navavidha bhakti about Atma Nivedanam you should know in kannada - Vistara News

ಧಾರ್ಮಿಕ

Navavidha Bhakti : ಪರಿಪೂರ್ಣ ಸಮರ್ಪಣೆಯಲ್ಲಿ ಭಗವಂತನೇ ರಕ್ಷಕ!

ಭಕ್ತಿಯ ಸ್ವರೂಪವನ್ನು ಒಂಬತ್ತು ರೀತಿಯಲ್ಲಿ ವಿಂಗಡಿಸಲಾಗಿದೆ. ಈ ಸ್ವರೂಪಗಳನ್ನು ಪರಿಚಯಿಸುವ ʻನವವಿಧ ಭಕ್ತಿʼ (Navavidha Bhakti) ಲೇಖನ ಮಾಲೆಯ ಹದಿನೈದನೇ ಲೇಖನ ಇಲ್ಲಿದೆ. ಆತ್ಮಸಮರ್ಪಣೆಗೆ ಹೆಸರಾದವರನ್ನು ಈ ವಾರ ಪರಿಚಯಿಸಲಾಗಿದೆ.

VISTARANEWS.COM


on

atma nivedanam radhe shyam
ಚಿತ್ರಕೃಪೆ: ಇಸ್ಕಾನ್‌, ಬೆಂಗಳೂರು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Dr c r ramaswamy

Navavidha Bhakti
atma nivedanam meera and shyam

ಡಾ. ಸಿ. ಆರ್. ರಾಮಸ್ವಾಮಿ
ಭಕ್ತಿಯಲ್ಲಿ ಕೊನೆಯ ಘಟ್ಟ ಆತ್ಮನಿವೇದನ. ಅದು ಪರಮಭಕ್ತಿ. ಎಲ್ಲ ಹಂತಗಳನ್ನೂ ದಾಟಿ ತನ್ನ ಸರ್ವಸ್ವವನ್ನೂ-ಮನಸ್ಸು-ಬುದ್ಧಿ-ಹೃದಯ-ಆತ್ಮವನ್ನೇ ಭಗವಂತನಿಗೆ ಸಮರ್ಪಣೆ ಮಾಡಿಕೊಳ್ಳುವಂತಹ ಸ್ಥಿತಿ. ಆ ಸ್ಥಿತಿಯನ್ನು ಸಾಧಿಸಿದ ಕೆಲವು ಭಕ್ತಶ್ರೇಷ್ಠರ ಕಥೆಗಳನ್ನು ಕೇಳಿದಾಗ ಹೀಗೂ ಉಂಟೇ ಎಂದೆನಿಸಿದರೆ ಆಶ್ಚರ್ಯವೇನಿಲ್ಲ. ಇದಕ್ಕೆ ಉದಾಹರಣೆಯಾದವರ ಕೆಲವರ ಪರಿಚಯವನ್ನು ಕಳೆದ ವಾರ ಮಾಡಿಕೊಂಡಿದ್ದೆವು. ಇನ್ನೂ ಕೆಲವರ ಪರಿಚಯ ಇಲ್ಲಿದೆ.

ಆತ್ಮನಿವೇದನಕ್ಕೆ ಪ್ರಸಿದ್ಧ ಉದಾಹರಣೆ ರಾಧೆ

ಆತ್ಮನಿವೇದನಕ್ಕೆ ಮತ್ತೊಂದು ಪ್ರಸಿದ್ಧ ಉದಾಹರಣೆಯೆಂದರೆ ಗೋಪಿಕೆಯರಲ್ಲಿ ಅಗ್ರಗಣ್ಯಳಾದ ರಾಧೆ. ಗರ್ಗಸಂಹಿತೆಯು ಅವಳ ಚರಿತ್ರೆ-ವಿಲಾಸಗಳನ್ನು ವಿಸ್ತಾರವಾಗಿ ಹೇಳುತ್ತದೆ. ಭಗವತ್ಕಾಮವೆಂಬ ಭಕ್ತಿಭಾವದಲ್ಲಿ ತನ್ಮಯಳಾಗಿ ಮುಳುಗಿದವಳು ರಾಧೆ. ತನ್ನನ್ನು ಸಂಪೂರ್ಣವಾಗಿ ಕೃಷ್ಣನಿಗರ್ಪಿಸಿಕೊಂಡು ಅವನ ಬಾಲ್ಯ-ಪೌಗಂಡ-ಕೌಮಾರಾವಸ್ಥೆಗಳಲ್ಲಿ ಜೊತೆಯಾಗಿದ್ದು ರಮಿಸಿದವಳು. ಮುಂದೆ ದೀರ್ಘಕಾಲ ಕೃಷ್ಣನು ರಾಜಕಾರಣದಿಂದಾಗಿ ಅವಳನ್ನು ಭೇಟಿಯಾಗಲಿಲ್ಲ. ರಾಧೆಗೆ ಬಾಹ್ಯವಾಗಿ ಅಗಲಿಕೆಯಿದ್ದರೂ ಮಾನಸಿಕಮಿಲನವಿದ್ದೇ ಇದ್ದಿತೆಂಬುದಕ್ಕೆ ನಿದರ್ಶನಗಳು ದೊರೆಯುತ್ತವೆ.

ಅಷ್ಟಮಹಿಷಿಯರಾದ ರುಕ್ಮಿಣೀ-ಸತ್ಯಭಾಮಾ ಮುಂತಾದವರೂ ಆತ್ಮನಿವೇದನಕ್ಕೆ ಉದಾಹರಣೆಯಾಗುತ್ತಾರೆ. ಕೃಷ್ಣನು ರಾಧೆಯಬಗ್ಗೆ ಹೇಳುತ್ತಿದ್ದುದನ್ನು ಕೇಳಿ ಅವರೆಲ್ಲರೂ ಸಂತೋಷ-ಆಶ್ಚರ್ಯಚಕಿತರಾಗಿ ರಾಧೆಯನ್ನು ನೋಡಲು ಹಂಬಲಿಸುತ್ತಿದ್ದರು. ಜೊತೆಗೆ ‘ನಾವೇನು ಕಡಿಮೆಯೇ?’ ಎನ್ನುವ ಭಾವವೂ ಅವರ ಮನಸ್ಸಿನಲ್ಲಿ ಸುಳಿಯದಿರಲಿಲ್ಲ!

ವರ್ಷಗಳುರುಳಿದಮೇಲೆ ಒಮ್ಮೆ ಕೃಷ್ಣನು ಸೂರ್ಯಗ್ರಹಣಕಾಲದಲ್ಲಿ ಗೋಪಿಕೆಯರನ್ನು ಸಂದರ್ಶಿಸುವ ಸನ್ನಿವೇಶವೊದಗಿತು. ಕೃಷ್ಣನು ಎಲ್ಲರಿಗೂ ರಾಧೆಯ ಪರಿಚಯ ಮಾಡಿಕೊಡುತ್ತಾನೆ. ಮಹಿಷಿಯರು ರಾಧೆಯಮೂಲಕ ಅವಳ ಪೂರ್ವವೃತ್ತಾಂತಗಳನ್ನು ಕೇಳಿದಾಗ ಕೃಷ್ಣ ಹೇಳಿರುವುದೆಲ್ಲವೂ ಅಕ್ಷರಶಃ ಸತ್ಯವೆಂಬುದನ್ನು ಅವರ ಮನಸ್ಸು ಒಪ್ಪಿಕೊಳ್ಳುತ್ತದೆ. ಮಾತುಮುಗಿದು ಬಿಡಾರಕ್ಕೆ ಹಿಂದಿರುಗಿ ಕೃಷ್ಣನು ನಿದ್ದೆಯಿಲ್ಲದಿರುವುದಕ್ಕೆ ಕಾರಣವೇನೆಂದಾಗ ಬೃಂದಾವನದ ರಾಧೆಗೆ ರಾತ್ರಿ ಹಾಲು ಕುಡಿಯದಿದ್ದರೆ ನಿದ್ರೆಬರುವುದಿಲ್ಲ. ರಾಧೆ ಇನ್ನೂ ನಿದ್ರೆಮಾಡಲಿಲ್ಲವಾದ್ದರಿಂದ ತನಗೂ ನಿದ್ರೆಯಿಲ್ಲವೆಂದು ನುಡಿಯುತ್ತಾನೆ. ಇವರೆಲ್ಲರೂ ಹೋಗಿ ಆಕೆಗೆ ಹಾಲು ಕೊಟ್ಟುಬಂದರು.

