Siddheshwar swamiji | ಸಣ್ಣವರಿದ್ದಾಗಲೇ ಗುಡ್ಡದ ಮೇಲೆ ಹೋಗಿ ಒಬ್ಬರೇ ಧ್ಯಾನ ಮಾಡುತ್ತಿದ್ದರು ಪುಟ್ಟ ಸಿದ್ದು! - Vistara News

ಅಧ್ಯಾತ್ಮ

Siddheshwar swamiji | ಸಣ್ಣವರಿದ್ದಾಗಲೇ ಗುಡ್ಡದ ಮೇಲೆ ಹೋಗಿ ಒಬ್ಬರೇ ಧ್ಯಾನ ಮಾಡುತ್ತಿದ್ದರು ಪುಟ್ಟ ಸಿದ್ದು!

ಸಿದ್ದೇಶ್ವರ ಶ್ರೀಗಳಿಗೆ ಅಧ್ಯಾತ್ಮ ಎನ್ನುವುದು ಇನ್‌ಬಿಲ್ಟ್‌ ಆಗಿಯೇ ಬಂದಿತ್ತಾ? ಅವರು ಸಣ್ಣ ವಯಸ್ಸಲ್ಲೇ ಬೆಟ್ಟವೇರಿ ಧ್ಯಾನ ಮಾಡುತ್ತಿದ್ದರು ಎಂದು ಅವರ ಬಾಲ್ಯದ ಗೆಳೆಯ ನೆನಪು ಮಾಡಿಕೊಂಡಿದ್ದಾರೆ.

VISTARANEWS.COM


on

siddheshwara sri thande thayi
ಸಿದ್ದೇಶ್ವರ ಶ್ರೀಗಳ ಪೂರ್ವಾಶ್ರಮದ ತಂದೆ ಓಗೆಪ್ಪಗೌಡ ಬಿರಾದಾರ ಮತ್ತು ತಾಯಿ ಸಂಗವ್ವ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಜಯಪುರ: ಸೋಮವಾರ ರಾತ್ರಿ ದೇವರ ಪಾದ ಸೇರಿದ ಇಲ್ಲಿನ ಜ್ಞಾನ ಯೋಗಾಶ್ರಮದ ಶ್ರ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಅಧ್ಯಾತ್ಮ ಎನ್ನುವುದು ಸಾಧನಾ ಪಥವೇನೂ ಆಗಿರಲಿಲ್ಲ, ಬದಲಾಗಿ ಅದು ಅಯಾಚಿತವಾಗಿ ಬಂದ ಸಹಜ ಪ್ರಕ್ರಿಯೆಯಾಗಿತ್ತು. ಇದಕ್ಕೆ ಹಲವು ನಿದರ್ಶನಗಳನ್ನು ನೀಡುತ್ತಾರೆ ಅವರ ಬಾಲ್ಯದ ಒಡನಾಡಿಯಾಗಿರುವ ಭೀಮರಾಯ ಶಿವಪ್ಪ ಪಟ್ಟಣ ಅವರು.

ಸಿದ್ದೇಶ್ವರ ಸ್ವಾಮಿಗಳ ಪ್ರಾಥಮಿಕ ಶಿಕ್ಷಣದ ಜತೆಗಾರ, ಗ್ರಾಮ ಸೇವಕರಾಗಿ ನಿವೃತ್ತರಾದ ಭೀಮರಾಯ ಶಿವಪ್ಪ ಪಟ್ಟಣ ಅವರು ಸೋಮವಾರ ಶ್ರೀಗಳ ದರ್ಶನಕ್ಕೆ ಬಂದ ಮೇಲೆ ಬಾಲ್ಯದ ಹಲವು ಕಥೆಗಳನ್ನು ತೆರೆದಿಟ್ಟರು. ಅದರ ಜತೆಗೆ ಒಮ್ಮೆ ಅಧ್ಯಾತ್ಮದ ಕಡೆಗೆ ವಾಲಿದ ಸಿದ್ದೇಶ್ವರರರು ಬಳಿಕ ತಮ್ಮ ಊರಿನ ವ್ಯಾಮೋಹವನ್ನೂ ಹೊಂದಿರಲಿಲ್ಲ ಎನ್ನುವುದನ್ನು ನೆನಪಿಸಿಕೊಂಡರು.

– ಸಹಪಾಠಿಗಳು, ಮನೆಯ ಎಲ್ಲರೂ ಅವರನ್ನು ಪ್ರೀತಿಯಿಂದ ಸಿದ್ದು ಎಂದೇ ಕರೆಯುತ್ತಿದ್ದೆವು. ಶಾಲೆಯಲ್ಲಿ ಒಳ್ಳೆಯ ಹುಡುಗರೊಂದಿಗೆ ಮಾತ್ರ ಬೆರೆಯುತ್ತಿದ್ದರು. ಓದಿನಲ್ಲಿ ಚುರುಕು, ಕೆಲವು ಸಲ ನಮ್ಮೂರಿನ ಗುಡ್ಡದ ಮೇಲೆ ಒಬ್ಬರೇ ಕುಳಿತು ಧ್ಯಾನ ಮಾಡುತ್ತಿದ್ದರು. ಈಗ ಇದನ್ನೆಲ್ಲ ಗಮನಿಸಿದಾಗ ಅವರಿಗೆ ಬಾಲ್ಯದಲ್ಲೇ ಅಧ್ಯಾತ್ಮದ ಒಲವಿತ್ತು ಅನಿಸುತ್ತದೆ.

– 1ರಿಂದ 7ನೇ ತರಗತಿ ತನಕ ಬಿಜ್ಜರಗಿಯ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಕಲಿತೆವು. ಸಿದ್ದುಗಿಂತ ನಾನು 6 ತಿಂಗಳು ದೊಡ್ಡವನು. ಅವರ ತಂದೆ ಓಗೆಪ್ಪಗೌಡ ಬಿರಾದಾರ ಚಿತ್ರಕಲಾವಿದರು. ಅವರ ತಾಯಿ ಸಂಗವ್ವ ಬಸವನಬಾಗೇವಾಡಿ ತಾಲೂಕಿನ ನಂದ್ಯಾಳದವರು. ಆರು ಮಕ್ಕಳಲ್ಲಿ ಸಿದ್ದಗೊಂಡ ಹಿರಿಯವರು.

– ನಾನು ಮತ್ತು ಸಿದ್ದೇಶ್ವರ ಸ್ವಾಮೀಜಿ ಕಲಿಯುವಾಗ ಒಂದೇ ಹಾಸಿಗೆಯಲ್ಲಿ ಮಲಗುತ್ತಿದ್ದೆವು. ಒಂದು ಸಾರಿ ಅವರು ಪರೀಕ್ಷೆಯ ಪೇಪರ್‌ ತುಂಬಾ ಕೇವಲ ಓಂ ನಮಃ ಶಿವಾಯ ಅಂತ ಬರೆದಿಟ್ಟು ಬಂದಿದ್ದರು.

– 1953ರಲ್ಲಿ ಮೂಲ್ಕಿ ಪರೀಕ್ಷೆ ಬರೆಯಲು ನಾವೆಲ್ಲ ಕೆಲ ದಿನ ವಿಜಯಪುರದಲ್ಲೇ ಇದ್ದೆವು. ಆ ವೇಳೆ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ತಿಂಗಳ ಪ್ರವಚನ ನಡೆದಿತ್ತು. ಸಿದ್ದು ನಿತ್ಯ ಪ್ರವಚನ ಕೇಳಲು ಹೋಗುತ್ತಿದ್ದರು. ನಂತರ ಮಲ್ಲಿಕಾರ್ಜುನ ಶ್ರೀಗಳು ವಿಜಯ ಕಾಲೇಜಿನಲ್ಲಿ ವಾಸ್ತವ್ಯ ಮಾಡಿದ್ದರು. ಆಗಲೂ ಇವರು ಅಲ್ಲಿಗೆ ಹೋಗುತ್ತಿದ್ದರು. ಒಂದು ದಿನ ಮಲ್ಲಿಕಾರ್ಜುನ ಶ್ರೀಗಳು ವಿಚಾರಿಸಿದಾಗ ಇವರ ಅಧ್ಯಾತ್ಮದ ಹಸಿವು ಗೊತ್ತಾಗಿ ಜತೆಗಿಟ್ಟುಕೊಂಡು ಓದಿಸುವುದಾಗಿ ಪಾಲಕರಲ್ಲಿ ಹೇಳಿದರು.

– ಒಮ್ಮೆ ಅಧ್ಯಾತ್ಮದತ್ತ ಒಲವು ಮೂಡಿ ಊರು ಬಿಟ್ಟ ಸಿದ್ದೇಶ್ವರ ಅವರು ಕೆಲವೇ ಕಾರ್ಯಕ್ರಮ ಬಿಟ್ಟರೆ ಊರಿಗೆ ಬಂದದ್ದು ಕಡಿಮೆ. ತೀರಾ ಇತ್ತೀಚೆಗೆ ನಮ್ಮೂರಿನ ಹೈಸ್ಕೂಲ್‌ ಕಾರ್ಯಕ್ರಮ, ಮತ್ತೊಂದು ಕಾರ್ಯಕ್ರಮಕ್ಕಷ್ಟೇ ಬಂದಿದ್ದರು. ತಂದೆ, ತಾಯಿ ನಿಧನರಾದಾಗಲೂ ಬಿಜ್ಜರಗಿಗೆ ಬರಲಿಲ್ಲ. ಅವರು ಸನ್ಯಾಸತ್ವದ ತತ್ವ ಮೀರಲಿಲ್ಲ.

– ನಾವು ಭೇಟಿಯಾದಾಗ ಪೂರ್ವಾಶ್ರಮದ ದಿನಗಳನ್ನು ಶ್ರೀಗಳು ಚರ್ಚಿಸುತ್ತಿರಲಿಲ್ಲ. ಹಳೆಯ ಸ್ನೇಹಿತರ ಒಡನಾಟದ ಬಗ್ಗೆಯೂ ಮಾತಾಡುತ್ತಿರಲಿಲ್ಲ.

ಇದನ್ನೂ ಓದಿ | Siddheshwar Swamiji | ವೈಕುಂಠ ಏಕಾದಶಿಯ ಪುಣ್ಯದಿನದಂದೇ ದೇಹ ತ್ಯಜಿಸಿದ ಪುಣ್ಯ ಜೀವಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

ತಾತಯ್ಯ ತತ್ವಾಮೃತಂ: ಯಮನಿಗೆ ಅಂಜದ ಸತ್ಯವ್ರತಿಗಳು

ತಾತಯ್ಯ ತತ್ವಾಮೃತಂ: ಪರಮ ಪತಿವ್ರತೆ, ಅಂತರಂಗದ ಭಕ್ತ, ಸಿದ್ಧಯೋಗಿ ಹಾಗೂ ಭಾಗವತರು ಇವರುಗಳು ಸಾವು-ನೋವುಗಳಿಗೆ ಅಂಜದ ಸತ್ಯವ್ರತಿಗಳು. ಇವರನ್ನು ಮುಟ್ಟಲು ಯಮಧರ್ಮರಾಯನು ಹೆದರುತ್ತಾನೆ ಎನ್ನುತ್ತಾರೆ ತಾತಯ್ಯನವರು.

