Krishna janmastami: ಕೃಷ್ಣ ಜನ್ಮಾಷ್ಟಮಿಯ ಫೋಟೋಶೂಟ್‌‌ಗೆ ಇಲ್ಲಿದೆ 4 ಐಡಿಯಾ - Vistara News

ಶ್ರೀ ಕೃಷ್ಣ ಜನ್ಮಾಷ್ಟಮಿ

Krishna janmastami: ಕೃಷ್ಣ ಜನ್ಮಾಷ್ಟಮಿಯ ಫೋಟೋಶೂಟ್‌‌ಗೆ ಇಲ್ಲಿದೆ 4 ಐಡಿಯಾ

Krishna janmastami: ಇನ್ನೇನು ಕೃಷ್ಣಜನ್ಮಾಷ್ಟಮಿ ಸಮೀಪಿಸುತ್ತಿದೆ. ಆಗಲೇ ಎಲ್ಲೆಡೆ ಬಾಲಗೋಪಾಲನ ನಾನಾ ಅವತಾರಗಳ ಫೋಟೋಶೂಟ್‌ಗಳು ಆರಂಭಗೊಂಡಿದೆ. ಮುದ್ದು ಬೆಣ್ಣೆ ಕೃಷ್ಣನಿಂದಿಡಿದು, ರಾಧಾ-ಕೃಷ್ಣರ ಅಂದದ ಪೋಟ್ರೈಟ್‌ಗಳಿಗೆ ಮಾನ್ಯತೆ ಹೆಚ್ಚಾಗಿದೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Here are 4 ideas for krishna janmashtami photoshoot
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೃಷ್ಣಜನ್ಮಾಷ್ಟಮಿ (Krishna janmastami) ಸಮೀಪಿಸುತ್ತಿದೆ. ಆಗಲೇ ಎಲ್ಲೆಡೆ ಕೃಷ್ಣನ ನಾನಾ ಅವತಾರಗಳ ಫೋಟೋಶೂಟ್‌ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ, ಎಲ್ಲೆಡೆ ಕೃಷ್ಣಜನ್ಮಾಷ್ಟಮಿ ಥೀಮ್‌ ಫೋಟೋಶೂಟ್‌ ಟ್ರೆಂಡಿಯಾಗಿದೆ.

Here are 4 ideas for krishna janmashtami photoshoot
Here are 4 ideas for krishna janmashtami photoshoot

ಕೃಷ್ಣನ ಅವತಾರಕ್ಕೂ ಫೋಟೋಶೂಟ್‌ :

“ಪ್ರತಿ ಮನೆಯಲ್ಲೂ ಮಕ್ಕಳಿಗೆ ಒಮ್ಮೆಯಾದರೂ ಸರಿಯೇ! ಕೃಷ್ಣ ಅಥವಾ ರಾಧೆಯ ಅವತಾರವನ್ನು ಹಾಕಿಸಿರುತ್ತಾರೆ. ಫೋಟೋ ತೆಗೆಸಿ ಸಂತಸ ಪಟ್ಟಿರುತ್ತಾರೆ. ಬಾಲ ಕೃಷ್ಣನಿಂದಿಡಿದು ರಾಧಾ-ಕೃಷ್ಣನಂತೆ ಫೋಟೋಶೂಟ್‌ ಮಾಡಿಸುವುದು ಹೆಚ್ಚಾಗಿದೆ. ಈ ಕಾನ್ಸೆಪ್ಟ್ ಇದೀಗ ಮತ್ತಷ್ಟು ಬೆಳವಣಿಗೆ ಕಂಡಿದೆ. ಚಿಣ್ಣರಿಗೆ ಮಾತ್ರವಲ್ಲ, ಇದೀಗ ಟೀನೇಜ್‌ ಹುಡುಗ-ಹುಡುಗಿಯರು ಕೂಡ ರಾಧಾ-ಕೃಷ್ಣರ ಫೋಟೋಶೂಟ್‌ ಮಾಡಿಸಲಾರಂಭಿಸಿದ್ದಾರೆ.

Here are 4 ideas for krishna janmashtami photoshoot
Here are 4 ideas for krishna janmashtami photoshoot

ಇದಕ್ಕೆ ಪೂರಕ ಎಂಬಂತೆ, ಪೌರಾಣಿಕ ಹಿನ್ನೆಲೆಯ ಫೋಟೋಶೂಟ್‌ ಮಾಡುವ ಫೋಟೋಗ್ರಾಫರ್ಸ್ ಕೂಡ ಸುಲಭವಾಗಿ ದೊರೆಯುತ್ತಿದ್ದಾರೆ. ಪ್ರಿ ಹಾಗೂ ವೆಡ್ಡಿಂಗ್‌ ಶೂಟ್‌ ಮಾಡುವವರು ಒಂದು ಹೆಜ್ಜೆ ಮುಂದೆ ಹೋಗಿ, ಈ ಕಾನ್ಸೆಪ್ಟ್ಗಳಿಗೂ ಫೋಟೋಶೂಟ್‌ ಮಾಡಿಕೊಡುತ್ತಿದ್ದಾರೆ. ಹಾಗಾಗಿ ಕೃಷ್ಣಜನ್ಮಾಷ್ಟಮಿಯ ಫೋಟೋಶೂಟ್‌ ಇತ್ತೀಚೆಗೆ ಹೆಚ್ಚಾಗಿದೆ ಎನ್ನುತ್ತಾರೆ ಫೋಟೋಗ್ರಾಫರ್‌ .

