Fat Free Surgery: ಕಿರುತೆರೆ ನಟಿ ಚೇತನಾ ಅನುಮಾನಾಸ್ಪದ ಸಾವು - Vistara News

ಕಿರುತೆರೆ/ಒಟಿಟಿ

Fat Free Surgery: ಕಿರುತೆರೆ ನಟಿ ಚೇತನಾ ಅನುಮಾನಾಸ್ಪದ ಸಾವು

ಚೇತನಾ ಫ್ಯಾಟ್‌ ಫ್ರೀ ಸರ್ಜರಿ ಬಗ್ಗೆ ಪೋಷಕರಲ್ಲಿ ಹೇಳಿಕೊಂಡಿರಲಿಲ್ಲ. ಫ್ಯಾಟ್‌ ಸರ್ಜರಿ (Fat Surgery) ಎಂದು ಕರೆಯಲ್ಪಡುವ ಈ ಸರ್ಜರಿಯಲ್ಲಿ ದೇಹದಲ್ಲಿಯ ಕೊಬ್ಬು ತೆಗೆಯುವ ವಿಧಾನವಾಗಿದೆ.

VISTARANEWS.COM


on

Fat surgery
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದೊರೆಸಾನಿ, ಗೀತಾ ಮುಂತಾದ ಕಿರುತೆರೆಗಳಲ್ಲಿ ಅಭಿನಯಿಸಿದ್ದ ನಟಿ ಚೇತನಾ ರಾಜ್‌ (21) ಫ್ಯಾಟ್‌ ಫ್ರೀ ಸರ್ಜರಿ ವೇಳೆ ಅನುಮಾನಾಸ್ಪದವಾಗಿ ಮಂಗಳವಾರ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ನವರಂಗ್‌ ಸರ್ಕಲ್‌ ಬಳಿಯಿರುವ ಶೆಟ್ಟಿ ಕಾಸ್ಮೆಟಿಕ್‌ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ನಟಿ ಚೇತನಾ ಮೇ 16 ರಂದು ಬೆಳಗ್ಗೆ ಫ್ಯಾಟ್‌ ಫ್ರೀ ಸರ್ಜರಿಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಫ್ಯಾಟ್‌ ಫ್ರೀ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ  ಶೇಖರಣೆಯಾಗಿದೆ. ವೈದ್ಯರ ನಿರ್ಲಕ್ಷ ಇದಕ್ಕೆ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ | Explainer: ಚಾರ್‌ಧಾಮ್‌ ಯಾತ್ರೆ: ಸಾವುಗಳಿಗೆ ಕಾರಣವೇನು, ತಡೆಯುವುದು ಹೇಗೆ?

ಚೇತನಾ ಫ್ಯಾಟ್‌ ಫ್ರೀ ಸರ್ಜರಿ ಬಗ್ಗೆ ಪೋಷಕರಲ್ಲಿ ಹೇಳಿಕೊಂಡಿರಲಿಲ್ಲ. ಸ್ನೇಹಿತರೊಂದಿಗೆ ಆಸ್ಪತ್ರೆಗೆ ತೆರಳಿದ್ದರು. ಚೇತನಾ ಅವರು ಸಾಕಷ್ಟು ಧಾರವಾಹಿಗಳಲ್ಲಿ ಅಭಿನಯಿಸಿದ್ದರು. ಕಲರ್ಸ್‌ ಕನ್ನಡದಲ್ಲಿ ಬರುವ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ಧಾರವಾಹಿ ಮತ್ತು ಇನ್ನೂ ಬಿಡುಗಡೆಯಾಗಬೇಕಿರುವ ʼಹವಾಯಾಮಿʼ ಸಿನಿಮಾದಲ್ಲೂ ನಟಿಸಿದ್ದರು. ಶಸ್ತ್ರ ಚಿಕಿತ್ಸೆ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಪರಿಸ್ಥಿತಿ ಗಂಭೀರವಾಗಿತ್ತು. ನಾಲ್ಕು ಗಂಟೆಗೆ ಹೆಚ್ಚಿನ ಚಿಕಿತ್ಸೆಗೆ ಪ್ರಯತ್ನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಶೆಟ್ಟಿ ಕಾಸ್ಮೆಟಿಕ್‌ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಚೇತನಾ ರಾಜ್‌ ಮೃತಪಟ್ಟಿದ್ದಾರೆ ಎಂದು ಚೇತನಾ ರಾಜ್‌ ದೊಡ್ಡಪ್ಪ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.

ಫ್ಯಾಟ್‌ ಫ್ರೀ ಸರ್ಜರಿ :   ( Liposuction)

ಲಿಪೋಸಕ್ಷನ್‌ ( Liposuction) ಅಥವಾ ಫ್ಯಾಟ್‌ ಸರ್ಜರಿ (Fat Surgery) ಎಂದು ಕರೆಯಲ್ಪಡುವ ಈ ಸರ್ಜರಿಯಲ್ಲಿ ದೇಹದಲ್ಲಿಯ ಕೊಬ್ಬು ತೆಗೆಯುವ ವಿಧಾನವಾಗಿದೆ. ಹೆಚ್ಚು ತೂಕವನ್ನು ಹೊಂದಿರುವ ಅಥವಾ ದಪ್ಪ ಚರ್ಮದ ದೇಹಗಳಲ್ಲಿ ಈ ವಿಧಾನದಿಂದ ಸರ್ಜರಿ  ಮಾಡಲಾಗುತ್ತದೆ. ಹೊಟ್ಟೆ, ಸೊಂಟ, ತೊಡೆಗಳು, ತೋಳುಗಳು ಅಥವಾ ಕುತ್ತಿಗೆಯಂತಹ ದೇಹದ ನಿರ್ದಿಷ್ಟ ಜಾಗದಲ್ಲಿ ಹೆಚ್ಚಾದ ಕೊಬ್ಬನ್ನು ತೆಗೆದು ಹಾಕಲು ಹೀರಿಕೊಳ್ಳುವ ತಂತ್ರವನ್ನು ಬಳಸಲಾಗುತ್ತದೆ.

