Vastu Tips: ಮಲಗುವ ದಿಕ್ಕು ಸತಿಪತಿ ನಡುವಿನ ವಿರಸಕ್ಕೆ ಕಾರಣ ಆಗಬಹುದು! - Vistara News

ಧಾರ್ಮಿಕ

Vastu Tips: ಮಲಗುವ ದಿಕ್ಕು ಸತಿಪತಿ ನಡುವಿನ ವಿರಸಕ್ಕೆ ಕಾರಣ ಆಗಬಹುದು!

ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ವಾಸ್ತು ನಿಯಮಗಳಲ್ಲಿ (Vastu Tips) ಮುಖ್ಯವಾಗಿ ಸತಿಪತಿಯ ಸಂಬಂಧ ಸುಧಾರಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ. ಕೆಲವು ವಾಸ್ತು ದೋಷಗಳು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ದೂರವನ್ನು ಉಂಟು ಮಾಡುತ್ತದೆ ಎನ್ನಲಾಗುತ್ತದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Vastu Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಸ್ತು ಮನೆಗೆ (vastu for home) ಎಷ್ಟು ಮುಖ್ಯವೋ ಅಷ್ಟೇ ನಮ್ಮ ಆಚಾರ, ವಿಚಾರದಲ್ಲಿ ಕೂಡ ಇರುವುದು ಮುಖ್ಯ. ಹಿರಿಯರು ಹೇಳುತ್ತಾರೆ ಎಂಬ ಮಾತ್ರಕ್ಕೆ ಅನುಸರಿಸುವುದಕ್ಕಿಂತ ಅದರ ಬಗ್ಗೆ ತಿಳಿದುಕೊಂಡು ಪಾಲಿಸುವುದರಲ್ಲಿ ಹೆಚ್ಚು ಅರ್ಥವಿದೆ. ನಮ್ಮ ಆಚಾರ ವಿಚಾರದಲ್ಲಿ ಕೆಲವೊಂದು ಶಿಸ್ತು ಬದ್ದ ನಿಯಮಗಳನ್ನು (Vastu Tips) ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ (positivity) ತುಂಬಿಕೊಳ್ಳುತ್ತದೆ. ಕೆಲವೊಂದು ವಾಸ್ತು ದೋಷಗಳು (Vastu Dosha) ಪರಿಹಾರವಾಗುತ್ತದೆ.

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರವು ಬಹಳ ಮುಖ್ಯವಾಗಿ ಆಚರಣೆಯಲ್ಲಿದೆ. ಯಾಕೆಂದರೆ ಇದು ಭಾರತೀಯರ ಪ್ರಾಚೀನ ವಿಜ್ಞಾನವು ಹೌದು. ಇದನ್ನು ಜೀವನದಲ್ಲಿ ಪಾಲಿಸುವುದರಿಂದ ನಮ್ಮ ಸುತ್ತಮುತ್ತಲಿನ ನಕಾರಾತ್ಮಕತೆಯನ್ನು ದೂರ ಮಾಡಬಹುದು ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸಿಕೊಳ್ಳಬಹುದು.

ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ವಾಸ್ತು ನಿಯಮಗಳಲ್ಲಿ ಮುಖ್ಯವಾಗಿ ಸತಿಪತಿಯ ಸಂಬಂಧ ಸುಧಾರಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ. ಕೆಲವು ವಾಸ್ತು ದೋಷಗಳು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ದೂರವನ್ನು ಉಂಟು ಮಾಡುತ್ತದೆ ಎನ್ನಲಾಗುತ್ತದೆ.


ಮಲಗುವ ಕೋಣೆಯ ವ್ಯವಸ್ಥೆ ಮತ್ತು ಮಲಗುವ ದಿಕ್ಕು ಕೂಡ ವೈವಾಹಿಕ ಸಂಬಂಧದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಅದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಮಲಗುವ ದಿಕ್ಕು

ಮಲಗುವ ದಿಕ್ಕು ಸತಿ ಪತಿಯ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಮನೆಯ ಮುಖ್ಯಸ್ಥನು ತನ್ನ ತಲೆಯನ್ನು ದಕ್ಷಿಣಕ್ಕೆ ಮುಖ ಮಾಡಿ ಮಲಗಬೇಕು. ಆದರೆ ಪಾದಗಳು ಉತ್ತರದ ಕಡೆಗೆ ಇರಬೇಕು. ಈ ವ್ಯವಸ್ಥೆಯು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

Vastu Tips
Vastu Tips


ಪ್ರಯೋಜನ

ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗುವುದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಇದು ಸಂಬಂಧಗಳಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಸಂಪತ್ತು ಮತ್ತು ಸಕಾರಾತ್ಮಕತೆಯ ನಿರಂತರ ಹರಿವನ್ನು ಖಾತ್ರಿಗೊಳಿಸುತ್ತದೆ.

ಇದನ್ನೂ ಓದಿ: Mahabharat Story: ಕೌರವರೊಂದಿಗೆ ಸಂಧಾನಕ್ಕೆ ಹೋದ ಶ್ರೀ ಕೃಷ್ಣ ಪಾಂಡವರಿಗಾಗಿ ಕೇಳಿದ 5 ಗ್ರಾಮಗಳು ಈಗ ಎಲ್ಲಿವೆ ಗೊತ್ತೆ?


ಆಧ್ಯಾತ್ಮಿಕ ಮತ್ತು ಲೌಕಿಕ ಆಸನ ವ್ಯವಸ್ಥೆ

ಕುಳಿತುಕೊಳ್ಳುವ ಮತ್ತು ಮಲಗುವ ಸ್ಥಾನಗಳಿಗೆ ನಿರ್ದಿಷ್ಟ ಮಾರ್ಗಸೂಚಿಗಳಿವೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಹೆಂಡತಿ ತನ್ನ ಪತಿಯ ಬಲಭಾಗದಲ್ಲಿ ಕುಳಿತುಕೊಳ್ಳಬೇಕು. ಆಹಾರ ಸೇವನೆ, ಮಲಗುವುದು ಸೇರಿದಂತೆ ದೈನಂದಿನ ಚಟುವಟಿಕೆಗಳಿಗೆ ಪತ್ನಿಯು ಎಡಭಾಗದಲ್ಲಿ ಕುಳಿತುಕೊಳ್ಳಬೇಕು.

ಪ್ರಯೋಜನ ಏನು?

ಇದರಿಂದ ಸಂಬಂಧದಲ್ಲಿ ಹೆಚ್ಚು ವಿಶ್ವಾಸ, ಸತಿಪತಿಯ ನಡುವೆ ಹೊಂದಾಣಿಕೆ ಮನೋಭಾವ, ಸಕಾರಾತ್ಮಕತೆ ವೃದ್ಧಿಯಾಗುವುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Shravan 2024: ಶ್ರಾವಣ ಸೋಮವಾರದ ವಿಶೇಷತೆಗಳೇನು? ಶಿವನಿಗೆ ಏನು ಅರ್ಪಿಸಬೇಕು? ಏನನ್ನು ಅರ್ಪಿಸಬಾರದು?

