Navavidha Bhakti : ಮುಕ್ತಿ ನೀಡುವ ಭಕ್ತಿ Vistara News

ಧಾರ್ಮಿಕ

Navavidha Bhakti : ಮುಕ್ತಿ ನೀಡುವ ಭಕ್ತಿ

ಭಕ್ತಿಯ ಸ್ವರೂಪವನ್ನು ಒಂಬತ್ತು ರೀತಿಯಲ್ಲಿ ವಿಂಗಡಿಸಲಾಗಿದೆ. ಈ ಸ್ವರೂಪಗಳನ್ನು ಪರಿಚಯಿಸುವ ʻನವವಿಧ ಭಕ್ತಿʼ (Navavidha Bhakti) ಲೇಖನ ಮಾಲೆಯನ್ನು ಇಂದಿನಿಂದ ಆರಂಭಿಸಲಾಗುತ್ತಿದೆ. ಇದು ಪ್ರತಿ ಗುರುವಾರ ಪ್ರಕಟವಾಗಲಿದೆ.

VISTARANEWS.COM


on

navavidha bhakti morning spiritual thoughts in kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
prerane morning spiritual thoughts in kannada

ಡಾ. ಸಿ. ಆರ್. ರಾಮಸ್ವಾಮಿ
ಅತ್ಯಮೂಲ್ಯವಾದ ಮಾನವಜನ್ಮವನ್ನು ಪಡೆದಮೇಲೆ ಅದನ್ನು ಸಾರ್ಥಕ ಪಡಿಸಿಕೊಳ್ಳಬೇಕಲ್ಲವೇ? ಅದರ ಸಾರ್ಥಕ್ಯವು ಭಗವಂತನ ಸಾಕ್ಷಾತ್ಕಾರ-ಮೋಕ್ಷಪ್ರಾಪ್ತಿಯಿಂದಲೇ. ಮೋಕ್ಷವೆಂದರೆ ಜನನ-ಮರಣ ಸಂಸರಣದಿಂದ ಮುಕ್ತನಾಗಿ ಭಗವಂತನನ್ನು ಸೇರುವುದು. ಇದನ್ನು ಸಾಧಿಸಲು ಪ್ರಧಾನವಾಗಿ ಮೂರುಮಾರ್ಗಗಳನ್ನು ಜ್ಞಾನಿಗಳು ತಿಳಿಸಿರುತ್ತಾರೆ; ಜ್ಞಾನ-ಕರ್ಮ -ಭಕ್ತಿಮಾರ್ಗಗಳು. ಇವುಗಳಲ್ಲಿ ಜ್ಞಾನ-ಕರ್ಮಮಾರ್ಗಗಳಿಗಿಂತಲೂ ಭಕ್ತಿಮಾರ್ಗವನ್ನು ಕೊಂಡಾಡಲು ವಿಶೇಷವಾದ ಕಾರಣಗಳುಂಟು.

ಭಕ್ತಿಮಾರ್ಗದ ವೈಶಿಷ್ಟ್ಯ

ಭಕ್ತಿಯಲ್ಲಿ ವೈಶಿಷ್ಟ್ಯವೇನೆಂದರೆ ಇದಕ್ಕೆ ವಯಸ್ಸು, ವಿದ್ಯೆ-ರೂಪ-ಪೌರುಷ-ಆಚರಣೆ- ಸಂಪತ್ತು -ಜಾತಿ ಇವು ಯಾವುದೂ ಅಗತ್ಯಯೋಗ್ಯತೆಯೆಂದು ಎಣಿಸಿಕೊಳ್ಳುವುದಿಲ್ಲ. ಅದಕ್ಕೆ ಅನೇಕ ಉದಾಹರಣೆಗಳನ್ನು ಗಮನಿಸಬಹುದು. ಧ್ರುವ ವಯಸ್ಸಿನಲ್ಲಿ ಸಣ್ಣವ. ಆದರೂ ಪರಮಭಕ್ತನಾಗಿದ್ದ. ಪ್ರಹ್ಲಾದನೂ ಹಾಗೆಯೇ. ವಯಸ್ಸು ಅಳತೆಗೋಲಾ ಗುವುದಿಲ್ಲ. ರೂಪಕ್ಕೆ ಕುಬ್ಜೆಯು ಉದಾಹರಣೆ. ಕೃಷ್ಣನು ಮಥುರೆಗೆ ಬಂದಾಗ ದಾರಿಯಲ್ಲಿ ಕುಬ್ಜೆ(ದೇಹ ಸೊಟ್ಟಕ್ಕೆ ಬಗ್ಗಿರುವವಳು)ಯನ್ನು ನೋಡುತ್ತಾನೆ. ರೂಪ ಇಲ್ಲದಿದ್ದರೂಕೂಡ ಎಂತಹ ಭಕ್ತೆಯಾಗಿದ್ದಳು! ಹಾಗೆಯೇ, ಗೋಪಿಕೆಯರಿಗೆ ಯಾವ ಪಾಠವೂ ಆಗಿರಲಿಲ್ಲ, ಗೃಹಿಣಿಯರುಗಳಷ್ಟೇ. ಆದರೆ ಭಕ್ತಿಯಲ್ಲಿ ಅಳವಾಗಿ ಮುಳುಗಿದ್ದವರು.

ನಾರದಭಕ್ತಿಸೂತ್ರದಲ್ಲಿ ಭಕ್ತನಾಗಲು ವಿದ್ಯಾವಂತರಾಗಬೇಕಿಲ್ಲವೆನ್ನುವುದಕ್ಕೆ ಉತ್ತಮಉದಾಹರಣೆಯಾಗಿ ಗೋಪಿಕೆಯರನ್ನೇ ಸ್ಮರಿಸಿಕೊಳ್ಳುತ್ತಾರೆ. ಇನ್ನು ಜಾತಿಯ ವಿಷಯ ತೆಗೆದುಕೊಂಡರೆ ದಾಸೀಪುತ್ರನಾದ ವಿದುರನನ್ನು ಉದಾಹರಣೆಯಾಗಿ ಕೊಡುತ್ತಾರೆ. ಶೂದ್ರನಾಗಿದ್ದರೂ ಕೂಡ ಪರಮಭಕ್ತ. ಮಹಾಭಾರತದಲ್ಲಿ ವಿದುರನ ಸ್ಥಾನವೇ ವಿಶೇಷವಾದದ್ದು. ವಿದುರನನ್ನು ‘ಮಹಾತ್ಮವಿದುರ’ನೆಂದೇ ಕರೆಯುವುದು. ಕೃಷ್ಣನನ್ನು ಪೂರ್ಣವಾಗಿ ಅವತಾರಪುರುಷ ಎಂದು ತಿಳಿದುಕೊಂಡ ಕೆಲವೇ ಮಂದಿಯಲ್ಲಿ ಅವನೂ ಒಬ್ಬ. ಪರಮಭಾಗವತನಾಗಿದ್ದ.

