Sree Narayana Guru Jayanthi | ಕಗ್ಗತ್ತಲ ಹಾದಿಯಲಿ ಕೈದೀವಿಗೆ ಹಿಡಿದು ನಡೆದವರು ಶ್ರೀ ನಾರಾಯಣ ಗುರು - Vistara News

ಧಾರ್ಮಿಕ

Sree Narayana Guru Jayanthi | ಕಗ್ಗತ್ತಲ ಹಾದಿಯಲಿ ಕೈದೀವಿಗೆ ಹಿಡಿದು ನಡೆದವರು ಶ್ರೀ ನಾರಾಯಣ ಗುರು

ರಾಷ್ಟ್ರದ ಸಮಗ್ರತೆಗೆ ಮತ್ತು ಉನ್ನತಿಗೆ ನಾರಾಯಣ ಗುರುಗಳು ನೀಡಿದ ರಚನಾತ್ಮಕ ಮತ್ತು ಸಮನ್ವಯದ ಮಾರ್ಗ ಈಗಲೂ ತೋರುಗಂಬವಾಗಿದೆ. ಇಂದು ಶ್ರೀ ನಾರಾಯಣ ಗುರುಗಳ ಜಯಂತಿ (Sree Narayana Guru Jayanthi). ಈ ಹಿನ್ನೆಲೆಯಲ್ಲಿ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Sree Narayana Guru Jayanthi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Sree Narayana Guru Jayanthi

ಸತೀಶ್. ಜಿ. ಕೆ. ತೀರ್ಥಹಳ್ಳಿ
ಕಾಲದ ಹಿತ, ಹಿಡಿತಕ್ಕೆ ಒಳಪಟ್ಟು ಸಮಾಜ ತನ್ನ ಆಶಯ, ಸ್ವರೂಪಗಳನ್ನು ಮುರಿದುಕಟ್ಟಿಕೊಳ್ಳುವುದು ಅನಿವಾರ್ಯ. ಯಾಕೆಂದರೆ ಬದುಕು ನಿಂತ ನೀರಲ್ಲ, ಹರಿವ ನದಿ, ನಿಂತರದು ಬಗ್ಗಡ. ಸಮಾಜಗಳೂ ಹಾಗೆಯೇ. ಚಲನಾಶೀಲತೆಯೇ ಅದರ ಜೀವಾಳ.

ಇತಿಹಾಸದುದ್ದಕ್ಕೂ ಅಜ್ಞಾನದಿಂದಲೋ, ಸ್ವಾರ್ಥಸಾಧನೆಗೋ ಸೃಜಿಸಿದ ಕೊಳೆ ತೊಳೆಯುವ ಕಾಯಕವನ್ನು ಅಲ್ಲಲ್ಲಿ ಸಾಧುಸಂತರು ಮಾಡುತ್ತಲೇ ಬಂದಿದ್ದಾರೆ. ಆಯಾಯ ಕಾಲಘಟ್ಟದಲ್ಲಿ ಬೇರೂರಿದ್ದ ಮೌಢ್ಯ, ತಾರತಮ್ಯ, ಶೋಷಣೆಗಳಿಂದ ಸಮಾಜವನ್ನು ಮುಕ್ತಗೊಳಿಸಲು ಶ್ರಮಿಸಿದ್ದಾರೆ, ಸಮಸಮಾಜವನ್ನು ಕನಸಿದ್ದಾರೆ, ಅರಿವಿನ ಬೆಳಕನ್ನು ಹರಿಸಿದ್ದಾರೆ. ಬಾವಿಯೊಳಗಿನ ಚಿಲುಮೆಗಳಲ್ಲಿ ಆಗಾಗ ಹೂಳು ತುಂಬಿಕೊಳ್ಳುವುದಿದೆ. ಹೂಳು ತೆಗೆಯುತ್ತಿದ್ದಂತೆ ಜಲದ ಕಣ್ಣುಗಳು ತೆರೆದು, ಜೀವಜಲ ಒಸರುತ್ತದಲ್ಲ ಹಾಗೆ, ವಿಕಾಸದ ಹಾದಿಯಲ್ಲಿ ಸಹಬಾಳ್ವೆ-ಔನತ್ಯದ ಮಾರ್ಗವಾಗಿ ಕಂಡಿದ್ದು ದೇವರು-ಧರ್ಮಗಳು. ಅದೇ ಹೆಸರಲ್ಲಿ ನಡೆದುಹೋದ ಅನಾಚಾರ-ಕ್ರೌರ್ಯಗಳು ಗ್ರಹಿಕೆಯನ್ನೂ ಮೀರಿದಂತವು. ಸಾಮಾಜಿಕ ಸುಧಾರಣೆಯ ಹಾದಿಯಲ್ಲಿ ಮಲಗಿದ್ದ ಜಗತ್ತನ್ನು ಚಿವುಟಿಹೋದ ಬುದ್ಧ, ಬಸವ, ದಾಸ ಪರಂಪರೆಯೊಟ್ಟಿಗೆ ವಿಭಿನ್ನವಾಗಿ ನಿಲ್ಲುವ, ಶತಮಾನದ ಮಹಾಸಂತರೇ ಬ್ರಹ್ಮಶ್ರೀ ನಾರಾಯಣ ಗುರುಗಳು.

Sree Narayana Guru Jayanthi
ಶ್ರೀ ನಾರಾಯಣ ಗುರುಗಳು ಹುಟ್ಟಿದ ಮನೆ

ಕೇರಳದ ತಿರುವನಂತಪುರಂನಿಂದ ೧೨ಕಿಮೀ ದೂರದ ಚೆಂಬಳಂತಿಯಲ್ಲಿ ೧೮೫೬ರಲ್ಲಿ, ತಿರುಓಣಂ ಹಬ್ಬವಾದ ಮೂರನೇದಿನದ ಶತಭಿಷ ನಕ್ಷತ್ರದಂದು, ಮದ್ಯಮವರ್ಗದ ಈಳವ ಕುಟುಂಬದಲ್ಲಿನ ಶಿಕ್ಷಕರು, ನಾಟಿವೈದ್ಯರಾಗಿದ್ದ ಮಾಡಾನ್ ಆಸಾನ್ ಮತ್ತು ಕುಟ್ಟಿಯಮ್ಮಾಳ್ ದಂಪತಿಯ ಮಗನಾಗಿ ಜನಿಸಿದವರು ನಾರಾಯಣ ಗುರುಗಳು.

ದೇಶಕಾಲವನ್ನು ಮೀರಿದ ವ್ಯಕ್ತಿತ್ವ
ತಮ್ಮ ವೇದಾಧ್ಯಯನ, ವಿಶಿಷ್ಟ ಚಿಂತನೆಗಳಲ್ಲಿ ಅರಳಿದ ಅವರದು ದೇಶಕಾಲವನ್ನು ಮೀರಿದ ವ್ಯಕ್ತಿತ್ವ. ಮಹಿಳೆಯರು, ಶೂದ್ರವರ್ಗ ಮತ್ತು ಶೂದ್ರಾತಿಗಳಲ್ಲಿ ಸಾಂಸ್ಕೃತಿಕ ಪುನುರುತ್ಥಾನ, ಆತ್ಮಾಭಿಮಾನ ಮತ್ತು ವಿದ್ಯಾದಾನದ ರುವಾರಿಯಾಗಿ ಅವತರಿಸಿದವರು. ತಮ್ಮ ಅಪಾರ ಬುದ್ಧಿವಂತಿಕೆ ಮತ್ತು ದೂರದೃಷ್ಟಿತ್ವದ ಕಾರ್ಯಯೋಜನೆಗಳ ಮೂಲಕ ಗಾಢಾಂಧಕಾರದಲ್ಲಿ ಮುಳುಗಿದ್ದವರ ಬದುಕಿಗೊಂದು ಜೀವಕಸುವನ್ನು ತುಂಬಿದರು.