Here are 4 ideas for krishna janmashtami photoshoot

ಜನ್ಮಾಷ್ಟಮಿ ಫೋಟೋಶೂಟ್‌ ಪ್ಯಾಕೇಜ್‌ :

ಪ್ರತಿ ವರ್ಷವೂ ಕೃಷ್ಣನ ಫೋಟೋಶೂಟ್‌ಗಾಗಿಯೇ ಸಾಕಷ್ಟು ಸ್ಟುಡಿಯೋಗಳು ಪ್ಯಾಕೇಜ್‌ ರೀತಿಯಲ್ಲಿ ಸೌಲಭ್ಯಗಳನ್ನು ನೀಡುತ್ತವೆ. ಅಲ್ಲದೇ ಕೃಷ್ಣನ ಅಲಂಕಾರಕ್ಕೆ ಬೇಕಾಗಿರುವ ಎಲ್ಲಾ ಬಗೆಯ ಅಲಂಕಾರಿಕ ಸಾಮಗ್ರಿಗಳನ್ನು ಒದಗಿಸುತ್ತವೆ. ಅಷ್ಟೇಕೆ? ಈ ಪ್ಯಾಕೇಜ್‌ನಲ್ಲಿ ಫೋಟೋಗ್ರಾಫರ್‌ನಿಂದಿಡಿದು, ಬಾಡಿಗೆಗೆ ಫೋಟೋ ಕ್ಲಿಕ್ಕಿಸುವ ಸ್ಥಳ ಅಂದರೇ, ಸ್ಟಾಟ್‌ ಸೇರಿದಂತೆ ಎಲ್ಲವನ್ನೂ ಪ್ಯಾಕೇಜ್‌ಗೆ ತಕ್ಕಂತೆ ಒದಗಿಸುತ್ತವೆ. ಹಣ ನೀಡಿದರಾಯಿತಷ್ಟೇ! ಎನ್ನುತ್ತಾರೆ ಬಾಲಕೃಷ್ಣನ ಫೋಟೋಶೂಟ್‌ ಮಾಡಿಸಿದ ಪೋಷಕರಾದ ಕಿರಣ್‌ ಹಾಗೂ ಲಕ್ಷ್ಮಿ.

Here are 4 ideas for krishna janmashtami photoshoot

ಕೃಷ್ಣ ಜನ್ಮಾಷ್ಟಮಿ ಫೋಟೋಶೂಟ್‌ಗೆ 4 ಐಡಿಯಾ :

· ಆನ್‌ಲೈನ್‌ನಲ್ಲೂ ಸಾಕಷ್ಟು ಫೋಟೋ ಸ್ಟುಡಿಯೋಗಳು ಬಜೆಟ್‌ ಫ್ರೆಂಡ್ಲಿ ಜನ್ಮಾಷ್ಟಮಿ ಫೋಟೋಶೂಟ್‌ ಪ್ಯಾಕೇಜ್‌ ನೀಡುತ್ತವೆ ಉಪಯೋಗಿಸಿಕೊಳ್ಳಿ.
· ಆಯಾ ವಯಸ್ಸಿಗೆ ತಕ್ಕಂತೆ ಥೀಮ್‌ ಆಯ್ಕೆ ಮಾಡಿ, ಸ್ಟೈಲಿಂಗ್‌ ಮಾಡಿ.
· ಫೋಟೋ ಕಾಂಪಿಟೇಷನ್‌ಗೆ ಕಳುಹಿಸುವುದಾದಲ್ಲಿ, ಪ್ರೊಫೆಷನಲ್‌ ಫೋಟೋಗ್ರಾಫಿ ಮಾಡಿಸಿ.
· ನೀವೇ ಖುದ್ದು ಫೋಟೋಶೂಟ್‌ ಮಾಡುವುದಾದಲ್ಲಿ ಬಾಡಿಗೆಗೆ
ಔಟ್‌ಫಿಟ್ಸ್ ಪಡೆದು ಮಾಡಿ. ಖರ್ಚು ಕಡಿಮೆಯಾಗುವುದು.

Here are 4 ideas for krishna janmashtami photoshoot
Here are 4 ideas for krishna janmashtami photoshoot

( ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Krishna Janmashtami: ವೃಂದಾವನ, ಮಥುರಾ ಪ್ರವಾಸ: ಕೃಷ್ಣನೂರಿಗೆ ಪಯಣ ಬೆಳೆಸಿದರೆ, ಇವನ್ನು ನೋಡಲು ಮರೆಯದಿರಿ!

ಉತ್ತರ ಪ್ರದೇಶದ ವೃಂದಾವನ ಮಥುರಾಗಳಲ್ಲಿ ಪ್ರವಾಸ ಮಾಡುವ ಕನಸಿದ್ದವರು ಅಲ್ಲಿ ಯಾವೆಲ್ಲ ಜಾಗಗಳನ್ನು ನೋಡಿ ಬರಬಹುದು (Travel guide) ಎಂಬುದನ್ನು ನೋಡೋಣ ಬನ್ನಿ.

VISTARANEWS.COM


on

krishna janmabhoomi
Koo

ಶ್ರೀಕೃಷ್ಣನೆಂದರೆ ದ್ವಾರಕೆ (Krishna Janmashtami) ಎಂದು ಆತನ ದರ್ಶನ ಪಡೆಯಲು ದ್ವಾರಕೆಗೆ ಹೋಗುವ ಮಂದಿ ಒಂದೆಡೆಯಾದರೆ, ಉತ್ತರ ಪ್ರದೇಶದ ಮಥುರಾ, ವೃಂದಾವನಗಳೂ ಕೂಡಾ ಕೃಷ್ಣಭಕ್ತರ ತವರು. ಇಲ್ಲಿ ಶ್ರೀಕೃಷ್ಣ ತನ್ನ ಬಾಲ್ಯ ಕಳೆದ ವೃಂದಾವನವನ್ನು, ಮಥುರೆಯನ್ನೂ (Mathura travel) ನೋಡಿ ಬರುವುದು ಬಹುತೇಕ ಕೃಷ್ಣನ ಭಕ್ತರ ಜೀವಿತಾವಧಿಯ ಕನಸುಗಳಲ್ಲಿ ಒಂದು. ಉತ್ತರ ಪ್ರದೇಶದ ವೃಂದಾವನ ಮಥುರಾಗಳಲ್ಲಿ ಪ್ರವಾಸ ಮಾಡುವ ಕನಸಿದ್ದವರು ಅಲ್ಲಿ ಯಾವೆಲ್ಲ ಜಾಗಗಳನ್ನು ನೋಡಿ ಬರಬಹುದು (Travel guide) ಎಂಬುದನ್ನು ನೋಡೋಣ ಬನ್ನಿ.