ಪಶು-ಪ್ರಾಣಿಗಳಿಗೂ ಭಕ್ತಿ

ಭಕ್ತಿಮಾರ್ಗವು ಮನುಷ್ಯರಿಗೆ ಮಾತ್ರವೇ ಅಲ್ಲ, ಪ್ರಾಣಿಗಳು ಕೂಡ ಭಕ್ತಿಯ ಮೂಲಕ ಉದ್ಧಾರವಾದ ಕಥೆಗಳುಂಟು. ಉದಾಹರಣೆಗೆ ಗಜೇಂದ್ರ. ಅವನು ಎಂತಹ ಭಕ್ತನಾಗಿದ್ದನೆಂದರೆ `ಆದಿಮೂಲಾ’ ಎಂದು ಕರೆದಕೂಡಲೇ ಸಾಕ್ಷಾತ್ ಮಹಾವಿಷ್ಣುವೇ ವೈಕುಂಠದಿಂದ ಇಳಿದು ಬರಬೇಕೆಂದು ತೀರ್ಮಾನಮಾಡಿ ತಕ್ಷಣವೇ ಗರುಡಾರೂಢನಾಗುತ್ತಾನೆ. ಗರುಡನಿಗೆ “ಬೇಗಹೋಗು” ಎಂದು ಆಜ್ಞೆಮಾಡುತ್ತಾನಂತೆ ಭಗವಂತ! ಪೂಜ್ಯರಂಗಪ್ರಿಯಸ್ವಾಮಿಗಳು ತಮಾಷೆಯಾಗಿ ಹೇಳುತ್ತಿದ್ದರು: ‘ವೇಗದಲ್ಲಿ ಗರುಡನನ್ನು ಮೀರಿಸುವವರು ಯಾರೂ ಇಲ್ಲ, ಅಂತಹವನನ್ನೂ ಇನ್ನೂವೇಗವಾಗಿ ಹೋಗುವಂತೆ ಹೇಳಿದರೆ ಅದೆಷ್ಟು ಅವಮಾನ ಅವನಿಗೆ!” ಭಗವಂತನೇ ಅಷ್ಟು ತ್ವರೆಮಾಡಿಸಬೇಕಾದರೆ ಗಜೇಂದ್ರ ಎಂತಹ ಉನ್ನತಭಕ್ತನಾಗಿರಬೇಕು? ಗಜೇಂದ್ರ ಪ್ರಾಣಿಯಲ್ಲವೇ?

ಗರುಡ-ಪಕ್ಷಿರಾಜ, ಅವನೂ ಪರಮಭಕ್ತ, ಪರಮಭಾಗವತನೇ ಹನುಮಂತನಂತೆ. ಭಗವತ್ಭಕ್ತನಾದ ಜಟಾಯುವೂ ಪಕ್ಷಿಯೇ. ಭಕ್ತಿಯ ವೈಶಿಷ್ಟ್ಯವನ್ನು ಪುರಾಣಗಳು ಇನ್ನೂಅನೇಕ ಉದಾಹರಣೆಗಳ ಮೂಲಕ ವಿವರಿಸುತ್ತವೆ.

ಭಕ್ತಿಯು ಸುಲಭೋಪಾಯ

ಮತ್ತೊಂದು ವೈಶಿಷ್ಟ್ಯವುಂಟು. ಕರ್ಮ-ಜ್ಞಾನಮಾರ್ಗಗಳಿಗೆ ಹೋಲಿಸಿದರೆ ಇದು ಸುಲಭೋಪಾಯ. ಜ್ಞಾನಯೋಗದಲ್ಲಿ ಸಾಮಾನ್ಯರ ಹಿಡಿತಕ್ಕೆ ಸಿಗದ ನಿರ್ಗುಣ-ನಿರಾಕಾರವಸ್ತು ಒಂದನ್ನು ಉಪಾಸನೆಮಾಡುವುದು ಎಷ್ಟು ಕಷ್ಟಕರ. ಆದರೆ ಭಕ್ತಿಮಾರ್ಗದಲ್ಲಿ ಒಂದು ಆಕಾರ-ಅವಲಂಬನವಿರುತ್ತದೆ; ಕೇವಲ ಅವಲಂಬನವಲ್ಲ-ಶಭಾವಲಂಬನವಿರುತ್ತದೆ. ಅವಲಂಬನವೆಂದರೆ ಭಗವಂತನ ರೂಪ. ಚಿತ್ರರೂಪದಲ್ಲೋ-ವಿಗ್ರಹ ರೂಪದಲ್ಲೋ ಪೂಜಿಸಿದಾಗ ಮನಸ್ಸಿಗೆ ಒಂದುರೀತಿಯ ಆಕರ್ಷಣೆಯುಂಟಾಗುತ್ತದೆ. ಆಕಾರವಿದ್ದಲ್ಲಿ ಮನಸ್ಸು ತಾನಾಗಿಯೇ ಲಯವಾಗುವುದಕ್ಕೆ ಅವಕಾಶವಿದೆ. ರಾಮನಮೂರ್ತಿ- ಕೃಷ್ಣನಮೂರ್ತಿ-ಶಿವನಮೂರ್ತಿ -ಕಾರ್ತಿಕೇಯನ ಮೂರ್ತಿ ಎಲ್ಲವೂ ಸುಂದರಮೂರ್ತಿಗಳು. ಅವನ್ನು ನೋಡುತ್ತ-ನೋಡುತ್ತ ಮನಸ್ಸು ತಾನಾಗಿಯೇ ಲಯವಾಗುತ್ತದೆ. ಆದ್ದರಿಂದ ಭಕ್ತಿಮಾರ್ಗವು ಅತ್ಯಂತ ಸುಲಭವಾದದ್ದು.

ಇಂತಹ ಭಕ್ತಿಯ ಬಗೆಗಿನ ಕೆಲವಂಶಗಳನ್ನು ನೋಡೋಣ;

ಭಕ್ತಿ ಎಂದರೇನು?

ಭಕ್ತಿ ಎಂದರೆ ಪ್ರೇಮಸ್ವರೂಪವಾದದ್ದು. ಲೋಕದಲ್ಲಿ ಒಬ್ಬ ವ್ಯಕ್ತಿಯಬಗ್ಗೆ ಉತ್ಕಟವಾದ ಪ್ರೀತಿಯುಂಟಾದಾಗ ಅದನ್ನು ಪ್ರೇಮ ಎನ್ನುತ್ತೇವೆ. ಅದು ಪರಸ್ಪರವಾಗಿ ಇರುವಂತಹುದ್ದು. ಮುಂದೆ ಕಾಮವಾಗುತ್ತದೆ. ಆ ಪ್ರೀತಿ-ಪ್ರೇಮ ಭಾವವನ್ನು ಭಗವಂತನಲ್ಲಿಟ್ಟರೆ ಅದಕ್ಕೆ ಭಕ್ತಿಯೆಂದು ಹೆಸರು. ನಾರದಭಕ್ತಿಸೂತ್ರದಲ್ಲಿ ಭಕ್ತಿಯನ್ನು ಪರಮಪ್ರೇಮಸ್ವರೂಪ ಎಂಬುದಾಗಿ ಹೇಳಿದ್ದಾರೆ. ಭಗವತ್ಭಾವದಲ್ಲೇ ಸಂಪೂರ್ಣವಾಗಿ ಮುಳುಗಿರುವುದು.

ಲೌಕಿಕವಾದ ಪ್ರೀತಿ-ಪ್ರೇಮಗಳು ಪರಸ್ಪರವಿರುವ ಹಾಗೆಯೇ, ಭಗವಂತನಲ್ಲಿ ಪ್ರೀತಿಯಿಡುವವರಲ್ಲಿ ಭಗವಂತನೂಕೂಡ ಪ್ರೀತಿಯನ್ನು ತೋರಿಸುತ್ತಾನೆ. ಭಗವದ್ಗೀತೆಯಲ್ಲಿ ಭಕ್ತನಿಗಿರಬೇಕಾದ ಗುಣಗಳನ್ನು ಒಂದೊಂದಾಗಿ ಹೇಳಿ ಇಂತಹವನು ನನಗೆ ಅತ್ಯಂತ ಪ್ರಿಯನಾದವನು, ಪ್ರೀತಿಗೆಪಾತ್ರನಾದವನು “ಮದ್ಭಕ್ತಃ ಸ ಮೇ ಪ್ರಿಯ:” ಎಂಬುದನ್ನೇ ಪಲ್ಲವಿಯಾಗಿ ಶ್ರೀಕೃಷ್ಣನು ಹೇಳುತ್ತಾನೆ. ಇದು ಭಕ್ತ-ಭಗವಂತರ ಪರಸ್ಪರಪ್ರೀತಿಯೇ.