ಉತ್ತರದ ಸಮಾಜ ಸುಧಾರಕರೊಟ್ಟಿಗೆ, ಒಡಿಶಾದ ಮಹಿಮಾಧರ್ಮ, ಫುಲೆಯವರ ಸತ್ಯಶೋಧಕ ಸಮಾಜ, ಛತ್ತಿಸ್ ಘಡದ ಸತ್ನಮ್ ಪಂಥ, ತಮಿಳುನಾಡಿನ ಪೆರಿಯಾರ್, ಕೊಲ್ಲಾಪುರದ ಸಾಹುಮಹಾರಾಜರು ಉಂಟುಮಾಡಿದ ಸಮಕಾಲೀನ ಕ್ರಾಂತಿಯಂತೆ ೧೮೮೮ರಲ್ಲಿ ನಾರಾಯಣ ಗುರುಗಳು ಅರವಿಪುರಂನ ಶಿವದೇಗುಲವನ್ನು ಸ್ಥಾಪಿಸಿದಾಗಲೂ ದೊಡ್ಡ ಸಂಚಲನ ಉಂಟಾಗಿತ್ತು. ನಾರಾಯಣ ಗುರುಗಳು ಮತ್ತವರ ನಿಕಟವರ್ತಿಗಳು ಹುಟ್ಟುಹಾಕಿದ ಕ್ರಾಂತಿಕಾರಕ ಚಳುವಳಿಗಳಲ್ಲಿ ಗುರುಗಳ ಸಾಮಾಜಿಕ ಸುಧಾರಣೆ ಮತ್ತು ಧಾರ್ಮಿಕ ಪುನುರುತ್ಥಾನ, ಡಾ.ಪಲ್ಪು ನೇತೃತ್ವದ ಸಾಮಾಜಿಕ ಜಾಗೃತಿ ಆಂದೋಲನಗಳು, ಶಿಕ್ಷಣದ ಹಕ್ಕಿನ ಹೋರಾಟದಲ್ಲಿ ಕುಮಾರನ್ ಆಶಾನ್ ಬಳಗದ ಪ್ರಯತ್ನ, ಸಿ.ಕೇಶವನ್ ನೇತೃತ್ವದ ರಾಜಕೀಯ ಹಕ್ಕು ಹೋರಾಟ, ಟಿ.ಕೆ ಮಾಧವನ್ ನೇತೃತ್ವದಲ್ಲಿ ನಡೆದ ಅಸ್ಪೃಷ್ಯತೆ ವಿರೋಧಿ ಹೋರಾಟಗಳನ್ನೂ ತಿಳಿಯಬೇಕಾದ ಅವಶ್ಯಕತೆ ಇದೆ.

ದೇವರ ನಾಡಾಗಿಸಿದ ಸಂತ
ಕೇರಳದಲ್ಲಾಗ ಕ್ರೌರ್ಯವು ವಿಜ್ರಂಭಿಸುವ ಕಾಲವಾಗಿತ್ತು. ಅವರ್ಣೀಯರಿಗೆ ಕೆರೆಬಾವಿಗಳಲ್ಲಿ ನೀರೆತ್ತುವುದು, ಬ್ಯಾಂಕ್, ಅಂಚೆಕಚೇರಿ ಪ್ರವೇಶಿಸುವುದು, ಮಹಡಿಮೇಲೆ ವಾಸಿಸುವುದು, ಸರ್ಕಾರಿ ನೌಕರಿಗೆ ಸೇರುವುದು, ಕಥಕ್ಕಳಿಯಂಥಾ ನೃತ್ಯಗಳಲ್ಲಿ ದೇವರ ಪಾತ್ರ ಮಾಡುವುದೆಲ್ಲಾ ನಿಷಿದ್ಧವಾಗಿತ್ತು. ಆಭರಣ, ಚಪ್ಪಲಿ, ವಿಶೇಷವಾಗಿ ಮಹಿಳೆಯರು ಮೈತುಂಬ ವಸ್ತ್ರಧರಿಸಲೂ ನಿರ್ಬಂಧವಿತ್ತು. ತೆರೆದೆದೆಯಲ್ಲಿ ಎದುರಾಗಿ, ಗಾತ್ರದ ಆಧಾರದಲ್ಲಿ ‘ಸ್ತನಗಂದಾಯ’ ಕಟ್ಟಬೇಕಿತ್ತು. ಮಡಿಮೈಲಿಗೆಯ ಹೆಸರಲ್ಲಿ ಶೂದ್ರರು ಮೇಲ್ವರ್ಗದವರಿಂದ ಇಂತಿಷ್ಟೇ ಅಡಿ ದೂರವಿರಲೇಬೇಕೆಂಬ ಸಾಮಾಜಿಕ ಕಟ್ಟಳೆಯಿತ್ತು.

ಮಧ್ಯಾಹ್ನ ಮಾತ್ರವೇ ರಸ್ತೆಗಳಲ್ಲಿ ಸಂಚರಿಸಬೇಕು, ಅವರ ನೆರಳು ಮೇಲ್ವರ್ಗಕ್ಕೆ ತಾಕಕೂಡದು. ಶೂದ್ರರು ಸದಾಕಾಲ ಕೈಲೊಂದು ಮಡಕೆ ಹಿಡಿದುಸಾಗುತ್ತಾ ಅದಕ್ಕೇ ಉಗುಳಬೇಕೆಂಬ ಕಟ್ಟುಪಾಡಿತ್ತು. ಇನ್ನು ಧಾರ್ಮಿಕ ವ್ಯವಸ್ಥೆಯದಂತೂ ಹೀನಾಯಸ್ಥಿತಿ. ದೇವಸ್ಥಾನಗಳನ್ನು ಪ್ರವೇಶಿಸಲು, ಸರ್ಕಾರವೇ ನಡೆಸುವ ಶಾಲೆಗಳಲ್ಲಿ ಕಲಿಯಲು, ವೇದಪಠಣಗಳನ್ನು ಆಲಿಸಲೂ ಅವಕಾಶವಿರಲಿಲ್ಲ. ನಿಯಮವನ್ನು ಉಲ್ಲಂಘಿಸಿ ಧಾರ್ಮಿಕ ಕಾರ್ಯವನ್ನು ಆಲಿಸಿದವರ, ಪೂಜೆ ಮಾಡಲು ಬಯಸಿದವರ ಕಿವಿಗೆ ಕಾದ ಸೀಸ ಎರೆಯಬೇಕು, ನಾಲಿಗೆ ಕತ್ತರಿಸಬೇಕು ಎಂಬಂತಹ ಕಠೋರ ನಿಯಮಗಳಿದ್ದವು.

Sree Narayana Guru Jayanthi

ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದ ಮನಸ್ಥಿತಿಯದು. ಶೇ.೮೫ರಷ್ಟಿದ್ದ ಶೋಷಿತ ಸಮುದಾಯಗಳು ಎರಡನೇ ದರ್ಜೆ ಪ್ರಜೆಗಳಾಗಿ, ಕನಿಷ್ಠ ಮಾನವಹಕ್ಕುಗಳಿರದ ನಿತ್ಯನರಕವನ್ನು ಬದುಕಬೇಕಾಗಿತ್ತು. ಇಂತಹ ಶೋಚನೀಯ ಪರಿಸ್ಥತಿಯಲ್ಲಿರುವಾಗಯೇ ಅಲ್ಲಿಗೆ ಸಂದರ್ಶಿಸಿದ್ದ ಸ್ವಾಮಿ ವಿವೇಕಾನಂದರು ಕೇರಳವನ್ನು ‘ಅದು ಹುಚ್ಚಾಸ್ಪತ್ರೆ!’ ಎಂದಿದ್ದರು. ಅದೇ ನೆಲದಲ್ಲಿ ಜನ್ಮವೆತ್ತಿ ಸಮರ್ಥ ಸಮಾಜ ಚಿಕಿತ್ಸೆಯಲ್ಲಿ ಒದಗುತ್ತಾ, ಅಲ್ಲಿಯ ಮಾನಸಿಕತೆಯನ್ನು ಸುಧಾರಿಸಿ ‘ದೇವರನಾಡು’ ಎಂದು ಪರಿವರ್ತಿಸಿದ್ದು ಗುರುಗಳ ಸಾಧನೆ. ಅದೇ ಬೆಳಕಲ್ಲಿ ಮುಂದದು ಸಾಕ್ಷರ ನಾಡಾಗಿ, ಕೋಮುಸೌಹಾರ್ಧದ ಬೀಡಾಗಿ ಬದಲಾಗಿರುವುದೂ ಗಮನಾರ್ಹ.

ಎಲ್ಲಾ ನದಿಗಳೂ ಸಮುದ್ರವನ್ನೇ ಸೇರುವಂತೆ ‘ಮಾನವ ಕುಲಕ್ಕೇ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು’ ಆಶಯದೊಂದಿಗೆ ಸರ್ವಸಮಾನತೆಗೆ ಕರೆಯಿತ್ತರಲ್ಲದೆ ಇದನ್ನು ಸಾಧಿಸಲು ಶಿಕ್ಷಣವೇ ಮಾರ್ಗವೆಂದರು, ‘ಸಂಘಟನೆಯಿಂದ ಬಲಯುತರಾಗಿರಿ ಮತ್ತು ಶಿಕ್ಷಣದಿಂದ ನಿರ್ಭೀತರಾಗಿರಿ’ ಎಂಬ ಪ್ರೇರಣೆಯೊಂದಿಗೆ ‘ಉದ್ಧಾರೇತಾತ್ಮನಾತ್ಮಾನಂ’ ಗೀತೋಕ್ತಿಯಂತೆ ತನ್ನ ಉದ್ಧಾರ ತನ್ನಿಂದಲೇ ಎಂಬ ದಿವ್ಯಸಂದೇಶ ನೀಡಿದರು.

