Pitru Paksha 2023: ಪಿತೃಪಕ್ಷ; ಗತಿಸಿದ ಹಿರಿಯರಿಗೆ ಕೃತಜ್ಞತೆ ಸಲ್ಲಿಸುವ ಸಮಯ - Vistara News

ಧಾರ್ಮಿಕ

Pitru Paksha 2023: ಪಿತೃಪಕ್ಷ; ಗತಿಸಿದ ಹಿರಿಯರಿಗೆ ಕೃತಜ್ಞತೆ ಸಲ್ಲಿಸುವ ಸಮಯ

ಗತಿಸಿದ ನಮ್ಮ ಜೀವನದಲ್ಲಿ ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ-ಸಹಕಾರ ಮಾಡಿದ ಸರ್ವರನ್ನೂ ನೆನೆದು ಶ್ರಾದ್ಧವನ್ನು ಮಾಡುವುದೇ ‘ಮಹಾಲಯ ಶ್ರಾದ್ಧ’.

VISTARANEWS.COM


on

pitru paksha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
ganesh bhat

:: ಗಣೇಶ ಭಟ್ಟ, ಸಂಸ್ಕೃತ ಉಪನ್ಯಾಸಕರು, ಕುಮಟಾ

ಪಿತೃಗಳ ಕುರಿತಾದ ಕೃತಜ್ಞತೆಯ ಮಹಾಪರ್ವವೇ ಪಿತೃಪಕ್ಷ (Pitru Paksha 2023). ನಮ್ಮ ಕುಲದಲ್ಲಿ ಗತಿಸಿದ ಪೂರ್ವಜರನ್ನು ಉದ್ದೇಶಿಸಿ ಅವರ ಹಸಿವು-ತೃಷೆಯ ನಿವೃತ್ತಿಗಾಗಿ ಶೃದ್ಧಾ-ಭಕ್ತಿಯಿಂದ ಪಿಂಡದಾನ ಹಾಗೂ ಜಲದಾನ (ತರ್ಪಣ) ವನ್ನು ಶ್ರಾದ್ಧ ಎಂದು ಕರೆಯುತ್ತೇವೆ. ನಮ್ಮ ಪೂರ್ವಜರನ್ನು ವರ್ಷದಲ್ಲಿ ಒಮ್ಮೆಯಾದರೂ ಸ್ಮರಿಸಿ ಇವುಗಳನ್ನು ನೀಡುವುದು ಕೃತಜ್ಞತೆಯ ಒಂದು ಭಾಗದ ಜೊತೆಗೆ ವಿಶೇಷ ಕರ್ತವ್ಯ ಕೂಡ ಆಗಿದೆ. ವಿಶೇಷವಾಗಿ ಇದಕ್ಕೋಸ್ಕರವೇ ಮೀಸಲಾಗಿ ಇರುವ ಪಿತೃಪಕ್ಷದ ದಿನಗಳಲ್ಲಿ ಅಥವಾ ಪಿತೃಪಕ್ಷದ ಅಮಾವಾಸ್ಯೆಯಂದು ಈ ಕಾರ್ಯವನ್ನು ಖಂಡಿತ ಮಾಡಬಹುದು.

ಪಿತೃಪಕ್ಷ ಯಾವಾಗ ?

ಆಷಾಢೀಮವಧಿಂ ಕೃತ್ವಾ ಪಂಚಮಂ ಪಕ್ಷಮಾಶ್ರಿತಾಃ |
ಕಾಂಕ್ಷಂತಿ ಪಿತರಃ ಕ್ಲಿಷ್ಟಾ ಅನ್ನಮಪ್ಯನ್ವಹಂ ಜಲಮ್ || (ನಿರ್ಣಯಸಿಂಧು)

ಭಾದ್ರಪದ ಮಾಸದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯುವರು. ಆಶ್ವಿಜ ಶುಕ್ಲ ಪ್ರತಿಪತ್ ಸೇರಿ ಈ ಹದಿನಾರು ದಿನಗಳು ಪಿತೃಗಳು ತಮ್ಮವರಿಂದ ಪಿಂಡದಾನ-ತರ್ಪಣವನ್ನು ಬಯಸಿ ಬರುವರು. ಆಗ ಅವರನ್ನು ಉದ್ದೇಶಿಸಿ, ಶ್ರಾದ್ಧಾದಿಗಳನ್ನು ಮಾಡಿದರೆ, ಪಿತೃಗಳು ತೃಪ್ತರಾಗುವರು. ಮಾಡದಿದ್ದರೆ ನಿರಾಸೆಯಿಂದ ಹಿಂತಿರುಗುವರು.

ವರ್ಷದಲ್ಲಿ ಗತಿಸಿದ ತಂದೆ-ತಾಯಿಯರ ಶ್ರಾದ್ಧವನ್ನು ಮಾಡುತ್ತೇವೆ, ಮತ್ತೆ ಈ ಪಿತೃಪಕ್ಷದಲ್ಲಿ ಅವರಿಗೆ ಶ್ರಾದ್ಧ ಮಾಡಬೇಕೆ? ಎಂದರೆ ವರ್ಷದಲ್ಲಿ ಶ್ರಾದ್ಧ ಮಾಡುವುದು ಗತಿಸಿದ ತಂದೆ-ತಾಯಿಯರ ಮೂರು ತಲೆಮಾರಿನವರನ್ನು ಮಾತ್ರ. ಆದರೆ ಪಿತೃಪಕ್ಷದಲ್ಲಿ ಅವರನ್ನೂ ಸೇರಿಸಿ ಗತಿಸಿದ ನಮ್ಮ ಜೀವನದಲ್ಲಿ ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ-ಸಹಕಾರ ಮಾಡಿದ ಸರ್ವರನ್ನೂ ನೆನೆದು ಶ್ರಾದ್ಧವನ್ನು ಮಾಡುವುದೇ ‘ಮಹಾಲಯ ಶ್ರಾದ್ಧ’. ಮಹತಾಂ ಜನನಾಂ ಆಲಯಂ, ಮಹದಾದೀನಾಂ ಆಲಯಮ್ ಮಹಾಲಯಮ್. ಸರ್ವ ಪಿತೃಗಳನ್ನು ಉದ್ದೇಶಿಸಿ, ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧವೇ ಮಹಾಲಯ ಶ್ರಾದ್ಧ.