ಶ್ರಾವಣ ಮಾಸದಲ್ಲಿ (Shravan 2024) ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಶ್ರಾವಣ ಮಾಸ ಶಿವನಿಗೆ ಪ್ರಿಯವಾದ ಮಾಸ. ಹಾಗಾಗಿ ಈ ಮಾಸದಲ್ಲಿ ಶಿವನ ಆರಾಧನೆಗೆ ಹೆಚ್ಚು ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿವಾರಗಳಿಗೆ ವಿಶೇಷ ಮಹತ್ವವಿದೆ. ಶ್ರಾವಣ ಸೋಮವಾರದ ದಿನ ಶಿವನ ಆರಾಧನೆಯನ್ನು ನಿಯಮದ ಪ್ರಕಾರ ಹೇಗೆ ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

Shravan 2024
Koo


ಆಗಸ್ಟ್ 5ರಿಂದ ಶ್ರಾವಣ ಮಾಸ ಪ್ರಾರಂಭವಾಗಿದೆ. ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಶ್ರಾವಣ ಮಾಸ ಕೊನೆಗೊಳ್ಳುತ್ತದೆ. ಈ ಮಾಸ ಹಿಂದೂಗಳಿಗೆ ಬಹಳ ಪವಿತ್ರವಾದ ಮತ್ತು ವಿಶೇಷವಾದ ಮಾಸವಾಗಿದೆ. ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಶ್ರಾವಣ ಮಾಸ ಶಿವನಿಗೆ ಪ್ರಿಯವಾದ ಮಾಸ. ಹಾಗಾಗಿ ಈ ಮಾಸದಲ್ಲಿ ಶಿವನ ಆರಾಧನೆಗೆ ಹೆಚ್ಚು ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿವಾರಗಳಿಗೆ ವಿಶೇಷ ಮಹತ್ವವಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ಪ್ರತಿ ಸೋಮವಾರವನ್ನು (Shravan 2024) ಶ್ರಾವಣ ಸೋಮವಾರ ಎಂದು ಕರೆಯುತ್ತಾರೆ. ಈ ದಿನ ಶಿವನ ಆರಾಧನೆಯನ್ನು ನಿಯಮದ ಪ್ರಕಾರ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

Shravan 2024
Shravan 2024

ಶ್ರಾವಣ ಮಾಸದ ಸೋಮವಾರದಂದು ಮನೆಯನ್ನು ಸ್ವಚ್ಛಗೊಳಿಸಿ ಮಡಿಯುಟ್ಟು ಮನೆಯ ದೇವರ ಕೋಣೆಯಲ್ಲಿ ರಂಗೋಲಿಯನ್ನು ಬಿಡಿಸಿ ಅದರ ಮೇಲೆ ದೀಪವನ್ನು ಹಚ್ಚಿ ಅದರಲ್ಲಿ ಒಂದು ತಟ್ಟೆಯಲ್ಲಿ ಬಿಲ್ವಪತ್ರೆಯ ಮೇಲೆ ಶಿವಲಿಂಗವನ್ನು ಇರಿಸಿ ಮೊದಲಿಗೆ “ಓಂ ನಮಃ ಶಿವಾಯ” ಹೇಳುತ್ತ ಪಂಚಾಮೃತದಿಂದ ಅಭಿಷೇಕ ಮಾಡಬೇಕು.

Shravan 2024
Shravan 2024

ವಿಗ್ರಹ ಇಲ್ಲದವರು ಶಿವನ ಪೋಟೊಗೆ ಬಿಲ್ವಪತ್ರೆ ಅರ್ಪಿಸಿ ಪೂಜೆ ಮಾಡಬಹುದು. ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ನಿಮ್ಮ ಸಮಸ್ಯೆಗಳು ಬಹಳ ಬೇಗನೆ ನಿವಾರಣೆಯಾಗಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ. ಹಾಗೇ ಶಿವನಿಗೆ ಪ್ರಿಯವಾದ ಹೂಗಳಿಂದ ಅಲಂಕಾರ ಮಾಡಿ. ಶಿವನಿಗೆ ಹಾಲು ಹಣ್ಣನ್ನು ಅರ್ಪಿಸಿ. ಹಾಗೇ ಬಿಲ್ವಪತ್ರೆಯ ಮೇಲೆ ಅಕ್ಕಿಹಿಟ್ಟಿನ ದೀಪವನ್ನು ಇರಿಸಿ ದೀಪಾರಾಧನೆ ಮಾಡಿದರೆ ಒಳ್ಳೆಯದು. ದೂಪವನ್ನು ಹಚ್ಚಿ ಅರ್ಚನೆ ಮಾಡಿ “ಓಂ ನಮಃ ಶಿವಾಯ” ಮಂತ್ರವನ್ನು 108 ಬಾರಿ ಪಠಿಸಿದರೆ ಶುಭ ಫಲ ದೊರೆಯುತ್ತದೆ.

ಹಾಗೆಯೇ ಶ್ರಾವಣ ಮಾಸದಲ್ಲಿ ಶಿವನು ಹಾಲಾಹಲ ವಿಷವನ್ನು ಸೇವಿಸಿದ ಕಾರಣ ಆತನ ದೇಹವನ್ನು ತಂಪಾಗಿಸುವಂತಹ ಅಭಿಷೇಕಗಳನ್ನು ಮಾಡಿದರೆ ಶಿವ ಬೇಗನೆ ಒಲಿಯುತ್ತಾನೆ ಎಂಬ ಮಾತಿದೆ. ಹಾಗಾಗಿ ಮನೆಯಲ್ಲಿಯೇ ಶಿವನ ವಿಗ್ರಹಕ್ಕೆ ಅಭಿಷೇಕ ಮಾಡಿ. ಇಲ್ಲವಾದರೆ ಶ್ರಾವಣ ಸೋಮವಾರದಂದು ಶಿವನ ದೇವಾಲಯಕ್ಕೆ ಹೋಗಿ ವಿವಿಧ ರೀತಿಯ ಅಭಿಷೇಕ ಮಾಡಿಸಿದರೆ ಜೀವನದಲ್ಲಿ ಏಳಿಗೆ ಕಾಣಬಹುದು.

Shravan 2024
Shravan 2024

ಶ್ರಾವಣ ಸೋಮವಾರದಂದು ಶಿವನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು? ಯಾವುದನ್ನು ಅರ್ಪಿಸಬಾರದು?
ಶ್ರಾವಣ ಸೋಮವಾರ ಶಿವನಿಗೆ ಹಸಿಹಾಲು, ಗಂಗಾಜಲ, ಬಿಲ್ವಪತ್ರೆ, ಧಾತುರ, ಸಿಹಿತಿಂಡಿಗಳನ್ನು ಅರ್ಪಿಸಿದರೆ ಒಳ್ಳೆಯದು. ಇದರಿಂದ ಶಿವ ಪ್ರಸನ್ನನಾಗಿ ಬೇಡಿದ ವರ ನೀಡುತ್ತಾನೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ:  ಶ್ರಾವಣ ಶನಿವಾರದ ವಿಶೇಷ ಏನು? ಇದನ್ನು ಹೇಗೆ ಆಚರಿಸಿದರೆ ದೋಷ ನಿವಾರಣೆಯಾಗುತ್ತದೆ?