ಇದನ್ನೂ ಓದಿ |ಗಂಟೆಗಟ್ಲೆ ಬಿಂಜ್‌ ವಾಚಿಂಗ್‌ ಮಾಡಿದ್ರೆ ರಕ್ತ ಹೆಪ್ಪುಗಟ್ಟಬಹುದು ಹುಷಾರ್‌!

Fat Free Surgery

ಮಗಳ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಮೃತ ಚೇತನಾ ತಂದೆ ವರದರಾಜ್‌ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ICU ಸೇರಿದಂತೆ ಯಾವುದೇ ವ್ಯವಸ್ಥೆ ಇಲ್ಲ. ಹಿಂದೆ ಫ್ಯಾಟ್‌ ಸರ್ಜರಿ ಮಾಡಿಸಿಕೊಳ್ಳುವುದಾಗಿ ಕೇಳಿದ್ದಳು. ನಾವು ಬೇಡ ಎಂದಿದ್ದೇವೆ. ಇಂದು ನಮ್ಮ ಗಮನಕ್ಕೆ ತರದೇ ಸರ್ಜರಿಗಾಗಿ ಅಸ್ಪತ್ರೆಗೆ ದಾಖಲಾಗಿದ್ದಾಳೆ. ನಾವು ಬರುವ ಹೊತ್ತಿಗೆ ಮಗಳಿಗೆ ಸರ್ಜರಿ ಆಗುತ್ತಿತ್ತು. ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ನನ್ನ ಪುತ್ರಿ ಮೃತಪಟ್ಟಿದ್ದಾಳೆ ಎಂದು ದೂರಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Kannada Web Series: ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಬಸ್ ಮೆಕಾನಿಕಲ್; ಸೆಟ್ಟೇರಿತು ‘ಕರ್ನಾಟಕ Love’s ಕೇರಳ’ ವೆಬ್ ಸಿರೀಸ್

Kannada Web Series: ಕನ್ನಡದಲ್ಲಿ ವೆಬ್‌ ಸೀರಿಸ್‌ಗಳು ಕಡಿಮೆ. ಇದೀಗ ಈ ಕೊರತೆಯನ್ನು ನೀಗಿಸಲು ಹೊಸಬರ ತಂಡವೊಂದು ಮುಂದಾಗಿದೆ. ‘ಕರ್ನಾಟಕ Love’s ಕೇರಳ’ ಹೆಸರಿನ ವೆಬ್‌ ಸೀರಿಸ್‌ ಬೆಂಗಳೂರಿನಲ್ಲಿ ಸೆಟ್ಟೇರಿದೆ.

VISTARANEWS.COM


on

kannada web series
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ಈಗ ಹೊಸಬರಿಗೆ ವಿಫುಲ ಅವಕಾಶವಿದೆ. ಹೊಸಬರ ಚಿತ್ರಗಳು ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿವೆ. ಇದೀಗ ಮತ್ತೊಂದು ಪ್ರತಿಭಾನ್ವಿತ ಹಾಗೂ ಯುವ ಸಿನಿಮೋತ್ಸಾಹಿಗಳ ತಂಡವೊಂದು ಸೇರಿ ‘ಕರ್ನಾಟಕ Love’s ಕೇರಳ’ (Karnataka Loves Kerala) ಎಂಬ ವೆಬ್ ಸಿರೀಸ್ ರೂಪಿಸುತ್ತಿದೆ.‌ ಅದರ ಮೊದಲ ಭಾಗವಾಗಿ ಇತ್ತೀಚೆಷ್ಟೇ ಬೆಂಗಳೂರಿನ ವೆಂಕಟೇಶ್ವರ ದೇಗುಲದಲ್ಲಿ ವೆಬ್‌ ಸೀರಿಸ್‌ (Kannada Web Series)ಗೆ ಮುಹೂರ್ತ ನಡೆಸಲಾಯಿತು. ‘ಕರ್ನಾಟಕ Love’s ಕೇರಳ’ ಸಿರೀಸ್‌ಗೆ ಗರುಡ ರಾಮ್ ಕ್ಲಾಪ್ ಮಾಡಿದ್ದು, ವೀರಕಪುತ್ರ ಶ್ರೀನಿವಾಸ್ ಕ್ಯಾಮೆರಾ ಚಾಲನೆ ನೀಡಿದರು.

‘ಕರ್ನಾಟಕ Love’s ಕೇರಳ’ ವೆಬ್ ಸರಣಿಗೆ ಯುವ ಪ್ರತಿಭೆ ಲೋಕೇಶ್ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ನಿರ್ದೇಶನದ ಜತೆಗೆ ನಾಯಕನಾಗಿಯೂ ಅದೃಷ್ಟ ಪರೀಕ್ಷೆಗಿಳಿದ್ದಾರೆ. ಬಸ್ ಮೆಕಾನಿಕಲ್ ಆಗಿರುವ ಲೋಕೇಶ್‌‌ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿಯಿಸಿದ್ದು, ಇದೀಗ ಪೂರ್ಣ ಪ್ರಮಾಣದ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಜ್ಯೋತಿ, ಸಹನಾ ಸಾಥ್ ನೀಡುತ್ತಿದ್ದಾರೆ.

ಎಂ.ಎಂ.ಕೆ. ಬಾಲು ನಿರ್ಮಾಣ‌ ಮಾಡುತ್ತಿರುವ ʼಕರ್ನಾಟಕದ love’s ಕೇರಳʼ ಸಿರೀಸ್‌ಗೆ ಲೋಕೇಶ್ ಅವರದ್ದೇ ಕಥೆ ಚಿತ್ರಕಥೆ. ಟೈಟಲ್ ಹೇಳುವಂತೆ ಇದೊಂದು ಪ್ರೇಮಕಥೆ‌‌ ಒಳಗೊಂಡಿದೆ. ಆನಂದ್ ಇಳಯರಾಜ ಛಾಯಾಗ್ರಹಣ, ಪ್ರವೀಣ್ ಶ್ರೀನಿವಾಸ್ ಸಂಗೀತ, ಮಹೇಶ್ ಸಂಕಲನ ಸರಣಿಗಿದೆ.‌ ಮುಂದಿನ ವಾರದಿಂದ ಕೇರಳ ಭಾಗದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗಿದೆ.

