Ramakrishna Jayanti 2023 : ಜ್ಞಾನ ಮತ್ತು ಭಕ್ತಿಯ ಸಂಗಮವಾಗಿದ್ದ ಶ್ರೀ ರಾಮಕೃಷ್ಣ ಪರಮಹಂಸ - Vistara News

ಧಾರ್ಮಿಕ

Ramakrishna Jayanti 2023 : ಜ್ಞಾನ ಮತ್ತು ಭಕ್ತಿಯ ಸಂಗಮವಾಗಿದ್ದ ಶ್ರೀ ರಾಮಕೃಷ್ಣ ಪರಮಹಂಸ

ಇಂದು ಭಗವಾನ್ ಶ್ರೀ ರಾಮಕೃಷ್ಣರ ಜಯಂತಿ (Ramakrishna Jayanti 2023). ತನ್ನಿಮಿತ್ತ ಹರಿಹರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಶಾರದೇಶಾನಂದಜೀ ಬರೆದ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Significance and inspiring thoughts of Ramakrishna Paramhansa
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
swami saradeshananda
ramakrishna paramahamsa

ಶ್ರೀ ಸ್ವಾಮಿ ಶಾರದೇಶಾನಂದಜೀ
ಲೋಕದಲ್ಲಿ ಸಾಮಾನ್ಯವಾಗಿ ಸಾಮಾನ್ಯ ಜನರೂ ಸೇರಿದಂತೆ ನಿಜಕ್ಕೂ ದೇವರನ್ನು ಕಾಣಬೇಕೆಂಬ ಹಂಬಲವುಳ್ಳರೂ ಕೇಳುವ ಒಂದು ಪ್ರಶ್ನೆ ಏನೆಂದರೆ, ದೇವರು ಇದ್ದಾನೆಯೇ? ಎಂದು. ಇದ್ದರೆ ನಾವೂ ಅವನನ್ನು ನೋಡಬಹುದೆ? ಇದು ಮುಂದಿನ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಹೇಳುವವರು ಅಸಾಮಾನ್ಯರಾಗಿದ್ದು (ದೇವರನ್ನು ಕಂಡ ವ್ಯಕ್ತಿ) ಅವರು ದೇವರನ್ನು ಪ್ರತಿಯೊಬ್ಬರೂ ನೋಡಬಹುದು ಎಂದು ಹೇಳಿದರೂ ಕೂಡಾ ಸಾಮಾನ್ಯ ಜನರಿಗೆ ಆ ಸತ್ಯವಾದ ಉತ್ತರವೂ ಸಾಮಾನ್ಯವೇ ಎಂದೆನಿಸುತ್ತದೆ.

ಆದರೆ ಅದೇ ಉತ್ತರ ನಿಜಕ್ಕೂ ದೇವರನ್ನು ಕಾಣಬೇಕೆಂಬ ಹಂಬಲವುಳ್ಳನಿಗೆ ಅದೆಂತಹ ಆನಂದ ನೀಡಬಲ್ಲುದು ಎಂಬುದನ್ನು ನಾವು ಭಾವಿಸಿಯೇ ಆನಂದಿಸಬೇಕು.

ಈ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಶ್ರೀಮಂತ ಕುಟುಂಬದಲ್ಲಿ ಜನಿಸಿದ, ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದ, ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ, 19 ನೇ ಶತಮಾನದ ಅಂದಿನ ಹಾಗೂ ಹಿಂದಿನ ತತ್ತ್ವಶಾಸ್ತ್ರ, ಇತಿಹಾಸ ಇನ್ನಿತರ ವಿಷಯಗಳ ಕುರಿತು ಆಳವಾದ ಅಧ್ಯಯನ ಮಾಡಿದ,ಅಖಂಡ ಬ್ರಹ್ಮಚರ್ಯದ ಪಾಲನೆ ಮಾಡುತ್ತಿದ್ದ ನವಯುವಕನೊಬ್ಬ ದೇವರನ್ನು ತಾನು ಕಾಣಬೇಕು ಎಂಬ ಒಂದೇ ಒಂದು ಹಂಬಲದಿಂದ ಅಂದಿನ ಮಹಾಜ್ಞಾನಿಗಳ ಬಳಿಗೆ ಹೋಗಿ ಕೇಳುತ್ತಿರುತ್ತಾನೆ, ನೀವು ದೇವರನ್ನು ನೋಡಿದ್ದೀರಾ? ನೀವು ದೇವರನ್ನು ಕಂಡಿದ್ದೀರಾ? ಎಂದು. ಯಾರ ಬಳಿಯೂ ಅವನ ಪ್ರಶ್ನೆಗೆ ಉತ್ತರವಿಲ್ಲ. ಈ ಸತ್ಯ ಶೋಧಕ ಯುವಕನೇ ನರೇಂದ್ರನಾಥದತ್ತ ಮುಂದೆ ಸ್ವಾಮಿ ವಿವೇಕಾನಂದ.

ದಿನೇದಿನೇ ನರೇಂದ್ರನಿಗೆ ತಾನು ದೇವರನ್ನು ಕಾಣಬೇಕು ಎಂಬ ಹಂಬಲ ಹೆಚ್ಚುತ್ತಾ ಹೋದಂತೆ, ಅವನಿಗೆ ದೇವರನ್ನು ಕಂಡ ಮಹಾಗುರುವಿನ ಕುರಿತು ಆತನ ಕಾಲೇಜು ಅಧ್ಯಾಪಕರಿಂದ ಮಾಹಿತಿ ದೊರೆಯುತ್ತದೆ. ನೇರವಾಗಿ ನರೇಂದ್ರ ಆ ಮಹಾಗುರು ದಕ್ಷಿಣೇಶ್ವರದ ದೇವಮಾನವ ಶ್ರೀ ರಾಮಕೃಷ್ಣ ಪರಮಹಂಸರ (Ramakrishna Jayanti 2023) ಬಳಿ ಹೋಗಿ ಕೇಳುತ್ತಾನೆ,
ನೀವು ದೇವರನ್ನು ನೋಡಿದ್ದೀರಾ? ಎಂದು. ನೇರವಾದ ಪ್ರಶ್ನೆಗೆ ನೇರವಾದ ಉತ್ತರವನ್ನು ಹೇಳುತ್ತಾರೆ ಶ್ರೀ ರಾಮಕೃಷ್ಣರು, ಹೌದಪ್ಪ ದೇವರನ್ನು ನಾನು ನೋಡಿದ್ದೇನೆ ಎಂದು.

ಈ ಉತ್ತರ ನರೇಂದ್ರನ ಮನಸ್ಸಿನಲ್ಲಿ ಗಾಢ ಪ್ರಭಾವ ಬೀರುತ್ತದೆ. ನಾನು ದೇವರನ್ನು ನೋಡಿದ್ದೇನೆ ಎಂದು ಎದೆತಟ್ಟಿ ಹೇಳಬಲ್ಲ ವ್ಯಕ್ತಿಯನ್ನು ಅವನು ಜೀವನದಲ್ಲಿ ಇದೇ ಮೊದಲ ಬಾರಿ ಕಂಡದ್ದು. ಮುಂದುವರಿದು ಶ್ರೀ ರಾಮಕೃಷ್ಣರು ಹೇಳುತ್ತಾರೆ ಆದರೆ ದೇವರು ಯಾರಿಗೆ ಬೇಕಾಗಿದ್ದಾರೆ? ಹೆಂಡತಿ ಮಕ್ಕಳಿಗಾಗಿ ಕೊಡಗಟ್ಟಲೆ ಕಣ್ಣೀರು ಸುರಿಸುವ ಜನರು ಭಗವಂತನಿಗಾಗಿ ಒಂದು ತೊಟ್ಟು ಕಣ್ಣೀರು ಸುರಿಸುವುದಿಲ್ಲ.

ಪ್ರಯತ್ನ ತಕ್ಕಂತೆ ಫಲ

ಒಬ್ಬ ನುರಿತ ವೈದ್ಯ ತನ್ನ ವೈದ್ಯಕೀಯ ಜೀವನದ ಆರಂಭದಲ್ಲಿ ಅನುಭವಿ ವೈದ್ಯನೊಂದಿಗೆ ಇದ್ದುಕೊಂಡು ವಿಧವಿಧವಾದ ಚಿಕಿತ್ಸಾ ವಿಧಾನಗಳನ್ನು ಕಲಿತು ತಾನು ಕೂಡಾ ಹೇಗೆ ಒಬ್ಬ ಅನುಭವಿ ವೈದ್ಯನಾಗುತ್ತಾನೋ ಹಾಗೆಯೇ ಶಿಷ್ಯನು ಕೂಡಾ ಸಮರ್ಥ ಗುರುವಿನ ಬಳಿ ಹೋಗಿ ಅಲ್ಲಿಯೇ ಹಲವು ವರ್ಷಗಳ ಕಾಲ ಇದ್ದು ಗುರುವಿನ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದಾಗ ಅವನಿಗೂ ಕೂಡಾ ಭಗವಂತನ ದರ್ಶನವಾಗುತ್ತದೆ ಎಂದು ಉಪದೇಶಿಸುತ್ತಾರೆ ಶ್ರೀ ರಾಮಕೃಷ್ಣರು.

ದೇವರು ಇದ್ದಾನೆ, ಕರೆದರೆ ಬರುತ್ತಾನೆ, ಕರೆಯಬೇಕು
ಇದು ಒಂದೊಂದು ಅದ್ಭುತವಾದ ಉಪದೇಶ.

ಸುಮ್ಮನೆ ಹಾಲಿನಲ್ಲಿ ಬೆಣ್ಣೆ ಇದೆ ಎಂದು ಹೇಳುತ್ತಲೇ ಇದ್ದರೆ ಬೆಣ್ಣೆ ಲಭಿಸುವುದಿಲ್ಲ. ಹಾಲನ್ನು ಹೆಪ್ಪು ಹಾಕಿ, ಮೊಸರು ಮಾಡಿ ಅದನ್ನು ಕಡೆದು ಮಜ್ಜಿಗೆ ಮಾಡಿದರೆ ಆಗ ಬೆಣ್ಣೆ ಲಭಿಸುತ್ತದೆ.

ಹಂಬಲ ಇರಬೇಕು

ಭಗವಂತನ ದರ್ಶನ ಎಲ್ಲರಿಗೂ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ ಶ್ರೀರಾಮಕೃಷ್ಣರು, ಅದಕ್ಕೆ ಶಿಷ್ಯನಾದವನಿಗೆ ದೇವರನ್ನು ಕಾಣಲೇಬೇಕು ಎಂಬ ಹಂಬಲ ಇರಲೇಬೇಕು. ಶಿಷ್ಯನಾದವನಿಗೆ ಯಾವ ಮಟ್ಟದ ಹಂಬಲ ಇರಬೇಕು ಎನ್ನುವುದಕ್ಕೆ ಅವರು ಒಂದು ದೃಷ್ಟಾಂತವನ್ನು ಉಪದೇಶಿಸುತ್ತಾರೆ.

ಒಬ್ಬ ಶಿಷ್ಯ ಒಬ್ಬ ಗುರುವಿನ ಬಳಿ ಹೋಗಿ ಕೇಳುತ್ತಾನೆ, ದೇವರನ್ನು ಕಾಣುವುದು ಹೇಗೆ? ಎಂದು. ಆಗ ಗುರುಗಳು ಹತ್ತಿರವೇ ಇದ್ದ ಒಂದು ಕೊಳದ ಬಳಿ ಅವನನ್ನು ಕರೆದುಕೊಂಡು ಹೋಗಿ ಅವನನ್ನು ನೀರಿನಲ್ಲಿ ಮುಳುಗಿಸಿ ಸ್ವಲ್ಪ ಕಾಲ ಶಿಷ್ಯನ ತಲೆಯನ್ನು ಒತ್ತಿ ಹಿಡಿಯುತ್ತಾರೆ, ಸ್ವಲ್ಪ ಸಮಯದ ನಂತರ ಅವನನ್ನು ಬಿಡುತ್ತಾರೆ.

