Samsung Solve for Tomorrow: ಸ್ಯಾಮ್‌ಸಂಗ್ ʼಸಾಲ್ವ್ ಫಾರ್ ಟುಮಾರೋʼ ಸೀಸನ್ 3 ಆರಂಭ; ಅರ್ಜಿ ಸಲ್ಲಿಕೆಗೆ ಮೇ 31 ಕೊನೆಯ ದಿನ - Vistara News

ಬೆಂಗಳೂರು

Samsung Solve for Tomorrow: ಸ್ಯಾಮ್‌ಸಂಗ್ ʼಸಾಲ್ವ್ ಫಾರ್ ಟುಮಾರೋʼ ಸೀಸನ್ 3 ಆರಂಭ; ಅರ್ಜಿ ಸಲ್ಲಿಕೆಗೆ ಮೇ 31 ಕೊನೆಯ ದಿನ

Samsung Solve for Tomorrow: ಸ್ಯಾಮ್‌ಸಂಗ್‌ನ ‘ಸಾಲ್ವ್ ಫಾರ್ ಟುಮಾರೋ’ ಕಾರ್ಯಕ್ರಮವು ವಿಭಿನ್ನ ವಯೋಮಾನದವರಿಗೆ ಎರಡು ಪ್ರತ್ಯೇಕ ಟ್ರ್ಯಾಕ್‌ (ವಿಭಾಗ)ಗಳ ಮೂಲಕ ನಡೆಯಲಿದೆ. ಅದರಲ್ಲಿ ಸ್ಕೂಲ್ ಟ್ರ್ಯಾಕ್ ‘ಸಮುದಾಯ ಮತ್ತು ನಾವೀನ್ಯತೆ’ ಎಂಬ ಥೀಮ್(ವಿಷಯ) ಹೊಂದಿದ್ದು, ಯೂತ್ ಟ್ರ್ಯಾಕ್ ‘ಪರಿಸರ ಮತ್ತು ಸುಸ್ಥಿರತೆ’ ಎಂಬ ಥೀಮ್ ನಲ್ಲಿ ಕಾರ್ಯ ನಿರ್ವಹಿಸಲಿದೆ. ಎನ್ವಿರಾನ್‌ಮೆಂಟ್ ಚಾಂಪಿಯನ್’ ಎಂದು ಕರೆಯಲ್ಪಡುವ ಯೂತ್ ಟ್ರ್ಯಾಕ್‌ನ ವಿಜೇತ ತಂಡವು ಇನ್‌ಕ್ಯುಬೇಶನ್‌ಗಾಗಿ 50 ಲಕ್ಷ ರೂ. ಅನುದಾನವನ್ನು ಪಡೆಯುತ್ತದೆ. ಬಹುಮಾನ ವಿಜೇತ ಸ್ಕೂಲ್ ಟ್ರ್ಯಾಕ್ ತಂಡವು ‘ಕಮ್ಯುನಿಟಿ ಚಾಂಪಿಯನ್’ ಎಂಬ ಮನ್ನಣೆ ಗಳಿಸಲಿದ್ದು, ಮೂಲಮಾದರಿಯ ಅಭಿವೃದ್ಧಿಗಾಗಿ 25 ಲಕ್ಷ ರೂ. ಅನುದಾನವನ್ನು ಸ್ವೀಕರಿಸಲಿದೆ. ಈ ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ.

VISTARANEWS.COM


on

Samsung Solve for Tomorrow
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ದೆಹಲಿಯ ಫೌಂಡೇಶನ್ ಫಾರ್ ಇನ್ನೋವೇಶನ್ ಆ್ಯಂಡ್ ಟೆಕ್ನಾಲಜಿ ಟ್ರಾನ್ಸ್‌ಫರ್ (ಎಫ್ಐಟಿಟಿ) ಐಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಯುನೈಟೆಡ್ ನೇಷನ್ಸ್ ಇನ್ ಇಂಡಿಯಾ ಸಹಯೋಗದಲ್ಲಿ ತನ್ನ ಪ್ರಮುಖ ಸಿಎಸ್ಆರ್ ಉಪಕ್ರಮವಾದ ‘ಸಾಲ್ವ್ ಫಾರ್ ಟುಮಾರೋ’ (ನಾಳೆಗಾಗಿ ಪರಿಹಾರ)ದ (Samsung Solve for Tomorrow) 3ನೇ ಆವೃತ್ತಿಯನ್ನು ಪ್ರಾರಂಭಿಸಿದೆ. ಸಾಲ್ವ್ ಫಾರ್ ಟುಮಾರೋ ಕಾರ್ಯಕ್ರಮದ ಮೂಲಕ ಸ್ಯಾಮ್‌ಸಂಗ್ ದೇಶದ ಯುವಜನರಲ್ಲಿ ನವೀನ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಆಲೋಚನೆಗಳನ್ನು ಮೊಳೆಯಿಸುವ ಗುರಿಯನ್ನು ಹೊಂದಿದೆ.

ಸಾಲ್ವ್ ಫಾರ್ ಟುಮಾರೋ 2024 ಕಾರ್ಯಕ್ರಮವನ್ನು ಸ್ಯಾಮ್‌ಸಂಗ್ ಸೌತ್‌ವೆಸ್ಟ್ ಏಷ್ಯಾದ ಅಧ್ಯಕ್ಷ ಮತ್ತು ಸಿಇಒ ಜೆ.ಬಿ. ಪಾರ್ಕ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿಜ್ಞಾನಿ “ಜಿ’’ ಮತ್ತು ಹಿರಿಯ ನಿರ್ದೇಶಕ ಡಾ. ಸಂದೀಪ್ ಚಟರ್ಜಿ ಮತ್ತು ಯುನೈಟೆಡ್ ನೇಷನ್ಸ್ ಇನ್ ಇಂಡಿಯಾದ ರೆಸಿಡೆಂಟ್ ಕೋ-ಆರ್ಡಿನೇಟರ್ ಶೊಂಬಿ ಶಾರ್ಪ್ ಇತರ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ ಮಾಡಿದರು.

ಈ ಸಿಎಸ್ಆರ್ ಕಾರ್ಯಕ್ರಮವು ನವೀನ ಪರಿಹಾರ ಐಡಿಯಾಗಳ ಶಕ್ತಿಯನ್ನು ಮತ್ತು ಜೀವನವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಗುರುತಿಸುವ ಕೆಲಸ ಮಾಡುತ್ತದೆ, ದೃಢವಾದ ಸಾಮಾಜಿಕ ಪ್ರಭಾವವನ್ನು ಬೀರುತ್ತದೆ ಮತ್ತು ಸ್ಯಾಮ್‌ಸಂಗ್ ನ #TogetherforTomorrow #EnablingPeople ಎಂಬ ತತ್ವಕ್ಕೆ ಬಲ ತುಂಬುತ್ತದೆ.

ಈ ವರ್ಷ, ‘ಸಾಲ್ವ್ ಫಾರ್ ಟುಮಾರೊ’ ಕಾರ್ಯಕ್ರಮವು ಸ್ಕೂಲ್ ಟ್ರ್ಯಾಕ್ ಮತ್ತು ಯೂತ್ ಟ್ರ್ಯಾಕ್ ಎಂಬ ಎರಡು ವಿಭಿನ್ನ ವಿಭಾಗಗಳ ಮೂಲಕ ನಡೆಯಲಿದೆ. ಈ ಟ್ರ್ಯಾಕ್ ಗಳು ನಿರ್ದಿಷ್ಟ ಥೀಮ್ ಹೊಂದಿದೆ ಮತ್ತು ವಿವಿಧ ವಯೋಮಾನದವರನ್ನು ಗುರಿಯಾಗಿರಿಸಿಕೊಂಡಿದೆ. ಎರಡೂ ಟ್ರ್ಯಾಕ್‌ಗಳು ಏಕಕಾಲದಲ್ಲಿ ಕಾರ್ಯಾರಂಭ ಮಾಡುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಮತ್ತು ಒಂದೇ ರೀತಿಯ ಹಿನ್ನೆಲೆಯನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ | Ola Cabs : ಜಾಗತಿಕ ಮಟ್ಟದಲ್ಲಿ ಒಲಾ ಕ್ಯಾಬ್ ಸೇವೆ ಬಂದ್​; ಯಾಕೆ ಈ ನಿರ್ಧಾರ ?

ಸ್ಕೂಲ್ ಟ್ರ್ಯಾಕ್ 14-17 ವಯಸ್ಸಿನ ವಿದ್ಯಾರ್ಥಿಗಳಿಗೆ ಇರುವ ವಿಭಾಗವಾಗಿದ್ದು, “ಸಮುದಾಯ ಮತ್ತು ಒಳಗೊಳ್ಳುವಿಕೆ” ಎಂಬ ಥೀಮ್ ಅನ್ನು ಹೊಂದಿದೆ. ಸಾಮಾಜಿಕ ಆವಿಷ್ಕಾರಗಳ ಮೂಲಕ ಹಿಂದುಳಿದ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಿ ಅವರ ಬದುಕು ಸುಧಾರಿಸುವ ಮತ್ತು ಸಾಮಾಜಿಕವಾಗಿ ಒಳಗೊಳ್ಳುವಿಕೆಯ ಅವಕಾಶ ಒದಗಿಸುವ ಮೂಲಕ ಹೊಸ ಭಾರತಕ್ಕೆ ಪರಿಹಾರ ಒದಗಿಸುವ ಕಡೆಗೆ ಗಮನ ನೀಡಲಿದೆ.

