವಿನ ಮೆಟ್ಟಿಲು

Weekly Horoscope

ಜಾಸ್ತಿ ಯೋಚನೆ ಮಾಡಲು ಹೋಗಬೇಡಿ. ಇಕ್ಕಟ್ಟಾದ ರಸ್ತೆಗಳನ್ನು ಹುಷಾರಾಗಿ ಹೆಜ್ಜೆ ಇರಿಸಿ ದಾಟಿ. ನಷ್ಟ ತರಲೇ ಶಪಥ ತೊಟ್ಟಂತಿರುವ ಶನೈಶ್ವರ, ರಾಹು, ಕೇತುಗಳು ತಲೆನೋವು ತರುವ ಗ್ರಹಗಳಾಗಿವೆ. ಹಣಕಾಸಿನ ವಿಚಾರದಲ್ಲಿ ನಿರ್ಲಕ್ಷ್ಯಬೇಡ. ಆಫೀಸಿನಲ್ಲಿ ಯಾರೊಡನೆಯೂ ವಾಗ್ವಾದ ಬೇಡ. ನಿಮ್ಮ ಮಾತೇ ಸರಿ ಇದೆ ಎಂದು ಕೈಮುಗಿದು ಬಿಡಿ. ಸೋತು ಗೆಲ್ಲಲು ದೈವ ಸಹಾಯ ಮಾಡಲು ಇದರಿಂದ ಸಾಧ್ಯವಿದೆ. ಧೈರ್ಯವನ್ನು ಆಸ್ತಿಯಾಗಿಸಿಕೊಳ್ಳಿ. ಆದರೆ ಕಿಚ್ಚು ರೋಷ ಬೇಡ. ದಶರಥ ಮಹಾರಾಜ ವಿರಚಿತ ಶನೈಶ್ವರ ಸ್ತೋತ್ರ ಓದಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಪೂರ್ವ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಮುಂಬೈ ವಿರುದ್ಧ ಕೆಕೆಆರ್​ಗೆ 24 ರನ್​ ಗೆಲುವು; ಪಾಂಡ್ಯಾ ಬಳಗಕ್ಕೆ ಮತ್ತೊಂದು ಆಘಾತ

IPL 2024 : ಇಲ್ಲಿನ ವಾಖೆಂಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ 19.5 ಓವರ್​ಗಳಲ್ಲಿ 169 ರನ್​ಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ 18.5 ಓವರ್​​ 145 ರನ್​ಗಳಿಗೆ ಆಲ್​ಔಟ್ ಆಗಿ ಸೋತಿತು.

VISTARANEWS.COM


on

Koo

ಮುಂಬಯಿ: ಐಪಿಎಲ್​ 202ನೇ ಆವೃತ್ತಿಯಲ್ಲಿ (IPL 2024) ತವರು ನೆಲದಲ್ಲಿ ಮತ್ತೊಂದು ಬಾರಿ ವಿಫಲ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್​ ತಂಡ ಕೆಕೆಆರ್​ ವಿರುದ್ಧ 24 ರನ್​ಗಳ ಸೋಲಿಗೆ ಒಳಗಾಯಿತು. ಇದು ಪಾಂಡ್ಯ ನೇತೃತ್ವದ ಮುಂಬೈಗೆ ಹಾಲಿ ಆವೃತ್ತಿಯ ಎದುರಾದ ಸತತ ನಾಲ್ಕನೇ ಹಾಗೂ ಒಟ್ಟು ಎಂಟನೇ ಸೋಲಾಗಿದೆ. ಇದರೊಂದಿಗೆ 11 ಪಂದ್ಯಗಳ ಮುಕ್ತಾಯದ ಬಳಿಕ ಒಟ್ಟು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಅತ್ತ ಕೆಕೆಆರ್ ತಂಡ 10 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತು.