ಉಸಿರಿಗಾಗಿ ಒದ್ದಾಡುತ್ತಿದ್ದ ಶಿಷ್ಯ ನೀರಿನಿಂದ ಹೊರಬಂದು ದೀರ್ಘ ಉಸಿರು ತೆಗೆದುಕೊಂಡು ಗುರುಗಳನ್ನು ಕೇಳುತ್ತಾನೆ , ಗುರುಗಳೇ ದೇವರನ್ನು ಕಾಣುವುದು ಹೇಗೆ ಎಂದು ಕೇಳಿದರೆ, ಹೀಗೆ ನೀರಿನಲ್ಲಿ ಮುಳುಗಿಸಿಬಿಟ್ಟಿರಲ್ಲ ಎಂದು. ಆಗ ಗುರುಗಳು ಅವನಿಗೆ ಹೇಳುತ್ತಾರೆ, ನೀರಿನಲ್ಲಿ ನಿನ್ನನ್ನು ಮುಳುಗಿಸಿದಾಗ ನಿನಗೆ ಏನೆನ್ನಿಸುತ್ತಿತ್ತು ಎಂದು. ಶಿಷ್ಯ ಹೇಳುತ್ತಾನೆ, ʻʻಒಂದು ಕ್ಷಣ ನೀವು ನನ್ನ ತಲೆ ಬಿಟ್ಟರೆ ಸಾಕು, ನಾನು ಯಾವಾಗ ಉಸಿರು ಬಿಟ್ಟೆನೋ ಎಂದೆನಿಸುತ್ತಿತ್ತು. ಆಗ ಗುರುಗಳು ಹೇಳುತ್ತಾರೆ,ಹಾಗೆಯೇ ನಿನ್ನ ಪ್ರಾಣವೂ ಭಗವಂತನ ದರ್ಶನಕ್ಕಾಗಿ ವ್ಯಾಕುಲತೆಯಿಂದ ಹಂಬಲಿಸಿದರೆ ನೀನು ದೇವರನ್ನು ಖಂಡಿತವಾಗಿಯೂ ಕಾಣುವೆʼʼ ಎನ್ನುತ್ತಾರೆ.

ಸಮರ್ಥ ಗುರುವಿನ ಅವಶ್ಯಕತೆ

ಶ್ರೀ ರಾಮಕೃಷ್ಣರು ಈ ಸಾಮಾನ್ಯ ಅಸಾಮಾನ್ಯ ಗುರುಗಳ ಕುರಿತು ಒಂದು ದೃಷ್ಟಾಂತ ನೀಡುತ್ತಾರೆ. ಕೆರೆ ಹಾವು ಒಂದು ದೊಡ್ಡ ಕಪ್ಪೆಯನ್ನು ನುಂಗುತ್ತದೆ, ಆದರೆ ಆ ಕೆರೆಹಾವು ಬಹಳ ಚಿಕ್ಕದು, ಕಪ್ಪೆ ದೊಡ್ಡದಾದುದರಿಂದ ಈ ಹಾವು ಕಪ್ಪೆಯನ್ನು ನುಂಗಲು ಆಗದೆ, ಅತ್ತ ಹೊರಗೆ ಹಾಕಲು ಆಗದೆ ಒದ್ದಾಡುತ್ತದೆ, ಅದೇ ಒಂದು ಹೆಬ್ಬಾವು ಆದರೆ ಅದು ಅನೇಕ ಕಪ್ಪೆಗಳನ್ನು ನುಂಗಿ ಬಿಡಬಲ್ಲದು. ಹಾಗೆಯೇ ಸಮರ್ಥ ಗುರುವು ಅನೇಕ ಶಿಷ್ಯರನ್ನು ಏಕಕಾಲಕ್ಕೆ ಅವರವರ ಮನೋಭಾವಕ್ಕೆ ತಕ್ಕಂತೆ ಉದ್ಧರಿಸಬಲ್ಲ ಹಾಗೂ ಅವರಿಗೆ ಸೂಕ್ತವಾದ ಮಾರ್ಗದರ್ಶನವನ್ನು ನೀಡಬಲ್ಲ.
ಶ್ರೀ ರಾಮಕೃಷ್ಣರ ಬಳಿಗೆ ಬಂದ ಭಿನ್ನ ಭಿನ್ನ ಸ್ವಭಾವದ ಶಿಷ್ಯರು ಅವರ ಸ್ವಭಾವದಂತೆ ಮಾರ್ಗದರ್ಶನ ಪಡೆದದ್ದು ನಿಜಕ್ಕೂ ಗಮನೀಯವಾದ ಅಧ್ಯಯನಯೋಗ್ಯ ವಿಷಯ.

ಶ್ರೀ ರಾಮಕೃಷ್ಣರು ಈ ಸಮರ್ಥ ಗುರುಗಳ ಕುರಿತು ಇನ್ನೊಂದು ದೃಷ್ಟಾಂತವನ್ನು ನೀಡುತ್ತಾರೆ. ಒಬ್ಬ ತಾಯಿ ಅತಿಯಾಗಿ ಬೆಲ್ಲ ತಿನ್ನುತ್ತಿದ್ದ ತನ್ನ ಮಗನನ್ನು ಕರೆದುಕೊಂಡು ಬಂದು ಗುರುಗಳನ್ನು ಕೇಳಿಕೊಳ್ಳುತ್ತಾಳೆ, ದಯವಿಟ್ಟು ಇವನಿಗೆ ಬೆಲ್ಲ ತಿನ್ನುವುದನ್ನು ಬಿಡಲು ಹೇಳಿ ಎಂದು. ಆ ಗುರುಗಳು ಒಂದು ವಾರ ಬಿಟ್ಟು ಆ ತಾಯಿಗೆ ಬರಲು ತಿಳಿಸುತ್ತಾರೆ. ಒಂದು ವಾರದ ನಂತರ ಗುರುಗಳು ಆ ತಾಯಿಯ ಮಗುವಿಗೆ ಹೇಳುತ್ತಾರೆ, ನೋಡಪ್ಪಾ ನೀನು ಅತಿಯಾಗಿ ಬೆಲ್ಲ ತಿನ್ನುವುದನ್ನು ಬಿಡು ಎಂದು. ಆ ಮಗು ಆಗಲಿ ಗುರುಗಳೇ ಎನ್ನುತ್ತದೆ. ಆ ತಾಯಿ ಆಶ್ಚರ್ಯದಿಂದ ಕೇಳುತ್ತಾಳೆ, ಒಂದು ವಾರದ ಹಿಂದೆಯೇ ನೀವು ಇದನ್ನು ನನ್ನ ಮಗುವಿಗೆ ತಿಳಿಸಬಹುದಿತ್ತಲ್ಲಾ ಎನ್ನುತ್ತಾಳೆ ತಾಯಿ. ಆಗ ಗುರುಗಳು ಹೇಳುತ್ತಾರೆ, ನೋಡಮ್ಮಾ ಒಂದು ವಾರದ ಹಿಂದೆ ನಾನು ಕೂಡಾ ಬೆಲ್ಲ ತಿನ್ನುತ್ತಿದ್ದೆ. ಹಾಗಾಗಿ ನಿನ್ನ ಮಗುವಿಗೆ ಉಪದೇಶ ನೀಡಲಿಲ್ಲ. ಗುರುಗಳು ತಾವು ಬೋಧಿಸುವುದನ್ನು ತಾವೇ ಆಚರಿಸಿ ಉಪದೇಶಿಸಿದಾಗ ಶಿಷ್ಯರು ಅದನ್ನು ಪಾಲಿಸುತ್ತಾರೆ. ಎಂತಹ ಅದ್ಭುತವಾದ ಉಪದೇಶ.

ಉಪದೇಶ ನೀಡುವವರು ನಮ್ಮ ಮಾತುಗಳನ್ನು ನೀವು ಕೇಳಿ ಎನ್ನುವುದಕ್ಕಿಂತ ಕೇಳುವವರು ದಯವಿಟ್ಟು ನೀವು ಹೇಳಿ ನಿಮ್ಮ ಮಾತುಗಳನ್ನು ನಾವು ಕೇಳುತ್ತೇವೆ ಎಂದರೆ ಹೇಗೆ ಇರುತ್ತದೆ?.

ಗೃಹಸ್ಥ ಸಾಧಕರಿಗೆ ಮಾರ್ಗದರ್ಶನ

ಶ್ರೀ ರಾಮಕೃಷ್ಣರು ಸನ್ಯಾಸಿಗಳಿಗೆ ಬೋಧಿಸುವುದರ ಜೊತೆಗೆ ಗೃಹಸ್ಥರಿಗೂ ಸರಳವಾದ ಉಪದೇಶವನ್ನು ನೀಡಿ ಮಾರ್ಗದರ್ಶನ ಮಾಡಿದ್ದಾರೆ.

ಗೃಹಸ್ಥರು ಮುಖ್ಯವಾಗಿ ಆಗಾಗ ಸಾಧು ಸಜ್ಜನರ ಸಂಗ( ಸತ್ಸಂಗ) ಮಾಡುತ್ತಿರಬೇಕು. ಅವರು ಈ ಕುರಿತು ಒಂದು ಕಥೆಯನ್ನು ಹೇಳುತ್ತಾರೆ, ಪರ್ವತ ರಾಜನ ಮಗಳು ಪಾರ್ವತಿ. ಮಗಳ ಬಳಿ ಬಂದು ಪರ್ವತ ರಾಜ ಕೇಳುತ್ತಾನೆ, ಮಗಳೇ ನನಗೆ ಮೋಕ್ಷವನ್ನು ಕರುಣಿಸು ಎಂದು. ತಾಯಿ ಪಾರ್ವತಿ ತಂದೆಗೆ ಹೇಳುತ್ತಾಳೆ, ಅಪ್ಪಾ ನನ್ನನ್ನು ಮಗಳನ್ನಾಗಿ ಪಡೆಯುವಷ್ಟು ನೀನು ಪುಣ್ಯ ಮಾಡಿರುವೆ, ಆದರೆ ಮೋಕ್ಷ ಬೇಕೆಂದರೆ ನೀನು ಸಾಧು ಸಂಗ ಮಾಡು ಎಂದು ಉಪದೇಶಿಸುತ್ತಾಳೆ ತಾಯಿ ಪಾರ್ವತಿ. ಸದಾ ಭಗವಂತನ ಸ್ಮರಣೆಯಲ್ಲಿ ಇರುವವರ ಸಂಗ ಮಾಡಿದರೆ ಭಕ್ತರಿಗೆ ಭಗವಂತನ ಸ್ಮರಣೆಯಿಂದ ಆಗುವ ಪ್ರಯೋಜನದ ಅರಿವು ಉಂಟಾಗುತ್ತದೆ.

