Vastu Tips: ಮಕ್ಕಳ ಮದುವೆ ವಿಳಂಬವಾಗುತ್ತಿದೆಯೆ? ವಾಸ್ತು ದೋಷವೂ ಕಾರಣವಿರಬಹುದು! - Vistara News

ಧಾರ್ಮಿಕ

Vastu Tips: ಮಕ್ಕಳ ಮದುವೆ ವಿಳಂಬವಾಗುತ್ತಿದೆಯೆ? ವಾಸ್ತು ದೋಷವೂ ಕಾರಣವಿರಬಹುದು!

ಕುಟುಂಬದಲ್ಲಿ ಮದುವೆ ಮುರಿದು ಬೀಳುತ್ತದೆ ಅಥವಾ ಮದುವೆ ವಿಳಂಬವಾಗುತ್ತಿದ್ದರೆ ಇದಕ್ಕೆ ಕಾರಣ ಕಂಡುಹಿಡಿಯಲು ವಾಸ್ತು ಸಹಾಯ ಮಾಡುತ್ತದೆ. ವ್ಯಕ್ತಿಯ ಜನ್ಮ ಕುಂಡಲಿಯು ಮನೆಯೊಳಗಿನ ಶಕ್ತಿಗಳ ಜೋಡಣೆಯ ಸಂಪೂರ್ಣ ವಿಶ್ಲೇಷಣೆಯ ಜೊತೆಗೆ ವೈವಾಹಿಕ ಆನಂದದ ಮೇಲೆ ಪರಿಣಾಮ ಬೀರುವ ಕಾರಣಗಳನ್ನು ವಾಸ್ತು (Vastu Tips) ಬಹಿರಂಗಪಡಿಸುತ್ತದೆ. ಈ ಕುರಿತ ವಿಡಿಯೊ ಇಲ್ಲಿದೆ.

VISTARANEWS.COM


on

Vastu Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರೀತಿ, ವಿಶ್ವಾಸ, ನಂಬಿಕೆ, ಹೊಂದಾಣಿಕೆ ದಾಂಪತ್ಯ ಜೀವನದಲ್ಲಿ (marriage life) ಬಹುಮುಖ್ಯವಾಗಿರುತ್ತದೆ. ಇದರಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಾದರೂ ಜೀವನದಲ್ಲಿ ಬಿರುಗಾಳಿ ಏಳಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಇಲ್ಲಿ ನಮ್ಮ ನಿರ್ಧಾರಗಳು ಮಾತ್ರ ಪ್ರಮುಖ ಪಾತ್ರವಹಿಸುವುದಿಲ್ಲ. ಮನೆಯ ವಾಸ್ತು (Vastu Tips) ಅಂಶಗಳೂ ಕಾರಣವಾಗುತ್ತದೆ.

ವಾಸ್ತು ಶಾಸ್ತ್ರವು ಶಕ್ತಿ, ಪ್ರಾಚೀನ ಭಾರತೀಯ ವಿಜ್ಞಾನ, ನಮ್ಮ ಜೀವನ, ಪರಿಸರ ಮತ್ತು ಜೀವನದ ನಡುವೆ ಇರುವ ಸಂಕೀರ್ಣ ಸಂಬಂಧಗಳ ಆಳವಾದ ಗ್ರಹಿಕೆಗೆ ಕೀಲಿಯನ್ನು ಹೊಂದಿದೆ. ದಾಂಪತ್ಯವನ್ನು ಬಲಪಡಿಸುವ ಅಥವಾ ದುರ್ಬಲಗೊಳಿಸುವ ಸೂಕ್ಷ್ಮ ಮತ್ತು ಪ್ರಬಲವಾದ ಶಕ್ತಿಗಳ ಕುರಿತು ವಾಸ್ತು ಒಳನೋಟವುಳ್ಳ ಮಾಹಿತಿಯನ್ನು ಒದಗಿಸುತ್ತದೆ.

ಕುಟುಂಬದಲ್ಲಿ ಮದುವೆ ಮುರಿದು ಬೀಳುತ್ತದೆ ಅಥವಾ ಮದುವೆ ವಿಳಂಬವಾಗುತ್ತಿದ್ದರೆ ಇದಕ್ಕೆ ಕಾರಣ ಕಂಡುಹಿಡಿಯಲು ವಾಸ್ತು ಸಹಾಯ ಮಾಡುತ್ತದೆ. ವ್ಯಕ್ತಿಯ ಜನ್ಮ ಕುಂಡಲಿಯು ಮನೆಯೊಳಗಿನ ಶಕ್ತಿಗಳ ಜೋಡಣೆಯ ಸಂಪೂರ್ಣ ವಿಶ್ಲೇಷಣೆಯ ಜೊತೆಗೆ ವೈವಾಹಿಕ ಆನಂದದ ಮೇಲೆ ಪರಿಣಾಮ ಬೀರುವ ಕಾರಣಗಳನ್ನು ವಾಸ್ತು ಬಹಿರಂಗಪಡಿಸುತ್ತದೆ.

ವಾಸ್ತು ತಜ್ಞ ರಾಹುಲ್ ಕೌಶ್ಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದು, ಮದುವೆ ಸಮಸ್ಯೆಗಳಿಗೆ ಕುರಿತು ಕೆಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಕುಟುಂಬ ಸದಸ್ಯರಲ್ಲಿ ಯಾರಾದರೂ ಏಳು ಮತ್ತು ಆರು ಸಂಖ್ಯೆಗಳನ್ನು ಹೊಂದಿಲ್ಲ ಅಥವಾ ಅವು ಒಟ್ಟಿಗೆ ಇಲ್ಲ ಅಥವಾ ಆರು ಇಲ್ಲ ಎಂದಾದರೆ ಅದು ಮದುವೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಅಥವಾ ಮದುವೆಯಲ್ಲಿ ಅಡಚಣೆ ಉಂಟಾಗುವುದು ಮತ್ತು ತಡವಾಗಿ ಮದುವೆಗೆ ಕಾರಣವಾಗಬಹುದು ಎಂಬುದನ್ನು ಸೂಚಿಸುತ್ತದೆ. ಸಂಖ್ಯೆ 7ಕ್ಕೆ ಕಂಕಣ ಬಲವಿದೆ ಮತ್ತು ಸಂಖ್ಯೆ 6ಕ್ಕೆ ಡೈಮಂಡ್ ಕಟ್ ಎಂದು ಕರೆಯಲಾಗುತ್ತದೆ.