ಯುದ್ಧ ಮಾಡದೇ ಎದುರಾಳಿಯ ಗೆದ್ದರು!
ಇತಿಹಾಸದಲ್ಲಿಯೇ ಪ್ರಥಮವೆಂಬಂತೆ, ಗುರುಗಳು ಹಲವಾರು ಸರ್ವಧರ್ಮ ಸಮ್ಮೇಳನಗಳನ್ನು ಸಂಘಟಿಸಿ, ಸಹೋದರತ್ವವನ್ನು ಸಾರಿದರು. ಜೀವಿತಾವಧಿಯಲ್ಲಿ ಹಲವಾರು ಶಾಲೆಗಳು, ಆಸ್ಪತ್ರೆಗಳನ್ನೂ ತೆರೆದರು. ಕೈಗಾರಿಕಾ ಸಮ್ಮೇಳನಗಳನ್ನೂ ನಡೆಸಿದರು. ಧರ್ಮಪ್ರಸಾರ, ಧರ್ಮಜಾಗೃತಿಗಾಗಿ ಶ್ರೀಲಂಕಾಗೂ ತೆರಳಿದ್ದರು. ದೇವಸ್ಥಾನ ಪ್ರವೇಶಕ್ಕೆ ಚಳುವಳಿ ನಡೆಸದೆ, ಪರ್ಯಾಯವಾದ ಅವರ್ಣೀಯರ ದೇವಾಲಯ ಸ್ಥಾಪಿಸಿದ್ದು ಮಾತ್ರವಲ್ಲ ತಳವರ್ಗಕ್ಕೆ ಸಂಘಟನಾಶಕ್ತಿ ತುಂಬಿದರು. ಆ ಹಾದಿಯಲ್ಲಿ ನೋವುಗಳಿದ್ದವು. ಆದರೂ ಅವರು ವಿನಯದ ಮಾರ್ಗಬಿಡಲಿಲ್ಲ. ಯಾರೊಂದಿಗೂ ಸಮರ ಸಾರಲಿಲ್ಲ. ಸಂಘರ್ಷಕ್ಕಿಳಿಯಲಿಲ್ಲ. ಸಂಧಾನದ, ಸಮನ್ವಯದ ದಾರಿಯಲ್ಲಿ ಯುದ್ಧಹೂಡದೆಯೇ ಎದುರಾಳಿಗಳನ್ನು ಗೆದ್ದಿದ್ದರು.

ನೆರೆಯ ತಮಿಳುನಾಡಿನಲ್ಲಿ ಪೆರಿಯಾರ್ ನೇತ್ರುತ್ವದಲ್ಲಿ ಬಲತ್ಕಾರಯುತ ದೇಗುಲ ಪ್ರವೇಶ, ವಿಗ್ರಹ ಧ್ವಂಸ ಕಾರ್ಯಾಚರಣೆ, ಧರ್ಮಗ್ರಂಥಗಳನ್ನು ಸುಡುವಂತಹ ಸಂಘರ್ಷದ ಹಾದಿಗಳಿದ್ದಾಗಲೂ ನಾರಾಯಣ ಗುರುಗಳು ಸೌಹಾರ್ಧದ ಹಾದಿಯನ್ನು ತುಳಿದರು. ಹಿಂದೂ ಧರ್ಮದ ಕೌರ್ಯವನ್ನು ಸದ್ದಿಲ್ಲದೆ, ರಕ್ತರಹಿತ ಕ್ರಾಂತಿಯ ಮೂಲಕ ಮೀರಲೆತ್ನಿಸಿದರು. ಧರ್ಮದಲ್ಲಿ ತಮ್ಮ ಪಾಲೂ ಇದೆಯೆಂದು ಅರ್ಥೈಸಿ ಸಾವಿರಾರು ವರ್ಷಗಳಿಂದ ಧರ್ಮಕ್ಕಂಟಿದ್ದ ಕಳಂಕವನ್ನು ತಮ್ಮ ಮೂವತೈದು ವರ್ಷಗಳಲ್ಲಿ ತೊಳೆಯೆತ್ನಿಸಿ ಧರ್ಮ ಪುನರುತ್ಥಾನದ ರುವಾರಿಯಾದರು. ಆ ಮೂಲಕ ದೊಡ್ಡಮಟ್ಟದ ಮತಾಂತರ ಸಾಧ್ಯತೆಯನ್ನು ನಿವಾರಿಸಿದರು.

ನೀವಿದ್ದಲ್ಲಿಗೇ ದೇವರನ್ನು ಕರೆತರುತ್ತೇನೆ ಎಂದರು!
ಕಾಲಾಂತರದಿಂದ ದೇವಸ್ಥಾನ ಪ್ರವೇಶವಂಚಿತರಾಗಿ ಸೋತು ಬಂದವರನ್ನು ಸಂತೈಸಿ “ದೇವರಿದ್ದಲ್ಲಿಗೆ ನಿಮ್ಮನ್ನು ಬಿಡದಿದ್ದರೇನಂತೆ, ನೀವಿದ್ದಲ್ಲಿಗೇ ದೇವರನ್ನು ಕರೆತರುತ್ತೇನೆ..” ಎಂದು ೧೮೮೮ರಲ್ಲಿ ಅರವೀಪುರಂನಲ್ಲಿ ಅವರ್ಣೀಯರಿಗಾಗಿಯೇ ಶಿವಮಂದಿರವನ್ನು ಸ್ಥಾಪಿಸಿದರು. ವಿಗ್ರಹದ ಹುಡುಕಾಟದಲ್ಲಿದ್ದಾಗ ಪಕ್ಕದ ನದಿಯಲ್ಲಿ ಮುಳುಗಿ ಎದ್ದುಬರುವಾಗ ಕಲ್ಲೊಂದನ್ನು ಹೊತ್ತುತಂದು ‘ಲಿಂಗ’ ಎಂದು ಪ್ರತಿಷ್ಠಾಪಿಸಿದ್ದರು. ತಳಸಮುದಾಯಗಳಿಗೆ ಪರ್ಯಾಯ ದೇವಾಲಯಗಳನ್ನು ಕಟ್ಟಿದ್ದು ಜಾಗತಿಕ ಚರಿತ್ರೆಯಲ್ಲಿ ದೊಡ್ಡ ಮೈಲಿಗಲ್ಲು.

ಅವರ ನಿಕಟವರ್ತಿ ಕುಮಾರನ್ ಆಸಾನ್ ಬಣ್ಣಿಸುವಂತೆೆ “ಅದು ಜಾತೀಯತೆಯೆಂಬ ದೈತ್ಯವೃಕ್ಷಕ್ಕೆ ಬಿದ್ದ ಮೊದಲ ಕೊಡಲಿ ಏಟು..” ಪೂಜೆ ವೈಯಕ್ತಿಕ, ಜಾತಿಭೇದ, ಮತದ್ವೇಷಗಳಿಲ್ಲದೆ ಸರ್ವರೂ ಸಹೋದರತ್ವದಿ ಆರಾಧಿಸುವ ಕ್ಷೇತ್ರವೆಂದರು. ನಂತರ ಸುಮಾರು ೭೫ ದೇಗುಲಗಳು ಕೇರಳ, ತಮಿಳುನಾಡು ಮತ್ತು ಮಂಗಳೂರಿನಲ್ಲಿ ಸ್ಥಾಪನೆಗೊಳ್ಳಲು ಕಾರಣರಾದರು. ದೇಗುಲಗಳು ಅದ್ದೂರಿ ಪೂಜೆ-ಪುನಸ್ಕಾರಗಳಿಗಿಂತ ಸಾರ್ವಜನಿಕ ಆರಾಧನಾ ತಾಣಗಳಾಗಬೇಕು, ಅಧ್ಯಯನ ಕೇಂದ್ರಗಳಾಗಬೇಕೆಂದು ಬಯಸಿದರು. ಸ್ಥಾಪಿಸಿದ್ದ ದೇವಾಲಯಗಳಾಗಿ ಅರ್ಚಕರನ್ನಾಗಿ ಶೂದ್ರ ಸಮುದಾಯದವರನ್ನು ನೇಮಿಸಿ, ಶಿವಗಿರಿಯಲ್ಲಿ ವೇದಾದ್ಯಯನ, ಬ್ರಹ್ಮವಿದ್ಯೆಗಳ ತರಬೇತಿ ಕೇಂದ್ರವನ್ನು ತೆರೆದರು.