ಇನ್ನು ಎರಡನೆಯದಾಗಿ ಏಕಾಂತದಲ್ಲಿ ಇದ್ದುಕೊಂಡು ಧ್ಯಾನಾಭ್ಯಾಸ ಮಾಡಬೇಕು, ನಿತ್ಯ ಅನಿತ್ಯದ ಕುರಿತು ವಿಚಾರ ಮಾಡಬೇಕು. ಒಂದು ಇರುವೆಯ ಮುಂದೆ ಮರಳು ಮತ್ತು ಸಕ್ಕರೆ ಇಟ್ಟರೆ ಆ ಇರುವೆ ಸಕ್ಕರೆಯ ತುಂಡನ್ನೇ ಆರಿಸಿಕೊಳ್ಳುತ್ತದೆ.

ramakrishna-paramahamsaru

ಹಾಗೆಯೇ ಸಾಧಕ ಯಾವುದು ಸತ್ಯವಾದದ್ದು- ಅಸತ್ಯವಾದದ್ದು, ಯಾವುದು ನಿತ್ಯವಾದದ್ದು- ಅನಿತ್ಯವಾದದ್ದು ಈ ಕುರಿತು ಆಲೋಚಿಸಿಬೇಕು. ಭಗವಂತನೇ ಸತ್ಯ ವಸ್ತು ಎನ್ನುವುದರ ಅರಿವು ಸಾಧಕನಿಗೆ ಆಗಬೇಕು . ಈ ಅರಿವು ಸಾಧು ಸಂಗದಿಂದ ಉಂಟಾಗುತ್ತದೆ.

ಇನ್ನು ಮೂರನೆಯದಾಗಿ ವ್ಯಾಕುಲತೆಯಿಂದ ಪ್ರಾರ್ಥನೆ ಮಾಡಬೇಕು ಎಂದು ಉಪದೇಶಿಸುತ್ತಾರೆ ಶ್ರೀ ರಾಮಕೃಷ್ಣರು. ಸ್ವಯಂ ಶ್ರೀ ರಾಮಕೃಷ್ಣರು ಅದೆಂತಹ ವ್ಯಾಕುಲತೆಯಿಂದ ಕಾಳಿಯನ್ನು ಕರೆದರು.

ಹಗಲು ರಾತ್ರಿಯೆನ್ನದೆ ನಿರಂತರವಾಗಿ ಕಣ್ಣೀರು ಹಾಕುತ್ತಾ ಅಮ್ಮಾ ದರ್ಶನ ದರ್ಶನ ಕೊಡು, ಅಮ್ಮಾ ನನಗೆ ನಿನ್ನ ದರ್ಶನ ಕೊಡು ಎಂದು ಪ್ರಾರ್ಥನೆ ಮಾಡುತ್ತಲೇ ಇದ್ದರು. ಅವರ ವ್ಯಾಕುಲತೆ ಅದೆಷ್ಟು ತೀವ್ರವಾಗಿತ್ತೆಂದರೆ ಅವರು ಅಳುತ್ತಾ ಅಳುತ್ತಾ ತಮ್ಮ ಗಲ್ಲವನ್ನು ನೆಲಕ್ಕೆ ಉಜ್ಜಿಕೊಳ್ಳುತ್ತಾ ಇರುತ್ತಿದ್ದರು, ಅವರ ಗಲ್ಲದಿಂದ ರಕ್ತ ಹರಿಯುತ್ತಿರುವುದು ಕೂಡಾ ಅವರ ಪರಿವೆಗೇ ಇರುತ್ತಿರಲಿಲ್ಲ. ಅನೇಕ ವರ್ಷಗಳ ತೀವ್ರ ಸಾಧನೆಯ ಫಲ ಒಂದು ದಿನ ಅವರಿಗೆ ಲಭಿಸಿತು. ಭಗವತಿಯ ದರ್ಶನ ಲಾಭವಾಯಿತು.

ಒಂದು ದಿನ ಶ್ರೀ ರಾಮಕೃಷ್ಣರು ಕಾಳಿಮಾತೆ ದರ್ಶನ ಕೊಡದಿರುವುದನ್ನು ಕಂಡು ಇಂದು ಅವಳು ಒಂದೋ ದರ್ಶನ ಕೊಡಬೇಕು ಇಲ್ಲದಿದ್ದರೆ ನಾನು ಇದ್ದು ಪ್ರಯೋಜನವಿಲ್ಲ ಎಂದು ಭಾವಿಸಿ ಕಾಳಿಮಾತೆಯ ಮುಂದೆ ಅಳುತ್ತಾ ಪ್ರಾರ್ಥನೆ ಮಾಡುತ್ತಿದ್ದರು, ತಾಯಿ ದರ್ಶನ ಕೊಡದಿದ್ದಾಗ ಶ್ರೀ ರಾಮಕೃಷ್ಣರ ಕಣ್ಣಿಗೆ ಗೋಡೆಯ ಮೇಲೆ ತೂಗು ಹಾಕಿದ್ದ ಕತ್ತಿಯತ್ತ ಹೋಯಿತು. ತಕ್ಷಣವೇ ಅವರು ಅದನ್ನು ತೆಗೆದುಕೊಂಡು ತಮ್ಮ ಕತ್ತಿನ ಮೇಲೆ ಆ ಕತ್ತಿಯನ್ನು ಹಾಕಿಕೊಳ್ಳಬೇಕು ಆಗ ಪ್ರತ್ಯಕ್ಷಳಾದಳು ಕಾಳಿಮಾತೆ. ಅದೆಂತಹ ರೋಮಾಂಚಕಾರಿ ಅನುಭವ ಅದು, ನಾವು ಭಾವಿಸಿಯೇ ಆನಂದ ಮಗ್ನರಾಗಬೇಕು.

ಸ್ತ್ರೀಯರನ್ನು ತಾಯಿಯಂತೆ ಕಾಣು

ಸ್ವಯಂ ಶ್ರೀ ರಾಮಕೃಷ್ಣರು ತಮ್ಮ ಧರ್ಮ ಪತ್ನಿಯಾದ ಶಾರದಾದೇವಿಯವರನ್ನು, ಜಗನ್ಮಾತೆಯನ್ನು ಕೂಡಿಸುವ ಪೀಠದ ಮೇಲೆ ಕೂಡಿಸಿ ಷೋಡಷಿ ಪೂಜೆಯನ್ನು ಮಾಡಿ ಗೌರವಿಸುತ್ತಾರೆ. ತನ್ಮೂಲಕ ಮನುಕುಲ ಉದ್ಧಾರವಾಗ ಬೇಕಾದರೆ ಸ್ತ್ರೀಯರನ್ನು ತಾಯಿಯಂದು ತಿಳಿದು ಗೌರವಿಸಬೇಕು ಎಂದು ತಿಳಿಸುತ್ತಾರೆ.

ಸ್ವಯಂ ಶಾರದಾದೇವಿಯವರೊಂದಿಗೆ ಆರು ತಿಂಗಳ ಕಾಲ ಒಂದೇ ಹಾಸಿಗೆಯಲ್ಲಿ ಮಲಗಿದ ಶ್ರೀ ರಾಮಕೃಷ್ಣರು ಪತ್ನಿಯನ್ನು ತನ್ನ ತಾಯಿ, ಅವಳೇ ಸಾಕ್ಷಾತ್ ಕಾಳಿಮಾತೆ ಎಂದು ಭಾವಿಸಿ ಪತ್ನಿಯ ಜೊತೆಗೆ ಇದ್ದರು. ಈ ಕುರಿತು ರಾಷ್ಟ್ರಕವಿ ಕುವೆಂಪು ಹೇಳುತ್ತಾರೆ, ಎರಡು ಹಸುಗೂಸುಗಳು ಒಂದೇ ಹಾಸಿಗೆಯಲ್ಲಿ ಮಲಗಿದಂತೆ ಇತ್ತು ಇದು ಎಂದು.

ತಾವು ಭಗವಂತನ ದರ್ಶನ ಪಡೆದಂತೆ ಪ್ರತಿಯೊಬ್ಬರೂ ಭಗವಂತನ ಸಾಕ್ಷಾತ್ಕಾರ (ದರ್ಶನ) ಮಾಡಿಕೊಳ್ಳಬಹುದು ಎಂದು ಶ್ರೀ ರಾಮಕೃಷ್ಣರು ಸ್ವಯಂ ಸಾಧನೆ ಮಾಡಿ ತೋರಿಸಿ ಮನುಕುಲಕ್ಕೆ ಉಪದೇಶ ನೀಡಿದ್ದಾರೆ.

ಇಂದಿನ ಆಧುನಿಕ ಯುಗದ ಜನರು ಮಾನಸಿಕ ತೊಳಲಾಟದಿಂದ ಹಾಗೂ ದೈಹಿಕ ರೋಗಗಳಿಂದ ವಿಪರೀತವಾಗಿ ಬಳಲುತ್ತಿರುವುದನ್ನು ಕಂಡರೆ ಶ್ರೀ ರಾಮಕೃಷ್ಣರಂತಹ ಮಹಾಗುರುಗಳ ಸಂದೇಶಗಳ ಅಧ್ಯಯನ ಹಾಗೂ ಅವುಗಳ ಆಚರಣೆಯ ಅವಶ್ಯಕತೆ ಹಿಂದಿಗಿಂತ ಈಗ ಹೆಚ್ಚು ಇದೆ ಎಂದೆನಿಸುವುದಿಲ್ಲವೆ?

ಲೇಖಕರು ಅಧ್ಯಕ್ಷರು, ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ, ಹರಿಹರ

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಇದನ್ನೂ ಓದಿ : Prerane : ಯಶಸ್ಸಿಗಾಗಿ ನಿರಂತರ ಪ್ರಯತ್ನ; ಆಧುನಿಕ ಕ್ಷೇತ್ರಗಳಲ್ಲಿ ಯೋಗಸೂತ್ರದ ಪಾಲನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Bengaluru Karaga: ವೈಭವದ ಕರಗ ಮಹೋತ್ಸವ ಸಂಪನ್ನ; ಲಕ್ಷಾಂತರ ಭಕ್ತರ ನಡುವೆ ಮಸ್ತಾನ್ ಸಾಬ್ ದರ್ಗಾಗೆ ಭೇಟಿ

Bengaluru Karaga: ಸಂಪ್ರದಾಯದಂತೆ ಹಜರತ್ ತವಕಲ್ ಮಸ್ತಾನ್ ಷಾ ದರ್ಗಕ್ಕೆ ಕರಗ ಭೇಟಿ ನೀಡಿತು. ಹಜರತ್ ತವಕಲ್‌ ಮಸ್ತಾನ್ ಷಾನಲ್ಲಿ ಕರಗದ ಆಗಮನಕ್ಕಾಗಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ದರ್ಗದಲ್ಲಿ ಕರಗಕ್ಕೆ ‌ಪೂಜೆ ಸಲ್ಲಿಸಲಾಗಿದ್ದು, ನಂತರ ದರ್ಗಾವನ್ನು ಪ್ರದಕ್ಷಿಣೆ ಮಾಡಿ ಅಣ್ಣಮ್ಮ ದೇವಸ್ಥಾನದತ್ತ ತೆರಳಿತು.

VISTARANEWS.COM


on

bengaluru karaga in darga
Koo

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ (Bengaluru karaga Festival) ಮಂಗಳವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು. ನಗರ್ತಪೇಟೆಯಲ್ಲಿ ಧರ್ಮರಾಯಸ್ವಾಮಿ (Dharmaraya swamy) ರಥೋತ್ಸವ ಬಳಿಕ ರಾತ್ರಿ 2 ಗಂಟೆಗೆ ಕರಗ ಶಕ್ತ್ಸೋತ್ಸವಕ್ಕೆ (Bangalore Karaga) ಚಾಲನೆ ನೀಡಲಾಯಿತು. ಮುಂಜಾನೆ ಹಾಜಿ ಮಸ್ತಾನ್‌ ಸಾಬ್‌ ದರ್ಗಾಗೂ (Haji Mastan Saab Darga) ಭೇಟಿ ಕೊಟ್ಟು 5.45ರ ವೇಳೆಗೆ ಧರ್ಮರಾಯ ಸ್ವಾಮಿ ದೇವಸ್ಥಾನದೊಳಗೆ ಕರಗ ಸೇರಿಕೊಂಡಿತು. ವೈಭವದ ಕರಗ ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು.