ನಂತರ ರುಕ್ಮಿಣಿಯು ಕೃಷ್ಣನ ಪಾದಸೇವೆಗೈದಾಗ ಅವನ ಪಾದಗಳಲ್ಲಿ ಬೊಬ್ಬೆಗಳಿರುವುದನ್ನುಕಂಡು ಗಾಬರಿಯಾಗುತ್ತಾಳೆ. ಕೃಷ್ಣ ಹೇಳುತ್ತಾನೆ- “ಹೃದಯದಲ್ಲಿ ಸದಾ ನನ್ನ ಪಾದಗಳನ್ನೇ ಧ್ಯಾನಿಸುತ್ತಲಿರುವ ರಾಧೆ ಬಿಸಿಬಿಸಿಹಾಲನ್ನು ಕುಡಿದಳು. ಅವಳ ಹೃದಯದಲ್ಲಿ ನೆಲೆಸಿರುವ ನನಗೆ ಬಿಸಿತಗುಲಿ ಬೊಬ್ಬೆಗಳೆದ್ದಿವೆ”! ಇದು ನಿಜಘಟನೆಯೋ ಕಾಲ್ಪನಿಕವೋ ತಿಳಿಯದು. ಹೇಗೇ ಇದ್ದರೂ ಹಿಂಬದಿಯ ಭಕ್ತಿರಸ ಅಗಾಧವಾಗಿದೆ. ಸೇವಿಸುವುದೆಲ್ಲವನ್ನೂ ಭಗವದರ್ಪಣೆ ಮಾಡುವುದೊಂದೇ ರಾಧೆಗೆ ತಿಳಿದಿರುವುದು. ಎಂತಹ ಆತ್ಮನಿವೇದನೆ!

ಕೃಷ್ಣನ ಭಕ್ತೆ ಮೀರಾಬಾಯಿ

ಮೀರಾಬಾಯಿ ಬಾಲ್ಯದಿಂದಲೂ ತನ್ನ ಹತ್ತಿರವಿದ್ದ ಕೃಷ್ಣವಿಗ್ರಹವನ್ನು ಸಾಕ್ಷಾತ್ ಕೃಷ್ಣನೆಂದೇ ಭಾವಿಸಿ ಪೂಜಿಸುತ್ತಿದ್ದವಳು. ಮಲಗುವಾಗಲೂ ಅವನ ಜೊತೆಯಲ್ಲಿಯೇ ಮಲಗುವ ಅಭ್ಯಾಸ. ಆಕೆಯು ಚಿತ್ತೂರಿನ ಭೋಜರಾಜನ ರಾಣಿಯಾಗಿದ್ದಳು. ಗೃಹಕೃತ್ಯಗಳನ್ನೂ ಹಿರಿಯರ ಶುಶ್ರೂಷೆಯನ್ನೂ ಮಾಡಿ ರಾತ್ರಿಯಲ್ಲಿ ತನ್ನ ಕೃಷ್ಣನನ್ನು ಪ್ರತ್ಯೇಕ ಸ್ಥಳದಲ್ಲಿರಿಸಿ ಭಜಿಸಿ-ಹಾಡಿ-ನರ್ತಿಸುವುದರಲ್ಲಿಯೇ ದಿನಗಳು ಕಳೆದವು. ಇಂತಹ ವಿಶೇಷ ಭಜನೆಯಲ್ಲಿ ಪಾಲ್ಗೊಳ್ಳಲು ಅನೇಕರು ಬರುತ್ತಿದ್ದರು.

atma nivedanam meera and shyam
atma nivedanam meera and shyam

ರಾಣಿಯಾದವಳಿಗಿದ್ದ ಲೋಕವಿಲಕ್ಷಣವಾದ ಇಂತಹ ನಡೆಯನ್ನು ಅರಮನೆಯವರು ಸಹಿಸಲಿಲ್ಲ. ಇವಳು ಕೃಷ್ಣಸಹವಾಸವನ್ನು ಬಿಡಲೊಲ್ಲಳು. ಆಕೆಯದು ‘ಅವ್ಯವಹಾರ’ವೆಂಬ ದೂರನ್ನುಕೇಳಿ ಕುಪಿತನಾದ ರಾಜನು ಪ್ರತ್ಯಕ್ಷವಾಗಿ ನೋಡಿಬರಲು ನಿಶ್ಚಯಿಸುತ್ತಾನೆ. ರಾತ್ರಿ ಖಡ್ಗಪಾಣಿಯಾಗಿ ಹೊರಗೆನಿಂತು ಕೃಷ್ಣನ ಜೊತೆಯಲ್ಲಿ ಅವಳ ಸಂಭಾಷಣೆ-ಪ್ರೇಮಸಲ್ಲಾಪಗಳನ್ನು ಕೇಳಿ ಉಕ್ಕೇರಿದ ಕೋಪದಿಂದ ಬಾಗಿಲೊಡೆದು ಒಳನುಗ್ಗಿ ನೋಡಿದಾಗ ಅವಳ ಪಾಡಿಗೆ ಮೈಮರೆತು ಮಾತನಾಡುತ್ತಿದ್ದಾಳೆ, ಹುಡುಕಿದರೂ ಅಲ್ಲಿ ಇನ್ನಾರೂ ಕಾಣಲಿಲ್ಲ! ಮಾತುಕತೆಯೆಲ್ಲವೂ ಕೃಷ್ಣವಿಗ್ರಹದ ಜೊತೆಯಷ್ಟೇಯೆಂಬುದು ತಿಳಿಯುತ್ತದೆ. ಇತರರಿಗೆ ವಿಗ್ರಹವಾದರೆ ಅವಳಿಗದು ಸಾಕ್ಷಾತ್ ಕೃಷ್ಣನೇ. ಅವರೀರ್ವರ ಸಂಭಾಷಣೆಯಲ್ಲಿ ಕೃಷ್ಣನ ಮಾತುಗಳು ಇವಳ ಕಿವಿಗೆ ಮಾತ್ರ!! ಇವಳಿಗೆ ಹುಚ್ಚೆಂದು ತೀರ್ಮಾನಿಸುತ್ತಾನೆ ರಾಜ. ಸಂಪೂರ್ಣ ಆತ್ಮನಿವೇದನ ಮಾಡಿಕೊಂಡ ಮಹಾಯೋಗಿನಿ- ಪರಮಭಾಗವತೆ ಮೀರಾ.

ಆಕೆಯು ಬೃಂದಾವನದದಲ್ಲಿ ಬ್ರಹ್ಮಚಾರಿಯೊಬ್ಬರ ದರ್ಶನಕ್ಕೆ ಅನುಮತಿಯನ್ನು ಕೇಳಿದಾಗ ಅವರು ತಾವು ಸ್ತ್ರೀಯರ ಮುಖ ನೋಡುವುದಿಲ್ಲವೆಂಬ ಸಂದೇಶ ಕಳುಹಿಸುತ್ತಾರೆ. ಅದಕ್ಕೆ ಪ್ರತ್ಯುತ್ತರವಾಗಿ “ಬೃಂದಾವನದಲ್ಲಿ ಎಲ್ಲರೂ ಸ್ತ್ರೀಯರೇ, ಶ್ರೀಕೃಷ್ಣನೊಬ್ಬನೇ ಪುರುಷನಲ್ಲವೇ?” ಎಂದು ಶ್ರೀಕೃಷ್ಣನಲ್ಲಿ ತಾದಾತ್ಮ್ಯವನ್ನು ಹೊಂದಿದ್ದ ಮೀರಾಬಾಯಿಯ ಸಂದೇಶವು ಆ ಭಕ್ತರ ಕಣ್ಣನ್ನು ತೆರೆಯಿಸಿತು.

ಭಗವಂತನೇ ರಕ್ಷಕ!