ಯೂತ್ ಟ್ರ್ಯಾಕ್ 18-22 ವಯಸ್ಸಿನ ತರುಣರ ವಿಭಾಗವಾಗಿದ್ದು, “ಪರಿಸರ ಮತ್ತು ಸುಸ್ಥಿರತೆ” ವಿಷಯದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈ ಟ್ರ್ಯಾಕ್ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು, ಪರಿಸರವನ್ನು ರಕ್ಷಿಸಲು ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು ನವೀನ ಪರಿಹಾರಗಳನ್ನು ಕಂಡು ಹಿಡಿಯಲಿದೆ ಮತ್ತು ಆ ಮೂಲಕ ಹೊಸ ಕಾಲಜ ಜಗತ್ತಿಗೆ ನೆರವು ನೀಡುವ ಕಾರ್ಯ ಮಾಡಲಿದೆ.

ಸ್ಯಾಮ್‌ಸಂಗ್ ಸೌತ್‌ವೆಸ್ಟ್ ಏಷ್ಯಾದ ಅಧ್ಯಕ್ಷ ಮತ್ತು ಸಿಇಒ ಜೆಬಿ ಪಾರ್ಕ್, ” ಸ್ಯಾಮ್‌ಸಂಗ್‌ನಲ್ಲಿ, ನಾವು ನವೀನ ಆಲೋಚನೆಗಳು ಮತ್ತು ಪರಿವರ್ತಕ ತಂತ್ರಜ್ಞಾನಗಳ ಮೂಲಕ ಭವಿಷ್ಯವನ್ನು ರೂಪಿಸಲು ಮತ್ತು ಉತ್ತಮಗೊಳಿಸಲು ಪ್ರಯತ್ನಿಸುತ್ತೇವೆ. ಮುಂದಿನ ಪೀಳಿಗೆಯ ಹೊಸ ಆಲೋಚನೆ ಉಳ್ಳವರನ್ನು ಪೋಷಿಸುವುದು ಮತ್ತು ಸಾಮಾಜಿಕ ಬದಲಾವಣೆಗೆ ಉತ್ತೇಜಿಸುವುದು ನಮ್ಮ ಧ್ಯೇಯವಾಗಿದೆ. ಸಾಲ್ವ್ ಫಾರ್ ಟುಮಾರೊ ಕಾರ್ಯಕ್ರಮವು ನಿಜವಾಗಿಯೂ ಭಾರತದ ಯುವಕರಿಗೆ ಜನರ ಜೀವನವನ್ನು ಸುಧಾರಿಸುವ ಅರ್ಥಪೂರ್ಣ ಆವಿಷ್ಕಾರಗಳನ್ನು ಕಂಡು ಹಿಡಿಯಲು ಒಂದು ಅಪೂರ್ವ ವೇದಿಕೆಯಾಗಿ ರೂಪುಗೊಳ್ಳುತ್ತಿದೆ.

ಮೊದಲ ಎರಡು ಆವೃತ್ತಿಗಳಲ್ಲಿ, ಈ ಸಿಎಸ್‌ಆರ್ ಉಪಕ್ರಮವು ನಮ್ಮ ಮುಂದಿನ ಪೀಳಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದನ್ನು ನಾವು ಗಮನಿಸಿದ್ದೇವೆ. ಅವರು ಆ ಕಾರ್ಯಕ್ರಮದ ನಂತರ ತಮ್ಮ ಸಾಮಾಜಿಕ ಉದ್ಯಮಶೀಲತೆಯ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಅದರ ಮೂರನೇ ಆವೃತ್ತಿಯಲ್ಲಿ, ಎರಡು ಪ್ರತ್ಯೇಕ ಟ್ರ್ಯಾಕ್‌ಗಳನ್ನು ಪರಿಚಯಿಸಿದ್ದೇವೆ. ಆ ಮೂಲಕ ನಾವು ಭಾರತಕ್ಕೆ ಮತ್ತು ಜಗತ್ತಿಗೆ ಏಕಕಾಲದಲ್ಲಿ ಪರಿಹಾರ ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಮುಖ್ಯವಾಗಿ, ಈ ಮಹತ್ವದ ಸಿಎಸ್ಆರ್ ಕಾರ್ಯಕ್ರಮದ ಮೂಲಕ, ನಾವು ದೇಶದಲ್ಲಿ ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ಬಯಸುತ್ತೇವೆ” ಎಂದು ಹೇಳಿದರು.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಹಿರಿಯ ನಿರ್ದೇಶಕ ಮತ್ತು ವಿಜ್ಞಾನಿ ‘ಜಿ’ ಡಾ.ಸಂದೀಪ್ ಚಟರ್ಜಿ ಮಾತನಾಡಿ, “ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಯು ಭಾರತ ಸರ್ಕಾರದ ಆದ್ಯತೆಯ ಕಾರ್ಯಸೂಚಿಗಳಲ್ಲಿ ಒಂದಾಗಿದೆ. ಆರ್ಥಿಕ ಬೆಳವಣಿಗೆಯನ್ನು ತೀವ್ರಗೊಳಿಸಲು ಮಾನವ ಸಾಮರ್ಥ್ಯಗಳ ಜೊತೆಗೆ ತಂತ್ರಜ್ಞಾನವನ್ನು ಸಂಯೋಜಿಸಲು ಇದು ಸೂಕ್ತ ಸಮಯವಾಗಿದೆ. ಆಧುನಿಕ ಮನಸ್ಸು ಮತ್ತು ಕೌಶಲ್ಯಗಳನ್ನು ಹೊಂದಿರುವ ಭಾರತೀಯ ಯುವಕರು ಪರಿಸರದ ಕುರಿತು ಗಾಢವಾದ ಕಾಳಜಿ ವಹಿಸುತ್ತಾರೆ. ಆಧುನಿಕ ಸಮಗ್ರ ಆವಿಷ್ಕಾರಗಳನ್ನು ಬಳಸಿಕೊಂಡು, ವಿವಿಧ ಜಾಗತಿಕವಾದ ತಳಮಟ್ಟದ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಬಹುದು. ಯುವಕರ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಬೆಳವಣಿಗೆ ಸಾಧಿಸುವ ‘ನಾಳೆಗಾಗಿ ಪರಿಹಾರ (ಸಾಲ್ವ್ ಫಾರ್ ಟುಮಾರೋ)’ ನಂತಹ ಕಾರ್ಯಕ್ರಮಗಳು ಭಾರತ ಸರ್ಕಾರದ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಸಾಕ್ಷಿಯಂತೆ ಕಾರ್ಯ ನಿರ್ವಹಿಸುತ್ತದೆ” ಎಂದರು.

ಇದನ್ನೂ ಓದಿ | Money Guide: ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗುವ ಇ-ಶ್ರಮ ಯೋಜನೆ; ಹೀಗೆ ಹೆಸರು ನೋಂದಾಯಿಸಿ

ಐಐಟಿ ದೆಹಲಿಯ ನಿರ್ದೇಶಕ ಪ್ರೊ. ರಂಗನ್ ಬ್ಯಾನರ್ಜಿ, ” ಸಾಲ್ವ್ ಫಾರ್ ಟುಮಾರೋ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್‌ನ ಪ್ರಮುಖ ಪಾಲುದಾರರಾಗಿ ಮುಂದುವರಿಯಲು ನಮಗೆ ಹೆಮ್ಮೆ ಇದೆ. ಈ ಸಹಯೋಗವು ಹೊಸತನವನ್ನು ಉತ್ತೇಜಿಸುವ ಮತ್ತು ಯುವ ಮನಸ್ಸುಗಳನ್ನು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಸಶಕ್ತಗೊಳಿಸುವ ಕಾರ್ಯ ಮಾಡಲಿದೆ” ಎಂದು ಹೇಳಿದರು.

ಭಾರತದಲ್ಲಿನ ಯುಎನ್ ರೆಸಿಡೆಂಟ್ ಕೋಆರ್ಡಿನೇಟರ್ ಶೊಂಬಿ ಶಾರ್ಪ್ ಅವರು ಮಾತನಾಡಿ, “ಸ್ಯಾಮ್‌ಸಂಗ್‌ನ ಸಾಲ್ವ್ ಫಾರ್ ಟುಮಾರೊ ಕಾರ್ಯಕ್ರಮದ ಮೂರನೇ ಆವೃತ್ತಿಯಲ್ಲಿ ಭಾಗವಹಿಸಿರುವುದು ನನಗೆ ಸಂತೋಷ ತಂದಿದೆ. ಇದು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸಲು ಯುವಕರಿಗೆ ನಾವೀನ್ಯತೆ ತರಲು ಉತ್ತೇಜಿಸುವ ಉತ್ತೇಜಕ ಉಪಕ್ರಮವಾಗಿದೆ. ಭಾರತದಲ್ಲಿನ ಯುಎನ್ ವ್ಯವಸ್ಥೆಯು ಸಾಲ್ವ್ ಫಾರ್ ಟುಮಾರೊ ಕಾರ್ಯಕ್ರಮದಂತಹ ಯುವ ಜನರ ಮಹತ್ವಾಕಾಂಕ್ಷೆಗಳು ಮತ್ತು ನಾಯಕತ್ವವನ್ನು ಪ್ರೇರೇಪಿಸುವ ಖಾಸಗಿ ವಲಯದ ಉಪಕ್ರಮಗಳನ್ನು ಬೆಂಬಲಿಸುತ್ತದೆ ಮತ್ತು ಅವರೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಇತಿಹಾಸದಲ್ಲಿಯೇ ಶ್ರೇಷ್ಠ ಯುವ ಪೀಳಿಗೆಯ ಜೊತೆಗೆ ಭಾರತವು ಹಿಂದೆಂದಿಗಿಂತಲೂ ಹೆಚ್ಚು ಯುವ ಮನಸ್ಸುಗಳನ್ನು ಮತ್ತು ಅವರ ಹೊಸ ಆಲೋಚನೆಗಳನ್ನು ಜೊತೆಗೂಡಿಸುತ್ತದೆ! ಇದರರ್ಥ ಭಾರತೀಯ ಪರಿಹಾರಗಳು ಜಾಗತಿಕ ಪರಿಹಾರಗಳೂ ಆಗಿವೆ” ಎಂದು ಹೇಳಿದರು.

