Vastu Tips: ಮನೆ ಆವರಣದ ತಪ್ಪಾದ ದಿಕ್ಕಿನಲ್ಲಿ ಗಿಡ ಬೆಳೆಸಿದರೆ ಕೆಟ್ಟ ಪರಿಣಾಮ! - Vistara News

ಧಾರ್ಮಿಕ

Vastu Tips: ಮನೆ ಆವರಣದ ತಪ್ಪಾದ ದಿಕ್ಕಿನಲ್ಲಿ ಗಿಡ ಬೆಳೆಸಿದರೆ ಕೆಟ್ಟ ಪರಿಣಾಮ!

ವಾಸ್ತು ಶಾಸ್ತ್ರದಲ್ಲಿ (Vastu Tips) ನಮ್ಮ ಬದುಕಿನೊಂದಿಗೆ ನಂಟು ಹೊಂದಿರುವ ಪ್ರತಿಯೊಂದು ವಸ್ತುವಿನ ಬಗ್ಗೆಯೂ ಹೇಳಲಾಗುತ್ತದೆ. ಮನೆಯ ಸುತ್ತಮುತ್ತ ನಾವು ಇಷ್ಟ ಪಟ್ಟು ಬೆಳೆಸುವ ಗಿಡ, ಮರಗಳು ವಾಸ್ತು ಪ್ರಕಾರ ಇಲ್ಲದೇ ಇದ್ದರೆ ನಮ್ಮ ಬದುಕಿನಲ್ಲಿ ಹಲವಾರು ತೊಂದರೆಗಳನ್ನು ಉಂಟು ಮಾಡಬಹುದು. ಹಾಗಾಗಿ ಎಲ್ಲರಿಗೂ ವಾಸ್ತು ಪ್ರಕಾರ ಯಾವ ಗಿಡ ಎಲ್ಲಿ, ಹೇಗೆ ನೆಡಬೇಕು ಎನ್ನುವ ಮಾಹಿತಿ ತಿಳಿದಿರಲಿ.

VISTARANEWS.COM


on

Vastu Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮನೆಯ (home) ಒಳಾಂಗಣ, ಹೊರಾಂಗಣದಲ್ಲಿ ನಾವು ನಾವು ನೆಡುವ ಮರಗಳಿಗೂ (tree) ವಾಸ್ತು ಶಾಸ್ತ್ರ (Vastu Tips) ಅನ್ವಯವಾಗುತ್ತದೆ. ಮರ ಮತ್ತು ಸಸ್ಯಗಳನ್ನು ಬೆಳೆಸಲು ನಿರ್ದಿಷ್ಟ ನಿರ್ದೇಶನವನ್ನೂ ನೀಡಲಾಗಿದೆ. ತಪ್ಪಾದ ದಿಕ್ಕಿನಲ್ಲಿ ಬೆಳೆಸುವ ಮರ, ಗಿಡಗಳು ಮನೆಗೆ ಕೆಟ್ಟದನ್ನು ಉಂಟು ಮಾಡಬಹುದು.

ಮರ ಗಿಡಗಳು ಕೂಡ ನಮ್ಮ ಬದುಕಿನ ಮೇಲೆ ಸಕಾರಾತ್ಮಕ, ನಕಾರಾತ್ಮಕ (Positive, negative) ಪರಿಣಾಮವನ್ನು ಉಂಟು ಮಾಡುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿ ಕೆಲವು ಸಸ್ಯಗಳನ್ನು ನಿರ್ಧಿಷ್ಟ ದಿಕ್ಕಿನಲ್ಲೇ ಇಡಬೇಕು. ಯಾಕೆಂದರೆ ಇದು ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಅಂತಹ ಸಸ್ಯಗಳು ಯಾವುದು, ಅವುಗಳನ್ನು ಎಲ್ಲಿ ಇಡಬೇಕು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.


ಬಾಳೆ ಗಿಡ

ಜ್ಯೋತಿಷ್ಯ ಶಾಸ್ತ್ರದಲ್ಲಿ ಬಾಳೆ ಗಿಡಕ್ಕೆ ಹೆಚ್ಚಿನ ಮಹತ್ವವಿದೆ. ಈ ಮರಕ್ಕೆ ಗುರುವಾರ ಪೂಜೆ ಸಲ್ಲಿಸುವುದರಿಂದ ವಿಷ್ಣುವಿನ ಆಶೀರ್ವಾದ ದೊರೆಯುತ್ತದೆ ಎನ್ನುವ ನಂಬಿಕೆ ಇದೆ. ಈ ಸಸ್ಯವನ್ನು ದಕ್ಷಿಣಾಭಿಮುಖವಾಗಿ ನೆಡಬಾರದು. ಬಾಳೆ ಮರಗಳನ್ನು ಪಶ್ಚಿಮ ಅಥವಾ ಈಶಾನ್ಯಕ್ಕೆ ಬೆಳೆಸುವುದು ಸೂಕ್ತವಲ್ಲ. ಬಾಳೆ ಗಿಡವನ್ನು ಈ ರೀತಿ ಹಾಕುವುದು ಅತ್ಯಂತ ದುರಾದೃಷ್ಟಕರ. ಬಾಳೆಹಣ್ಣನ್ನು ದಕ್ಷಿಣಾಭಿಮುಖವಾಗಿ ನೆಟ್ಟರೆ ಕೆಟ್ಟದ್ದು ಸಂಭವಿಸುತ್ತದೆ. ಬಾಳೆ ಗಿಡಗಳನ್ನು ನೆಡುವಾಗ ಯಾವಾಗಲೂ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಬೇಕು.


ತುಳಸಿ ಗಿಡ

ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಗಳು ಬಹಳ ಮಂಗಳಕರವಾಗಿವೆ. ತುಳಸಿಯನ್ನು ಲಕ್ಷ್ಮಿ ದೇವಿಯ ತವರು ಎಂದು ಹೇಳಲಾಗುತ್ತದೆ. ತುಳಸಿಯ ದೈನಂದಿನ ಪೂಜೆಯು ವಿಶಿಷ್ಟ ಪ್ರಯೋಜನಗಳನ್ನು ಹೊಂದಿದೆ. ತುಳಸಿ ಗಿಡಗಳನ್ನು ದಕ್ಷಿಣಾಭಿಮುಖವಾಗಿ ಇಡುವುದು ಎಂದಿಗೂ ಒಳ್ಳೆಯದಲ್ಲ.