ಆದರೆ ಶಿವನ ಪೂಜೆಯ ವೇಳೆ ತುಳಸಿ ದಳ, ಚಂಪಾ ಅಥವಾ ಕೇದಿಗೆ ಹೂ, ಕತ್ತರಿಸಲ್ಪಟ್ಟ ಮತ್ತು ಕೀಟಗಳಿಂದ ಹಾನಿಗೊಳದಗಾದ ಬಿಲ್ವಪತ್ರೆ, ಅರಿಶಿನ, ಕುಂಕುಮ, ಎಳ್ಳು, ಮುರಿದ ಅಕ್ಕಿ, ಶಂಖನಾದ, ಕೆಂಪು ಹೂಗಳು, ಕಂಚಿನ ಪಾತ್ರೆಯಲ್ಲಿ ಹಾಲನ್ನು ಅರ್ಪಿಸಬೇಡಿ. ಇದು ಶಿವನಿಗೆ ಕೋಪ ತರಿಸುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.

Continue Reading

ಧಾರ್ಮಿಕ

Saree draping: ವರಮಹಾಲಕ್ಷ್ಮಿಗೆ ಕಲಾತ್ಮಕವಾಗಿ ಸೀರೆ ಉಡಿಸಿ

ವರಮಹಾಲಕ್ಷ್ಮಿ ದೇವಿಗೆ ಸೀರೆ ಉಡಿಸುವುದೂ ಒಂದು ಕಲೆ. ಕಲಾತ್ಮಕವಾಗಿ ಹೇಗೆಲ್ಲಾ ಸೀರೆ ಉಡಿಸಬಹುದು ಎಂಬುದನ್ನು ಸೀರೆ ಡ್ರೆಪಿಂಗ್‌ ಎಕ್ಸ್‌ಫರ್ಟ್ಸ್‌ ಒನ್‌ ಮಿನಿಟ್‌ ಉಮಾ ಅವರು ಸಿಂಪಲ್ಲಾಗಿ ತಿಳಿಸಿದ್ದಾರೆ.

VISTARANEWS.COM


on

Saree draping
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವರಮಹಾಲಕ್ಷ್ಮಿ ಹಬ್ಬದ ಸಡಗರ ಮನೆ ಮನೆಯಲ್ಲೂ ಸಂಭ್ರಮ ಮೂಡಿಸಿದೆ. ಕೆಲವು ಮನೆಗಳಲ್ಲಿ ದೇವಿಯ ವಿಗ್ರಹಕ್ಕೆ ರೆಡಿಮೇಡ್‌ ಸೀರೆ ಉಡಿಸಿ ಸಿಂಗರಿಸುತ್ತಾರೆ. ಇನ್ನು ಕೆಲವು ಮನೆಗಳಲ್ಲಿ ಸಂಪ್ರದಾಯಕ್ಕೆ ತಕ್ಕಂತೆ ಪೂಜಿಸಲ್ಪಡುವ ಬಿಂದಿಗೆಗೆ ಹೊಸದಾಗಿ ತಂದ ರೇಷ್ಮೆ ಸೀರೆಯನ್ನು ಉಡಿಸಿ, ವರಮಹಾಲಕ್ಷ್ಮಿಯನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಳ್ಳುತ್ತಾರೆ. ಈ ಹಬ್ಬದಂದು ನಿಮ್ಮ ಮನೆಯ ವರಮಹಾಲಕ್ಷ್ಮಿಗೆ ಹೇಗೆಲ್ಲಾ ಕಲಾತ್ಮಕವಾಗಿ ಸೀರೆ ಉಡಿಸಿ ಸಿಂಗರಿಸಬಹುದು ಎಂಬುದನ್ನು ಸ್ಯಾರಿ ಡ್ರೆಪಿಂಗ್‌ ಎಕ್ಸ್‌ಪರ್ಟ್ ವನ್‌ ಮಿನಟ್‌ ಉಮಾ ಅವರು ತಿಳಿಸಿಕೊಟ್ಟಿದ್ದಾರೆ.

Saree draping

ದೇವಿಗೆ ಸೀರೆ ಉಡಿಸುವ ವಿಧಾನ

ಮೊದಲಿಗೆ ಒಂದು ದೊಡ್ಡ ಬಿಂದಿಗೆ, ಅದರ ಮೇಲೊಂದು ಚಿಕ್ಕ ಕಳಶಕ್ಕೆ ಅಕ್ಕಿ ತುಂಬಿಟ್ಟುಕೊಳ್ಳಿ. ಮೇಲಿನ ಕಳಶಕ್ಕೆ ನಿಮ್ಮ ಪದ್ಧತಿಯಂತೆ ಸಿರಿಧಾನ್ಯ ಹಾಕಿ. ನೀರು ಸಹ ಬಳಸಬಹುದು. ಸೀರೆ ಹಾಳಾಗುವ ಕಾರಣ ಅಕ್ಕಿ ಬಳಸುವುದು ಸೂಕ್ತ. ಒಂದರ ಮೇಲೊಂದರಂತೆ ಬಿಂದಿಗೆಯನ್ನಿಟ್ಟು ಮೇಲಿನ ಕಳಶಕ್ಕೆ ವೀಳ್ಯೆದೆಲೆ ಇಡಿ. ಇದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿ ಇರಿಸಿ. ತೆಂಗಿನ ಕಾಯಿಯ ಮುಂಭಾಗಕ್ಕೆ ದೇವಿಯ ಮುಖವಾಡ ಹಾಕಿ. ಬಿಂದಿಗೆಯ ಕೆಳಗೆ ಬಾಳೆ ದಿಂಡು ಅಥವಾ ಒಂದು ತಟ್ಟೆಯಲ್ಲಿ ಅಕ್ಕಿ ತುಂಬಿ ಸಮತಟ್ಟಾಗಿ ಮಾಡಿ. ಅರಿಶಿನ ಕುಂಕುಮದಿಂದ ನಕ್ಷತ್ರ ರೂಪದ ಮಂಡಲವನ್ನು ರಚಿಸಿ. ಆ ಮಂಡಲದ ಮಧ್ಯಭಾಗಕ್ಕೆ ಸರಿಯಾಗಿ ಕಳಶವನ್ನು ಅಲುಗಾಡದಂತೆ ಕೂರಿಸಿ. ಮೇಲಿನ ಕಳಶಕ್ಕೆ ಅಡ್ಡದಾಗಿ ಒಂದು ಬಿದಿರು ಅಥವಾ ಯಾವುದೇ ಅಲ್ಲಾಡದಂತಹ ಕಡ್ಡಿಯನ್ನು ಬಿಗಿಯಾಗಿ ಕಟ್ಟಿ. ಇತ್ತ ಪ್ರತ್ಯೇಕ ಬ್ಲೌಸ್‌ ಪೀಸನ್ನು ಬಿಂದಿಗೆಗೆ ಕಟ್ಟಿ ಪಿನ್‌ ಮಾಡಿ. ದೇವಿಯ ಕೈ ಕಾಲುಗಳ ಪ್ರತಿರೂಪವಿದ್ದಲ್ಲಿ ಅದನ್ನು ಬಿಂದಿಗೆ ಕಟ್ಟಿ, ಕೂರಿಸಿ. ಬಲಭಾಗದ ಕೈ ಮೇಲ್ಮುಖವಾಗಿರಲಿ. ಎಡಗೈ ಕೆಳಮುಖವಾಗಿರಲಿ. ಇನ್ನು ಸೀರೆಯ ಒಂದು ಫಾಲ್‌ ಸೈಡಿನಿಂದ ನೆರಿಗೆ ಮಾಡಿಕೊಳ್ಳಿ. ಸೆರಗಿಗೆ ಬೇಕಾದಷ್ಟು ಬಿಟ್ಟು ನೆರಿಗೆ ಕಟ್ಟಿಡಿ. ಕೆಳಗೆ ಮೇಲೆ ಎರಡಕ್ಕೂ ಕಟ್ಟಿ. ಕಟ್ಟಲು ಆದಷ್ಟೂ ಉಲ್ಲನ್‌ ದಾರ ಬಳಸುವುದರಿಂದ ಸೀರೆ ಹಾಳಾಗುವುದಿಲ್ಲ.

