Vastu Tips: ಈ ವಾಸ್ತು ನಿಯಮ ಪಾಲಿಸಿ; ಹಣಕಾಸಿನ ಸಮಸ್ಯೆಯಿಂದ ಪಾರಾಗಿ - Vistara News

ಧಾರ್ಮಿಕ

Vastu Tips: ಈ ವಾಸ್ತು ನಿಯಮ ಪಾಲಿಸಿ; ಹಣಕಾಸಿನ ಸಮಸ್ಯೆಯಿಂದ ಪಾರಾಗಿ

ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಕಾಣಿಸಿಕೊಂಡರೆ ಮನೆಯ ನೆಮ್ಮದಿ, ಶಾಂತಿ, ಮನೆಯವರ ಆರೋಗ್ಯ.. ಹೀಗೆ ಎಲ್ಲದರಲ್ಲೂ ಒಂದಲ್ಲ ಒಂದು ಸಮಸ್ಯೆಗಳು ಕಾಡಲು ಪ್ರಾರಂಭವಾಗುತ್ತದೆ. ಮನೆಯಲ್ಲಿ ಹಣದ ಕೊರತೆ ಕಾಣಿಸಿಕೊಂಡರೆ ಅಥವಾ ಸಾಲದ ಹೊರೆ ಹೆಚ್ಚಾಗುತ್ತಿದ್ದರೆ ಈ ವಾಸ್ತು ಪರಿಹಾರಗಳು (Vastu Tips) ಇದರಿಂದ ಹೊರಬರಲು ಸಹಾಯ ಮಾಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಪರಿಹಾರ ಸೂತ್ರ ಇಲ್ಲಿದೆ.

VISTARANEWS.COM


on

Vastu Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮನೆಯ ವಾಸ್ತು (vastu for home) ಸಾಮರಸ್ಯದಿಂದ ಬಾಳಲು ಮೂಲಾಧಾರವಾಗಿರುತ್ತದೆ. ಹೀಗಾಗಿ ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ (Vastu Tips) ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಮನೆ ನಿರ್ಮಾಣದಿಂದ (house construction) ಅಲಂಕಾರದವರೆಗೆ ( home decoration) ಪ್ರತಿಯೊಂದು ಹಂತದಲ್ಲೂ ಇದು ಮಾರ್ಗದರ್ಶನ ನೀಡುತ್ತದೆ. ಇದರ ತತ್ತ್ವಗಳು ಆರ್ಥಿಕ ಸಮಸ್ಯೆಗಳು ಸೇರಿದಂತೆ ಹಲವಾರು ಜೀವನದ ಸವಾಲುಗಳನ್ನು ಪರಿಹರಿಸುತ್ತವೆ ಎಂದು ನಂಬಲಾಗುತ್ತದೆ.

ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಕಾಣಿಸಿಕೊಂಡರೆ ಮನೆಯ ನೆಮ್ಮದಿ, ಶಾಂತಿ, ಮನೆಯವರ ಆರೋಗ್ಯ.. ಹೀಗೆ ಎಲ್ಲದರಲ್ಲೂ ಒಂದಲ್ಲ ಒಂದು ಸಮಸ್ಯೆಗಳು ಕಾಡಲು ಪ್ರಾರಂಭವಾಗುತ್ತದೆ. ಮನೆಯಲ್ಲಿ ಹಣದ ಕೊರತೆ ಕಾಣಿಸಿಕೊಂಡರೆ ಅಥವಾ ಸಾಲದ ಹೊರೆ ಹೆಚ್ಚಾಗುತ್ತಿದ್ದರೆ ಈ ವಾಸ್ತು ಪರಿಹಾರಗಳು ಇದರಿಂದ ಹೊರಬರಲು ಸಹಾಯ ಮಾಡುತ್ತದೆ.

Vastu Tips
Vastu Tips


ತುಳಸಿ ಬೇರು

ತುಳಸಿ ಗಿಡವು ಹಿಂದೂ ಧರ್ಮದಲ್ಲಿ ಪೂಜ್ಯನೀಯ ಸ್ಥಾನವನ್ನು ಹೊಂದಿದೆ. ಅದರಲ್ಲಿ ಲಕ್ಷ್ಮೀ ದೇವಿಯು ವಾಸವಾಗಿದ್ದಾಳೆ ಎಂದೇ ನಂಬಲಾಗಿದೆ.

ಒಣ ತುಳಸಿ ಬೇರನ್ನು ಕೆಲವು ಅಕ್ಕಿ ಕಾಳುಗಳೊಂದಿಗೆ ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ಮನೆಯ ಮುಖ್ಯ ಬಾಗಿಲಿಗೆ ನೇತುಹಾಕಿ. ಇದರಿಂದ ಮನೆಯೊಳಗೇ ಧನಾತ್ಮಕ ಶಕ್ತಿಯ ಆಹ್ವಾನವಾಗುತ್ತದೆ. ಇದು ಮನೆಯಲ್ಲಿ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ.

Vastu Tips
Vastu Tips


ಉಪ್ಪಿನ ಚೀಲ

ಮನೆಯ ಪ್ರವೇಶದ್ವಾರದಲ್ಲಿ ಉಪ್ಪಿನ ಚೀಲವನ್ನು ನೇತುಹಾಕುವುದು ಕೂಡ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಮತ್ತೊಂದು ವಾಸ್ತು ಶಾಸ್ತ್ರ ಹೇಳಿರುವ ಪರಿಹಾರ ವಿಧಿಯಾಗಿದೆ. ತಾತ್ತ್ವಿಕವಾಗಿ, ಇದನ್ನು ಶುಕ್ರವಾರ ಅಥವಾ ಶನಿವಾರ ಮಾಡಬೇಕು.

ಉಪ್ಪು ಜಾತಕದಲ್ಲಿರುವ ಶುಕ್ರ ಗ್ರಹವನ್ನು ಬಲಪಡಿಸುತ್ತದೆ ಎಂದು ನಂಬಲಾಗಿದೆ, ಇದು ವಸ್ತು ಸೌಕರ್ಯಗಳಿಗೆ ಸಂಬಂಧಿಸಿದೆ. ಶುಕ್ರನನ್ನು ಬಲಪಡಿಸುವುದರಿಂದ ಆರ್ಥಿಕ ಸ್ಥಿರತೆಯನ್ನು ಪಡೆಯಬಹುದು ಮತ್ತು ಭೌತಿಕ ಸಂತೋಷಗಳನ್ನು ಅನುಭವಿಸಬಹುದು.

ಇದನ್ನೂ ಓದಿ: Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Vastu Tips
Vastu Tips


ಅರಿಶಿನ ಗಂಟು

ಸಂತೋಷ ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಮನೆಯ ಮುಖ್ಯ ದ್ವಾರದಲ್ಲಿ ಅರಿಶಿನದ ಗಂಟು ಕಟ್ಟಲು ವಾಸ್ತು ಶಾಸ್ತ್ರವು ಶಿಫಾರಸು ಮಾಡುತ್ತದೆ. ಈ ಸರಳ ಕ್ರಿಯೆಯು ನಕಾರಾತ್ಮಕ ಶಕ್ತಿಗಳನ್ನು ಹೋಗಲಾಡಿಸುತ್ತದೆ ಮತ್ತು ಲಕ್ಷ್ಮಿ ದೇವಿಯ ಅನುಗ್ರಹವನ್ನು ಕರುಣಿಸುತ್ತದೆ.

ಇದು ಮನೆಯ ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುವ ಮೂಲಕ ಹಣಕಾಸಿನ ತೊಂದರೆಗಳನ್ನು ನಿವಾರಿಸುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Kalika Temple: ಭಕ್ತರು ಈ ದೇವಾಲಯಕ್ಕೆ ತುಂಡುಡುಗೆ ಧರಿಸಿ ಬಂದರೆ ಪ್ರವೇಶ ಇಲ್ಲ; ಆಡಳಿತ ಮಂಡಳಿ ಆದೇಶ

Kalika Temple: ಸುಮಾರು 400 ವರ್ಷಗಳ ಹಿಂದೆ ರತ್ಲಾಮ್‌ ಅರಸನಾಗಿದ್ದ ರತನ್‌ ಸಿಂಗ್‌ ಅವರು ಕಾಳಿಕಾ ದೇವಿಯ ಆರಾಧಕರಾಗಿದ್ದು, ಅವರು ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಈಗ ದೇವಾಲಯದ ಆಡಳಿತ ಮಂಡಳಿಯು ತುಂಡುಡುಗೆ, ಪಾಶ್ಚಿಮಾತ್ಯ ಉಡುಪುಗಳನ್ನು ನಿಷೇಧಿಸಿದೆ. ಭಕ್ತರು ಆಡಳಿತ ಮಂಡಳಿಯ ತೀರ್ಮಾನವನ್ನು ಸ್ವಾಗತಿಸಿದ್ದಾರೆ.

VISTARANEWS.COM


on

Kalika Temple
Koo

ಭೋಪಾಲ್:‌ ಬದಲಾದ ಕಾಲಘಟ್ಟದಲ್ಲಿ, ದೇವಾಲಯಗಳಿಗೂ ತುಂಡುಡುಗೆ ಧರಿಸಿ ಬರುವ ಭಕ್ತರ ಸಂಖ್ಯೆ ಜಾಸ್ತಿಯಾಗಿರುವ ಕಾರಣ ಭಾರತದ ಹಲವು ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ದೇವಾಲಯಕ್ಕೆ ಆಗಮಿಸಬೇಕು ಎಂಬುದಾಗಿ ದೇವಾಲಯಗಳ ಆಡಳಿತ ಮಂಡಳಿಗಳು ಆದೇಶ ಹೊರಡಿಸಿವೆ. ಈಗ ಮಧ್ಯಪ್ರದೇಶದ (Madhya Pradesh) ರತ್ಲಾಮ್‌ನಲ್ಲಿರುವ (Ratlam), ಪ್ರಸಿದ್ಧ ಕಾಳಿಕಾ ದೇವಾಲಯವು (Kalika Temple) ಕೂಡ ವಸ್ತ್ರಸಂಹಿತೆ ಜಾರಿಗೊಳಿಸಿದ್ದು, ಭಕ್ತಾದಿಗಳು ವಿದೇಶಿ ಹಾಗೂ ತುಂಡುಡುಗೆ ಧರಿಸಿ ಬರುವಂತಿಲ್ಲ ಎಂದು ಆದೇಶಿಸಿದೆ.