prem mandir vrindavan
kamsa kila matura

ಪ್ರೇಮಮಂದಿರ, ವೃಂದಾವನ: ಕೃಷ್ಣನ ಬಹು ಪ್ರಸಿದ್ಧ ದೇವಾಲಯಗಳಲ್ಲಿ ಪ್ರೇಮಮಂದಿರವೂ ಒಂದು. ಇಲ್ಲಿನ ಗೋಡೆಗಳಲ್ಲಿರುವ ಅತ್ಯಾಕರ್ಷನ ಚಿತ್ರಕಲೆಯು ಭಕ್ತಾದಿಗಳನ್ನು ತನ್ನೆಡೆಗೆ ಸೆಳೆಯುತ್ತದೆ. ರಾತ್ರಿ ಅತ್ಯದ್ಭುತ ಲೈಟಿಂಗ್‌ ವ್ಯವಸ್ಥೆಯನ್ನೂ ಇಲ್ಲಿ ಮಾಡುವುದರಿಂದ ರಾತ್ರಿ ಇಲ್ಲಿಗೆ ಭೇಟಿ ನೀಡುವುದು ಅದ್ಭುತ ಅನುಭವವನ್ನು ನೀಡುತ್ತದೆ. ಇದಲ್ಲದೆ, ಇಸ್ಕಾನ್‌ನಿಂದ ನಿರ್ಮಿತವಾದ ಶ್ರೀಕೃಷ್ಣ ಬಲರಾಮ ಮಂದಿರವೂ ಕೂಡಾ ವೃಂದಾವನದ ಪ್ರಮುಖ ಆಕರ್ಷಣೆಗಳಲ್ಲೊಂದು.

nidhivana
kamsa kila matura

ನಿಧಿವನ, ವೃಂದಾವನ: ನಿಧಿವನವೆಂದರೆ ಒಂದು ಪುಟ್ಟ ಕಾಡು. ಇಲ್ಲಿನ ಮರಗಳೇ ಒಂದು ವಿಶಿಷ್ಟ ಬಗೆಯಂಥವು. ವೃಂದಾವನ ನಗರಿಯೊಳಗೇ ಇರುವ ಈ ನಿಧಿವನದ ಬಗ್ಗೆ ಈ ಊರ ಮಂದಿಯಲ್ಲಿ ವಿಶಿಷ್ಟ ನಂಬಿಕೆಯಿದೆ. ಶ್ರೀಕೃಷ್ಣ ಗೋಪಿಕೆಯರ ಜೊತೆ ರಾಸಲೀಲೆಯಾಡುತ್ತಿದ್ದ ಜಾಗ ಇದೆಂದೂ, ಇಂದಿಗೂ ಕೃಷ್ಣ ಇಲ್ಲಿಗೆ ರಾಸಲೀಲೆಯಾಡಲು ಭೇಟಿ ನೀಡುತ್ತಾನೆಂದೂ ನಂಬಿರುವ ಜನತೆ, ಈ ನಿಧಿವನದ ಕಡೆಗಿರುವ ತಮ್ಮ ಮನೆಗಳ ಕಿಟಕಿ ಬಾಗಿಲುಗಳನ್ನು ಕತ್ತಲಾದೊಡನೆ ಮುಚ್ಚಿಕೊಳ್ಳುವ ಆಚರಣೆಯಿದೆ. ಕತ್ತಲಾದರೆ, ನಿಧಿವನದ ಕಡೆ ನೋಡಬಾರದೆಂದೂ ಇಲ್ಲಿನ ಮಂದಿ ಅಘೋಷಿತ ನಿಯಮ. ಇನ್ನೂ ಕೆಲವರ ಪ್ರಕಾರ, ಶ್ರೀಕೃಷ್ಣ ಗೋಪಿಕೆಯರ ಜೊತೆಗೆ ಇಲ್ಲಿ ರಾಸಲೀಲೆಯಾಡುವುದನ್ನು ನೋಡಿದ ರಾಧೆ, ಆತನ ನಡವಳಿಕೆಯಿಂದ ಬೇಸತ್ತು, ಇಲ್ಲಿಗೆ ಬಂದವರು ಸಮಸ್ಯೆಗೆ ಸಿಲುಕುತ್ತಾರೆಂದೂ, ಇಲ್ಲಿ ಹಕ್ಕಿ ಪಿಕ್ಕಿಗಳ್ಯಾವುದೂ ಬರಬಾರದೆಂದೂ, ಸೂರ್ಯನ ಬೆಳಕೂ ಸುಳಿಯದಂತೆ ಕತ್ತಲು ಕವಿದಿರಲಿ ಎಂದೂ ಶಾಪವಿತ್ತಳು ಎಂಬ ಕಥೆಯೂ ಇದೆ. ಇನ್ನೂ ಕೆಲವರ ಪ್ರಕಾರ, ಶ್ರೀಕೃಷ್ಣನೂ ರಾಧೆಯೂ ಇಲ್ಲಿ ಖಾಸಗಿ ಸಮಯ ಕಳೆಯುವುದರಿಂದ ಯಾರಿಗೂ ಕತ್ತಲಾದ ಮೇಲೆ ಇಲ್ಲಿಗೆ ಪ್ರವೇಶವಿಲ್ಲ ಎಂದೂ ಹೇಳಲಾಗುತ್ತದೆ. ಒಟ್ಟಿನಲ್ಲಿ ನಿಧಿವನವೆಂದರೆ ಇದಿಗೂ ರಹಸ್ಯವೇ!

