Bheemana Amavasya | ಸರ್ವ ಮಂಗಳಕಾರಕ ಭೀಮನ ಅಮಾವಾಸ್ಯೆ; ವ್ರತಾಚರಣೆ ಹೇಗೆ? - Vistara News

ಧಾರ್ಮಿಕ

Bheemana Amavasya | ಸರ್ವ ಮಂಗಳಕಾರಕ ಭೀಮನ ಅಮಾವಾಸ್ಯೆ; ವ್ರತಾಚರಣೆ ಹೇಗೆ?

ಆಷಾಢ ಕೃಷ್ಣ ಅಮಾವಾಸ್ಯೆ (ಜು.28) ಭೀಮೇಶ್ವರ ವ್ರತದ ದಿನ (Bheemana Amavasya). ಜ್ಯೋತಿರ್ಭೀಮೇಶ್ವರ ವ್ರತದ ಹಿನ್ನೆಲೆ ಏನು? ವ್ರತಾಚರಣೆ ಹೇಗೆ? ಪೂಜಿಸುವಾಗ ಏನೆಂದು ಪ್ರಾರ್ಥನೆ ಮಾಡಬೇಕೆಂಬ ಮಾಹಿತಿ ಈ ಲೇಖನದಲ್ಲಿದೆ.

VISTARANEWS.COM


on

Bheemana Amavasya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Bheemana Amavasya

ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ವ್ರತ ಎಂದರೆ ನಿಷ್ಠೆ ಎಂದು ಅರ್ಥ. ದೇವತೆಗಳಲ್ಲಿ ನಾವು ತೋರಿಸುವ ಭಕ್ತಿ ಗೌರವಗಳು ವ್ರತದ ಮೂಲಕ ಪೂಜಾರೂಪದಲ್ಲಿ ಆಚರಿಸಲ್ಪಡುತ್ತವೆ. ಪ್ರತಿ ವ್ರತದಲ್ಲಿ ಆಚರಣೆಗೆ ಪೂರ್ವಸಿದ್ಧತೆ ಆವಶ್ಯಕವಾಗಿರುತ್ತದೆ. ಕಾಲಕ್ಕೆ ತಕ್ಕಂತೆ ಪೂಜಾದ್ರವ್ಯಗಳನ್ನು ಬಳಸಿಕೊಂಡು ಕೆಲವು ವಿಶಿಷ್ಟ ನಿಯಮಗಳನ್ನು ಪಾಲಿಸಿ ವ್ರತಗಳನ್ನು ಮಾಡಬೇಕಾಗುತ್ತದೆ.

ನಮ್ಮ ಸನಾತನ ಹಿಂದೂಸಂಪ್ರದಾಯದಲ್ಲಿ ದೇವರು-ದೇವತೆಗಳ ಪೂಜೆ ಅಷ್ಟೇ ಅಲ್ಲದೇ ಪವಿತ್ರವಾದ ಕೆಲವು ಸಂಬಂಧಗಳನ್ನು ಪೂಜೆಮಾಡುವ ಮೂಲಕ ಆ ಸಂಬಂಧಗಳನ್ನು ಗೌರವಿಸುವ ಸಂಪ್ರದಾಯವು ಆಚರಣೆಯಲ್ಲಿದೆ. ಭಾರತೀಯ ಸಂಪ್ರದಾಯದಲ್ಲಿ ಪತಿಯನ್ನು ದೇವರೆಂದು ಭಾವಿಸಿ, ಪೂಜಿಸುವ ಸಂಪ್ರದಾಯಗಳು ಬಹಳ ಪುರಾತನ ಕಾಲದಿಂದಲೂ ಇದೆ. ಪತಿಯ ಆಯು, ಆರೋಗ್ಯವೃದ್ಧಿಯಾಗಬೇಕು, ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಸಿಗಬೇಕೆಂದು ಪ್ರಾರ್ಥಿಸಿ ಅನೇಕ ವ್ರತಗಳನ್ನು ಮಾಡುವ ಸಂಪ್ರದಾಯ ಬಂದಿದೆ.

ವಟ ಸಾವಿತ್ರಿ ಪೂಜೆ, ಮಂಗಳಗೌರೀ ಪೂಜೆ, ಗೌರೀಹರ ಪೂಜೆ ಹಾಗೆಯೇ ಈ ಭೀಮನ ಅಮಾವಾಸ್ಯೆಯು ಒಂದು. ಸ್ತ್ರೀಯರಿಗೆ ಕುಂಕುಮವೇ ಅಮೂಲ್ಯವಾದ ಆಭರಣ. ಪತಿಯ ಸಕಲ ಆಪತ್ತುಗಳೆಲ್ಲ ಕಳೆದು ದೀರ್ಘಾಯುಷ್ಯವನ್ನು ಹೊಂದಲಿ ಎಂದು ಉಮಾ-ಮಹೇಶ್ವರರಲ್ಲಿ ಪ್ರಾರ್ಥಿಸಿ ವಿಧಾನ ಪೂರ್ವಕವಾಗಿ ಪೂಜಿಸುವುದೇ ಈ ಭೀಮನ ಅಮಾವಾಸ್ಯೆ. ಉದ್ದೇಶ್ಯ ಒಂದೇ ಆದರೂ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನತೆ ಕಂಡುಬರುತ್ತದೆ. ಹಾಗೆಯೇ ಆಚರಣೆಯಲ್ಲಿಯೂ ವೈವಿಧ್ಯತೆಯನ್ನು ಕಾಣಬಹುದು.

ಉತ್ತರ ಕರ್ನಾಟಕದಲ್ಲಿ ದಿವಶೀ ಅಮಾವಾಸ್ಯೆ ಎಂದು, ದಕ್ಷಿಣಕನ್ನಡದಲ್ಲಿ ಆಟಿ ಅಮಾವಾಸ್ಯೆ ಎಂದು, ಉತ್ತರ ಕನ್ನಡದ ಕಡೆಗೆ ಕೊಡೆ ಅಮಾವಾಸ್ಯೆ ಎಂದು, ಮೈಸೂರು ಬೆಂಗಳೂರು ಪ್ರಾಂತ್ಯದಲ್ಲಿ ಭೀಮನ ಅಮಾವಾಸ್ಯೆ (Bheemana Amavasya) ಮತ್ತು ಪತಿಸಂಜೀವಿನೀವ್ರತ ಎಂದು ಹೀಗೆ ಅನೇಕ ಹೆಸರುಗಳಿಂದ ಈ ವ್ರತ ಪ್ರಸಿದ್ಧಿಪಡೆದಿದೆ.

ಈ ವ್ರತವನ್ನು ವಿವಾಹಿತರಷ್ಟೇ ಅಲ್ಲದೆ ಅವಿವಾಹಿತ ಕನ್ಯೆಯರೂ ಆಚರಿಸುವ ಪದ್ಧತಿಯುಂಟು. ವಿವಾಹಿತ ಹೆಣ್ಣುಮಗಳು ತನ್ನ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರೆ, ಅವಿವಾಹಿತ ಕನ್ಯೆಯರು ಸದ್ಗುಣಿಯಾದ ಪತಿದೊರೆಯಲಿ ದಾಂಪತ್ಯಜೀವನ ಗೌರೀಹರರಂತೆ ಇರಲಿ ಎಂದು ಪ್ರಾರ್ಥಿಸುತ್ತಾರೆ.

ವ್ರತದ ಹಿನ್ನೆಲೆ ಏನು?