ಪಿತೃಗಳೆಂದರೆ ಯಾರು?

ಪಾತಿ (ರಕ್ಷತಿ) ಅಪತ್ಯಮ್, ತಮ್ಮ ಸಂತತಿಯನ್ನು ರಕ್ಷಿಸುವವರು ಪಿತೃಗಳು. ಪಾ (ರಕ್ಷಣೆ) ಧಾತುವಿನಿಂದ ಪಿತೃ ಶಬ್ದ ಬಂದಿದೆ, ಅಂದರೆ ನಮ್ಮನ್ನು ಯಾರು ಪಾಲಿಸುವರೊ, ರಕ್ಷಿಸುವರೊ ಅವರು ಪಿತೃಗಳು. ಅಂತೆಯೆ ಪಾ(ಪಾನೆ) ಶಬ್ದದಿಂದ ಪಿತೃ ಶಬ್ದ ಬಂದಿದೆ. ಬದುಕಿರುವಾಗ ನಮ್ಮನ್ನು ರಕ್ಷಿಸುವ ನಮ್ಮ ಪಿತೃಗಳು, ಮರಣ ಹೊಂದಿದ ನಂತರ ನಾವು ಕೊಟ್ಟ ತರ್ಪಣಾದಿಗಳನ್ನು ಪಾನ ಮಾಡಿ ನಮ್ಮನ್ನು ರಕ್ಷಿಸುವವರೂ ಪಿತೃಗಳು. ಪಿತೃಗಳೆಂದರೆ ಮೂಲದಲ್ಲಿ ಅವರು ದೇವತೆಗಳೆ ಬ್ರಹ್ಮನ ಅನುಗ್ರಹದಿಂದ ಪಿತೃಗಳಾದವರು.

ಪಿತೃನ್ ಪ್ರೀಣಾತಿ ಯೋ ವಂಶ್ಯಃ ಪಿತರಃ ಪ್ರೀಣಯಂತಿ ತಮ್ |
ಪಿತರಃ ಪುಷ್ಟಿಕಾಮಸ್ಯ ಪ್ರಜಾಕಾಮಸ್ಯ ವಾ ಪುನಃ ||
ಪುಷ್ಟಿಂ ಪ್ರಜಾಸ್ತಥಾ ಸ್ವರ್ಗಂ ಪ್ರಯಚ್ಛಂತಿ ನ ಸಂಶಯಃ |
ದೇವಕಾರ್ಯಾದಪಿ ಸದಾ ಪಿತೃಕಾರ್ಯಂ ವಿಶಿಷ್ಯತೇ || (ಬ್ರಹ್ಮಾಂಡ ಪುರಾಣ)

ಪಿತೃಗಳು ತಮ್ಮ ವಂಶದಲ್ಲಿ ಜನಿಸಿರುವ ಪುತ್ರರು ಕೊಟ್ಟಿರುವ ಶ್ರಾದ್ಧಾನ್ನದಿಂದ ತೃಪ್ತರಾಗಿ ಆಯುಷ್ಯ, ಸಂತಾನ, ಸಂಪತ್ತು, ವಿದ್ಯೆ, ಸುಖ-ಭೋಗಗಳನ್ನು ನಿಸ್ಸಂಶಯವಾಗಿ ನೀಡುವರು. ಆದ್ದರಿಂದ ದೇವತಾರಾಧನೆ ಕರ್ಮಕ್ಕಿಂತ ಪಿತೃ ಸಮಾರಾಧನೆಯು ಅತ್ಯುತ್ತಮವಾದುದು, ಶ್ರೇಷ್ಟವಾದುದು. ಯಾರು ಶ್ರದ್ಧೆಯಿಂದ ಪಿತೃಗಣವನ್ನು ಆರಾಧಿಸುತ್ತಾರೋ, ಅದರಿಂದ ಪಿತೃಗಣವು ಒಂದು ವರ್ಷ ತೃಪ್ತಿ ಹೊಂದಿ ಹರಸುವರು. ಪುರಾಣಗಳ ಪ್ರಕಾರ ದೇವತೆಗಳಿಗಿಂತ ಪಿತೃಗಳ ಸ್ಥಾನ-ಮಾನ ಶ್ರೇಷ್ಠವಾದುದು. ದೇವತೆಗಳನ್ನು ಪೂಜಿಸುವ ಮೊದಲು ಪಿತೃಕಾರ್ಯ ಮಾಡುವುದು ಅಗತ್ಯವೆಂದು, ದೇವಕಾರ್ಯಕಿಂತ ಪಿತೃಕಾರ್ಯವು ಶ್ರೇಷ್ಠವೆಂದು ಪರಿಗಣಿತವಾಗಿದೆ.

ಹಾಗಾದರೆ ಈ ಪಿತೃಗಳು ಎಷ್ಟಿದ್ದಾರೆ? ಪಿತೃಗಳು ಅನಂತ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಸುಕಲಾ, ಅಂಗಿರಸ, ಸುಸ್ವಧಾ, ಸೋಮ, ವೈರಾಜ,ಅಗ್ನಿಷ್ವಾತ್ತ,ಬರ್ಹಿಷದರೆಂಬ ಏಳು ಪಿತೃಗಳು ಪ್ರಮುಖರಾದವರು. ವಸು-ರುದ್ರ-ಆದಿತ್ಯರು ಇವರ ಅಧಿಪತಿಗಳು. ನಂಬಿಕೆಯ ಪ್ರಕಾರ ನಮ್ಮ ಪಿತೃಗಳನ್ನು ಸ್ಮರಿಸಿದ ತಕ್ಷಣ ಆಗಮಿಸಿ, ಶ್ರಾದ್ಧವನ್ನು ಸ್ವೀಕರಿಸಿ, ಅವರ ವಂಶ-ಪರಂಪರೆಯನ್ನು ರಕ್ಷಿಸಿ, ವೃದ್ಧಿಸುವರು. ನಮ್ಮ ವಂಶದಲ್ಲಿ ಗತಿಸಿದ ಪಿತೃಗಳು ಒಂದು ವೇಳೆ ಮೋಕ್ಷವನ್ನು ಹೊಂದಿದ್ದರೂ, ವಸು-ರುದ್ರ-ಆದಿತ್ಯರು ಶ್ರಾದ್ಧವನ್ನು ಸ್ವೀಕರಿಸಿ ಕುಲಕ್ಕೆ ಒಳಿತನ್ನು ಹರಸುವರು.