ಈ ರೀತಿ ತುಳಸಿಯನ್ನು ನೆಡುವುದರಿಂದ ಮನೆಯೊಳಗೆ ಹೆಚ್ಚಿನ ವಾದಗಳು ಮತ್ತು ಹಣಕಾಸಿನ ಸಮಸ್ಯೆಗಳು ಉಂಟಾಗುತ್ತದೆ. ತುಳಸಿಯನ್ನು ಈಶಾನ್ಯ ಮೂಲೆಯಲ್ಲಿ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡುವುದು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಉತ್ತರದಲ್ಲಿ ನೆಟ್ಟಾಗ ತುಳಸಿ ಅತ್ಯಂತ ಅದೃಷ್ಟ ಎಂದು ಹೇಳಲಾಗುತ್ತದೆ. ಪೂರ್ವದಲ್ಲಿ ನೆಟ್ಟಾಗ, ಸೂರ್ಯನ ಶಕ್ತಿಯನ್ನು ಮನೆಗೆ ತರಲಾಗುತ್ತದೆ.

ಇದನ್ನೂ ಓದಿ: Vastu Tips: ಗಂಗಾ ಜಲ ಮನೆಯಲ್ಲಿಟ್ಟರೆ ಸಾಲದು; ಅದನ್ನು ಎಲ್ಲಿ ಇಡಬೇಕು, ಹೇಗೆ ಇಡಬೇಕು?


ಮನಿ ಪ್ಲಾಂಟ್

ಮನಿ ಪ್ಲಾಂಟ್ ಅನ್ನು ಅದೃಷ್ಟದ ಗಿಡವೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಮನೆಗಳಲ್ಲಿ ಮನಿ ಪ್ಲಾಂಟ್‌ಗಳು ಇರುತ್ತವೆ. ಮನಿ ಪ್ಲಾಂಟ್ಸ್ ಹೊಂದಿರುವ ಮನೆಯಲ್ಲಿ ಲಕ್ಷ್ಮಿ ವಾಸ ಮಾಡುತ್ತಾಳೆ ಎಂದೇ ನಂಬಲಾಗುತ್ತದೆ. ಮನಿ ಪ್ಲಾಂಟ್ ಹೊಂದಿರುವ ಮನೆ ಸಂತೋಷದ ಸ್ಥಳವಾಗಿರುತ್ತದೆ.

ಮನಿ ಪ್ಲಾಂಟ್ಸ್ ಯಾವಾಗಲೂ ದಕ್ಷಿಣಕ್ಕೆ ಮುಖ ಮಾಡಿ ನೆಡಬೇಕು ಎಂದು ವಾಸ್ತು ಹೇಳುತ್ತದೆ. ಇಲ್ಲದಿದ್ದರೆ ಸಹಾಯ ಮಾಡುವ ಬದಲು ಹಿನ್ನಡೆಯಾಗಬಹುದು. ಪರಿಣಾಮವಾಗಿ ಕುಟುಂಬದ ಸದಸ್ಯರು ಆರ್ಥಿಕ ತೊಂದರೆಗಳು ಉಂಟಾಗುತ್ತದೆ. ಮನಿ ಪ್ಲಾಂಟ್‌ಗಳನ್ನು ಯಾವಾಗಲೂ ಇಡಬೇಕಾದ ದಿಕ್ಕು ಆಗ್ನೇಯ. ಈ ದಿಕ್ಕಿನಲ್ಲಿ ಮನಿ ಪ್ಲಾಂಟ್‌ಗಳನ್ನು ನೆಟ್ಟಾಗ ಮನೆಯಲ್ಲಿ ಸಮೃದ್ಧಿ ಮತ್ತು ಸಂತೋಷ ಹೆಚ್ಚಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ನವ ದಂಪತಿಯ ಕೋಣೆ ಹೀಗಿದ್ದರೆ ದಾಂಪತ್ಯ ಸುಖಕರವಾಗಿರುತ್ತದೆ!

ನವ ವಿವಾಹಿತ ದಂಪತಿಯ ನಡುವೆ ಪ್ರೀತಿ, ಸಾಮರಸ್ಯ, ನಂಬಿಕೆ ಮತ್ತು ಪರಸ್ಪರ ಗೌರವದ ಭಾವನೆ ಬೆಳೆಯಲು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಬೆಳೆಸಲು ನವ ವಿವಾಹಿತರ ಕೋಣೆಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದು ಬಹು ಮುಖ್ಯ. ಇದಕ್ಕಾಗಿ ವಾಸ್ತು ಶಾಸ್ತ್ರವು (Vastu Tips) ಹಲವು ಮಾರ್ಗಸೂಚಿಗಳನ್ನು ನೀಡಿದೆ. ನವ ದಂಪತಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

Vastu Tips
Koo

ಪ್ರತಿಯೊಬ್ಬರ ಜೀವನದಲ್ಲೂ ಮದುವೆಗೆ (marriage) ವಿಶೇಷ ಸ್ಥಾನವಿದೆ. ಬಾಳ ಸಂಗಾತಿಯಾಗಿ (life partner) ಬರುವವರನ್ನು ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಗೌರವದಿಂದ ಕಾಣಲು ಮದುವೆಯ ಶಾಸ್ತ್ರ, ನಿಯಮಗಳು ಕಾರಣವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಮದುವೆಯ ಬಳಿಕ ಸಂಬಂಧ ಹೆಚ್ಚು ಸುಖಕರ ಅಥವಾ ದುಃಖಕರವಾಗಿರಲು ಮನೆಯ (home) ವಾಸ್ತು (Vastu Tips) ಕೂಡ ಕಾರಣವಾಗುತ್ತದೆ. ವಿವಾಹದ ಬಳಿಕ ಮನೆಯಲ್ಲಿ ಪ್ರೀತಿ, ಸಾಮರಸ್ಯ, ನಂಬಿಕೆ ಮತ್ತು ಪರಸ್ಪರ ಗೌರವದ ಭಾವನೆ ಬೆಳೆಯಲು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಬೆಳೆಸಲು ವಾಸ್ತು ಶಾಸ್ತ್ರ ವು ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ನವವಿವಾಹಿತರ ಕೋಣೆ ಸರಿಯಾದ ದಿಕ್ಕಿನಲ್ಲಿರುವುದು ಕೂಡ ಮುಖ್ಯವಾಗಿದೆ. ಅಲ್ಲಿರುವ ಪ್ರತಿಯೊಂದು ವಸ್ತುವೂ ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನವ ವಿವಾಹಿತರ ಕೋಣೆ ಎಲ್ಲಿ, ಹೇಗಿರಬೇಕು ಗೊತ್ತೇ?