ಭಕ್ತಿಯ ಲಕ್ಷಣವನ್ನು ಉದಾಹರಣೆಗಳ ಮೂಲಕ ಹೀಗೆ ವರ್ಣಿಸುತ್ತಾರೆ ಶ್ರೀ ಶಂಕರಭಗವತ್ಪಾದರು:

ಅಂಕೋಲಂ ನಿಜಬೀಜಸಂತತಿರಯಸ್ಕಾಂತೋಪಲಂ ಸೂಚಿಕಾ
ಸಾಧ್ವೀ ನೈಜವಿಭುಂ ಲತಾಕ್ಷಿತಿರುಹಂ ಸಿಂಧುಃ ಸರಿದ್ವಲ್ಲಭಮ್….

ಅಂಕೋಲ ಬೀಜವು ಅದೇ ಮರವನ್ನು, ಸೂಜಿಯು ಅಯಸ್ಕಾಂತವನ್ನೂ, ಪತಿವ್ರತಾಸ್ತ್ರೀ ತನ್ನವಲ್ಲಭನನ್ನೂ, ಬಳ್ಳಿಯು ಮರವನ್ನೂ, ನದಿಯು ಸಾಗರವನ್ನು ಆಶ್ರಯಿಸುವಂತೆಯೇ ಮನಸ್ಸು ಪಶುಪತಿಯ ಪಾದಾರವಿಂದಗಳಲ್ಲಿ ನೆಲೆನಿಲ್ಲುವುದೇ ಭಕ್ತಿಯೆಂದು ಆಚಾರ್ಯರು ತಿಳಿಸುತ್ತಾರೆ. ಇದರ ಸ್ವಾರಸ್ಯವೆಂದರೆ ಉತ್ತರೋತ್ತರ ಅಂಟು (ಪ್ರೀತಿ) ವೃದ್ಧಿಯಾಗುತ್ತಾ ಕೊನೆಯಲ್ಲಿ ನದಿಯು ಸಾಗರದಲ್ಲಿ ವಿಲೀನವಾಗುವುದನ್ನು ಎತ್ತಿ ತೋರಿಸಿರುವರು.

ಭಕ್ತಿ ಎಂಬ ಪದವೇ ಸೇರ್ವೆಯನ್ನೂ ವಿಭಕ್ತಿಯೆಂಬುದು ಬೇರ್ಪಡುವಿಕೆಯನ್ನೂ ತಿಳಿಸುತ್ತದೆ ಎಂದೂ ಭಕ್ತಿಯು ಜೀವ-ದೇವರ ಸೇರ್ವೆಯನ್ನು ಸೂಚಿಸುತ್ತದೆ ಎಂಬುದಾಗಿಯೂ ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ವಿವರಿಸುತ್ತಿದ್ದರು.

ಭಕ್ತಿಗೆ/ಆಕರ್ಷಣೆಗೆ ದ್ವಾರಗಳು

ಒಬ್ಬ ವ್ಯಕ್ತಿಯಲ್ಲಿ ಅನೇಕ ಕಾರಣಗಳಿಂದ ಅನೇಕ ವಿಷಯಗಳ ಮೂಲಕ ಪ್ರೀತಿಯು ಉಂಟಾಗಬಹುದು. ವ್ಯಕ್ತಿಯ ರೂಪವೇ ಒಂದು ರೀತಿಯ ಆಕರ್ಷಣೆ ಉಂಟುಮಾಡಬಹುದು. ಆಗ ತಾನಾಗಿಯೇ ಮನಸ್ಸು ಲಯವಾಗಲು ಪ್ರಾರಂಭವಾಗುತ್ತದೆ. ವ್ಯಕ್ತಿಗಳಲ್ಲಿ ಲೌಕಿಕವಾದ ಈ ಭಾವವು ನಮ್ಮ ಪ್ರಕೃತಿಯನ್ನು-ಇಂದ್ರಿಯಗಳನ್ನು ಕೆರಳಿಸುತ್ತದೆ. ಆದರೆ ಭಗವಂತನಲ್ಲಿನ ಪ್ರೀತಿ-ಆಕರ್ಷಣೆಗಳು ಇಂದ್ರಿಯಗಳನ್ನು ಕೆರಳಿಸುವುದಿಲ್ಲ; ಲಯವನ್ನು-ಏಕಾಗ್ರತೆಯನ್ನು ಮೂಡಿಸುತ್ತದೆ.

ಭಗವಂತನ ರೂಪವನ್ನೇ ಧ್ಯಾನಿಸಿ ಆಕರ್ಷಿತರಾಗುವುದು ಒಂದು ವಿಧಾನವಾದರೆ, ಅವನ ಅನೇಕ ಗುಣಗಳಲ್ಲಿ ಯಾವುದಾದರೂ ಒಂದಾಗಲಿ, ಅನೇಕವಾಗಲಿ ನಮಗೆ ಇಷ್ಟವಾಗಬಹುದು. ರಾಮನ ವೀರ್ಯ-ಶೌರ್ಯ-ಪರಾಕ್ರಮ ಯಾವುದಾದರೊಂದು ಪ್ರೀತಿಯನ್ನುಂಟುಮಾಡಬಹುದು. ಅವನ ನಗುಮುಖ, ಪ್ರೀತಿಯಿಂದ ಮಾತನಾಡುತ್ತಿದ್ದ ಸನ್ನಿವೇಶದ ವಿವರಗಳು ನಮ್ಮ ಮನಸ್ಸನ್ನು ಸೆಳೆಯಬಹುದು.

ಇದರಿಂದ ಭಕ್ತಿ-ಅನುರಕ್ತಿ ಉಂಟಾಗುತ್ತದೆ. ಇದಲ್ಲದೇ ಪುರಾಣಗಳಲ್ಲಿ ಬೇರೆ ಬೇರೆ ದೇವತೆಗಳ ಪರಾಕ್ರಮ, ಮಹಿಮೆ ಮುಂತಾದವುಗಳ ಬಗ್ಗೆ ವಿವರಣೆಗಳನ್ನೋದಿ ಅವರಲ್ಲಿ ಆಕರ್ಷಣೆ ಉಂಟಾಗಬಹುದು. ನಾವು ಮೋಕ್ಷಕಾಮಿಗಳಾಗಿದ್ದರೆ ನಮಗೂ ಮೋಕ್ಷಬೇಕೆನ್ನಿಸುತ್ತದೆ. ಮೋಕ್ಷಾರ್ಥಿಯಾಗಿ ನಾವು ಅವರನ್ನು ಪೂಜೆ ಮಾಡಿದಾಗ ನಮಗೂ ಆ ದೇವತೆಗೂ ಒಂದು ಸಂಬಂಧ-ಪ್ರೀತಿ ಉಂಟಾಗುತ್ತದೆ. ಕೆಲವು ಪ್ರಕೃತಿಗಳಿಗೆ ಕೆಲವು ದೇವತೆಗಳು ತುಂಬಾ ಇಷ್ಟವಾಗುತ್ತಾರೆ. ಆಗ ಆ ದೇವತೆಯನ್ನು ಅವಲಂಬಿಸಿ ಭಕ್ತಿಯಲ್ಲಿ ಮುಂದೆ ಸಾಗಬಹುದು.(ಮುಂದುವರಿಯುವುದು)