ಇದನ್ನೂ ಓದಿ: Varamahalakshmi Festival 2024: ಹಬ್ಬಕ್ಕೆ ಸೀರೆಯನ್ನು ದಾವಣಿಯಂತೆ ಉಡುವುದು ಹೇಗೆ? ಇಲ್ಲಿದೆ ಸಿಂಪಲ್‌ ಐಡಿಯಾ

ನಿಮಗೆ ಎಷ್ಟು ಎತ್ತರಕ್ಕೆ ಬೇಕೋ ಅಷ್ಟು ಎತ್ತರಕ್ಕೆ ಫೋಲ್ಡ್‌ ಮಾಡಿ ನೆರಿಗೆ ಎರಡು ಸ್ಟೆಪ್‌ ಕೂರುವಂತೆ ನೋಡಿಕೊಂಡು ಬಿಂದಿಗೆಗೆ ಕಟ್ಟಿ. ನಂತರ ಕಟ್ಟಿರುವ ನೆರಿಗೆಯನ್ನು ನೀಟಾಗಿ ಹರಡಿ. ಬಿದಿರು ಅಥವಾ ಕಡ್ಡಿಯ ಅಳತೆಗೆ ಸೆರಗು ಹಾಕಿ ಎರಡ್ಮೂರು ಕಡೆ ಬಿಚ್ಚಿ ಹೋಗದಂತೆ ಪಿನ್‌ ಮಾಡಿ. ಇತ್ತ ಬಿಂದಿಗೆಯ ಎಡಭಾಗದಿಂದ ಒಂದು ಸುತ್ತು ಸೆರಗನ್ನು ತೆಗೆದುಕೊಳ್ಳಿ. ಇದರಿಂದ ಸೀರೆ ಉಡಿಸುವುದು ಸುಲಭವಾಗುತ್ತದೆ. ಸೆರಗನ್ನು ಮುಂದೆಯಾದರೂ ಹರಡಬಹುದು ಅಥವಾ ಹಿಂದೆಯಾದರೂ ಪಿನ್‌ ಮಾಡಬಹುದು. ನಿಮಗೆ ಬೇಕಾದ ಶೈಲಿಯಲ್ಲಿ ಸೆರಗು ಹಾಕಿ ಡಿಸೈನ್‌ ಮಾಡಿ. ನಂತರ ಸೊಂಟದ ಪಟ್ಟಿ ಹಾಕಿ. ಹಂತಹಂತವಾಗಿ ಒಡವೆ ಹೂಗಳನ್ನು ಹಾಕಿ, ಅಲಂಕರಿಸಿ. ನೋಡಲು ಆಕರ್ಷಕವಾಗಿ ಕಾಣುವುದು. ಅಲಂಕಾರಕ್ಕೆ ಫಾಲ್ಸ್‌ ಅಥವಾ ಜಿಗ್‌ಜಾಗ್ಸ್‌ ಮಾಡಿರದ ಸೀರೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

Continue Reading

ಧಾರ್ಮಿಕ

Mahabharat Story: ಕೌರವರೊಂದಿಗೆ ಸಂಧಾನಕ್ಕೆ ಹೋದ ಶ್ರೀ ಕೃಷ್ಣ ಪಾಂಡವರಿಗಾಗಿ ಕೇಳಿದ 5 ಗ್ರಾಮಗಳು ಈಗ ಎಲ್ಲಿವೆ ಗೊತ್ತೆ?

ಮಹಾಕಾವ್ಯವಾದ ಮಹಾಭಾರತದಲ್ಲಿ (Mahabharat Story) ಶ್ರೀಕೃಷ್ಣ ಕೌರವರ ಬಳಿ ಸಂಧಾನಕ್ಕೆ ಹೋಗುವ ಸನ್ನಿವೇಶ ಅತ್ಯಂತ ಮಹತ್ವಪೂರ್ಣವಾಗಿದೆ. ಇದು ಮುಂದೆ ಮಹಾಯುದ್ಧಕ್ಕೆ ಸ್ಪಷ್ಟ ರೂಪದಲ್ಲಿ ಪ್ರೇರಣೆ ನೀಡಿತ್ತು. ಕೌರವರ ಬಳಿ ಸಂಧಾನಕ್ಕೆ ಹೋದ ಶ್ರೀ ಕೃಷ್ಣನು ಪಾಂಡವರ ಪರವಾಗಿ ಐದು ಹಳ್ಳಿಗಳನ್ನು ನೀಡುವಂತೆ ವಿನಂತಿ ಮಾಡಿದ. ಆದರೆ ದುರ್ಯೋಧನ ಇದನ್ನು ತಿರಸ್ಕರಿಸುತ್ತಾನೆ. ಈ ಐದು ಹಳ್ಳಿಗಳು ಯಾವುದು, ಈಗ ಅವುಗಳು ಎಲ್ಲಿವೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Mahabharat Story
Koo

ಮಹಾಭಾರತ (Mahabharat Story) ಯುದ್ಧವಾಗುವುದನ್ನು ತಡೆಯಲು ಕೌರವರ ಬಳಿಗೆ ಪಾಂಡವರ (kauravas and pandavas) ಪರವಾಗಿ ಸಂಧಾನಕ್ಕೆ ಹೋಗುವ ಶ್ರೀಕೃಷ್ಣ (Srikrishna) ಐದು ಗ್ರಾಮಗಳನ್ನು (five villages) ಪಾಂಡವರಿಗೆ ನೀಡುವಂತೆ ವಿನಂತಿ ಮಾಡುತ್ತಾನೆ. ಪಾಂಡವರು ಮತ್ತು ಕೌರವರ ನಡುವಿನ ವಿನಾಶಕಾರಿ ಯುದ್ಧವನ್ನು ತಡೆಯುವ ಗುರಿಯನ್ನು ಹೊಂದಿರುವ ಈ ವಿನಂತಿಯು ಮಹಾಭಾರತ ಕಥೆಯಲ್ಲಿ ನಿರ್ಣಾಯಕ ಕ್ಷಣವಾಗಿತ್ತು. ಈ ವಿನಂತಿಯ ವಿವರವಾದ ನೋಟ ಮತ್ತು ಐದು ಗ್ರಾಮಗಳು ಇಂದು ಎಲ್ಲಿವೆ ಎಂಬ ಮಾಹಿತಿ ಇಲ್ಲಿದೆ.