mathura krishna temple
kamsa kila matura

ಶ್ರೀಕೃಷ್ಣ ಜನ್ಮಸ್ಥಾನ, ಮಥುರಾ: ಜನ್ಮಭೂಮಿ ಹೆಸರಿನಲ್ಲೇ ಕರೆಯಲ್ಪಡುವ ಈ ದೇಗುಲದೊಳಗೆ ಕೃಷ್ಣ ಹುಟ್ಟಿದನೆನ್ನಲಾದ ಸೆರೆಮನೆಯೂ ಇದೆ. ಇದೇ ಸ್ಥಳದಲ್ಲಿ ಸೆರೆಮನೆಯಲ್ಲಿ ಕೃಷ್ಣ ಜನಿಸಿದ ಎಂದು ಇಲ್ಲಿನ ಸ್ಥಳಪುರಾಣವು ಹೇಳುತ್ತದೆ. ಜನ್ಮಾಷ್ಠಮಿಯ ಸಂದರ್ಭ ಇಲ್ಲಿಗೆ ಭೇಟಿ ನೀಡುವುದು ವಿಶೇಷ. ದೇವಸ್ಥಾನಕ್ಕೆ ಅಂಟಿಕೊಂಡಂತೆ ಔರಂಗಜೇಬನು ಕಟ್ಟಿಸಿದ ಈದ್ಗಾ ಮಸೀದಿಯನ್ನೂ ಇಲ್ಲಿ ಕಾಣಬಹುದು.

Dwarkadhish Temple, Mathura
kamsa kila matura

ಶ್ರೀದ್ವಾರಕಾಧೀಶ ದೇವಸ್ಥಾನ, ಮಥುರಾ: ಇದು ಮಥುರಾದ ಅತ್ಯಂತ ಹಳೆಯ ಹಾಗೂ ಅತ್ಯಂತ ದೊಡ್ಡ ದೇವಸ್ಥಾನಗಳಲ್ಲಿ ಒಂದು. ಇದು ವಿಶ್ರಾಮ್‌ ಘಾಟ್‌ನ ಬಳಿಯಲ್ಲೇ ಇದ್ದು ಇದನ್ನು ೧೮೧೪ರಲ್ಲಿ ನಿರ್ಮಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಕೃಷ್ಣ ಜನ್ಮಾಷ್ಠಮಿ ಹಾಗೂ ಹೋಳಿ ಹಬ್ಬದ ಸಂದರ್ಭಗಳಲ್ಲಿ ಈ ದೇಗುಲದಲ್ಲಿ, ವಿಶೇಷ ಪೂಜೆ ಸಂಭ್ರಮಾಚರಣೆಗಳು ನಡೆಯುತ್ತದೆ.

kamsa kila matura
kamsa kila matura

ಕಂಸ ಕಿಲಾ, ಮಥುರಾ: ಮಥುರೆಯ ರಾಜ ಕಂಸನ ಅರಮನೆಯೆಂದು ಹೇಳಲಾಗುವ ಕೋಟೆ ಇಲ್ಲಿನ ಕೃಷ್ಣ ಗಂಗಾ ಘಾಟ್‌ ಹಾಗೂ ಗೋಘಾಟ್‌ನ ಬಳಿ ಇದೆ. ಇಲ್ಲಿ ಹಿಂದೂ ಹಾಗೂ ಮುಸ್ಲಿಂ ಶೈಲಿಯ ಮಿಶ್ರಣವಿರುವ ಕೋಟೆಯನ್ನು ಕಾಣಬಹುದು.

ನಂದಗಾಂವ್‌, ಮಥುರಾ: ನಂದಗಾಂವ್‌ ಎಂಬ ಪುಟ್ಟ ಹಳ್ಳಿ ರಾಧೆಯ ಊರು ಬರ್ಸಾನಾದಿಂದ ೮ ಕಿಮೀ ದೂರದಲ್ಲಿದೆ. ಇಲ್ಲಿ ಕೃಷ್ಣ ಆಟವಾಡಿಕೊಂಡು ತನ್ನ ಸಾಕು ತಾಯಿ ಯಶೋಧೆ ಹಾಗೂ ನಂದನ ಮನೆಯಲ್ಲಿ ಬೆಳೆದ ಎಂದು ಪುರಾಣದ ಕಥೆಗಳು ಹೇಳುತ್ತವೆ. ಕೃಷ್ಣನ ಬಾಲಲೀಲೆಗಳಿರುವ ನಂದಗೋಕುಲ ಇದೇ. ಹೋಳಿ ಹಾಗೂ ಜನ್ಮಾಷ್ಠಮಿಯ ಸಂದರ್ಭ ಭಕ್ತರು ನಂದಗಾಂವ್‌ನಲ್ಲಿ ನೆರೆಯುತ್ತಾರೆ.

ಕೇವಲ ಇಷ್ಟೇ ಅಲ್ಲ, ಮಥುರಾ, ವೃಂದಾವನದ ಗಲ್ಲಿಗಲ್ಲಿಗಳೂ ಕೃಷ್ಣನ, ರಾಧೆಯ ಕಥೆ ಹೇಳುತ್ತವೆ. ಅಲ್ಲಿಯ ಘಾಟ್‌ಗಳು, ರಸ್ತೆರಸ್ತೆಯಲ್ಲೂ ಎಡತಾಕುವ ದೇವಸ್ಥಾನಗಳು, ಕೃಷ್ಣರಾಧೆಯರ ಹೆಸರನ್ನೇ ಹೇಳುತ್ತವೆ. ಒಂದಿಷ್ಟು ದಿನಗಳು ಮಥುರೆ, ವೃಂದಾವನದಲ್ಲಿ ಕಳೆಯುವ ಸಮಯವೂ ಇರಬೇಕು ಅಷ್ಟೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀಕೃಷ್ಣ; ತಾನು ದೇವರೆನ್ನುತ್ತಲೇ ಮನುಷ್ಯರೊಡನೆ ಒಡನಾಡಿದವ

