Instagram fight: ಇನ್‌ಸ್ಟಾಗ್ರಾಂನಲ್ಲಿ ಬೈದ ಎಂದು 16ರ ಬಾಲಕನನ್ನು ತಲ್ವಾರ್‌ನಿಂದ ಕಡಿದು ಕೊಂದ ಸ್ನೇಹಿತರು! Vistara News

ಅವಿಭಾಗೀಕೃತ

Instagram fight: ಇನ್‌ಸ್ಟಾಗ್ರಾಂನಲ್ಲಿ ಬೈದ ಎಂದು 16ರ ಬಾಲಕನನ್ನು ತಲ್ವಾರ್‌ನಿಂದ ಕಡಿದು ಕೊಂದ ಸ್ನೇಹಿತರು!

Instagram Fight: ಇನ್‌ಸ್ಟಾ ಗ್ರಾಂನಲ್ಲಿ ಏನೋ ಮೆಸೇಜ್‌ ಹಾಕಿದ ಎಂದು ನಾಲ್ವರು ಬಾಲಕರು ಸೇರಿ 16 ವರ್ಷದ ಬಾಲಕನನ್ನು ತಲವಾರಿನಿಂದ ಕಡಿದು ಕೊಂದಿದ್ದಾರೆ. ಇದು ಎಲ್ಲೆಲ್ಲೋ ನಡೆದ ಘಟನೆಯಲ್ಲ, ಬೆಳಗಾವಿಯ ಕಿತ್ತೂರಿನಲ್ಲಿ.

VISTARANEWS.COM


on

Instagram message murder
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಸಾಮಾಜಿಕ ಜಾಲ ತಾಣಗಳ ದುಷ್ಪರಿಣಾಮ (Social Media side effects) ಒಬ್ಬ ಬಾಲಕನ ಪ್ರಾಣವನ್ನೇ (16 year old boy murdered) ಕಿತ್ತುಕೊಂಡಿದೆ. ಇನ್‌ಸ್ಟಾ ಗ್ರಾಂ ವೇದಿಕೆಯಲ್ಲಿ (Instagram fight) ಆಡಿದ ಒಂದು ಸಣ್ಣ ಮಾತಿನಿಂದ 16 ವರ್ಷದ ಬಾಲಕನೊಬ್ಬನ ಸಾವಿಗೆ ಕಾರಣವಾಗಿದೆ.

ಇನ್‌ಸ್ಟಾ ಗ್ರಾಂ ಮೆಸೇಜ್‌ನಲ್ಲಿ ಬೈದಿದ್ದ ಎಂಬ ಒಂದೇ ಕಾರಣವನ್ನು ಇಟ್ಟುಕೊಂಡು ಒಬ್ಬ ಬಾಲಕನನ್ನು ಕೊಲೆ ಮಾಡಿದ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ನಡೆದಿದೆ. ಕೇವಲ ಹದಿನಾರು ವರ್ಷದ ಬಾಲಕನನ್ನು ತಲವಾರಿನಿಂದ ಕಡಿದು ಕೊಲೆ (Murder by friends) ಮಾಡಲಾಗಿದೆ. ಹಾಗಂತ ಕೊಲೆ ಮಾಡಿದವರು ದೊಡ್ಡವರೇನಲ್ಲ. ಅವನದೇ ವಯಸ್ಸಿನ ನಾಲ್ಕು ಮಂದಿ ಬಾಲಕರು ಸೇರಿ ಈ ಕೊಲೆ ಮಾಡಿದ್ದಾರೆ. ಜತೆಗೆ ಅವರು ಅವನ ಸ್ನೇಹಿತರೇ ಬೇರೆ.

ಈ ಜಗಳ ಶುರುವಾಗಿದ್ದು ಯಾವಾಗ? ಏನು ಮೆಸೇಜ್‌ ಮಾಡಿದ್ದ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ, ಬುಧವಾರ ಸಂಜೆ ಪ್ರಜ್ವಲ್‌ ಸಂಕದ್‌ನನ್ನು ಕರೆಸಿಕೊಂಡ ಈ ನಾಲ್ವರು ಬಾಲಕರು ಅವನ ಮೇಲೆ ಯದ್ವಾತದ್ವಾ ತಲವಾರು ಬೀಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಆತನ ತಲೆಯನ್ನೇ ಗುರಿ ಮಾಡಿಕೊಂಡು ದಾಳಿ ಮಾಡಲಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಜ್ವಲ್‌ನನ್ನು ಆತನ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರಾದರೂ ತಡರಾತ್ರಿ ಆತ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Murder Case : ಜಮೀನು ವಿವಾದಕ್ಕೆ ಅಣ್ಣನನ್ನೇ ಇರಿದು ಕೊಂದ ತಮ್ಮ!

ಸಾಮಾಜಿಕ ಜಾಲತಾಣವೇ ಬದುಕಾದರೆ ದುರಂತ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳೇ ನಮ್ಮ ಬದುಕನ್ನು ನಿರ್ಧರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜಗತ್ತು ಜಾಲತಾಣಗಳಿಂದಲೇ ನಡೆಯುತ್ತಿದೆ ಎನ್ನುಷ್ಟು ಅಡಿಕ್ಟ್‌ ಆಗಿಬಿಟ್ಟಿರುವುದರಿಂದ ಅಲ್ಲಿ ನಡೆಯುವ ಬೆಳವಣಿಗೆಗಳು ಬದುಕನ್ನೇ ಬದಲಿಸಿ ಬಿಡುತ್ತವೆ.

ಫೇಸ್‌ ಬುಕ್‌ನಲ್ಲೋ, ಇನ್‌ಸ್ಟಾ ಗ್ರಾಂನಲ್ಲೋ ಹಾಕಿದ ಫೋಟೊ, ವಿಡಿಯೊಗಳಿಗೆ ಬರುವ ವ್ಯೂಸ್‌ ಮತ್ತು ಕಮೆಂಟ್‌ಗಳಿಂದಲೇ ಖುಷಿಪಡುವವರು, ಕಮೆಂಟ್‌ ಬಾರದಿದ್ದರೆ ಮರುಗುವವರು, ವ್ಯೂಸ್‌ ಇಲ್ಲದಿದ್ದರೆ ಕೊರಗುವವರು ಹೆಚ್ಚಾಗಿದ್ದಾರೆ.

ಇದೇ ಹೊತ್ತಿಗೆ ಅದರಲ್ಲಿ ಬರುವ ನೆಗೆಟಿವ್‌ ಕಮೆಂಟ್‌ಗಳಿಂದ ಬದುಕೇ ಮುಗಿದು ಹೋಯಿತು ಎಂಬಂತೆ ಬೇಜಾರು ಮಾಡಿಕೊಳ್ಳುವವರು, ನೆಗೆಟಿವ್‌ ಕಮೆಂಟ್‌ ಹಾಕಿದವರ ಮೇಲೆ ಮಾತಿನ, ಬರಹದ ದ್ವೇಷ ಸಾಧಿಸಲು ಹೊರಡುವುದು ಹೆಚ್ಚಾಗುತ್ತಿದೆ. ಕೆಲವರು ಇದನ್ನೊಂದು ಸಾಮಾಜಿಕ ಅಂತಸ್ತು ಎಂದು ಪರಿಗಣಿಸಿ ದೈಹಿಕವಾಗಿಯೇ ಹಲ್ಲೆ ನಡೆಸುತ್ತಾರೆ.