ಏನಿದು ಸ್ಯಾಮ್‌ಸಂಗ್ ʼಸಾಲ್ವ್ ಫಾರ್ ಟುಮಾರೋʼ ಕಾರ್ಯಕ್ರಮ, ಯಾರು ಭಾಗವಹಿಸಬಹುದು

ಸ್ಕೂಲ್ ಟ್ರ್ಯಾಕ್‌ನಲ್ಲಿ 14-17 ವರ್ಷ ವಯಸ್ಸಿನವರು -ವೈಯಕ್ತಿಕವಾಗಿ ಅಥವಾ 5 ಸದಸ್ಯರ ತಂಡಗಳಲ್ಲಿ ಭಾಗವಹಿಸಬಹುದು. ಅವರು “ಸಮುದಾಯ ಮತ್ತು ಒಳಗೊಳ್ಳುವಿಕೆ (ಕಮ್ಯುನಿಟಿ ಆಂಡ್ ಇನ್ ಕ್ಲೂಷನ್)” ಥೀಮ್‌ನಲ್ಲಿ ತಮ್ಮ ಆಲೋಚನೆಗಳನ್ನು ಪ್ರಸ್ತುತ ಪಡಿಸಬಹುದು. ಯೂತ್ ಟ್ರ್ಯಾಕ್‌ನಲ್ಲಿ 18-22 ವರ್ಷ ವಯಸ್ಸಿನವರು -ವೈಯಕ್ತಿಕವಾಗಿ ಅಥವಾ 5 ಸದಸ್ಯರ ತಂಡಗಳಲ್ಲಿ ಭಾಗವಹಿಸಬಹುದಾಗಿದ್ದು, ಅವರು “ಪರಿಸರ ಮತ್ತು ಸುಸ್ಥಿರತೆ”(ಎನ್ವಿರಾನ್ಮೆಂಟ್ ಆಂಡ್ ಸಸ್ಟೇನೇಬಲಿಟಿ) ಥೀಮ್‌ನಲ್ಲಿ ತಮ್ಮ ಆಲೋಚನೆಗಳನ್ನು ಸಲ್ಲಿಸಬಹುದು.

ಸ್ಪರ್ಧೆಯ ವಿಚಾರಗಳು

ಸ್ಕೂಲ್ ಟ್ರ್ಯಾಕ್ ಗೆ “ಸಮುದಾಯ ಮತ್ತು ಒಳಗೊಳ್ಳುವಿಕೆ” ಥೀಮ್ ಇದ್ದು, ಹಿಂದುಳಿದ ವರ್ಗಕ್ಕೆ ಆರೋಗ್ಯ ಸೇವೆ ಲಭ್ಯತೆ ಸುಧಾರಿಸುವುದು, ಕಲಿಕಾ ವಿಧಾನಗಳು ಮತ್ತು ಶಿಕ್ಷಣ ಲಭ್ಯತೆಯನ್ನು ಸುಲಭಗೊಳಿಸುವುದು ಮತ್ತು ಎಲ್ಲರಿಗೂ ಸಾಮಾಜಿಕ ಒಳಗೊಳ್ಳುವಿಕೆಯ ಅವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ.

ಯೂತ್ ಟ್ರ್ಯಾಕ್ ಗೆ “ಪರಿಸರ ಮತ್ತು ಸುಸ್ಥಿರತೆ” ಥೀಮ್ ಇದ್ದು, ಈ ತಂಡ ಪರಿಸರ ಸಂರಕ್ಷಣೆ, ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡುವುದು ಮತ್ತು ಸುಸ್ಥಿರತೆಯನ್ನು ಪ್ರೇರೇಪಿಸುವ ಕೆಲಸ ಮಾಡಲಿದೆ.

ವಿಜೇತರಿಗೆ ಏನು ಸಿಗುತ್ತದೆ?

ಸ್ಯಾಮ್ ಸಂಗ್, MeitY, ಐಐಟಿ ದೆಹಲಿ ಒಳಗೊಂಡು ಹಲವಾರು ವಿವಿಧ ಉದ್ಯಮ ತಜ್ಞರಿಂದ ತರಬೇತಿ ದೊರೆಯಲಿದೆ ಮತ್ತು ಭಾರತದಲ್ಲಿರುವ ವಿಶ್ವಸಂಸ್ಥೆ ತಂಡದಿಂದ ತಾಂತ್ರಿಕ ಬೆಂಬಲ ಲಭ್ಯವಾಗಲಿದೆ. ಹೆಚ್ಚುವರಿಯಾಗಿ, ಭಾಗವಹಿಸುವವರು ಮೂಲಮಾದರಿಗಳ ಕುರಿತ ತಮ್ಮ ಆಲೋಚನೆಗಳನ್ನು ಹೆಚ್ಚು ಸ್ಪಷ್ಟಗೊಳಿಸಲು ವಿಶೇಷ ಮಾರ್ಗದರ್ಶನ ಮತ್ತು ತರಬೇತಿಯನ್ನು ಪಡೆಯುತ್ತಾರೆ. ಸ್ಯಾಮ್‌ಸಂಗ್ ನಾಯಕರೊಂದಿಗೆ ಸಂವಾದದಲ್ಲಿ ಭಾವಹಿಸುವ ಅವಕಾಶ ಹೊಂದುತ್ತಾರೆ ಮತ್ತು ಮೂಲಮಾದರಿ ಅಭಿವೃದ್ಧಿ ಮತ್ತು ವರ್ಧನೆಗಾಗಿ ಆಕರ್ಷಕ ಅನುದಾನವನ್ನು ಪಡೆಯುತ್ತಾರೆ.

ಸ್ಕೂಲ್ ಟ್ರ್ಯಾಕ್: ಸೆಮಿ-ಫೈನಲ್ ಹಂತಕ್ಕೆ ತಲುಪಿದ 10 ತಂಡಗಳು ಮೂಲಮಾದರಿ ಅಭಿವೃದ್ಧಿಗೆ 20,000 ರೂ. ಅನುದಾನವನ್ನು ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್‌ಗಳನ್ನು ಪಡೆಯುತ್ತಾರೆ. ಫೈನಲ್ ಹಂತ ತಲುಪಿದ 5 ತಂಡಗಳು ಮೂಲಮಾದರಿ ಬೆಳವಣಿಗೆಗೆ ತಲಾ ರೂ. 1 ಲಕ್ಷ ಅನುದಾನವನ್ನು ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ವಾಚ್ ಗಳನ್ನು ಪಡೆಯುತ್ತವೆ.

ಯೂತ್ ಟ್ರ್ಯಾಕ್: ಸೆಮಿ-ಫೈನಲ್ ಹಂತಕ್ಕೆ ತಲುಪಿದ 10 ತಂಡಗಳು ಮೂಲಮಾದರಿ ಅಭಿವೃದ್ಧಿಗೆ ರೂ. 20,000 ಅನುದಾನವನ್ನು ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಲ್ಯಾಪ್‌ಟಾಪ್ ಗಳನ್ನು ಪಡೆಯುತ್ತಾರೆ. ಫೈನಲ್ ಹಂತ ತಲುಪಿದ 5 ತಂಡಗಳು ಮೂಲಮಾದರಿ ಹೆಚ್ಚಳಕ್ಕೆ ತಲಾ ರೂ. 1 ಲಕ್ಷ ಅನುದಾನವನ್ನು ಮತ್ತು ಸ್ಯಾಮ್ ಸಂಗ್ ಝಡ್ ಫ್ಲಿಪ್ ಸ್ಮಾರ್ಟ್ ಫೋನ್ ಗಳನ್ನು ಪಡೆಯುತ್ತವೆ.

    ವಿಜೇತರು ಏನು ಪಡೆಯುತ್ತಾರೆ?

    ಸ್ಕೂಲ್ ಟ್ರ್ಯಾಕ್: ವಿಜೇತ ತಂಡವನ್ನು ಸಾಲ್ವ್ ಫಾರ್ ಟುಮಾರೋ 2024ರ “ಕಮ್ಯುನಿಟಿ ಚಾಂಪಿಯನ್” ಎಂದು ಘೋಷಿಸಲಾಗುತ್ತದೆ ಮತ್ತು ಮೂಲಮಾದರಿ ಅಭಿವೃದ್ಧಿಗಾದಿ 25 ಲಕ್ಷ ರೂ. ಅನುದಾನವನ್ನು ನೀಡಲಾಗುತ್ತದೆ. ವಿಜೇತ ತಂಡಗಳ ಶಾಲೆಗಳಿಗೆ ಶೈಕ್ಷಣಿಕ ಪ್ರಗತಿ ಸಾಧಿಸಲು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮಕ್ಕಳ ಮನಸ್ಥಿತಿ ಉತ್ತೇಜಿಸಲು ಸ್ಯಾಮ್ ಸಂಗ್ ಉತ್ಪನ್ನಗಳನ್ನು ನೀಡಲಾಗುತ್ತದೆ.

