ಕರ್ನಾಟಕ
Karnataka Election results 2023: ಎಲ್ಲ 224 ನೂತನ ಶಾಸಕರ ಫುಲ್ ಡಿಟೇಲ್; ಯಾವ ಜಿಲ್ಲೆಯಲ್ಲಿ ಯಾರ ಮೇಲುಗೈ?
Election results: ರಾಜ್ಯ ವಿಧಾನಸಭೆ ಚುನಾವಣೆಯ 224 ಕ್ಷೇತ್ರಗಳಲ್ಲಿ ಗೆದ್ದ ಎಲ್ಲ ಅಭ್ಯರ್ಥಿಗಳ ಪೂರ್ಣ ಮಾಹಿತಿ ಇಲ್ಲಿದೆ. ಜಿಲ್ಲಾವಾರು ಬಲಾಬಲವೂ ಇದೆ. ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ, ಬಿಜೆಪಿ 66ರಲ್ಲಿ, ಜೆಡಿಎಸ್ 19 ಮತ್ತು ಇತರರು ನಾಲ್ಕು ಕಡೆ ಗೆದ್ದಿದ್ದಾರೆ.
ಬೆಳಗಾವಿ ಜಿಲ್ಲೆ : 18 ಕ್ಷೇತ್ರಗಳು: 11 ಕಾಂಗ್ರೆಸ್- 7 ಬಿಜೆಪಿ
1.ನಿಪ್ಪಾಣಿ: ಶಶಿಕಲಾ ಜೊಲ್ಲೆ- ಬಿಜೆಪಿ
2. ಚಿಕ್ಕೋಡಿ ಸದಲಗ: ಗಣೇಶ್ ಹುಕ್ಕೇರಿ- ಕಾಂಗ್ರೆಸ್
3. ಅಥಣಿ: ಲಕ್ಷ್ಮಣ ಸವದಿ- ಕಾಂಗ್ರೆಸ್
4. ಕಾಗವಾಡ: ಭರಮಗೌಡ ಆಲಗೌಡ ಕಾಗೆ- ಕಾಂಗ್ರೆಸ್
5. ಕುಡಚಿ: ಮಹೇಂದ್ರ ಕೆ. ತಮ್ಮಣ್ಣನವರ್- ಕಾಂಗ್ರೆಸ್
6. ರಾಯಭಾಗ: ದುರ್ಯೋಧನ ಐಹೊಳೆ-ಬಿಜೆಪಿ
7. ಹುಕ್ಕೇರಿ: ನಿಖಿಲ್ ಕತ್ತಿ-ಬಿಜೆಪಿ
8. ಅರಭಾವಿ: ಬಾಲಚಂದ್ರ ಜಾರಕಿಹೊಳಿ-ಬಿಜೆಪಿ
9. ಗೋಕಾಕ: ರಮೇಶ್ ಜಾರಕಿಹೊಳಿ- ಬಿಜೆಪಿ
10. ಯಮಕನಮರಡಿ: ಸತೀಶ್ ಜಾರಕಿಹೊಳಿ- ಕಾಂಗ್ರೆಸ್
11. ಬೆಳಗಾವಿ ಉತ್ತರ: ಆಸಿಫ್ ಸೇಠ್- ಕಾಂಗ್ರೆಸ್
12. ಬೆಳಗಾವಿ ದಕ್ಷಿಣ: ಅಭಯ್ ಪಾಟೀಲ್- ಬಿಜೆಪಿ
13. ಬೆಳಗಾವಿ ಗ್ರಾ.: ಲಕ್ಷ್ಮೀ ಹೆಬ್ಬಾಳ್ಕರ್- ಕಾಂಗ್ರೆಸ್