ಪಾಂಡವರು ಮತ್ತು ಕೌರವರ ನಡುವೆ ಉದ್ವಿಗ್ನತೆ ಹೆಚ್ಚಾದಾಗ ಶ್ರೀ ಕೃಷ್ಣನು ಶಾಂತಿದೂತನಾಗಿ ದುರ್ಯೋಧನನೊಂದಿಗೆ ಮಾತುಕತೆ ನಡೆಸಲು ಹಸ್ತಿನಾಪುರಕ್ಕೆ ತೆರಳುತ್ತಾನೆ. ಪಾಂಡವರಿಗೆ ಬದುಕುಳಿಯಲು ಮತ್ತು ಶಾಂತಿಯನ್ನು ಕಾಪಾಡಲು ಐದು ಗ್ರಾಮಗಳನ್ನು ನೀಡಬೇಕು ಎನ್ನುವ ಪ್ರಸ್ತಾಪವನ್ನು ಇಡುತ್ತಾನೆ. ಕೃಷ್ಣನ ಈ ಪ್ರಸ್ತಾಪವು ಪೂರ್ಣ ಪ್ರಮಾಣದ ಯುದ್ಧವನ್ನು ತಪ್ಪಿಸುವ ಪ್ರಯತ್ನವಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ದುರ್ಯೋಧನ ಹಗೆತನದಿಂದ ಈ ಪ್ರಸ್ತಾಪವನ್ನು ತಿರಸ್ಕರಿಸಿದ. ಪಾಂಡವರಿಗೆ ಒಂದು ಸೂಜಿಯಷ್ಟು ಭೂಮಿಯನ್ನೂ ಕೊಡುವುದಿಲ್ಲ ಎಂದು ಘೋಷಿಸಿದ. ರಾಜಿ ಮಾಡಿಕೊಳ್ಳುವುದಕ್ಕಿಂತ ಯುದ್ಧದ ಮೂಲಕ ವಿವಾದವನ್ನು ಬಗೆಹರಿಸಲು ಆದ್ಯತೆ ನೀಡಿದ. ಈ ಮೊಂಡುತನದ ನಿರಾಕರಣೆಯು ಕುರುಕ್ಷೇತ್ರದ ಮಹಾಕಾವ್ಯದ ಯುದ್ಧಕ್ಕೆ ವೇದಿಕೆಯಾಯಿತು. ಇದು ಅಪಾರ ನಷ್ಟ ಮತ್ತು ವಿನಾಶಕ್ಕೆ ಕಾರಣವಾಯಿತು.

ಕೃಷ್ಣ ಕೇಳಿರುವ ಐದು ಗ್ರಾಮಗಳು


ಇಂದ್ರಪ್ರಸ್ಥ

ಇಂದ್ರಪ್ರಸ್ಥವನ್ನು ಮಹಾಭಾರತದಲ್ಲಿ ಶ್ರೀ ಪಾಟ್ ಎಂದು ಕರೆಯಲಾಗಿದೆ. ಇದು ಪಾಂಡವರು ತಮ್ಮ ಮೂಲ ಸಾಮ್ರಾಜ್ಯವಾದ ಹಸ್ತಿನಾಪುರವನ್ನು ನಾಶಪಡಿಸಿದ ಅನಂತರ ನಿರ್ಮಿಸಿದ ರಾಜ್ಯದ ರಾಜಧಾನಿಯಾಗಿದೆ. ಇದು ಪ್ರಾಚೀನ ಭಾರತದಲ್ಲಿ ಮಹತ್ವದ ಕೇಂದ್ರವಾಗಿತ್ತು.

ಇಂದ್ರಪ್ರಸ್ಥವು ಈಗ ದೆಹಲಿಯಲ್ಲಿದೆ. ಹಲವಾರು ಐತಿಹಾಸಿಕ ಸ್ಥಳಗಳನ್ನು ಒಳಗೊಂಡಿರುವ ದೆಹಲಿ ನಗರವನ್ನು ಪ್ರಾಚೀನ ಇಂದ್ರಪ್ರಸ್ಥದ ಆಧುನಿಕ ಸಾಕಾರವೆಂದು ಪರಿಗಣಿಸಲಾಗಿದೆ.


ಬಾಗ್ಪತ್

ಪ್ರಾಚೀನ ಕಾಲದಲ್ಲಿ ಬಾಗ್ಪತ್ ಅನ್ನು ವ್ಯಾಘ್ರಪ್ರಸ್ಥ ಎಂದು ಕರೆಯಲಾಗುತ್ತಿತ್ತು. ಅಂದರೆ ‘ಹುಲಿಗಳ ಸ್ಥಳ’. ಇದು ಐತಿಹಾಸಿಕ ದಾಖಲೆಗಳಲ್ಲಿ ದಟ್ಟವಾದ ಹುಲಿ ಸಂಖ್ಯೆಗೆ ಹೆಸರುವಾಸಿಯಾಗಿದೆ.

ಬಾಗ್ಪತ್ ಭಾರತದ ಉತ್ತರ ಪ್ರದೇಶದ ಜಿಲ್ಲೆಯಾಗಿದೆ. ಇದು 50,000ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪ್ರಮುಖ ಪ್ರದೇಶವಾಗಿದೆ ಮತ್ತು ಮಹಾಭಾರತ ಯುಗಕ್ಕೆ ಸಂಬಂಧಿಸಿದ ಐತಿಹಾಸಿಕ ಮಹತ್ವವನ್ನು ಹೊಂದಿದೆ.


ಪಾಣಿಪತ್

ಮಹಾಭಾರತದಲ್ಲಿ ಪಾಂಡುಪ್ರಸ್ಥ ಎಂದು ಕರೆಯಲ್ಪಡುವ ಪಾಣಿಪತ್ ಮಹಾಕಾವ್ಯದಲ್ಲಿ ಪ್ರಮುಖ ಸ್ಥಳವಾಗಿತ್ತು. ಇದು ಭಾರತೀಯ ಇತಿಹಾಸದಲ್ಲಿ ಮೂರು ಪ್ರಮುಖ ಯುದ್ಧಗಳನ್ನು ಒಳಗೊಂಡಂತೆ ಮಹತ್ವದ ಐತಿಹಾಸಿಕ ಘಟನೆಗಳೊಂದಿಗೆ ಸಂಬಂಧಿಸಿದೆ.

ಪಾಣಿಪತ್ ಭಾರತದ ಹರಿಯಾಣದಲ್ಲಿದೆ. ದೆಹಲಿಯಿಂದ ಸರಿಸುಮಾರು 90 ಕಿಲೋ ಮೀಟರ್ ದೂರದಲ್ಲಿದೆ. ಇದು ಐತಿಹಾಸಿಕ ಯುದ್ಧಗಳಿಗೆ ಹೆಸರುವಾಸಿಯಾಗಿದೆ ಮತ್ತು ಆಧುನಿಕ ಕಾಲದಲ್ಲಿ ಪ್ರಮುಖ ನಗರವಾಗಿ ಮುಂದುವರೆದಿದೆ.


ತಿಲ್‌‌ಪತ್

ತಿಲ್‌‌ಪತ್ ಅನ್ನು ಹಿಂದೆ ತಿಲಪ್ರಸ್ಥ ಎಂದು ಕರೆಯಲಾಗುತ್ತಿತ್ತು. ಇದು ಯಮುನಾ ನದಿಯ ದಡದ ಸಮೀಪವಿರುವ ಒಂದು ವಸಾಹತುವಾಗಿತ್ತು. ಮಹಾಭಾರತದಲ್ಲಿ ವಿವರಿಸಿದ ಪ್ರಾಚೀನ ಭೂಗೋಳದಲ್ಲಿ ಇದು ಒಂದು ಪಾತ್ರವನ್ನು ವಹಿಸಿದೆ.