    ಯೂತ್ ಟ್ರ್ಯಾಕ್: ವಿಜೇತ ತಂಡವನ್ನು ಸಾಲ್ವ್ ಫಾರ್ ಟುಮಾರೋ 2024ರ “ಪರಿಸರ ಚಾಂಪಿಯನ್” ಎಂದು ಘೋಷಿಸಲಾಗುತ್ತದೆ ಮತ್ತು ಐಐಟಿ-ದೆಹಲಿಯಲ್ಲಿ ಇನ್ ಕ್ಯುಬೇಷನ್‌ಗಾಗಿ ರೂ. 50 ಲಕ್ಷದ ಅನುದಾನವನ್ನು ಪಡೆಯುತ್ತದೆ. ವಿಜೇತ ತಂಡಗಳ ಕಾಲೇಜುಗಳಿಗೆ ತಮ್ಮ ಶೈಕ್ಷಣಿಕ ಬೆಳವಣಿಗೆ ಸಾಧಿಸಲು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಉದ್ಯಮಶೀಲತಾ ಮನೋಭಾವ ಉತ್ತೇಜಿಸಲು ಸ್ಯಾಮ್‌ಸಂಗ್ ಉತ್ಪನ್ನಗಳನ್ನು ನೀಡಲಾಗುತ್ತದೆ.

    ಇಲ್ಲಿ ಅರ್ಜಿ ಸಲ್ಲಿಸಬಹುದು: www.samsung.com/in/solvefortomorrow

    ಯಾವಾಗಿನಿಂದ ಅರ್ಜಿ ಸಲ್ಲಿಕೆ: ಏಪ್ರಿಲ್ 9ರಿಂದ ಆರಂಭ

    ಕೊನೆಯ ದಿನಾಂಕ: ಮೇ 31ರಂದು ಸಂಜೆ 5 ಗಂಟೆವರೆಗೆ

    ಕಾರ್ಯಕ್ರಮದ ವಿವರಗಳು

    ಸ್ಕೂಲ್ ಟ್ರ್ಯಾಕ್: ಸಾಲ್ವಿಂಗ್ ಫಾರ್ ಇಂಡಿಯಾ (ಭಾರತಕ್ಕಾಗಿ ಪರಿಹಾರ)ಸ್ಕೂಲ್ ಟ್ರ್ಯಾಕ್‌ ವಿಭಾಗದಲ್ಲಿ ಐದು ಸದಸ್ಯರ ತಂಡಗಳನ್ನು ರಚಿಸಲು ಆಹ್ವಾನಿಸಲಾಗುತ್ತದೆ ಮತ್ತು ‘ಸಮುದಾಯ ಮತ್ತು ನಾವೀನ್ಯತೆ’ ಥೀಮ್ ಅಡಿಯಲ್ಲಿ ತಮ್ಮ ನವೀನ ಆಲೋಚನೆಗಳನ್ನು ಸಲ್ಲಿಸಲು ವಿದ್ಯಾರ್ಥಿಗಳಿಗೆ ಸೂಚಿಸಲಾಗುತ್ತದೆ. ಕಾರ್ಯಕ್ರಮವು ಅಪ್ಲಿಕೇಶನ್ ವಿಂಡೋ, ಪ್ರಾದೇಶಿಕ ಸುತ್ತುಗಳು, ನಾವೀನ್ಯತೆ ನಡಿಗೆ ಮತ್ತು ಗ್ರ್ಯಾಂಡ್ ಫಿನಾಲೆ ಎಂಬ ನಾಲ್ಕು ಹಂತಗಳ ಮೂಲಕ ನಡೆಯುತ್ತದೆ.

    ಅಪ್ಲಿಕೇಶನ್ ವಿಂಡೋದ ಹಂತದಲ್ಲಿ ಭಾಗವಹಿಸುವ ತಂಡಗಳು ಸ್ವೀಕೃತಿಯ ಡಿಜಿಟಲ್ ಪ್ರಮಾಣಪತ್ರಗಳನ್ನು ಸ್ವೀಕರಿಸುತ್ತವೆ. ಮೊದಲ ಶಾರ್ಟ್‌ಲಿಸ್ಟ್ ಪ್ರಾದೇಶಿಕ ಹಂತದಲ್ಲಿ ನಡೆಯುತ್ತದೆ, ಅಲ್ಲಿ 50 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ನಂತರ ನಡೆಯುವ ಪ್ರಾದೇಶಿಕ ಹಂತದ ಸುತ್ತುಗಳಲ್ಲಿ, ಈ 50 ತಂಡಗಳು ತಮ್ಮ ಆಲೋಚನೆಗಳನ್ನು ಅಥವಾ ಐಡಿಯಾಗಳನ್ನು ತೀರ್ಪುಗಾರರಿಗೆ ಸಲ್ಲಿಸುತ್ತವೆ. ಇಲ್ಲಿಂದ, 10 ತಂಡಗಳು ಸೆಮಿ ಫೈನಲ್ ಹಂತಕ್ಕೆ ಹೋಗಿ ಅಲ್ಲಿ ನಾವೀನ್ಯತೆ ನಡಿಗೆ ಹಂತದಲ್ಲಿ ಭಾಗವಹಿಸುತ್ತವೆ. ಅಲ್ಲಿ ಅವರು ಸ್ಯಾಮ್‌ಸಂಗ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಮತ್ತು ಪ್ರಾದೇಶಿಕ ಪ್ರಧಾನ ಕಚೇರಿಗಳಲ್ಲಿ ನಡೆಯುವ ಕಾರ್ಯಾಗಾರಗಳಿಗೆ ಹಾಜರಾಗುತ್ತಾರೆ. ನಂತರ ರಾಷ್ಟ್ರ ಮಟ್ಟದಲ್ಲಿ ಐಐಟಿ ದೆಹಲಿಯಲ್ಲಿ ಈ 10 ಸೆಮಿ-ಫೈನಲಿಸ್ಟ್‌ಗಳು ತಮ್ಮ ಆಲೋಚನೆಗಳನ್ನು ತೀರ್ಪುಗಾರರಿಗೆ ಸಲ್ಲಿಸುತ್ತಾರೆ. ಬಹುಮಾನವಾಗಿ, ಪ್ರತಿ ತಂಡವು ಮೂಲಮಾದರಿ ಅಭಿವೃದ್ಧಿಗೆ ರೂ. ಅನುದಾನವನ್ನು ಮತ್ತು ಇತ್ತೀಚಿನ ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಗಳನ್ನು ಪಡೆಯುತ್ತದೆ. ರಾಷ್ಟ್ರೀಯ ಪಿಚ್ ಈವೆಂಟ್‌ನಲ್ಲಿ ಆಯ್ಕೆಯಾಗುವ 5 ತಂಡಗಳು ಫೈನಲ್ ಪ್ರವೇಶಿಸುತ್ತವೆ. ಅಲ್ಲಿ ಪ್ರತೀ ತಂಡಗಳು ತರಬೇತಿಗೆ ಒಳಗಾಗುತ್ತವೆ ಮತ್ತು ಅವರ ಪರಿಹಾರ ಐಡಿಯಾಗಳನ್ನು ಫೈನಲ್ ತೀರ್ಪುಗಾರರಿಗೆ ಸಲ್ಲಿಸುತ್ತವೆ. ಫೈನಲ್ ನಲ್ಲಿ ಭಾಗವಹಿಸುವ ಪ್ರತಿ ತಂಡದ ಎಲ್ಲಾ ಭಾಗವಹಿಸುವವರು ಇತ್ತೀಚಿನ ಗ್ಯಾಲಕ್ಸಿ ವಾಚ್ ಪಡೆಯುತ್ತಾರೆ. ಜೊತೆಗೆ ಮೂಲಮಾದರಿಯ ಪ್ರಗತಿಗಾಗಿ 1 ಲಕ್ಷ ರೂ. ಅನುದಾನವನ್ನು ತಂಡ ಪಡೆಯುತ್ತದೆ. ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತ ತಂಡವನ್ನು ಸಾಲ್ವ್ ಫಾರ್ ಟುಮಾರೋ 2024ರ “ಕಮ್ಯುನಿಟಿ ಚಾಂಪಿಯನ್” ಎಂದು ಘೋಷಿಸಲಾಗುತ್ತದೆ ಮತ್ತು ಅವರ ಮೂಲಮಾದರಿಯ ಪ್ರಗತಿಗೆ 25 ಲಕ್ಷ ರೂ. ಅನುದಾನವನ್ನು ಮತ್ತು ಅವರ ಶಾಲೆಗೆ ಅತ್ಯಾಕರ್ಷಕ ಸ್ಯಾಮ್ ಸಂಗ್ ಗ್ಯಾಲಕ್ಸಿ ಉತ್ಪನ್ನಗಳನ್ನು ನೀಡಲಾಗುತ್ತದೆ.