ಹಿಂದೊಮ್ಮೆ ಋಷಿಗಳೆಲ್ಲರು ಸೂತರನ್ನು ಕೇಳಿದರು. “ಸರ್ವಶಾಸ್ತ್ರಗಳನ್ನು ಬಲ್ಲ ಮಹಾನುಭಾರವರಾದ ಸೂತರೆ ನಾರಿಯ ದೀರ್ಘಸೌಮಂಗಲ್ಯಕ್ಕಾಗಿ ಯಾವ ವ್ರತವನ್ನು ಆಚರಿಸಬೇಕುʼʼ ಎಂದು. ಅದಕ್ಕೆ ಸೂತರು ಭೀಮನ ಅಮಾವಾಸ್ಯೆ ಎಂಬ ಒಂದು ಪವಿತ್ರವಾದ ವ್ರತವನ್ನು ಉಪದೇಶಿಸಿದರು. ಇದನ್ನು ಆಷಾಢ ಕೃಷ್ಣ ಅಮಾವಾಸ್ಯೆಯಂದು ಹೆಣ್ಣುಮಕ್ಕಳು ತಮ್ಮ ದೀರ್ಘಸೌಮಾಂಗಲ್ಯಕ್ಕಾಗಿ ಆಚರಿಸಬೇಕು. ಹಾಗೆಯೇ ಅದರ ಹಿನ್ನೆಲೆಯನ್ನು ವಿವರಿಸುತ್ತ ಸೂತರು ಕಥೆಯೊಂದನ್ನು ಹೇಳುತ್ತಾರೆ. ಈ ಕಥೆ ಹೀಗಿದೆ;

ಹಿಂದೆ ಸೌರಾಷ್ಟ್ರದೇಶದಲ್ಲಿ ವಜ್ರಬಾಹು ಎಂಬ ರಾಜನಿದ್ದ. ಪರಮ ಧಾರ್ಮಿಕನು, ಪ್ರಜಾಪಾಲನಾತತ್ಪರನೂ ಆದ ಆ ರಾಜನಿಗೆ ಸರ್ವಶಾಸ್ತ್ರಸಂಪನ್ನನು, ಶತ್ರುನಿಗ್ರಹನಿಸ್ಸೀಮನೂ ಮತ್ತು ಅತಿಸುಂದರನಾದ  ವಿಜಯಶೇಖರನೆಂಬ ಮಗನಿದ್ದನು. ವಿಜಯಶೇಖರನು ದುರ್ದೈವವಶಾತ್ ಅಕಾಲಮರಣವನ್ನು ಹೊಂದಿದನು. ದುಃಖದಿಂದ ಬಳಲಿದ ತಂದೆ-ತಾಯಿಗಳು ತಾರುಣ್ಯಕ್ಕೆ ಕಾಲಿಟ್ಟ ಮಗನ ವಿವಾಹವನ್ನೂ ನೋಡಲಿಲ್ಲ ಎಂದು ಪರಿತಪಿಸಿದರು. ಆಗ ಮಗನ ಮೃತದೇಹಕ್ಕೆ ವಿವಾಹ ಮಾಡೋಣ ಎಂದು ಯೋಚಿಸಿದರು. ಯಾರು ನಮ್ಮ ಮಗನ ಮೃತದೇಹದೊಂದಿಗೆ ವಿವಾಹವಾಗುತ್ತಾರೆ ಅವರಿಗೆ ಒಂದು ಲಕ್ಷಚಿನ್ನದ ನಾಣ್ಯಗಳನ್ನು ಕೊಡುವುದಾಗಿ ಪಟ್ಟಣದ ತುಂಬೆಲ್ಲ ಡಂಗುರ ಸಾರುತ್ತಾರೆ.

ಇದನ್ನು ಕೇಳಿದ ಮಾಧವ ಎಂಬಾತ ತನ್ನ ಹೆಂಡಿತಿ ಸುಶೀಲೆ ಎಂಬುವಳಿಗೆ ಈ ಎಲ್ಲ ವೃತ್ತಾಂತವನ್ನು ತಿಳಿಸುತ್ತಾನೆ. ಆ ದಂಪತಿಗಳಿಗೆ ಐದುಜನ ಹೆಣ್ಣು ಮಕ್ಕಳು ಮತ್ತು ಒಂಬತ್ತು ಜನ ಗಂಡುಮಕ್ಕಳು. ತುಂಬಾ ಬಡತನ. ದಾರಿದ್ರ್ಯದಿಂದ ವ್ಯಥೆಪಡುತ್ತಿರುವ ಆ ಮಾಧವ, ನಮ್ಮ ಒಬ್ಬ ಮಗಳನ್ನು ರಾಜನ ಮಗನಿಗೆ ವಿವಾಹಮಾಡೋಣವೇ ? ಅದರಿಂದ ಬಂದ ಧನದಿಂದ ಉಳಿದವರಾದರೂ ಸುಖದಿಂದ ಬಾಳಬಹುದಲ್ಲವೇ ಎಂದು ಹೆಂಡತಿಯನ್ನು ಕೇಳಿದ. ಅದಕ್ಕೆ ಅವಳು ಕುರೂಪಿಯಾಗಲಿ ಷಂಢನಾಗಲಿ ವೃದ್ಧನೇ ಆಗಲಿ ಆದರೆ ಬದುಕಿರುವವನಿಗೆ ಮಾತ್ರ ನಮ್ಮ ಮಗಳನ್ನು ಧಾರೆ ಎರೆಯೋಣ ಎನ್ನುತ್ತಾಳೆ.

ಆದರೆ ದಾರಿದ್ರ್ಯದಿಂದ ಬೇಸತ್ತ ಮಾಧವ ತನ್ನ ಮಗಳನ್ನು ಕರೆದುಕೊಂಡು ಹೋಗಿ ರಾಜನ ಮಗನ ಮೃತದೇಹದೊಂದಿಗೆ ವಿವಾಹಮಾಡಿಸುತ್ತಾನೆ. ರಾಜನು ಸಕಲ ಮರ್ಯಾದೆ ವೈಭವಗಳಿಂದ ಸೊಸೆಯನ್ನು ಪಲ್ಲಕ್ಕಿಯಲ್ಲಿ ಕರೆತಂದು ಕೊನೆಗೆ ಸ್ಮಶಾನದಲ್ಲಿ ಮಗನ ಮೃತದೇಹದೊಂದಿಗೆ ಬಿಟ್ಟು ಹೋಗುತ್ತಾನೆ. ಸ್ಮಶಾನದಲ್ಲಿ ಗೂಬೆಗಳ ಧ್ವನಿಬಿಟ್ಟರೆ ಇನ್ನೊಂದು ಶಬ್ದವಿಲ್ಲ. ಅಲ್ಲಿಯೇ ಪತಿಯನ್ನು ಬಿಟ್ಟು ಹೋದರೆ ಪತಿವ್ರತಾಧರ್ಮ ಕೆಡುವುದೆಂಬ ಧರ್ಮಸಂಕಟ. ಏನು ಮಾಡಲಿ ಎಂದು ದುಃಖದಿಂದ ಪರಿತಪಿಸುತ್ತ ಭಕ್ತಿಯಿಂದ ಪರಮಾತ್ಮನನ್ನು ಪ್ರಾರ್ಥಿಸುತ್ತಾಳೆ.

“ಹೇ ಅನಾಥ ರಕ್ಷಕನೇ, ಮಾರ್ಕಾಂಡೇಯರನ್ನು ಬದುಕಿಸಿದಂತೆ ನನ್ನ ಪತಿಯನ್ನು ಬದುಕಿಸಿಕೊಡುʼʼ ಎಂದು ಪರಿಪರಿಯಾಗಿ ದುಃಖದಿಂದ ಪ್ರಾರ್ಥಿಸುತ್ತಾಳೆ. ಮೇಲುಧ್ವನಿಯಿಂದ ಬಹಳವಾಗಿ ರೋದಿಸುತ್ತಾಳೆ. ಆಗ ಆಕಾಶಮಾರ್ಗದಲ್ಲಿ ಸಂಚರಿಸುತ್ತಿರುವ ಶಿವಪಾರ್ವತಿಯರಿಗೆ ಅವಳ ಆರ್ತನಾದವು ಕೇಳಿಸುತ್ತದೆ. ಯಾರದೀ ಆಕ್ರಂದನ ಎಂದು ಪಾರ್ವತಿಯು ನೋಡುತ್ತಾಳೆ. ಆ ಬಾಲಿಕೆಯ ಪ್ರಕಾಶಮಾನವಾದ ತೇಜಸ್ಸು ಶಿವಪಾರ್ವತಿಯರನ್ನು ಅವಳೆಡೆಗೆ ಬರುವಂತೆ ಮಾಡುತ್ತದೆ.

