Guru Raghavendra Swamy : ಮಂತ್ರಾಲಯದ ಕೀರ್ತಿ ಮುಕುಟ ಶ್ರೀ ರಾಘವೇಂದ್ರ ಸ್ವಾಮಿಗಳು - Vistara News

ಧಾರ್ಮಿಕ

Guru Raghavendra Swamy : ಮಂತ್ರಾಲಯದ ಕೀರ್ತಿ ಮುಕುಟ ಶ್ರೀ ರಾಘವೇಂದ್ರ ಸ್ವಾಮಿಗಳು

ಶ್ರೀ ರಾಘವೇಂದ್ರ ಸ್ವಾಮಿಗಳು (Guru Raghavendra Swamy) ಕೇವಲ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಜನತೆಯ ಭೌತಿಕ ಉನ್ನತಿಯ ಬಗ್ಗೆಯೂ ಕಾಳಜಿ ತೋರಿಸಿ ಅನುಗ್ರಹಿಸಿದ ಕರುಣಾಮೂರ್ತಿಗಳು. ಶ್ರೀ ಗುರು ಸಾರ್ವಭೌಮರ 428ನೇ ವರ್ಧಂತಿಯ ನಿಮಿತ್ತ ನುಡಿನಮನ ಇಲ್ಲಿದೆ.

VISTARANEWS.COM


on

Sri Raghavendra Swami Vardhanti celebration
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Raghavendra Tirtha
Sri Raghavendra Swami Vardhanti celebration

ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ಯುಗಯುಗಗಳ ವರೆಗೂ ಅಸೃಜ್ಯವಾಗಿ ಉಳಿಯುವಂತೆ ವಿಶ್ವದ ತುಂಬ ಭಕ್ತಿಯ ಸಂಚಲನ ಸೃಷ್ಟಿಸಿದ ʻಕಲಿಯುಗದ ಕಾಮಧೇನುʼ ʻಕಲ್ಪವೃಕ್ಷರುʼ ಶ್ರೀ ರಾಘವೇಂದ್ರ ತೀರ್ಥರು (Guru Raghavendra Swamy).

ʻಜೀವಂ ನಯತಿ ಇತಿ ಜೀವನಮ್ʼ ಮುಂದೆ ಮುಂದೆ ಸಾಗುವುದೇ ಜೀವನ. ಆದರೆ ಜೀವನದಲ್ಲಿ ಮನಬಂದಂತೆ ಎಲ್ಲೆಂದರಲ್ಲಿ ಹೆಜ್ಜೆಗಳನ್ನಿಟ್ಟು ನಡೆಯುವುದು ಪಯಣವಲ್ಲ, ಸಾಗುವ ದಾರಿಯನ್ನು ಮನಸ್ಸು ನಿರ್ಧರಿಸಬೇಕು, ಬುದ್ಧಿ ಒಪ್ಪಬೇಕು, ಧರ್ಮದ ಸಮ್ಮತಿ ಇರಬೇಕು. ಕೈಹಿಡಿದು ಮುನ್ನಡೆಸಲು ಸದ್ಗುರುಗಳಿರಬೇಕು. ಹೀಗೆ ಸದ್ವಿಚಾರದಿಂದ ಕೂಡಿದ ಸಂಚಾರವೇ ಸಾರ್ಥಕ ಜೀವನದ ಪಯಣ. ಇಂತಹ ಸತ್ಯ ಧರ್ಮಗಳಿಂದ ಕೂಡಿದ ದಾರಿಯಲ್ಲಿ ಸಮಸ್ತ ವಿಶ್ವವನ್ನು ನಡೆಸಿ ಇಂದಿಗೂ ಎಲ್ಲ ಭಕ್ತರಿಗೆ ಸಾರ್ಥಕಜೀವನದಲ್ಲಿ ಮನ್ನಡೆಸುತ್ತಿರುವವರು ಕರುಣಾಮಯಿಗಳಾದ ʻಸತ್ಯಧರ್ಮರತಾಯ ಚʼ ಎನಿಸಿದ ಶ್ರೀ ರಾಘವೇಂದ್ರತೀರ್ಥರು.

ಜನಿಸಿದ್ದಕ್ಕಾಗಿ ಕೇವಲ ತಿಂದುಂಡು ಬದುಕಿದರೆ ಅದು ಪ್ರಕೃತಿ. ಕಂಡ ಕಂಡಂತೆ ಬದುಕಿದರೆ ಅದು ವಿಕೃತಿ. ಆದರೆ ರಾಯರು ತೋರಿದ ಸತ್ಯ-ಧರ್ಮದಿಂದ ಬದುಕಿದರೆ ಅದೇ ಸುಸಂಸ್ಕೃತಿ. ಹರಿಪಾದಕಂಜನಿಷೇವಣಾಲ್ಲಬ್ಧಸಮಸ್ತಸಂಪತ್ – ಶ್ರೀಹರಿಯ ಕರುಣೆಯಿಂದ ಪಡೆದ ಪುಣ್ಯದ ರಾಶಿಯನ್ನು ಇಂದಿಗೂ ಜಗತ್ತಿಗೆ ಹಂಚುತ್ತಿದ್ದಾರೆ. ಹೀಗೆ ಪಡೆದದ್ದನ್ನು ಹಂಚುವ ಧರ್ಮವನ್ನು ತಾವು ಮಾಡಿ, ಮಾಡಿರಿ ಎಂಬುದನ್ನು ಜಗತ್ತಿಗೆ ಸಾರುತ್ತಿದ್ದಾರೆ. ಸ್ವಯಂ ಬೆಳೆದು ಬೆಳೆಸುವುದನ್ನು ಕಲಿಸಿದರು. ಸಮಾಜಕ್ಕೆ ಬದುಕುವ ಬಗೆಯನ್ನು ತೋರಿದವರು ರಾಯರು.

ತ್ರಿವಿಕ್ರಮ ಪಂಡಿತಾಚಾರ್ಯರು ಶ್ರೀಮನ್ಮಧ್ವಾಚಾರ್ಯರಲ್ಲಿ ಅನಂತಗುಣಗಳನ್ನು ಕಂಡರೂ ಅವುಗಳಲ್ಲಿ ಅತಿಶ್ರೇಷ್ಠಗುಣ ವಿಷ್ಣ್ವಂಗ್ರಿನಿಷ್ಠಾ- ವಿಷ್ಣುಭಕ್ತಿ-ವಿಷ್ಣುನಿಷ್ಠೆ ಎನ್ನುತ್ತಾರೆ. ಹಾಗೆಯೇ ಅಪ್ಪಣ್ಣಾಚಾರ್ಯರ ದೃಷ್ಟಿಯಲ್ಲಿ ರಾಯರ ಗುಣಗಳ ಭವ್ಯಮುಖವೊಂದಿದೆ. ಅದರಲ್ಲಿ ಅತಿಶ್ರೇಷ್ಠವಾಗಿ ಕಂಡು ವರ್ಣಿಸಿದ್ದು ಸರ್ವ ವಿದ್ಯಾ ಪ್ರವೀಣೋನ್ಯೋ ರಾಘವೇಂದ್ರಾನ್ನ ವಿದ್ಯತೇ ಎಂದು. ಶ್ರೀರಾಯರ ಅಪ್ರತಿಮ ಮೇರು ವಿನಂತಹ ವಿದ್ವತ್ತು ಮಿಕ್ಕೆಲ್ಲ ಗುಣಗಳಿಂದಲೂ ಮಹಾವಿಶೇಷ ಎಂದಿರುವರು. ಇದು ಸರ್ವತೋಮುಖರಾದ ರಾಯರ ಮಹಾಮುಖ.

50ಕ್ಕೂ ಹೆಚ್ಚು ಕೃತಿಗಳ ರಚನೆ

ಬ್ರಹ್ಮಸೂತ್ರಗಳ ಅಧ್ಯಯನಕ್ಕೆ ʻತಂತ್ರದೀಪಿಕಾʼ, ಭಗವದ್ಗೀತೆಯ ಅಧ್ಯಯನಕ್ಕಾಗಿ ʻಗೀತಾವಿವೃತಿʼ ರಚಿಸುವುದರ ಮೂಲಕ ವೇದವ್ಯಾಸರ ಹೃದಯಾಂತರ್ಯವನ್ನು ಹೊರಹಾಕಿದರು. ಶ್ರೀಮಧ್ವರ ಅಣುಭಾಷ್ಯಕ್ಕೆ ʻತತ್ವಮಂಜರೀʼ. ಹೀಗೆ ಬ್ರಹ್ಮಸೂತ್ರಗಳಿಗೆ ಸಂಬಂಧಿಸಿ ಒಟ್ಟಾರ ಏಳು ಗ್ರಂಥಗಳನ್ನು ರಚಿಸಿದ್ದಾರೆ. ಶ್ರೀಮಜ್ಜಯತೀರ್ಥರ ತತ್ವಪ್ರಕಾಶಿಕಾಕ್ಕೆ ʻಭಾವದೀಪʼ ಮತ್ತು ಶ್ರೀಮನ್ನ್ಯಾಯಸುಧಾಕ್ಕೆ ಪರಿಮಳ. ಶ್ರೀವ್ಯಾಸರಾಜರ ಚಂದ್ರಿಕಾಗ್ರಂಥಕ್ಕೆ ರಾಯರ ʻಚಂದ್ರಿಕಾ ಪ್ರಕಾಶ ವ್ಯಾಖ್ಯಾನʼ.