’ಭುವನಂ ಗಗನಂ’ ಸಿನಿಮಾಗೆ ಧ್ರುವ ಸರ್ಜಾ ಸಾಥ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ಅಂಗಳದ ಇಬ್ಬರು ಪ್ರತಿಭಾನ್ವಿತ ನಟರಾದ ʻಸಲಾರ್ʼ ಪ್ರಮೋದ್ ಹಾಗೂ ʼದಿಯಾʼ ಪೃಥ್ವಿ ಅಂಬಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ʻಭುವನಂ ಗಗನಂʼ. ಈ ಚಿತ್ರದ ನಿರ್ಮಾಪಕ ಎಂ. ಮುನೇಗೌಡ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ. ಬೆಂಗಳೂರಿನ ಡಾ. ರಾಜಕುಮಾರ್‌ ಇಂಡೋರ್ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಟ ನೆನಪಿರಲಿ ಪ್ರೇಮ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಹಲವರು ಉಪಸ್ಥಿತಿದ್ದರು.

ಇದನ್ನೂ ಓದಿ: Kannada New Movie: ʻಕಮಲ್ ಹಾಸನ್ʼ ಬಂದು ಟೈಟಲ್‌ ಲಾಂಚ್‌ ಮಾಡಿದ್ರು! ಯಾವುದು ಆ ಸಿನಿಮಾ?

ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್‌ನಲ್ಲಿ ನಡೆಯುವ ಕಥೆಯಾಗಿದ್ದು, ಪ್ರಮೋದ್‌ಗೆ ಜೋಡಿಯಾಗಿ ʼಲವ್ ಮಾಕ್ಟೇಲ್ʼ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸ್ತಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ʼಸ್ಪರ್ಶʼ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನಿಲ್‌ ಕಶ್ಯಪ್ ಸಂಕಲನ ಸಿನಿಮಾಕ್ಕಿದೆ. ಮಳೆಗಾಲದಲ್ಲಿ ʼಭುವನಂ ಗಗನಂʼ ಸಿನಿಮಾ ತೆರೆಗೆ ಬರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಿರುತೆರೆ/ಒಟಿಟಿ

Kapil Sharma: ಸುನಿಲ್‌ ಗ್ರೋವರ್ ಜತೆಗೆ ನೆಟ್​ಫ್ಲಿಕ್ಸ್​ಗೆ ಕಾಲಿಟ್ಟ ಕಪಿಲ್ ಶರ್ಮಾ; ಶೋ ಟ್ರೇಲರ್‌ ಔಟ್‌: ಪ್ರಸಾರ ಯಾವಾಗ ?

Kapil Sharma: ಹಾಸ್ಯ, ಮನರಂಜನೆಯ ರಸದೌತಣ ನೀಡಿ ದೇಶದ ಮನೆಮಾತಾಗಿರುವ ಕಪಿಲ್‌ ಶರ್ಮಾ ಅವರ ಹೊಸ ಶೋ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಸದ್ಯ ಶೋದ ಟ್ರೇಲರ್‌ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ.

VISTARANEWS.COM


on

kapil sharma
Koo

ಮುಂಬೈ: ಭಾರತೀಯರ ಅಚ್ಚುಮೆಚ್ಚಿನ ಕಾಮಿಡಿ ಶೋ ʼದಿ ಕಪಿಲ್‌ ಶರ್ಮಾ ಶೋʼ (The Kapil Sharma Show). ಈ ಶೋ ಮೂಲಕ ಹಾಸ್ಯ, ಮನರಂಜನೆಯ ರಸದೌತಣ ನೀಡಿ ದೇಶದ ಮನೆಮಾತಾಗಿರುವ ಕಪಿಲ್‌ ಶರ್ಮಾ (Kapil Sharma) ಹಾಗೂ ಸುನಿಲ್‌ ಗ್ರೋವರ್‌ (Sunil Grover) ಮತ್ತೆ ಒಂದಾಗಿದ್ದಾರೆ. ಸುಮಾರು ಆರು ವರ್ಷಗಳ ಮುನಿಸಿನ ಬಳಿಕ ಇಬ್ಬರೂ ಒಂದಾಗಿದ್ದಾರೆ. ನೆಟ್‌ಫ್ಲಿಕ್ಸ್‌ (Netflix)ನಲ್ಲಿ ಪ್ರಸಾರವಾಗಲಿರುವ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ (The Great Indian Kapil Show)ದಲ್ಲಿ ಈ ಇಬ್ಬರು ದಿಗ್ಗಜರು ಒಂದಾಗಲಿದ್ದಾರೆ. ಈ ಮೂಲಕ ಟಿವಿಯಲ್ಲಿ ಜನಪ್ರಿಯವಾದ ಶೋ ಒಟಿಟಿಗೂ ಕಾಲಿಟ್ಟಿದೆ. ಶನಿವಾರ (ಮಾರ್ಚ್‌ 23) ಈ ಶೋದ ಟ್ರೇಲರ್‌ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ.

ಬಾಲಿವುಡ್​, ಕ್ರಿಕೆಟ್​ ಲೋಕದ ಭಾರಿ ದೊಡ್ಡ ಸೆಲೆಬ್ರಿಟಿಗಳು ಕಪಿಲ್​ ಅವರ ಶೋಗೆ ಬಂದಿರುವುದು ಟ್ರೇಲರ್‌ನಲ್ಲಿ ಕಂಡು ಬಂದಿದೆ. ಮತ್ತೊಂದು ವಿಶೇಷ ಎಂದರೆ ಕಪಿಲ್​ ಶರ್ಮಾ ಅವರ ಹಳೆಯ ಗೆಳೆಯರೆಲ್ಲ ಮತ್ತೆ ಶೋಗೆ ಬಂದಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇನ್ನು ನಗುವಿಗೆ ಕೊರತೆ ಇಲ್ಲ ಎಂದು ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

ಯಾವಾಗ ಪ್ರಸಾರ ?

