Maha Shivaratri 2023 : ಮಹಾ ಶಿವರಾತ್ರಿಯ ಈ ದಿನ ಈ ನಾಲ್ಕು ರಾಶಿಯವರಿಗೆ ಶನಿ ದೇವರ ಕೃಪೆ ಇದೆ! - Vistara News

ಧಾರ್ಮಿಕ

Maha Shivaratri 2023 : ಮಹಾ ಶಿವರಾತ್ರಿಯ ಈ ದಿನ ಈ ನಾಲ್ಕು ರಾಶಿಯವರಿಗೆ ಶನಿ ದೇವರ ಕೃಪೆ ಇದೆ!

ಶಿವನ ಕೃಪೆ ಪಡೆಯಲು ಶಿವರಾತ್ರಿಗಿಂತ (Maha Shivaratri 2023) ಪ್ರಶಸ್ತವಾದ ಸಮಯ ಮತ್ತೊಂದಿಲ್ಲ. ಈ ಬಾರಿ ಶಿವರಾತ್ರಿಯಂದು ಮೂರು ಮುಖ್ಯ ಗ್ರಹಗಳು ಒಂದೇ ರಾಶಿಯಲ್ಲಿ ಸ್ಥಿತವಾಗಿರುವುದರಿಂದ ಕೆಲವು ರಾಶಿಯ ವ್ಯಕ್ತಿಗಳಿಗೆ ಶನಿಯ ಕೃಪೆ ಪ್ರಾಪ್ತವಾಗಲಿದೆ. ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

VISTARANEWS.COM


on

Maha Shivaratri 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಹಾದೇವ ಶಿವನನ್ನು ಆರಾಧಿಸುವ ಶಿವರಾತ್ರಿ (Maha Shivaratri 2023) ಇಂದು. ಈ ದಿನ ಕೆಲವು ರಾಶಿಯ ವ್ಯಕ್ತಿಗಳಿಗೆ ಶನಿ ದೇವರ ಕೃಪೆ ಲಭಿಸಲಿದೆ. ಏಕೆಂದರೆ ಇಂದು ಮೂರು ಗ್ರಹಗಳು, ಒಂದೇ ರಾಶಿಯಲ್ಲಿ ಅಂದರೆ ಕುಂಭ ರಾಶಿಯಲ್ಲಿ ಸ್ಥಿತವಾಗಿರಲಿದೆ. ಹಾಗಾಗಿ ತ್ರಿಗ್ರಹ ಯೋಗ ಉಂಟಾಗಿದೆ.

ಫೆಬ್ರವರಿ 13ಕ್ಕೆ ಸೂರ್ಯ ಗ್ರಹವು ಕುಂಭ ರಾಶಿ ಪ್ರವೇಶಿಸಿತ್ತು. ಅದೇ ರಾಶಿಯಲ್ಲಿ ಶನಿ ಮತ್ತು ಚಂದ್ರ ಅಸ್ಥವಾದ ಸ್ಥಿತಿಯಲ್ಲಿವೆ. ಶಿವರಾತ್ರಿಯ ಸಮಯದಲ್ಲಿ ಒಂದೇ ರಾಶಿಯಲ್ಲಿ ಮೂರೂ ಗ್ರಹಗಳು ಇರುವುದರಿಂದ ಕೆಲ ರಾಶಿಯವರಿಗೆ ಒಳಿತಾಗಲಿದೆ.

ಶಿವರಾತ್ರಿಯಂದು ಶನಿ, ಸೂರ್ಯ ಮತ್ತು ಚಂದ್ರ ಗ್ರಹಗಳು ಒಂದೇ ರಾಶಿಯಲ್ಲಿರುವುದನ್ನು ದುರ್ಲಭ ಸಂಯೋಗವೆಂದೇ ಹೇಳಬಹುದಾಗಿದೆ. ಈ ಯೋಗದಲ್ಲಿ ಸಾಡೇಸಾತಿ ಮತ್ತು ಅರ್ಧಾಷ್ಟಮಗಳಿಂದ ಸಂಕಟ ಪಡುತ್ತಿರುವ ಜಾತಕದವರು ಶಿವನ ಪೂಜೆ ಮಾಡಿದರೆ ಒಳಿತಾಗುತ್ತದೆ. ಜೊತೆಗೆ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದೇ ಸಂದರ್ಭದಲ್ಲಿ ಮೇಷ, ವೃಶ್ಚಿಕ, ಮಕರ ಮತ್ತು ಕುಂಭ ರಾಶಿಯ ವ್ಯಕ್ತಿಗಳಿಗೆ ಸೌಭಾಗ್ಯ ಮತ್ತು ಸಮೃದ್ಧಿ ಲಭಿಸಲಿದೆ. ಹಾಗಾದರೆ ಈ ಸಂದರ್ಭದಲ್ಲಿ ಶನಿಯ ಕೃಪೆಯಿಂದ ಈ ನಾಲ್ಕು ರಾಶಿಯವರಿಗೆ ಯಾವ ರೀತಿಯಲ್ಲಿ ಒಳಿತು ಸಿಗಲಿದೆ ಎಂಬುದನ್ನು ನೋಡೋಣ.

ಮೇಷ ರಾಶಿ

ಈ ಯೋಗದಿಂದ ಮೇಷ ರಾಶಿಯವರಿಗೆ ಶಿವನ ವಿಶೇಷ ಕೃಪೆ ಪ್ರಾಪ್ತವಾಗಲಿದೆ. ಯಾವುದೋ ಕೆಲಸ ತುಂಬಾ ಸಮಯಗಳಿಂದ ಅರ್ಧಕ್ಕೇ ನಿಂತು ಹೋಗಿದ್ದರೆ, ಅಂಥ ಕಾರ್ಯಗಳು ಈ ಸಂದರ್ಭದಲ್ಲಿ ಪೂರ್ಣವಾಗುತ್ತವೆ. ಜೊತೆಗೆ ಈ ರಾಶಿಯವರ ಮನೋಕಾಮನೆಗಳು ಈಡೇರುತ್ತವೆ. ಮೇಷ ರಾಶಿಯ ವ್ಯಕ್ತಿಗಳು ಈ ದಿನ ಭಕ್ತಿ ಮತ್ತು ಶ್ರದ್ಧೆಯಿಂದ ಶಿವನ ಪೂಜೆ ಮಾಡುವುದರ ಜೊತೆಗೆ ಜಲಾಭಿಷೇಕ ಮಾಡುವುದರಿಂದ ಒಳಿತಾಗುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ವ್ಯಕ್ತಿಗಳಿಗೆ ಈ ಸಮಯದಲ್ಲಿ ಮಹಾದೇವನ ಕೃಪೆ ಲಭಿಸಲಿದೆ. ಈ ರಾಶಿಯ ಅಧಿಪತಿ ಗ್ರಹವಾದ ಮಂಗಳ ಗ್ರಹವು ಮಾನಸಿಕವಾಗಿ ಈ ರಾಶಿಯ ವ್ಯಕ್ತಿಗಳಿಗೆ ಲಾಭವನ್ನು ತಂದುಕೊಡಲಿದೆ. ಇದರಿಂದ ಆಂತರ್ಯದಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಉತ್ತಮ ವಿಚಾರಗಳ ಬಗ್ಗೆ ಒಲವು ಹೆಚ್ಚಲಿದೆ. ಹಾಗಾಗಿ ಶಿವರಾತ್ರಿಯಂದು ಶಿವಲಿಂಗದ ಮೇಲೆ ಜಲಾಭಿಷೇಕ ಮಾಡುವುದರಿಂದ ಸೌಭಾಗ್ಯ ಪ್ರಾಪ್ತಿಯಾಗುತ್ತದೆ.

ಮಕರ ರಾಶಿ

ಈ ರಾಶಿಯ ಅಧಿಪತಿ ಗ್ರಹ ಶನಿ ಗ್ರಹವೇ ಆಗಿರುವುದರಿಂದ ಈ ರಾಶಿಯ ವ್ಯಕ್ತಿಗಳಿಗೆ ತ್ರಿಗ್ರಹ ಯೋಗದಿಂದ ಲಾಭ ಉಂಟಾಗಲಿದೆ. ಜೊತೆಗೆ ಈ ರಾಶಿಯವರ ಮೇಲೆ ಶನಿ ಗ್ರಹದ ವಿಶೇಷ ಕೃಪೆ ಸಹ ಇರಲಿದೆ. ಈ ರಾಶಿಯ ವ್ಯಕ್ತಿಗಳು ಉದ್ಯೋಗ ಅಥವಾ ವ್ಯಾಪಾರ ಮಾಡುತ್ತಿದ್ದರೆ ಅದರಲ್ಲಿ ಸಫಲತೆ ದೊರಕಲಿದೆ. ಇದರ ಪರಿಣಾಮವಾಗಿ ಆದಾಯದಲ್ಲಿ ವೃದ್ಧಿ ಕಾಣಬಹುದಾಗಿದೆ. ಮನೆಯಲ್ಲಿ ಸುಖ ಮತ್ತು ಸಮೃದ್ಧಿ ನೆಲೆಸಲಿದೆ. ಸದ್ಯದಲ್ಲಿಯೇ ಉತ್ತಮ ಸಮಾಚಾರ ಕೇಳಲು ಸಿಗುತ್ತದೆ.