    ಯೂತ್ ಟ್ರ್ಯಾಕ್: ಸಾಲ್ವಿಂಗ್ ಫಾರ್ ದಿ ವರ್ಲ್ಡ್ (ಜಗತ್ತಿಗಾಗಿ ಪರಿಹಾರ)

    ಯೂತ್ ಟ್ರ್ಯಾಕ್‌ನಲ್ಲಿ, ಆಕಾಂಕ್ಷಿಗಳು ಐದು ಸದಸ್ಯರು ಇರುವ ತಂಡವನ್ನು ರಚಿಸುತ್ತಾರೆ ಮತ್ತು “ಪರಿಸರ ಮತ್ತು ಸುಸ್ಥಿರತೆ” ಎಂಬ ವಿಷಯದ ಅಡಿಯಲ್ಲಿ ತಮ್ಮ ನವೀನ ಆಲೋಚನೆಗಳನ್ನು ಸಲ್ಲಿಸುತ್ತಾರೆ. ಮೊದಲ ಶಾರ್ಟ್‌ಲಿಸ್ಟ್ ಪ್ರಾದೇಶಿಕ ಹಂತದಲ್ಲಿ ನಡೆಯಲಿದ್ದು, ಅಲ್ಲಿ 50 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ನಂತರದ ಪ್ರಾದೇಶಿಕ ಸುತ್ತುಗಳಲ್ಲಿ , ಈ 50 ತಂಡಗಳು ತಮ್ಮ ಹೊಸ ಆಲೋಚನೆಗಳನ್ನು ತೀರ್ಪುಗಾರರಿಗೆ ಸಲ್ಲಿಸುತ್ತವೆ. ಇಲ್ಲಿಂದ, 10 ಸೆಮಿ-ಫೈನಲ್ ಹಂತಕ್ಕೆ ತಲುಪಿದ ತಂಡಗಳು ನಾವೀನ್ಯತೆ ನಡಿಗೆ ಹಂತಕ್ಕೆ ಸಾಗುತ್ತವೆ. ಅಲ್ಲಿ ಅವರು ಸ್ಯಾಮ್‌ಸಂಗ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಮತ್ತು ಪ್ರಾದೇಶಿಕ ಪ್ರಧಾನ ಕಚೇರಿಗಳಲ್ಲಿ ಕಾರ್ಯಾಗಾರಗಳಿಗೆ ಹಾಜರಾಗುತ್ತಾರೆ. ನಂತರ ರಾಷ್ಟ್ರೀಯ ಪಿಚ್ ಈವೆಂಟ್ ನಲ್ಲಿ ಈ 10 ಸೆಮಿ-ಫೈನಲಿಸ್ಟ್‌ಗಳು ತಮ್ಮ ಆಲೋಚನೆಗಳನ್ನು ಐಐಟಿ ದೆಹಲಿಯ ತೀರ್ಪುಗಾರರಿಗೆ ತಿಳಿಸುತ್ತಾರೆ. ಬಹುಮಾನವಾಗಿ, ಪ್ರತಿ ತಂಡವು ಮೂಲಮಾದರಿ ಅಭಿವೃದ್ಧಿಗೆ ರೂ. 20,000 ಅನುದಾನವನ್ನು ಮತ್ತು ಇತ್ತೀಚಿನ ಸ್ಯಾಮ್ ಸಂಗ್ ಗ್ಯಾಲಕ್ಸಿ ಲ್ಯಾಪ್‌ಟಾಪ್‌ಗಳನ್ನು ಪಡೆಯುತ್ತಾರೆ. ರಾಷ್ಟ್ರೀಯ ಪಿಚ್ ಈವೆಂಟ್‌ನಲ್ಲಿ ಆಯ್ಕೆ ಮಾಡಲಾದ 5 ಅಂತಿಮ ತಂಡಗಳು ತರಬೇತಿಗೆ ಒಳಪಡುತ್ತಾರೆ ಮತ್ತು ಅವರ ಪರಿಹಾರ ಐಡಿಯಾಗಳನ್ನು ಫೈನಲ್ ತೀರ್ಪುಗಾರರಿಗೆ ಸಲ್ಲಿಸುತ್ತಾರೆ. ಇಲ್ಲಿ ಭಾಗವಹಿಸಿದ ಎಲ್ಲರಿಗೂ ಗೊಸ ಗ್ಯಾಲಕ್ಸಿ ಝಡ್ ಫ್ಲಿಪ್ ಸ್ಮಾರ್ಟ್‌ಫೋನ್ ಪಡೆಯುತ್ತಾರೆ. ಜೊತೆಗೆ ತಂಡಕ್ಕೆ ಮೂಲಮಾದರಿಯ ಅಭಿವೃದ್ಧಿಗೆ ರೂ. 1 ಲಕ್ಷದ ಅನುದಾನವನ್ನು ನೀಡಲಾಗುತ್ತದೆ. ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತ ತಂಡವನ್ನು ಸಾಲ್ವ್ ಫಾರ್ ಟುಮಾರೋ 2024 “ಪರಿಸರ ಚಾಂಪಿಯನ್” ಎಂದು ಘೋಷಿಸಲಾಗುತ್ತದೆ ಮತ್ತು ಇನ್ ಕ್ಯುಬೇಷನ್ ಗೆ ರೂ. 50 ಲಕ್ಷದ ಅನುದಾನವನ್ನು ಮತ್ತು ಅವರ ಕಾಲೇಜಿಗೆ ಅತ್ಯಾಕರ್ಷಕ ಸ್ಯಾಮ್ ಸಂಗ್ ಗ್ಯಾಲಕ್ಸಿ ಉತ್ಪನ್ನಗಳನ್ನು ನೀಡಲಾಗುತ್ತದೆ.

    ಎರಡು ಟ್ರ್ಯಾಕ್‌ಗಳು ಅಥವಾ ವಿಭಾಗಗಳು ಪರಸ್ಪರ ಸ್ಪರ್ಧಿಸುವುದಿಲ್ಲ ಮತ್ತು ಪ್ರತಿ ಟ್ರ್ಯಾಕ್‌ಗಳು ವಿಭಿನ್ನ ಥೀಮ್‌ಗಳು ಮತ್ತು ವಯಸ್ಸಿನ ಗುಂಪುಗಳ ಪ್ರಕಾರವೇ ಪ್ರತ್ಯೇಕ ತರಬೇತಿ, ಮಾರ್ಗದರ್ಶನ ಮತ್ತು ಕಲಿಕೆಯ ಅವಕಾಶಗಳನ್ನು ಪಡೆಯುತ್ತವೆ. ಮುಖ್ಯ ಸ್ಪರ್ಧೆಯ ಜೊತೆಗೆ, ಭಾಗವಹಿಸುವವರು ‘ಸೋಷಿಯಲ್ ಮೀಡಿಯಾ ಚಾಂಪಿಯನ್ ಅವಾರ್ಡ್’ ಮತ್ತು ‘ಗುಡ್ವಿಲ್ ಅವಾರ್ಡ್’ ನಂತಹ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಸ್ಪರ್ಧಿಸುವ ಅವಕಾಶವನ್ನು ಹೊಂದಿರುತ್ತಾರೆ. ‘ ಸೋಷಿಯಲ್ ಮೀಡಿಯಾ ಚಾಂಪಿಯನ್ ಅವಾರ್ಡ್’ ನಲ್ಲಿ ಪ್ರತಿ ಟ್ರ್ಯಾಕ್‌ನ ಸಾಮಾಜಿಕ ಮಾಧ್ಯಮ ಚಾಂಪಿಯನ್‌ಗಳು ರೂ. 50000 ಬಹುಮಾನವನ್ನು ಪಡೆಯುತ್ತಾರೆ. ನಾವೀನ್ಯತೆ ನಡಿಗೆ ಸುತ್ತಿನಲ್ಲಿ ಘೋಷಿಸಲಾಗುತ್ತದೆ. ‘ಗುಡ್‌ವಿಲ್ ಅವಾರ್ಡ್’ ಪ್ರಶಸ್ತಿ ಅಡಿಯಲ್ಲಿ ಪ್ರತೀ ಟ್ರ್ಯಾಕ್ ನ ವಿಜೇತರು ವ್ಯೂವರ್ಸ್ ಚಾಯ್ಸ್ ಐಡಿಯಾಗಾಗಿ ರೂ. 1 ಲಕ್ಷದ ಬಹುಮಾನ ಪಡೆಯುತ್ತಾರೆ. ಈ ಪ್ರಶಸ್ತಿಯನ್ನು ಗ್ರ್ಯಾಂಡ್ ಫಿನಾಲೆಯಲ್ಲಿ ಘೋಷಿಸಲಾಗುತ್ತದೆ.

    ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಭಾರತದಲ್ಲಿ ಸ್ಪರ್ಧೆಗೆ ಹೆಸರು ನೋಂದಾಯಿಸಲು, www.samsung.com/in/solvefortomorrow ಗೆ ಭೇಟಿ ನೀಡಿ. ಅರ್ಜಿ ಸಲ್ಲಿಕೆಯ ಅವಕಾಶ ಮೇ 31, 202ರಂದು ಸಂಜೆ 5 ಗಂಟೆಗೆ ಮುಗಿಯಲಿದೆ.

    ಸಾಲ್ವ್ ಫಾರ್ ಟುಮಾರೋ ಕಾರ್ಯಕ್ರಮವನ್ನು 2010 ರಲ್ಲಿ ಯುಎಸ್ ನಲ್ಲಿ ಮೊದಲು ಪ್ರಾರಂಭಿಸಲಾಯಿತು. ಪ್ರಸ್ತುತ ಈ ಕಾರ್ಯಕ್ರಮವು ಜಾಗತಿಕವಾಗಿ 63 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಈಗಾಗಲೇ ಪ್ರಪಂಚದಾದ್ಯಂತ 2.3 ಮಿಲಿಯನ್ ಯುವಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

    ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಜಾಗತಿಕ ಸಿಎಸ್‌ಆರ್ ತತ್ತ್ವವಾದ ‘ಟುಗೆದರ್ ಫಾರ್ ಟುಮಾರೋ! ಎನೇಬಲಿಂಗ್ ಪೀಪಲ್’ ನಾಳಿನ ನಾಯಕರನ್ನು ಸಶಕ್ತಗೊಳಿಸಲು ಪ್ರಪಂಚದಾದ್ಯಂತದ ಯುವಜನರಿಗೆ ಶಿಕ್ಷಣವನ್ನು ಒದಗಿಸುವ ಉದ್ದೇಶ ಹೊಂದಿದೆ. ನಮ್ಮ ಸಿಎಸ್ಆರ್ ವೆಬ್‌ಪುಟ http://csr.samsung.com ದಲ್ಲಿ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ನ ಸಿಎಸ್ಆರ್ ಪ್ರಯತ್ನಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯಿರಿ.