Two Towel Swans and Rose Petals on Bed in Light Hotel Room

ಯಾವ ದಿಕ್ಕಿನಲ್ಲಿ ಇರಬಾರದು?

ನವ ವಿವಾಹಿತರ ಕೋಣೆಯು ಉತ್ತರ, ದಕ್ಷಿಣ, ಈಶಾನ್ಯ ಮತ್ತು ಆಗ್ನೇಯ ದಿಕ್ಕಿನ ಕಡೆಗೆ ದೃಷ್ಟಿಕೋನವನ್ನು ಹೊಂದಿರಬಾರದು. ಹೀಗಿದ್ದರೆ ವೈವಾಹಿಕ ಜೀವನದಲ್ಲಿ ಕ್ಷುಲ್ಲಕ ವಿಷಯಗಳಲ್ಲಿಯೂ ಸಹ ಸಂಘರ್ಷ ಮತ್ತು ವಿವಾದಗಳು ಉಂಟಾಗಬಹುದು ಎಂದು ನಂಬಲಾಗಿದೆ. ಆದ್ದರಿಂದ ವೈವಾಹಿಕ ಸಂಬಂಧದಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಉತ್ತೇಜಿಸಲು ಈ ದಿಕ್ಕಿನಲ್ಲಿರುವ ಕೋಣೆಯ ದಿಕ್ಕನ್ನು ಬದಲಾಯಿಸುವುದು ಉತ್ತಮ.

ಯಾವ ದಿಕ್ಕಿನಲ್ಲಿ ಇರಬೇಕು?

ಮದುವೆಯ ಅನಂತರ ವ್ಯಕ್ತಿಗಳು ತಮ್ಮ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಬಯಸುವುದು, ತಮ್ಮ ಸಂಗಾತಿಯೊಂದಿಗೆ ಪ್ರವಾಸಗಳನ್ನು ಆನಂದಿಸುವುದು ಮತ್ತು ಹೊಸ ಮತ್ತು ಸಕಾರಾತ್ಮಕ ಅನುಭವಗಳನ್ನು ಹುಡುಕುವುದು ಸಹಜ. ವಾಸ್ತು ಶಾಸ್ತ್ರದ ಪ್ರಕಾರ ನವವಿವಾಹಿತರು ಮಲಗುವ ಕೋಣೆ ವಾಯುವ್ಯ ದಿಕ್ಕಿನಲ್ಲಿರಬೇಕು. ಈ ದೃಷ್ಟಿಕೋನವು ವೈವಾಹಿಕ ಜೀವನದಲ್ಲಿ ಪ್ರಣಯವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ವಿವಿಧ ಜೀವನ ಸವಾಲುಗಳನ್ನು ಪರಿಹರಿಸುವಲ್ಲಿ ಅವರಿಗೆ ಇದು ಸಹಾಯ ಮಾಡುತ್ತದೆ.

wedding night room

ಬಣ್ಣಗಳು ಯಾವುದಿರಬೇಕು?

ಕೋಣೆಯ ಬಣ್ಣಗಳು ನಮ್ಮ ಭಾವನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಸಂಬಂಧದಲ್ಲಿ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಹೆಚ್ಚಿಸಲು ಮಲಗುವ ಕೋಣೆಯಲ್ಲಿ ಹಿತವಾದ ಮತ್ತು ರೋಮ್ಯಾಂಟಿಕ್ ಬಣ್ಣಗಳನ್ನು ಬಳಸಿ. ಗುಲಾಬಿ, ಕೆಂಪು ಮತ್ತು ನೇರಳೆ ಛಾಯೆಗಳನ್ನು ಪ್ರೀತಿ ಮತ್ತು ಉತ್ಸಾಹವನ್ನು ಪ್ರಚೋದಿಸಲು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಮೃದುವಾದ ನೀಲಿ ಬಣ್ಣವು ಶಾಂತ ಮತ್ತು ಪ್ರಶಾಂತ ವಾತಾವರಣವನ್ನು ಸೃಷ್ಟಿಸುತ್ತದೆ. ನವ ದಂಪತಿಯ ನಡುವೆ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತದೆ.

ಅಲಂಕಾರಿಕ ವಸ್ತುಗಳು

ಕೆಲವು ಅಲಂಕಾರಿಕ ವಸ್ತು, ಗುರುತುಗಳು ಸಂಬಂಧದಲ್ಲಿ ಧನಾತ್ಮಕ ಶಕ್ತಿ ಮತ್ತು ಪ್ರೀತಿಯನ್ನು ವರ್ಧಿಸುತ್ತದೆ. ಪ್ರೀತಿ ಮತ್ತು ಒಗ್ಗಟ್ಟಿನ ಸಂಕೇತವಾಗಿ ಮಲಗುವ ಕೋಣೆಯ ನೈಋತ್ಯ ಮೂಲೆಯಲ್ಲಿ ಒಂದು ಜೋಡಿ ಲವ್ ಬರ್ಡ್ಸ್ ಅಥವಾ ಮ್ಯಾಂಡರಿನ್ ಬಾತುಕೋಳಿಗಳನ್ನು ಇರಿಸಿ. ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಹೂಬಿಡುವ ಗಿಡಗಳು ಅಥವಾ ಪ್ರಶಾಂತ ಭೂದೃಶ್ಯಗಳ ವರ್ಣಚಿತ್ರಗಳ ಕಲಾಕೃತಿಗಳಿಂದ ಕೋಣೆಯನ್ನು ಅಲಂಕರಿಸಿ.