ಮನೆಯಲ್ಲಿ ಮದುವೆ ಕಾರ್ಯಕ್ರಮವನ್ನು ಆಯೋಜಿಸಲು ಬಯಸುತ್ತೇವೆ. ಆದರೆ ಅದು ಸಂಭವಿಸುವುದಿಲ್ಲ ಏಕೆ ಎಂಬ ಬಗ್ಗೆ ಅವರು ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ. ಸಾಮಾನ್ಯವಾಗಿ ಏನಾಗುತ್ತದೆ ಎಂದರೆ ನಿಮ್ಮ ಕುಂಡಲಿಯಲ್ಲಿ ಏಳು ಮತ್ತು ಆರು ಕಾಣೆಯಾದಾಗ ಅಥವಾ ಏಳು ಮತ್ತು ಆರು ಸಂಖ್ಯೆಗಳು ದುರ್ಬಲವಾದಾಗ ಅದರ ಫಲಿತಾಂಶ ಮನೆಯಲ್ಲಿ ನಡೆಯುವ ಶುಭ ಕಾರ್ಯಗಳ ಮೇಲೆ ಬೀಳುತ್ತದೆ.

ಇದನ್ನೂ ಓದಿ: Vastu Tips: ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಅಪಾಯ ಗ್ಯಾರಂಟಿ!

ರಾಹುಲ್ ಕೌಶ್ಲ್ ಅವರು ತಮ್ಮ ವಿಡಿಯೋದಲ್ಲಿ ಹಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಸಲಹೆಯನ್ನು ನೀಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ನಿಮ್ಮ ಮಕ್ಕಳು ತುಂಬಾ ಹಠ ಮಾಡುತ್ತಾರಾ? ಇಲ್ಲಿದೆ ಸರಳ ಪರಿಹಾರ!

ಮಕ್ಕಳ ಕೆಲವೊಂದು ವಿಚಾರಗಳಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ, ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಭಾವನೆ ನಿಮ್ಮನ್ನು ಕಾಡಲು ಪ್ರಾರಂಭಿಸಿದರೆ ವಾಸ್ತು ಶಾಸ್ತ್ರ (Vastu Tips) ಹೇಳಿರುವ ಮೂರು ಸರಳ ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ. ನೀವು ಟ್ರೈ ಮಾಡಿ ನೋಡಬಹುದು.

VISTARANEWS.COM


on

By

Vastu Tips
Koo

ಮನೆಯಲ್ಲಿ ಮಕ್ಕಳು ಹಠ (Stubborn Kid) ಮಾಡುವುದು, ಮೊಂಡುತನ ಪ್ರದರ್ಶಿಸುವುದು ಸಾಮಾನ್ಯ ಎಂದು ನಾವೆಂದುಕೊಳ್ಳುತ್ತೇವೆ. ಆದರೆ ಇದಕ್ಕೆ ಮನೆಯ ವಾಸ್ತು (Vastu Tips) ದೋಷವೂ ಕಾರಣವಾಗಿರುತ್ತದೆ. ಇದನ್ನು ತಿಳಿದುಕೊಂಡು ಸರಿಪಡಿಸಿಕೊಂಡರೆ ಮಕ್ಕಳ ಹಠವನ್ನು ನಿಯಂತ್ರಿಸಬಹುದು. ಅವರನ್ನು ಸಜ್ಜನ, ವಿನಯಶೀಲ ಮಗುವನ್ನಾಗಿ ಮಾಡಬಹುದು ಎನ್ನುತ್ತದೆ ವಾಸ್ತುಶಾಸ್ತ್ರ.

ಉತ್ತಮ ಸಲಹೆಗಳು ಮತ್ತು ಪರಿಹಾರಗಳನ್ನು ಹುಡುಕಲು ವಾಸ್ತು ಶಾಸ್ತ್ರ ಯಾವಾಗಲೂ ಜನರಿಗೆ ಸಹಾಯ ಮಾಡುತ್ತದೆ. ಇದರಲ್ಲಿ ಮಗುವಿಗೆ ಸಂಬಂಧಿಸಿ ಹಲವಾರು ಸಮಸ್ಯೆಗಳಿಗೆ ಪರಿಹಾರಗಳೂ ಇವೆ.

ಮಕ್ಕಳ ಬಗ್ಗೆ ಸಾಕಷ್ಟು ವಿಷಯಗಳು ಕೆಲವೊಮ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ. ಬಂದರೂ ಅದು ಸಾಮಾನ್ಯ ಎಂದುಕೊಳ್ಳುತ್ತೇವೆ. ಮಕ್ಕಳ ಹಠ, ಗೊಂದಲ, ಖಿನ್ನತೆ ಆತಂಕಪಡುವ ವಿಷಯವಾಗಿದೆ.

ಮಕ್ಕಳ ಕೆಲವೊಂದು ವಿಚಾರಗಳಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ, ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಭಾವನೆ ನಿಮ್ಮನ್ನು ಕಾಡಲು ಪ್ರಾರಂಭಿಸಿದರೆ ವಾಸ್ತು ಶಾಸ್ತ್ರ ಹೇಳಿರುವ ಮೂರು ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ. ನೀವು ಟ್ರೈ ಮಾಡಿ ನೋಡಬಹುದು.

ಹೆಚ್ಚು ಹಠ ಮಾಡುವ ಮಕ್ಕಳನ್ನು ನಿಯಂತ್ರಣದಲ್ಲಿ ಇಡಲು ವಾಸ್ತು ತಜ್ಞ ರಾಹುಲ್ ಅವರು ವಾಸ್ತು ನಿಯಮದಲ್ಲಿರುವ ಕೆಲವು ಸಲಹೆಗಳನ್ನು ಬಹಿರಂಗಪಡಿಸಿದ್ದಾರೆ.


1. ಬೆಳಗ್ಗೆ ಎದ್ದಾಕ್ಷಣ ಬೆಡ್ ಶೀಟ್ ಅನ್ನು ಮಡಚಿ ಸರಿಯಾಗಿ ಜೋಡಿಸಿ ಇಡಿ. ಚಪ್ಪಲಿಗಳು ಎಲ್ಲೆಲ್ಲಿ, ಅಂಕುಡೊಂಕಾಗಿದ್ದರೆ ಅದನ್ನು ಸರಿಪಡಿಸಿ.