Sree Narayana Guru Jayanthi

ಸರಳ ಬದುಕು, ಸ್ವಚ್ಛತೆ, ಗುಡಿಕೈಗಾರಿಕೆ ಸ್ಥಾಪನೆ, ಶಾಲೆಗಳಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿದರು. “ದರ್ಶನಮಾಲಾ”, “ಆತ್ಮೋಪದೇಶ ಶತಕಂ”, “ದೈವದಶಕಂ” ಮುಂತಾದ ಕೃತಿಗಳ ಮೂಲಕವೂ ಲೋಕಜ್ಞಾನದ ದಾರಿತೋರಿದ್ದರು. ೧೯೦೩ರಲ್ಲಿ ನಾರಾಯಣ ಗುರುಗಳು, ಒಡನಾಡಿಗರಾದ ಡಾ.ಪಲ್ಪು ಮತ್ತು ಕವಿ ಕುಮಾರನ್ ಆಸನ್‌ರೊಂದಿಗೆ ಸೇರಿ ಮುನ್ನಡೆಸಿದ ‘ಶ್ರೀ ನಾರಾಯಣ ಧರ್ಮಪರಿಪಾಲನಾ ಯೋಗಂ’ ಪ್ರತಿರೋಧ ಚಳುವಳಿಯ ಉದ್ದೇಶವೇ ಮನುಷ್ಯ ಘನತೆಯ ಸಮಾಜ ನಿರ್ಮಾಣ ಮಾಡುವುದಾಗಿತ್ತು. ಶೋಷಿತವರ್ಗದ ಸಬಲೀಕರಣಕ್ಕದು ಬದ್ಧವಾಯಿತು. ಹಿಂದೂಧರ್ಮದಲ್ಲಿ ಬೇರೂರಿದ್ದ ಜಾತಿವ್ಯವಸ್ಥೆ ಮತ್ತು ಕಂದಾಚಾರಗಳು ಶೋಷಿತ ಸಮೂದಾಯಗಳನ್ನು ಅನ್ಯಧರ್ಮದೆಡೆಗೆ ನೂಕಿದ್ದವು. ಇಂತಹ ಸಂದಿಗ್ಧತೆಯಲ್ಲಿ ಧರ್ಮವನ್ನು ಮರುವ್ಯಾಖ್ಯಾನಿಸಿ, ಲಿಂಗ ಮತ್ತು ಜಾತಿ ಸಮಾನತೆಯನ್ನು ಪ್ರತಿಪಾದಿಸಿತು.

ಶತಮಾನಗಳ ಹಿಂದೆಯೇ, ಸಾಮಾಜಿಕ ಸುಧಾರಣೆಯ ಭಾಗವಾಗಿ, ಸಂಪತ್ತಿನ ಅಸಹ್ಯಕರ ಪ್ರದರ್ಶನಕ್ಕೊಡ್ಡುವ ಅದ್ಧೂರಿ ಮದುವೆಗಳನ್ನು ನಿರಾಕರಿಸಿ ತಮ್ಮ ವಿಶಿಷ್ಟ ಸರಳವಿವಾಹ ಪದ್ಧತಿಯೊಂದನ್ನು ಪರಿಚಯಿಸಿದರು. ಮದ್ಯವರ್ಜನೆಗೆ ಮನವೊಲಿಸಿ, ಹೆಂಡಮಾರುವ ಈಳವರಿಗೆ ಪರ್ಯಾಯ ಉದ್ಯೋಗವಾಗಿ ನಾರಿನೋದ್ಯಮದಂತಹ ಗುಡಿಕೈಗಾರಿಕೆಗಳನ್ನು ಪ್ರೋತ್ಸಾಹಿಸಿದರು. ಕುಟುಂಬದ ಸ್ವಾಸ್ಥ್ಯ ಮತ್ತು ಸಾಮಾಜಿಕ ಚೇತರಿಕೆಗಾಗಿ ಕೆಳವರ್ಗದ ಮನಪರಿವರ್ತನೆಗೆ ಹಂಬಲಿಸಿದರು. ಆಧ್ಯಾತ್ಮಕ ಸಂತನೊಬ್ಬ ಹೀಗೆ ಲೌಕಿಕವಾಗಿ ಚಿಂತಿಸಿದ್ದು ದೇಶದ ಚರಿತ್ರೆಯಲ್ಲಿ ಅಪರೂಪವಾದುದು.

ಆರ್ಥಿಕ ಅಸಮಾನತೆಯೂ ಕ್ರೂರವಾಗಿತ್ತು, ಕೆಲವೇ ಬಲಾಢ್ಯರ ಪಾಲಾದ ಭೂ-ಒಡೆತನವು ಭೂರಹಿತರನ್ನು ಶೋಷಿಸುವುದು, ಅವರನ್ನು ಮತದಾನ ಇನ್ನಿತರ ಹಕ್ಕುಗಳಿಂದ ಹೊರಗಿಡುವುದು, ಬೆಳೆದಿದ್ದರ ಬಹುಪಾಲು ಕಂದಾಯವನ್ನಾಗಿ ವಸೂಲಿ ಮಾಡಿ ಬಡಜನರನ್ನು ಖಾಯಂ ಜೀತಕ್ಕೆ ನೂಕುವುದು. ಮುಂತಾದ ದೌರ್ಜನ್ಯಗಳ ವಿರುದ್ಧ ತಳೆದ ಸ್ಪಷ್ಟ ನಿಲುವುಗಳಲ್ಲಿ ಅವರೊಬ್ಬ ವೈಜ್ಞಾನಿಕ ಸಮಾಜವಾದದ ಪ್ರತಿಪಾದಕರಾಗಿಯೂ ಅನೇಕರಿಗೆ ಕಂಡರು.

Sree Narayana Guru Jayanthi
ಗಾಂಧೀಜಿಯವರೊಂದಿಗೆ ಶ್ರೀ ನಾರಾಯಣ ಗುರು

ಗಾಂಧಿ, ರವೀಂದ್ರರು ಮೆಚ್ಚಿದ್ದರು
ಘನ ಉದ್ದೇಶದೊಂದಿಗೇ ಜನ್ಮವೆತ್ತಿದವರಂತಿದ್ದ ಗುರುಗಳು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಚಳುವಳಿಗಳನ್ನು ಬಲವಾಗಿ ಸಂಘಟಿಸುವಾಗ ಅವರದ್ದು ಮೂವತ್ತೆರಡರ ಹರೆಯ!. ವಿಶ್ವಗುರು ರವೀಂದ್ರರು “ನಾನು ಹಲವಾರು ದೇಶಗಳನ್ನು ಸುತ್ತಿ ಬಂದಿದ್ದೇನೆ, ಅಸಂಖ್ಯ ದಾರ್ಶನಿಕರನ್ನು ಭೇಟಿಯಾಗಿದ್ದೇನೆ, ಆದರೆ ನಾರಾಯಣಗುರುಗಳಂತಹ ಜ್ಞಾನಸಂಪನ್ನನನ್ನು, ಆಧ್ಯಾತ್ಮಿಕ ಔನ್ನತ್ಯ ಪಡೆದ ವಿಭೂತಿ ಪುರುಷರನ್ನೂ ನಾನು ಈವರೆಗೂ ಕಂಡಿಲ್ಲ..” ಎಂದರೆ, ೧೯೨೫ರಲ್ಲಿ ಗುರುಗಳನ್ನು ಭೇಟಿ ಮಾಡಿದ ಗಾಂಧೀಜಿಯವರು “ಗುರುಗಳನ್ನು ಸಂದರ್ಶಿಸಿದ್ದು ತಮ್ಮ ಸುದೈವ.. ಅವರಿಂದ ಬಹಳಷ್ಟು ಕಲಿತಿದ್ದೇನೆ” ಎಂದಿದ್ದರು.