ದೇವಾಲಯದ ಅರ್ಚಕ ರಾಜೇಂದ್ರ ಶರ್ಮಾ ಅವರು ವಸ್ತ್ರಸಂಹಿತೆ ಜಾರಿಗೊಳಿಸಿದ್ದಾರೆ. “ದೇವಾಲಯದ ಪಾವಿತ್ರ್ಯ ಕಾಪಾಡಲು, ಭಕ್ತರು ವಿದೇಶಿ ಹಾಗೂ ತುಂಡುಡುಗೆ, ಶಾರ್ಟ್ಸ್‌ಗಳನ್ನು ಧರಿಸಿ ಬಂದರೆ, ಅವರಿಗೆ ದೇವಾಲಯ ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ಇಂತಹ ಉಡುಪು ಧರಿಸಿ ಬರುವ ಯಾರಿಗೂ ದೇವಾಲಯದ ಗರ್ಭಗುಡಿ ಪ್ರವೇಶಿಸಲು ಭದ್ರತಾ ಸಿಬ್ಬಂದಿಯು ಬಿಡುವುದಿಲ್ಲ. ಅಂತಹ ಭಕ್ತಾದಿಗಳು ದೇವಾಲಯದ ಹೊರಗಿನಿಂದಲೇ ದರ್ಶನ ಪಡೆದು ಹೋಗಬೇಕಾಗುತ್ತದೆ” ಎಂಬುದಾಗಿ ಅರ್ಚಕ ತಿಳಿಸಿದ್ದಾರೆ.

ಸುಮಾರು 400 ವರ್ಷಗಳ ಹಿಂದೆ ರತ್ಲಾಮ್‌ ಅರಸನಾಗಿದ್ದ ರತನ್‌ ಸಿಂಗ್‌ ಅವರು ಕಾಳಿಕಾ ದೇವಿಯ ಆರಾಧಕರಾಗಿದ್ದು, ಅವರು ದೇವಾಲಯವನ್ನು ನಿರ್ಮಿಸಿದ್ದಾರೆ. ಪ್ರಸಕ್ತ ದೇವಾಲಯದ ನಿರ್ವಹಣೆಯನ್ನು ಕೋರ್ಟ್‌ ಆಫ್‌ ವಾರ್ಡ್ಸ್‌ ಕಾಯ್ದೆ ಅಡಿಯಲ್ಲಿ ಜಿಲ್ಲಾಡಳಿತವೇ ನೋಡಿಕೊಳ್ಳುತ್ತದೆ. ತಹಸೀಲ್ದಾರ್‌ ರಿಷಭ್‌ ಠಾಕೂರ್‌ ಅವರು ಕೂಡ ವಸ್ತ್ರಸಂಹಿತೆ ಕುರಿತು ಮಾತನಾಡಿದ್ದಾರೆ. “ದೇವಾಲಯದ ನಿರ್ವಹಣಾ ಸಮಿತಿಯು ಪಾಶ್ಚಿಮಾತ್ಯ ಉಡುಪುಗಳನ್ನು ನಿರ್ಬಂಧಿಸಿದೆ” ಎಂದು ಹೇಳಿದ್ದಾರೆ.

ನಿರ್ಧಾರ ಸ್ವಾಗತಿಸಿದ ಭಕ್ತರು

ಕಾಳಿಕಾ ದೇವಾಲಯದಲ್ಲಿ ಪಾಶ್ಚಿಮಾತ್ಯ ಹಾಗೂ ತುಂಡುಡುಗೆಯನ್ನು ನಿಷೇಧಿಸಿರುವ ದೇವಾಲಯ ಆಡಳಿತ ಮಂಡಳಿ ತೀರ್ಮಾನವನ್ನು ಭಕ್ತರು ಸ್ವಾಗತಿಸಿದ್ದಾರೆ. ದೇಶ-ವಿದೇಶಗಳಿಂದ ದೇವಾಲಯಕ್ಕೆ ಭಕ್ತರು ಆಗಮಿಸುತ್ತಾರೆ. ಇತ್ತೀಚೆಗೆ ದೇವಾಲಯಕ್ಕೂ ತುಂಡುಡುಗೆ ಧರಿಸಿ ಬರುವವರ ಸಂಖ್ಯೆ ಜಾಸ್ತಿಯಾಗಿದೆ. ಹಾಗಾಗಿ, ದೇವಾಲಯವು ವಸ್ತ್ರಸಂಹಿತೆ ಜಾರಿಗೊಳಿಸಿರುವುದು ಉತ್ತಮ ನಿರ್ಧಾರವಾಗಿದೆ. ಭಕ್ತರು ಸಾಂಪ್ರದಾಯಿಕ ದಿರಸು ಧರಿಸಿ ದೇವಾಲಯಕ್ಕೆ ಆಗಮಿಸುವುದು ಉತ್ತಮ ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 16 ದೇಗುಲಗಳಲ್ಲಿ ವಸ್ತ್ರಸಂಹಿತೆ; ಹರಿದ ಜೀನ್ಸ್‌, ಶಾರ್ಟ್ಸ್‌ ತೊಟ್ಟು ಹೋದರೆ ಹೆಣ್ಣುಮಕ್ಕಳಿಗಿಲ್ಲ ಪ್ರವೇಶ

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡ ಭಾಗ 2: ದೀಪದ ಬುಡದಲ್ಲಿ ಕತ್ತಲೆ

ಧವಳ ಧಾರಿಣಿ ಅಂಕಣ: ಸುಗ್ರೀವನಿಗೆ ಸಮಗ್ರ ಭೂಮಂಡಲದ ಪರಿಚಯ ಹೇಗಾಯಿತು ಎನ್ನುವ ಕುತೂಹಲ ರಾಮನಿಗೆ ಇತ್ತು. “ಕಥಂ ಭವಾನ್ವಿಜಾನೀತೇ ಸರ್ವಂ ವೈ ಮಣ್ಡಲಂ ಭುವಃ” ಇಡೀ ಭೂಮಂಡಲದ ಪರಿಚಯ ನಿನಗೆ ಹೇಗಾಯಿತು ಎಂದು ಕೇಳಿದಾಗ ಸುಗ್ರೀವ ರಾಮನಲ್ಲಿ ತನ್ನ ಭೂಮಂಡಲದ ಯಾತ್ರೆಯ ಕಥೆಯನ್ನು ಹಂಚಿಕೊಂಡ.

VISTARANEWS.COM


on

vali sugreeva ಧವಳ ಧಾರಿಣಿ
Koo

ವಾಲಿಯ ಪರಾಕ್ರಮಕ್ಕೆ ಋಷ್ಯಮೂಕ ಎರವಾಗದ ಬಗೆ

dhavala dharini by Narayana yaji

ಧವಳ ಧಾರಿಣಿ ಅಂಕಣ: ವಾನರೇನ್ದ್ರೋ ಮಹಾವೀರ್ಯಸ್ತೇಜೋವಾನಮಿತಪ್ರಭಃ
ಸತ್ಯಸನ್ಧೋ ವಿನೀತಶ್ಚ ಧೃತಿಮಾನ್ಮತಿಮಾನ್ಮಹಾನ್৷৷ಅ.72.13৷৷

ವಾನರೇಂದ್ರನಾದ ಅವನು (ಸುಗ್ರೀವನು), ಮಹಾವೀರ್ಯನು, ತೇಜಸ್ಸುಳ್ಳವನು, ಅಮಿತವಾದ ಕಾಂತಿಯುಳ್ಳವನು, ಸತ್ಯಸಂಧನು, ವಿನಯಶೀಲನು, ಧರ್ಯವಂತನು, ಬುದ್ಧಿವಂತನು, ಮಹಾತ್ಮನು, ಕಾರ್ಯದಕ್ಷನು, ವಾಗ್ಮಿಯು, ಮಹಾಬಲಿಷ್ಠನು ಮತ್ತು ಅತಿಶಯವಾದ ಪರಾಕ್ರಮವುಳ್ಳವನು.

ಮಹಾಕಾವ್ಯವನ್ನು ಖಂಡವಾಗಿ ಓದುವುದರಿಂದ ಅಥವಾ ಅದರ ಯಾವುದೋ ಒಂದು ಭಾಗದ ಕಥೆ ಜನಪ್ರಿಯವಾಗಿರುವುದರಿಂದ ಅದರಲ್ಲಿ ಬರುವ ಪಾತ್ರದ ಗುಣಗಳನ್ನೇ ಆ ಪಾತ್ರದ ನಿಜವಾದ ಗುಣಾವಗುಣಗಳೆಂದು ಜನಮಾನಸದಲ್ಲಿ ಬಿಂಬಿತವಾಗಿಬಿಡುತ್ತದೆ. ರಾಮಾಯಣದಲ್ಲಿ (Ramayana) ಬಹುಚರ್ಚಿವಾಗುವ ಸಂಗತಿ ಎಂದರೆ ವಾಲಿವಧಾ (Vali Vadha) ಪ್ರಕರಣ. ಇಲ್ಲಿ ಬರುವ ಮೂರು ಮುಖ್ಯಪಾತ್ರಗಳಲ್ಲಿ ಮೊದಲನೆಯದು ವಾಲಿ, ಎರಡನೆಯದು ಹನುಮಂತ (Hanuman) ನಂತರ ಸುಗ್ರೀವ (Sugreeva). ಈ ಮೂರೂ ಪಾತ್ರಗಳೂ ರಾಮನಲ್ಲಿ ಮುಖಾಮುಖಿಯಾಗುತ್ತವೆ. ಹನುಮಂತ ರಾಮನ ದಾಸನಾಗಿ ತನ್ನ ಜೀವನವನ್ನು ಸವೆಸಿದರೆ ಸುಗ್ರೀವ ರಾಮನಿಗೆ ಸ್ನೇಹಿತನಾಗಿ ಕಿಷ್ಕಿಂಧಾ ರಾಜ್ಯವನ್ನೂ, ಪತ್ನಿಯನ್ನೂ ಅಣ್ಣನಿಂದ ಪಡೆದುಕೊಳ್ಳುತ್ತಾನೆ. ಈ ಇಬ್ಬರ ನಡುವೆ ವಾಲಿ ರಾಮನಲ್ಲಿ ಕೇಳುವ ಪ್ರಶ್ನೆಗಳು ಅದಕ್ಕೆ ರಾಮ ಕೊಡುವ ಉತ್ತರಗಳು ನಿರಂತರವಾಗಿ ರಾಮನ ವ್ಯಕ್ತಿತ್ವಕ್ಕೆ ಸವಾಲುಗಳನ್ನು ಎಸೆಯುತ್ತಲೇ ಬಂದಿವೆ. ಇದಕ್ಕೆ ಕಾರಣ ಮಹಾಕಾವ್ಯಕ್ಕಿಂತ, ಅದನ್ನು ಆಧರಿಸಿ ಬರೆದ ರೂಪಕಗಳಾದ ನಾಟಕ, ಯಕ್ಷಗಾನ ಮೊದಲಾದವುಗಳು. ಭಟ್ಟತೌತನದ್ದೆಂದು ನಂಬಲಾದ ಒಂದು ಶ್ಲೋಕದಲ್ಲಿ ಕಾವ್ಯ ಮತ್ತು ನಾಟಕಗಳ ಕುರಿತು ಹೀಗೆ ಹೇಳಲಾಗಿದೆ.