ಪೌರಾಣಿಕ ಹಿನ್ನೆಲೆಯೇನು?

ರಾಜಾ ದಶರಥನು ಮರಣ ಹೊಂದಿದ ನಂತರ ಭರತನು ಯಥೋಚಿತವಾಗಿ ದಶರಥನ ಶ್ರಾದ್ಧ ತರ್ಪಣಾದಿ ಕ್ರಿಯೆಗಳನ್ನು ಮಾಡಿ, ವಿಧಿಯುಕ್ತವಾಗಿ ಹೇರಳವಾಗಿ ದಾನಮಾಡಿದ. ಶ್ರೀರಾಮನು ವನವಾಸದ ಸಂದರ್ಭದಲ್ಲಿ ಚಿತ್ರಕೂಟದಲ್ಲಿರುವಾಗ ತಂದೆಯ ಮರಣದ ವಾರ್ತೆಯನ್ನು ಕೇಳಿ, ಕೂಡಲೇ ಮಂದಾಕಿನಿ ನದಿ ತಟಕ್ಕೆ ತೆರಳಿ ತಂದೆಯನ್ನು ನೆನೆದು ವೇದೋಕ್ತವಾಗಿ ಶ್ರಾದ್ಧ-ತರ್ಪಣಾದಿ ಕ್ರಿಯೆಗಳನ್ನು ಮಾಡಿದನು. ಭಗವಾನ್ ಶ್ರೀಕೃಷ್ಣನು ತನ್ನ ತಂಗಿ ಸುಭದ್ರಾಳ ಮೃತ ಹೊಂದಿದ ಮಗನಾದ ಅಭಿಮನ್ಯುವಿನ ಶ್ರಾದ್ಧವನ್ನು ವಿಧಿಯುಕ್ತವಾಗಿ ಮಾಡಿದನೆಂದು ಮಹಾಭಾರತ ಗ್ರಂಥ ನಮಗೆ ತಿಳಿಸಿ ಕೊಡುವುದು. ಮಹಾಭಾರತದ ಆಶ್ವಮೇಧಿಕ ಪರ್ವ ಹಾಗೂ ಶಾಂತಿ ಪರ್ವದ ಪ್ರಕಾರ ಧರ್ಮರಾಯ ಯುಧಿಷ್ಠಿರನು ಮಹಾಭಾರತದ ಯುದ್ಧದಲ್ಲಿ ಮೃತ ಹೊಂದಿದ ಎಲ್ಲಾ ಸೈನಿಕರ ಸಹಿತ ಭೀಷ್ಮ, ದ್ರೋಣ, ದುರ್ಯೋಧನ, ಕರ್ಣ ಮುಂತಾದವರಿಗೆ ಅಂತ್ಯೇಷ್ಠಿ ಕ್ರಿಯೆ ನಡೆಸಿ, ಪ್ರತಿಯೊಬ್ಬರಿಗೂ ತರ್ಪಣಾದಿಗಳನ್ನು ನೀಡಿ, ಪ್ರತಿಯೊಬ್ಬರ ಹೆಸರಿನಲ್ಲೂ ಸರೋವರ, ಭವನಗಳನ್ನು ನಿರ್ಮಿಸಿದ. ಹರಿವಂಶ ಪುರಾಣದ ಪ್ರಕಾರ ಒಮ್ಮೆ ಭೀಷ್ಮನು ಮೃತ ಹೊಂದಿದ ತನ್ನ ತಂದೆಯ ಶ್ರಾದ್ಧ ಮಾಡುತ್ತಿದ್ದ. ತಂದೆಯ ಹೆಸರು ಹೇಳಿ ಪಿಂಡ ಇಡಲು ಮುಂದಾದಾಗ ಪಿಂಡ ಸ್ವೀಕರಿಸಲು ಸ್ವತಃ ತಂದೆ ಶಂತನುವಿನ ಕೈ ಭೂಮಿಯಿಂದ ಮೇಲಕ್ಕೆ ಬಂತು. ತಂದೆ ಶಂತನು ಹೇಳಿದ- ‘ನನ್ನ ಕೈಯಲ್ಲೇ ಪಿಂಡ ನೀಡು’. ಭೀಷ್ಮನು ತಂದೆಯ ಕೈ ಗುರುತು ಹಿಡಿದ. ಆದರೆ ತಂದೆಯ ಕೈಯಲ್ಲಿ ಪಿಂಡ ನೀಡಲಿಲ್ಲ. ಶ್ರಾದ್ಧದಲ್ಲಿ ಬರ್ಹಿಸ್ಸಿ(ದರ್ಭೆಕಟ್ಟು)ನಲ್ಲಿಯೇ ಪಿಂಡ ನೀಡಬೇಕು ಎಂಬುದು ಶಾಸ್ತ್ರ. ತಂದೆಯನ್ನೇ ಉದ್ದೇಶಿಸಿ ಶ್ರಾದ್ಧದಲ್ಲಿ ಸ್ವತಃ ತಂದೆಯೇ ಪ್ರತ್ಯಕ್ಷವಾಗಿ ಬಂದು ಸ್ವೀಕರಿಸಲು ಇಚ್ಛಿಸಿದರೂ ನೀಡತಕ್ಕದ್ದಲ್ಲ, ಈ ರೀತಿ ಮಾಡಿದರೆ ಮುಂದೆ ಇದೇ ಪರಂಪರೆಯಾಗಬಹುದು. ತಂದೆಯೇ ಸ್ವತಃ ಬಂದು ಸ್ವೀಕರಿಸಿದರೆ ಮಾತ್ರ ಪಿಂಡ ನೀಡುವೆ ಎಂದು ಭಾವಿಸಿ, ಬರದೇ ಇದ್ದಾಗ ಮುಂದೆ ಶ್ರಾದ್ಧಕರ್ಮವೇ ಸಮಾಪ್ತಿಯಾಗಬಹುದು. ಹಾಗಾಗಿ ಬರ್ಹಿಸ್ಸಿ (ದರ್ಭೆಕಟ್ಟು)ನಲ್ಲಿಯೇ ನೀಡುವುದು ಉಚಿತ ಎಂದು ಭೀಷ್ಮ ಹಾಗೆ ಮಾಡಿದನು. ಆತನ ಶಾಸ್ತ್ರನಿಷ್ಠೆ ನೋಡಿ, ಪಿತೃದೇವತೆ ಆತನಿಗೆ ಇಚ್ಛಾಮರಣಿಯಾಗೆಂದು ವರ ನೀಡಿದರು.