2. ರುದ್ರಾಕ್ಷಿ, ಹರಳಿನ ಕಂಕಣವನ್ನು ಧರಿಸಿ. ಮೂರು ಬಾರಿ ಗಾಯತ್ರಿ ಮಂತ್ರವನ್ನು ಪಠಿಸಿ.

ಇದನ್ನೂ ಓದಿ: Vastu Tips: ಮನೆಯಲ್ಲಿ ಸಂಪತ್ತು ಸದಾ ತುಂಬಿರಬೇಕೆ? ಈ ನಿಯಮ ಪಾಲಿಸಿ

3. ಹಾಸಿಗೆಯ ಮೇಲೆ ಕುಳಿತು ಗಾಯತ್ರಿ ಮಂತ್ರವನ್ನು ಕನಿಷ್ಠ 11 ಬಾರಿ ಜಪಿಸಿ. ಮಗುವಿಗೂ ಪಠಿಸುವಂತೆ ಮಾಡಿ. ಇದನ್ನು ಕನಿಷ್ಠ 40 ದಿನಗಳವರೆಗೆ ಮಾಡಿ. ಇದರಿಂದ ಅದ್ಭುತ ಫಲಿತಾಂಶಗಳು ದೊರೆಯುವುದು.

ಗಾಯತ್ರಿ ಮಂತ್ರವು ಮಕ್ಕಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಮೆದುಳು ಸ್ಪಷ್ಟವಾಗಿ ಯೋಚಿಸುವಂತೆ ಮಾಡುತ್ತದೆ.

Continue Reading

ಬೆಂಗಳೂರು

Guru Purnima 2024: ನಮ್ಮ ಆಚಾರ-ವಿಚಾರಗಳು ಹಿಂದೂ ಸಂಸ್ಕೃತಿಗನುಸಾರ ಇರಬೇಕು; ಮೋಹನ ಗೌಡ

Guru Purnima 2024: ನಮ್ಮ ಆಚಾರ-ವಿಚಾರಗಳು ಹಿಂದೂ ಸಂಸ್ಕೃತಿಗನುಸಾರ ಇರಬೇಕು. ‘ರಾಮ-ಕೃಷ್ಣʼ ನಮ್ಮ ಆದರ್ಶವಾಗಿದ್ದಾರೆ. ನಮ್ಮ ನಿತ್ಯ ವ್ಯವಹಾರದಲ್ಲಿ ನಮ್ಮ ಸಂಸ್ಕೃತಿಯ ರಕ್ಷಣೆ ಮತ್ತು ಪಾಲನೆ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ತಿಳಿಸಿದ್ದಾರೆ.

VISTARANEWS.COM


on

Hindu Jana Jagruti Samiti State Spokesperson Mohan Gowda speech
Koo

ಬೆಂಗಳೂರು: ರಾಮರಾಜ್ಯಕ್ಕಾಗಿ ಸಾಧನೆ ಮಾಡುವುದರ ಜತೆಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ (Guru Purnima 2024) ತಿಳಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಗರದ ಕಾಮಾಕ್ಷಿಪಾಳ್ಯದ ಧನಂಜಯ ಪ್ಯಾಲೇಸ್‌ನಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೈಯಕ್ತಿಕ ಜೀವನದಲ್ಲಿ ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದಲ್ಲಿ ರಾಮರಾಜ್ಯದ ಸ್ಥಾಪನೆ ಮಾಡಬಹುದು ಆದರೆ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದಲ್ಲಿ ರಾಮರಾಜ್ಯದ ಸ್ಥಾಪನೆಗಾಗಿ ನಾವು ಕರ್ತವ್ಯನಿಷ್ಠರಾಗಿ ನಿಭಾಯಿಸುವುದರೊಂದಿಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ.

ನಮ್ಮ ಆಚಾರ-ವಿಚಾರಗಳು ಹಿಂದೂ ಸಂಸ್ಕೃತಿಗನುಸಾರ ಇರಬೇಕು. ‘ರಾಮ-ಕೃಷ್ಣʼ ನಮ್ಮ ಆದರ್ಶವಾಗಿದ್ದಾರೆ. ನಮ್ಮ ನಿತ್ಯ ವ್ಯವಹಾರದಲ್ಲಿ ನಮ್ಮ ಸಂಸ್ಕೃತಿಯ ರಕ್ಷಣೆ ಮತ್ತು ಪಾಲನೆ ಮಾಡಬೇಕು ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ: Union Budget 2024: ಕೇಂದ್ರ ಬಜೆಟ್‌ನಲ್ಲಿ ರೈಲ್ವೇ ವಲಯದ 9 ಪ್ರಮುಖ ನಿರೀಕ್ಷೆಗಳಿವು

ಗುರು ಪೂರ್ಣಿಮಾ ಮಹೋತ್ಸವದಲ್ಲಿ ಬೆಳಿಗ್ಗೆ ಶ್ರೀ ವ್ಯಾಸ ಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ ನೆರವೇರಿಸಲಾಯಿತು.

ಮಹೋತ್ಸವದಲ್ಲಿ ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕ ಸಂತೋಷ ಕೆಂಚಾಂಬ, ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಹೇಶ್, ಆನೇಕಲ್‌ನ ಶ್ರೀ ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷ ಸೋಮೇಶ್ ರೆಡ್ಡಿ ಹಾಗೂ ರಾಜರಾಜೇಶ್ವರಿ ನಗರದ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಟ್ರಸ್ಟಿ ಶಶಾಂಕ ಆಚಾರ್ ಪಾಲ್ಗೊಂಡಿದ್ದರು.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ

ಬೆಂಗಳೂರಿನ ಬಸವನಗುಡಿಯ ಭವಾನಿ ಕಲ್ಯಾಣ ಮಂಟಪ, ಯಲಹಂಕದ ಆರ್.ವಿ. ಕಲ್ಯಾಣ ಮಂಟಪ ಹಾಗೂ ಚಂದಾಪುರದ ಯಾರೆಂಡಳ್ಳಿಯ ಸಾಯಿಬಾಬಾ ಯೋಗ ಕೇಂದ್ರದಲ್ಲಿ ಸೇರಿದಂತೆ ದೇಶದಾದ್ಯಂತ 71 ಕ್ಕೂ ಅಧಿಕ ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಆಚರಿಸಲಾಯಿತು.

Continue Reading

ರಾಜಕೀಯ

Swami Avimukteshwaranand: ಬಿಜೆಪಿಯನ್ನು ಸದಾ ಕುಟುಕುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ! ಏನಿವರ ಹಿನ್ನೆಲೆ?

ಅವಿಮುಕ್ತೇಶ್ವರಾನಂದ ಸರಸ್ವತಿ (Swami Avimukteshwaranand) ಅವರು ಮಾಡಿದ್ದ ಕೇದಾರನಾಥ ದೇವಾಲಯದ ಚಿನ್ನದ ಹಗರಣ ಆರೋಪವು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗವಾಗಿ ಬೆಂಬಲ ನೀಡುತ್ತಿರುವ ಅವರು ಅನೇಕ ರಾಜಕೀಯ ಭಾಷಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಆಗಾಗ್ಗೆ ಬಿಜೆಪಿಯ ನೀತಿಗಳನ್ನು ಟೀಕಿಸುತ್ತಾರೆ. ಈ ಸ್ವಾಮೀಜಿಯ ಹಿನ್ನೆಲೆಯ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

Swami Avimukteswarananda
Koo

ಕೇದಾರನಾಥ ದೇವಾಲಯದಿಂದ (Kedarnath Temple) 228 ಕೆ.ಜಿ ಚಿನ್ನ ನಾಪತ್ತೆಯಾಗಿದೆ ಎಂದು ಆರೋಪಿಸಿ ಅದನ್ನು ಚಿನ್ನದ ಹಗರಣ (gold scam) ಎಂದು ಕರೆದಿದ್ದ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ (Swami Avimukteshwaranand) ಅವರು ಬಿಜೆಪಿ ಮತ್ತು ಮೋದಿ ವಿರುದ್ಧ ಬಹಿರಂಗವಾಗಿ ಸತತ ಹೇಳಿಕೆ ನೀಡುತ್ತ ಸುದ್ದಿಯಲ್ಲಿದ್ದಾರೆ.

ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಮಾಡಿದ್ದ ಚಿನ್ನದ ಹಗರಣ ಆರೋಪವು ಸಾಕಷ್ಟು ವಿವಾದವನ್ನು ಹುಟ್ಟುಹಾಕಿದೆ. ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗವಾಗಿ ಬೆಂಬಲ ನೀಡುತ್ತಿರುವ ಅವರು ಅನೇಕ ರಾಜಕೀಯ ಭಾಷಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಆಗಾಗ ಬಿಜೆಪಿಯ ನೀತಿಗಳನ್ನು ಟೀಕಿಸುತ್ತಾರೆ. 2019ರಲ್ಲಿ ವಾರಣಾಸಿ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯತ್ನಿಸಿದ್ದ ಅವರು 2024ರ ಹೊತ್ತಿಗೆ ಇಂಡಿಯಾ ಮೈತ್ರಿಕೂಟದ ಅಡಿಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದರು. ರಾಜಕೀಯವಾಗಿ ತಮ್ಮ ನಿಲುವನ್ನು ಸ್ಪಷ್ಟವಾಗಿ ಈ ಮೂಲಕ ಪ್ರದರ್ಶಿಸಿದ್ದಾರೆ.

ಸಣ್ಣ ವಯಸ್ಸಿನಲ್ಲೇ ನಾಯಕತ್ವ ಪ್ರದರ್ಶನ

ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಪತ್ತಿ ತೆಹಸಿಲ್‌ನ ಬ್ರಹ್ಮನ್‌ಪುರ ಗ್ರಾಮದಲ್ಲಿ ಉಮಾಶಂಕರ್ ಉಪಾಧ್ಯಾಯ ಇವರ ಮೂಲ ಹೆಸರು. ಸ್ವಾಮಿ ಅವಿಮುಕ್ತೇಶ್ವರಾನಂದರು ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಪಡೆದರು. ಅಲ್ಲಿ ಅವರು ಶಾಸ್ತ್ರಿ ಮತ್ತು ಆಚಾರ್ಯ ಪದವಿಗಳನ್ನು ಪೂರ್ಣಗೊಳಿಸಿದರು. ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅವರು 1994ರಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದು ಸಣ್ಣ ವಯಸ್ಸಿನಲ್ಲೇ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.

ವಿವಿಧ ಕಾರಣಗಳಿಗಾಗಿ ಹೋರಾಟ

ವೃತ್ತಿಜೀವನದುದ್ದಕ್ಕೂ ಸ್ವಾಮಿ ಅವಿಮುಕ್ತೇಶ್ವರಾನಂದರು ವಿವಿಧ ಕಾರಣಗಳಿಗಾಗಿ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣದ ಸಂದರ್ಭದಲ್ಲಿ ದೇವಾಲಯಗಳ ಧ್ವಂಸವನ್ನು ಅವರು ನಿರಂತರ ವಿರೋಧಿಸಿದರು. 2008ರಲ್ಲಿ ಅವರು ಗಂಗಾ ನದಿಯನ್ನು ರಾಷ್ಟ್ರೀಯ ನದಿ ಎಂದು ಘೋಷಿಸಲು ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು. ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಅನಂತರ ಅವರ ಗುರುಗಳು ಸೂಚನೆ ಮೇರೆಗೆ ಉಪವಾಸವನ್ನು ಕೊನೆಗೊಳಿಸಿದರು.


ಶಾರದಾ ಪೀಠದಲ್ಲಿ ಸ್ಥಾನಮಾನ

ಗುರು, ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಮರಣದ ಅನಂತರ 2022ರ ಸೆಪ್ಟೆಂಬರ್‌ನಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದರನ್ನು ಜ್ಯೋತಿಷ್ ಪೀಠದ ಶಂಕರಾಚಾರ್ಯ ಎಂದು ಘೋಷಿಸಲಾಯಿತು. ಶಾರದಾ ಪೀಠದ ದ್ವಾರಕಾದ ಶಂಕರಾಚಾರ್ಯ ಎಂದು ಹೆಸರಿಸಲ್ಪಟ್ಟ ಸ್ವಾಮಿ ಸದಾನಂದ ಸರಸ್ವತಿಯವರೊಂದಿಗೆ ಅವರ ನೇಮಕವಾಯಿತು.