ತಕ್ಷಣವೇ ಆ ಸ್ಮಶಾನದಲ್ಲಿ ಶಿವಪಾರ್ವತಿಯರು ಅವಳಿಗೆ ಪ್ರತ್ಯಕ್ಷರಾಗುತ್ತಾರೆ. ಅವರನ್ನುಕಂಡ ಆ ಬಾಲಕಿ ಸಾಷ್ಟಾಂಗವೆರಗಿ ತನ್ನ ದೀನಪರಿಸ್ಥಿತಿಯನ್ನು ತೊಡಿಕೊಳ್ಳುತ್ತಾಳೆ. ತನ್ನ ಗಂಡನನ್ನು ಹೇಗಾದರೂ ಬದುಕಿಸಬೇಕೆಂದು ಪರಿಪರಿಯಾಗಿ ಪ್ರಾರ್ಥಿಸುತ್ತಾಳೆ. ಅದಕ್ಕೆ ಈಶ್ವರನು ಕೇಳು ಮಗಳೆ ಸ್ತ್ರೀಯರಿಗೆ ದೀರ್ಘಸೌಮಂಗಲ್ಯದ ವೃದ್ಧಿಗೆ ಸಕಲ ಮಂಗಳಕರವಾದ ಪುತ್ರ-ಪೌತ್ರಾಭಿವೃದ್ಧಿಗೆ ಕಾರಣವಾದ ಒಂದು ವ್ರತವಿದೆ. ಅದನ್ನು ಹೇಳುವೆ ಭಕ್ತಿಯಿಂದ ಆ ವ್ರತವನ್ನಾಚರಿಸು. ಇಂದು ಅಮಾವಾಸ್ಯೆ ಆದ್ದರಿಂದ ಇಂದೇ ಈ ವ್ರತವನ್ನು ಆಚರಿಸು ಎಂದನು.

Bheemana Amavasya

ಶುದ್ಧ ಸ್ನಾನಾದಿಗಳನ್ನು ಮಾಡಿ ಪೂಜೆಯ ಸ್ಥಳವನ್ನು ಶೋಧಿಸಿ ಸರ್ವತೋಭದ್ರಮಂಡಲವನ್ನು ಬರೆದು ಅಕ್ಕೆಯ ರಾಶಿಯ ಮೇಲೆ ಮಣ್ಣಿನಿಂದ ಎರಡು ದೀಪಸ್ಥಂಭಗಳನ್ನು ಮಾಡಿ ಪಾರ್ವತಿಸಮೇತನಾದ ಜ್ಯೋತಿರ್ನಾಮಕನಾದ ನನ್ನನ್ನು ಪೂಜಿಸು. ಗೋದೀಹಿಟ್ಟಿನಿಂದ ಮಾಡಿದ ಪದಾರ್ಥವನ್ನು ನಿವೇದಿಸು. ಹೀಗೆ ಮಾಡಿದಲ್ಲಿ ಸಕಲ ಇಷ್ಟಾರ್ಥವನ್ನು ಹೊಂದುವೆ ಎಂದು ಶಿವ ನುಡಿದನು. ಅಂತೆಯೇ ಆ ಬಾಲೆ ಚಾಚೂತಪ್ಪದಂತೆ ಭಾಗೀರಥಿಯಲ್ಲಿ ಮಿಂದು ಭಕ್ತಿಯಿಂದ ಆ ವ್ರತವನ್ನು ಆಚರಿಸುತ್ತಾಳೆ. ಕೊನೆಯಲ್ಲಿ ಗೋಧೀಹಿಟ್ಟಿನಿಂದ ಮಾಡಿದ ಬೇಳೆ ಭಂಡಾರವನ್ನು ನಿವೇದಿಸುತ್ತಾಳೆ.

ಅಣ್ಣತಮ್ಮಂದಿರಿದ್ದರೆ ಆ ಭಂಡಾರವನ್ನು ಒಡೆದು ಕೊಡುತ್ತಿದ್ದರು ಎಂದು ದುಃಖಿಸಿದಾಗ ಸಾಕ್ಷಾತ್ ನಂದಿವಾಹನನಾದ ಶಿವನೇ ಅವಳಿಗೆ ಬೇಳೆ ಭಂಡಾರವನ್ನು ಒಡೆದು ಕೊಡುತ್ತಾನೆ. ಹೀಗೆ ಜ್ಯೋತಿಸ್ಥಂಭವನ್ನು ಪೂಜಿಸಿ ಗೌರೀಹರರ ಕೃಪೆಗೆ ಪಾತ್ರಳಾಗಿ ಮೃತನಾದ ತನ್ನ ಪತಿಯನ್ನು ಬದುಕಿಸಿಕೊಳ್ಳುತ್ತಾಳೆ. ನಂತರ ಶಿವನ ಅನುಗ್ರಹದಿಂದ ಅಲ್ಲಿಯೇ ಅವರಿಗೊಂದು ಪಟ್ಟಣವೂ ನಿರ್ಮಾಣವಾಗುತ್ತದೆ. ಸಕಲ ಐಶ್ವರ್ಯಗಳನ್ನು ಹೊಂದಿ ಅನೇಕವರ್ಷಗಳಕಾಲ ಸಂತೋಷದಿಂದ ಜೀವನ ಸಾಗಿಸುತ್ತಾರೆ. ಇದು ಭವಿಷ್ಯೋತ್ತರಪುರಾಣದಲ್ಲಿ ಬಂದ ದೀಪಸ್ತಂಭ ಗೌರೀ ವ್ರತ. ಇದೇ ಭೀಮನ ಅಮಾವಾಸ್ಯೆ ಎಂದು ಪ್ರಸಿದ್ಧಿಯನ್ನು ಪಡೆಯಿತು.

ವ್ರತ ಆಚರಣೆ ಹೇಗೆ?

ಆಷಾಢ ಕೃಷ್ಣ ಅಮಾವಾಸ್ಯೆಯಂದು ಸ್ತ್ರೀಯರು ಶುದ್ಧವಾಗಿ ಎಣ್ಣೆಸ್ನಾನಾದಿಗಳನ್ನು ಮಾಡಿ, ಶುದ್ಧಬಟ್ಟೆಯನ್ನು ತೊಟ್ಟು ಎರಡು ದೀಪಸ್ತಂಭಗಳನ್ನು ಸ್ಥಾಪಿಸಬೇಕು. ಜೊತೆಗೆ ಉಮಾಮಹೇಶ್ವರರ ಚಿತ್ರವನ್ನು ಇಡಬೇಕು. ತುಪ್ಪ ಅಥವಾ ಎಳ್ಳೆಣ್ಣೆಯಿಂದ ದೀಪವನ್ನು ಪ್ರಜ್ವಾಲಿಸಬೇಕು. ಸರ್ವವಿಘ್ನಪರಿಹಾರಕನಾದ ಮಹಾಗಣಪತಿಯನ್ನು ಮೊದಲು ಪೂಜಿಸಬೇಕು. ದೀಪಸ್ತಂಭದಲ್ಲಿ ಶಿವಪಾರ್ವತಿಯರ ಧ್ಯಾನ ಆವಾಹನಾದಿಗಳನ್ನು ಮಾಡಿ ಷೋಡಶೋಪಚಾರ ಪೂಜೆಯನ್ನು ಮಾಡಬೇಕು.

