Gita Jayanti 2022 | ಸಾರ್ವಕಾಲಿಕ ಸಾರ್ವಭೌಮ ಗ್ರಂಥ ಭಗವದ್ಗೀತೆ - Vistara News

ಧಾರ್ಮಿಕ

Gita Jayanti 2022 | ಸಾರ್ವಕಾಲಿಕ ಸಾರ್ವಭೌಮ ಗ್ರಂಥ ಭಗವದ್ಗೀತೆ

ಇಂದು 7,583ನೇ ಗೀತಾಜಯಂತಿಯನ್ನು (Gita Jayanti 2022 ) ಆಚರಿಸಲಾಗುತ್ತಿದೆ. ಭಗವದ್ಗೀತೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ನೇತೃತ್ವದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ರಾಜ್ಯ ಮಟ್ಟದ ಮಹಾ ಸಮರ್ಪಣಾ ಸಮಾರಂಭ ದಾವಣಗೆರೆಯಲ್ಲಿ ನಡೆಯುತ್ತಿದೆ. ಈ ಕುರಿತ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Gita Jayanti 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ
ಶ್ರೀ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ, ಶಿರಸಿ
ಭಗವದ್ಗೀತೆ ವಿಶ್ವಕ್ಕೆ ಭಾರತ ಕೊಟ್ಟ ಅದ್ಭುತ ಕೊಡುಗೆಗಳಲ್ಲಿ ಒಂದು. ಇಂದಿಗೂ ವಿಶ್ವದ ಬಹುತೇಕ ದೇಶಗಳಲ್ಲಿ ಅಲ್ಲಲ್ಲಿಯ ಭಾಷೆಗಳಲ್ಲಿಯೇ ಭಗವದ್ಗೀತೆ ಉಪಲಬ್ಧವಿದೆ. ವಿಶ್ವದ ಅತ್ಯಂತ ಹೆಚ್ಚು ಭಾಷೆಗಳಲ್ಲಿ ತುಂಬಾ ಹಿಂದೆಯೇ
ಭಗವದ್ಗೀತೆ ಅತ್ಯಂತ ಹೆಚ್ಚು ಆವೃತ್ತಿಗಳನ್ನು ಕಂಡಿದೆ. ವಿಶ್ವವ್ಯಾಪಿ ಭಗವದ್ಗೀತೆ ಅವತರಿಸಿದ ದಿನ “ಗೀತಾ ಜಯಂತಿʼʼ(Gita Jayanti 2022 ). ಮಾರ್ಗಶಿರ ಶುದ್ಧ ಏಕಾದಶಿಯಂದು ಭಗವಂತನು ಭಗವದ್ಗೀತೆಯನ್ನು ಉಪದೇಶಿಸಿದ.

ಒಂದು ಲೆಕ್ಕಾಚಾರದಂತೆ ಕ್ರಿಸ್ತಪೂರ್ವ 5561ನೇ ಸಾಲಿನಲ್ಲಿ ಅಕ್ಟೋಬರ್ 16ರಿಂದ 18 ದಿನಗಳ ಕಾಲ ಮಹಾಭಾರತ ಯುದ್ಧ ನಡೆಯಿತು. ಆರಂಭದ ದಿನವೇ ಗೀತೋಪದೇಶ. ಅಂದರೆ ನಾವು ಈಗ 7,583ನೇ ಗೀತಾಜಯಂತಿಯನ್ನು ಆಚರಿಸುತ್ತಿದ್ದೇವೆ. ಇಷ್ಟು ದೀರ್ಘವಾದ ಕಾಲಘಟ್ಟ ದಾಟಿಹೋಗಿದ್ದರೂ ಇಂದಿಗೂ ವಿಶ್ವದ ಜನಮಾನಸದಲ್ಲಿ ಭಗವದ್ಗೀತೆ ನೆಲೆ ನಿಂತಿರುವುದೇ ಅದೊಂದು ಅದ್ಭುತ ಗ್ರಂಥ ಎಂಬುದಕ್ಕೆ ನಿದರ್ಶನ.

ಭಗವದ್ಗೀತೆ ಯುದ್ಧರಂಗದಲ್ಲಿ ಅವತರಿಸಿತು. ಬಹುಶಃ ಯುದ್ಧರಂಗದಲ್ಲಿ ಹುಟ್ಟಿಕೊಂಡ ಕೃತಿ ಪ್ರಪಂಚದಲ್ಲಿ ಬೇರೆ ಯಾವುದೂ ಇರಲಾರದು. ಯುದ್ಧರಂಗದಲ್ಲಿ ಭಗವದ್ಗೀತೆ ಹುಟ್ಟಿದ ಬಗ್ಗೆ ಬೇರೆ ಬೇರೆ ವಿವರಣೆಗಳನ್ನು ಕೊಡುವುದುಂಟು. ನಮ್ಮ ಬದುಕೇ ಒಂದು ಯುದ್ಧ. ಬದುಕಿಗೆ ಸಂಬಂಧಿಸಿದ ವಿಷಯವಾದ್ದರಿಂದ ಭಗವದ್ಗೀತೆಯು ಬದುಕಿನ ರಣರಂಗಕ್ಕೆ ಅತಿ ಅವಶ್ಯ ಎಂಬ ಸಂದೇಶ ಇಲ್ಲಿದೆ ಎಂಬುದಾಗಿ ಕೆಲವರು ವಿವರಣೆ ನೀಡುತ್ತಾರೆ.

ನಮ್ಮ ಮನಸ್ಸಿನ ಒಳ್ಳೆಯ ವಿಚಾರಗಳೇ ಪಾಂಡವರು, ಕೆಟ್ಟವಿಚಾರಗಳೇ ಕೌರವರು. ಒಳ್ಳೆಯ ವಿಚಾರ ಮತ್ತು ಕೆಟ್ಟವಿಚಾರಗಳ ಸಂಘರ್ಷದಲ್ಲಿ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕೆಂಬ ಸಂದೇಶ ಭಗವದ್ಗೀತೆಯಲ್ಲಿ ಇದೆ ಎಂಬುದು ಇನ್ನೊಂದು ವಿವರಣೆ. ಹೀಗೆ ಬೇರೆ ಬೇರೆ ವಿವರಣೆಗಳು ಉಂಟು. ಆದರೆ ನಮ್ಮದೊಂದು ವಿವರಣೆ ಇದೆ. ಅಧ್ಯಾತ್ಮದ ವಿಷಯಗಳನ್ನು ಅರಿತುಕೊಳ್ಳಲು ಕೊಂಚವಾದರೂ ವೈರಾಗ್ಯ ಇರಬೇಕಾಗುತ್ತದೆ. ಮರಣದ ಚಿಂತನೆ ವೈರಾಗ್ಯವನ್ನು ಪ್ರಚೋದಿಸುತ್ತದೆ. ಯಾರಾದರೂ ಸಮೀಪದ ಬಂಧುಗಳು ಮರಣ ಹೊಂದಿದರೆ ಮನಸ್ಸಿನಲ್ಲಿ ನಾವೂ ಒಂದಲ್ಲಾ ಒಂದು ದಿನ ಹೀಗೆಯೇ ಸಾಯುವವರೇ ಆಗಿದ್ದೇವೆ ಎಂಬ ಭಾವ ಬರುತ್ತದೆ. ಈ ಭಾವವೇ ತೀವ್ರವಾದಾಗ ವೈರಾಗ್ಯ ಎನಿಸಿಕೊಳ್ಳುತ್ತದೆ.

ಕಾಶೀ ಕ್ಷೇತ್ರದ ದರ್ಶನ ಉಳಿದ ಎಲ್ಲಾ ಪುಣ್ಯಕ್ಷೇತ್ರಗಳ ದರ್ಶನಕ್ಕಿಂತ ತುಂಬಾ ವಿಭಿನ್ನ. ಗಂಗಾನದಿಯ ತಟದಲ್ಲಿಯೇ ಮಣಿಕರ್ಣಿಕಾ ಘಾಟ್‌ನಲ್ಲಿಯೇ ನಿರಂತರ ಅಂತ್ಯಸಂಸ್ಕಾರ ನಡೆಯುತ್ತದೆ. ಸಾವಿರಾರು ವರ್ಷಗಳಿಂದ ಹಗಲು-ರಾತ್ರಿ ಭೇದವೆನಿಸದೆ ಚಳಿ-ಬಿಸಿಲು ಲೆಕ್ಕಿಸದೇ ಅಲ್ಲಿ ನಿರಂತರವಾಗಿ ಅಂತ್ಯಸಂಸ್ಕಾರ ನಡೆಯುತ್ತಿರುತ್ತದೆ. ಗಂಗಾನದಿಯಲ್ಲಿ ದೋಣಿಯ ಮೂಲಕ ಹೋಗುವವರೆಲ್ಲರಿಗೂ ಇದು ಕಂಡೇ ಕಾಣುತ್ತದೆ. ಮಣಿಕರ್ಣಿಕಾ ಘಾಟ್ ನಲ್ಲಿ ಸ್ನಾನ ಮಾಡಿ ವಿಶ್ವನಾಥನ ದರ್ಶನಕ್ಕೆ ಹೋಗುವುದು ಸಾಮಾನ್ಯ ರೂಢಿ. ಆ ಅಂತ್ಯಸಂಸ್ಕಾರಗಳ ದೃಶ್ಯವನ್ನು ನೋಡುತ್ತಾ ಮಣಿಕರ್ಣಿಕಾ ಸ್ನಾನವನ್ನು ಮಾಡಿ ವಿಶ್ವನಾಥನ ಮಂದಿರದ ಕಡೆ ಹೆಜ್ಜೆಯಿಟ್ಟರೆ ಮನಸ್ಸಿನ ತುಂಬಾ ಶ್ರದ್ಧಾ-ಭಕ್ತಿಗಳು ಉಕ್ಕಿಬರುತ್ತವೆ. ಇದಕ್ಕೆ ಒಂದು ಮುಖ್ಯ ಕಾರಣ ಆ ಅಂತ್ಯಸಂಸ್ಕಾರಗಳನ್ನು ನೋಡಿರುವಿಕೆ.