ಇಲ್ಲಿ ಸಾಮಾಜಿಕ ಜಾಲತಾಣವೇ ಬದುಕಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲೂ ಸಣ್ಣ ಸಣ್ಣ ಮಕ್ಕಳು ಕೂಡಾ ಈಗ ಜಾಲತಾಣದಲ್ಲೇ ಮುಳುಗಿರುವುದರಿಂದ ಅವರಿಗೆ ಒಳಿತು ಕೆಡುಕಿನ ಬಗ್ಗೆ ಅರಿವಿಲ್ಲದೆ ಅಪಾಯಕಾರಿ ಸೇಡಿಗೆ ಮುಂದಾಗುತ್ತಾರೆ. ಬಹುಶಃ ಪ್ರಜ್ವಲ್‌ ಕೊಲೆಗೆ ಇಂಥ ಸಣ್ಣ ಸಂಗತಿಗಳೇ ಕಾರಣ ಆಗಿರಬಹುದು. ಏನೇ ಆದರೂ ಒಬ್ಬ‌ ಬೆಳೆಯುವ ಹುಡುಗ ಸಾವು ಕಂಡಿದ್ದಾನೆ. ಅವನದೇ ವಯಸ್ಸಿನ ಮಕ್ಕಳು ಹಂತಕರಾಗಿ ನಿಂತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅವಿಭಾಗೀಕೃತ

VISTARA TOP 10 NEWS : ಡಿಕೆಶಿ ಸಿಬಿಐ ಕುಣಿಕೆ ತಪ್ಪಿಸಲು ಸಂಪುಟ ಸರ್ಕಸ್; ರಾಹುಲ್‌ ಗಾಂಧಿಗೆ ನೋಟಿಸ್‌

VISTARA TOP 10 NEWS : ಡಿ.ಕೆ. ಶಿವಕುಮಾರ್‌ ಮೇಲಿನ ಕೇಸ್‌ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೇರಿದಂತೆ ಪ್ರಮುಖ ಸುದ್ದಿಗಳ ಗುಚ್ಛ ಇದು.

VISTARANEWS.COM


on

Vistara Top 10 Newss
Koo

1. ಡಿ.ಕೆ. ಶಿವಕುಮಾರ್‌ ಮೇಲಿನ ಸಿಬಿಐ ಕೇಸ್‌ ವಾಪಸ್‌; ಕ್ಯಾಬಿನೆಟ್‌ ಮಹತ್ವದ ನಿರ್ಣಯ
ಆದಾಯ ಮೂಲಕ್ಕಿಂತ 200 ಕೋಟಿ ಹೆಚ್ಚು ಅಕ್ರಮ ಸಂಪಾದನೆ (Illegal editing) ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ವಿರುದ್ಧದ ಸಿಬಿಐ ಕೇಸ್‌ (CBI Case) ಅದನ್ನು ವಾಪಸ್‌ ಪಡೆದು ರಾಜ್ಯ ತನಿಖಾ ಸಂಸ್ಥೆಗೆ ನೀಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ (Cabinet Meeting) ಸಭೆ ತೆಗೆದುಕೊಂಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2. ಜಾತಿ ಗಣತಿ ವರದಿ ಬಗ್ಗೆ ಊಹೆ ಮಾಡ್ಬೇಡಿ, ನಾವೇಕೆ ಸಮಾಜ ಒಡೆಯುತ್ತೇವೆ? ಸಿಎಂ ಖಡಕ್‌ ಪ್ರಶ್ನೆ
ಜಾತಿ ಜನಗಣತಿ ವರದಿ (Caste Census) ಸಲ್ಲಿಸುವ ಮುನ್ನವೇ ಚರ್ಚೆ ಶುರುವಾಗಿದೆ. ವರದಿಯಲ್ಲೇ ಏನಿದೆ ಎಂದು ಅದನ್ನು ಬೇಡ ಎನ್ನುವವರಿಗೂ ಗೊತ್ತಿಲ್ಲ. ಇನ್ನು ನಮ್ಮ ಮೇಲೆ ಸಮಾಜ ಒಡೆಯುವ ಆರೋಪವನ್ನು ಮಾಡಲಾಗುತ್ತಿದೆ. ನಾವು ಏಕೆ ಸಮಾಜವನ್ನು ಒಡೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನೆ ಮಾಡಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಜಾತಿ ಗಣತಿ ವರದಿ ಬರೆಸಿದರೇ ಸಿಎಂ? ತನಿಖೆ ನಡೆಸಲು ಆರ್‌ ಅಶೋಕ್‌ ಸವಾಲು
ಈ ಸುದ್ದಿಯನ್ನೂ ಓದಿ: ಜಾತಿ ಗಣತಿ ವರದಿ ಅವೈಜ್ಞಾನಿಕ ಅನ್ನೋದು ತಪ್ಪೆಂದ ಕಾಂತರಾಜು! ಬಿಜೆಪಿ ಮೇಲೆ ಕೆಂಡ

3. ಉಗ್ರರ ಜತೆ ಕದನ; ಮಂಗಳೂರಿನ ಕ್ಯಾ. ಪ್ರಾಂಜಲ್‌ ಸೇರಿ ನಾಲ್ವರು ಹುತಾತ್ಮ
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಸೇನಾಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ‌ (Rajouri Encounter) ಹುತಾತ್ಮರಾದ ನಾಲ್ವರು ವೀರ ಯೋಧರಲ್ಲಿ ಮಂಗಳೂರು ಮೂಲದ ಕ್ಯಾಪ್ಟನ್‌ ಎಂ.ಪಿ. ಪ್ರಾಂಜಲ್‌ (Captain MV Pranjal) ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಮತ್ತು ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ. ಪೀರ್‌ ಪಂಜಾಲ್‌ ಎಂಬ ಪ್ರದೇಶದಲ್ಲಿ ಇನ್ನೂ ಎನ್‌ಕೌಂಟರ್‌ ಮುಂದುವರಿದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಇಬ್ಬರು ಉಗ್ರರ ದಮನ; ಒಬ್ಬ IED ತಜ್ಞ, ಇನ್ನೊಬ್ಬ ನುರಿತ ಸ್ನೈಪರ್‌

4. ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ; ವರ್ಷಾಂತ್ಯದವರೆಗೂ ನೀರು ಬಿಡಲು ಆರ್ಡರ್‌
ಕಾವೇರಿ ಜಲ ವಿವಾದದಲ್ಲಿ (Cauvery Dispute) ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದೆ. ಕಳೆದ ಆಗಸ್ಟ್‌ 26ರಿಂದ ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸುತ್ತಿರುವ ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery Water regulation Committee) ಪ್ರತಿ ಬಾರಿಯೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡುತ್ತಿದೆ. ಗುರುವಾರ (ನವೆಂಬರ್‌ 23)ರಂದು ನಡೆದ ಸಭೆಯಲ್ಲೂ ಇದೇ ಚಾಳಿಯನ್ನು ಮುಂದುವರಿಸಲಾಗಿದೆ. ಈ ಬಾರಿ ಪ್ರತಿ ದಿನ 2700 ಕ್ಯೂಸೆಕ್‌ ನೀರು ಬಿಡುವಂತೆ ಆದೇಶ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5.ಮೋದಿ ಅಪಶಕುನ, ಜೇಬುಗಳ್ಳ ಎಂದ ರಾಹುಲ್‌ಗೆ ಚುನಾವಣಾ ಆಯೋಗ ನೋಟಿಸ್‌
ರಾಜಸ್ಥಾನದ (Rajasthan Election) ಚುನಾವಣಾ ಪ್ರಚಾರಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜೇಬುಗಳ್ಳ ಮತ್ತು ಅಶಕುನ ಎಂದು ಕರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಚುನಾವಣಾ ಆಯೋಗವು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ರೋಹಿತ್‌, ಕೊಹ್ಲಿ ಟಿ 20 ಕ್ರಿಕೆಟ್‌ ಯುಗಾಂತ್ಯ?; ಬಿಸಿಸಿಐ ನಿಲುವೇನು?
ಬಿಸಿಸಿಐ ಮುಂದಿನ ಟಿ20 ವಿಶ್ವಕಪ್ ಸಿದ್ದತೆ ಮಾಡಲು ಆರಂಭಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದಲೇ ಈ ಸಿದ್ಧತೆ ಆರಂಭವಾಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಮುಖಗಳಿಗೆ ಈ ಸರಣಿಯಲ್ಲಿ ಮಣೆ ಹಾಕಲಾಗಿದೆ. ಇದೀಗ ರೋಹಿತ್​ ಶರ್ಮಾ(Rohit Sharma) ಮತ್ತು ವಿರಾಟ್​ ಕೊಹ್ಲಿ(Virat Kohli) ಅವರು ಮುಂದಿನ ಟಿ20 ಕ್ರಿಕೆಟ್​ ಆಡುವುದಿಲ್ಲ, ಅವರ ಟಿ20 ಕ್ರಿಕೆಟ್​ ಭವಿಷ್ಯ ಬಹುತೇಕ ಅಂತ್ಯ ಕಾಣಲಿದೆ ಎಂಬ ಟಾಕ್​ ಕ್ರಿಕೆಟ್​ ವಲಯದಲ್ಲಿ ಬಾರಿ ಸದ್ದು ಮಾಡುತ್ತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಕರಾವಳಿಯಿಂದ ಕೋಣಗಳ ಮೆರವಣಿಗೆ ಶುರು; ರಾಜಧಾನಿಯಲ್ಲಿ ಕುದಿ ಕಂಬಳ!
ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace Grounds) ನವೆಂಬರ್‌ 25 ಮತ್ತು 26ರಂದು ನಡೆಯಲಿರುವ ಬೆಂಗಳೂರು ಕಂಬಳದ (Bangalore Kambala) ಸಂಭ್ರಮ ಆಗಲೇ ಶುರುವಾಗಿದೆ. ಒಂದು ಕಡೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಿಂದ ಸುಮಾರು 150 ಜೋಡಿ ಕೋಣಗಳ (150 Pair of Buffallos) ವೈಭವದ ಮೆರವಣಿಗೆ ರಾಜಧಾನಿ ಕಡೆಗೆ ಶುರುವಾಗಿದ್ದರೆ, ಇತ್ತ ಬೆಂಗಳೂರಿನ ಮೈದಾನದಲ್ಲಿ ಗುರುವಾರ ಕುದಿ ಕಂಬಳ (Kudi Kambala) ನಡೆಯಿತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. 100 ಕೋಟಿ ರೂ. ಪೋಂಜಿ ಸ್ಕ್ಯಾಮ್‌, ನಟ ಪ್ರಕಾಶ್‌ರಾಜ್‌ಗೆ ಇಡಿ ಸಮನ್ಸ್‌
ದಕ್ಷಿಣ ಭಾರತದ (South India) ಖ್ಯಾತ ನಟ ಹಾಗೂ ಕನ್ನಡಿಗ ಪ್ರಕಾಶ್ ರಾಜ್ (Actor Prakash Raj) ಅವರು ಸಂಕಟಕ್ಕೆ ಸಿಲುಕಿದ್ದಾರೆ. ಆಭರಣ ವ್ಯಾಪ್ಯಾರ ಕಂಪನಿ ಎದುರಿಸುತ್ತಿರುವ 100 ಕೋಟಿ ರೂ. ಪೋಂಜಿ ಹಗರಣಕ್ಕೆ (Rs 100 Crore Ponzi Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (Enforcement Directorate) ಸಮನ್ಸ್ ಜಾರಿ ಮಾಡಿದೆ. ಪ್ರಕಾಶ್ ರಾಜ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪ್ರಣವ್ ಜ್ಯುವೆಲರ್ಸ್‌ ಹೂಡಿಕೆದಾರರಿಗೆ 100 ಕೋಟಿ ರೂ. ವಂಚಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಮೊಬೈಲ್‌ ಸಿಮ್‌ ಪಡೆಯಲು ಡಿ.1ರಿಂದ ಹೊಸ ನಿಯಮಗಳು; ಈ 5 ವಿಷಯ ತಿಳಿದಿರಲಿ
ಡಿಸೆಂಬರ್ 1ರಿಂದ ಹೊಸ ಸಿಮ್‌ ಕಾರ್ಡ್‌ ಪಡೆಯುವವರು ಹಾಗೂ ಮಾರಾಟ ಮಾಡುವವರು ಕೂಡ ಹೊಸ ನಿಯಮಗಳನ್ನು (SIM card rules) ಫಾಲೋ ಮಾಡಬೇಕಿದೆ. ದೂರಸಂಪರ್ಕ ಇಲಾಖೆ ಈ ಕುರಿತ ನಿಯಮಗಳನ್ನು ಪರಿಷ್ಕರಿಸಿದ್ದು, ಡಿ.1ರಿಂದ ಜಾರಿಗೆ ಬರಲಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಕನ್ನಡದಲ್ಲಿ ಈ ವಾರ 5 ಸಿನಿಮಾ ಬಿಡುಗಡೆ; ತಾರೆಗಳ ನಡುವೆ ಭರ್ಜರಿ ಪೈಪೋಟಿ
ಈ ಶುಕ್ರವಾರ ಕನ್ನಡದಲ್ಲಿ ಐದು ಸಿನಿಮಾಗಳು (Upcoming Movies) ರಿಲೀಸ್ ಆಗುತ್ತಿವೆ. ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಹೆಚ್ಚು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ – ರಚಿತಾ ರಾಮ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ನಟನೆಯ ‘ಶುಗರ್ ಫ್ಯಾಕ್ಟರಿ’, ರಾಜ್‌ ಬಿ. ಶೆಟ್ಟಿ ಸಾರಥ್ಯದ ‘ಸ್ವಾತಿಮುತ್ತಿನ ಮಳೆ ಹನಿಯೇ’ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಇವುಗಳ ಜೊತೆಗೆ ‘ಎಲೆಕ್ಟ್ರಾನಿಕ್ ಸಿಟಿ’ ಹಾಗೂ ‘ಸ್ಕೂಲ್ ಡೇಸ್’ ಎನ್ನುವ ಮತ್ತೆರಡು ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

South Cinema

Breaking News: 100 ಕೋಟಿ ರೂ. ಪೋಂಜಿ ಸ್ಕ್ಯಾಮ್, ನಟ ಪ್ರಕಾಶ್ ರಾಜ್‌ಗೆ ಇ.ಡಿ ಸಮನ್ಸ್

Prakash Raj: ದಕ್ಷಿಣ ಭಾರತದ ಖ್ಯಾತ ನಟ ಹಾಗೂ ಮೋದಿ ಕಡು ಟೀಕಾಕಾರ ಪ್ರಕಾಶ್ ರಾಜ್ ಅವರು ಇ.ಡಿ ಸಮನ್ಸ್ ನೀಡಿದೆ.

VISTARANEWS.COM


on

prakash raj
Koo

ನವದೆಹಲಿ: ದಕ್ಷಿಣ ಭಾರತದ (South India) ಖ್ಯಾತ ನಟ ಹಾಗೂ ಕನ್ನಡಿಗ ಪ್ರಕಾಶ್ ರಾಜ್ (Actor Prakash Raj) ಅವರು ಸಂಕಟಕ್ಕೆ ಸಿಲುಕಿದ್ದಾರೆ. ಆಭರಣ ವ್ಯಾಪ್ಯಾರ ಕಂಪನಿ ಎದುರಿಸುತ್ತಿರುವ 100 ಕೋಟಿ ರೂ. ಪೋಂಜಿ ಹಗರಣಕ್ಕೆ (Rs 100 Crore Ponzi Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (Enforcement Directorate) ಸಮನ್ಸ್ ಜಾರಿ ಮಾಡಿದೆ. ಪ್ರಕಾಶ್ ರಾಜ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪ್ರಣವ್ ಜ್ಯುವೆಲರ್ಸ್‌ ಹೂಡಿಕೆದಾರರಿಗೆ 100 ಕೋಟಿ ರೂ. ವಂಚಿಸಿದೆ.

ಏನಿದು ಹಗರಣ?

ಚಿನ್ನಾಭರಣ ಕಂಪನಿ ನಡೆಸಿದ 100 ಕೋಟಿ ಪೋಂಜಿ ಯೋಜನೆಗೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಅವರನ್ನು ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಪ್ರಕಾಶ್ ರಾಜ್ ಅವರು ಪೋಂಜಿ ಹಗರಣ ನಡೆಸಿದ ಪ್ರಣವ್ ಜ್ಯುವೆಲರ್ಸ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು.