ಭಕ್ತಶಿರೋಮಣಿಗಳಿಗೆ ಕಷ್ಟ ಒದಗಿದಾಗ ಕೆಲವೊಮ್ಮೆ ಅವರ ಮೊರೆಯಿಲ್ಲದೆಯೇ ಭಗವಂತನು ಅವರುಗಳನ್ನು ಕಾಯುತ್ತಾನೆಂಬುದಕ್ಕೆ ಉದಾಹರಣೆಯಾಗಿ ಕೆಲವು ಘಟನೆಗಳು:

ಮೀರಾಬಾಯಿಯ ಭಜನೆ-ಪೂಜೆಗಳು ಎಲ್ಲೆಲ್ಲೂ ಹರಡಿ ಪ್ರಸಿದ್ಧಿಗೆ ಬರುತ್ತಿರಲು ಹೊರಪ್ರಾಂತ್ಯದವರೂ ಭಕ್ತಿಯಿಂದಲೂ, ಕುತೂಹಲದಿಂದಲೂ ಆಗಮಿಸುತ್ತಿದ್ದರು. ಅವರಲ್ಲಿ ರಜಪೂತರಿಗೆ ಜನ್ಮವಿರೋಧಿಗಳಾದ ಮೊಘಲರೂ ಬಂದದ್ದು ರಾಜನಿಗೆ ಉತ್ಕಟಕೋಪವನ್ನು ಮೂಡಿಸಿತು. “ನನಗೆ ನಿನ್ನ ಮುಖ ತೋರಿಸಬೇಡ, ಎಲ್ಲಾದರೂ ನದಿಯಲ್ಲಿ ಬಿದ್ದು ತೊಲಗು” ಎಂದು ಅನನ್ಯಭಕ್ತೆಯಾದವಳಿಗೆ ರಾಜಾಜ್ಞೆ ಮೂಲಕ ತಿಳಿಸಿ ಅತೀವ ಪಾಪವನ್ನೆಸಗುತ್ತಾನೆ. ನದಿಯಬಳಿ ನಿಂತು ಭಗವಂತನ ಮಡಿಲಿಗೆ ಧುಮುಕಲು ಸಿದ್ಧಳಾದಳು. ತಕ್ಷಣವೇ ಹಿಂದುಗಡೆಯಿಂದ ಯಾರೋ ಕೈಹಿಡಿದಂತಾಗಿ ನೋಡಿದಾಗ ಸಾಕ್ಷಾತ್ ಶ್ರೀಕೃಷ್ಣನೇ ನಿಂತಿದ್ದಾನೆ. “ನಿನಗೂ ನಿನ್ನ ಗಂಡನಿಗೂ ಇರುವ ಸಂಬಂಧಬಿಟ್ಟು ನಿತ್ಯ ಶಾಶ್ವತವಾಗಿ ನನ್ನ ಜೊತೆಯಿರು” ಎಂದು ಹೇಳಿ ಬಾಚಿತಬ್ಬಿಕೊಂಡು ಬೃಂದಾವನಕ್ಕೆ ತೆರಳಲು ಆದೇಶ ನೀಡುತ್ತಾನೆ.

ವಿಧಿ ಇವಳನ್ನು ಪುನಃ ಬೃಂದಾವನದಿಂದ ರಾಜ್ಯಕ್ಕೆ ಹಿಂತಿರುಗಿಸುತ್ತದೆ. ಪತಿ ಗತಿಸಿದನಂತರ ಅವನ ಅಣ್ಣನಿಂದ ತಡೆಯಲಾಗದ ಹಿಂಸೆಯನ್ನು ಅನುಭವಿಸುತ್ತಾಳೆ. ಆದರೆ ಆತ್ಮಸಮರ್ಪಣಾಭಾವ ಕಿಂಚಿತ್ತೂ ಸಡಿಲವಾಗುವುದಿಲ್ಲ. ಒಮ್ಮೆ ಬುಟ್ಟಿಯಲ್ಲಿ ಹಾವಿನಮೇಲೆ ಹಾರವನ್ನಿಟ್ಟು ದುಷ್ಟ ಆಲೋಚನೆಯಿಂದ “ನಿನ್ನ ಕೃಷ್ಣನಿಗೆ ಸಮರ್ಪಿಸು” ಎಂದಾಗ, ಕುಹಕವನ್ನರಿಯದೆ ಹಾರವನ್ನು ಭಗವಂತನಿಗೆ ಸಮರ್ಪಿಸುತ್ತಾ ಪೂಜೆಯಲ್ಲಿ ಮಗ್ನಳಾಗುತ್ತಾಳೆ. ವಿಪತ್ತಿಲ್ಲದೆ ಭಗವಂತ ರಕ್ಷಿಸುತ್ತಾನೆ. ರಾಜನಿಗೆ ಆಶ್ಚರ್ಯವೋ ಆಶ್ಚರ್ಯ! ಹೇಗಾದರೂ ಸಾಯಿಸಬೇಕೆಂಬ ಉದ್ದೇಶ್ಯದಿಂದ ಹಾಲಿಗೆ ವಿಷಸೇರಿಸಿ, “ಇದು ಅಮೃತ, ಪೂಜೆಯನಂತರ ಸ್ವೀಕರಿಸು” ಎನ್ನುತ್ತಾನೆ. ಇವಳು ಕೃಷ್ಣನಿಗೆ ಸಮರ್ಪಿಸುತ್ತಲೇ ಪೂರ್ಣಪಾನಮಾಡಿದಾಗ, ಕೃಷ್ಣ ಇವಳೊಳಗೆ ಕುಳಿತು ಸ್ವೀಕರಿಸುತ್ತಾನೆ. ಪವಾಡದಂತೆಯೇ ನಡೆದುಹೋಗುತ್ತದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಇವಳ ಪ್ರಾಣತ್ಯಾಗವನ್ನು ನೋಡುವ ಕುತೂಹಲದಿಂದ ಹೊರಗೆ ಕಾಯುತ್ತಿದ್ದವರಿಗೆ ಆಶಾಭಂಗ ಮತ್ತು ಆಶ್ಚರ್ಯ. ಅವಳು ಎಂದಿನಂತೆ ತನ್ನಪಾಡಿಗೆ ಭಜನೆ-ಪೂಜೆಯಲ್ಲಿ ತಲ್ಲೀನಳಾಗುತ್ತಾಳೆ. ವಿಷ ಏನಾಯಿತೆಂಬ ಪ್ರಶ್ನೆ ಇಲ್ಲಿ. ಮೀರಾ ಹಾಲಿನಪಾತ್ರೆಯನ್ನು ಕೈಯಲ್ಲಿಟ್ಟು ಕಣ್ಣುಮುಚ್ಚಿ ಸ್ವೀಕರಿಸುತ್ತಿರುವಂತೆಯೇ ಕೃಷ್ಣನೋಡುತ್ತಿರುವಂತಹ ಚಿತ್ರಗಳನ್ನು ಕಾಣುತ್ತೇವೆ. ಶ್ರೀರಂಗಮಹಾಗುರುವು ಇದಕ್ಕೆ ನೀಡಿದ ವಿವರಣೆ: ಅವಳಿದ್ದ ಸ್ಥಿತಿಯಲ್ಲಿ ವಿಷದ ಪರಿಣಾಮವು ಅಂಗಾಂಗಗಳಮೇಲೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅಂತಹದೊಂದು ಅತ್ಯಂತ ಉನ್ನತಸ್ಥಿತಿಯದು. ಊಹಿಸಲೂ ಅಸಾಧ್ಯವಾದ ಸನ್ನಿವೇಶಗಳಲ್ಲಿಯೂ ಭಗವಂತ ರಕ್ಷಿಸುತ್ತಾನೆ ಎನ್ನುವುದಕ್ಕೆ ಉದಾಹರಣೆಗಳಿವು.
(ಮುಂದುವರಿಯುವುದು)

– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ
, ಬೆಂಗಳೂರು

ಇದನ್ನೂ ಓದಿ : Navavidha Bhakti : ಶ್ರೀರಾಮ- ಶ್ರೀಕೃಷ್ಣರಿಗೆ ಇವರೆಲ್ಲರೂ ನೆಚ್ಚಿನ ಸಖರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಅಡುಗೆ ಮನೆಯನ್ನು ಮನೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಮನೆಯೊಳಗಿನ ಅನೇಕ ವಿಷಯಗಳು ಯಾವ ದಿಕ್ಕಿನಲ್ಲಿ ಅಡುಗೆ ಮಾಡಿ ತಿನ್ನುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮನೆಗೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಯಾವ ದಿಕ್ಕಿನಲ್ಲಿ ಅಡುಗೆ ಮಾಡಬೇಕೆಂದು ಎಂಬುದನ್ನು ನಾವು ತಿಳಿದುಕೊಂಡಿದ್ದರೆ ಒಳ್ಳೆಯದು.