ಅನುಭಾವವಿಭಾವಾನಾಂ ವರ್ಣನಾ ಕಾವ್ಯಮುಚ್ಯತೇ I
ತೇಷಾಮೇವ ಪ್ರಯೋಗಸ್ತು ನಾಟ್ಯಂ ಗೀತಾದಿರಂಜಿತಂ II

ಅನುಭಾವ ವಿಭಾವಗಳ ವರ್ಣನೆಗೆ ಕಾವ್ಯವೆಂದು ಹೆಸರು; ಇವುಗಳನ್ನೇ ಗಾನಾದಿಗಳಿಂದ ರಂಜನೆಗೊಳಿಸಿ ಆಡಿ ತೋರಿಸಿದರೆ ನಾಟ್ಯವಾಗುತ್ತದೆ. (ಕೃಪೆ:- ತೀನಂಶ್ರೀಯವರ ಭಾರತೀಯ ಕಾವ್ಯಮೀಮಾಂಸೆಯಿಂದ).

ಇಲ್ಲಿ ರಂಜನೆಗಾಗಿ ನಾಟಕಕಾರ ಕಾವ್ಯವನ್ನು ತನಗೆ ಬೇಕಾದ ರೀತಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡರೆ ಅದು ನಾಟ್ಯವಾಗಿ ರಂಗದಮೇಲೆ ಬಂದಾಗ ಆ ಪಾತ್ರಗಳು ಮೂಲ ಕಾವ್ಯದ ಮೂಸೆಯಲ್ಲಿ ಇದ್ದಂತೆ ಮೂಡಿಬಂದವುಗಳು ಎಂದು ಅಂದುಕೊಳ್ಳುತ್ತೇವೆ.

ಅಪಾರೇ ಕಾವ್ಯಸಂಸಾರೆ ಕವಿರೇವ ಪ್ರಜಾಪತಿಃ
ಯಥಾಸ್ಮೈ ರೋಚತೇ ವಿಶ್ವಂ ತಥೇದಂ ಪರಿವರ್ತತೇ II

ಕಾವ್ಯವೇ ಇರಲಿ ನಾಟಕ ರೂಪಕಗಳೇ ಇರಲಿ, ಇಲ್ಲಿ ಕವಿಯೇ ಸೃಷ್ಟಿಕರ್ತ. ತನಗೆ ಹೇಗೆ ರುಚಿಸುವುದೋ ಹಾಗೇ ವಿಶ್ವವನ್ನು ರೂಪಾಂತರಗೊಳಿಸುತ್ತಾನೆ ಎಂದು ಆನಂದವರ್ಧನ ತನ್ನ ಧ್ವನ್ಯಾಲೋಕದಲ್ಲಿ ಹೇಳುವುದನ್ನು ಗಮನಿಸಬಹುದು. ಈ ರೂಪಾಂತರಗೊಳಿಸಿದುದರ ಪರಿಣಾಮವೇ ಮಹಾಕಾವ್ಯಗಳ ಪ್ರತಿನಾಯಕಪಾತ್ರಗಳು ಉದಾತ್ತೀಕರಣಗೊಂಡು ನಾಯಕ ಪಾತ್ರಗಳು ಅವುಗಳ ಎದುರು ಮಂಕಾಗಿಹೋಗಿದೆ. ಅಂತಹ ಪಾತ್ರಗಳಲ್ಲಿ ಸುಗ್ರೀವನೂ ಓರ್ವ.

ಮೇಲೆ ಹೇಳಿದ “ಹನ್ನೆರಡು ಗುಣಗಳು ಸುಗ್ರೀವನಲ್ಲಿ ಇದೆ ಹಾಗಾಗಿ ನೀನು ಆತನೊಡನೆ ಸ್ನೇಹವನ್ನು ಮಾಡು’ ಎಂದು ರಾಮನಿಗೆ ಹೇಳುವುದು ಕಬಂಧನೆನ್ನುವ ರಾಕ್ಷಸ. ಕಬಂಧ ಸುಗ್ರೀವನ ಗುಣಗಳ ಕುರಿತು ಹೇಳುವಾಗ ಬಹಳ ಮುಖ್ಯವಾದ ಸಂಗತಿಯೊಂದನ್ನು ತಿಳಿಸುವುದು “ಎಲ್ಲಿಯವರೆಗೆ ಸೂರ್ಯನ ಬೆಳಕು ಪ್ರಸರಿರುವುದೋ ಅಲ್ಲಿಯವರೆಗೂ ಈ ಭೂಮಂಡಲದಲ್ಲಿ ಸುಗ್ರೀವನಿಗೆ ತಿಳಿಯದ ಸಂಗತಿಗಳು ಯಾವುದೋ ಇಲ್ಲ. ಪತ್ನಿವಿಯೋಗದಿಂದ ದುಃಖಪಡುತ್ತಿರುವ ನಿನ್ನ ಈ ಶೋಕವನ್ನು ಪರಿಹರಿಸಲು ಅವನೇ ಸಮರ್ಥನು. ಸುಂದರಿಯಾದ ಸೀತೆಯು ಮೇರುಪರ್ವತದ ತುತ್ತತುದಿಯಲ್ಲಿರಲಿ, ಪಾತಾಳದಲ್ಲಿಯೇ ಆಶ್ರಯ ಪಡೆದಿರಲಿ, ಯಾವದಿಕ್ಕಿನಲ್ಲಿಯೇ ಇರಲಿ, ಮಹಾಕಾಯರಾದ ವಾನರನ್ನು ಎಲ್ಲದಿಕ್ಕುಗಳಿಗೂ ಕಳುಹಿಸಿ ಸೀತೆಯನ್ನು ಹುಡುಕಿಸಿಕೊಡಬಲ್ಲ. ರಾವಣನ ಅರಮನೆಯಲ್ಲಿ ನಿನ್ನ ಮೈಥಿಲಿ ಇರಲಿ, ಅಲ್ಲಿಯೂ ಆತ ಸೀತೆಯನು ಹುಡುಕಿಸಬಲ್ಲ. ಅಗತ್ಯಬಿದ್ದರೆ ರಾಕ್ಷಸರನ್ನು ಸಂಹರಿಸಬಲ್ಲ” ಎನ್ನುವ ಮಾತುಗಳು ಸುಗ್ರೀವನ ನಿಪುಣತೆಯನ್ನು ತಿಳಿಸುತ್ತದೆ. ಇಲ್ಲಿ ಬರುವ ಒಂದು ವಾಕ್ಯ “ಸುಗ್ರೀವನಿಗೆ ಸೂರ್ಯನ ಕಿರಣಬೀಳುವ ಎಲ್ಲಾ ಪ್ರದೇಶಗಳ ಪರಿಚಯವಿದೆ” ಎನ್ನುವ ಮಾತಿನ ಹಿಂದೆ ಒಂದು ಘಟನೆಯ ಹಿನ್ನೆಲೆಯಿದೆ. ಅದು ವಾಲಿ ಮತು ಸುಗ್ರೀವರ ಪ್ರಸಿದ್ಧವಾದ ಜಗಳ.

ವಾನರರು ಎಂದರೆ ಮಂಗಗಳು ಎನ್ನುವುದಕ್ಕಿಂತ ಮುಖ್ಯವಾಗಿ ಅವರೊಂದು ಜನಾಂಗವಾಗಿರಬಹುದು ಎನ್ನುವ ವಿವರಣೆ ಕೆಲವುಕಡೆ ಇದೆ. ವಾಲ್ಮೀಕಿರಾಮಾಯಣದಲ್ಲಿ ಇದಕ್ಕೆ ಪುಷ್ಟಿಕೊಡುವ ಕೆಲಶ್ಲೋಕಗಳು ಇದೆ. ಆದರೂ ಹೆಚ್ಚಿನ ಕಡೆಯಲ್ಲಿ ಅವರನ್ನು ವಾನರರು, ಕಪಿಗಳು ಎಂದೆಲ್ಲ ವರ್ಣಿಸಿರುವುದರಿಂದ ಅವರು ಯಾವುದೋ ಒಂದು ಬುಡಕಟ್ಟು ಜನಾಂಗವೆನ್ನುವದನ್ನು ಸಿದ್ಢಪಡಿಸಲು ಸಾಕಾಗುವುದಿಲ್ಲ. ಹಾಗಂತ ಅಲ್ಲವೆಂದು ಹೇಳುವಂತೆಯೂ ಇಲ್ಲ. ವಾನರರ ಹಿನ್ನೆಲೆಯನ್ನು ಗಮನಿಸುವಾಗ ವಾಲಿ ಮತ್ತು ಸುಗ್ರೀವ ಇವರೆಲ್ಲರೂ ಬ್ರಹ್ಮನಿಗೆ ನೇರ ಸಂಬಂಧವುಳ್ಳವರು. ಅವರ ತಂದೆ ಋಕ್ಷರಜಸ್ ಎನ್ನುವಾತ. ಬ್ರಹ್ಮನೊಮ್ಮೆ ಮೇರುಪರ್ವತದಲ್ಲಿ ತಪಸ್ಸನ್ನು ಆಚರಿಸುವಾಗ ಆತನ ಕಣ್ಣಿನಿಂದ ಬಿದ್ದ ಒಂದು ಹನಿ ವಾನರರೂಪದ ಪುರಷಾಕಾರ ತಾಳಿತು. ಅಲ್ಲಿಯೇ ಆತ ವೇದಗಳನ್ನು ಕಲಿತ. ಒಂದು ದಿವಸ ಆತ ಮೇರು ಪರ್ವತದಲ್ಲಿ ತಿರುಗಾಡುತ್ತಿರುವಾಗ ಸರೋವರವೊಂದರಲ್ಲಿ ತನ್ನ ಪ್ರತಿಬಿಂಬವನ್ನು ನೋಡಿ, ಯಾರೋ ಬೇರೆಯವನೆಂದು ಭಾವಿಸಿ ಅವನನ್ನುಹಿಡಿಯಲು ಸರೋವರದೊಳಗೆ ಧುಮುಕಿದ. ಅಲ್ಲಿಂದ ಮೇಲೆ ಬರುವಾಗ ಆತ ಸುಂದರಿಯಾದ ಸ್ತ್ರೀರೂಪವನ್ನು ತಾಳಿದ್ದ. ಸಂಜೆಯಾಗುತ್ತಿತ್ತು. ಅಸ್ತಮಿಸುತ್ತಿರುವ ಸೂರ್ಯ ಮತ್ತು ಬ್ರಹ್ಮನ ಸಂದರ್ಶನಕ್ಕಾಗಿ ಹೋಗುತ್ತಿರುವ ಇಂದ್ರ ಇಬ್ಬರೂ ಆತನನ್ನು ನೋಡಿ ಮೋಹಗೊಂಡರು. ಇಂದ್ರನ ತೇಜಸ್ಸು ಆತನ ಬಾಲದ ಮೇಲೆಯೂ, ಸೂರ್ಯನ ತೇಜಸ್ಸು ಕುತ್ತಿಗೆಯ ಮೇಲೂ ಬಿತ್ತು. ಅದರ ಪರಿಣಾಮ ಬಾಲದಿಂದ ವಾಲಿ, ಗ್ರೀವ-ಕುತ್ತಿಗೆಯಿಂದ ಸುಗ್ರೀವ ಜನಿಸಿದರು. ಮಾರನೆಯ ದಿನ ಬೆಳಗಾಗುತ್ತಿರುವಂತೆ ಋಕ್ಷರಜಸ್ ಪುನಃ ಗಂಡಸಾದ. ಆತನ ಅವಸ್ಥೆಯನ್ನು ಗಮನಿಸಿದ ಬ್ರಹ್ಮ, ಋಕ್ಷರಜಸ್ಸನಿಗೆ ಅಲ್ಲಿಂದ ಕಿಷ್ಕಿಂಧೆಗೆ ಹೋಗಿ ರಾಜ್ಯಭಾರಮಾಡುವಂತೆ ಅಪ್ಪಣೆಯಿತ್ತ.