ಜೀವನದಲ್ಲಿ ಯಾವಾಗಲೋ ಕೇಳಿದ ಅಧ್ಯಾತ್ಮ ವಿಷಯಗಳು ಆಗ ಒಮ್ಮೆ ಬಹುತೇಕ ಸ್ಮರಣೆಗೆ ಬರುತ್ತವೆ. ಅಧ್ಯಾತ್ಮ ವಿಷಯಗಳ ಚಿಂತನೆಗೆ ಈ ವೈರಾಗ್ಯವು ಹದವಾದ ಮನಸ್ಥಿತಿಯನ್ನುಂಟು ಮಾಡುತ್ತದೆ. ಮಹಾತ್ಮರ ದೃಷ್ಟಿಯಲ್ಲಿ ಈ ವೈರಾಗ್ಯವೂ ಸಣ್ಣದಾಗಿರಬಹುದು. ಆದರೆ ಜನಸಾಮಾನ್ಯರಿಗೆ ಇಂತಹ ಸಣ್ಣಪುಟ್ಟ ವೈರಾಗ್ಯಗಳೇ ಬರುತ್ತವೆ. ಅಧ್ಯಾತ್ಮದ ಚಿಂತನೆಗೆ ಅಷ್ಟಾದರೂ ವೈರಾಗ್ಯಭಾವ ಇದ್ದರೆ ಅಧ್ಯಾತ್ಮಗ್ರಂಥ ರುಚಿಸುತ್ತದೆ, ತಕ್ಕಮಟ್ಟಿಗೆ ಅರ್ಥವಾಗುತ್ತದೆ.

ಕುರುಕ್ಷೇತ್ರದಲ್ಲಿ ಹುಟ್ಟಿದ ಮಹಾನ್ ಕೃತಿ
ಯುದ್ಧರಂಗ ಪ್ರತಿದಿನವೂ ಅನೇಕ ಮರಣಗಳಿಗೆ ಭೂಮಿಕೆ. ನಿನ್ನೆ ಬದುಕಿದ್ದವರು ಇವತ್ತು ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಬಹುದು. ಇವತ್ತು ಇದ್ದವರು ನಾಳೆಗೆ ಪ್ರಾಣಾರ್ಪಣೆ ಮಾಡಬಹುದಾದ ಪ್ರಸಂಗ ಬರಬಹುದು. ಇಂತಹ ಯುದ್ಧರಂಗದ ವಾತಾವರಣ ಒಂದು ರೀತಿಯ ವೈರಾಗ್ಯಭಾವವನ್ನು ಉಂಟುಮಾಡುತ್ತದೆ. ಅರ್ಜುನನಿಗೆ ಇಂಥದೇ ಒಂದು ವೈರಾಗ್ಯಭಾವ ಆರಂಭದಲ್ಲಿ ಮೂಡಿತು. ತನ್ನ ಬಾಂಧವರು ಯುದ್ಧಕ್ಕೆ ಸಜ್ಜಾಗಿ ನಿಂತಿರುವುದನ್ನು ನೋಡಿ ಅವನ ಮನಸ್ಸಿನಲ್ಲಿ ಒಂದು ರೀತಿಯ ವಿಷಾದ ಉಂಟಾಯಿತು. ಈ ವಿಷಾದವೇ ಒಂದು ರೀತಿಯ ವೈರಾಗ್ಯ. ಇದರಿಂದಲೇ ಮುಂದೆ ಶ್ರೀಕೃಷ್ಣನ ಉಪದೇಶ ಹುಟ್ಟಿಕೊಳ್ಳಬೇಕಾಯಿತು.

ಅಲ್ಲದೇ ಅರ್ಜುನ ಶ್ರೀಕೃಷ್ಣನ ಉಪದೇಶಗಳನ್ನು ತೆರೆದ ಮನಸ್ಸಿನಿಂದ ಗಮನವಿಟ್ಟು ಕೇಳಿದನು. ಇದಕ್ಕೆ ಅವನ ವಿಷಾದ ಅಥವಾ ವೈರಾಗ್ಯವೇ ಕಾರಣ. ಮರಣದ ಚಿಂತನೆಯೊಂದಿಗೆ ವೈರಾಗ್ಯಭಾವ ಹುಟ್ಟಿಕೊಂಡು ಅಧ್ಯಾತ್ಮ ಉಪದೇಶಕ್ಕೆ ಕಾರಣವಾದಂತಹ ನಿದರ್ಶನಗಳು ಇನ್ನೂ ಅನೇಕ ಇವೆ. ನಚಿಕೇತನಿಗೆ ಯಮಧರ್ಮರಾಜನ ಉಪದೇಶ, ಪರೀಕ್ಷಿತನಿಗೆ ಶುಕಮುನಿಗಳಿಂದ ಉಪದೇಶ, ಶ್ರೀರಾಮನಿಗೆ ಶ್ರೀವಸಿಷ್ಠರಿಂದ ಉಪದೇಶ ಹೀಗೆ ಹಲವು ನಿದರ್ಶನಗಳಿವೆ. ಒಟ್ಟಾರೆ ಮರಣದ ಚಿಂತನೆಯಿಂದ ಮೂಡಿದ ವೈರಾಗ್ಯಭಾವ ಅಧ್ಯಾತ್ಮ ಚಿಂತನೆಗೆ ಹದವಾದ ಮನಸ್ಥಿತಿಯನ್ನುಂಟು ಮಾಡುತ್ತದೆ. ಭಗವದ್ಗೀತೆ ಯುದ್ಧರಂಗದಲ್ಲಿ ಹುಟ್ಟಿ ಕೊಳ್ಳುವುದಕ್ಕೆ ಇದು ಕಾರಣ ವಾಗಿರಬಹು ದೆಂಬುದು ನಮಗೆ ತೋರುವ ಒಂದು ವಿವರಣೆ. ಕುರುಕ್ಷೇತ್ರದ ಯುದ್ಧರಂಗದಲ್ಲಿ ಹುಟ್ಟಿಕೊಂಡ ಭಗವದ್ಗೀತೆ ಮಾನವ ಮನಸ್ಸುಗಳ ಸಾರ್ವಭೌಮ ಗ್ರಂಥ.

ಅಂದರೆ ವಿವಿಧ ಮನೋಭೂಮಿಕೆಯುಳ್ಳವರಿಗೆ ಅನ್ವಯವಾಗುವ ಗ್ರಂಥ. ದೇವರೇ ಇಲ್ಲ ಎಂಬ ನಾಸ್ತಿಕರಿಂದ ಆರಂಭಿಸಿ ದೇವರೇ ಎಲ್ಲವೂ ಎಂಬುವ ಕಠೋರ ಆಸ್ತಿಕತೆಯುಳ್ಳ ಬ್ರಹ್ಮಜ್ಞಾನಿ ಯವರೆಗೆ; ಭೂತ-ಪ್ರೇತ-ಯಕ್ಷ ಮುಂತಾದ ಕ್ಷುದ್ರದೇವತೆಗಳ ಉಪಾಸಕರಿಂದ ಆರಂಭಿಸಿ ಸೂರ್ಯ-ಸ್ಕಂದ-ಬ್ರಹ್ಮ-ವಿಷ್ಣು- ಮಹೇಶ್ವರ ರೆಂಬ ಉನ್ನತ ದೇವತೋಪಾಸಕರವರೆಗೆ; ಅಗಸನಿಂದ-ಅರಸನವರೆಗೆ; ಓದು ಬರಹ ಕಲಿಯ ದಿದ್ದರೂ ಹಿರಿಯರ ಬಾಯಿಯಿಂದಲೇ ಭಗವದ್ಗೀತೆಯ ಹಾಡುಗಳನ್ನು ಕಲಿತ ಅನಕ್ಷರಸ್ಥ ಅಜ್ಜಿಯರಿಂದ ಆರಂಭಿಸಿ ವಿವಿಧ ಡಾಕ್ಟರೇಟ್‌ಗಳ ಪದಕಾವಳಿಯನ್ನೇ ಧರಿಸಿರುವ ಸುಶಿಕ್ಷಿತರವರೆಗೆ; ಹೀಗೆ ವಿವಿಧ ಸ್ತರದ ಮನಸ್ಸುಳ್ಳ ಎಲ್ಲರಿಗೆ ಅನ್ವಯವಾಗುವ ಉಪದೇಶ ಭಗವದ್ಗೀತೆಯಲ್ಲಿದೆ. ಈ ಅರ್ಥದಲ್ಲಿ ಅದು ಸಾರ್ವಭೌಮ ಗ್ರಂಥ. ಭಗವದ್ಗೀತೆಯ ಸಾರ್ವಭೌಮತೆ ಬಹುಶಃ ಬೇರೆ ಯಾವ ಗ್ರಂಥಕ್ಕೂ ಬರಲಾರದು.

ಕರ್ಮಯೋಗ, ಭಕ್ತಿಯೋಗ, ಧ್ಯಾನಯೋಗ ಮತ್ತು ಜ್ಞಾನಯೋಗ ಎಂಬ 4 ಪ್ರಮುಖ ಯೋಗಗಳುಳ್ಳ ಭಗವದ್ಗೀತೆಯು ಅವತರಿಸಿದ್ದು ನಾಲ್ವರ ವಿರುದ್ಧ ನಡೆದ ಮಹಾಭಾರತ ಯುದ್ಧದಲ್ಲಿ. ದುರ್ಯೋಧನ, ದುಶ್ಶಾಸನ, ಶಕುನಿ ಮತ್ತು ಕರ್ಣ ಈ ನಾಲ್ವರನ್ನು ದುಷ್ಟಚತುಷ್ಟಯ ಎಂಬುದಾಗಿ ಕರೆಯುತ್ತಾರೆ. ಈ ನಾಲ್ವರ ಕಾರಣದಿಂದಲೇ ಮಹಾಭಾರತ ಯುದ್ಧ ಆಗಬೇಕಾಯಿತು. ಈ ಅರ್ಥದಲ್ಲಿ ಮಹಾಭಾರತ ಯುದ್ಧ ಈ ನಾಲ್ವರ ವಿರುದ್ಧ ಎಂಬ ಮಾತು ಬಂದಿದೆ. ಭಗವದ್ಗೀತಾ ಅಭಿಯಾನವೂ ಇದೇ ರೀತಿಯಲ್ಲಿ ಸಮಾಜದಲ್ಲಿರುವ ನಾಲ್ಕು ದೋಷಗಳ ವಿರುದ್ಧ ಹೋರಾಟವಾಗಿದೆ. ಭಗವದ್ಗೀತಾ ಅಭಿಯಾನದ ಪ್ರಮುಖ ನಾಲ್ಕು ಉದ್ದೇಶಗಳನ್ನು ಗಮನಿಸಿದರೆ ಈ ಮಾತು ಅರ್ಥವಾಗುತ್ತದೆ.

ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

Gita Jayanti 2022
ಮಕ್ಕಳಿಗೆ ಭಗವದ್ಗೀತೆ ಹೇಳಿಕೊಡುತ್ತಿರುವ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಭಾವೈಕ್ಯಗಳು ಈ ಅಭಿಯಾನದ ಪ್ರಮುಖ ಉದ್ದೇಶಗಳು. ಇವುಗಳನ್ನು ಒಂದೊಂದಾಗಿ ಅರ್ಥಮಾಡಿಕೊಂಡರೆ ನಾಲ್ಕುದೋಷಗಳ ಪರಿಮಾರ್ಜನೆಗಾಗಿ ನಡೆಯುವ ಈ ಅಭಿಯಾನದ ಉದ್ದೇಶ ಎಲ್ಲರಿಗೂ ತಿಳಿಯುತ್ತದೆ.