ಕುಂಭ ರಾಶಿ

ಶನಿ ಗ್ರಹದ ಅಧಿಪತ್ಯವಿರುವ ಕುಂಭ ರಾಶಿಯಲ್ಲಿಯೇ ಶನಿ ಸ್ಥಿತವಾಗಿದ್ದಾನೆ. ಜೊತೆಗೆ ತ್ರಿಗ್ರಹ ಯೋಗ ಉಂಟಾಗಿರುವುದರಿಂದ ಈ ರಾಶಿಯವರಿಗೆ ಮತ್ತಷ್ಟು ಒಳಿತಾಗಲಿದೆ. ಕೆಲಸ, ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯಲ್ಲಿ ಅನುಕೂಲ ಪರಿಣಾಮಗಳನ್ನು ಈ ಸಂದರ್ಭದಲ್ಲಿ ಕಾಣಬಹುದಾಗಿದೆ. ವಿವಾಹದಲ್ಲಿ ತೊಂದರೆಗಳು ಉಂಟಾಗುತ್ತಿದ್ದರೆ. ಈ ಸಮಯದಲ್ಲಿ ಅದರ ನಿವಾರಣೆಯಾಗುತ್ತದೆ. ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಶಿವನಿಗೆ ಜಲಾಭಿಷೇಕವನ್ನು ಮಾಡಬೇಕು. ಜೊತೆಗೆ ಅಗತ್ಯವಿರುವವರಿಗೆ ಸಾಮರ್ಥ್ಯಾನುಸಾರ ಯಾವುದಾದರು ವಸ್ತುಗಳನ್ನು ದಾನವಾಗಿ ನೀಡುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಇದನ್ನೂ ಓದಿ : Maha Shivaratri 2023 : ಶಿವನ ಮಹಾ ಮಹೋತ್ಸವ ಮಹಾ ಶಿವರಾತ್ರಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತುಮಕೂರು

Tumkur News : ತುಮಕೂರಿನಲ್ಲಿ ಮತ್ತೆ ದುರಂತ; ಬೆಂಕಿ ಕೊಂಡ ಹಾಯುವಾಗ ಕಾಲು ಜಾರಿ ಬಿದ್ದ ಅರ್ಚಕ

Fire Accident : ನಿನ್ನೆಯಷ್ಟೇ ತುಮಕೂರಲ್ಲಿ ಕೊಂಡ ಹಾಯುವಾಗ ಕಾಲು ಜಾರಿ ಬಿದ್ದು ಅರ್ಚಕ ಹಾಗೂ ಅವರ ಮಗ ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ದೇವಸ್ಥಾನದಲ್ಲಿ ದುರಂತವೊಂದು ಸಂಭವಿಸಿದೆ.

VISTARANEWS.COM


on

By

tumkur News Kondothsava in Temple
Koo

ತುಮಕೂರು: ದೇವರನ್ನು ಹೊತ್ತು ಕೊಂಡ ಹಾಯುವಾಗ (Kondothsava in Temple) ಅರ್ಚಕ ಕಾಲು ಜಾರಿ (Fire Accident) ಬಿದ್ದಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಗ್ರಾಮದಲ್ಲಿ ಘಟನೆ (Tumkur News) ನಡೆದಿದೆ.

ಗ್ರಾಮದಲ್ಲಿ ಶ್ರೀ ಹುಲಿಯೂರಮ್ಮ ದೇವಿ ಜಾತ್ರಾ ಪ್ರಯುಕ್ತ ಬೆಂಕಿ‌ಕೊಂಡ ಹಾಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅರ್ಚಕ ಮಧು ತಲೆ ಮೇಲೆ ದೇವರನ್ನು ಹೊತ್ತುಕೊಂಡು ಕೊಂಡ ಹಾಯಲು ಓಡಿ ಬಂದಿದ್ದಾರೆ. ಆದರೆ ಈ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಅದೃಷ್ಟವಶಾತ್‌ ಬೆಂಕಿ ಕೆಂಡದ ಮೇಲೆ ಬೀಳದೇ ಪಕ್ಕಕ್ಕೆ ಎಗರಿದ್ದಾರೆ.

ಇದೇ ವೇಳೆ ಕೈಯಲ್ಲಿ ಹಿಡಿದುಕೊಂಡಿದ್ದ ದೇವರ ಮೂರ್ತಿಯನ್ನು ಕೊಂಡಕ್ಕೆ ಬೀಳಿಸಿದ್ದಾರೆ. ಅರ್ಚಕ ಮಧುಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೊಂಡದೊಳಗೆ ಬಿದ್ದ ದೇವಿಯ ಮೂರ್ತಿಯನ್ನು ಅಲ್ಲಿದ್ದ ಸ್ಥಳೀಯರು ಮೇಲೆತ್ತಿದ್ದಾರೆ.

ಸುಟ್ಟಗಾಯಗಳಾದ ಹಿನ್ನೆಲೆಯಲ್ಲಿ ಅರ್ಚಕ ಮಧುನನ್ನು ಕುಣಿಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Water Crisis: ಇನ್ನೆರಡು ತಿಂಗಳು ಕಾವೇರಿ ನೀರು ಹೊಸ ಕನೆಕ್ಷನ್‌ ಇಲ್ಲ; 11 ಸಾವಿರ ಮಂದಿ ಕಂಗಾಲು

ದೇವರನ್ನು ಹೊತ್ತು ಕೊಂಡ ಹಾಯುವಾಗ ಕಾಲು ಜಾರಿ ಬಿದ್ದ ಅರ್ಚಕ, ಮಗ

ತುಮಕೂರು: ರಥೋತ್ಸವದ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ನಡೆಯುವ ಕೊಂಡೋತ್ಸವದ (Kondothsava in Temple) ವೇಳೆ ಬೆಂಕಿ ಕೊಂಡಕ್ಕೆ ಬಿದ್ದು ಗಾಯಗೊಳ್ಳುವ ಘಟನೆಗಳು (Fire accident) ಹೆಚ್ಚುತ್ತಿವೆ. ಎರಡು ದಿನದ ಹಿಂದಷ್ಟೇ ಮಂಡ್ಯದಲ್ಲಿ ವೀರಗಾಸೆ ಕಲಾವಿದರೊಬ್ಬರು ಕೊಂಡಕ್ಕೆ ಬಿದ್ದು ಗಾಯಗೊಂಡಿದ್ದರು. ಇದೀಗ ತುಮಕೂರಿನಲ್ಲಿ ಅಂಥಹುದೇ ಇನ್ನೊಂದು ಘಟನೆ ನಡೆದು ಅರ್ಚಕರು ಮತ್ತು ಅವರ ಮಗ ಗಾಯಗೊಂಡಿದ್ದಾರೆ.

ತುಮಕೂರು ಜಿಲ್ಲೆಯ (Tumkur News) ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದಲ್ಲಿ ಶ್ರೀ ದಂಡಿನಮಾರಮ್ಮ ದೇವಿ ಜಾತ್ರಾ ಪ್ರಯುಕ್ತ ನಡೆದ ಬೆಂಕಿ‌ಕೊಂಡ ಹಾಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆಂಡವನ್ನು ಸಿದ್ಧಪಡಿಸಿ ಅದರ ಮೇಲೆ ಒದ್ದೆ ಬಟ್ಟೆಯನ್ನು ಹಾಕಿ ಅದರ ಮೇಲೆ ದೇವರನ್ನು ಹೊತ್ತ ಅರ್ಚಕರು ಓಡುವುದು ಕ್ರಮವಾಗಿದೆ.

ಈ ವೇಳೆ ದೇವರನ್ನು ಹೊತ್ತ ಅರ್ಚಕ ವೆಂಕಟಪ್ಪ ಅವರು ಕೆಂಡದ ಮೇಲೆ ಓಡುತ್ತಿದ್ದಂತೆಯೇ ಮುಗ್ಗರಿಸಿ ಬಿದ್ದರು. ಅವರ ಮಗ ಕೃಷ್ಣಮೂರ್ತಿ ಬೆಂಕಿಯ ಮೇಲೆ ಬಿದ್ದರು. ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿದರು. ತೀವ್ರ ಸುಟ್ಟ ಗಾಯಗಳಾದ ಹಿನ್ನೆಲೆಯಲ್ಲಿ ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಂಡ ಹಾಯುವಾಗ ಮುಗ್ಗರಿಸಿ ಬಿದ್ದ ಪೂಜಾರಿ; ಮತ್ತೊಬ್ಬ ಅರ್ಚಕ ಜಸ್ಟ್‌ ಮಿಸ್‌

ಮಂಡ್ಯ: ಬಸವೇಶ್ವರ ಕೊಂಡೋತ್ಸವದ ವೇಳೆ ಕೊಂಡ ಹಾಯುವಾಗ ವೀರಗಾಸೆ ಪೂಜಾರಿಯೊಬ್ಬರು ಎಡವಿ ಬಿದ್ದ ಘಟನೆ (Fire Accident) ನಡೆದಿದೆ. ಕೊಂಡ ಹಾಯುವ ವೇಳೆ ಬಿದ್ದರಿಂದ ಮೈ-ಕೈ ಸುಟ್ಟುಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಳಗನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ಬಸವೇಶ್ವರ ಜಾತ್ರಾಮಹೋತ್ಸವದ ಅಗ್ನಿ ಕೊಂಡೋತ್ಸವದಲ್ಲಿ ಈ ಅವಘಡ (Fire Accident) ನಡೆದಿದೆ. ಹುಳಗನಹಳ್ಳಿ ಗ್ರಾಮದಲ್ಲಿ ಬಸವೇಶ್ವರನ ಕೊಂಡೋತ್ಸವ ನಡೆಯುತ್ತಿತ್ತು. ಈ ವೇಳೆ ಕೊಂಡ ಹಾಯಲು ಓಡಿ ಬರುವಾಗ ವೀರಗಾಸೆ ಪೂಜಾರಿ ಮುಗ್ಗರಿಸಿ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರು ಬೆಂಕಿದಿಂದ ಮೇಲೆತ್ತಿದ್ದಾರೆ.