ಇದನ್ನೂ ಓದಿ: Dina Bhavishya : ಗಾಳಿಯಲ್ಲಿ ಗೋಪುರ ಕಟ್ಟಿಕೊಂಡು ಈ ರಾಶಿಯವರು ವ್ಯರ್ಥ ಪ್ರಯತ್ನ ಮಾಡಬೇಡಿ

ಎಲೆಕ್ಟ್ರಾನಿಕ್ ವಸ್ತುಗಳನ್ನು ಇರಿಸಬೇಡಿ

ಕೋಣೆಯ ಅಸ್ತವ್ಯಸ್ತತೆಯು ಸಕಾರಾತ್ಮಕ ಶಕ್ತಿಯ ಹರಿವನ್ನು ಅಡ್ಡಿಪಡಿಸುತ್ತದೆ. ಅನಗತ್ಯ ಒತ್ತಡ ಮತ್ತು ಉದ್ವೇಗವನ್ನು ಉಂಟುಮಾಡುತ್ತದೆ. ಮಲಗುವ ಕೋಣೆ ಮತ್ತು ಮನೆ ಸ್ವಚ್ಛವಾಗಿದ್ದರೆ ಮನೆಯವರು ಹೆಚ್ಚು ಸಂಘಟಿತರಾಗಿದ್ದಾರೆ ಮತ್ತು ಗೊಂದಲದಿಂದ ಮುಕ್ತವಾಗಿದ್ದಾರೆ ಎಂಬುದು ಅರ್ಥ. ಟಿವಿ, ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಯಾಕೆಂದರೆ ಇವು ಶಾಂತಿಯುತ ವಾತಾವರಣಕ್ಕೆ ಅಡ್ಡಿಯಾಗಬಹುದು. ಅಚ್ಚುಕಟ್ಟಾದ ಮತ್ತು ಪ್ರಶಾಂತ ವಾತಾವರಣವು ಶಾಂತ ಮನಸ್ಸನ್ನು ಬೆಳೆಸುತ್ತದೆ. ಇದು ಆರೋಗ್ಯಕರ ಸಂಬಂಧಕ್ಕೆ ಅವಶ್ಯಕವಾಗಿದೆ.

Continue Reading

ಧಾರ್ಮಿಕ

Vastu Tips: ಬಾತ್ ರೂಮ್‌ನಲ್ಲಿ ಈ ವಸ್ತುಗಳಿದ್ದರೆ ಕುಟುಂಬಕ್ಕೆ ಭಾರಿ ಸಂಕಷ್ಟ!

ಮನೆಯೊಳಗೆ ಅದರಲ್ಲೂ ವಿಶೇಷವಾಗಿ ಸ್ನಾನಗೃಹಗಳಂತಹ ಸ್ವಚ್ಛತೆ ಮತ್ತು ನೈರ್ಮಲ್ಯವು ಅತಿಮುಖ್ಯವಾಗಿರುವಂತಹ ಪ್ರದೇಶಗಳಲ್ಲಿ ಇರಿಸುವ ವಸ್ತುಗಳ ವಿಚಾರದಲ್ಲಿ ಗಮನ ಕೊಡುವುದು ಅತೀ ಅಗತ್ಯ ಎನ್ನುತ್ತದೆ ವಾಸ್ತು ಶಾಸ್ತ್ರ (Vastu Tips). ಸ್ನಾನಗೃಹದಲ್ಲಿ ಕೆಲವೊಂದು ವಸ್ತುಗಳನ್ನು ಇಡಲೇಬಾರದು. ಅವು ಯಾವುದು ಗೊತ್ತೇ? ಈ ಲೇಖನ ಓದಿ.

VISTARANEWS.COM


on

By

Vastu Tips
Koo

ಮನೆಯಲ್ಲಿರುವ (home) ಪ್ರತಿಯೊಂದು ವಸ್ತುವೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಮನೆಯಲ್ಲಿ ನಾವು ಯಾವ ವಸ್ತುವನ್ನು ಇಡಬೇಕು, ಯಾವುದನ್ನು ಇಡಬಾರದು ಎಂಬ ಸರಿಯಾದ ತಿಳಿವಳಿಕೆ ನಮಗಿರಲೇಬೇಕು. ಇಲ್ಲವಾದರೆ ನಕಾರಾತ್ಮಕತೆ (Negativity) ಮನೆಯೊಳಗೆ ವ್ಯಾಪಿಸಿ ನಮ್ಮ ಜೀವನದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ.

ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಮನೆಯಲ್ಲಿ ಇರಿಸುವ ಅದರಲ್ಲೂ ಮುಖ್ಯವಾಗಿ ಸ್ನಾನಗೃಹದಲ್ಲಿನ (Bathroom) ವಸ್ತುಗಳು ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತವೆ . ಮನೆಯ ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತವೆ ಮಾತ್ರವಲ್ಲ ಹಣಕಾಸಿನ ತೊಂದರೆಗಳನ್ನು ತರುತ್ತದೆ ಎನ್ನಲಾಗುತ್ತದೆ. ಅಂತಹ ವಸ್ತುಗಳ ಕುರಿತು ಇಲ್ಲಿದೆ ಮಾಹಿತಿ.


ಮುರಿದ ಕನ್ನಡಿಗಳು

ವಾಸ್ತು ಶಾಸ್ತ್ರದ ಪ್ರಕಾರ ಸ್ನಾನಗೃಹಗಳಲ್ಲಿ ಒಡೆದ ಕನ್ನಡಿಗಳನ್ನು ಇಡುವುದನ್ನು ಸರಿಯಲ್ಲ. ಇದು ಆರ್ಥಿಕ ಅಸ್ಥಿರತೆಯನ್ನು ಉಂಟುಮಾಡಬಹುದು. ಇದನ್ನು ನಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಒಡೆದ ಕನ್ನಡಿಗಳು ಬಡತನಕ್ಕೆ ಕಾರಣವಾಗಬಹುದು ಎಂದು ಜ್ಯೋತಿಷ್ಯವು ಸೂಚಿಸುತ್ತದೆ. ಆದ್ದರಿಂದ, ಬಾತ್ ರೂಮ್ ನಲ್ಲಿ ಮುರಿದ ಕನ್ನಡಿ ಇದ್ದರೆ ಅದನ್ನು ತಕ್ಷಣವೇ ಹೊಸದರೊಂದಿಗೆ ಬದಲಾಯಿಸಿಕೊಳ್ಳಿ.