ಒಂಬತ್ತು ಎಳೆಯ ದಾರವನ್ನು ಅರಿಶಿನ ಕುಂಕುಮದಿಂದ ಪೂಜಿಸಿ ಅದಕ್ಕೆ ಒಂಬತ್ತು ಗಂಟುಗಳನ್ನು ಹಾಕಬೇಕು. ಗೋದೀಹಿಟ್ಟಿನಿಂದ ಮಾಡಿದ ಕಡುಬು (ಹೂರಣ ತುಂಬಿದ ಕಡಬು) ನೈವೇದ್ಯ ತೋರಿಸಬೇಕು. ಮನೆಯ ಹೊಸ್ತಿಲ ಮೇಲೆ ಬೇಳೆಯ ಭಂಡಾರವನ್ನಿಟ್ಟು ಅಣ್ಣತಮ್ಮಂದಿರ ಮೊಳಕೈಯಿಂದ ಆ ಭಂಡಾರವನ್ನು ಒಡಿಸಿ ಅವರ ಕೈಯಿಂದಲೇ ಆಶೀರ್ವಾದರೂಪವಾಗಿ ಅದನ್ನು ಸ್ವೀಕರಿಸುವ ಸಂಪ್ರದಾಯವೂ ಇದೆ. ಪೂಜಿಸಿದ ದಾರವನ್ನು ಬಲಗೈಗೆ ಕಟ್ಟಿಕೊಳ್ಳಬೇಕು. ನಂತರ ಗೌರಿಗೆ ಉಡಿಯನ್ನು ತುಂಬಿ ಹೂರಣದ ಆರತಿಯನ್ನು ಮಾಡಬೇಕು.

ವಿವಾಹಿತ ಸ್ತ್ರೀಯರು ತಮ್ಮ ಪತಿಯ ಪಾದತೋಳೆದು ತಿಲಕವಿಟ್ಟು ನಮಸ್ಕರಿಸಿ ದೀರ್ಘಸೌಮಂಗಲ್ಯವನ್ನು ಪ್ರಾರ್ಥಿಸಿ ಆರತಿಯನ್ನು ಮಾಡಬೇಕು. ನಂತರ ಎಲ್ಲ ಗುರುಹಿರಿಯರಿಗೆ ನಮಸ್ಕರಿಸಿ ಎಲ್ಲರ ಆಶೀರ್ವಾದವನ್ನು ಪಡೆಯಬೇಕು. ಸಾಯಂಕಾಲದ ಸಮಯದಲ್ಲಿ ಮನೆಗೆ ಮುತ್ತೈದೆಯರನ್ನು ಕರೆದು ಅರಶಿನ ಕುಂಕುಮ ಬಳೆ ಕುಪ್ಪುಸದ ಖಣ ಎಲೆ ಅಡಿಕೆ ದಕ್ಷಿಣೆ ಇತ್ಯಾದಿ ಮಂಗಳ ದ್ರವ್ಯಗಳನ್ನು ಕೊಟ್ಟು ಆಶೀರ್ವಾದ ಪಡೆಯಬೇಕು. ಪಾರ್ವತಿಯು ಸಂತಾನ, ಸಮೃದ್ಧಿ, ಪಾತಿವ್ರತ್ಯ, ಹಾಗೂ ಶಕ್ತಿಯ ಸಂಕೇತಳು. ಆದ್ದರಿಂದ ಸ್ತ್ರೀಯರು ಆ ದಿನದಂದು ದಾಂಪತ್ಯಕ್ಕೆ ಅಭಿಮಾನಿಗಳಾದ ಉಮಾಮಹೇಶ್ವರರ ಪೂಜೆಯನ್ನು ವಿಶೇಷವಾಗಿ ಮಾಡುತ್ತಾರೆ.

ಏನೆಂದು ಪ್ರಾರ್ಥಸಿಬೇಕು?

ಮೃತ್ಯುಂಜಯ ನಮಸ್ತುಭ್ಯಂ ತವ ಮೇ ಸೂತ್ರಧಾರಣಾತ್ |
ಸೌಭಾಗ್ಯಂ ಧನಧಾನ್ಯಂ ಚ ಪ್ರಜಾವೃದ್ಧಿಂ ಸದಾ ಕುರು ||

ಉಮಾ ವೈ ವಾಕ್ ಸಮುದ್ದಿಷ್ಟಾ ಮನೋ ರುದ್ರ ಉದಾಹೃತಃ |
ತದೇತತ್ ಮಿಥುನಂ ಜ್ಞಾತ್ವಾ ನ ದಾಂಪತ್ಯಾತ್ ವಿಹೀಯತೇ ||

ನಮ್ಮ ಭಾರತೀಯ ಸಂಪ್ರದಾಯವೆಂದರೆ ಸಕಲ ಜಾತಿಮತಧರ್ಮಗಳನ್ನು ಏಕತೆಯಿಂದ ಕಾಣುವ ಸಂಸ್ಕೃತಿ. ಆದ್ದರಿಂದ ಈ ಪೂಜೆಯು ಯಾವುದೇ ಒಂದು ಧರ್ಮಕ್ಕಾಗಲಿ ಜಾತಿಗಾಗಲಿ ಸೀಮಿತಗೊಂಡಿಲ್ಲ. ಎಲ್ಲ ಸುಮಂಗಲಿಯರೂ ಅವಶ್ಯವಾಗಿ ಆಚರಿಸಬಹುದಾದ ವ್ರತ ಇದು.

ನಮ್ಮ ನಮ್ಮ ಅನುಕೂಲಗಳಿಗೆ ತಕ್ಕಂತೆ ವೈಭವ ಅವಶ್ಯವಾಗಿ ಮಾಡಬೇಕು. ಆದರೆ ವೈಭವ ಆಡಂಬರಗಳೆ ಮುಖ್ಯವಲ್ಲ. ಪೂಜೆಯಲ್ಲಿ ಬೇಕಾದ ಮುಖ್ಯಸಾಮಗ್ರಿ ಭಕ್ತಿ. ಆದ್ದರಿಂದ ಯಥಾಯೋಗ್ಯವಾಗಿ ಭಕ್ತಿವಿಶ್ವಾಸಗಳಿಂದ ಪೂಜೆಯನ್ನು ಮಾಡುವುದೇ ಅತಿ ಪ್ರಧಾನ.

ಇದನ್ನು ಓದಿ | Soma Pradosham 2022 | ಇಂದು ಸೋಮ ಪ್ರದೋಷ; ಇದರ ಮಹತ್ವವೇನು? ಪೂಜೆ ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಮನೆ, ಅಂಗಡಿಯಲ್ಲಿ ಧನಾತ್ಮಕ ಶಕ್ತಿ ಆಹ್ವಾನಿಸಿ; ಸುಖ, ಶಾಂತಿ, ಸಮೃದ್ಧಿ ವೃದ್ಧಿಸಿ

ಮನೆ ಮತ್ತು ಅಂಗಡಿಯಲ್ಲಿ ವಾಸ್ತು ನಿಯಮಗಳನ್ನು (Vastu Tips) ಅನುಸರಿಸುವ ಮೂಲಕ ಧನಾತ್ಮಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ಹೊಸ ಮನೆ ಅಥವಾ ಅಂಗಡಿಯನ್ನು ಖರೀದಿಸಲು ಹೋದಾಗ ವಿಶೇಷವಾಗಿ ವಾಸ್ತು ನಿಯಮಗಳನ್ನು ಅನುಸರಿಸಬೇಕು. ಆ ನಿಯಮಗಳು ಯಾವುದು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಮನೆ (home) ಮತ್ತು ಅಂಗಡಿಯಲ್ಲಿ (store) ಧನಾತ್ಮಕ ಶಕ್ತಿ (Positive energy) ನೆಲೆಯಾಗಿದ್ದರೆ ಮಾತ್ರ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ಕಾಣಲು ಸಾಧ್ಯ. ಇದಕ್ಕಾಗಿ ವಾಸ್ತು ನಿಯಮಗಳನ್ನು ಪಾಲಿಸುವುದು ಮುಖ್ಯ. ಮನೆ ಮತ್ತು ಅಂಗಡಿಯಲ್ಲಿ ವಾಸ್ತು ನಿಯಮಗಳನ್ನು (Vastu Tips) ಅನುಸರಿಸುವ ಮೂಲಕ ಧನಾತ್ಮಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ಸಂತೋಷ ಮತ್ತು ಸಮೃದ್ಧಿಯ ಜೊತೆಗೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನೂ ಪಡೆಯಬಹುದು.