ಇದಾದ ಮೇಲೂ ಮುಂಜಾಗ್ರತಾ ವಹಿಸಿದೇ ಮತ್ತೊಬ್ಬ ಪೂಜಾರಿ ದೇವರನ್ನು ಹೊತ್ತುಕೊಂಡು ಕೊಂಡ ಹಾಯಲು ಮುಂದಾಗಿದ್ದಾರೆ. ಈ ವೇಳೆ ಆತನೂ ಕೆಂಡಕ್ಕೆ ಬೀಳುವಾಗ ಕೈಯಲ್ಲಿದ್ದ ದೇವರನ್ನೆ ಬಿಟ್ಟು ಪಾರಾಗಿದ್ದಾರೆ. ಕೂದಲೆಳೆ ಅಂತರದಲ್ಲಿ ಪೂಜಾರಿ ಪಾರಾಗಿದ್ದಾರೆ. ಇನ್ನೂ ಗಾಯಗೊಂಡಿರುವ ವೀರಗಾಸೆ ಪೂಜಾರಿಯನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಧಾರ್ಮಿಕ

Holi 2024: ಭಾವ್ಯಕ್ಯತೆಯನ್ನು ಬೆಸೆಯುವ ವಿಶಿಷ್ಟ ಹಬ್ಬ ಹೋಳಿ ಹುಣ್ಣಿಮೆ

ಭಾರತ ಸಂಪ್ರದಾಯವನ್ನು ಪಾಲಿಸುವ ಮತ್ತು ಧರ್ಮವನ್ನು ಗೌರವಿಸುವ ದೇಶ. ಇದು ಈ ನೆಲದ ಸಂಸ್ಕಾರ. ಇಲ್ಲಿಯ ಪ್ರತಿ ಹಬ್ಬಕ್ಕೂ ಒಂದೊಂದು ಬಗೆಯ ಮಹತ್ವವನ್ನು ಹಿರಿಯರು ಹಾಕಿಕೊಟ್ಟ ನಿಯಮಗಳನ್ನು ಇನ್ನೂ ಪಾಲಿಸುತ್ತಾ ಬರುತ್ತಿದ್ದೇವೆ ಎಂಬುದೇ (Holi 2024) ಮಹತ್ವದ್ದು.

VISTARANEWS.COM


on

Person's Hand Full Of Colored Powder
Koo
Naveenshastri-Puranik

:: ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ.ಪುರಾಣಿಕ
ಲೇಖಕರು ಸಂಸ್ಕೃತ ಉಪನ್ಯಾಸಕರು, ಅಂಕಣಕಾರರು ಹಾಗೂ ಖ್ಯಾತ ಜ್ಯೋತಿಷಿ

ಭವ್ಯ ಭಾರತದ ಸಾಂಸ್ಕೃತಿಕ ಪರಂಪರೆಯ ಶ್ರೇಷ್ಠತೆಯನ್ನು ಸಾರುವ ಪುರಾಣ ಇತಿಹಾಸಗಳ ಪುಟಗಳನ್ನು ನೋಡುತ್ತಾ ಅನಾದಿ ಕಾಲದಿಂದಲೂ ನಡೆದು ಬಂದಿರುವ ರೂಢಿಗಳನ್ನು ಆಚರಿಸುವ ಮೂಲಕ ಈ ಹಬ್ಬ ಹರಿದಿನಗಳು ಮನುಷ್ಯರ ಮನಸ್ಸನ್ನೂ ಸದಾ ನೆಮ್ಮದಿ ಮತ್ತು ಸಂತೋಷವಾಗಿ ಇರಲೆಂದು, ಕಾಲಕಾಲಕ್ಕೆ ಬದಲಾಗುವ ಋತು ನಿಯಮಗಳಿಗೆ ಅನುಗುಣವಾಗಿ ನಮ್ಮ ಹಿರಿಯರು ಭಗವಂತನ ಪ್ರತಿರೂಪವನ್ನು ಸೃಷ್ಟಿಯಲ್ಲಿ ದೃಷ್ಟಿಯಿಟ್ಟು ಮಾನವ ಜನಾಂಗದ ಸರ್ವಾಂಗೀಣ ಏಳಿಗೆಗೆ ಶ್ರಮಿಸಿದ್ದಾರೆ. ಪಂಚಭೂತಗಳಲ್ಲಿ ದೇವರನ್ನು ಹುಡುಕಿದ್ದಾರೆ. ಹಿಗಾಗಿ ಭಾರತ ಪ್ರತ್ಯಕ್ಷ ಸಂಸ್ಕೃತಿಯ ಜೀವಂತ ಸ್ವರ್ಗದ ಪ್ರತಿ ರೂಪ. ಭಾರತ ಸಂಪ್ರದಾಯವನ್ನ ಪಾಲಿಸುವ ಮತ್ತು ಧರ್ಮವನ್ನು ಗೌರವಿಸುವ ದೇಶ. ಇದು ಈ ನೆಲದ ಸಂಸ್ಕಾರ. ಇಲ್ಲಿಯ ಪ್ರತಿ ಹಬ್ಬಕ್ಕೂ ಒಂದೊಂದು ಬಗೆಯ ಮಹತ್ವವನ್ನು ಹಿರಿಯರು ಹಾಕಿಕೊಟ್ಟ ನಿಯಮಗಳನ್ನು ಇನ್ನೂ ಪಾಲಿಸುತ್ತಾ ಬರುತ್ತಿದ್ದೇವೆ ಎಂಬುದೆ ಸಂಪ್ರದಾಯ. ಪುರಾಣದ ಕಾಲದಿಂದಲೂ ಯಾವುದೇ ಮೇಲು ಕೀಳು ಎನ್ನುವ ಬೇಧ ಭಾವವಿಲ್ಲದೆ ಮಾನವೀಯತೆಯ ಭಾವನೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಏಕತೆಯನ್ನು ಪ್ರತಿಬಿಂಬಿಸುವ ಬಾಂಧವ್ಯದ ವಿವಿಧ ಬಣ್ಣಗಳ ಓಕುಳಿಯಲ್ಲಿ (Holi 2024) ಮಿಂದು ನಾವೆಲ್ಲರೂ ಒಂದೇ ಎಂಬ ಭಾವನೆ ಸಾರುವ ಈ ಹಬ್ಬವು ಹೊಸತನದ ಸಂತೋಷವನ್ನು ತಂದುಕೊಡುವುದಾಗಿದೆ.

Holi colors

ವಿವಿಧ ಬಣ್ಣಗಳೊಂದಿಗೆ ಆಚರಿಸುವ ಹಬ್ಬ ಈ ಹೋಳಿ ಹಬ್ಬ. ಚಂದ್ರಮಾನ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಅನೇಕ ಕಡೆ ವಿವಿಧ ಪದ್ಧತಿಗನುಣವಾಗಿ ಆಚರಿಸಲಾಗುತ್ತದೆ. ಎಲ್ಲಾ ಹಳೆಯ ವಸ್ತುಗಳನ್ನು ಬೆಂಕಿಯಲ್ಲಿ ದಹನ ಮಾಡಿ, ವಿವಿಧ ಬಣ್ಣಗಳನ್ನು ಬಳಸಿಕೊಂಡು ಆಡುವ ಸಂಭ್ರಮದ ಕ್ಷಣಗಳೇ ಈ ಹೋಳಿ ಹಬ್ಬದ (Holi 2024) ವಿಶೇಷತೆ.

Holi

ಹೋಳಿ ಹಬ್ಬದ ಹಿಂದಿನ ಪುರಾಣದ ಕಥೆಗಳು

ಹೋಳಿ ಹಬ್ಬದ ಹಿಂದೆ ಅನೇಕ ಕಥೆ ಹಾಗೂ ಉಪಕಥೆಗಳು ಬೆಸೆದುಕೊಂಡಿವೆ.
ಪುರಾಣದಲ್ಲಿ ಉಲ್ಲೇಖವಿರುವ ಕಾಮದಹನದಲ್ಲಿ- ತಾರಕಾಸುರನೆಂಬ ರಾಕ್ಷಸರಾಜ ಬ್ರಹ್ಮನ ವರ ಪಡೆದು,ಆ ವರ ಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರ ಬಲವೇ ಆತನ ಮದಕ್ಕೆ ಕಾರಣ. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಯೋಗ ಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಶಿವೆಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ. ದೇವತೆಗಳು ಕಾಮ(ಮನ್ಮಥ)ನ ಮೊರೆ ಹೋದರು. ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದರೂ ಸಹ ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ,ಶಿವನ ತಪೋಭಂಗ ಮಾಡುತ್ತಾನೆ. ಇದರಿಂದ ಕೆರಳಿ ತನ್ನ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು,ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ.