ಮುರಿದ ಚಪ್ಪಲಿಗಳು

ಬಾತ್ ರೂಮ್‌ನಲ್ಲಿ ಮುರಿದ ಚಪ್ಪಲಿಗಳನ್ನು ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮುರಿದ ಚಪ್ಪಲಿಗಳು ಗ್ರಹಗಳ ಜೋಡಣೆಗೆ ಸಂಬಂಧಿಸಿದ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಇದು ಮನೆಯಲ್ಲಿ ದುರದೃಷ್ಟವನ್ನು ಉಂಟು ಮಾಡುತ್ತದೆ.


ಖಾಲಿ ಬಕೆಟ್‌ಗಳು

ವಾಸ್ತು ಶಾಸ್ತ್ರದ ಪ್ರಕಾರ ಸ್ನಾನಗೃಹದಲ್ಲಿ ಖಾಲಿ ಬಕೆಟ್‌ಗಳನ್ನು ಇಡುವುದು ಮನೆಗೆ ದುರದೃಷ್ಟವನ್ನು ಆಹ್ವಾನಿಸುತ್ತದೆ ಎಂದು ಹೇಳಲಾಗುತ್ತದೆ. ಖಾಲಿ ಬಕೆಟ್‌ಗಳು ಬಡತನ ಮತ್ತು ಆರ್ಥಿಕ ನಷ್ಟವನ್ನು ಸಂಕೇತಿಸುತ್ತವೆ. ಖಾಲಿ ಬಕೆಟ್ ಸಂಪತ್ತಿನ ಇಳಿಕೆಗೆ ಕಾರಣವಾಗಬಹುದು. ಆದ್ದರಿಂದ, ಯಾವಾಗಲೂ ಬಾತ್ ರೂಮ್ ನಲ್ಲಿ ತುಂಬಿದ ಬಕೆಟ್ ಗಳನ್ನು ಇರಿಸಿಕೊಳ್ಳಲು ಅಥವಾ ಅವುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಲಹೆ ನೀಡಲಾಗುತ್ತದೆ.

ಇದನ್ನೂ ಓದಿ: Last Rites: ಅಂತ್ಯಕ್ರಿಯೆ ಮುಗಿಸಿ ಬರುವಾಗ ಸ್ಮಶಾನದತ್ತ ಹಿಂತಿರುಗಿ ನೋಡಬಾರದು ಅನ್ನೋದು ಏಕೆ ಗೊತ್ತಾ?

ಒದ್ದೆಯಾದ ಬಟ್ಟೆಗಳು

ಬಾತ್ ರೂಮ್ ನಲ್ಲಿ ಬಟ್ಟೆ ಒದ್ದೆಯಾದರೆ ತಕ್ಷಣ ತೆಗೆದು ಮನೆಯ ಹೊರಗೆ ಒಣಗಿಸಬೇಕು. ಬಾತ್ ರೂಮ್ ನಲ್ಲಿ ಒದ್ದೆಯಾದ ಬಟ್ಟೆಗಳನ್ನು ಬಿಡುವುದು ಸೂರ್ಯನ ಶಕ್ತಿ ಮನೆಯೊಳಗೇ ಪ್ರವೇಶಿಸದಂತೆ ತಡೆಯುತ್ತದೆ. ಇದು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ, ಸಂಭಾವ್ಯವಾಗಿ ನಕಾರಾತ್ಮಕತೆ ಮತ್ತು ವಿವಾದಗಳನ್ನು ಹೆಚ್ಚಿಸುತ್ತವೆ.

ಗಿಡಗಳು

ವಾಸ್ತುಶಾಸ್ತ್ರದ ಪ್ರಕಾರ ಸ್ನಾನಗೃಹಗಳಲ್ಲಿ ಗಿಡಗಳನ್ನು ಇಡಬಾರದು. ಸ್ನಾನಗೃಹಗಳಲ್ಲಿ ಇರಿಸಲಾದ ಸಸ್ಯಗಳು ಬೇಗನೆ ಕೆಡುತ್ತವೆ ಮತ್ತು ಮನೆಯಲ್ಲಿ ವಾಸ್ತು ದೋಷಗಳನ್ನು ಹೆಚ್ಚಿಸುತ್ತವೆ. ಸಸ್ಯಗಳಿಗೆ ಸೂರ್ಯನ ಬೆಳಕು ಮತ್ತು ತಾಜಾ ಗಾಳಿಯ ಅಗತ್ಯವಿರುತ್ತದೆ. ಇದು ಯಾವಾಗಲೂ ಸ್ನಾನಗೃಹಗಳಲ್ಲಿ ಲಭ್ಯವಿರುವುದಿಲ್ಲ. ಆದ್ದರಿಂದ, ಸ್ನಾನಗೃಹಗಳಲ್ಲಿ ಸಸ್ಯಗಳನ್ನು ಇರಿಸಬಾರದು.

Continue Reading

ಶಿವಮೊಗ್ಗ

Shivamogga News: ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಲೇಬೇಕು! ಅಮರೇಶ್ವರ ಶ್ರೀ

Shivamogga News: ಸೊರಬ ತಾಲೂಕಿನ ಜಡೆ ಸಮೀಪದ ಬಂಕಸಾಣದ ಗ್ರಾಮದ ವರದಾ ಉತ್ತರವಾಹಿನಿ ಕ್ಷೇತ್ರದ ಸಮಾಧಾನದಲ್ಲಿ ಮಾಸಿಕ ಶಿವಾನುಭವ ಹಾಗೂ ಅರಿವಿನೆಡೆಗೆ ಕಾರ್ಯಕ್ರಮ ನಡೆಯಿತು.

VISTARANEWS.COM


on

Maasika Shivanubhava programme at soraba
Koo

ಸೊರಬ: ಮನುಷ್ಯ ಜನ್ಮ ಬಹು ಅಮೂಲ್ಯವಾದದು. ಈ ಜನ್ಮವನ್ನು ಪಡೆಯುವುದಕ್ಕಾಗಿ ಹಿಂದಿನ ಜನ್ಮದಲ್ಲಿ ಬಹಳ ಕಷ್ಟ ಪಟ್ಟಿದ್ದೇವೆ. ಲಕ್ಷಾಂತರ ಜನ್ಮಗಳಲ್ಲಿ ಕ್ರಿಮಿ, ಕೀಟಾದಿಗಳಾಗಿ, ಜಂತು ಜೀವವಾಗಿ ಜನಿಸಿ ಆ ಜನ್ಮದ ಸುಖ ದುಃಖವನ್ನು ಅನುಭವಿಸಿ, ಆ ಜನ್ಮಗಳಲ್ಲಿ ಮಾಡಿದ ಪುಣ್ಯದ ಫಲವಾಗಿ ಈಗ ಮನುಷ್ಯ ಜನ್ಮ ಸಿಕ್ಕಿದೆ. ಆದ್ದರಿಂದ ಇಂತಹ ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಜಡೆ ಬಂಕಸಾಣ ಸಮಾಧಾನ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ (Shivamogga News) ಹೇಳಿದರು.