14. ಖಾನಾಪುರ: ವಿಠಲ್ ಹಲಗೇಕರ್- ಬಿಜೆಪಿ
15. ಕಿತ್ತೂರು: ಬಾಬಾಸಾಹೇಬ್ ಡಿ. ಪಾಟೀಲ್- ಕಾಂಗ್ರೆಸ್
16. ಬೈಲಹೊಂಗಲ: ಮಹಾಂತೇಶ್ ಶಿವಾನಂದ ಕೌಜಲಗಿ- ಕಾಂಗ್ರೆಸ್
17. ಸವದತ್ತಿ: ವಿಶ್ವಾಸ್ ವಸಂತ್ ವೈದ್ಯ-ಕಾಂಗ್ರೆಸ್
18. ರಾಮದುರ್ಗ: ಅಶೋಕ್ ಎಂ. ಪಟ್ಟಣ್- ಕಾಂಗ್ರೆಸ್
ಬಾಗಲಕೋಟೆ ಜಿಲ್ಲೆ: ಏಳು ಕ್ಷೇತ್ರಗಳು: ಕಾಂಗ್ರೆಸ್-5, ಬಿಜೆಪಿ-2
19. ಮುಧೋಳ: ಆರ್.ಬಿ. ತಿಮ್ಮಾಪುರ-ಕಾಂಗ್ರೆಸ್
20. ತೇರದಾಳ: ಸಿದ್ದು ಸವದಿ- ಬಿಜೆಪಿ
21. ಜಮಖಂಡಿ: ಜಗದೀಶ್ ಗುಡಗಂಟಿ- ಬಿಜೆಪಿ
22. ಬೀಳಗಿ: ಜೆ.ಟಿ. ಪಾಟೀಲ್- ಕಾಂಗ್ರೆಸ್
23. ಬಾದಾಮಿ: ಬಿ.ಬಿ. ಚಿಮ್ಮನಕಟ್ಟಿ-ಕಾಂಗ್ರೆಸ್
24. ಬಾಗಲಕೋಟೆ: ಎಚ್.ವೈ. ಮೇಟಿ- ಕಾಂಗ್ರೆಸ್
25. ಹುನಗುಂದ- ವಿಜಯಾನಂದ ಕಾಶಪ್ಪನವರ್- ಕಾಂಗ್ರೆಸ್
ವಿಜಯಪುರ ಜಿಲ್ಲೆ: 8 ಕ್ಷೇತ್ರಗಳು: ಕಾಂಗ್ರೆಸ್-6, ಬಿಜೆಪಿ-1, ಜೆಡಿಎಸ್-1
26. ಮುದ್ದೇಬಿಹಾಳ- ಅಪ್ಪಾಜಿ ನಾಡಗೌಡ- ಕಾಂಗ್ರೆಸ್
27. ದೇವರಹಿಪ್ಪರಗಿ- ರಾಜುಗೌಡ ಪಾಟೀಲ್- ಜೆಡಿಎಸ್
28. ಬಸವನ ಬಾಗೇವಾಡಿ- ಶಿವಾನಂದ ಪಾಟೀಲ್- ಕಾಂಗ್ರೆಸ್
29. ಬಬಲೇಶ್ವರ- ಎಂ.ಬಿ. ಪಾಟೀಲ್- ಕಾಂಗ್ರೆಸ್
30. ವಿಜಯಪುರ ನಗರ: ಬಸನಗೌಡ ಪಾಟೀಲ್ ಯತ್ನಾಳ್-ಬಿಜೆಪಿ
31. ನಾಗಠಾಣ- ವಿಠಲ್ ಕಾಕಟಧೋಂದ್- ಕಾಂಗ್ರೆಸ್
32. ಇಂಡಿ- ಯಶ್ವಂತ್ ಗೌಡ ಪಾಟೀಲ್-ಕಾಂಗ್ರೆಸ್