ಆಚರಣೆ ಹೇಗೆ? ಲಾಭವೇನು?

ಮಹಾಭಾರತದ ಅನುಶಾಸನ ಪರ್ವದ ಪ್ರಕಾರ ಪಿತೃಪಕ್ಷದ ದಿನಗಳಲ್ಲಿ ಪಿತೃಗಳು ಆತ್ಮೀಯ ಬಂಧುಗಳು ಮನೆಗೆ ಆಗಮಿಸುವಂತೆ ಪಿತೃಗಳು ತಮ್ಮ ಸಮೀಪದವರಲ್ಲಿಗೆ ಬರುವರು. ತಮ್ಮ ಕುಟುಂಬದಲ್ಲಿ ಹಿಂದೆ ಶಸ್ತ್ರದಿಂದ, ವಿಷದಿಂದ, ಅಗ್ನಿಗೆ ತುತ್ತಾಗಿ, ಸನ್ಯಾಸಿಯಾಗಿ ಅಥವಾ ಅಕಾಲಿಕವಾಗಿ ಮರಣ ಹೊಂದಿದ್ದರೆ ಹೀಗೆ ಕುಲದಲ್ಲಿ ವಿವಿಧ ರೀತಿಯಲ್ಲಿ ಗತಿಸಿದ ಸರ್ವರನ್ನೂ ನೆನೆದು ಶ್ರಾದ್ಧವನ್ನು ಮಾಡುವುದು ಶ್ರೇಯಸ್ಕರ. ಈ ಪಿತೃಪಕ್ಷದಂದು ಮೃತ ಹೊಂದಿದ ತಂದೆ-ತಾಯಿಯರ ಶ್ರಾದ್ಧವನ್ನು ಮಕ್ಕಳು, ಹೆಣ್ಣುಮಕ್ಕಳು, ಮಕ್ಕಳಿಲ್ಲದ ವಿಧವೆ, ತನ್ನ ಪತಿಯ ಶ್ರಾದ್ಧವನ್ನು ಮಾಡಲು ನಿರ್ಣಯಸಿಂಧು ಮುಂತಾದ ಗ್ರಂಥಗಳು ಸೂಚಿಸಿವೆ. ಸಂಪನ್ನತೆ ಇರುವವರು ಮನೆಯಲ್ಲಿ ಅಥವಾ ತೀರ್ಥಕ್ಷೇತ್ರಗಳಲ್ಲಿ ಶ್ರದ್ಧೆಯಿಂದ ಶ್ರಾದ್ಧವನ್ನು ಮಾಡುವುದು. ಈ ದಿನಗಳಲ್ಲಿ ಏನೂ ಇಲ್ಲದ, ಶ್ರಾದ್ಧ ಮಾಡಲು ಅಶಕ್ಯನಾದ ಬಡವನೂ ಸಹ, ನದಿ-ಜಲಾಶಯ-ಸಮುದ್ರ-ತೀರ್ಥಕ್ಷೇತ್ರಗಳಿಗೆ ತೆರಳಿ ಪಿತೃಗಳನ್ನು ಉದ್ದೇಶಿಸಿ ಒಂದು ಹನಿ ನೀರು ನೀಡಿದರೂ ಪಿತೃಗಳು ಆಶೀರ್ವದಿಸುವರು.

ಪಿತೃಪಕ್ಷದ ಈ ದಿನಗಳಲ್ಲಿ ಪ್ರಯಾಣದಲ್ಲಿ ಇರುವವರು, ಸಾಧನಶೀಲರಾದವರು, ಅನಿವಾರ್ಯ ಕಾರಣಗಳಿಂದ ಶ್ರಾದ್ಧ ಮಾಡಲು ಅಶಕ್ಯರಾದವರು ಶೃದ್ಧೆಯಿಂದ ಪಿತೃಗಳನ್ನು ನೆನೆದು, ತನ್ನೆರಡು ಕೈಗಳನ್ನು ಮೇಲಕ್ಕೆತ್ತಿ, ತನ್ನ ಅಸಹಾಯಕ ಸ್ಥಿತಿಯನ್ನು ಹೇಳಿಕೊಂಡು, ಭಕ್ತಿ-ಶ್ರದ್ಧೆಯನ್ನು ಸಮರ್ಪಿಸಿಕೊಂಡರೂ ಅದರಿಂದಲೇ ಪಿತೃಗಳು ಪ್ರಸನ್ನರಾಗಿ ತೃಪ್ತರಾಗುವರು. ಒಟ್ಟಿನಲ್ಲಿ ಈ ದಿನಗಳಲ್ಲಿ ಪಿತೃಗಳನ್ನು ಉದ್ದೇಶಿಸಿ, ಯಾರು ಶ್ರದ್ಧೆಯಿಂದ ಪಿಂಡ-ತಿಲೋದಕಗಳ ಮೂಲಕ ಪಿತೃಗಳನ್ನು ಆರಾಧಿಸುತ್ತಾರೋ ಅದರಿಂದ ಪಿತೃಗಳು ಒಂದು ವರ್ಷದವರೆಗೆ ತೃಪ್ತಿ ಹೊಂದಿ ಆರೋಗ್ಯ, ಆಯುಷ್ಯ, ಸಂತಾನ, ಸಂಪತ್ತು, ವಿದ್ಯೆ, ಸುಖ-ಭೋಗಗಳನ್ನು ಕುಟುಂಬದವರಿಗೆ ಹರಸುವರು. ಅಸಂತುಷ್ಟರಾದ ಪಿತೃಗಳು ನಮ್ಮ ಭವಿಷ್ಯದ ಭಾಗ್ಯವನ್ನು, ವಂಶಾಭಿವೃದ್ಧಿಯನ್ನು ತಡೆಗಟ್ಟುವರೆಂಬ ನಂಬಿಕೆ ನಮ್ಮ ಭಾರತೀಯ ಪರಂಪರೆಯಲ್ಲಿದೆ.