ತಾಲೂಕಿನ ಜಡೆ ಸಮೀಪದ ಬಂಕಸಾಣದ ಗ್ರಾಮದ ವರದಾ ಉತ್ತರವಾಹಿನಿ ಕ್ಷೇತ್ರದ ಸಮಾಧಾನದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ ಹಾಗೂ ಅರಿವಿನೆಡೆಗೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.

ನಿಸರ್ಗ ಬಹು ಅಪರೂಪವಾದದು. ಬಚ್ಚಲ ರೊಚ್ಚಿಯ ನೀರು ಹೋಗುವಲ್ಲಿ ಒಂದು ತೆಂಗಿನ ಸಸಿ ನೆಟ್ಟರೆ ಅದು ರುಚಿ ರುಚಿಯಾದ ಎಳೆನೀರನ್ನು ಕೊಡುತ್ತದೆ. ಸ್ವಾದಿಷ್ಟಕರವಾದ ತರಕಾರಿಗಳನ್ನು ನೀಡುತ್ತದೆ. ಇದು ನಿಸರ್ಗದ ನಿಯಮ. ಆದರೆ ಮನುಷ್ಯ ಈ ನಿಸರ್ಗವನ್ನು ಬಳಸಿ, ಅದನ್ನು ವಿರೂಪಗೋಳಿಸುತ್ತಾನೆ. ನಿಸರ್ಗವನ್ನು ಬಳಸಲು ಮನುಷ್ಯನಿಗೆ ಹಕ್ಕಿದೆಯೇ ಹೊರತು ವಿರೂಪಗೊಳಿಸಲು ಅಲ್ಲ. ಎಲ್ಲರೂ ಈ ಬದುಕನ್ನು ಅಂದಗೊಳಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ: Gold Rate Today: ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಪ್ರಿಯದರ್ಶಿನಿ ಜಂಬೂರುಮಠ ಮಾತನಾಡಿ, ಮನುಷ್ಯನಿಗೆ ಸಂಬಂಧಗಳು ಮುಖ್ಯ. ಸಂಬಂಧಗಳನ್ನು ಉಳಿಸಿಕೊಳ್ಳಬೇಕು. ಮನೆಯಲ್ಲಿ ಮಕ್ಕಳಿಗೆ ಸಂಬಂಧಗಳ ಬಗ್ಗೆ ತಿಳಿ ಹೇಳಬೇಕು ಎಂದರು.

ಸಾಗರದ ವೀರಶೈವ ಸಮಾಜದ ನಿಕಟಪೂರ್ವ ಅಧ್ಯಕ್ಷ ಸಿದ್ಧಲಿಂಗೇಶ್ವರ ಮಾತನಾಡಿದರು.

ಇದನ್ನೂ ಓದಿ: Milk Price: ನಂದಿನಿ ಹಾಲು ದರ ಏರಿಕೆ ಶಾಕ್‌; ಅರ್ಧ ಲೀಟರ್‌ಗೂ ₹2, ಒಂದು ಲೀಟರ್‌ಗೂ ₹2 ಬೆಲೆ ಏರಿಕೆ!

ಕಾರ್ಯಕ್ರಮದಲ್ಲಿ ಮಾತೋಶ್ರೀ ಸುಶೀಲಮ್ಮ ಚನ್ನಬಸವಯ್ಯನವರ ಶ್ರದ್ಧಾಂಜಲಿ ನಡೆಯಿತು. ಈ ಸಂದರ್ಭದಲ್ಲಿ ಶಿವಕುಮಾರ ಸ್ವಾಮಿ, ರೇಣುಕಯ್ಯ ಸ್ವಾಮಿ, ಬಂಗಾರಸ್ವಾಮಿ, ತಾರಕೇಶ್ವರ, ಸಿದ್ಧಲಿಂಗಯ್ಯ, ಸುಪ್ರಸನ್ ಶಾಸ್ತ್ರಿ, ಪಂಚಾಕ್ಷರಿ, ಗಂಗಣ್ಣ, ಹೊಳೆಬಸಯ್ಯನವರು, ಮಹೇಶಯ್ಯ, ಮಧುಮತಿ ವರ್ಷಭೇಂದ್ರ ಗೌಡ, ಹೇಮಲತಾ, ಸುಮಂಗಳಾ, ಶಿವಲೀಲಾ, ಇರಾಜಮ್ಮ ಹಾಗೂ ಇತರರು ಉಪಸ್ಥಿತರಿದ್ದರು. ನಿಶ್ಚಿಂತ ಪ್ರಾರ್ಥಿಸಿದರು. ಸನ್ಮತಿ ನಿರೂಪಿಸಿದರು.

Continue Reading

Latest

Ayodhya Temple: ಕಡಿಮೆಯಾದ ಭಕ್ತರ ದಟ್ಟಣೆ; ಅಯೋಧ್ಯೆಗೆ ಭೇಟಿ ನೀಡಲು ಇದು ಸಕಾಲ

Ayodhya Temple: ಕಳೆದ ಆರು ವಾರಗಳಲ್ಲಿ ಅಯೋಧ್ಯೆ ನಗರಕ್ಕೆ ಬರುವ ವಿಮಾನಗಳು, ರೈಲುಗಳು ಮತ್ತು ಬಸ್ ಸೇವೆ ಗಮನಾರ್ಹವಾಗಿ ಕಡಿಮೆಯಾದಂತೆ ಕಂಡುಬಂದಿದೆ. ಜನವರಿ 22ರಂದು ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದ ನಂತರ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ವಿಪರೀತ ಹೆಚ್ಚಾಗಿತ್ತು. ಜನವರಿಯಿಂದ ಮಾರ್ಚ್ 2024ರವರೆಗೆ ಪ್ರತಿದಿನ ಸುಮಾರು 1.5 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದರು. ಆದರೆ ಏಪ್ರಿಲ್‌ನಿಂದ ಭಕ್ತರ ಸಂಖ್ಯೆ ಕಡಿಮೆಯಾಗುತ್ತ ಬಂತು. ಏಪ್ರಿಲ್- ಮೇನಲ್ಲಿ ಸುಮಾರು 1 ಲಕ್ಷ ಭಕ್ತರು ಭೇಟಿ ನೀಡಿದ್ದರು.

