Heat Stroke: ಬಿಸಿಲಿನ ಆಘಾತ ಹೆಚ್ಚಳ, ಹೊರಗೆ ಹೋಗುವಾಗ ಎಚ್ಚರ ವಹಿಸಿ - Vistara News

ಆರೋಗ್ಯ

Heat Stroke: ಬಿಸಿಲಿನ ಆಘಾತ ಹೆಚ್ಚಳ, ಹೊರಗೆ ಹೋಗುವಾಗ ಎಚ್ಚರ ವಹಿಸಿ

ವಯಸ್ಕರು, ಮಕ್ಕಳು ಹಾಗೂ ದುರ್ಬಲ ದೇಹಪ್ರಕೃತಿಯವರಿಗೆ ಹೀಟ್ ಸ್ಟ್ರೋಕ್ ಆಘಾತ ಪ್ರಕರಣಗಳು ಕಂಡುಬರುತ್ತಿವೆ. ಇತ್ತೀಚೆಗೆ ಕೇಂದ್ರ ಸರ್ಕಾರ ಕೂಡ ಈ ಬಗೆಗೆ ಸೂಚನೆ ನೀಡಿತ್ತು. ಇದೀಗ ರಾಜ್ಯ ಸರ್ಕಾರ ಕೂಡ ಅಲರ್ಟ್ ಮಾಡಿದೆ.

VISTARANEWS.COM


on

hot june
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜಧಾನಿ ಹಾಗೂ ರಾಜ್ಯದ ಹಲವು ಕಡೆ ಹೀಟ್‌ ಸ್ಟ್ರೋಕ್‌ನಿಂದ ಆಸ್ಪತ್ರೆ ಸೇರುತ್ತಿರುವ ಜನಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಹೊರಗೆ ಬಿಸಿಲಿನಲ್ಲಿ ಓಡಾಡುವಾಗ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ (health alert) ನೀಡಿದೆ.

ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳು ಹಾಗೂ ಬೀದಿ ಪ್ರಚಾರಗಳು ಹೆಚ್ಚುತ್ತಿವೆ. ಆದರೆ ಬಿಸಿಲಿನ ಝಳ ಪ್ರಖರವಾಗುತ್ತಿದೆ. ಮುಂಗಾರು ಪೂರ್ವ ಮಳೆ ಅಲ್ಲಲ್ಲಿ ಬಂದಿದ್ದರೂ ಬಿಸಿಲಿನ ಝಳ ಕಡಿಮೆಯಾಗಿಲ್ಲ. ಹೀಗಾಗಿ ಎಲೆಕ್ಷನ್ ಕ್ಯಾಂಪೇನ್ ಅಥವಾ ಸಭೆ, ಸಮಾರಂಭಗಳಿಗೆ ಹೋಗುವವರು ಹುಷಾರಾಗಿರಬೇಕು. ವಯಸ್ಕರು, ಮಕ್ಕಳು ಹಾಗೂ ದುರ್ಬಲ ದೇಹಪ್ರಕೃತಿಯವರಿಗೆ ಹೀಟ್ ಸ್ಟ್ರೋಕ್ ಆಘಾತ ಪ್ರಕರಣಗಳು ಕಂಡುಬರುತ್ತಿವೆ. ಇತ್ತೀಚೆಗೆ ಕೇಂದ್ರ ಸರ್ಕಾರ ಕೂಡ ಈ ಬಗೆಗೆ ಸೂಚನೆ ನೀಡಿತ್ತು. ಇದೀಗ ರಾಜ್ಯ ಸರ್ಕಾರ ಕೂಡ ಅಲರ್ಟ್ ಮಾಡಿದೆ.

ಹೀಟ್‌ ಸ್ಟ್ರೋಕ್‌ ಕಾರಣದಿಂದ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಅನಗತ್ಯವಾಗಿ ಹೊರಗೆ ಓಡಾಡದಿರಿ. ಹೊರಗೆ ಹೋಗುವುದು ಅನಿವಾರ್ಯವಾದರೆ ಹೆಚ್ಚು ಸಮಯ ನೆರಳಿನಲ್ಲಿರಿ. ಸಭೆ ಸಮಾರಂಭಗಳನ್ನು ಸಾಧ್ಯವಾದಷ್ಟೂ ಆಯೋಜನೆ ಮಾಡದಿರಿ ಅಥವಾ ಅವುಗಳಿಗೆ ಹೋಗದಿರಿ. ರ್ಯಾಲಿಗಳಿಗೆ ಹೋಗುವುದು ಕಡಿಮೆ ಮಾಡಿದರೆ ಉತ್ತಮ ಎಂದು ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌ ನೀಡಿದೆ. ಪ್ರಚಾರ ಸಭೆ, ರ್ಯಾಲಿ ನಡೆಸುವ ಆಯೋಜಕರು ಕಡ್ಡಾಯವಾಗಿ ಕುಡಿಯುವ ನೀರಿನ ವ್ಯವಸ್ಥೆ, ಏರ್‌ಕಂಡೀಷನರ್ ವ್ಯವಸ್ಥೆ ಮಾಡಬೇಕು ಹಾಗೂ ತಪ್ಪದೆ ಶಾಮಿಯಾನ ಪೆಂಡಾಲ್ ಹಾಕಿಸಬೇಕು ಎಂದು ಸೂಚಿಸಿದೆ.

ಇವುಗಳನ್ನು ಗಮನದಲ್ಲಿಟ್ಟುಕೊಳ್ಳಿ:

ಬಿಸಿಲಿನಲ್ಲಿ ಹೆಚ್ಚು ಓಡಾಡಬೇಡಿ.
ಬಿಸಿಲಿನ ಕೆಲಸ ಅನಿವಾರ್ಯವಾದರೆ ತಲೆಗೆ ಟೊಪ್ಪಿ ಧರಿಸಿ.
ಸಾಕಷ್ಟು ನೀರು ಕುಡಿಯಿರಿ. ದ್ರವಾಹಾರ ಸೇವಿಸಿ.
ನೀರಿನಂಶ ಹೊಂದಿರುವ ಆಹಾರ ಹೆಚ್ಚು ಸೇವಿಸಿ.
ವಯಸ್ಕರು, ಮಕ್ಕಳು ಹಾಗೂ ದುರ್ಬಲ ದೇಹಪ್ರಕೃತಿಯವರು ಹೊರಗೆ ಹೋಗದಿರುವುದು ಉತ್ತಮ.
ದೇಹ ನಿರ್ಜಲೀಕರಣದ ಸೂಚನೆಗಳನ್ನು ನೀಡಿದರೆ ಅಲಕ್ಷಿಸಬೇಡಿ.