ಇಲ್ಲಿನ ವಾಖೆಂಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ 19.5 ಓವರ್​ಗಳಲ್ಲಿ 169 ರನ್​ಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ 18.5 ಓವರ್​​ 145 ರನ್​ಗಳಿಗೆ ಆಲ್​ಔಟ್ ಆಗಿ ಸೋತಿತು. ಕೆಕೆಅರ್​ ಪರ ಬ್ಯಾಟಿಂಗ್​ನಲ್ಲಿ ವೆಂಕಟೇಶ್​ ಅಯ್ಯರ್​ (70) ಅರ್ಧ ಶತಕ ಬಾರಿಸಿ ಮಿಂಚಿದರೆ ಬೌಲಿಂಗ್​ನಲ್ಲಿ ಮಿಚೆಲ್ ಸ್ಟಾರ್ಕ್​ 4 ವಿಕೆಟ್ ತಮ್ಮದಾಗಿಸಿಕೊಂಡರು.

ಬೌಲಿಂಗ್​ಗೆ ಪೂರಕವಾಗಿದ್ದ ಟ್ರ್ಯಾಕ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ 57 ರನ್​ಗಳಿಗೆ ಅಗ್ರ 5 ವಿಕೆಟ್ ನಷ್ಟ ಮಾಡಿಕೊಂಡಿತು. ಹೀಗಾಗಿ ಹಿನ್ನಡೆಗೆ ಒಳಗಾಯಿತು. ಆದರೆ, ವೆಂಕಟೇಶ್ ಅಯ್ಯರ್ ಹಾಗೂ ಹಾಲಿ ಆವೃತ್ತಿಯಲ್ಲಿ ಮೊದಲ ಅವಕಾಶ ಪಡೆದ ಮನೀಶ್ ಪಾಂಡೆ 42 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವರಿಬ್ಬರ ನೆರವಿನಿಂದ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಲು ಕೆಕೆಆರ್​ಗೆ ಸಾಧ್ಯವಾಯಿತು. ಅಂಗ್​ಕ್ರಿಶ್​ ರಘುವಂಶಿ 13 ರನ್ ಬಾರಿಸಿ ಕೆಕೆಆರ್​ ಪರ ಎರಡಂಕಿ ಮೊತ್ತ ದಾಟಿದ ಎರಡನೇ ಆಟಗಾರ ಎನಿಸಿಕೊಂಡರು. ಉಳಿದವರೆಲ್ಲರೂ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ: Rinku Singh : ಕೊಹ್ಲಿಯ ಬ್ಯಾಟ್​ನಲ್ಲಿ ರಿಂಕು ಚೆನ್ನಾಗಿ ಆಡುತ್ತಿಲ್ಲ; ನೆಟ್ಟಿಗರಿಂದ ಟ್ರೋಲ್​!

ಮುಂಬಯಿ ಬ್ಯಾಟಿಂಗ್ ವೈಫಲ್ಯ

ರನ್ ಚೇಸ್ ಆರಂಭಿಸಿದ ಮುಂಬೈ ತಂಡದ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. 70 ರನ್​ಗೆ 5 ವಿಕೆಟ್ ನಷ್ಟ ಮಾಡಿಕೊಂಡು ಸಂಕಷ್ಟಕ್ಕೆ ಬಿತ್ತು. ಇಶಾನ್ ಕಿಶನ್​ (13), ರೋಹಿತ್ ಶರ್ಮಾ (11), ನಮನ್ ಧಿರ್​ (11), ತಿಲಕ್​ ವರ್ಮಾ (4), ನೇಹಲ್​ ವದೇರಾ (6) ಹಾಗೂ ಹಾರ್ದಿಕ್ ಪಾಂಡ್ಯ (1) ಬಂದ ವೇಗದಲ್ಲೇ ಪೆವಿಲಿಯನ್​ಗೆ ವಾಪಸಾದರು. ಆದರೆ, ಮಧ್ಯಮ ಕ್ರಮಾಂಕದದಲ್ಲಿ ತಳವೂರಿ ನಿಂತ ಸೂರ್ಯಕುಮಾರ್ ಯಾದವ್​ 35 ಎಸೆತಕ್ಕೆ 56 ರನ್ ಬಾರಿಸಿ ಗೆಲುವಿನ ಭರವಸೆ ಮೂಡಿಸಿದರು. ಕೊನೆಯಲ್ಲಿ ಟಿಮ್​ ಡೇವಿಡ್​ 24 ರನ್ ಬಾರಿಸಿ ವಿಶ್ವಾಸ ತಂದರು. ಆದರೆ, ಇನಿಂಗ್ಸ್​ನಲ್ಲಿ ಕೆಕೆಆರ್​ ಬೌಲರ್​ಗಳು ಮೇಲುಗೈ ಸಾಧಿಸಿದರು. ವರುಣ್ ಚಕ್ರವರ್ತಿ, ಸುನಿಲ್ ನರೈನ್​ ಹಾಗೂ ಆ್ಯಂಡ್ರೆ ರಸೆಲ್​ ತಲಾ 2 ವಿಕೆಟ್ ಪಡೆದರು.