Continue Reading

ಕರ್ನಾಟಕ

ಉರ್ದು ಶಾಲೆಯಲ್ಲಿ ಜನ್ಮಾಷ್ಟಮಿ; ಕೃಷ್ಣ, ರಾಧೆ, ರುಕ್ಮಿಣಿಯರ ವೇಷದಲ್ಲಿ ಗಮನ ಸೆಳೆದ ಮಕ್ಕಳು

ಮುಸ್ಲಿಂ ಮಕ್ಕಳೇ ಹೆಚ್ಚಿರುವ ಶಾಲೆಯಲ್ಲಿ ಕೃಷ್ಣ, ರಾಧೆ, ರುಕ್ಮಿಣಿಯರ ವೇಷಭೂಷಣ ತೊಟ್ಟು, ಗ್ರಾಮದ ಮುಖ್ಯ ಬೀದಿಗಳಲ್ಲಿ ಸಾಮೂಹಿಕವಾಗಿ ಹೆಜ್ಜೆ ಹಾಕುವ ಮೂಲಕ ನೋಡುಗರ ಗಮನ ಸೆಳೆದರು.

VISTARANEWS.COM


on

ಜನ್ಮಾಷ್ಟಮಿ
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೆಯರ ವೇಷಭೂಷಣಗಳಿಂದ ಗಮನ ಸೆಳೆದರು.
Koo

ವಿಜಯನಗರ: ರಾಜ್ಯದಲ್ಲಿ ಧರ್ಮ ಸಂಘರ್ಷ, ಕೋಮುಗಲಭೆಗಳು ನಡೆಯುತ್ತಿರುವ ನಡುವೆ ಉರ್ದು ಶಾಲೆಯೊಂದರಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಲಾಗಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಹಿಂದೂ – ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಶಾಲೆಯಲ್ಲಿ 94 ಜನ ವಿದ್ಯಾರ್ಥಿಗಳು ಓದುತ್ತಿದ್ದು, ಅದರಲ್ಲಿ 83 ವಿದ್ಯಾರ್ಥಿಗಳು ಮುಸ್ಲಿಮರಿದ್ದಾರೆ. ಉಳಿದ 11 ಜನ ಇತರ ಜಾತಿಯ ಮಕ್ಕಳಿದ್ದಾರೆ. ಆದರೆ ಮುಸ್ಲಿಂ ಮಕ್ಕಳೇ ಹೆಚ್ಚಿರುವ ಶಾಲೆಯಲ್ಲಿ ಕೃಷ್ಣ, ರಾಧೆ, ರುಕ್ಮಿಣಿಯರ ವೇಷಭೂಷಣ ತೊಟ್ಟು, ಗ್ರಾಮದ ಮುಖ್ಯ ಬೀದಿಗಳಲ್ಲಿ ಸಾಮೂಹಿಕವಾಗಿ ಹೆಜ್ಜೆ ಹಾಕುವ ಮೂಲಕ ನೋಡುಗರ ಗಮನ ಸೆಳೆದರು.

ಮುಖ್ಯ ಶಿಕ್ಷಕ ಎಲ್.ರೆಡ್ಡಿ ನಾಯ್ಕ ಮಾತನಾಡಿ, ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳು ಸೇರಿ ಎಲ್ಲ ಹಬ್ಬಗಳನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಇದಕ್ಕೆಲ್ಲ ಗ್ರಾಮಸ್ಥರು, ಶಾಲೆಯ ವಿದ್ಯಾರ್ಥಿಗಳ ಪಾಲಕರ ಸಹಕಾರ ಇದ್ದು, ಈ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನೂ ವಿಶೇಷವಾಗಿ ಆಚರಿಸಲಾಗಿದೆ ಎಂದರು.

ಎಸ್‌ಡಿಎಂಸಿ ಸದಸ್ಯರಾದ ರೇಷ್ಮಾ, ಗುಲ್ಜರ್, ಹಜರತ್ ಬೇಗಂ, ಶಿಕ್ಷಕಿಯರಾದ ಶಾಕೀರಾ ಬೇಗಂ, ಶೇಖ್ ಮುಮ್ತಾಜ್, ಗೌರವ ಶಿಕ್ಷಕರಾದ ಶಬೀನಾ, ಸಕ್ರಹಳ್ಳಿ ರವಿಕುಮಾರ್ ಇದ್ದರು.

ಇದನ್ನೂ ಓದಿ | Krishna Janmashtami | ವಿಟ್ಲಪಿಂಡಿಯೊಂದಿಗೆ ಉಡುಪಿ ಕೃಷ್ಣಜನ್ಮಾಷ್ಟಮಿ ಸಂಭ್ರಮ ಸಂಪನ್ನ

Continue Reading

ಉಡುಪಿ

ಉಡುಪಿ ಶ್ರೀಕೃಷ್ಣನಿಗೆ ಇಂದು ಸಂಭ್ರಮದ ಲೀಲೋತ್ಸವ

ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಶ್ರೀಕೃಷ್ಣನಿಗೆ ಪರ್ಯಾರ ಶ್ರೀ ವಿದ್ಯಾಸಾಗರ ತೀರ್ಥರು ಅರ್ಘ್ಯಪ್ರಧಾನ ಮಾಡಿದರು.

VISTARANEWS.COM


on

udupi
Koo

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಪರ್ಯಾಯ ಪೀಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರು ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರಧಾನ ಮಾಡಿದರು.