ಇದನ್ನೂ ಓದಿ: Heat stroke: ಹೀಟ್‌ಸ್ಟ್ರೋಕ್‌ನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

Vijayanagara News: ದಡಾರಾ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು ಎಂದು ವಿಜಯನರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

VISTARANEWS.COM


on

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly
Koo

ಹೊಸಪೇಟೆ: ದಡಾರಾ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವು ಜಿಲ್ಲೆಯಲ್ಲಿ (Vijayanagara News) ಅಚ್ಚುಕಟ್ಟಾಗಿ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ದಡಾರಾ ಮತ್ತು ರುಬೆಲ್ಲಾ 2024 ಡಿಸೆಂಬರ್‌ದೊಳಗೆ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾರ್ಯಕ್ರಮಗಳು ಶಿಸ್ತುಬದ್ಧವಾಗಿ ನಡೆಯಬೇಕು. ಮಗುವಿಗೆ 9 ತಿಂಗಳ ತುಂಬಿದ ನಂತರ ಮೊದಲನೇ ಡೋಸ್ ನೀಡಬೇಕು. ಆ ಬಳಿಕ ಒಂದೂವರೆ ವರ್ಷಕ್ಕೆ ಎರಡನೇ ಡೋಸ್ ನೀಡುವ ಕಾರ್ಯವು ಜಿಲ್ಲೆಯಲ್ಲಿ ಶೇ. 100ರಷ್ಟು ಆಗಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಇದನ್ನೂ ಓದಿ: Forest Man Of India: ಇವರೇ ನೋಡಿ ಭಾರತದ ಫಾರೆಸ್ಟ್‌ ಮ್ಯಾನ್‌; ಏಕಾಂಗಿಯಾಗಿ 1,360 ಎಕ್ರೆಯಲ್ಲಿ ಕಾಡು ಬೆಳೆಸಿದ ಸಾಹಸಿ

ಮಕ್ಕಳಿಗೆ ಲಸಿಕೆಯನ್ನು ಹಾಕಿಸಲು ಕೆಲವೊಮ್ಮೆ ಗ್ರಾಮೀಣ ಪ್ರದೇಶದ ಜನರು ಸಹಕರಿಸುವುದಿಲ್ಲ. ಆದ್ದರಿಂದ ದಡಾರ ಮತ್ತು ರುಬೆಲ್ಲಾ ಲಸಿಕೆಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರ, ಮಹಿಳಾ ಸಂಘ-ಸಂಸ್ಥೆಗಳ, ಆಶಾ ಕಾರ್ಯಕರ್ತೆಯರ ಸಹಕಾರ ಪಡೆದುಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಶಂಕರ್ ನಾಯ್ಕ್ ಎಲ್. ಮಾತನಾಡಿ, ಗ್ರಾಮೀಣ ಭಾಗದ ಕೆಲ ಜನರು ಮೂಢ ನಂಬಿಕೆಗಳಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಆರೋಗ್ಯ ಇಲಾಖೆಯ ಯಾವುದೇ ಲಸಿಕೆ ಮತ್ತು ಅದರ ಮಹತ್ವದ ಕುರಿತು ವ್ಯಾಪಕವಾಗಿ ಜನರಿಗೆ ತಿಳಿವಳಿಕೆ ಮೂಡಿಸುವ ಕಾರ್ಯವು ಲಸಿಕಾ ಅಭಿಯಾನದ ಜತೆಜತೆಗೆ ಸಾಗಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಮಕ್ಕಳಲ್ಲಿ ಜ್ವರ ಮತ್ತು ತದ್ದು ಕಂಡು ಬರುತ್ತಿದ್ದಲ್ಲಿ ಪಾಲಕರು ನಿರ್ಲಕ್ಷ್ಯ ಮಾಡಬಾರದು. ಅಂತಹ ಮಕ್ಕಳಿದ್ದಲ್ಲಿ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಜ್ವರ ಮತ್ತು ತದ್ದು ಕಂಡು ಬರುವ ಮಕ್ಕಳೇನಾದರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ ಈ ಬಗ್ಗೆ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗೆ ವರದಿ ಮಾಡಬೇಕು ಎಂದು ತಿಳಿಸಿದರು.

ಎನ್‌ಪಿಎಸ್‌ಪಿ ಸರ್ವೆಲನ್ಸ್ ನೋಡಲ್ ಅಧಿಕಾರಿ ಡಾ.ಶ್ರೀಧರ ಆರ್.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಸ್ವಲ್ಪ ಕಡೆ ವರುಣ ಸಾಧಾರಣ, ಗಾಳಿ ರಭಸ ಅಸಾಧಾರಣ

ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಡಾ.ಷಣ್ಮುಖ ನಾಯ್ಕ ಬಿ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ ಎಂ.ಪಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಕೆ.ಕಮಲಮ್ಮ, ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ. ರಾಧಿಕಾ, ಹೊಸಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಭಾಸ್ಕರ್, ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಜಗದೀಶ್ ಪಾಟ್ನೆ ಸೇರಿದಂತೆ ಇತರರು ಇದ್ದರು.

Continue Reading

ಆರೋಗ್ಯ

World No Tobacco Day: ತಂಬಾಕಿನ ಚಟ ಎಷ್ಟೊಂದು ರೋಗಗಗಳಿಗೆ ಕಾರಣ ಆಗುತ್ತದೆ ನೋಡಿ!

ಜಗತ್ತಿನಲ್ಲಿ ಇಂದು (World No Tobacco Day )ತಂಬಾಕಿನ ಚಟ ಯುವ ವಯಸ್ಸಿನವರನ್ನೂ ಬಲಿ ತೆಗೆದುಕೊಳ್ಳುತ್ತಿದೆ. ನಿತ್ಯವೂ ತಂಬಾಕಿನ ಸೇವನೆಯಿಂದಾಗಿ ದೇಹಾರೋಗ್ಯವನ್ನು ಕೆಡಿಸಿಕೊಂಡು, ಅನೇಕ ಮಾರಕ ಕಾಯಿಲೆಗಳಿಗೆ ಬಲಿ ಬೀಳುತ್ತಿರುವುದು ಸಾಮಾನ್ಯವಾಗಿದೆ. ಜಗತ್ತಿನಲ್ಲಿ ವಯಸ್ಸಲ್ಲದ ವಯಸ್ಸಿನಲ್ಲಿ ಸಾಯುವ ಮಂದಿಯ ಮುಖ್ಯ ಅನಾರೋಗ್ಯದ ಕಾರಣ ಈ ತಂಬಾಕೇ ಆಗಿದೆ. ಹಾಗಾಗಿ ಧೂಮಪಾನ ಸೇರಿದಂತೆ ತಂಬಾಕಿನ ಚಟ ಯಾವ ರೀತಿಯಲ್ಲಿ ದೇಹಾರೋಗ್ಯವನ್ನು ಹಾಳು ಮಾಡಬಹುದು, ಯಾವೆಲ್ಲ ಕಾಯಿಲೆಗಳಿಗೆ ಇದು ನೇರವಾದ ಆಹ್ವಾನ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