Continue Reading

ವಿದೇಶ

Nijjar Killing: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಕೆನಡಾ ಪೊಲೀಸರು; ಯಾರಿವರು?

Nijjar Killing: 2023ರ ಜೂನ್‌ 18ರಂದು ಕೆನಡಾದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೀಡಾಗಿದ್ದಾನೆ. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಆರೋಪ ಕೂಡ ಮಾಡಿದ್ದಾರೆ. ಇದರ ಬೆನ್ನಲ್ಲೇ, ಹತ್ಯೆ ಮಾಡಿದ ಆರೋಪಿಗಳನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

VISTARANEWS.COM


on

Nijjar Killing
Koo

ಒಟ್ಟಾವ: ಖಲಿಸ್ತಾನಿ ಉಗ್ರರ ಪರವಾಗಿರುವ ಕೆನಡಾ ಸರ್ಕಾರವೀಗ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆಯ (Nijjar Killing) ಆರೋಪಿಗಳನ್ನು ಬಂಧಿಸಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ತಂಡದಲ್ಲಿದ್ದ ಕೆಲವು ಆರೋಪಿಗಳನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಆದರೆ, ಯಾರನ್ನು ಬಂಧಿಸಲಾಗಿದೆ ಎಂಬುದರ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ.

ಕೆನಡಾ ಸರ‍್ರೆಯಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಹತ್ಯೆ ಮಾಡಿದವರು ಭಾರತದ ಏಜೆಂಟ್‌ಗಳು ನೇಮಿಸಿದವರೇ ಆಗಿದ್ದಾರೆ ಎಂಬುದಾಗ ಕೆನಡಾ ಆರೋಪಿಸಿದೆ. ಆದರೆ, ಹತ್ಯೆ ಮಾಡಿದ ತಂಡದ ಸದಸ್ಯರನ್ನೇ ಕೆನಡಾ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿರುವುದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಕೊಂದವರು ಯಾರು? ಅವರು ಭಾರತದ ಮೂಲದವರಾ? ಅವರು ನೀಡಿದ ಮಾಹಿತಿ ಏನು ಎಂಬ ಮಾಹಿತಿಯು ಕೆನಡಾ ಪೊಲೀಸರಿಂದಲೇ ಹೊರಬರಬೇಕಿದೆ. ಹತ್ಯೆ ಮಾಡಿದ ತಂಡದವರು ಎನ್ನಲಾದ ಮೂವರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

2023ರ ಜೂನ್‌ 18ರಂದು ಕೆನಡಾದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೀಡಾಗಿದ್ದಾನೆ. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಆರೋಪ ಕೂಡ ಮಾಡಿದ್ದಾರೆ. ಹೀಗೆ, ಕೆನಡಾವನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕಿಸ್ತಾನದ ಐಎಸ್‌ಐ ಇಂತಹ ಕುತಂತ್ರ ಮಾಡಿದೆ. ಆದರೆ, ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಆರೋಪವನ್ನು ತಿರಸ್ಕರಿಸುವ ಭಾರತ, ಆರೋಪಗಳಿಗೆ ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗ ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿದೆ.

“ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ನಾನು ಭಾರತದ ಜತೆ ಮಾತನಾಡಿದ್ದೇನೆ. ಆದರೆ, ಆತನ ಹತ್ಯೆಯ ಕುರಿತು ಭಾರತಕ್ಕೆ ತುಂಬ ವಾರಗಳ ಹಿಂದೆಯೇ ನಂಬಲರ್ಹ ಆರೋಪಗಳ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ. ತುಂಬ ಗಂಭೀರವಾದ ವಿಚಾರದ ಕುರಿತು ಭಾರತ ಹಾಗೂ ಕೆನಡಾ ಒಗ್ಗೂಡಿ ಕಾರ್ಯನಿರ್ವಹಿಸುವ ಕುರಿತು ಕೂಡ ಮನವರಿಕೆ ಮಾಡಲಾಗಿದೆ. ಗಂಭೀರ ಹತ್ಯೆಯ ವಿಚಾರದಲ್ಲಿ ಭಾರತವು ನಮ್ಮ ಜತೆ ಕೈಗೂಡಿಸುತ್ತದೆ ಎಂಬ ಆಶಾಭಾವನೆಯಲ್ಲಿ ಇದ್ದೇವೆ” ಎಂದು ಜಸ್ಟಿನ್‌ ಟ್ರುಡೋ ಹೇಳಿದ್ದರು. ಆದರೆ, ಭಾರತ ಮಾತ್ರ ಸರಿಯಾದ ಸಾಕ್ಷ್ಯ ಕೊಡಿ ಎಂದು ಹೇಳಿದೆ.

ಇದನ್ನೂ ಓದಿ: Khalistan terrorist: ʼನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿಲ್ಲʼ ಎಂದ ನ್ಯೂಜಿಲ್ಯಾಂಡ್‌ ಉಪಪ್ರಧಾನಿಗೇ ಬೆದರಿಕೆ ಹಾಕಿದ ಪನ್ನುನ್!‌

Continue Reading

ದೇಶ

Rohith Vemula: ರೋಹಿತ್‌ ವೇಮುಲ ದಲಿತನಲ್ಲ ಎಂದ ಪೊಲೀಸರು; ಮರು ತನಿಖೆಗೆ ‘ಕೈ’ ಸರ್ಕಾರ ಆದೇಶ!

Rohith Vemula: 2016ರ ಜನವರಿಯಲ್ಲಿ ರೋಹಿತ್‌ ವೇಮುಲ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ, ಈ ಪ್ರಕರಣವನ್ನು ತೆಲಂಗಾಣ ಪೊಲೀಸರು ಈಗ ಕ್ಲೋಸ್‌ ಮಾಡಿದ್ದಾರೆ. ಈ ಕುರಿತು ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿದ್ದಾರೆ. ಆದರೆ, ರಾಜ್ಯ ಸರ್ಕಾರವು ಪ್ರಕರಣದ ಕುರಿತು ಮರು ತನಿಖೆಗೆ ಆದೇಶಿಸಿದೆ.

VISTARANEWS.COM


on

Rohith Vemula
Koo

ಹೈದರಾಬಾದ್:‌ ತೆಲಂಗಾಣದ ಹೈದರಾಬಾದ್‌ನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ (Central University) ಹಾಸ್ಟೆಲ್‌ನಲ್ಲಿ ಪಿಎಚ್‌.ಡಿ ವಿದ್ಯಾರ್ಥಿ ರೋಹಿತ್‌ ವೇಮುಲ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ರೋಹಿತ್‌ ವೇಮುಲ (Rohith Vemula) ದಲಿತನಲ್ಲ, ಆತನ ನಿಜವಾದ ಜಾತಿ ಬಯಲಾಗುತ್ತದೆ ಎಂಬ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ಪ್ರಕರಣವನ್ನು ಕ್ಲೋಸ್‌ ಮಾಡಿರುವ ತೆಲಂಗಾಣ ಪೊಲೀಸರು ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ, ರೋಹಿತ್‌ ವೇಮುಲ ಸಾವಿನ ಪ್ರಕರಣವು ತೆಲಂಗಾಣ ಸರ್ಕಾರವು (Telangana Government) ಮರು ತನಿಖೆಗೆ ಆದೇಶಿಸಿದೆ.

2016ರ ಜನವರಿಯಲ್ಲಿ ರೋಹಿತ್‌ ವೇಮುಲ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ, ಈ ಪ್ರಕರಣವನ್ನು ತೆಲಂಗಾಣ ಪೊಲೀಸರು ಈಗ ಕ್ಲೋಸ್‌ ಮಾಡಿದ್ದಾರೆ. ಈ ಕುರಿತು ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿದ್ದಾರೆ. ಆಗ ಸಿಕಂದರಾಬಾದ್‌ ಸಂಸದರಾಗಿದ್ದ ಬಂಡಾರು ದತ್ತಾತ್ರೇಯ, ವಿಧಾನ ಪರಿಷತ್‌ ಸದಸ್ಯ ಎನ್‌. ರಾಮಚಂದರ್‌ ರಾವ್‌, ವಿವಿ ಕುಲಪತಿ ಅಪ್ಪಾ ರಾವ್‌, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಹಲವು ಎಬಿವಿಪಿ ನಾಯಕರಿಗೂ ತೆಲಂಗಾಣ ಪೊಲೀಸರು ಕ್ಲೀನ್‌ಚಿಟ್‌ ನೀಡಿದ್ದಾರೆ.