ಪಿತೃಪಕ್ಷದ ದಿನಗಳಲ್ಲಿ ಅಥವಾ ಮಹಾಲಯ ಪರ್ವದಿನದಂದು ಶ್ರದ್ಧೆಯಿಂದ ಗತಿಸಿದ ಸರ್ವಪಿತೃಗಳನ್ನು ಉದ್ದೇಶಿಸಿ ಶ್ರಾದ್ಧ ಮಾಡಿ, ನಮ್ಮ ಪೂರ್ವಜರು ನಮಗೆ ಮಾಡಿದ ತ್ಯಾಗಗಳನ್ನು ನೆನೆದು ಅವರು ತೋರಿದ ದಾರಿಯಲ್ಲಿ ವರ್ಷವಿಡಿ ಸಾಗುವುದು ಸುಸಂಸ್ಕೃತವಂತ ಸಮಾಜದ ವ್ಯಕ್ತಿಯ ಆದ್ಯ ಕರ್ತವ್ಯವಾಗಿದೆ.

ಇದನ್ನೂ ಓದಿ: Astrology Tips : ಮದುವೆಗೆ ಕಂಕಣ ಬಲ ಕೂಡಿ ಬರುತ್ತಿಲ್ಲವೇ?; ಜ್ಯೋತಿಷ್ಯ ಶಾಸ್ತ್ರದಲ್ಲಿದೆ ಪರಿಹಾರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಭವ್ಯ ತಿರುಪತಿ ತಿಮ್ಮಪ್ಪನ ದೇಗುಲ: 100 ಕೋಟಿ ವೆಚ್ಚ, 7 ಎಕರೆ ಜಾಗ ಮಂಜೂರು

VISTARANEWS.COM


on

ಬೆಳಗಾವಿ: ಉತ್ತರ ಕರ್ನಾಟಕದ ಭಕ್ತರ ಪಾಲಿಗೆ ತಿರುಮಲ ತಿರುಪತಿ ದೇವಸ್ಥಾನ (TTD) ಮಂಡಳಿಯು ಸಿಹಿ ಸುದ್ದಿಯೊಂದನ್ನು ನೀಡಿದೆ. ತಿರುಪತಿಯ ಭವ್ಯ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲೇ ಬೆಳಗಾವಿಯಲ್ಲಿಯೂ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀನಿವಾಸನ ಸನ್ನಿಧಿ ತಲೆಯೆತ್ತಲಿದೆ. ಬೆಳಗಾವಿ ತಾಲೂಕಿನ ಕೋಳಿಕೊಪ್ಪ ಹೊರವಲಯದ ಸುಮಾರು 7 ಎಕರೆ ಪ್ರದೇಶದಲ್ಲಿ ಈ ಯೋಜನೆ ಸಾಕಾರಗೊಳ್ಳಲಿದ್ದು, ಇದಕ್ಕಾಗಿ ಬೆಳಗಾವಿ ರೆಡ್ಡಿ ಸಂಘವು ಭೂಮಿಯನ್ನು ಖರೀದಿಸಿ ಈಗಾಗಲೇ ಟಿಟಿಡಿ ಮಂಡಳಿಗೆ ಅಧಿಕೃತವಾಗಿ ಹಸ್ತಾಂತರಿಸಿದೆ. ಈ ಮೂಲಕ ಕುಂದಾನಗರಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಮೊದಲ ಭದ್ರ ಬುನಾದಿ ಬಿದ್ದಿದೆ.

ಈ ದೇವಾಲಯವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ವಾಸ್ತುಶಿಲ್ಪ, ಲಡ್ಡು ವಿತರಣೆ ಮತ್ತು ಭಕ್ತರ ವಾಸ್ತವ್ಯದ ಸೌಲಭ್ಯ ಸೇರಿದಂತೆ ಪ್ರತಿಯೊಂದೂ ಅಂಶದಲ್ಲೂ ಮೂಲ ತಿರುಪತಿ ಕ್ಷೇತ್ರವನ್ನೇ ಹೋಲುವಂತೆ ನಿರ್ಮಾಣವಾಗಲಿದೆ. ನೂರು ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ ಶೇ. 10ರಷ್ಟು ಹಣವನ್ನು ಮಾತ್ರ ದಾನಿಗಳಿಂದ ಸಂಗ್ರಹಿಸಿ, ಉಳಿದ ವೆಚ್ಚವನ್ನು ಟಿಟಿಡಿ ಭರಿಸಲಿದೆ. ಮುಂದಿನ ಎರಡು ವರ್ಷಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಟಿಟಿಡಿ ಪ್ರತ್ಯೇಕ ಟ್ರಸ್ಟ್ ರಚಿಸಿ ಸ್ಥಳೀಯರನ್ನು ಒಳಗೊಳ್ಳಲಿದೆ. ಈ ದೇವಾಲಯದ ನಿರ್ಮಾಣದಿಂದ ಬೆಳಗಾವಿ ಜಿಲ್ಲೆಯಷ್ಟೇ ಅಲ್ಲದೆ, ನೆರೆಯ ಗೋವಾ ಮತ್ತು ಮಹಾರಾಷ್ಟ್ರದ ಭಕ್ತರಿಗೂ ತಿಮ್ಮಪ್ಪನ ದರ್ಶನ ಪಡೆಯಲು ಸುಲಭವಾಗಲಿದೆ.