VISTARANEWS.COM


on

kaivara tatayya column
Koo
jayaram-column

ತಾತಯ್ಯ ತತ್ವಾಮೃತಂ: ಕೈವಾರ ತಾತಯ್ಯನವರು ಈ ಬೋಧನೆಯಲ್ಲಿ ಸಾವಿಗೆ ಅಂಜದ ಸತ್ಯವ್ರತಿಗಳ ಬಗ್ಗೆ ವಿವರಿಸುತ್ತಿದ್ದಾರೆ. ಸತ್ಯವನ್ನು ಅರಿತು ಪಾಲಿಸುವವರು ಸತ್ಯವ್ರತಿಗಳು. ಇಂತಹ ಸತ್ಯವ್ರತಿಗಳನ್ನು ಮುಟ್ಟಲು ಯಮಧರ್ಮರಾಜನು ಹೆದರುತ್ತಾನೆ ಎಂದು ತಾತಯ್ಯನವರು ಹೇಳುತ್ತಿದ್ದಾರೆ. ಇಲ್ಲಿ ಹೇಳಿರುವ ನಾಲ್ಕು ಬಗೆಯ ಸಾಧಕರು ಭಗವಂತನಿಗೆ ಪ್ರಿಯವಾಗುವಂತೆ ತಮ್ಮ ಶಪಥವನ್ನು ತಮ್ಮ ಶರೀರದ ಕೊನೆಯ ಉಸಿರು ಇರುವವರೆಗೆ ಬಿಡದೆ ವ್ರತದಂತೆ ಪಾಲಿಸುತ್ತಾ ಸಾಧಕರೆನಿಸಿಕೊಳ್ಳುತ್ತಾರೆ ಎಂಬುದು ತಾತಯ್ಯನವರ ಅಭಿಪ್ರಾಯವಾಗಿದೆ. ಅಂತಹ ಸಾಧಕರನ್ನು ವಿವರವಾಗಿ ತಿಳಿಯೋಣ..

1) ಪರಮ ಪತಿವ್ರತೆ :

ಪರಮ ಪತಿವ್ರತ – ಪತಿ ನಷ್ಟಮೈನನೂ
ತನ ವ್ರತಮು ವಿಡಚುನಾ ತಪಸಿ ರೀತಿ||

ಪತಿವ್ರತೆ ಎಂದರೆ ಪತಿಸೇವೆಯೆಂಬ ವ್ರತವನ್ನು ಹಿಡಿದವಳೆಂದು ಅರ್ಥ. ಪತಿ ತೀರಿಕೊಂಡರೂ ಆಕೆಯು ಪತಿಚಿಂತನೆ ಎಂಬ ತನ್ನ ವ್ರತವನ್ನು ಬಿಡದೇ ಇರುವವಳನ್ನು ತಾತಯ್ಯನವರು ಪರಮ ಪತಿವ್ರತೆ ಎಂದು ಕರೆದಿದ್ದಾರೆ. ಇಕೆಯು ತಪಸ್ಸಿನಲ್ಲಿರುವ ತಪಸ್ವಿಗೆ ಸಮಾನಳಾದ ತಪಸ್ವಿನಿ. ಇಂತಹವರು ಸಾವಿಗೆ ಅಂಜುವುದಿಲ್ಲ. ಪತಿಸೇವೆಗಿಂತಲೂ ಮಿಗಿಲಾದುದು ಈ ಲೋಕದಲ್ಲಿ ಇಲ್ಲವೆಂದು ಭಾವಿಸಿ, ಗೃಹಕೃತ್ಯದಲ್ಲಿ ದಕ್ಷಳಾಗಿ, ಪ್ರಿಯವಾದಿನಿಯಾಗಿ, ಪತಿಯಲ್ಲೇ ಪ್ರಾಣವಿಟ್ಟುಕೊಂಡಿರುವ ಪತಿವ್ರತೆಯೇ ನಿಜವಾದ ಪತ್ನಿ. ಪತಿಯನ್ನೇ ಗುರು-ದೈವವೆಂದು ಆರಾಧಿಸುವವಳು ಪರಮ ಪತಿವ್ರತೆ. ಇಂತಹ ಪತಿವ್ರತೆಯು ಸದಾಕಾಲ ಪತಿಯ ಚಿಂತನೆಯನ್ನೇ ಮಾಡುತ್ತಾ ಕಾಲ ಕಳೆಯುತ್ತಾಳೆ. ಪತಿ ನಿಧನರಾಗಿದ್ದರೂ ಹೃದಯದಲ್ಲಿ ಅನುಕ್ಷಣವೂ ಪತಿಧ್ಯಾನದಲ್ಲಿ ಇರುವ ಪರಮ ಪತಿವ್ರತೆಯನ್ನು ಯಮಧರ್ಮರಾಯನು ಮುಟ್ಟಲು ಹೆದರುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು. ವನವಾಸಕ್ಕೆ ಬಂದಿದ್ದ ಸೀತಾಮಾತೆಗೆ ಅನುಸೂಯದೇವಿ ಪತಿವ್ರತೆಯ ಮಹತ್ವವನ್ನು ಬೋಧಿಸುತ್ತಾ “ಪತಿವ್ರತೆಯಾದ ಸಾಧ್ವಿಗೆ ಪತಿಯೇ ದೇವಾಧಿದೇವತೆಗಳಿಗಿಂತ ಹೆಚ್ಚಿನ ಶ್ರೇಷ್ಠ ದೈವ” ಎಂದು ಉಪದೇಶವನ್ನು ಮಾಡುತ್ತಾಳೆ. ಮಹಿಳೆಯರ ಬಗ್ಗೆ ತಾತಯ್ಯನವರು ಹೊಂದಿದ್ದ ಗೌರವ ಭಾವನೆ ಈ ಪದ್ಯದಲ್ಲಿ ವ್ಯಕ್ತವಾಗಿದೆ. ವಿಧವೆಯನ್ನು ತಾತಯ್ಯನವರು ಪತಿವ್ರತೆಯನ್ನಾಗಿಯೂ, ತಪಸ್ವಿನಿಯನ್ನಾಗಿಯೂ ಪ್ರಶಂಸಿದ್ದಾರೆ. ಸತಿ ಸಾವಿತ್ರಿಯ ಉದಾಹರಣೆಯನ್ನೂ ಇಲ್ಲಿ ಪ್ರಸ್ತಾಪಿಸಬಹುದಾಗಿದೆ.

2) ಅಂತರಂಗದ ಭಕ್ತ:

ವಿಷ್ಣುಭಕ್ತುಂಡೈನ ವಿಪ್ರುಡು ಯೇವೇಳ
ಮರಚುನಾ ಸದ್ಗುರುನಿ ಮನಸುಲೋನ ||

ಇನ್ನು ಎರಡನೇಯ ಸಾಧಕ. ವಿಷ್ಣುಭಕ್ತನಾದ ವಿಪ್ರನು ಸದಾಕಾಲ ಸದ್ಗುರುವನ್ನು ಮನಸ್ಸಿನಲ್ಲಿ ಮರೆಯದೇ ಸ್ಮರಿಸುತ್ತಿರುತ್ತಾನೋ ಇಂತಹವನನ್ನೂ ಯಮನು ಮುಟ್ಟಲು ಅಂಜುತ್ತಾನೆ. ಇವನು ಅಂತರಂಗದ ಸಾಧಕ. ಇಲ್ಲಿ ವಿಪ್ರನೆಂದರೆ ಬ್ರಾಹ್ಮಣನೆಂದು ಅರ್ಥವಲ್ಲ. ಯಾರಾದರೇ ಸದಾಕಾಲ ಅಂತರಂಗದಲ್ಲಿ ಭಗವಂತನನ್ನು ಸ್ಮರಿಸುತ್ತಿರುತ್ತಾರೋ ಅವರೆಲ್ಲರೂ ವಿಪ್ರರೆ. ಭಕ್ತಿಯ ಭಾವಪರವಶತೆಯನ್ನು ತಾತಯ್ಯನವರು ಎತ್ತಿಹಿಡಿದಿದ್ದಾರೆ. “ಯಾವ ಜಾತಿಯವನೇ ಆಗಿರಲಿ, ಯಾವ ನೀತಿಯವನೇ ಆಗಿರಲಿ ಹರಿಭಕ್ತಿಯನ್ನು ಹೊಂದಿರುವವನೇ ಅಗ್ರಜನು” ಎಂದಿದ್ದಾರೆ ತಾತಯ್ಯನವರು. ಅಂತರಂಗದ ಭಕ್ತನು ಯಾವುದೇ ಲೋಕವ್ಯವಹಾರದಲ್ಲಿದ್ದರೂ ಮನಸ್ಸಿನಲ್ಲಿ ಭಗವಂತನ ಧ್ಯಾನ ಬಿಡುವುದಿಲ್ಲ. ಅವನು ಮಾಡುವ ಎಲ್ಲಾ ಕರ್ತವ್ಯಗಳನ್ನು ಭಗವಂತನ ಆರಾಧನೆ ಎಂದು ಮಾಡುತ್ತಿರುತ್ತಾನೆ. ಇಲ್ಲಿ ವಿಷ್ಣುಭಕ್ತರೆಂದರೆ ಭಗವಂತನ ಆರಾಧಕರು ಎಂದು ಅರ್ಥ. ಸದ್ಗುರುವೆಂದರೆ ಭಗವಂತ. ನಿರಂತರವಾಗಿ ಮನಸ್ಸಿನಲ್ಲಿ ಭಗವಂತನನ್ನು ಸ್ಮರಿಸುವವರು ಸತ್ಯವ್ರತಿಗಳು ಎಂದಿದ್ದಾರೆ ತಾತಯ್ಯನವರು. ಇವರು ಸಾವಿಗೆ ಹೆದರುವುದಿಲ್ಲ.

3) ಸಿದ್ಧಯೋಗಿ:

ಮೇರುವಪೈ ಚೇರಿ ಮೆಲಗ ನೇರ್ಚಿನ ಯೋಗಿ
ಚಿಕ್ಕುನಾ ಸಂಸಾರ ಚಿಕ್ಕುಲಂದು ||

ಸಿದ್ಧಯೋಗಿಯನ್ನು ತಾತಯ್ಯನವರು ಇಲ್ಲಿ ಪ್ರಸ್ತಾಪಿಸಿದ್ದಾರೆ. ದೇಹದಲ್ಲಿರುವ ಮೇರುವಿನ ಮೇಲೆ ಸಮಾಧಿಯೋಗ ವಿಧಾನದಿಂದ ಸಂಚರಿಸುವುದನ್ನು ಕಲಿತ ಸಾಧಕಯೋಗಿಯು ಸಂಸಾರದ ತೊಡಕುಗಳಿಗೆ ಸಿಕ್ಕಿಹಾಕಿಕೊಳ್ಳುವನೇ? ಎನ್ನುತ್ತಿದ್ದಾರೆ. ತಾತಯ್ಯನವರು ಸಹ ಗೃಹಸ್ಥರಾಗಿದ್ದಾಗ ಸಂಸಾರದ ತೊಡಕುಗಳಿಗೆ ಸಿಕ್ಕದೆ ಬಾಳಿ, ಗೃಹತ್ಯಾಗಮಾಡಿ ನಂತರ ಯೋಗಿಗಳಾದವರು. “ಮೇರುವ” ಎಂದರೆ ಮೇರುಪರ್ವತ, ಬಂಗಾರದ ಬೆಟ್ಟ ಎಂದು ಅರ್ಥ. ಆದರೆ ಯೋಗಭಾಷೆಯಲ್ಲಿ ಮೇರುವ ಎಂದರೆ ಮೇರುದಂಡ. ಇದು ದೇಹದ ಬೆನ್ನುಮೂಳೆ. ಈ ಮೇರುದಂಡದಲ್ಲಿಯೇ ಸುಷುಮ್ನನಾಡಿಯು ಗುದಭಾಗದಿಂದ ಮಸ್ತಕದ ಬ್ರಹ್ಮರಂಧ್ರದವರೆಗೆ ಹಬ್ಬಿದೆ. ಕುಂಡಲಿನೀ ಸಾಧಕ ಯೋಗಿಯು ಈ ನಾಡಿಯ ಮೂಲಕ ಮೂಲಾಧಾರಚಕ್ರದಿಂದ ಸಹಸ್ರಾರ ಚಕ್ರದವರೆಗೆ ಸಂಚರಿಸುತ್ತಾ ಪರಮಾತ್ಮನಲ್ಲಿ ಲೀನವಾಗುವ ಸಾಧನೆಯನ್ನು ಮಾಡಿರುತ್ತಾನೆ.