ಇದನ್ನೂ ಓದಿ : Keshav Prasad Maurya: ʼಮಾನ್ಸೂನ್‌ ಆಫರ್‌ʼ ಕೊಟ್ಟ ಅಖಿಲೇಶ್‌ ಯಾದವ್‌ಗೆ ಬಿಜೆಪಿ ಟಾಂಗ್‌

ಹೇಳಿಕೆಗಳಿಂದ ವಿವಾದಗಳು ಹಲವು

ದಿಟ್ಟ ಹೇಳಿಕೆಗಳಿಂದಲೇ ಆಗಾಗ್ಗೆ ಸುದ್ದಿಯಲ್ಲಿರುವ ಸ್ವಾಮಿ ಅವಿಮುಕ್ತೇಶ್ವರಾನಂದರು ಇತ್ತೀಚೆಗೆ ದೆಹಲಿಯಲ್ಲಿ ಕೇದಾರನಾಥ ದೇವಾಲಯದ ಪ್ರತಿಕೃತಿ ನಿರ್ಮಾಣವನ್ನು ಟೀಕಿಸಿದರು. ಅದರ ಮೂಲ ದೇವಾಲಯವು ಹಿಮಾಲಯದಲ್ಲಿದೆ ಎಂದು ವಾದಿಸಿದರು. ಇದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಕ್ರಿಯಾತ್ಮಕ ಪಾತ್ರವನ್ನು ತೋರಿಸುತ್ತಿರುವ ಅವರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಇರುದರಿಂದ ಭಾರತೀಯ ರಾಜಕೀಯದಲ್ಲಿ ಅವರು ಗುರುತಿಸಿಕೊಳ್ಳುವಂತಾಗಿದೆ. ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲೂ ಇವರು ಬಿಜೆಪಿಯನ್ನು ಟೀಕಿಸಿ ಸಂಚಲನ ಮೂಡಿಸಿದ್ದರು. ರಾಮ ಮಂದಿರ ಉದ್ಘಾಟನೆಯ ವಿಧಿ ವಿಧಾನ ಸಮರ್ಪಕವಾಗಿ ಆಗಿಲ್ಲ ಎಂದು ಟೀಕಿಸಿದ್ದರು.

Continue Reading

ಬೆಂಗಳೂರು ಗ್ರಾಮಾಂತರ

Guru Purnima 2024 : ವಿವಿಧೆಡೆ ಅದ್ಧೂರಿಯಾಗಿ ನೆರವೇರಿದ ಗುರುಪೂರ್ಣಿಮಾ ಮಹೋತ್ಸವ

Guru Purnima 2024 : ಗುರುಪೂರ್ಣಿಮಾ ಹಿನ್ನೆಲೆಯಲ್ಲಿ ನಗರ ವಿವಿಧೆಡೆ ಅದ್ಧೂರಿಯಾಗಿ ಮಹೋತ್ಸವ ನಡೆದಿದೆ. ಸಾಯಿಬಾಬಾ ಮಂದಿರಗಳಲ್ಲಿ ಭಕ್ತರಿಂದ ತುಂಬಿಹೋಗಿತ್ತು. ವ್ಯಾಸ ಪೂರ್ಣಿಮೆಯಂದು ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ಕೈಗೊಳ್ಳಲಾಗಿದೆ.

VISTARANEWS.COM


on

By

Guru Purnima 2024 mahotsava celebrated in different parts of the country
Koo

ದೇವನಹಳ್ಳಿ/ಬಳ್ಳಾರಿ: ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಗುರುಪೂರ್ಣಿಮಾ (Guru Purnima 2024) ಮಹೋತ್ಸವ ಜತೆಗೆ ಸಾಯಿಬಾಬಾ ಮಂದಿರಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿರುವ ಶ್ರೀ ಸಾಯಿಬಾಬಾ ಸೇವಾ ಕೇಂದ್ರದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.

ಸಾಯಿಬಾಬಾರ ಮೂರ್ತಿಗೆ ಬಿಳಿ ಗುಲಾಬಿ ಹಾಗೂ ಮುಸುಕಿನ ಜೋಳದಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 10 ಸಾವಿರಕ್ಕೂ ಅಧಿಕ ಭಕ್ತಾಧಿಗಳು ಸ್ವಾಮಿಯ ದರ್ಶನ ಪಡೆದರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಂದ ಭಕ್ತಾರು ಆಗಮಿಸಿದ್ದರು. ಭಾನುವಾರ ಆಗಿದ್ದರಿಂದ ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬಂದಿತ್ತು. ಬಂದಿದ್ದ ಎಲ್ಲಾ ಭಕ್ತಾಧಿಗಳಿಗೆ‌ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಭಕ್ತಾಧಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

Guru Purnima 2024 mahotsava celebrated in different parts of the country

ಇನ್ನೂ ಬಳ್ಳಾರಿಯ ಬಾಲಾಂಜನೇಯ ಸ್ವಾಮಿ ಮಠದಲ್ಲಿ ಹರಿಹರಪುರದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾ ಸ್ವಾಮೀಜಿ ವ್ಯಾಸ ಪೂರ್ಣಿಮೆಯಂದು ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ಕೈಗೊಂಡರು. ಇತ್ತ ಆಷಾಢ ಹುಣ್ಣಿಮೆ ಹಿನ್ನೆಲೆಯಲ್ಲಿ ಕೊಪ್ಪಳದ ಹುಲಗಿ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದರು. ತುಂತುರು ಮಳೆಯ ಮಧ್ಯೆಯು ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀಹುಲಿಗೆಮ್ಮದೇವಿಯ ದರ್ಶನ ಪಡೆದರು.

ಇದನ್ನೂ ಓದಿ: Kiccha Sudeep: ಕನ್ನಡಿಗರ ಸ್ವಾಭಿಮಾನವೇ ಮುಖ್ಯ; ಫೋನ್ ಪೇ ಬ್ರ್ಯಾಂಡ್‌ ಅಂಬಾಸಿಡರ್ ಸ್ಥಾನ ತ್ಯಜಿಸುತ್ತಾರಾ ಕಿಚ್ಚ ಸುದೀಪ್?

