Assault Case: ಗಂಡ- ಹೆಂಡತಿ ನಡುವೆ ಮೂಗು ತೂರಿಸಿದವನಿಗೆ ಚಾಕು ಇರಿತ - Vistara News

ಬೆಂಗಳೂರು

Assault Case: ಗಂಡ- ಹೆಂಡತಿ ನಡುವೆ ಮೂಗು ತೂರಿಸಿದವನಿಗೆ ಚಾಕು ಇರಿತ

Assault Case: ಬೇಡ ಬೇಡ ಅಂದರೂ ಮಹಿಳೆಯ ಹಿಂದೆ ಬಿದ್ದಿದ್ದ ಯುವಕನಿಗೆ ಮಹಿಳೆಯ ಗಂಡ ಹಾಗೂ ಅಣ್ಣ ಹಲವು ಬಾರಿ ವಾರ್ನಿಂಗ್‌ ಮಾಡಿದ್ದರು. ತಂಗಿ- ಭಾವನ ಮಧ್ಯೆ ಬರಬೇಡ ಎಂದು ಆಕೆಯ ಅಣ್ಣ ವಿನೋದ್ ಎಚ್ಚರಿಸಿದ್ದ. ಆದರೆ ಕಾರ್ತಿಕ್‌ ತನ್ನ ಚಾಳಿ ಬಿಟ್ಟಿರಲಿಲ್ಲ.

VISTARANEWS.COM


on

stabbing assault case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಗಂಡ ಹೆಂಡತಿ (Wife – Husband) ನಡುವೆ ಮೂಗು ತೂರಿಸಿದವನೊಬ್ಬ ಚಾಕು ಇರಿತಕ್ಕೊಳಗಾಗಿ (Assault Case) ಇದೀಗ ಆಸ್ಪತ್ರೆ ಸೇರಿದ್ದಾನೆ. ತಂಗಿ ಹಾಗೂ ಭಾವನ ಸಂಸಾರದ ನಡುವೆ ಬಂದ ಯುವಕನಿಗೆ ಆಕೆಯ ಅಣ್ಣನೇ ಚಾಕುವಿನಿಂದ ಇರಿದು (Stabbing) ಗಾಯಗೊಳಿಸಿದ್ದಾನೆ.

ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಪಂತರಪಾಳ್ಯದಲ್ಲಿ ಘಟನೆ ನಡೆದಿದೆ. ಕಾರ್ತಿಕ್ ಚಾಕು ಇರಿತಕ್ಕೆ ಒಳಗಾಗಿರುವ ಯುವಕ. ಈತ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆಟೋ ಓಡಿಸಿಕೊಂಡು ಇರುತ್ತಿದ್ದವನು ಮಹಿಳೆಯೊಬ್ಬಳ ಹಿಂದೆ ಬಿದ್ದಿದ್ದ. ಈಕೆಗೆ ಮದುವೆಯಾಗಿತ್ತು. ಮದುವೆಯಾಗಿರುವುದು ತಿಳಿದಿದ್ದರೂ ಮಹಿಳೆ ಜೊತೆ ಮಾತನಾಡಲು ಹಾತೊರೆಯುತ್ತಿದ್ದ.

ಬೇಡ ಬೇಡ ಅಂದರೂ ಮಹಿಳೆಯ ಹಿಂದೆ ಬಿದ್ದಿದ್ದ ಯುವಕನಿಗೆ ಮಹಿಳೆಯ ಗಂಡ ಹಾಗೂ ಅಣ್ಣ ಹಲವು ಬಾರಿ ವಾರ್ನಿಂಗ್‌ ಮಾಡಿದ್ದರು. ತಂಗಿ- ಭಾವನ ಮಧ್ಯೆ ಬರಬೇಡ ಎಂದು ಆಕೆಯ ಅಣ್ಣ ವಿನೋದ್ ಎಚ್ಚರಿಸಿದ್ದ. ಆದರೆ ಕಾರ್ತಿಕ್‌ ತನ್ನ ಚಾಳಿ ಬಿಟ್ಟಿರಲಿಲ್ಲ. ಸೋಮವಾರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಪಂತರಪಾಳ್ಯಕ್ಕೆ ಆಕೆಯ ಮನೆ ಕಡೆಗೆ ಕಾರ್ತಿಕ್‌ ಹೋಗಿದ್ದ.

ಈ ವೇಳೆ ಮಹಿಳೆಯ ಅಣ್ಣ ವಿನೋದ್‌, ತನ್ನ ಭಾವ ಸತೀಶ್ ಹಾಗೂ ಗೆಳೆಯ ಸೂರ್ಯನ ಜೊತೆ ಬಂದು ವಿನೋದ್‌ ಅನ್ನು ಅಟಕಾಯಿಸಿಕೊಂಡು ಚಾಕುವಿನಿಂದ ಇರಿದಿದ್ದಾನೆ. ನಾಯಂಡಹಳ್ಳಿಯ ಪಂತರಪಾಳ್ಯದಲ್ಲಿ ಕಾರ್ತಿಕ್‌ನನ್ನು ಲಾಕ್ ಮಾಡಿ ತಲೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಪತ್ನಿಯ ಅನುಮಾನಾಸ್ಪದ ಸಾವು; ಜನರ ಆಕ್ರೋಶಕ್ಕೆ ಹೆದರಿ ಗಂಡ ಕೂಡ ಆತ್ಮಹತ್ಯೆ

ಮಂಡ್ಯ: ಗಂಡನ ಮನೆಯಲ್ಲಿ ಗೃಹಿಣಿಯೊಬ್ಬಳ ಶವ ನೇಣು (Woman Self Harming) ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಇದಾದ ಕೆಲವೇ ಗಂಟೆಗಳಲ್ಲಿ ಗಂಡನ ಶವ ಕೂಡ (Couple Death) ಕೆರೆಯಲ್ಲಿ ಪತ್ತೆಯಾಗಿದೆ. ಗಂಡನ ಮನೆಯ ಉಳಿದವರು ನಾಪತ್ತೆಯಾಗಿದ್ದು, ಗೃಹಿಣಿ ಸಾವಿನಿಂದ ಜನರಲ್ಲಿ ಹುಟ್ಟಿಕೊಂಡಿರುವ ಆಕ್ರೋಶದ ಪರಿಣಾಮ ಅಂಜಿ ತಲೆ ಮರೆಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಕೆ‌.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಸ್ವಾತಿ (21) ಅನುಮಾನಾಸ್ಪದವಾಗಿ ಮೃತಪಟ್ಟಿರುವ ಗೃಹಿಣಿ. ಮೋಹನ್ (26) ಆತ್ಮಹತ್ಯೆ ಮಾಡಿಕೊಂಡಿರುವ ಪತಿ. ಪತ್ನಿಯ ಸಾವಿಗೆ ಹೆದರಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಸ್ವಾತಿ ಸಾವು ಆತ್ಮಹತ್ಯೆಯೋ ಕೊಲೆಯೋ ಎಂಬುದು ಖಚಿತವಾಗಿಲ್ಲ. ಇದು ಗಂಡನ ಮನೆಯವರಿಂದ ಆಗಿರುವ ಕೊಲೆ (Murder) ಎಂದು ಸ್ವಾತಿ ಪೋಷಕರು ಆರೋಪಿಸಿದ್ದಾರೆ.