ಹಾಲು ಹಾಗೂ ನೀರಿನ ಮೂಲಕ ಶ್ರೀಗಳು ಚಂದ್ರನಿಗೆ ಹಾಗೂ ಕೃಷ್ಣ ದೇವರಿಗೆ ಅರ್ಘ್ಯ ಸಮರ್ಪಣೆ ಮಾಡಿದರು. ಅರ್ಘ್ಯ ಸಮರ್ಪಣೆ ಬಳಿಕ ಉಂಡೆ, ಚಕ್ಕುಲಿ ಇತ್ಯಾದಿಗಳನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದರು. ಮಹಾಮಂಗಳಾರತಿ, ಶ್ರೀಕೃಷ್ಣನಿಗೆ ಅರ್ಘ್ಯ ಸಮರ್ಪಣೆ ಸಂದರ್ಭ ಮಠದ ಅರ್ಚಕರು ಹಾಗೂ ಭಕ್ತರು ಉಪಸ್ಥಿತರಿದ್ದು ದೇವರ ದರ್ಶನ ಪಡೆದರು.

ಈ ವೇಳೆ ಖ್ಯಾತ ಖಳ ನಟ ರವಿಶಂಕರ್ ಅವರು ಶ್ರೀ ಕೃಷ್ಣನ ದರ್ಶನ ಪಡೆದರು. ಶ್ರೀಕೃಷ್ಣನಿಗೆ ವೈಭವದ ಲೀಲೋತ್ಸವ ಇವತ್ತು (ಆ.20) ಮಧ್ಯಾಹ್ನ ನಡೆಯಲಿದೆ.

Continue Reading

ಕರ್ನಾಟಕ

Bhagavad Gita | 2,200 ಜನರಿಂದ ಸಾಮೂಹಿಕ ಭಗವದ್ಗೀತೆ ಪಾರಾಯಣ; ಡಲ್ಲಾಸ್‌ನಲ್ಲಿ ಗಿನ್ನೆಸ್‌ ದಾಖಲೆ

Bhagavad Gita | ಅಮೆರಿಕದ ಡಲ್ಲಾಸ್‌ನ ಅಲೆನ್ ಈವೆಂಟ್‌ ಸೆಂಟರ್‌ನಲ್ಲಿ ಮೈಸೂರಿನ ಶ್ರೀ ಅವಧೂತ ದತ್ತ ಪೀಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಗೀತಾ ಪಾರಾಯಣ ನಡೆಸಲಾಗಿದೆ.

VISTARANEWS.COM


on

ಭಗವದ್ಗೀತೆ
Koo

ಡಲ್ಲಾಸ್: ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಅಮೆರಿಕದ ಟೆಕ್ಸಾಸ್‌ ರಾಜ್ಯದ ಡಲ್ಲಾಸ್‌ನಲ್ಲಿ ಹಮ್ಮಿಕೊಂಡಿದ್ದ 2,200 ಜನರಿಂದ ಏಕಕಾಲದಲ್ಲಿ ಸಾಮೂಹಿಕ ಭಗವದ್ಗೀತೆ (Bhagavad Gita) ಕಂಠಪಾಠ ಪಾರಾಯಣ ಕಾರ್ಯಕ್ರಮ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ. ಮೈಸೂರಿನ ಶ್ರೀ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ಈ ದಾಖಲೆ ಮಾಡಲಾಗಿದೆ.

ಸನಾತನ ಧರ್ಮದ ಅತ್ಯಂತ ಶ್ರೇಷ್ಠ ಧರ್ಮಗ್ರಂಥವಾಗಿರುವ ಶ್ರೀಮದ್ ಭಗವದ್ಗೀತೆಯ ಎಲ್ಲ 700 ಶ್ಲೋಕಗಳನ್ನು ಕಂಠಪಾಠ ಮಾಡಿ, ಅದನ್ನು 2,200ಕ್ಕೂ ಅಧಿಕ ಮಂದಿ ಒಕ್ಕೊರಲಿನಲ್ಲಿ ಹೇಳುವ ಅಭೂತಪೂರ್ವ ಕಾರ್ಯಕ್ರಮವನ್ನು ಆಗಸ್ಟ್ 13ರಂದು ಡಲ್ಲಾಸ್‌ನ ಅಲೆನ್ ಈವೆಂಟ್‌ ಸೆಂಟರ್‌ನಲ್ಲಿ ಮೈಸೂರಿನ ಶ್ರೀ ಅವಧೂತ ದತ್ತ ಪೀಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಜಗತ್ತಿನ 30ಕ್ಕೂ ಅಧಿಕ ದೇಶಗಳ ಜನರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸನಾತನ ಧರ್ಮದ ವಿಶಿಷ್ಟ ಸಂದೇಶವನ್ನು ಜಗದಗಲಕ್ಕೆ ಪಸರಿಸುವ ಹಾಗೂ ಶ್ರೇಷ್ಠ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನದ ಭಾಗವಾಗಿ ಈ ಸಾಮೂಹಿಕ ಕಂಠಪಾಠ ಪಠಣ ಹೊಸ ದಾಖಲೆ ನಿರ್ಮಿಸಿದೆ.