World No Tobacco Day
Koo

ಮೇ 31 ವಿಶ್ವ ತಂಬಾಕು ದಿನ (World No Tobacco Day). ವಿಶ್ವದೆಲ್ಲೆಡೆ ತಂಬಾಕು ಮುಕ್ತ ಸಮಾಜಕ್ಕಾಗಿ ದನಿ ಎತ್ತುವ, ಜಾಗೃತಿ ಮೂಡಿಸುವ ದಿನವಾಗಿ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಪ್ರತೀ ವರ್ಷ ಹಮ್ಮಿಕೊಳ್ಳುತ್ತದೆ. ಈ ವರ್ಷ ಮಕ್ಕಳಿಂದ ತಂಬಾಕನ್ನು ದೂರವಿಡಿ ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ವಿಶ್ವ ಆರೋಗ್ಯ ಸಂಸ್ಥೆ ಮಕ್ಕಳಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಸಣ್ಣ ಮಕ್ಕಳು ನೇರವಾಗಿ ತಂಬಾಕು ಬಳಸದಿದ್ದರೂ, ತಮ್ಮ ಹೆತ್ತವರಿಂದ, ಸುತ್ತಮುತ್ತಲ ಪರಿಸರದಿಂದ ಹಾಗೂ ತಂಬಾಕು ಮಾರುಕಟ್ಟೆಯ ಜಗತ್ತಿನಿಂದಾಗಿ ಇದರ ವರ್ತಲದೊಳಕ್ಕೆ ಬೀಳುವ ಸಂಭವ, ಅನಿವಾರ್ಯತೆ ಹೆಚ್ಚು. ಈ ಅನಿವಾರ್ಯತೆಗೆ ಬಿದ್ದ ಮಕ್ಕಳನ್ನು ತಂಬಾಕಿನ ಜಗತ್ತಿನಿಂದ ಮೇಲೆತ್ತುವ ಹಾಗೂ ತಾವು ಇದಕ್ಕೆ ಬಲಿ ಬೀಳದಿರುವ ಬಗ್ಗೆ ಅವರಲ್ಲಿ ಎಚ್ಚರಿಕೆಯ ಬೀಜ ಬಿತ್ತುವ ಚಿಂತನೆ, ಉದ್ದೇಶ ವಿಶ್ವ ಆರೋಗ್ಯ ಸಂಸ್ಥೆಯದ್ದು. ಮಕ್ಕಳು ತಂಬಾಕಿನ ಚಟಕ್ಕೆ ಎಳವೆಯಲ್ಲಿಯೇ ಬೀಳದಂತೆ ರಕ್ಷಿಸುವುದು ಹಾಗೂ ತಂಬಾಕು ಮುಕ್ತ ಸ್ವಸ್ಥ ಸಮಾಜದ ಕನಸು ಈ ಘೋಷವಾಕ್ಯದ ಹಿಂದಿರುವ ಉದ್ದೇಶ. ಜಗತ್ತಿನಲ್ಲಿ ಇಂದು ತಂಬಾಕಿನ ಚಟ ಯುವ ವಯಸ್ಸಿನವರನ್ನೂ ಬಲಿ ತೆಗೆದುಕೊಳ್ಳುತ್ತಿದೆ. ನಿತ್ಯವೂ ತಂಬಾಕಿನ ಸೇವನೆಯಿಂದಾಗಿ ದೇಹಾರೋಗ್ಯವನ್ನು ಕೆಡಿಸಿಕೊಂಡು, ಅನೇಕ ಮಾರಕ ಕಾಯಿಲೆಗಳಿಗೆ ಬಲಿ ಬೀಳುತ್ತಿರುವುದು ಸಾಮಾನ್ಯವಾಗಿದೆ. ಜಗತ್ತಿನಲ್ಲಿ ವಯಸ್ಸಲ್ಲದ ವಯಸ್ಸಿನಲ್ಲಿ ಸಾಯುವ ಮಂದಿಯ ಮುಖ್ಯ ಅನಾರೋಗ್ಯದ ಕಾರಣ ಈ ತಂಬಾಕೇ ಆಗಿದೆ. ಹಾಗಾಗಿ ಧೂಮಪಾನ ಸೇರದಂತೆ ತಂಬಾಕಿನ ಚಟ ಯಾವ ರೀತಿಯಲ್ಲಿ ದೇಹಾರೋಗ್ಯವನ್ನು ಹಾಳು ಮಾಡಬಹುದು, ಯಾವೆಲ್ಲ ಕಾಯಿಲೆಗಳಿಗೆ ಇದು ನೇರವಾದ ಆಹ್ವಾನ ಎಂಬುದನ್ನು ನೋಡೋಣ.

Prevent Heart Attack

ಹೃದಯಾಘಾತಕ್ಕೂ ಮೂಲ

ತಂಬಾಕು ಎಂದ ತಕ್ಷಣ ಕೇವಲ ಶ್ವಾಸಕೋಶಕ್ಕೆ ಮಾತ್ರ ಸಂಬಂಧಿಸಿದ್ದು ಅಂದುಕೊಂಡರೆ ತಪ್ಪಾದೀತು. ಕಾರಣ, ಈ ಚಟ ದೇಹದ ಒಟ್ಟು ಆರೋಗ್ಯದ ಮೇಲೆ ಅತಿ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹೃದ್ರೋಗ, ಹೃದಯಾಘಾತದಂತಹ ಸಮಸ್ಯೆಗಳೂ ತಂಬಾಕಿನ ಚಟದಿಂದ ಬರಬಹುದು. ರಕ್ತನಾಳಗಳು ತೆಳ್ಳಗಾಗಿ, ರಕ್ತ ಹರಿಯಲು ಸರಿಯಾದ ಜಾಗವಿಲ್ಲದೆ, ಬ್ಲಾಕ್‌ ಆಗುವುದರಿಂದ ಹೃದಯಾಘಾತದಂತಹ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು.

ಕ್ಯಾನ್ಸರ್‌ಗೆ ಕಾರಣ

ಪಿತ್ತಕೋಶ, ಜಠರ, ಕರುಳಿನ ಕ್ಯಾನ್ಸರ್‌ ಬರುವ ಸಾಧ್ಯತೆಗಳು ಜಾಸ್ತಿ. ಕರುಳು ಜಠರದಲ್ಲಿ ಹುಣ್ಣು, ಅನ್ನನಾಳದಲ್ಲಿ ಅಲ್ಸರ್‌ನಂತಹ ಸಮಸ್ಯೆಗಳು ತಲೆದೋರಬಹುದು. ನುಂಗಲು ಕಷ್ಟವಾಗುವುದು, ಹೊಟ್ಟೆ ನೋವು ಇತ್ಯಾದಿ ಆರಂಭಿಕ ಲಕ್ಷಣಗಳಿಂದ ಸಮಸ್ಯೆ ಶುರುವಾಗಬಹುದು.