    ಇದನ್ನೂ ಓದಿ | Money Guide: ಎಚ್‌ಡಿಎಫ್‌ಸಿಯಿಂದ ಎಸ್‌ಬಿಐವರೆಗೆ; ಫಿಕ್ಸೆಡ್‌ ಡೆಪಾಸಿಟ್‌ಗೆ ಶೇ. 7ಕ್ಕಿಂತ ಅಧಿಕ ಬಡ್ಡಿ ನೀಡುವ ಬ್ಯಾಂಕ್‌ಗಳಿವು

    ಸ್ಯಾಮ್ ಸಂಗ್ ಇಂಡಿಯಾ ಕುರಿತು ಇತ್ತೀಚಿನ ಸುದ್ದಿಗಳಿಗಾಗಿ, ದಯವಿಟ್ಟು http://news.samsung.com/in ನಲ್ಲಿ ಸ್ಯಾಮ್ ಸಂಗ್ ಇಂಡಿಯಾ ನ್ಯೂಸ್ ರೂಮ್ ಗೆ ಭೇಟಿ ನೀಡಿ. ಹಿಂದಿಗಾಗಿ, https://news.samsung.com/bharat ನಲ್ಲಿ ಸ್ಯಾಮ್ ಸಂಗ್ ನ್ಯೂಸ್‌ರೂಮ್ ಭಾರತ್‌ಗೆ ಲಾಗ್ ಇನ್ ಮಾಡಿ. ನೀವು ಟ್ವಿಟ್ಟರ್ ನಲ್ಲಿ @SamsungNewsIN ನಲ್ಲಿಯೂ ನಮ್ಮನ್ನು ಫಾಲ್ ಮಾಡಬಹುದು.

    ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
    ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
    Continue Reading
    Click to comment

    Leave a Reply

    Your email address will not be published. Required fields are marked *

    ಬೆಂಗಳೂರು

    Sadhguru Jaggi Vasudev: ಮೆದುಳಿನ ಶಸ್ತ್ರಚಿಕಿತ್ಸೆಯ ತಿಂಗಳ ಬಳಿಕ ಕಾಂಬೋಡಿಯಾಗೆ ಸದ್ಗುರು ಪ್ರವಾಸ

    Sadhguru Jaggi Vasudev: ಕಾಂಬೋಡಿಯಾದ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕತೆಯ ಅನ್ವೇಷಣೆಗಾಗಿ ಸದ್ಗುರು ಜಗ್ಗಿ ವಾಸುದೇವ್‌ ಅವರು ತೆರಳಿದ್ದಾರೆ. ಇದು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ಸದ್ಗುರುಗಳ ಮೊದಲ ಪ್ರಯಾಣವಾಗಿದೆ.

    VISTARANEWS.COM


    on

    Sadhguru Jaggi Vasudev
    Koo

    ಸೀಮ್‌ ರೀಪ್‌(ಕಾಂಬೋಡಿಯಾ): ಮೆದುಳಿನ ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯ ಆಳದ ಅನ್ವೇಷಣೆಗಾಗಿ ಆಧ್ಯಾತ್ಮಿಕ ಗುರು ಹಾಗೂ ಈಶ ಫೌಂಡೇಶನ್‌ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ (Sadhguru Jaggi Vasudev) ಅವರು ಕಾಂಬೋಡಿಯಾಗೆ ತೆರಳಿದ್ದಾರೆ. ಕಾಂಬೋಡಿಯಾ ಪ್ರವಾಸೋದ್ಯಮ ಸಚಿವ ಎಚ್.ಇ. ಎಸ್ಒಕೆ ಸೋಕೆನ್ ಅವರು ಸೀಮ್ ರೀಪ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸದ್ಗುರುಗಳನ್ನು ಆತ್ಮೀಯತೆಯಿಂದ ಸ್ವಾಗತಿಸಿದರು.

    ಗಮನಾರ್ಹ ಆತಿಥ್ಯದ ಜತೆಗೆ ಸಚಿವರು, ಕಾಂಬೋಡಿಯಾದ ಪ್ರಧಾನ ಮಂತ್ರಿಯವರ ವೈಯಕ್ತಿಕ ಪತ್ರವನ್ನು ಸದ್ಗುರುಗಳಿಗೆ ಪ್ರಸ್ತುತಪಡಿಸಿದರು. ಸಚಿವರೊಂದಿಗೆ ಅವರ ಪತ್ನಿ, ಕಾಂಬೋಡಿಯಾದ ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತದ ಕಾನ್ಸುಲೇಟ್ ಜನರಲ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

    ಇದು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ತಮ್ಮ ಚಟುವಟಿಕೆಗಳಿಗೆ ಮರಳಿರುವ ಸದ್ಗುರುಗಳ ಮೊದಲ ಪ್ರಯಾಣ. ಅಲ್ಲಿ ಅವರು ಸ್ಥಳೀಯ ಸಂಸ್ಕೃತಿ ಮತ್ತು ದೇವಾಲಯಗಳ ಹಿಂದಿನ ವಿಜ್ಞಾನವನ್ನು ಅನ್ವೇಷಿಸಲಿದ್ದಾರೆ. ಅವರ ಕಾರ್ಯಕ್ರಮವು ಏಪ್ರಿಲ್ 30 ರವರೆಗೆ ಜರುಗಲಿದ್ದು, ಈ ಸಮಯದಲ್ಲಿ ಅಲ್ಲಿನ ಸ್ಥಳೀಯ ಸಂಸ್ಕೃತಿಯಲ್ಲಿ ಮಿಂದೇಳುವುದರ ಜತೆಗೆ, ಕಾಂಬೋಡಿಯಾದ ಸೀಮ್ ರೀಪ್‌ನಲ್ಲಿರುವ ಬೇಯಾನ್ ಮತ್ತು ಅಂಕೋರ್ ವಾಟ್ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

    ಯಾವುದೇ ಬೋಧನೆ, ತತ್ವಶಾಸ್ತ್ರ, ಮತಧರ್ಮ ಅಥವಾ ನಂಬಿಕೆಯ ವ್ಯವಸ್ಥೆಗಳಿಗೆ ಒಳಗಾಗದ ಸದ್ಗುರುಗಳು, ತಮ್ಮ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪ್ರಯತ್ನಗಳು, ಪರಿಸರ ಕಾರ್ಯಗಳು, ಗ್ರಾಮೀಣ ಶಿಕ್ಷಣ ಮತ್ತು ಇನ್ನೂ ಹೆಚ್ಚಿನವುಗಳ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ತಲುಪಿದ್ದಾರೆ. ಪ್ರಪಂಚದಾದ್ಯಂತ ಮೂವತ್ತು ಲಕ್ಷ ಜನರು ಅವರ ಪ್ರಮುಖ ಕಾರ್ಯಕ್ರಮವಾದ ಇನ್ನರ್ ಎಂಜಿನಿಯರಿಂಗ್ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ. ಆ ಮೂಲಕ ಜನರು ತಮ್ಮ ಜೀವನದ ಗ್ರಹಿಕೆಯಲ್ಲಿ ಹೆಚ್ಚಿನ ಸಮತೋಲನ ಮತ್ತು ಗಮನಾರ್ಹ ಸ್ಪಷ್ಟತೆಯನ್ನು ಪಡೆದುಕೊಂಡಿದ್ದಾರೆ.

    ಇದನ್ನೂ ಓದಿ | Prerane : ಗೆಲುವಿಗೆ ಸೂತ್ರಗಳಿವೆಯೇ? ಸದ್ಗುರು ಹೀಗೆನ್ನುತ್ತಾರೆ!

    2023 ರಲ್ಲಿ ಸದ್ಗುರುಗಳ ಸಾಮಾಜಿಕ ಮಾಧ್ಯಮವು 4.37 ಶತಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಂಬೋಡಿಯಾದ ಅವರ ಅನ್ವೇಷಣೆಯು, ಆ ದೇಶದ ಬಗೆಗಿನ ಅವರ ಒಳನೋಟಗಳಿಂದ ಪ್ರಯೋಜನ ಪಡೆಯಲು ಜಗತ್ತಿಗೆ ಒಂದು ವಿಶಿಷ್ಟ ಅವಕಾಶವನ್ನು ಒದಗಿಸಲಿದೆ.

    Continue Reading

    ಕರ್ನಾಟಕ

    Murder Case: ಹೆಂಡ್ತಿ ಬಿಟ್ಟು ಹೋಗುತ್ತಾಳೆಂದು ಕತ್ತು ಸೀಳಿ ಕೊಂದ ಪತಿರಾಯ!

    Murder Case: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಇಲಿಯಾಸ್ ನಗರದಲ್ಲಿ ಕೊಲೆ ನಡೆದಿದೆ. ವಿಚ್ಛೇದನ ಪಡೆದು ದೂರವಾಗುತ್ತಾಳೆ ಎಂದು ಪತ್ನಿಯ ಕತ್ತು ಸೀಳಿ ಪತಿ ಕೊಲೆ ಮಾಡಿದ್ದಾನೆ.

    VISTARANEWS.COM


    on

    Murder Case
    Koo

    ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಪತಿ ಕೊಲೆ ಮಾಡಿರುವ ಘಟನೆ (Murder Case) ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಇಲಿಯಾಸ್ ನಗರದಲ್ಲಿ ನಡೆದಿದೆ. ಹೆಂಡ್ತಿ ತನ್ನನ್ನು ಬಿಟ್ಟು ಬೇರೆಯಾಗುತ್ತಾಳೆ ಎಂದು ಬೇಸರದಿಂದ ಪತಿ ಚಾಕು ಇರಿದು ಕೊಲೆ ಮಾಡಿದ್ದಾನೆ.