VISTARANEWS.COM


on

By

Vastu Tips
Koo

ಮನೆಯಲ್ಲಿ (vastu for home) ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ವಾಸ್ತು ಪರಿಪಾಲನೆ ಬಹಳ ಮುಖ್ಯವಾಗಿದೆ. ಮನೆಯಲ್ಲಿ ವಾಸ್ತು (Vastu Tips) ಸರಿಯಾಗಿ ಇಲ್ಲದೇ ಇದ್ದರೆ ಆರ್ಥಿಕ ತೊಂದರೆ, ಅಶಾಂತಿ, ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವು ರೀತಿಯ ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ವಾಸ್ತುವಿಗೆ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ಮಾನ್ಯತೆ ನೀಡಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯನ್ನು (kitchen room) ಮನೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಮನೆಯೊಳಗಿನ ಅನೇಕ ವಿಷಯಗಳು ಯಾವ ದಿಕ್ಕಿನಲ್ಲಿ (Cooking Directions) ಅಡುಗೆ ಮಾಡಿ ತಿನ್ನುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮನೆಗೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಯಾವ ದಿಕ್ಕಿನಲ್ಲಿ ಅಡುಗೆ ಮಾಡಬೇಕೆಂದು ಎಂಬುದನ್ನು ನಾವು ತಿಳಿದುಕೊಂಡಿದ್ದರೆ ಒಳ್ಳೆಯದು

Vastu Tips
Vastu Tips

.

ಅಡುಗೆ ಮನೆಯಿಂದಲೂ ಬರುತ್ತೆ ವಾಸ್ತು ದೋಷಗಳು

ಅಡುಗೆ ಮನೆಯಲ್ಲಿನ ವಾಸ್ತು ದೋಷಗಳು ಮನೆಯಲ್ಲಿ ರೋಗ ಮತ್ತು ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೀಗಾಗಿ ಅಡುಗೆ ಮನೆಯಲ್ಲಿ ಯಾವ ರೀತಿಯಲ್ಲಿ ಆಹಾರವನ್ನು ಬೇಯಿಸುತ್ತೀರಿ ಎಂಬುದರ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ.

ಅಲ್ಲದೇ ಅಡುಗೆ ಮಾಡುವಾಗ ಅಡುಗೆ ಮಾಡುವವರ ಭಾವನೆಗಳು ತಿನ್ನುವವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಅಡುಗೆ ಮಾಡುವುದು ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಯಾಗಲು ಕಾರಣವಾಗುತ್ತದೆ.

Vastu Tips
Vastu Tips


ತಪ್ಪಿಸಬೇಕಾದ ಸಂಗತಿಗಳು

ದಕ್ಷಿಣ ದಿಕ್ಕು: ಎಂದಿಗೂ ದಕ್ಷಿಣಕ್ಕೆ ಮುಖ ಮಾಡಿ ಅಡುಗೆ ಮಾಡಬೇಡಿ. ಇದು ಬಡತನವನ್ನು ತರಬಹುದು. ತಲೆನೋವು, ಕೀಲು ನೋವು ಮತ್ತು ಮೈಗ್ರೇನ್‌ಗಳನ್ನು ಉಂಟು ಮಾಡಬಹುದು.

ಪಶ್ಚಿಮ ದಿಕ್ಕು: ಪಶ್ಚಿಮಾಭಿಮುಖವಾಗಿ ಅಡುಗೆ ಮಾಡುವುದು ವೈವಾಹಿಕ ಜೀವನದಲ್ಲಿ ಅಪಶ್ರುತಿ ಮತ್ತು ಅತೃಪ್ತಿಯನ್ನು ಉಂಟುಮಾಡಬಹುದು.

ಉತ್ತರ ದಿಕ್ಕು: ಉತ್ತರ ದಿಕ್ಕಿಗೆ ಮುಖಮಾಡಿ ಅಡುಗೆ ಮಾಡುವುದು ಆರ್ಥಿಕ ಸಮಸ್ಯೆ ಮತ್ತು ಬಡತನಕ್ಕೆ ಕಾರಣವಾಗಬಹುದು.

Vastu Tips
Vastu Tips


ಅಡುಗೆಗೆ ಶುಭ ಸಲಹೆ

ಪೂರ್ವ ದಿಕ್ಕು: ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡುವುದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಪೂರ್ವವು ಸೂರ್ಯನ ದಿಕ್ಕು, ಧನಾತ್ಮಕ ಶಕ್ತಿಯನ್ನು ಹರಡುತ್ತದೆ. ಈ ದಿಕ್ಕಿನಲ್ಲಿ ಬೇಯಿಸಿದ ಆಹಾರವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಜಗಳಗಳನ್ನು ಕಡಿಮೆ ಮಾಡುತ್ತದೆ ಮತ್ತು ಗಮನವನ್ನು ಹೆಚ್ಚಿಸುತ್ತದೆ. ಇದು ಉತ್ತಮ ಆದಾಯಕ್ಕೆ ಕಾರಣವಾಗಬಹುದು.

ವಾಸ್ತು ನಿಯಮಗಳು

ಅಗ್ನಿ ದೇವರು ವಾಸಿಸುತ್ತಾನೆ ಎಂದು ನಂಬಲಾದ ವಾಯುವ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು.

ಅಡುಗೆ ಮಾಡುವಾಗ ಪೂರ್ವಕ್ಕೆ ಮುಖ ಮಾಡಿ ಮಾಡಬೇಕು.

ಅಡುಗೆ ಮನೆಯಲ್ಲಿ ಸಿಂಕ್ ಅನ್ನು ಈಶಾನ್ಯ ಮೂಲೆಯಲ್ಲಿ ಇರಿಸಬೇಕು.

ಅಡುಗೆ ಮನೆಯ ಕಿಟಕಿಗಳು ಪೂರ್ವ ಮತ್ತು ಪಶ್ಚಿಮದಲ್ಲಿ ಸ್ಥಾಪಿಸಿ.

ಅಲಂಕಾರಕ್ಕಾಗಿ ಅಡುಗೆ ಮನೆಯಲ್ಲಿ ಹಣ್ಣು ಮತ್ತು ತರಕಾರಿಗಳ ಚಿತ್ರಗಳು ಒಳ್ಳೆಯದು.

ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಅಡುಗೆ ಮಾಡುವ ಸ್ಥಳ, ಓಲೆ ಸ್ವಚ್ಛವಾಗಿರಬೇಕು.

ಅಡುಗೆ ಮನೆಯ ಓಲೆ ಮನೆಯ ಮುಖ್ಯ ಬಾಗಿಲಿನ ಹೊರಗಿನಿಂದ ಗೋಚರಿಸಬಾರದು. ಅಗತ್ಯವಿದ್ದರೆ ಪರದೆಯನ್ನು ಬಳಸಿ.

ಶೌಚಾಲಯ, ಮೆಟ್ಟಿಲು ಅಥವಾ ಪೂಜಾ ಕೊಠಡಿಗಳ ಮೇಲೆ ಅಥವಾ ಕೆಳಗೆ ಅಡುಗೆಮನೆಯನ್ನು ಇಡಬೇಡಿ.

ಮಾನಸಿಕ ಸಮತೋಲನ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ನೀರು ಮತ್ತು ಬೆಂಕಿಯ ಅಂಶಗಳನ್ನು ಪ್ರತ್ಯೇಕವಾಗಿ ಇರಿಸಿ.

ಅಡುಗೆ ಕೋಣೆಯು ಮಲಗುವ ಕೋಣೆ, ಪೂಜಾ ಕೊಠಡಿ ಅಥವಾ ಶೌಚಾಲಯಗಳ ಕೆಳಗೆ ಅಥವಾ ಮೇಲೆ ಇಡುವುದನ್ನು ತಪ್ಪಿಸಿ.

ಇದನ್ನೂ ಓದಿ: Vastu Tips: ಮಕ್ಕಳ ಮದುವೆ ವಿಳಂಬವಾಗುತ್ತಿದೆಯೆ? ವಾಸ್ತು ದೋಷವೂ ಕಾರಣವಿರಬಹುದು!

ಧನಾತ್ಮಕ ಕಂಪನಗಳನ್ನು ಹೆಚ್ಚಿಸಲು ಅಡುಗೆಮನೆಯನ್ನು ಸ್ವಚ್ಛವಾಗಿ ಮತ್ತು ಗೊಂದಲವಿಲ್ಲದೆ ಇರಿಸಿ.

ಶುದ್ಧತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮಾಂಸಾಹಾರಿ ಆಹಾರವನ್ನು ತಯಾರಿಸಲು ಪ್ರತ್ಯೇಕ ಸ್ಥಳವನ್ನು ಬಳಸಿ.