ಸಂತಾನೋತ್ಪತ್ತಿಯ ಶಕ್ತಿ ಕುಂಠಿತ

ತಂಬಾಕಿನ ಚಟವು ಸಂತಾನೋತ್ಪತ್ತಿಯ ಶಕ್ತಿಯ ಮೇಲೆಯೂ ಕೆಟ್ಟ ಪರಿಣಾಮ ಬೀರಬಹುದು. ಮಹಿಳೆಯರಿಗಾದರೆ ಗರ್ಭ ನಿಲ್ಲದಿರುವುದು, ಗರ್ಭಸ್ರಾವ, ಮಕ್ಕಳಾಗದಿರುವ ಸಮಸ್ಯೆ, ಪುರುಷರಿಗೆ ವೀರ್ಯದ ಸಂಖ್ಯೆಯಲ್ಲಿ ಕುಸಿತ ಇತ್ಯಾದಿಗಳಿಂದ ಲೈಂಗಿಕ ಬಯಕೆಗಳಾಗದೇ ಇರುವುದು ಇತ್ಯಾದಿ ಸಮಸ್ಯೆಗಳೂ ಉದ್ಭವಿಸಬಹುದು.

Dark lip May be due to increased cigarette smoking or excessive sun exposure Lips Healthy Tips

ಬಾಯಿ ಆರೋಗ್ಯಕ್ಕೂ ಮಾರಕ

ಬಾಯಿಯ ಆರೋಗ್ಯ ಬಹಳ ಬೇಗನೆ ಹಾಳಾಗುತ್ತದೆ. ಬಾಯಿಯಲ್ಲಿ ಅಲ್ಸರ್‌, ಹುಣ್ಣುಗಳು, ಕೆಟ್ಟ ವಾಸನೆ, ಹಲ್ಲು ನೋವು ಇತ್ಯಾದಿ ಸಮಸ್ಯೆಗಳಾಗಬಹುದು.

ಚರ್ಮ ಕಳೆಗುಂದುತ್ತದೆ

ಚರ್ಮಕ್ಕೆ ಬಹುಬೇಗನೆ ವಯಸ್ಸಾದಂತೆ ಕಾಣಬಹುದು. ತುಟಿ, ಚರ್ಮ ಕಪ್ಪಾಗುವುದು, ಚರ್ಮದಲ್ಲಿ ನಿರಿಗೆಗಳ ಸಮಸ್ಯೆ, ಚರ್ಮ ಜೋತು ಬೀಳುವುದು ಇತ್ಯಾದಿ ಸಾಮಾನ್ಯ.

Food Beneficial For Eye Health

ದೃಷ್ಟಿ ಮಂದ

ಕಣಿನ ದೃಷ್ಟಿಯ ಮೇಲೆಯೂ ಇದು ಪರಿಣಾಮ ಬೀರುತ್ತದೆ. ದೃಷ್ಟಿ ಮಂಜಾಗುವುದು, ಕಣ್ಣಿನ ಸಮಸ್ಯೆಗಳು ಕೂಡಾ ಸಾಮಾನ್ಯ.

ರೋಗನಿರೋಧಕ ಶಕ್ತಿ ಕುಂಠಿತ

ರೋಗನಿರೋಧಕ ಶಕ್ತಿಯೂ ಕುಂಠಿತವಾಗುತ್ತದೆ. ಬಹುಬೇಗನೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು, ಕಾಯಿಲೆಗೆ ಬೀಳುವುದೂ ಕೂಡಾ ಸಹಜವೇ ಆಗುತ್ತದೆ.

ಇದನ್ನೂ ಓದಿ : World No Tobacco Day: ಇಂದು ವಿಶ್ವ ತಂಬಾಕು ರಹಿತ ದಿನ; ತಂಬಾಕು ಸೇವನೆಯಿಂದ ವರ್ಷಕ್ಕೆ 60 ಲಕ್ಷ ಜನರ ಸಾವು!

ಖಿನ್ನತೆ ಕಾರಣ

ಮಾನಸಿಕ ಆರೋಗ್ಯದಲ್ಲಿ ಏರುಪೇರು, ಖಿನ್ನತೆ, ಒತ್ತಡ, ಉದ್ವೇಗದಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತದೆ.

Continue Reading

ಆರೋಗ್ಯ

Quitting Smoking: ಈ ಆಹಾರ ಸೇವಿಸುವ ಮೂಲಕ ಸಿಗರೇಟು, ಗುಟ್ಕಾ ಚಟದಿಂದ ದೂರ ಆಗಬಹುದು!

ನಿಕೋಟಿನ್‌ ವ್ಯಸನ ದೂರ ಮಾಡುವ ಪ್ರಯತ್ನದಲ್ಲಿದ್ದೀರಾ? ಸಿಗರೇಟ್‌ ಅಥವಾ ಗುಟ್ಕಾ ಇಲ್ಲವೇ ನಿಕೋಟಿನ್‌ ಇರುವಂಥ ಇನ್ನೇನೋ ನೆನಪಾಗುತ್ತಿದ್ದಂತೆ, ಬೇಕೇಬೇಕು ಎನಿಸಲು ಆರಂಭಿಸಬಹುದು. ಇಂಥ ದಿನಗಳಲ್ಲಿ ಕೆಲವು ಆಹಾರಗಳು ವ್ಯಸನ ದೂರ ಮಾಡಲು ಹೆಚ್ಚುವರಿ ನೆರವನ್ನು ನೀಡುತ್ತವೆ. ಈ ಬಗ್ಗೆ ಹೆಚ್ಚಿನ (Quitting Smoking) ಮಾಹಿತಿ ಇಲ್ಲಿವೆ.