ಅತಿವಿಸ್ತಾರವಾದ ಶ್ರೀಕೃಷ್ಣನ ಕಥೆಯನ್ನು 28 ಶ್ಲೋಕದ ಕೃಷ್ಣಚಾರಿತ್ರ್ಯಮಂಜರಿಯಲ್ಲಿ, ರಾಮಾಯಣದ ಸಾರವನ್ನು 11 ಶ್ಲೋಕಗಳಲ್ಲಿ ರಾಮಚಾರಿತ್ರ್ಯಮಂಜರಿಯಲ್ಲಿ ಸಂಗ್ರಹಿಸಿದ್ದಾರೆ. ಐದುಸಾವಿರ ಶ್ಲೋಕಗಳ ಶ್ರೀಮಧ್ವರ ಮಹಾ ಭಾರತತಾತ್ಪರ್ಯ ನಿರ್ಣಯದ ಎಲ್ಲ ವಿಷಯಗಳನ್ನು 32 ಶ್ಲೋಕದ ತಾತ್ಪರ್ಯ ನಿರ್ಣಯ ಭಾವಸಂಗ್ರಹದಲ್ಲಿ ನಿರೂಪಿಸಿದ್ದಾರೆ. ಪ್ರಾತಃಸಂಕಲ್ಪಗದ್ಯ, ಸರ್ವಸಮರ್ಪಣಗದ್ಯ, ಭಗವದ್ಧ್ಯಾನ ಮೊದಲಾದ ಕೃತಿಗಳಲ್ಲಿ ಅಪಾರಪ್ರಮೇಯಗಳನ್ನು ಸಂಗ್ರಹಿಸಿದ್ದಾರೆ. ಹತ್ತೂ ಪ್ರಕರಣಗ್ರಂಥಗಳಿಗೆ ಟಿಪ್ಪಣಿ ರಚಿಸಿದ್ದಾರೆ. ಮೂರೂ ವೇದಗಳಿಗೂ ವ್ಯಾಖ್ಯಾನ ಮಾಡಿದ್ದಾರೆ. ಪುರುಷಸೂಕ್ತಮೊದಲಾದ ಐದು ಸೂಕ್ತಗಳಿಗೆ ವ್ಯಾಖ್ಯಾನರಚಿಸಿದ್ದಾರೆ. ಭಾಟ್ಟಸಂಗ್ರಹವೆಂಬ ವ್ಯಾಖ್ಯಾನವನ್ನು ಜೈಮಿನಗಳ ಸೂತ್ರಕ್ಕೆ ರಚಿಸಿದ್ದಾರೆ. ದಾಸಸಾಹಿತ್ಯದಲ್ಲಿಯೂ ಅನೇಕ ಪದ್ಯಗಳನ್ನು ರಚಿಸಿದ್ದಾರೆ.

ಹೀಗೆ ಅಧ್ಯಾತ್ಮಿಕವಾಙ್ಮಯಪ್ರಪಂಚವನ್ನು ಶ್ರೀಮಂತಗೊಳಿಸಿದವರು ರಾಯರು. ಶ್ರೀಮಧ್ವರ, ಜಯತೀರ್ಥರ ಕೃತಿಗಳ ಬಗ್ಗೆ, ಮಾತುಗಳ ಬಗ್ಗೆ ಅಂದಿನವರು ಇಂದಿನವರು ಮುಂದಿನವರು ಎಂದಿಗೂ ಆಕ್ಷೇಪ ಎತ್ತದಂದೆ ಭದ್ರಬುನಾದಿ ಹಾಕಿದ್ದಾರೆ. ಇದುವೇ ಅವರ ಗ್ರಂಥಗಳ ಗುರಿ ಎಂದು ತೋರಿಸಿದ್ದಾರೆ. ಆದ್ದರಿಂದಲೇ ಅವರನ್ನು ಶ್ರೀಮಧ್ವಮತ ವರ್ಧನಃ ಎಂದು ಕರೆದಿದ್ದಾರೆ. ವೇದವ್ಯಾಸರ ಶ್ರೀಮನ್ಮಧ್ವಾಚಾರ್ಯರ ಜಯತೀರ್ಥರ ಗ್ರಂಥಗಳ ಗಾಂಭೀರ್ಯವನ್ನು ಸುಲಭವಾಗಿ ತಿಳಿಸುವ ಶೈಲಿ ರಾಯರದ್ದು.

ಮನುಷ್ಯನ ಜೀವನದ ಎಲ್ಲವಿಧ ಸಮಸ್ಯೆಗಳಿಗೆ ಪರಹಾರ ದೊರೆಯುವುದು ಯಾವ ಸಂಪತ್ತು ಅಧಿಕಾರ ವಿಜ್ಞಾನದಿಂದಲ್ಲ. ಕೇವಲ ಸತ್ಯ-ಧರ್ಮದಿಂದ ಕೂಡಿ ಶ್ರೀಹರಿಯಲ್ಲಿ ಆಚರಿತರಾದರೆ ಮಾತ್ರ ಎಲ್ಲದಕ್ಕೂ ಪರಿಹಾರ. ಇದುವೇ ಮಧ್ವಮತದ ಸತ್ಯ-ಧರ್ಮ. ಇದನ್ನು ಜಗತ್ತಿಗೆ ಸಾರಿದವರೆ ಸತ್ಯಧರ್ಮರತರಾದ ಶ್ರೀರಾಘವೇಂದ್ರ ತೀರ್ಥರು. ಅಪೌರುಷೇಯವಾದ ನಿತ್ಯ ಉತ್ತಮವಾದ ವೇದಗಳು ಪರವಿದ್ಯೆ ಎನಿಸಿದ ಬ್ರಹ್ಮಸೂತ್ರಗಳು ಜಗನ್ಮಾನ್ಯತೆಯನ್ನು ಹೊಂದಿದ ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತಾದಿಗಳು. ಇವೇ ಸತ್ಯವಾದ ಧರ್ಮಗಳು. ರಾಯರು ಸದಾ ಇವುಗಳಲ್ಲಿಯೇ ನಿರತರು. ಆದ್ದರಿಂದಲೇ ಅವರು ಸತ್ಯಧರ್ಮರತರು. ಸರ್ವಮೂಲಗಳಲ್ಲಿ ಸದಾ ನಿರತರು. ಶ್ರೀಹರಿಯಲ್ಲಿಯೇ ಸದಾ ಸ್ಥಿರರು.

Sri Raghavendra Swami Vardhanti celebration

ವೆಂಕಟನಾಥರು ಹುಟ್ಟಿದ್ದೇ ಗುರುವಾರ!