ರೋಹಿತ್‌ ವೇಮುಲ ಸಾವಿನ ಕುರಿತು ಮತ್ತೆ ತನಿಖೆ ನಡೆಸಲು ತೆಲಂಗಾಣ ಪೊಲೀಸ್‌ ಮಹಾ ನಿರ್ದೇಶಕ (DGP) ರವಿ ಗುಪ್ತಾ ಆದೇಶಿಸಿದ್ದಾರೆ. ಕೇಸ್‌ ಕ್ಲೋಸ್‌ ಮಾಡಿರುವ ಕುರಿತು ಪೊಲೀಸರು ಸಲ್ಲಿಸಿದ ವರದಿ ಕುರಿತು ರೋಹಿತ್‌ ವೇಮುಲನ ತಾಯಿ ಹಾಗೂ ಸಹೋದರನು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮರು ತನಿಖೆಗೆ ಆದೇಶಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ. ಅಲ್ಲದೆ, ಪ್ರಕರಣದ ಕುರಿತು ಮತ್ತೆ ತನಿಖೆ ನಡೆಸಲು ಮ್ಯಾಜಿಸ್ಟ್ರೇಟ್‌ ಅನುಮತಿಗೆ ಮನವಿಯನ್ನೂ ಸಲ್ಲಿಸಲಾಗಿದೆ.

ವರದಿಯಲ್ಲಿ ಏನಿದೆ?

“ರೋಹಿತ್‌ ವೇಮುಲ ಆತ್ಮಹತ್ಯೆ ಮಾಡಿಕೊಳ್ಳಲು ಹಲವು ಕಾರಣಗಳಿವೆ. ವಿವಿ ಕ್ಯಾಂಪಸ್‌ನಲ್ಲಿ ಆತನ ರಾಜಕೀಯ ಚಟುವಟಿಕೆಗಳು, ಅಧ್ಯಯನದಲ್ಲಿ ಹಿನ್ನಡೆ ಸೇರಿ ಹಲವು ಕಾರಣಗಳಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರೆ ಆತ ಓದಿನಲ್ಲಿ ಹಿಂದಿರುತ್ತಾನೆ. ಇಲ್ಲವೇ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳು ಕಾರಣವಾಗಿರುತ್ತವೆ. ಇನ್ನು ರೋಹಿತ್‌ ವೇಮುಲ ಪಿಎಚ್‌.ಡಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ, ಎರಡು ವರ್ಷದ ಬಳಿಕ ಮತ್ತೊಂದು ಪಿಎಚ್‌.ಡಿ ಮಾಡಲು ಮುಂದಾಗಿದ್ದ. ಏಕೆಂದರೆ, ಆತ ಶಿಕ್ಷಣಕ್ಕಿಂತ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆತ ದಲಿತನಲ್ಲ

“ರೋಹಿತ್‌ ವೇಮುಲ ದಲಿತನಲ್ಲ” ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. “ರೋಹಿತ್‌ ವೇಮುಲ ಪ್ರಮಾಣಪತ್ರಗಳು ನಕಲಿ ಆಗಿವೆ. ಆತನಿಗೆ ತಾಯಿಯು ನಕಲಿ ಪರಿಶಿಷ್ಟ ಜಾತಿ (SC) ಪ್ರಮಾಣಪತ್ರ ತಯಾರಿಸಿ ಕೊಟ್ಟಿದ್ದಾರೆ ಎಂಬುದು ಗೊತಿತ್ತು. ಇದಾದ ಬಳಿಕ ಆತನು ತನ್ನ ಘನತೆಗೆ ಧಕ್ಕೆ ಬರುತ್ತದೆ ಎಂಬುದರ ಚಿಂತೆಯಲ್ಲಿದ್ದ. ನಕಲಿ ಪ್ರಮಾಣಪತ್ರದ ಭೀತಿಯಲ್ಲಿದ್ದ ಆತನು, ಇದುವರೆಗೆ ತಾನು ಗಳಿಸಿದ ಪದವಿಗಳೆಲ್ಲ ಹಾಳಾಗುತ್ತವೆ ಎಂಬ ಚಿಂತೆ ಕಾಡುತ್ತಿತ್ತು. ಇದರಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು” ಎಂಬುದಾಗಿ ವರದಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಏನಿದು ಪ್ರಕರಣ?