ಇಂತಹ ಯೋಗಿ ಬ್ರಹ್ಮಾನಂದವನ್ನು ಪಡೆಯುತ್ತಾನೆ. ಅಂತರಂಗ-ಬಹಿರಂಗ ಎರಡರಲ್ಲೂ ಈ ಸಾಧಕಯೋಗಿ ಬ್ರಹ್ಮವನ್ನು ಕಾಣುತ್ತಿರುತ್ತಾನೆ. ರಾಗ-ದ್ವೇಷಗಳಿಗೆ, ಅಹಂಕಾರ, ಮಮಕಾರಗಳ ತೊಡಕುಗಳಲ್ಲಿ ಈ ಯೋಗಿ ಸಿಕ್ಕಿಬೀಳುವುದಿಲ್ಲ. ಈತ ಮಾಯಗೆ ವಶನಲ್ಲ. ಸಂಸಾರದ ಮೋಹ-ಮಮತೆಗಳ ಬಲೆ ಇಲ್ಲ. ಇಂತಹ ಯೋಗಿಯ ಮೇಲೆ ಯಮನಿಗೆ ಅಧಿಕಾರವಿಲ್ಲ. ಏಕೆಂದರೆ ಪಾಪ-ಪುಣ್ಯಗಳ ಆಧಾರದ ಮೇಲೆ ಯಮನಿಗೆ ದಂಡಾಧಿಕಾರವಿರುತ್ತದೆ. ಯೋಗಿಗೆ ಪಾಪಪುಣ್ಯಗಳೇ ಇರುವುದಿಲ್ಲ. “ದಂಡಧರುಡು ಮಮ್ಮು ದಂಡಿಂಪ ವೆರುಚುನು” ಯೋಗಿಗಳನ್ನು ದಂಡಿಸಲು, ಮುಟ್ಟಲು ಯಮನು ಅಂಜುತ್ತಾನೆ ಎಂದಿದ್ದಾರೆ ತಾತಯ್ಯನವರು.

4) ಗುಪ್ತಸಾಧಕರಾದ ಭಾಗವತರು:

ಅಂಗಭಾವಮು ತೆಲಿಸಿ ಲಿಂಗಜ್ಯೋತಿನಿ ಜೂಚಿ
ಬಹು ಗುಪ್ತುಡೈವುಂಡು ಭಾಗವತುಡು||

ಭಾಗವತರೆಂದರೆ ಭಗವಂತನ ಜನ. ಉಪಾಸನೆಯಿಂದ ಭಗವಂತನನ್ನು ಓಲಿಸಿಕೊಂಡು ಸಾಕ್ಷಾತ್ಕಾರ ಪಡೆದುಕೊಂಡ ಅನನ್ಯ ಭಕ್ತರೇ ಭಾಗವತರು. ಇಂತಹ ಭಾಗವತರು ದೇಹದ ಬಗ್ಗೆ ಮೋಹವಿಲ್ಲದೆ, ಪರಮಾತ್ಮ ಭಾವದಿಂದ ಸ್ವಪ್ರಕಾಶವುಳ್ಳ ಲಿಂಗಜ್ಯೋತಿ ರೂಪನಾದ ಭಗವಂತನನ್ನು ತನ್ನಲ್ಲೇ ಕಂಡುಕೊಂಡು ಆನಂದಮಯನಾಗಿರುತ್ತಾನೆ. ಈತನು ಗುಟ್ಟು ಬಿಟ್ಟುಕೊಡದೆ, ಅರಿಯದವನಂತೆ ಸುಮ್ಮನಿರುವ ಗೂಡಸಾಧಕನಾದ ಭಾಗವತ. ಇತನು ಲಿಂಗಜ್ಯೋತಿಯನ್ನು ಕಂಡುಕೊಂಡಿರುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು. ಲಿಂಗಜ್ಯೋತಿಯೆಂದರೆ ಭಗವಂತನೆಂಬ ಪ್ರಕಾಶದ ಪರಂಜ್ಯೋತಿ ಎಂದರ್ಥ. ಯೋಗಭಾಷೆಯಲ್ಲಿ ಇದನ್ನು ಆಕಾಶದೀಪ ಎಂದೂ ಕರೆಯುತ್ತಾರೆ. ಸ್ವಪ್ರಕಾಶದ ಪರಂಜ್ಯೋತಿಯಾಗಿರುವ ಲಿಂಗಜ್ಯೋತಿಯನ್ನು ಕಂಡುಕೊಂಡ ಭಾಗವತನು ಬಾಹ್ಯದಲ್ಲಿ ಬಲ್ಲವನೆಂದು ತೋರ್ಪಡಿಸಿಕೊಳ್ಳದೆ ಸಾಮಾನ್ಯನಂತೆ ವರ್ತಿಸುತ್ತಾ ಗೂಢಸಾಧಕನಾಗಿರುತ್ತಾನೆ. ಇಂತಹ ಗುಪ್ತಾಸಾಧಕನಾದ ಸತ್ಯವ್ರತನು ಸಾವಿಗೆ ಅಂಜುವುದಿಲ್ಲ.

ಪರಮ ಪತಿವ್ರತೆ, ಅಂತರಂಗದ ಭಕ್ತ, ಸಿದ್ಧಯೋಗಿ ಹಾಗೂ ಭಾಗವತರು ಇವರುಗಳು ಸಾವು-ನೋವುಗಳಿಗೆ ಅಂಜದ ಸತ್ಯವ್ರತಿಗಳು. ಇವರನ್ನು ಮುಟ್ಟಲು ಯಮಧರ್ಮರಾಯನು ಹೆದರುತ್ತಾನೆ ಎನ್ನುತ್ತಾ ತಾತಯ್ಯನವರು ಭಕ್ತಿಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ ಅಂಕಣ: ಶ್ರೀರಾಮಭಜನೆ ಭವರೋಗಕ್ಕೆ ಔಷಧಿ

Continue Reading

ಅಂಕಣ

ತತ್ತ್ವ ಶಂಕರ: ಲೋಕಕ್ಕೆ ಜ್ಞಾನದ ಮಹತಿಯನ್ನು ಹೊತ್ತಿಸಿದ ಮಹಾತ್ಮರು…

ಶಂಕರಾಚಾರ್ಯರ ಅದ್ವೈತ ವೇದಾಂತವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಸಲು ಈ ಸರಣಿ ನೀಡಲಾಗುತ್ತಿದೆ. ಈ ಲೇಖನದಲ್ಲಿ ಸ್ಫೂರ್ತಿದಾಯಕ ಧಾರ್ಮಿಕ ಕತೆಗಳಿರುತ್ತವೆ. ಧಾರ್ಮಿಕ ಮೌಲ್ಯಗಳಿರುತ್ತವೆ.

VISTARANEWS.COM


on

Shankaracharya
Koo
  • ತಪಸ್ವಿ

ಹರೇ ರಾಮ, ‘ಶಂಕರಂ ಲೋಕ ಶಂಕರಂ. ಆದಿ ಶಂಕರಾಚಾರ್ಯರು (Adi Shankaracharya) ಆಚಾರ್ಯತ್ರಯರಲ್ಲಿ ಮೇರು ಎಂದೆನಿಸಿದ ವೇದಾಂತ ಸಾಮ್ರಾಜ್ಯದ ತಾರೆಯಂತೆ ಪ್ರಕಾಶಿಸಿದವರು. ಆಚಾರ್ಯರು ತಮ್ಮ ಅಲ್ಪ ಜೀವಿತಾವಧಿಯಲ್ಲಿ ಧರ್ಮದ ಉದ್ಧಾರವನ್ನು ಮಾಡಿ ಲೋಕಕ್ಕೆ ಒಳಿತು ಮಾಡಿದರು. ಅಳಿಸಿದ ಆಚರಣೆಗಳನ್ನು, ತಿರುಗಿದ ಧರ್ಮದ ನಿಲುವನ್ನು ಪುನಃ ಸದ್ದಿಶೆಯ ಕಡೆ ತಿರುಗಿಸಿದರು. ಸಾವಿರಾರು ಗ್ರಂಥಗಳ ಮೂಲಕ ಧರ್ಮದ ಮೂಲಭೂತ ಸಂಪತ್ತನ್ನು ಧರ್ಮದ ಸಾರವನ್ನು ಮುಂದಿನವರವರೆಗೂ ತಲುಪಿಸುವ ಮಹತ್ಕಾರ್ಯ ಮಾಡಿದರು. ಮಠಗಳನ್ನು ಸ್ಥಾಪಿಸಿ ವೇದಗಳ ಪರಂಪರೆ, ನಮ್ಮ ದೇಶದ ಹಿರಿಮೆಯನ್ನು ಕಾಪಾಡುವಲ್ಲಿ ಅವರು ಶ್ರಮಿಸಿದರು. ಅದ್ವೈತ ವೇದಾಂತವನ್ನು ವಿಶ್ವದ ಮೂಲೆಮೂಲೆಗೂ ತಲುಪಿಸುವ ಮೂಲಕ ಮೋಕ್ಷದ ಮಾರ್ಗ, ಆತ್ಮ ಸಾಕ್ಷಾತ್ಕಾರಗಳ ಮಾರ್ಗದ ಸಾಧನೆಯನ್ನು ಲೋಕಕ್ಕೆ ತೆರೆದಿಟ್ಟರು.