33. ಸಿಂದಗಿ- ಅಶೋಕ್ ಎಂ. ಮನಗೂಳಿ- ಕಾಂಗ್ರೆಸ್
ಯಾದಗಿರಿ ಜಿಲ್ಲೆ: 4 ಕ್ಷೇತ್ರಗಳು: ಕಾಂಗ್ರೆಸ್-3, ಜೆಡಿಎಸ್-1
34. ಶೋರಾಪುರ- ರಾಜಾ ವೆಂಕಟಪ್ಪ ನಾಯಕ್-ಕಾಂಗ್ರೆಸ್
35. ಶಹಾಪುರ- ಶರಣಬಸಪ್ಪ ಗೌಡ- ಕಾಂಗ್ರೆಸ್
36. ಯಾದಗಿರಿ- ಚೆನ್ನಾರೆಡ್ಡಿ ಪಾಟೀಲ್ ತುನ್ನೂರು- ಕಾಂಗ್ರೆಸ್
37. ಗುರುಮಿಠಕಲ್ – ಶರಣ್ಗೌಡ- ಜೆಡಿಎಸ್
ಕಲಬುರಗಿ ಜಿಲ್ಲೆ: 9 ಕ್ಷೇತ್ರಗಳು: 7 ಕಾಂಗ್ರೆಸ್, 2 ಬಿಜೆಪಿ
38. ಅಫ್ಜಲ್ಪುರ- ಎಂ.ವೈ ಪಾಟೀಲ್- ಕಾಂಗ್ರೆಸ್
39. ಜೇವರ್ಗಿ: ಡಾ. ಅಜಯ್ ಧರ್ಮ ಸಿಂಗ್- ಕಾಂಗ್ರೆಸ್
40. ಚಿತ್ತಾಪುರ- ಪ್ರಿಯಾಂಕ್ ಖರ್ಗೆ- ಕಾಂಗ್ರೆಸ್
41. ಸೇಡಂ- ಡಾ. ಶರಣ್ ಪ್ರಕಾಶ್ ಪಾಟೀಲ್- ಕಾಂಗ್ರೆಸ್
42. ಚಿಂಚೋಳಿ: ಡಾ. ಅವಿನಾಶ್ ಜಾಧವ್- ಬಿಜೆಪಿ
43. ಕಲಬುರಗಿ ಗ್ರಾ. – ಬಸವರಾಜ ಮತ್ತಿಮೋಡ- ಬಿಜೆಪಿ
44. ಕಲಬುರಗಿ ದಕ್ಷಿಣ- ಅಲ್ಲಮಪ್ರಭು ಪಾಟೀಲ್- ಕಾಂಗ್ರೆಸ್
45. ಕಲಬುರಗಿ ಉತ್ತರ- ಖನೀಜಾ ಫಾತಿಮಾ- ಕಾಂಗ್ರೆಸ್
46. ಆಳಂದ; ಬಿಆರ್ ಪಾಟೀಲ್-ಕಾಂಗ್ರೆಸ್
ಬೀದರ್ ಜಿಲ್ಲೆ: 6 ಕ್ಷೇತ್ರಗಳು: 3 ಬಿಜೆಪಿ, 3 ಕಾಂಗ್ರೆಸ್
47. ಬಸವಕಲ್ಯಾಣ: ಶರಣು ಸಲಗರ- ಬಿಜೆಪಿ
48. ಹುಮನಾಬಾದ್: ಸಿದ್ದುಪಾಟೀಲ್- ಬಿಜೆಪಿ
49. ಬೀದರ್ ದಕ್ಷಿಣ: ಅಶೋಕ್ ಖೇಣಿ- ಕಾಂಗ್ರೆಸ್
50. ಬೀದರ್- ರಹೀಂ ಖಾನ್- ಕಾಂಗ್ರೆಸ್
51. ಭಾಲ್ಕಿ- ಈಶ್ವರ್ ಖಂಡ್ರೆ- ಕಾಂಗ್ರೆಸ್