ನಿನ್ನೆ ರಾತ್ರಿ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ತೇಜಸ್ವಿ ಸೂರ್ಯ, ಶಾಸಕ ಹ್ಯಾರಿಸ್‌, ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ಮುಂತಾದವರು ಭೇಟಿ ನೀಡಿದರು. ಬೆಳಗ್ಗೆಯಿಂದಲೇ ತಾಯಿಗೆ ಬಳೆ ಶಾಸ್ತ್ರ, ತಾಳಿ ಶಾಸ್ತ್ರ, ಹೂ ಶಾಸ್ತ್ರ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ರಾತ್ರಿ 10.30ಕ್ಕೆ ಕಲ್ಯಾಣಿಗೆ ಹೋಗಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ವಾಪಸ್ ಬಂದು ಧರ್ಮರಾಯ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು. ರಥೋತ್ಸವದ ಬಳಿಕ ಭಕ್ತರ ಗೋವಿಂದ… ಗೋವಿಂದ… ಎಂಬ ಘೋಷಣೆಗಳ ನಡುವೆ ಅರ್ಚಕ ಜ್ಞಾನೇಂದ್ರ ಅವರು ಕರಗ ಹೊತ್ತು ಸಾಗಿದರು.

ಮುಖ್ಯ ರಥ ಧರ್ಮರಾಯಸ್ವಾಮಿ ರಥದಲ್ಲಿ ಅರ್ಜುನ‌ ಮತ್ತು ದ್ರೌಪದಿ ದೇವಿ ವಿರಾಜಮಾನರಾಗಿದ್ದರು. ಚಿಕ್ಕ ರಥದಲ್ಲಿ ಗ್ರಾಮದೇವಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಪಾಂಡವರ ಮೂರ್ತಿಗಳು ಸೇರಿ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಗಳು ಮುಂದೆ ಸಾಗುತ್ತಿದ್ದಂತೆ ದೇಗುಲದಿಂದ ದ್ರೌಪದಿ ದೇವಿ ಕರಗ ಹೊರಬಂದಿತು.

ಕರಗ ಸಾಗುವ ರಾಜಬೀದಿಗಳೆಲ್ಲಾ ಬಣ್ಣ ಬಣ್ಣದ ಲೈಟಿಂಗ್‌ ಹಾಗೂ ಜನರಿಂದ ಕಂಗೊಳಿಸಿದವು. ಸಾಂಪ್ರದಾಯಿಕವಾಗಿ ಎ. ಜ್ಞಾನೇಂದ್ರ 14ನೇ ಬಾರಿ ಕರಗ ಹೊತ್ತರು. ಒಂದು ರಥದಲ್ಲಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು, ಪಾಂಡವರ ಮೂರ್ತಿಗಳು ಸೇರಿದಂತೆ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಂದಿತು. ಪೂಜೆ ನಂತರ ಮತ್ತೊಂದು ರಥದಲ್ಲಿ ದ್ರೌಪದಿ ಮತ್ತು ಅರ್ಜುನ ಮೂರ್ತಿ ಪ್ರತಿಷ್ಠಾಪನೆಯಾಯಿತು. ನಂತರ ರಥಗಳ ಮೆರವಣಿಗೆ ಆರಂಭವಾಯಿತು. ಖಡ್ಗಗಳನ್ನು ಹಿಡಿದು ನೂರಾರು ವೀರಕುಮಾರರು ಮೆರವಣಿಗೆಯಲ್ಲಿ ತೆರಳಿದರು. ರಥಗಳು ಮುಂದೆ ಸಾಗುತ್ತಿದ್ದಂತೆ ದ್ರೌಪದಿ ದೇವಿ ಕರಗ ದೇಗುಲದಿಂದ ಹೊರ ಬಂದಿದ್ದು, ಅದನ್ನು ಕಂಡು ಭಕ್ತರು ಹರ್ಷೋದ್ಗಾರ ಮಾಡಿದರು.

ಸಂಪ್ರದಾಯದಂತೆ ಹಜರತ್ ತವಕಲ್ ಮಸ್ತಾನ್ ಷಾ ದರ್ಗಕ್ಕೆ ಕರಗ ಭೇಟಿ ನೀಡಿತು. ಹಜರತ್ ತವಕಲ್‌ ಮಸ್ತಾನ್ ಷಾನಲ್ಲಿ ಕರಗದ ಆಗಮನಕ್ಕಾಗಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ದರ್ಗದಲ್ಲಿ ಕರಗಕ್ಕೆ ‌ಪೂಜೆ ಸಲ್ಲಿಸಲಾಗಿದ್ದು, ನಂತರ ದರ್ಗಾವನ್ನು ಪ್ರದಕ್ಷಿಣೆ ಮಾಡಿ ಅಣ್ಣಮ್ಮ ದೇವಸ್ಥಾನದತ್ತ ತೆರಳಿತು. ಒಟ್ಟು 11-12 ಕಿಲೋಮೀಟರ್ ಕರಗದ ಮೆರವಣಿಗೆ ಸಾಗಿದೆ.

ಕರಗ ಮೆರವಣಿಗೆ ಮಾರ್ಗ

ರಥೋತ್ಸವದ ನಂತರ ಮಧ್ಯರಾತ್ರಿ 1 ಗಂಟೆಯಿಂದ ಕರಗ ಮಹೋತ್ಸವದ ಮೆರವಣಿಗೆ ಸಾಗಿತು. ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಿ ಕಬ್ಬನ್​ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ ಮೂಲಕ ಸಾಗಿ ನಂತರ ಕೆ.ಆರ್. ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇಗುಲಕ್ಕೆ ತೆರಳಿತು. ಬಳಿಕ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ರಾಣಾಸಿಂಗ್​ಪೇಟೆ, ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ, ಬಳೆಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್​ಪಿ ರಸ್ತೆ ಮೂಲಕ ಸಾಗಿ ಅಣ್ಣಮ್ಮ ದೇಗುಲಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಸಾಯಿತು. ಬೆಳಗ್ಗೆ 5.45 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯ ಸೇರಿತು. ಬೆಳಗ್ಗೆ 8 ಗಂಟೆಗೆ ತಾಯಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಕರಗಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ | Bengaluru Karaga 2024: ಬೆಂಗಳೂರು ಕರಗ ಶಕ್ತ್ಸೋತ್ಸವಕ್ಕೆ ಕೌಂಟ್‌ ಡೌನ್‌; 8 ಲಕ್ಷ ಜನ ಭಾಗಿ!

Continue Reading

ಬೆಂಗಳೂರು

Bengaluru Karaga 2024: ಬೆಂಗಳೂರು ಕರಗ ಶಕ್ತ್ಸೋತ್ಸವಕ್ಕೆ ಕೌಂಟ್‌ ಡೌನ್‌; 8 ಲಕ್ಷ ಜನ ಭಾಗಿ!

Bengaluru Karaga 2024 : ಚೈತ್ರ ಹುಣ್ಣಿಮೆಯ ದಿನದಂದು ನಡೆಯುವ ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಕ್ಷಣ ಗಣನೆ ಶುರುವಾಗಿದೆ. ಸೋಮವಾರ ಮಧ್ಯರಾತ್ರಿ ಪೊಂಗಲ್‌ ಸೇವೆ ನೆರವೇರಿದ್ದು, ಮಂಗಳವಾರ ಮಧ್ಯರಾತ್ರಿ 12:30ರ ಸುಮಾರಿಗೆ ಕರಗ ಮೆರವಣಿಗೆ ನಡೆಯಲಿದೆ.

VISTARANEWS.COM


on

By

Bengaluru Karaga 2024
Koo

ಬೆಂಗಳೂರು: ರಾಜಧಾನಿಯ ಪಾರಂಪರಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಂಗಳೂರು ಕರಗ ಉತ್ಸವ ಚೈತ್ರ ಮಾಸದ ಹುಣ್ಣಿಮೆಯಂದು ಮಂಗಳವಾರ ರಾತ್ರಿ ವೈಭವದಿಂದ (Bengaluru Karaga 2024) ನಡೆಯಲಿದೆ. ಮಲ್ಲಿಗೆಯಿಂದ ಅಲಂಕೃತಗೊಂಡ ಕರಗ ನೋಡಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಕರಗ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ರಾಜಧಾನಿ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಂದ ಆರು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಈಗಾಗಲೇ ತಿಗಳರಪೇಟೆ, ಚಿಕ್ಕಪೇಟೆ, ಕಾರ್ಪೋರೇಷನ್‌ ಸೇರಿದಂತೆ ಹಳೇ ಬೆಂಗಳೂರು ಪ್ರದೇಶವೆಲ್ಲವೂ ಸಿಂಗಾರಗೊಂಡಿದೆ. ಏ.23ರ ಚೈತ್ರ ಹುಣ್ಣಿಮೆಯ ದಿನದಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ಮಹಾರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಕರಗ ಹೊರುವ ಪೂಜಾರಿ ಜ್ಞಾನೇಂದ್ರ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇಂದು ಮಧ್ಯರಾತ್ರಿ 12:30ಕ್ಕೆ ಪೂಜಾ ಕೈಂಕರ್ಯಗಳು ಹಾಗೂ ಕಣ ಪೂಜೆ ಬಳಿಕ ಧರ್ಮರಾಯಸ್ವಾಮಿ ದೇಗುಲದಿಂದ ಹೊರಡುವ ಕರಗ ರಾಜಬೀದಿಗಳಲ್ಲಿ ಸಂಚಾರಿಸಲಿದೆ.

ಕರಗ ಸಾಗುವ ಮಾರ್ಗ ಹೀಗಿದೆ..

ಮೊದಲಿಗೆ ಧರ್ಮರಾಯ ಸ್ವಾಮಿ ದೇವಸ್ಥಾನ ಪ್ರದಕ್ಷಿಣೆ ಹಾಕಿ ದ್ರೌಪದಮ್ಮ ಕರಗ ಹೊರಡಲಿದೆ. ಕುಂಬಾರಪೇಟೆ ರಸ್ತೆ ಮೂಲಕ ಸಾಗಿ ಕೆ.ಆರ್‌.ಮಾರುಕಟ್ಟೆ ನಂತರ ಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸ್ವೀಕರಿಸಲಿದೆ. ಕೆ.ಆರ್‌. ಮಾರುಕಟ್ಟೆ ವೃತ್ತಕ್ಕೆ ವಾಪಾಸಾಗಿ ಕಾಟನ್‌ಪೇಟೆ ಪೊಲೀಸ್‌ ಠಾಣೆ ರಸ್ತೆಯಲ್ಲಿ ತೆರಳಿ, ಅಲ್ಲಿನ ಮಸ್ತಾನ್‌ಸಾಬ್‌ ದರ್ಗಾಕ್ಕೆ ತೆರಳಿ ಪೂಜೆ ಸ್ವೀಕರಿಸಿ, ಬಳೇಪೇಟೆ ವೃತ್ತದ ಮೂಲಕ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಹೋಗಿ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ವಾಪಸ್‌ ಮರಳಲಿದೆ.