ಸುನಿಲ್‌ ಗ್ರೋವರ್‌ ಜತೆಗೆ ಅರ್ಚನಾ ಪೂರನ್‌ ಸಿಂಗ್‌, ಕಿಕು ಶಾರದಾ, ರಾಜೀವ್ ಠಾಕೂರ್ ಮತ್ತು ಕೃಷ್ಣ ಅಭಿಷೇಕ್ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ದ ಭಾಗವಾಗಲಿದ್ದಾರೆ. ನೆಟ್​ಫ್ಲಿಕ್ಸ್​ನಲ್ಲಿ ಮಾರ್ಚ್ 30ರಿಂದ ಪ್ರತಿ ಶನಿವಾರ ರಾತ್ರಿ 8 ಗಂಟೆಗೆ ಹೊಸ ಈ ಶೋ ಪ್ರಸಾರವಾಗಲಿದೆ.

ಟ್ರೇಲರ್‌ನಲ್ಲಿ ಏನಿದೆ?

ಶೋ ಅದ್ದೂರಿಯಾಗಿ ಮೂಡಿ ಬಂದಿದೆ ಎನ್ನುವುದಕ್ಕೆ ಟ್ರೇಲರ್‌ನಲ್ಲಿ ಸಾಕ್ಷಿ ಸಿಕ್ಕಿದೆ. ಭಾರತೀಯ ಚಿತ್ರರಂಗ ಹಾಗೂ ಕ್ರಿಕೆಟ್​ ಲೋಕದ ದಿಗ್ಗಜರು ಈ ಬಾರಿ ಶೋಗೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಸ್ತುತ ಬಿಡುಗಡೆ ಆಗಿರುವ ಟ್ರೇಲರ್‌ನಲ್ಲಿ ​ಬಾಲಿವುಡ್ ಸ್ಟಾರ್ ನಟ ರಣ್​ಬೀರ್ ಕಪೂರ್, ತಮ್ಮ ತಾಯಿ ಹಾಗೂ ಸಹೋದರಿ ಜತೆಗೆ ಶೋದಲ್ಲಿ ಭಾಗವಹಿಸಿರುವುದು ಕಂಡು ಬಂದಿದೆ. ಸಾಮಾನ್ಯವಾಗಿ ಯಾವುದೇ ಶೋಗೆ ಹೋಗದ ಆಮೀರ್ ಖಾನ್ ಸಹ ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದಾರೆ. ಭಾರತೀಯ ಕ್ರಿಕೆಟ್ ಟೀಂನ ನಾಯಕ ರೋಹಿತ್‌ ಶರ್ಮಾ, ಕ್ರಿಕೆಟಿಗ ಶ್ರೆಯಸ್ ಐಯ್ಯರ್ ಮತ್ತಿತರರು ಆಗಮಿಸಿದ್ದಾರೆ. ಹೀಗಾಗಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ನಾರಾಯಣಮೂರ್ತಿ ಬಸ್‌ ಕಂಡಕ್ಟರ್ ಹೈ ಕ್ಯಾ?‌ ಭೇಟಿ ಕುರಿತು ಕಪಿಲ್‌ ಶರ್ಮಾ ಶೋನಲ್ಲಿ ಸುಧಾಮೂರ್ತಿ ಹೇಳಿದ್ದೇನು?

ಇಬ್ಬರ ಮಧ್ಯೆ ಏಕೆ ಜಗಳ?

ಕಪಿಲ್‌ ಶರ್ಮಾ ಹಾಗೂ ಸುನಿಲ್‌ ಗ್ರೋವರ್‌ ಅವರ ಮಧ್ಯೆ 2017ರಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಆಸ್ಟ್ರೇಲಿಯಾದಲ್ಲಿ ಶೋ ಮುಗಿಸಿ, ಮುಂಬೈಗೆ ಆಗಮಿಸುವಾಗ ವಿಮಾನದಲ್ಲಿಯೇ ಕಪಿಲ್‌ ಶರ್ಮಾ ಅವರು ಸುನಿಲ್‌ ಗ್ರೋವರ್‌ ಅವರಿಗೆ ಬೈದಿದ್ದರು. ಇದಾದ ಬಳಿಕ ಇಬ್ಬರೂ ವಾಗ್ವಾದ ನಡೆಸಿದ್ದರು ಎನ್ನಲಾಗಿದೆ. ನಂತರ ಸುನಿಲ್‌ ಗ್ರೋವರ್‌ ಅವರು ʼದಿ ಕಪಿಲ್‌ ಶರ್ಮಾ ಶೋʼ ತೊರೆದಿದ್ದರು. ಜಗಳದ ಕುರಿತು ಸ್ಪಷ್ಟನೆ ನೀಡಿದ್ದ ಕಪಿಲ್‌ ಶರ್ಮಾ, “ನಾನು ಎಂದಿಗೂ ಸುನಿಲ್‌ ಗ್ರೋವರ್‌ ಜತೆ ಜಗಳ ಆಡಿಲ್ಲ, ಬೈದಿಲ್ಲ. ನಾನು ಅದ್ಭುತ ವ್ಯಕ್ತಿಗಳ ಜತೆ ಕೆಲಸ ಮಾಡಲು ಬಯಸುತ್ತೇನೆ. ಅವರಲ್ಲಿ ಸುನಿಲ್‌ ಗ್ರೋವರ್‌ ಕೂಡ ಒಬ್ಬರು” ಎಂದು ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಿರುತೆರೆ/ಒಟಿಟಿ

OTT Release: ಒಟಿಟಿ ಪ್ರಿಯರಿಗೆ ಈ ವಾರ ಹಬ್ಬ; ʼಉಪಾಧ್ಯಕ್ಷʼ ಚಿತ್ರದ ಜತೆಗೆ ರಿಲೀಸ್‌ ಆದ‌ ಇತರ ಶೋಗಳ ವಿವರ ಇಲ್ಲಿದೆ

OTT Release: ಈ ವಾರ ಒಟಿಟಿಯಲ್ಲಿ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ತೆರೆ ಕಂಡಿವೆ. ಈ ಕುರಿತಾದ ವಿವರ ಇಲ್ಲಿದೆ.