    ಶಿಯಾಪತ್ ಉನ್ನಿಸ ಕೊಲೆಯಾದ ಮಹಿಳೆ. ನೂರುಲ್ಲಾ ಪತ್ನಿಯ ಕೊಲೆ ಮಾಡಿದ ಗಂಡ. ಆರೋಪಿ ನೂರುಲ್ಲಾನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಗಂಡ-ಹೆಂಡತಿ ವಿಚ್ಛೇದನ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಕಳೆದ ಐದು ದಿನಗಳಿಂದ ಹೆಂಡತಿಯಿಂದ ಗಂಡ ದೂರವಿದ್ದ. ಸೋಮವಾರ ಹೆಂಡತಿ ಉನ್ನೀಸಾ ಮನೆ ಖಾಲಿ ಮಾಡುತ್ತಿದ್ದಳು. ಈ ವೇಳೆ ಏಕಾಏಕಿ ಗಂಡ ಬಂದು ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನಿಶ್ಚಿತಾರ್ಥವಾಗಿದ್ದ ಯುವತಿಯ ಶವ ಅನುಮಾನಾಸ್ಪದವಾಗಿ ಪತ್ತೆ

    ರಾಯಚೂರು: ತಾಲೂಕಿನ ಯರಮರಸ್ ಬಳಿಯ ದಂಡ್ ಗ್ರಾಮದಲ್ಲಿ ಇತ್ತೀಚೆಗೆ ನಿಶ್ಚಿತಾರ್ಥವಾಗಿದ್ದ ಯುವತಿಯ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಸುನೀತಾ (26) ಎಂಬ ಯುವತಿಯ ಶವ ಬೆಡ್ ರೂಮ್‌ನಲ್ಲಿ ರಕ್ತ ಸಿಕ್ತವಾಗಿ ಪತ್ತೆಯಾಗಿದೆ.

    ಮೃತ ಯುವತಿ ದೇಹದ‌ ಮೇಲೆ ಚಾಕುವಿನಿಂದ ಹಲ್ಲೆ ಗುರುತು ಪತ್ತೆಯಾಗಿದ್ದು, ಒಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿಕೊಂಡಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಮನೆಯವರ ಮದುವೆ‌ ಪ್ರಸ್ತಾಪಕ್ಕೆ‌ ಯುವತಿ ಮನನೊಂದಿದ್ದಳು. ಜತೆಗೆ ತಾಯಿ‌, ಅಣ್ಣನ ಜತೆ ಮನಸ್ತಾಪ ಇತ್ತು. ಇದೇ ಕಾರಣಕ್ಕೆ ಎಷ್ಟೋ ಬಾರಿ ಯುವತಿ ಮನೆ ಬಿಟ್ಟು ಹೋಗಿದ್ದಳಂತೆ. ಮದುವೆ ಪ್ರಸ್ತಾಪದಿಂದ ಮಾನಸಿಕ‌ ಸ್ಥಿಮಿತ ಕಳೆದುಕೊಂಡಿದ್ದ ಸುನೀತಾ, ಏ.26ರಂದು ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ಮತ್ತು ಅಣ್ಣ ಹೇಳಿದ್ದಾರೆ.

    ಆದರೆ, ತಂಗಿಯ ಮರಣದ ಬಗ್ಗೆ ಸಂಶಯ ವ್ಯಕ್ತ ಪಡಿಸಿ ಅಕ್ಕ ದೂರು ದಾಖಲು ಮಾಡಿದ್ದಾಳೆ. ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

    Continue Reading

    ಕರ್ನಾಟಕ

    Murder Case: ದ್ವಿತೀಯ ಪಿಯುಸಿಯಲ್ಲಿ ಮಾರ್ಕ್ಸ್‌ ಕಡಿಮೆ ಬಂದಿದ್ದಕ್ಕೆ ಚಾಕು ಇರಿದು ಮಗಳನ್ನೇ ಕೊಂದ ತಾಯಿ!

    Murder Case: ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪರಸ್ಪರ ಚಾಕು ಇರಿದುಕೊಂಡಿದ್ದರಿಂದ ಮಗಳು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    VISTARANEWS.COM


    on

    Murder Case
    Koo

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ತಾಯಿ ಮತ್ತು ಮಗಳ ನಡುವೆ ನಡೆದ ಜಗಳ ಕೊಲೆಯಲ್ಲಿ (Murder Case) ಅಂತ್ಯವಾಗಿರುವುದು ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಪರಸ್ಪರ ಚಾಕು ಇರಿದುಕೊಂಡಿದ್ದರಿಂದ ಮಗಳು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸಾಹಿತಿ(18) ಕೊಲೆಯಾದ ಯುವತಿ. ಪದ್ಮಜಾ (60) ಮಗಳನ್ನು ಕೊಲೆಗೈದ ತಾಯಿ. ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಮಗಳನ್ನು ತಾಯಿ ಪ್ರಶ್ನೆ ಮಾಡಿದ್ದಾಳೆ. ಈ ವಿಚಾರಕ್ಕೆ ತಾಯಿ ಮತ್ತು ಮಗಳ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಸೋಮವಾರ ಇದೇ ವಿಚಾರಕ್ಕೆ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿರುವ ಶಂಕೆ ವ್ಯಕ್ತವಾಗಿದೆ.

    ಸಂಜೆ ಚಾಕುವಿನಿಂದ ಪರಸ್ಪರ ಇರಿದು ಕೊಂಡಿದ್ದರಿಂದ ಮಂಗಳು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ. ತಾಯಿಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ | Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌; ಇಬ್ಬರು ಶಂಕಿತ ಉಗ್ರರಿಗೆ 14 ದಿನ ನ್ಯಾಯಾಂಗ ಬಂಧನ

    ಹೆತ್ತ ತಾಯಿಯ ಮೇಲೆಯೇ ಮಗ ಹಲ್ಲೆ; ಅನ್ನ, ನೀರು ಕೊಡದೆ ಹಿಂಸೆ

    ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಹೆತ್ತ ಮಕ್ಕಳಿಗೆ ಚಿತ್ರ ಹಿಂಸೆ ಕೊಟ್ಟಿರೋದನ್ನು ನೋಡಿದ್ದೆವು. ಆದರೆ ಈಗ ಹೆತ್ತ ತಾಯಿಯನ್ನೇ ಹೊಡೆಯುವ ಮೂಲಕ ಮಗ ಅಮಾನವೀಯವಾಗಿ ನಡೆದುಕೊಂಡಿರುವುದು ಕಂಡುಬಂದಿದೆ.

    ಚಂದ್ರಮ್ಮ (75) ಹಲ್ಲೆಗೊಳಗಾದವರು. ಮುನಿರತ್ನ (45) ಹಲ್ಲೆ ಮಾಡಿದ ಮಗ. ಕತ್ತರಿಗುಪ್ಪೆಯ ಶ್ರೀನಿವಾಸ ನಗರದಲ್ಲಿ ಘಟನೆ ನಡೆದಿದೆ. ಒಂದು ವರ್ಷದಿಂದ ಮನೆಯ ಹೊರಗಡೆ ತಾಯಿ ಮಲಗಿಸುತ್ತಿದ್ದ ಮಗ, ಆಕೆಗೆ ಸರಿಯಾಗಿ ಊಟ ಕೂಡ ನೀಡದೆ ಹಿಂಸೆ ನೀಡುತ್ತಿದ್ದ. ಕಾರಣ ಕೇಳಿದರೆ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿರುವ ಕಾರಣ ಹೊರಗೆ ಮಲಗಿಸುತ್ತಿರುವುದಾಗಿ ಮಗ ಹೇಳಿದ್ದಾನೆ.

    ಇವರು ತಿರುಪತಿ ಮೂಲದವರಾಗಿದ್ದು, ಮುನಿರತ್ನ ತನ್ನ ಮದುವೆಗೂ ಮುನ್ನ ತಾಯಿಯನ್ನು ಅಡುಗೆ ಮಾಡಲು ಮನೆಗೆ ಕರೆತಂದಿದ್ದ. ಮದುವೆಯಾದ ಬಳಿಕ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ. ಬೆಂಗಳೂರಿನ ಕತ್ತರಿಗುಪ್ಪೆಯ ಶ್ರೀನಿವಾಸ ನಗರಕ್ಕೆ ಬಂದು 2 ವರ್ಷವಾಗಿದೆ. ಸೊಸೆ ಸ್ವಂತ ತಾಯಿಯಂತೆ ನೋಡಿಕೊಳ್ಳುತ್ತಿದ್ದಳು. ಆದರೆ ಮಗ ತಾಯಿಗೆ ಚಿತ್ರ ಹಿಂಸೆ ನೀಡುತ್ತಿದ್ದ. ಹೀಗಾಗಿ ಮನೆಯ ಅಂಗಳದಲ್ಲಿ ತಾಯಿ ಇರುತ್ತಿದ್ದಳು.

    ಇದನ್ನೂ ಓದಿ | Stab wound: ಗರ್ಲ್‌ಫ್ರೆಂಡ್‌ನ ಚುಚ್ಚಿ ಕೊಲ್ಲೋ ಮುನ್ನ ಗೂಗಲ್‌ ಸರ್ಚ್‌ ಮಾಡಿದ್ದ ಹಂತಕ!