ಬದುಕಿದ್ದು ಅಲ್ಪವಾದರೂ ಅಲ್ಪರಿಗೆ ಬದುಕನ್ನು ನೀಡಿದವರು ಆಚಾರ್ಯರು. ಭಕ್ತಿ ಮಾರ್ಗದಿಂದ ಆರಂಭಿಸಿ ಅತ್ಯುನ್ನತ ಜ್ಞಾನ ಮಾರ್ಗದವರೆಗೂ ತಮ್ಮ ಕೃತಿಗಳನ್ನು ರಚಿಸಿ ನಮ್ಮಲ್ಲಿರುವ ಅಜ್ಞಾನವನ್ನು ತೊಲಗಿಸುವ ಕಾರ್ಯ ಮಾಡಿದರು. ನಾವೆಲ್ಲರೂ ನೂರು ವರ್ಷ ಬದುಕಿದರೂ ನಮ್ಮದು ಪೂರ್ಣ ಜೀವನ ಆಗಲಾರದು. ಆದರೆ ಆಚಾರ್ಯರು 32 ಸಂವತ್ಸರಗಳಿಗೆ ಪೂರ್ಣತೆಯ ಶಿಖರವನ್ನು ಏರಿದ ಮಹಾಯೋಗಿ. ಸಾಕ್ಷಾತ್ ಶಂಕರನ ಅವತಾರವಾದ ಶಂಕರರು ಲೋಕಕ್ಕೆ ಜ್ಞಾನದ ಮಹತಿಯನ್ನು ಹೊತ್ತಿಸಿದ ಮಹಾತ್ಮರು. ಧರ್ಮದ ಕಿಡಿಯನ್ನು ಹಚ್ಚಿ ಅದು ಮುಂದಿನ ಸಾವಿರಾರು ವರ್ಷಗಳ ಕಾಲ ಉರಿಯುವಂತೆ ಮಾಡಿದವರು. ದ್ವೈತದಿಂತ ಅದ್ವೈತ ಸಿದ್ಧಿಯ ಪ್ರಾಪ್ತಿಯ ಮಾರ್ಗವನ್ನು ಹಾಕಿದವರು. ನಮ್ಮ ಪರಂಪರೆಯಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನವಿದೆ. ಅದನ್ನು ನಾವು ಶಂಕರರ ಜೀವನದಲ್ಲಿ ಕಾಣಬಹುದಾಗಿದೆ. ಎಂತಹ ಅಜ್ಞಾನಿಗಳಿಗೂ ಅರ್ಥವಾಗುವ ಹಾಗೆ ಸಂಸ್ಕೃತ ಭಾಷೆಯಲ್ಲಿ ತಮ್ಮ ಕೃತಿಗಳನ್ನು ರಚಿಸಿ ಲೋಕ್ಕೆ ಅನುಗ್ರಹ ಮಾಡಿದ್ದಾರೆ. ಸಾಮಾನ್ಯರಿಗೆ ಸಾಮಾನ್ಯರಂತೆ, ಜ್ಞಾನಿಗಳಿಗೆ ಮೇರು ಜ್ಞಾನಿಗಳಂತೆ ಸಾಧನೆಯ ಮಾರ್ಗ ತೋರಿದ ಮಹಾನ್ ಯತಿಗಳು ಆಚಾರ್ಯರು. ಅವರು ಸ್ಥಾಪಿಸಿದ ಮಠಗಳು ಇಂದಿಗೂ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದು ಲೋಕಕ್ಕೆ ಮಾರ್ಗದರ್ಶನ ಮಾಡುತ್ತಿವೆ.

ನಮ್ಮ ಸಾಧನೆ ಎಂದರೆ ಇಂತೆಯೇ ಇರಬೇಕು. ನಮ್ಮ ಕಾರ್ಯದಿಂದ ನಮ್ಮನ್ನು ಗುರುತಿಸುವಂತೆ ಆಗಬೇಕು ಹೊರತು ಹೆಸರಿನಿಂದ ಅಲ್ಲ. ಇಂದಿನ ಕಾಲದಲ್ಲಿ ವಿಷಯ ಸುಖದ ಹಿಂದೆ ಓಡುತ್ತಿರುವ ಎಲ್ಲರಿಗೂ ಆಚಾರ್ಯರ ಜೀವನವು ಮಾದರಿಯಾಗಬೇಕು. ಹಣವೇ ಎಲ್ಲಾ, ಅದರಿಂದಲೇ ಎಲ್ಲಾ ಸುಖವನ್ನು ಪಡೆಯಬಹುದು ಎಂದು ಇಂದಿನ ಶಿಕ್ಷಣವೂ ಕೂಡ ಹಣದ ಹಿಂದೆಯೇ ಓಡುವಂತೆ ಯುವಜನರ ಬುದ್ಧಿಯನ್ನು ತಿರುಗಿಸುತ್ತಿದೆ. ಆದ್ದರಿಂದ ನಮ್ಮ ದೇಶದಲ್ಲಿ ಇಂದಿಗೂ ಇಂತಹ ಮೌಢ್ಯ ಜೀವನವನ್ನು ಕಾಣುತ್ತಿದ್ದೇವೆ.

ಇದನ್ನೂ ಓದಿ : Sirsi News : ದೇವಸ್ಥಾನದ ಬಾಗಿಲು ಮುರಿದರು; ಚಾಕ್‌ಪೀಸ್‌ನಿಂದ ಶಿವಲಿಂಗದ ಮೇಲೆ ಬರೆದು ವಿಕೃತಿ

ಭಜ ಗೋವಿಂದಂ ಆಚಾರ್ಯರ ಕೃತಿಯನ್ನು ಓದಿ ಜೀವನದಲ್ಲಿ ಅಳವಡಿಸಿಕೊಂಡರೆ ಅದರಂತಹಾ ಸಜ್ಜೀವನ ಇನ್ನೊಬ್ಬರದಲ್ಲ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯು ಸರಿಯಾದ ಭಾರತೀಯ ಶಿಕ್ಷಣವನ್ನೊಳಗೊಂಡ ಶಿಕ್ಷಣವಾಗಬೇಕು. ಇಂದು ನಾವು ಬೇರೆ ಯಾರೋ ಬರೆದ ವಿಷಯಗಳನ್ನು ತರಗತಿಗಳಲ್ಲಿ ಓದುತ್ತಿದ್ದೇವೆ. ಆದರೆ ಆ ಎಲ್ಲಾ ವಿಚಾರಗಳನ್ನು ಎಷ್ಟೋ ಹಿಂದೆ ನಮ್ಮ ಪೂರ್ವಜರಾದ ಋಷಿ ಮುನಿಗಳು ವೇದ ಉಪನಿಷತ್ ಸಾಹಿತ್ಯಗಳಲ್ಲಿ ಹೇಳಿದ್ದಾರೆ. ಭಾಷಾ ಜ್ಞಾನದ ಲೋಪದಿಂದ ಈ ಸಾಹಿತ್ಯಗಳಲ್ಲಿ ಅಡಗಿರುವ ಸತ್ಯಗಳನ್ನು ತಿಳಿಯಲು ನಮಗೆ ಅಸಾಧ್ಯವಾಯಿತು. ನಂತರ ನಮ್ಮ ಒಳಗಿನ ಭಿನ್ನಾಭಿಪ್ರಾಯಗಳಿಂದ ನಮ್ಮನ್ನು ಬೇರೆಯವರು ವಸಾಹತು ನಡೆಸಿದರು. ನಾವು ನಮ್ಮತನದಿಂದ ದೂರವಾಗುತ್ತಾ ಬಂದೆವು. ಆದರೆ ಕಾಲವು ಇನ್ನೂ ಮುಗಿಯಲಿಲ್ಲ. ಕಳೆದು ಹೋಗುತ್ತಿರುವ ಧಾರ್ಮಿಕತೆಯನ್ನು ಪುನರ್ ಸ್ಥಾಪಿಸುವಲ್ಲಿ ನಮ್ಮ ಪ್ರಯತ್ನವು ಸಾಗಬೇಕು. ಎಷ್ಟೇ ಧರ್ಮವು ನಾಶವಾದರೂ ವಿನಾಶ ಎಂಬುವುದು ಈ ನಮ್ಮ ಸನಾತನ ಹಿಂದೂ ವೈದಿಕ ಧರ್ಮಕ್ಕೆ ಇಲ್ಲ. ನಮ್ಮ ಸನಾತನ ಧರ್ಮ ಎಂದರೆ ಪ್ರಕೃತಿ. ಸೂರ್ಯ ಚಂದ್ರರು ಇರುವವರೆಗೂ ಈ ಧರ್ಮವು ಶಾಶ್ವತ. ಇದು ಆಚಾರ್ಯರ ತತ್ತ್ವ ಸಂದೇಶದ ಸಂಕ್ಷಿಪ್ತ ನೋಟವಾಗಿದೆ.
ಆಚಾರ್ಯರ ತತ್ತ್ವ ಸಂದೇಶವನ್ನು ಮುಂದಿನ ಭಾಗದಲ್ಲಿ ನಿರೀಕ್ಷಿಸಿ…

Continue Reading

ಅಂಕಣ

Sadguru Column : ತಂತ್ರಜ್ಞಾನ ನಿರುದ್ಯೋಗಕ್ಕೆ ಕಾರಣವಾಗಬಹುದೇ?

Sadguru Column : ಕೃತಕ ಬುದ್ಧಿಮತ್ತೆ ನಮ್ಮ ಉದ್ಯೋಗಗಳನ್ನು ಕಿತ್ತುಕೊಳ್ಳಲಿದೆಯೇ? ಇದು ಎಲ್ಲರನ್ನೂ ಆತಂಕಕ್ಕೆ ಸಿಲುಕಿರುವ ಪ್ರಶ್ನೆ. ಹಾಗಿದ್ದರೆ ಈ ಕೃತಕತೆಯನ್ನು ಮೀರಿ ನಿಲ್ಲುವುದು ಹೇಗೆ? ಸದ್ಗುರು ಉತ್ತರಿಸುತ್ತಾರೆ.

VISTARANEWS.COM


on

Sadguru and Artificial intelligence
Koo
Sadhuru Jaggi Vasudev

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)

ಕಳೆದ ಒಂದೂವರೆ ವರ್ಷಗಳಿಂದ ಜಗತ್ತಿನ ಎಲ್ಲಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (Artificial Intelligence) ಕಾನ್ಫರೆನ್ಸ್‌ಗಳಿಗೆ ನನ್ನನ್ನು ಆಹ್ವಾನಿಸುತ್ತಿದ್ದಾರೆ. ನನಗೆ ಆಶ್ಚರ್ಯ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಗ್ಗೆ ಮಾತನಾಡುವುದಕ್ಕೆ ನನ್ನನ್ನು ಏಕೆ ಕರೆಯುತ್ತಿದ್ದಾರೆ ಎಂದು. ಏಕೆಂದರೆ ನಾನು ಅದರಲ್ಲಿ ಪರಿಣಿತ ಅಲ್ಲ. ನಾನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೂಡ ಅಲ್ಲ (Sadguru Column).