ತಿಮ್ಮಣ್ಣಭಟ್ಟರು ಹಾಗು ಗೋಪಿಕಾಂಬೆ ದಂಪತಿಗಳಲ್ಲಿ 1595 ಫಾಲ್ಗುಣಶುದ್ಧ ಸಪ್ತಮೀಯಂದು ಜನಿಸಿದರು. ಅಂದು ಗುರುವಾರವಾಗಿತ್ತು. ತಿರುಪತಿಯ ವೇಂಕಟೇಶದೇವರ ಸೇವಾಫಲವಾಗಿ ಜನಿಸಿದ್ದರಿಂದ ಇವರಿಗೆ ವೇಂಕಟನಾಥ ಎಂದು ಕರೆದರು. ವೇಂಕಟನಾಥರಿಗೆ ಗುರುರಾಜರೆಂಬ ಅಣ್ಣ ವೇಂಕಟಾಂಬೆ ಎಂಬ ಅಕ್ಕ ಇದ್ದರು. ತಂದೆ ತಿಮ್ಮಣ್ಣಭಟ್ಟರು ಬೇಗನೆ ಕಾಲವಾಗಿದ್ದರಿಂದ ಅಣ್ಣ ಗುರುರಾಜರೇ ಸಂಸಾರದ ಎಲ್ಲ ಜವಾಬ್ದಾರಿಯನ್ನು ಹೊತ್ತರು. ವೇಂಕಟನಾಥರು ತಮ್ಮ ಅಕ್ಕನ ಪತಿಯಾದ ಲಕ್ಷ್ಮೀನರಸಿಂಹಾಚಾರ್ಯರಲ್ಲಿ ಪ್ರಾರಂಭಿಕ ಶಾಸ್ತ್ರಾಧ್ಯಯನ ಮಾಡಿದರು. ಬಾಲ್ಯದಲ್ಲಿಯೇ ಬಹುತೀಕ್ಷ್ಣಬುದ್ಧಿಯವರಾದ್ದರಿಂದ ಎಲ್ಲ ಶಾಸ್ತ್ರಗಳಲ್ಲಿ ಪ್ರಾವೀಣ್ಯತೆ ಪಡೆದರು. ನಂತರ ಶ್ರೀಸುಧೀಂದ್ರತೀರ್ಥರಲ್ಲಿ ಮುಂದಿನ ಶಾಸ್ತ್ರಾಭ್ಯಾಸ ಮಾಡಿದರು. ಸರಸ್ವತೀ ಎಂಬ ಕನ್ಯೆಯೊಡನೆ ವಿವಾಹವಾಯಿತು.

ಒಮ್ಮೆ ಒಂದು ಸಮಾರಂಭಕ್ಕೆ ಹೋದಾಗ ಅಲ್ಲಿ ವೇಂಕಟನಾಥರಿಗೆ ಅವಮಾನಿಸಿ ಮೂಲೆಯಲ್ಲಿ ಕುಳಿತು ಗಂಧವನ್ನು ತೇಯುವ ಕೆಲಸವನ್ನಿತ್ತರು. ಅವರು ಅದನ್ನೂ ಶ್ರದ್ಧೆಯಿಂದ ಅಗ್ನಿ ಸೂಕ್ತಪಾರಾಯಣ ಮಾಡುತ್ತ ತೇಯ್ದರು. ಅವರ ಮಂತ್ರಶಕ್ತಿ ಎಷ್ಟು ಪ್ರಾಮಾಣಿಕ ಮತ್ತು ಪ್ರಭಾವಶಾಲಿ ಎಂದರೆ ಗಂಧಲೇಪಿಸಕೋಂಡ ಎಲ್ಲರಿಗೂ ಮೈಯೆಲ್ಲ ಉರಿ ಶುರುವಾಯಿತು. ನಂತರ ಎಲ್ಲರಿಗಾಗಿ ಪ್ರಾರ್ಥಿಸಿ ವರುಣಸೂಕ್ತಪಠಿಸಿ ಆ ಉರಿಯನ್ನು ಶಮನಗೊಳಿಸಿದ ಮಹಾನುಭಾವರು ವೇಂಕಟನಾಥರು.

ಶ್ರೀಸುಧೀಂದ್ರತೀರ್ಥರಿಗೆ ವೇಂಕಟನಾಥರನ್ನೇ ತಮ್ಮ ಉತ್ತರಾಧಿಕಾರಿಗಳಾಗಿ ನೇಮಿಸಿಕೊಳ್ಳಬೇಕೆಂಬ ಬಲವಾದ ಪ್ರೇರಣೆ. ಅದನ್ನು ಸೂಚಿಸಿದಾಗ ವೇಂಕಟನಾಥರು ಗ್ರಹಸ್ಥಜೀವನದ ಜವಾಬ್ದಾರಿಯನ್ನು ಮುಂದೆಮಾಡಿ ವಿನಮ್ರವಾಗಿ ನಿರಾಕರಿಸಿದರು. ಆದರೂ ಗುರು ಸುಧೀಂದ್ರತೀರ್ಥರ ಸಂಕಲ್ಪ ಬಲವಾಗಿತ್ತು. ರಾತ್ರಿ ನಿದ್ದೆಗೈದಾಗ ವೇಂಕಟನಾಥರ ಸ್ವಪ್ನದಲ್ಲಿ ಸಾಕ್ಷಾತ್ ವಾಯುಪತ್ನಿ ವಾಗ್ದೇವಿ ದ್ವೈತಮತಸಾಮ್ರಾಜ್ಯದ ರಕ್ಷಣೆಯ ಭಾರಹೊತ್ತು ಸಂನ್ಯಾಸಾಶ್ರಮವನ್ನು ಪಡೆದು ನನ್ನ ಸೇವೆಯನ್ನು ಮಾಡು ಎಂದು ಆಜ್ಞಾಪಿಸಿದಳು. ನಂತರ 1621 ದುರ್ಮತಿ ನಾಮಸಂವತ್ಸರ ಫಾಲ್ಗುಣಶುದ್ಧ ಬಿದಿಗೆಯಂದು ತಮಿಳುನಾಡಿನ ತಂಜಾವೂರಿನಲ್ಲಿ ಶ್ರೀಸುಧೀಂದ್ರತೀರ್ಥ ಕರಕಮಲ ಸಂಜಾತರಾಗಿ ಜಗತ್ತಿಗೆ ಶ್ರೀರಾಘವೇಂದ್ರತೀರ್ಥರಾಗಿ ಹೊರಹೊಮ್ಮಿದರು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ರಾಯರು ಮಾಡಿದ್ದು ಪವಾಡವಲ್ಲ,ಉದ್ಧಾರ!

ರಾಯರನ್ನು ಕೇವಲ ಪವಾಡಪುರುಷರು ಎಂದು ಕರೆಯುವುದು ಒಂದು ರೀತಿಯ ಅಪರಾಧವೇ ಸರಿ. ಅವರು ಮಾಡಿದ್ದು ಕೇವಲ ಪವಾಡಗಳಲ್ಲ. ನಂಬಿಬಂದ ಭಕ್ತರ ಉದ್ಧಾರಮಾಡಿ ತೋರಿದ ಅಪಾರ ಕಾರುಣ್ಯ. ತಾವು ಮಾಡಿದ ತಪಸ್ಸನ್ನು ವಿಶ್ವದೆಲ್ಲೆಡೆ ಭಕ್ತರ ಉದ್ಧಾರಕ್ಕಾಗಿ ಹಂಚುತ್ತಿರುವ ಮಹಾಮಹಿಮರು.

ಅವರ ವಿದ್ಯಾರ್ಥಿಶಿಷ್ಯನೊಬ್ಬ ಮನೆಯ ಕಷ್ಟಕ್ಕಾಗಿ ಅನುಗ್ರಹಿಸಬೇಕೆಂದು ರಾಯರಿಂದ ಮಂತ್ರಾಕ್ಷತೆಯನ್ನು ಪಡೆದು ಊರಿಗೆ ಹೊರಟಿದ್ದ. ದಾರಿಯಲ್ಲಿ ರಾತ್ರಿ ಒಂದು ಊರಿನಲ್ಲಿ ಒಬ್ಬರ ಮನೆಯ ಹೊರಾಂಗಣದಲ್ಲಿ ಮಲಗಿದ. ಅದೊಂದು ಪಿಶಾಚಬಾಧೆಯಿಂದ ಕೂಡಿದ ಮನೆ. ಮನೆಯಲ್ಲಿ ಗರ್ಭಿಣಿ. ಆಕೆಯ ಗರ್ಭದಲ್ಲಿರುವ ಮಗುವನ್ನು ಕೊಲ್ಲಬೇಕೆಂದು ಪಿಶಾಚಿ ಬಂದಾಗ, ಅಂಗಳದಿಂದ ಒಳಗೆ ಹೋಗಲಾಗಲಿಲ್ಲ. ಅಲ್ಲಿರುವ ಆ ಗುರುಗಳ ಮಂತ್ರಾಕ್ಷತೆಯು ಬೆಂಕಿಯಂತೆ ಕಾಣುತ್ತಿತ್ತು. ತಕ್ಷಣದಲ್ಲಿಯೇ ಶಿಷ್ಯ ಎದ್ದು ಗಾಬರಿಯಿಂದ ರಾಯರು ಕೋಟ್ಟ ಮಂತ್ರಾಕ್ಷತೆಯನ್ನು ಪಿಶಾಚಿ ಮೇಲೆ ಎಸೆದಾಗ ಅದು ಅಲ್ಲಿಯೇ ಭಸ್ಮವಾಗಿ ಹೋಯಿತು. ಹೀಗೆ ರಾಯರ ಮಂತ್ರಾಕ್ಷತೆಯ ಅಸಂಖ್ಯ ಮಹಿಮೆಗಳು ಇಂದಿಗೂ ನಡೆಯುತ್ತಿವೆ.