ಹೊಸ ಮನೆ ಅಥವಾ ಅಂಗಡಿಯನ್ನು ಖರೀದಿಸಲು ಹೋದಾಗ ವಿಶೇಷವಾಗಿ ವಾಸ್ತು ನಿಯಮಗಳನ್ನು ಅನುಸರಿಸಬೇಕು. ಆ ನಿಯಮಗಳು ಯಾವುದು ಎಂಬುದು ತಿಳಿದುಕೊಳ್ಳೋಣ.

ದಿಕ್ಕುಗಳ ಬಗ್ಗೆ ತಿಳಿದಿರಲಿ

ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳಿಗೆ ವಿಶೇಷ ಗಮನ ನೀಡಲಾಗಿದೆ. ಮನೆ ಅಥವಾ ಅಂಗಡಿಯ ಮುಖ್ಯ ದ್ವಾರವು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಮನೆಯಲ್ಲಿ ಪೂಜಾ ಸ್ಥಳವು ಈಶಾನ್ಯ ಮೂಲೆಯಲ್ಲಿದ್ದರೆ ಮಲಗುವ ಕೋಣೆ ನೈಋತ್ಯ ದಿಕ್ಕಿನಲ್ಲಿರಬೇಕು. ಅದೇ ಸಮಯದಲ್ಲಿ, ಅಡುಗೆಮನೆಯು ಅಗ್ನಿ ಮೂಲೆಯಲ್ಲಿ ಅಂದರೆ ಆಗ್ನೇಯ ದಿಕ್ಕಿನಲ್ಲಿರಬೇಕು.

ಆಕಾರ ಗಮನಿಸಿ

ಮನೆ ಅಥವಾ ಅಂಗಡಿಯ ಆಕಾರವು ಚೌಕ ಅಥವಾ ಆಯತಾಕಾರವಾಗಿರಬೇಕು. ಅನಿಯಮಿತ ಆಕಾರಗಳನ್ನು ಹೊಂದಿರುವ ಕಟ್ಟಡಗಳನ್ನು ವಾಸ್ತು ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ.


ಗಾಳಿ, ಬೆಳಕು

ಮನೆ ಅಥವಾ ಅಂಗಡಿಯಲ್ಲಿ ಸಾಕಷ್ಟು ಕಿಟಕಿಗಳು ಇರಬೇಕು. ಇದರಿಂದ ನೈಸರ್ಗಿಕ ಬೆಳಕು ಮತ್ತು ಗಾಳಿ ಪ್ರವೇಶಿಸಬೇಕು. ಇದಕ್ಕಾಗಿ ಕಿಟಕಿಗಳು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿರಬೇಕು.

ಮುಖ್ಯ ಬಾಗಿಲು

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲು ದೊಡ್ಡದಾಗಿರಬೇಕು ಮತ್ತು ಭವ್ಯವಾಗಿರಬೇಕು. ಮುಖ್ಯ ಬಾಗಿಲಿನ ಮುಂದೆ ಯಾವುದೇ ಅಡೆತಡೆಗಳು ಇರಬಾರದು. ಮನೆ ಅಥವಾ ಅಂಗಡಿಯ ಚಾವಣಿ ಸಮತಟ್ಟಾಗಿರಬೇಕು.

ಚಾವಣಿಯ ಮೇಲಿನ ಇಳಿಜಾರು

ಮನೆ, ಅಂಗಡಿಯ ಚಾವಣಿಯ ಮೇಲಿನ ಇಳಿಜಾರು ನೈಋತ್ಯ, ಈಶಾನ್ಯ ದಿಕ್ಕಿನಲ್ಲಿರಬೇಕು.

ಬಣ್ಣಗಳು

ವಾಸ್ತು ಪ್ರಕಾರ ಮನೆ ಅಥವಾ ಅಂಗಡಿಗೆ ತಿಳಿ ಮತ್ತು ಬಿಳಿ ಬಣ್ಣಗಳನ್ನು ಬಳಸಬೇಕು. ಈ ಬಣ್ಣಗಳು ಧನಾತ್ಮಕತೆಯನ್ನು ತರುತ್ತವೆ. ಇದು ವ್ಯವಹಾರದಲ್ಲಿ ಪ್ರಗತಿಯನ್ನು ಒದಗಿಸುವಲ್ಲಿ ಸಹಾಯಕವೆಂದು ಪರಿಗಣಿಸಲಾಗಿದೆ. ಕಡಿಮೆ ಪ್ರಮಾಣದಲ್ಲಿ ಗಾಢ ಬಣ್ಣಗಳನ್ನು ಬಳಸಿ.

ನೀರಿನ ಸಂಗ್ರಹ

ಮನೆ ಅಥವಾ ಅಂಗಡಿಯಲ್ಲಿ ನೀರಿನ ಸಂಗ್ರಹವು ಈಶಾನ್ಯ ದಿಕ್ಕಿನಲ್ಲಿರಬೇಕು. ಮನೆ ಅಥವಾ ಅಂಗಡಿಯಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇರಬೇಕು.

ಗಿಡಗಳು

ಮನೆ ಅಥವಾ ಅಂಗಡಿಯ ಸುತ್ತ ತುಳಸಿ, ಮನಿ ಪ್ಲಾಂಟ್, ಅಲೋವೆರಾ ಮುಂತಾದ ಮಂಗಳಕರ ಗಿಡಗಳನ್ನು ನೆಡಿ. ಮನೆ ಅಥವಾ ಅಂಗಡಿ ಸುತ್ತಮುತ್ತ ಮುಳ್ಳಿನ ಗಿಡಗಳನ್ನು ನೆಡಬಾರದು.

ಇದನ್ನೂ ಓದಿ: Vastu Tips: ಮನೆಯ ದ್ವಾರದಲ್ಲಿ ಗಣೇಶನ ವಿಗ್ರಹ ಇಡುವುದು ಸರಿಯೇ?


ಸಮೃದ್ಧಿ ತರುವ ವಸ್ತುಗಳು

ವ್ಯಾಪಾರದಲ್ಲಿ ಯಶಸ್ವಿಯಾಗಲು ಅಂಗಡಿಯಲ್ಲಿ ಶ್ರೀಯಂತ್ರ, ವ್ಯಾಪಾರ ವೃದ್ಧಿ ಯಂತ್ರ, ಸ್ಫಟಿಕ ಆಮೆ ಅಥವಾ ಸ್ಫಟಿಕ ಚೆಂಡನ್ನು ಇರಿಸಬಹುದು. ಇದು ಧನಾತ್ಮಕ ಶಕ್ತಿಯನ್ನು ತರುತ್ತದೆ. ಹೊಸ ಅಂಗಡಿಯನ್ನು ತೆಗೆದುಕೊಂಡಿದ್ದರೆ ಅದರಲ್ಲಿ ಪಾಂಚಜನ್ಯ ಶಂಖವನ್ನು ಸ್ಥಾಪಿಸಬಹುದು. ಶಂಖ್ ಅನ್ನು ಮಾತಾ ಲಕ್ಷ್ಮಿಯ ಸಹೋದರ ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಇಬ್ಬರೂ ಸಮುದ್ರ ಮಂಥನದಿಂದ ಹುಟ್ಟಿಕೊಂಡಿದ್ದಾರೆ. ಶಂಖದ ಆರಾಧನೆಯಿಂದ ಲಕ್ಷ್ಮೀದೇವಿಯೂ ಪ್ರಸನ್ನಳಾಗುತ್ತಾಳೆ. ಇದು ವ್ಯವಹಾರದಲ್ಲಿ ಯಶಸ್ಸನ್ನು ತರುತ್ತದೆ.