ಇದನ್ನೂ ಓದಿ | Krishna janmastami Styling | ಮುದ್ದು ಮಕ್ಕಳಿಗೆ ಬೆಣ್ಣೆ ಕೃಷ್ಣನ ಸಿಂಗಾರ

ಪವಿತ್ರ ಧರ್ಮಗ್ರಂಥ ಭಗವದ್ಗೀತೆ, ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಕರ್ಮ, ಜ್ಞಾನದ ಕುರಿತಂತೆ ನೀಡಿದ ತಿಳಿವಳಿಕೆಯ ಭಾಗವಾಗಿರುವ ಈ ಶ್ಲೋಕಗಳನ್ನು ಕಂಠಪಾಠ ಮಾಡುವುದು ಜೀವನದಲ್ಲಿ ಅಳವಡಿಸಿಕೊಳ್ಳುವ ಒಂದು ಭಾಗ. ಭಗವದ್ಗೀತೆ ಬೋಧನೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಜಕ್ಕೂ ಜೀವನ ಸಾರ್ಥಕವಾಗಿಬಿಡುತ್ತದೆ. ಮನೆಯಲ್ಲಿ, ಮನದಲ್ಲಿ ಹಾಗೂ ದಿನನಿತ್ಯದ ಬದುಕಿನಲ್ಲಿ ಗೀತೆಯ ಸಾರವನ್ನು ಕಾಯಾ, ವಾಚಾ, ಮನಸಾ ಅನುಸರಿಸುವಂತಾಗಬೇಕು ಎಂಬ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಆಶಯದ ಫಲವಾಗಿ ಇಂತಹದ್ದೊಂದು ಪ್ರಯತ್ನ ಅಮೆರಿಕದಲ್ಲಿ ನಡೆದಿದೆ.

ಅಮೆರಿಕದಲ್ಲೇ ಏಕೆ ಈ ಕಾರ್ಯಕ್ರಮ?
‘ಉಪನಿಷತ್‌ಗಳು ಮಾನವನ ಜೀವನದ ಗುರಿ ಮತ್ತು ಉದ್ದೇಶವನ್ನು ತಿಳಿಸಿದರೆ, ಭಗವದ್ಗೀತೆಯು ಅದನ್ನು ಸಾಧಿಸುವುದು ಮತ್ತು ಸಂತೃಪ್ತಿಯ ಜೀವನ ಸಾಗಿಸುವ ಮಾರ್ಗವನ್ನು ತಿಳಿಸಿಕೊಡುತ್ತದೆ. ಭಗವದ್ಗೀತೆ ತೋರಿಸಿಕೊಟ್ಟ ದಾರಿಯಲ್ಲೇ ಮನುಷ್ಯ ಶ್ರದ್ಧೆಯಿಂದ ನಡೆದಿದ್ದೇ ಆದರೆ ಮನುಷ್ಯನ ಜೀವನ ಸಾರ್ಥಕವಾಗುತ್ತದೆ’ ಎಂಬುದು ಶ್ರೀ ಗಣಪತಿ ಸಚಿದಾನಂದ ಸ್ವಾಮೀಜಿ ಆಶಯವಾಗಿದೆ. ಇದಕ್ಕಾಗಿ ಮೈಸೂರಿನಲ್ಲಷ್ಟೇ ಅಲ್ಲದೆ ಭಾರತದ ಹಲವೆಡೆ ಹಾಗೂ ಜಗತ್ತಿನ ಹಲವೆಡೆಗಳಲ್ಲಿ ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.

ಸ್ವಾಮೀಜಿ ಅವರು ಡಲ್ಲಾಸ್‌ ಇಸ್ಕೊದಲ್ಲಿ 2015ರಲ್ಲಿ ಭವ್ಯವಾದ ಕಾರ್ಯಸಿದ್ಧಿ ಹನುಮಾನ್ ದೇವಸ್ಥಾನವನ್ನು ನಿರ್ಮಿಸಿದ್ದರು. ಮುಂದಿನ ವರ್ಷ ಮತ್ತೆ ಅಮೆರಿಕಕ್ಕೆ ಬಂದಾಗ ಈ ದೇವಸ್ಥಾನದಲ್ಲಿ ಕನಿಷ್ಠ 18 ಮಂದಿ ವಿದ್ಯಾರ್ಥಿಗಳು ಭಗವದ್ಗೀತೆಯ ಎಲ್ಲ 18 ಶ್ಲೋಕಗಳನ್ನು ಕಂಠಪಾಠ ಮಾಡಿ ಅದನ್ನು ಪಾರಾಯಣ ಮಾಡುವಂತಾಗಬೇಕು ಎಂಬುದು ಸ್ವಾಮೀಜಿ ಅವರ ಆಶಯವಾಗಿತ್ತು. ಕೇವಲ 10 ತಿಂಗಳಲ್ಲಿ ಒಟ್ಟು 43 ಮಂದಿ ವಿದ್ಯಾರ್ಥಿಗಳು ಶ್ರೀಗಳ ಕೋರಿಕೆಯನ್ನು ಸಾಕಾರಗೊಳಿಸಿದ್ದರು. ಈಗ ಡಲ್ಲಾಸ್‌ನ ಅಲೆನ್ ಈವೆಂಟ್‌ ಸೆಂಟರ್‌ನಲ್ಲಿ ಆಗಸ್ಟ್ 13ರಂದು 2,200 ಜನರಿಂದ ಸಾಮೂಹಿಕ ಭಗವದ್ಗೀತೆ ಕಂಠಪಾಠ ಪಾರಾಯಣದ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಲಾಗಿದೆ.

ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ 5 ವರ್ಷದಿಂದ 80 ವರ್ಷದೊಳಗಿನ ೨೨೦೦ ಮಂದಿ ಭಗವದ್ಗೀತೆಯ ಎಲ್ಲ 18 ಅಧ್ಯಾಯಗಳ 700 ಶ್ಲೋಕಗಳನ್ನು ಕಂಠಪಾಠ ಮಾಡಿ ಪಠಿಸಿದ್ದಾರೆ. ಜತೆಗೆ ಕುಟುಂಬಸ್ಥರು, ಸ್ನೇಹಿತರು ಸೇರಿ 7 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗೀತಾ ಪಾರಾಯಣದಲ್ಲಿ 14 ಮಂದಿ ವಿದೇಶಿಗರು ಪಾಲ್ಗೊಂಡಿದ್ದು ವಿಶೇಷವಾಗಿದೆ.