ನೆನ್ನೆ ರಾತ್ರಿ ಮೋಹನ್ ಮನೆಯಲ್ಲಿ ಪತ್ನಿ ಸ್ವಾತಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆ ಬಳಿಕ ಗಂಡ ಮೋಹನ್ ಹಾಗು ಆತನ ಪೋಷಕರು ಮನೆಯಿಂದ ನಾಪತ್ತೆಯಾಗಿದ್ದರು. ಮೃತ ಯುವತಿಯ ಪೋಷಕರು ಗಂಡ ಹಾಗು ಆತನ ಮನೆಯವರ ವಿರುದ್ಧ ಕೊಲೆ ಆರೋಪ ಮಾಡಿದ್ದು, ರಾತ್ರಿ ಯುವತಿಯ ಸಂಬಂಧಿಕರು ಗಂಡನ ಮನೆಗೆ ನುಗ್ಗಿ ಬೆಂಕಿ ಹಚ್ಚಿ ದಾಂಧಲೆ ಎಸಗಿದ್ದರು.

ಇಂದು ಬೆಳಿಗ್ಗೆ ಕೆರೆಯಲ್ಲಿ ಗಂಡ ಮೋಹನ್ ಶವ ಪತ್ತೆಯಾಗಿದೆ. ಸ್ಥಳಕ್ಕೆ ಕಿಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ದಂಪತಿಗೆ ಒಂದುವರೆ ವರ್ಷದ ಹೆಣ್ಣು ಮಗುವಿದ್ದು, ದಂಪತಿಯ ಸಾವಿನಿಂದ ಅದು ಅನಾಥವಾಗಿದೆ.

ಇದನ್ನೂ ಓದಿ: Assault Case : ಬೆಂಗಳೂರಿನಲ್ಲಿ ನಿಲ್ಲದ ರೋಡ್‌ ರೇಜ್‌ ಕಿರಿಕ್‌; ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಪುಂಡಾಟ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Assault Case: ಫುಡ್ ಡೆಲಿವರಿ ಬಾಯ್‌ನ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ; ಸಿಸಿಟಿವಿಯಲ್ಲಿ ಸೆರೆ

Assault Case: ಬೆಂಗಳೂರಿನ ವಿನಾಯಕ ನಗರ ಲೇಔಟ್‌ನಲ್ಲಿ ಜೊಮ್ಯಾಟೊ ಡೆಲಿವರಿ ಬಾಯ್‌ ಮೇಲೆ ಹಲ್ಲೆ ನಡೆದಿದೆ. ಮೂವರು ಯುವಕರು, ಡೆಲಿವರಿ ಬಾಯ್ ಮೇಲೆ ಏಕಾಏಕಿ ಹಲ್ಲೆ ಮಾಡಿ, ಮೊಬೈಲ್ ಹಾಗೂ ಹಣ ದೋಚಿ ಎಸ್ಕೇಪ್ ಆಗಿದ್ದಾರೆ.

VISTARANEWS.COM


on

Assault Case
Koo

ಬೆಂಗಳೂರು: ಫುಡ್ ಡೆಲಿವರಿ ಮಾಡಲು ಬಂದಿದ್ದ ವೇಳೆ ಜೊಮ್ಯಾಟೊ ಡೆಲಿವರಿ ಬಾಯ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ (Assault Case) ನಗರದ ವಿನಾಯಕ ನಗರ ಲೇಔಟ್‌ನಲ್ಲಿ ನಡೆದಿದೆ. ಮಂಗಳವಾರ ಮಧ್ಯೆ ರಾತ್ರಿ 1 ಗಂಟೆ ವೇಳೆ ಡೆಲಿವರಿ ಬಾಯ್‌ ಮೇಲೆ ನಡೆದಿರುವ ಹಲ್ಲೆಯ ವಿಡಿಯೊ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿನಾಯಕ ನಗರ ಲೇಔಟ್‌ನಲ್ಲಿ ಮನೆಯೊಂದರಿಂದ ಹೊರಬರುತ್ತಿದ್ದಾಗ ಡಿಯೋ ಸ್ಕೂಟರ್‌ನಲ್ಲಿ ಹೋದ ಮೂವರು ಯುವಕರು, ಡೆಲಿವರಿ ಬಾಯ್ ಮೇಲೆ ಏಕಾಏಕಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಯುವಕರು ಮಾರಕಾಸ್ತ್ರ ತೆಗೆಯುತ್ತಿದ್ದಂತೆ ಡೆಲಿವರಿ ಬಾಯ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತನನ್ನು ಅಟ್ಟಾಡಿಸಿಕೊಂಡು ಹೋಗಿರುವ ಯುವಕರು, ಮೊಬೈಲ್ ಹಾಗೂ ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಡೆಲಿವರಿ ಬಾಯ್‌ ಮೇಲೆ ನಡೆದ ದಾಳಿ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ | Viral Video: ರೀಲ್ ಶೋಕಿಗಾಗಿ ನಡುರಸ್ತೆಯಲ್ಲಿ ಮಳೆಯಲ್ಲಿ ಮೈಚಳಿ ಬಿಟ್ಟು ಕುಣಿದ ಮಹಿಳೆ!

ಬಸ್‌ನಿಂದ ಆಯತಪ್ಪಿ ಕೆಳಗೆ ಬಿದ್ದು ವಿದ್ಯಾರ್ಥಿ ಸಾವು

ಉಡುಪಿ: ಬಸ್‌ನಿಂದ ಕೆಳಗೆ ಬಿದ್ದು ವಿದ್ಯಾರ್ಥಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ನಡೆದಿದೆ. ಮಾಳ ಗ್ರಾಮದ ಹುಕ್ರಟ್ಟೆಯ ಜನಿತ್ ಶೆಟ್ಟಿ (19) ಮೃತ. ಕಾರ್ಕಳದಿಂದ (Karkala News) ಬಸ್‌ನಲ್ಲಿ ಕಾಲೇಜಿಗೆ ಪ್ರಾಯಾಣಿಸುತ್ತಿದ್ದಾಗ ವಿದ್ಯಾರ್ಥಿ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.

ಮೃತ ಜನಿತ್ ಶೆಟ್ಟಿ ನಿಟ್ಟೆ ವಿದ್ಯಾಸಂಸ್ಥೆಯ ದ್ವಿತೀಯ ಪಿಯು ವಿದ್ಯಾರ್ಥಿಯಾಗಿದ್ದು, ಕಾರ್ಕಳದಿಂದ ಬಸ್‌ನಲ್ಲಿ ಕಾಲೇಜಿಗೆ ಪ್ರಾಯಾಣಿಸುತ್ತಿದ್ದಾಗ ಕೆಳಗೆ ಬಿದ್ದಿದ್ದ. ಈ ವೇಳೆ ಹಿಂಬದಿಯ ಚಕ್ರ ಹರಿದು ಗಂಭೀರ ಗಾಯಗೊಂಡಿದ್ದ. ತಕ್ಷಣ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಜನಿತ್ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿ ತಾಯಿ ಮತ್ತು ತಂಗಿಯನ್ನು ಅಗಲಿದ್ದಾನೆ.

ಫೇಸ್‌ಬುಕ್ ಸುಂದರಿ ಹಿಂದೆ ಬಿದ್ದು 1.4 ಲಕ್ಷ ಕಳೆದುಕೊಂಡ ಪುರೋಹಿತ!

ಮಂಡ್ಯ: ಫೇಸ್‌ಬುಕ್ ಸುಂದರಿ ಹಿಂದೆ ಬಿದ್ದ ಪುರೋಹಿತನಿಗೆ ಪಂಗನಾಮ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸುಂದರಿ ಮಾತಿಗೆ ಮರುಳಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡ (Fraud Case) ಅರ್ಚಕ, ಇದೀಗ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ‌ ವಿಜಯ್ ಕುಮಾರ್ ಹಣ ಕಳೆದುಕೊಂಡವರು. ಕುಟುಂಬದಿಂದ ದೂರವಾಗಿ ಅರ್ಚಕ ಒಬ್ಬರೇ ವಾಸಿಸುತ್ತಿದ್ದು, ಇವರಿಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಸಿರಿ ಶ್ರೇಷ ಸರಿತಾ ಎಂಬ ಸುಂದರಿ ಪರಿಚಯವಾಗಿದ್ದಾಳೆ. ಹೀಗಾಗಿ ಆಕೆ ಜತೆ ಪ್ರತಿ ದಿನ ವಿಜಯ್ ಕುಮಾರ್ ಚಾಟಿಂಗ್ ಮಾಡುತ್ತಿದ್ದರು.