VISTARANEWS.COM


on

ott
Koo

ಮುಂಬೈ: ಇತ್ತೀಚೆಗೆ ಒಟಿಟಿ ಫ್ಲಾಟ್‌ಫಾರ್ಮ್‌ಗೆ ವೀಕ್ಷಕರು ಹೆಚ್ಚಾಗಿದ್ದಾರೆ. ಹಲವರು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದಕ್ಕಿಂತ ಒಟಿಟಿ ರಿಲೀಸ್‌ಗೆ ಕಾಯುತ್ತಿರುತ್ತಾರೆ. ಸಿನಿಮಾ ಜತೆಗೆ ವೆಬ್‌ ಸೀರಿಸ್‌, ಶೋಗಳಿಗೂ ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರಿದ್ದಾರೆ. ಈ ವಾರ ಒಟಿಟಿಯಲ್ಲಿ ತೆರೆ ಕಾಣುತ್ತಿರುವ ಪ್ರಮುಖ ಚಿತ್ರಗಳು, ಶೋಗಳ ವಿವರ ಇಲ್ಲಿದೆ (OTT Release).

ಶೋ ಟೈಮ್‌ (ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌)-ಮಾರ್ಚ್‌ 8

ಬಾಲಿವುಡ್‌ ಸ್ಟಾರ್‌ ಇಮ್ರಾನ್‌ ಹಶ್ಮಿ ಅಭಿನಯದ ವೆಬ್‌ ಸೀರಿಸ್‌ ʼಶೋ ಟೈಮ್‌ʼ ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ನಲ್ಲಿ ಮಾರ್ಚ್‌ 8ರಿಂದ ಸ್ಟ್ರೀಮಿಂಗ್‌ ಆಗುತ್ತಿದೆ. ಕರಣ್‌ ಜೋಹರ್‌ ಅವರ ಧರ್ಮ ಪ್ರೊಡಕ್ಷನ್ಸ್‌ ಈ ವೆಬ್‌ ಸೀರಿಸ್‌ ಅನ್ನು ನಿರ್ಮಿಸಿದ್ದು, ಶ್ರೀಯಾ ಶರಣ್‌, ಮೌನಿ ರಾಯ್‌, ನಾಸಿರುದ್ದೀನ್‌ ಶಾ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮಹಾರಾಣಿ ಸೀನಸ್‌ 3 (ಸೋನಿ ಲೈವ್‌)-ಮಾರ್ಚ್‌ 7

ಜನಪ್ರಿಯ ವೆಬ್‌ ಸೀರಿಸ್‌ ʼಮಹಾರಾಣಿʼಯ ಮೂರನೇ ಸೀಸನ್‌ ಕೂಡ ಮಾರ್ಚ್‌ 8ರಿಂದ ಪ್ರಸಾರವಾಗುತ್ತಿದೆ. ಬಾಲಿವುಡ್‌ ನಟಿ ಹುಮಾ ಖರೇಷಿ ಅಭಿನಯದ ಈ ಪಾಲಿಟಿಕಲ್‌ ಡ್ರಾಮವನ್ನು ಸೋನಿ ಲೈವ್‌ (SonyLIV)ನಲ್ಲಿ ವೀಕ್ಷಿಸಬಹುದು. ಸಾಮಾನ್ಯ ಹೆಣ್ಣು ಮಗಳೊಬ್ಬಳು ರಾಜಕೀಯ ಪ್ರವೇಶ ಪಡೆಯುವ ರೋಚಕ ಕಥೆಯನ್ನು ಇದು ಒಳಗೊಂಡಿದೆ.

ಮೆರ‍್ರಿ ಕ್ರಿಸ್‌ಮಸ್‌ (ನೆಟ್‌ಫ್ಲಿಕ್ಸ್‌)-ಮಾರ್ಚ್‌ 8

ಮಾರ್ಚ್‌ 8ರಿಂದ ನೀವು ನೋಡಬಹುದಾದ ಥ್ರಿಲ್ಲರ್‌ ಚಿತ್ರ ʼಮೆರ‍್ರಿ ಕ್ರಿಸ್‌ಮಸ್‌ʼ. ಕಾಲಿವುಡ್‌ ಸ್ಟಾರ್‌ ವಿಜಯ್‌ ಸೇತುಪತಿ ಮತ್ತು ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಮೊದಲ ಬಾರಿ ತೆರೆ ಮೇಲೆ ಒಂದಾದ ಚಿತ್ರವನ್ನು ಶ್ರೀರಾಮ್‌ ರಾಘವನ್‌ ನಿರ್ದೇಶಿಸಿದ್ದಾರೆ. ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದು.

ದಿ ರಿಜಿಮ್‌ (ಜಿಯೋ ಸಿನಿಮಾ)- ಮಾರ್ಚ್‌ 4

ಈ ಇಂಗ್ಲಿಷ್‌ ಟಿವಿ ಮಿನಿ ಸಿರೀಸ್‌ ಮಾರ್ಚ್‌ 4ರಿಂದ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ. ಸರ್ವಾಧಿಕಾರಿ ಎಲೆನಾ ವೆರ್ನ್ಹ್ಯಾಮ್ ಪಾತ್ರದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತೆ ಕೇಟ್ ವಿನ್ಸ್ಲೆಟ್ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಹಗ್ ಗ್ರಾಂಟ್, ಮಥಿಯಾಸ್ ಶೋನರ್ಟ್ಸ್ ಮತ್ತು ಗೈಲ್ಯೂಮ್ ಗ್ಯಾಲಿಯನ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಡ್ಯಾಮ್‌ಸೆಲ್‌ (ನೆಟ್‌ಫ್ಲಿಕ್ಸ್‌)- ಮಾರ್ಚ್‌ 8