ನಾರದ ಪುರಾಣದಲ್ಲಿ ಉಲ್ಲೇಖವಾಗಿರುವ ಮತ್ತೊಂದು ಕಥೆ ಹೀಗಿದೆ

ಹಿಂದೆ ಹಿರಣ್ಯಕಶಿಪು ಎಂಬ ರಾಕ್ಷಸ ರಾಜನಿದ್ದನು. ತಾನು ಪಡೆದ ವರಗಳ ಆಧಾರದ ಮೇಲೆ ದುರಹಂಕಾರಿ ಹಿರಣ್ಯಕಶಿಪು ‘ತಾನೆ ದೇವರೆಂದು’ ಮೆರೆಯುತ್ತಿದ್ದನು. ತನ್ನನ್ನೇ ಪೂಜಿಸಬೇಕು ಎಂದು ತ್ರಿಲೋಕದಲ್ಲಿ ಆಜ್ಞೆಯನ್ನು ಹೊರಡಿಸಿದನು. ಆದರೆ ಅವನ ಮಗನಾದ ಪ್ರಹ್ಲಾದನು ಮಹಾನ್ ವಿಷ್ಣು ಭಕ್ತನಾಗಿದ್ದನು! ಇದನ್ನು ಸಹಿಸದ ಹಿರಣ್ಯಕಶಿಪು ಪ್ರಹ್ಲಾದನ ಭಕ್ತಿಯನ್ನು ಮುರಿಯಲು ಅನೇಕ ಪ್ರಯಾಸಗಳನ್ನು ಮಾಡಿ ಕೊನೆಗೆ ಅವನಿಗೆ ಮೃತ್ಯುದಂಡವನ್ನು ವಿಧಿಸಿದನು. ಹಿರಣ್ಯಕಶಿಪುವಿನ ಸಹೋದರಿ ‘ಹೋಲಿಕಾ’ ಎಂಬವಳಿಗೆ ಒಂದು ವಿಶೇಷ ವರವಿತ್ತು, ಅದೇನೆಂದರೆ ಅವಳಿಗೆ ಅಗ್ನಿಸ್ಪರ್ಶವಾಗುತ್ತಿರಲಿಲ್ಲ. ಆದುದರಿಂದ ಒಂದು ದಿನ ಹಿರಣ್ಯಕಶಿಪು, ಅವಳನ್ನು ಒಂದು ಚಿತೆಯ ಮೇಲೆ ಏರಿಸಿ, ಬಾಲಕ ಪ್ರಹ್ಲಾದನನ್ನು ಅವಳ ತೊಡೆಯ ಮೇಲೆ ಕುಳ್ಳಿರಿಸಿ ಆ ಚಿತೆಗೆ ಬೆಂಕಿಯನ್ನು ಹಚ್ಚಿಸಿದನು! ಆದರೆ ಭಗವಾನ್ ವಿಷ್ಣುವಿನ ಧ್ಯಾನದಲ್ಲಿ ಮಗ್ನನಾಗಿದ್ದ ಪ್ರಹ್ಲಾದನ ರಕ್ಷಣೆಗೆ ಧಾವಿಸಿಬಂದ ಭಗವಂತನು, ಹೋಲಿಕಾ ಭಾಸ್ಮವಾಗುವ ಹಾಗೆ ಮಾಡಿ ಪ್ರಹ್ಲಾದನನ್ನು ರಕ್ಷಿಸಿದನು!ಹೋಲಿಕಾ ದಹನದ ಕಾರಣ ಈ ಹಬ್ಬಕ್ಕೆ ಹೋಳಿ ಎಂಬ ಹೆಸರು ಬಂತು ಎಂದು ಹೇಳುತ್ತಾರೆ.

holi

ಭವಿಷ್ಯಪುರಾಣದಲ್ಲಿಯು ಸಹ ಹೋಳಿಯ ಕುರಿತಾಗಿ ಹೀಗೆ ಉಲ್ಲೇಖಿಸಲಾಗಿದೆ

ಒಂದು ಕಾಲದಲ್ಲಿ ಢುಂಢಾ ಅಥವಾ ಢೌಂಢಾ ಹೆಸರಿನ ಒಬ್ಬ ರಾಕ್ಷಸಿಯು ಊರೊಳಗೆ ನುಗ್ಗಿ ಸಣ್ಣ ಮಕ್ಕಳನ್ನು ಪೀಡಿಸುತ್ತಿದ್ದಳು. ಹಾಗೆಯೇ ಅವಳು ರೋಗಗಳನ್ನು ಸಹ ನಿರ್ಮಿಸುತ್ತಿದ್ದಳು. ಅವಳನ್ನು ಊರಿನಿಂದ ಹೊರಹಾಕಲು ಜನರು ಬಹಳ ಪ್ರಯತ್ನಿಸಿದರು, ಆದರೆ ಅವಳು ಹೋಗಲಿಲ್ಲ. ಕೊನೆಗೆ ಜನರು ಅವಾಚ್ಯ ಮಾತುಗಳಿಂದ ಬೈಯುತ್ತಾ ಶಾಪ ಕೊಟ್ಟದ್ದಲ್ಲದೇ ಎಲ್ಲೆಡೆಯೂ ಬೆಂಕಿಯನ್ನು ಹಚ್ಚಿ ಅವಳನ್ನು ಹೆದರಿಸಿದರು. ಅದರಿಂದಾಗಿ ಅವಳು ಊರಿನ ಹೊರಗೆ ಓಡಿಹೋದಳು ಎಂದು ಉಲ್ಲೇಖಿಸಲಾಗಿದೆ.

ಶ್ರೀಕೃಷ್ಣನ ಪ್ರಸ್ತಾಪ

ಶ್ರೀಕೃಷ್ಣ ಪರಮಾತ್ಮನು ಶಿಶುವಾಗಿರುವಾಗ ಕಂಸ ರಾಜನು ಪೂತನಿಯನ್ನು ಸಾಯಿಸಲು ಕಳುಹಿಸಿದ್ದನು. ಆಗ ಬಾಲ ಕೃಷ್ಣನು ರಾಕ್ಷಸಿಯ ಎದೆ ಹಾಲಿನೊಂದಿಗೆ ರಕ್ತವನ್ನು ಸಹ ಹೀರಿದನು. ಆದ್ದರಿಂದಲೇ ಕೃಷ್ಣನ ಮೈಬಣ್ಣವು ನೀಲಿ ಬಣ್ಣಕ್ಕೆ ತಿರುಗಿತು. ನಂತರ ಪೂತನಿ ಎಂಬ ರಾಕ್ಷಸಿಯನ್ನು ಸಂಹಾರವನ್ನು ಮಾಡಿದನು. ರಾಧೆಯು ಕೃಷ್ಣನ ಮೈಬಣ್ಣ ಬದಲಾಗಿರುವುದಕ್ಕೆ ಚಿಂತಿಸದೆ ಅವನ ಪ್ರೀತಿಯನ್ನು ಗೌರವಿಸಿದಳು. ಅವರಿಬ್ಬರ ಪ್ರೀತಿಯದ್ಯೋತಕವಾಗಿ ಹೋಳಿ ಹಬ್ಬದ ಆಚರಣೆ ಮಾಡಲಾಯಿತು ಎಂದು ಹೇಳಲಾಗುವುದು.

ಮೇಲೆ ಹೇಳಿದ ಪುರಾಣ ಕಥನಗಳ ಸಂದೇಶ ಒಂದೇ. ಕೆಟ್ಟದ್ದನ್ನು ಸುಟ್ಟು ಬಿಡುವುದು; ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಯಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಅಂದರೆ ಉತ್ಸವಾಗ್ನಿ ಹಾಕುವ ಪದ್ಧತಿ ಹೆಚ್ಚಾಗಿ ಆಚರಣೆಯಲ್ಲಿದೆ. ಇಂಥದ್ದೊಂದು ಅಮೂಲ್ಯ ಸಂದೇಶ ಸಾರುವ ಮತ್ತು ಆ ಮೂಲಕ ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮನ ಹಬ್ಬದ ಆಚರಣೆಯಲ್ಲಿ ಸದುದ್ದೇಶವಿದೆ.