ವಿಜಯ್ ಕುಮಾರ್ ಬಗ್ಗೆ ತಿಳಿದುಕೊಂಡ ಯುವತಿ, ವಸತಿ, ಆರೋಗ್ಯ ಸಮಸ್ಯೆ ಅಂತ ಹೇಳಿ ಹಂತ ಹಂತವಾಗಿ ಹಣ ಪೀಕಿದ್ದಾಳೆ. ಈ ರೀತಿ ಸುಮಾರು 1 ಲಕ್ಷದ 40 ಸಾವಿರದಷ್ಟು ಹಣವನ್ನು ಸುಂದರಿ ಪಡೆದಿದ್ದಾಳೆ. ಬಣ್ಣ ಬಣ್ಣದ ಮಾತುಗಳಿಂದ ವಿಜಯ್ ಕುಮಾರ್‌ಗೆ ಬಲೆ ಹಾಕಿದ ಸುಂದರಿ ಮಾತು ನಂಬಿ ಫೋನ್ ಪೇ ಮೂಲಕ ವಿಜಯ್ ಹಣ‌ ಕಳುಹಿಸಿದ್ದರು. ಹಣ ಕೊಟ್ಟ ಬಳಿಕ ಭೇಟಿ ಆಗುವಂತೆ ಸುಂದರಿಗೆ ವಿಜಯ್ ಒತ್ತಾಯ ಮಾಡಿದ್ದಾರೆ. ಆದರೆ, ಇಂದು, ನಾಳೆ ಎಂದು ಫೇಸ್‌ಬುಕ್‌ ಬ್ಲಾಕ್ ಮಾಡಿ ಎಸ್ಕೇಪ್ ಆಗಿದ್ದಾಳೆ.

ಸುಂದರಿ ಮಾಯವಾದ ಬಳಿಕ ತಾನು ಮೋಸ ಹೋಗಿರುವ ಬಗ್ಗೆ ವಿಜಯ್ ಕುಮಾರ್‌ಗೆ ಮನವರಿಕೆಯಾಗಿದ್ದು, ಹಣ ವಾಪಸ್ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಮಂಡ್ಯದ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದ್ದು, ಈ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.

Kolkata Doctor Murder Case: ಕೋಲ್ಕತಾ ವೈದ್ಯೆಯ ಅತ್ಯಾಚಾರ- ಕೊಲೆ ಎಸಗುವ ಮುನ್ನ 2 ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಕಾಮುಕ!

ಅರ್ಚಕನಿಗೆ ಮೋಸ ಮಾಡಿರುವ ಯುವತಿಯ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ತೆಲಂಗಾಣದ ಸೋಶಿಯಲ್‌ ಮೀಡಿಯಾ ಸ್ಟಾರ್‌ ಬರ‍್ರೆಲಕ್ಕ ಕರ್ನೆ ಶಿರೀಷಾ ಅವರ ಫೋಟೊ ಇದೆ. ಅಲ್ಲದೇ ಆ ಖಾತೆಯಲ್ಲಿ ಇನ್ನೂ ಅನೇಕ ಯುವತಿಯರ ಫೋಟೊಗಳೂ ಇವೆ. ಹೀಗಾಗಿ ಫೇಕ್‌ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಅರ್ಚಕನಿಗೆ ಮೋಸ ಮಾಡಿದವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Continue Reading

ಪ್ರಮುಖ ಸುದ್ದಿ

Thawar Chand Gehlot: ರಾಜ್ಯಪಾಲರಿಗೆ ಬಂತು ಬುಲೆಟ್‌ಪ್ರೂಫ್‌ ಕಾರು! ಥಟ್‌ ಅಂತ ಯಾಕೀ ಬದಲಾವಣೆ?

Thawar Chand Gehlot: ಮಂಗಳೂರಿನ ಕಾಂಗ್ರೆಸ್‌ ಮುಖಂಡ ಐವನ್‌ ಡಿಸೋಜಾ, ಬಾಂಗ್ಲಾದೇಶದ ಪ್ರಧಾನಿಗೆ ಆದ ಸ್ಥಿತಿಯೇ ರಾಜ್ಯಪಾಲರಿಗೂ ಆಗಲಿದೆ ಎಂದು ಹೇಳಿದ್ದರು. ರಾಜಭವನಕ್ಕೆ ನುಗ್ಗಲೂ ಕಾಂಗ್ರೆಸ್‌ ಕಾರ್ಯಕರ್ತರು ಯತ್ನಿಸಿದ್ದರು.

VISTARANEWS.COM


on

thawar chand gehlot car
Koo

ಬೆಂಗಳೂರು: ಕರ್ನಾಟಕ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ಅವರ ವಾಹನದಲ್ಲಿ ಗುಪ್ತಚರ ಇಲಾಖೆಯ ಸಲಹೆ ಮೇರೆಗೆ ಬದಲಾವಣೆ ಮಾಡಲಾಗಿದೆ. ಇದುವರೆಗೆ ಸಾಮಾನ್ಯ ಕಾರು ಬಳಸುತ್ತಿದ್ದ ರಾಜ್ಯಪಾಲರು (Karnataka Governor) ಇನ್ನು ಮುಂದೆ ಬುಲೆಟ್‌ ಪ್ರೂಫ್‌ ಕಾರು (Bullet proof Car) ಬಳಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ವಿರುದ್ಧ ಪ್ರಾಸಿಕ್ಯೂಷನ್​ಗೆ (prosecution) ಅನುಮತಿ ನೀಡಿದ ಬಳಿಕ ರಾಜ್ಯದ ಎಲ್ಲೆಡೆ ಕಾಂಗ್ರೆಸ್‌ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ರಾಜಭವನಕ್ಕೆ ನುಗ್ಗಲೂ ಕಾಂಗ್ರೆಸ್‌ ಕಾರ್ಯಕರ್ತರು ಯತ್ನಿಸಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದರು. ಇನ್ನು, ರಾಜ್ಯದ ಹಲವೆಡೆ ಗವರ್ನರ್‌ಗೆ ʼಗೋ ಬ್ಯಾಕ್‌ʼ ಪ್ರತಿಭಟನೆ ನಡೆಸಲಾಗಿತ್ತು. ಜೊತೆಗೆ, ರಾಜ್ಯಪಾಲರ ಫೋಟೋಗೆ ಚಪ್ಪಲಿ ಹಾರ ಹಾಕಲಾಗಿತ್ತು. ಕೆಲವು ಕಾಂಗ್ರೆಸ್ ನಾಯಕರಂತೂ ಎಲ್ಲೆ ಮೀರಿದ ಹೇಳಿಕೆಗಳನ್ನು ನೀಡಿದ್ದರು.