ಹೈದರಾಬಾದ್‌ನಲ್ಲಿರುವ ಸೆಂಟ್ರಲ್‌ ಯುನಿವರ್ಸಿಟಿಯ ಹಾಸ್ಟೆಲ್‌ ಕೋಣೆಯಲ್ಲಿ ರೋಹಿತ್‌ ವೇಮುಲ 2016ರ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಈತನು ದಲಿತನೆಂದು, ವಿಶ್ವವಿದ್ಯಾಲಯದಲ್ಲಿ ದಲಿತ ವಿರೋಧಿ ನೀತಿಗಳು ಇವೆ ಎಂದು, ಕೇಂದ್ರದ ಮೋದಿ ಸರ್ಕಾರವು ದಲಿತ ವಿರೋಧಿ ಎಂದೂ ಪ್ರತಿಭಟನೆ ನಡೆಸಲಾಗಿತ್ತು. ದೆಹಲಿ ಸೇರಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ರೋಹಿತ್‌ ವೇಮುಲ ಆತ್ಮಹತ್ಯೆಗೂ ಮುನ್ನ ಆತನ ಮೇಲೆ ಎಬಿವಿಪಿ ಸದಸ್ಯರು ದಾಳಿ ಮಾಡಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ದೇಶದಲ್ಲಿ ಅಸಹಿಷ್ಣುತೆ ಇದೆ, ಬಿಜೆಪಿ ಸರ್ಕಾರದ ಬಂದ ಬಳಿಕ ಹೀಗೆಲ್ಲ ಆಗುತ್ತಿದೆ, ದಲಿತ ವಿರೋಧಿ ನೀತಿಗಳನ್ನು ಅನುಸರಿಸಲಾಗುತ್ತಿದೆ ಎಂದೆಲ್ಲ ಹೇಳಲಾಗುತ್ತಿತ್ತು.

ಇದನ್ನೂ ಓದಿ: Rohith Vemula: ರೋಹಿತ್‌ ವೇಮುಲ ದಲಿತನೇ ಅಲ್ಲ ಎಂದ ಪೊಲೀಸರು; ಕೇಸ್‌ ಕ್ಲೋಸ್‌, ಸ್ಮೃತಿ ಇರಾನಿ ಸೇರಿ ಹಲವರಿಗೆ ಕ್ಲೀನ್‌ ಚಿಟ್

Continue Reading

ಪ್ರಮುಖ ಸುದ್ದಿ

Rinku Singh : ಕೊಹ್ಲಿಯ ಬ್ಯಾಟ್​ನಲ್ಲಿ ರಿಂಕು ಚೆನ್ನಾಗಿ ಆಡುತ್ತಿಲ್ಲ; ನೆಟ್ಟಿಗರಿಂದ ಟ್ರೋಲ್​!

Rinku Singh: 2024ರ ಟಿ20 ವಿಶ್ವಕಪ್​​ಗೆ ಭಾರತ ತಂಡದಿಂದ ಹೊರಗುಳಿದಿದ್ದ ರಿಂಕು ಸಿಂಗ್ 2024ರ ಐಪಿಎಲ್​​ನಲ್ಲಿ ಇನ್ನೂ ಉತ್ತಮ ಪ್ರದರ್ಶ ನೀಡಿಲ್ಲ. ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಬೌಲರ್​ಗಳ ದಾಳಿಗೆ ಸಿಕ್ಕಿ ಅವರು ಮತ್ತೊಮ್ಮೆ ಕಡಿಮೆ ಸ್ಕೋರ್​ಗೆ ಪೆವಿಲಿಯನ್​ಗೆ ಮರಳಿದರು.