1. ವ್ಯಕ್ತಿತ್ವ ವಿಕಸನ
ನೇರವಾಗಿ ಹೇಳುವುದಾದರೆ ನಮ್ಮ ಮನಸ್ಸೇ ನಮ್ಮ ವ್ಯಕ್ತಿತ್ವ. ಹಲವು ಕಾರಣಗಳಿಂದ ಮನಸ್ಸು ಮುದುಡಿಕೊಂಡಿದೆ. ಅದನ್ನು ಅರಳಿಸುವ ಪ್ರಯತ್ನವೇ ವ್ಯಕ್ತಿತ್ವ ವಿಕಸನ. ಹೆಚ್ಚುತ್ತಿರುವ ಆತ್ಮಹತ್ಯೆಗಳು, ಹೆಚ್ಚುತ್ತಿರುವ ಮನೋರೋಗಿಗಳ ಸಂಖ್ಯೆ, ಹೆಚ್ಚುತ್ತಿರುವ ಮಧು ಮೇಹ- ರಕ್ತದೊತ್ತಡ- ಹೃದಯಸಂಬಂಧಿ ಕಾಯಿಲೆಗಳು ಮುಂತಾದವು ಗಳಿಂದ ಇವತ್ತಿನ ಮನುಷ್ಯನ ಮನಸ್ಸು ಮುದುಡಿಕೊಂಡಿದೆ ಎಂಬುದು ಅರ್ಥವಾಗುತ್ತದೆ. ಬೆಂಗಳೂರಿನಂತಹ ಮಹಾನಗರ ಗಳಲ್ಲಿ ಸುಶಿಕ್ಷಿತ ಜನಗಳೇ ಆತ್ಮಹತ್ಯೆಗೆ ಶರಣಾಗುತ್ತಿರುವುದು ದೊಡ್ಡದುರಂತವೇ ಸರಿ. ಮಧುಮೇಹ- ರಕ್ತದೊತ್ತಡ ಮತ್ತು ಹೃದಯ ಸಂಬಂಧೀ ಕೆಲವು ಕಾಯಿಲೆಗಳಿಗೆ ಮನಸ್ಸಿನ ಒತ್ತಡ ಮುಖ್ಯ ಕಾರಣ. ಈ ಮೂರೂ ರೋಗಗಳು ಜಾಸ್ತಿಯಾಗುತ್ತಿವೆ. ಮಧುಮೇಹದಲ್ಲಿ ಭಾರತವು ವಿಶ್ವದಲ್ಲಿ ಅಗ್ರಸ್ಥಾನವನ್ನು ಪಡೆದಿದೆ.

ಚಿಕ್ಕವಯಸ್ಸಿನಲ್ಲಿಯೇ ಹೃದಯಾಘಾತವಾಗುವಿಕೆ ಭಾರತದಲ್ಲಿ ಹೆಚ್ಚಿಗೆ ಆಗಿದೆ. ಎಂಬುದಾಗಿ ತಜ್ಞರು ಹೇಳುತ್ತಿದ್ದಾರೆ.
ಇವೆಲ್ಲ ಮನುಷ್ಯನ ಮನಸ್ಸು ಮುದುಡಿರುವುದನ್ನು ಸೂಚಿಸುತ್ತದೆ. ಭಗವದ್ಗೀತೆ ಹೇಳಿದ ಕ್ರಮದಲ್ಲಿ ಜೀವನವನ್ನು ರೂಢಿಸಿಕೊಂಡರೆ ಹೀಗಾಗುವುದಿಲ್ಲ. ಯುಕ್ತವಾದ ಆಹಾರ, ಯುಕ್ತವಾದ ವಿಹಾರ ಮತ್ತು ಯುಕ್ತವಾದ ನಿದ್ರೆ-ಜಾಗರಗಳು ಇದ್ದರೆ ಇಂತಹ ಮಾನಸಿಕ-ದೈಹಿಕ ಅನಾರೋಗ್ಯಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ಭಗವದ್ಗೀತಾ ಅಭಿಯಾನದ ಮೊದಲ ಉದ್ದೇಶವಾದ ವ್ಯಕ್ತಿತ್ವವಿಕಸನದ ತಾತ್ಪರ್ಯ ಇದು. ಇದೊಂದು ರೀತಿಯಲ್ಲಿ ವ್ಯಕ್ತಿತ್ವದ ಮುದುಡಿಕೊಂಡಿರುವಿಕೆ ಅಥವಾ ಸಂಕೋಚದ ವಿರುದ್ಧದ ಹೋರಾಟ.

2.ನೈತಿಕತೆಯ ಪುನರುತ್ಥಾನ
ಇಂದು ದೇಶದಲ್ಲಿ ಅಡಿಯಿಂದ ಮುಡಿಯವರೆಗೆ ನೈತಿಕತೆಯ ಪತನ ಕಂಡು ಬರುತ್ತಿದೆ. ದೊಡ್ಡ ಸ್ಥಾನದಲ್ಲಿದ್ದವರಲ್ಲಿ ಅನೇಕರು ಅಪರಾಧಿಗಳೆಂದು ಸಾಬೀತಾದ ಸಂದರ್ಭಗಳು ತುಂಬಾ ಇವೆ. ಕೆಲವರು ಒಳ್ಳೆಯವರೂ ಇರಬಹುದು, ಆದರೆ ಅನೇಕರು ಭ್ರಷ್ಟರು ಇದ್ದಾರೆಂಬುದು ಅನೇಕ ಸಲ ಅನುಭವಕ್ಕೆ ಬಂದಿದೆ. ಕೇಂದ್ರ ಸರ್ಕಾರದ ಗ್ರಹಸಚಿವಾಲಯವು ಪ್ರತಿವರ್ಷ ಬಿಡುಗಡೆ ಮಾಡುವ ಅಪರಾಧ ಪ್ರಕರಣಗಳ ಅಂಕಿ-ಅಂಶಗಳು ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದನ್ನು ಸ್ಪಷ್ಟವಾಗಿ ಹೇಳುತ್ತಿವೆ.

ಒಂದೊಂದು ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ವಿಚಾರಿಸಿದರೆ ವರ್ಷದಿಂದ ವರ್ಷಕ್ಕೆ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿರುವುದು ಚೆನ್ನಾಗಿ ಗೊತ್ತಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಕಾನೂನು, ಪೊಲೀಸ್ ಮುಂತಾದವರು ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಆದರೂ ಅಪರಾಧಗಳು ಬೆಳೆ ಯುತ್ತಲೇ ಇವೆ. ಅಪರಾಧದ ಬೆಳವಣಿಗೆಯ ಮೂಲವನ್ನು ಶೋಧಿಸಬೇಕಾದ ಅಗತ್ಯ ವಿದೆ. ಅಪರಾಧಗಳ ಮೂಲ ಕಾರಣವೇ ಅದರ ಬೆಳವಣಿಗೆಗೂ ಕಾರಣ. ಕಾಮ- ಕ್ರೋಧಗಳೇ ಅಪರಾಧಗಳಿಗೆ ಮೂಲ ಕಾರಣ.
ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ |
ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್‌॥

ಎಂಬ ಶ್ಲೋಕದಲ್ಲಿ ಶ್ರೀಕೃಷ್ಣನು ಇದನ್ನು ಹೇಳಿದ್ದಾನೆ. ಕಾನೂನು, ಪೊಲೀಸ್ ಮುಂತಾದವರು ಯಾರೂ ಕಾಮ-ಕ್ರೋಧಗಳನ್ನು ಮೂಲಸಹಿತ ಕಿತ್ತು ಹಾಕುವ ಉಪಾಯವನ್ನು ಕೊಡುವುದಿಲ್ಲ. ಅದನ್ನು ಭಗವದ್ಗೀತೆಯಂತಹ ಅಧ್ಯಾತ್ಮವಾಣಿಯೇ ಕೊಡಬಲ್ಲದು.

ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಗಳೇ ಕ್ರಾಮ-ಕ್ರೋಧಗಳ ನೆಲೆಗಳು. ಇಂದ್ರಿಯಗಳನ್ನು ಹತೋಟಿಯಲ್ಲಿಡುವ ಸಾಮರ್ಥ್ಯ ಮನಸ್ಸಿಗಿದೆ. ಮನಸ್ಸನ್ನು ಹತೋಟಿಯಲ್ಲಿಡುವ ಸಾಮರ್ಥ್ಯ ಬುದ್ಧಿಗಿದೆ. ಬುದ್ಧಿಗಿಂತಲೂ ಆಚೆಗಿರುವ ಪರಮಾತ್ಮಚೈತನ್ಯದ ಸ್ವಲ್ಪ ಪರಿಚಯವಾದರೂ ಕಾಮ-ಕ್ರೋಧಗಳು ಹತೋಟಿಗೆ ಬರುತ್ತವೆ. ಇದು ಭಗವದ್ಗೀತೆ ಅಪರಾಧದ ಮೂಲವಾದ ಕಾಮಕ್ರೋಧಗಳನ್ನು ನಿಯಂತ್ರಿಸಲು ಕೊಡುವ ಉಪಾಯ. ಭಗವದ್ಗೀತೆಯ ಸಂಸ್ಕಾರವನ್ನು ಬೆಳೆಸುವ ಮೂಲಕ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬಹುದು. ಭಗವದ್ಗೀತಾ ಅಭಿಯಾನವು ಅಪರಾಧೀಕರಣದ ವಿರುದ್ಧದ ಹೋರಾಟ.