ಆತ ತನ್ನ ಮಕ್ಕಳಾದ ವಾಲಿ ಸುಗ್ರೀವರೊಂದಿಗೆ ಕಿಷ್ಕಿಂಧೆಗೆ ಬಂದು ವಾನರರ ಸಾಮ್ರಾಜ್ಯವನ್ನು ಸ್ಥಾಪಿಸಿದ. ಕೆಲಕಾಲದ ನಂತರ ವಾಲಿಗೆ ಪಟ್ಟವನ್ನು, ಸುಗ್ರೀವನಿಗೆ ಯುವರಾಜ ಪಟ್ಟವನ್ನು ಕಟ್ಟಿ ತಪಸ್ಸಿಗೆ ತೆರಳಿದ. ವಾಲಿ ಕಿಷ್ಕಿಂಧೆಯಲ್ಲಿ ರಾಜನಾದ ಮೇಲೆ ಚದುರಿಹೋಗಿದ್ದ ವಾನರರನ್ನೆಲ್ಲಾ ಒಂದುಗೂಡಿಸಿ ಬಲಿಷ್ಠವಾದ ಸಾಮ್ರಾಜ್ಯವನ್ನು ಕಟ್ಟಿದ. ವಾನರರ ಆಚಾರಗಳೆಲ್ಲವೂ ಮನುಷ್ಯರ ನಡವಳಿಕೆಯಂತೆಯೇ ಇದ್ದವು. ಪಟ್ಟಾಭಿಷೇಕ, ಪಾಣಿಗ್ರಹಣಪೂರ್ವಕ ವಿವಾಹ, ಕುಟುಂಬಪದ್ಧತಿ, ರಾಜನೀತಿ ಇವೆಲ್ಲದರಲ್ಲಿಯೂ ಅವರ ಆಚಾರಗಳು ಅಗಸ್ತ್ಯರಿಂದ ಪ್ರಭಾವಿತರಾಗಿರಬಹುದು ಎನಿಸುತ್ತದೆ. ಸುಗ್ರೀವ ಅನೇಕ ಸಾರಿ ಅಗಸ್ತ್ಯರ ಆಶ್ರಮದ ವಿಷಯವನ್ನು ಪ್ರಸ್ತಾಪಿಸುತ್ತಾನೆ. ಸೀತಾನ್ವೇಷಣೆಗೆ ವಾನರರನ್ನು ಕಳಿಸುವಾಗ ಅಗಸ್ತ್ಯರ ಆಶ್ರಮದ ಸಮೀಪ ಯಾವಕಾರಣಕ್ಕೂ ಅಪಮಾನಕ್ಕೆ ಕಾರಣವಾಗಬಹುದಾದ ಕಾರ್ಯವನ್ನು ಎಸಗಬೇಡಿ ಎನ್ನುತ್ತಾನೆ. ಅವರ ಆಶ್ರಮದೆಡೆಗೆ ರಾಕ್ಷಸರು ಅಪ್ಪಿತಪ್ಪಿಯೂ ಕಾಲಿಡಿಸುತ್ತಿರಲಿಲ್ಲ. ಮುನಿಗಳು ರಾಕ್ಷಸರನ್ನು ಜನಸ್ಥಾನದಿಂದ ನಿಗ್ರಹಿಸಲು ವಾನರರನ್ನು ಉಪಯೋಗಿಸಕೊಳ್ಳಬೇಕೆಂದಿದ್ದರೇನೋ; ಆದರೆ ವಾಲಿ ಮತ್ತು ರಾವಣರ ಗೆಳೆತನದಿಂದಾಗಿ ಕಾರ್ಯಸಾಧ್ಯವಾಗದೇ ಹೋಗಿರಬೇಕು. ಈ ಹಂತದಲ್ಲಿಯೇ ಅಗಸ್ತ್ಯರು ಮತ್ತು ವಾನರರಿಗೆ ಸಂಪರ್ಕ ದೂರವಾಯಿತು. ಪರಿಣಾಮ ವಾನರರಿಗೆ ಅರ್ಷೇಯ ಮತ್ತು ಬುಡಕಟ್ಟು ಎರಡೂ ಸೇರಿದ ಅನುಕೂಲಕರ ಮಿಶ್ರ ಪದ್ಧತಿಗಳ ಆಚರಣೆ ರೂಢಿಗೆಬಂತು ಎನ್ನಬಹುದು.

ವಾನರರ ಸಾಮ್ರಾಜ್ಯವೆನ್ನುವುದು ಕೇವಲ ಕಿಷ್ಕಿಂಧೆಗೆ ಮಾತ್ರ ಸೀಮಿತವಾಗಿತ್ತೇ ಎನ್ನುವ ಪ್ರಶ್ನೆಗೆ ಉತ್ತರ ರಾಮಾಯಣದಲ್ಲಿಯೇ ಸಿಗುತ್ತದೆ. ವಾನರರ ಸಾಮ್ರಾಜ್ಯ ಮಹೇಂದ್ರಪರ್ವತ, ಹಿಮವತ್ಪರ್ವತ, ಕೈಲಾಸ ಪರ್ವತ, ವಿಂಧ್ಯಪರ್ವತ ಮತ್ತು ಬಿಳಿಯ ಬಣ್ಣದ ಶಿಖರಗಳಿರುವ ಮಂದರ ಪರ್ವತ ಇಲ್ಲೆಲ್ಲ ಹಂಚಿಹೋಗಿತ್ತು. ಇವುಗಳಲ್ಲಿ ಮಂದರ ಪರ್ವತ ಯಾವುದಾಗಿತ್ತು ಎನ್ನುವುದು ಸಿಗುತ್ತಿಲ್ಲ. (ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿರುವವರು ತಮ್ಮದು ವಾಲಿ ಹುಟ್ಟಿದ ಪ್ರದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಲ್ಲಿನ ದ್ವೀಪಗಳು ಪರ್ವತ ಮತ್ತು ದಿಣ್ಣೆಗಳಿಂದ ತುಂಬಿದೆ. ಉಲುವಾಟು ದೇವಾಲಯದಲ್ಲಿ ಪ್ರತಿನಿತ್ಯ ರಾಮಾಯಣ ನೃತ್ಯ ನಡೆಯುತ್ತದೆ. ಇಲ್ಲಿ ವಿಷಯಾಂತರವಾಗುವುದರಿಂದ ಆ ಕುರಿತು ಹೆಚ್ಚು ವಿವರಿಸುವುದಿಲ್ಲ). ಈ ಪ್ರದೇಶದ ವಾನರರ ಪ್ರಬೇಧಗಳ ವಿಷಯ ಕಿಷ್ಕಿಂಧಾ ಕಾಂಡದ್ದುದ್ದಕ್ಕೂ ಅಲ್ಲಲ್ಲಿ ವಿವರಿಸಿದೆ. ಅವರೆಲ್ಲರೂ ಕಾಮರೂಪಿಗಳಾಗಿದ್ದರು. ಮಹಾಬಲಿಷ್ಠರಾಗಿದ್ದರು. ಪರ್ವತಗಳಲ್ಲಿ ವಾಸಿಸುತ್ತಿದ್ದರು ಮತ್ತು ಅವರ್ಯಾರೂ ಮಂಸಾಹಾರಿಗಳಾಗಿರಲಿಲ್ಲ. ಅವರ ಭಾಷೆಗಳು ಸಂಸ್ಕೃತವನ್ನು ಹೋಲುತ್ತಿರುವ ಪ್ರಾಕೃತವಾಗಿತ್ತು. ಆದರೆ ವಾನರ ಮತ್ತು ಋಕ್ಷಪ್ರಮುಖರಿಗೆ ಗೀರ್ವಾಣ ಭಾಷೆ ಚನ್ನಾಗಿ ಬರುತ್ತಿತ್ತು ಎನ್ನುವುದು ಬಲುಮಹತ್ವವಾದ ಸಂಗತಿ.

ಹನುಮಂತ ಅಶೋಕವನದಲ್ಲಿ ಸೀತೆಯೊಡನೆ ತಾನು “ವಾಚಂ ಚೋದಾಹರಿಷ್ಯಾಮಿ ಮಾನಿಷೀಮಿಹ ಸಂಸ್ಕೃತಾಂ- ಸೀತೆಯಲ್ಲಿ ತಾನು ಮನುಷ್ಯರಾಡುವ ಸಂಸ್ಕೃತದಲ್ಲಿಯೇ ಮಾತಾಡುತ್ತೇನೆ, ದ್ವಿಜರಾಡುವ ಸಂಸ್ಕೃತದಲ್ಲಿ ಮಾತನ್ನಾಡಿಸಿದರೆ ಆಕೆ ತನ್ನನ್ನು ರಾವಣನೆಂದೇ ತಿಳಿದು ಭಯಪಡುತ್ತಾಳೆ” ಎನ್ನುತ್ತಾನೆ. ಈ ಎಲ್ಲದರೆ ಅರ್ಥ ವಾನರರೆಂದರೆ ಬುಡಕಟ್ಟು ಜನಾಂಗವೆನ್ನುವುದನ್ನು ಪುಷ್ಟೀಕರಿಸುತ್ತದೆ. ಇನ್ನು ಬಾಲಗಳ ವಿಷಯಕ್ಕೆ ಬಂದರೆ ಯುದ್ಧಕಾಂಡದಲ್ಲಿ ಕೆಂಪು, ಹಳದಿ, ಬಿಳಿ, ಮಿಶವರ್ಣದವು ಮೊದಲಾದ ಬಾಲಗಳಿರುವ ವಿಷಯ ಬರುತ್ತದೆ. ಕೆಲವು ವಾನರರು ಗೋಲಾಂಗುಲ- ಹಸುವಿನ ಬಾಲದ ಪುಚ್ಛವನ್ನು ಹೊಂದಿದವು, ಮತ್ತೆ ಕೆಲವು ಕಪಿಗಳು ಎಂದಿದೆ. ರಾಮ ಯುದ್ಧಕಾಂಡದಲ್ಲಿ ಇನ್ನು ನೀವು ಮನುಷ್ಯರೂಪದಲ್ಲಿ ಕಾಣಿಸಿಕೊಳ್ಳದೇ ವಾನರರ ಚಿನ್ಹೆ, ಲಕ್ಷಣದಲ್ಲೇ ಇರತಕ್ಕದ್ದು ಎನ್ನುತ್ತಾನೆ. ಸುಗ್ರೀವ ತನ್ನವರೆಲ್ಲರನ್ನೂ ಕಾಮರೂಪಿಗಳು ಎಂದು ಮೊದಲೇ ವರ್ಣಿಸಿದ್ದಾನೆ.