ಲೋಕದ ಅಗತ್ಯಗಳೇನೆಂಬುದರ ಬಗ್ಗೆ ಅವರಿಗಿದ್ದ ದೂರದೃಷ್ಟಿತ್ವಗಳು ಎಂದಿಗೂ ಅನುಕರಣನೀಯ. ವಿಪರ್ಯಾಸವೆಂದರೆ, ನಾವೆಲ್ಲರೂ ಗುರುಗಳ ಆದರ್ಶಗಳನ್ನು ವಿಚಾರವಾಗಿ ಎದೆಯಲ್ಲಿಟ್ಟುಕೊಳ್ಳುವ ಬದಲು ಅವರನ್ನು ಗುಡಿಕಟ್ಟಿ ಕೂಡಿಹಾಕಿರುವುದು!. ಜೀವಪರವಾಗಿ ಬದುಕು ಸವೆಸಿದ ದಾರ್ಶನಿಕರನ್ನೆಲ್ಲಾ ಜಾತಿ-ಧರ್ಮಗಳ ಸಂಕೋಲೆಯಿಂದ ಬಿಡಿಸಿ ಅವರು ಚೆಲ್ಲಿದ ಬೆಳಕಲ್ಲಿ ನಾವೀಗ ಸಾಗಬೇಕಿದೆ. ನಮ್ಮನ್ನೆಲ್ಲಾ ಕಾಯಬೇಕಿರುವುದು ದ್ವೇ಼ಷ-ರೋಷಗಳಲ್ಲ, ಸ್ವಾರ್ಥ-ಸಂಕುಚಿತತೆಯಲ್ಲ. ಮನುಷ್ಯಪ್ರೀತಿ, ಸಹಕಾರ ಮತ್ತು ಸೌಹಾರ್ಧತೆಗಳು.

ರಾಷ್ಟ್ರದ ಸಮಗ್ರತೆಗೆ ಮತ್ತು ಉನ್ನತಿಗೆ ಗುರುಗಳು ನೀಡಿದ ರಚನಾತ್ಮಕ ಮತ್ತು ಸಮನ್ವಯದ ಮಾರ್ಗವು ಈಗಲೂ ಎಲ್ಲೆಡೆ ತೋರುಗಂಬವಾಗಿ ಉಳಿದಿದೆ. ಅವರ ಸಂದೇಶಗಳು ಲಡಾಕ್‌ನ ಎತ್ತರದ ಪ್ರದೇಶದಲ್ಲಿಯೂ ಕೆತ್ತಲ್ಪಟ್ಟಿದೆ. ಅವರ ಸಭ್ಯತೆಯ ಬದುಕು, ಸಾಮಾಜಿಕ ಕಳಕಳಿ, ಸಹಬಾಳ್ವೆಯ ಅರಿವು, ವಾಸ್ತವ ಪ್ರಜ್ಞೆ, ಅಭಿವೃದ್ಧಿಯ ಆಶಯಗಳು ಆದರ್ಶ ಸಮಾಜದ ದಿಕ್ಸೂಚಿಗಳಂತಿವೆ. ಮತ್ತೆಮತ್ತೆ ಕಾಡುವ, ಪ್ರಚೋದಿಸುವ, ವಿಕಸಿಸುವ ಅಂತಹ ಜ್ಞಾನಮಾರ್ಗದಲ್ಲಿ ಇವತ್ತಿನ ಸಮಾಜ ಹೆಜ್ಜೆಹಾಕಬೇಕಾದ ತುರ್ತಿದೆ.

ಲೇಖರು ಶಿವಮೊಗ್ಗದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರು

ಇದನ್ನೂ ಓದಿ | ರಾಜ ಮಾರ್ಗ | ಅವರು ಹೋರಾಡಿದ್ದು ಅಸಮಾನತೆ ವಿರುದ್ಧ, ಪ್ರತಿಪಾದಿಸಿದ್ದು ಆತ್ಮೋದ್ಧಾರ, ಆತ್ಮವಿಶ್ವಾಸದ ಮಂತ್ರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತುಮಕೂರು

Tumkur News: ವಿಜೃಂಭಣೆಯಿಂದ ನಡೆದ ಶ್ರೀ ಬೇವಿನಳಮ್ಮ ದೇವಿ ಜಲಧಿ ಮಹೋತ್ಸವ

Tumkur News: ಕೊರಟಗೆರೆ ತಾಲೂಕಿನ ಚನ್ನರಾಯದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಕೆರೆಯಂಗಳದಲ್ಲಿ ಏಳು ಹಳ್ಳಿ ಗ್ರಾಮದೇವತೆ ಶ್ರೀ ಬೇವಿನಳಮ್ಮ ದೇವಿಯ ಜಲಧಿ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ನೆರೆವೇರಿತು. ಶ್ರೀ ಬೇವಿನಳಮ್ಮ ದೇವಿಯ ಜಲಧಿ ಮಹೋತ್ಸವ ಅಂಗವಾಗಿ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಧಾರ್ಮಿಕ ಪೂಜೆ ಸಲ್ಲಿಸಿದ ನಂತರ ಗಂಗಾ ಪೂಜೆ ನಡೆಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

VISTARANEWS.COM


on

Shree Bevinalamma Devi Jaladhi Mahotsav celebration in koratagere taluk
Koo

ಕೊರಟಗೆರೆ: ತಾಲೂಕಿನ ಚನ್ನರಾಯದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಕೆರೆಯಂಗಳದಲ್ಲಿ ಏಳು ಹಳ್ಳಿ ಗ್ರಾಮದೇವತೆ ಶ್ರೀ ಬೇವಿನಳಮ್ಮ ದೇವಿಯ ಜಲಧಿ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ (Tumkur News) ನೆರೆವೇರಿತು.

ಶ್ರೀ ಬೇವಿನಳಮ್ಮ ದೇವಿಯ ಜಲಧಿ ಮಹೋತ್ಸವ ಅಂಗವಾಗಿ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಧಾರ್ಮಿಕ ಪೂಜೆ ಸಲ್ಲಿಸಿದ ನಂತರ ಗಂಗಾ ಪೂಜೆ ನಡೆಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಇದನ್ನೂ ಓದಿ:Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

ಸಾಹಿತಿ ಡಾ. ನರಸಿಂಹಮೂರ್ತಿ ಮಾತನಾಡಿ, ಸುಮಾರು 250 ವರ್ಷಗಳ ಇತಿಹಾಸವುಳ್ಳ ದೇವಗಾನಿಕೆ ಶ್ರೀ ಬೇವಿನಳಮ್ಮ ತಾಯಿ ಏಳು ಜನ ಅಕ್ಕತಂಗಿಯರಲ್ಲಿ ತಾಯಿಯು ಒಬ್ಬಳು. ಈ ತಾಯಿಯ ಜಾತ್ರೆ-ಜಲಧಿ ವಿಶೇಷವಾಗಿ ಆಚರಣೆ ಮಾಡುತ್ತಾ ನಮ್ಮ ಪೂರ್ವಿಕರು ಬಂದಿದ್ದಾರೆ. ಹಾಗೆ ನಾವು ಕೂಡ ಈ ಆಚರಣೆಯನ್ನು ಮುಂದುವರಿಸುತ್ತಾ ಬಂದಿದ್ದೇವೆ. ಈ ದೇವಿಯ ಜಾತ್ರೆಯನ್ನು ಐದು ವರ್ಷಕ್ಕೊಮ್ಮೆ ಮಾಡುತ್ತಿದ್ದು, ಜಲಧಿಯನ್ನು ವರ್ಷಕ್ಕೊಮ್ಮೆ ಬಹಳ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡ ಮಂಜುನಾಥ್ ಮಾತನಾಡಿ, ಜಟ್ಟಿ ಅಗ್ರಹಾರ ಎಂದರೇ ಜಟ್ಟಿ ಮನೆತನದವರಿಗೆ ರಾಜ ಮಹಾರಾಜರು ಉಡುಗೊರೆಯಾಗಿ ನೀಡಿದಂತಹ ಇತಿಹಾಸವುಳ್ಳ ಗ್ರಾಮವಾಗಿದ್ದು, ಇಲ್ಲಿ ನೆಲೆಸಿರುವ ಗ್ರಾಮ ಶಕ್ತಿ ಬೇವಿನಳಮ್ಮ ತಾಯಿಯು ಗ್ರಾಮಕ್ಕೆ ಯಾವುದೇ ತೊಂದರೆ ತೊಡಕುಗಳು ಆಗದಂತೆ ಕಾಪಾಡಿಕೊಂಡು ಬರುತ್ತಿದ್ದಾಳೆ. ಬರಗಾಲವಿರುವುದರಿಂದ ಅದ್ದೂರಿಯಾಗಿ ಜಾತ್ರೆ ಮಾಡಲು ಆಗದ ಕಾರಣ ಜಲಧಿಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ಈ ಸಂದರ್ಭದಲ್ಲಿ ಪೂಜಾರು ಲಕ್ಷ್ಮೀಶ್, ಗ್ರಾಮಸ್ಥರಾದ ತಿಮ್ಮರಾಜು, ಮಧುಸೂಧನ್, ಟೈಗರ್ ನಾಗರಾಜು, ಬಸವರಾಜು, ಕೇಬಲ್ ಸಿದ್ದಗಂಗಯ್ಯ, ಮಂಜುನಾಥ್, ಹನುಮಂತರಾಜು, ಚಂದ್ರಕುಮಾರ್, ಸಿದ್ದರಾಜು, ದೇವರಾಜು, ನಾಗರಾಜು, ಕೆಂಪರಾಜು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.