Holi Fashion 2024

ಹೋಳಿ ಉತ್ಸವ ಆಚರಿಸುವ ವಿವಿಧ ಪದ್ಧತಿಗಳು

ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರಿಗೆ ,ಕೆಲವು ಕಡೆ ಎರಡು ದಿನ ಮತ್ತು ಇನ್ನು ಕೆಲವು ಕಡೆಗಳಲ್ಲಿ ಐದು ದಿನಗಳ ವರೆಗೆ ಈ ಉತ್ಸವವನ್ನು ಆಚರಿಸುತ್ತಾರೆ.
ಉತ್ತರ ಭಾರತದಲ್ಲಿ ಇದನ್ನು ಹೋರಿ, ದೋಲಾಯಾತ್ರಾ ಎಂದು ಕರೆಯುತ್ತಾರೆ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಶಿಮಗಾ, ಹೋಳಿ, ಹುತಾಶನಿ ಮಹೋತ್ಸವ, ಹೋಲಿಕಾದಹನ ಮತ್ತು ದಕ್ಷಿಣದಲ್ಲಿ ಕಾಮದಹನ ಎಂದು ಸಹ ಕರೆಯುತ್ತಾರೆ. ಬಂಗಾಲದಲ್ಲಿ ಹೋಳಿಹಬ್ಬವನ್ನು ದೌಲಾಯಾತ್ರಾ ಎಂದು ಆಚರಿಸುತ್ತಾರೆ. ಇದನ್ನು ವಸಂತೋತ್ಸವ ಅಥವಾ ವಸಂತಾಗಮನೋತ್ಸವ,ಅಂದರೆ ವಸಂತ ಋತುವಿನ ಆಗಮನದ ಪ್ರಯುಕ್ತ ಆಚರಿಸುವ ಉತ್ಸವವೆಂದು ಹೆಸರಿಸಲಾಗಿದೆ.
ಇನ್ನೂ ಉತ್ತರ ಭಾರತದಲ್ಲಿ ಹೋಳಿ ಹಬ್ಬದ ಸಮಯದಲ್ಲಿ ಭಾಂಗ್ ಪಾನೀಯವನ್ನು ಕುಡಿಯುವುದು ಸಾಮಾನ್ಯವಾದ ಸಂಗತಿಯಾಗಿದೆ. ಈ ಪಾನೀಯವನ್ನು ಕುಡಿಯುವುದರಿಂದ ವ್ಯಕ್ತಿ ಒಂದು ರೀತಿಯ ಗುಂಗಿಗೆ ಒಳಗಾಗುತ್ತಾನೆ. ಆಗ ವ್ಯಕ್ತಿಯಲ್ಲಿ ಎಲ್ಲಾ ರೀತಿಯ ನಿರ್ಬಂಧಗಳು ಮರೆಯಾಗುತ್ತವೆ. ದ್ವೇಷಗಳನ್ನು ಮರೆಸಿ, ಉತ್ಸಾಹವನ್ನು ಹೆಚ್ಚಿಸುವುದು. ಹಾಗಾಗಿ ಹಬ್ಬದ ಸಮಯದಲ್ಲಿ ಕುಟುಂಬದವರು ಹಾಗೂ ಸ್ನೇಹಿತರು ಭಾಂಗ್ ಎಲೆಯ ರಸವನ್ನು ಕುಡಿದು ಹಬ್ಬವನ್ನು ಆಚರಿಸುತ್ತಾರೆ.
ಕಾಠ್ಮಂಡುವಿನಲ್ಲಿ ಹೋಳಿ ಹಬ್ಬಕ್ಕೆ ಒಂದು ವಾರ ಮೊದಲು ಬಣ್ಣದ ನೀರನ್ನು ತುಂಬಿದ ಪಿಚಕಾರಿ, ನೀರಿನ ಬಲೂನು, ವಿವಿಧ ಬಣ್ಣಗಳಿಂದ ಕೂಡಿದ ಬಿದಿರಿನ ಕಡ್ಡಿಗಳಿಂದ ಅಲಂಕಾರವನ್ನು ಮಾಡಿ ಹನುಮಂತನ ದೇವಾಲಯ ನಿರ್ಮಿಸುತ್ತಾರೆ. ಇದು ಹಬ್ಬದ ಆರಂಭವನ್ನು ಸೂಚಿಸುವುದು. ಇಲ್ಲಿ ಒಂದು ವಾರ ಮುಂಚಿತವಾಗಿಯೇ ಬಣ್ಣದ ನೀರಿನ ಸಿಂಚನಗಳು ಸಾಮಾನ್ಯವಾಗಿ ಇರುತ್ತವೆ. ಹಿಂದೂ ಧರ್ಮದಲ್ಲಿ ಹೋಳಿಯ ಆಚರಣೆಯು 16 ದಿನಗಳ ಕಾಲ ವಿಶೇಷ ಆಚರಣೆಯನ್ನು ಸೂಚಿಸುತ್ತದೆ. ಕೆಲವು ಗ್ರಾಮೀಣ ಪ್ರದೇಶದಲ್ಲಿ ಹಬ್ಬಕ್ಕೂ ಮುಂಚೆ 16 ದಿನಗಳ ಕಾಲ ವಿಶೇಷ ಅಲಂಕಾರ, ವೇಷ-ಭೂಷಣದಲ್ಲಿ ಮನೆ ಮನೆಗೆ ಹೋಗಿ ನೃತ್ಯವನ್ನು ಮಾಡುತ್ತಾರೆ. ಹಬ್ಬದ ದಿನ ಆ ಬಣ್ಣಗಳನ್ನು ತೆಗೆದು ಕಾಮದೇವನನ್ನು ದಹಿಸುವುದರ ಮೂಲಕ ಹಬ್ಬವನ್ನು ಆಚರಿಸುವರು.
ಹೋಳಿ ಹಬ್ಬವನ್ನು ಸಾಮಾನ್ಯವಾಗಿ ನೇಪಾಳ ಮತ್ತು ಭಾರತೀಯರು ಮಾತ್ರ ಆಚರಿಸುತ್ತಿದ್ದರು. ಈ ಪ್ರದೇಶದಿಂದ ಹೋಗಿ ಇತರೆಡೆ ನೆಲೆಸಿರುವ ಜನಗಳು ಹಾಗೂ ಹಿಂದೂ ಸಂಸ್ಕೃತಿ ಹಾಗೂ ಆಚರಣೆಯನ್ನು ಅರಿತ ಜನರು ಸಹ ವಿವಿಧ ಪ್ರದೇಶದಲ್ಲಿ ಹೋಳಿ ಹಬ್ಬದ ಆಚರಣೆಯನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಿಂದಾಗಿ ಇಂದು ಬಾರ್ಸಿಲೋನ್, ಮಾರಿಷನ್, ಫಿಜಿ, ಗಯಾನಾ, ಟ್ರಿನಿಟಾಡ್ ಮತ್ತು ಟೊಬಾಗೊ, ಫಿಲಿಪೈನ್, ಯುಎಸ್‍ಎ ಮತ್ತು ಯುಕೆಗಳಂತಹ ಪ್ರಮುಖ ದೇಶಗಳಲ್ಲಿಯೂ ಸಹ ಆಚರಿಸುತ್ತಾರೆ.

Holi Fashion 2024

ನಮ್ಮಲ್ಲಿ ಆಚರಣೆ ಹೇಗೆ?

ನಮ್ಮಲ್ಲಿ ದೇವಸ್ಥಾನದ ಮುಂದೆ ಅಥವಾ ಊರ ಮುಂದಿನ ಅನುಕೂಲತೆ ಇರುವ ಬಯಲು ಜಾಗೆಯಲ್ಲಿ,ಹುಣ್ಣಿಮೆಯ ಸಾಯಂಕಾಲದಿಂದ ಹಿಡಿದು ಬೆಳಗಿನ ಜಾವ ಕಾಮದಹನ ಮಾಡಿದ ನಂತರ ಹೋಳಿಯನ್ನು ಆಡುವ ಪದ್ಧತಿ ಕೆಲವುಕಡೆ
ಸ್ಥಾನ ಮತ್ತು ಸಮಯಕ್ಕನುಣವಾಗಿ ಆಚರಿಸುವ ಪದ್ದತಿಯು ಸಹ ಇದೆ. ಹೆಚ್ಚಾಗಿ ಗ್ರಾಮದೇವತೆಯ ಎದುರಿಗೆ ಹೋಳಿಯನ್ನು ಆಚರಿಸಲಾಗುತ್ತದೆ.

ಮಧ್ಯದಲ್ಲಿ ಔಡಲಗಿಡ, ತೆಂಗಿನಗಿಡದ ಗರಿಗಳು, ಅಡಿಕೆಗಿಡ ಅಥವಾ ಕಬ್ಬನ್ನು ನಿಲ್ಲಿಸುತ್ತಾರೆ. ಅದರ ಸುತ್ತಲೂ ಬೆರಣಿ ಮತ್ತು ಒಣ ಕಟ್ಟಿಗೆಗಳನ್ನು ಹೊಂದಿಸಿಸುತ್ತಾರೆ. ಮೊದಲು ಯಜಮಾನನು (ಹೋಳಿ ಮಾಡುವವನು) ಶುಚಿರ್ಭೂತನಾಗಿ, ದೇಶಕಾಲದ ಉಚ್ಚಾರವನ್ನು ಮಾಡುತ್ತಾರೆ. ‘ಸಕುಟುಂಬಸ್ಯ ಮಮ ಢುಂಢಾರಾಕ್ಷಸೀ ಪ್ರೀತ್ಯರ್ಥಂ ತತ್ಪೀಡಾಪರಿಹಾರಾರ್ಥಂ ಹೋಲಿಕಾಪೂಜನಮಹಂ ಕರಿಷ್ಯೇ|’ ಎಂದು ಸಂಕಲ್ಪ ಮಾಡಿ. ನಂತರ ಪೂಜೆಯನ್ನು ಮಾಡಿ ನೈವೇದ್ಯ ತೋರಿಸಿ. ನಂತರ ‘ಹೋಲಿಕಾಯೈ ನಮಃ’। ಎಂದು ಹೇಳಿ ಹೋಳಿಯನ್ನು ಹೊತ್ತಿಸುತ್ತಾರೆ. ಹೋಳಿಯು ಹೊತ್ತಿದ ನಂತರ ಹೋಳಿಯ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಹೋಳಿಯು ಸಂಪೂರ್ಣವಾಗಿ ಉರಿದ ನಂತರ ಹಾಲು ಮತ್ತು ತುಪ್ಪವನ್ನು ಚಿಮುಕಿಸಿ ಅದನ್ನು ಶಾಂತಗೊಳಿಸಿದ. ಅನಂತರ ನೆರೆದ ಜನರಿಗೆ ತೆಂಗಿನಕಾಯಿ, ಹೆಬ್ಬಲಸು ಮುಂತಾದ ಹಣ್ಣುಗಳನ್ನು ಹಂಚಿ. ಆ ರಾತ್ರಿಯನ್ನು ನೃತ್ಯಗಾಯನಗಳಲ್ಲಿ ಕಳೆದು. ಮರುದಿನ ಬೆಳಗ್ಗೆ ಹೋಳಿಯ ಬೂದಿಗೆ ವಂದಿಸುತ್ತಾರೆ. ಆ ಹೋಳಿಯ ಬೂದಿಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ, ಅಂದರೆ ಆಧಿ-ವ್ಯಾಧಿಗಳ ತೊಂದರೆಯಾಗುವುದಿಲ್ಲ ಎಂಬುದು ನಂಬಿಕೆ (ಆಧಿ ಎಂದರೆ ಮಾನಸಿಕ ವ್ಯಥೆ ಅಥವಾ ಚಿಂತೆ ಮತ್ತು ವ್ಯಾಧಿ ಎಂದರೆ ರೋಗ) ನಂತರ ಉಳಿದ ಬೂಧಿಯನ್ನುವಿಸರ್ಜಿಸುವ ಪದ್ಧತಿ ಇದೆ. ಅನಂತರ ಹೋಳಿಯ ಪ್ರಾರ್ಥನೆ ಮಾಡುತ್ತಾರೆ.ಅದೇ ಧೂಳಿವಂದನ.

ಧೂಳಿವಂದನ
ಫಾಲ್ಗುಣ ಕೃಷ್ಣ ಪ್ರತಿಪದೆಯಂದು
ಹೋಳಿಯ ಬೂದಿ ಅಥವಾ ಧೂಳಿಯ ಪೂಜೆಯನ್ನು ಮಾಡುವುದಿರುತ್ತದೆ. ಪೂಜೆಯಾದ ನಂತರ ಈ ಕೆಳಗಿನ ಮಂತ್ರದಿಂದ ಅವಳಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

ವಂದಿತಾಸಿ ಸುರೇಂದ್ರೇಣ ಬ್ರಹ್ಮಣಾ ಶಂಕರೇಣ ಚ।
ಅತಸ್ತ್ವಂ ಪಾಹಿ ನೋ ದೇವಿ ಭೂತೇ ಭೂತಿಪ್ರದಾ ಭವ॥

ಅರ್ಥ

ಹೇ ಲಕ್ಷ್ಮೀ, ನೀನು ಇಂದ್ರ, ಬ್ರಹ್ಮ ಮತ್ತು ಮಹೇಶ್ವರರಿಂದ ವಂದಿತಳಾಗಿರುವೆ, ಆದುದರಿಂದ ಹೇ ಐಶ್ವರ್ಯವತಿ ದೇವಿಯೇ, ನೀನು ನಮಗೆ ಐಶ್ವರ್ಯವನ್ನು ಕೊಡುವವಳಾಗು ಮತ್ತು ನಮ್ಮನ್ನು ರಕ್ಷಿಸು ಎಂದು.

holi colours

ರಂಗಪಂಚಮಿ

ಫಾಲ್ಗುಣ ಕೃಷ್ಣ ಪಂಚಮಿ, ಬಹಳ ಕಡೆಗಳಲ್ಲಿ ಹೋಳಿಯ ಮರುದಿನವಾಗಲಿ ಅಥವಾ ರಂಗಪಂಚಮಿಯ ದಿನ ಹೋಳಿ ಉತ್ಸವ ಆಚರಿಸಲಾಗುತ್ತದೆ. ಈ ದಿನದಂದು ಇತರರ ಮೇಲೆ ಗುಲಾಲು,ಬಣ್ಣದ ನೀರು ಮುಂತಾದವುಗಳನ್ನು ಎರಚಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ.