ಮಂಗಳೂರಿನ ಕಾಂಗ್ರೆಸ್‌ ಮುಖಂಡ ಐವನ್‌ ಡಿಸೋಜಾ, ಬಾಂಗ್ಲಾದೇಶದ ಪ್ರಧಾನಿಗೆ ಆದ ಸ್ಥಿತಿಯೇ ರಾಜ್ಯಪಾಲರಿಗೂ ಆಗಲಿದೆ ಎಂದು ಹೇಳಿದ್ದರು. ಈ ಕುರಿತು ಅವರ ಮೇಲೆ ಕೇಸು ದಾಖಲಿಸಲಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ, ಎಚ್ಚರಿಕೆ ವಗಹಿಸುವಂತೆ ಗುಪ್ತಚರ ಇಲಾಖೆಯು ರಾಜ್ಯಪಾಲರಿಗೆ ಸೂಚನೆ ನೀಡಿದೆ. ಹೀಗಾಗಿ, ಪ್ರವಾಸದಿಂದ ಬೆಂಗಳೂರಿಗೆ (Bengaluru) ವಾಪಸ್ ಆಗಿರುವ ಗೆಹ್ಲೋಟ್​ ಅವರು ಎಚ್ಚರಿಕೆ ಹೆಜ್ಜೆಯನ್ನಿಟ್ಟಿದ್ದಾರೆ. ನಿನ್ನೆ ಇಂದೋರ್‌ನಿಂ ವಾಪಸ್ ಆಗಿರುವ ರಾಜ್ಯಪಾಲರಿಗೆ ರಾಜ್ಯದ ಗುಪ್ತಚರ ಇಲಾಖೆಯಿಂದ ಬಿಪಿ ಕಾರು ನೀಡಲಾಗಿದೆ.

ರಾಜ್ಯಪಾಲರಾಗಿ ಗೆಹ್ಲೋಟ್ ಅವರು ರಾಜ್ಯಕ್ಕೆ ಆಗಮಿಸಿದ ಬಳಿಕ ಅವರು ಬುಲೆಟ್ ಪ್ರೂಫ್ ಇರುವ ಕಾರನ್ನು ಪಡೆದುಕೊಳ್ಳದೆ ಸಾಮಾನ್ಯ ಇನ್ನೋವಾ ಕಾರನ್ನೇ ಬಳಕೆ ಮಾಡಿದ್ದರು. ಕಳೆದ ಬಾರಿ ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರು ಬಳಸುತ್ತಿದ್ದರು. ಆದರೆ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬೆನ್ನಲ್ಲೇ ಬುಲೆಟ್ ಪ್ರೂಫ್ ಕಾರು ಪಡೆದಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಜೊತೆಗೆ, ಆಗಸ್ಟ್ 29ನೇ ತಾರೀಖಿನವರೆಗೆ ರಾಜ್ಯದಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ರಾಜ್ಯಪಾಲರು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ ರಾಜ್ಯಪಾಲರು ಹೈಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ನೃಪತುಂಗ ವಿವಿ ಮೊದಲ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮಕ್ಕೆ ಕೂಡ ಗೈರಾಗಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಿಂದ ರಾಜ್ಯಪಾಲರು ದೂರ ಉಳಿದಿದ್ದಾರೆ. ಜೊತೆಗೆ ರಾಜ್ಯಪಾಲರ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಲು ಕರೆ ಕೊಟ್ಟಿವೆ.

ವಿಶ್ವವಿದ್ಯಾಲಯಗಳ ವಾರ್ಷಿಕ ಘಟಿಕೋತ್ಸವಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿತ್ತು. ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಘಟಿಕೋತ್ಸವ ಆಯೋಜನೆ ಮಾಡಲಾಗಿದ್ದು, 2020-21 ರಿಂದ 2022-2023 ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಇದರಲ್ಲಿ 792 ವಿದ್ಯಾರ್ಥಿಗಳಿಗೆ ಪದವಿ, 16 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಬೇಕಿತ್ತು. ಆದರೆ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ನೃಪತುಂಗ ವಿವಿಯ ಮೊದಲ ಘಟಿಕೋತ್ಸವ ನಡೆದಿದೆ. ಈಗಾಗಲೇ ರಾಜ್ಯಪಾಲರ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಲು ಕರೆ ಕೊಟ್ಟಿವೆ.

ನೃಪತುಂಗ ವಿವಿಯ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿವಿ ಕುಲಪತಿ ಪ್ರೊ. ಶ್ರೀನಿವಾಸ್ ಎಸ್.ಬಳ್ಳಿ , ಸಿಂಡಿಕೇಟ್ ಸದಸ್ಯರು ಭಾಗಿಯಾಗಿದ್ದರು. ಇಸ್ರೋ ವಿಜ್ಞಾನಿ ನಂದಿನಿ ಹರಿನಾಥ, ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್‌ನ ಡಾ.ರಾಮಸ್ವಾಮಿ ಬಾಲ ಸುಬ್ರಮಣಿಯನ್, ಇನ್ಫೋಸಿಸ್‌ನ ದಿನೇಶ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ಇದನ್ನೂ ಓದಿ: HD Kumaraswamy: ನನ್ನ ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು ಎಂದ ಎಚ್‌ಡಿಕೆ

Continue Reading

ಕ್ರೈಂ

Fraud Case: ʼಗಟ್ಟಿಮೇಳ ನಿಲ್ಸಿʼ ಗಂಡನನ್ನು ತರಾಟೆಗೆ ತೆಗೆದುಕೊಂಡ ಮೊದಲ ಹೆಂಡತಿ, ಮದುವೆ ಮನೆಯಲ್ಲಿ ಗಲಾಟೆ

Fraud Case: ನೋಹನ್‌ ಕಾಂತ್‌ ಎಂಬಾತ ಮದುವೆಯಾಗುತ್ತಿರುವ ಸಂದರ್ಭದಲ್ಲಿ, ಆತನ ಮೊದಲನೇ ಹೆಂಡತಿ ರಶ್ಮಿ ಹಾಗೂ ಅವರ ಅಕ್ಕ ರೋಸಿ ಎಂಬವರು ಮದುವೆ ಮನೆಗೆ ಆಗಮಿಸಿ ಗಲಾಟೆ ಎಬ್ಬಿಸಿದ್ದಾರೆ. ನೋಹನ್‌ ಕಾಂತ್‌ ತನ್ನಿಂದ ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗುತ್ತಿದ್ದಾನೆ ಎಂದು ರಶ್ಮಿ ಆರೋಪಿಸಿದ್ದಾರೆ.

VISTARANEWS.COM


on

fraud Case chikkaballapura
Koo

ಚಿಕ್ಕಬಳ್ಳಾಪುರ: ಗಂಡ (Husband) ಇನ್ನೊಂದು ಮದುವೆ (Marriage) ಆಗುತ್ತಿರುವ ಸಂದರ್ಭದಲ್ಲಿ ಮೊದಲನೇ ಹೆಂಡತಿ (First Wife) ಹಾಗೂ ಆಕೆಯ ಅಕ್ಕ ಮದುವೆ ಮನೆಗೆ ನುಗ್ಗಿ ಗಲಾಟೆ ಎಬ್ಬಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ ಕ್ರೈಸ್ಟ್ ಚರ್ಚ್‌ನಲ್ಲಿ ನಡೆದಿದೆ. ವರ ಮೋಸ (fraud Case) ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ನೋಹನ್‌ ಕಾಂತ್‌ ಎಂಬಾತ ಮದುವೆಯಾಗುತ್ತಿರುವ ಸಂದರ್ಭದಲ್ಲಿ, ಆತನ ಮೊದಲನೇ ಹೆಂಡತಿ ರಶ್ಮಿ ಹಾಗೂ ಅವರ ಅಕ್ಕ ರೋಸಿ ಎಂಬವರು ಮದುವೆ ಮನೆಗೆ ಆಗಮಿಸಿ ಗಲಾಟೆ ಎಬ್ಬಿಸಿದ್ದಾರೆ. ನೋಹನ್‌ ಕಾಂತ್‌ ತನ್ನಿಂದ ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗುತ್ತಿದ್ದಾನೆ ಎಂದು ರಶ್ಮಿ ಆರೋಪಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದ ನಿವಾಸಿ ನೋಹನ್ ಕಾಂತ್ ಹಾಗೂ ಬೆಂಗಳೂರು ಮೂಲದ ನಿವಾಸಿ ರಶ್ಮಿ 2018ರಲ್ಲಿ ವಿವಾಹವಾಗಿದ್ದರು. ವಿಚ್ಛೇದದ ಪಡೆದೇ ಎರಡನೇ ಮದುವೆಯಾಗುತ್ತಿರುವುದಾಗಿ ಗಂಡ ನೋಹನ್ ಕಾಂತ್ ಸ್ಪಷ್ಟನೆ ನೀಡಿದ್ದಾನೆ. ಈ ಹಂತದಲ್ಲಿ ಮದುವೆ ಮನೆಯಲ್ಲಿ ಪರಸ್ಪರರ ನಡುವೆ ಜೋರು ವಾಗ್ವಾದ ನಡೆದಿದ್ದು, ಸಂಬಂಧಿಕರು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದರು. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಎರಡೂ ಕಡೆಯವರ ಮನವೊಲಿಸುವ ಕಾರ್ಯ ನಡೆಸಿದ್ದಾರೆ.