52. ಔರಾದ್- ಪ್ರಭು ಚೌಹಾಣ್- ಬಿಜೆಪಿ
ರಾಯಚೂರು ಜಿಲ್ಲೆ: 7 ಕ್ಷೇತ್ರಗಳು: 4 ಕಾಂಗ್ರೆಸ್, 3 ಬಿಜೆಪಿ
53. ರಾಯಚೂರು ಗ್ರಾ.: ಬಸನಗೌಡ ದದ್ದಲ್-ಕಾಂಗ್ರೆಸ್
54. ರಾಯಚೂರು ನಗರ: ಡಾ. ಶಿವರಾಜ್ ಪಾಟೀಲ್- ಬಿಜೆಪಿ
55. ಮಾನ್ವಿ- ಹಂಪಯ್ಯ ನಾಯ್ಕ್- ಕಾಂಗ್ರೆಸ್
56. ದೇವದುರ್ಗ: ಕರೆಮ್ಮ ಜಿ. ನಾಯಕ್-ಬಿಜೆಪಿ
57. ಲಿಂಗಸುಗೂರು: ಮಾನಪ್ಪ ಡಿ. ವಜ್ಜಲ್- ಬಿಜೆಪಿ
58. ಸಿಂಧನೂರು: ಹಂಪನ ಗೌಡ ಬಾದ್ರಾಲಿ- ಕಾಂಗ್ರೆಸ್
59. ಮಸ್ಕಿ: ಬಸವಗೌಡ ತುರುವೀಹಾಳ_ ಕಾಂಗ್ರೆಸ್
ಕೊಪ್ಪಳ ಜಿಲ್ಲೆ: 5 ಕ್ಷೇತ್ರ, 3 ಕಾಂಗ್ರೆಸ್, 1 ಬಿಜೆಪಿ, 1 ಕೆ.ಆರ್ಪಿಪಿ
60. ಕುಷ್ಟಗಿ: ದೊಡ್ಡನಗೌಡ ಪಾಟೀಲ್- ಬಿಜೆಪಿ
61. ಕನಕಗಿರಿ: ಶಿವರಾಜ ತಂಗಡಗಿ- ಕಾಂಗ್ರೆಸ್
62. ಗಂಗಾವತಿ: ಜನಾರ್ದನ ರೆಡ್ಡಿ- ಕೆಆರ್ಪಿಪಿ
63. ಯಲಬುರ್ಗಾ: ಬಸವರಾಜ ರಾಯರೆಡ್ಡಿ-ಕಾಂಗ್ರೆಸ್
64. ಕೊಪ್ಪಳ: ಕೆ. ರಾಘವೇಂದ್ರ- ಕಾಂಗ್ರೆಸ್
ಗದಗ ಜಿಲ್ಲೆ: 4 ಕ್ಷೇತ್ರ; ಬಿಜೆಪಿ -2, ಕಾಂಗ್ರೆಸ್-2
65. ಶಿರಹಟ್ಟಿ: ಡಾ. ಚಂದ್ರ ಲಮಾಣಿ- ಬಿಜೆಪಿ
66. ಗದಗ: ಎಚ್.ಕೆ. ಪಾಟೀಲ್-ಕಾಂಗ್ರೆಸ್
67. ರೋಣ: ಜಿಎಸ್. ಪಾಟೀಲ್- ಕಾಂಗ್ರೆಸ್
68. ನರಗುಂದ- ಸಿ.ಸಿ. ಪಾಟೀಲ್- ಬಿಜೆಪಿ
ಧಾರವಾಡ ಜಿಲ್ಲೆ: 7 ಕ್ಷೇತ್ರ; 4 ಕಾಂಗ್ರೆಸ್, 3 ಬಿಜೆಪಿ
69. ನವಲಗುಂದ- ಕೋನ ರೆಡ್ಡಿ-ಕಾಂಗ್ರೆಸ್
70. ಕುಂದಗೋಳ:ಎಂ.ಆರ್. ಪಾಟೀಲ್- ಬಿಜೆಪಿ