ರಾಯಚೂರು ಗ್ರಾಮದಲ್ಲಿ ಒಬ್ಬ ಬಡ ಅನಕ್ಷರಸ್ಥ ಬ್ರಾಹ್ಮಣ ವೆಂಕಣ್ಣ. ಒಮ್ಮೆ ರಾಯರ ಮಹಿಮೆಯನ್ನು ಕೇಳಿದ ವೆಂಕಣ್ಣ ಅವರ ಬಳಿಬಂದು ತನಗೆ ಏನೂ ಬರುವದಿಲ್ಲ ಕೇವಲ ದನಕಾಯುವೆ. ನನಗೆ ಅನುಗ್ರಹಿಸಿ ಎಂದು ಪ್ರಾರ್ಥಿಸಿದ. ರಾಯರು ಒಂದು ಮುಷ್ಟಿ ಮಂತ್ರಾಕ್ಷತೆಯನ್ನು ನೀಡಿ ಕಷ್ಟಬಂದಾಗ ನನ್ನನ್ನು ಸ್ಮರಿಸು ಎಂದು ಹೇಳಿದ್ದರು. ಮುಂದೊಮ್ಮೆ ನವಾಬ್ ಆದಿಲ್ ಶಾಹ್ ನ ಕಂದಾಯ ವಸೂಲಿಗನಾದ ಸಿದ್ಧ ಮಸೂದ್ ಎಂಬುವನಿಗೆ ಒಂದು ಮುಖ್ಯವಾದ ಪತ್ರವನ್ನು ಓದಬೇಕಿತ್ತು. ಏಕೆಂದರೆ ಅವನಿಗೆ ಕನ್ನಡ ಓದಲು ಬರುತ್ತಿರಲಿಲ್ಲ. ದಾರಿಯಲ್ಲಿ ಹೋಗುತ್ತಿದ್ದಾಗ ದನಕಾಯುವ ಬ್ರಾಹ್ಮಣ ವೆಂಕಣ್ಣ ಕಣ್ಣಿಗೆ ಬಿದ್ದ. ಕೂಡಲೇ ಆ ಪತ್ರವನ್ನು ಓದಲು ಆತನಿಗೆ ಹೇಳಿದ. ಹೆದರಿದ ವೆಂಕಣ್ಣ ನನಗೆ ಓದಲು ಬರುವದಿಲ್ಲವೆಂದಾಗ ಮಸೂದ್ ಕೋಪಗೊಂಡ. ಗಾಬರಿಗೊಂಡ ವೆಂಕಣ್ಣ ಕಣ್ಣು ಮುಚ್ಚಿ ರಾಯರನ್ನು ಸ್ಮರಿಸಿ ಪ್ರಾರ್ಥಿಸಿದ.

ತಕ್ಷಣವೇ ಚಮತ್ಕಾರ. ಓದಲು ಬಾರದ ವೆಂಕಣ್ಣ ಪತ್ರವನ್ನು ಓದಿ ತಿಳಿಸಿ ಅದರಲ್ಲಿರುವ ಸಮಸ್ಯೆಗಳನ್ನೂ ಪರಿಹರಿಸಿದ. ಅಷ್ಟೇ ಅಲ್ಲದೇ ರಾಯರ ಅನುಗ್ರಹದಿಂದ ಮುಂದೆ ದೊಡ್ಡ ವಿದ್ವಾಂಸನಾದ. ಅಸತುಲ್ಲಾ ಖಾನ್ ಎಂಬ ನವಾಬನ ಆಸ್ಥಾನದಲ್ಲಿ ವೆಂಕಣ್ಣ ದಿವಾನನಾದ. ವೆಂಕಣ್ಣನು ಮುಂದೆ ರಾಯರ ಅನನ್ಯ ಸೇವೆಯನ್ನು ಮಾಡಿದ. ರಾಯರನ್ನು ಪರೀಕ್ಷಿಸಲೆಂದು ನಾಸ್ತಿಕ ನವಾಬ ರಾಯರ ಮುಂದೆ ಮಾಂಸದ ತಟ್ಟೆಯನ್ನು ತಂದಿಟ್ಟಾಗ ರಾಯರು ನಸು ನಗುತ್ತಾ ತಮ್ಮ ದೃಷ್ಟಿಮಾತ್ರದಿಂದ ಅದನ್ನೆಲ್ಲ ಹಣ್ಣುಗಳನ್ನಾಗಿ ಪರಿವರ್ತಿಸಿದ ಘಟನೆ ನಡೆದಿತ್ತು. ಆಗ ಪಶ್ಚಾತ್ತಾಪಕ್ಕೊಳಗಾದ ನವಾಬ ರಾಯರ ಅನನ್ಯಭಕ್ತನಾಗಿ ಶರಣಾಗುತ್ತಾನೆ.

ಗದುಗಿನ ಸಮೀಪದ ಗ್ರಾಮವೊಂದರಲ್ಲಿ ದೇಸಾಯಿ ದಂಪತಿಗಳ ಮನೆಯಲ್ಲಿ ರಾಯರ ಸಂಸ್ಥಾನ ಪೂಜೆ. ಈ ಮಧ್ಯದಲ್ಲಿ ದೇಸಾಯಿಯವರ ಮಗ ಆಟವಾಡುತ್ತ, ಬಂದಭಕ್ತರಿಗಾಗಿ ಸಿದ್ಧಪಡಿಸಿದ ಮಾವಿನ ಹಣ್ಣಿನ ರಸಾಯನದಲ್ಲಿ ಬಿದ್ದು ಮೃತನಾಗುತ್ತಾನೆ. ಆ ಬಾಲಕನಿಗೆ ತಮ್ಮ ತಪಃಶಕ್ತಿಯಿಂದ ಮರುಜನ್ಮವಿತ್ತು ಉದ್ಧರಿಸುತ್ತಾರೆ ರಾಯರು.

Sri Raghavendra Swami Vardhanti celebration

ಹೀಗೆ ಒಂದೇ ಎರಡೇ ಅಸಂಖ್ಯಾತ ಭಕ್ತರಕಷ್ಟಗಳನ್ನು ಇಂದಿಗೂ ಪರಿಹರಿಸುತ್ತಲಿದ್ದಾರೆ. ಅವರ ಮಹಿಮೆಗಳ ವರ್ಣನೆ ಮಾಡಲು ಪ್ರಯತ್ನಿಸಿದರೆ ಪದಗಳ ಸಮುದ್ರವೇ ಬತ್ತಿಹೋಗವುದು. ಆದರೂ ರಾಯರ ಲೋಕೋದ್ಧಾರ ಮಹಿಮೆಗಳು ಎಂದಿಗೂ ಮುಗಿಯುವದಿಲ್ಲ. ಭಕ್ತರ ಕಣ್ಣಿಗೆ ಅಗೋಚರರಾಗಿದ್ದರೂ, ಕಲ್ಲಿನ ಕವಚ ತೋಟ್ಟು ತಮ್ಮ ಹರಿಪಾದೋದಕದ ಅಮೃತದಂತಿರುವ ಪುಣ್ಯದ ಕಲಶದಿಂದ, ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ದೂರಮಾಡಿ ಎಲ್ಲರಲ್ಲೂ ಧರ್ಮದ ಬೀಜ ಬಿತ್ತುತ್ತಿದ್ದಾರೆ. ದೇವದೂತರಾಗಿ ಇಂದಿಗೂ ಕಲ್ಪವೃಕ್ಷ ಕಾಮಧೇನು ಆಗಿದ್ದಾರೆ.

ತವ ಸಂಕೀರ್ತನಂ ವೇದಶಾಸ್ತ್ರಾರ್ಥಜ್ಞಾನಸಿದ್ಧಯೇ ಎಂದು ಅಪ್ಪಣ್ಣಾಚಾರ್ಯರು ಹೇಳಿದಂತೆ ವೇದಶಾಸ್ತ್ರಗಳ ಜ್ಞಾನಸಿದ್ಧಿಗಾಗಿಯೇ ರಾಯರ ಸ್ಮರಣೆ, ಸೇವೆ, ಸಂಕೀರ್ತನೆ. ಅವರ ಸ್ಮರಣೆಯ ಮುಖ್ಯಪ್ರಯೋಜನವೇ ಶಾಸ್ತ್ರಾರ್ಥಗಳ ಜ್ಞಾನ. ಇಂದು ಇಂತಹ ಮಧ್ವಮತದ ಮಹಾಗುರು ವಿಶ್ವಸಂತರೆನಿಸಿದ ಶ್ರೀರಾಘವೇಂದ್ರಸ್ವಾಮಿಗಳ ವರ್ಧಂತಿ. ಅವರಿಗೆ ಅನಂತ ಪ್ರಣಾಮಗಳು.