ಕಾರ್ಯಸಿದ್ಧಿ ಅಂಜನೇಯ ದೇವಸ್ಥಾನದ ವಿಶೇಷತೆ
ಅಮೆರಿಕದ ಅತ್ಯಂತ ದೊಡ್ಡ ಹಿಂದು ದೇವಸ್ಥಾನಗಳಲ್ಲಿ ಒಂದು ಎಂಬ ಖ್ಯಾತಿ ಡಲ್ಲಾಸಸ್‌ನ ಪಿಸ್ಕೊದಲ್ಲಿ ಸ್ಥಾಪನೆಯಾಗಿರುವ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನವಿದೆ. 22 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಈ ದೇವಸ್ಥಾನದ ಸಭಾಂಗಣದ ವಿಸ್ತಾರವೇ 10 ಸಾವಿರ ಚದರ ಅಡಿಯಷ್ಟಿದೆ. ಮೂರು ಸಾವಿರ ಜನರು ಕುಳಿತು ಸಾಮೂಹಿಕ ಧ್ಯಾನ, ಪಠಣ ಅಥವಾ ಧಾರ್ಮಿಕ ಆಚರಣೆಗಳನ್ನು ನಡೆಸುವಂತಹ ವ್ಯವಸ್ಥೆ ಇಲ್ಲಿದೆ. ಹೀಗಾಗಿ ಸನಾತನ ಧರ್ಮ ಪ್ರಸಾರ, ಅನುಷ್ಠಾನದಲ್ಲಿ ಈ ದೇವಸ್ಥಾನ ತನ್ನದೇ ಆದ ಕೊಡುಗೆ ನೀಡುತ್ತಿದೆ.

ಇದನ್ನೂ ಓದಿ | ರಾಜ ಮಾರ್ಗ | ಕೃಷ್ಣ ಮತ್ತು ಕೃಷ್ಣಾ ಅವರ ಮಧುರ ಸಂಬಂಧದಲ್ಲಿ ಮಿಂದೆದ್ದ ಮಹಾಭಾರತ!

Continue Reading
Advertisement
Non Vegetarian Population
ಆಹಾರ/ಅಡುಗೆ4 mins ago

Non Vegetarian Population: ಜಗತ್ತಿನಲ್ಲಿ ಕುಸಿಯುತ್ತಿದೆ ಮಾಂಸಾಹಾರಿಗಳ ಸಂಖ್ಯೆ! ಕಡಿಮೆ ಮಾಂಸಾಹಾರದ ದೇಶಗಳಲ್ಲಿ ಭಾರತವೇ ನಂ.1

Cheapest Currency
ವಾಣಿಜ್ಯ20 mins ago

Cheapest Currency: ವಿಶ್ವದಲ್ಲೇ ಅಗ್ಗದ ಕರೆನ್ಸಿ ಹೊಂದಿರುವ ದೇಶಗಳಲ್ಲಿ ಭಾರತದ 1 ರೂ.ನ ಮೌಲ್ಯ ಎಷ್ಟಾಗುತ್ತೆ ನೋಡಿ!

ಪ್ರಮುಖ ಸುದ್ದಿ28 mins ago

Vande Bharat Express: ಇನ್ನು ಮುಂದೆ ತುಮಕೂರಿನಲ್ಲೂ ನಿಲ್ಲಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು; ಟಿಕೆಟ್‌ ದರ ಎಷ್ಟು?

Health Tips
ಆರೋಗ್ಯ29 mins ago

Health Tips: ಮಲಗುವ ಮುನ್ನ ಹಾಲು, ಬೆಲ್ಲ ಸೇವಿಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ

Goodbye to black robes
ದೇಶ44 mins ago

Goodbye to black Robes: ಘಟಿಕೋತ್ಸವದಲ್ಲಿ ಧರಿಸುವ ಕಪ್ಪು ನಿಲುವಂಗಿ, ಟೋಪಿಗೆ ಗುಡ್‌ಬೈ- ಕೇಂದ್ರದಿಂದ ಮಹತ್ವದ ಘೋಷಣೆ

Kolkata Doctor Murder Case
ಕ್ರೈಂ47 mins ago

Kolkata Doctor Murder Case: ಕೋಲ್ಕತಾ ವೈದ್ಯೆಯ ಹಂತಕನಲ್ಲಿ ಕ್ರೂರ ಮೃಗದ ಲಕ್ಷಣ! ಪಶ್ಚಾತ್ತಾಪವೇ ಇಲ್ಲ

Kannada New Movie
ಬೆಂಗಳೂರು56 mins ago

Kannada New Movie: ʼಪೆನ್ ಡ್ರೈವ್ʼ ಚಿತ್ರದಲ್ಲಿ ಮಾಲಾಶ್ರೀ; ಇದು ತನಿಷಾ ಕುಪ್ಪಂಡ ಅಭಿನಯದ ಚಿತ್ರ

Viral Video
Latest1 hour ago

Viral Video: ಹೆದ್ದಾರಿ ಅಪಘಾತದಲ್ಲಿ ಕೆಳಗೆ ಬಿದ್ದ ತಂದೆ, ತಾಯಿ; ಮಗುವಿನೊಂದಿಗೆ ಬಹುದೂರ ಚಲಿಸಿದ ಬೈಕ್! ಹಳೆಯ ವಿಡಿಯೊ ಮತ್ತೆ ವೈರಲ್‌

Shreyas Patel
ಕರ್ನಾಟಕ1 hour ago

Shreyas Patel: ಸಂಸದ ಶ್ರೇಯಸ್‌ ಪಟೇಲ್‌ ಆಯ್ಕೆ ಅಸಿಂಧು ಕೋರಿ ಅರ್ಜಿ; ವಿಚಾರಣೆ ಮುಂದೂಡಿದ ಹೈಕೋರ್ಟ್‌

karnataka weather forecast
ಮಳೆ1 hour ago

Karnataka Weather : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ-ಕೊಳ್ಳಗಳು; ಹಳ್ಳ ದಾಟಲು ಗ್ರಾಮಸ್ಥರ ಪರದಾಟ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