ತಿಲ್ಪತ್ ಈಗ ಹರಿಯಾಣದ ಫರಿದಾಬಾದ್ ಜಿಲ್ಲೆಯ ಒಂದು ಪಟ್ಟಣವಾಗಿದೆ. ಸುಮಾರು 40,000 ಜನಸಂಖ್ಯೆ ಇರುವ ಇದು ಗಮನಾರ್ಹ ಪ್ರದೇಶವಾಗಿದೆ.


ಸೋನಿಪತ್

ಸೋನಿಪತ್ ಅನ್ನು ಸ್ವರ್ಣಪ್ರಸ್ಥ ಎಂದು ಕರೆಯಲಾಗುತ್ತಿತ್ತು. ಇದನ್ನು ಚಿನ್ನದ ಸ್ಥಳ ಎಂದು ಕರೆಯಲಾಗುತ್ತದೆ. ಇದು ಕೃಷ್ಣ ಪಾಂಡವರಿಗೆ ವಿನಂತಿಸಿದ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.

ಸೋನಿಪತ್ ಭಾರತದ ಹರಿಯಾಣದಲ್ಲಿರುವ ಒಂದು ಜಿಲ್ಲೆ. ಇದು ತನ್ನ ಐತಿಹಾಸಿಕ ಹೆಸರನ್ನು ಮಾರ್ಪಡಿಸದೆ ಹಾಗೆ ಉಳಿದುಕೊಂಡಿದೆ ಮತ್ತು ರಾಜ್ಯದ ಪ್ರಮುಖ ಜಿಲ್ಲೆಯಾಗಿದೆ.

ಇದನ್ನೂ ಓದಿ: Varamahalakshmi Festival 2024: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಏನು? ಹೆಚ್ಚಿನ ಫಲ ಪಡೆಯಲು ಪೂಜೆ ಹೇಗೆ ಮಾಡಬೇಕು?

ಈ ಐದು ಗ್ರಾಮಗಳಿಗೆ ಮಹಾಭಾರತದಲ್ಲಿ ಮಹತ್ವದ ಸ್ಥಾನವಿದೆ. ದುರ್ಯೋಧನನ ನಿರಾಕರಣೆಯು ಕುರುಕ್ಷೇತ್ರದ ದುರಂತ ಯುದ್ಧಕ್ಕೆ ಕಾರಣವಾದರೆ, ಕೃಷ್ಣನ ಪ್ರಸ್ತಾಪದಲ್ಲಿ ಉಲ್ಲೇಖಿಸಲಾದ ಐತಿಹಾಸಿಕ ಸ್ಥಳಗಳು ಅಸ್ತಿತ್ವದಲ್ಲಿವೆ ಮತ್ತು ಇಂದಿಗೂ ಪ್ರಾಮುಖ್ಯತೆಯನ್ನು ಹೊಂದಿವೆ. ದೆಹಲಿಯಿಂದ ಸೋನಿಪತ್ ವರೆಗೆ ಈ ಪ್ರದೇಶಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಪಡೆದ ಕೇಂದ್ರವಾಗಿ ಉಳಿದಿವೆ.

Continue Reading

ಪ್ರಮುಖ ಸುದ್ದಿ

Varamahalakshmi Festival 2024 : ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಏನು? ಹೆಚ್ಚಿನ ಫಲ ಪಡೆಯಲು ಪೂಜೆ ಹೇಗೆ ಮಾಡಬೇಕು?

VISTARANEWS.COM


on

Varamahalakshmi Festival 2024
Koo

ವಿವಾಹಿತ ಮಹಿಳೆಯರು ವಿಶೇಷವಾಗಿ ಮಾಡುವ ವರಮಹಾಲಕ್ಷ್ಮಿ ಹಬ್ಬವನ್ನು (Varamahalakshmi Festival 2024) ಆಗಸ್ಟ್ 16ರಂದು ಶುಕ್ರವಾರ ಆಚರಿಸಲಾಗುತ್ತಿದೆ. ವರಲಕ್ಷ್ಮಿ ವ್ರತವು (varalakshmi vrata) ಮಹಿಳೆಯರೆಲ್ಲ ಸೇರಿ ಭಕ್ತಿ ಮತ್ತು ಸಂತೋಷದಿಂದ ಆಚರಿಸುತ್ತಾರೆ. ಈ ದಿನ ಮಹಿಳೆಯರು ಉಪವಾಸ (fasting) ವ್ರತ ಮಾಡಿ ಲಕ್ಷ್ಮಿ ದೇವಿಯನ್ನು ಪೂಜಿಸಿ ತಮ್ಮ ಪತಿ, ಮಕ್ಕಳು ಮತ್ತು ಇಡೀ ಕುಟುಂಬಕ್ಕೆ ಆಶೀರ್ವಾದವನ್ನು ಕೋರುತ್ತಾರೆ.

ಪಾರ್ವತಿ ದೇವಿಯು ಶಿವನಲ್ಲಿ ಒಮ್ಮೆ ಭೂಮಿಯಲ್ಲಿ ಮಹಿಳೆಯರ ಕಷ್ಟಗಳನ್ನು ದೂರ ಮಾಡಬಹುದಾದ ವ್ರತ ಯಾವುದು ಎಂಬುದಾಗಿ ಪ್ರಶ್ನಿಸುತ್ತಾಳೆ. ಅದಕ್ಕೆ ಶಿವನು ಒಂದು ಕಥೆ ಹೇಳುತ್ತಾನೆ. ಅದರ ಪ್ರಕಾರ ಕುಂಡಿನಿ ಎಂಬ ಪಟ್ಟಣದಲ್ಲಿ ಚಾರುಮತಿ ಎಂಬ ಬ್ರಾಹ್ಮಣ ಪತಿವ್ರತಾ ಸ್ತ್ರೀ ನಿರ್ಮಲ ಮನಸ್ಸಿನವಳಾಗಿದ್ದಳು. ಒಂದು ದಿನ ಲಕ್ಷ್ಮಿ ದೇವಿಯು ಆಕೆಯ ಕನಸಿನಲ್ಲಿ ಬಂದು ವರಲಕ್ಷ್ಮಿ ವ್ರತ ಮಾಡಿದರೆ ನಿನ್ನ ಇಷ್ಟಾರ್ಥವನ್ನು ನೆರವೇರಿಸುವುದಾಗಿ ಹೇಳುತ್ತಾಳೆ. ಬಳಿಕ ಆಕೆ ನೆರೆಹೊರೆಯ ಮಹಿಳೆಯರನ್ನು ಸೇರಿಸಿ ವರಮಹಾಲಕ್ಷ್ಮಿ ವ್ರತವನ್ನು ಮಾಡಿ, ಲಕ್ಷ್ಮಿ ದೇವಿಗೆ ಪೂಜೆಯನ್ನು ಸಲ್ಲಿಸುತ್ತಾಳೆ. ಬಳಿಕ ಅವಳ ಕಷ್ಟಗಳಲ್ಲೇ ಒಂದೊಂದಾಗಿ ಪರಿಹಾರವಾಗುತ್ತದೆ. ಆ ಬಳಿಕ ವರಮಹಾಲಕ್ಷ್ಮಿ ವ್ರತವು ಮಹಿಳೆಯರು ಮಾಡಬಹುದಾದ ಶ್ರೇಷ್ಠ ವ್ರತವಾಯಿತು ಎಂದು ಶಿವ ಪಾರ್ವತಿಗೆ ಹೇಳಿದನು ಎಂಬುದು ಈ ವ್ರತದ ಐತಿಹ್ಯ.