ಇದನ್ನೂ ಓದಿ | ತಾತಯ್ಯ ತತ್ವಾಮೃತಂ : ಯೋಗಿ ಎಂದರೆ ಯಾರು? ಉತ್ತಮ ಯೋಗಿಯ ಲಕ್ಷಣಗಳೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Tirupati Temple: ತಿರುಪತಿಯ ಆಗಸ್ಟ್ ತಿಂಗಳ ಟಿಕೆಟ್ ವೇಳಾಪಟ್ಟಿ ಬಿಡುಗಡೆ: ಹೀಗೆ ಬುಕ್‌ ಮಾಡಿ

Tirupati Temple: ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ ಬಿಡುಗಡೆ ಮಾಡಿದೆ. ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

VISTARANEWS.COM


on

Tirupathi Temple
Koo

ತಿರುಪತಿ: ದೇಶದ ಪ್ರಸಿದ್ಧ ಯಾತ್ರಾ ಸ್ಥಳ ತಿರುಮಲ ತಿರುಪತಿ ದೇವಸ್ಥಾನ(Tirupati Temple)ಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ (TTD) ಬಿಡುಗಡೆ ಮಾಡಿದೆ. ಹೀಗಾಗಿ ಆಗಸ್ಟ್‌ನಲ್ಲಿ ತಿರುಪತಿಗೆ ಭೇಟಿ ನೀಡಲು ಬಯಸುವ ಭಕ್ತರು ಈ ಪಟ್ಟಿಯನ್ನು ಗಮನಿಸಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

ಶ್ರೀವಾರಿ ದೇವಸ್ಥಾನದಲ್ಲಿ ವಾರ್ಷಿಕ ಪವಿತ್ರೋತ್ಸವ ಆಗಸ್ಟ್ 15ರಿಂದ 17ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಸುವ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪಾಲಂಕರ ಸೇವೆ, ವಾರ್ಷಿಕ ಪವಿತ್ರೋತ್ಸವ ಸೇವಾ ಟಿಕೆಟ್‌ಗಳನ್ನು ಮೇ 21ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಮಾತ್ರವಲ್ಲ ತಿರುಮಲ ಶ್ರೀವಾರಿ ವರ್ಚುವಲ್ ಸೇವೆಗಳಿಗೆ ಸಂಬಂಧಿಸಿದ ಆಗಸ್ಟ್ ತಿಂಗಳ ಕೋಟಾ ಮತ್ತು ಅವುಗಳ ಸ್ಲಾಟ್‌ಗಳನ್ನು ಮೇ 21ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಲಭ್ಯ. ಜತೆಗೆ ಆಗಸ್ಟ್‌ನ ಅಂಗಪ್ರದಕ್ಷಿಣಂ ಟೋಕನ್‌ಗಳ ಕೋಟಾವನ್ನು ಮೇ 23ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಚೇತನರು, ವೃದ್ಧರಿಗಾಗಿ ವಿಶೇಷ ಕೋಟಾ

ವೃದ್ಧರು, ವಿಶೇಷ ಚೇತನರು ಮತ್ತು ದೀರ್ಘಕಾಲದ ಕಾಯಿಲೆ ಇರುವವರಿಗೆ ನೀಡಲಾಗುವ ಆಗಸ್ಟ್‌ನ ಉಚಿತ ವಿಶೇಷ ದರ್ಶನ ಟಿಕೆಟ್‌ಗಳು ಮೇ 23ರಂದು ಮಧ್ಯಾಹ್ನ 3 ಗಂಟೆಯಿಂದ ಆನ್‌ಲೈನ್‌ನಲ್ಲಿ ಲಭಿಸಲಿದೆ. ಮೇ 24ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಆಗಸ್ಟ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಪ್ರಕಟಿಸಲಿದೆ. ಜತೆಗೆ ತಿರುಮಲ ಮತ್ತು ತಿರುಪತಿಯಲ್ಲಿ ಆಗಸ್ಟ್ ರೂಮ್ ಕೋಟಾವನ್ನು ಮೇ 24 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಟಿಕೆಟ್‌ ಬುಕ್‌ ಮಾಡುವ ವಿಧಾನ

  • ತಿರುಮಲ ತಿರುಪತಿ ದೇವಸ್ಥಾನಗಳ ದರ್ಶನ ಟಿಕೆಟ್ ಬುಕ್ ಮಾಡಲು, ಟಿಟಿಡಿಯ ಅಧಿಕೃತ ಆನ್‌ಲೈನ್ ಬುಕಿಂಗ್ ವೆಬ್‌ಸೈಟ್‌ https://ttdevasthanams.ap.gov.inಗೆ ಭೇಟಿ ನೀಡಿ.
  • ದರ್ಶನ ಪ್ರಕಾರವನ್ನು ಆಯ್ಕೆ ಮಾಡಿಕೊಂಡು ಮೊಬೈಲ್‌ ನಂಬರ್‌ ನೀಡಿ ಲಾಗಿನ್‌ ಆಗಿ.
  • ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ.
  • ಆಲ್‌ನೈಲ್‌ ಮೂಲಕ ಟಿಕೆಟ್‌ ಮೊತ್ತವನ್ನು ಪಾವತಿಸಿ.
  • ನಿಮ್ಮ ಟಿಕೆಟ್‌ ಬುಕ್‌ ಆಗಿರುವ ಬಗ್ಗೆ ಮಾಹಿತಿ ಎಸ್‌ಎಂಎಸ್‌ ಮೂಲಕ ನಿಮಗೆ ರವಾನೆಯಾಗುತ್ತದೆ.

ಇದನ್ನೂ ಓದಿ: Ayodhya: ಅಯೋಧ್ಯೆಯಲ್ಲಿ ಜನದಟ್ಟಣೆ ನಿಭಾಯಿಸುವ ಸಲಹೆ ನೀಡಿದ ತಿರುಪತಿಯ ಎಂಜಿನಿಯರ್‌ಗಳ ತಂಡ

Continue Reading

ಧಾರ್ಮಿಕ

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

ಶ್ರೀ ಶಂಕರರು (Shankara Jayanti 2024) ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡಿದ್ದರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತಿದ್ದರು. ಸಂನ್ಯಾಸಕ್ಕೆ ತಾಯಿಯ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಆಗ ತಾಯಿ ಒಪ್ಪಲೇಬೇಕಾಯಿತು.

VISTARANEWS.COM


on

Shankara Jayanti 2024
Koo

ಶಂಕರಾಚಾರ್ಯರು (Shankara Jayanti 2024) ಜೀವಿಸಿದ್ದು ಕೇವಲ 32 ವರ್ಷ. ಆದರೆ ಅವರು ಸಾಧಿಸಿದ್ದು ಅಪಾರ. ಹಿಂದೂ ಧರ್ಮದ ಏಳಿಗೆಗೆ ಅವರ ಕೊಡುಗೆ ಅಮೂಲ್ಯ. ಶಂಕರರ ಬದುಕಿನ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ.