ಮಸ್ತಾನ್ ಸಾಬ್ ದರ್ಗಾದಲ್ಲಿ ಕರಗ ವೈಭವ

ಸಂಪ್ರದಾಯದಂತೆ ಬೆಂಗಳೂರು ಕರಗವು ಅಕ್ಕಿಪೇಟೆಯಲ್ಲಿರುವ ಮಸ್ತಾನ್ ಸಾಬ್ ದರ್ಗಾಕ್ಕೆ ಹೋಗಿ ಬರಲಿದ್ದು, ಧಾರ್ಮಿಕ ಭಾವೈಕ್ಯತೆಗೆ ಸಾಕ್ಷಿಯಾಗಲಿದೆ. ಮುಸ್ಲಿಂ ಭಾಂದವರು ಸಹ ದರ್ಗಾದ ಧಾರ್ಮಿಕ ಸಂಪ್ರದಾಯದಂತೆ ಕರಗಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಇದನ್ನು ಫಾತಿಯಾ ಎಂದು ಕರೆಯಲಾಗುತ್ತದೆ. ಕರಗದ ಮೆರವಣಿಗೆ ಗಣಪತಿ ದೇವಸ್ಥಾನದಲ್ಲಿ ಮೊದಲ ಪೂಜೆ, ಗ್ರಾಮ ದೇವತೆ ಮುತ್ಯಾಲಮ್ಮನಿಗೆ ಎರಡನೇ ನಮಸ್ಕಾರ ಸಲ್ಲಿಸಿ ಇಲ್ಲಿಂದ ರಾಜಬೀದಿಗಳಲ್ಲಿ ಸಂಚಾರಿಸಿ, ನಂತರ ನಗರ ದೇವತೆ ಅಣ್ಣಮ್ಮ ದೇವಸ್ಥಾನಕ್ಕೆ ಹೋಗಿ ವಾಪಸ್‌ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬರಲಿದೆ.

13ನೇ ಬಾರಿ ಕರಗ ಹೊರುತ್ತಿರುವ ಜ್ಞಾನೇಂದ್ರ

ಏಪ್ರಿಲ್ 15ರಿಂದ ಕರಗ ಮಹೋತ್ಸವ ಶುರುವಾಗಿದ್ದು, ಏ. 23 ರಂದು ಕೊನೆಗೊಳ್ಳಲಿದೆ. ಈ ಬಾರಿಯೂ ಕರಗವನ್ನು ಕರಗದ ಪೂಜಾರಿ ಎ. ಜ್ಞಾನೇಂದ್ರ ಹೊರಲಿದ್ದಾರೆ. ಈ ಮೂಲಕ ಜ್ಞಾನೇಂದ್ರ 13ನೇ ಬೆಂಗಳೂರು ಕರಗ ಹೊರುತ್ತಿದ್ದಾರೆ. ಇನ್ನೂ ಕಳೆದ ವರ್ಷ ಕರಗ ಶಕ್ತ್ಯೋತ್ಸವ ನಡೆಯುವ ಸಂದರ್ಭದಲ್ಲಿ ಕಿಡಿಗೇಡಿಗಳು ಕರಗದ ಪೂಜಾರಿ ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿದ್ದರು. ಆ ಮೂಲಕ ಕರಗ ಮಹೋತ್ಸವಕ್ಕೆ ಅಡ್ಡಿಪಡಿಸಲು ಮುಂದಾಗಿದ್ದರು. ಆದರೂ ಕರಗದ ಪೂಜಾರಿ ಜ್ಞಾನೇಂದ್ರ ಯಶಸ್ವಿಯಾಗಿ ದ್ರೌಪದಿದೇವಿ ಕರಗವನ್ನು ರಾಜಬೀದಿಯಲ್ಲಿ ಉತ್ಸವ ಮುಗಿಸಿದರು. ಹಿಂದಿನ ಘಟನೆಯನ್ನು ಮರುಕಳಿಸಬಾರೆಂದು ಈ ಬಾರಿ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ.

ಕರಗ ಮಹೋತ್ಸವ ಹಿನ್ನೆಲೆ ಮದ್ಯ ಮಾರಾಟ ನಿಷೇಧ

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ (Bengaluru Karaga 2024) ಹಿನ್ನೆಲೆಯಲ್ಲಿ ಏ.23ರಂದು ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಹಲಸೂರು ಗೇಟ್, ಎಸ್ಆರ್ ನಗರ, ವಿಲ್ಸನ್ ಗಾರ್ಡನ್, ಎಸ್‌ಜೆ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡುವಂತೆ ಆಯುಕ್ತ ದಯಾನಂದ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಕರಗ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುತ್ತಾರೆ. ಈ ವೇಳೆ ಕೆಲವು ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಕಾನೂನು ಬಾಹಿರ ಕೃತ್ಯ ಎಸಗುವ ಸಾಧ್ಯತೆ ಇದೆ. ಇದು ಸಾರ್ವಜನಿಕರ ಶಾಂತಿಗೆ‌ ಭಂಗ ಉಂಟು ಮಾಡುವ ಸಂಭವವಿದೆ.

ಹೀಗಾಗಿ ಮುನ್ನೆಚ್ಚರಿಕೆ ಸಲುವಾಗಿ ಏ.23ರ ಬೆಳಗ್ಗೆ 6ಗಂಟೆಯಿಂದ ಮರುದಿನ 24ರ ಬೆಳಗ್ಗೆ 10ರವರೆಗೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ನಾಲ್ಕು ಠಾಣಾ ವ್ಯಾಪ್ತಿಯ ಬಾರ್ ರೆಸ್ಟೋರೆಂಟ್, ಮದ್ಯದ ಅಂಗಡಿಗಳು, ವೈನ್ ಶಾಪ್,‌ ಪಬ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ.

ಕರಗ ಮಹೋತ್ಸವ; ವಾಹನ ಸವಾರರೇ ಬೇರೆ ದಾರಿ ಕಂಡುಕೊಳ್ಳಿ

ಇಂದು ಮಧ್ಯರಾತ್ರಿ ಐತಿಹಾಸಿಕ ಬೆಂಗಳೂರು ಕರಗ (Bengaluru Karaga Festival) ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ (Traffic restriction) ಹೇರಲಾಗಿದ್ದು, ಪರ್ಯಾಯ (Alternate roads) ರಸ್ತೆಗಳಲ್ಲಿ ಸಾಗುವಂತೆ ಬೆಂಗಳೂರು ನಗರ ಸಂಚಾರ ಪೊಲೀಸರು (Bangalore traffic police) ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ರಾಫಿಕ್‌ ಪೊಲೀಸರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ: ದಿನಾಂಕ: 23.04.2024ರಿಂದ ದಿನಾಂಕ: 24.04.2024ರ ಬೆಳಗ್ಗೆ 06:00 ಗಂಟೆಯವರೆಗೆ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯ ಸ್ವಾಮಿ ಬೆಂಗಳೂರು ಕರಗದ ಉತ್ಸವ ನಡೆಯುತ್ತಿದ್ದು, ಈ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿರುತ್ತದೆ ಎಂದು ತಿಳಿಸಿದೆ.

ಮೆರವಣಿಗೆ ಸಾಗುವ ಮಾರ್ಗ

ಮೆರವಣಿಗೆಯು ನಗರ್ತಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊಂಡು ಕಬ್ಬನ್‌ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ ಮೂಲಕ ಕೆ.ಆರ್ ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇವಾಲಯಕ್ಕೆ ಬಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ಮೂಲಕ ರಾಣಾಸಿಂಗ್ ಪೇಟೆ,‌ ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ , ಮಸ್ತಾನ್ ಸಾಹೇಬ್ ದರ್ಗಾ, ಬಳೇಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್.ಪಿ.ರಸ್ತೆ ಮೂಲಕ ಅಣ್ಣಮ್ಮ ದೇವಾಲಯಕ್ಕೆ ಬರುತ್ತದೆ. ಪುನಃ ಅದೇ ಮಾರ್ಗವಾಗಿ ಸಂಚರಿಸಿ, ಕಿಲ್ಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್, ಆರ್.ಟಿ.ರಸ್ತೆ , ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣಕಲ್‌ಪೇಟೆ ಮೂಲಕ ದಿ: 24/04/2024 ರಂದು ಬೆಳಗ್ಗೆ 6-00 ಘಂಟೆಗೆ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಸೇರುತ್ತದೆ.

ಸಂಚಾರ ನಿರ್ಬಂಧಿಸಲಾದ ರಸ್ತೆಗಳು

ಸಿಟಿ ಮಾರುಕಟ್ಟೆ ವೃತ್ತದಿಂದ ಅವೆನ್ಯೂ ರಸ್ತೆಯ ಮೂಲಕ ಮೈಸೂರು ಬ್ಯಾಂಕ್ ವೃತ್ತದವರೆಗೆ ಎಲ್ಲ ಮಾದರಿಯ ವಾಹನ ಸಂಚಾರ ನಿಷೇಧಿಸಲಾಗಿದೆ. ಉತ್ಸವದ ಮೆರವಣಿಗೆ ಅವೆನ್ಯೂ ರಸ್ತೆ ಪ್ರವೇಶಿಸುತ್ತಿದ್ದಂತೆ, ಎ.ಎಸ್.ಚಾರ್ ರಸ್ತೆಯಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಎಸ್.ಜೆ.ಪಿ ರಸ್ತೆಯಿಂದ ಎನ್.ಆರ್ ವೃತ್ತದ ಕಡೆಗೆ ಹೋಗಲು ಪಿ.ಕೆ. ಲೇನ್ ಬಳಿ ಎಡ ತಿರುವು ಪಡೆಯುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಉತ್ಸವದ ಮೆರವಣಿಗೆಯು ಅವೆನ್ಯೂ ರಸ್ತೆಯನ್ನು ಪ್ರವೇಶಿಸುತ್ತಿದಂತೆ ಮೆಡಿಕಲ್ ಕಾಲೇಜು
ಕಡೆಯಿಂದ ಮಾರ್ಕೆಟ್ ವೃತ್ತದ ಕಡೆಗೆ ಬರುವ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ನಿರ್ಬಂಧಿಸಲಾದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಎಸ್‌ಜೆಪಿ ರಸ್ತೆ -ಟೌನ್‌ಹಾಲ್, ಕೆಂಪೇಗೌಡ ರಸ್ತೆ ಮಾರ್ಗವಾಗಿ ತೆರಳಬಹುದು. ಮೈಸೂರು ರಸ್ತೆಯ ಎ.ಎಸ್.ಎಚ್ ರಸ್ತೆಯಲ್ಲಿ ಬಲ ತಿರುವು ರಾಯನ್ ವೃತ್ತದ‌ ಮೂಲಕ ಸಂಚರಿಸಬಹುದು. ಚಾಮರಾಜಪೇಟೆ ಕಡೆಯಿಂದ ಬರುವ ವಾಹನಗಳು ಪ್ರೊ. ಶಿವಶಂಕರ ವೃತ್ತದ ಮೂಲಕ ಜೆ.ಸಿ ರಸ್ತೆಯನ್ನು ಪ್ರವೇಶಿಸಿ ಟೌನ್‌ಹಾಲ್ ಕಡೆಗೆ ಸಂಚರಿಸಬಹುದು.

ವಾಹನಗಳ ಪಾರ್ಕಿಂಗ್ ಸ್ಥಳಗಳು

ಕರಗ ಉತ್ಸವಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಬನ್ನಪ್ಪ ಪಾರ್ಕ್ ಹಾಗೂ‌ ಪುರಭವನ, ಬಿ.ಬಿ.ಎಂ.ಪಿ ಮಾರ್ಕೆಟ್ ಕಾಂಪ್ಲೆಕ್ಸ್, ಇಲ್ಲಿ ನಿಲುಗಡೆ ಮಾಡಬಹುದಾಗಿರುತ್ತದೆ.