ಅಲಂಕಾರ

ಮನೆ ಅಥವಾ ಅಂಗಡಿಯ ಪ್ರವೇಶದ್ವಾರಕ್ಕೆ ಹೆಚ್ಚು ಅಲಂಕಾರಿಕ ವಸ್ತುಗಳಿಂದ ಅಲಂಕರಿಸಬೇಡಿ. ವಾಸ್ತು ತಜ್ಞರ ಪ್ರಕಾರ ಇದನ್ನು ಮಾಡಬಾರದು. ಏಕೆಂದರೆ ದಾರಿಯಲ್ಲಿ ಬರುವ ಉತ್ತಮ ಅವಕಾಶಗಳನ್ನು ಇದು ತಡೆಯಬಹುದು. ಪ್ರವೇಶದ್ವಾರ ಯಾವಾಗಲೂ ಸ್ವಚ್ಛವಾಗಿರಬೇಕು.

Continue Reading

ಕರ್ನಾಟಕ

Koppala News: ಅಂಜನಾದ್ರಿ ದೇಗುಲ ಹುಂಡಿಯಲ್ಲಿ 32.95 ಲಕ್ಷ ರೂ; ವಿವಿಧ ದೇಶಗಳ ನೋಟುಗಳು

Koppala News: ಗಂಗಾವತಿ ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದ ಹುಂಡಿ ಎಣಿಕೆ ಕಾರ್ಯವು ಮಂಗಳವಾರ ನಡೆಯಿತು. ಕಾಣಿಕೆ ಹುಂಡಿಯಲ್ಲಿ 32.95 ಲಕ್ಷ ರೂಪಾಯಿ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ನಾನಾ ದೇಶಗಳ ನೋಟುಗಳು ಮತ್ತು ನಾಣ್ಯಗಳು ಪತ್ತೆಯಾಗಿರುವುದು ವಿಶೇಷವಾಗಿದೆ.

VISTARANEWS.COM


on

Anjanadri Temple Hundi Count
Koo

ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ (Anjanadri) ಬೆಟ್ಟದ ಆಂಜನೇಯ ದೇಗುಲದ ಹುಂಡಿ ಎಣಿಕೆ ಕಾರ್ಯವು ಮಂಗಳವಾರ (Koppala News) ನಡೆಯಿತು. ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗತ್ತಿ ಸೂಚನೆ ಮೇರೆಗೆ ತಹಸೀಲ್ದಾರ್ ನಾಗರಾಜ್ ನೇತೃತ್ವದಲ್ಲಿ ಹುಂಡಿ ಕಾಣಿಕೆ ಹಣದ ಎಣಿಕೆ ಕಾರ್ಯವು ನಡೆಯಿತು. ಕಾಣಿಕೆ ಹುಂಡಿಯಲ್ಲಿ 32.95 ಲಕ್ಷ ರೂಪಾಯಿ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.

ಇದನ್ನೂ ಓದಿ: Eshwar Khandre: ಚಾರಣಪಥಗಳ ಆನ್‌ಲೈನ್ ಟಿಕೆಟ್‌ಗೆ ಶೀಘ್ರ ಚಾಲನೆ; ಸಚಿವ ಈಶ್ವರ ಖಂಡ್ರೆ

ವಿವಿಧ ದೇಶಗಳ ಮೂರು ನೋಟು ಮತ್ತು ಏಳು ನಾಣ್ಯಗಳು ಪತ್ತೆ

ಅಂಜನಾದ್ರಿ ಆಂಜನೇಯ ದೇಗುಲದ ಹುಂಡಿಯಲ್ಲಿ ಸಂಗ್ರವಾಗಿದ್ದ ಕಾಣಿಕೆ ಹಣದ ಎಣಿಕೆಯ ಸಂದರ್ಭದಲ್ಲಿ ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳ ಮೂರು ನೋಟು ಮತ್ತು ಏಳು ನಾಣ್ಯಗಳು ಪತ್ತೆಯಾಗಿವೆ.

ಈ ಪೈಕಿ ಸೌತ್ ಆಫ್ರಿಕಾದ ಒಂದು ನೂರು ರಾಂಡ್ ಮೊತ್ತದ ಒಂದು ನೋಟು, ಮತ್ತು ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕಾದ ತಲಾ ಹತ್ತು ಡಾಲರ್ ಮೊತ್ತದ ಎರಡು ನೋಟು ಪತ್ತೆಯಾಗಿವೆ ಹಾಗೂ ಸೌದಿ ಅರೇಬಿಯಾ, ಥೈಲ್ಯಾಂಡ್, ಇಟಲಿ, ಓಮನ್, ಯುಕೆ ಮತ್ತು ನೇಪಾಳದ ನಾನಾ ಮುಖಬೆಲೆಯ ನಾಣ್ಯಗಳು ಪತ್ತೆಯಾಗಿವೆ.

ಇದನ್ನೂ ಓದಿ: Yuva Sambhrama 2024: ಬೆಂಗಳೂರಿನಲ್ಲಿ ಜು.12ರಿಂದ 3 ದಿನ ಯುವ ಸಂಭ್ರಮ

ಕಳೆದ ಮೇ 21ರಂದು ಹಣ ಎಣಿಕೆ ಮಾಡಿದ ಸಂದರ್ಭದಲ್ಲಿ 30.21 ಲಕ್ಷ ರೂ. ಮೊತ್ತದ ಹಣ ಸಂಗ್ರವಾಗಿತ್ತು.

Continue Reading

ದೇಶ

Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ ಹೇಗಾಯ್ತು? ಸತ್ಸಂಗ ನಡೆಸಿದ ಭೋಲೆ ಬಾಬಾ ಯಾರು? ಇಲ್ಲಿದೆ ಮಾಹಿತಿ

Hathras Stampede: ಭೋಲೆ ಬಾಬಾ ಅವರಿಗೆ ಭಾರತದಾದ್ಯಂತ ಅನುಯಾಯಿಗಳು ಇದ್ದಾರೆ. ಅದರಲ್ಲೂ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರದಿದ್ದರೂ ಇವರ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತರು ತಪ್ಪಿಸಿಕೊಳ್ಳುವುದಿಲ್ಲ.

VISTARANEWS.COM


on

Hathras Stampede
Koo

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಎಂಬ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿದ್ದು, 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ಅವರು ಸತ್ಸಂಗ ನೆರವೇರಿಸಿದ ಬಳಿಕ ಉಂಟಾದ ಕಾಲ್ತುಳಿತವು ನೂರಾರು ಜನರ ಸಾವಿಗೆ ಕಾರಣವಾಗಿದೆ. ಇನ್ನು, ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಘೋಷಣೆ ಮಾಡಿದ್ದಾರೆ. ಇನ್ನು ಕಾಲ್ತುಳಿತ ಹೇಗಾಯಿತು? ನೂರಾರು ಜನರ ಸಾವಿಗೆ ಕಾರಣವೇನು? ಪ್ರತ್ಯಕ್ಷದರ್ಶಿಗಳು ಹೇಳುವುದು ಏನು ಎಂಬುದರ ಮಾಹಿತಿ ಇಲ್ಲಿದೆ.

ಪ್ರತ್ಯಕ್ಷದರ್ಶಿಗಳು ಹೇಳುವುದಿಷ್ಟು…

ಸತ್ಸಂಗ ಮುಗಿದ ಬಳಿಕ ನೂರಾರು ಜನ ಹೊರಗೆ ಬಂದಿದ್ದಾರೆ. ಎತ್ತರದ ಚರಂಡಿ ಮೇಲೆ ನಿರ್ಮಿಸಿದ ರಸ್ತೆ ಮೇಲೆ ಸಾವಿರಾರು ಜನ ನಿಂತಿದ್ದಾರೆ. ಆಗ ರಸ್ತೆಯ ಒಂದು ಭಾಗ ಚರಂಡಿಯೊಳಗೆ ಕುಸಿದಿದೆ. ಕೂಡಲೇ ಹತ್ತಾರು ಜನ ಚರಂಡಿಯೊಳಗೆ ಬಿದ್ದಿದ್ದು, ಒಬ್ಬರ ಮೇಲೆ ಒಬ್ಬರು ಬಿದ್ದ ಕಾರಣ ಹೆಚ್ಚಿನ ಜನ ಸಾವಿಗೀಡಾಗಿದ್ದಾರೆ. ಇನ್ನು ಚರಂಡಿ ಮೇಲಿನ ರಸ್ತೆ ಕುಸಿದ ಸುದ್ದಿ ಹರಿದಾಡುತ್ತಲೇ ಎಲ್ಲರೂ ಓಡಲು ಶುರು ಮಾಡಿದರು. ಆಗಲೂ ಒಬ್ಬರ ಮೇಲೆ ಒಬ್ಬರು ಬಿದ್ದು, ತುಳಿದಾಡಿದ ಕಾರಣ ಸಾವಿನ ಸಂಖ್ಯೆ ಜಾಸ್ತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಘಟನೆ ಕುರಿತು ವಿವರ ನೀಡಿದ್ದಾರೆ.