ಒಮ್ಮೆ ಸೇಂಟ್ ಪೀಟರ್ಸ್‌ಬರ್ಗ್‌ನ ಕಾನ್ಫರೆನ್ಸಿನಲ್ಲಿ, ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಎಲ್ಲಾ ಕಾನ್ಫರೆನ್ಸ್‌ಗಳಿಗೆ ನನ್ನನ್ನು ಏಕೆ ಕರೆಯುತ್ತಿದ್ದೀರಿ, ನಾನು ಸಹಜ ಬುದ್ಧಿಮತ್ತೆ, ಕೃತಕ ಬುದ್ಧಿಮತ್ತೆ ಅಲ್ಲ’ ಎಂದು ಕೇಳಿದೆ. ಅದಕ್ಕವರು, “ಸಮಸ್ಯೆ ಏನಂದರೆ, ನಾವೆಲ್ಲ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಇನ್ನು ಹತ್ತು ವರ್ಷ ಕಳೆದ ಮೇಲೆ ನಾವೇನು ಮಾಡಬೇಕು” ಎಂದರು. ಅವರೆಲ್ಲ ದೊಡ್ಡ ಯೂನಿವರ್ಸಿಟಿಗಳಲ್ಲಿ ಪ್ರೊಫೆಸರ್‌ಗಳು – ಎಮ್.ಐ.ಟಿ, ಹಾರ್ವರ್ಡ್‍ನಂತಹ ಜಾಗಗಳಲ್ಲಿದ್ದವರು ಅವರಿಗೆ ಈ ಪ್ರಶ್ನೆ ಉದ್ಭವಿಸಿದೆ, ಏಕೆಂದರೆ ನಮಗೆ ಗೊತ್ತಿದ್ದ ಎಲ್ಲವೂ, ನಮ್ಮ ಸೀಮಿತದಲ್ಲಿದ್ದೆಲ್ಲವೂ ದಿಢೀರನೇ ಈಗ ಆ ಯಂತ್ರದಲ್ಲಿರುತ್ತದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂದರೇನು ಎಂದು ಅರ್ಥ ಮಾಡಿಕೊಳ್ಳಿ – ಮಾಹಿತಿಗಳನ್ನು ಶೇಖರಿಸಿ, ಅದನ್ನು ವಿಶ್ಲೇಷಿಸಿ, ಅಗತ್ಯ ಬಿದ್ದಾಗ ನಿಮಗೆ ಬೇಕಾದ ಹಾಗೆ ಬಳಸುವುದು- ಇವು ಇನ್ನು ಮುಂದೆ ಮಾನವ ಸಾಮರ್ಥ್ಯಗಳಲ್ಲಿ ಅಮೂಲ್ಯವಾಗಿ ಉಳಿಯುವುದಿಲ್ಲ. ಏಕೆಂದರೆ ಒಂದು ಸರಳ ಯಂತ್ರ ಅದನ್ನು ಮನುಷ್ಯರಿಗಿಂತ ಉತ್ತಮವಾಗಿ ಮಾಡುತ್ತದೆ. ಈಗಾಗಲೇ ಗೂಗಲ್ ಲೇಡಿ ನಿಮಗಿಂತ ಬುದ್ಧಿವಂತಳಾಗಿ ಕಾಣುತ್ತಿದ್ದಾಳೆ.

ಅವಳು ‘ನನಗಿಂತ ಬುದ್ಧಿವಂತೆ’ ಎಂದರೆ ನನಗೇನೂ ಪರವಾಗಿಲ್ಲ, ಏಕೆಂದರೆ ನಾನೇನು ಶಿಕ್ಷಿತ ಅಲ್ಲ. ಆದರೆ ನೀವು? ಬುದ್ಧಿವಂತರು. ನಮ್ಮೆಲ್ಲರಿಗಿಂತ ಬುದ್ಧಿವಂತೆ ಅಲ್ಲವಾ ಅವಳು? ಏನಾದರೂ ಕೇಳಿ, ಕಣ್ಮುಚ್ಚಿಬಿಡುವುದರಲ್ಲಿ ಹೇಳುತ್ತಾಳೆ.
ಇದು ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂದರೆ, ಬೌದ್ಧಿಕವಾಗಿ ನೀವು ಮಾಡುತ್ತಿರುವ ಎಲ್ಲವೂ ಮೂರ್ಖವಾಗಿ, ಅರ್ಥಹೀನವಾಗಿ ಕಾಣುತ್ತಿದೆ.

Sadguru and Artificial intelligence1

ಇದು ಆಗಿದ್ದು ನಾನು ಹದಿಮೂರು ವರ್ಷದವನಾಗಿದ್ದಾಗ ಎನ್ನಿಸುತ್ತದೆ. ಮೊದಲ ಬಾರಿಗೆ ನಾನು ಕ್ಯಾಲ್ಕು ಲೇಟರನ್ನು ನೋಡಿದೆ. ಪ್ಯಾನಸಾನಿಕ್ ಕ್ಯಾಲ್ಕುಲೇಟರ್. ಆ ಕಾಲದಲ್ಲಿ ಅದಕ್ಕೆ 100-110 ರೂಪಾಯಿ. ತುಂಬಾ ದುಬಾರಿ. ಇವತ್ತು ಅದಕ್ಕಿಂತ ಜಾಸ್ತಿ ಬೆಲೆಯ ಕಾಫಿ ಕುಡಿಯುತ್ತೀರಿ! 110 ರೂಪಾಯಿ ಪ್ಯಾನಸಾನಿಕ್‍ಗೆ, ಸೋನಿಗೆ 125. ಹಾಗಾಗಿ ಕಡಿಮೆ ಬೆಲೆಯ ಪ್ಯಾನಸಾನಿಕ್ ತೆಗೆದುಕೊಳ್ಳುತ್ತಿದ್ದೆವು. ಆದರೆ ನಾನು ತೆಗೆದುಕೊಂಡಿರಲಿಲ್ಲ. ಯಾರೋ ತಂದು ತೋರಿಸಿದ್ದರು. ಟುಕ್ ಟುಕ್ ಟುಕ್ ಉತ್ತರ ಬಂದಿತ್ತು. ಅದನ್ನು ಮೊದಲು ನೋಡಿದಾಗ, ಗಣಿತದ ತರಗತಿಯಲ್ಲಿ ಯಾಕೆ ಸಮಯ ವ್ಯರ್ಥ ಮಾಡುತ್ತಿದ್ದೇನೆ ಎನ್ನಿಸಿತ್ತು. ಈ 100 ರೂ ವಸ್ತು ಎಲ್ಲವನ್ನು ಉತ್ತರಿಸುವುದಾದರೆ, ನಮಗೆ ಹತ್ತು ವರ್ಷಗಳ ಹಿಂಸೆ ಏಕೆ? ಈ ಸಂಖ್ಯಾಶಾಸ್ತ್ರ, ಗಣಿತ ಇವೆಲ್ಲ ಏಕೆ? ಅದು ಸೈನ್ ತೀಟಾ, ಕಾಸ್ ತೀಟಾ ಎಲ್ಲವನ್ನೂ ಮಾಡುತ್ತದೆ. ಆಗಲೇ ಅನಿಸಿತ್ತು, ಹೀಗೆ ಎಲ್ಲವನ್ನೂ ಮಾಡುವ ದೊಡ್ಡ ಯಂತ್ರ ಬರಬೇಕು. ಆಗ ನಾನು ಶಾಲೆಗೆ ಹೋಗುವುದು ಬೇಕಾಗುವುದಿಲ್ಲ ಅಂತ. ಕೊನೆಗೂ ನನ್ನ ಕನಸು ನನಸಾಗುತ್ತಿದೆ.

ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಇವತ್ತಿರುವ ಶಿಕ್ಷಣ, ವೃತ್ತಿಗಳು ಅರ್ಥಹೀನವಾಗುತ್ತವೆ. ಏಕೆಂದರೆ, ಈಗ ಈ ಯಂತ್ರಗಳನ್ನು ನಿರ್ಮಿಸುತ್ತಿದ್ದಾರೆ, ಕಲಿಕೆಗೆ ಹಲವಾರು ವರ್ಷಗಳ ಸಮಯ ವ್ಯಯಿಸುವುದು ಅರ್ಥಹೀನವಾಗುತ್ತದೆ. ಒಬ್ಬ ಗ್ರಾಹಕ ಬಂದು ತನಗೆ ಯಾವ ರೀತಿ ಮನೆ ಬೇಕು, ತನ್ನ ಅಭಿರುಚಿ ಏನು, ಸಂಸ್ಕೃತಿ ಏನು, ತನಗೇನಿಷ್ಟ, ಅದು ಹೇಗಿರಬೇಕು, ತನ್ನ ಬಂಡವಾಳ ಎಷ್ಟು ಎಂದು ಹೇಳಿದರೆ, ಆ ಯಂತ್ರ ಒಂದು ಇಡೀ ಮನೆಯ ವಿನ್ಯಾಸ ಮಾಡಿ, ಹತ್ತು ಭಿನ್ನ ಆಯ್ಕೆಗಳನ್ನ ಕೊಡುತ್ತದೆ – ಪೇಂಟಿಂಗ್, ಗೋಡೆಯ ಅಲಂಕಾರ, ಪೀಠೋಪಕರಣ ಎಲ್ಲವನ್ನೂ ಕೂಡ. ಈಗ ಹೇಳುತ್ತಿದ್ದಾರೆ, ಇನ್ನು 5-7 ವರ್ಷಗಳಲ್ಲಿ ಅದು ಮನೆಯ ವಿನ್ಯಾಸ ಮಾಡಿ, ಕಟ್ಟುತ್ತದೆ ಕೂಡ ಎಂದು. ಮನೆಗಳ ವಿನ್ಯಾಸ ಮಾಡುವವರ ಬಗ್ಗೆ ಯೋಚಿಸಿ!

Sadguru and belief

ನೀವು ಸಾಕಷ್ಟು ಜನರು ಕೆಲಸ ಕಳೆದುಕೊಳ್ಳುತ್ತೀರಿ – ಯಂತ್ರಕ್ಕೆ ಮಾಡಲಾಗದೆ ಇರುವುದನ್ನು ನೀವು ಮಾಡದಿದ್ದರೆ! ನೀವೆಲ್ಲ ಇದಕ್ಕೆ ಸಿದ್ಧರಿರಬೇಕು. ನಿಮ್ಮ ಬುದ್ಧಿಗೆ ಮೀರಿದ್ದನ್ನು ಏನಾದರೂ ಮಾಡಲು ಸಾಧ್ಯವಾಗಬೇಕು. ಮನುಷ್ಯರ ಪ್ರಜ್ಞಾಶಕ್ತಿಗೆ ಹಲವು ಪದರಗಳಿವೆ. ಬುದ್ಧಿ ತುಂಬಾ ಸಣ್ಣ ಭಾಗ ಅಷ್ಟೇ. ಈಗಿನ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಮೀಸಲಾಗಿರುವುದು ಮನುಷ್ಯರ ಬೌದ್ಧಿಕ ಬೆಳವಣಿಗೆಗೆ ಮಾತ್ರ. ಹಾಗೆ ಬದುಕುವುದು ಶ್ರೇಷ್ಠ ಎಂದುಕೊಂಡಿದ್ದೀವಿ. ಆದರೆ ಅದು ಹಾಗಲ್ಲ.