ನೂತನ ದೇವಾಲಯಗಳ ನಿರ್ಮಾಣಕ್ಕಾಗಿ ಟಿಟಿಡಿ ಮೀಸಲಿಟ್ಟಿರುವ ಒಂಬತ್ತು ಸಾವಿರ ಕೋಟಿ ರೂಪಾಯಿ ನಿಧಿಯಲ್ಲಿ ಬೆಳಗಾವಿ ಯೋಜನೆಯೂ ಸೇರಿದೆ. ದೇಶದ ಆರು ಪ್ರಮುಖ ಸ್ಥಳಗಳಲ್ಲಿ ವೆಂಕಟೇಶ್ವರ ದೇವಾಲಯ ನಿರ್ಮಿಸಲು ಉದ್ದೇಶಿಸಿರುವ ಟಿಟಿಡಿ, ಬೆಳಗಾವಿಯಲ್ಲಿ ಶೀಘ್ರವೇ ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದೆ. ರೆಡ್ಡಿ ಸಂಘದ ಈ ಉದಾರ ಕಾರ್ಯಕ್ಕೆ ಟಿಟಿಡಿ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿದ್ದು, ಈ ಯೋಜನೆಯಿಂದ ಬೆಳಗಾವಿ ನಗರವು ಧಾರ್ಮಿಕ ಭೂಪಟದಲ್ಲಿಯೂ ಹೊಸ ಗುರುತು ಪಡೆಯಲಿದೆ. ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಬೆಳೆಯುತ್ತಿರುವ ಬೆಳಗಾವಿಗೆ ಈ ವೆಂಕಟರಮಣನ ಸನ್ನಿಧಿ ಮತ್ತಷ್ಟು ಮೆರುಗು ನೀಡಲಿದೆ.

Continue Reading

ಕೊಡಗು

Deepawalli 2024 : ಮಡಿಕೇರಿಯಲ್ಲಿ ಅದ್ಧೂರಿಯಾಗಿ ನಡೆದ ದೀಪಾವಳಿ ಉತ್ಸವ

Deepawalli 2024 : ಮಡಿಕೇರಿಯಲ್ಲಿ ದೀಪಾವಳಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್‌ನ ವರದಿಗಾರ ಹಾಗೂ ಕ್ಯಾಮೆರಾಮನ್‌ಗೆ ಸನ್ಮಾನಿಸಲಾಯಿತು.

VISTARANEWS.COM


on

Deepavali festival held in Madikeri

ಕೊಡಗು: ದೀಪಾವಳಿ ಹಬ್ಬದ (Deepawalli 2024) ಪ್ರಯುಕ್ತ ಮಡಿಕೇರಿಯ ಕಾಲನಗರ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ 11ನೇ ವರ್ಷದ ದೀಪಾವಳಿ ಉತ್ಸವವು ಬಹಳ ಸಂಭ್ರಮ ಸಡಗರದಿಂದ ನಡೆಯಿತು. ಕಾರ್ಯಕ್ರಮವನ್ನು ಸಮಾಜ ಸೇವಕ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಈಶ್ವರ್ ಮಲ್ಪೆ, ಮಡಿಕೇರಿಯ ಕಲಾ ನಗರಕ್ಕೆ ಕರೆಸಿರೋದು ಬಹಳ‌ ಸಂತೋಷವಾಗಿದೆ‌. ನಾನೂ ರಾಜ್ಯದ ಬೇರೆ ಬೇರೆ ಭಾಗಗಳಿಗೆ ತೆರಳಿ ನೀರಿನಲ್ಲಿ ಮುಳುಗಿದ್ದ ಶವ ಹೊರ ತೆಗೆದಿದ್ದೇನೆ. ಕಳೆದ ವರ್ಷ ಕೂಡ ಇಲ್ಲಿಗೆ ಬಂದು ಒಂದು ಶವವನ್ನು ಹೊರ ತೆಗೆದಿದ್ದೇನೆ‌. ಈ ಒಂದು ಸಣ್ಣ ಸಮಾಜಮುಖಿ ಕಾರ್ಯವನ್ನು ಗುರುತಿಸಿ ನನ್ನ ಈ ಕಾರ್ಯಕ್ರಮಕ್ಕೆ ಕರೆಸಿರೋದು ಬಹಳ ಸಂತಸ ತಂದಿದೆ. ಕಲಾನಗರದಲ್ಲಿ ಕಲಾ ರಸಿಕರೆ ಇದ್ದು ತಮ್ಮಲ್ಲಿರುವ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ಮತ್ತಷ್ಟು ಸಾಧನೆ ಮಾಡಲೆಂದು ಹಾರೈಸಿದರು.

Deepavali festival held in Madikeri

ಇನ್ನೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಸಮಾಜ ಸೇವಕ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ವಯನಾಡು ದುರಂತದ ಕುರಿತು ಪ್ರತ್ಯಕ್ಷ ವರದಿಗಾರಿಕೆ‌ ಮಾಡಿದ್ದ ಕೊಡಗಿನ ಪತ್ರಕರ್ತರಾದ ವಿಸ್ತಾರ ನ್ಯೂಸ್‌ನ ಜಿಲ್ಲಾ ವರದಿಗಾರ ಲೋಹಿತ್ ಎಂ.ಆರ್, ಕ್ಯಾಮೆರಾಮನ್ ಮನೋಜ್, ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಪ್ರಜ್ವಲ್ ಎನ್‌.ಸಿ, ನಗರದ ಸ್ವಚ್ಚತಾ ಕಾರ್ಯದಲ್ಲಿ ಶ್ರಮಿಸುತ್ತಿರುವ ನಗರಸಭೆಯ ರಂಗಪ್ಪ , ಆರೋಗ್ಯ ಇಲಾಖೆಯ ಪ್ರತಿಮಾ ರೈ, ಅಣ್ಣಯ್ಯ, ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಳಿಕ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು‌‌. ಮಕ್ಕಳ ಮಂಟಪ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಡಿವೈಎಸ್ಪಿ ಮಹೇಶ್ ಕುಮಾರ್, ಆಕಾಶವಾಣಿಯ ಸುಬ್ರಾಯ ಸಂಪಾಜೆ ಅಧ್ಯಕ್ಷರಾದ ಮಹೇಶ್, ಆಶಾ ನಟರಾಜ್, ಸ್ಥಾಪದ ಸದಸ್ಯರು ಚಂದ್ರು, ಕೆ.ಎಸ್ ರಮೇಶ್,ಕೋಡಿ ಭರತ್, ತಿಲಖ್ ಸಿಂಗ್ ಕುಮಾರ್ ಉಪಸ್ಥಿತರಿದ್ದರು.