ಚೆನ್ನೈ ಸೇರಿದಂತೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಹಲವು ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿರುವ ತಿರುಚ್ಚಿ ಮೂಲದ ಆಭರಣ ಸರಪಳಿಯ ಶಾಖೆಗಳ ಮೇಲೆ ಇಡಿ ದಾಳಿ ನಡೆಸಿದೆ, ಪೋಂಜಿ ಯೋಜನೆಯನ್ನು ನಡೆಸುತ್ತಿದೆ ಮತ್ತು ಹೂಡಿಕೆದಾರರಿಗೆ ₹ 100 ಕೋಟಿ ವಂಚಿಸಿದೆ ಎಂದು ಆರೋಪಿಸಲಾಗಿದೆ. ಈ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆದ ಕಾರಣದಿಂದಲೇ ಪ್ರಕಾಶ್ ರಾಜ್ ಅವರಿಗೂ ಜಾರಿ ನಿರ್ದೇಶನಾಲಯವು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.

ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಕಡು ಟೀಕಾಕಾರರಾಗಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಅವರು ಕೇಂದ್ರ ಸರ್ಕಾರವನ್ನು ಖಂಡಿಸುತ್ತಾರೆ ಮತ್ತು ವಿರೋಧಿಸುತ್ತಾರೆ. ಈ ಕಾರಣದಿಂದಾಗಿ ಅವರು ಸಾಕಷ್ಟು ವಿರೋಧಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. ಅವರ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ಸಂದಿದೆ.

ಇದು ಬ್ರೇಕಿಂಗ್ ಸುದ್ದಿಯಾಗಿದ್ದು, 100 ಕೋಟಿ ರೂ. ಪೋಂಜಿ ಹಗರಣ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಿದೆ.

Continue Reading

ಅವಿಭಾಗೀಕೃತ

ವಿಸ್ತಾರ ಸಂಪಾದಕೀಯ: ಬೃಹತ್ ಕಾಮಗಾರಿ ವೇಳೆ ಕಾರ್ಮಿಕರ ಸುರಕ್ಷತೆ ಖಾತರಿಪಡಿಸಿ

Vistara Editorial: ದೇಶದಾದ್ಯಂತ ಸುಮಾರು 79 ಕಿ.ಮೀ ಉದ್ದದ ಒಟ್ಟು 29 ಸುರಂಗಗಳು ನಿರ್ಮಾಣ ಹಂತದಲ್ಲಿವೆ. ಹಿಮಾಚಲ ಪ್ರದೇಶದಲ್ಲಿ 12, ಜಮ್ಮು ಮತ್ತು ಕಾಶ್ಮೀರದಲ್ಲಿ ಆರು, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲಿ ತಲಾ ಎರಡು, ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಢ, ಉತ್ತರಾಖಂಡ ಮತ್ತು ದೆಹಲಿಯಲ್ಲಿ ತಲಾ ಒಂದೊಂದು ಸುರಂಗಗಳಿವೆ. ಇಲ್ಲೆಲ್ಲ ಸುರಕ್ಷತಾ ಕ್ರಮಗಳ ಪರಿಶೀಲನೆ ಅಗತ್ಯ.

VISTARANEWS.COM


on

Vistara Editorial, Ensure safety of workers during massive projects
Koo

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ದೇಶದಾದ್ಯಂತ ನಿರ್ಮಾಣ ಹಂತದಲ್ಲಿರುವ ಎಲ್ಲಾ 29 ಸುರಂಗಗಳ ಸುರಕ್ಷತೆ ಮತ್ತು ಅತ್ಯುನ್ನತ ಗುಣಮಟ್ಟದ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸುರಕ್ಷತಾ ಆಡಿಟ್ ಅನ್ನು ಕೈಗೊಳ್ಳಲಿದೆ ಎಂದು ಅದರ ಅಧಿಕೃತ ಹೇಳಿಕೆ ಬುಧವಾರ ತಿಳಿಸಿದೆ. ಎನ್‌ಎಚ್‌ಎಐ ಅಧಿಕಾರಿಗಳು, ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್‌ಸಿ) ತಜ್ಞರ ತಂಡ ಮತ್ತು ಇತರ ಸುರಂಗ ತಜ್ಞರು ಈಗ ನಡೆಯುತ್ತಿರುವ ಸುರಂಗ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ ಮತ್ತು ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದಾರಂತೆ. ನವೆಂಬರ್ 12ರಂದು ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದ ಕುಸಿತ ಹಾಗೂ ಅದರ ಒಳಗೆ 41 ಕಾರ್ಮಿಕರು ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಈ ಕ್ರಮ ಕೈಗೊಳ್ಳುತ್ತಿದೆ(Vistara editorial).

ದೇಶದಾದ್ಯಂತ ಸುಮಾರು 79 ಕಿ.ಮೀ ಉದ್ದದ ಒಟ್ಟು 29 ಸುರಂಗಗಳು ನಿರ್ಮಾಣ ಹಂತದಲ್ಲಿವೆ. ಹಿಮಾಚಲ ಪ್ರದೇಶದಲ್ಲಿ 12, ಜಮ್ಮು ಮತ್ತು ಕಾಶ್ಮೀರದಲ್ಲಿ ಆರು, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲಿ ತಲಾ ಎರಡು, ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಢ, ಉತ್ತರಾಖಂಡ ಮತ್ತು ದೆಹಲಿಯಲ್ಲಿ ತಲಾ ಒಂದೊಂದು ಸುರಂಗಗಳಿವೆ. NHAI ಸಹ ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (KRCL)ನೊಂದಿಗೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಒಪ್ಪಂದದ ಭಾಗವಾಗಿ, ಸುರಂಗ ನಿರ್ಮಾಣ ಮತ್ತು NHAI ಯೋಜನೆಗಳ ಇಳಿಜಾರು ಸ್ಥಿರೀಕರಣಕ್ಕೆ ಸಂಬಂಧಿಸಿದ ವಿನ್ಯಾಸ, ರೇಖಾಚಿತ್ರ ಮತ್ತು ಸುರಕ್ಷತೆ ಅಂಶಗಳನ್ನು KRCL ಪರಿಶೀಲಿಸುತ್ತದೆ.

ಯಾವುದೇ ಸರ್ಕಾರಿ ಕಾಮಗಾರಿ, ನಿರ್ಮಾಣ ಕಾರ್ಯಕ್ಕೆ ʼಭಾರತೀಯ ಮಾನಕʼ (Indian standard) ಅನ್ನು ಅನ್ವಯಿಸಲಾಗುತ್ತದೆ. ಇದೊಂದು ಬೃಹತ್‌ ದಾಖಲೆ ಮತ್ತು ಎಲ್ಲ ಕಾಮಗಾರಿಗೂ ಸಂಬಂಧಿಸಿದ ಸುರಕ್ಷತಾ ಸೂತ್ರಗಳು ಇದರಲ್ಲಿವೆ. ಮಣ್ಣಿನ ಪರೀಕ್ಷೆ ಮಾಡುವುದು, ಅದು ಗಟ್ಟಿ ನೆಲವೋ ಮೆದು ನೆಲವೋ ಎಂದು ಪರೀಕ್ಷಿಸುವುದರಿಂದ ಆರಂಭಿಸಿ, ಆ ಮಣ್ಣಿನಲ್ಲಿ ಯಾವ ಖನಿಜಾಂಶಗಳಿವೆ, ಅದು ಬೇಗನೆ ಕುಸಿಯಬಹುದೇ, ಸುರಂಗ ಕಾಮಗಾರಿಯ ಸಂದರ್ಭ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ತುರ್ತು ಸಂದರ್ಭ ಒದಗಿದಾಗ ಒಳಗಿರುವ ಕಾರ್ಮಿಕರ ರಕ್ಷಣೆಗೆ ಯಾವ ಸೂತ್ರ ಅನುಸರಿಸಬೇಕು, ಒಳಗಿರುವವರಿಗೆ ವೆಂಟಿಲೇಶನ್‌ ಹಾಗೂ ಬೆಳಕಿನ ವ್ಯವಸ್ಥೆ ಹೇಗಿರಬೇಕು- ಎಂಬಿತ್ಯಾದಿ ಎಲ್ಲ ಅಂಶಗಳನ್ನೂ ಈ ಐಎಸ್‌ ಸಮಗ್ರವಾಗಿ ನಿರ್ದೇಶನ ರೂಪದಲ್ಲಿ ನೀಡಿದೆ. ಸುರಂಗ ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ಪರಿಣತಿ ಹಾಗೂ ದಕ್ಷತೆ ಹೊಂದಿರುವ ಕಂಪನಿಗಳಿಗೆ, ತಜ್ಞರಿಗೆ ಅದನ್ನು ಒಪ್ಪಿಸಲಾಗುತ್ತದೆ. ತುಂಬಾ ಆಳಕ್ಕೆ ಕೊರೆಯುವ ಗಣಿಗಳಲ್ಲಿ ಭೂಕುಸಿತ ಉಂಟಾಗಿ ಕಾರ್ಮಿಕರು ಸಾಯುವ ಘಟನೆಗಳು ಭಾರತದಲ್ಲಿ ಸಾಕಷ್ಟು ನಡೆದಿವೆ. ಆದರೆ ಸುರಂಗ ಕೊರೆತದ ವೇಳೆ ಇಂಥ ಘಟನೆಗಳು ಆಗಿರುವುದು ತುಂಬಾ ಕಡಿಮೆ. ದಿಲ್ಲಿ ಮೆಟ್ರೋ, ಬೆಂಗಳೂರು ಮೆಟ್ರೋ ಮುಂತಾದವುಗಳ ರಚನೆಯ ಮೇಲೆ ಈ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದ ಪರಿಣಾಮ ಯಾವುದೇ ಅವಘಡ ಸಂಭವಿಸಿಲ್ಲ.