ಗಂಡ- ಹೆಂಡತಿ ನಡುವೆ ಮೂಗು ತೂರಿಸಿದವನಿಗೆ ಚಾಕು ಇರಿತ

ಬೆಂಗಳೂರು: ಗಂಡ ಹೆಂಡತಿ ನಡುವೆ ಮೂಗು ತೂರಿಸಿದವನೊಬ್ಬ ಚಾಕು ಇರಿತಕ್ಕೊಳಗಾಗಿ ಇದೀಗ ಆಸ್ಪತ್ರೆ ಸೇರಿದ್ದಾನೆ. ತಂಗಿ ಹಾಗೂ ಭಾವನ ಸಂಸಾರದ ನಡುವೆ ಬಂದ ಯುವಕನಿಗೆ ಆಕೆಯ ಅಣ್ಣನೇ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.

ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಪಂತರಪಾಳ್ಯದಲ್ಲಿ ಘಟನೆ ನಡೆದಿದೆ. ಕಾರ್ತಿಕ್ ಚಾಕು ಇರಿತಕ್ಕೆ ಒಳಗಾಗಿರುವ ಯುವಕ. ಈತ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆಟೋ ಓಡಿಸಿಕೊಂಡು ಇರುತ್ತಿದ್ದವನು ಮಹಿಳೆಯೊಬ್ಬಳ ಹಿಂದೆ ಬಿದ್ದಿದ್ದ. ಈಕೆಗೆ ಮದುವೆಯಾಗಿತ್ತು. ಮದುವೆಯಾಗಿರುವುದು ತಿಳಿದಿದ್ದರೂ ಮಹಿಳೆ ಜೊತೆ ಮಾತನಾಡಲು ಹಾತೊರೆಯುತ್ತಿದ್ದ.

ಬೇಡ ಬೇಡ ಅಂದರೂ ಮಹಿಳೆಯ ಹಿಂದೆ ಬಿದ್ದಿದ್ದ ಯುವಕನಿಗೆ ಮಹಿಳೆಯ ಗಂಡ ಹಾಗೂ ಅಣ್ಣ ಹಲವು ಬಾರಿ ವಾರ್ನಿಂಗ್‌ ಮಾಡಿದ್ದರು. ತಂಗಿ- ಭಾವನ ಮಧ್ಯೆ ಬರಬೇಡ ಎಂದು ಆಕೆಯ ಅಣ್ಣ ವಿನೋದ್ ಎಚ್ಚರಿಸಿದ್ದ. ಆದರೆ ಕಾರ್ತಿಕ್‌ ತನ್ನ ಚಾಳಿ ಬಿಟ್ಟಿರಲಿಲ್ಲ. ಸೋಮವಾರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಪಂತರಪಾಳ್ಯಕ್ಕೆ ಆಕೆಯ ಮನೆ ಕಡೆಗೆ ಕಾರ್ತಿಕ್‌ ಹೋಗಿದ್ದ.

ಈ ವೇಳೆ ಮಹಿಳೆಯ ಅಣ್ಣ ವಿನೋದ್‌, ತನ್ನ ಭಾವ ಸತೀಶ್ ಹಾಗೂ ಗೆಳೆಯ ಸೂರ್ಯನ ಜೊತೆ ಬಂದು ವಿನೋದ್‌ ಅನ್ನು ಅಟಕಾಯಿಸಿಕೊಂಡು ಚಾಕುವಿನಿಂದ ಇರಿದಿದ್ದಾನೆ. ನಾಯಂಡಹಳ್ಳಿಯ ಪಂತರಪಾಳ್ಯದಲ್ಲಿ ಕಾರ್ತಿಕ್‌ನನ್ನು ಲಾಕ್ ಮಾಡಿ ತಲೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Kolkata Doctor Murder Case: ಕೋಲ್ಕತಾ ವೈದ್ಯೆಯ ಅತ್ಯಾಚಾರ- ಕೊಲೆ ಎಸಗುವ ಮುನ್ನ 2 ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಕಾಮುಕ!

Continue Reading

ಕರ್ನಾಟಕ

HD Kumaraswamy: ನನ್ನ ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು ಎಂದ ಎಚ್‌ಡಿಕೆ

HD Kumaraswamy: ಗಣಿ ಗುತ್ತಿಗೆ ಪ್ರಕರಣದಲ್ಲಿ ತಮ್ಮ ವಿರುದ್ಧ ಚಾರ್ಜ್‌ ಶೀಟ್ ಸಲ್ಲಿಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.

VISTARANEWS.COM


on

HD Kumaraswamy
Koo

ಬೆಂಗಳೂರು: ನನಗೆ ಭಯ ಶುರುವಾಗಿದೆಯಾ? ನನ್ನ ನೋಡಿದರೆ ಹಾಗೆ ಅನಿಸುತ್ತಾ? ಸಿಎಂ ಕಳೆದ ವಾರದಿಂದ ಹೇಗೆ ನಡೆದುಕೊಡಿದ್ದಾರೆ ನೋಡಿದ್ದೀರಲ್ಲಾ? ಮೈಸೂರಿನ ದಾಖಲೆ ಇದೆಯಲ್ಲ. ಮುಡಾ ಆಸ್ತಿಯನ್ನು ನನ್ನ ಆಸ್ತಿ ಅಂತ ಹೇಳುತ್ತಿದ್ದಾರೆ. ಇಂತಹ ಬಂಡತನ ಯಾವ ಸಿಎಂ ಕೂಡ ತೋರಿಲ್ಲ. ನನ್ನ ಬಂಧನ ಮಾಡೋಕೆ ನೂರು ಸಿದ್ದರಾಮಯ್ಯ ಬರಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದರು.

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಕಂಪನಿಗೆ ನಿಯಮ ಉಲ್ಲಂಘಿಸಿ ಗಣಿಗಾರಿಕೆ ಗುತ್ತಿಗೆ ಮುಂಜೂರು ಮಾಡಿದ್ದ ಆರೋಪ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಗೆ ಲೋಕಾಯುಕ್ತ ಸಿದ್ಧತೆ ನಡೆಸುತ್ತಿರುವ ಬಗ್ಗೆ ಕೇಂದ್ರ ಸಚಿವರು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಅಗತ್ಯ ಬಿದ್ರೆ ಕುಮಾರಸ್ವಾಮಿ ಬಂಧನ ಮಾಡುತ್ತೇವೆ ಎಂಬ ಸಿಎಂ ಹೇಳಿಕೆಗೆ ಕಿಡಿಕಾರಿರುವ ಅವರು, ನನಗೆ ಯಾವುದೇ ಭಯ ಇಲ್ಲ, ನನ್ನ ಬಂಧನ ಮಾಡೋಕೆ ನೂರು ಸಿದ್ದರಾಮಯ್ಯ ಬರಬೇಕು ಎಂದು ಹೇಳಿದರು.