71. ಧಾರವಾಡ- ವಿನಯ ಕುಲಕರ್ಣಿ- ಕಾಂಗ್ರೆಸ್
72. ಹುಬ್ಬಳ್ಳಿ- ಧಾರವಾಡ ಪೂರ್ವ: ಪ್ರಸಾದ್ ಅಬ್ಬಯ್ಯ- ಕಾಂಗ್ರೆಸ್
73. ಹುಬ್ಬಳ್ಳಿ- ಧಾರವಾಡ ಸೆಂಟ್ರಲ್- ಮಹೇಶ್ ಟೆಂಗಿನಕಾಯಿ- ಬಿಜೆಪಿ
74. ಹುಬ್ಬಳ್ಳಿ- ಧಾರವಾಡ ಪಶ್ಚಿಮ- ಅರವಿಂದ ಬೆಲ್ಲದ್- ಬಿಜೆಪಿ
75. ಕಲಘಟಗಿ- ಸಂತೋಷ್ ಲಾಡ್- ಕಾಂಗ್ರೆಸ್
ಉತ್ತರ ಕನ್ನಡ ಜಿಲ್ಲೆ: 6 ಕ್ಷೇತ್ರಗಳು; 4 ಕಾಂಗ್ರೆಸ್, 2 ಬಿಜೆಪಿ
76. ಹಳಿಯಾಳ: ಆರ್.ವಿ. ದೇಶಪಾಂಡೆ- ಕಾಂಗ್ರೆಸ್
77. ಕಾರವಾರ- ಸತೀಶ್ ಸೈಲ್- ಕಾಂಗ್ರೆಸ್
78, ಕುಮಟಾ: ದಿನಕರ ಶೆಟ್ಟಿ- ಬಿಜೆಪಿ
79. ಭಟ್ಕಳ: ಮಾಂಕಾಳ್ ವೈದ್ಯ- ಕಾಂಗ್ರೆಸ್
80. ಶಿರಸಿ: ಭೀಮಣ್ಣ ನಾಯಕ್- ಕಾಂಗ್ರೆಸ್
81. ಯಲ್ಲಾಪುರ: ಶಿವರಾಮ ಹೆಬ್ಬಾರ್- ಬಿಜೆಪಿ
ಹಾವೇರಿ ಜಿಲ್ಲೆ: 6 ಕ್ಷೇತ್ರಗಳು; 5 ಕಾಂಗ್ರೆಸ್, ಬಿಜೆಪಿ 1
82. ಹಾನಗಲ್: ಶ್ರೀನಿವಾಸ್ ವಿ. ಮಾನೆ- ಕಾಂಗ್ರೆಸ್
83. ಶಿಗ್ಗಾಂವಿ: ಬಸವರಾಜ ಬೊಮ್ಮಾಯಿ- ಬಿಜೆಪಿ
84. ಹಾವೇರಿ: ರುದ್ರಪ್ಪ ಲಮಾಣಿ-ಕಾಂಗ್ರೆಸ್
85. ಬ್ಯಾಡಗಿ: ಬಸವರಾಜ ಎನ್. ಶಿವಣ್ಣನರ್- ಕಾಂಗ್ರೆಸ್
86. ಹಿರೇಕೆರೂರ್- ಯು.ಬಿ. ಬಣಕಾರ್- ಕಾಂಗ್ರೆಸ್
87. ರಾಣೆಬೆನ್ನೂರು: ಪ್ರಕಾಶ್ ಕೆ. ಕೋಳಿವಾಡ: ಕಾಂಗ್ರೆಸ್
ವಿಜಯ ನಗರ ಜಿಲ್ಲೆ: 5 ಕ್ಷೇತ್ರ; 2 ಕಾಂಗ್ರೆಸ್, 1 ಬಿಜೆಪಿ, 1 ಜೆಡಿಎಸ್, 1 ಪಕ್ಷೇತರ