VISTARANEWS.COM


on

Quitting Smoking
Koo

ವಿಶ್ವದೆಲ್ಲೆಡೆ ತಂಬಾಕು ರಹಿತ ದಿನವನ್ನು (ಮೇ 31) ಆಚರಿಸಲಾಗುತ್ತಿದೆ. ಒಮ್ಮೆ ಹೇಗೋ ಅಂಟಿಕೊಂಡ ತಂಬಾಕು ವ್ಯಸನವನ್ನು ಬಿಡುವುದಕ್ಕೆ ಮಾನಸಿಕ ಸ್ಥಿರತೆಯ ಅಗತ್ಯವಿದೆ. ಜೊತೆಗೆ ಹೊರಗಿನಿಂದ ದೊರೆಯುವ ನೆರವು ಸಹ ಗುರಿ ತಲುಪಲು ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ, ನಿಕೋಟಿನ್‌ ಬೇಕು ಎನ್ನುವ ಬಯಕೆಗೆ ಕಡಿವಾಣ ಹಾಕುವುದಕ್ಕೆ ಕೆಲವು ಆಹಾರಗಳು ನೆರವಾಗುತ್ತವೆ. ಯಾವುದು ಆ ಆಹಾರಗಳು ಮತ್ತು ನಿಕೋಟಿನ್‌/ತಂಬಾಕು ಬೇಕೆನ್ನುವ ಬಯಕೆಯನ್ನು ಹತ್ತಿಕ್ಕಲು ಹೇಗೆ ನೆರವಾಗುತ್ತವೆ? ಈ ಕುರಿತ ವಿವರ ಇಲ್ಲಿದೆ.

No Tobacco Day

ವ್ಯಸನ ಯಾವುದೇ ಆದರೂ, ಅದನ್ನು ದೂರ ಮಾಡುವುದು ಸವಾಲಿನದು. ಜೊತೆಗೆ, ವ್ಯಸನದಿಂದ ಹಿಂತೆಗೆಯುವಾಗ ಶರೀರ ಪ್ರತಿಕ್ರಿಯಿಸುವ ರೀತಿಯನ್ನು ನಿಭಾಯಿಸುವುದು ಬಹಳಷ್ಟು ಜನರಿಗೆ ಕಷ್ಟವಾಗಬಹುದು. ಒಮ್ಮೆ ಸಿಗರೇಟ್‌ ಅಥವಾ ಗುಟ್ಕಾ ಇಲ್ಲವೇ ನಿಕೋಟಿನ್‌ ಇರುವಂಥ ಇನ್ನೇನೋ ನೆನಪಾಗುತ್ತಿದ್ದಂತೆ, ಬೇಕೇಬೇಕು ಎನಿಸಲು ಆರಂಭಿಸಬಹುದು. ಇಂಥ ದಿನಗಳಲ್ಲಿ ಕೆಲವು ಆಹಾರಗಳು ವ್ಯಸನ ದೂರ ಮಾಡಲು ಹೆಚ್ಚುವರಿ ನೆರವನ್ನು ನೀಡುತ್ತವೆ.

Appetite Control Dark Chocolate Benefits

ಡಾರ್ಕ್‌ ಚಾಕೊಲೇಟ್‌

ಅಂದರೆ ಶೇ. 70ಕ್ಕಿಂತ ಹೆಚ್ಚಿನ ಕೊಕೊ ಇರುವಂಥ ಈ ಚಾಕಲೇಟ್‌ಗಳು ರುಚಿಯಲ್ಲಿ ಕೊಂಚ ಕಹಿ ಇರುತ್ತವೆ. ಆದರೆ ಸಿಹಿ ಮತ್ತು ನಿಕೋಟಿನ್‌- ಈ ಎರಡೂ ಬೇಕು ಎನ್ನುವ ಬಯಕೆಯನ್ನು ಹತ್ತಿಕ್ಕುತ್ತವೆ. ಕಾರಣ, ಡಾರ್ಕ್‌ ಚಾಕಲೇಟ್‌ನಲ್ಲಿ ಸಾಂದ್ರವಾಗಿರುವ ಫ್ಲೆವನಾಯ್ಡ್‌ಗಳು ದೇಹದ ಡೋಪಮಿನ್‌ ಚೋದಕದ ಮಟ್ಟವನ್ನು ಹೆಚ್ಚಿಸುತ್ತವೆ. ಇದರಿಂದ ಶರೀರ ತನ್ನಷ್ಟಕ್ಕೇ ರಿಲಾಕ್ಸ್‌ ಆಗಿ, ನಿಕೋಟಿನ್‌ ಬೇಕು ಎನ್ನುವ ತುಡಿತವನ್ನು ತಾನಾಗಿ ಕಳೆದುಕೊಳ್ಳುತ್ತದೆ.

The seeds

ಇಡೀ ಧಾನ್ಯಗಳು

ನಿಕೋಟಿನ್‌ ಬಿಡುತ್ತಿದ್ದಂತೆ ಸಕ್ಕರೆ ಮತ್ತು ಪಿಷ್ಟದ ವಸ್ತುಗಳನ್ನು ಹೆಚ್ಚು ಬೇಕೆಂದು ಶರೀರ ಬಯಸುತ್ತದೆ. ಇದರಿಂದ ದೇಹದಲ್ಲಿ ಸಕ್ಕರೆ ಮಟ್ಟ ಏರಿಳಿತ ಆಗಬಹುದು. ಇದನ್ನು ತಡೆಯುವುದಕ್ಕಾಗಿ, ಇಡೀ ಧಾನ್ಯಗಳ ಸೇವನೆ ಉಪಯುಕ್ತ. ಜವೆ ಗೋಧಿ, ಕೆಂಪಕ್ಕಿ, ಬಾರ್ಲಿ, ಓಟ್‌, ಕಿನೊವಾ, ಸಿರಿಧಾನ್ಯಗಳನ್ನು ಆಹಾರವಾಗಿ ಬಳಸಿದರೆ ದೇಹದಲ್ಲಿ ಸಕ್ಕರೆಯಂಶವನ್ನು ಸ್ಥಿರಗೊಳಿಸಬಹುದು. ಜೊತೆಗೆ ಇವುಗಳಲ್ಲಿರುವ ಸಂಕೀರ್ಣ ಪಿಷ್ಟಗಳು ಮತ್ತು ನಾರು ದೀರ್ಘ ಕಾಲ ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತವೆ.

Some herbal teas can relax the mind and induce sleep Tips For Better Sleep

ಹರ್ಬಲ್‌ ಚಹಾ

ನಿಕೋಟಿನ್‌ ಬಿಡುತ್ತಿದ್ದಂತೆ ಉಂಟಾಗುವ ಒತ್ತಡ, ಆಯಾಸಗಳನ್ನು ಕಡಿಮೆ ಮಾಡುವಲ್ಲಿ ಹರ್ಬಲ್‌ ಚಹಾಗಳು ನೆರವಾಗುತ್ತವೆ. ಉದಾ, ಕ್ಯಾಮೊಮೈಲ್‌ ಚಹಾ- ಒತ್ತಡ ನಿವಾರಣೆಯಲ್ಲಿ ಸಹಕಾರಿ. ಪೆಪ್ಪರ್‌ಮಿಂಟ್‌ ಚಹಾ ಮನಸ್ಸನ್ನು ಚೇತೋಹಾರಿಯಾಗಿ ಇರಿಸಬಲ್ಲದು. ಶುಂಠಿ ಚಹಾ ಉರಿಯೂತ ನಿವಾರಣೆಗೆ ನೆರವಾಗುತ್ತದೆ. ಗ್ರೀನ್‌ ಟೀಯಲ್ಲಿರುವ ಅಲ್ಪ ಪ್ರಮಾಣದ ಕೆಫೇನ್‌ ಮತ್ತು ಎಲ್‌-ಥಿಯಾನಿನ್‌ ಅಂಶಗಳು ಒತ್ತಡ ನಿವಾರಣೆಗೆ ನೆರವಾಗುತ್ತವೆ. ನಿಂಬೆ ಹುಲ್ಲಿನ ಚಹಾ ಸಹ ಇದೇ ಸಾಲಿಗೆ ಸೇರುವಂಥದ್ದು.