VISTARANEWS.COM


on

Ram Mandir
Koo

ಅಯೋಧ್ಯೆ ರಾಮಮಂದಿರ (Ayodhya Temple) ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾಗಿ ಹೊರಹೊಮ್ಮಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದು ಕೋಟ್ಯಂತರ ಹಿಂದೂಗಳ ಕನಸಾಗಿತ್ತು. ಹಾಗಾಗಿ ರಾಮಮಂದಿರ ಉದ್ಘಾಟನೆಯಾದ ಬೆನ್ನಿಗೇ ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳು ರಾಮನ ದರ್ಶನಕ್ಕೆ ಬರುತ್ತಿದ್ದರು. ಆದರೆ ಮಂದಿರ ಉದ್ಘಾಟನೆಯಾಗಿ ಈಗಾಗಲೇ ಆರು ತಿಂಗಳು ಕಳೆದಿರುವುದರಿಂದ ಭಕ್ತರ ಸಂಖ್ಯೆ ಸಹಜವಾಗಿಯೇ ಕಡಿಮೆಯಾಗುತ್ತಿದೆ.

ಕಳೆದ ಆರು ವಾರಗಳಲ್ಲಿ ಅಯೋಧ್ಯೆ ನಗರಕ್ಕೆ ಬರುವ ವಿಮಾನಗಳು, ರೈಲುಗಳು ಮತ್ತು ಬಸ್ ಸೇವೆ ಗಮನಾರ್ಹವಾಗಿ ಕಡಿಮೆಯಾಗುತ್ತ ಬಂದಿದೆ. ಕೆಲವು ವಿಶೇಷ ರೈಲುಗಳ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಇತರ ರಾಜ್ಯಗಳಿಂದ ಅಯೋಧ್ಯೆಗೆ ಬರುವ ವಿಶೇಷ ಬಸ್ಸುಗಳ ಸಂಖ್ಯೆಯಲ್ಲೂ ಕಡಿತವಾಗಿದೆ. ಇದು ಪ್ರಯಾಣಿಕರು ಅಯೋಧ್ಯೆಗೆ ಬರುವ ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಸೂಚಿಸುತ್ತದೆ.

ಈಗಾಗಲೇ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಕಡಿಮೆ ಬೇಡಿಕೆಯಿಂದಾಗಿ ಹೈದರಾಬಾದ್, ಬೆಂಗಳೂರು ಮತ್ತು ಪಾಟ್ನಾದಿಂದ ಅಯೋಧ್ಯೆಗೆ ನೇರ ವಿಮಾನಯಾನವನ್ನು ನಿಲ್ಲಿಸಿದೆ. ಸೇವೆ ಪ್ರಾರಂಭವಾದ ಕೇವಲ ಎರಡು ತಿಂಗಳ ನಂತರ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ. ಏಪ್ರಿಲ್ 2024ರಲ್ಲಿ ಸ್ಪೈಸ್ ಜೆಟ್ ಹೈದರಾಬಾದ್‌ನಿಂದ ಅಯೋಧ್ಯೆಗೆ ವಿಮಾನವನ್ನು ಪ್ರಾರಂಭಿಸಿದ್ದು, ವಾರಕ್ಕೆ ಮೂರು ಬಾರಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಕಾರಣ ವಿಮಾನಯಾನವನ್ನು ನಿಲ್ಲಿಸಲಾಗಿದೆ. ಆದರೆ ಮಳೆಗಾಲ ಮುಗಿದ ನಂತರ ಮತ್ತೆ ಪ್ರಯಾಣಿಕರು ಹೆಚ್ಚಾಗುವ ನಿರೀಕ್ಷೆ ಇದೆ ಎಂಬ ನಿರೀಕ್ಷೆ ಇದೆ. ಅಯೋಧ್ಯೆಗೆ ದಕ್ಷಿಣ ಭಾರತದವರು ಹೆಚ್ಚಾಗಿ ಬರುತ್ತಿದ್ದರು. ಅವರೀಗ ಕೃಷಿ ಕಾರ್ಯಗಳಲ್ಲಿ ಮುಳುಗಿದ್ದಾರೆ. ಹಾಗಾಗಿ ಕೃಷಿ ಚಟುವಟಿಕೆ ಮುಗಿದ ಬಳಿಕ ಭಕ್ತರ ಸಂಖ್ಯೆ ಮತ್ತೆ ಏರುವ ನಿರೀಕ್ಷೆ ಇದೆ.

Ayodhya Temple

ಭಾರತೀಯ ರೈಲ್ವೆ ಕೂಡ ಅಯೋಧ್ಯೆಗೆ ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಡಿಮೆ ಮಾಡಿದೆ. ಇದರ ಹೊರತಾಗಿ ಪ್ರತಿದಿನ 32ರಿಂದ 35 ರೈಲುಗಳು ಅಯೋಧ್ಯಾ ಧಾಮ್ ಮತ್ತು ಅಯೋಧ್ಯಾ ಕ್ಯಾಂಟ್ ನಿಲ್ದಾಣಗಳಿಗೆ ಆಗಮಿಸುತ್ತಲೇ ಇರುತ್ತವೆ. ರೈಲುಗಳು ನಿತ್ಯ ಸುಮಾರು 28,000 ಪ್ರಯಾಣಿಕರನ್ನು ಹೊತ್ತು ಬರುತ್ತವೆ ಎನ್ನಲಾಗಿದೆ. ಮೇ 15ರವರೆಗೆ ಅಯೋಧ್ಯೆಗೆ ಹೋಗಲು ರೈಲುಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ನಂತರ ಕಡಿಮೆಯಾಗಿದೆ. ಆದರೂ ಅಯೋಧ್ಯೆಗೆ ತೆರಳುವ ಎಲ್ಲಾ ರೈಲುಗಳು ತುಂಬಿರುತ್ತವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅದೇರೀತಿ ಇತರ ರಾಜ್ಯಗಳಿಂದ ಅಯೋಧ್ಯೆಗೆ ಬಸ್‌ಗಳ ಸಂಖ್ಯೆಯಲ್ಲೂ ಕಡಿಮೆಯಾಗಿದೆ. ಪ್ರಸ್ತುತ 396 ರಸ್ತೆ ಮಾರ್ಗದಲ್ಲಿ ಬಸ್‌ಗಳು ಅಯೋಧ್ಯೆಗೆ ಆಗಮಿಸುತ್ತಿವೆ. ಸದ್ಯಕ್ಕೆ ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ದೆಹಲಿಯಿಂದ ತಲಾ ಒಂದು ಬಸ್ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಮತ್ತೊಂದು ರೀಲ್‌ ಕ್ರೇಜ್‌; ಚಲಿಸುವ ರೈಲಿನಲ್ಲಿ ಯುವತಿಯ ಡೇಂಜರಸ್‌ ಡ್ಯಾನ್ಸ್‌!