ವಿಶೇಷವೆಂದರೆ ವಾನರರ ಸ್ತ್ರೀಯರಿಗೆ ಬಾಲವಿರಲಿಲ್ಲ. ತಾರೆಯ ಸೌಂದರ್ಯದ ಕುರಿತು “ತಾರಾ ತಾರಾಧಿಪ ನಿಭಾನನಾ- ತಾರಾಧಿಪನಾದ ಚಂದ್ರನ ಕಾಂತಿಗೆ ಸಮಾನವಾದ ಮುಖಕಾಂತಿಯಿಂದ ಬೆಳಗುತ್ತಿದ್ದ ತಾರೆಯು” ಎಂದು ವರ್ಣಿಸಲಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಗೋಲಾಂಗೂಲವಾಗಲೀ, ಬಣ್ಣಬಣ್ಣದ ಬಾಲಗಳ ಪುಚ್ಛಗಳು ಅವರ ಚಿನ್ಹೆಗಳು ಎಂದು ದೇವದತ್ತ ಪಟ್ಟನಾಯಕ ಮೊದಲಾದ ವಿದ್ವಾಂಸರು ತರ್ಕಿಸುತ್ತಾರೆ. ವಿಕಾಸವಾದದ ಹಾದಿಯಲ್ಲಿ ಗಮನಿಸುವಾಗ ವಿಕಸನವಾದ ಅಂಗಗಳು ಮತ್ತೆ ಪೂರ್ವ ಸ್ವರೂಪಕ್ಕೆ ತಿರುಗುವುದಿಲ್ಲ. ಹಾಗಾಗಿ ಮಾತನ್ನಾಡಬಲ್ಲ ಮಂಗಗಳು ಮತ್ತೆ ಮಂಗನ ಭಾಷೆಯನ್ನು ಮಾತಾಡುವುದಿಲ್ಲ. ಈ ಎಲ್ಲ ಕಾರಣಗಳಿಂದ ಇನ್ನು ಋಕ್ಷ ಎಂದರೆ ಕರಡಿ. ವಾಲಿ ಸುಗ್ರೀವರ ತಂದೆ ತಾಯಿಯಾದ ಋಕ್ಷ ಕರಡಿಯಾಗಿ ಆತನ ಮಕ್ಕಳು ಮಂಗಗಳ ಜಾತಿಗೆ ಸೇರಿದವು ಎನ್ನುವುದು ಅಸಾಧ್ಯವೂ ಹೌದು. ಈ ಎಲ್ಲ ಹಿನ್ನೆಲೆಯಲ್ಲಿ ವಾಲಿ ಸುಗ್ರೀವ ಎನ್ನುವ ಸಹೋದರರ ವಿಷಯದಲ್ಲಿ ಹೋಲಿಸಿದಾಗ ಇವರು ವನದಲ್ಲಿರುವ ನರರು ಅಥವಾ Humanoid ಜಾತಿಯ ಪಳೆಯುಳಿಕೆಗಳು ಸಿಕ್ಕಿರುವುದರಿಂದ ಆ ಜಾತಿಗೆ ಸೇರಿರಬಹುದೆನ್ನುವುದು ಸೂಕ್ತ (Morphologically -similar to human but not identical).

ಪ್ರಪಂಚದಲ್ಲೆಲ್ಲ ಹರಡಿದ್ದ ವಾನರ ಸಾಮ್ರಾಜ್ಯವನ್ನು ವಾಲಿ ಮತ್ತು ಸುಗ್ರೀವರು ಕಿಷ್ಕೆಂಧೆಯಿಂದ ನಿಯಂತ್ರಿಸುತ್ತಿದ್ದರು. ವಾಲಿ ಮಹಾ ಪರಾಕ್ರಮಿಯಾಗಿದ್ದ. ತನ್ನ ತಮ್ಮನಾದ ಸುಗ್ರೀವನಲ್ಲಿ ಅಮಿತವಾದ ಪ್ರೀತಿಯೂ ಆತನಿಗೆ ಇತ್ತು. ತಾನೇ ಮುಂದೆ ನಿಂತು ತಾರನ ಮಗಳಾದ ರುಮೆಯನ್ನು ಸುಗ್ರೀವನಿಗೆ ಮದುವೆ ಮಾಡಿಸಿದ್ದನು. ಸಾಹಸಿಯಾಗಿದ್ದರೂ ಆತ ಅನ್ಯಾಕ್ರಮಣವನ್ನು ಮಾಡುತ್ತಿರಲಿಲ್ಲ. ವಾಲಿಯ ದೊಡ್ಡದಾದ ದೌರ್ಬಲ್ಯವೆಂದರೆ ಹೆಣ್ಣಿನ ಮೋಹ. ಒಮ್ಮೆ ಮಾಯಾವಿ ಎನ್ನುವ ರಾಕ್ಷಸನಿಗೂ ಮತ್ತು ವಾಲಿಗೂ ಹೆಣ್ಣಿನ ವಿಷಯದಲ್ಲಿ ಮಹಾವೈರವುಂಟಾಯಿತು.

ಮಾಯಾವೀ ನಾಮ ತೇಜಸ್ವೀ ಪೂರ್ವಜೋ ದುನ್ದುಭೇಃ ಸುತಃ.
ತೇನ ತಸ್ಯ ಮಹದ್ವೈರಂ ಸ್ತ್ರೀಕೃತಂ ವಿಶ್ಶ್ರುತಂ ಪುರಾ IIಕಿ. 9-4II

ದುಂದುಭೀರಾಕ್ಷಸನ ಅಣ್ಣನಾದ ಮಯಾಸುರನ ಮಗನಾದ ಮಾಯಾವಿ ಎನ್ನುವವ ಮಹಾಬಲಿಷ್ಠನಾಗಿದ್ದನು. ಅವನಿಗೂ ವಾಲಿಗೂ ಹೆಂಗಸೊಬ್ಬಳ ವಿಷಯದಲ್ಲಿ ಮಹಾವೈರವುಂಟಾಯಿತು. ಹೀಗೆ ಜಗಳಕ್ಕೆ ಕಾರಣವಾದ ಹೆಂಗಸು ಯಾರೆನ್ನುವ ವಿವರ ರಾಮಾಯಣದಲ್ಲಿಲ್ಲ. ಇದು ವಾಲಿಗಿರುವ ಸ್ತ್ರೀಯರ ಮೇಲಿರುವ ದೌರ್ಬಲ್ಯವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಈ ವೈರ ಪ್ರಕರಣ ಎಲ್ಲಿಯೋ ಬೇರೆಕಡೆ ಆಗಿರಬೇಕು, ಅದರಲ್ಲಿ ವಾಲಿ ಮಾಯಾವಿ ಕಣ್ಣುಹಾಕಿದ್ದ ಹೆಂಗಸನ್ನು ತಾನು ಅನುಭವಿಸಿರಬೇಕು. ಆ ಸೇಡನ್ನು ತೀರಿಸಿಕೊಳ್ಳಲು ಮಾಯಾವಿ ರಾತ್ರಿಕಾಲದಲ್ಲಿ ಕಿಷ್ಕಿಂಧಾ ಪಟ್ಟಣಕ್ಕೆ ಬಂದು ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದ. ವಾಲಿ ಹುಂಬತನದಿಂದ ಆತನೊಡನೆ ಯುದ್ಧಕ್ಕೆ ಧಾವಿಸಿದ. ಅವನನ್ನು ನೋಡಿ ಭಯಗೊಂಡು ಮಾಯಾವಿ ಪಲಾಯನ ಮಾಡಿ ಬಹುದೂರಕ್ಕೆ ಓಡಿದರೆ ಆತನನ್ನು ಅಟ್ಟಿಸಿಕೊಂಡು ವಾಲಿಯೂ ಅವನನ್ನು ಅನುಸರಿಸಿ ಸುಗ್ರೀವನೂ ಧಾವಿಸಿದರು.

ರಾಕ್ಷಸ ಬಹುದೂರಕ್ಕೆ ಓಡುತ್ತಾ ಹೋಗಿ ಪರ್ವತದ ಗುಹೆಯೊಂದನ್ನು ಹೊಕ್ಕ. ಅದು ಮಾಯಾವಿಯ ಪಟ್ಟಣವಾಗಿತ್ತು. ವಾಲಿ ಆತನನ್ನು ಕೊಲ್ಲುತ್ತೇನೆ ಎಂದು ಗುಹೆಯನ್ನು ಹೊಕ್ಕಿರುವುದು ಮತ್ತು ಹೊರಗಡೆ ಗುಹಾದ್ವಾರವನ್ನು ಕಾಯಲು ಸುಗ್ರೀವನನ್ನು ನಿಲ್ಲಿಸಿದ ಕಥೆ ಎಲ್ಲರಿಗೂ ಗೊತ್ತು. ಒಂದು ವರ್ಷವಾದರೂ ವಾಲಿ ಬರದೇ ಇರುವುದನ್ನು ಗಮನಿಸಿದ ಸುಗ್ರೀವ ಕಳವಳಗೊಂಡ. ಇದ್ದಕ್ಕಿದ್ದಂತೆ ರಕ್ತ ನೊರೆನೊರೆಯಾಗಿ ಹೊರಬಂದಾಗ ಅದು ವಾಲಿಯೇ ಇರಬೇಕು ಎಂದುಕೊಂಡ ಸುಗ್ರೀವ ಗುಹಾದ್ವಾರಕ್ಕೆ ದೊಡ್ಡದಾದ ಬಂಡೆಯನ್ನು ಮುಚ್ಚಿ, ಅಣ್ಣ ತೀರಿಕೊಂಡ ಎಂದು ಆತನಿಗೆ ತರ್ಪಣವನ್ನೂ ಬಿಟ್ಟು ಕಿಷ್ಕಿಂಧೆಗೆ ಮರಳಿ ಸುಮ್ಮನಿದ್ದ. ಮಂತ್ರಿಗಳು ಪ್ರಯತ್ನಪೂರ್ವಕವಾಗಿ ಈ ವಿಷಯತಿಳಿದುಕೊಂಡರು. ಸುಗ್ರೀವನನ್ನೇ ರಾಜನನ್ನಾಗಿ ಅಭಿಷೇಕಮಾಡಿದರು. ತಾರೆ ಮತ್ತು ರುಮೆಯ ಸಹಿತ ಸುಗ್ರೀವ ರಾಜನಾಗಿ ಆಳತೊಡಗಿದ. ವಾಲಿ ಪುನಃ ಬಂದರೆ ಈ ದೃಶ್ಯವನ್ನು ನೋಡಿ ಇದೆಲ್ಲ ಸುಗ್ರೀವನಿಗೆ ರಾಜ್ಯದ ಆಸೆಗಾಗಿ ಮಾಡಿದ ಬಂಡಾಯವೆಂದು ಅಂದುಕೊಂಡವನೇ ಆತನನ್ನು ಕೊಲ್ಲಲೆಂದು ಮೈಮೇಲೆ ಏರಿಬಂದ.