Continue Reading

ಕರ್ನಾಟಕ

Bengaluru News: ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ: ಪೇಜಾವರ ಶ್ರೀ

Bengaluru News: ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನದಿಂದ ಬೆಂಗಳೂರಿನ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಸಮಾರೋಪ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

VISTARANEWS.COM


on

udupi Shree Bhandarakeri math annual award programme in bengaluru
Koo

ಬೆಂಗಳೂರು: ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ (Bengaluru News) ತಿಳಿಸಿದರು.

ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ಬೆಂಗಳೂರಿನ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಸಮಾರೋಪ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ರಾಜ ಪ್ರಭುತ್ವ ಇದ್ದಾಗ ಮಹಾರಾಜರೇ ಪ್ರಜೆಗಳಿಗೆ ಸಂತೋಷವಾಗುವ ರೀತಿ ರಾಜ್ಯಭಾರ ಮಾಡುತ್ತ ಇದ್ದರು. ರಾಮ ಇದಕ್ಕೆ ಆದರ್ಶ ಪುರುಷ. ಆದರೆ ಇಂದು ಪ್ರಜಾಪ್ರಭುತ್ವ ಇದೆ. ಪ್ರಜೆಗಳೇ ಸಮಾಜಕ್ಕೆ ಹಿತವಾಗುವಂತೆ ಬಾಳಬೇಕು. ಇತರರಿಗೆ ನೆಮ್ಮದಿ, ಸಂಭ್ರಮ ನೀಡುವ ಉದಾತ್ತ ಮನೋಭಾವ ರೂಢಿಸಿಕೊಂಡರೆ ನಾಡು ಸುಭಿಕ್ಷವಾಗಿರುತ್ತದೆ ಎಂದರು.

ಇದನ್ನೂ ಓದಿ: Harbhajan Singh : ಭಾರತ ತಂಡದ ಕೋಚ್ ಆಗಲು ಉತ್ಸಾಹ ತೋರಿದ ಹರ್ಭಜನ್​ ಸಿಂಗ್​

ಶ್ರೀ ಭಂಡಾರ ಕೇರಿ ಗುರುಗಳು ವೇದವ್ಯಾಸರ ಜಯಂತಿಯನ್ನು ರಾಷ್ಟ್ರಗುರು ವೇದವ್ಯಾಸ ಜಯಂತಿಯನ್ನಾಗಿ ಆಚರಿಸಬೇಕೆಂದು ಸಂಕಲ್ಪ ಮಾಡಿ, ಆ ನಿಟ್ಟಿನಲ್ಲಿ ಕಳೆದ ಎರಡು ದಶಕಗಳಿಂದ ವಿಶೇಷವಾದ ಕಾರ್ಯಕ್ರಮವನ್ನು ರೂಪಿಸುತ್ತಿದ್ದಾರೆ. ಪಂಡಿತರಿಗೆ, ವಿದ್ವಾಂಸರಿಗೆ ಸಾಕಷ್ಟು ಮನ್ನಣೆ ನೀಡಿ ಗೌರವಾದರಗಳನ್ನು ದಯ ಪಾಲಿಸಿದ್ದಾರೆ. ಶ್ರೀ ಭಂಡಾರಕೇರಿ ಗುರುಗಳ ಆಶಯ ಈಡೇರಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಗವಾನ್ ವೇದವ್ಯಾಸರ ಜಯಂತಿಯನ್ನು ಎಲ್ಲರೂ ಸಂಭ್ರಮಿಸುವಂತಾಗಲಿ ಎಂದು ಪೇಜಾವರ ಶ್ರೀಗಳು ಆಶಿಸಿದರು.

ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆ ಮತ್ತು 48 ದಿನಗಳ ಮಂಡಲೋತ್ಸವದಲ್ಲಿ ಶ್ರೀ ಪೇಜಾವರ ಶ್ರೀಗಳು ವಿಶೇಷ ಸಾನಿಧ್ಯ ವಹಿಸಿ ಎಲ್ಲಾ ಕಾರ್ಯವನ್ನು ಸಾಂಗವಾಗಿ ನೆರವೇರಿಸಿ ಕೊಟ್ಟಿದ್ದು ವಿಶ್ವದ ಹೆಮ್ಮೆ ಎಂದು ತಿಳಿಸಿದರು.

70 ಜನರಿಗೆ ಸನ್ಮಾನ ಸಂಕಲ್ಪ

ಶ್ರೀ ವೇದವ್ಯಾಸ ಜಯಂತಿ ಸಂದರ್ಭದಲ್ಲಿ ಮೂವರು ಪಂಡಿತರಿಗೆ ಶ್ರೀಮಠ ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ. ಇದರೊಂದಿಗೆ ನಮ್ಮ ಎಪ್ಪತ್ತನೇ ವರ್ಧಂತಿ ಸಮಾರಂಭವೂ ನಡೆಯುತ್ತಿದ್ದು, ಈ ವರ್ಷ ಪೂರ್ಣ 70 ಜನ ಪಂಡಿತರಿಗೆ ಸನ್ಮಾನ ಮತ್ತು ಗೌರವವನ್ನು ಮಾಡಿ ಅವರನ್ನು ಪ್ರೋತ್ಸಾಹಿಸುವ ಸಂಕಲ್ಪ ಮಾಡಲಾಗಿದೆ ಎಂದು ಭಂಡಾರ ಕೇರಿ ಶ್ರೀಗಳು ತಿಳಿಸಿದರು.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ವೇದವ್ಯಾಸ ಜಯಂತಿ ಅಂಗವಾಗಿ ಬೆಳಗ್ಗೆ 8ಕ್ಕೆ ಹೋಮ, 9ಕ್ಕೆ ವೇದ ಶಾಸ್ತ್ರ ವಿನೋದ, ಮಧ್ಯಾಹ್ನ 2ಕ್ಕೆ ವಸಂತ ಉತ್ಸವ, ಸಂಜೆ 5ಕ್ಕೆ ಶ್ರೀ ವಿದ್ಯಾಮಾನ್ಯರ ಭಾವಚಿತ್ರ ಶೋಭಾಯಾತ್ರೆ ನೆರವೇರಿತು.

ಪ್ರಶಸ್ತಿ ಪ್ರದಾನ

ಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲದ ದಾಮೋದರಾಚಾರ್ಯರ ಪರವಾಗಿ ಅವರ ಶಿಷ್ಯ ಸಂತಾನ ಕೃಷ್ಣ ಅವರಿಗೆ (1 ಲಕ್ಷ ರೂ. ನಗದು, ಸನ್ಮಾನ ಪತ್ರ, ಸ್ಮರಣಿಕೆ), ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ ಅವರಿಗೆ (ರಾಜಹಂಸ ಪ್ರಶಸ್ತಿ), ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ಪಂಡಿತ ಸತ್ಯಬೋಧಾಚಾರ್ಯ ಹೊನ್ನಾಳಿ ಅವರಿಗೆ (ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿ) ತಲಾ 50 ಸಾವಿರ ರೂ. ನಗದು, ಸನ್ಮಾನ ಪತ್ರ ನೀಡಿ, ಗೌರವಿಸಲಾಯಿತು.

ಇದನ್ನೂ ಓದಿ: Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಶ್ರೀ ಭಂಡಾರಕೇರಿ ಶ್ರೀಗಳು ‘ಶ್ರೀ ರಾಮ ಲಲನ ಲಾಲನ ಲಲಾಮ ತೀರ್ಥ’ ಎಂದು ಬಿರುದು ನೀಡಿ, ಸನ್ಮಾನಿಸಿದರು. ನೂರಾರು ಜನ ವಿದ್ವಾಂಸರು, ಪಂಡಿತರು ಇದಕ್ಕೆ ಸಾಕ್ಷಿಯಾದರು.