ಭಾರತದ ಮಹೋನ್ನತ ಕ್ರೀಡಾ ತಾರೆಗಳನ್ನು ಸೃಷ್ಟಿಸಿದ 6 ‘ಗುರು’ಗಳಿವರು

ಬೆಂಗಳೂರು: ಗುರು ಪೂರ್ಣಿಮೆ(Guru Purnima 2024) ಅಂಗವಾಗಿ ಇಂದು ಬಹುತೇಕರು ತಮ್ಮ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಗುರುಗಳ ಸೇವೆಯನ್ನು ಸ್ಮರಿಸುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಭಾರತದ ಮಹೋನ್ನತ ಕ್ರೀಡಾ ತಾರೆಗಳನ್ನು ಸೃಷ್ಟಿಸಿದ 6 ಪ್ರಮುಖ ಗುರುಗಳ ಕುರಿತ ಕಿರು ಪರಿಚಯವೊಂದು ಇಂತಿದೆ.

ರಮಾಕಾಂತ್‌ ಅಚ್ರೇಕರ್(ಸಚಿನ್ ತೆಂಡೂಲ್ಕರ್​ ಗುರು)


ಕ್ರಿಕೆಟ್‌ ದೇವರು ಎಂದು ಕರೆಯಲ್ಪಡುವ ಸಚಿನ್​ ತೆಂಡೂಲ್ಕರ್(Sachin Tendulkar)​ ವಿಶ್ವ ಕ್ರಿಕೆಟ್​ನಲ್ಲಿ ಹಲವು ಸಾಧನೆ ಮಾಡಲು ಕಾರಣ ಅವರ ಗುರು ರಮಾಕಾಂತ್‌ ಅಚ್ರೇಕರ್(Ramakant Achrekar). ಬಾಲ್ಯದಿಂದಲೇ ಅಚ್ರೇಕರ್ ಗರಡಿಯಲ್ಲಿ ಪಳಗಿದ ಸಚಿನ್​ ಇಂದು ವಿಶ್ವ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುವಂತಾಗಿದೆ. 1932ರಲ್ಲಿ ಜನಿಸಿದ ಅಚ್ರೇಕರ್ ಮುಂಬೈ ಸ್ಥಳೀಯ ಕ್ರಿಕೆಟ್‍ನಲ್ಲಿ ಉತ್ತಮ ಆಟಗಾರರಾಗಿ ಹೆಸರು ಗಳಿಸಿದವರಾಗಿದ್ದರು. ಸಚಿನ್ ತೆಂಡೂಲ್ಕರ್ ಸೇರಿದಂತೆ ವಿನೋದ್ ಕಾಂಬ್ಳಿ, ಅಜಿತ್ ಆಗರ್ಕರ್, ಪ್ರವೀಣ್‌ ಆಮ್ರೆ, ಸಮೀರ್‌ ದಿಘೆ, ಬಲ್ವಿಂದರ್‌ ಸಿಂಗ್‌ ಸಂಧು ಸೇರಿದಂತೆ ಹಲವಾರು ಕ್ರಿಕೆಟಿಗರನ್ನು ದೇಶಕ್ಕೆ ಪರಿಚಯಿಸಿದ ಹೆಗ್ಗಳಿಕೆ ಅಚ್ರೇಕರ್ ಅವರದ್ದು.

Guru Purnima 2024


1990ರಲ್ಲಿ ಭಾರತ ಸರ್ಕಾರ ಅಚ್ರೇಕರ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.2010ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಸಚಿನ್​ ಎಷ್ಟೇ ದೊಡ್ಡ ಖ್ಯಾತಿ ಗಳಿಸಿದರೂ ಕೂಡ ತಮ್ಮ ಗುರುವಿನ ತ್ಯಾಗವನ್ನು ಸದಾ ನೆನಪಿಸಿಕೊಳ್ಳುತ್ತಿರುತ್ತಾರೆ. ಅಚ್ರೇಕರ್ ಅಂತಿಮ ಸಂಸ್ಕಾರಕ್ಕೆ ಶವವನ್ನು ತೆಗೆದುಕೊಂಡು ಹೋಗುವ ವೇಳೆ ಪಾರ್ಥೀವ ಶರೀರಕ್ಕೆ ಸಚಿನ್‌ ತೆಂಡುಲ್ಕರ್‌ ಕೂಡ ಹೆಗಲು ಕೊಡುವ ಮೂಲಕ ಗುರುವಿನ ಮೇಲಿನ ಪ್ರೀತಿಯನ್ನು ಮೆರೆದಿದ್ದರು. ಅಚ್ರೇಕರ್ 2019ರಲ್ಲಿ ನಿಧನ ಹೊಂದಿದ್ದರು.

ಎಸ್. ಎಂ ಆರಿಫ್(ಗೋಪಿಚಂದ್‌ ಗುರು)


ಭಾರತ ಕಂಡ ಶ್ರೇಷ್ಠ ಬ್ಯಾಡ್ಮಿಂಟನ್‌ ಆಟಗಾರರಲ್ಲಿ ಪಿ.ಗೋಪಿಚಂದ್‌(Pullela Gopichand) ಕೂಡ ಒಬ್ಬರು. ಇವರನ್ನು ಈ ಮಟ್ಟಕ್ಕೆ ಬೆಳೆಸಿದ್ದ ಇವರ ಗುರುಗಳಾದ ಎಸ್. ಎಂ ಆರಿಫ್(coach SM Arif.). ಇವರ ಕೋಚಿಂಗ್ ಮಾರ್ಗದರ್ಶನದಲ್ಲೇ ಗೋಪಿಚಂದ್ 2001 ರಲ್ಲಿ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್‌ಶಿಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದು. 11 ವಯಸ್ಸಿನಲ್ಲಿಯೇ ಬ್ಯಾಡ್ಮಿಂಟನ್ ಗೀಳಿಗೆ ಬಿದಿದ್ದ ಗೋಪಿಚಂದ್‌ ಅವರನ್ನು ಶ್ರೇಷ್ಠ ಬ್ಯಾಡ್ಮಿಂಟನ್​ ಆಟಗಾರನಾಗಿ ಮಾಡಿದ್ದು ಅವರ ಕೋಚ್​ ಆರಿಫ್. ಇವರ ಮಾರ್ಗದಶದಲ್ಲಿ ಗೋಪಿಚಂದ್‌ ಕೇವಲ 18 ವರ್ಷ ವಯಸ್ಸಿರುವಾಗ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಆಗಿ ಹೊಮ್ಮಿದ್ದರು. ಮೂರು ವರ್ಷದ ನಂತರ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಗೆದ್ದು ಬೀಗಿದ್ದರು. ಸತತವಾಗಿ ಐದು ವರ್ಷ ಅವರು ಆ ಪಟ್ಟವನ್ನು ಬೇರೆ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ.