ಆದರೆ ಯೋಗದಲ್ಲಿ ಮನುಷ್ಯರ ಪ್ರಜ್ಞಾಶಕ್ತಿಯನ್ನು ಹದಿನಾರು ಭಾಗಗಳಾಗಿ ನೋಡುತ್ತೇವೆ. ನೀವು ಪ್ರಜ್ಞಾಶಕ್ತಿಯ ಇತರ ಆಯಾಮಗಳನ್ನು ಪರಿಶೋಧಿಸಿದರೆ, ಆಗ ಮಾತ್ರ ಪ್ರಸ್ತುತರಾಗುತ್ತೀರಿ. ಬೌದ್ಧಿಕತೆ ಎಂದರೆ ನಿಮ್ಮ ಬುದ್ಧಿಯು ಶೇಖರಿಸಿದ ಮಾಹಿತಿ ಇಲ್ಲದೆ ಕೆಲಸ ಮಾಡಲಾಗುವುದಿಲ್ಲ. ಮಾಹಿತಿಗಳ ಶೇಖರಣೆ, ವಿಶ್ಲೇಷಣೆ ಮತ್ತು ವಿಶ್ಲೇಷಣೆಯ ಕಾರ್ಯರೂಪಕ್ಕೆ ತರುವುದನ್ನು ನಿಮಗಿಂತ ಚೆನ್ನಾಗಿ ಯಂತ್ರ ಮಾಡುತ್ತದೆ. ಮನುಷ್ಯರು ಯಾವಾಗಲೂ ತಪ್ಪು ಮಾಡಬಹುದು, ಮಾಹಿತಿಯನ್ನು ತಪ್ಪಾಗಿಸಬಹುದು. ಆದರೆ ಯಂತ್ರ ತುಂಬಾ ನಿಖರ. ಆರಾಮವಾಗಿ ಮಾಡುತ್ತದೆ. ಹಾಗಾಗಿ ಬೌದ್ಧಿಕವಾಗಿ ನೀವು ಮಾಡಬಹುದಾದ ಎಲ್ಲವೂ ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಅರ್ಥಹೀನವಾಗುತ್ತವೆ. ಬುದ್ಧಿಯನ್ನು ಮೀರಿದ್ದನ್ನೇನಾದರೂ ನೀವು ಹೊಂದಬೇಕು.

Sadguru Jaggi vasudev and Adiyogi

ಬುದ್ಧಿಯನ್ನು ಮೀರಿದ್ದು ಎಂದಾಗ ಅದನ್ನು ಅನೇಕ ರೀತಿಯಲ್ಲಿ ನೋಡಬಹುದು. ಒಂದು ಸರಳವಾದ ಉದಾಹರಣೆ ತೆಗೆದುಕೊಳ್ಳಿ. ನೀವು ತಿನ್ನುವ ಆಹಾರ ಮೂರು ನಾಲ್ಕು ಗಂಟೆಯೊಳಗೆ ಒಂದು ಮನುಷ್ಯನಾಗತ್ತೆ ಅಲ್ವಾ? ಎಂದರೆ ನೀವು ಆಹಾರದಿಂದ ಅಷ್ಟು ಸಂಕೀರ್ಣ ಯಂತ್ರವನ್ನು ತಯಾರಿಸುತ್ತಿದ್ದೀರ. ಅದೊಂದು ರೀತಿಯ ಥ್ರೀಡಿ ಪ್ರಿಂಟರ್. ನೀವು ಮ್ಯಾಗಿ ಹಾಕಿದ್ರೂ, ಚಪಾತಿ ಹಾಕಿದ್ರೂ ಅದೊಂದು ಮನುಷ್ಯ ಆಗುತ್ತೆ. ಇದು ಭೂಮಿಯ ಮೇಲಿರುವ ಅತ್ಯಂತ ಸಂಕೀರ್ಣ ಯಂತ್ರ. ಇದನ್ನು ನೀವು ತಿನ್ನುವ ಆಹಾರದಿಂದ ನಿರ್ಮಿಸಿರುವುದು. ನೀವು ತಿನ್ನುವ ಆಹಾರ ನಿಮ್ಮ ಕಾಲಕೆಳಗಿರುವ ಮಣ್ಣು. ಅದು ಮೈದಳೆದಿದೆ. ಆ ಪ್ರಜ್ಞಾಶಕ್ತಿ ನಿಮ್ಮೊಳಗೆ ಇದೆಯೇ? ಇಲ್ಲವೇ? ನೀವು ಪ್ರಜ್ಞಾಶಕ್ತಿಯ ಈ ಆಯಾಮಕ್ಕೆ ಪ್ರಜ್ಞಾಪೂರ್ವಕ ಸಂಪರ್ಕ ಸಾಧಿಸಿದರೆ ಚಮತ್ಕಾರಿಕ ಎನ್ನುವ ಹಾಗೆ ಜೀವಿಸುತ್ತೀರಿ. ಆಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಮ್ಮನ್ನು ತೊಂದರೆ ಮಾಡುವುದಿಲ್ಲ. ತುಂಬಾ ಸಂತೋಷವಾಗಿರುತ್ತೀರಿ. ಏಕೆಂದರೆ, ಕ್ಷುಲ್ಲಕ ಕೆಲಸವನ್ನೆಲ್ಲ ಯಂತ್ರ ಮಾಡುತ್ತಿದ್ದರೆ – ಎಂಥಾ ಅದ್ಭುತ ಪ್ರಪಂಚ ಇದಾಗುತ್ತದೆ! ನಾನದನ್ನು ಎದುರು ನೋಡುತ್ತಿದ್ದೇನೆ.

ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ ಮೂಲಕ ತಿಳಿಸಿ

Continue Reading

ಅಂಕಣ

ತಾತಯ್ಯ ತತ್ವಾಮೃತಂ ಅಂಕಣ: ಭಕ್ತಜನಪೋಷ… ವೈಕುಂಠ ವಿಠ್ಠಲೇಶ…

ಭಕ್ತ ಜನರನ್ನು ಪೋಷಿಸುವ, ವೈಕುಂಠದಲ್ಲಿ ವಾಸಿಸುವ ವಿಠ್ಠಲೇಶನೇ, ಬೇಗ ಪ್ರತ್ಯಕ್ಷವಾಗು, ನನಗೆ ಇನ್ಯಾರು ದಿಕ್ಕು ಎಂದು ತಾತಯ್ಯನವರು ಪರಿಪರಿಯಾಗಿ ಪರಮಾತ್ಮನಲ್ಲಿ ಪ್ರಾರ್ಥಿಸುತ್ತಾ ಭಕ್ತರಿಗೆ ಭಕ್ತಿಮಾರ್ಗದ ತತ್ವವನ್ನು ಉಪದೇಶ ಮಾಡಿದ್ದಾರೆ.

VISTARANEWS.COM


on

kaivara tatayya12
Koo
jayaram-column

ಪರಮಾತ್ಮ ಭಕ್ತವತ್ಸಲನೆಂಬ ಬಿರುದನ್ನು ಪಡೆದಿರುವವನು. ಕೈವಾರದ ತಾತಯ್ಯನವರು ತಮ್ಮ ಅಮರನಾರೇಯಣ ಶತಕದಲ್ಲಿ ಭಕ್ತಿತತ್ವದ ಹಲವಾರು ಬೋಧನೆಗಳನ್ನು ರಚಿಸಿದ್ದಾರೆ. ಪರಮಾತ್ಮನಲ್ಲಿ ತಾತಯ್ಯನವರು ಪ್ರಾರ್ಥಿಸುತ್ತಾ, ನನ್ನ ಕೈಬಿಡಬೇಡ, ಪ್ರತ್ಯಕ್ಷವಾಗಿ ಬಂದು ದರ್ಶನಭಾಗ್ಯವನ್ನು ನೀಡು, ಏಕೆಂದರೆ ನಾನು ನಿನ್ನನ್ನೇ ಆಶ್ರಯಿಸಿರುವ ಭಕ್ತ, ನೀನು ಭಕ್ತವತ್ಸಲನೆಂಬ ಬಿರುದು ಹೊತ್ತಿರುವ ಭಕ್ತಪೋಷ. ಆದ್ದರಿಂದ ನಿನ್ನನ್ನು ಬೇಡುವ ಅಧಿಕಾರ ನನಗಿದೆ. ನನ್ನ ಪ್ರಾರ್ಥನೆಯನ್ನು ಈಡೇರಿಸುವ ಹೊಣೆಯು ನಿನ್ನದೆ ಎನ್ನುತ್ತಾ ಪರಮಾತ್ಮನಲ್ಲಿ ಭಕ್ತಿಯ ನಿವೇದನೆಯನ್ನು ಈ ರೀತಿಯಾಗಿ ಮಾಡುತ್ತಿದ್ದಾರೆ.

ಪ್ರಸ್ತುತ ಪದ್ಯದಲ್ಲಿ ಭಗವಂತನು ಯಾವ ಯಾವ ರೀತಿಯಲ್ಲಿ ಭಕ್ತರನ್ನು ಕಾಪಾಡಿ ಭಕ್ತಪೋಷಕನಾದನೆಂಬ ವಿವರಗಳನ್ನು ತಾತಯ್ಯನವರು ಬಿನ್ನವಿಸಿಕೊಳ್ಳುತ್ತಿದ್ದಾರೆ.

ರಾವಣುನಿ ತಮ್ಮುನಿ ರಾಜು ಜೇಸಿನಯಟ್ಲು
ಅರ್ಕಸುತುನಕು ಅಭಯಮಿಚ್ಚಿನಟ್ಲು
ಆಂಜನೇಯುನಿ ಮೀದ ಅತಿ ಪ್ರೇಮ ವುನ್ನಟ್ಲು
ಅಕ್ರೂರಭಕ್ತುನಿ ಅದರಿಂಚಿನಟ್ಲು||

ಲಂಕಾಧಿಪತಿಯಾದ ರಾವಣನ ತಮ್ಮ ವಿಭೀಷಣ. ಹದಿನಾಲ್ಕು ಮಂದಿ ಪರಮ ಭಾಗವತೋತ್ತಮರಲ್ಲಿ ವಿಭೀಷಣ ಕೊನೆಯವನು. ಈತನು ಶರಣಾಗತ ಭಕ್ತ. ಧರ್ಮವನ್ನು ಎತ್ತಿಹಿಡಿಯುವುದಕ್ಕಾಗಿ ಅಣ್ಣನಾದ ರಾವಣನ ರಾಕ್ಷಸೀ ಗುಣವನ್ನು ಧಿಕ್ಕರಿಸಿ, ದೈವಿಗುಣಗಳನ್ನು ಹೊಂದಿದ್ದ ಶ್ರೀರಾಮನಲ್ಲಿಗೆ ಬಂದು ಶರಣಾಗಿ ಬಂದವನು ವಿಭೀಷಣ. ರಾವಣನಿಗೆ ಎದುರು ನಿಲ್ಲುವ ಧೈರ್ಯವನ್ನು ಮಾಡದಿದ್ದರೆ ವಿಭೀಷಣನು ಎಲ್ಲರಂತೆ ಮರಣವನ್ನು ಹೊಂದಬೇಕಾಗಿತ್ತು. ರಾವಣನ ತಮ್ಮಂದಿರು, ಮಕ್ಕಳು ಎಲ್ಲರೂ ಯುದ್ಧದಲ್ಲಿ ಮರಣವನ್ನು ಹೊಂದಿದರು. ಆದರೆ ವಿಭೀಷಣನ ಭಕ್ತಿಯ ದೂರದ ಆಲೋಚನೆಯಿಂದ ರಾಮನಲ್ಲಿಗೆ ಬಂದು ಶರಣಾದನು. ಕೊನೆಗೆ ರಾವಣನ ಮರಣದ ನಂತರ ಶ್ರೀರಾಮನು ಲಂಕೆಗೆ ವಾರಸುದಾರನಾದ ವಿಭೀಷಣನಿಗೆ ಪಟ್ಟಾಭಿಷೇಕವನ್ನು ಮಾಡುತ್ತಾನೆ. ಇದನ್ನೇ ತಾತಯ್ಯನವರು ಶ್ರೀರಾಮ ಅವತಾರವೆತ್ತಿ ಶರಣಾಗತನಾದ ವಿಭೀಷಣನ ರಕ್ಷಣೆ ಮಾಡಿದಂತೆ ನನ್ನನ್ನು ಕಾಪಾಡು ಎನ್ನುತ್ತಿದ್ದಾರೆ.