ವರಲಕ್ಷ್ಮಿ ವ್ರತವನ್ನು ಮಾಡುವ ಸಿದ್ಧತೆಯಲ್ಲಿ ಇರುವವರು ಈ ಬಾರಿ ಪೂಜೆಯ ಮನೆ, ದೇವಿಯ ಅಲಂಕಾರದಲ್ಲಿ ವಿಶೇಷತೆಯನ್ನು ತೋರಬಹುದು. ಈ ಮೂಲಕ ಹಬ್ಬವನ್ನು ಅರ್ಥಪೂರ್ಣಗೊಳಿಸಬಹುದು. ಅಲಂಕಾರದಲ್ಲಿ ಕುಟುಂಬದ ಸಂಪ್ರದಾಯ ಮತ್ತು ಶೈಲಿಯನ್ನು ಪ್ರತಿಬಿಂಬಿಸುವ ಅಂಶಗಳನ್ನು ಸೇರಿಸಲು ಮರೆಯದಿರಿ. ಕರಕುಶಲ ವಸ್ತುಗಳು, ಗೃಹೋಪಯೋಗಿ ವಸ್ತುಗಳನ್ನು ಅಲಂಕಾರಕ್ಕೆ ಬಳಸಿ.

ವರಮಹಾಲಕ್ಷ್ಮಿ ಪೂಜೆಯ ಅಲಂಕಾರಕ್ಕೆ ಬೇಕಾಗುವ ಸಾಮಗ್ರಿಗಳ ವಿವರ ಇಂತಿದೆ.


1. ಕುಂಕುಮ

ಹಣೆಯ ಮೇಲಿನ ಪವಿತ್ರ ಗುರುತಾಗಿ ಮತ್ತು ಪೂಜಾ ವಿಧಿಗಳಲ್ಲಿ ಕುಂಕುಮವನ್ನು ಬಳಸಿ. ಪೂಜಾ ಜಾಗಕ್ಕೆ ಸಾಂಪ್ರದಾಯಿಕ ಕೆಂಪು ಬಣ್ಣದ ಸ್ಪರ್ಶವನ್ನು ನೀಡಿ.

2. ಅರಶಿನ

ಹಬ್ಬದ ಆಚರಣೆ ಮತ್ತು ಅಲಂಕಾರಗಳಲ್ಲಿ ಅರಶಿನ ಅತ್ಯಗತ್ಯ. ಇದನ್ನು ಮಂಗಳಕರ ಮತ್ತು ಶುದ್ಧೀಕರಿಸುವ ಗುಣಗಳಿಗಾಗಿ ಬಳಸಲಾಗುತ್ತದೆ.

3. ಕಲಶ

ನೀರು, ತೆಂಗಿನಕಾಯಿ ಮತ್ತು ಮಾವಿನ ಎಲೆಗಳಿಂದ ತುಂಬಿದ ಕಲಶವನ್ನು ಅಲಂಕರಿಸಿ. ಇದು ಸಮೃದ್ಧಿಯನ್ನು ಸಂಕೇತಿಸುತ್ತದೆ ಮತ್ತು ಪೂಜಾದಲ್ಲಿ ಇದು ಕೇಂದ್ರ ಭಾಗವಾಗಿದೆ.

4. ಮಾವಿನ ಎಲೆಗಳು

ತಾಜಾ ಮಾವಿನ ಎಲೆಗಳನ್ನು ಪ್ರವೇಶದ್ವಾರದಲ್ಲಿ ಮತ್ತು ಪೂಜಾ ಪ್ರದೇಶದ ಸುತ್ತಲೂ ನೇತುಹಾಕಿ. ಅವರು ಶುದ್ಧತೆಯನ್ನು ಸೂಚಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ.

5. ಬಾಳೆಹಣ್ಣು

ಪೂಜೆಯಲ್ಲಿ ಬಾಳೆ ಹಣ್ಣು ಅತ್ಯಂತ ಪ್ರಮುಖ ವಸ್ತು. ಇದನ್ನು ದೇವರಿಗೆ ನೈವೇದ್ಯವಾಗಿ ಸಮರ್ಪಿಸಲು, ಉಪವಾಸ ಮಾಡುತ್ತಿರುವ ಬಂದ ಅತಿಥಿಗಳಿಗೆ ನೀಡಲು ಬಳಸಬಹುದು.

Varamahalakshmi Festival 2024
Varamahalakshmi Festival 2024


6. ಲಕ್ಷ್ಮಿ ಮುಖ ಅಲಂಕಾರ

ಲಕ್ಷ್ಮಿ ದೇವಿಯ ಉಪಸ್ಥಿತಿ ಮತ್ತು ಆಶೀರ್ವಾದವನ್ನು ಸಂಕೇತಿಸಲು ಪೂಜಾ ಪ್ರದೇಶದ ಮಧ್ಯದಲ್ಲಿ ಲಕ್ಷ್ಮಿ ದೇವಿಯನ್ನು ಸುಂದರವಾಗಿ ಅಲಂಕರಿಸಿದ ಮುಖವನ್ನು ಇರಿಸಿ.

7. ಹೂವುಗಳು

ಚೆಂಡು ಹೂವು, ಸೇವಂತಿಗೆ, ಗುಲಾಬಿ ಮತ್ತು ಮಲ್ಲಿಗೆಯಂತಹ ಹೂವುಗಳನ್ನು ಪೂಜಾ ಸ್ಥಳವನ್ನು ಅಲಂಕರಿಸಲು ಬಳಸಬಹುದು. ಇದು ಪರಿಮಳಯುಕ್ತ ಮತ್ತು ವರ್ಣರಂಜಿತ ವಾತಾವರಣವನ್ನು ಸೃಷ್ಟಿಸುತ್ತದೆ.

8. ಹಣ್ಣುಗಳು

ಪೂಜಾ ಸ್ಥಳದ ಸುತ್ತಲೂ ತಾಜಾ ಹಣ್ಣುಗಳನ್ನು ನೈವೇದ್ಯವಾಗಿ ಜೋಡಿಸಿ. ಇದರಿಂದ ಪೂಜೆ ಸ್ಥಳದಲ್ಲಿ ನೈಸರ್ಗಿಕ ಸೌಂದರ್ಯದ ಅಲಂಕಾರ ಮಾಡಿದಂತಾಗುತ್ತದೆ. ಇದು ಸಮೃದ್ಧಿಯನ್ನು ಸೂಚಿಸುತ್ತದೆ.

9. ಚಂದನ

ಪವಿತ್ರ ಗುಣಲಕ್ಷಣ ಇರುವ ಶ್ರೀಗಂಧವನ್ನು ಪೇಸ್ಟ್ ಮಾಡಿ ಪೂಜಾ ಸ್ಥಳದಲ್ಲಿ ಇರಿಸಿ. ಇದನ್ನು ಪೂಜೆಯಲ್ಲಿ ಭಾಗವಹಿಸುವವರ ಹಣೆಗೆ ಹಚ್ಚಿ.