Adi Shankaracharya Jayanti
  1. ಶ್ರೀ ಶಂಕರರು ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡುಬಿಟ್ಟರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತರು. ಸಾಮಾನ್ಯರಿಗೆ ಒಂದು ವೇದವನ್ನು ಅರ್ಥ ಮಾಡಿಕೊಳ್ಳಲೇ ಹತ್ತಾರು ವರ್ಷಗಳು ಬೇಕು.
  2. ಶಂಕರಾಚಾರ್ಯರು ಜನಿಸಿದ್ದು ಕೇರಳ ಕಾಲಟಿ ಎಂಬ ಪುಟ್ಟ ಗ್ರಾಮದಲ್ಲಿ. ತಂದೆಯನ್ನು ಕಳೆದುಕೊಂಡರು. ತಾಯಿ ಅವರನ್ನು ಬೆಳೆಸಿದರು. ಅವರು ಸಂನ್ಯಾಸ ಸ್ವೀಕರಿಸಲು ಒಂದು ಪುಟ್ಟ ಪವಾಡವನ್ನೇ ಮಾಡಬೇಕಾಯಿತು. ಸಂನ್ಯಾಸಕ್ಕೆ ತಾಯಿ ಆರ್ಯಾಂಬೆಯವರ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಮಗ ಬದುಕುತ್ತಾನಲ್ಲ ಎಂಬ ಭರವಸೆಯೊಂದಿಗೆ ತಾಯಿ ಒಪ್ಪಿದರು.
  3. ಹದಿನಾರು ವರ್ಷ ಪ್ರಾಯ ಆಗುವುದರೊಳಗಾಗಿ ಅವರು ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯವನ್ನು ರಚಿಸಿದರು. ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು.
  4. ಭಾರತದಾದ್ಯಂತ ‘ದಿಗ್ವಿಜಯ ಯಾತ್ರೆʼ ಕೈಗೊಂಡರು. ವೇದವಿರೋಧಿಗಳನ್ನು ವಾಗ್ವಾದಕ್ಕೆ ಕರೆದರು. ಏಕಾಂಗಿಯಾಗಿ ಚರ್ಚೆ, ವಿಚಾರಮಂಡನೆ, ವಾದಗಳ‌ ಮೂಲಕ ಬ್ರಹ್ಮವಾದಕ್ಕೆ ಎಳೆತಂದರು. ದೇಶದುದ್ದಗಲಕ್ಕೂ ಸಂಚರಿಸಿ, ಅಲ್ಲಿಯ ವಿದ್ವಾಂಸರನ್ನು, ಜನರನ್ನು, ರಾಜರನ್ನು ವೈದಿಕತೆಗೆ ತಂದರು.
  5. ಆರು ಮತಗಳನ್ನು ಖಂಡಿಸಿ ತಮ್ಮ ಮತವನ್ನು ಸ್ಥಾಪಿಸಿದ ಪರಿಣಾಮ ಅವರನ್ನು ‘ಷಣ್ಮತ ಖಂಡನಾಚಾರ್ಯ’ ಮತ್ತು ಷಣ್ಮತ ಪ್ರತಿಷ್ಠಾಪನಾಚಾರ್ಯ’ ಎಂದು ಕರೆಯಲಾಯಿತು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು.
  6. ಧರ್ಮವನ್ನು ಉಳಿಸಿ ಬೆಳೆಸುವ ಉದ್ದೇಶಕ್ಕಾಗಿ ಮಠಗಳ ಪರಿಕಲ್ಪನೆಯನ್ನು ತಂದರು. ಮಠ ಮತ್ತು ಯತಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂಬ ಆಶಯ ಅವರದಾಗಿತ್ತು. ದೇಶದ ಉದ್ದಗಲಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಮುಖ್ಯವಾದದ್ದು ಶೃಂಗೇರಿಯ ಮಠ. ಇತರವು ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಬದರೀನಾಥ, ಕಂಚಿಯ ಕಾಮಕೋಟಿಗಳಲ್ಲಿವೆ.
  7. ಸೂರ್ಯ- ಗಣಪತಿ- ಅಂಬಿಕಾ- ಶಿವ- ವಿಷ್ಣುಗಳನ್ನು ಪೂಜಿಸುವ ಪಂಚಾಯತನ ಪೂಜೆಯನ್ನು ತಂದರು. ಈ ದೇವತೆಗಳನ್ನು ಭಾರತದ ಐದು ಕಡೆಗಳಲ್ಲಿ ಸಿಗುವ ಸ್ಫಟಿಕ, ಶೋಣಾಭದ್ರ, ಸ್ವರ್ಣಮುಖಿ, ಬಾಣಲಿಂಗ, ಸಾಲಿಗ್ರಾಮ ಎಂಬ ಕಲ್ಲಿನ ಮೂಲಕ ಪೂಜಿಸಲಾಗುತ್ತದೆ.
  8. ಮೂವತ್ತೆರಡು ವರ್ಷಗಳಲ್ಲಿ ಹಲವು ಮನುಷ್ಯರು ಸೇರಿ ಹಲವು ಜನ್ಮಗಳಲ್ಲಿ ಮಾಡುವಷ್ಟು ಕೆಲಸವನ್ನು ಮಾಡಿ ಮುಗಿಸಿದರು. ಭಾಷ್ಯಗಳನ್ನು ಹೊರತುಪಡಿಸಿ ನೂರಾರು ಸ್ತೋತ್ರ – ಸಾಹಿತ್ಯಗಳನ್ನು ರಚಿಸಿದರು.
  9. ಮೂರು ಸೂತ್ರಗಳಲ್ಲಿ ಶ್ರೀ ಶಂಕರರ ಉಪದೇಶವನ್ನು ಸೂತ್ರೀಕರಿಸಬಹುದು- “ಅಹಂ ಬ್ರಹ್ಮಾಸ್ಮಿ” (ನನ್ನೊಳಿರುವ ಆತ್ಮವೇ ಪರಂಬ್ರಹ್ಮ), “ತತ್ ತ್ವಮ್ ಅಸಿ” (ನೀನು ಅದೇ ಆತ್ಮದಿಂದ ಆಗಿರುವೆ) ಮತ್ತು ಜೀವಶ್ಶಿವೋಹಂʼ (ಜೀವನೇ ಶಿವ) ಎಂಬುದು ಅದ್ವೈತ ತತ್ವದ ಮೂಲ ಮಂತ್ರಗಳು. ಇದಲ್ಲದೇ ಪರಮಾತ್ಮ ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ “ಸರ್ವಂ ಬ್ರಹ್ಮಮಯಂ ಜಗತ್” (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ಸಾರಿದರು.
Continue Reading

ಪ್ರಮುಖ ಸುದ್ದಿ

PM Narendra Modi: ವಿಡಿಯೋ ಸಂದೇಶ ಮೂಲಕ ಬಸವೇಶ್ವರ ಜಯಂತಿಗೆ ಶುಭ ಕೋರಿದ ಪಿಎಂ

PM Narendra Modi: ಶತಮಾನಗಳಷ್ಟು ಮೊದಲೇ ಬಸವೇಶ್ವರರು ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯಂಥ ಮಹತ್ವದ ಸಂಗತಿಗಳ ಬಗ್ಗೆ ಸಮಾಜಕ್ಕೆ ಬೋಧಿಸಿದ್ದರು. ನಾವು ಅವರ ವಚನಗಳು- ಆದರ್ಶಗಳನ್ನು ಜಾಗತಿಕವಾಗಿ ಪಸರಿಸಬೇಕು. ಜಗತ್ತನ್ನು ಆ ಮೂಲಕ ಇನ್ನಷ್ಟು ಸುಂದರಗೊಳಿಸೋಣ ಎಂದು ಮೋದಿ ಹೇಳಿದ್ದಾರೆ.

VISTARANEWS.COM


on

pm narendra modi basava jayanti 2024
Koo

ಹೊಸದಿಲ್ಲಿ: ಭಕ್ತಿ ಭಂಡಾರಿ, ಸಮಾಜ ಸುಧಾರಕ, ವಚನ ಚಳವಳಿಯ ಆದ್ಯ ಪೂಜ್ಯ ಶ್ರೀ ಬಸವೇಶ್ವರ ಜಯಂತಿ (Basava Jayanti 2024) ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತಮ್ಮ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸೋಶಿಯಲ್‌ ಮೀಡಿಯಾ (Social media) ಎಕ್ಸ್‌ನಲ್ಲಿ ಪಠ್ಯ ಸಂದೇಶ ಹಾಗೂ ವಿಡಿಯೋ ಸಂದೇಶಗಳೆರಡನ್ನೂ ಅವರು ನೀಡಿದ್ದಾರೆ.

“ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

“ಭಗವಾನ್‌ ಬಸವೇಶ್ವರರ ಸಂದೇಶ ಹಾಗೂ ಅವರ ವಚನಗಳು ನನಗೆ ಹೊಸಹೊಸದಾಗಿ ಕಲಿಸುತ್ತಲೇ ಇರುತ್ತವೆ. ನಾವು ಅವರಿಂದ ಅವರ ದೈವೀಯ ಗುಣವನ್ನೂ ಕಲಿಯಬಹುದು; ಜೊತೆಗೆ ಅವರು ಉತ್ತಮ ಆಡಳಿತಗಾರ, ಸುಧಾರಕನೂ ಹೌದು. ಸಮಾಜ ಸುಧಾರಣೆಯ ಅವರ ಬದುಕು ನಮಗೆ ಪ್ರೇರಣೆಯಾಗುವಂಥದು. ಬಸವಣ್ಣನವರ ವಚನಗಳು ಹಾಗೂ ಸಂದೇಶಗಳು ಆಧ್ಯಾತ್ಮಿಕವೂ ಹೌದು, ಬದುಕಿನ ಪ್ರಾಯೋಗಿಕ ಮಾರ್ಗದರ್ಶಕ ಸೂತ್ರಗಳೂ ಹೌದು” ಎಂದು ಅವರು ಕೊಂಡಾಡಿದ್ದಾರೆ.