ಅಮೆರಿಕನ್‌ ಡಾರ್ಕ್‌ ಫ್ಯಾಂಟಸಿ ಚಿತ್ರ ʼಡ್ಯಾಮ್‌ಸೆಲ್‌ʼ ಮಾರ್ಚ್‌ 8ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯ. ಮಿಲ್ಲಿ ಬಾಬಿ ಬ್ರೌನ್, ರೇ ವಿನ್ಸ್ಟೋನ್, ನಿಕ್ ರಾಬಿನ್ಸನ್, ಶೋಹ್ರೆ ಅಘ್ಡಾಶ್ಲೂ, ಏಂಜೆಲಾ ಬ್ಯಾಸೆಟ್, ರಾಬಿನ್ ರೈಟ್ ಮತ್ತಿತರರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಲಾಲ್‌ ಸಲಾಂ (ನೆಟ್‌ಫ್ಲಿಕ್ಸ್‌)- ಮಾರ್ಚ್‌ 8

ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ʼಲಾಲ್‌ ಸಲಾಂʼ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡವರು ಒಟಿಟಿಯಲ್ಲಿ ಮಾರ್ಚ್‌ 8ರಿಂದ ಈ ಸಿನಿಮಾವನ್ನು ನೋಡಬಹುದು. ನೆಟ್‌ಫ್ಲಿಕ್ಸ್‌ನಲ್ಲಿ ಇದು ಸ್ಟ್ರೀಮಿಂಗ್‌ ಆಗುತ್ತಿದೆ. ಐಶ್ವರ್ಯಾ ರಜನಿಕಾಂತ್‌ ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣು ವಿಶಾಲ್‌, ವಿಕ್ರಾಂತ್‌ ಮತ್ತಿತರರು ಮುಖ್ಯ ಪಾತ್ರದಲ್ಲಿದ್ದಾರೆ. ಥಿಯೇಟರ್‌ನಲ್ಲಿ ಸಾಧಾರಣ ಯಶಸ್ಸು ಕಂಡಿದ್ದ ಇದು ಒಟಿಟಿಯಲ್ಲಿ ಗಮನ ಸೆಳೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಉಪಾಧ್ಯಕ್ಷ (ಸನ್‌ ನೆಕ್ಟ್ಸ್‌) – ಮಾರ್ಚ್‌ 8

ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿ ಮಾಡಿದ ಚಿತ್ರ ʼಉಪಾಧ್ಯಕ್ಷʼ. ಇದೀಗ ಈ ಸಿನಿಮಾ ಸದ್ದಿಲ್ಲದೆ ಒಟಿಟಿಗೆ ಲಗ್ಗೆ ಇಟ್ಟಿದೆ. ಮಾರ್ಚ್‌ 8ರಿಂದ ನೀವು ಸನ್‌ ನೆಕ್ಟ್ಸ್‌ಲ್ಲಿ ಉಪಾಧ್ಯಕ್ಷ ಚಿತ್ರ ವೀಕ್ಷಿಸಬಹುದು. ಚಿಕ್ಕಣ್ಣ ನಾಯಕನಾಗಿರುವ ಈ ಚಿತ್ರ ಮಲೈಕಾ ವಸುಪಾಲ್‌, ರವಿಶಂಕರ್‌, ಸಾಧು ಕೋಕಿಲ, ವೀಣಾ ಸುಂದರ್‌ ಮತ್ತಿತರರು ಪ್ರಧಾನ ಪಾತ್ರಗಳಲ್ಲಿ ಮಿಂಚಿದ್ದಾರೆ.

ಅನ್ವೇಷಿಪ್ಪಿನ್‌ ಕಂಡೆಂತ್ತುಮ್‌ (ನೆಟ್‌ಫ್ಲಿಕ್ಸ್‌)- ಮಾರ್ಚ್‌ 8

ನೀವು ಮಲಯಾಳಂ ಚಿತ್ರ ಪ್ರೇಮಿಗಳಾಗಿದ್ದರೆ ಈ ಚಿತ್ರವನ್ನು ಮಿಸ್‌ ಮಾಡದೇ ನೋಡಿ. ಈ ಕ್ರೈಂ ಥ್ರಿಲ್ಲರ್‌ 90ರ ದಶಕದ ಪೊಲೀಸ್‌ ತನಿಖೆಯ ಕಥೆ ಹೇಳುತ್ತುದೆ. ಟೊವಿನೋ ಥಾಮಸ್‌, ಇಂದ್ರನ್ಸ್‌, ಸಿದ್ಧಿಕ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಈ ಚಿತ್ರದಲ್ಲಿ ಯಾರೂ ಊಹಿಸದ ಕ್ಲೈಮ್ಯಾಕ್ಸ್‌ ಇದೆ. ಡಾರ್ವಿನ್ ಕುರಿಯಕ್ಕೋಸ್‌ ಈ ಸಿನಿಮಾದ ನಿರ್ದೇಶಕರು. ಅನ್ವೇಷಿಪ್ಪಿನ್‌ ಕಂಡೆಂತ್ತುಮ್‌ ಚಿತ್ರವನ್ನು ಮಾರ್ಚ್‌ 8ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ: Nitish Bharadwaj: ʼ16,000 ಹೆಂಡತಿಯರನ್ನು ನಿಭಾಯಿಸಿದʼವನಿಗೆ ಪತ್ನಿಯಿಂದ ದೌರ್ಜನ್ಯ! ಏನಿವರ ಗೋಳಿನ ಕತೆ?

Continue Reading

ಕಿರುತೆರೆ

Nitish Bharadwaj: ʼ16,000 ಹೆಂಡತಿಯರನ್ನು ನಿಭಾಯಿಸಿದʼವನಿಗೆ ಪತ್ನಿಯಿಂದ ದೌರ್ಜನ್ಯ! ಏನಿವರ ಗೋಳಿನ ಕತೆ?