ಆದರೆ ಉತ್ತರಾಖಂಡದ ಸಿಲ್ಕ್ಯಾರಾದಲ್ಲಿ ನಡೆದಿರುವ ಘಟನೆಯ ಮೂಲ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಡಿಲವಾದ, ಮೆದುವಾದ ಮಣ್ಣಿನ ರಚನೆಯನ್ನು ಸರಿಯಾಗಿ ಗಮನಿಸದೆ ಕಾಮಗಾರಿ ನಡೆಸಿದ ಕಾರಣ ಹೀಗಾಗಿದೆಯೇ ಅಥವಾ ದಿಡೀರ್‌ ಎಂದು ಬಂದ ಮಳೆಯ ಕಾರಣ ಹೀಗಾಗಿದೆಯೇ ಎಂಬುದು ತಿಳಿದುಬಂದಿಲ್ಲ. ಅದೇನೇ ಇದ್ದರೂ, ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದುದಕ್ಕಾಗಿ ಸುರಂಗ ಕಾಮಗಾರಿ ನಡೆಸುತ್ತಿರುವ ಕಂಪನಿಯ ಕ್ರಮ ಕೈಗೊಳ್ಳಬೇಕಾಗಿದೆ. ಹೈದರಾಬಾದ್‌ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ಸುರಂಗದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ. ಜತೆಗೆ ಸುರಕ್ಷತಾ ಕ್ರಮಗಳಲ್ಲಿ ರಾಜಿ ಮಾಡಿಕೊಳ್ಳಲು ಬಜೆಟ್‌ನಲ್ಲಿ ಕಡಿತವಾಗುವಂತೆ ಅಧಿಕಾರಿಗಳಿಗೆ ಲಂಚ ನೀಡಿದ್ದರೆ ಅವರಿಗೂ ಶಿಕ್ಷೆಯಾಗಬೇಕು. ಮೊದಲು ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರು ಹೊರಗೆ ಬರಲಿ; ನಂತರ ಸಮಗ್ರ ತನಿಖೆ ನಡೆಯಲಿ. ಇದೇ ವೇಳೆಗೆ ದೇಶದಲ್ಲಿ ನಡೆಯುತ್ತಿರುವ ಇತರ ಸುರಂಗ ಕಾಮಗಾರಿಗಳ ಸುರಕ್ಷತಾ ಪರೀಕ್ಷೆಯೂ ಅಗತ್ಯವಾಗಿ ನಡೆಯಬೇಕಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ರಾಮಾಯಣ, ಮಹಾಭಾರತ ಕಲಿಕೆ ಶಿಫಾರಸು ಸ್ವಾಗತಾರ್ಹ

Continue Reading

ಅಂಕಣ

Raja Marga Column : ನಿಮ್ಮ ಮಕ್ಕಳು ಮೊಬೈಲ್‌ಗೆ ಅಡಿಕ್ಟ್‌ ಆಗಿದ್ದಾರಾ? ಚಟ ಬಿಡಿಸಲು ಇಲ್ಲಿದೆ TIPS

Raja Marga Column : ಮಕ್ಕಳು ಮೊಬೈಲ್‌ ಗೆ ಆಕರ್ಷಿತರಾಗುವುದು ಸಹಜ. ಆದರೆ, ಅವರಿಗೆ ಅದು ದೊಡ್ಡ ಚಟವಾಗಿ ಬೆಳೆಯದಂತೆ ನೋಡಿಕೊಳ್ಳುವುದು ಫೋಷಕರ ಜವಾಬ್ದಾರಿ. ಆದರೆ, ಹೇಗೆ? ಇಲ್ಲಿದೆ ಟಿಪ್ಸ್

VISTARANEWS.COM


on

Mobile addiction in Children
Koo
RAJAMARGA

ಆನ್ಲೈನ್ ಕ್ಲಾಸ್ ನೆಪದಲ್ಲಿ ಮಕ್ಕಳ ಕೈಗೆ ಮೊಬೈಲ್ (Mobile in the hands of children) ಎಂಬ ಮಾಯಾವಿ ಬಂದಾಗಿದೆ. ಮಕ್ಕಳನ್ನು ಈ ಮಾಯಾಜಾಲದಿಂದ ಸದ್ಯಕ್ಕೆ ಹೊರತರುವುದು ಕಷ್ಟ ಎಂಬ ಪರಿಸ್ಥಿತಿಯು ಎದುರಾಗಿದೆ. ನನ್ನ ಅನುಭವಕ್ಕೆ ಸಾವಿರಾರು ಇಂತಹ ಘಟನೆಗಳು ಬಂದಿವೆ. ಅವುಗಳಲ್ಲಿ ಒಂದೆರಡು ಘಟನೆಗಳನ್ನು ಮಾತ್ರ ಇಲ್ಲಿ (Raja Marga Column) ಉಲ್ಲೇಖ ಮಾಡುತ್ತೇನೆ.

ಘಟನೆ 1- ಒಂದು ಮಧ್ಯಾಹ್ನದ ಹೊತ್ತಿಗೆ ನನಗೆ ನನ್ನ ಶಾಲೆಯ ಪೋಷಕರಿಂದ ಒಂದು ಕಾಲ್ ಬಂತು. ಆ ಅಮ್ಮ ತುಂಬಾ ಆತಂಕದಿಂದ ಮಾತಾಡುತ್ತಿದ್ದರು.
“ಸರ್, ನನ್ನ ಮಗಳು ನಿಮ್ಮ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳಿಗೆ ಮ್ಯೂಸಿಕ್ ಕೇಳಲು 20 ಸಾವಿರ ರೂಪಾಯಿ ಬೆಲೆಯ ಮೊಬೈಲ್ ಬೇಕಂತೆ. ನನ್ನ ಗಂಡ ನನ್ನನ್ನು ಬಿಟ್ಟು ಹೋಗಿದ್ದಾರೆ. ನಾನು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದೇನೆ. ಎಂಟು ಸಾವಿರ ನನ್ನ ಎರಡು ತಿಂಗಳ ಆದಾಯ! ಅವಳು ಬಾವಿಕಟ್ಟೆಯ ಮೇಲೆ ಕೂತು ನನ್ನನ್ನು ಹೆದರಿಸುತ್ತಿದ್ದಾಳೆ. ದುಡ್ಡು ಕೊಡದಿದ್ದರೆ ಬಾವಿಗೆ ಹಾರ್ತಾಳೆ ಅಂತೆ. ನೀವೇ ಬುದ್ಧಿ ಹೇಳಬೇಕು ಅವಳಿಗೆ!”