Continue Reading

ಕರ್ನಾಟಕ

Koppala News: ಅಂಜನಾದ್ರಿ ದೇಗುಲ ಹುಂಡಿ ಎಣಿಕೆ; 5‌ ವಿದೇಶಿ ನಾಣ್ಯಗಳು ಪತ್ತೆ

Koppala News: ಗಂಗಾವತಿ ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ ಬೆಟ್ಟದ ಆಂಜನೇಯನ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿರುವ ಹಣ ಎಣಿಕೆ ಮಾಡಿದಾಗ ಪಾಕಿಸ್ತಾನ, ಮೊರಾಕ್ಕೊ, ಶ್ರೀಲಂಕಾ, ಅಮೆರಿಕಾ ಮತ್ತು ನೇಪಾಳ ದೇಶದ ನಾಣ್ಯಗಳು ಪತ್ತೆಯಾಗಿವೆ. ಅಂಜನಾದ್ರಿ ದೇಗುಲದ ಕಾಣಿಕೆ ಹುಂಡಿಯಲ್ಲಿ ಒಟ್ಟು 31.21 ಲಕ್ಷ ರೂಪಾಯಿ ಮೊತ್ತದ ನಗದು ಹಣ ಸಂಗ್ರಹವಾಗಿದೆ.

VISTARANEWS.COM


on

5 foreign coins found in anjanadri temple hundi counting
Koo

ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ (Anjanadri) ಬೆಟ್ಟದ ಆಂಜನೇಯನ ದೇವಸ್ಥಾನದಲ್ಲಿನ (Anjaneya Temple) ಕಾಣಿಕೆ ಹುಂಡಿಯಲ್ಲಿ (Koppala News) ಸಂಗ್ರಹವಾಗಿರುವ ಹಣ ಎಣಿಕೆ ಮಾಡಿದಾಗ ಐದು ದೇಶಗಳ ನಾಣ್ಯಗಳು ಪತ್ತೆಯಾಗಿವೆ.

ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೂಚನೆ ಮೆರೆಗೆ, ತಹಸೀಲ್ದಾರ್ ಯು. ನಾಗರಾಜ್ ನೇತೃತ್ವದಲ್ಲಿ ಕಂದಾಯ ಇಲಾಖೆ ಹಾಗೂ ದೇಗುಲ ಸಿಬ್ಬಂದಿ ಮಂಗಳವಾರ ಕಾಣಿಕೆ ಪೆಟ್ಟಿಗೆಯಲ್ಲಿ ಸಂಗ್ರಹವಾದ ಹಣ ಎಣಿಕೆ ನಡೆಸಿದರು. ಈ ಸಂದರ್ಭದಲ್ಲಿ ಪಾಕಿಸ್ತಾನ, ಮೊರಾಕ್ಕೊ, ಶ್ರೀಲಂಕಾ, ಅಮೆರಿಕಾ ಮತ್ತು ನೇಪಾಳ ದೇಶದ ನಾಣ್ಯಗಳು ಪತ್ತೆಯಾಗಿವೆ.

ಇದನ್ನೂ ಓದಿ: Bengaluru News: ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ: ಪೇಜಾವರ ಶ್ರೀ

ಪಾಕಿಸ್ತಾನದ ಐದು ರೂಪಾಯಿ ಮುಖ ಬೆಲೆಯ ನಾಣ್ಯ, ಯುನೈಟೆಡ್ ಸ್ಟೇಟ್ ಆಫ್ ಆಮೆರಿಕಾದ ಒಂದು ಸೆಂಟ್‌, ಮೊರಾಕ್ಕೊದಾ ಒಂದು ದಿರಮ್, ನೇಪಾಳದ ಒಂದು ನಾಣ್ಯ ಹಾಗೂ ಶ್ರೀಲಂಕದ ಐದು ರೂಪಾಯಿ ನಾಣ್ಯಗಳು ಹುಂಡಿಯಲ್ಲಿ ಪತ್ತೆಯಾಗಿವೆ.

30.21 ಲಕ್ಷ ರೂ. ಸಂಗ್ರಹ

ಐದು ವಿದೇಶಿ ನಾಣ್ಯ ಸೇರಿದಂತೆ ಅಂಜನಾದ್ರಿ ದೇಗುಲದ ಕಾಣಿಕೆ ಹುಂಡಿಯಲ್ಲಿ ಒಟ್ಟು 31.21 ಲಕ್ಷ ರೂಪಾಯಿ ಮೊತ್ತದ ನಗದು ಹಣ ಸಂಗ್ರಹವಾಗಿದೆ. ಕಳೆದ ಮಾರ್ಚ್‌ 27 ರಿಂದ ಇಲ್ಲಿವರೆಗೂ ಅಂದರೆ ಮೇ 21ರ ವರೆಗಿನ ಒಟ್ಟು 56 ದಿನಗಳಲ್ಲಿ 31.21 ಲಕ್ಷ ಮೊತ್ತದ ಹಣ ಸಂಗ್ರಹವಾಗಿದೆ.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ಹುಂಡಿ ಎಣಿಕೆಯ ವೇಳೆ ಶಿರಸ್ತೇದಾರ್‌ ರವಿಕುಮಾರ ನಾಯಕ್ವಾಡಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ್, ಮಹೇಶ್ ದಲಾಲ, ಹಾಲೇಶ ಗುಂಡಿ, ದೇಗುಲದ ವ್ಯವಸ್ಥಾಪಕ ವೆಂಕಟೇಶ ಹಾಗೂ ಸಿಬ್ಬಂದಿ ಇದ್ದರು.

Continue Reading

ಧಾರ್ಮಿಕ

Pretha Maduve: ವಧುವಿನ ಆತ್ಮಕ್ಕೆ ದೊರೆತ ವರ, ಆಷಾಢದಲ್ಲಿ ʻಪ್ರೇತ ಮದುವೆ’ ಫಿಕ್ಸ್

Pretha Maduve: ಜಾಹೀರಾತು ಹಾಗೂ ಈ ಕುರಿತು ಬಂದ ವರದಿಯಿಂದ ನೂರಾರು ಜನರು ಪೂರಕವಾಗಿ ಸ್ಪಂದಿಸಿದ್ದಾರೆ. ನೂರಾರು ಮಂದಿ ಸಂಪರ್ಕಿಸಿದ್ದರು. ವಿವಿಧ ಮಾಧ್ಯಮಗಳಲ್ಲಿಯೂ ಈ ವಿಚಾರ ಬಂದಿತ್ತು. ಇದು ತುಳುನಾಡಿನ ನಂಬಿಕೆಯ ಆಚರಣೆಯಾಗಿದೆ.

VISTARANEWS.COM


on

pretha maduve
Koo

ಮಂಗಳೂರು: ಕರ್ನಾಟಕ ಕರಾವಳಿಯ (karnataka Coastal) ತುಳುನಾಡಿನ (Tulunadu) ವಿಶಿಷ್ಟ ಆಚರಣೆಯಾದ ʼಪ್ರೇತ ಮದುವೆʼಗೆ (Pretha Maduve) ಸಜ್ಜಾಗಿದ್ದ ವಧುವಿಗೆ (bride) ವರ (groom) ಹಾಗೂ ದಿನಾಂಕ ಫಿಕ್ಸ್‌ ಆಗಿದೆ. ಆಷಾಢ (ಆಟಿ) ತಿಂಗಳಲ್ಲಿ ಮದುವೆ ನಡೆಯಲಿದೆ. ಇದು ಎರಡು ʼಆತ್ಮಗಳʼ (Souls) ಮದುವೆಯಾಗಿದ್ದು, ಸಾಂಪ್ರದಾಯಿಕ ಜಾನಪದ (Folk) ರೀತಿಯಲ್ಲಿ ನಡೆಯುತ್ತದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಧುವೊಬ್ಬಳಿಗೆ ʼವರ ಬೇಕಾಗಿದೆ’ ಎಂಬ ಜಾಹೀರಾತು ಭಾರಿ ಸುದ್ದಿಯಾಗಿತ್ತು. ಈ ʼವಧುʼ ಒಂದು ವಾರದ ಮಗುವಾಗಿದ್ದಾಗಲೇ ತೀರಿಕೊಂಡಿದ್ದಳು. ಇದು ನಡೆದು 30 ವರ್ಷಗಳು ಆಗಿವೆ. ಜ್ಯೋತಿಷ್ಯ ಪ್ರಕಾರ ನೋಡಿದಾಗ, ಹೆಣ್ಣುಮಗಳ ಆತ್ಮಕ್ಕೆ ವಿವಾಹ ಆಗಬೇಕು ಎಂದು ಕಂಡುಬಂದಿತ್ತು ಎನ್ನಲಾಗಿದೆ. ಈ ಮಗುವಿಗೆ ನಾಮಕರಣವೂ ಆಗಿರಲಿಲ್ಲ. ನಂತರ ಆಕೆಗೆ “ಪ್ರೇತ ಮದುವೆ’ ಮಾಡಲು ನಿರ್ಧರಿಸಲಾಗಿತ್ತು. ಈ ಕುರಿತು ಜಾಹೀರಾತು ಪ್ರಕಟಿಸಲಾಗಿತ್ತು.