ಹೋಳಿದಹನಕ್ಕೆ ಬಳಸಬಹುದಾದ ಪದಾರ್ಥಗಳು

ಹೋಲಿಕಾ ದಹನದ ಸಂದರ್ಭದಲ್ಲಿ, ಆಯ್ದ ಕೆಲವು ಮರಗಳ ಕಟ್ಟಿಗೆಯನ್ನು ಮಾತ್ರ ಸುಡಬೇಕು ಎಂಬುದು ಪ್ರತಿತಿ. ಅವು ಯಾವುವೆಂದರೆ ಔಡಲ ಮರ ಅಥವಾ ಕ್ಯಾಸ್ಟರ್ ಮತ್ತು ಹತ್ತಿ ಮರದ ಕಟ್ಟಿಗೆ. ಈ ಸಮಯದಲ್ಲಿ ಔಡಲ ಮತ್ತು ಹತ್ತಿ ಎರಡು ಮರಗಳ ಎಲೆಗಳು ಉದುರುತ್ತವೆ. ಹಾಗಾಗಿ ಅವುಗಳನ್ನು ಸುಡದಿದ್ದರೆ, ಅವುಗಳಲ್ಲಿ ಕೀಟಗಳಾಗುತ್ತವೆ. ಈ ಕಾರಣದಿಂದ ಈ ಎರಡೂ ಮರಗಳ ಕಟ್ಟಿಗೆಯನ್ನು ಹೋಲಿಕಾ ದಹನದಲ್ಲಿ ಬಳಸುವುದು ವಾಡಿಕೆ.

cow dung

ಹಸುವಿನ ಸಗಣಿಯಿಂದ ತಯಾರಿಸಿದ ಭೆರಣಿ

ಹೋಲಿಕಾ ದಹನದ ವೇಳೆ ಬಳಸಲಾಗುತ್ತದೆ, ಗೋವಿನ ಸಗಣಿಯಿಂದ ತಯಾರಿಸಿದ ಭೆರಣಿ(ಕುಳ್ಳು)ನ್ನು ಬಳಸಿದರೆ ಶುಭ ಫಲ ಸಿಗುತ್ತದೆ ಎನ್ನುತ್ತಾರೆ.ಇದರ ಹಿಂದೆ ಇರುವ ವೈಜ್ಞಾನಿಕ ಉದ್ದೇಶವಿಷ್ಟೇ ಕುಳ್ಳಿನಿಂದ ಬರುವ ಧೂಮವು ವಾತಾವರಣ ಶುದ್ಧವಾಗಿಡುತ್ತದೆ ,ಹೋಲಿಕಾ ಬೆಂಕಿಯಲ್ಲಿ ಕಳೆಗಳನ್ನು ಸಹ ಸುಡಲಾಗುತ್ತದೆ. ಹೋಲಿಕಾ ದಹನ ದುಷ್ಟತೆಯ ಅಂತ್ಯವನ್ನು ಪ್ರತಿನಿಧಿಸುತ್ತದೆ.

Holi 2024

ಭಾವ್ಯಕ್ಯತೆಯನ್ನು ಸೂಚಿಸುವ ಹಬ್ಬ

ಜಾತಿ, ಧರ್ಮ, ಮೇಲು, ಕೀಳು, ದೊಡ್ಡವರು, ಚಿಕ್ಕವರು ಎನ್ನುವ ತಾರತಮ್ಯವಿಲ್ಲದೆ ಎಲ್ಲರೂ ಬಣ್ಣವನ್ನು ಬಳಿಯುವುದು, ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವ ಆಚರಣೆಯನ್ನು ಕೈಗೊಳ್ಳುವ, ಈ ಹಬ್ಬವು ಎಲ್ಲರ ನಡುವೆ ಇರುವ ಅಹಂ ಹಾಗೂ ಸೊಕ್ಕಿನ ಭಾವನೆಯನ್ನು ತೊರೆದು ಬೆರೆತು ಬಾಳುವ ಸಂದೇಶವನ್ನು ನೀಡುವುದು. ಎಲ್ಲರೊಂದಿಗೂ ಬೆರೆತಾಗ ಜೀವನದಲ್ಲಿ ಹೆಚ್ಚು ಸಂತೋಷ ಇರುತ್ತದೆ ಎನ್ನುವುದನ್ನು ಹೋಳಿ ಹಬ್ಬ ತೋರಿಸಿಕೊಡುವುದು.
ಫಾಲ್ಗುಣ ಮಾಸದ ಫೆಬ್ರುವರಿಯಿಂದ ಮಾರ್ಚ್ ನಡುವೆ ಬರುವ ಸಮಯದಲ್ಲಿ ಈ ಹಬ್ಬದ ಉತ್ಸವವು ವಸಂತ ಕಾಲದ ಆರಂಭವನ್ನು ಹಾಗೂ ದೀರ್ಘ ಕಾಲದ ಚಳಿಯ ಅಂತ್ಯವನ್ನು ಸೂಚಿಸುತ್ತದೆ.
ಈ ಪುರಾಣ ಕಥೆಯ ಹಿನ್ನೆಲೆಯಲ್ಲಿಯೇ ಇಂದಿಗೂ ಸಹ ಕೆಲವು ಹಳ್ಳಿಗಳಲ್ಲಿ ಬೆಂಕಿಯ ಕೆಂಡದ ಮೇಲೆ ನಡೆದು ಸಾಗುವುದು, ಹಸುವನ್ನು ನಡೆಸುವ ಆಚರಣೆಯನ್ನು ಅನುಸರಿಸುತ್ತಾರೆ. ಬೆಂಕಿಯಲ್ಲಿ ನಡೆದು ಸಾಗಿದ ವ್ಯಕ್ತಿಗಳ ಕಾಲಿನಲ್ಲಿ ಒಂದೂ ಸುಟ್ಟ ಗುಳ್ಳೆಗಳು ಇರುವುದಿಲ್ಲ. ಅದನ್ನು ಒಂದು ದೈವ ಲೀಲೆ ಎಂದು ಪರಿಗಣಿಸಲಾಗುವುದು. ಈ ರೀತಿಯ ಅನೇಕ ಆಚರಣೆಗಳು ಶ್ರೇಷ್ಠವಾದ ನಂಬಿಕೆಯ ಮೂಲಕ ಇಂದಿಗೂ ಕೆಲವು ಪದ್ಧತಿಗಳು ಜೀವಂತವಾಗಿರುವುದು ವಿಶೇಷ. ಕೆಲವೆಡೆ ಕಾಮದೇವನನ್ನು ಸುಡುವುದು, ನಂತರ ಬೂದಿ ಮತ್ತು ಬಣ್ಣವನ್ನು ಬಳಿದುಕೊಂಡು, ನೃತ್ಯ ಮಾಡುವುದು, ಆತ್ಮೀಯರಿಗೆ ಬಣ್ಣವನ್ನು ಬಳಿಯುವ ಆಚರಣೆಯನ್ನು ಕೈಗೊಳ್ಳುವುದು. ವಿವಿಧ ಕಥೆ ಹಾಗೂ ಆಚರಣೆಯಿಂದ ಕೂಡಿದ್ದರೂ ಏಕತೆ ಹಾಗೂ ಸಂತೋಷದ ಆಚರಣೆಯ ಮೂಲಕ ಬಣ್ಣದ ಹಬ್ಬವನ್ನು ಆಚರಿಸಲಾಗುವುದು.

Continue Reading

ಧಾರ್ಮಿಕ

Holi 2024: ಇಂದು ಹೋಳಿ; ಕೆಟ್ಟದ್ದೆಲ್ಲ ಸುಟ್ಟು ಒಳಿತಷ್ಟೇ ಉಳಿಯಲಿ

ಬಣ್ಣದೋಕುಳಿಯೊಂದಿಗೆ (Holi 2024) ಕಾಮದಹನವೂ ಹೋಳಿ ಹಬ್ಬದ ವಿಶೇಷ. ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬ ಆಚರಿಸಲಾಗುತ್ತದೆ, ಈ ಬಾರಿ ಮಾರ್ಚ್‌ 25ರಂದು ಹೋಳಿ ಹುಣ್ಣಿಮೆ. ಈ ಹಬ್ಬದ ಹಿನ್ನೆಲೆಯ ಕಥೆ ಇಲ್ಲಿದೆ.