ಸುಗ್ರೀವನಲ್ಲಿ ಈ ಲೇಖನದ ಮೊದಲು ತಿಳಿಸಿದ ಗುಣಗಳಿರುವಂತೆಯೇ ವಾನರಸಹಜವಾದ ಅವಸರದ ಗುಣಗಳೂ ಇದ್ದವು. ಅದರಿಂದಲೇ ಆತ ತೊಂದರೆಗೆ ಸಿಕ್ಕುಬಿದ್ದಿದ್ದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಮಂಗೋಪಿಯಾದ ವಾಲಿಗೆ ಇಷ್ಟೇ ಸಾಕಾಯಿತು. ಆತ ಸುಗ್ರೀವನನ್ನು ಕೊಂದೇ ತೀರುತ್ತೇನೆ ಎಂದು ಅಟ್ಟಿಸಿಕೊಂಡು ಹೋದ. ಆತನ ಪತ್ನಿಯಾದ ರುಮೆಯನ್ನು ಬಲತ್ಕಾರದಿಂದ ಇಟ್ಟುಕೊಂಡ. ಜೀವ ಉಳಿಸಿಕೊಳ್ಳಲು ಸುಗ್ರೀವ ಓಡುವುದೂ, ವಾಲಿ ಆತನನ್ನು ಮುಗಿಸಿಯೇ ಬೀಡುವೆನೆಂದು ಬೆನ್ನಟ್ಟಿ ಬರುವುದೂ ನಡೆದಾಗ ಸುಗ್ರೀವ ಆಕಾಶಕ್ಕೆ ಹಾರಿದ. ಭೂಮಿ ಆತನಿಗೆ,

ಆದರ್ಶತಲಸಙ್ಕಾಶಾ ತತೋ ವೈ ಪೃಥಿವೀ ಮಯಾ.
ಅಲಾತಚಕ್ರಪ್ರತಿಮಾ ದೃಷ್ಟಾ ಗೋಷ್ಪದವತ್ತದಾ৷৷ಕಿ.46.13৷৷

ಅಲಾತಚಕ್ರದಂತೆ (ಬೆಂಕಿಹಚ್ಚಿದ ಕೊಳ್ಳಿಯನ್ನು ತಿರುಗಿಸಿದಾಗ ಕಾಣುವ ಚಕ್ರದಂತೆ) ಗೋಪಾದದಷ್ಟು ಚಿಕ್ಕದಾಗಿ ಕಂಡಿತು ಎನ್ನುತ್ತಾನೆ. ಅಂತರಿಕ್ಷದಿಂದ ಭೂಮಿಯನ್ನು ನೋಡಿದಾಗ ಭೂಮಿಕಾಣಿಸುವ ಬಗೆಯನ್ನು ಇಲ್ಲಿ ವರ್ಣಿಸಲಾಗಿದೆ. ಆತನ ಜೊತೆಯಲ್ಲಿ ಹನುಮಂತನೂ ಇದ್ದ. ಹೀಗೆ ವಾಲಿಯ ಭಯದಲ್ಲಿ ಅವರು ಪ್ರಪಂಚವನ್ನೆಲ್ಲಾ ಸುತ್ತಿ ಸುತ್ತಿ ಸಾಗುತ್ತಿರುವಾಗ ಬದುಕುವ ಸಾಧ್ಯತೆಯನ್ನೇ ಬಿಟ್ಟ. ಹೀಗೆ ಢಾವಿಸುವಾಗ ಇಡೀ ಭೂಮಂಡಲವನ್ನೇ ಅನೇಕ ಸಾರೆ ಪೂರ್ವದಿಂದ ಪಶ್ಚಿಮಕ್ಕೂ ಉತ್ತರದಿಂದ ದಕ್ಷಿಣಕ್ಕೂ, ಹಿಮಾಲಯದಿಂದ ಉತ್ತರಕುರು ಪ್ರದೇಶಕ್ಕೂ, ಹೀಗೆ ಭೂಮಿಯ ಎಲ್ಲಿಯಾದರೂ ತನಗೆ ಆಶ್ರಯಸಿಗುವುದೋ ಎಂದು ಹುಡುಕಾಡಿದ. ಅಲ್ಲಿಗೂ ಅವನನ್ನು ಕೊಲ್ಲಲು ವಾಲಿ ಘರ್ಜಿಸುತ್ತಾ ಬಂದಾಗ ಬದುಕುವ ಆಸೆಯನ್ನೇ ಬಿಟ್ಟ. ಪ್ರಾಣರಕ್ಷಣೆಗಾಗಿ ಭೂಮಂಡಲದ ಎಲ್ಲಾ ಸ್ಥಳವನ್ನೂ ಅಲೆದಿದ್ದ. ಅಂತಹ ಹೊತ್ತಿನಲ್ಲಿ ಹನುಮಂತ ಆತನಿಗೆ ಋಷ್ಯಮೂಕ ಪರ್ವತದ ಕಥೆಯನ್ನು ಹೇಳಿ ಅಲ್ಲಿಗೆ ವಾಲಿ ಬರುವುದಿಲ್ಲ: ಮತಂಗ ಮುನಿಗಳು ವಾಲಿ ಅಥವಾ ಆತನ ಮಂತ್ರಿಗಳೇನಾದರೂ ಋಷ್ಯಮೂಕ ಪರ್ವತಕ್ಕೆ ಬಂದರೆ ಆತನ ತಲೆಯು ನೂರು ಹೋಳಾಗಲಿ ಎನ್ನುವ ಶಾಪಕೊಟ್ಟ ವಿಷಯವನ್ನು ತಿಳಿಸಿದ. ಆ ಪ್ರದೇಶಕ್ಕೆ ವಾಲಿ ಬರಲಾರದ ಕಾರಣ ಅಲ್ಲಿ ಮಾತ್ರ ಸುರಕ್ಷಿತವಾಗಿ ಇರಬಹುದು ಎಂದು ಹೇಳಿದಾಗ, ಲಗುಬಗೆಯಿಂದ ಮತಂಗಮಹರ್ಷಿಗಳ ಆಶ್ರಮಮಂಡಲದಲ್ಲಿ ಉಳಿದುಕೊಂಡ.

ಸುಗ್ರೀವನಿಗೆ ಸಮಗ್ರ ಭೂಮಂಡಲದ ಪರಿಚಯ ಹೇಗಾಯಿತು ಎನ್ನುವ ಕುತೂಹಲ ರಾಮನಿಗೆ ಇತ್ತು. “ಕಥಂ ಭವಾನ್ವಿಜಾನೀತೇ ಸರ್ವಂ ವೈ ಮಣ್ಡಲಂ ಭುವಃ” ಇಡೀ ಭೂಮಂಡಲದ ಪರಿಚಯ ನಿನಗೆ ಹೇಗಾಯಿತು ಎಂದು ಕೇಳಿದಾಗ ಸುಗ್ರೀವ ರಾಮನಲ್ಲಿ ತನ್ನ ಭೂಮಂಡಲದ ಯಾತ್ರೆಯ ಕಥೆಯನ್ನು ಹಂಚಿಕೊಂಡ. ಪ್ರಚಲಿತದಲ್ಲಿರುವಂತೆ ಆತ ಸೂರ್ಯನಲ್ಲಿ ಆಶ್ರಯ ಕೋರಿ ಆತನ ಬೆನ್ನ ಹಿಂದೆ ಅಡಗಿಕೊಂಡಿದ್ದ ಎನ್ನುವುದು ಮೂಲ ರಾಮಾಯಣದಲ್ಲಿ ಇಲ್ಲ.

ಮುಂದಿನ ಭಾಗದಲ್ಲಿ ಕಿಷ್ಕಿಂಧಾಕಾಂಡದ ಇನ್ನಷ್ಟು ರೋಚಕ ವಿಷಯಗಳನ್ನು ಗಮನಿಸೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡದಲ್ಲಿನ ರಾಜನೀತಿಯ ವಿಲಕ್ಷಣ ಘಟನೆ

Continue Reading

ಧಾರ್ಮಿಕ

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಅಡುಗೆ ಮನೆಯನ್ನು ಮನೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಮನೆಯೊಳಗಿನ ಅನೇಕ ವಿಷಯಗಳು ಯಾವ ದಿಕ್ಕಿನಲ್ಲಿ ಅಡುಗೆ ಮಾಡಿ ತಿನ್ನುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮನೆಗೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಯಾವ ದಿಕ್ಕಿನಲ್ಲಿ ಅಡುಗೆ ಮಾಡಬೇಕೆಂದು ಎಂಬುದನ್ನು ನಾವು ತಿಳಿದುಕೊಂಡಿದ್ದರೆ ಒಳ್ಳೆಯದು.

VISTARANEWS.COM


on

By

Vastu Tips
Koo

ಮನೆಯಲ್ಲಿ (vastu for home) ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ವಾಸ್ತು ಪರಿಪಾಲನೆ ಬಹಳ ಮುಖ್ಯವಾಗಿದೆ. ಮನೆಯಲ್ಲಿ ವಾಸ್ತು (Vastu Tips) ಸರಿಯಾಗಿ ಇಲ್ಲದೇ ಇದ್ದರೆ ಆರ್ಥಿಕ ತೊಂದರೆ, ಅಶಾಂತಿ, ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವು ರೀತಿಯ ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ವಾಸ್ತುವಿಗೆ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ಮಾನ್ಯತೆ ನೀಡಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯನ್ನು (kitchen room) ಮನೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಮನೆಯೊಳಗಿನ ಅನೇಕ ವಿಷಯಗಳು ಯಾವ ದಿಕ್ಕಿನಲ್ಲಿ (Cooking Directions) ಅಡುಗೆ ಮಾಡಿ ತಿನ್ನುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮನೆಗೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಯಾವ ದಿಕ್ಕಿನಲ್ಲಿ ಅಡುಗೆ ಮಾಡಬೇಕೆಂದು ಎಂಬುದನ್ನು ನಾವು ತಿಳಿದುಕೊಂಡಿದ್ದರೆ ಒಳ್ಳೆಯದು

Vastu Tips
Vastu Tips

.