ಅರ್ಕಸುತನೆಂದರೆ ಸೂರ್ಯಪುತ್ರನಾದ ಸುಗ್ರೀವ. ವಾಲಿಯು ತಮ್ಮನಾದ ಸುಗ್ರೀವನ ಪತ್ನಿಯನ್ನು ಅಪಹರಿಸಿ, ರಾಜ್ಯದಿಂದ ಹೊರದೂಡಿದ ಪ್ರಸಂಗವು ರಾಮಾಯಣದ ಕಿಷ್ಕಿಂಧಾ ಕಾಂಡದಲ್ಲಿದೆ. ಸೀತಾಪಹರಣವಾದ ನಂತರ ರಾಮಲಕ್ಷ್ಮಣರು ಋಷ್ಯಮೂಕ ಪರ್ವತಕ್ಕೆ ಬರುತ್ತಾರೆ. ಇಲ್ಲಿ ರಾಮನಿಗೂ ಸುಗ್ರೀವನಿಗೂ ಸ್ನೇಹವಾಗುತ್ತದೆ. ಸೀತಾಮಾತೆಯನ್ನು ಹುಡುಕಿಕೊಡುವಲ್ಲಿ ಸುಗ್ರೀವನು ತನ್ನ ವಾನರಸೈನ್ಯವನ್ನು ಅಣಿಗೊಳಿಸುತ್ತಾನೆ. ಶ್ರೀರಾಮನು ಸುಗ್ರೀವನಿಗೆ ಅಭಯವನ್ನು ನೀಡುತ್ತಾನೆ. ಅದರಂತೆ ವಾಲಿಯನ್ನು ಸಂಹಾರ ಮಾಡಿ, ಸುಗ್ರೀವನಿಗೆ ರಾಜ್ಯಪಟ್ಟಾಭಿಷೇಕವನ್ನು ಮಾಡಿಸುತ್ತಾನೆ. ಈ ಪ್ರಸಂಗವನ್ನು ತಾತಯ್ಯನವರು ಕೊಂಡಾಡುತ್ತಾ, ಸುಗ್ರೀವನಿಗೆ ದರ್ಶನ ಮತ್ತು ಅಭಯವನ್ನು ನೀಡಿದಂತೆ ನನಗೂ ಅಭಯವನ್ನು ನೀಡು ಎನ್ನುತ್ತಿದ್ದಾರೆ ತಾತಯ್ಯನವರು.

ಭಗವಂತನ ದರ್ಶನ-ಪ್ರೇಮ

ನಿಜವಾದ ಭಕ್ತನಿಗೆ ಏನು ಬೇಕು? ಪರಮಾತ್ಮನ ಪ್ರತ್ಯಕ್ಷ ದರ್ಶನ ಹಾಗೂ ಭಗವಂತನ ಪ್ರೇಮ. ಇದೆರಡನ್ನೂ ಪಡೆದವನೇ ರಾಮದೂತ ಆಂಜನೇಯ. ಇದನ್ನೇ ತಾತಯ್ಯನವರು “ಆಂಜನೇಯುನಿ ಮೀದ ಅತಿ ಪ್ರೇಮ ವುನ್ನಟ್ಲು” ಎಂದಿದ್ದಾರೆ. ಶ್ರೀರಾಮನಲ್ಲಿ ಆಂಜನೇಯನು ಹೊಂದಿದ್ದ ಪ್ರೇಮಭಕ್ತಿ ಅಪಾರವಾದುದು. ಶ್ರೀರಾಮನು ಆಂಜನೇಯನಿಗೆ ಧನ,ಕನಕ, ವಸ್ತು, ವಾಹನ ಯಾವುದನ್ನೂ ನೀಡಲಿಲ್ಲ. ಬದಲಾಗಿ ಪ್ರೀತಿಯಿಂದ ಬಾಚಿತಬ್ಬಿಕೊಂಡು “ಹನುಮ, ನೀನು ಮಾಡಿರುವ ಉಪಕಾರಕ್ಕೆ ನನ್ನ ಪಂಚಪ್ರಾಣಗಳನ್ನು ನೀಡಿದರೂ ಸರಿಹೊಂದುವುದಿಲ್ಲ. ಆಗಲೂ ನಾನು ನಿನಗೆ ಋಣಿಯಾಗಿರುತ್ತೇನೆ. ನಾನು ಋಣಿಯಾಗಿ ಉಳಿಯುವುದೇ ಲೇಸು. ಏಕೆಂದರೆ ಅಪತ್ಕಾಲದಲ್ಲಿ ಮಾತ್ರ ಉಪಕಾರ ಮಾಡುತ್ತಾರೆ. ನಿನಗೆ ಎಂದೆಂದಿಗೂ ಅಂತಹ ಅಪತ್ಕಾಲದ ಸಮಯ ಬರುವುದೇ ಬೇಡ” ಎಂದು ಅನುಗ್ರಹಿಸುತ್ತಾನೆ. ಆಂಜನೇಯನಿಗೆ ತೋರಿದ ಪ್ರೇಮ ಮತ್ತು ದರ್ಶನಭಾಗ್ಯವನ್ನು ನೀಡುವಂತೆ ತಾತಯ್ಯನವರು ಬೇಡಿದ್ದಾರೆ.

Narasimha Half-Lion Half-Human Avatar Vishnu Avatars

ಅಕ್ರೂರ ಚರಿತ್ರೆಯು ಭಾಗವತದ ದಶಮಸ್ಕಂಧದಲ್ಲಿ ಬರುತ್ತದೆ. ಅಕ್ರೂರ ಕಂಸನ ಮಂತ್ರಿ. ಆದರೆ ಶ್ರೀಕೃಷ್ಣನ ಅಂತರಂಗ ಭಕ್ತ. ಕಂಸನ ಆಜ್ಞೆಯಂತೆ ನಂದಗೋಕುಲಕ್ಕೆ ಬರುತ್ತಾನೆ. ಗೋಪಿಕೆಯರ ಕೃಷ್ಣಭಕ್ತಿಯನ್ನು ಕೇಳಿ ಭಕ್ತಿಪರವಶನಾಗುತ್ತಾನೆ. ಬಲರಾಮ, ಕೃಷ್ಣರನ್ನು ಮಧುರೆಗೆ ರಥದಲ್ಲಿ ಕರೆದುಕೊಂಡು ಹೋಗುವಾಗ ನಡುದಾರಿಯಲ್ಲಿ ಯಮುನಾ ನದಿಯಲ್ಲಿ ಸ್ನಾನಕ್ಕಾಗಿ ಇಳಿಯುತ್ತಾರೆ. ಆಗ ಅವನಿಗೆ ಕೃಷ್ಣಲೀಲೆಯ ಅನುಭವವಾಗುತ್ತದೆ. ಯಮುನಾ ನದಿಯ ನೀರಿನಲ್ಲೂ ಕೃಷ್ಣನನ್ನು ಕಾಣುತ್ತಾನೆ, ರಥದಲ್ಲೂ ಕೃಷ್ಣನನ್ನು ಕಾಣುತ್ತಾನೆ. ಆಗ ಭಾವಪರವಶನಾಗಿ ಭಕ್ತಿಯಿಂದ ಶ್ರೀಕೃಷ್ಣನ ಸ್ತೋತ್ರ ಮಾಡುತ್ತಾನೆ. ಆಗ ಶ್ರೀಕೃಷ್ಣನು ಅಕ್ರೂರನಿಗೆ ವಿಶ್ವರೂಪದರ್ಶನವನ್ನು ತೋರಿ ಅನುಗ್ರಹಿಸುತ್ತಾನೆ. ಈ ರೀತಿಯಾಗಿ ತನಗೂ ದರ್ಶನಕೊಟ್ಟು ಆದರಿಸು ಪರಮಾತ್ಮ ಎಂದು ತಾತಯ್ಯನವರು ವಿನಂತಿಸಿದ್ದಾರೆ.

ಗಜೇಂದ್ರ ಸ್ಮರಣೆ

ಮೊರಬೆಟ್ಟುಕೊನ್ನ ಯಾ ಕರಿನಿ ಗಾಚಿನಯಟ್ಲು
ಯದುಕುಲಂಬೆಲ್ಲ ಯೀಡೇರ್ಚಿನಟ್ಲು
ಅಮರೇಂದ್ರತನಯುನಕು ಆತ್ಮ ದೆಲಿಪಿನಯಟ್ಲು
ಪ್ರಹ್ಲಾದುನಕು ಪ್ರಸನ್ನಮೈನಯಟ್ಲು ||

ಮೊರೆಯಿಟ್ಟ ಕರಿರಾಜನನ್ನು ಕಾಪಾಡಿದ ಗಜೇಂದ್ರಮೋಕ್ಷ ವೃತ್ತಾಂತವನ್ನು ತಾತಯ್ಯನವರು ಸ್ಮರಿಸುತ್ತಿದ್ದಾರೆ. ವಿಷ್ಣುಭಕ್ತನಾದ ಇಂದ್ರದ್ಯುಮ್ನನೆಂಬ ರಾಜ ಅಗಸ್ತ್ಯಮುನಿಯ ಶಾಪದಿಂದಾಗಿ ಆನೆಯಾಗಿ ಹುಟ್ಟಿದನು. ಹೀಗೆಯೇ ಹೂಹೂ ಎಂಬ ಗಂಧರ್ವನು ದೇವಲಋಷಿಯ ಶಾಪದಿಂದ ಮೊಸಳೆಯಾಗಿ ಹುಟ್ಟಿದನು. ತ್ರಿಕೂಟಪರ್ವತದ ತಪ್ಪಲಿನ ಕೊಳದಲ್ಲಿ ಆನೆಯು ನೀರು ಕುಡಿದು ಜಲಕ್ರೀಡೆಯಲ್ಲಿರುವಾಗ, ನೀರಿನಲ್ಲಿದ್ದ ಮೊಸಳೆ ಆ ಆನೆಯ ಕಾಲನ್ನು ಹಿಡಿಯಿತು. ಆನೆಯು, ಮೊಸಳೆಯೊಂದಿಗೆ ಹೋರಾಡಿ, ಹೋರಾಡಿ ಸುಸ್ತಾಗಿ ಕೊನೆಗೆ ಪರಮಾತ್ಮನಲ್ಲಿ ಮೊರೆಯಿಟ್ಟಿತು. ಗರುಡಾರೂಢನಾಗಿ ಶ್ರೀಮಹಾವಿಷ್ಣುವು ಬಂದಾಗ ತನ್ನ ಸೊಂಡಿಲಿನಿಂದ ಕಮಲಪುಷ್ಪವನ್ನು ಎತ್ತಿ ಅರ್ಪಿಸಿತು. ಆಗ ಶ್ರೀವಿಷ್ಣುವು ತನ್ನ ಚಕ್ರದಿಂದ ಮೊಸಳೆಯನ್ನು ಕೊಂದು ಶಾಪವಿಮೋಚನೆಯನ್ನು ಮಾಡಿದನು. ಆನೆಯಾಗಿದ್ದ ಭಕ್ತನನ್ನು ವೈಕುಂಠಕ್ಕೆ ಕರೆದುಕೊಂಡುಹೋದನು. ಇದೇ ಗಜೇಂದ್ರಮೋಕ್ಷದ ಭಕ್ತಿತತ್ವ. ಗಜರಾಜನ ಮೊರೆ ಕೇಳಿ ಬಂದು ಕಾಪಾಡಿದ ಹಾಗೆ ನನಗೂ ಪ್ರತ್ಯಕ್ಷವಾಗಿ ಬಾ ಎಂದು ಪರಮಾತ್ಮನಲ್ಲಿ ತಾತಯ್ಯನವರು ಬೇಡಿದ್ದಾರೆ.