ನಾನು “ಅವಳಿಗೆ ಮೊಬೈಲ್ ಕೊಡಿ. ನನಗೆ ಮಾತಾಡಲು ಇದೆ” ಎಂದೆ. ಆ ಕಡೆಯಿಂದ ನನಗೆ ಆ ಹುಡುಗಿಯ ಧ್ವನಿ ಕೇಳಿಸಿತು. ನಾನು ಹೇಳಿದೆ.

“ಮಗಳೆ, ನಾನು ನಿನಗೆ ಮೊಬೈಲ್ ಕೊಡಿಸಬಾರದು ಎಂದು ನಿನ್ನ ಅಮ್ಮನಿಗೆ ಹೇಳಿದ್ದೇನೆ. ಬಾವಿಗೆ ಹಾರುತ್ತೀ ಆದರೆ ಹಾರು. ಏನೂ ಬೇಜಾರು ಇಲ್ಲ!” ಎಂದೆ. ಆ ಕಡೆಯಿಂದ ಗಾಢವಾದ ಮೌನ. ಅವಳು ಕಣ್ಣೀರು ಒರೆಸುತ್ತಾ ಮನೆಗೆ ಬಂದಳು ಮತ್ತು ಮೊಬೈಲ್ ಬೇಕು ಎಂದು ಆಮೇಲೆ ಹಠ ಮಾಡಿಲ್ಲ ಎಂದು ಅವಳ ಅಮ್ಮ ನನಗೆ ಮುಂದೆ ಪೋಷಕರ ಸಭೆಗೆ ಬಂದಾಗ ಹೇಳಿದರು.

ಘಟನೆ 2- ಒಂದು ಬೆಳಗ್ಗೆ ಒಬ್ಬ ತಾಯಿ ತನ್ನ 18 ವರ್ಷದ ಮಗಳನ್ನು ಕರೆದುಕೊಂಡು ನನ್ನ ಬಳಿಗೆ ಬಂದಿದ್ದರು. ಅವರದ್ದು ಕೂಡ ಅದೇ ಹಿನ್ನೆಲೆಯ ಕುಟುಂಬ. ಅಮ್ಮ ಹೇಳುತ್ತ ಹೋದರು.

“ಸರ್, ನನಗೆ ಒಬ್ಬಳೇ ಮಗಳು. ನನ್ನ ಗಂಡ ನನ್ನ ಜೊತೆ ಇಲ್ಲ. ಹಠ ಮಾಡಿ ಅವಳು ಮೊಬೈಲ್ ತೆಗೆದುಕೊಂಡಿದ್ದಾಳೆ. ರಾತ್ರಿ ನನ್ನ ಪಕ್ಕದಲ್ಲಿ ಕಂಬಳಿ ಹೊದ್ದು ಮಲಗುತ್ತಾಳೆ. ನಾನು ಅವಳು ಮಲಗಿದ್ದಾಳೆ ಎಂದು ಭಾವಿಸಿಕೊಂಡಿದ್ದೆ. ಮೊನ್ನೆ ಬೆಳಗ್ಗೆ ಅವಳ ಮೊಬೈಲ್ ಚೆಕ್ ಮಾಡಿದಾಗ ನನಗೆ ಶಾಕ್ ಕಾದಿತ್ತು. ನನ್ನ ಪ್ರೀತಿಯ ಮಗಳು ನನ್ನ ಪಕ್ಕದಲ್ಲಿ ಕಂಬಳಿ ಹೊದ್ದು ಮಲಗಿ ಅದರ ಒಳಗಿನಿಂದ ತನ್ನ ಪ್ರೀತಿಯ ಹುಡುಗನಿಗೆ ಇಡೀ ರಾತ್ರಿ ನೂರಕ್ಕಿಂತ ಹೆಚ್ಚು ಅಶ್ಲೀಲ ಮೆಸೇಜ್ ಸೆಂಡ್ ಮಾಡಿದ್ದಾಳೆ! ಅಷ್ಟಕ್ಕೂ ಆ ದರಿದ್ರ ಹುಡುಗ ಅಷ್ಟೇ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ! ನನ್ನ ಮಗಳು ಹೀಗೆ ಮಾಡ್ತಾಳೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ. ನೀವೇ ಬುದ್ಧಿ ಹೇಳಬೇಕು!” ಎಂದು ಅಳಲು ಆರಂಭ ಮಾಡಿದರು.

ಹುಡುಗಿಯ ಮುಖದಲ್ಲಿ ಒಂದು ಸಣ್ಣ ಗಿಲ್ಟ್ ಕೂಡ ಇರಲಿಲ್ಲ. ಅವಳನ್ನು ಮಾತಾಡಿಸಿದಾಗ ಅವಳು ಹೇಳಿದ ಎರಡು ಮಾತು ನನ್ನನ್ನು ಬೆಚ್ಚಿ ಬೀಳಿಸಿತು.
“ಅಮ್ಮನಿಗೆ ಬುದ್ಧಿ ಇಲ್ಲ ಸರ್. ಅವಳು ಹಳೆಯ ಕಾಲದವರು. ನಮ್ಮ ಕಾಲೇಜಿನಲ್ಲಿ ಇದೆಲ್ಲ ಕಾಮನ್. ನಾನೇನು ಓಡಿ ಹೋಗುವುದಿಲ್ಲ ಎಂದು ಅಮ್ಮನಿಗೆ ಹೇಳಿ!”

ಆಕೆಯನ್ನು ಮುಂದೆ ಕೂರಿಸಿ ಅಮ್ಮನ ಅಸಹಾಯಕ ಸ್ಥಿತಿ ಮತ್ತು ಆತಂಕಗಳನ್ನು ಅವಳಿಗೆ ಅರ್ಥ ಮಾಡಿಸಿ ಕಳುಹಿಸಿದೆ. ಎಷ್ಟು ಅವಳಿಗೆ ಅರ್ಥ ಆಯಿತೋ ನನಗೆ ಗೊತ್ತಾಗಲೇ ಇಲ್ಲ!

mobile addiction in children

ಇದೀಗ ಸಣ್ಣ ಸಣ್ಣ ಮಕ್ಕಳ ಕೈಗೆ ಮೊಬೈಲ್ ಬಂದೇ ಬಿಟ್ಟಿತು!

ಒಂದು ಹತ್ತು ವರ್ಷಗಳ ಹಿಂದೆ ಹದಿಹರೆಯದ ಮಕ್ಕಳಲ್ಲಿ ಮೊಬೈಲ್ ಅಡಿಕ್ಷನ್ (Mobile addiction) ಬಗ್ಗೆ ನಾನು ಪೋಷಕರ ಸಭೆಯಲ್ಲಿ ಮಾತಾಡುತ್ತಿದ್ದೆ. ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಣ್ಣ ಮಕ್ಕಳ ಕೈಗೆ ಮೊಬೈಲ್ ಬಂದಾಗಿದೆ! ಶಿಕ್ಷಣ ಇಲಾಖೆಯು ಕೊರೊನಾ ಸಂದರ್ಭದಲ್ಲಿ ಜಾರಿಗೆ ತಂದ ವಿದ್ಯಾಗಮ ಮತ್ತು ಆನ್ಲೈನ್ ಕ್ಲಾಸ್‌ಗಳ ಪರಿಣಾಮವಾಗಿ ಹೆತ್ತವರೇ ಮಕ್ಕಳಿಗೆ ಮೊಬೈಲ್ ಫೋನ್ ಕೊಡಿಸಿದ್ದಾರೆ. ಮಕ್ಕಳಿಗೆ ಆಗ ಸಾಕಷ್ಟು ಬಿಡುವಿನ ಹೊತ್ತು ಇತ್ತು. ಕೊರೊನಾ ಸಂದರ್ಭ ಮನೆಯ ಒಳಗೆ ಬಂಧಿಯಾದ ಮಕ್ಕಳಿಗೆ ಮೊಬೈಲ್ ಫೋನ್ ಮನರಂಜನೆಯ ತಾಣ ಆಯಿತು! ಮಕ್ಕಳು ಆ ಮಾಯಾಯಂತ್ರಕ್ಕೆ ಅಡಿಕ್ಟ್ ಆದರು.

Mobile addiction

ಮೊಬೈಲ್ ಎನ್ನುವುದು ಸ್ವೇಚ್ಛೆಯ ಸಂಕೇತ!