ಲೇಖಕರ ಪರಿಚಯ : ಡಾ. ರಾಮಸ್ವಾಮಿಯವರು ಪರಮಾಣು ಶಾಸ್ತ್ರದಲ್ಲಿ ಪಿಎಚ್‌ಡಿ ಪದವಿಯನಂತರ ಸುಮಾರು 30 ವರ್ಷಗಳ ಕಾಲ ಭೌತಶಾಸ್ತ್ರದ ಸ್ನಾತಕೋತ್ತರ ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಭೌತಶಾಸ್ತ್ರದಂತೆಯೇ, ಅವರಿಗೆ ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಶಾಸ್ತ್ರದಲ್ಲಿಯೂ ಆಸಕ್ತಿ. ಮಹಾಯೋಗಿಗಳಾದ ಶ್ರೀ ಶ್ರೀರಂಗಮಹಾಗುರುಗಳ ಮಾರ್ಗದರ್ಶನದಲ್ಲಿ ಆಧ್ಯಾತ್ಮಮಾರ್ಗದಲ್ಲಿ ತೊಡಗಿಕೊಂಡಿದ್ದಾರೆ. ಶ್ರೀ ಶ್ರೀರಂಗಪ್ರಿಯಸ್ವಾಮಿಯವರು ಅವರ ಗುರುಗಳಾದ ಶ್ರೀ ಶ್ರೀ ರಂಗಮಹಾ ಗುರುಗಳೊಂದಿಗೆ ನಡೆಸಿದ ಸಂಭಾಷಣೆಯ ಆಂಗ್ಲ ತರ್ಜಮೆಯ ಲೇಖನಗಳು, ‘ಆರ್ಯಸಂಕೃತಿ’ ಕನ್ನಡ ಮಾಸಿಕದಲ್ಲಿ ಕಳೆದ 12 ವರ್ಷಗಳಿಂದಲೂ ಪ್ರಕಟವಾಗಿವೆ. ಅಷ್ಟಾಂಗ ಯೋಗ ವಿಜ್ಞಾನಮಂದಿರದಿಂದ ಕನ್ನಡದಲ್ಲಿ ಹೊರಹೊಮ್ಮಿದ ‘ಶ್ರೀರಂಗ ವಚನಾಮೃತ’ ಎಂಬ ಪುಸ್ತಕಗಳು ‘Nectarine Nuggets of Shriranga Mahaguru’ ಎಂಬ ಹೆಸರಿನಲ್ಲಿ ಪುಸ್ತಕ ರೂಪವಾಗಿ ಪ್ರಕಾಶಗೊಂಡಿವೆ. ಇವಲ್ಲದೆ, ಅಷ್ಟಾಂಗ ಯೋಗ ವಿಜ್ಞಾನಮಂದಿರ ಪ್ರಕಾಶ ಪಡಿಸಿರುವ ಅನೇಕ ಕನ್ನಡ ಹಾಗೂ ಆಂಗ್ಲ ಪುಸ್ತಕ- ಲೇಖನಗಳ ಸಂಪಾದಕರಾಗಿದ್ದಾರೆ. ಶ್ರೀಮಂದಿರದ ಯೌಟ್ಯೂಬ್ ಚಾನಲ್‌ನಲ್ಲಿ ಹಾಗೂ ವಿಸ್ತಾರ ಓಂ ಕಾರ ಚಾನಲ್ ನಲ್ಲಿ ಇವರ ಪ್ರವಚನವು ಪ್ರಸಾರವಾಗುತ್ತಿದೆ. ಪ್ರಸ್ತುತ ಅಷ್ಟಾಂಗ ಯೋಗ ವಿಜ್ಞಾನಮಂದಿರದ ಬೆಂಗಳೂರು ಶಾಖೆಯ ಕಾರ್ಯದರ್ಶಿಯಾಗಿದ್ದಾರೆ.

ಇದನ್ನೂ ಓದಿ: Prerane : ಪ್ರಾಮಾಣಿಕತೆಯೇ ಅಧ್ಯಾತ್ಮದ ಮೂಲ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಇದು ಬರೀ ಬೆಳಕಲ್ಲ… ಅದೃಷ್ಟಕ್ಕಾಗಿ ವಾಸ್ತು ಪ್ರಕಾರ ಮನೆಯನ್ನು ಈ ರೀತಿ ಬೆಳಗಿ

Vastu Tips: ಮನೆಯ ಪ್ರತಿಯೊಂದು ಕೋಣೆ ಯಾವ ರೀತಿ ಪ್ರಕಾಶ ಹೊಂದಿರಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ಹೇಳುತ್ತದೆ.

VISTARANEWS.COM


on

home
Koo

ಬೆಂಗಳೂರು: ಮನೆ ನಿರ್ಮಾಣ ಎನ್ನುವುದು ಬಹುತೇಕರ ಎಷ್ಟೋ ವರ್ಷದ ಕನಸಾಗಿರುತ್ತದೆ. ಅಂತಹ ಮನೆಯಲ್ಲಿ ನೆಮ್ಮದಿಯಿಂದ, ಖುಷಿ ಖುಷಿಯಾಗಿ ಜೀವನ ಕಳೆಯುವಂತಿರಬೇಕು. ಸುಮಾರು 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ವಾಸ್ತು ಶಾಸ್ತ್ರ ನೆಮ್ಮದಿ, ಸಮೃದ್ಧಿ ಹೊಂದಿದ ಮನೆಗಾಗಿ ಕೆಲವೊಂದು ವಿಚಾರಗಳನ್ನು ಪ್ರಸ್ತಾವಿಸಿದೆ. ಯಾವ ರೂಮ್‌ ಹೇಗಿರಬೇಕು, ಅಲ್ಲಿ ಯಾವ ರೀತಿಯ ಬೆಳಕಿನ ವ್ಯವಸ್ಥೆ ಮಾಡಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ತಿಳಿಸುತ್ತದೆ. ಆ ಕುರಿತಾದ ವಿವರ ಇಂದಿನ ವಾಸ್ತು ಟಿಪ್ಸ್‌ (Vastu Tips)ನಲ್ಲಿದೆ.

ಹಾಲ್‌

ಇದು ಮನೆಯ ಮುಖ್ಯ ಭಾಗ. ಇಲ್ಲಿ ಗರಿಷ್ಠ ಬೆಳಕು ಇರುವುದು ಮುಖ್ಯ. ಹಾಲ್‌ನ ನೈಋತ್ಯ ಭಾಗದಲ್ಲಿ ಗೋಡೆ ಇದ್ದರೆ ಕುಟುಂಬದ ಸದಸ್ಯರಿಗೆ ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ತರಲು ಪ್ರಕಾಶಮಾನವಾದ ಸ್ಪಾಟ್ ಲೈಟ್ ಅಳವಡಿಸಿ. ಜತೆಗೆ ಕುಟುಂಬದ ಭಾವಚಿತ್ರವನ್ನು ಅಲ್ಲಿಡಬಹುದು. ಕಲಾಕೃತಿಗಳು ಅಥವಾ ಸಸ್ಯಗಳಿದ್ದರೆ ಅವುಗಳಿಗೆ ಪ್ರತ್ಯೇಕ ಲೈಟ್‌ ಅಳವಡಿಸುವುದು ಉತ್ತಮ.