ಪಾರ್ಕಿಂಗ್ ನಿರ್ಬಂಧಿಸಲಾದ ಸ್ಥಳಗಳು

ಪಿ.ಕೆ ಲೈನ್, ಓ.ಟಿ.ಸಿ ರಸ್ತೆ, ಎಸ್ಪಿ ರಸ್ತೆ , ಕಬ್ಬನ್‌ಪೇಟೆ ರಸ್ತೆ, ಸುಣ್ಣಕಲ್ ಪೇಟೆ ರಸ್ತೆ, ಎಸ್.ಜೆ.ಪಿ. ಸಿಟಿ ಮಾರ್ಕೆಟ್ ಸರ್ಕಲ್, ಎಸ್.ಜೆ.ಪಿ ರಸ್ತೆ, ಅವೆನ್ಯೂ ರಸ್ತೆ , ಎ.ಎಸ್.ಚಾರ್ ಸ್ಟ್ರೀಟ್ ನಿಂದ ಮಾರ್ಕೆಟ್ ಸರ್ಕಲ್‌ವರೆಗೆ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಲೈಫ್‌ಸ್ಟೈಲ್

Vastu Tips: ಸುಖ, ಶಾಂತಿ, ಸಮೃದ್ಧಿಗಾಗಿ ಹೀಗಿರಲಿ ಮನೆಯ ಕಿಟಕಿ, ಬಾಗಿಲು

Vastu Tips: ನಮ್ಮ ಪೂರ್ವಜರು ಕೂಡ ಮನೆಯ ಪ್ರತಿಯೊಂದು ಭಾಗವನ್ನು ವಾಸ್ತುವಿನ ದೃಷ್ಟಿಕೋನದಿಂದಲೇ ನೋಡುತ್ತಿದ್ದರು. ಕ್ರಮೇಣ ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದೆವು. ಆದರೆ ಈಗ ಮತ್ತೆ ವಾಸ್ತುವಿಗೆ (Vastu Tips) ಪ್ರಾಮುಖ್ಯತೆ ಹೆಚ್ಚಾಗುತ್ತಿದೆ. ಮನೆಗೆ ಕಿಟಕಿ ಬಾಗಿಲು ಅಳವಡಿಸುವುದಕ್ಕೂ ವಾಸ್ತು ಪಾಲನೆ ಮಾಡುವುದು ಮುಖ್ಯ. ಇದರಿಂದ ಮನೆಯೊಳಗೆ ಧನಾತ್ಮಕ ಶಕ್ತಿ ವೃದ್ಧಿಯಾಗಿಸಬಹುದು.

VISTARANEWS.COM


on

By

Vastu Tips
Koo

ಮನೆಯೊಳಗೆ (home) ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಧನಾತ್ಮಕ ಶಕ್ತಿ (Positive energy) ವೃದ್ಧಿಸಿಕೊಳ್ಳುವುದು ಬಹು ಮುಖ್ಯ. ಇದಕ್ಕಾಗಿ ವಾಸ್ತು ಅಂಶಗಳನ್ನು ನಾವು ಪರಿಗಣಿಸಿಬೇಕು. ನಮ್ಮ ಪೂರ್ವಜರು ಕೂಡ ಮನೆಯ ಪ್ರತಿಯೊಂದು ಭಾಗವನ್ನು ವಾಸ್ತುವಿನ ದೃಷ್ಟಿಕೋನದಿಂದಲೇ ನೋಡುತ್ತಿದ್ದರು. ಕ್ರಮೇಣ ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದೆವು. ಆದರೆ ಈಗ ಮತ್ತೆ ವಾಸ್ತುವಿಗೆ (Vastu Tips) ಪ್ರಾಮುಖ್ಯತೆ ಹೆಚ್ಚಾಗುತ್ತಿದೆ.

ಮನೆಯಾದ್ಯಂತ ಧನಾತ್ಮಕ ಶಕ್ತಿಯನ್ನು ವೃದಿಸುವುದು ಸುಲಭವಲ್ಲ. ವಾಸ್ತು ಪ್ರಕಾರ ಮನೆಗೆ ಬಾಗಿಲು (door) ಮತ್ತು ಕಿಟಕಿಗಳನ್ನು (window) ಅಳವಡಿಸಿದರೆ ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು.

ವಾಸ್ತು ಪ್ರಕಾರ ಬಾಗಿಲು ಮತ್ತು ಕಿಟಕಿಗಳನ್ನು ಅಳವಡಿಸಿದರೆ ಮುಚ್ಚಿರುವ ಜಾಗದಲ್ಲೂ ಧನಾತ್ಮಕ ಶಕ್ತಿ ಪುನರುತ್ಪಾದನೆಯಾಗುತ್ತದೆ. ಈ ಬಾಗಿಲು ಮತ್ತು ಕಿಟಕಿಗಳ ಮೂಲಕ ಶಕ್ತಿಗಳು ಮನೆಯ ಒಳ ಮತ್ತು ಹೊರಗೆ ಹರಿಯುತ್ತವೆ. ಆರೋಗ್ಯಕರ ಮತ್ತು ಶ್ರೀಮಂತ ಜೀವನಶೈಲಿಯ ವೃದ್ಧಿಗಾಗಿ ಇವುಗಳನ್ನು ಇಡಲು ನಿರ್ದಿಷ್ಟ ಜಾಗಗಳಿವೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Vastu Tips: ನಿಮ್ಮ ಮನೆಯಲ್ಲಿ ಸಂತೋಷ ವೃದ್ಧಿಸಬೇಕೆ? ಈ ಸಲಹೆಗಳನ್ನು ಪಾಲಿಸಿ

ಬಾಗಿಲು, ಕಿಟಕಿಗಳಿಗೆ ವಾಸ್ತು ಪಾಲನೆ ಯಾಕೆ?

ಮನೆ ನಿರ್ಮಿಸಲು ಉತ್ಸುಕರಾಗಿರುವ ಮನೆ ಮಾಲೀಕರು ಹಲವಾರು ಕಾರಣಗಳಿಗಾಗಿ ಬಾಗಿಲು ಮತ್ತು ಕಿಟಕಿಗಳನ್ನು ಇಡುವ ಸ್ಥಾನ, ದಿಕ್ಕು ಮತ್ತು ಬಳಸುವ ವಸ್ತುಗಳ ಬಗ್ಗೆ ವಿಶೇಷ ಗಮನವನ್ನು ನೀಡಬೇಕು. ಅವು ಗಾಳಿ ಮತ್ತು ಸೂರ್ಯನ ಬೆಳಕಿಗೆ ಪೂರಕವಾಗಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಇದರಿಂದಲೇ ಮನೆಯೊಳಗೇ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ.
ಹೊಸ ಮನೆಯನ್ನು ನಿರ್ಮಿಸುತ್ತಿದ್ದರೆ ಅಥವಾ ಹಳೆ ಮನೆಯನ್ನು ನವೀಕರಿಸುತ್ತಿದ್ದರೆ ಬಾಗಿಲು ಮತ್ತು ಕಿಟಕಿಗಳ ವಾಸ್ತು ಬಗ್ಗೆ ತಿಳಿದುಕೊಳ್ಳಿ.


ಸರಿಯಾದ ಮುಖ್ಯ ಬಾಗಿಲು

ಮನೆಯ ಮುಖ್ಯ ಬಾಗಿಲು ದೊಡ್ಡ ಬಾಗಿಲಾಗಿರಬೇಕು. ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಒಳಗೆ ತೆರೆದುಕೊಳ್ಳುವ ಎರಡು ಕವಾಟದ ಬಾಗಿಲು ಮಂಗಳಕರ. ಪ್ರಕಾಶಮಾನವಾದ ದೀಪಗಳು ಮತ್ತು ಉತ್ತಮ ಬಣ್ಣಗಳೊಂದಿಗೆ ಮುಖ್ಯ ಬಾಗಿಲಿನ ಮೇಲೆ ಸುಂದರವಾದ ವಿನ್ಯಾಸಗಳನ್ನು ಅಳವಡಿಸಿಕೊಳ್ಳಿ. ನೀರಸವಾದ ಮುಖ್ಯ ಬಾಗಿಲು ಮನೆಗೆ ಶೋಭೆಯಲ್ಲ.

ಬಾಗಿಲುಗಳ ಸರಿಯಾದ ಸಂಖ್ಯೆ

ಸಕಾರಾತ್ಮಕತೆಯು ಸಹ ಸಮ ಸಂಖ್ಯೆಗಳಲ್ಲಿ ಬರುತ್ತದೆ. ಮನೆಯಲ್ಲಿ ಬಾಗಿಲು ಮತ್ತು ಕಿಟಕಿಗಳ ಸಂಖ್ಯೆ ಯಾವಾಗಲೂ ಸಮವಾಗಿರಬೇಕು. ಎರಡು, ನಾಲ್ಕು, ಆರು ಹೀಗೆ ಎರಡರ ಗುಣಕಗಳಲ್ಲಿರಬೇಕು ಎನ್ನುತ್ತಾರೆ ವಾಸ್ತು ತಜ್ಞರು.


ಬಾಗಿಲಿನ ಗಾತ್ರದಲ್ಲಿ ಸ್ಥಿರತೆ

ಮುಂಭಾಗದ ಬಾಗಿಲನ್ನು ಹೊರತುಪಡಿಸಿ ಮನೆಯಲ್ಲಿ ಎಲ್ಲಾ ಆಂತರಿಕ ಬಾಗಿಲುಗಳ ಗಾತ್ರದಲ್ಲಿ ಒಂದೇ ಆಗಿರಬೇಕು. ವಿಭಿನ್ನ ಬಾಗಿಲು ಗಾತ್ರಗಳು ಮನೆಗೆ ಒಳ್ಳೆಯದಲ್ಲ. ಎದ್ದು ಕಾಣಬೇಕಾದ ಏಕೈಕ ಬಾಗಿಲು ಮುಖ್ಯ ಬಾಗಿಲು. ಮನೆಯೊಳಗೆ ಕೆಲವು ಬಾಗಿಲುಗಳನ್ನು ದೊಡ್ಡದಾಗಿ ಮಾಡಲು ಬಯಸಿದರೆ ಅವುಗಳನ್ನು ಉತ್ತರ ಅಥವಾ ಪೂರ್ವಕ್ಕೆ ಬದಲಾಗಿ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಬೇಕು.

ದೋಷರಹಿತವಾಗಿರಲಿ ಮನೆ ಬಾಗಿಲು

ಮನೆಯಲ್ಲಿ ಬಾಗಿಲುಗಳ ಕಾರ್ಯವಿಧಾನದ ವಿಷಯಕ್ಕೆ ಬಂದರೆ ಬಾಗಿಲು ತೆರೆಯುವಾಗ ಅಥವಾ ಮುಚ್ಚುವಾಗ ಕೀಲು ಬಾಗಿಲುಗಳನ್ನು ಹಾಕುವುದು ಉತ್ತಮ. ಮನೆಯಲ್ಲಿ ಬಾಗಿಲುಗಳು ಮತ್ತು ಕಿಟಕಿಗಳೊಂದಿಗೆ ಹೆಚ್ಚು ಜಗಳಗಳು ಇರುತ್ತದೆ. ಸ್ಮೂತ್ ಕೀಲುಗಳು ಮನೆಯಲ್ಲಿ ಉತ್ತಮ ಸಂಬಂಧಗಳನ್ನು ಪ್ರತಿಬಿಂಬಿಸುತ್ತವೆ. ಸ್ವಯಂ-ಮುಚ್ಚುವ ಬಾಗಿಲುಗಳನ್ನು ತಪ್ಪಿಸುವುದು ಒಳ್ಳೆಯದು.