sri krishna janmashtami2

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಉತ್ತಮ ಗುರುಬೋಧೆಯ ಫಲ

ಕೃಷ್ಣಾವತಾರದ ಕೊನೆಯ ಘಟ್ಟದಲ್ಲಿ ಯದುಕುಲದವರನ್ನು ಉದ್ಧರಿಸಿದ ವೃತ್ತಾಂತವಿದೆ. ಶ್ರೀಕೃಷ್ಣನ ಆಶ್ರಯದಲ್ಲಿದ್ದ ಯದುವೀರರು ಕುಡಿತ ಮುಂತಾದ ಕೆಟ್ಟ ಚಟಗಳನ್ನು ರೂಢಿಸಿಕೊಂಡಿರುತ್ತಾರೆ. ಅವರನ್ನು ಎದುರಿಸುವವರು ಇರುವುದಿಲ್ಲ. ಇಂತಹ ಸಮಯದಲ್ಲಿ ಶ್ರೀಕೃಷ್ಣನು ಮಾಯಾಲೀಲೆಯನ್ನು ರಚಿಸಿ, ಅವರೆಲ್ಲರೂ ಅಯುಧಗಳಿಂದ ಹಾಗೂ ಜೊಂಡುಹುಲ್ಲಿನಿಂದ ತಮ್ಮ ಬಂಧುಗಳನ್ನು ತಾವೇ ಹೊಡೆದುಕೊಂಡು ಎಲ್ಲರೂ ಸಾಯುತ್ತಾರೆ. ಅವರೆಲ್ಲರೂ ಶ್ರೀಕೃಷ್ಣನ ದರ್ಶನ ಮತ್ತು ಆಶೀರ್ವಾದದಿಂದ ಮುಕ್ತರಾಗುತ್ತಾರೆ. ಸಾವಿನ ಸಂದರ್ಭದಲ್ಲೂ ಯದುಕುಲದವರನ್ನು ತನ್ನವರೆಂದು ತಿಳಿದು ಶ್ರೀಕೃಷ್ಣನು ಕರುಣಿಸಿದ್ದನ್ನು ತಾತಯ್ಯನವರು ಹೊಗಳುತ್ತಾ, ಅಂತಹ ಕರುಣೆಯನ್ನು ನನ್ನ ಮೇಲೂ ತೋರಿಸಿ ಭವಸಾಗರವನ್ನು ದಾಟಿಸು ಎಂದು ಪ್ರಾರ್ಥಿಸಿದ್ದಾರೆ.

ಅಮರೇಂದ್ರತನಯನೆಂದರೆ ಅರ್ಜುನ. ಕುಂತೀಗರ್ಭದಲ್ಲಿ ಇಂದ್ರನ ಅಂಶದಿಂದ ಜನಿಸಿದವನೇ ಅಮರೇಂದ್ರತನಯ, ಅರ್ಜುನ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಬಂಧು-ಗುರುಗಳ ಮೋಹದಿಂದ ಯುದ್ಧ ಮಾಡಿ ಕೊಲ್ಲಲು ಹಿಂಜರಿದ ಅರ್ಜುನನಿಗೆ ಪಾರ್ಥಸಾರಥಿಯಾಗಿ ರಥದಲ್ಲಿ ಕುಳಿತಿದ್ದ ಶ್ರೀಕೃಷ್ಣನು ವಿವೇಕ ಹೇಳುತ್ತಾನೆ. ಆಗ ಶ್ರೀಕೃಷ್ಣನು ಅರ್ಜುನನಿಗೆ ಗೀತಾಬೋಧನೆಯ ಮೂಲಕ ಆತ್ಮತತ್ವವನ್ನು ತಿಳಿಸಿಕೊಡುತ್ತಾನೆ. ಯಾವ ರೀತಿಯಾಗಿ ಅರ್ಜುನನಿಗೆ ಪ್ರತ್ಯಕ್ಷವಾಗಿ ಆತ್ಮತತ್ವವನ್ನು ಬೋಧಿಸಿ ಸಲುಹಿದೆಯೋ, ಅದೇ ರೀತಿಯಾಗಿ ನನ್ನನ್ನು ಸಲಹು ಎಂದು ತಾತಯ್ಯನವರು ಪರಮಾತ್ಮನಲ್ಲಿ ಮೊರೆಯಿಟ್ಟಿದ್ದಾರೆ.

ಪ್ರಹ್ಲಾದ ಚರಿತ್ರೆಯು ಭಾಗವತದ ಸಪ್ತಮಸ್ಕಂಧದಲ್ಲಿ ಬರುತ್ತದೆ. ವಿಷ್ಣುವಿನ ಭಕ್ತನಾದ ಪ್ರಹ್ಲಾದನು ತಂದೆಯಾದ ಹಿರಣ್ಯಕಶಿಪುವಿಗೆ ಭಗವಂತನು ಎಲ್ಲೆಲ್ಲೂ ಇರುವನೆಂದು ನುಡಿಯುತ್ತಾನೆ. ಕಂಬದಿಂದ ನರಸಿಂಹರೂಪಿಯಾಗಿ ಬಂದ ಪರಮಾತ್ಮ ಹಿರಣ್ಯಕಶಿಪುವನ್ನು ಸಂಹರಿಸಿ, ಅವನ ಕರುಳನ್ನು ಧರಿಸಿ ಉಗ್ರ ಸ್ವರೂಪವನ್ನು ತಾಳುತ್ತಾನೆ. ಕೊನೆಗೆ ಪ್ರಹ್ಲಾದನ ಸ್ತ್ರೋತ್ರದಿಂದಲೇ ಉಗ್ರತ್ವವನ್ನು ಬಿಟ್ಟು ಶಾಂತರೂಪವನ್ನು ತಾಳಿ ಪ್ರಹ್ಲಾದನಿಗೆ ಪ್ರಸನ್ನವಾದಂತೆ ನನಗೂ ಪ್ರಸನ್ನನಾಗು ಎಂದು ಪರಮಾತ್ಮನಲ್ಲಿ ತಾತಯ್ಯನವರು ಪ್ರಾರ್ಥಿಸುತ್ತಿದ್ದಾರೆ.

ವೇಗ ಪ್ರತ್ಯಕ್ಷಮೈ ರಮ್ಮು ಯೆವರು ದಿಕ್ಕು
ಭಕ್ತಜನಪೋಷ ವೈಕುಂಠವಿಟ್ಠಲೇಶ||

ಭಕ್ತ ಜನರನ್ನು ಪೋಷಿಸುವ, ವೈಕುಂಠದಲ್ಲಿ ವಾಸಿಸುವ ವಿಠ್ಠಲೇಶನೇ, ಬೇಗ ಪ್ರತ್ಯಕ್ಷವಾಗು, ನನಗೆ ಇನ್ಯಾರು ದಿಕ್ಕು ಎಂದು ತಾತಯ್ಯನವರು ಪರಿಪರಿಯಾಗಿ ಪರಮಾತ್ಮನಲ್ಲಿ ಪ್ರಾರ್ಥಿಸುತ್ತಾ ಭಕ್ತರಿಗೆ ಭಕ್ತಿಮಾರ್ಗದ ತತ್ವವನ್ನು ಉಪದೇಶ ಮಾಡಿದ್ದಾರೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಭಕ್ತಿತತ್ವದಿಂದ ಮೋಕ್ಷ ಸಾಧನೆ

Continue Reading
Advertisement
Tea or Juice
ಆರೋಗ್ಯ19 mins ago

Tea or Juice: ಬೆಳಗ್ಗೆ ಟೀ ಕುಡಿದರೆ ಒಳ್ಳೆಯದೇ ಅಥವಾ ಹಣ್ಣಿನ ರಸ ಉತ್ತಮವೇ?

Dina Bhavishya
ಭವಿಷ್ಯ1 hour ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

kea
ಕರ್ನಾಟಕ6 hours ago

KEA: ಕೆಸೆಟ್-‌2023ರ ಪರಿಷ್ಕೃತ ಕೀ ಉತ್ತರ ಪ್ರಕಟ; ಹೀಗೆ ಪರಿಶೀಲಿಸಿ

Viral News: Holi at delhi metro
ದೇಶ6 hours ago

Viral News : ವೈರಲ್​ ವಿಡಿಯೊಗಾಗಿ ಅಸಭ್ಯವಾಗಿ ವರ್ತಿಸಿದ ಡೆಲ್ಲಿ ಯುವತಿಯರು ಅರೆಸ್ಟ್​!

Water Crisis
ಪ್ರಮುಖ ಸುದ್ದಿ6 hours ago

ವಿಸ್ತಾರ ಸಂಪಾದಕೀಯ: ನೀರಿನ ಸಮಸ್ಯೆಗೆ ಜನರೇ ಉತ್ತರ ಕಂಡುಕೊಳ್ಳಬೇಕು

IPL 2024- Riyan Parag
ಪ್ರಮುಖ ಸುದ್ದಿ7 hours ago

IPL 2024 : ರಾಯಲ್ಸ್​ಗೆ 2ನೇ ವಿಜಯ , ಡೆಲ್ಲಿಗೆ ಸತತ ಎರಡನೇ ಸೋಲು

Dolly Chaiwala
ವೈರಲ್ ನ್ಯೂಸ್7 hours ago

Dolly Chaiwala: ಅಬ್ಬಬ್ಬಾ ಲಾಟರಿ: ಬಿಲ್ ಗೇಟ್ಸ್ ಭೇಟಿ ಆಯ್ತು; ಈಗ ಮಾಲ್ಡೀವ್ಸ್‌ನಲ್ಲಿ ಡಾಲಿ ಚಾಯ್‌ವಾಲಾ ಮಿಂಚು

Mukthar Ansari
ಪ್ರಮುಖ ಸುದ್ದಿ7 hours ago

Mukhtar Ansari : ಗ್ಯಾಂಗ್​ಸ್ಟರ್​ ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನ

Former DCM Govinda Karajola pressmeet
ಬೆಂಗಳೂರು8 hours ago

Bengaluru News: ದೇಶದ ಸರ್ವಾಂಗೀಣ ಅಭಿವೃದ್ಧಿ ಆಗಿದ್ದೇ ಮೋದಿಯಿಂದ: ಗೋವಿಂದ ಕಾರಜೋಳ

crime news
ಕ್ರೈಂ8 hours ago

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಂದ ಪಾಪಿ; ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 hour ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202416 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202418 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