88. ಹಡಗಲಿ: ಕೃಷ್ಣ ನಾಯಕ- ಬಿಜೆಪಿ
89. ಹಗರಿ ಬೊಮ್ಮನಹಳ್ಳಿ: ನೇಮಿರಾಜ ನಾಯಕ್- ಜೆಡಿಎಸ್
90. ವಿಜಯನಗರ: ಎಚ್.ಆರ್. ಗವಿಯಪ್ಪ-ಕಾಂಗ್ರೆಸ್
96. ಕೂಡ್ಲಿಗಿ: ಡಾ. ಶ್ರೀನಿವಾಸ್ ಎನ್.ಟಿ- ಕಾಂಗ್ರೆಸ್
104. ಹರಪನಹಳ್ಳಿ: ಲತಾ ಮಲ್ಲಿಕಾರ್ಜುನ – ಪಕ್ಷೇತರ
ಬಳ್ಳಾರಿ ಜಿಲ್ಲೆ: 5 ಕ್ಷೇತ್ರ; ಎಲ್ಲವೂ ಕಾಂಗ್ರೆಸ್
91. ಕಂಪ್ಲಿ: ಜೆ.ಎನ್. ಗಣೇಶ್- ಕಾಂಗ್ರೆಸ್
92. ಸಿರಗುಪ್ಪ: ಎಂ.ಬಿ. ನಾಗರಾಜ್-ಕಾಂಗ್ರೆಸ್
93. ಬಳ್ಳಾರಿ: ಬಿ. ನಾಗೇಂದ್ರ- ಕಾಂಗ್ರೆಸ್
94. ಬಳ್ಳಾರಿ ನಗರ: ನಾರಾ ಭರತ್ ರೆಡ್ಡಿ- ಕಾಂಗ್ರೆಸ್
95. ಸಂಡೂರು: ವಿ. ತುಕಾರಾಮ್-ಕಾಂಗ್ರೆಸ್
ದಾವಣಗೆರೆ ಜಿಲ್ಲೆ: 6 ಕ್ಷೇತ್ರ; 5 ಕಾಂಗ್ರೆಸ್, 1 ಬಿಜೆಪಿ
97. ಮೊಳಕಾಲ್ಮುರು: ಎನ್.ವೈ. ಗೋಪಾಲಕೃಷ್ಣ- ಕಾಂಗ್ರೆಸ್
98.ಚಳ್ಳಕೆರೆ: ಟಿ.ರಘುಮೂರ್ತಿ- ಕಾಂಗ್ರೆಸ್
99. ಚಿತ್ರದುರ್ಗ: ಕೆ.ಸಿ. ವೀರೇಂದ್ರ- ಕಾಂಗ್ರೆಸ್
100. ಹಿರಿಯೂರು: ಡಿ. ಸುಧಾಕರ್- ಕಾಂಗ್ರೆಸ್
101. ಹೊಸದುರ್ಗ: ಗೋವಿಂದಪ್ಪ ಬಿ.ಜಿ- ಕಾಂಗ್ರೆಸ್
102. ಹೊಳಲ್ಕೆರೆ: ಎಂ.ಚಂದ್ರಪ್ಪ- ಬಿಜೆಪಿ
ದಾವಣಗೆರೆ ಜಿಲ್ಲೆ: 7 ಕ್ಷೇತ್ರ; 6 ಕಾಂಗ್ರೆಸ್, 1 ಬಿಜೆಪಿ
103. ಜಗಳೂರು: ದೇವೇಂದ್ರಪ್ಪ-ಕಾಂಗ್ರೆಸ್
105. ಹರಿಹರ: ಬಿ.ಪಿ. ಹರೀಶ್- ಬಿಜೆಪಿ
106. ದಾವಣಗೆರೆ ಉತ್ತರ: ಎಸ್.ಎಸ್. ಮಲ್ಲಿಕಾರ್ಜುನ್-ಕಾಂಗ್ರೆಸ್