ಅಡುಗೆ ಮನೆಯಿಂದಲೂ ಬರುತ್ತೆ ವಾಸ್ತು ದೋಷಗಳು

ಅಡುಗೆ ಮನೆಯಲ್ಲಿನ ವಾಸ್ತು ದೋಷಗಳು ಮನೆಯಲ್ಲಿ ರೋಗ ಮತ್ತು ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೀಗಾಗಿ ಅಡುಗೆ ಮನೆಯಲ್ಲಿ ಯಾವ ರೀತಿಯಲ್ಲಿ ಆಹಾರವನ್ನು ಬೇಯಿಸುತ್ತೀರಿ ಎಂಬುದರ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ.

ಅಲ್ಲದೇ ಅಡುಗೆ ಮಾಡುವಾಗ ಅಡುಗೆ ಮಾಡುವವರ ಭಾವನೆಗಳು ತಿನ್ನುವವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಅಡುಗೆ ಮಾಡುವುದು ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಯಾಗಲು ಕಾರಣವಾಗುತ್ತದೆ.

Vastu Tips
Vastu Tips


ತಪ್ಪಿಸಬೇಕಾದ ಸಂಗತಿಗಳು

ದಕ್ಷಿಣ ದಿಕ್ಕು: ಎಂದಿಗೂ ದಕ್ಷಿಣಕ್ಕೆ ಮುಖ ಮಾಡಿ ಅಡುಗೆ ಮಾಡಬೇಡಿ. ಇದು ಬಡತನವನ್ನು ತರಬಹುದು. ತಲೆನೋವು, ಕೀಲು ನೋವು ಮತ್ತು ಮೈಗ್ರೇನ್‌ಗಳನ್ನು ಉಂಟು ಮಾಡಬಹುದು.

ಪಶ್ಚಿಮ ದಿಕ್ಕು: ಪಶ್ಚಿಮಾಭಿಮುಖವಾಗಿ ಅಡುಗೆ ಮಾಡುವುದು ವೈವಾಹಿಕ ಜೀವನದಲ್ಲಿ ಅಪಶ್ರುತಿ ಮತ್ತು ಅತೃಪ್ತಿಯನ್ನು ಉಂಟುಮಾಡಬಹುದು.

ಉತ್ತರ ದಿಕ್ಕು: ಉತ್ತರ ದಿಕ್ಕಿಗೆ ಮುಖಮಾಡಿ ಅಡುಗೆ ಮಾಡುವುದು ಆರ್ಥಿಕ ಸಮಸ್ಯೆ ಮತ್ತು ಬಡತನಕ್ಕೆ ಕಾರಣವಾಗಬಹುದು.

Vastu Tips
Vastu Tips


ಅಡುಗೆಗೆ ಶುಭ ಸಲಹೆ

ಪೂರ್ವ ದಿಕ್ಕು: ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡುವುದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಪೂರ್ವವು ಸೂರ್ಯನ ದಿಕ್ಕು, ಧನಾತ್ಮಕ ಶಕ್ತಿಯನ್ನು ಹರಡುತ್ತದೆ. ಈ ದಿಕ್ಕಿನಲ್ಲಿ ಬೇಯಿಸಿದ ಆಹಾರವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಜಗಳಗಳನ್ನು ಕಡಿಮೆ ಮಾಡುತ್ತದೆ ಮತ್ತು ಗಮನವನ್ನು ಹೆಚ್ಚಿಸುತ್ತದೆ. ಇದು ಉತ್ತಮ ಆದಾಯಕ್ಕೆ ಕಾರಣವಾಗಬಹುದು.

ವಾಸ್ತು ನಿಯಮಗಳು

ಅಗ್ನಿ ದೇವರು ವಾಸಿಸುತ್ತಾನೆ ಎಂದು ನಂಬಲಾದ ವಾಯುವ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು.

ಅಡುಗೆ ಮಾಡುವಾಗ ಪೂರ್ವಕ್ಕೆ ಮುಖ ಮಾಡಿ ಮಾಡಬೇಕು.

ಅಡುಗೆ ಮನೆಯಲ್ಲಿ ಸಿಂಕ್ ಅನ್ನು ಈಶಾನ್ಯ ಮೂಲೆಯಲ್ಲಿ ಇರಿಸಬೇಕು.

ಅಡುಗೆ ಮನೆಯ ಕಿಟಕಿಗಳು ಪೂರ್ವ ಮತ್ತು ಪಶ್ಚಿಮದಲ್ಲಿ ಸ್ಥಾಪಿಸಿ.

ಅಲಂಕಾರಕ್ಕಾಗಿ ಅಡುಗೆ ಮನೆಯಲ್ಲಿ ಹಣ್ಣು ಮತ್ತು ತರಕಾರಿಗಳ ಚಿತ್ರಗಳು ಒಳ್ಳೆಯದು.

ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಅಡುಗೆ ಮಾಡುವ ಸ್ಥಳ, ಓಲೆ ಸ್ವಚ್ಛವಾಗಿರಬೇಕು.

ಅಡುಗೆ ಮನೆಯ ಓಲೆ ಮನೆಯ ಮುಖ್ಯ ಬಾಗಿಲಿನ ಹೊರಗಿನಿಂದ ಗೋಚರಿಸಬಾರದು. ಅಗತ್ಯವಿದ್ದರೆ ಪರದೆಯನ್ನು ಬಳಸಿ.

ಶೌಚಾಲಯ, ಮೆಟ್ಟಿಲು ಅಥವಾ ಪೂಜಾ ಕೊಠಡಿಗಳ ಮೇಲೆ ಅಥವಾ ಕೆಳಗೆ ಅಡುಗೆಮನೆಯನ್ನು ಇಡಬೇಡಿ.

ಮಾನಸಿಕ ಸಮತೋಲನ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ನೀರು ಮತ್ತು ಬೆಂಕಿಯ ಅಂಶಗಳನ್ನು ಪ್ರತ್ಯೇಕವಾಗಿ ಇರಿಸಿ.

ಅಡುಗೆ ಕೋಣೆಯು ಮಲಗುವ ಕೋಣೆ, ಪೂಜಾ ಕೊಠಡಿ ಅಥವಾ ಶೌಚಾಲಯಗಳ ಕೆಳಗೆ ಅಥವಾ ಮೇಲೆ ಇಡುವುದನ್ನು ತಪ್ಪಿಸಿ.

ಇದನ್ನೂ ಓದಿ: Vastu Tips: ಮಕ್ಕಳ ಮದುವೆ ವಿಳಂಬವಾಗುತ್ತಿದೆಯೆ? ವಾಸ್ತು ದೋಷವೂ ಕಾರಣವಿರಬಹುದು!

ಧನಾತ್ಮಕ ಕಂಪನಗಳನ್ನು ಹೆಚ್ಚಿಸಲು ಅಡುಗೆಮನೆಯನ್ನು ಸ್ವಚ್ಛವಾಗಿ ಮತ್ತು ಗೊಂದಲವಿಲ್ಲದೆ ಇರಿಸಿ.

ಶುದ್ಧತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮಾಂಸಾಹಾರಿ ಆಹಾರವನ್ನು ತಯಾರಿಸಲು ಪ್ರತ್ಯೇಕ ಸ್ಥಳವನ್ನು ಬಳಸಿ.

Continue Reading

ಧಾರ್ಮಿಕ

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

Shravan 2024: ಶ್ರಾವಣ ಮಾಸದಲ್ಲಿ (Shravan Month 2024) ಹೆಚ್ಚಾಗಿ ದೇವರ ಭಕ್ತಿ, ಪ್ರಾರ್ಥನೆಯಲ್ಲಿ ತೊಡಗುವುದರಿಂದ ಆಹಾರ ನಿಯಮಗಳನ್ನು ಕಠಿಣವಾಗಿ ಅನುಸರಿಸಲಾಗುತ್ತದೆ. ಉಪವಾಸ ಇರುವವರು ಈ ಸಂದರ್ಭದಲ್ಲಿ ಆಹಾರದ ಮಾರ್ಗಸೂಚಿಗಳನ್ನು ಅನುಸರಿಸಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಧ್ಯಾತ್ಮಿಕ ಗಮನವನ್ನು ಕೇಂದ್ರೀಕರಿಸಬಹುದು.

VISTARANEWS.COM


on

By

Shravan Month 2024
Koo

ಶ್ರಾವಣಾ ಬಂತು ಕಾಡಿಗೆ.. ಬಂತು ನಾಡಿಗೆ.. ಬಂತು ಬೀಡಿಗೆ.. ಕವಿ ದ. ರಾ. ಬೇಂದ್ರೆಯವರ (da.ra. bendre) ಕವನದ ಸಾಲುಗಳು ಶ್ರಾವಣ ಮಾಸದ (Shravan 2024) ಸಂಭ್ರಮವನ್ನು ವರ್ಣಿಸುವಂತೆ ಶ್ರಾವಣ ಮಾಸವು (Shravan Month) ಹಬ್ಬ ಹರಿದಿನಗಳನ್ನು ಹೊತ್ತುಕೊಂಡು ಬರುತ್ತದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದ್ದು, ಈ ಸಂದರ್ಭದಲ್ಲಿ ಹಿಂದೂಗಳು ಉಪವಾಸ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ.

ಈ ಬಾರಿ ಆಗಸ್ಟ್ 4ರಿಂದ ಶ್ರಾವಣ ಮಾಸ ಆರಂಭಗೊಳ್ಳಲಿದ್ದು, ಈ ಮಂಗಳಕರ ಅವಧಿಯಲ್ಲಿ ವಿಶೇಷ ಪ್ರಾರ್ಥನೆ, ಆಚರಣೆ ಮತ್ತು ಆಹಾರದ ನಿರ್ಬಂಧ ಇರುತ್ತದೆ. ಶ್ರಾವಣ ಮಾಸದಲ್ಲಿ ಭಕ್ತರು ತಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ನಿರ್ದಿಷ್ಟ ಆಹಾರ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ. ಈ ಪವಿತ್ರ ಮಾಸದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ತಪ್ಪಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಶ್ರಾವಣ ಮಾಸದಲ್ಲಿ ತಿನ್ನಬಹುದಾದ ಆಹಾರಗಳು

Shravan Month 2024
Shravan Month 2024


ತಾಜಾ ಹಣ್ಣುಗಳು: ಶ್ರಾವಣ ಮಾಸದಲ್ಲಿ ತಾಜಾ ಹಣ್ಣುಗಳು ಆಹಾರದ ಅತ್ಯಗತ್ಯ ಭಾಗವಾಗಿದೆ. ಅವುಗಳನ್ನು ಶುದ್ಧ ಮತ್ತು ಜೀರ್ಣಿಸಿಕೊಳ್ಳಲು ಸುಲಭವೆಂದು ಪರಿಗಣಿಸಲಾಗುತ್ತದೆ. ಅಗತ್ಯವಾದ ಪೋಷಕಾಂಶಗಳು ಮತ್ತು ಜಲಸಂಚಯನವನ್ನು ಒದಗಿಸುತ್ತದೆ.ಇದರಲ್ಲಿ ಬಾಳೆಹಣ್ಣು, ಸೇಬು, ದಾಳಿಂಬೆ ಮತ್ತು ಕಲ್ಲಂಗಡಿಗಳು ಸೇರಿವೆ.