Vibrant Produce Vegetables and Fruits

ಹಸಿ ತರಕಾರಿ ಮತ್ತು ಹಣ್ಣುಗಳು

ಹಸಿಯಾದ ಕ್ಯಾರೆಟ್‌, ಸೌತೇಕಾಯಿ, ಟೊಮೇಟೊ, ಕ್ಯಾಪ್ಸಿಕಂನಂಥವು ಬಾಯಿಯ ಬೇಡಿಕೆ ಕಡಿಮೆ ಮಾಡುತ್ತವೆ. ಯಾವುದೇ ಸಿಹಿ ಹಣ್ಣುಗಳ ಸಹ ಬಯಕೆಯನ್ನು ಹತ್ತಿಕ್ಕಲು ನೆರವಾಗುತ್ತವೆ. ಜೊತೆಗೆ ಉಪ್ಪಿಲ್ಲದ ಬಾದಾಮಿ, ಪಿಸ್ತಾ, ಗೋಡಂಬಿ, ವಾಲ್‌ನಟ್‌ಗಳು ಹಾಗೂ ಸಣ್ಣ ಬೀಜಗಳು ರಕ್ತದಲ್ಲಿನ ಸಕ್ಕರೆಯಂಶವನ್ನು ಸ್ಥಿರಗೊಳಿಸಲು ನೆರವಾಗುತ್ತವೆ. ಜೊತೆಗೆ, ಬಾಯಿಯ ಚಪಲವನ್ನು ಹತ್ತಿಕ್ಕಲು ಅನುಕೂಲವಾಗುವಂತೆ, ಅಗಿದು ತಿನ್ನುವಂಥ ಆಹಾರಗಳಿವು.

Dairy products

ಡೇರಿ ಉತ್ಪನ್ನಗಳು

ಕಾಟೇಜ್‌ ಚೀಸ್‌, ಗ್ರೀಕ್‌ ಯೋಗರ್ಟ್‌ನಂಥ ಹೆಚ್ಚು ಪ್ರೊಟೀನ್‌ ಇರುವಂಥ ಡೇರಿ ಉತ್ಪನ್ನಗಳು ಈ ಹಂತದಲ್ಲಿ ನೆರವು ನೀಡುತ್ತವೆ. ನಿಕೋಟಿನ್‌ನ ರುಚಿಗೆ ಬಾಯಿ ಒಗ್ಗಿದ್ದರೆ, ಅದನ್ನು ಬದಲಿಸಲು ಈ ವಸ್ತುಗಳು ಸಹಕಾರಿ. ಬಾಯಿ ಮತ್ತು ಹೊಟ್ಟೆಯಲ್ಲಿರುವ ಆರೋಗ್ಯಪೂರ್ಣ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಇವು ಹೆಚ್ಚಿಸುತ್ತವೆ. ಇದರಿಂದ ನಿಕೋಟಿನ್‌ ಬೇಕು ಎನ್ನುವ ಭಾವನೆ ಕಡಿಮೆಯಾಗುತ್ತದೆ.

Continue Reading

ಆರೋಗ್ಯ

World No Tobacco Day: ಇಂದು ವಿಶ್ವ ತಂಬಾಕು ರಹಿತ ದಿನ; ತಂಬಾಕು ಸೇವನೆಯಿಂದ ವರ್ಷಕ್ಕೆ 60 ಲಕ್ಷ ಜನರ ಸಾವು!

ಈಗಾಗಲೇ ವರ್ಷಕ್ಕೆ 60 ಲಕ್ಷ ಜನ ತಂಬಾಕಿನ ಬಳಕೆಯಿಂದ ವಾರ್ಷಿಕವಾಗಿ ಮೃತಪಡುತ್ತಿದ್ದಾರೆ. 2030ರ ವೇಳೆಗೆ ಈ ಸಂಖ್ಯೆ 80 ಲಕ್ಷ ದಾಟುವ ಅಂದಾಜಿದೆ. ಸಂಖ್ಯೆಗಳನ್ನು ಕಾಣುವ ಈ ಹೆಚ್ಚಳವನ್ನೂ ಪ್ರಗತಿಯ ಸಾಲಿಗೆ ಸೇರಿಸಬಹುದೇ? ಇದು ಕೇವಲ ನೇರವಾಗಿ ಬಳಸುವವರ ಸಂಖ್ಯೆ. ಪರೋಕ್ಷವಾಗಿ ಇದರ ಪರಿಣಾಮಗಳಿಂದ ಮೃತಪಡುವವರ ಸಂಖ್ಯೆಯನ್ನೂ ಸೇರಿಸಿದರೆ, ತಂಬಾಕಿನ ಘೋರ ಪರಿಣಾಮದ ಅಂದಾಜಾದೀತು ನಮಗೆ. ಈ ಹಿನ್ನೆಲೆಯಲ್ಲಿ, ತಂಬಾಕು ರಹಿತವಾದ ವಿಶ್ವದ ಅಗತ್ಯವನ್ನು ಜಗತ್ತಿನ ಮನಗಾಣಿಸುವ ಉದ್ದೇಶದಿಂದ ಮೇ ತಿಂಗಳ ಕಡೆಯ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ (World No Tobacco Day) ಆಚರಿಸಲಾಗುತ್ತದೆ.