10.7: ದಾವಣಗೆರೆ ದಕ್ಷಿಣ: ಶಾಮನೂರು ಶಿವಶಂಕರಪ್ಪ- ಕಾಂಗ್ರೆಸ್
108: ಮಾಯಗೊಂಡ: ಕೆ.ಎಸ್. ಬಸವರಾಜು- ಕಾಂಗ್ರೆಸ್
109. ಚನ್ನಗಿರಿ: ಬಸವರಾಜ್ ವಿ.ವಿ. ಶಿವಗಂಗಾ- ಕಾಂಗ್ರೆಸ್
110. ಹೊನ್ನಾಳಿ: ಡಿ.ಜಿ ಶಾಂತನಗೌಡರ್- ಕಾಂಗ್ರೆಸ್
ಶಿವಮೊಗ್ಗ ಜಿಲ್ಲೆ: 7 ಕ್ಷೇತ್ರಗಳು; 3 ಬಿಜೆಪಿ, 3 ಕಾಂಗ್ರೆಸ್, 1 ಜೆಡಿಎಸ್
111. ಶಿವಮೊಗ್ಗ ಗ್ರಾಮಾಂತರ: ಶಾರದಾ ಪೂರ್ಯ ನಾಯ್ಕ್- ಜೆಡಿಎಸ್
112. ಭದ್ರಾವತಿ: ಸಂಗಮೇಶ್ವರ್ ಬಿ.ಕೆ. -ಕಾಂಗ್ರೆಸ್
113: ಶಿವಮೊಗ್ಗ: ಚನ್ನಬಸಪ್ಪ- ಬಿಜೆಪಿ
114. ತೀರ್ಥಹಳ್ಳಿ- ಆರಗ ಜ್ಞಾನೇಂದ್ರ- ಬಿಜೆಪಿ
115. ಶಿಕಾರಿಪುರ: ಬಿವೈ ವಿಜಯೇಂದ್ರ- ಬಿಜೆಪಿ
116. ಸೊರಬ: ಮಧು ಬಂಗಾರಪ್ಪ- ಕಾಂಗ್ರೆಸ್
117. ಸಾಗರ: ಗೋಪಾಲಕೃಷ್ಣ ಬೇಳೂರು- ಕಾಂಗ್ರೆಸ್
ಉಡುಪಿ ಜಿಲ್ಲೆ: 5 ಕ್ಷೇತ್ರಗಳು; ಎಲ್ಲ ಕಡೆ ಬಿಜೆಪಿ ಗೆಲುವು
118. ಬೈಂದೂರು: ಗುರುರಾಜ್ ಗಂಟಿಹೊಳೆ- ಬಿಜೆಪಿ
119. ಕುಂದಾಪುರ: ಕಿರಣ್ ಕೊಡ್ಗಿ- ಬಿಜೆಪಿ
120. ಉಡುಪಿ: ಯಶ್ಪಾಲ್ ಸುವರ್ಣ-ಬಿಜೆಪಿ
121. ಕಾಪು: ಗುರ್ಮೆ ಸುರೇಶ್ ಶೆಟ್ಟಿ- ಬಿಜೆಪಿ
122. ಕಾರ್ಕಳ: ವಿ. ಸುನಿಲ್ ಕುಮಾರ್- ಬಿಜೆಪಿ
ಚಿಕ್ಕಮಗಳೂರು: 5 ಕ್ಷೇತ್ರ: ಎಲ್ಲವೂ ಕಾಂಗ್ರೆಸ್
123. ಶೃಂಗೇರಿ: ರಾಜೇಗೌಡ- ಕಾಂಗ್ರೆಸ್
124. ಮೂಡಿಗೆರೆ: ನಯನಾ ಮೋಟಮ್ಮ- ಕಾಂಗ್ರೆಸ್
125. ಚಿಕ್ಕಮಗಳೂರು: ಎಚ್.ಡಿ. ತಮ್ಮಯ್ಯ- ಕಾಂಗ್ರೆಸ್