Continue Reading

ಕರ್ನಾಟಕ

Mysore Dasara : ವಿಜಯ ದಶಮಿ ಜಂಬೂ ಸವಾರಿಗೆ ಕ್ಷಣಗಣನೆ; ಅರಮನೆ ಆವರಣದಲ್ಲಿ ವಜ್ರಮುಷ್ಠಿ ಕಾಳಗ

Mysore Dasara : ವಿಜಯ ದಶಮಿ ಜಂಬೂ ಸವಾರಿಗೆ ಕ್ಷಣಗಣನೆ ಶುರವಾಗಿದ್ದು, ಚಾಮುಂಡಿ ಬೆಟ್ಟದಿಂದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಗುತ್ತಿದೆ. ಜತೆಗೆ ಮೈಸೂರು ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಯುತ್ತಿದೆ.

VISTARANEWS.COM


on

mysore dasara

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ (Mysore Dasara ) ಜಂಬೂ ಸವಾರಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಶನಿವಾರ ಮುಂಜಾನೆಯಿಂದಲೇ ಬಿರುಸಿನ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿಯನ್ನು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಸಮಯ ಸನ್ನಿಹಿತವಾಗುತ್ತಿದೆ. ಇದಕ್ಕಿಂತ ಮೊದಲು ಚಾಮುಂಡಿ ಸನ್ನಿಧಿಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಬೆಳ್ಳಿ ರಥದ ಮೂಲಕ ಅರಮನೆಗೆ ಮೆರವಣಿಗೆ ಮೂಲಕ ಕಳಿಸಿಕೊಡಲಾಯಿತು.

ವಿಜಯ ದಶಮಿಯ ಜಂಬೂ ಸವಾರಿಗೆ ಅಂಬಾವಿಲಾಸ ಅರಮನೆ ಸಜ್ಜಾಗಿದೆ. ಅರಮನೆ ಅಂಗಳದಲ್ಲಿ 35 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8 ಗಂಟೆಗೆ ಚಾಮುಂಡಿಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ ಶುರುವಾಗಿದ್ದು, ಅಂಬಾವಿಲಾಸ ಅರಮನೆ ತಲುಪಲಿದೆ. ನೇರಳೆ ಬಣ್ಣದ ಸೀರೆಯಿಂದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಲಾಗಿತ್ತು. ಅಲ್ಲದೆ, ಅಶ್ವಾರೋಹಣ ಅಲಂಕಾರದಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ಅಲ್ಲಿಂದ ಅರಮನೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

Mysore dasara 2024

ಅರಮನೆ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಶನಿವಾರ ಮಧ್ಯಾಹ್ನ 1:41 ರಿಂದ 2:10ರ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಲಿದೆ. ನಂದಿ ಧ್ವಜ ಪೂಜೆಯನ್ನು ಉದ್ಘಾಟಕ ಹಂಪನಾ, ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಸೇರಿದಂತೆ ಇತರೆ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

ನಂದಿಧ್ವಜ ಪೂಜೆ ಬಳಿಕ ವಿಜಯದಶಮಿ ಮೆರವಣಿಗೆ ಆರಂಭವಾಗಲಿದ್ದು, ಅರಮನೆ ಒಳಂಗಣದಿಂದ ಪ್ರಾರಂಭಗೊಂಡು ಬನ್ನಿ ಮಂಟಪದ ವರಗೆ ಮೆರವಣಿಗೆ ನಡೆಯಲಿದೆ. ಜಂಬೂಸವಾರಿಯಲ್ಲಿ ವಿವಿಧ ಜಿಲ್ಲೆ ಹಾಗೂ ವಿವಿಧ ಇಲಾಖೆಗಳಿಂದ 49 ಸ್ಥಬ್ದ ಚಿತ್ರಗಳು ಸಂಚಾರ ಇರಲಿದೆ. ಸಂಜೆ 4ಗಂಟೆಯಿಂದ 4:30 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಜಂಬೂ ಸವಾರಿಗೆ ಪುಷ್ಪಾರ್ಚನೆ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಸಂಸದ ಹಾಗೂ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ರವರಿಂದ ಪುಷ್ಪರ್ಚನೆ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು, ರಾಜ್ಯಪಾಲ ಥಾವರ ಚಂದ್ ಗೆಹಲೊಟ್ ರಿಂದ ಕವಯತು ವೀಕ್ಷಣೆಯೊಂದಿಗೆ ಗೌರವ ವಂದನೆ ಸ್ವೀಕಾರ ಆಗಲಿದೆ.

Continue Reading

ಬೆಂಗಳೂರು

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ; ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌ ಆಗಿವೆ. ಸವಾರರು ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಲಗ್ಗೆ ಇಟ್ಟಿದ್ದರು.

VISTARANEWS.COM


on

Ayudha Puja celebrations across the karnataka state Temples housefull by devotees

ಬೆಂಗಳೂರು: ನಾಡಿನೆಲ್ಲೆಡೆ ಆಯುಧ ಪೂಜಾ (Ayudha Puja) ಸಂಭ್ರಮ ಜೋರಾಗಿದೆ. ಆಯುಧ ಪೂಜೆಯ ಸಲುವಾಗಿ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

ಬನಶಂಕರಿ, ಆ್ಯಕ್ಸಿಡೆಂಡ್ ಗಣೇಶ, ಸರ್ಕಲ್ ಮಾರಮ್ಮ, ಕಾಡುಮಲ್ಲೆಶ್ವರಂ ದೇವಸ್ಥಾನಕ್ಕೆ ಭಕ್ತರು ದೌಡಾಯಿಸಿದ್ದಾರೆ. ಬೆಳಗಿನಿಂದಲೇ ಪಂಚಾಭಿಷೇಕ ನೇರಿವೇರಿದ್ದು, ವಿಶೇಷ ಅಲಂಕಾರ ಮಾಡಿ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Ayudha Puja celebrations across the karnataka state  Temples housefull by devotees