Continue Reading

ಧಾರ್ಮಿಕ

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

Shravan 2024: ಶ್ರಾವಣ ಮಾಸದಲ್ಲಿ (Shravan Month 2024) ಹೆಚ್ಚಾಗಿ ದೇವರ ಭಕ್ತಿ, ಪ್ರಾರ್ಥನೆಯಲ್ಲಿ ತೊಡಗುವುದರಿಂದ ಆಹಾರ ನಿಯಮಗಳನ್ನು ಕಠಿಣವಾಗಿ ಅನುಸರಿಸಲಾಗುತ್ತದೆ. ಉಪವಾಸ ಇರುವವರು ಈ ಸಂದರ್ಭದಲ್ಲಿ ಆಹಾರದ ಮಾರ್ಗಸೂಚಿಗಳನ್ನು ಅನುಸರಿಸಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಧ್ಯಾತ್ಮಿಕ ಗಮನವನ್ನು ಕೇಂದ್ರೀಕರಿಸಬಹುದು.

VISTARANEWS.COM


on

By

Shravan Month 2024
Koo

ಶ್ರಾವಣಾ ಬಂತು ಕಾಡಿಗೆ.. ಬಂತು ನಾಡಿಗೆ.. ಬಂತು ಬೀಡಿಗೆ.. ಕವಿ ದ. ರಾ. ಬೇಂದ್ರೆಯವರ (da.ra. bendre) ಕವನದ ಸಾಲುಗಳು ಶ್ರಾವಣ ಮಾಸದ (Shravan 2024) ಸಂಭ್ರಮವನ್ನು ವರ್ಣಿಸುವಂತೆ ಶ್ರಾವಣ ಮಾಸವು (Shravan Month) ಹಬ್ಬ ಹರಿದಿನಗಳನ್ನು ಹೊತ್ತುಕೊಂಡು ಬರುತ್ತದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದ್ದು, ಈ ಸಂದರ್ಭದಲ್ಲಿ ಹಿಂದೂಗಳು ಉಪವಾಸ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ.

ಈ ಬಾರಿ ಆಗಸ್ಟ್ 4ರಿಂದ ಶ್ರಾವಣ ಮಾಸ ಆರಂಭಗೊಳ್ಳಲಿದ್ದು, ಈ ಮಂಗಳಕರ ಅವಧಿಯಲ್ಲಿ ವಿಶೇಷ ಪ್ರಾರ್ಥನೆ, ಆಚರಣೆ ಮತ್ತು ಆಹಾರದ ನಿರ್ಬಂಧ ಇರುತ್ತದೆ. ಶ್ರಾವಣ ಮಾಸದಲ್ಲಿ ಭಕ್ತರು ತಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ನಿರ್ದಿಷ್ಟ ಆಹಾರ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ. ಈ ಪವಿತ್ರ ಮಾಸದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ತಪ್ಪಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಶ್ರಾವಣ ಮಾಸದಲ್ಲಿ ತಿನ್ನಬಹುದಾದ ಆಹಾರಗಳು

Shravan Month 2024
Shravan Month 2024


ತಾಜಾ ಹಣ್ಣುಗಳು: ಶ್ರಾವಣ ಮಾಸದಲ್ಲಿ ತಾಜಾ ಹಣ್ಣುಗಳು ಆಹಾರದ ಅತ್ಯಗತ್ಯ ಭಾಗವಾಗಿದೆ. ಅವುಗಳನ್ನು ಶುದ್ಧ ಮತ್ತು ಜೀರ್ಣಿಸಿಕೊಳ್ಳಲು ಸುಲಭವೆಂದು ಪರಿಗಣಿಸಲಾಗುತ್ತದೆ. ಅಗತ್ಯವಾದ ಪೋಷಕಾಂಶಗಳು ಮತ್ತು ಜಲಸಂಚಯನವನ್ನು ಒದಗಿಸುತ್ತದೆ.ಇದರಲ್ಲಿ ಬಾಳೆಹಣ್ಣು, ಸೇಬು, ದಾಳಿಂಬೆ ಮತ್ತು ಕಲ್ಲಂಗಡಿಗಳು ಸೇರಿವೆ.

ಡೇರಿ ಉತ್ಪನ್ನಗಳು: ಹಾಲು, ಮೊಸರು, ಪನೀರ್ ಮತ್ತು ತುಪ್ಪವನ್ನು ಶ್ರಾವಣ ಮಾಸದಲ್ಲಿ ಸೇವಿಸಬಹುದು. ಈ ಡೇರಿ ಉತ್ಪನ್ನಗಳು ಪೌಷ್ಟಿಕಾಂಶ ಮಾತ್ರವಲ್ಲದೇ ದೇಹವನ್ನು ತಂಪಾಗಿಸುತ್ತದೆ.

ಸಾಬುದಾನ: ಉಪವಾಸದ ಸಮಯದಲ್ಲಿ ಸಾಬುದಾನ ಖಿಚಡಿ ಅಥವಾ ವಡಾ ಶ್ರಾವಣ ಮಾಸದ ಮುಖ್ಯವಾದ ಆಹಾರವಾಗಿದೆ. ಸಾಬುದಾನವು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದು ದಿನವಿಡೀ ಶಕ್ತಿಯನ್ನು ನೀಡುತ್ತದೆ.

ಹುರುಳಿಕಾಳಿನ ಹಿಟ್ಟು: ಪೂರಿ, ಚಪಾತಿ ಅಥವಾ ಪ್ಯಾನ್ ಕೇಕ್‌ಗಳನ್ನು ತಯಾರಿಸಲು ಹುರುಳಿಕಾಳಿನ ಹಿಟ್ಟನ್ನು ಬಳಸಲಾಗುತ್ತದೆ. ಇದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ ಮತ್ತು ಉಪವಾಸಕ್ಕೆ ಸೂಕ್ತವಾಗಿದೆ.

ಚೆಸ್ ನೆಟ್ ಹಿಟ್ಟು: ಹುರುಳಿ ಹಿಟ್ಟಿನಂತೆಯೇ ಇದು ಪೂರಿ ಮತ್ತು ಹಲ್ವಾದಂತಹ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಬಳಸುವ ಮತ್ತೊಂದು ಉಪವಾಸ ಸ್ನೇಹಿ ಹಿಟ್ಟಾಗಿದೆ.

ಆಲೂಗಡ್ಡೆಗಳು ಮತ್ತು ಸಿಹಿ ಆಲೂಗಡ್ಡೆಗಳು: ಇದನ್ನು ವಿವಿಧ ಪಾಕವಿಧಾನಗಳಲ್ಲಿ ಬಳಸಬಹುದು. ಇದರಿಂದ ಉಪವಾಸದಲ್ಲಿರುವವರು ಅಗತ್ಯ ಶಕ್ತಿಯನ್ನು ತುಂಬುತ್ತಾರೆ ಮತ್ತು ಒದಗಿಸುತ್ತಾರೆ.

ಬೀಜಗಳು ಮತ್ತು ಒಣ ಹಣ್ಣುಗಳು: ಬಾದಾಮಿ, ವಾಲ್ ನಾಟ್, ಒಣದ್ರಾಕ್ಷಿ ಮತ್ತು ಇತರ ಒಣ ಹಣ್ಣುಗಳು ಲಘು ಆಹಾರಕ್ಕಾಗಿ ಮತ್ತು ಹೆಚ್ಚುವರಿ ಪೌಷ್ಟಿಕಾಂಶ ಮತ್ತು ಶಕ್ತಿಗಾಗಿ ಭಕ್ಷ್ಯಗಳಿಗೆ ಸೇರಿಸಲು ಉತ್ತಮವಾಗಿದೆ.

ತೆಂಗಿನಕಾಯಿ: ಶ್ರಾವಣ ಮಾಸದಲ್ಲಿ ತಾಜಾ ತೆಂಗಿನಕಾಯಿ, ತೆಂಗಿನ ನೀರು ಮತ್ತು ತೆಂಗಿನ ಹಾಲು ಸಾಮಾನ್ಯವಾಗಿ ಸೇವಿಸಲಾಗುತ್ತದೆ.

Shravan Month 2024
Shravan Month 2024


ಶ್ರಾವಣ ಮಾಸದಲ್ಲಿ ತಪ್ಪಿಸಬೇಕಾದ ಆಹಾರಗಳು

ಮಾಂಸಾಹಾರ: ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ಶ್ರಾವಣ ಮಾಸದಲ್ಲಿ ಕಟ್ಟುನಿಟ್ಟಾಗಿ ತಪ್ಪಿಸಲಾಗುತ್ತದೆ. ಶುದ್ಧತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಸ್ಯಾಹಾರಿ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ: ಇವುಗಳು ದೇಹದಲ್ಲಿ ಶಾಖವನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಅವುಗಳನ್ನು ತಪ್ಪಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ.