ಇನ್ನೊಂದಿಷ್ಟು ಮೂಲಗಳ ಪ್ರಕಾರ, ಸಣ್ಣದೊಂದು ಹಾಲ್‌ನಲ್ಲಿ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೊರಗಡೆ ಚರಂಡಿ ಮೇಲಿನ ಸ್ಲ್ಯಾಬ್‌ ಕುಸಿದಿದೆ ಎಂಬ ಸುದ್ದಿ ಕೇಳಿ ಎಲ್ಲರೂ ಓಡಲು ಶುರು ಮಾಡಿದರು. ಹೊರಗೆ ಹೋಗುವ ಗೇಟ್‌ ಚಿಕ್ಕದಿದ್ದ ಕಾರಣ ಎಲ್ಲರೂ ನುಗ್ಗಿದಾಗ ಕಾಲ್ತುಳಿತ ಸಂಭವಿಸಿದೆ. ಹೆಣ್ಣುಮಕ್ಕಳು ಓಡಲೂ ಆಗದೆ, ನೂಕುತ್ತಿದ್ದ ಪುರುಷರನ್ನು ಹಿಮ್ಮೆಟ್ಟಿಸಲೂ ಆಗದೆ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಯಾರಿವರು ಭೋಲೆ ಬಾಬಾ?

ಭೋಲೆ ಬಾಬಾ ಅವರು ಉತ್ತರ ಪ್ರದೇಶದ ಎತಾಹ್‌ ಜಿಲ್ಲೆಯ ಬಹದ್ದೂರ್‌ ಗ್ರಾಮದವರಾಗಿದ್ದಾರೆ. ಇವರು ಈಗ ಪ್ರಮುಖ ಧಾರ್ಮಿಕ ಮುಖಂಡರೆನಿಸಿದ್ದು, ಇವರ ಭಾಷಣ, ಬೋಧನೆಗಳನ್ನು ಕೇಳಲು ಸಾವಿರಾರು ಜನ ಆಗಮಿಸುತ್ತಾರೆ. ಇವರು ದೇಶದ ಗುಪ್ತಚರ ಇಲಾಖೆಯಲ್ಲಿ (IB) ಕಾರ್ಯನಿರ್ವಹಿಸಿದ್ದು, 26 ವರ್ಷಗಳ ಹಿಂದೆಯೇ ಸರ್ಕಾರಿ ನೌಕರಿ ತೊರೆದು, ಸ್ವಯಂಘೋಷಿತ ದೇವಮಾನವರಾಗಿದ್ದಾರೆ.

ಭೋಲೆ ಬಾಬಾ ಅವರಿಗೆ ಭಾರತದಾದ್ಯಂತ ಅನುಯಾಯಿಗಳು ಇದ್ದಾರೆ. ಅದರಲ್ಲೂ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರದಿದ್ದರೂ ಇವರ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತರು ತಪ್ಪಿಸಿಕೊಳ್ಳುವುದಿಲ್ಲ. ಪ್ರತಿ ಮಂಗಳವಾರ ಅಲಿಗಢದಲ್ಲಿ ಅವರ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿಯೂ ಸಾವಿರಾರು ಜನ ಸೇರುತ್ತಾರೆ. ಕೊರೊನಾ ನಿರ್ಬಂಧದ ಮಧ್ಯೆಯೂ ಸಾವಿರಾರು ಜನರನ್ನು ಸೇರಿಸಿ, ಸತ್ಸಂಗ ಆಯೋಜಿಸಿದ್ದು ವಿವಾದಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ: Uttar Pradesh stampede: ಹತ್ರಾಸ್‌ ಕಾಲ್ತುಳಿತ ದುರ್ಘಟನೆ; ಸಾವಿನ ಸಂಖ್ಯೆ 60ಕ್ಕೆ ಏರಿಕೆ

Continue Reading

ಧಾರ್ಮಿಕ

Vastu Tips: ಮನೆಯ ದ್ವಾರದಲ್ಲಿ ಗಣೇಶನ ವಿಗ್ರಹ ಇಡುವುದು ಸರಿಯೇ?

ಎಲ್ಲ ವಿಘ್ನಗಳನ್ನು ದೂರ ಮಾಡುವ ಗಣಪತಿಯನ್ನು ಪೂಜಿಸಿದರೆ ಜೀವನದಲ್ಲಿ ಎಂದಿಗೂ ಸಮಸ್ಯೆಗಳಿರುವುದಿಲ್ಲ ಎಂದೇ ನಂಬಲಾಗುತ್ತದೆ. ಕೆಲವರು ತಮ್ಮ ಮನೆಯ ಮುಂಭಾಗದ ಬಾಗಿಲುಗಳಲ್ಲಿ ಗಣಪತಿಯ ಚಿತ್ರ ಅಥವಾ ವಿಗ್ರಹವನ್ನು ನೇತುಹಾಕುತ್ತಾರೆ. ವಾಸ್ತು ಶಾಸ್ತ್ರದಲ್ಲಿ (Vastu Tips) ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಗಣೇಶ ವಿಗ್ರಹವನ್ನು ಎಲ್ಲಿ ಇಡಬೇಕು, ಹೇಗೆ ಇಡಬೇಕು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಪ್ರಥಮ ಪೂಜಿತ ಗಣಪತಿಯನ್ನು (ganapati) ನಮ್ಮ ನಿತ್ಯದ ಎಲ್ಲ ಕಾರ್ಯದಲ್ಲೂ ಮೊದಲ ಆದ್ಯತೆ (First priority) ನೀಡಲಾಗುತ್ತದೆ. ಎಲ್ಲಾ ದೇವರುಗಳಲ್ಲಿ (god) ಗಣಪತಿಯನ್ನು ಅತ್ಯಂತ ಪೂಜನೀಯ ಎಂದು ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿ ಪ್ರತಿಯೊಂದು ಕೆಲಸದಲ್ಲೂ ಆತನಿಗೆ ಮೊದಲ ಪೂಜೆಯನ್ನು ಸಲ್ಲಿಸಲಾಗುತ್ತದೆ. ಆದರೆ ಇದಕ್ಕೆ ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಇದರ ಕುರಿತು ಕೆಲವೊಂದು ನಿಯಮಗಳಿವೆ.

ಎಲ್ಲ ವಿಘ್ನಗಳನ್ನು ದೂರ ಮಾಡುವ ಗಣಪತಿಯನ್ನು ಪೂಜಿಸಿದರೆ ಜೀವನದಲ್ಲಿ ಎಂದಿಗೂ ಸಮಸ್ಯೆಗಳಿರುವುದಿಲ್ಲ ಎಂದೇ ನಂಬಲಾಗುತ್ತದೆ. ಕೆಲವರು ತಮ್ಮ ಮನೆಯ ಮುಂಭಾಗದ ಬಾಗಿಲುಗಳಲ್ಲಿ ಗಣಪತಿಯ ಚಿತ್ರ ಅಥವಾ ವಿಗ್ರಹವನ್ನು ನೇತುಹಾಕುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಪ್ರವೇಶದ್ವಾರದಲ್ಲಿ ಗಣೇಶನ ಚಿತ್ರವನ್ನು ಪ್ರತಿಷ್ಠಾಪಿಸುವಾಗ ಪ್ರತಿಯೊಬ್ಬರೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕು.