    ಸೊಸೆ ತಾಯಿಯನ್ನು ನೋಡಿಕೊಳ್ಳುತ್ತಿದ್ದಳು ಎನ್ನುವ ಕಾರಣಕ್ಕೆ ಹೆಂಡತಿಯ ಜತೆಗೂ ಜಗಳವಾಡುತ್ತಿದ್ದ. 2 ದಿನದ ಹಿಂದೆ ಹೆಂಡತಿ ಜಗಳವಾಡಿ ತವರುಮನೆಗೆ ಹೋಗಿದ್ದಳು. ಹೀಗಾಗಿ ತಾಯಿ ಚಂದ್ರಮ್ಮನ ಮೇಲೆ ಮಗ ಹಲ್ಲೆ ಮಾಡಿದ್ದಾನೆ, 2 ದಿನದಿಂದ ತಾಯಿಗೆ ಅನ್ನ, ನೀರು ನೀಡಿಲ್ಲ. ನಶೆಯಲ್ಲಿ ಇಲ್ಲದ ಸಮಯದಲ್ಲೂ ಇದೆ ಸ್ಥಿತಿಯಲ್ಲಿ ಮುನಿರತ್ನ ಇರುತ್ತಿದ್ದ ಎನ್ನಲಾಗಿದೆ.

    Continue Reading

    ಕರ್ನಾಟಕ

    Karnataka Weather: ರಾಯಚೂರಿನಲ್ಲಿ ರಾಜ್ಯದಲ್ಲೇ ಗರಿಷ್ಠ ಉಷ್ಣಾಂಶ ದಾಖಲು; ಇನ್ನೂ 4 ದಿನ ಶಾಖದ ಅಲೆ ಎಚ್ಚರಿಕೆ

    Karnataka Weather: ರಾಜ್ಯದಾದ್ಯಂತ ಏ.30ರಿಂದ ಮೇ 5ರವರೆಗೆ ಒಣ ಹವೆ ಇರಲಿದೆ. ಇನ್ನು ನಾಲ್ಕೈದು ದಿನ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    VISTARANEWS.COM


    on

    Karnataka Weather
    Koo

    ಬೆಂಗಳೂರು: ಈ ಬಾರಿ ಬೇಸಿಗೆಯಲ್ಲಿ ರಾಜ್ಯದಲ್ಲಿ ದಿನೇ ದಿನೇ ತಾಪಮಾನ (Karnataka Weather) ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ ಉತ್ತರ ಕರ್ನಾಟಕ ಭಾಗದಲ್ಲಿ ದಾಖಲೆಯ ಉಷ್ಣಾಂಶ ದಾಖಲಾಗುತ್ತಿದೆ. ರಾಯಚೂರಿನಲ್ಲಿ ಭಾನುವಾರ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ 43 ಡಿಗ್ರಿ ಸೆ. ಉಷ್ಣಾಂಶ ವರದಿಯಾಗಿದೆ. ಇನ್ನು ಮಂಗಳವಾರವೂ ಕೂಡ ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಂಗಳವಾರ ಶಾಖದ ಅಲೆಗಳ ತೀವ್ರತೆ (Heat wave) ಹೆಚ್ಚಾಗುವ ಸಾಧ್ಯತೆ ಇದೆ.

    ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರಾಜ್ಯದಾದ್ಯಂತ ಏ.30ರಿಂದ ಮೇ 5ರವರೆಗೆ ಒಣ ಹವೆ ಇರಲಿದೆ. ಅದೇ ರೀತಿ ಮೇ 6ರಂದು ಮಂಡ್ಯ ಜಿಲ್ಲೆಯ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೆಲವೆಡೆ ಹಗರು ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ತಿಳಿಸಿದೆ.

    ಶಾಖದ ಅಲೆಯ ಎಚ್ಚರಿಕೆ

    ಮೇ 3ರವರೆಗೆ ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ.

    ತಾಪಮಾನದ ಮುನ್ಸೂಚನೆ

    ಮೇ 3ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳವರೆಗೆ ಬಾಗಲಕೋಟೆ, ಕಲಬುರಗಿ, ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬೆಚ್ಚನೆಯ ರಾತ್ರಿಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳವರೆಗೆ ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ.

    ಇದನ್ನೂ ಓದಿ | Karnataka Weather: ರಾಜ್ಯದಲ್ಲಿ ಮೇ 2ರವರೆಗೆ ಬಿಸಿಗಾಳಿ ತೀವ್ರತೆ ಹೆಚ್ಚಳ; ಆರೆಂಜ್‌ ಅಲರ್ಟ್‌ ಘೋಷಣೆ

    ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37°C ಮತ್ತು 23°C ಇರುವ ಸಾಧ್ಯತೆ ಇದೆ.

    Continue Reading
    Advertisement
    Sadhguru Jaggi Vasudev
    ಬೆಂಗಳೂರು14 mins ago

    Sadhguru Jaggi Vasudev: ಮೆದುಳಿನ ಶಸ್ತ್ರಚಿಕಿತ್ಸೆಯ ತಿಂಗಳ ಬಳಿಕ ಕಾಂಬೋಡಿಯಾಗೆ ಸದ್ಗುರು ಪ್ರವಾಸ

    Justin Trudeau
    ದೇಶ19 mins ago

    Justin Trudeau: ಕೆನಡಾ ಪ್ರಧಾನಿ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ; ಭಾರತ ಸಮನ್ಸ್!

    M P Rudramba
    ಕರ್ನಾಟಕ36 mins ago

    M P Rudramba: ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್ ಧರ್ಮ ಪತ್ನಿ ರುದ್ರಾಂಬಾ ನಿಧನ

    KKR vs DC
    ಕ್ರೀಡೆ45 mins ago

    KKR vs DC: ಡೆಲ್ಲಿಗೆ ನೀರು ಕುಡಿಸಿದ ಸಾಲ್ಟ್​; ಪಂತ್​ ಪಡೆಯ ಪ್ಲೇ ಆಫ್ ಹಾದಿ ದುರ್ಗಮ

    Patanjali
    ದೇಶ54 mins ago

    Patanjali: ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದು, ಬಾಬಾ ರಾಮದೇವ್‌ ವಿರುದ್ಧ ಬಿತ್ತು ಕೇಸ್

    Murder Case
    ಕರ್ನಾಟಕ1 hour ago

    Murder Case: ಹೆಂಡ್ತಿ ಬಿಟ್ಟು ಹೋಗುತ್ತಾಳೆಂದು ಕತ್ತು ಸೀಳಿ ಕೊಂದ ಪತಿರಾಯ!

    CM Siddaramaiah inaugurated by prajadhwani lok sabha election campaign meeting at kushtagi
    ಕೊಪ್ಪಳ1 hour ago

    Lok Sabha Election 2024: ನಾಯಕತ್ವ ಕೊರತೆ ಇರುವುದು ಬಿಜೆಪಿಗೆ ಎಂದ ಸಿದ್ದರಾಮಯ್ಯ

    DCM D K Shivakumar Latest statement in Belagavi
    ಪ್ರಮುಖ ಸುದ್ದಿ1 hour ago

    DK Shivakumar: ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ಬಿಜೆಪಿ ನಿಲುವೇನು; ಶಿವಕುಮಾರ್ ಪ್ರಶ್ನೆ

    Murder Case
    ಕರ್ನಾಟಕ2 hours ago

    Murder Case: ದ್ವಿತೀಯ ಪಿಯುಸಿಯಲ್ಲಿ ಮಾರ್ಕ್ಸ್‌ ಕಡಿಮೆ ಬಂದಿದ್ದಕ್ಕೆ ಚಾಕು ಇರಿದು ಮಗಳನ್ನೇ ಕೊಂದ ತಾಯಿ!

    Chandrayaan 3
    ದೇಶ2 hours ago

    Chandrayaan 3: ಚಂದ್ರಯಾನ 3 ಆಗುತ್ತಿತ್ತು ಛಿದ್ರ; ಆ 4 ಸೆಕೆಂಡ್‌ಗಳಲ್ಲೇ ಮಿಷನ್‌ ಬಚಾವ್‌ ಆಗಿದ್ದು ಹೇಗೆ?

    Sharmitha Gowda in bikini
    ಕಿರುತೆರೆ7 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ7 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Bigg Boss- Saregamapa 20 average TRP
    ಕಿರುತೆರೆ6 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    galipata neetu
    ಕಿರುತೆರೆ5 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ7 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Kannada Serials
    ಕಿರುತೆರೆ7 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ6 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ5 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    varun
    ಕಿರುತೆರೆ5 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Kannada Serials
    ಕಿರುತೆರೆ8 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    PM Narendra modi in Bagalakote and Attack on Congress
    Lok Sabha Election 202411 hours ago

    PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

    PM Narendra modi in Bagalakote for Election Campaign and here is Live telecast
    Lok Sabha Election 202412 hours ago

    PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

    dina bhavishya read your daily horoscope predictions for April 29 2024
    ಭವಿಷ್ಯ19 hours ago

    Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

    Narendra Modi
    Lok Sabha Election 20241 day ago

    PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

    PM Narendra Modi in Sirsi
    Lok Sabha Election 20241 day ago

    PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

    If Congress comes to power all your assets will belong to Government says PM Narendra Modi
    Lok Sabha Election 20241 day ago

    Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

    Congress ties with Aurangzeb supporters and Girls killed under his rule says Narendra Modi
    Lok Sabha Election 20241 day ago

    Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

    Modi in Karnataka stay in Belagavi tomorrow and Huge gatherings at five places
    Latest2 days ago

    Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

    Dina Bhavishya
    ಭವಿಷ್ಯ2 days ago

    Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

    Lok sabha election 2024
    Lok Sabha Election 20242 days ago

    Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

    ಟ್ರೆಂಡಿಂಗ್‌