ಕಿಟಕಿಗಳು

ಎಲ್ಲಾ ಕಿಟಕಿಗಳು ಸರಿಯಾದ ಆಕಾರ ಮತ್ತು ಸಮವಾದ ಎತ್ತರವನ್ನು ಹೊಂದಿರಬೇಕು. ಕಿಟಕಿಗಳು ತಾಜಾ ಗಾಳಿ ಮತ್ತು ಸೂರ್ಯನ ಬೆಳಕಿನ ಮೂಲವಾಗಿರುತ್ತದೆ. ಅವುಗಳಿಗೆ ಯಾವಾಗಲೂ ಎದುರು ಬಾಗಿಲುಗಳನ್ನು ಇಡಬೇಕು. ಮನೆಯಲ್ಲಿ ಗರಿಷ್ಠ ವಾತಾಯನವಿದೆ ಎಂದು ಇದು ಖಚಿತಪಡಿಸುತ್ತದೆ. ಮನೆಯಲ್ಲಿರುವ ಕಿಟಕಿಗಳ ಸಂಖ್ಯೆಯೂ ಸಮ ಸಂಖ್ಯೆಯಲ್ಲಿರಬೇಕು. ಕಿಟಕಿಗಳಿಗೆ ಸಾಮಾನ್ಯವಾಗಿ ನೈಋತ್ಯ ದಿಕ್ಕನ್ನು ತಪ್ಪಿಸಿ. ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಕಿಟಕಿಗಳು ದೊಡ್ಡದಾಗಿದ್ದರೆ ಉತ್ತಮ. ಉತ್ತರವು ಸಮೃದ್ಧಿಯನ್ನು ತರುತ್ತದೆ ಆದರೆ ಪೂರ್ವವು ಪ್ರಗತಿ ಮತ್ತು ಆರೋಗ್ಯವನ್ನು ತರುತ್ತದೆ.

ಬಾಗಿಲಿಗೆ ಬಳಸುವ ವಸ್ತುಗಳು

ಬಾಗಿಲುಗಳಿಗೆ ವಸ್ತುಗಳನ್ನು ಎಚ್ಚರಿಕೆಯಿಂದ ಆರಿಸುವುದು ಮುಖ್ಯ. ಏಕೆಂದರೆ ಇದು ಎಷ್ಟು ಮಂಗಳಕರ ಎಂಬುದನ್ನು ನಿರ್ಧರಿಸುತ್ತದೆ. ಬಾಗಿಲುಗಳಿಗೆ ವಸ್ತುಗಳನ್ನು ಆಯ್ಕೆಮಾಡುವಾಗ ಮರದ ಬಾಗಿಲು ಯಾವಾಗಲೂ ಅತ್ಯುತ್ತಮ ಆಯ್ಕೆಯಾಗಿದೆ. ಇದಲ್ಲದೆ ಉತ್ತರ ದಿಕ್ಕಿನ ಬಾಗಿಲುಗಳಿಗೆ ಲೋಹ ಅಥವಾ ಕಬ್ಬಿಣದಂತಹ ಬೆಳ್ಳಿಯನ್ನು ಹೊಂದಿರುವ ಬಾಗಿಲುಗಳನ್ನು ಆಯ್ಕೆ ಮಾಡಿಕೊಳ್ಳಿ. ದಕ್ಷಿಣಕ್ಕೆ ಮರದ ಮತ್ತು ಲೋಹದ ಅಂಶಗಳನ್ನು ಹೊಂದಿರುವ ಬಾಗಿಲುಗಳು ಸೂಕ್ತವಾಗಿದೆ. ಪೂರ್ವ ದಿಕ್ಕಿಗೆ ಮರದಿಂದ ಮಾಡಿದ ಬಾಗಿಲು ಉತ್ತಮ. ಪಶ್ಚಿಮಕ್ಕೆ ಕಬ್ಬಿಣದಂತಹ ಲೋಹದಿಂದ ಪ್ರಧಾನವಾಗಿ ಮಾಡಿದ ಬಾಗಿಲನ್ನು ಆಯ್ಕೆ ಮಾಡಿಕೊಳ್ಳಿ.

ಬಾಗಿಲುಗಳು ಮತ್ತು ಕಿಟಕಿಗಳ ಬಣ್ಣ

ಗಾಢವಾದ ಬಣ್ಣಗಳು ಮನೆಯೊಳಗೆ ಹರ್ಷಚಿತ್ತ ಮತ್ತು ಶಕ್ತಿಯುತ ಮನಸ್ಥಿತಿಗೆ ಕಾರಣವಾಗುತ್ತವೆ. ಆದ್ದರಿಂದ ಮುಂಭಾಗದ ಬಾಗಿಲುಗಳಿಗೆ ಹಳದಿ ಮತ್ತು ನೀಲಿ ಬಣ್ಣಗಳನ್ನು ಆರಿಸಿ.

ಅಲಂಕಾರಿಕ ವಸ್ತುಗಳು

ಬಾಗಿಲಿನ ಮುಂದೆ ಹನುಮಾನ್ ಅಥವಾ ಗಣೇಶನ ವಿಗ್ರಹವನ್ನು ಇರಿಸುವುದರಿಂದ ದುಷ್ಟ ಶಕ್ತಿಗಳನ್ನು ದೂರವಿರಿಸಬಹುದು ಎಂದು ನಂಬಲಾಗಿದೆ. ಹಿತ್ತಾಳೆಯ ಬಟ್ಟಲಿನಲ್ಲಿ ನೀರನ್ನು ಇಟ್ಟುಕೊಳ್ಳುವುದು ಮನೆಯಲ್ಲಿ ನಕಾರಾತ್ಮಕತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸಲು ಬುದ್ಧನ ಪ್ರತಿಮೆ ಅಥವಾ ಗಾಳಿಯ ಚೈಮ್ ಅನ್ನು ಪ್ರವೇಶದ್ವಾರದ ಬಳಿ ಇರಿಸಬಹುದು.


ವಾಸ್ತು ಪರಿಣಾಮ

ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಬಾಗಿಲು, ಕಿಟಕಿಗಳು ತಾಜಾ ಗಾಳಿ ಮತ್ತು ಬೆಳಿಗ್ಗೆ ಒಳ್ಳೆಯದು. ದಿನದ ಆರಂಭದಲ್ಲಿ ಇದು ಮನೆಯ ಶುದ್ಧೀಕರಣ ಪ್ರಕ್ರಿಯೆಯನ್ನು ನಡೆಸುತ್ತದೆ.

ದಕ್ಷಿಣ ದಿಕ್ಕು ಎಲ್ಲಾ ಉತ್ತಮ ಶಕ್ತಿಗಳ ಕೇಂದ್ರ ಎಂದು ಪರಿಗಣಿಸಲಾಗಿದೆ. ದಕ್ಷಿಣಕ್ಕೆ ಎದುರಾಗಿ ನಿಖರವಾಗಿ ಮತ್ತು ಮಧ್ಯದಲ್ಲಿ ಬಾಗಿಲು, ಕಿಟಕಿಗಳನ್ನು ಇರಿಸಿದರೆ ಮನೆಯೊಳಗೆ ಉತ್ತಮ ಶಕ್ತಿ ಸಂಚಾರವಾಗುತ್ತದೆ.

ಪೂರ್ವ ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಇಲ್ಲಿ ಪ್ರವೇಶದ್ವಾರಗಳು ಸಮೃದ್ಧಿ, ಶಕ್ತಿ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ.

ಪಶ್ಚಿಮ ದಿಕ್ಕು ಸೂರ್ಯಾಸ್ತಮಾನವನ್ನು ಆನಂದಿಸುವ ಮನೆಮಾಲೀಕರಿಗೆ ಸೂಕ್ತವಾಗಿದೆ. ಈ ದಿಕ್ಕು ಸಂಪತ್ತು ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ.

ಏನು ಮಾಡಬೇಕು?

ಮನೆಯ ಮುಖ್ಯ ಬಾಗಿಲು ಹೊಸ್ತಿಲನ್ನು ಹೊಂದಿರಬೇಕು. ಮನೆಗೆ ಸಂಪತ್ತನ್ನು ಆಕರ್ಷಿಸಲು ನಿರ್ದಿಷ್ಟ ಸಂಖ್ಯೆಯಲ್ಲಿ ಹೊಸ್ತಿಲಿನ ಎದುರು ಮೆಟ್ಟಿಲುಗಳನ್ನು ಇರಿಸಬೇಕು.

ಮುಖ್ಯ ಬಾಗಿಲು ಯಾವಾಗಲೂ ನೆಲದ ಮಟ್ಟಕ್ಕಿಂತ ಮೇಲಿರಬೇಕು. ಮಲಗುವ ಕೋಣೆಯ ಬಾಗಿಲುಗಳು ಮುಖ್ಯ ಬಾಗಿಲಿಗಿಂತ ಚಿಕ್ಕದಾಗಿರಬೇಕು. ಮುಖ್ಯ ಬಾಗಿಲನ್ನು ಮನೆಯಲ್ಲಿ ದೊಡ್ಡದಾಗಿಸಬೇಕು. ಎಲ್ಲಾ ಬಾಗಿಲುಗಳು ಪ್ರದಕ್ಷಿಣಾಕಾರವಾಗಿ ತೆರೆದಿರುವುದನ್ನು ಖಚಿತಪಡಿಸಿಕೊಳ್ಳಿ.


ಏನು ಮಾಡಬಾರದು?

ಮುಖ್ಯ ಬಾಗಿಲು ಮತ್ತು ನಿರ್ಗಮನ ಬಾಗಿಲು ಎದುರಾಗಿ ಇರಬಾರದು. ಮುಖ್ಯ ಬಾಗಿಲುಗಳು ಮನೆಯ ಆಯಾವನ್ನು ಬಿಟ್ಟು ಹೊರಗೆ ಇರಬಾರದು. ಮುಖ್ಯ ಬಾಗಿಲನ್ನು ಭೂಗತ ಟ್ಯಾಂಕ್ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳ ಕೆಳಗೆ ಇಡುವುದನ್ನು ತಪ್ಪಿಸಿ.

ಮುಖ್ಯ ಬಾಗಿಲಿನ ಮುಂದೆ ಶೂ ಅಥವಾ ಕಸವನ್ನು ಇಡಬೇಡಿ. ಮುಖ್ಯ ಬಾಗಿಲಿನ ಮುಂಭಾಗದಲ್ಲಿ ಕಂಬ, ಮರ, ತಂತಿ ಸೇರಿದಂತೆ ಅಡೆತಡೆಗಳನ್ನು ತಪ್ಪಿಸಿ.

ಬಾಗಿಲು ಅಥವಾ ನಿರ್ಗಮನ ಬಾಗಿಲಿನ ಹೊರ ಭಾಗದಲ್ಲಿ ದೇವರ ಚಿತ್ರಗಳನ್ನು ಪ್ರದರ್ಶಿಸಬೇಡಿ. ಬಾಗಿಲಿನ ವಾಸ್ತು ಪ್ರಕಾರ ಇದು ದುಃಖಕ್ಕೆ ಕಾರಣವಾಗಬಹುದು.

ಮನೆಯಲ್ಲಿ ಹೆಚ್ಚಿನ ಮಹಡಿಗಳಿದ್ದರೆ ಪ್ರತಿ ಮಹಡಿಯಲ್ಲಿ ಒಂದರ ಮೇಲೊಂದು ಬಾಗಿಲು ಹಾಕದಂತೆ ನೋಡಿಕೊಳ್ಳಿ.