ಧಾನ್ಯಗಳು ಮತ್ತು ಬೇಳೆಕಾಳುಗಳು: ಗೋಧಿ, ಅಕ್ಕಿ, ಧಾನ್ಯ ಮತ್ತು ಬೇಳೆಕಾಳುಗಳನ್ನು ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಳಸಲಾಗುವುದಿಲ್ಲ. ಇದರ ಬದಲು ಹುರುಳಿ ಕಾಳು, ಚೆಸ್ಟ್ ಹಿಟ್ಟನ್ನು ಬಳಸಲಾಗುತ್ತದೆ.

ಮದ್ಯ ಮತ್ತು ತಂಬಾಕು: ಶ್ರಾವಣ ಮಾಸ ಪವಿತ್ರ ತಿಂಗಳಾಗಿರುವುದರಿಂದ ಮದ್ಯ ಮತ್ತು ತಂಬಾಕು ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

ಸಂಸ್ಕರಿಸಿದ ಮತ್ತು ಜಂಕ್ ಆಹಾರಗಳು: ಆರೋಗ್ಯಕರ ಮತ್ತು ನೈಸರ್ಗಿಕ ಆಹಾರಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಚಿಪ್ಸ್, ಪ್ಯಾಕೆಟ್ ತಿಂಡಿಗಳು ಮತ್ತು ಇತರ ಸಂಸ್ಕರಿಸಿದ ಆಹಾರಗಳನ್ನು ಸೇವಿಸಲಾಗುವುದಿಲ್ಲ.

ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರಗಳು: ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ ಏಕೆಂದರೆ ಅವು ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು ಮತ್ತು ಉಪವಾಸಕ್ಕೆ ತೊಂದರೆ ಉಂಟು ಮಾಡುವುದು.

Continue Reading

ರಾಮ ಮಂದಿರ

Ayodhya Ram Mandir: ರಾಮಮಂದಿರಕ್ಕೆ ಬರುವ ಚಿನ್ನ, ಬೆಳ್ಳಿ ಆಭರಣಗಳ ಕಾವಲಿಗೆ ಇಬ್ಬರು ಆರ್​​ಎಸ್​ಎಸ್​​ ಕಾರ್ಯಕರ್ತರ ನೇಮಕ

ಅಯೋಧ್ಯೆ ರಾಮ ಮಂದಿರದ (Ayodhya Ram Mandir) ರಾಮಲಲ್ಲಾನಿಗೆ ಪ್ರತಿದಿನ ಲಕ್ಷಾಂತರ ರೂಪಾಯಿ ನಗದು ಸೇರಿದಂತೆ ಚಿನ್ನ, ಬೆಳ್ಳಿ, ಮುತ್ತು ಸೇರಿದಂತೆ ಬೆಲೆಬಾಳುವ ಆಭರಣಗಳೂ ಬರುತ್ತಿದೆ. ಇದನ್ನು ನಿರ್ವಹಿಸಲು ಮತ್ತು ದಾಖಲಿಸಲು ದೇವಸ್ಥಾನದ ಟ್ರಸ್ಟ್‌ನಿಂದ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ.

VISTARANEWS.COM


on

By

Ayodhya Ram Mandir
Koo

ಉತ್ತರಪ್ರದೇಶ: ಅಯೋಧ್ಯೆಯ ರಾಮಮಂದಿರದ (Ayodhya Ram Mandir) ರಾಮಲಲ್ಲಾನ (ramlalla) ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಅಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಹೀಗೆ ಭೇಟಿ ನೀಡುವ ಭಕ್ತರು ಭಾರಿ ಪ್ರಮಾಣದ ಕಾಣಿಕೆ ಅರ್ಪಿಸುತ್ತಿದ್ದಾರೆ. ಚಿನ್ನ, ಬೆಳ್ಳಿ, ವಜ್ರ, ಮುತ್ತು ಸೇರಿದಂತೆ ಬೆಲೆಬಾಳುವ ಆಭರಣಗಳನ್ನೂ ಸಲ್ಲಿಸುತ್ತಾರೆ. ಪ್ರತಿದಿನ ಲಕ್ಷಾಂತರ ರೂಪಾಯಿ ಹುಂಡಿಗೆ ಬೀಳುವುದು ಸೇರಿದಂತೆ ಬೆಲೆಬಾಳುವ ಆಭರಣಗಳನ್ನು ಅರ್ಪಿಸುತ್ತಿದ್ದಾರೆ. ಹೀಗಾಗಿ ಇವುಗಳ ನಿರ್ವಹಣೆಗೆಂದು ದೇವಸ್ಥಾನದ ಟ್ರಸ್ಟ್‌ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು (RSS workers) ನೇಮಕ ಮಾಡಿದೆ.

ಈ ಆರೆಸ್ಸೆಸ್ ಕಾರ್ಯಕರ್ತರು ಆಭರಣಗಳನ್ನು ದಾನ ಮಾಡುವ ಪ್ರತಿಯೊಬ್ಬ ಭಕ್ತನ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸಲಾಗುತ್ತಿದೆ. ಮಾಹಿತಿ ದಾಖಲು ಮಾಡಲು ವಿವಿಧ ಪಾಳಿಗಳಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಾರೆ. ಪ್ರತಿ ದಿನದ ಸಂಜೆ ಕಾಣಿಕೆ ರೂಪದಲ್ಲಿ ಬಂದಿರುವ ಆಭರಣಗಳನ್ನು ದಾಖಲಿಸಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಲಾಕರ್‌ನಲ್ಲಿ ಠೇವಣಿ ಇಡಲಾಗುತ್ತಿದೆ. ಕೆಲವು ಭಕ್ತರು ದೇಣಿಗೆ ಕೌಂಟರ್​ಗೆ ಹೋಗುವ ಬದಲು ಅಲ್ಲಿನ ಸಿಬ್ಬಂದಿ ಮೂಲಕ ಹಣ ನೀಡಲಾಗುತ್ತಿದೆ. ಈ ವಹಿವಾಟುಗಳನ್ನೂ ಎಚ್ಚರಿಕೆಯಿಂದ ದಾಖಲು ಮಾಡಲು ಟ್ರಸ್ಟ್​ ಮುಂದಾಗಿದೆ. ಈ ಎಲ್ಲ ವಹಿವಾಟುಗಳ ಬಗ್ಗೆ ನಿಗಾ ಇಡಲು ಆರ್​ಎಸ್​ಎಸ್​ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ.

ಬಾಲ ರಾಮನಿಗೆ ಅಲಂಕಾರ ಮಾಡುವ ಆಭರಣಗಳನ್ನು ರಕ್ಷಿಸಲು ನಿವೃತ್ತ ಸೇನಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ರಾಮಲಲ್ಲಾನನ್ನು ಅಲಂಕರಿಸುವಾಗ ಮತ್ತು ಅದನ್ನು ತೆಗೆಯುವ ವೇಳೆ ಪುರೋಹಿತರು ನಿವೃತ್ತ ಸೈನಿಕರ ಮೇಲ್ವಿಚಾರಣೆಯಲ್ಲಿ ಲಾಕರ್‌ನಿಂದ ಆಭರಣಗಳನ್ನು ಪಡೆದು ವಾಪಸ್​ ಕೊಡುತ್ತಾರೆ. ಎಲ್ಲ ಆಭರಣವನ್ನು ತೆಗೆಯುವಾಗ ಮತ್ತು ಹಾಕುವಾಗ ಲೆಕ್ಕ ಹಾಕಲಾಗುತ್ತದೆ.