ಬೆಡ್‌ ರೂಮ್‌

ಇಡೀ ದಿನದ ಆಯಾಸ ಕಳೆದು ನೆಮ್ಮದಿಯಿಂದ, ಬೆಚ್ಚಗೆ ವಿಶ್ರಾಂತಿ ಪಡೆಯಲಿರುವ ಜಾಗ ಬೆಡ್‌ ರೂಮ್‌. ನಾವು ಇಲ್ಲಿ ಹೆಚ್ಚಿನ ಸಮಯ ಕಳೆಯುತ್ತೇವೆ. ಇಲ್ಲಿ ಓದುವುದು, ಸಿನಿಮಾ ನೋಡುವುದು, ನಿದ್ದೆ ಮಾಡುವುದು ಸೇರಿದಂತೆ ನಮ್ಮಿಷ್ಟದ ಚಟುವಟಿಕೆಗಳಲ್ಲಿ ನಿರತರಾಗಿರುತ್ತೇವೆ. ಹೀಗಾಗಿ ಈ ಕೋಣೆಯ ಬಗ್ಗೆ ಮುತುವರ್ಜಿ ವಹಿಸುವುದು ಅಗತ್ಯ. ಛಾಯಾಚಿತ್ರಗಳು ಅಥವಾ ವರ್ಣಚಿತ್ರಗಳಿಗೆ ಪ್ರತ್ಯೇಕ ಲೈಟ್‌ ಅಳವಡಿಸಿ. ಮಲಗುವ ಕೋಣೆಯಲ್ಲಿ ಹಿತಕರ ಬೆಳಕು ಸೂಸುವ ದೀಪ ಬಳಸಿ. ಟೇಬಲ್ ಲ್ಯಾಂಪ್‌ಗಳನ್ನು ಇರಿಸುವುದು ಸೂಕ್ತ.

ಡೈನಿಂಗ್‌ ರೂಮ್‌

ಇಲ್ಲಿ ಸ್ಫಟಿಕದ ಶಾಂಡ್ಲಿಯರ್ ದೀಪಗಳನ್ನು ಅಳವಡಿಸಿಕೊಳ್ಳಬಹುದು. ಇದು ಅದೃಷ್ಟವನ್ನು ಹೊತ್ತು ತರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅಲಂಕಾರಿಕ ಹೋಲ್ಡರ್‌ಗಳಲ್ಲಿ ಕ್ಯಾಂಡಲ್‌ ಇರಿಸಬಹುದು. ಇದು ಡೈನಿಂಗ್‌ ರೂಮ್‌ ಅನ್ನು ಆಕರ್ಷಕವಾಗಿಸುತ್ತದೆ. ಒಟ್ಟಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳಕು ಬೀರುವ ಬಲ್ಬ್‌ ಅಳವಡಿಸಿ. ಊಟ ಮಾಡುವಾಗ ಮಬ್ಬು ಇರಬಾರದು.

ಅಡುಗೆ ಕೋಣೆ

ಕುಟುಂಬ ಸದಸ್ಯರು ಒಟ್ಟಿಗೆ ಸೇರುವ ಮತ್ತು ತಮಗಾಗಿ ಆಹಾರ ಸಿದ್ಧಪಡಿಸುವ ಸ್ಥಳ ಅಡುಗೆ ಕೋಣೆ. ಇದು ಮನೆಯ ಇನ್ನೊಂದು ಬಹಳ ಮುಖ್ಯವಾದ ಸ್ಥಳವಾಗಿದ್ದು, ಇದನ್ನು ಸಮರ್ಪಕವಾಗಿ ಬೆಳಗಿಸಬೇಕು. ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ನಿರ್ದಿಷ್ಟ ಕಡೆಗಳಲ್ಲಿ ಲೈಟ್‌ ಅಳವಡಿಸಬೇಕು. ಇಲ್ಲಿ ಬೆಳಕು ಮತ್ತು ನೆರಳು ಸಮಾನವಾಗಿ ಹಂಚಿಕೆಯಾಗಬೇಕು. ಇಲ್ಲಿ ಟ್ಯೂಬ್‌ಲೈಟ್‌ಗಳನ್ನು ಬಳಸಬಹುದು. ಅಕ್ಕಿ, ಬೇಳೆ ಮುಂತಾದ ವಸ್ತುಗಳನ್ನು ದಾಸ್ತಾನು ಇರಿಸುವ ಜಾಗ ಪ್ರಕಾಶಮಾನವಾಗಿರಲಿ.

ಬಾತ್‌ ರೂಮ್‌

ಬಾತ್‌ ರೂಮ್‌ನ ಎಲ್ಲ ಕಡೆ ಬೆಳಕು ಹರಡುವಂತಿರಬೇಕು. ಮಂದ ಬೆಳಕು ಬೀರಲು ಕಡಿಮೆ ವ್ಯಾಟ್‌ನ ಬಲ್ಬ್ ಬಳಸಬಹುದು. ಸೋಪ್‌, ಪೇಸ್ಟ್‌, ಬ್ರಷ್‌ ಮುಂತಾದ ವಸ್ತುಗಳನ್ನು ಇರಿಸುವ ಸ್ಥಳಗಳ ಸುತ್ತಲೂ ಬೆಳಕಿನ ವ್ಯವಸ್ಥೆ ಮಾಡಿ. ಅಪಾಯಗಳನ್ನು ತಪ್ಪಿಸಲು ಟಬ್ ಅಥವಾ ಶವರ್ ಮೇಲಿನ ಲೈಟ್‌ಗಳು ನೀರು ಮತ್ತು ಆವಿ-ನಿರೋಧಕ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.

ವಾಸ್ತು ಪ್ರಕಾರ ಲೈಟ್‌ ಅಳವಡಿಕೆಯ ಸಾಮಾನ್ಯ ನಿಯಮಗಳು

  • ಲೈಟ್‌ ಉತ್ತರ ಮತ್ತು ಪೂರ್ವ ಗೋಡೆಗಳ ಮೇಲಿರಿಸುವುದು ಸಕಾರಾತ್ಮಕತೆಯ ಸಂಕೇತ.
  • ಯಾವುದೇ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಲೈಟ್‌ ಅಳವಡಿಸಬೇಡಿ. ಇದನ್ನು ನಕಾರಾತ್ಮಕವೆಂದು ಪರಿಗಣಿಸಲಾಗುತ್ತದೆ.
  • ದಕ್ಷಿಣ ಭಾಗದಲ್ಲಿ ಪ್ರಕಾಶಮಾನವಾದ ದೀಪಗಳನ್ನು ಇರಿಸಿ. ಇದರಿಂದ ವೃತ್ತಿ ಜೀವನದಲ್ಲಿ ಏಳಿಗೆ ಕಾಣಬಹುದು.
  • ದೇವರ ಕೋಣೆ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿದ್ದರೆ ನಕಾರಾತ್ಮಕ ಶಕ್ತಿಯನ್ನು ತಪ್ಪಿಸಲು ಬಿಳಿ ಬಣ್ಣದ ಬೆಳಕನ್ನು ಬಳಸಿ
  • ಮುಖ್ಯ ಬಾಗಿಲಿಗೆ ಹೋಗುವ ದಾರಿ ಸಾಕಷ್ಟು ಪ್ರಕಾಶಮಾನವಾಗಿರಬೇಕು.
  • ಮೆಟ್ಟಿಲು ಇಳಿಯುವ ಸ್ಥಳದಲ್ಲಿಯೂ ಪ್ರಕಾಶಮಾನವಾದ ದೀಪಗಳನ್ನು ಅಳವಡಿಸಿ. ಇದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Vastu Tips: ಅದೃಷ್ಟದ ಬಾಗಿಲು ತೆರೆಯಲು ಈ ಟಿಪ್ಸ್‌ ಫಾಲೋ ಮಾಡುವುದನ್ನು ಮರೆಯಬೇಡಿ

Continue Reading

ದೇಶ

Ram Mandir: ರಾಮಮಂದಿರ ಉದ್ಘಾಟನೆಗೆ ಆಹ್ವಾನ ಪತ್ರಿಕೆ ಸಿದ್ಧ; 6 ಸಾವಿರ ಗಣ್ಯರಿಗೆ ಆಮಂತ್ರಣ

Ram Mandir: ಭವ್ಯ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ನೆರವೇರಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