ಜನವರಿ 22ರಂದು ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದ ನಂತರ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ವಿಪರೀತ ಹೆಚ್ಚಾಗಿತ್ತು. ಜನವರಿಯಿಂದ ಮಾರ್ಚ್ 2024ರವರೆಗೆ ಪ್ರತಿದಿನ ಸುಮಾರು 1.5 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದರು. ಆದರೆ ಏಪ್ರಿಲ್‌ನಿಂದ ಭಕ್ತರ ಸಂಖ್ಯೆ ಕಡಿಮೆಯಾಗುತ್ತ ಬಂತು. ಏಪ್ರಿಲ್- ಮೇನಲ್ಲಿ ಸುಮಾರು 1 ಲಕ್ಷ ಭಕ್ತರು ಭೇಟಿ ನೀಡಿದ್ದರು. ಸಾಕಷ್ಟು ಭಕ್ತರು ಜನದಟ್ಟಣೆ ಕಡಿಮೆ ಆಗಲಿ ಎನ್ನುವುದನ್ನೇ ಕಾಯುತ್ತಿದ್ದಾರೆ. ಹಾಗಾಗಿ ಇನ್ನು ಮುಂದೆ ಅಯೋಧ್ಯೆಗೆ ಭಕ್ತರ ಸಂಖ್ಯೆ ಏರಲಿದೆ ಎಂಬ ನಿರೀಕ್ಷೆಯನ್ನು ಸ್ಥಳೀಯ ವ್ಯಾಪಾರಸ್ಥರು ಹೊಂದಿದ್ದಾರೆ.

Continue Reading
Advertisement
Actor Darshan
ಸಿನಿಮಾ5 mins ago

Actor Darshan : ನಟ ದರ್ಶನ್‌ಗಾಗಿ ಊಟ ಬಿಟ್ಟು ಜೈಲಿನ ಹೊರಗೆ ವಿಶೇಷಚೇತನ ಯುವತಿ ಗೋಳಾಟ

cm siddaramaiah price hikes
ಕರ್ನಾಟಕ38 mins ago

CM Siddaramaiah: ₹2000 ಕೊಟ್ಟು ₹4740 ಕಿತ್ತುಕೊಳ್ಳುತ್ತಿರುವ ರಾಜ್ಯ ಸರಕಾರ! ನಿಮ್ಮ ಜೇಬಿಗೆ ಕತ್ತರಿ ಬೀಳುತ್ತಿರುವುದರ ಲೆಕ್ಕ ಇಲ್ಲಿದೆ ನೋಡಿ!

Mohan Yadav
ದೇಶ43 mins ago

Mohan Yadav: ಇನ್ಮುಂದೆ ಶಾಲಾ ಪಠ್ಯದಲ್ಲಿ ಇರಲಿದೆ ‘ತುರ್ತು ಪರಿಸ್ಥಿತಿ’ಯ ಅಧ್ಯಾಯ

Road Accident
ಕ್ರೈಂ55 mins ago

Road Accident : ರೈಲು ಬಡಿದು ವ್ಯಕ್ತಿ ಸಾವು;ನಿಂತಿದ್ದ ಬಸ್‌ಗೆ ಗುದ್ದಿ ಛಿದ್ರಗೊಂಡ ಹೊಸ ಕಾರು

Rohit Sharma
ಕ್ರೀಡೆ60 mins ago

Rohit Sharma : ಇಂಗ್ಲೆಂಡ್​ ಸೋಲಿಸುವ ಯೋಜನೆ ವಿವರಿಸಿದ ನಾಯಕ ರೋಹಿತ್ ಶರ್ಮಾ

Droupadi Murmu
ದೇಶ1 hour ago

Droupadi Murmu: ತುರ್ತು ಪರಿಸ್ಥಿತಿ ಸಂವಿಧಾನದ ಮೇಲೆ ನಡೆದಿರುವ ಅತಿದೊಡ್ಡ ದಾಳಿ; ದ್ರೌಪದಿ ಮುರ್ಮು

IND vs ENG
ಪ್ರಮುಖ ಸುದ್ದಿ1 hour ago

IND vs ENG : ಭಾರತದ ವಿರುದ್ಧ ಹೂಡಲಿರುವ ತಂತ್ರಗಳನ್ನು ವಿವರಿಸಿದ ಇಂಗ್ಲೆಂಡ್ ಕೋಚ್​ ಮ್ಯಾಥ್ಯೂ ಮಾಟ್​

karnataka Rains Effected
ಮಳೆ2 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

Share Market
ವಾಣಿಜ್ಯ2 hours ago

Share Market: ಮೊದಲ ಬಾರಿಗೆ 79,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಗರಿಷ್ಠ ಮಟ್ಟ ತಲುಪಿದ ನಿಫ್ಟಿ

pattanagere shed actor darshan renuka swamy murder
ಕ್ರೈಂ2 hours ago

Actor Darshan: ಪಟ್ಟಣಗೆರೆ ಶೆಡ್ಡಾ? ನಾವು ಅಲ್ಲಿಗೆ ಹೋಗೋಲ್ಲ ಅನ್ನುತ್ತಿರುವ ವಾಹನ ಮಾಲಿಕರು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rains Effected
ಮಳೆ2 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ7 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 weeks ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 weeks ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 weeks ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

ಟ್ರೆಂಡಿಂಗ್‌