VISTARANEWS.COM


on

Rinku Singh
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟರ್​ ರಿಂಕು ಸಿಂಗ್ ಮತ್ತೊಂದು ವೈಫಲ್ಯವನ್ನು ಅನುಭವಿಸಿದರು. ಕೆಕೆಆರ್ ವಿರುದ್ಧ ಅಗತ್ಯ ಸಂದರ್ಭದಲ್ಲಿ ಅವರು ವೈಫಲ್ಯ ಕಂಡರು. ಕ್ರಿಕೆಟ್​ ಅಭಿಮಾನಿಗಳು ಅವರ ಆಟಕ್ಕೆ ಬೇಸರ ವ್ಯಕ್ತಪಡಿಸಿ ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೋಲ್ ಮಾಡಿದ್ದಾರೆ. ಅವರು ವಿರಾಟ್​ ಕೊಹ್ಲಿಯಿಂದ ಬ್ಯಾಟ್ ಗಿಫ್ಟ್ ಪಡೆದುಕೊಂಡ ನಂತರ ಚೆನ್ನಾಗಿ ಆಡುತ್ತಿಲ್ಲ ಎಂದ ಹೇಳಿದ್ದಾರೆ.

2024ರ ಟಿ20 ವಿಶ್ವಕಪ್​​ಗೆ ಭಾರತ ತಂಡದಿಂದ ಹೊರಗುಳಿದಿದ್ದ ರಿಂಕು ಸಿಂಗ್ 2024ರ ಐಪಿಎಲ್​​ನಲ್ಲಿ ಇನ್ನೂ ಉತ್ತಮ ಪ್ರದರ್ಶ ನೀಡಿಲ್ಲ. ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಬೌಲರ್​ಗಳ ದಾಳಿಗೆ ಸಿಕ್ಕಿ ಅವರು ಮತ್ತೊಮ್ಮೆ ಕಡಿಮೆ ಸ್ಕೋರ್​ಗೆ ಪೆವಿಲಿಯನ್​ಗೆ ಮರಳಿದರು.

ಕೋಲ್ಕತಾ ನೈಟ್ ರೈಡರ್ಸ್ ಆರಂಭಿಕ ನಾಲ್ಕು ವಿಕೆಟ್​​ಗಳನ್ನು ಕಳೆದುಕೊಂಡ ನಂತರ, ರಿಂಕು ಸಿಂಗ್ ಆಡಲು ಬಂದರು. ವಿಶ್ವ ಕಪ್​ನಲ್ಲಿ ಚಾನ್ಸ್ ಸಿಗದ ಕೋಪಕ್ಕೆ ಚಚ್ಚುತ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. 6 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಅವರು ಆರಂಭದಲ್ಲಿ ಉತ್ತಮವಾಗಿಯೇ ಇದ್ದರು.

ರಿಂಕು ಸಿಂಗ್ ತಮ್ಮ ಇನ್ನಿಂಗ್ಸ್ ನ ಆರಂಭದಲ್ಲಿ ಎರಡು ಬೌಂಡರಿಗಳನ್ನು ಗಳಿಸಿದರು. ಇನಿಂಗ್ಸ್​​ನ 7ನೇ ಓವರ್ ನ ಮೊದಲ ಎಸೆತದಲ್ಲಿ ಪಿಯೂಷ್ ಚಾವ್ಲಾ ಮ್ಯಾಜಿಕ್ ಮಾಡಿದರು. ರಿಂಕು ಸಿಂಗ್ ಮಿಡ್​ ವಿಕೆಟ್ ಕಡೆ ಬಾರಿಸಲು ಮುಂದಾಗಿ ಕ್ಯಾಚ್ ನೀಡಿದರು.

ಇದನ್ನೂ ಓದಿ: T20 World Cup : ಉನ್ಮುಕ್ತ್​ ಚಾಂದ್​ಗೆ ತೆರೆಯದ ಭಾಗ್ಯದ ಬಾಗಿಲು; ಯುಎಸ್​ ತಂಡದಲ್ಲಿ ಇಲ್ಲ ಚಾನ್ಸ್​!