ಸ್ಥಿರ ದೂರವಾಣಿ (Land Phone) ಇದ್ದಾಗ ಈ ಸಮಸ್ಯೆ ಬಂದಿರಲಿಲ್ಲ. ಮೊಬೈಲ್ ಅಂದರೆ ಹುಚ್ಚು ಸ್ವಾತಂತ್ರ್ಯದ ಪ್ರತೀಕ ಎಂದು ನಾನು ಎರಡು ದಶಕಗಳ ಹಿಂದೆ ಹೇಳಿದ್ದೆ. ಸ್ವೇಚ್ಛೆಯನ್ನು ಬಯಸುವ ಮಕ್ಕಳ ಕೈಗೆ ಮೊಬೈಲ್ ಬಂತು ಅಂತಾದರೆ ಮಕ್ಕಳು ನಮ್ಮ ನಿಯಂತ್ರಣಕ್ಕೆ ಸಿಗುವುದು ಹೇಗೆ?

ಮೊಬೈಲ್ ಅತಿ ಬಳಕೆಯ ಅಡ್ಡ ಪರಿಣಾಮಗಳು

1) ಮಕ್ಕಳು ಅಶ್ಲೀಲ ಸೈಟ್ ಹಾಗೂ ಪೋರ್ನ್ ಸೈಟ್‌ಗಳನ್ನು ಸುಲಭವಾಗಿ ತಲುಪುತ್ತಿದ್ದಾರೆ! ಇವುಗಳು ಮಕ್ಕಳಲ್ಲಿ ಅಡಿಕ್ಷನ್ ಹುಟ್ಟಿಸುತ್ತಿವೆ.
2) ಹೆಚ್ಚು ಹಿಂಸೆ ಇರುವ ಮತ್ತು ಡಾರ್ಕ್ ಪುಟಗಳು ಇರುವ ವೆಬ್ ಸೀರೀಸ್ ಮಕ್ಕಳಿಗೆ ಸುಲಭವಾಗಿ ಆಕ್ಸೆಸ್ ಆಗುತ್ತಾ ಇದೆ!

3) ಗೆಳೆತನದ ಹೆಸರಿನಲ್ಲಿ ಆರಂಭವಾದ ಹುಡುಗ ಮತ್ತು ಹುಡುಗಿಯರ ಸಲ್ಲಾಪಗಳು ಮುಂದೆ ಅಶ್ಲೀಲ ಸಂಭಾಷಣೆ, ಅಶ್ಲೀಲ ಫೋಟೊಗಳ ರವಾನೆ, ವಿಡಿಯೊಗಳ ವಿನಿಮಯ ಇತ್ಯಾದಿ ನಿರ್ಭೀತಿಯಿದ ನಡೆಯುತ್ತಿವೆ. ಇದ್ಯಾವುದೂ ಪೋಷಕರ ಗಮನಕ್ಕೆ ಬರುವುದಿಲ್ಲ! ಮಕ್ಕಳು ವಿನಿಮಯ ಮಾಡಿಕೊಂಡ ಅಶ್ಲೀಲ ಫೋಟೊ ಮತ್ತು ಸಂಭಾಷಣೆಗಳು ಮುಂದೆ ವೈರಲ್ ಆಗಿ ಹಲವಾರು ಹದಿಹರೆಯದ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿವೆ. ನಡೆಯುತ್ತ ಇವೆ!

4) ತಡರಾತ್ರಿಯ ಹೊತ್ತು ನಡೆಯುವ ಚಾಟ್‌ಗಳು ಮಕ್ಕಳ ನಿದ್ದೆ ಕದಿಯುತ್ತಿವೆ. ಇದರಿಂದ ನೂರಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ.
5) ಮಕ್ಕಳೇ ಮಾಡಿಕೊಂಡ ವಾಟ್ಸ್‌ ಆಪ್‌ ಗುಂಪುಗಳ ಚಾಟ್‌ಗಳು ಮಕ್ಕಳ ಖಾಸಗಿತನವನ್ನು ಖಾಲಿ ಮಾಡುತ್ತಿವೆ!
6) ಫೇಸ್ ಬುಕ್‌ನಲ್ಲಿ ಯಾರ್ಯಾರ ಗೆಳೆತನ ಮಾಡಿಕೊಂಡು ನಂತರ ನಂಬರ್ ವಿನಿಮಯ ಮಾಡಿಕೊಂಡ ಮಕ್ಕಳು ಮುಂದೆ ಮನೆಬಿಟ್ಟು ಅವರನ್ನು ಹುಡುಕಿಕೊಂಡು ಹೋಗುವ ಪ್ರಸಂಗಗಳು ನೂರಾರು ನಡೆದಿವೆ!

7) ಮಕ್ಕಳ ಏಕಾಗ್ರತೆ ಖಾಲಿ ಆಗ್ತಾ ಇದೆ. ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.
8) ಮಕ್ಕಳು ಹಿಂಸೆಯನ್ನು ಪ್ರಚೋದನೆ ಮಾಡುವ ನೂರಾರು ವಿಡಿಯೊ ಗೇಮಗಳಿಗೆ ಅಡಿಕ್ಟ್ ಆಗ್ತಾ ಇದ್ದಾರೆ. ಇದರಿಂದಾಗಿ ಆತ್ಮಹತ್ಯೆಗೆ ಶರಣಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.
9) ಮಕ್ಕಳಲ್ಲಿ ಅಪರಾಧಿ ಪ್ರವೃತ್ತಿ ಹೆಚ್ಚುತ್ತಿದೆ. ಕ್ರೈಮ್‌ಗಳಲ್ಲಿ ಇಂದು ಸಣ್ಣ ಪ್ರಾಯದ ಮಕ್ಕಳು ಅಂಕುಶ ಇಲ್ಲದೆ ಭಾಗವಹಿಸುತ್ತಿದ್ದಾರೆ.
10) ಮಕ್ಕಳಲ್ಲಿ ನೈತಿಕ ಮೌಲ್ಯಗಳ ಕುಸಿತ ಉಂಟಾಗುತ್ತಿದೆ. ಕೌಟುಂಬಿಕ ವ್ಯವಸ್ಥೆಯು ನಾಶ ಆಗ್ತಾ ಇದೆ. ಮಕ್ಕಳು ಕುಟುಂಬದ ಜೊತೆಗೆ ಕಳೆಯುವ ಹೊತ್ತು ಕಡಿಮೆ ಆಗ್ತಾ ಇದೆ.!

ಇದನ್ನೂ ಓದಿ : ರಾಜ ಮಾರ್ಗ ಅಂಕಣ :‌ ಯಾವತ್ತಾದ್ರೂ ತುಂಬ ಡಿಪ್ರೆಸ್‌ ಆದಾಗ ನೀವು ಈ ಕಪ್ಪು ಜಿಂಕೆ ಕಥೆ ಓದಿಬಿಡಿ ಸಾಕು!

how to control mobile addiction in children

ಹೆತ್ತವರು ಜಾಗೃತರಾಗಬೇಕು!

ಬೇರೆ ದಾರಿ ಯಾವುದೂ ಕಾಣಿಸುತ್ತಿಲ್ಲ. ಹೆತ್ತವರ ಮತ್ತು ಶಿಕ್ಷಕರ ಜಾಗೃತಿ ಒಂದೇ ಸದ್ಯದ ಪರಿಹಾರ.
1) ಹೆತ್ತವರು ಮಕ್ಕಳಿಗೆ ಮೊಬೈಲ್ ಕೊಡಿಸುವ ಮುನ್ನ ನೂರು ಬಾರಿ ಯೋಚನೆ ಮಾಡಬೇಕು. ಭದ್ರತೆಯ ದೃಷ್ಟಿಯಿಂದ ಮೊಬೈಲ್ ಕೊಡಿಸಲೇ ಬೇಕು ಅಂತಾದರೆ ಬಟನ್ ಫೋನ್ ಕೊಡಿಸಿ. ಆಂಡ್ರಾಯ್ಡ್ ಅಥವ ಸ್ಮಾರ್ಟ್ ಫೋನ್ ಬೇಡವೇ ಬೇಡ!