ಇದು ಜನಪ್ರಿಯ ಟಿವಿ ಸೀರಿಯಲ್‌ (TV Serial) ʼಮಹಾಭಾರತʼದ ಕೃಷ್ಣನ ಪಾತ್ರಧಾರಿ ನಟ ನಿತೀಶ್ ಭಾರದ್ವಾಜ್ (Nitish Bharadwaj) ಬದುಕಿನ ಕತೆ.

VISTARANEWS.COM


on

nitish bharadwaj with wife
Koo

ಮುಂಬಯಿ: ಮಹಾಭಾರತದ (Mahabharat) ಕೃಷ್ಣನೇನೋ 16,000 ಹೆಂಡತಿಯರನ್ನು ಜಗಳವಿಲ್ಲದೆ ನಿಭಾಯಿಸಿದ. ಆದರೆ ಈ ʼಕೃಷ್ಣʼನ (Krishna) ಬದುಕು ಮಾತ್ರ ಪತ್ನಿಯಿಂದಲೇ ಬರ್ಬಾದ್‌ ಆಗಿದೆ. ಇದು ಜನಪ್ರಿಯ ಟಿವಿ ಸೀರಿಯಲ್‌ (TV Serial) ʼಮಹಾಭಾರತʼದ ಕೃಷ್ಣನ ಪಾತ್ರಧಾರಿ ನಟ ನಿತೀಶ್ ಭಾರದ್ವಾಜ್ (Nitish Bharadwaj) ಬದುಕಿನ ಕತೆ.

ನಿತೀಶ್‌ ಭಾರದ್ವಾಜ್‌ ಮತ್ತು ಅವರ ವಿಚ್ಛೇದಿತ ಪತ್ನಿ ಸ್ಮಿತಾ ಭಾರದ್ವಾಜ್ ನಡುವಿನ ಕಲಹದ ಕತೆ ಹೊಸದೇನೂ ಅಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಇಬ್ಬರೂ ಪರಸ್ಪರರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಿತೀಶ್ ಇನ್ನಷ್ಟು ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ. ತಮ್ಮಿಬ್ಬರ ದಾಂಪತ್ಯದಲ್ಲಿ ತಾನು ಅತ್ಯಂತ ದೌರ್ಜನ್ಯಕ್ಕೀಡಾದವನು ಎಂದು ಹೇಳಿಕೊಂಡಿದ್ದಾರೆ.

“ಈ ದಾಂಪತ್ಯದಲ್ಲಿ ನಾನು ಎಲ್ಲಾ ರೀತಿಯ ನಿಂದನೆಗಳನ್ನು ಎದುರಿಸಿದ್ದೇನೆ. ನನ್ನ ಪೋಷಕರನ್ನು ನನ್ನಿಂದ ದೂರವಿಡಲಾಯಿತು. ನನ್ನ ಇಬ್ಬರು ಮಕ್ಕಳನ್ನು ನನ್ನಿಂದ ದೂರವಿಡಲಾಯಿತು. ನನ್ನ 11 ವರ್ಷದ ಹೆಣ್ಣುಮಕ್ಕಳು ಹೇಳಿದ ಎರಡು ಸಾಲುಗಳನ್ನು ಮಾತ್ರ ನಾನು ನಿಮಗೆ ಹೇಳುವೆ- ʻಅಪ್ಪಾ, ನಿಮ್ಮನ್ನು ನಮ್ಮ ತಂದೆ ಎಂದು ಕರೆಯಲು ನಮಗೆ ಅಸಹ್ಯವಾಗುತ್ತದೆ.’ ಇದು ಒಂದು ಮಗು ನನಗೆ ಹೇಳಿದ್ದು” ಎಂದು ನಿತೀಶ್ ದುಃಖಿಸಿದ್ದಾರೆ.

“ನನಗೆ ಆಗುತ್ತಿರುವ ಪ್ರಕ್ಷುಬ್ಧತೆಯನ್ನು ಹೇಗೆ ನಿಭಾಯಿಸಬೇಕೆಂದು ನನಗೆ ತಿಳಿಯುತ್ತಿಲ್ಲ. ನಾನು ಹಣ ಕೇಳುತ್ತಿದ್ದೇನೆ ಎಂದು ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು. ನಾನು ನನ್ನಿಂದ ಮೋಸ ಮಾಡಿ ಕಸಿಯಲಾದ ಹಣವನ್ನು ಕೇಳುತ್ತಿದ್ದೇನೆ. ಹಾಗಾಗಿ ಇಂದು ನಾನು ಮಾಡುತ್ತಿರುವುದು ನನ್ನ ಮಕ್ಕಳ ಪಾಲಿನ ಹೋರಾಟವಾಗಿದೆ” ಎಂದಿದ್ದಾರೆ ನಿತೀಶ್. ‌

“ವಂಚಿತನಾದ ನಾನು ಬೇರೆ ಯಾವುದೇ ಮಹಿಳೆಗೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತದೆಯೇ ಎಂದು ನನಗೆ ಗೊತ್ತಾಗುತ್ತಿಲ್ಲ. ದಾಂಪತ್ಯ ನನಗೆ ಎಂದೂ ಗೌರವಾರ್ಹವಾದುದು. ನಾನು ಅದನ್ನು ನಂಬುತ್ತೇನೆ. ನನ್ನ ಹೆತ್ತವರ ದಾಂಪತ್ಯ ಸೇರಿದಂತೆ ಹಲವು ಯಶಸ್ವಿ ಕುಟುಂಬಗಳನ್ನು ನಾನು ನೋಡಿದ್ದೇನೆ” ಎಂದಿದ್ದಾರೆ ಅವರು.