16 ವರ್ಷಗಳಿಂದ ಭಗವದ್ಗೀತಾ ಅಭಿಯಾನ
ಮಹಾಭಾರತ ಯುದ್ಧ ದುಷ್ಟಚತುಷ್ಟಯರ ವಿರುದ್ಧವಾಗಿದ್ದರೆ ಶ್ರೀ ಸ್ವರ್ಣವಲ್ಲೀ ಸಂಸ್ಥಾನದ ನೇತೃತ್ವದಲ್ಲಿ ನಡೆಯುತ್ತಿರುವ ‘ಭಗವದ್ಗೀತಾ ಅಭಿಯಾನ’ ಈ ದೋಷಚತುಷ್ಟಯಗಳ ವಿರುದ್ಧ ಸಾರಿದ ಒಂದು ಯುದ್ಧವೆಂದು ಹೇಳಬಹುದು. ಈ ಪ್ರಯತ್ನ ಕಳೆದ ಹದಿನಾರು ವರ್ಷಗಳಿಂದ ನಡೆಯುತ್ತಿದೆ.
ಇದಕ್ಕೇನಾದರೂ ಫಲ ದೊರೆತಿದೆಯೇ? ಎಂಬುದಾಗಿ ಕೆಲವರು ಕೇಳುತ್ತಾರೆ. ಸ್ವಲ್ಪ ಸ್ವಲ್ಪ ಫಲಗಳು ಈಗಾಗಲೇ ಬಂದಿವೆ. ಮುಂಚೆ ರಾಜ್ಯಸರ್ಕಾರದ ಪ್ರತಿಭಾಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಭಗವದ್ಗೀತೆಯನ್ನು ಹೇಳಲು ಅವಕಾಶವಿರಲಿಲ್ಲ. ಅಭಿಯಾನ ಶುರುವಾದ ಕೆಲವೇ ವರ್ಷಗಳಲ್ಲಿ ಸರ್ಕಾರವೇ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ. ಜೈಲುಗಳಲ್ಲಿ ಭಗವದ್ಗೀತೆ ಹೇಳಿಕೊಟ್ಟಿದ್ದರಿಂದ ಒಳ್ಳೆಯ ಪರಿಣಾಮಗಳ ಸೂಚನೆ ಕಂಡು ಬಂದಿದೆ.
ಕಲಬುರ್ಗಿಯ ಕಾರಾಗ್ರಹದಲ್ಲಿರುವ ಕೈದಿಯೊಬ್ಬರು ಪ್ರತಿದಿನವೂ ಭಗವದ್ಗೀತೆಯನ್ನು ಪೂರ್ತಿ ಓದುತ್ತಿದ್ದು ನಮ್ಮ ಸಂಪರ್ಕದಲ್ಲಿದ್ದಾರೆ. ಬೆಳಗಾವಿಯ ಹಿಂಡಲಗಾ ಕಾರಾಗ್ರಹದ ಕೈದಿಗಳು ನಮಗೆ ಪತ್ರ ಬರೆದಿದ್ದಾರೆ. ಹೀಗೆ ಅಲ್ಲಲ್ಲಿ ಪರಿಣಾಮಗಳಾಗಿರುವದು ಕಂಡು ಬಂದಿದೆ. ಆದರೆ ಆಗಬೇಕಾದದ್ದು ಬಹಳ ಇದೆ. ನಮ್ಮ ದೃಷ್ಟಿಯಲ್ಲಿ ಈ ಎರಡು ಪ್ರಮುಖ ಕಾರ್ಯಗಳಾಗಬೇಕಾಗಿದೆ. ಎಲ್ಲರ ಉದ್ಧಾರಕ್ಕೆ ಹೊರಟಿರುವ ಭಗವದ್ಗೀತೆಯು ಅವತರಿಸಿದ ದಿನವಾದ ಗೀತಾ ಜಯಂತಿಯು ಇದೊಂದು ರಾಷ್ಟ್ರೀಯ ಹಬ್ಬವಾಗಬೇಕು. ಅಂದರೆ ಎಲ್ಲ ಜನಗಳೂ “ಗೀತಾಜಯಂತಿʼʼಯ ಉತ್ಸವವನ್ನು ಆಚರಿಸುವಂತೆ ಸಮಾಜದಲ್ಲಿ ಮಾರ್ಪಾಟು ಆಗಬೇಕು. ಆಗಬೇಕಾಗಿರುವ ಇನ್ನೊಂದು ಕೆಲಸ ವೇನೆಂದರೆ ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಕೆ. ಪ್ರಾಥಮಿಕ ಅಥವಾ ಪ್ರೌಢಶಿಕ್ಷಣದ ಹಂತದಲ್ಲಿ ಭಗವದ್ಗೀತೆಯ ಕೆಲವು ಭಾಗಗಳಾದರೂ ಅಳವಡಿಕೆ ಆಗಬೇಕು. ಇದು ಸರ್ಕಾರದ ಕಡೆಯಿಂದ ಆಗಬೇಕಾಗಿರುವ ಕೆಲಸ. ಸಮಾಜದಲ್ಲಿ ಮತ್ತು ಸರ್ಕಾರದಲ್ಲಿ ಈ ಎರಡು ಸುಧಾರಣೆಗಳು ಬಂದರೆ ಈ ಹೋರಾಟ ಸಂಪೂರ್ಣವಾಗುತ್ತದೆ.

3.ಸಾಮಾಜಿಕ ಸಾಮರಸ್ಯ
ವಿವಿಧ ಮತ-ಪಂಥಗಳಿರುವ ವಿವಿಧತೆಯ ಮಧ್ಯದಲ್ಲಿ ಏಕತೆಯ ಸಮನ್ವಯ ಸೂತ್ರವನ್ನು ಇಟ್ಟುಕೊಂಡು ಹೋಗಬೇಕಾದದ್ದು ನಮ್ಮ ದೇಶಕ್ಕೆ ಅತೀ ಅವಶ್ಯ. ಭಗವದ್ಗೀತೆಯು ಈ ಸಮನ್ವಯ ಸೂತ್ರವನ್ನು ವೈಜ್ಞಾನಿಕವಾಗಿ ಕೊಡಬಲ್ಲದು. ಎಲ್ಲ ಮತ-ಪಂಥಗಳಿಗೂ ಅವಕಾಶ ಕೊಟ್ಟು ಅನಂತರ ಅವುಗಳ ನಡುವೆ ಬೆಸುಗೆಯನ್ನು ಹಾಕುವ ಕೆಲಸ ಸುಲಭವಲ್ಲ. ಎಲ್ಲ ಮತ-ಪಂಥಗಳ ಆಚಾರ್ಯ ಪುರುಷರು ಭಗವದ್ಗೀತೆಗೆ ತಮ್ಮ ಮತಕ್ಕನುಸಾರವಾದ ವ್ಯಾಖ್ಯಾನಗಳನ್ನು ಮಾಡಿದ್ದಾರೆ.

ಭಗವದ್ಗೀತೆಯಲ್ಲಿ ಇವೆಲ್ಲಕ್ಕೂ ಅವಕಾಶಗಳಿವೆ. ಹೀಗೆ ಎಲ್ಲ ಮತಗಳಿಗೂ ಯೋಗ್ಯ ಅವಕಾಶ ಕೊಟ್ಟು ಅವುಗಳನ್ನು ಬೆಸೆಯುವ ಕೆಲಸ ಭಗವದ್ಗೀತೆಯು ಮಾಡಿದಷ್ಟು ಉತ್ತಮವಾಗಿ ಮತ್ತೆ ಯಾರೂ ಮಾಡಲು ಸಾಧ್ಯವಿಲ್ಲ. ಭಗವದ್ಗೀತಾ ಅಭಿಯಾನ ಸಮಾಜದಲ್ಲಿರುವ ಅಸಾಮರಸ್ಯದ ವಿರುದ್ಧದ ಹೋರಾಟ.

4. ರಾಷ್ಟ್ರೀಯ ಭಾವೈಕ್ಯ
ಇಡೀ ಭಾರತ ದೇಶ ಒಂದು ರಾಷ್ಟ್ರ. ಯಾವುದೇ ಅಂತರಗಳಿದ್ದರೂ ನಾವೆಲ್ಲರೂ ಈ ಒಂದು ರಾಷ್ಟ್ರದ ಪ್ರಜೆಗಳು. ಇದು ರಾಷ್ಟ್ರೀಯಭಾವೈಕ್ಯ. ಭಯೋತ್ಪಾದನೆ ಇದಕ್ಕೆ ಒಂದು ದೊಡ್ಡ ಸವಾಲು. ಶಿಕ್ಷಣ ಪಡೆದ ಯುವಜನಾಂಗ ಭಯೋತ್ಪಾದಕ ಸಂಘಟನೆಗಳತ್ತ ಆಕರ್ಷಣೆಗೆ ಒಳಗಾಗದಂತೆ ಮಾಡಿಕೊಳ್ಳುವುದು ಅಗತ್ಯವಿದೆ. ಶಿಕ್ಷಣದ ಹಂತದಲ್ಲಿ ಮಕ್ಕಳಿಗೆ-ಯುವಕ-ಯುವತಿಯರಿಗೆ ಭಗವದ್ಗೀತೆಯ ಶಿಕ್ಷಣವು ದೊರೆತರೆ ಅವರು ಭಯೋತ್ಪಾದಕ ಸಂಘಟನೆಗಳತ್ತ ಆಕರ್ಷಿತರಾಗುವದು ತಪ್ಪುತ್ತದೆ ಎಂಬುದು ನಮ್ಮ ವಾದ. ಈ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಕೆಲಸವಾಗಬೇಕಾಗಿದೆ. ಆದರೂ ಭಗವದ್ಗೀತಾ ಅಭಿಯಾನ ರಾಷ್ಟ್ರೀಯ ಭಾವೈಕ್ಯತೆಗೆ ಸವಾಲಾಗಿರುವ ಉಗ್ರವಾದದ ವಿರುದ್ಧ ಒಂದು ಮೌನ ಹೋರಾಟ.

ಐನ್‌ಸ್ಟೀನ್‌ನಂತಹ ವಿಜ್ಞಾನಿಗಳಿಗೆ, ಗಾಂಧೀಜಿ ಯಂತಹ ಸಮಾಜ ಸುಧಾರಕರಿಗೆ, ಅರಿಸ್ಟಾಟಲ್ ನಂತಹ ತತ್ವಜ್ಞಾನಿಗಳಿಗೆ, ಇನ್ನೂ ಅನೇಕ ಮಹತ್ತರ ವ್ಯಕ್ತಿಗಳಿಗೆ ಪ್ರಭಾವವನ್ನುಂಟು ಮಾಡಿದ ಭಗವದ್ಗೀತೆಯು ನಮ್ಮ ದೇಶದ ಇಂದಿನ ಜನಾಂಗಕ್ಕೆ ತನ್ನ ಪ್ರಭಾವವನ್ನು ಉಂಟುಮಾಡಲಾರದೇ? ಖಂಡಿತ ಉಂಟುಮಾಡುತ್ತದೆ ಎಂಬುದು ನಮ್ಮ ವಿಶ್ವಾಸ.