ಚಾಂಪಿಯನ್ನರ ಗುರು ಗೋಪಿಚಂದ್‌


ಭಾರತ ಕಂಡ ಶ್ರೇಷ್ಠ ಬ್ಯಾಡ್ಮಿಂಟನ್‌ ಆಟಗಾರರಲ್ಲಿ ಪಿ.ಗೋಪಿಚಂದ್‌ ಕೂಡ ಒಬ್ಬರು. ಅವರು ಆಟಗಾರರಾಗಿ ಮಿಂಚಿದ್ದಕ್ಕಿಂತ ತರಬೇತುದಾರರಾಗಿ ಮೆರೆದಿದ್ದೇ ಹೆಚ್ಚು. ಅವರ ಗರಡಿಯಲ್ಲಿ ಸೈನಾ ನೆಹ್ವಾಲ್‌(Saina Nehwal) ಪಿ.ವಿ.ಸಿಂಧು(PV Sindhu), ಕೆ.ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌, ಸಾಯಿ ಪ್ರಣೀತ್‌ರಂತಹ ಖ್ಯಾತ ಆಟಗಾರರು ಬೆಳಕಿಗೆ ಬಂದಿದ್ದು. ಇದರಲ್ಲಿ ಸೈನಾ ಮತ್ತು ಪಿವಿ ಸಿಂಧು ಪ್ರತಿಷ್ಠಿತ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಐತಿಹಾಸಿಕ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ವಿಶ್ವಮಟ್ಟದಲ್ಲಿ ಭಾರತದ ಹೆಸರು ಬೆಳಗಿದ್ದೇ ಈ ತಾರೆಯರಿಂದ. ಭಾರತೀಯರು ಬ್ಯಾಡ್ಮಿಂಟನ್‌ನಲ್ಲಿ ಏನೆಲ್ಲ ಸಾಧಿಸಬಹುದೋ, ಅಷ್ಟೆಲ್ಲ ಸಾಧಿಸಿದ್ದಾರೆ. ಅದರ ಹಿಂದಿರುವುದು ಹೈದರಾಬಾದ್‌ನಲ್ಲಿರುವ ಗೋಪಿಚಂದ್‌ ಅಕಾಡೆಮಿ. ತರಬೇತುದಾರರಾಗಿ ಅಸಾಮಾನ್ಯ ಸಾಧನೆಯನ್ನೇ ಮಾಡಿದ ಕೀರ್ತಿ ಇವರದ್ದು.


ಸತ್ಪಾಲ್‌ ಸಿಂಗ್‌

ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನ ಗೆದ್ದಿರುವ ಸುಶೀಲ್‌ ಕುಮಾರ್(Sushil Kumar) ಮತ್ತು ಯೋಗೇಶ್ವರ ದತ್‌(Yogeshwar Dutt,) ಅವರನ್ನು ಭಾರತೀಯ ಕುಸ್ತಿಗೆ ಪರಿಚಯಿಸಿದ ಕೀರ್ತಿ ಮಾಜಿ ಕುಸ್ತಿಪಟು ಮತ್ತು ತರಬೇತುದಾರ ಸತ್ಪಾಲ್‌ ಸಿಂಗ್‌(Satpal Singh) ಅವರಿಗೆ ಸಲ್ಲುತ್ತದೆ. ಕುಸ್ತಿಪಟುವಾಗಿದ್ದ ಸತ್ಪಾಲ್‌ ಸಿಂಗ್‌, 1982 ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನ ಗೆದ್ದಿದ್ದರು. ಇದಕ್ಕೂ ಮುನ್ನ 1974ರ ಕೂಟದಲ್ಲಿ ಕಂಚು ಜಯಿಸಿದ್ದರು. ಭಾರತೀಯ ಕುಸ್ತಿಗೆ ನೀಡಿದ ಮಹೋನ್ನತ ಕೊಡುಗೆಗಾಗಿ ಅವರಿಗೆ 1983ರಲ್ಲಿ ‘ಪದ್ಮ ಶ್ರೀ’ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. 2009ರಲ್ಲಿ ‘ದ್ರೋಣಾಚಾರ್ಯ’ ಪ್ರಶಸ್ತಿಯೂ ಅವರಿಗೆ ಅರಸಿ ಬಂದಿತ್ತು.

Guru Purnima 2024


ಜಗದೀಶ್ ಸಿಂಗ್(ವಿಜೇಂದರ್ ಸಿಂಗ್ ಕೋಚ್​)


2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಅವರ ಕೋಚ್​ ಜಗದೀಶ್ ಸಿಂಗ್. ಕ್ರೀಡಾಪಟುವಾಗಿದ್ದ ಜಗದೀಶ್ ಸಿಂಗ್ ದೇಶಕ್ಕೆ ಶ್ರೇಷ್ಠ ಬಾಕ್ಸರ್​ಗಳನ್ನು ನೀಡಬೇಕು ಎನ್ನುವ ಉದ್ದೇಶದಿಂದ ತಮ್ಮ ಮನೆ ಮತ್ತು ಜಮೀನನ್ನು ಅಡಮಾನವಿಟ್ಟು ಗ್ರಾಮೀಣ ಬ್ಯಾಂಕ್‌ನಿಂದ ನಾಲ್ಕು ಲಕ್ಷ ಸಾಲ ಪಡೆದು ಬಾಕ್ಸಿಂಗ್​ ಕ್ಲಬ್ ಆರಂಭಿಸಿದ್ದರು. ಇದೇ ಕ್ಲಬ್​ನಲ್ಲಿ ಪಳಗಿದ ವಿಜೇಂದರ್ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದು ಸಂಭ್ರಮಿಸಿದ್ದರು. 2007 ರಲ್ಲಿ, ಭಾರತ ಸರ್ಕಾರವು ಜಗದೀಶ್​ ಸಿಂಗ್ ಅವರಿಗೆ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಇದನ್ನೂ ಓದಿ ರಾಜ ಮಾರ್ಗ ಅಂಕಣ : ಅಪವಾದ ಎಲ್ಲರ ಬದುಕಿನಲ್ಲಿಯೂ ಬರುತ್ತವೆ, ಅದನ್ನು ಮೀರಿ ನಿಲ್ಲುವುದು ಹೇಗೆ?