ನನ್ನ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ಅನುಮೋದನೆಗೆ ಕೋರಿದ್ದಾರೆ. ಅನುಮತಿ ಕೋರಿರೋದು 2023 ನವೆಂಬರ್‌ನಲ್ಲಿ. ಸುಮಾರು ಹತ್ತು ತಿಂಗಳಾಗಿದೆ. ಆದರೆ ನೆನ್ನೆ ಬೆಳಗ್ಗೆಯಿಂದ ಸಂಜೆವರೆಗೂ ಕುಮಾರಸ್ವಾಮಿಗೆ ಮತ್ತೆ ಗಣಿ ಸಂಕಷ್ಟ ಶುರುವಾಗಿದೆ ಅಂತ ವರದಿಗಳು ಬರುತ್ತಿವೆ. 2023ರ ಜುಲೈನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಬಂದಾಗಲೇ ವರ್ಗಾವಣೆ ದಂಧೆಗೆ ಮುಂದಾದರು. ಅದರ ಬಗ್ಗೆ ನಾನು‌ ವಾಗ್ದಾಳಿ ನಡೆಸಿದೆ, ಇದರಿಂದ ಸರ್ಕಾರಕ್ಕೆ‌ ಮುಜುಗರ ಆಯಿತು, ಆಗ ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಅಂತೆಲ್ಲಾ ಹೇಳಿದರು ಎಂದು ಟೀಕಿಸಿದರು.

ಇದನ್ನೂ ಓದಿ | PM Modi US Visit : ಸೆಪ್ಟೆಂಬರ್‌ನಲ್ಲಿ ಅಮೆರಿಕ ಪ್ರವಾಸ ಮಾಡಲಿದ್ದಾರೆ ಮೋದಿ; ಅಮೆರಿಕ ಚುನಾವಣೆ ನಡುವೆ ಕುತೂಹಲ ಮೂಡಿಸಿದೆ ಅವರ ಭೇಟಿ

ನಾನು 2006ರಲ್ಲಿ ಸಿಎಂ‌ ಆದ ಆರು ತಿಂಗಳಲ್ಲಿ ನನ್ನ ಮೇಲೆ ಆರೋಪ ಬಂದಿತ್ತು. ಗಣಿ ಇಲಾಖೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ್ದರು. ನನಗೆ ಬೆಂಬಲ ನೀಡಿದ ಶಾಸಕನ ಮೇಲೆ ಆರೋಪಗಳು ಬರಲು ಶುರುವಾಯಿತು. ವಿಪಕ್ಷ ಆಗಿದ್ದ ಕಾಂಗ್ರೆಸ್ ನನ್ನನ್ನು ಸಿಲುಕಿಸಲು ಹೊರಟಿತು. ನಾನು ಶಾಸಕರ ಸಂಖ್ಯೆ ಬೆಂಬಲ ಪಡೆಯಲ್ಲ. ಹೋರಾಟ ಶುರು ಮಾಡಿ, ಸದನದಲ್ಲಿ ಚರ್ಚೆ ಮಾಡಿ ಅಂತ ಹೇಳಿದ್ದೆ. ಅದಾದ ಮೇಲೆ ಯಾರೂ ಕೋರ್ಟ್‌ಗೆ ಅರ್ಜಿ ಹಾಕಲಿಲ್ಲ. ಅಂದಿನ ಲೋಕಾಯುಕ್ತಾಗೆ ಗಣಿಗೆ ಸಂಬಂಧಿಸಿದ ದಾಖಲೆ ನೀಡಿದ್ದೆ ಎಂದು ಹೇಳಿದರು.

ಗಣಿ ಅಕ್ರಮ ಪ್ರಕರಣದ ಬಗ್ಗೆ ಲೋಕಾಯುಕ್ತ 2011ರಲ್ಲಿ ವರದಿ ನೀಡಿತ್ತು. ಎರಡು ಮೂರು ಟ್ರಂಕ್‌ಗಳಲ್ಲಿ ವರದಿ ತಂದುಕೊಟ್ಟರು. ಅದರಲ್ಲಿ ಮೂರು ನಾಲ್ಕು ಸಿಎಂ ವರದಿ ಸೇರಿತ್ತು. ಎಸ್.ಎಂ ಕೃಷ್ಣ, ಧರ್ಮಸಿಂಗ್, ನನ್ನ ಮೇಲೆ ವರದಿ ನೀಡಿದರು. ಆ ವರದಿಯಲ್ಲಿ ಅಂದಿನ ಸಿಎಂ ಪ್ರಕರಣದಲ್ಲಿ ಮಿಸ್ ಕಂಡಕ್ಟ್ ರಿಪೋರ್ಟ್‌ ಇತ್ತು. ಅವರ ಮೇಲೆ ಯಾವ ರೀತಿಯ ಆಕ್ಷನ್ ಆಗಬೇಕು ಅಂತ ಒತ್ತಾಯ ಮಾಡಲ್ಲ ಅಂತ ಲೋಕಾಯುಕ್ತ ವರದಿ ನೀಡಿದ್ದರು.

ನಮ್ಮಲ್ಲಿ 28 ಶಾಸಕರು ಮಾತ್ರ ಇದ್ದರು. ಆಗಲೂ ಜನತೆ ಮುಂದೆ ದಾಖಲೆ ಇಟ್ಟಿದ್ದೆ. ಆ ಸಂಘರ್ಷದಲ್ಲಿ ನನ್ನ ಮೇಲೆ ವೈಯಕ್ತಿಕ ಟೀಕೆ ಮಾಡಿದರು. ಸಾಯಿವೆಂಕಟೇಶ್ವರ ಮತ್ತು ಜಂತಕಲ್ ಪ್ರಕರಣ ತಂದರು. ಕಾಂಗ್ರೆಸ್‌ನವರು ಅಬ್ರಹಾಂ ಅವರ ಬ್ಯಾಕ್ ಗ್ರೌಂಡ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡುವೆ, ತನಿಖೆ ಮಾಡುವುದಾಗಿ ಅರ್ಜಿ ಹಾಕಿದ್ದೀರಿ. ಆಗ ನಿಮಗೆ ಅಬ್ರಹಾಂ ಹೀರೋ ಆಗಿದ್ದರು. 2011ರಲ್ಲಿ ಕೋರ್ಟಿಗೆ ಹೋಗಿದ್ದರು ಎಂದು ತಿಳಿಸಿದರು.