Ayodhya Ram Mandir
Ayodhya Ram Mandir


ಎಂಟು ಗಂಟೆಗಳ ಮೂರು ಪಾಳಿಗಳಲ್ಲಿ ಕೆಲಸ ಮಾಡುವ ಇಬ್ಬರು ಬಂದೂಕು ಹೊಂದಿರುವ ಆರು ಅಂಗರಕ್ಷಕರನ್ನು ಬಾಲರಾಮನ ವಿಗ್ರಹಕ್ಕೆ ಭದ್ರತೆ ಒದಗಿಸಲಾಗಿದೆ. ಈ ಹಿಂದೆ ಧಾರ್ಮಿಕ ಗುರುಗಳಾಗಿ ಸೇವೆ ಸಲ್ಲಿಸಿದ ಮೂವರು ಸೇರಿದಂತೆ 20 ನಿವೃತ್ತ ಸೇನಾ ಸಿಬ್ಬಂದಿಯನ್ನು ರಾಮ ಮಂದಿರದಲ್ಲಿ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಧಾರ್ಮಿಕ ಗುರುಗಳು ಗರ್ಭಗುಡಿಯ ಹೊರಗೆ ನಿಂತು ಪೂಜೆಗೆ ಸಹಾಯ ಮಾಡುತ್ತಾರೆ. ಉಳಿದ ಸಿಬ್ಬಂದಿ ಭಕ್ತರ ಹರಿವನ್ನು ನಿಯೋಜಿಸುತ್ತಿದ್ದಾರೆ.

ಆರತಿ ಮತ್ತು ಇತರ ಪೂಜೆಗಳ ಸಮಯದಲ್ಲಿ ಗಂಟೆಗಳನ್ನು ಬಾರಿಸಲು ಮತ್ತು ಉಳಿದ ವ್ಯವಸ್ಥೆಗಳನ್ನು ನಿರ್ವಹಿಸಲು ಅವರು ಸಹಾಯ ಮಾಡುತ್ತಾರೆ. 17 ನಿವೃತ್ತ ಸೈನಿಕರು ಸಾಮಾನ್ಯ ಉಡುಪುಗಳನ್ನು ಧರಿಸಿ ದೇಗುಲದ ಆವರಣದ ಮೇಲ್ವಿಚಾರಣೆ ಮಾಡುತ್ತಾರೆ.

ಈ ನಡುವೆ ಶ್ರೀ ರಾಮ ಜನ್ಮಭೂಮಿ ಆವರಣದ ಶೇಷಾವತಾರ ದೇವಾಲಯದ ನಿರ್ಮಾಣ ಪ್ರಾರಂಭವಾಗಿದೆ. ರಾಮಮಂದಿರ ಮತ್ತು ಕುಬೇರ ದಿಬ್ಬದ ನಡುವೆ ಈ ಹೊಸ ದೇವಾಲಯ ನಿರ್ಮಿಸಲಾಗುತ್ತಿದೆ.

ಇದನ್ನೂ ಓದಿ: Ayodhya Ram Mandir : ರಾಮಮಂದಿರದ ಚಾವಣಿ ಸೋರುತ್ತಿಲ್ಲ; ನಿರ್ಮಾಣ ಸಮಿತಿ ಸ್ಪಷ್ಟನೆ

ದಕ್ಷಿಣ ಭಾರತದ ಸಂತರ ಸಲಹೆ ಪಡೆದು ಶೇಷಾವತಾರ್ ದೇವಾಲಯದ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ಅದರ ಎತ್ತರವು ರಾಮ ಮಂದಿರದಕ್ಕೆ ಸಮಾನವಾಗಿದೆ. ಈ ದೇವಾಲಯವು ಶ್ರೀ ಸೀತಾರಾಮನ ವಿಗ್ರಹ ಹೊಂದಿರುತ್ತದೆ. ಇದನ್ನು ಶೇಷನಾಗ ರಕ್ಷಿಸುತ್ತಾನೆ. ಇನ್ನು ಸಪ್ತ ಮಂಟಪದ ಅಡಿಪಾಯದ ಕೆಲಸವು ಬಹುತೇಕ ಪೂರ್ಣಗೊಂಡಿದೆ. ಅಡಿಪಾಯ ಮತ್ತು ಗೋಡೆಗೆ ಕಲ್ಲುಗಳ ಕಟ್ಟುವ ಕಾರ್ಯ ನಡೆಸಲಾಗುತ್ತಿದೆ.

Continue Reading

ಧಾರ್ಮಿಕ

Vastu Tips: ಸಂಸ್ಥೆ ಸಕ್ಸೆಸ್‌ ಆಗಲು ಕಚೇರಿ ಸ್ಥಳ ಹೀಗಿರಬೇಕು!

ಉತ್ತಮ ಕಚೇರಿಗೆ ಕೆಲವು ಸಲಹೆಗಳನ್ನು ವಾಸ್ತು (Vastu Tips) ತಜ್ಞರಾದ ಆಚಾರ್ಯ ಪಂಕಿತ್ ಗೋಯಲ್ ಅವರು ನೀಡಿದ್ದು, ಇದರಿಂದ ಸಮೃದ್ಧಿ ಮತ್ತು ದಕ್ಷತೆ ಹೆಚ್ಚಾಗುತ್ತದೆ ಎನ್ನುತ್ತಾರೆ. ಯಾವುದೇ ವ್ಯಾಪಾರ ಘಟಕದ ಏಳಿಗೆಯ ಚಿಂತನೆಯು ಖಾತೆಗಳ ತಂಡ, ಸರಿಯಾದ ಬೆಳಕು, ಮಾಲೀಕರ ಮೇಜು ಮತ್ತು ಲಾಕರ್‌ನ ಸ್ಥಳವನ್ನು ಆಧರಿಸಿರುತ್ತದೆ. ಇವುಗಳಿಗೆ ಸರಿಯಾದ ದಿಕ್ಕು ಮತ್ತು ಸ್ಥಳ ಯಾವುದು, ಹೇಗಿರಬೇಕು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಕೆಲಸದ ಸ್ಥಳದಲ್ಲಿ (office place) ಕೆಲವೊಮ್ಮೆ ಸಾಕಷ್ಟು ವಿಘ್ನಗಳು ಎದುರಾಗುತ್ತವೆ. ಇದಕ್ಕೆ ಕಾರಣ ಹುಡುಕುತ್ತಾ ಹೊರಟರೆ ವಾಸ್ತು ದೋಷವೂ (Vastu Tips) ಒಂದಾಗಿರಬಹುದು ಎನ್ನುತ್ತಾರೆ ವಾಸ್ತು ತಜ್ಞರು (Vastu experts). ಹೊಸ ಕಚೇರಿ ಸ್ಥಾಪನೆ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಸಮೃದ್ಧಿ ಹೆಚ್ಚಾಗಲು ವಾಸ್ತು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎನ್ನುತ್ತಾರೆ ಖ್ಯಾತ ವಾಸ್ತು ತಜ್ಞರಾದ ಆಚಾರ್ಯ ಪಂಕಿತ್ ಗೋಯಲ್.

ಈ ಕುರಿತು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾ ಗ್ರಾಮ್‌ನಲ್ಲಿ ( social media Instagram) ಮಾಹಿತಿ ಹಂಚಿಕೊಂಡಿರುವ ಅವರು, ಕೆಲಸದ ಸ್ಥಳದಲ್ಲಿ ಯಶಸ್ಸು ಸಾಧಿಸಬೇಕಾದರೆ ಏನು ಮಾಡಬೇಕು ಎಂಬುದನ್ನು ಹೇಳಿದ್ದಾರೆ. ಈ ಕೆಲವು ಪ್ರಾಯೋಗಿಕ ಸಲಹೆಗಳನ್ನು ಅಳವಡಿಸಿಕೊಳ್ಳುವುದರಿಂದ ಅದು ಕಾರ್ಯಕ್ಷೇತ್ರದಲ್ಲಿ ನಿಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿ, ಕೆಲಸದಲ್ಲಿ ಸಮೃದ್ಧಿ ತರಲು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತಾರೆ ಎನ್ನುತ್ತಾರೆ ಅವರು.

ಕಚೇರಿಗಾಗಿ ಪ್ರಮುಖ ಸಲಹೆಗಳು

Vastu Tips
Vastu Tips


ಅಕೌಂಟ್‌ ವಿಭಾಗವನ್ನು ಎಲ್ಲಿ ಇಡಬೇಕು?