VISTARANEWS.COM


on

Ram Mandir Invitations
Koo

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ (Ram Mandir) ನಿರ್ಮಾಣ ಕಾಮಗಾರಿಯು ಕೊನೆಯ ಹಂತಕ್ಕೆ ಬಂದಿದೆ. 2024ರ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಮಾಡಲಾಗುತ್ತದೆ. ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾನೆ (Pran Pratishta) ನೆರವೇರಿಸಿ, ಗರ್ಭಗುಡಿಯಲ್ಲಿ ಇರಿಸಿ ಪೂಜೆ ಮಾಡಲಾಗುತ್ತದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ, ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳು ಸಿದ್ಧವಾಗಿದ್ದು, 6 ಸಾವಿರ ಗಣ್ಯರಿಗೆ ರವಾನಿಸಲಾಗಿದೆ.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ರಾಮಮಂದಿರ ಉದ್ಘಾಟನೆಯ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿ ದೇಶಾದ್ಯಂತ ಇರುವ 6 ಸಾವಿರ ಗಣ್ಯರಿಗೆ ಟ್ರಸ್ಟ್‌ನಿಂದ ಆಮಂತ್ರಣ ಪತ್ರಿಕೆಗಳನ್ನು ಕಳುಹಿಸಲಾಗಿದೆ. ಆಮಂತ್ರಣ ಪತ್ರಿಕೆಗಳ ಫೋಟೊಗಳು ಕೂಡ ಲಭ್ಯವಾಗಿವೆ. ದೇಶದ ಪ್ರಮುಖ ರಾಜಕಾರಣಿಗಳು, ಹಿಂದು ಸಂಘಟನೆಗಳ ಮುಖಂಡರು, ಸಾಧು-ಸಂತರಿಗೆ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಅಯೋಧ್ಯೆ ವಿಮಾನ ನಿಲ್ದಾಣವೂ ಸಿದ್ಧ

ರಾಮಮಂದಿರ ಲೋಕಾರ್ಪಣೆಗೆ ಮೊದಲೇ ಅಯೋಧ್ಯೆ ವಿಮಾನ ನಿಲ್ದಾಣವು ಸಿದ್ಧವಾಗಿರಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ. “ಡಿಸೆಂಬರ್‌ 15ರ ವೇಳೆಗೆ ವಿಮಾನ ನಿಲ್ದಾಣ ಸಿದ್ಧವಾಗಿರಲಿದೆ. ಮೊದಲ ಹಂತದಲ್ಲಿ ವಿಮಾನ ನಿಲ್ದಾಣ ಮುಗಿಯಲಿದ್ದು, ವಿಮಾನಗಳ ಹಾರಾಟ ಶುರುವಾಗಲಿದೆ. ಇದಾದ ಬಳಿಕ ಹಂತ ಹಂತವಾಗಿ ಬೃಹತ್‌ ವಿಮಾಣ ನಿಲ್ದಾಣ ನಿರ್ಮಿಸಲಾಗುವುದು” ಎಂದು ಯೋಗಿ ಆದಿತ್ಯನಾಥ್‌ ಮಾಹಿತಿ ನೀಡಿದ್ದಾರೆ. ಮರ್ಯಾದಾ ಪುರುಷೋತ್ತಮ ಶ್ರೀರಾಮ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಎಂಬುದಾಗಿ ಹೆಸರಿಡಲು ತೀರ್ಮಾನಿಸಲಾಗಿದೆ.

ಆರ್‌ಎಸ್‌ಎಸ್‌ಗೆ ಕಾರ್ಯಕ್ರಮಗಳ ಆಯೋಜನೆ ಹೊಣೆ

ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್‌ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್‌ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಕರೆ ನೀಡಿದ್ದಾರೆ.

ಇದನ್ನೂ ಓದಿ: Amith Sha : 550 ವರ್ಷಗಳ ರಾಮಮಂದಿರದ ಕನಸು… ಅಮಿತ್​ ಶಾ ಹೇಳಿಕೆಗೊಂದು ಕಾರಣವಿದೆ

ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಧಾರ್ಮಿಕ

Vastu Tips: ವಾಸ್ತು ಪ್ರಕಾರ ನಿಮ್ಮ ಬಾಲ್ಕನಿ ಹೇಗಿರಬೇಕು? ಇಲ್ಲಿದೆ ಸಲಹೆ

Vastu Tips: ಮನೆಯಲ್ಲಿ ಹಲವರ ನೆಚ್ಚಿನ ಜಾಗ ಬಾಲ್ಕನಿ. ವಾಸ್ತು ಪ್ರಕಾರ ಬಾಲ್ಕನಿ ಹೇಗಿರಬೇಕು ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

home balcony
Koo

ಬೆಂಗಳೂರು: ಮನೆಯ ಬಾಲ್ಕನಿ (Balcony) ಎನ್ನುವುದು ಬಹುತೇಕರ ನೆಚ್ಚಿನ ಸ್ಥಳ. ಬೆಳಗ್ಗೆ ಎದ್ದ ಕೂಡಲೇ ಬಾಲ್ಕನಿಗೆ ಬಂದು ಸ್ವಚ್ಛ ಗಾಳಿಯನ್ನು ಉಸಿರಾಡುತ್ತ ಚಾ/ಕಾಫಿ ಕುಡಿಯುವುದು ಬಹುತೇಕರ ದಿನಚರಿಯ ಭಾಗವೇ ಆಗಿದೆ. ಫ್ರೀ ಸಮಯ ಕಳೆಯಲು, ಸ್ನೇಹಿತರೊಂದಿಗೆ ಹರಟೆ ಹೊಡೆಯಲು, ಯೋಗ, ಧ್ಯಾನ ಮಾಡಲು, ವ್ಯಾಯಾಮ ಮಾಡಲು, ಸಿನಿಮಾ ನೋಡಲು ಬಾಲ್ಕನಿಗಿಂತ ಉತ್ತಮ ಜಾಗ ಇನ್ನೊಂದಿಲ್ಲ. ಇಂತಹ ನಿಮ್ಮ ನೆಚ್ಚಿನ ಬಾಲ್ಕನಿಯನ್ನು ವಾಸ್ತು ಪ್ರಕಾರ ಹೇಗೆ ಇನ್ನಷ್ಟು ಉತ್ತಮಗೊಳಿಸಬಹುದು? ಬಾಲ್ಕನಿಯಲ್ಲಿ ಯಾವ ಅಂಶಗಳತ್ತ ಗಮನ ಹರಿಸಬೇಕು? ಎನ್ನುವುದರ ವಿವರ ಇಂದಿನ ವಾಸ್ತುಟಿಪ್ಸ್‌ (Vastu Tips)ನಲ್ಲಿದೆ.

ದಿಕ್ಕು

ಮನೆಯಲ್ಲಿ ಬಾಲ್ಕನಿ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದು ಗರಿಷ್ಠ ಪ್ರಮಾಣದ ಸೂರ್ಯನ ಬೆಳಕನ್ನು ಪಡೆಯುವ ಪ್ರದೇಶವಾಗಿರುವುದರಿಂದ ಇದು ಆದರ್ಶ ದಿಕ್ಕು. ಬಾಲ್ಕನಿ ನಿರ್ಮಿಸಲು ದಕ್ಷಿಣ ಅಥವಾ ಪಶ್ಚಿಮವನ್ನು ನಕಾರಾತ್ಮಕ ದಿಕ್ಕುಗಳು ಎಂದು ಪರಿಗಣಿಸಲಾಗುತ್ತದೆ.