VISTARANEWS.COM


on

World No Tobacco Day
Koo

ಭವಿಷ್ಯದ ಪೀಳಿಗೆಯನ್ನು ತಂಬಾಕಿನ ಜಾಲದಿಂದ ರಕ್ಷಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಹೊರಡಿಸಿದೆ. ಇಂದು ಮಕ್ಕಳು, ವಯಸ್ಕರಾದಿಯಾಗಿ ಜಗತ್ತಿನಲ್ಲಿ ಕೋಟಿಗಟ್ಟಲೆ ಜನ ತಂಬಾಕಿನ ಚಟಕ್ಕೆ ಜೀವ ತೆರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 31ನೇ ದಿನವನ್ನು ವಿಶ್ವದೆಲ್ಲೆಡೆ ಅರಿವಿನ ದಿನವನ್ನಾಗಿ ಆಚರಿಸಲಾಗುತ್ತಿದೆ.
ಪ್ರಗತಿಯನ್ನು ಸಂಖ್ಯೆಗಳಿಂದ ಅಳೆಯುತ್ತೇವೆ ಎಷ್ಟೋ ಸಾರಿ. ಈ ವರ್ಷಕ್ಕೆ ಇಷ್ಟಿರುವ ಸಂಖ್ಯೆ, 2030ಕ್ಕೆ ಎಷ್ಟು ಹೆಚ್ಚುತ್ತದೆ ಎನ್ನುವುದು ಪ್ರಗತಿಯ ಸಂಕೇತವಾಗಿ ತೋರುತ್ತದೆ ನಮಗೆ. ಈಗಾಗಲೇ ವರ್ಷಕ್ಕೆ 60 ಲಕ್ಷದಷ್ಟು ಜನ ತಂಬಾಕಿನ ಬಳಕೆಯಿಂದ ವಾರ್ಷಿಕವಾಗಿ ಮೃತಪಡುತ್ತಿದ್ದಾರೆ. 2030ರ ವೇಳೆಗೆ ಈ ಸಂಖ್ಯೆ 80 ಲಕ್ಷ ದಾಟುವ ಅಂದಾಜಿದೆ. ಸಂಖ್ಯೆಗಳನ್ನು ಕಾಣುವ ಈ ಹೆಚ್ಚಳವನ್ನೂ ಪ್ರಗತಿಯ ಸಾಲಿಗೆ ಸೇರಿಸಬಹುದೇ? ಇದು ಕೇವಲ ನೇರವಾಗಿ ಬಳಸುವವರ ಸಂಖ್ಯೆ. ಪರೋಕ್ಷವಾಗಿ ಇದರ ಪರಿಣಾಮಗಳಿಂದ ಮೃತಪಡುವವರ ಸಂಖ್ಯೆಯನ್ನೂ ಸೇರಿಸಿದರೆ, ತಂಬಾಕಿನ ಘೋರ ಪರಿಣಾಮದ ಅಂದಾಜಾದೀತು ನಮಗೆ. ಈ ಹಿನ್ನೆಲೆಯಲ್ಲಿ, ತಂಬಾಕು ರಹಿತವಾದ ವಿಶ್ವದ ಅಗತ್ಯವನ್ನು ಜಗತ್ತಿನ ಮನಗಾಣಿಸುವ ಉದ್ದೇಶದಿಂದ ಮೇ ತಿಂಗಳ ಕಡೆಯ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ (World No Tobacco Day) ಆಚರಿಸಲಾಗುತ್ತದೆ. ಈ ವರ್ಷ, ಅಂದರೆ 2024ರ ಸಾಲಿನ ಘೋಷ ವಾಕ್ಯ- ತಂಬಾಕು ಉದ್ದಿಮೆಯ ಹಸ್ತಕ್ಷೇಪದಿಂದ ಮಕ್ಕಳನ್ನು ಕಾಪಾಡುವುದು. ಅಪ್ರಾಪ್ತ ವಯಸ್ಕರು ಮತ್ತು ಯುವಜನತೆಯನ್ನೇ ಗುರಿಯಾಗಿಸಿಕೊಂಡು ತಂಬಾಕು ಮಾರಾಟ ವಿಸ್ತರಣೆಗೆ ಉದ್ದಿಮೆ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, ಈ ಘೋಷವಾಕ್ಯ ಮಹತ್ವವನ್ನು ಪಡೆದಿದೆ. ವಿಶ್ವದಾದ್ಯಂತ 13ರಿಂದ 15 ವರ್ಷ ವಯಸ್ಸಿನ 37 ದಶಲಕ್ಷ ಮಕ್ಕಳು ಒಂದಿಲ್ಲೊಂದು ರೀತಿಯಲ್ಲಿ ತಂಬಾಕು ಬಳಸುತ್ತಿದ್ದಾರೆ. ಇವರಲ್ಲಿ ಹುಡುಗಿಯರಿಗಿಂತ ಹುಡುಗರೇ ಹೆಚ್ಚಿದ್ದಾರೆ.

No Tobacco Day

ಹಿನ್ನೆಲೆ ಏನು?

ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ 1987ರಿಂದ ಈ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ. ನಿಕೋಟಿನ್‌ ವ್ಯಸನಕ್ಕೆ ಬಿದ್ದು, ಜೀವ ಕಳೆದುಕೊಳ್ಳುವ ಲಕ್ಷಾಂತರ ಮಂದಿಯ ದಾರುಣ ಕಥೆಗಳು ಎದುರಿಗಿದ್ದರೂ, ಮತ್ತೆ ತಂಬಾಕಿನ ಚಟಕ್ಕೆ ಅಂಟಿಕೊಳ್ಳುವವರನ್ನು ಇದರಿಂದ ಹೊರ ತರುವ ಅಗತ್ಯವನ್ನು ಮನಗಂಡು, ಈ ಅರಿವಿನ ದಿನವನ್ನು ಅಚರಿಸಲಾಗುತ್ತಿದೆ. ಈ ಕುರಿತಾದ ಅಂಕಿ-ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ್ದು, ಹೆಚ್ಚಿನವು ಗಾಬರಿ ಹುಟ್ಟಿಸುವಂತಿವೆ.

ಸಂಖ್ಯೆಗಳು ಏನೆನ್ನುತ್ತವೆ?

20ನೇ ಶತಮಾನದಲ್ಲಿ ಸುಮಾರು 10 ಕೋಟಿ ಮಂದಿ ಧೂಮಪಾನದ ಚಟಕ್ಕೆ ಬಲಿಯಾಗಿದ್ದಾರೆ. ಇಡೀ ವಿಶ್ವದ ಒಟ್ಟಾರೆ ಮೃತ್ಯುಗಳಲ್ಲಿ ಶೇ. 15ರಷ್ಟು ಸಾವುಗಳು ಸಂಭವಿಸಿದ್ದು ತಂಬಾಕಿನ ಚಟದಿಂದ. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಜನ ಸಿಗರೇಟ್‌ಗೆ ಬಲಿಯಾಗುವುದಕ್ಕೆ ಕಾರಣವೆಂದರೆ ಜಗತ್ತಿನ ಐವರು ವಯಸ್ಕರ ಪೈಕಿ ಒಬ್ಬರಿಗೆ ಧೂಮಪಾನದ ಚಟವಿರುವುದು. ಜೊತೆಗೆ, 12 ಲಕ್ಷ ಮಂದಿ ಇನ್ನೊಬ್ಬರು ಸೇದುವ ಸಿಗರೇಟ್‌ ಹೊಗೆಗೆ ಬಲಿಯಾಗುತ್ತಿದ್ದಾರೆ. ಇವರಲ್ಲಿ ಶೇ. 28ರಷ್ಟು ಮಕ್ಕಳಿದ್ದಾರೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲೇಬೇಕಾದ ಅಗತ್ಯವಿದೆ. ತಂಬಾಕು ಉಪಯೋಗಿಸುವವರಲ್ಲಿ ಶೇ. 80ರಷ್ಟು ಮಂದಿ ಅಭಿವೃದ್ಧಿಶೀಲ ದೇಶಗಳಿಗೆ ಸೇರಿದವರು. ಈ ನಿಟ್ಟಿನಲ್ಲಿ ಬಡತನ ನಿವಾರಣೆಗೂ ತಂಬಾಕು ಉಪಯೋಗ ಕಡಿಮೆಯಾಗುವುದಕ್ಕೂ ನೇರ ಸಂಬಂಧವಿದೆ ಎಂದು ಹೇಳಬಹುದು.