VISTARANEWS.COM


on

Holi 2024
Koo

ಹಬ್ಬಗಳ ದೇಶ (Holi 2024) ನಮ್ಮದು. ವರ್ಷದ 365 ದಿನಗಳು ದೇಶದ ಒಂದಲ್ಲಾ ಒಂದು ಪ್ರಾಂತ್ಯದಲ್ಲಿ ಏನಾದರೊಂದು ಹಬ್ಬ-ಹರಿದಿನ ತಪ್ಪುವುದಿಲ್ಲ. ಕೆಲವು ಹಬ್ಬಗಳು ದೇಶದೆಲ್ಲೆಡೆ ಆಚರಿಸಲ್ಪಡುವಂಥವು. ಇವುಗಳಲ್ಲೊಂದು ಮುಖ್ಯ ಹಬ್ಬ ಹೋಳಿ. ಬಣ್ಣದೋಕುಳಿಯೊಂದಿಗೆ ಕಾಮದಹನವೂ ಈ ಹಬ್ಬದ ವೈಶಿಷ್ಟ್ಯ. ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬ ಆಚರಿಸಲಾಗುತ್ತದೆ, ಈ ಬಾರಿ ಮಾರ್ಚ್‌ 25ರಂದು ಹೋಳಿ ಹುಣ್ಣಿಮೆ.

The scene of Shiva cursing Manmatha

ಇದರ ಪೌರಾಣಿಕ ಹಿನ್ನೆಲೆ ಏನು?

ತಾರಕಾಸುರನೆಂಬ ರಕ್ಕದ ಲೋಕಪೀಡಕನಾದ ಸಂದರ್ಭ. ಶಿವನ ಸಂತಾನದಿಂದಲೇ ತನಗೆ ಮರಣ ಎಂಬ ವರವನ್ನು ಆತ ಪಡೆದು ಸೊಕ್ಕಿರುತ್ತಾನೆ. ಇತ್ತ, ದಾಕ್ಷಾಯಿಣಿಯನ್ನು ಕಳೆದುಕೊಂಡು ಉಗ್ರ ತಪದಲ್ಲಿ ನಿರತನಾದ ಶಿವನಿಗೆ ಲೋಕದ ಪರಿವೆಯೇ ಇರುವುದಿಲ್ಲ. ಆತನಿಗಾಗಿಯೇ ಪಾರ್ವತಿಯಾಗಿ ಮರುಜನ್ಮ ಪಡೆದ ಸತಿಯನ್ನು ಕಣ್ಣೆತ್ತಿಯೂ ನೋಡದಿದ್ದರೆ, ಶಿವನ ಸಂತಾನ ಜನಿಸುವುದೆಂದು, ತಾರಕನ ವಧೆ ಆಗುವುದೆಂದು? ಹಾಗಾಗಿ ದೇವತೆಗಳೆಲ್ಲ ಮನ್ಮಥ (ಕಾಮದೇವ)ನ ಮೊರೆ ಹೋಗುತ್ತಾರೆ. ವಿನಾಶದ ಅರಿವಿದ್ದರೂ, ಲೋಕ ಕಲ್ಯಾಣಕ್ಕಾಗಿ ಈ ಕಾರ್ಯಕ್ಕೆ ಮನ್ಮಥ ಒಪ್ಪಿಕೊಳ್ಳುತ್ತಾನೆ. ಹೂ ಬಾಣಗಳಿಂದ ಶಿವನನ್ನು ಎಬ್ಬಿಸುತ್ತಾನೆ. ತನ್ನ ತಪೋಭಂಗವಾಗಿದ್ದಕ್ಕೆ ಕ್ರೋಧಗೊಂಡ ಈಶ್ವರ, ಮೂರನೇ ಕಣ್ಣು ತೆರೆದು ಕಾಮನನ್ನು ದಹಿಸುತ್ತಾನೆ. ಹೋಳಿ ಹಬ್ಬದ ಕಾಮನ ದಹನದ ಪೌರಾಣಿಕ ಹಿನ್ನೆಲೆಯಿದು.

Holika was burned in that fire.

ಇನ್ನೊಂದು ಕಥೆ ಹೀಗಿದೆ

ಇದಕ್ಕೆ ಇನ್ನೂ ಒಂದು ಕಥೆಯಿದೆ. ಹರಿಪಾರಮ್ಯವನ್ನು ಧಿಕ್ಕರಿಸಿ ಹಿರಣ್ಯಕಶಿಪು ಮೆರೆಯುತ್ತಿದ್ದ ದಿನಗಳವು. ಹರಿಭಕ್ತನಾದ ತನ್ನದೇ ಮಗ ಪ್ರಹ್ಲಾದನನ್ನು ಕೊಲ್ಲುವುದಕ್ಕೆಂದು ಸೋದರಿ ಹೋಳಿಕಾ ಎನ್ನುವವಳ ನೆರವನ್ನು ಹಿರಣ್ಯಕಶಿಪು ಕೇಳುತ್ತಾನೆ. ಬೆಂಕಿಯಲ್ಲಿ ಸುಡದಿರುವಂಥ ವಸ್ತ್ರ ಹೋಳಿಕಾಗಿರುತ್ತದೆ. ಬಾಲ ಪ್ರಹ್ಲಾದನನ್ನು ಹೊತ್ತುಕೊಂಡು ಆಕೆ ಅಗ್ನಿಕುಂಡ ಪ್ರವೇಶಿಸುತ್ತಾಳೆ. ಆ ಹೊತ್ತಿಗೆ ಆಕೆಯ ವಸ್ತ್ರವು ಹಾರಿಹೋಗುತ್ತದೆ. ಹೋಳಿಕಾ ದಹನವಾಗಿ, ಪ್ರಹ್ಲಾದ ಕೂದಲೂ ಕೊಂಕದಂತೆ ಉಳಿಯುತ್ತಾನೆ ಎನ್ನುತ್ತದೆ ಕಥೆ.

Holi

ಏನು ಈ ಹಬ್ಬದ ಮಹತ್ವ?

ಪೌರಾಣಿಕ ಕಥೆಗಳು ಏನೇ ಆದರೂ, ಕೆಟ್ಟದ್ದೆಲ್ಲ ಸುಟ್ಟು ಒಳಿತಷ್ಟೇ ಉಳಿಯಲಿ ಎನ್ನುವುದು ಕಾಮದಹನ ಆಶಯ. ನಮ್ಮೊಳಗೂ ಇರುವಂಥ ವಿಕಾರಗಳನ್ನೆಲ್ಲ ಸುಟ್ಟುರುಹಿ, ಬದುಕಿಗೆ ಹೊಸದಾಗಿ ರಂಗು ತುಂಬಿಸಿಕೊಳ್ಳಬೇಕು ಎನ್ನುವುದು ಈ ಹಬ್ಬದ ಸಂದೇಶ. ಇದಲ್ಲದೆ, ಕೃಷ್ಣ-ಗೋಪಿಕೆಯರ ಲೋಕೋತ್ತರ ಪ್ರೀತಿಯ ಸಂದೇಶವನ್ನೂ ಜಗತ್ತಿಗೆ ನೀಡುತ್ತದೆ ಈ ರಂಗಿನಾಟದ ಹಬ್ಬ.

Holi colors

ನೈಸರ್ಗಿಕ ಬಣ್ಣಗಳು

ಈ ಬಣ್ಣದಾಟಕ್ಕೆ ನಿಸರ್ಗದತ್ತವಾದ ಬಣ್ಣಗಳನ್ನು ಬಳಸುವ ವಾಡಿಕೆಯಿತ್ತು. ಅರಿಶಿನ, ಅಕ್ಕಿಹಿಟ್ಟು, ಹೂವಿನ ರಸಗಳು, ಕಹಿಬೇವಿನ ರಸ ಮುಂತಾದ ವಸ್ತುಗಳನ್ನು ರಂಗಿನ ತಯಾರಿಕೆಯಲ್ಲಿ ಬಳಸಲಾಗುತ್ತಿತ್ತು. ಇದರಿಂದ ಹೋಳಿ ಆಡುವವರಿಗೂ, ಆಡಿದ ಪರಿಸರಕ್ಕೂ ಹಾನಿಯಾಗುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಎಲ್ಲವೂ ರಾಸಾಯನಿಕಮಯವಾಗಿದ್ದು, ಹಾನಿಕಾರಕ ಬಣ್ಣಗಳು ಪರಿಸರಕ್ಕೂ ತೊಂದರೆ ತಂದೊಡ್ಡುತ್ತಿವೆ.

Holi Fashion 2024

ಪ್ರಾದೇಶಿಕ ವೈವಿಧ್ಯತೆಗಳು

ಭಾರತದ ಈಶಾನ್ಯ ರಾಜ್ಯಗಳಲ್ಲಿ ಇದು ವಸಂತೋತ್ಸವದ ಹೊತ್ತು. ಕೆಲವು ಕಡೆಗಳಲ್ಲಿ ರಂಗಿನಾಟ ಹೆಚ್ಚು ಜನಪ್ರಿಯವಾಗಿದ್ದರೆ, ಹಲವೆಡೆಗಳಲ್ಲಿ ಕಾಮದಹನಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಉತ್ತರ ಪ್ರದೇಶದ ಕೆಲವೆಡೆಗಳಲ್ಲಿ ಕೃಷ್ಣ-ಗೋಪಿಕೆಯನ್ನು ಸಾಂಕೇತಿಸುವ ʻಲಾತ್‌-ಮಾರ್ ಹೋಲಿʼ ರಂಜನೀಯ ಎನಿಸುತ್ತದೆ. ಇದರಲ್ಲಿ ಮಹಿಳೆಯರು ಕೋಲಿನಿಂದ ತಮಾಷೆಗಾಗಿ ಪುರುಷರಿಗೆ ಹೊಡೆಯುವುದು ಕ್ರಮ!
ಬಣ್ಣದ ಹಬ್ಬ ಭಾರತದಲ್ಲಿ ಮಾತ್ರವಲ್ಲ, ಇನ್ನೂ ಕೆಲವು ದೇಶಗಳಲ್ಲಿ ಜನಪ್ರಿಯತೆ ಗಳಿಸಿದೆ. ಭಾರತೀಯರು ಇರುವಲ್ಲೆಲ್ಲ ಹೋಳಿ ಆಡುವುದು ಇದಕ್ಕೆ ಕಾರಣವಿರಬಹುದು. ಇದಲ್ಲದೆ, ನೆರೆ ದೇಶಗಳಾದ ನೇಪಾಳ, ಭೂತಾನ್‌, ಬಾಂಗ್ಲಾದೇಶಗಳಲ್ಲೂ ಹೋಳಿ ಆಡುವವರಿದ್ದಾರೆ. ಪಶ್ಚಿಮ ದೇಶಗಳಲ್ಲಿ ಭಾರತೀಯ ಸಮುದಾಯದ ಜೊತೆಗೆ ಸ್ಥಳೀಯ ಸಮುದಾಯಗಳೂ ಸೇರಿ ರಂಗಿನಾಟ ಆಡುವುದು ವಿಶೇಷ.