ಇದನ್ನೂ ಓದಿ | Gita Jayanti 2022 | ಭಾರತ ಈಗ ಭಗವದ್ಗೀತೆ ನೀಡಿದ ಸಂದೇಶವನ್ನೇ ಅನುಸರಿಸುತ್ತಿದೆ ಎಂದ ಸಚಿವ ರಾಜನಾಥ್‌ ಸಿಂಗ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಅಡುಗೆ ಮನೆಯನ್ನು ಮನೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಮನೆಯೊಳಗಿನ ಅನೇಕ ವಿಷಯಗಳು ಯಾವ ದಿಕ್ಕಿನಲ್ಲಿ ಅಡುಗೆ ಮಾಡಿ ತಿನ್ನುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮನೆಗೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಯಾವ ದಿಕ್ಕಿನಲ್ಲಿ ಅಡುಗೆ ಮಾಡಬೇಕೆಂದು ಎಂಬುದನ್ನು ನಾವು ತಿಳಿದುಕೊಂಡಿದ್ದರೆ ಒಳ್ಳೆಯದು.

VISTARANEWS.COM


on

By

Vastu Tips
Koo

ಮನೆಯಲ್ಲಿ (vastu for home) ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ವಾಸ್ತು ಪರಿಪಾಲನೆ ಬಹಳ ಮುಖ್ಯವಾಗಿದೆ. ಮನೆಯಲ್ಲಿ ವಾಸ್ತು (Vastu Tips) ಸರಿಯಾಗಿ ಇಲ್ಲದೇ ಇದ್ದರೆ ಆರ್ಥಿಕ ತೊಂದರೆ, ಅಶಾಂತಿ, ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವು ರೀತಿಯ ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ವಾಸ್ತುವಿಗೆ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ಮಾನ್ಯತೆ ನೀಡಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯನ್ನು (kitchen room) ಮನೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಮನೆಯೊಳಗಿನ ಅನೇಕ ವಿಷಯಗಳು ಯಾವ ದಿಕ್ಕಿನಲ್ಲಿ (Cooking Directions) ಅಡುಗೆ ಮಾಡಿ ತಿನ್ನುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮನೆಗೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಯಾವ ದಿಕ್ಕಿನಲ್ಲಿ ಅಡುಗೆ ಮಾಡಬೇಕೆಂದು ಎಂಬುದನ್ನು ನಾವು ತಿಳಿದುಕೊಂಡಿದ್ದರೆ ಒಳ್ಳೆಯದು

Vastu Tips
Vastu Tips

.

ಅಡುಗೆ ಮನೆಯಿಂದಲೂ ಬರುತ್ತೆ ವಾಸ್ತು ದೋಷಗಳು

ಅಡುಗೆ ಮನೆಯಲ್ಲಿನ ವಾಸ್ತು ದೋಷಗಳು ಮನೆಯಲ್ಲಿ ರೋಗ ಮತ್ತು ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೀಗಾಗಿ ಅಡುಗೆ ಮನೆಯಲ್ಲಿ ಯಾವ ರೀತಿಯಲ್ಲಿ ಆಹಾರವನ್ನು ಬೇಯಿಸುತ್ತೀರಿ ಎಂಬುದರ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ.

ಅಲ್ಲದೇ ಅಡುಗೆ ಮಾಡುವಾಗ ಅಡುಗೆ ಮಾಡುವವರ ಭಾವನೆಗಳು ತಿನ್ನುವವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಅಡುಗೆ ಮಾಡುವುದು ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಯಾಗಲು ಕಾರಣವಾಗುತ್ತದೆ.

Vastu Tips
Vastu Tips


ತಪ್ಪಿಸಬೇಕಾದ ಸಂಗತಿಗಳು

ದಕ್ಷಿಣ ದಿಕ್ಕು: ಎಂದಿಗೂ ದಕ್ಷಿಣಕ್ಕೆ ಮುಖ ಮಾಡಿ ಅಡುಗೆ ಮಾಡಬೇಡಿ. ಇದು ಬಡತನವನ್ನು ತರಬಹುದು. ತಲೆನೋವು, ಕೀಲು ನೋವು ಮತ್ತು ಮೈಗ್ರೇನ್‌ಗಳನ್ನು ಉಂಟು ಮಾಡಬಹುದು.

ಪಶ್ಚಿಮ ದಿಕ್ಕು: ಪಶ್ಚಿಮಾಭಿಮುಖವಾಗಿ ಅಡುಗೆ ಮಾಡುವುದು ವೈವಾಹಿಕ ಜೀವನದಲ್ಲಿ ಅಪಶ್ರುತಿ ಮತ್ತು ಅತೃಪ್ತಿಯನ್ನು ಉಂಟುಮಾಡಬಹುದು.

ಉತ್ತರ ದಿಕ್ಕು: ಉತ್ತರ ದಿಕ್ಕಿಗೆ ಮುಖಮಾಡಿ ಅಡುಗೆ ಮಾಡುವುದು ಆರ್ಥಿಕ ಸಮಸ್ಯೆ ಮತ್ತು ಬಡತನಕ್ಕೆ ಕಾರಣವಾಗಬಹುದು.

Vastu Tips
Vastu Tips


ಅಡುಗೆಗೆ ಶುಭ ಸಲಹೆ

ಪೂರ್ವ ದಿಕ್ಕು: ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡುವುದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಪೂರ್ವವು ಸೂರ್ಯನ ದಿಕ್ಕು, ಧನಾತ್ಮಕ ಶಕ್ತಿಯನ್ನು ಹರಡುತ್ತದೆ. ಈ ದಿಕ್ಕಿನಲ್ಲಿ ಬೇಯಿಸಿದ ಆಹಾರವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಜಗಳಗಳನ್ನು ಕಡಿಮೆ ಮಾಡುತ್ತದೆ ಮತ್ತು ಗಮನವನ್ನು ಹೆಚ್ಚಿಸುತ್ತದೆ. ಇದು ಉತ್ತಮ ಆದಾಯಕ್ಕೆ ಕಾರಣವಾಗಬಹುದು.

ವಾಸ್ತು ನಿಯಮಗಳು

ಅಗ್ನಿ ದೇವರು ವಾಸಿಸುತ್ತಾನೆ ಎಂದು ನಂಬಲಾದ ವಾಯುವ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು.

ಅಡುಗೆ ಮಾಡುವಾಗ ಪೂರ್ವಕ್ಕೆ ಮುಖ ಮಾಡಿ ಮಾಡಬೇಕು.

ಅಡುಗೆ ಮನೆಯಲ್ಲಿ ಸಿಂಕ್ ಅನ್ನು ಈಶಾನ್ಯ ಮೂಲೆಯಲ್ಲಿ ಇರಿಸಬೇಕು.

ಅಡುಗೆ ಮನೆಯ ಕಿಟಕಿಗಳು ಪೂರ್ವ ಮತ್ತು ಪಶ್ಚಿಮದಲ್ಲಿ ಸ್ಥಾಪಿಸಿ.

ಅಲಂಕಾರಕ್ಕಾಗಿ ಅಡುಗೆ ಮನೆಯಲ್ಲಿ ಹಣ್ಣು ಮತ್ತು ತರಕಾರಿಗಳ ಚಿತ್ರಗಳು ಒಳ್ಳೆಯದು.

ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಅಡುಗೆ ಮಾಡುವ ಸ್ಥಳ, ಓಲೆ ಸ್ವಚ್ಛವಾಗಿರಬೇಕು.

ಅಡುಗೆ ಮನೆಯ ಓಲೆ ಮನೆಯ ಮುಖ್ಯ ಬಾಗಿಲಿನ ಹೊರಗಿನಿಂದ ಗೋಚರಿಸಬಾರದು. ಅಗತ್ಯವಿದ್ದರೆ ಪರದೆಯನ್ನು ಬಳಸಿ.

ಶೌಚಾಲಯ, ಮೆಟ್ಟಿಲು ಅಥವಾ ಪೂಜಾ ಕೊಠಡಿಗಳ ಮೇಲೆ ಅಥವಾ ಕೆಳಗೆ ಅಡುಗೆಮನೆಯನ್ನು ಇಡಬೇಡಿ.

ಮಾನಸಿಕ ಸಮತೋಲನ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ನೀರು ಮತ್ತು ಬೆಂಕಿಯ ಅಂಶಗಳನ್ನು ಪ್ರತ್ಯೇಕವಾಗಿ ಇರಿಸಿ.

ಅಡುಗೆ ಕೋಣೆಯು ಮಲಗುವ ಕೋಣೆ, ಪೂಜಾ ಕೊಠಡಿ ಅಥವಾ ಶೌಚಾಲಯಗಳ ಕೆಳಗೆ ಅಥವಾ ಮೇಲೆ ಇಡುವುದನ್ನು ತಪ್ಪಿಸಿ.

ಇದನ್ನೂ ಓದಿ: Vastu Tips: ಮಕ್ಕಳ ಮದುವೆ ವಿಳಂಬವಾಗುತ್ತಿದೆಯೆ? ವಾಸ್ತು ದೋಷವೂ ಕಾರಣವಿರಬಹುದು!

ಧನಾತ್ಮಕ ಕಂಪನಗಳನ್ನು ಹೆಚ್ಚಿಸಲು ಅಡುಗೆಮನೆಯನ್ನು ಸ್ವಚ್ಛವಾಗಿ ಮತ್ತು ಗೊಂದಲವಿಲ್ಲದೆ ಇರಿಸಿ.

ಶುದ್ಧತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮಾಂಸಾಹಾರಿ ಆಹಾರವನ್ನು ತಯಾರಿಸಲು ಪ್ರತ್ಯೇಕ ಸ್ಥಳವನ್ನು ಬಳಸಿ.

Continue Reading

ಧಾರ್ಮಿಕ

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

Shravan 2024: ಶ್ರಾವಣ ಮಾಸದಲ್ಲಿ (Shravan Month 2024) ಹೆಚ್ಚಾಗಿ ದೇವರ ಭಕ್ತಿ, ಪ್ರಾರ್ಥನೆಯಲ್ಲಿ ತೊಡಗುವುದರಿಂದ ಆಹಾರ ನಿಯಮಗಳನ್ನು ಕಠಿಣವಾಗಿ ಅನುಸರಿಸಲಾಗುತ್ತದೆ. ಉಪವಾಸ ಇರುವವರು ಈ ಸಂದರ್ಭದಲ್ಲಿ ಆಹಾರದ ಮಾರ್ಗಸೂಚಿಗಳನ್ನು ಅನುಸರಿಸಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಧ್ಯಾತ್ಮಿಕ ಗಮನವನ್ನು ಕೇಂದ್ರೀಕರಿಸಬಹುದು.