Continue Reading

ಬೆಂಗಳೂರು

Bengaluru Karaga: ಇಂದು ರಾತ್ರಿ ಕರಗ ಮಹೋತ್ಸವ; ವಾಹನ ಸವಾರರೇ ಬೇರೆ ದಾರಿ ಕಂಡುಕೊಳ್ಳಿ

ದಿನಾಂಕ: 23.04.2024ರಿಂದ ದಿನಾಂಕ: 24.04.2024ರ ಬೆಳಗ್ಗೆ 06:00 ಗಂಟೆಯವರೆಗೆ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯ ಸ್ವಾಮಿ ಬೆಂಗಳೂರು ಕರಗದ (Bengaluru Karaga) ಉತ್ಸವ ನಡೆಯುತ್ತಿದ್ದು, ಈ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿರುತ್ತದೆ

VISTARANEWS.COM


on

Bengaluru Karaga
Koo

ಬೆಂಗಳೂರು: ಇಂದು ಮಧ್ಯರಾತ್ರಿ ಐತಿಹಾಸಿಕ ಬೆಂಗಳೂರು ಕರಗ (Bengaluru Karaga Festival) ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ (Traffic restriction) ಹೇರಲಾಗಿದ್ದು, ಪರ್ಯಾಯ (Alternate roads) ರಸ್ತೆಗಳಲ್ಲಿ ಸಾಗುವಂತೆ ಬೆಂಗಳೂರು ನಗರ ಸಂಚಾರ ಪೊಲೀಸರು (Bangalore traffic police) ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ರಾಫಿಕ್‌ ಪೊಲೀಸರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ: ದಿನಾಂಕ: 23.04.2024ರಿಂದ ದಿನಾಂಕ: 24.04.2024ರ ಬೆಳಗ್ಗೆ 06:00 ಗಂಟೆಯವರೆಗೆ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯ ಸ್ವಾಮಿ ಬೆಂಗಳೂರು ಕರಗದ ಉತ್ಸವ ನಡೆಯುತ್ತಿದ್ದು, ಈ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿರುತ್ತದೆ ಎಂದು ತಿಳಿಸಿದೆ.

ಮೆರವಣಿಗೆ ಸಾಗುವ ಮಾರ್ಗ

ಮೆರವಣಿಗೆಯು ನಗರ್ತಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊಂಡು ಕಬ್ಬನ್‌ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ ಮೂಲಕ ಕೆ.ಆರ್ ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇವಾಲಯಕ್ಕೆ ಬಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ಮೂಲಕ ರಾಣಾಸಿಂಗ್ ಪೇಟೆ,‌ ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ , ಮಸ್ತಾನ್ ಸಾಹೇಬ್ ದರ್ಗಾ, ಬಳೇಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್.ಪಿ.ರಸ್ತೆ ಮೂಲಕ ಅಣ್ಣಮ್ಮ ದೇವಾಲಯಕ್ಕೆ ಬರುತ್ತದೆ. ಪುನಃ ಅದೇ ಮಾರ್ಗವಾಗಿ ಸಂಚರಿಸಿ, ಕಿಲ್ಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್, ಆರ್.ಟಿ.ರಸ್ತೆ , ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣಕಲ್‌ಪೇಟೆ ಮೂಲಕ ದಿ: 24/04/2024 ರಂದು ಬೆಳಗ್ಗೆ 6-00 ಘಂಟೆಗೆ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಸೇರುತ್ತದೆ.

ಸಂಚಾರ ನಿರ್ಬಂಧಿಸಲಾದ ರಸ್ತೆಗಳು

ಸಿಟಿ ಮಾರುಕಟ್ಟೆ ವೃತ್ತದಿಂದ ಅವೆನ್ಯೂ ರಸ್ತೆಯ ಮೂಲಕ ಮೈಸೂರು ಬ್ಯಾಂಕ್ ವೃತ್ತದವರೆಗೆ ಎಲ್ಲ ಮಾದರಿಯ ವಾಹನ ಸಂಚಾರ ನಿಷೇಧಿಸಲಾಗಿದೆ. ಉತ್ಸವದ ಮೆರವಣಿಗೆ ಅವೆನ್ಯೂ ರಸ್ತೆ ಪ್ರವೇಶಿಸುತ್ತಿದ್ದಂತೆ, ಎ.ಎಸ್.ಚಾರ್ ರಸ್ತೆಯಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಎಸ್.ಜೆ.ಪಿ ರಸ್ತೆಯಿಂದ ಎನ್.ಆರ್ ವೃತ್ತದ ಕಡೆಗೆ ಹೋಗಲು ಪಿ.ಕೆ. ಲೇನ್ ಬಳಿ ಎಡ ತಿರುವು ಪಡೆಯುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಉತ್ಸವದ ಮೆರವಣಿಗೆಯು ಅವೆನ್ಯೂ ರಸ್ತೆಯನ್ನು ಪ್ರವೇಶಿಸುತ್ತಿದಂತೆ ಮೆಡಿಕಲ್ ಕಾಲೇಜು
ಕಡೆಯಿಂದ ಮಾರ್ಕೆಟ್ ವೃತ್ತದ ಕಡೆಗೆ ಬರುವ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ನಿರ್ಬಂಧಿಸಲಾದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಎಸ್‌ಜೆಪಿ ರಸ್ತೆ -ಟೌನ್‌ಹಾಲ್, ಕೆಂಪೇಗೌಡ ರಸ್ತೆ ಮಾರ್ಗವಾಗಿ ತೆರಳಬಹುದು. ಮೈಸೂರು ರಸ್ತೆಯ ಎ.ಎಸ್.ಎಚ್ ರಸ್ತೆಯಲ್ಲಿ ಬಲ ತಿರುವು ರಾಯನ್ ವೃತ್ತದ‌ ಮೂಲಕ ಸಂಚರಿಸಬಹುದು. ಚಾಮರಾಜಪೇಟೆ ಕಡೆಯಿಂದ ಬರುವ ವಾಹನಗಳು ಪ್ರೊ. ಶಿವಶಂಕರ ವೃತ್ತದ ಮೂಲಕ ಜೆ.ಸಿ ರಸ್ತೆಯನ್ನು ಪ್ರವೇಶಿಸಿ ಟೌನ್‌ಹಾಲ್ ಕಡೆಗೆ ಸಂಚರಿಸಬಹುದು.

ವಾಹನಗಳ ಪಾರ್ಕಿಂಗ್ ಸ್ಥಳಗಳು

ಕರಗ ಉತ್ಸವಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಬನ್ನಪ್ಪ ಪಾರ್ಕ್ ಹಾಗೂ‌ ಪುರಭವನ, ಬಿ.ಬಿ.ಎಂ.ಪಿ ಮಾರ್ಕೆಟ್ ಕಾಂಪ್ಲೆಕ್ಸ್, ಇಲ್ಲಿ ನಿಲುಗಡೆ ಮಾಡಬಹುದಾಗಿರುತ್ತದೆ.

ಪಾರ್ಕಿಂಗ್ ನಿರ್ಬಂಧಿಸಲಾದ ಸ್ಥಳಗಳು

ಪಿ.ಕೆ ಲೈನ್, ಓ.ಟಿ.ಸಿ ರಸ್ತೆ, ಎಸ್ಪಿ ರಸ್ತೆ , ಕಬ್ಬನ್‌ಪೇಟೆ ರಸ್ತೆ, ಸುಣ್ಣಕಲ್ ಪೇಟೆ ರಸ್ತೆ, ಎಸ್.ಜೆ.ಪಿ. ಸಿಟಿ ಮಾರ್ಕೆಟ್ ಸರ್ಕಲ್, ಎಸ್.ಜೆ.ಪಿ ರಸ್ತೆ, ಅವೆನ್ಯೂ ರಸ್ತೆ , ಎ.ಎಸ್.ಚಾರ್ ಸ್ಟ್ರೀಟ್ ನಿಂದ ಮಾರ್ಕೆಟ್ ಸರ್ಕಲ್‌ವರೆಗೆ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ.

ಇದನ್ನೂ ಓದಿ: Karnataka Weather : ಬೆಂಗಳೂರು ಕರಗಕ್ಕೆ ಅಡ್ಡಿಯಾಗುತ್ತಾ ಮಳೆ; ಮತ್ತೆ ಬಿಸಿ ಗಾಳಿ ಎಚ್ಚರಿಕೆ ಕೊಟ್ಟ ತಜ್ಞರು

Continue Reading
Advertisement
Karnataka Weather
ಕರ್ನಾಟಕ14 mins ago

Karnataka Weather: ಇಂದು ಬೀದರ್, ಕಲಬುರಗಿ ಸೇರಿ ಹಲವೆಡೆ ಶಾಖದ ಅಲೆ ಎಚ್ಚರಿಕೆ; ಇನ್ನೂ ಎಲ್ಲಿಯವರೆಗೆ ಈ ರಣ ಬಿಸಿಲು?

Tooth Decay
ಆರೋಗ್ಯ44 mins ago

Tooth Decay: ನಮ್ಮ ಈ ದುರಭ್ಯಾಸಗಳು ಹಲ್ಲಿನ ಹುಳುಕಿಗೆ ಕಾರಣವಾಗುತ್ತವೆ

dina bhavishya read your daily horoscope predictions for April 29 2024
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

love jihad
ಕರ್ನಾಟಕ7 hours ago

Love Jihad Case: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್; ಬಾಲಕಿಯನ್ನು ಪುಸಲಾಯಿಸಿ ಕರೆತಂದ ಅನ್ಯಕೋಮಿನ ಯುವಕ!

BUS
ಕರ್ನಾಟಕ7 hours ago

ಚಿಕ್ಕಮಗಳೂರಿನ ದತ್ತಪೀಠದಲ್ಲಿ 100 ಅಡಿ ಆಳಕ್ಕೆ ಬಿದ್ದ ಪ್ರವಾಸಿ ಬಸ್;‌ ಬಾಲಕ ಸಾವು, 29 ಮಂದಿಗೆ ಗಾಯ

ತುಮಕೂರು7 hours ago

Sira News: ಬಿಸಿಲ ಬೇಗೆಗೆ ಮತ್ಸ್ಯಗಳ ಮಾರಣಹೋಮ; ನೀರಿಲ್ಲದೇ ವಿಲವಿಲನೇ ಒದ್ದಾಡಿ ಸಾವಿರಾರು ಮೀನುಗಳ ಸಾವು

CSK vs SRH
ಕ್ರೀಡೆ7 hours ago

CSK vs SRH: ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ ಚೆನ್ನೈ; ಹೈದರಾಬಾದ್​ ವಿರುದ್ಧ 78 ರನ್​ ಅಮೋಘ ಜಯ

Notes
ಕರ್ನಾಟಕ7 hours ago

ಬೆಂಗಳೂರಿನಲ್ಲಿ ಆರ್‌ಬಿಐ ನಿಯಮ ಉಲ್ಲಂಘಿಸಿ ನೋಟು ನಗದೀಕರಣ; ಇಬ್ಬರಿಗೆ 4 ವರ್ಷ ಜೈಲು!

Narendra Modi
Lok Sabha Election 20247 hours ago

Narendra Modi: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಪ್ರಭಾವ ಸ್ಪಷ್ಟ; ಪುನರುಚ್ಚರಿಸಿದ ಮೋದಿ

cet exam karnataka exam authority
ಕರ್ನಾಟಕ8 hours ago

CET 2024: ಸಿಇಟಿ ಔಟ್ ಆಫ್ ಸಿಲಬಸ್ ಪ್ರಶ್ನೆ ಕೈ ಬಿಡಲು ನಿರ್ಧಾರ, ಮರು ಪರೀಕ್ಷೆ ಇಲ್ಲ; ಅಂಕ ಪರಿಗಣನೆ ಹೇಗೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 29 2024
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202414 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202416 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 202418 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202419 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ22 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ2 days ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

ಟ್ರೆಂಡಿಂಗ್‌