Holi 2024

ಬಣ್ಣಗಳು

ಪಾರಂಪರಿಕವಾಗಿ ಹೋಳಿಯಲ್ಲಿ ಬಳಸಲಾಗುವ ಬಣ್ಣಗಳು ಹಲವಾರು ಅರ್ಥಗಳನ್ನು ಪ್ರತಿನಿಧಿಸುತ್ತಿದ್ದವು. ಉದಾ, ಕೆಂಪು ಬಣ್ಣವೆಂದರೆ ಪ್ರೀತಿ ಮತ್ತು ಸಮೃದ್ಧಿ, ನೀಲಿಯೆಂದರೆ ಶಾಂತಿ ಮತ್ತು ಭಕ್ತಿ, ಹಸಿರು ಬಣ್ಣಕ್ಕೆ ಸುಗ್ಗಿ ಮತ್ತು ಹೊಸತನವೆಂಬ ಅರ್ಥ, ಹಳದಿಯೆಂದರೆ ಜ್ಞಾನ- ಹೀಗೆ. ಹೋಳಿಯೆಂದರೆ ಬಣ್ಣಗಳು ಮಾತ್ರವೇ ಅಲ್ಲ, ಈ ಬಣ್ಣಗಳಿಗೂ ಅರ್ಥವಿದೆ; ಅವುಗಳದ್ದೇ ಆದ ಮಹತ್ವವಿದೆ.

Continue Reading

ಹಾಸನ

Hasana News : ಹೊಳೆನರಸೀಪುರ ಲಕ್ಷ್ಮೀನರಸಿಂಹ ರಥೋತ್ಸವದಲ್ಲಿ ಕಾಲ್ತುಳಿತ; ಭವಾನಿ ರೇವಣ್ಣ ಮುಖಕ್ಕೆ ಬಿದ್ದ ಬಾಳೆಹಣ್ಣು

Hasana News: ಹೊಳೆನರಸೀಪುರದಲ್ಲಿ ನಡೆಯುತ್ತಿರುವ ಶ್ರೀಲಕ್ಷ್ಮೀನರಸಿಂಹ ರಥೋತ್ಸವದಲ್ಲಿ (Holenarasipura Lakshminarasimha Rathotsava) ನೂಕುನುಗ್ಗಲಾಗಿ ಕಾಲ್ತುಳಿತ ಉಂಟಾಗಿದೆ. ಇನ್ನೂ ಭಕ್ತರು ಎಸೆದ ಬಾಳೆಹಣ್ಣು ಭವಾನಿ ರೇವಣ್ಣರಿಗೆ ರಭಸವಾಗಿ ತಗುಲಿದ ಘಟನೆಯೂ ನಡೆದಿದೆ.

VISTARANEWS.COM


on

By

Holenarasipura Lakshminarasimha Rathotsava
Koo

ಹಾಸನ: ಹಾಸನ ಜಿಲ್ಲೆಯ (Hasana News) ಹೊಳೆನರಸೀಪುರದಲ್ಲಿ ಭಾನುವಾರ ಅದ್ಧೂರಿಯಾಗಿ ಶ್ರೀಲಕ್ಷ್ಮೀನರಸಿಂಹ ರಥೋತ್ಸವ (Holenarasipura Lakshminarasimha Rathotsava) ನಡೆಯುತ್ತಿದೆ. ಜನರು ರಥದ ಹಗ್ಗ ಎಳೆಯುವಾಗ ನೂಕುನುಗ್ಗಲಾಗಿ, ಕಾಲ್ತುಳಿತ ಉಂಟಾಗಿದೆ. ರಥ ಎಳೆಯುವಾಗ ಏಕಾಏಕಿ ಹತ್ತಾರು ಮಂದಿ ಕೆಳಗೆ ಬಿದ್ದಿದ್ದಾರೆ.

ಗಾಬರಿಯಿಂದ ಒಬ್ಬರ ಮೇಲೆ ಒಬ್ಬರು ಬಿದ್ದು, ತುಳಿದಾಡಿಕೊಂಡು ಓಡಿದ್ದಾರೆ. ಕೂಡಲೇ ಅಲ್ಲಿದ್ದವರು ಕೆಳಗೆ ಬಿದ್ದವರನ್ನು ಮೇಲೆತ್ತಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ.

ಹೊಳೆನರಸೀಪುರ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವದಲ್ಲಿ ಮಾಜಿ ಸಚಿವ ಎಚ್‌.ಡಿ ರೇವಣ್ಣ, ಪತ್ನಿ ಭವಾನಿ ರೇವಣ್ಣ, (Bhavani Revanna) ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಭಾಗಿಯಾಗಿದ್ದರು. ಲಕ್ಷ್ಮೀ ನರಸಿಂಹ ಸ್ವಾಮಿಗೆ ಹಾಗೂ ಉತ್ಸವ ಮೂರ್ತಿಗೂ ಪೂಜೆ ಸಲ್ಲಿಸಿದ್ದರು.

ಇದೇ ವೇಳೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಕುಟುಂಬದವರು ರಥದ ಮೇಲೆ ಏರಿ ಪೂಜೆ ಸಲ್ಲಿಸಿ ಕುಳಿತಿದ್ದರು. ಈ ವೇಳೆ ಭಕ್ತರು ರಥಕ್ಕೆ ಎಸೆದ ಬಾಳೆಹಣ್ಣು ಭವಾನಿ ರೇವಣ್ಣ ಮೇಲೆ ರಭಸವಾಗಿ ಬಿತ್ತು. ಆದರೆ ಅದೃಷ್ಟವಶಾತ್‌ ಯಾವುದೇ ಅಪಾಯವಾಗಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Lok Sabha Election 20248 mins ago

Lok Sabha Election 2024: ಕೋಲಾರ ಕಾಂಗ್ರೆಸ್‌ ಗಲಾಟೆಗೆ ಸಿಎಂ, ಡಿಸಿಎಂ ಟ್ರೀಟ್ಮೆಂಟ್‌! ತಣ್ಣಗಾದ ರಮೇಶ್‌ ಕುಮಾರ್‌, ಮುನಿಯಪ್ಪ ಬಣ

Health Tips
ಬೆಂಗಳೂರು13 mins ago

Health Tips : ಬೇಸಿಗೆಯಲ್ಲಿ ಲೈಫ್‌ಸ್ಟೈಲ್‌ ಹೇಗಿರಬೇಕು? ಆರೋಗ್ಯ ಇಲಾಖೆಯಿಂದ ಸರಳ ಸೂತ್ರ

Anurag Thakur
ಕ್ರೀಡೆ16 mins ago

Anurag Thakur : 2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್​​; ಅನುರಾಗ್ ಠಾಕೂರ್​

Side Effects Of Pillow
ಆರೋಗ್ಯ29 mins ago

Side Effects Of Pillow: ಎತ್ತರದ ದಿಂಬು ಬಳಸುತ್ತೀರಾ? ಸಮಸ್ಯೆ ತಪ್ಪಿದ್ದಲ್ಲ!

Naveen Polishetty
ಸಿನಿಮಾ34 mins ago

Naveen Polishetty: ಅಮೆರಿಕದಲ್ಲಿ ಬೈಕ್‌ ಅಪಘಾತ; ಅನುಷ್ಕಾ ಶೆಟ್ಟಿ ಜತೆ ತೆರೆ ಹಂಚಿಕೊಂಡಿದ್ದ ನಟನಿಗೆ ಗಾಯ

Hardik Pandya
ಕ್ರೀಡೆ49 mins ago

Hardik Pandya : ಹೈದರಾಬಾದ್​ನಲ್ಲೂ ಪಾಂಡ್ಯಗೆ ಕಾಟ ಕೊಟ್ಟ ಕ್ರಿಕೆಟ್​ ಪ್ರೇಕ್ಷಕರು

money guide
ಮನಿ-ಗೈಡ್59 mins ago

Money Guide: ಗಮನಿಸಿ; ಏ. 1ರಿಂದ ಬದಲಾಗುತ್ತವೆ ಈ ಎಲ್ಲ ಹಣಕಾಸು ನಿಯಮಗಳು

IPL 2024-CSKRCB
ಕ್ರೀಡೆ1 hour ago

IPL 2024 : ವೀಕ್ಷಣೆಯಲ್ಲಿ ದಾಖಲೆ ಬರೆದ ಚೆನ್ನೈ- ಆರ್​ಸಿಬಿ ಮ್ಯಾಚ್​!

Prithviraj Sukumaran
ಸಿನಿಮಾ1 hour ago

Prithviraj Sukumaran: ಪೃಥ್ವಿರಾಜ್ ಸುಕುಮಾರನ್‌ ಅಭಿನಯದ ‘ಆಡುಜೀವಿತಂ’ ಚಿತ್ರಕ್ಕೆ ಪ್ರೇಕ್ಷಕರು ಫಿದಾ!

Lok Sabha Election 2024 DK Shivakumar Suresh assetsworth Rs 598 crore and 259.19 crore Increase in 5 years
Lok Sabha Election 20241 hour ago

Lok Sabha Election 2024: ಡಿ.ಕೆ. ಸುರೇಶ್‌ ಆಸ್ತಿ ಮೌಲ್ಯ 598 ಕೋಟಿ ರೂ.; 5 ವರ್ಷದಲ್ಲಿ 259.19 ಕೋಟಿ ರೂ. ಹೆಚ್ಚಳ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20245 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20246 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ13 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