“ಅವರ ಉಪದೇಶಗಳು ನಮಗೆ ಉತ್ತಮ ಮಾನವರಾಗುವುದನ್ನು ಕಲಿಸುತ್ತವೆ. ಇನ್ನಷ್ಟು ದಯಾಳು, ಅಧಿಕ ಉದಾರಿ, ಹೆಚ್ಚಿನ ಮಾನವೀಯ ಸಂವೇದನೆಗಳನ್ನು ನಮ್ಮಲ್ಲಿ ತುಂಬುತ್ತದೆ. ಶತಮಾನಗಳಷ್ಟು ಮೊದಲೇ ಬಸವೇಶ್ವರರು ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯಂಥ ಮಹತ್ವದ ಸಂಗತಿಗಳ ಬಗ್ಗೆ ಸಮಾಜಕ್ಕೆ ಬೋಧಿಸಿದ್ದರು. ನಾವು ಅವರ ವಚನಗಳು- ಆದರ್ಶಗಳನ್ನು ಜಾಗತಿಕವಾಗಿ ಪಸರಿಸಬೇಕು. ಜಗತ್ತನ್ನು ಆ ಮೂಲಕ ಇನ್ನಷ್ಟು ಸುಂದರಗೊಳಿಸೋಣ. ಈ ಶುಭಸಂದರ್ಭದಲ್ಲಿ ನಿಮಗೆಲ್ಲರಿಗೂ ಶುಭಕಾಮನೆಗಳು” ಎಂದು ಅವರು ಹಾರೈಸಿದ್ದಾರೆ.

ಇದನ್ನೂ ಓದಿ: Basava Jayanti 2024: ಬದುಕಿನ ಪಾಠ ಕಲಿಸುವ ಬಸವಣ್ಣನ 10 ವಚನಗಳಿವು

Continue Reading

ಪ್ರಮುಖ ಸುದ್ದಿ

Akshaya Tritiya 2024: ಇಂದು ಏನೇನು ಖರೀದಿಸಬಹುದು? ಚಿನ್ನ- ಬೆಳ್ಳಿ ಏಕೆ ಖರೀದಿಸಬೇಕು?

Akshaya Tritiya 2024: ದೇವಸ್ಥಾನಗಳಿಗೆ ಭೇಟಿ ನೀಡುವವರು, ಬಡವರಿಗೆ ಅನ್ನದಾನ ಅಥವಾ ವಿಶೇಷ ಕೊಡುಗೆಗಳನ್ನು ನೀಡುವವರು ಅಥವಾ ಬಡ ಮಕ್ಕಳಿಗೆ ಅವರ ಶಿಕ್ಷಣ ಶುಲ್ಕಕ್ಕಾಗಿ ಸಹಾಯ ಮಾಡುವವರಿಗೂ ಈ ದಿನ ಶುಭಕರ. ಹೀಗಾಗಿ ಚಿನ್ನ ಬೆಳ್ಳಿಗೆ ಸೀಮಿತವಾಗದೆ, ಧಾನ್ಯಗಳನ್ನು ಕೂಡ ಖರೀದಿಸಬಹುದು. ಬಡವರಿಗೆ ದಾನ ಮಾಡುವುದರಿಂದಲೂ ನಿಮ್ಮ ಸಂಪತ್ತು ಅಕ್ಷಯವಾಗುತ್ತದೆ.

VISTARANEWS.COM


on

Akshaya Tritiya 2024
Koo

ಅಕ್ಷಯ ತೃತೀಯ (Akshaya Tritiya 2024) ಅಂದರೆ ಚಿನ್ನ- ಬೆಳ್ಳಿ (gold, silver) ಖರೀದಿಸಬೇಕು ಎಂಬುದು ಸಾಮಾನ್ಯ ನಂಬಿಕೆ. ಆದರೆ ಇದು ಮಾತ್ರವಲ್ಲ. ಸಂಪತ್ತು ಎಂದು ಕರೆಸಿಕೊಳ್ಳುವ ಯಾವುದನ್ನೇ ಆದರೂ ಇಂದು ನೀವು ಖರೀದಿಸಬಹುದು ಅಥವಾ ಹೊಂದಬಹುದು. ಅದರಿಂದ ಆ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ. ಈ ಹಿಂದಿನ ಕಾಲದಲ್ಲಿ ಕೃಷಿಪ್ರಧಾನ ಸಮಾಜದಲ್ಲಿ ಅಕ್ಕಿ ರಾಗಿ ಗೋಧಿಯಂಥ ಧಾನ್ಯಗಳನ್ನು ಮನೆ ತುಂಬಿಸಿಕೊಳ್ಳುತ್ತಿದ್ದರು.

ಹಿಂದೂಗಳಿಗೆ ಸಂಪತ್ತಿನ ಪುಣ್ಯ ಫಲ ನೀಡುವ ಹಬ್ಬ. ಅಕ್ಷಯ ತೃತೀಯದಂದು (Akshaya Tritiya 2024) ಶುಭ, ಅಶುಭ ಮುಹೂರ್ತಗಳನ್ನು ನೋಡದೇ ಯಾವುದೇ ಕಾರ್ಯವನ್ನು ಪ್ರಾರಂಭಿಸಬಹುದು ಎಂಬ ಮಾತಿದೆ. ಉತ್ತರ ಭಾರತದಲ್ಲಿ ಅಖಾ ತೀಜ್ ಎಂದೂ ಕರೆಯಲ್ಪಡುವ ಈ ಮಂಗಳಕರ ದಿನ ಅಪಾರ ಪ್ರಾಮುಖ್ಯತೆ ಹೊಂದಿದೆ. ಈ ದಿನದಂದು ಪ್ರಾರಂಭಿಸಿದ ಯಾವುದೇ ಕಾರ್ಯ ಯಾವಾಗಲೂ ಯಶಸ್ವಿಯಾಗುತ್ತದೆ ಎಂಬ ನಂಬಿಕೆ. ಖರೀದಿಸಿದ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ.

ಈ ದಿನವು ಅದೃಷ್ಟ, ಯಶಸ್ಸು ಮತ್ತು ಅದೃಷ್ಟದ ಲಾಭದ ಸಂಕೇತವಾಗಿದೆ. ಅಕ್ಷಯ ತೃತೀಯದಂದು ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಮೆಚ್ಚಿಸಲು ಈ ದಿನ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವುದು ವಾಡಿಕೆ. ಅಕ್ಷಯ ತೃತೀಯವನ್ನು ಭಾರತ ಮತ್ತು ನೇಪಾಳದ ಅನೇಕ ಪ್ರದೇಶಗಳಲ್ಲಿ ಹಿಂದೂಗಳು ಮತ್ತು ಜೈನರು ಹೊಸ ಉದ್ಯಮಗಳು, ಮದುವೆಗಳು, ದಾನ, ಮತ್ತು ಚಿನ್ನ ಅಥವಾ ಇತರ ಆಸ್ತಿಯಂತಹ ಹೂಡಿಕೆಗಳಿಗೆ ಮಂಗಳಕರವೆಂದು ಪರಿಗಣಿಸುತ್ತಾರೆ. ಅಂದು ಚಿನ್ನ, ಬೆಳ್ಳಿ, ವಾಹನ ಖರೀದಿಸಿ ತಂದರೆ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂದು ಹಲವರು ನಂಬುತ್ತಾರೆ.

ಸಂಸ್ಕೃತದಲ್ಲಿ ಅಕ್ಷಯ ಪದವು “ಅಭ್ಯುದಯ, ಭರವಸೆ, ಸಂತೋಷ, ಯಶಸ್ಸು” ಎಂಬ ಅರ್ಥದಲ್ಲಿ “ಎಂದಿಗೂ ಕಡಿಮೆಯಾಗುವುದಿಲ್ಲ” ಎಂಬ ಅರ್ಥವನ್ನು ಸೂಚಿಸುತ್ತದೆ. ಈ ದಿನದಂದು ಸೂರ್ಯ ಮತ್ತು ಚಂದ್ರ ಇಬ್ಬರೂ ತಮ್ಮ ಗ್ರಹಗಳ ಅತ್ಯುತ್ತಮ ನೆಲೆಯಲ್ಲಿರುತ್ತಾರೆ ಎಂದು ನಂಬಲಾಗಿದೆ.