ರಾಹುಲ್ ದ್ರಾವಿಡ್​


ಆಟಗಾರನಾಗಿ ಮತ್ತು ಮಾರ್ಗದರ್ಶಕರಾಗಿ ಭಾರತದ ಕ್ರಿಕೆಟ್​ಗೆ ಅಪಾರ ಸೇವೆ ಸಲ್ಲಿಸಿದ್ದ ಕೀರ್ತಿ ರಾಹುಲ್​ ದ್ರಾವಿಡ್(Rahul Dravid)​ಗೆ ಸಲ್ಲುತ್ತದೆ. ಇವರು ಕರ್ನಾಟಕದವರು ಎಂಬುದು ಕನ್ನಡಿಗರ ಹೆಮ್ಮೆ. ಅಂಡರ್​-19 ಕೋಚ್​ ಆಗಿ, ಆ ಬಳಿಕ ಸೀನಿಯರ್​ ತಂಡದ ಕೋಚ್​ ಆಗಿ ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಹೆಗ್ಗಳಿಕೆ ದ್ರಾವಿಡ್​ ಅವರದ್ದಾಗಿದೆ. ಇಂದು ಭಾರತ ತಂಡದಲ್ಲಿ ಮಿಂಚುತ್ತಿರುವ ಹಲವು ಕ್ರಿಕೆಟ್​ ಆಟಗಾರರು ದ್ರಾವಿಡ್​ ಗರಡಿಯಲ್ಲೇ ಪಳಗಿದ ಆಟಗಾರರಾಗಿದ್ದಾರೆ. ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಸಾಧನೆಯ ಹಿಂದೆ ದ್ರಾವಿಡ್​ ಅವರ ಮಾರ್ಗದರ್ಶನ ಮುಖ್ಯವಾಗಿತ್ತು. ತಂಡ ಒಂದೇ ಒಂದು ಪಂದ್ಯ ಸೋಲದೆ ಕಪ್​ ಗೆದ್ದು ಇತಿಹಾಸ ನಿರ್ಮಿಸಿತ್ತು. ಒಬ್ಬ ಜಂಟಲ್ ಮ್ಯಾನ್ ಕ್ರಿಕೆಟರ್ ಆಗಿ, ಕ್ಯಾಪ್ಟನ್ ಆಗಿ, ಕೋಚ್ ಆಗಿ ಭಾರತೀಯ ಕ್ರಿಕೆಟನ್ನು ಶ್ರೀಮಂತಗೊಳಿಸಿದ ಅವರಿಗೆ ಭಾರತರತ್ನ ಪ್ರಶಸ್ತಿ(bharatha ratna award) ನೀಡಬೇಕು ಎನ್ನುವುದು ಹಲವು ಮಾಜಿ ಕ್ರಿಕೆಟಿಗರ ಆಗ್ರಹವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
King Chopper
ದೇಶ22 mins ago

Sea King Chopper: ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನನ್ನು ರಕ್ಷಿಸಿದ ಭಾರತೀಯ ನೌಕಾಪಡೆ; ಮಾನವೀಯತೆಗೆ ಮೆಚ್ಚುಗೆ

ahoratri dharani until the guilts are punished says Opposition party Leader R Ashok
ಕರ್ನಾಟಕ24 mins ago

R Ashok: ಹಗರಣಕೋರರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ; ಆರ್. ಅಶೋಕ್‌ ಘೋಷಣೆ

Traffic Restrictions
ಬೆಂಗಳೂರು36 mins ago

Traffic Restrictions: ವೈಟ್ ಟಾಪಿಂಗ್ ಕಾಮಗಾರಿ; ನಾಳೆಯಿಂದ ರಾಜಾಜಿನಗರದ ಈ ಮಾರ್ಗದಲ್ಲಿ ಸಂಚಾರ ನಿಷೇಧ

Mohammed Shami
ಕ್ರೀಡೆ38 mins ago

Mohammed Shami: 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ; ತಡೆದು ನಿಲ್ಲಿಸಿದ್ದು ಯಾರು?

KP Poorchandra Tejaswi samagra kruthi Jagattu 14 samputagalu Lokarpane On July 29 in Bengaluru
ಬೆಂಗಳೂರು39 mins ago

Book Release: ಜು.29ರಂದು ಬೆಂಗಳೂರಿನಲ್ಲಿ 14 ಸಂಪುಟಗಳ ಪೂರ್ಣಚಂದ್ರ ತೇಜಸ್ವಿ ಕೃತಿ ಲೋಕಾರ್ಪಣೆ

Asteria Aerospace has introduced a SkyDeck platform that helps in various fields including agriculture
ದೇಶ43 mins ago

SkyDeck: ಕೃಷಿ ಮತ್ತಿತರ ಕ್ಷೇತ್ರಗಳಿಗೆ ನೆರವಾಗುವ ʼಸ್ಕೈಡೆಕ್ʼ ಪ್ಲಾಟ್‌ಫಾರ್ಮ್! ಏನಿದು?

Health Tips Kannada
ಆರೋಗ್ಯ1 hour ago

Health Tips Kannada: ನಿಂತ ಮಳೆ ನೀರಿನಿಂದ ಈ 7 ರೋಗಗಳು ಬರುತ್ತವೆ ಎನ್ನುವುದು ನಿಮಗೆ ಗೊತ್ತೆ?

Dog attack
ದೇಶ2 hours ago

Dog Attack: ವಕೀಲನ ಮೇಲೆ ಶ್ವಾನ ದಾಳಿ; ಖಾಸಗಿ ಅಂಗಕ್ಕೆ ಕಚ್ಚಿದ ಪಿಟ್‌ ಬುಲ್‌

Paris Olympics
ಕ್ರೀಡೆ2 hours ago

Paris Olympics: ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿದ್ದಾರೆ ಭಾರತದ 24 ಸೈನಿಕರು

Supreme Court
ದೇಶ2 hours ago

Supreme Court: ರೈತರು, ಸರ್ಕಾರದ ಮಧ್ಯೆ ‘ತಟಸ್ಥ ಅಂಪೈರ್’‌ ಬೇಕು; ಸುಪ್ರೀಂ ಕೋರ್ಟ್‌ ಮಹತ್ವದ ಸಲಹೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ15 hours ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ1 day ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ1 day ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ1 day ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಟ್ರೆಂಡಿಂಗ್‌