2011ರ ಮಾ.3ರಂದು ಅಡಿಷನಲ್ ಸೆಷನ್ ಸಿಟಿ ಸಿವಿಲ್‌ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಎಸ್.ಎಂ.ಕೃಷ್ಣ, ಧರ್ಮಸಿಂಗ್ ಹಾಗೂ ನನ್ನ ಮೇಲೆ ದೂರು ದಾಖಲು ಮಾಡಿದ್ದರು. 2013ರ ನ.8ರಂದು ಮೂವರು ಸಿಎಂ ಹಾಗೂ ಇತರ 11 ಮಂದಿ ಮೇಲೆ ತನಿಖೆ ಆರಂಭವಾಯಿತು. ಹೈಕೋರ್ಟ್‌ನಲ್ಲಿ 2011ರ 20ರಂದು ನನ್ನ ಮೇಲಿದ್ದ ಪ್ರಕರಣ ರದ್ದು ಮಾಡಿ, ಸಾಯಿ ವೆಂಕಟೇಶ್ವರ ಕೇಸ್ ತನಿಖೆ ಮಾಡುವಂತೆ ಆದೇಶ ಮಾಡಲಾಗಿತ್ತು. ಧರ್ಮಸಿಂಗ್ ಪ್ರಕರಣ ರದ್ದು ಮಾಡಲು ಅವರ ಅಡ್ವೋಕೇಟ್ ಬಳಸಿ‌ ವಾದ ಮಾಡಿಸಿದ್ದರು. ಅದರಲ್ಲಿ ನನ್ನ ಕೇಸ್ ಕೂಡ ಸೇರಿದೆ. ಎಸ್.ಎಂ. ಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. ಹೈಕೋರ್ಟ್‌ನಲ್ಲಿ ಸಾಯಿ ವೆಂಕಟೇಶ್ವರ ಕೇಸ್ ಬಾಕಿ ಇದೆ. ಸುಪ್ರೀಂ ಕೋರ್ಟ್‌ಗೆ ಪ್ರಕರಣ ರದ್ದಿಗೆ ಹೋದೆ. ಆಗ ಸಿದ್ದರಾಮಯ್ಯ ಅವರೇ ಸಿಎಂ‌ ಆಗಿದ್ದರು. ಎಸ್‌ಐಟಿ ತನಿಖೆಗೆ ಕೊಡಿ ಅಂತ ಸಿದ್ದರಾಮಯ್ಯ ಸರ್ಕಾರ ಹೋಯಿತು ಎಂದರು.

ಏನಾದರೂ ಮಾಡಿ ಕುಮಾರಸ್ವಾಮಿನ ಒಳಗೆ ಹಾಕಿಸಬೇಕು ಅಂತ ಅವರಿಗೆ ನಿರಾಸೆ ಆಗಿದೆ. 2017ರಲ್ಲಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ನಂತರ ನಾನು ಬೇಲ್ ಪಡೆದುಕೊಂಡು ಹೋದೆ. ಸುಪ್ರೀಂ ಯಾವುದೇ ಕೋರ್ಟಿಗೆ ಹೋಗುವ ಅವಶ್ಯಕತೆ ಇಲ್ಲ ಅಂತ ತೀರ್ಪು ನೀಡಿತ್ತು. ಆದರೆ ಎಸ್‌ಐಟಿ 2017ರ ಜೂ. 20ರಂದು ಮತ್ತೊಂದು ಕೇಸ್ ಹಾಕಿತ್ತು. 2018ರ ಜನವರಿ ತಿಂಗಳಲ್ಲಿ ಮತ್ತೊಂದು ಫೈಲ್ ರಿಪೋರ್ಟ್‌ ಹಾಕಿಕೊಂಡರು. ವಿಪರ್ಯಾಸ ಅವರು ನನ್ನ ಜೊತೆಗೇ ಸರ್ಕಾರ ಮಾಡಬೇಕಾಯಿತು ಎಂದರು.

ಸಿದ್ದರಾಮಯ್ಯ ವಿರುದ್ಧ 61 ಕೇಸ್ ತನಿಖೆಯೇ ಆಗಿಲ್ಲ ಅಂತ ವರದಿ ಆಗಿದೆ. ಹಲವು ಕೇಸ್ ಅವರ ಮೇಲೆ ದಾಖಲಾಗಿ, ತನಿಖೆಯೇ ಆಗಿಲ್ಲ. ಲೋಕಾಯುಕ್ತಾದಲ್ಲಿ 61 ಕೇಸ್ ತನಿಖೆ ಆಗದೆ ಉಳಿದಿದೆ. ಇದನ್ನ ನಾನು ಹೇಳುತ್ತಿಲ್ಲ, ಪತ್ರಿಕೆಗಳಲ್ಲೇ ಬಂದಿದೆ. ನಾನು ಕಪ್ಪು ಚುಕ್ಕೆ‌ ಇಲ್ಲದ ನಾಯಕ, ಹಿಂದುಳಿದ ನಾಯಕ ಅಂತ ಹೇಳಿಕೊಳ್ಳುತ್ತಾರೆ. ಲೋಕಾಯುಕ್ತವನ್ನು ಇವರು ಏನು ಮಾಡಿದರು ಎಂದು ಪ್ರಶ್ನಿಸಿದರು.

ಚಾರ್ಜ್‌ಶೀಟ್‌ನಲ್ಲಿ ಹೆಸರು ಇರುವವರು ಕೇಂದ್ರ ಸಚಿವರಾಗಬಹುದಾ ಎಂಬ ಶಾಸಕ ಹಾಗೂ ಸಿಎಂ‌ ಕಾನೂನು ಸಲಹೆಗಾರ ಪೊನ್ನಣ್ಣ ಪ್ರಶ್ನೆಗೆ ಪ್ರತಿಕ್ರಿಯಿಸಿ, 2011-12ರಲ್ಲೇ ನಾನು ಪ್ರಕರಣವನ್ನು ಮುಚ್ಚಿ ಹಾಕಿಸಬಹುದಿತ್ತು. ಆದರೆ, ಹಾಗೆ ಮಾಡಿಲ್ಲ. ಆದರೆ ಈಗ ಯಾವುದೋ ಹೊಸ ಕೇಸ್ ತೆಗೆಯುತ್ತಿದ್ದಾರೆ. ಸುಪ್ರೀಂ ಕೋರ್ಟ್ ತನಿಖೆಗೆ ಹೋಗುವ ಮುನ್ನ ರಾಜ್ಯಪಾಲರ ಅನುಮತಿ ಪಡೆಯಿರಿ ಅಂತ ಕೋರ್ಟ್‌ ಹೇಳಿದೆಯಾ? ನಾನು ಸಚಿವನಾಗಿರುವುದೇ ಎರಡು ತಿಂಗಳ ಹಿಂದೆ. 2017ರಲ್ಲಿ ಮೂರು ತಿಂಗಳೊಳಗೆ ವರದಿ ಕೊಡಿ ಅಂತ ಕೋರ್ಟ್‌ ಹೇಳಿತ್ತು. ಈಗ 2024, ಇನ್ನೂ ವರದಿ ಕೊಡದೆ ಯಾಕೆ ಕುಳಿತಿದ್ದೀರಿ ಎಂದು ಪ್ರಶ್ನಿಸಿದರು.

ಸಾಯಿ ವೆಂಕಟೇಶ್ವರ ಪ್ರಕರಣದ ಎಲ್ಲಾ ದಾಖಲೆ ಇಲ್ಲಿ ಇದೆ ಎಂದು ದಾಖಲೆ‌ ಪ್ರದರ್ಶಿಸಿದ ಅವರು, ನಾನು ಸಹಿ ಹಾಕಿದ್ದೀನಿ ಅಂತ ಯಾರೋ ಈಗ ಹೇಳುತ್ತಿದ್ದಾರೆ. ನಾನು ಸಹಿ ಹಾಕಿದ್ದು ಯಾವುದಕ್ಕೆ ಅಂತ ತನಿಖೆ ಮಾಡಿದ್ದೀರಾ? ಏನೆಲ್ಲಾ ಫ್ರಾಡ್ ಆಗಿದೆ ಅಂತ ನೋಡಿದ್ದೀರಾ? 20 ಲಕ್ಷ ಹಣ ಯಾರೋ ಅಧಿಕಾರಿ ಮಗನ ಅಕೌಂಟಿಗೆ ತೆಗೆದುಕೊಂಡಿದ್ದ. ನಾನು ಅದನ್ನ ಪತ್ತೆ ಹಚ್ಚಿದ್ದು, ಪೊಲೀಸರಲ್ಲ. ಪೊನ್ನಣ್ಣ ನಿನ್ನ ಕಾನೂನು, ನಿನಗಿಂತ ನಮಗೆ ಗೊತ್ತು ಎಂದರು.

ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣದ 2009ರಲ್ಲಿ ನಡೆದಿರುವುದು, ನಾನು ಆಗ ಸಿಎಂ‌ ಆಗಿರಲಿಲ್ಲ. ನನ್ನ ಬಳಿ ಫೈಲ್ ಬಂದಿದೆಯೋ ಇಲ್ಲವೋ ಅದು ಪ್ರೂವ್ ಆಗಿಲ್ಲ. 2015ರಲ್ಲಿ ಬೇಲೆಕೇರಿ ಗಣಿಗೆ ಅನುಮತಿ ನೀಡಲಾಗಿದೆ. ಅಲ್ಲಿ ಈಗಲೂ ಮೈನಿಂಗ್ ನಡೆಯುತ್ತಿದೆ. ಅದಕ್ಕೂ ಅನುಮತಿ ನೀಡಿದ್ದಾರೆ. ಈ ದಾಖಲೆಗಳನ್ನು ಈಗಲೇ ಕೊಟ್ಟರೆ ರೆಕಾರ್ಡ್ ತಿದ್ದೋರು ಅನೇಕರಿದ್ದಾರೆ. ನಾನೂ ಸೇಫ್ ಗೇಮ್ ಆಡಬೇಕಲ್ವಾ ಎಂದರು.

ಇದನ್ನೂ ಓದಿ | ICC Chairman Election: ಅಮಿತ್​ ಶಾ ಮಗ ಜಯ್​ ಶಾ ಐಸಿಸಿಯ ಮುಂದಿನ ಅಧ್ಯಕ್ಷ?

ಬಿಜೆಪಿ ಮೇಲೆ 21 ಕೇಸ್ ಇದೆ ಅಂತ ಬೊಂಬಡಿ ಹೊಡೆಯುತ್ತಾರೆ. ಸತ್ತಿರೋ ಕೇಸ್ ಈಗ ತೆರೆದಿದ್ದಾರೆ, ಜೀವ ಇರುವ ಕೇಸ್‌ ಅದರೂ ತನ್ನಿ ಸಿದ್ದರಾಮಯ್ಯ ಅವರೇ? ಎಂದ ಅವರು, ಕುಮಾರಸ್ವಾಮಿ ಮೇಲೆ ತನಿಖೆ ವಿಳಂಬ ಹೀಗೆಲ್ಲಾ ಹೇಳಿಕೊಂಡು ಓಡಾಡ್ತಿದ್ದಾರೆ. ಮುಡಾದಲ್ಲಿ ಸಿಎಂ 14 ಸೈಟ್ ಹೇಗೆ ಪಡೆದುಕೊಂಡರು? ಭೂಮಿ ನಿಮ್ಮದೇ ಅಂತ ಅಂದುಕೊಳ್ಳೋಣ. ಆದರೆ ಕಾನೂನಿನಲ್ಲಿ ಏನಿದೆ? ದಾಖಲೆ ತಿದ್ದುಪಡಿ ಮಾಡಿ ಏನೆಲ್ಲಾ ಮಾಡಿದ್ದೀರಿ ಎಂಬುವುದು ಗೊತ್ತಿದೆ. ಸಾಯಿ ಮಿನರಲ್ಸ್ ವಿಚಾರದಲ್ಲಿ ನಾನು ಹೋರಾಟ ಮಾಡುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ಕಾನೂನು ಮೊರೆ ಹೋಗಲೇಬೇಕು, ಕೋರ್ಟ್‌ ತೀರ್ಪಿಗೆ ನಾವು ತಲೆಬಾಗಲೇಬೇಕ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Continue Reading
Advertisement
Kolkata Doctor Murder Case
ದೇಶ11 mins ago

Kolkata Doctor Murder Case: ಕೋಲ್ಕತ್ತಾ ವೈದ್ಯೆ ಅತ್ಯಾಚಾರ; ಮತ್ತೆ ನೆನಪಿಗೆ ಬಂದಳು ಕರ್ನಾಟಕ ಮೂಲದ ನರ್ಸ್ ಅರುಣಾ ಶಾನ್‌ಬಾಗ್

bangaldesh Unrest
ದೇಶ13 mins ago

Bangladesh Unrest: ಬಾಂಗ್ಲಾದಲ್ಲಿ ಹಿಂದೂಗಳನ್ನು ರಕ್ಷಿಸಿ- ನಾಲ್ವರು ಶಂಕರಾಚಾರ್ಯರಿಂದ ಕೇಂದ್ರ ಸರ್ಕಾರಕ್ಕೆ ಮನವಿ

Assault Case
ಕರ್ನಾಟಕ18 mins ago

Assault Case: ಫುಡ್ ಡೆಲಿವರಿ ಬಾಯ್‌ನ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ; ಸಿಸಿಟಿವಿಯಲ್ಲಿ ಸೆರೆ

Viral Video
ವೈರಲ್ ನ್ಯೂಸ್22 mins ago

Viral Video: ಆಟಿಕೆ ಎಂದು ತಿಳಿದು ಹಾವನ್ನೇ ಕಚ್ಚಿದ ಮಗು! ಕಚ್ಚಿಸಿಕೊಂಡ ಹಾವು ಸಾವು!

Tofu
ಆಹಾರ/ಅಡುಗೆ25 mins ago

Homemade Tofu Recipe: ಸೋಯಾ ಹಾಲಿನ ತೋಫು ಮನೆಯಲ್ಲೇ ಮಾಡಿಕೊಳ್ಳುವುದು ಹೇಗೆ?

Robin Uthappa
ಕ್ರೀಡೆ42 mins ago

Robin Uthappa: ಮಾನಸಿಕ ಖಿನ್ನತೆಯ ಅನುಭವಗಳನ್ನು ಬಿಚ್ಚಿಟ್ಟ ಭಾರತ ತಂಡದ ಮಾಜಿ ಕ್ರಿಕೆಟಿಗ

Fashion News
ಫ್ಯಾಷನ್50 mins ago

Fashion News: ಉದ್ಯಾನನಗರಿಯಲ್ಲಿ ಮಿನುಗಿದ ಇಂಡಿಯನ್ ಗ್ಲಾಮರ್ ಸ್ಟ್ರೀಟ್ ಫ್ಯಾಷನ್ ಶೋ!

thawar chand gehlot car
ಪ್ರಮುಖ ಸುದ್ದಿ1 hour ago

Thawar Chand Gehlot: ರಾಜ್ಯಪಾಲರಿಗೆ ಬಂತು ಬುಲೆಟ್‌ಪ್ರೂಫ್‌ ಕಾರು! ಥಟ್‌ ಅಂತ ಯಾಕೀ ಬದಲಾವಣೆ?

Champai Soren
ದೇಶ1 hour ago

Champai Soren: ಹೊಸ ಪಕ್ಷ ಸ್ಥಾಪನೆ ಬಗ್ಗೆ ಚಂಪೈ ಸೊರೆನ್ ಘೋಷಣೆ; ಜಾರ್ಖಂಡ್‌ ರಾಜಕೀಯದಲ್ಲಿ ಸಂಚಲನ

fraud Case chikkaballapura
ಕ್ರೈಂ1 hour ago

Fraud Case: ʼಗಟ್ಟಿಮೇಳ ನಿಲ್ಸಿʼ ಗಂಡನನ್ನು ತರಾಟೆಗೆ ತೆಗೆದುಕೊಂಡ ಮೊದಲ ಹೆಂಡತಿ, ಮದುವೆ ಮನೆಯಲ್ಲಿ ಗಲಾಟೆ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