VISTARANEWS.COM


on

By

Shravan Month 2024
Koo

ಶ್ರಾವಣಾ ಬಂತು ಕಾಡಿಗೆ.. ಬಂತು ನಾಡಿಗೆ.. ಬಂತು ಬೀಡಿಗೆ.. ಕವಿ ದ. ರಾ. ಬೇಂದ್ರೆಯವರ (da.ra. bendre) ಕವನದ ಸಾಲುಗಳು ಶ್ರಾವಣ ಮಾಸದ (Shravan 2024) ಸಂಭ್ರಮವನ್ನು ವರ್ಣಿಸುವಂತೆ ಶ್ರಾವಣ ಮಾಸವು (Shravan Month) ಹಬ್ಬ ಹರಿದಿನಗಳನ್ನು ಹೊತ್ತುಕೊಂಡು ಬರುತ್ತದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದ್ದು, ಈ ಸಂದರ್ಭದಲ್ಲಿ ಹಿಂದೂಗಳು ಉಪವಾಸ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ.

ಈ ಬಾರಿ ಆಗಸ್ಟ್ 4ರಿಂದ ಶ್ರಾವಣ ಮಾಸ ಆರಂಭಗೊಳ್ಳಲಿದ್ದು, ಈ ಮಂಗಳಕರ ಅವಧಿಯಲ್ಲಿ ವಿಶೇಷ ಪ್ರಾರ್ಥನೆ, ಆಚರಣೆ ಮತ್ತು ಆಹಾರದ ನಿರ್ಬಂಧ ಇರುತ್ತದೆ. ಶ್ರಾವಣ ಮಾಸದಲ್ಲಿ ಭಕ್ತರು ತಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ನಿರ್ದಿಷ್ಟ ಆಹಾರ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ. ಈ ಪವಿತ್ರ ಮಾಸದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ತಪ್ಪಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಶ್ರಾವಣ ಮಾಸದಲ್ಲಿ ತಿನ್ನಬಹುದಾದ ಆಹಾರಗಳು

Shravan Month 2024
Shravan Month 2024


ತಾಜಾ ಹಣ್ಣುಗಳು: ಶ್ರಾವಣ ಮಾಸದಲ್ಲಿ ತಾಜಾ ಹಣ್ಣುಗಳು ಆಹಾರದ ಅತ್ಯಗತ್ಯ ಭಾಗವಾಗಿದೆ. ಅವುಗಳನ್ನು ಶುದ್ಧ ಮತ್ತು ಜೀರ್ಣಿಸಿಕೊಳ್ಳಲು ಸುಲಭವೆಂದು ಪರಿಗಣಿಸಲಾಗುತ್ತದೆ. ಅಗತ್ಯವಾದ ಪೋಷಕಾಂಶಗಳು ಮತ್ತು ಜಲಸಂಚಯನವನ್ನು ಒದಗಿಸುತ್ತದೆ.ಇದರಲ್ಲಿ ಬಾಳೆಹಣ್ಣು, ಸೇಬು, ದಾಳಿಂಬೆ ಮತ್ತು ಕಲ್ಲಂಗಡಿಗಳು ಸೇರಿವೆ.

ಡೇರಿ ಉತ್ಪನ್ನಗಳು: ಹಾಲು, ಮೊಸರು, ಪನೀರ್ ಮತ್ತು ತುಪ್ಪವನ್ನು ಶ್ರಾವಣ ಮಾಸದಲ್ಲಿ ಸೇವಿಸಬಹುದು. ಈ ಡೇರಿ ಉತ್ಪನ್ನಗಳು ಪೌಷ್ಟಿಕಾಂಶ ಮಾತ್ರವಲ್ಲದೇ ದೇಹವನ್ನು ತಂಪಾಗಿಸುತ್ತದೆ.

ಸಾಬುದಾನ: ಉಪವಾಸದ ಸಮಯದಲ್ಲಿ ಸಾಬುದಾನ ಖಿಚಡಿ ಅಥವಾ ವಡಾ ಶ್ರಾವಣ ಮಾಸದ ಮುಖ್ಯವಾದ ಆಹಾರವಾಗಿದೆ. ಸಾಬುದಾನವು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದು ದಿನವಿಡೀ ಶಕ್ತಿಯನ್ನು ನೀಡುತ್ತದೆ.

ಹುರುಳಿಕಾಳಿನ ಹಿಟ್ಟು: ಪೂರಿ, ಚಪಾತಿ ಅಥವಾ ಪ್ಯಾನ್ ಕೇಕ್‌ಗಳನ್ನು ತಯಾರಿಸಲು ಹುರುಳಿಕಾಳಿನ ಹಿಟ್ಟನ್ನು ಬಳಸಲಾಗುತ್ತದೆ. ಇದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ ಮತ್ತು ಉಪವಾಸಕ್ಕೆ ಸೂಕ್ತವಾಗಿದೆ.

ಚೆಸ್ ನೆಟ್ ಹಿಟ್ಟು: ಹುರುಳಿ ಹಿಟ್ಟಿನಂತೆಯೇ ಇದು ಪೂರಿ ಮತ್ತು ಹಲ್ವಾದಂತಹ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಬಳಸುವ ಮತ್ತೊಂದು ಉಪವಾಸ ಸ್ನೇಹಿ ಹಿಟ್ಟಾಗಿದೆ.

ಆಲೂಗಡ್ಡೆಗಳು ಮತ್ತು ಸಿಹಿ ಆಲೂಗಡ್ಡೆಗಳು: ಇದನ್ನು ವಿವಿಧ ಪಾಕವಿಧಾನಗಳಲ್ಲಿ ಬಳಸಬಹುದು. ಇದರಿಂದ ಉಪವಾಸದಲ್ಲಿರುವವರು ಅಗತ್ಯ ಶಕ್ತಿಯನ್ನು ತುಂಬುತ್ತಾರೆ ಮತ್ತು ಒದಗಿಸುತ್ತಾರೆ.

ಬೀಜಗಳು ಮತ್ತು ಒಣ ಹಣ್ಣುಗಳು: ಬಾದಾಮಿ, ವಾಲ್ ನಾಟ್, ಒಣದ್ರಾಕ್ಷಿ ಮತ್ತು ಇತರ ಒಣ ಹಣ್ಣುಗಳು ಲಘು ಆಹಾರಕ್ಕಾಗಿ ಮತ್ತು ಹೆಚ್ಚುವರಿ ಪೌಷ್ಟಿಕಾಂಶ ಮತ್ತು ಶಕ್ತಿಗಾಗಿ ಭಕ್ಷ್ಯಗಳಿಗೆ ಸೇರಿಸಲು ಉತ್ತಮವಾಗಿದೆ.

ತೆಂಗಿನಕಾಯಿ: ಶ್ರಾವಣ ಮಾಸದಲ್ಲಿ ತಾಜಾ ತೆಂಗಿನಕಾಯಿ, ತೆಂಗಿನ ನೀರು ಮತ್ತು ತೆಂಗಿನ ಹಾಲು ಸಾಮಾನ್ಯವಾಗಿ ಸೇವಿಸಲಾಗುತ್ತದೆ.

Shravan Month 2024
Shravan Month 2024


ಶ್ರಾವಣ ಮಾಸದಲ್ಲಿ ತಪ್ಪಿಸಬೇಕಾದ ಆಹಾರಗಳು

ಮಾಂಸಾಹಾರ: ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ಶ್ರಾವಣ ಮಾಸದಲ್ಲಿ ಕಟ್ಟುನಿಟ್ಟಾಗಿ ತಪ್ಪಿಸಲಾಗುತ್ತದೆ. ಶುದ್ಧತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಸ್ಯಾಹಾರಿ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ: ಇವುಗಳು ದೇಹದಲ್ಲಿ ಶಾಖವನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಅವುಗಳನ್ನು ತಪ್ಪಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ.

ಧಾನ್ಯಗಳು ಮತ್ತು ಬೇಳೆಕಾಳುಗಳು: ಗೋಧಿ, ಅಕ್ಕಿ, ಧಾನ್ಯ ಮತ್ತು ಬೇಳೆಕಾಳುಗಳನ್ನು ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಳಸಲಾಗುವುದಿಲ್ಲ. ಇದರ ಬದಲು ಹುರುಳಿ ಕಾಳು, ಚೆಸ್ಟ್ ಹಿಟ್ಟನ್ನು ಬಳಸಲಾಗುತ್ತದೆ.

ಮದ್ಯ ಮತ್ತು ತಂಬಾಕು: ಶ್ರಾವಣ ಮಾಸ ಪವಿತ್ರ ತಿಂಗಳಾಗಿರುವುದರಿಂದ ಮದ್ಯ ಮತ್ತು ತಂಬಾಕು ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

ಸಂಸ್ಕರಿಸಿದ ಮತ್ತು ಜಂಕ್ ಆಹಾರಗಳು: ಆರೋಗ್ಯಕರ ಮತ್ತು ನೈಸರ್ಗಿಕ ಆಹಾರಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಚಿಪ್ಸ್, ಪ್ಯಾಕೆಟ್ ತಿಂಡಿಗಳು ಮತ್ತು ಇತರ ಸಂಸ್ಕರಿಸಿದ ಆಹಾರಗಳನ್ನು ಸೇವಿಸಲಾಗುವುದಿಲ್ಲ.

ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರಗಳು: ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ ಏಕೆಂದರೆ ಅವು ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು ಮತ್ತು ಉಪವಾಸಕ್ಕೆ ತೊಂದರೆ ಉಂಟು ಮಾಡುವುದು.

Continue Reading

ರಾಮ ಮಂದಿರ

Ayodhya Ram Mandir: ರಾಮಮಂದಿರಕ್ಕೆ ಬರುವ ಚಿನ್ನ, ಬೆಳ್ಳಿ ಆಭರಣಗಳ ಕಾವಲಿಗೆ ಇಬ್ಬರು ಆರ್​​ಎಸ್​ಎಸ್​​ ಕಾರ್ಯಕರ್ತರ ನೇಮಕ

ಅಯೋಧ್ಯೆ ರಾಮ ಮಂದಿರದ (Ayodhya Ram Mandir) ರಾಮಲಲ್ಲಾನಿಗೆ ಪ್ರತಿದಿನ ಲಕ್ಷಾಂತರ ರೂಪಾಯಿ ನಗದು ಸೇರಿದಂತೆ ಚಿನ್ನ, ಬೆಳ್ಳಿ, ಮುತ್ತು ಸೇರಿದಂತೆ ಬೆಲೆಬಾಳುವ ಆಭರಣಗಳೂ ಬರುತ್ತಿದೆ. ಇದನ್ನು ನಿರ್ವಹಿಸಲು ಮತ್ತು ದಾಖಲಿಸಲು ದೇವಸ್ಥಾನದ ಟ್ರಸ್ಟ್‌ನಿಂದ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ.