10. ಡ್ರೈ ಫ್ರೂಟ್ಸ್ ಮತ್ತು ಗಿಫ್ಟ್ ಹ್ಯಾಂಪರ್ಸ್

ಬಂದ ಅತಿಥಿಗಳಿಗೆ ನೀಡಲು ಒಣ ಹಣ್ಣು, ಉಡುಗೊರೆ ಹ್ಯಾಂಪರ್‌ಗಳನ್ನು ಮೊದಲೇ ಸಿದ್ದಪಡಿಸಿ ಅಲಂಕಾರದ ರೂಪದಲ್ಲಿ ಜೋಡಿಸಿ.


11. ಲಕ್ಷ್ಮಿ ದೇವಿಯ ವಿಗ್ರಹ

ಪೂಜಾ ಪ್ರದೇಶದ ಮಧ್ಯದಲ್ಲಿ ಸುಂದರವಾಗಿ ಅಲಂಕರಿಸಿದ ಲಕ್ಷ್ಮಿ ದೇವಿಯ ವಿಗ್ರಹವನ್ನು ಇರಿಸಿ. ಸುತ್ತಲೂ ಹೂವು ಮತ್ತು ಅಗತ್ಯ ವಸ್ತುಗಳನ್ನು ಜೋಡಿಸಿ.


12. ಧೂಪದ್ರವ್ಯದ ತುಂಡು

ಗಾಳಿಯನ್ನು ಶುದ್ಧೀಕರಿಸಲು ಮತ್ತು ಪೂಜಾ ಸ್ಥಳದ ಆಧ್ಯಾತ್ಮಿಕ ವಾತಾವರಣವನ್ನು ಹೆಚ್ಚಿಸಲು ಅಲಂಕಾರಿಕ ಸ್ಟ್ಯಾಂಡ್‌ನಲ್ಲಿ ಧೂಪದ್ರವ್ಯವನ್ನು ಬೆಳಗಿಸಿ.


ಇದನ್ನೂ ಓದಿ: Varamahalakshmi Festival 2024 : ವರಮಹಾಲಕ್ಷ್ಮಿ ಹಬ್ಬದ ದಿನ ಸುಲಭವಾಗಿ ಮಾಡಬಹುದಾದ ರುಚಿಕರ ಖಾದ್ಯಗಳಿವು; ವಿಡಿಯೊಗಳಿವೆ

13. ಲಕ್ಷ್ಮೀ ಪೂಜಾ ತಾಳಿ

ಕುಂಕುಮ, ಅರಶಿನ, ಅಕ್ಕಿ, ವೀಳ್ಯದೆಲೆ ಮತ್ತು ಅಡಿಕೆಯಂತಹ ಎಲ್ಲಾ ಅಗತ್ಯ ವಸ್ತುಗಳೊಂದಿಗೆ ಅಲಂಕರಿಸಿದ ಲಕ್ಷ್ಮಿ ಪೂಜಾ ತಾಳಿಯನ್ನು ಸಿದ್ಧಪಡಿಸಿ.

14. ಹೊಸ ರವಿಕೆ ಕಣ

ಪೂಜೆಯ ಭಾಗವಾಗಿ ಹೊಸ ರವಿಕೆ ತುಂಡುಗಳನ್ನು ದೇವರಿಗೆ ಅರ್ಪಿಸಿ. ಇದು ಗೌರವ ಮತ್ತು ಕೃತಜ್ಞತೆಯನ್ನು ಸಂಕೇತಿಸುವ ಸಾಂಪ್ರದಾಯಿಕ ಕೊಡುಗೆಯಾಗಿದೆ. ಇದನ್ನು ಬಂದಿರುವ ಮಹಿಳೆಯರಿಗೆ ನೀಡಿ.

Continue Reading
Advertisement
Viral Video
ವೈರಲ್ ನ್ಯೂಸ್3 mins ago

Viral Video: ಪಬ್ಲಿಕ್‌ನಲ್ಲೇ ಲಂಚದ ಹಣ ಹಂಚಿಕೊಂಡ ಟ್ರಾಫಿಕ್‌ ಪೊಲೀಸರು; ಖಾಕಿಯ ಲಂಚಾವತಾರ ಸಿಸಿಟಿವಿಯಲ್ಲಿ ಸೆರೆ

Viral Video
ವೈರಲ್ ನ್ಯೂಸ್28 mins ago

Viral Video: ಅಬ್ಬಾ.. ಸಾವು ಹೀಗೂ ಬರುತ್ತಾ? ಸ್ನೇಹಿತನೊಂದಿಗೆ ಮಾತಾಡ್ತಾ ನಿಂತಿದ್ದವನ ಮೇಲೆ ದೊಪ್ಪೆಂದು ಬಿದ್ದ ಎಸಿ-ವಿಡಿಯೋ ಇದೆ

Rakesh pal
ಪ್ರಮುಖ ಸುದ್ದಿ1 hour ago

Rakesh Pal: ಭಾರತೀಯ ನೌಕಾಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ಹೃದಯಾಘಾತದಿಂದ ವಿಧಿವಶ

Viral Video
ದೇಶ1 hour ago

Viral News: ಒಂಟಿಯಾಗಿದ್ದಾಗ ಮೈ ಮುಟ್ಟೋಕೆ ಬಂದೋನ ಖಾಸಗಿ ಅಂಗಕ್ಕೆ ಸಟ್ಟುಗದಲ್ಲೇ ಚುಚ್ಚಿದ್ಳು!

Health Tips
ಆರೋಗ್ಯ2 hours ago

Health Tips: ಮಾನಸಿಕ ಒತ್ತಡ ನಿವಾರಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸುಲಭೋಪಾಯ!

Madurai Tour
Latest2 hours ago

Madurai Tour: ಮಧುರೈಗೆ ಹೋದಾಗ ನೋಡಲೇಬೇಕಾದ 6 ರಮಣೀಯ ಸ್ಥಳಗಳು

Vastu Tips
ಧಾರ್ಮಿಕ2 hours ago

Vastu Tips: ಮಲಗುವ ದಿಕ್ಕು ಸತಿಪತಿ ನಡುವಿನ ವಿರಸಕ್ಕೆ ಕಾರಣ ಆಗಬಹುದು!

Kundapura Kannada Habba 2024
ಕರ್ನಾಟಕ2 hours ago

Kundapura Kannada Habba 2024: ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಸದ್ಯದಲ್ಲೇ ಸಮಿತಿ ರಚನೆ: ಜಯಪ್ರಕಾಶ ಹೆಗ್ಡೆ

Physical Abuse
ಕರ್ನಾಟಕ2 hours ago

Physical Abuse: ಕಿಡ್ನ್ಯಾಪ್ ಮಾಡಿ ಮಹಿಳೆ ಮೇಲೆ ಅತ್ಯಾಚಾರ, ಮಗನ ಮೇಲೂ ಹಲ್ಲೆ; 9 ಆರೋಪಿಗಳ ಅರೆಸ್ಟ್‌

Champai Soren
ದೇಶ3 hours ago

Champai Soren: ನನ್ನ ಎದುರು ಮೂರು ಆಯ್ಕೆಗಳಿವೆ; ಬಿಜೆಪಿ ಸೇರ್ಪಡೆ ಬಗ್ಗೆ ಚಂಪೈ ಸೊರೆನ್‌ ಹೇಳಿದ್ದೇನು? ಇಲ್ಲಿದೆ ಡಿಟೇಲ್ಸ್‌

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