ಕಳೆದ ತಿಂಗಳು ನಿತೀಶ್ ಭಾರದ್ವಾಜ್ ಅವರು ಅವರ ಪತ್ನಿ ಸ್ಮಿತಾ ಗೇಟ್ ವಿರುದ್ಧ ಕಿರುಕುಳ ಮತ್ತು ಅಶಿಸ್ತಿನ ವರ್ತನೆಯನ್ನು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ಸ್ಮಿತಾ ಗೇಟ್‌, ಮಧ್ಯಪ್ರದೇಶದ ಮಾನವ ಹಕ್ಕುಗಳ ಆಯೋಗದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರದಿಯ ಪ್ರಕಾರ, ತಮ್ಮ ಅವಳಿ ಹೆಣ್ಣು ಮಕ್ಕಳಾದ ದೇವಯಾನಿ ಮತ್ತು ಶಿವರಂಜನಿ ಅವರನ್ನು ಭೇಟಿಯಾಗದಂತೆ ನಿತೀಶ್‌ ಅವರನ್ನು ಸ್ಮಿತಾ ತಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ತಮ್ಮ ಹೆಣ್ಣುಮಕ್ಕಳ ಶಾಲೆಗಳಿಗೆ ತಾವು ಹೋಗುವುದನ್ನು ತಡೆದಿದ್ದಾರೆ. ಇದು ತಮ್ಮ ಮಾನಸಿಕ ನೆಮ್ಮದಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅವರು ದೂರಿದ್ದಾರೆ.

ಜನಪ್ರಿಯ ಟಿವಿ ಸರಣಿ ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ನಿತೀಶ್ ದೇಶಾದ್ಯಂತ ಖ್ಯಾತಿ ಗಳಿಸಿದ್ದರು. ವಿಷ್ಣು ಪುರಾಣ, ಮೊಹೆಂಜೊದಾರೋ, ಕೇದಾರನಾಥ್ ಮತ್ತಿತರ ಜನಪ್ರಿಯ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Actor Dhanush: ಧನುಷ್‌-ರಶ್ಮಿಕಾ ಅಭಿನಯದ ಸಿನಿಮಾದ ಟೈಟಲ್‌ ರಿವೀಲ್‌!

Continue Reading
Advertisement
DK Shivakumar in Uttar Pradesh and Strategy in Amethi and Rae Bareli
Lok Sabha Election 202421 seconds ago

DK Shivakumar: ಉತ್ತರ ಪ್ರದೇಶದಲ್ಲಿ ಡಿಕೆಶಿ; ಅಮೇಥಿ, ರಾಯ್‌ ಬರೇಲಿಯಲ್ಲಿ ಮಾಡ್ತಾರಾ ಕಮಾಲ್?

IPL 2024
ಪ್ರಮುಖ ಸುದ್ದಿ8 mins ago

IPL 2024 : ವಾಂಖೆಡೆ ಸ್ಟೇಡಿಯಮ್​ನಲ್ಲಿ ಗುದ್ದಾಡಿಕೊಂಡ ಮುಂಬೈ ಇಂಡಿಯನ್ಸ್ ಆಟಗಾರರು; ಇಲ್ಲಿದೆ ವಿಡಿಯೊ

Virat kohli
ಪ್ರಮುಖ ಸುದ್ದಿ28 mins ago

Virat kohli : ಕೊಹ್ಲಿಯನ್ನು ಹೊಗಳಿದ ಜಗತ್​​ಪ್ರಸಿದ್ಧ ವೇಗದ ಓಟಗಾರ ಉಸೇನ್​ ಬೋಲ್ಟ್​​

Shah Rukh Khan
ದೇಶ48 mins ago

ಶಾರುಖ್‌ ಖಾನ್‌ ಜಾಹೀರಾತು ನೋಡಿ ಗುಟ್ಕಾ ತಿಂದ ಮಕ್ಕಳು; ನಟ ಸಾಯಲ್ಲ, ನಾವು ಸಾಯ್ತೀವಾ ಅಂದರು!

Rajat Patidar
ಪ್ರಮುಖ ಸುದ್ದಿ56 mins ago

Rajat Patidar : ರಜತ್ ಪಾಟೀದಾರ್​ ಮುಂದಿನ ಆವೃತ್ತಿಗೆ ಆರ್​ಸಿಬಿಯಲ್ಲೇ ಇರಬೇಕು; ಮಾಜಿ ಆಟಗಾರನ ಸಲಹೆ

ASI who was injured in a road accident died in kunigal
ಕರ್ನಾಟಕ1 hour ago

Road Accident: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಎಎಸ್‌ಐ ಚಿಕಿತ್ಸೆ ಫಲಿಸದೆ ಸಾವು

IPL 2024
ಕ್ರಿಕೆಟ್1 hour ago

IPL 2024: ಸಿಎಸ್​​ಕೆ ಮಾಜಿ ಆಟಗಾರನಾಗಿದ್ದರೂ ಈ ಸಲ ಕೊಹ್ಲಿ ಗೆಲ್ಲಲಿ ಎಂದ ಸುರೇಶ್​ ರೈನಾ!

Prajwal Revanna Case KR Nagar victim kidnapping case Satish sent to judicial custody
ಕ್ರೈಂ1 hour ago

Prajwal Revanna Case: ಕೆ.ಆರ್.ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್;‌ 2, 6ನೇ ಆರೋಪಿಗಿಲ್ಲ ಬಿಡುಗಡೆ ಭಾಗ್ಯ! ಸತೀಶ್‌ಗೆ ನ್ಯಾಯಾಂಗ ಬಂಧನ

Pay attention to childrens safety during holidays Minister Lakshmi Hebbalkar appeals to parents
ಬೆಳಗಾವಿ1 hour ago

Lakshmi Hebbalkar: ರಜೆಯಲ್ಲಿ ಮಕ್ಕಳ ಸುರಕ್ಷತೆಗೆ ಗಮನ ನೀಡಿ; ಪಾಲಕರಿಗೆ ಹೆಬ್ಬಾಳ್ಕರ್ ಮನವಿ

Four Digit PIN
ತಂತ್ರಜ್ಞಾನ2 hours ago

Four Digit PIN: ಇಂಥ ಪಿನ್ ನಂಬರ್ ಕೊಡ್ತಾ ಇದ್ದೀರಾ? ನಿಮ್ಮ ದುಡ್ಡಿಗೆ ಕಾದಿದೆ ಅಪಾಯ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ5 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ7 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು11 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

ಟ್ರೆಂಡಿಂಗ್‌