VISTARANEWS.COM


on

By

Ayodhya Ram Mandir
Koo

ಉತ್ತರಪ್ರದೇಶ: ಅಯೋಧ್ಯೆಯ ರಾಮಮಂದಿರದ (Ayodhya Ram Mandir) ರಾಮಲಲ್ಲಾನ (ramlalla) ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಅಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಹೀಗೆ ಭೇಟಿ ನೀಡುವ ಭಕ್ತರು ಭಾರಿ ಪ್ರಮಾಣದ ಕಾಣಿಕೆ ಅರ್ಪಿಸುತ್ತಿದ್ದಾರೆ. ಚಿನ್ನ, ಬೆಳ್ಳಿ, ವಜ್ರ, ಮುತ್ತು ಸೇರಿದಂತೆ ಬೆಲೆಬಾಳುವ ಆಭರಣಗಳನ್ನೂ ಸಲ್ಲಿಸುತ್ತಾರೆ. ಪ್ರತಿದಿನ ಲಕ್ಷಾಂತರ ರೂಪಾಯಿ ಹುಂಡಿಗೆ ಬೀಳುವುದು ಸೇರಿದಂತೆ ಬೆಲೆಬಾಳುವ ಆಭರಣಗಳನ್ನು ಅರ್ಪಿಸುತ್ತಿದ್ದಾರೆ. ಹೀಗಾಗಿ ಇವುಗಳ ನಿರ್ವಹಣೆಗೆಂದು ದೇವಸ್ಥಾನದ ಟ್ರಸ್ಟ್‌ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು (RSS workers) ನೇಮಕ ಮಾಡಿದೆ.

ಈ ಆರೆಸ್ಸೆಸ್ ಕಾರ್ಯಕರ್ತರು ಆಭರಣಗಳನ್ನು ದಾನ ಮಾಡುವ ಪ್ರತಿಯೊಬ್ಬ ಭಕ್ತನ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸಲಾಗುತ್ತಿದೆ. ಮಾಹಿತಿ ದಾಖಲು ಮಾಡಲು ವಿವಿಧ ಪಾಳಿಗಳಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಾರೆ. ಪ್ರತಿ ದಿನದ ಸಂಜೆ ಕಾಣಿಕೆ ರೂಪದಲ್ಲಿ ಬಂದಿರುವ ಆಭರಣಗಳನ್ನು ದಾಖಲಿಸಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಲಾಕರ್‌ನಲ್ಲಿ ಠೇವಣಿ ಇಡಲಾಗುತ್ತಿದೆ. ಕೆಲವು ಭಕ್ತರು ದೇಣಿಗೆ ಕೌಂಟರ್​ಗೆ ಹೋಗುವ ಬದಲು ಅಲ್ಲಿನ ಸಿಬ್ಬಂದಿ ಮೂಲಕ ಹಣ ನೀಡಲಾಗುತ್ತಿದೆ. ಈ ವಹಿವಾಟುಗಳನ್ನೂ ಎಚ್ಚರಿಕೆಯಿಂದ ದಾಖಲು ಮಾಡಲು ಟ್ರಸ್ಟ್​ ಮುಂದಾಗಿದೆ. ಈ ಎಲ್ಲ ವಹಿವಾಟುಗಳ ಬಗ್ಗೆ ನಿಗಾ ಇಡಲು ಆರ್​ಎಸ್​ಎಸ್​ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ.

ಬಾಲ ರಾಮನಿಗೆ ಅಲಂಕಾರ ಮಾಡುವ ಆಭರಣಗಳನ್ನು ರಕ್ಷಿಸಲು ನಿವೃತ್ತ ಸೇನಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ರಾಮಲಲ್ಲಾನನ್ನು ಅಲಂಕರಿಸುವಾಗ ಮತ್ತು ಅದನ್ನು ತೆಗೆಯುವ ವೇಳೆ ಪುರೋಹಿತರು ನಿವೃತ್ತ ಸೈನಿಕರ ಮೇಲ್ವಿಚಾರಣೆಯಲ್ಲಿ ಲಾಕರ್‌ನಿಂದ ಆಭರಣಗಳನ್ನು ಪಡೆದು ವಾಪಸ್​ ಕೊಡುತ್ತಾರೆ. ಎಲ್ಲ ಆಭರಣವನ್ನು ತೆಗೆಯುವಾಗ ಮತ್ತು ಹಾಕುವಾಗ ಲೆಕ್ಕ ಹಾಕಲಾಗುತ್ತದೆ.

Ayodhya Ram Mandir
Ayodhya Ram Mandir


ಎಂಟು ಗಂಟೆಗಳ ಮೂರು ಪಾಳಿಗಳಲ್ಲಿ ಕೆಲಸ ಮಾಡುವ ಇಬ್ಬರು ಬಂದೂಕು ಹೊಂದಿರುವ ಆರು ಅಂಗರಕ್ಷಕರನ್ನು ಬಾಲರಾಮನ ವಿಗ್ರಹಕ್ಕೆ ಭದ್ರತೆ ಒದಗಿಸಲಾಗಿದೆ. ಈ ಹಿಂದೆ ಧಾರ್ಮಿಕ ಗುರುಗಳಾಗಿ ಸೇವೆ ಸಲ್ಲಿಸಿದ ಮೂವರು ಸೇರಿದಂತೆ 20 ನಿವೃತ್ತ ಸೇನಾ ಸಿಬ್ಬಂದಿಯನ್ನು ರಾಮ ಮಂದಿರದಲ್ಲಿ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಧಾರ್ಮಿಕ ಗುರುಗಳು ಗರ್ಭಗುಡಿಯ ಹೊರಗೆ ನಿಂತು ಪೂಜೆಗೆ ಸಹಾಯ ಮಾಡುತ್ತಾರೆ. ಉಳಿದ ಸಿಬ್ಬಂದಿ ಭಕ್ತರ ಹರಿವನ್ನು ನಿಯೋಜಿಸುತ್ತಿದ್ದಾರೆ.

ಆರತಿ ಮತ್ತು ಇತರ ಪೂಜೆಗಳ ಸಮಯದಲ್ಲಿ ಗಂಟೆಗಳನ್ನು ಬಾರಿಸಲು ಮತ್ತು ಉಳಿದ ವ್ಯವಸ್ಥೆಗಳನ್ನು ನಿರ್ವಹಿಸಲು ಅವರು ಸಹಾಯ ಮಾಡುತ್ತಾರೆ. 17 ನಿವೃತ್ತ ಸೈನಿಕರು ಸಾಮಾನ್ಯ ಉಡುಪುಗಳನ್ನು ಧರಿಸಿ ದೇಗುಲದ ಆವರಣದ ಮೇಲ್ವಿಚಾರಣೆ ಮಾಡುತ್ತಾರೆ.

ಈ ನಡುವೆ ಶ್ರೀ ರಾಮ ಜನ್ಮಭೂಮಿ ಆವರಣದ ಶೇಷಾವತಾರ ದೇವಾಲಯದ ನಿರ್ಮಾಣ ಪ್ರಾರಂಭವಾಗಿದೆ. ರಾಮಮಂದಿರ ಮತ್ತು ಕುಬೇರ ದಿಬ್ಬದ ನಡುವೆ ಈ ಹೊಸ ದೇವಾಲಯ ನಿರ್ಮಿಸಲಾಗುತ್ತಿದೆ.

ಇದನ್ನೂ ಓದಿ: Ayodhya Ram Mandir : ರಾಮಮಂದಿರದ ಚಾವಣಿ ಸೋರುತ್ತಿಲ್ಲ; ನಿರ್ಮಾಣ ಸಮಿತಿ ಸ್ಪಷ್ಟನೆ

ದಕ್ಷಿಣ ಭಾರತದ ಸಂತರ ಸಲಹೆ ಪಡೆದು ಶೇಷಾವತಾರ್ ದೇವಾಲಯದ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ಅದರ ಎತ್ತರವು ರಾಮ ಮಂದಿರದಕ್ಕೆ ಸಮಾನವಾಗಿದೆ. ಈ ದೇವಾಲಯವು ಶ್ರೀ ಸೀತಾರಾಮನ ವಿಗ್ರಹ ಹೊಂದಿರುತ್ತದೆ. ಇದನ್ನು ಶೇಷನಾಗ ರಕ್ಷಿಸುತ್ತಾನೆ. ಇನ್ನು ಸಪ್ತ ಮಂಟಪದ ಅಡಿಪಾಯದ ಕೆಲಸವು ಬಹುತೇಕ ಪೂರ್ಣಗೊಂಡಿದೆ. ಅಡಿಪಾಯ ಮತ್ತು ಗೋಡೆಗೆ ಕಲ್ಲುಗಳ ಕಟ್ಟುವ ಕಾರ್ಯ ನಡೆಸಲಾಗುತ್ತಿದೆ.

Continue Reading

ಧಾರ್ಮಿಕ

Vastu Tips: ಸಂಸ್ಥೆ ಸಕ್ಸೆಸ್‌ ಆಗಲು ಕಚೇರಿ ಸ್ಥಳ ಹೀಗಿರಬೇಕು!

ಉತ್ತಮ ಕಚೇರಿಗೆ ಕೆಲವು ಸಲಹೆಗಳನ್ನು ವಾಸ್ತು (Vastu Tips) ತಜ್ಞರಾದ ಆಚಾರ್ಯ ಪಂಕಿತ್ ಗೋಯಲ್ ಅವರು ನೀಡಿದ್ದು, ಇದರಿಂದ ಸಮೃದ್ಧಿ ಮತ್ತು ದಕ್ಷತೆ ಹೆಚ್ಚಾಗುತ್ತದೆ ಎನ್ನುತ್ತಾರೆ. ಯಾವುದೇ ವ್ಯಾಪಾರ ಘಟಕದ ಏಳಿಗೆಯ ಚಿಂತನೆಯು ಖಾತೆಗಳ ತಂಡ, ಸರಿಯಾದ ಬೆಳಕು, ಮಾಲೀಕರ ಮೇಜು ಮತ್ತು ಲಾಕರ್‌ನ ಸ್ಥಳವನ್ನು ಆಧರಿಸಿರುತ್ತದೆ. ಇವುಗಳಿಗೆ ಸರಿಯಾದ ದಿಕ್ಕು ಮತ್ತು ಸ್ಥಳ ಯಾವುದು, ಹೇಗಿರಬೇಕು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಕೆಲಸದ ಸ್ಥಳದಲ್ಲಿ (office place) ಕೆಲವೊಮ್ಮೆ ಸಾಕಷ್ಟು ವಿಘ್ನಗಳು ಎದುರಾಗುತ್ತವೆ. ಇದಕ್ಕೆ ಕಾರಣ ಹುಡುಕುತ್ತಾ ಹೊರಟರೆ ವಾಸ್ತು ದೋಷವೂ (Vastu Tips) ಒಂದಾಗಿರಬಹುದು ಎನ್ನುತ್ತಾರೆ ವಾಸ್ತು ತಜ್ಞರು (Vastu experts). ಹೊಸ ಕಚೇರಿ ಸ್ಥಾಪನೆ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಸಮೃದ್ಧಿ ಹೆಚ್ಚಾಗಲು ವಾಸ್ತು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎನ್ನುತ್ತಾರೆ ಖ್ಯಾತ ವಾಸ್ತು ತಜ್ಞರಾದ ಆಚಾರ್ಯ ಪಂಕಿತ್ ಗೋಯಲ್.