ಇದನ್ನೂ ಓದಿ: Cervical Cancer: ಗರ್ಭಕೊರಳಿನ ಕ್ಯಾನ್ಸರ್‌ಗೆ ಮುನ್ನೆಚ್ಚರಿಕೆಯೇ ಮದ್ದು

ಮಕ್ಕಳೇ ಏಕೆ?

ಅಪ್ರಾಪ್ತ ವಯಸ್ಕರನ್ನೇ ತಂಬಾಕು ಉದ್ದಿಮೆ ಗುರಿಯಾಗಿಸಿಕೊಂಡಿರುವುದೇಕೆ? ಪ್ರತಿ ವರ್ಷ ತಂಬಾಕಿಗೆ ಜೀವ ಕಳೆದುಕೊಳ್ಳುವ ಮತ್ತು ಚಟದಿಂದ ದೂರವಾಗುವ ಲಕ್ಷಗಟ್ಟಲೆ ಜನಕ್ಕೆ ಬದಲಿಯಾಗಿ ಗ್ರಾಹಕರನ್ನು ತಂಬಾಕು ಉದ್ದಿಮೆ ಹುಡುಕುತ್ತಲೇ ಇರುತ್ತದೆ. ವಯಸ್ಕರಿಗೆ ಈ ಚಟವನ್ನು ಹೊಸದಾಗಿ ಅಂಟಿಸುವುದು ಸುಲಭವಲ್ಲ. ಆದರೆ ಇನ್ನೂ ಅರಿವು ಮೂಡದ ಮಕ್ಕಳನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವುದು ಮಾರಾಟಗಾರರಿಗೆ ಸುಲಭ. ಇದಿಷ್ಟೇ ಅಲ್ಲ, ವಯಸ್ಕರಲ್ಲಿ ತಂಬಾಕಿನಿಂದ ದೂರವಾಗುವ ಅಥವಾ ಚಟದಿಂದ ಬಿಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅದೇ ಮಕ್ಕಳಲ್ಲಾದರೆ ಒಮ್ಮೆ ಅಂಟಿಸಿದರೆ ದೀರ್ಘ ಕಾಲ ಅವರನ್ನು ತಮ್ಮ ಗ್ರಾಹಕರನ್ನಾಗಿ ಇರಿಸಿಕೊಳ್ಳಬಹುದು ಎಂಬುದು ಉದ್ದಿಮೆಗೆ ತಿಳಿದಿದೆ. ಈ ಎಲ್ಲ ಕಾರಣಗಳಿಗಾಗಿ ಮಕ್ಕಳನ್ನು ತಂಬಾಕಿನ ಜಾಲದಿಂದ ರಕ್ಷಿಸಬೇಕೆಂಬ ಘೋಷಣೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮುಂದಿರಿಸಿದೆ.

Continue Reading
Advertisement
Anti Islam Rally
ವಿದೇಶ2 hours ago

Anti Islam Rally: ಇಸ್ಲಾಂ ವಿರೋಧಿ ರ‍್ಯಾಲಿಯಲ್ಲಿ ಸಿಕ್ಕಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ; ಗುಂಡಿಕ್ಕಿದ ಪೊಲೀಸರು

Modi Meditation
ದೇಶ2 hours ago

Modi Meditation: ವಿವೇಕಾನಂದರ ಮೂರ್ತಿ ಎದುರು ಮೋದಿ ಗಾಢ ಧ್ಯಾನ; ಇಲ್ಲಿವೆ ಫೋಟೊಗಳು

Yamaha has opened a new Blue Square outlet in Bengaluru
ಬೆಂಗಳೂರು3 hours ago

Yamaha: ಬೆಂಗಳೂರಿನಲ್ಲಿ ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದ ಯಮಹಾ

Neha Hiremath
ಕರ್ನಾಟಕ4 hours ago

Neha Hiremath: ಲಿಂಗಾಯತಳಾದ ನೇಹಾ ಹಿರೇಮಠ ಎಸ್‌ಸಿ ಪ್ರಮಾಣಪತ್ರ ಮಾಡಿಸಿದ್ದೇಕೆ? ಸರ್ಟಿಫಿಕೇಟ್‌ ಫೋಟೊ ಈಗ ವೈರಲ್

Kanyakumari Tour
ಪ್ರವಾಸ4 hours ago

Kanyakumari Tour: ನಿಮ್ಮ ಕನ್ಯಾಕುಮಾರಿ ಪ್ರವಾಸದ ಪಟ್ಟಿಯಲ್ಲಿರಲಿ ಈ 10 ಸಂಗತಿಗಳು

Sri Huligemma Devi Maharathotsava in Hulagi
ಧಾರ್ಮಿಕ5 hours ago

Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly
ಆರೋಗ್ಯ5 hours ago

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

District administration all preparations for vote counting says DC Prashanth Kumar Mishra
ಬಳ್ಳಾರಿ5 hours ago

Lok Sabha Election 2024: ಮತ ಎಣಿಕೆಗೆ ಬಳ್ಳಾರಿ ಜಿಲ್ಲಾಡಳಿತ ಸಕಲ ಸಿದ್ಧತೆ

Exit Polls
Lok Sabha Election 20245 hours ago

Exit Poll: 2004, 2009, 2014, 2019ರಲ್ಲಿ ಎಕ್ಸಿಟ್ ಪೋಲ್ ಹೇಳಿದ್ದೇನು? ಆಗಿದ್ದೇನು?

Heart Attack
ದೇಶ5 hours ago

Heart Attack: ತಿರಂಗಾ ಹಿಡಿದು ಕುಣಿಯುವಾಗಲೇ ಹೃದಯಾಘಾತಕ್ಕೆ ನಿವೃತ್ತ ಯೋಧ ಬಲಿ; ಸಾವಿನಲ್ಲೂ ಸಾರ್ಥಕತೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