ಅಲ್ಲದೇ ಮನೆಗಳಲ್ಲಿ ಆಯುಧಗಳಿಗೆ ಪೂಜೆ ಮಾಡಿ ಸಲ್ಲಿಸಿದ್ದು, ವಾಹನಗಳಿಗೆ ಪೂಜೆ ಮಾಡುವ ಸಲುವಾಗಿ ಸಾಕಷ್ಟು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ವಾಹನ ಸವಾರರು ಆಗಮಿಸುತ್ತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಆಯುಧ ಪೂಜೆಯ ಸಂಭ್ರಮ ಜೋರಾಗಿತ್ತು. ದೇವಿಗೆ ಮುತ್ತಿನ ಅಲಂಕಾರ ಮಾಡಲಾಗಿದ್ದು, ಬೆಳಗ್ಗೆಯಿಂದ ದೇವಿಗೆ ವಿಶೇಷ ಪೂಜೆ ಪುರಸ್ಕಾರ ನಡೆದಿದೆ.

Ayudha Puja celebrations across the karnataka state  Temples housefull by devotees

ಭಕ್ತರು ತಮ್ಮ ವಾಹನಗಳಿಗೆ ಪೂಜೆ ಮಾಡಿಸಲು ಮುಗಿಬಿದ್ದಿದ್ದರು. ಹೀಗಾಗಿ ಸರ್ಕಲ್ ಮಾರಮ್ಮ ದೇವಸ್ಥಾನದ ಸುತ್ತ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಟ್ರಾಫಿಕ್‌ ಕ್ಲಿಯರ್‌ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇಂದು ಶುಕ್ರವಾರ ಬೆಳಗ್ಗೆಯಿಂದ ಸಂಜೆಯವೆಗೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.

ವಿಸ್ತಾರ ನ್ಯೂಸ್‌ ಕಚೇರಿಯಲ್ಲೂ ಆಯುಧ ಪೂಜೆ ಸಂಭ್ರಮ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Latest17 hours ago

ಇನ್ನು ಮುಂದೆ ಒಳಮೀಸಲಾತಿ ಅನ್ವಯ ಹುದ್ದೆಗಳ ಭರ್ತಿ: ಸಿಎಂ ಸಿದ್ದರಾಮಯ್ಯ ಘೋಷಣೆ

Latest18 hours ago

29 ವರ್ಷಗಳ ‘ನೋ ಕಿಸ್ ಪಾಲಿಸಿ’ ಮುರಿದ ಕಾಜೋಲ್: ಆ ಒಂದು ದೃಶ್ಯಕ್ಕಾಗಿ ಕಟ್ಟುನಿಟ್ಟಿನ ನಿಯಮ ಬದಿಗಿಟ್ಟಿದ್ದೇಕೆ?

Latest18 hours ago

ಒಳ ಮೀಸಲಾತಿ ಹಂಚಿಕೆ: ಎಡಗೈ, ಬಲಗೈ ಜಾತಿಗಳಿಗೆ ತಲಾ ಶೇ. 5.25 ಸ್ಪೃಶ್ಯ ಜಾತಿಗೆ ಶೇ.4.5 ಹಂಚಿಕೆ; ಸಚಿವ ಸಂಪುಟ ಮಹತ್ವದ ನಿರ್ಧಾರ

Latest18 hours ago

ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ಬಿಸಿನೆಸ್‌ನಲ್ಲೂ ಸಚಿನ್ ಅವರದ್ದೇ ಸಿಕ್ಸರ್! ತೆಂಡೂಲ್ಕರ್‌ ಒಟ್ಟು ಆಸ್ತಿ ಎಷ್ಟು ಗೊತ್ತಾ?

Latest18 hours ago

ಇಂಜಿನಿಯರಿಂಗ್‌ ಶುಲ್ಕ: ಅಂತಿಮ ನಿರ್ಧಾರ ಮಾಡಿಲ್ಲ: ಸಚಿವ ಡಾ. ಎಂ.ಸಿ. ಸುಧಾಕರ್‌

Latest19 hours ago

ಶೀಘ್ರದಲ್ಲೇ ಪಶ್ಚಿಮ ಬೆಂಗಳೂರಿನಲ್ಲಿ ಜಯದೇವ 100 ಹಾಸಿಗೆ ಕಾರ್ಡಿಯಾಕ್ ಹಬ್: ಒಪ್ಪಂದಕ್ಕೆ ಸಹಿ

Latest19 hours ago

ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಆರೋಗ್ಯ ಸ್ಥಿತಿ ಗಂಭೀರ?; ಕೃತಕ ಕಾಲು,ಸೀಳು ತುಟಿ, ಒಡೆದ ಮುಖ…

bigbreaking19 hours ago

ಬಿಜೆಪಿಗೆ ಸೇರಿದ ಎಎಪಿ ದಿಗ್ಗಜ ರಾಘವ್ ಚಡ್ಡಾ: ಆಮ್ ಆದ್ಮಿ ಪಕ್ಷಕ್ಕೆ ಬಿಗ್ ಶಾಕ್! ಪಕ್ಷಾಂತರಕ್ಕೆ ಕೊಟ್ಟ ಕಾರಣವೇನು?

Latest20 hours ago

ಒಳಮೀಸಲಾತಿ ನೀಡುವ ಬದಲು ಗೊಂದಲ ಸೃಷ್ಟಿಸುತ್ತಿದ್ದೀರಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಗೋವಿಂದ ಕಾರಜೋಳ ವಾಗ್ದಾಳಿ

Latest20 hours ago

ಬಿಜೆಪಿ ನಾಯಕನ ಮಗನಿಗೆ ಹೈಕೋರ್ಟ್ ಬಿಸಿ: ಮದುವೆಯಾಗದೆ ಮಗು ನೀಡಿದ ಲವರ್‌ಗೆ ಮಾಸಿಕ 75 ಸಾವಿರ ರೂ. ಜೀವನಾಂಶ ದಂಡ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