ರಿಂಕು ಸಿಂಗ್ 8 ಎಸೆತಗಳಲ್ಲಿ 9 ರನ್ ಗಳಿಸಿದರು. ಅವರು 100 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​ನೊಂದಿಗೆ ಬ್ಯಾಟಿಂಗ್ ಮಾಡಿದರು ಮತ್ತು ಅವರ ವಿಕೆಟ್​ನೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ 57/5 ಕ್ಕೆ ಕುಸಿಯಿತು. ಈ ಋತುವಿನಲ್ಲಿ ಆಡಿರುವ 10 ಪಂದ್ಯಗಳಲ್ಲಿ ಕೇವಲ 18ರ ಸರಾಸರಿಯಲ್ಲಿ ಕೇವಲ 132 ರನ್ ಗಳಿಸಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ಬ್ಯಾಟರ್​ ರಿಂಕು ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮತ್ತೊಂದು ವೈಫಲ್ಯ ಅನುಭವಿಸುತ್ತಿದ್ದಂತೆ, ಎಕ್ಸ್​ನಲ್ಲಿ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

Continue Reading
Advertisement
Rain News
ಕರ್ನಾಟಕ5 hours ago

Rain News: ಪ್ರತ್ಯೇಕ ಮಳೆ ಅವಘಡ; ಸಿಡಿಲು ಬಡಿದು ನವ ವಿವಾಹಿತ ಸಾವು, ಕಾರ್ಮಿಕನ ಸ್ಥಿತಿ ಗಂಭೀರ

ಪ್ರಮುಖ ಸುದ್ದಿ5 hours ago

IPL 2024 : ಮುಂಬೈ ವಿರುದ್ಧ ಕೆಕೆಆರ್​ಗೆ 24 ರನ್​ ಗೆಲುವು; ಪಾಂಡ್ಯಾ ಬಳಗಕ್ಕೆ ಮತ್ತೊಂದು ಆಘಾತ

Nijjar Killing
ವಿದೇಶ5 hours ago

Nijjar Killing: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಕೆನಡಾ ಪೊಲೀಸರು; ಯಾರಿವರು?

Rohith Vemula
ದೇಶ5 hours ago

Rohith Vemula: ರೋಹಿತ್‌ ವೇಮುಲ ದಲಿತನಲ್ಲ ಎಂದ ಪೊಲೀಸರು; ಮರು ತನಿಖೆಗೆ ‘ಕೈ’ ಸರ್ಕಾರ ಆದೇಶ!

Rinku Singh
ಪ್ರಮುಖ ಸುದ್ದಿ5 hours ago

Rinku Singh : ಕೊಹ್ಲಿಯ ಬ್ಯಾಟ್​ನಲ್ಲಿ ರಿಂಕು ಚೆನ್ನಾಗಿ ಆಡುತ್ತಿಲ್ಲ; ನೆಟ್ಟಿಗರಿಂದ ಟ್ರೋಲ್​!

honour killing
ವಿಜಯಪುರ6 hours ago

Honor Killing: ಮರ್ಯಾದೆಗಾಗಿ ಗರ್ಭಿಣಿಯನ್ನು ಸುಟ್ಟು ಕೊಂದ ಇಬ್ಬರಿಗೆ ಗಲ್ಲು ಶಿಕ್ಷೆ, 6 ಮಂದಿಗೆ ಜೀವಾವಧಿ‌ ಶಿಕ್ಷೆ

Pakistan
ವಿದೇಶ6 hours ago

ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

T20 World Cup
ಪ್ರಮುಖ ಸುದ್ದಿ6 hours ago

T20 World Cup : ಉನ್ಮುಕ್ತ್​ ಚಾಂದ್​ಗೆ ತೆರೆಯದ ಭಾಗ್ಯದ ಬಾಗಿಲು; ಯುಎಸ್​ ತಂಡದಲ್ಲಿ ಇಲ್ಲ ಚಾನ್ಸ್​!

Health Tips Kannada
ಆರೋಗ್ಯ6 hours ago

Health Tips Kannada : ಉತ್ತಮ ಆರೋಗ್ಯಕ್ಕಾಗಿ ಎಷ್ಟು ಗಂಟೆ ಕುಳಿತುಕೊಳ್ಳಬೇಕು, ನಿಂತುಕೊಳ್ಳಬೇಕು, ಮಲಗಬೇಕು?

Meeting with representatives of various political parties about MLC election in Hosapete
ವಿಜಯನಗರ6 hours ago

Vijayanagara News: ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆ; ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ12 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ24 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 day ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20246 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