ಡೇರಿ ಉತ್ಪನ್ನಗಳು: ಹಾಲು, ಮೊಸರು, ಪನೀರ್ ಮತ್ತು ತುಪ್ಪವನ್ನು ಶ್ರಾವಣ ಮಾಸದಲ್ಲಿ ಸೇವಿಸಬಹುದು. ಈ ಡೇರಿ ಉತ್ಪನ್ನಗಳು ಪೌಷ್ಟಿಕಾಂಶ ಮಾತ್ರವಲ್ಲದೇ ದೇಹವನ್ನು ತಂಪಾಗಿಸುತ್ತದೆ.

ಸಾಬುದಾನ: ಉಪವಾಸದ ಸಮಯದಲ್ಲಿ ಸಾಬುದಾನ ಖಿಚಡಿ ಅಥವಾ ವಡಾ ಶ್ರಾವಣ ಮಾಸದ ಮುಖ್ಯವಾದ ಆಹಾರವಾಗಿದೆ. ಸಾಬುದಾನವು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದು ದಿನವಿಡೀ ಶಕ್ತಿಯನ್ನು ನೀಡುತ್ತದೆ.

ಹುರುಳಿಕಾಳಿನ ಹಿಟ್ಟು: ಪೂರಿ, ಚಪಾತಿ ಅಥವಾ ಪ್ಯಾನ್ ಕೇಕ್‌ಗಳನ್ನು ತಯಾರಿಸಲು ಹುರುಳಿಕಾಳಿನ ಹಿಟ್ಟನ್ನು ಬಳಸಲಾಗುತ್ತದೆ. ಇದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ ಮತ್ತು ಉಪವಾಸಕ್ಕೆ ಸೂಕ್ತವಾಗಿದೆ.

ಚೆಸ್ ನೆಟ್ ಹಿಟ್ಟು: ಹುರುಳಿ ಹಿಟ್ಟಿನಂತೆಯೇ ಇದು ಪೂರಿ ಮತ್ತು ಹಲ್ವಾದಂತಹ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಬಳಸುವ ಮತ್ತೊಂದು ಉಪವಾಸ ಸ್ನೇಹಿ ಹಿಟ್ಟಾಗಿದೆ.

ಆಲೂಗಡ್ಡೆಗಳು ಮತ್ತು ಸಿಹಿ ಆಲೂಗಡ್ಡೆಗಳು: ಇದನ್ನು ವಿವಿಧ ಪಾಕವಿಧಾನಗಳಲ್ಲಿ ಬಳಸಬಹುದು. ಇದರಿಂದ ಉಪವಾಸದಲ್ಲಿರುವವರು ಅಗತ್ಯ ಶಕ್ತಿಯನ್ನು ತುಂಬುತ್ತಾರೆ ಮತ್ತು ಒದಗಿಸುತ್ತಾರೆ.

ಬೀಜಗಳು ಮತ್ತು ಒಣ ಹಣ್ಣುಗಳು: ಬಾದಾಮಿ, ವಾಲ್ ನಾಟ್, ಒಣದ್ರಾಕ್ಷಿ ಮತ್ತು ಇತರ ಒಣ ಹಣ್ಣುಗಳು ಲಘು ಆಹಾರಕ್ಕಾಗಿ ಮತ್ತು ಹೆಚ್ಚುವರಿ ಪೌಷ್ಟಿಕಾಂಶ ಮತ್ತು ಶಕ್ತಿಗಾಗಿ ಭಕ್ಷ್ಯಗಳಿಗೆ ಸೇರಿಸಲು ಉತ್ತಮವಾಗಿದೆ.

ತೆಂಗಿನಕಾಯಿ: ಶ್ರಾವಣ ಮಾಸದಲ್ಲಿ ತಾಜಾ ತೆಂಗಿನಕಾಯಿ, ತೆಂಗಿನ ನೀರು ಮತ್ತು ತೆಂಗಿನ ಹಾಲು ಸಾಮಾನ್ಯವಾಗಿ ಸೇವಿಸಲಾಗುತ್ತದೆ.

Shravan Month 2024
Shravan Month 2024


ಶ್ರಾವಣ ಮಾಸದಲ್ಲಿ ತಪ್ಪಿಸಬೇಕಾದ ಆಹಾರಗಳು

ಮಾಂಸಾಹಾರ: ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ಶ್ರಾವಣ ಮಾಸದಲ್ಲಿ ಕಟ್ಟುನಿಟ್ಟಾಗಿ ತಪ್ಪಿಸಲಾಗುತ್ತದೆ. ಶುದ್ಧತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಸ್ಯಾಹಾರಿ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ: ಇವುಗಳು ದೇಹದಲ್ಲಿ ಶಾಖವನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಅವುಗಳನ್ನು ತಪ್ಪಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ.

ಧಾನ್ಯಗಳು ಮತ್ತು ಬೇಳೆಕಾಳುಗಳು: ಗೋಧಿ, ಅಕ್ಕಿ, ಧಾನ್ಯ ಮತ್ತು ಬೇಳೆಕಾಳುಗಳನ್ನು ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಳಸಲಾಗುವುದಿಲ್ಲ. ಇದರ ಬದಲು ಹುರುಳಿ ಕಾಳು, ಚೆಸ್ಟ್ ಹಿಟ್ಟನ್ನು ಬಳಸಲಾಗುತ್ತದೆ.

ಮದ್ಯ ಮತ್ತು ತಂಬಾಕು: ಶ್ರಾವಣ ಮಾಸ ಪವಿತ್ರ ತಿಂಗಳಾಗಿರುವುದರಿಂದ ಮದ್ಯ ಮತ್ತು ತಂಬಾಕು ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

ಸಂಸ್ಕರಿಸಿದ ಮತ್ತು ಜಂಕ್ ಆಹಾರಗಳು: ಆರೋಗ್ಯಕರ ಮತ್ತು ನೈಸರ್ಗಿಕ ಆಹಾರಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಚಿಪ್ಸ್, ಪ್ಯಾಕೆಟ್ ತಿಂಡಿಗಳು ಮತ್ತು ಇತರ ಸಂಸ್ಕರಿಸಿದ ಆಹಾರಗಳನ್ನು ಸೇವಿಸಲಾಗುವುದಿಲ್ಲ.

ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರಗಳು: ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ ಏಕೆಂದರೆ ಅವು ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು ಮತ್ತು ಉಪವಾಸಕ್ಕೆ ತೊಂದರೆ ಉಂಟು ಮಾಡುವುದು.

Continue Reading
Advertisement
ವೈರಲ್ ನ್ಯೂಸ್48 seconds ago

Viral Video: 7ನೇ ಡಿವೋರ್ಸ್‌ಗೆ ಕೋರ್ಟ್‌ಗೆ ಬಂದ ಮಹಿಳೆ; ಈಕೆಯ ಕುತಂತ್ರ ಕಂಡು ಜಡ್ಜ್‌ಗೆ ಶಾಕ್‌!

Tourist Place
Latest20 mins ago

Tourist Place in Tamilnadu : ತಮಿಳುನಾಡಿಗೆ ಹೋದರೆ ಈ ಅದ್ಭುತ ತಾಣಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಡಿ!

Kalika Temple
ದೇಶ27 mins ago

Kalika Temple: ಭಕ್ತರು ಈ ದೇವಾಲಯಕ್ಕೆ ತುಂಡುಡುಗೆ ಧರಿಸಿ ಬಂದರೆ ಪ್ರವೇಶ ಇಲ್ಲ; ಆಡಳಿತ ಮಂಡಳಿ ಆದೇಶ

Kannada New Movie powder Movie release date announce
ಸ್ಯಾಂಡಲ್ ವುಡ್30 mins ago

Kannada New Movie: ‘ಪೌಡರ್’ ರಿಲೀಸ್ ಡೇಟ್ ಪೋಸ್ಟ್ ಪೋನ್: ತೆರೆಗೆ ಯಾವಾಗ?

14 hours work protest
ಪ್ರಮುಖ ಸುದ್ದಿ52 mins ago

14 Hours Work: 14 ಗಂಟೆಗಳ ಕೆಲಸ; ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್‌ 3ರಂದು ಐಟಿ ಉದ್ಯೋಗಿಗಳ ಪ್ರತಿಭಟನೆ

India Maldives
ದೇಶ1 hour ago

India Maldives: ದುರಹಂಕಾರ ಬಿಟ್ಟು ಭಾರತಕ್ಕೆ ಧನ್ಯವಾದ ತಿಳಿಸಿದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು!

Rajendra Nagar Tragedy
ವೈರಲ್ ನ್ಯೂಸ್1 hour ago

Rajendra Nagar Tragedy: ದೆಹಲಿ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಅವಾಂತರ; ದುರಂತದಿಂದ ಪಾರಾದವರ Video ಇಲ್ಲಿದೆ

Health Tips
ಆರೋಗ್ಯ1 hour ago

Health Tips: ಗ್ಯಾಸ್ಟ್ರಿಕ್‌, ಅಜೀರ್ಣ ಸಮಸ್ಯೆಗೆ ನಿಮ್ಮ ಮನೆಯಲ್ಲೇ ಇದೆ ಪರಿಣಾಮಕಾರಿ ಮದ್ದು!

Road Accident jigani anekal
ಬೆಂಗಳೂರು ಗ್ರಾಮಾಂತರ1 hour ago

Road Accident: ಕುಡಿದ ಮತ್ತಿನಲ್ಲಿ ಕಾರು ಹರಿಸಿದ ಚಾಲಕ, ಒಬ್ಬನ ಸಾವು, ಇಬ್ಬರಿಗೆ ಗಾಯ

India Pakistan War
ದೇಶ2 hours ago

India Pakistan War: ಭಾರತಕ್ಕೆ ನುಗ್ಗಿದ ಪಾಕ್‌ನ 600 ಕಮಾಂಡೋಗಳು; ನಡೆಯುತ್ತಾ ಮತ್ತೊಂದು ಯುದ್ಧ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ15 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ17 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ19 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ20 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ3 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