ಕಚೇರಿಯ ಪಶ್ಚಿಮ, ನೈಋತ್ಯ ಅಥವಾ ಆಗ್ನೇಯ ಭಾಗಗಳಲ್ಲಿ ಅಕೌಂಟ್‌ ವಿಭಾಗವನ್ನು ಇರಿಸಬಹುದು. ಇಲ್ಲೇ ಖಾತೆಗಳನ್ನು ನಿರ್ವಹಿಸುವ ತಂಡವನ್ನು ಇಡಬಹುದು. ಇದರಿಂದ ಹಣಕಾಸಿನ ಸ್ಥಿರತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ಸರಿಯಾದ ಬೆಳಕು ಇರಲಿ

ಕಚೇರಿಯ ಉತ್ತರದಲ್ಲಿ ಸ್ಪಾಟ್‌ಲೈಟ್ ಅನ್ನು ಸ್ಥಾಪಿಸಬೇಕು ಎನ್ನುತ್ತಾರೆ ತಜ್ಞರು. ಇದರಿಂದ ಹೊಸ ಅವಕಾಶಗಳು ಆಕರ್ಷಿಸಲ್ಪಡುತ್ತದೆ. ಇದು ಕಚೇರಿಯಲ್ಲಿ ನಿಮ್ಮ ಬೆಳವಣಿಗೆಯ ನಿರೀಕ್ಷೆಗಳನ್ನು ಹೆಚ್ಚಿಸುತ್ತದೆ. ಸರಿಯಾದ ಬೆಳಕು ಕೆಲಸದ ಸ್ಥಳವನ್ನು ಬೆಳಗಿಸುತ್ತದೆ ಮಾತ್ರವಲ್ಲದೆ ಸ್ಪಷ್ಟತೆ ಮತ್ತು ಜ್ಞಾನೋದಯವನ್ನು ಸಂಕೇತಿಸುತ್ತದೆ.


ಗ್ರಾಹಕರನ್ನು ಆಕರ್ಷಿಸುವುದು ಹೇಗೆ?

ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮತ್ತು ಅವರಿಗೆ ಸ್ಥಳವನ್ನು ಹೆಚ್ಚು ಆಕರ್ಷಕವಾಗಿಸಲು ಯುನಿಕಾರ್ನ್ ಹಾರ್ಸ್ ಪ್ರತಿಮೆಗಳನ್ನು ಕಚೇರಿಯಲ್ಲಿ ಇಡಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಗ್ರಾಹಕರನ್ನು ಆಕರ್ಷಿಸಲು ಮತ್ತು ಸಾಮಾನ್ಯವಾಗಿ ವ್ಯಾಪಾರ ಸಂಬಂಧಗಳನ್ನು ಸುಧಾರಿಸಲು ಇದು ವಿಶಿಷ್ಟವಾದ ವಾಸ್ತು ಸಲಹೆಗಳಲ್ಲಿ ಒಂದಾಗಿದೆ.

Vastu Tips
Vastu Tips


ಮಾಲೀಕರ ಸ್ಥಾನ

ಕಚೇರಿಯ ಯಶಸ್ಸಿನ ಪ್ರಮುಖ ವಿಷಯವೆಂದರೆ ಮಾಲೀಕರ ಟೇಬಲ್ ಇಡುವ ಸ್ಥಳ ಅಥವಾ ಅವರು ಕುಳಿತುಕೊಳ್ಳುವ ಜಾಗ. ಇದನ್ನು ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ಪಶ್ಚಿಮದಲ್ಲಿ ಇಡಬೇಕೆಂದು ವಾಸ್ತು ತಜ್ಞರಾದ ಗೋಯಲ್ ಸೂಚಿಸುತ್ತಾರೆ. ಇಲ್ಲದಿದ್ದರೆ ಅದನ್ನು ಉತ್ತರಕ್ಕೆ ಎದುರಾಗಿ ದಕ್ಷಿಣದಲ್ಲಿ ಇರಿಸಬಹುದು. ಇದು ವ್ಯಕ್ತಿಯಲ್ಲಿ ನಾಯಕತ್ವದ ಗುಣಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಮಾಲೀಕರ ವ್ಯಕ್ತಿತ್ವದಲ್ಲಿ ಉತ್ತಮ ನಿರ್ಧಾರವನ್ನು ತರುತ್ತದೆ.

ಇದನ್ನೂ ಓದಿ: Vastu Tips: ಮಕ್ಕಳ ಮದುವೆ ವಿಳಂಬವಾಗುತ್ತಿದೆಯೆ? ವಾಸ್ತು ದೋಷವೂ ಕಾರಣವಿರಬಹುದು!

ಲಾಕರ್ ಎಲ್ಲಿ ಇಡಬೇಕು?

ಲಾಕರ್ ಇಡಲು ಕೆಲವು ಮಂಗಳಕರ ಸ್ಥಾನಗಳನ್ನು ಸೂಚಿಸಿರುವ ಗೋಯಲ್ ಅಲ್ಮೇರಾವನ್ನು ಪಶ್ಚಿಮ, ಉತ್ತರ ಅಥವಾ ದಕ್ಷಿಣ ಭಾಗದಲ್ಲಿ ಇರಿಸಬಹುದು ಎಂದಿದ್ದಾರೆ. ಅವರ ಪ್ರಕಾರ, ಈ ಪ್ರತಿಯೊಂದು ಸ್ಥಾನಗಳು ವ್ಯವಹಾರಕ್ಕೆ ಭದ್ರತೆ ಮತ್ತು ಬೆಳವಣಿಗೆಯನ್ನು ಒದಗಿಸುತ್ತದೆ.

Continue Reading
Advertisement
Vaccin for Hiv
ಆರೋಗ್ಯ30 mins ago

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Physical Assault
ದೇಶ38 mins ago

Physical Assault : ಅಶ್ಲೀಲ ವಿಡಿಯೊಗಳನ್ನು ನೋಡಿ 9 ವರ್ಷದ ತಂಗಿಯನ್ನು ಅತ್ಯಾಚಾರ ಮಾಡಿ ಕೊಂದ 13 ವರ್ಷದ ಬಾಲಕ!

Paris Olympics
ಕ್ರೀಡೆ54 mins ago

Paris Olympics: ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ; ರೆಸ್ಟೋರೆಂಟ್​ನಿಂದ ರೋಟಿ, ದಾಲ್‌ ತರಿಸಿದ ಬಾಕ್ಸರ್​

karnataka Rain
ಮಳೆ56 mins ago

Karnataka Rain : ಮಳೆಗೆ ಮನೆ ಮುಳುಗಡೆಯಾದ ಸುದ್ದಿ ಕೇಳಿ ಮನೆ ಯಜಮಾನ ಹೃದಯಾಘಾತದಿಂದ ಸಾವು

Rahul Gandhi
ದೇಶ57 mins ago

Rahul Gandhi: ನೀಟ್‌ನಲ್ಲಿ ‘ಎಷ್ಟು ವೋಟ್‌’ ಪಡೆದಿರಿ ಎಂದು ವಿದ್ಯಾರ್ಥಿಗಳಿಗೆ ಕೇಳಿದ ರಾಹುಲ್‌ ಗಾಂಧಿ; Video ವೈರಲ್

Gautam Gambhir
ಕ್ರೀಡೆ1 hour ago

Gautam Gambhir : ಗೌತಮ್​ ಗಂಭೀರ್​ಗೆ ವಿಶೇಷ ಸಂದೇಶ ಕಳುಹಿಸಿದ ದ್ರಾವಿಡ್​; ಭಾವುಕರಾದ ನೂತನ ಕೋಚ್​!

Kannada New Movie Nava Digantha latest news
ಸಿನಿಮಾ1 hour ago

Kannada New Movie: ನೆರವೇರಿತು ’ನವ ದಿಗಂತ’ ಚಿತ್ರದ ಮುಹೂರ್ತ

DK Shivakumar
ಕರ್ನಾಟಕ2 hours ago

Brand Bengaluru: ‘ಬ್ರ್ಯಾಂಡ್‌ ಬೆಂಗಳೂರು’ ನಿರ್ಮಾಣಕ್ಕೆ ಡಿಕೆಶಿ ಮಾಸ್ಟರ್‌ಪ್ಲಾನ್;‌ ಇಲ್ಲಿದೆ ಸಭೆಯ ವಿವರ

Drone Prathap Eye surgery for an old woman with her own money
ಬಿಗ್ ಬಾಸ್2 hours ago

Drone Prathap: ನುಡಿದಂತೆ ನಡೆದ ‘ಬಿಗ್ ಬಾಸ್’ ಡ್ರೋನ್ ಪ್ರತಾಪ್; ಸ್ವಂತ ಹಣದಿಂದ ವೃದ್ಧೆಗೆ ಕಣ್ಣು ಆಪರೇಷನ್ !

ದೇಶ2 hours ago

Chandipura Virus: ಗುಜರಾತ್‌ನಲ್ಲಿ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್‌ಗೆ 48 ಬಲಿ; 39 ಮಂದಿಗೆ ಚಾಂದಿಪುರ ವೈರಸ್ ದೃಢ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

ramanagara news
ರಾಮನಗರ4 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ5 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ23 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

ಟ್ರೆಂಡಿಂಗ್‌