2) ಈಗಲೇ ಮೊಬೈಲ್ ಫೋನ್ ತೆಗೆಸಿಕೊಟ್ಟಿದ್ದರೆ ಅದರ ಬಳಕೆ ಕಡಿಮೆ ಮಾಡಲು ಸೂಚನೆ ನೀಡಿ. ಆನ್ಲೈನ್ ಕ್ಲಾಸ್ ಸಂದರ್ಭದಲ್ಲಿ ಹೆತ್ತವರು ಅವರ ಜೊತೆ ಕಡ್ಡಾಯವಾಗಿ ಕೂತಿರಲೇಬೇಕು. ಕೋರೋನಾ ನಂತರ ಈಗ ತರಗತಿಗಳು ಲೈವ್ ಆಗಿ ನಡೆಯುತ್ತಿರುವ ಕಾರಣ ಶಿಕ್ಷಕರು ಕೂಡ ಆನ್‌ಲೈನ್ ತರಗತಿ ನಿಲ್ಲಿಸುವುದು ಒಳ್ಳೆಯದು!

3) ಹೆತ್ತವರು ಮಕ್ಕಳ ಮೊಬೈಲ್ ಫೋನ್‌ ಗಳನ್ನು ದಿನಕ್ಕೊಮ್ಮೆ ಚೆಕ್ ಮಾಡುವುದರಲ್ಲಿ ಯಾವುದೇ ತಪ್ಪು ಇಲ್ಲ. ಅಗತ್ಯವಾಗಿ ಮಾಡಿ.

4) ಮಕ್ಕಳು ಹೆಚ್ಚು ಹೊತ್ತು ಕುಟುಂಬದ ಜೊತೆ ಕಳೆಯುವ ಹಾಗೆ ಮಾಡಿ. ಮಕ್ಕಳನ್ನು ಹೆಚ್ಚು ಹೊತ್ತು ಏಕಾಂತದಲ್ಲಿ ಇಡುವುದು ಸರಿಯಲ್ಲ.

5) ಮಕ್ಕಳು ರಾತ್ರಿ ಹತ್ತು ಗಂಟೆಯ ನಂತರ ಆನ್‌ಲೈನ್ ಇರಬಾರದು ಎಂದು ನೇರ ಸೂಚನೆ ನೀಡಿ.

6) ಮಕ್ಕಳು ಮನೆಯಲ್ಲಿ ತಮ್ಮ ಹೆತ್ತವರ ಮತ್ತು ಇತರರ ಜೊತೆಗೆ ಮುಕ್ತವಾಗಿ ಮಾತಾಡುವ ಹೊತ್ತನ್ನು ಖಾತರಿಪಡಿಸಿ.

7) ಮಕ್ಕಳಲ್ಲಿ ನೈತಿಕ ಮೌಲ್ಯಗಳು ಮತ್ತು ಭಾರತೀಯ ಸಂಸ್ಕೃತಿಯನ್ನು ಹೆಚ್ಚು ಮಾಡಲು ಹೆತ್ತವರು ಮತ್ತು ಶಿಕ್ಷಕರು ಪ್ರಯತ್ನ ಮಾಡುವುದು ತುಂಬಾ ಅಗತ್ಯ.

mobile usage
ಹೊಟ್ಟೆಗೆ ತಿನ್ನುವುದಕ್ಕೂ ಮೊಬೈಲೇ ಬೇಕು

ಇದನ್ನೂ ಓದಿ : Raja Marga Column : ನಡುಹಗಲಿನಲಿ ರವಿ ಅಸ್ತಂಗತ; ಬೆಳಗೆರೆ ನಿರ್ಗಮಿಸಿ 3 ವರ್ಷ

8) ಹೆತ್ತವರು ಈ ವಿಷಯದಲ್ಲಿ ಹದಿಹರೆಯದ ಮಕ್ಕಳ ಜೊತೆಗೆ ಸರ್ವಾಧಿಕಾರಿಗಳ ಹಾಗೆ ವರ್ತಿಸುವುದಕ್ಕಿಂತ ಆಪ್ತ ಗೆಳೆಯರ ಹಾಗೆ ವರ್ತಿಸುವುದರಿಂದ ಹೆಚ್ಚಿನ ಅನಾಹುತಗಳನ್ನು ತಪ್ಪಿಸಬಹುದು.

9) ಮಕ್ಕಳು ತಮ್ಮ ಮೊಬೈಲ್ ನಂಬರ್‌ಗಳನ್ನು ಅಪರಿಚಿತರ ಜೊತೆಗೆ ಶೇರ್ ಮಾಡದ ಹಾಗೆ ಮಕ್ಕಳಿಗೆ ತರಬೇತಿ ನೀಡಿ. ಅದರ ದುಷ್ಪರಿಣಾಮಗಳ ಬಗ್ಗೆ ಅವರಿಗೆ ತಿಳಿ ಹೇಳಿ.

10) ಮಕ್ಕಳಿಗೆ ಮೊಬೈಲ್ ಅತೀ ಬಳಕೆಯ ಬಗ್ಗೆ ಸ್ವಯಂ ನಿಯಂತ್ರಣದ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ಒಟ್ಟಿನಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಿಸುವ ಪ್ರಯತ್ನ ಎಲ್ಲರೂ ಮಾಡಬೇಕು.

Continue Reading
Advertisement
Vistara Editorial, Let the strengthening government schools
ಕರ್ನಾಟಕ13 mins ago

ವಿಸ್ತಾರ ಸಂಪಾದಕೀಯ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ತಜ್ಞರ ಸೂತ್ರಗಳು ಜಾರಿಯಾಗಲಿ

Dina Bhavishya
ಪ್ರಮುಖ ಸುದ್ದಿ1 hour ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

Sphoorti Salu
ಸುವಚನ1 hour ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

HD Kumaraswamy
ಕರ್ನಾಟಕ7 hours ago

HD Kumaraswamy: ಕಲ್ಲಡ್ಕ ಪ್ರಭಾಕರ ಭಟ್ ಗುಣಗಾನ ಮಾಡಿದ ಎಚ್‌ಡಿಕೆ; ಶ್ರೀರಾಮ ಶಾಲೆ ಕ್ರೀಡೋತ್ಸವದಲ್ಲಿ ಭಾಗಿ

Car accident
ಕರ್ನಾಟಕ7 hours ago

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Houses without infrastructure are not completed PMAY houses
ದೇಶ7 hours ago

ಮೂಲಸೌಕರ್ಯ ಒದಗಿಸದ ಮನೆಗಳು ಪೂರ್ಣಗೊಂಡ ಪಿಎಂಎವೈ ಮನೆಗಳಲ್ಲ!

UP Yoddhas vs Telugu Titans
ಕ್ರೀಡೆ7 hours ago

Pro Kabaddi: ಯೋಧಾಸ್​ ಆರ್ಭಟಕ್ಕೆ ಮುಳುಗಿದ ತೆಲುಗು ಟೈಟಾನ್ಸ್‌

Central government bars onion export to curb inflation
ದೇಶ8 hours ago

ಈರುಳ್ಳಿ ರಫ್ತು ನಿಷೇಧ! ಎಥೆನಾಲ್‌ ಉತ್ಪಾದನೆಗೆ ಕಬ್ಬು ಬಳಸುವಂತಿಲ್ಲ

Nat Sciver-Brunt celebrates dismissing Harmanpreet Kaur
ಕ್ರಿಕೆಟ್8 hours ago

INDW vs ENGW: ಹೀನಾಯವಾಗಿ ಸೋತು ಸರಣಿ ಕಳೆದುಕೊಂಡ ಭಾರತ ಮಹಿಳಾ ತಂಡ

Farmers Protest
ಕರ್ನಾಟಕ8 hours ago

Farmers Protest: ಸ್ವಾಮೀಜಿಗಳ ಸಂಧಾನ ಯಶಸ್ವಿ; ಕಿತ್ತೂರಲ್ಲಿ ಪ್ರತಿಭಟನೆ ಹಿಂಪಡೆದ 9 ಹಳ್ಳಿ ರೈತರು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ1 hour ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ1 day ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema1 day ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema1 day ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema1 day ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ2 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ2 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ3 days ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ3 days ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ಟ್ರೆಂಡಿಂಗ್‌