ಪೀಠೋಪಕರಣಗಳ ಸ್ಥಾನ

ಪೀಠೋಪಕರಣಗಳು ಬಾಲ್ಕನಿಯ ಪ್ರಮುಖ ಭಾಗ. ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ವಿವಿಧ ರೀತಿಯ ಪೀಠೋಪಕರಣಗಳನ್ನು ಇಲ್ಲಿ ಜೋಡಿಸಿಡುತ್ತೇವೆ. ಹೀಗಾಗಿ ನಿಮ್ಮ ಬಾಲ್ಕನಿಗೆ ಸೂಕ್ತವಾದ ಪೀಠೋಪಕರಣಗಳು ಯಾವುವು ಎನ್ನುವುದರತ್ತ ಗಮನ ಹರಿಸಬೇಕು. ಕುರ್ಚಿಗಳು, ಸ್ಟೂಲ್‌ಗಳು ಮತ್ತು ಟೇಬಲ್‌ಗಳಂತಹ ಭಾರವಾದ ಪೀಠೋಪಕರಣಗಳನ್ನು ಬಾಲ್ಕನಿಯ ನೈಋತ್ಯ ಮೂಲೆಯಲ್ಲಿ ಇಡಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಚಾವಣಿ ಹೀಗಿರಲಿ

ನಿಮ್ಮ ಬಾಲ್ಕನಿಯ ಚಾವಣಿ ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನ ಕಡೆಗೆ ಇಳಿಜಾರಾಗಿರಬೇಕು. ಯಾವುದೇ ಕಾರಣಕ್ಕೂ ದಕ್ಷಿಣ ಅಥವಾ ಪಶ್ಚಿಮದ ಕಡೆಗೆ ಅಲ್ಲ. ಚಾವಣಿಯ ಎತ್ತರವು ಮುಖ್ಯ ಕಟ್ಟಡದ ಛಾವಣಿಗಿಂತ ಕಡಿಮೆ ಇರಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅಲ್ಲದೆ ನಿಮ್ಮ ಬಾಲ್ಕನಿಯ ಚಾವಣಿಗೆ ಟಿನ್ ಬಳಕೆ ಬೇಡ.

ಅಲಂಕಾರ

ಬಾಲ್ಕನಿಯಲ್ಲಿ ಸಣ್ಣ ಹೂವಿನ ಕುಂಡಗಳನ್ನು ಇರಿಸಲು ವಾಸ್ತು ಶಾಸ್ತ್ರ ಸಲಹೆ ನೀಡುತ್ತದೆ. ಯಾಕೆಂದರೆ ಅವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ತುಂಬಾ ದೊಡ್ಡ ಸಸ್ಯಗಳನ್ನು ಇಡುವುದನ್ನು ತಪ್ಪಿಸಿ. ಅಲ್ಲದೆ ನಿಮ್ಮ ಬಾಲ್ಕನಿಗೆ ವರ್ಣರಂಜಿತ ಹೂವಿನ ಗಿಡಗಳನ್ನು ಆರಿಸಿ ಮತ್ತು ಬಳ್ಳಿಗಳನ್ನು ಎಂದಿಗೂ ಇಡಬೇಡಿ. ಇವು ಸೂರ್ಯನ ಬೆಳಕನ್ನು ತಡೆಯುತ್ತವೆ. ನಿಮ್ಮ ಬಾಲ್ಕನಿಯ ಪಶ್ಚಿಮ, ದಕ್ಷಿಣ ಅಥವಾ ನೈಋತ್ಯ ಭಾಗದಲ್ಲಿ ಯಾವಾಗಲೂ ಹೂವಿನ ಕುಂಡಗಳನ್ನು ಇರಿಸಿ. ಮಧ್ಯ ಭಾಗ ಖಾಲಿಯಾಗಿರಲಿ.

ಇದನ್ನೂ ಓದಿ: Vastu Tips: ನಿಮ್ಮ ಜೀವನ ಸಮೃದ್ಧಿಗಾಗಿ ಈ ಗಿಡಗಳನ್ನು ಬೆಳೆಸಿ

ಸೂಕ್ತ ಲೈಟ್‌ಗಳು

ಕತ್ತಲೆ ಅಥವಾ ತುಂಬಾ ಮಂದ ಬೆಳಕಿನ ಬಾಲ್ಕನಿಯಲ್ಲಿ ಕುಳಿತುಕೊಳ್ಳುವುದು ನಕಾರಾತ್ಮಕತೆಗೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ನಿಮ್ಮ ಬಾಲ್ಕನಿಗೆ ತುಂಬಾ ತೀಕ್ಷ್ಣ ಬೆಳಕನ್ನು ನೀಡದ ಲೈಟ್‌ಗಳನ್ನು ಆರಿಸಿ.

ಯಾವ ಬಣ್ಣ ಸೂಕ್ತ?

ಬಾಲ್ಕನಿ ಮನೆಯ ಒಂದು ಪ್ರಮುಖ ಸ್ಥಳವಾಗಿ ಪರಿಗಣಿಸಲ್ಪಡುತ್ತದೆ. ಅಲ್ಲಿ ನಿಮ್ಮ ಮನಸ್ಸು ವಿಶ್ರಾಂತಿ ಪಡೆಯಲು ಬಯಸುತ್ತದೆ. ಬಾಲ್ಕನಿ ದಣಿದ ದೇಹಕ್ಕೆ ನೆಮ್ಮದಿ ಒದಗಿಸುತ್ತದೆ. ಹೀಗಾಗಿ ಗೋಡೆಗಳಿಗೆ ಮೇಲೆ ಗಾಢ ಬಣ್ಣವನ್ನು ಬಳಿಯಬೇಡಿ. ವಾಸ್ತು ಪ್ರಕಾರ, ಬಿಳಿ, ನೀಲಿ ಮತ್ತು ತಿಳಿ ಗುಲಾಬಿಯಂತಹ ಶಾಂತ ಬಣ್ಣಗಳು ನಿಮ್ಮ ಬಾಲ್ಕನಿಗೆ ಸೂಕ್ತ.

Continue Reading

ಕರ್ನಾಟಕ

Shabarimale Bus : ಶಬರಿಮಲೆ ಯಾತ್ರಿಕರಿಗೆ KSRTC ವಿಶೇಷ ಬಸ್‌ ಸೇವೆ, ಬುಕಿಂಗ್‌ ಹೇಗೆ?

Shabarimale Bus: ಬೆಂಗಳೂರಿನಿಂದ ಶಬರಿಮಲೆಗೆ ಡಿಸೆಂಬರ್‌ 11ರಿಂದ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ. ಇದರ ಟೈಮಿಂಗ್ಸ್‌ ಮತ್ತು ಬುಕಿಂಗ್‌ ವಿವರ ಇಲ್ಲಿದೆ.

VISTARANEWS.COM


on

Shabarimale yatre KSRTC BUS
Koo

ಬೆಂಗಳೂರು: ಡಿಸೆಂಬರ್‌ ಆರಂಭವಾಗುತ್ತಿದ್ದಂತೆಯೇ ಕೇರಳದ ಪುಣ್ಯ ಕ್ಷೇತ್ರ ಶಬರಿಮಲೆಗೆ (Shabarimale yatre) ಹೋಗುವ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ವ್ಯವಸ್ಥೆಯನ್ನು ಮಾಡಲು ಮುಂದಾಗಿದೆ. ಡಿಸೆಂಬರ್‌ 1ರಿಂದ ವಿಶೇಷ ಬಸ್‌ ಸೌಲಭ್ಯವನ್ನು (Special bus Service) ಒದಗಿಸಲಾಗುತ್ತಿದ್ದು, ಯಾತ್ರಾರ್ಥಿಗಳು ಇದನ್ನು ಉಪಯೋಗ ಮಾಡಿಕೊಳ್ಳಬಹುದು (Shabarimale Bus) ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಡಿಸೆಂಬರ್‌ 1ರಿಂದ ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಕಾರ್ಯಾಚರಣೆ ನಡೆಸಲಿದೆ. ಬೆಂಗಳೂರಿಂದ ನೀಲಕ್ಕಲ್ (ಪಂಪಾ, ಶಬರಿಮಲೈ) ಮಾರ್ಗವಾಗಿ ವೋಲ್ವೋ ಮತ್ತು ರಾಜಹಂಸ ಬಸ್ ಸಂಚರಿಸಲಿದೆ ಎಂದು ತಿಳಿಸಿರುವ ಕೆ.ಎಸ್‌.ಆರ್‌.ಟಿ.ಸಿಯು ವೋಲ್ವೊ ಬಸ್​​ನ ಟಿಕೆಟ್ ದರ, ಮಾರ್ಗ, ಸಂಚಾರದ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ದರ ಎಷ್ಟು, ಯಾವ ಹೊತ್ತಿಗೆ ಹೊರಡುತ್ತದೆ?