ಅಕ್ಷಯ ತೃತೀಯ ಆಚರಣೆಯ ಇತಿಹಾಸದ ಪ್ರಕಾರ ಅಕ್ಷಯ ತೃತೀಯ ದಿನದಂದು ನಾಲ್ಕು ಯುಗಗಳಲ್ಲಿ ಎರಡನೇ ಯುಗವಾದ ತ್ರೇತಾಯುಗವು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನು ಅಕ್ಷಯ ತೃತೀಯ ದಿನದಂದು ಜನಿಸಿದರು ಎಂದು ಹೇಳಲಾಗುತ್ತದೆ. ಹೀಗಾಗಿ ಭಕ್ತರು ಅಕ್ಷಯ ತೃತೀಯವನ್ನು ಪರಶುರಾಮನ ಜನ್ಮ ದಿನವಾಗಿ ಆಚರಿಸುತ್ತಾರೆ. ಅಕ್ಷಯ ತೃತೀಯದ ಆಚರಣೆಗಳು ಅಕ್ಷಯ ತೃತೀಯದಂದು ಭಕ್ತರು ಪವಿತ್ರ ಸ್ನಾನ ಮಾಡುವ ಮೂಲಕ ಮತ್ತು ಹಳದಿ ವೇಷಭೂಷಣದಲ್ಲಿ ತಮ್ಮನ್ನು ತಾವು ಅಲಂಕರಿಸಿಕೊಳ್ಳುವುದರೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಈ ದಿನ ವಿಶೇಷವಾಗಿ ವಿಷ್ಣು ಸಹಸ್ರನಾಮ ಮತ್ತು ವಿಷ್ಣು ಚಾಲೀಸಾದ ಪಠಣಗಳೊಂದಿಗೆ ಭಗವಾನ್ ವಿಷ್ಣುವಿಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.

ಚಿನ್ನ, ಬೆಳ್ಳಿ ಏಕೆ ಖರೀದಿಸಬೇಕು?

ದಂತಕಥೆಯ ಪ್ರಕಾರ, ಅಕ್ಷಯ ತೃತೀಯದಲ್ಲಿ, ಸಂಪತ್ತಿನ ದೇವತೆಯಾದ ಕುಬೇರನು ಭಗವಾನ್ ಶಿವ ಮತ್ತು ಬ್ರಹ್ಮನಿಂದ ಆಶೀರ್ವಾದವನ್ನು ಪಡೆದನು, ಅಲಕಾಪುರಿ ಎಂದು ಕರೆಯಲ್ಪಡುವ ಲೋಕವನ್ನು ಸ್ವಾಧೀನಪಡಿಸಿಕೊಂಡ. ಪರಿಣಾಮವಾಗಿ, ಈ ದಿನ ಕುಬೇರನ ಹೆಸರಿನಲ್ಲಿ ಚಿನ್ನದ ಆಭರಣಗಳು ಮತ್ತು ಆಸ್ತಿಗಳನ್ನು ಖರೀದಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೊಸ ವ್ಯಾಪಾರ, ಉದ್ಯಮಗಳು, ನಿರ್ಮಾಣ ಕಾರ್ಯಗಳನ್ನು ಈ ವಿಶೇಷ ದಿನದಂದು ಪ್ರಾರಂಭಿಸಲಾಗುತ್ತದೆ. ಉದ್ಯಮಿಗಳು ಮುಂದಿನ ಆರ್ಥಿಕ ವರ್ಷಕ್ಕೆ ಹೊಸ ಆಡಿಟ್ ಪುಸ್ತಕವನ್ನು ಪ್ರಾರಂಭಿಸುವ ಮೊದಲು ಅಕ್ಷಯ ತೃತೀಯ ದಿನದಂದು ಗಣೇಶ ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಇದನ್ನು ಹಲ್ಖಾತಾ ಎಂದು ಕರೆಯುತ್ತಾರೆ.

ಇದಲ್ಲದೇ ಅಕ್ಕಿ ಕೊಳ್ಳುವವರು, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವವರು, ಯಾವುದೇ ರೀತಿಯ ಹೊಸ ವಸ್ತುಗಳು ಅಥವಾ ಪಾತ್ರೆಗಳನ್ನು ಖರೀದಿಸುವವರು- ದೇವಸ್ಥಾನಗಳಿಗೆ ಭೇಟಿ ನೀಡುವವರು, ಬಡವರಿಗೆ ಅನ್ನದಾನ ಅಥವಾ ವಿಶೇಷ ಕೊಡುಗೆಗಳನ್ನು ನೀಡುವವರು ಅಥವಾ ಬಡ ಮಕ್ಕಳಿಗೆ ಅವರ ಶಿಕ್ಷಣ ಶುಲ್ಕಕ್ಕಾಗಿ ಸಹಾಯ ಮಾಡುವವರಿಗೂ ಈ ದಿನ ಶುಭಕರ. ಹೀಗಾಗಿ ಚಿನ್ನ ಬೆಳ್ಳಿಗೆ ಸೀಮಿತವಾಗದೆ, ಧಾನ್ಯಗಳನ್ನು ಕೂಡ ಖರೀದಿಸಬಹುದು. ಬಡವರಿಗೆ ದಾನ ಮಾಡುವುದರಿಂದಲೂ ನಿಮ್ಮ ಸಂಪತ್ತು ಅಕ್ಷಯವಾಗುತ್ತದೆ.

ಇದನ್ನೂ ಓದಿ: Akshaya Tritiya 2024: ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಅಕ್ಷಯ ತೃತೀಯ

Continue Reading
Advertisement
Cannes 2024 Urvashi Rautela pink gown remind Deepika Padukone
ಬಾಲಿವುಡ್11 mins ago

Cannes 2024: ಕಾನ್ ರೆಡ್‌ ಕಾರ್ಪೆಟ್‌ ಮೇಲೆ ಮಿಂಚಿದ ಊರ್ವಶಿ ರೌಟೇಲಾ: ದೀಪಿಕಾ ಸ್ಟೈಲ್ ಕಾಪಿ ಮಾಡಿದ್ರಾ?

Sanju Samson
ಕ್ರೀಡೆ20 mins ago

Sanju Samson: ಸತತ 4 ಸೋಲು; ಬೇಸರ ಹೊರಹಾಕಿದ ನಾಯಕ ಸಂಜು ಸ್ಯಾಮ್ಸನ್

Suspicious Case in Bengaluru
ಬೆಂಗಳೂರು57 mins ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Star Suvarna HuAnthiya UhuuAnthiya new celebrity game show
ಕಿರುತೆರೆ1 hour ago

Star Suvarna: ಕಿರುತೆರೆಗೆ ಬರ್ತಿದೆ ಹೊಸ ಸೆಲೆಬ್ರಿಟಿ ಗೇಮ್ ಶೋ ‘Huu ಅಂತೀಯಾ…Uhuu ಅಂತೀಯಾ’: ಪ್ರಸಾರ ಯಾವಾಗ?

Hepatitis-A
ದೇಶ1 hour ago

Hepatitis-A: ಅಲರ್ಟ್‌..ಅಲರ್ಟ್‌! ಜನರ ನಿದ್ದೆಗೆಡಿಸ್ತಿದೆ ಮತ್ತೊಂದು ಡೆಡ್ಲಿ ವೈರಸ್‌

Anita Goyal
ದೇಶ1 hour ago

Anita Goyal: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಪತ್ನಿ ಅನಿತಾ ಗೋಯಲ್‌ ನಿಧನ

hunsur road accident
ಕ್ರೈಂ1 hour ago

Road Accident: ಸರಣಿ ಅಪಘಾತ, ಬೈಕ್ ಸವಾರ ಸಾವು; ಕಾರು ಡಿಕ್ಕಿಯಾಗಿ ಪಾದಚಾರಿ ಸಾವು

A Movie Re-ReleaseActress Chandni relives memories
ಸ್ಯಾಂಡಲ್ ವುಡ್1 hour ago

A Movie Re-Release: ರೀ-ರಿಲೀಸ್ ಆಗ್ತಿದೆ ಉಪ್ಪಿಯ `A’ ಸಿನಿಮಾ : ನೆನಪುಗಳನ್ನು ಮೆಲುಕು ಹಾಕಿದ ನಟಿ ಚಾಂದಿನಿ!

Sunil Chhetri
ಕ್ರೀಡೆ2 hours ago

Sunil Chhetri: 20 ವರ್ಷಗಳ ಫುಟ್ಬಾಲ್ ವೃತ್ತಿಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿದ ಸುನೀಲ್‌ ಚೆಟ್ರಿ; ಕುವೈತ್ ವಿರುದ್ಧ ಅಂತಿಮ ಪಂದ್ಯ

Aishwarya Rai Injured heads to Cannes Film Festival with daughter
ಬಾಲಿವುಡ್2 hours ago

Cannes 2024: ಐಶ್ವರ್ಯಾ ರೈ ಕೈಗೆ ಪೆಟ್ಟು: ಮಗಳ ಜತೆ ಕಾನ್ ಫಿಲ್ಮ್ ಫೆಸ್ಟಿವಲ್‌ನತ್ತ ಹೊರಟ ನಟಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