ಯಾವ ದಿಕ್ಕು ಸೂಕ್ತ?

ವಾಸ್ತು ಶಾಸ್ತ್ರದಲ್ಲಿ ಮನೆಯ ಮುಂಭಾಗದ ದ್ವಾರದ ಮೇಲೆ ಗಣಪತಿ ವಿಗ್ರಹವನ್ನು ಇರಿಸಲು ಕೆಲವೊಂದು ಸೂಚನೆಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಇದಕ್ಕಾಗಿ ಮನೆಯ ಮುಂಭಾಗದ ಬಾಗಿಲು ಉತ್ತರ ಅಥವಾ ದಕ್ಷಿಣಕ್ಕೆ ಎದುರಾಗಿರಬೇಕು. ಆದರೆ ಮುಖ್ಯ ಪ್ರವೇಶ ದ್ವಾರ ಇರುವಲ್ಲಿ ಪೂರ್ವ ಅಥವಾ ಪಶ್ಚಿಮಕ್ಕೆ ಎದುರಾಗಿರುವ ಗಣೇಶನ ಪ್ರತಿಮೆಯನ್ನು ಇರಿಸಬಾರದು.

ಸ್ಥಾಪನೆ ಸರಿಯಾಗಿರಲಿ

ಮನೆಯ ಮುಂಭಾಗದ ದ್ವಾರದ ಮೇಲೆ ಗಣೇಶನ ವಿಗ್ರಹವನ್ನು ಇರಿಸುವಾಗ ಅದನ್ನು ವಿಧಿವತ್ತಾಗಿ ಸ್ಥಾಪಿಸಬೇಕು. ವಿಗ್ರಹವು ಎಲ್ಲಾ ಸಮಯದಲ್ಲೂ ಒಳಮುಖವಾಗಿರಬೇಕು. ಪಶ್ಚಿಮ, ಉತ್ತರ ಮತ್ತು ಈಶಾನ್ಯ ದೃಷ್ಟಿಕೋನಗಳು ಇದಕ್ಕೆ ಅತ್ಯುತ್ತಮವೆಂದು ಹೇಳಲಾಗುತ್ತದೆ.

ಇದನ್ನೂ ಓದಿ Sadhguru Jaggi Vasudev: ಮಕ್ಕಳಲ್ಲಿ ಅಲರ್ಜಿ ಸಮಸ್ಯೆಗೆ ಏನು ಪರಿಹಾರ? ಸದ್ಗುರು ಸಲಹೆ ಇಲ್ಲಿದೆ ಕೇಳಿ

ಬಣ್ಣ ಯಾವುದು?

ವಾಸ್ತು ಶಾಸ್ತ್ರದ ಪ್ರಕಾರ ಕುಟುಂಬದಲ್ಲಿ ಸಮೃದ್ಧಿಯಾಗಬೇಕೆಂದು ಬಯಸಿದರೆ ಬಿಳಿ ಅಥವಾ ಸಿಂಧೂರ ವರ್ಣದ ಗಣೇಶನನ್ನು ಪ್ರತಿಷ್ಠಾಪಿಸಬೇಕು. ಇದನ್ನು ಮಾಡುವುದರಿಂದ ಕುಟುಂಬದಲ್ಲಿ ಸಂಪತ್ತು ಮತ್ತು ಸಂತೋಷವನ್ನುನಿರಂತರವಾಗಿ ಇರುವುದು.

ಪ್ರತಿಮೆಯ ಭಂಗಿ

ಗಣೇಶನ ಪ್ರತಿಮೆಯನ್ನು ಮನೆಯ ಮುಂಭಾಗದ ಬಾಗಿಲಿನಲ್ಲಿ ಕುಳಿತುಕೊಳ್ಳುವ ಭಂಗಿಯಲ್ಲಿ ಇಡಬೇಕು. ಮನೆಯ ದ್ವಾರದ ಹೊರಗೆ ನಿಂತಿರುವ ಗಣೇಶನ ಪ್ರತಿಷ್ಠಾಪನೆಯು ಅದೃಷ್ಟವನ್ನು ತರುವುದಿಲ್ಲ. ಕಾರ್ಯಸ್ಥಳ ಅಥವಾ ಕಚೇರಿಯಲ್ಲಿ ನಿಂತಿರುವ ಗಣೇಶನ ವಿಗ್ರಹವನ್ನು ಇಡಬಹುದು. ಆದರೆ ಮನೆಯಲ್ಲಿ ಇಡಬಾರದು ಎನ್ನುತ್ತದೆ ವಾಸ್ತು ನಿಯಮ.

Continue Reading
Advertisement
Stray Dogs Attack
ಕರ್ನಾಟಕ4 mins ago

Stray Dogs Attack: ಸುರಪುರದಲ್ಲಿ ಬೀದಿ ನಾಯಿಗಳ ದಾಳಿಗೆ 15 ಕುರಿಗಳು ಬಲಿ

Gold Rate Today
ಚಿನ್ನದ ದರ9 mins ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಷ್ಟಿದೆ ಇಂದಿನ ಬೆಲೆ

lovers death self harming
ಕ್ರೈಂ25 mins ago

Lovers Death: ನಾಪತ್ತೆಯಾಗಿದ್ದ ಪ್ರೇಮಿಗಳ ಶವ ನೈಸ್ ರಸ್ತೆ ಬಳಿ ಕೆರೆಯಲ್ಲಿ ಪತ್ತೆ

Anant-Radhika Wedding
ದೇಶ34 mins ago

Anant-Radhika Wedding: ಅನಂತ್‌ ಅಂಬಾನಿ ಮದುವೆಗೆ ಪೂರ್ವಭಾವಿಯಾಗಿ ಸಾಮೂಹಿಕ ವಿವಾಹ; ಪ್ರತಿ ವಧುವಿಗೆ ಚಿನ್ನಾಭರಣ, 1 ಲಕ್ಷ ರೂ.

Prajwal Devaraj cancel birthday darshan main reason
ಸಿನಿಮಾ36 mins ago

Prajwal Devaraj: ಪ್ರಜ್ವಲ್ ದೇವರಾಜ್ ಬರ್ತ್‌ಡೇ ಸೆಲೆಬ್ರೇಷನ್‌ ಕ್ಯಾನ್ಸಲ್‌; ದರ್ಶನ್‌ ಕಾರಣ?

IND vs ZIM
ಕ್ರೀಡೆ46 mins ago

IND vs ZIM: ಜಿಂಬಾಬ್ವೆ ತಲುಪಿದ ಯಂಗ್‌ ಟೀಮ್‌ ಇಂಡಿಯಾ; ಶನಿವಾರದಿಂದ ಸರಣಿ ಆರಂಭ

Medal Biteing
ಕ್ರೀಡೆ52 mins ago

Medal Biting: ಒಲಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಪದಕ ಕಚ್ಚುವುದು ಏಕೆ?

Tharun Sudhir sonal monteiro marriage update
ಸ್ಯಾಂಡಲ್ ವುಡ್1 hour ago

Tharun Sudhir: ಸೋನಾಲ್-ತರುಣ್ ಮದುವೆ ಯಾವಾಗ? ಭಾವಿ ಸೊಸೆ ಬಗ್ಗೆ ಡೈರೆಕ್ಟರ್ ಅಮ್ಮ ಏನಂದ್ರು?

Stock Market
ವಾಣಿಜ್ಯ1 hour ago

Stock Market: ಮೊದಲ ಬಾರಿಗೆ 80,000 ಗಡಿ ದಾಟಿದ ಸೆನ್ಸೆಕ್ಸ್: 24,250 ಪಾಯಿಂಟ್‌ ತಲುಪಿದ ನಿಫ್ಟಿ

bangalore murder case
ಕ್ರೈಂ2 hours ago

Murder Case: ರಾಜಧಾನಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ17 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