ಕೆ.ಎಸ್‌.ಆರ್‌.ಟಿಸಿ ವೋಲ್ವೋ ಬಸ್‌ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಡಲಿದೆ. ಮರುದಿನ ಬೆಳಿಗ್ಗೆ 6.45ಕ್ಕೆ ಪಂಪಾ ತಲುಪಲಿದೆ. ಅದೇ ದಿನ ಸಂಜೆ ಪಂಪಾದಿಂದ ಹೊರಟು ಮರುದಿನ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ. ವೋಲ್ವೋ ಬಸ್‌ನಲ್ಲಿ ಒಂದು ಟಿಕೆಟ್‌ನ ದರ 1600 ರೂ. ಆಗಿರುತ್ತದೆ.

ರಾಜಹಂಸ ಬಸ್ (ನಾನ್‌ಎಸಿ) ಬಸ್‌ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8.15ಕ್ಕೆ ಪಂಪಾ ತಲುಪಲಿದೆ. ಆ ದಿನ ಸಂಜೆ 5 ಗಂಟೆಗೆ ಪಂಪಾದಿಂದ ಹೊರಟು ಮರುದಿನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪಲಿದೆ. ರಾಜಹಂಸದಲ್ಲಿ ಬೆಂಗಳೂರಿನಿಂದ ಶಬರಿಮಲೆಗೆ ಪ್ರತಿ ಟಿಕೆಟ್ ಬೆಲೆ 940 ರೂ. ಆಗಿದೆ.

ಡಿಸೆಂಬರ್‌ ತಿಂಗಳಲ್ಲಿ ಶಬರಿಮಲೆ ಸನ್ನಿಧಿಯಲ್ಲಿ ಮಂಡಲೋತ್ಸವ ನಡೆಯಲಿದ್ದು, ಆ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಆ ಬಳಿಕ ಜನವರಿ 14ರಂದು ಮಕರ ವಿಳಕ್ಕು (ಮಕರ ಜ್ಯೋತಿ) ನಡೆಯುತ್ತದೆ. ಆ ಸಂದರ್ಭದಲ್ಲಿ 48 ದಿನಗಳ ಕಾಲ ಮಾಲಾ ಧಾರಣೆ ಮಾಡಿ ವ್ರತಧಾರಿಗಳಾದ ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಹೊಸ ಬಸ್‌ ಸೇವೆ ಅನುಕೂಲಕರವಾಗಲಿದೆ.

ಇದನ್ನೂ ಓದಿ : Shobha Karandlaje: ಶಬರಿಮಲೆಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

ಬಸ್​ ಟಿಕೆಟ್ ಬುಕಿಂಗ್ ಹೇಗೆ?

ಶಬರಿಮಲೆಗೆ ಹೋಗುವ ಬಸ್‌ಗಳ ಬುಕಿಂಗ್‌ನ್ನು ಕೆಎಸ್​ಆರ್​ಟಿಸಿ ಅಧಿಕೃತ ವೆಬ್​ಸೈಟ್ (www.ksrtc.in) ಮೂಲಕ ಮಾಡಬಹುದು. ಅದಲ್ಲದೆ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೆಎಸ್‌ಆರ್‌ಟಿಸಿ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು. ಕರ್ನಾಟಕ ರಾಜ್ಯದಾದ್ಯಂತ ಮತ್ತು ನೆರೆಯ ರಾಜ್ಯಗಳ ಪ್ರಮುಖ ಕಡೆಗಳಲ್ಲಿ ಒಟ್ಟು 707 ಟಿಕೆಟ್ ಕೌಂಟರ್‌ಗಳು ಇವೆ.

Continue Reading
Advertisement
Dasara Elephant Arjuna
ಕರ್ನಾಟಕ35 mins ago

Dasara Elephant Arjuna: ಅರ್ಜುನನ ನಿಧನಕ್ಕೆ ಸಿಎಂ, ಡಿಸಿಎಂ, ನಟ ದರ್ಶನ್ ಸೇರಿ ಗಣ್ಯರ ಸಂತಾಪ

]cashless medical treatment for accident victims by central Government
ದೇಶ40 mins ago

ರಸ್ತೆ ಅಪಘಾತದ ಗಾಯಾಳುಗಳಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ! ಕೇಂದ್ರದಿಂದ ರಾಷ್ಟ್ರಾದ್ಯಂತ ಜಾರಿ

Cricket news
ಕ್ರಿಕೆಟ್56 mins ago

ind vs aus : ಆಸ್ಟ್ರೇಲಿಯಾ- ಭಾರತ ಟಿ20 ಪಂದ್ಯದ ಅಂಪೈರ್​ ಮೇಲೆ ಮೋಸದ ಅರೋಪ!

Hori festival in maavali at soraba taluk
ಶಿವಮೊಗ್ಗ1 hour ago

Shivamogga News: ಮಾವಲಿ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ

Shakti Scheme Effect, In Uttara Kannada district locals and students are facing problems without buses
ಉತ್ತರ ಕನ್ನಡ1 hour ago

Sirsi News: ಶಕ್ತಿ ಯೋಜನೆ ಎಫೆಕ್ಟ್‌: ಉ.ಕ ಜಿಲ್ಲೆಯಲ್ಲಿ ಸ್ಥಳೀಯರಿಗೆ ಬಸ್‌ ಇಲ್ಲದೇ ಪರದಾಟ

Rohit Sharma
ಕ್ರಿಕೆಟ್2 hours ago

Rohit Sharma : ಫಾರಿನ್ ಟೂರ್​ ಮುಗಿಸಿ ಮರಳಿದ ರೋಹಿತ್​ ಶರ್ಮಾ ಫ್ಯಾಮಿಲಿ

Suvarna Vidhana Soudha
ಕರ್ನಾಟಕ2 hours ago

ಸುವರ್ಣಸೌಧಕ್ಕೆ ಶಾಶ್ವತ ವಿದ್ಯುತ್‌ ದೀಪಾಲಂಕಾರ; ಕಲರ್‌ಫುಲ್‌ ಫೋಟೊಗಳು ಇಲ್ಲಿವೆ

BY Vijayendra Channaraj Hattiholi
ಕರ್ನಾಟಕ2 hours ago

BY Vijayendra : ಪೃಥ್ವಿ ಸಿಂಗ್‌ಗೆ ಇರಿತ ಪ್ರಕರಣ; ಹಟ್ಟಿಹೊಳಿ ಬಂಧನಕ್ಕೆ ವಿಜಯೇಂದ್ರ ಆಗ್ರಹ

Virat kohli
ಕ್ರಿಕೆಟ್2 hours ago

Suryakumar Yadav : ಕೊಹ್ಲಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ ಸೂರ್ಯಕುಮಾರ್​

Prtithvi singh attacked
ಕರ್ನಾಟಕ2 hours ago

Lakshmi Hebbalkar : ಜಾರಕಿಹೊಳಿ ಆಪ್ತನಿಗೆ ಹೆಬ್ಬಾಳ್ಕರ್‌ ಸೋದರನ ಗ್ಯಾಂಗ್‌ನಿಂದ ಚೂರಿ ಇರಿತ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ18 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ1 day ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