ಈ ಕುರಿತು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾ ಗ್ರಾಮ್‌ನಲ್ಲಿ ( social media Instagram) ಮಾಹಿತಿ ಹಂಚಿಕೊಂಡಿರುವ ಅವರು, ಕೆಲಸದ ಸ್ಥಳದಲ್ಲಿ ಯಶಸ್ಸು ಸಾಧಿಸಬೇಕಾದರೆ ಏನು ಮಾಡಬೇಕು ಎಂಬುದನ್ನು ಹೇಳಿದ್ದಾರೆ. ಈ ಕೆಲವು ಪ್ರಾಯೋಗಿಕ ಸಲಹೆಗಳನ್ನು ಅಳವಡಿಸಿಕೊಳ್ಳುವುದರಿಂದ ಅದು ಕಾರ್ಯಕ್ಷೇತ್ರದಲ್ಲಿ ನಿಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿ, ಕೆಲಸದಲ್ಲಿ ಸಮೃದ್ಧಿ ತರಲು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತಾರೆ ಎನ್ನುತ್ತಾರೆ ಅವರು.

ಕಚೇರಿಗಾಗಿ ಪ್ರಮುಖ ಸಲಹೆಗಳು

Vastu Tips
Vastu Tips


ಅಕೌಂಟ್‌ ವಿಭಾಗವನ್ನು ಎಲ್ಲಿ ಇಡಬೇಕು?

ಕಚೇರಿಯ ಪಶ್ಚಿಮ, ನೈಋತ್ಯ ಅಥವಾ ಆಗ್ನೇಯ ಭಾಗಗಳಲ್ಲಿ ಅಕೌಂಟ್‌ ವಿಭಾಗವನ್ನು ಇರಿಸಬಹುದು. ಇಲ್ಲೇ ಖಾತೆಗಳನ್ನು ನಿರ್ವಹಿಸುವ ತಂಡವನ್ನು ಇಡಬಹುದು. ಇದರಿಂದ ಹಣಕಾಸಿನ ಸ್ಥಿರತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ಸರಿಯಾದ ಬೆಳಕು ಇರಲಿ

ಕಚೇರಿಯ ಉತ್ತರದಲ್ಲಿ ಸ್ಪಾಟ್‌ಲೈಟ್ ಅನ್ನು ಸ್ಥಾಪಿಸಬೇಕು ಎನ್ನುತ್ತಾರೆ ತಜ್ಞರು. ಇದರಿಂದ ಹೊಸ ಅವಕಾಶಗಳು ಆಕರ್ಷಿಸಲ್ಪಡುತ್ತದೆ. ಇದು ಕಚೇರಿಯಲ್ಲಿ ನಿಮ್ಮ ಬೆಳವಣಿಗೆಯ ನಿರೀಕ್ಷೆಗಳನ್ನು ಹೆಚ್ಚಿಸುತ್ತದೆ. ಸರಿಯಾದ ಬೆಳಕು ಕೆಲಸದ ಸ್ಥಳವನ್ನು ಬೆಳಗಿಸುತ್ತದೆ ಮಾತ್ರವಲ್ಲದೆ ಸ್ಪಷ್ಟತೆ ಮತ್ತು ಜ್ಞಾನೋದಯವನ್ನು ಸಂಕೇತಿಸುತ್ತದೆ.


ಗ್ರಾಹಕರನ್ನು ಆಕರ್ಷಿಸುವುದು ಹೇಗೆ?

ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮತ್ತು ಅವರಿಗೆ ಸ್ಥಳವನ್ನು ಹೆಚ್ಚು ಆಕರ್ಷಕವಾಗಿಸಲು ಯುನಿಕಾರ್ನ್ ಹಾರ್ಸ್ ಪ್ರತಿಮೆಗಳನ್ನು ಕಚೇರಿಯಲ್ಲಿ ಇಡಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಗ್ರಾಹಕರನ್ನು ಆಕರ್ಷಿಸಲು ಮತ್ತು ಸಾಮಾನ್ಯವಾಗಿ ವ್ಯಾಪಾರ ಸಂಬಂಧಗಳನ್ನು ಸುಧಾರಿಸಲು ಇದು ವಿಶಿಷ್ಟವಾದ ವಾಸ್ತು ಸಲಹೆಗಳಲ್ಲಿ ಒಂದಾಗಿದೆ.

Vastu Tips
Vastu Tips


ಮಾಲೀಕರ ಸ್ಥಾನ

ಕಚೇರಿಯ ಯಶಸ್ಸಿನ ಪ್ರಮುಖ ವಿಷಯವೆಂದರೆ ಮಾಲೀಕರ ಟೇಬಲ್ ಇಡುವ ಸ್ಥಳ ಅಥವಾ ಅವರು ಕುಳಿತುಕೊಳ್ಳುವ ಜಾಗ. ಇದನ್ನು ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ಪಶ್ಚಿಮದಲ್ಲಿ ಇಡಬೇಕೆಂದು ವಾಸ್ತು ತಜ್ಞರಾದ ಗೋಯಲ್ ಸೂಚಿಸುತ್ತಾರೆ. ಇಲ್ಲದಿದ್ದರೆ ಅದನ್ನು ಉತ್ತರಕ್ಕೆ ಎದುರಾಗಿ ದಕ್ಷಿಣದಲ್ಲಿ ಇರಿಸಬಹುದು. ಇದು ವ್ಯಕ್ತಿಯಲ್ಲಿ ನಾಯಕತ್ವದ ಗುಣಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಮಾಲೀಕರ ವ್ಯಕ್ತಿತ್ವದಲ್ಲಿ ಉತ್ತಮ ನಿರ್ಧಾರವನ್ನು ತರುತ್ತದೆ.

ಇದನ್ನೂ ಓದಿ: Vastu Tips: ಮಕ್ಕಳ ಮದುವೆ ವಿಳಂಬವಾಗುತ್ತಿದೆಯೆ? ವಾಸ್ತು ದೋಷವೂ ಕಾರಣವಿರಬಹುದು!

ಲಾಕರ್ ಎಲ್ಲಿ ಇಡಬೇಕು?

ಲಾಕರ್ ಇಡಲು ಕೆಲವು ಮಂಗಳಕರ ಸ್ಥಾನಗಳನ್ನು ಸೂಚಿಸಿರುವ ಗೋಯಲ್ ಅಲ್ಮೇರಾವನ್ನು ಪಶ್ಚಿಮ, ಉತ್ತರ ಅಥವಾ ದಕ್ಷಿಣ ಭಾಗದಲ್ಲಿ ಇರಿಸಬಹುದು ಎಂದಿದ್ದಾರೆ. ಅವರ ಪ್ರಕಾರ, ಈ ಪ್ರತಿಯೊಂದು ಸ್ಥಾನಗಳು ವ್ಯವಹಾರಕ್ಕೆ ಭದ್ರತೆ ಮತ್ತು ಬೆಳವಣಿಗೆಯನ್ನು ಒದಗಿಸುತ್ತದೆ.

Continue Reading
Advertisement
Actor Darshan Astrologer Chanda Pandey Said Facing Problems Because Of His vig
ಕ್ರೈಂ6 mins ago

Actor Darshan: ವಿಗ್‌ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!

Encounter in Kupwara
ದೇಶ33 mins ago

Encounter in Kupwara: ಕುಪ್ವಾರಾದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ: ಮೂವರು ಸೈನಿಕರಿಗೆ ಗಾಯ

Champions Trophy 2025
ಕ್ರೀಡೆ36 mins ago

Champions Trophy 2025: ನಾವು ತುಂಬಾ ಒಳ್ಳೆಯವರು, ಪಾಕಿಸ್ತಾನಕ್ಕೆ ಬನ್ನಿ; ಟೀಮ್ ಇಂಡಿಯಾಗೆ ಪಾಕ್​ ಆಟಗಾರನ ಮನವಿ

Murder in PG Case
ಕ್ರೈಂ44 mins ago

Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ

kaveri aarti
ಪ್ರಮುಖ ಸುದ್ದಿ58 mins ago

Kaveri Aarti: ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ; ದಸರಾ ಹೊತ್ತಿಗೆ ರೆಡಿ

Malaika Arora breakup rumours rushes past Arjun Kapoor
ಬಾಲಿವುಡ್58 mins ago

Malaika Arora: ಒಂದೇ ಈವೆಂಟ್‌ನಲ್ಲಿ ಇದ್ದರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಂಡಿಲ್ಲ! ಅರ್ಜುನ್​-ಮಲೈಕಾ ಬ್ರೇಕಪ್‌ ಖಚಿತ?

Narendra Modi
ದೇಶ1 hour ago

Narendra Modi: ರಷ್ಯಾ ಬಳಿಕ ಮುಂದಿನ ತಿಂಗಳು ಯುದ್ಧ ಪೀಡಿತ ಉಕ್ರೇನ್‌ಗೆ ಪ್ರಧಾನಿ ಮೋದಿ ಭೇಟಿ

Actor Rajinikanth Fulfils Grandfather Duties By Dropping Grandson At School
ಕಾಲಿವುಡ್1 hour ago

Actor Rajinikanth: ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದ ಮೊಮ್ಮಗ; ತಾತನ ಡ್ಯೂಟಿ ಮಿಸ್ ಮಾಡ್ದೆ ಸ್ಕೂಲ್‌ಗೆ ಬಿಟ್ಟು ಬಂದ ರಜನಿಕಾಂತ್‌!

Paris Olympics 2024
ಕ್ರೀಡೆ1 hour ago

Paris Olympics 2024: ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಕ್ರೀಡಾ ಸ್ಫರ್ಧೆಗಳು; ಶೂಟಿಂಗ್​ನಲ್ಲಿ ಪದಕ ನಿರೀಕ್ಷೆ

students night
ಪ್ರಮುಖ ಸುದ್ದಿ1 hour ago

Students Night: ವಿದ್ಯಾರ್ಥಿಗಳು ಕುಡಿದು ಕುಪ್ಪಳಿಸಲು ʼಸ್ಟೂಡೆಂಟ್ಸ್‌ ನೈಟ್‌ʼ ಆಯೋಜಿಸಿದ ಬಾರ್‌ ಮಾಲಿಕ! ಕಾರ್ಯಕ್ರಮ ರದ್ದು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ16 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ17 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ18 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ19 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