Pretha Maduve

ಇದೀಗ ಈ ವಧುವಿಗೆ ಕಾಸರಗೋಡು ಸಮೀಪದ ಬಾಯಾರು ಕಡೆಯ “ವರ’ನೊಬ್ಬ ನಿಗದಿಯಾಗಿದ್ದಾನೆ. ಮುಂದಿನ “ಆಟಿ’ ತಿಂಗಳಲ್ಲಿ ಪ್ರೇತ ಮದುವೆ ನಡೆಯಲಿದೆ. “ಸುಮಾರು 30 ವರ್ಷದ ಹಿಂದೆ ತೀರಿ ಹೋದಾಕೆಗೆ ಪ್ರೇತ ವರ ಸದ್ಯ ಬೇಕಾಗಿದೆ” ಎಂದು ಪತ್ರಿಕೆಯಲ್ಲಿ ಜಾಹೀರಾತು ಹಾಕಿದ್ದನ್ನು ಗಮನಿಸಿದ ಬಾಯಾರು ಸಮೀಪದ ನಿವಾಸಿ ಸಂಬಂಧಪಟ್ಟವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಮೊದಲ ಕರೆ ಅದಾಗಿತ್ತು. ಬಳಿಕ ಸರಿಹೊಂದುವ ಸುಮಾರು 30ಕ್ಕೂ ಅಧಿಕ ಸಂಬಂಧದವರು ಸಂಪರ್ಕಿಸಿದ್ದರು. ಪ್ರಶ್ನಾಚಿಂತನೆಯಲ್ಲಿ ಅವಲೋಕಿಸಿದಾಗ ಬಾಯಾರುವಿನ ವರ ಅಂತಿಮಗೊಳಿಸುವ ಬಗ್ಗೆ ಸಲಹೆ ಬಂದಿತ್ತು.

ಪ್ರೇತ ಮದುವೆಯಲ್ಲಿ, ಜೀವಂತ ಇರುವಾಗ ನಡೆಯದಿದ್ದ ಮದುವೆ ಕ್ರಮಗಳನ್ನು ಎರಡೂ ಕುಟುಂಬ ವರ್ಗ ಸೇರಿ ಸಾಂಕೇತಿಕವಾಗಿ ನಡೆಸುತ್ತವೆ. ಮುಂದಿನ ರವಿವಾರ “ಪ್ರೇತ ವರ’ನ ಕಡೆಯವರು “ವಧು’ವಿನ ಮನೆಗೆ ಬರಲಿದ್ದಾರೆ. ಬಳಿಕ ನಾವು ಅವರ ಮನೆಗೆ ಹೋಗುತ್ತೇವೆ. ಬಳಿಕ ನಿಶ್ಚಿತಾರ್ಥ. ಆಟಿಯಲ್ಲಿ ಮದುವೆ ನಿಗದಿಯಾಗಿದೆ ಎನ್ನುತ್ತಾರೆ ಪುತ್ತೂರು ನಿವಾಸಿ.

ಜಾಹೀರಾತು ಹಾಗೂ ಈ ಕುರಿತು ಬಂದ ವರದಿಯಿಂದ ನೂರಾರು ಜನರು ಪೂರಕವಾಗಿ ಸ್ಪಂದಿಸಿದ್ದಾರೆ. ನೂರಾರು ಮಂದಿ ಸಂಪರ್ಕಿಸಿದ್ದರು. ವಿವಿಧ ಮಾಧ್ಯಮಗಳಲ್ಲಿಯೂ ಈ ವಿಚಾರ ಬಂದಿತ್ತು. ಇದು ತುಳುನಾಡಿನ ನಂಬಿಕೆಯ ಆಚರಣೆಯಾಗಿದೆ. ವಿವಿಧ ಸಮಾಜದ ಬಂಧುಗಳು ಪ್ರತಿಕ್ರಿಯಿಸಿದ್ದಾರೆ. ನಮ್ಮ ಮನೆಗೆ ಪ್ರೇತ ವರ ಬೇಕಾಗಿದ್ದ ಹಾಗೆಯೇ ನೂರಾರು ಮನೆಗೆ ವಧು-ವರ ಬೇಕಾಗಿದ್ದ ವಿಚಾರ ಆ ಸಂದರ್ಭ ಬೆಳಕಿಗೆ ಬಂತು. ಈ ಕುರಿತು ಜಾಗೃತಿಯೊಂದು ಮೂಡಿದಂತಾಗಿದೆ ಎನ್ನುತ್ತಾರೆ ಸಂಬಂಧಪಟ್ಟ ಮನೆಯವರು.

ಇದನ್ನೂ ಓದಿ: Mother’s Day: ಆಕೆಗಾಗಿ ಕೊಂಚ ಸಮಯ ನೀಡೋಣ; ತಾಯಂದಿರ ದಿನ ಅರ್ಥಪೂರ್ಣವಾಗಿ ಆಚರಿಸೋಣ

Continue Reading
Advertisement
Mobile
ದೇಶ2 hours ago

ಪರೀಕ್ಷೆಗೆ ಓದುವುದು ಬಿಟ್ಟು ಮೊಬೈಲ್‌ನಲ್ಲೇ ತಲ್ಲೀನ; 22 ವರ್ಷದ ಮಗಳನ್ನೇ ಕೊಂದ ತಾಯಿ

Rameshwaram Cafe Blast
ಕರ್ನಾಟಕ2 hours ago

Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಹುಬ್ಬಳ್ಳಿಯಲ್ಲಿ ಇಬ್ಬರು ಎನ್‌ಐಎ ವಶಕ್ಕೆ

LPL 2024
ಪ್ರಮುಖ ಸುದ್ದಿ2 hours ago

LPL 2024 : ಐಪಿಎಲ್ ಎಫೆಕ್ಟ್​, ಸಿಕ್ಕಾಪಟ್ಟೆ ದುಡ್ಡು ಬಾಚಿದ ಮಹೀಶ್ ಪತಿರಾನಾ

Porsche
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

Hajj pilgrimage
ಬೆಂಗಳೂರು2 hours ago

Hajj Pilgrimage: ಹಜ್ ಯಾತ್ರಿಗಳನ್ನು ಬೀಳ್ಕೊಟ್ಟ ಸಿಎಂ ಸಿದ್ದರಾಮಯ್ಯ; ಹಜ್ ಭವನ ನಿರ್ಮಾಣಕ್ಕೆ ಅನುದಾನ

IPL 2024
ಕ್ರೀಡೆ2 hours ago

IPL 2024 : ಕೆಕೆಆರ್​ 4ನೇ ಬಾರಿ ಐಪಿಎಲ್​​ನ​ ಫೈನಲ್​ಗೆ, ಎಸ್ಆರ್​ಎಚ್​ಗೆ ಇನ್ನೊಂದು ಅವಕಾಶ

Robert Vadra
ದೇಶ3 hours ago

Robert Vadra: ಸ್ವಂತ ಬಲದಿಂದ ರಾಜಕೀಯಕ್ಕೆ ಬರುವೆ, ಗಾಂಧಿ ಹೆಸರು ಬಳಸಲ್ಲ; ರಾಬರ್ಟ್‌ ವಾದ್ರಾ ಶಪಥ!

IPL 2024
ಕ್ರೀಡೆ3 hours ago

IPL 2024 : ರನ್​ ಔಟ್​​ ಆಗಿದ್ದಕ್ಕೆ ಸಿಟ್ಟಿಗೆದ್ದ ಕಾವ್ಯಾ ಮಾರನ್​, ಕಣ್ಣೀರು ಹಾಕಿದ ರಾಹುಲ್ ತ್ರಿಪಾಠಿ

Talking Digital Safety for Teens programme by Meta in Bengaluru
ಕರ್ನಾಟಕ3 hours ago

Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

MLC Election North East Graduates Constituency Election Prohibitory order imposed in Vijayanagar district from June 1
ವಿಜಯನಗರ3 hours ago

MLC Election: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ: ವಿಜಯನಗರ ಜಿಲ್ಲೆಯಲ್ಲಿ ಜೂ.1ರಿಂದ ನಿಷೇಧಾಜ್ಞೆ ಜಾರಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ8 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು13 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು14 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