126. ತರೀಕೆರೆ: ಜಿ.ಎಚ್. ಶ್ರೀನಿವಾಸ್- ಕಾಂಗ್ರೆಸ್
127. ಕಡೂರು: ಆನಂದ್ ಕೆ.ಎಸ್.- ಕಾಂಗ್ರೆಸ್
ತುಮಕೂರು ಜಿಲ್ಲೆ: 11 ಕ್ಷೇತ್ರ, ಕಾಂಗ್ರೆಸ್-7, ಜೆಡಿಎಸ್-2, ಬಿಜೆಪಿ-2
128. ಚಿಕ್ಕನಾಯಕನಹಳ್ಳಿ: ಸಿ.ವಿ. ಸುರೇಶ್ ಬಾಬು- ಜೆಡಿಎಸ್
129. ತಿಪಟೂರು: ಕೆ. ಷಡಕ್ಷರಿ- ಕಾಂಗ್ರೆಸ್
130. ತುರುವೇಕೆರೆ: ಎಂ.ಟಿ. ಕೃಷ್ಣಪ್ಪ- ಜೆಡಿಎಸ್
131. ಕುಣಿಗಲ್: ಡಾ. ಎಚ್.ಡಿ. ರಂಗನಾಥ್- ಕಾಂಗ್ರೆಸ್
132. ತುಮಕೂರು: ಜ್ಯೋತಿ ಗಣೇಶ್- ಬಿಜೆಪಿ
133. ತುಮಕೂರು ಗ್ರಾಮೀಣ: ಸುರೇಶ್ ಗೌಡ ಬಿ- ಬಿಜೆಪಿ
134. ಕೊರಟಗೆರೆ: ಡಾ. ಜಿ. ಪರಮೇಶ್ವರ್- ಕಾಂಗ್ರೆಸ್
135. ಗುಬ್ಬಿ: ಎಸ್.ಆರ್. ಶ್ರೀನಿವಾಸ್- ಕಾಂಗ್ರೆಸ್
136. ಸಿರಾ: ಟಿ.ಬಿ. ಜಯಚಂದ್ರ- ಕಾಂಗ್ರೆಸ್
137. ಪಾವಗಡ: ಎಚ್.ವಿ. ವೆಂಕಟೇಶ್ -ಕಾಂಗ್ರೆಸ್
138. ಮಧುಗಿರಿ- ಕೆ.ಎನ್. ರಾಜಣ್ಣ- ಕಾಂಗ್ರೆಸ್
ಚಿಕ್ಕಬಳ್ಳಾಪುರ: 5 ಕ್ಷೇತ್ರ; ಕಾಂಗ್ರೆಸ್-3, ಜೆಡಿಎಸ್-1, ಪಕ್ಷೇತರ-1
139. ಗೌರಿಬಿದನೂರು- ಪುಟ್ವಸ್ವಾಮಿ ಗೌಡ- ಪಕ್ಷೇತರ
140. ಬಾಗೇಪಲ್ಲಿ: ಎಸ್.ಎನ್. ಸುಬ್ಬಾರೆಡ್ಡಿ- ಕಾಂಗ್ರೆಸ್
141. ಚಿಕ್ಕಬಳ್ಳಾಪುರ: ಪ್ರದೀಪ್ ಈಶ್ವರ್ ಅಯ್ಯರ್- ಕಾಂಗ್ರೆಸ್
142. ಶಿಡ್ಲಘಟ್ಟ- ರವಿಕುಮಾರ್-ಜೆಡಿಎಸ್
143. ಚಿಂತಾಮಣಿ: ಡಾ.ಎಂ.ಸಿ. ಸುಧಾಕರ್- ಕಾಂಗ್ರೆಸ್
ಕೋಲಾರ ಜಿಲ್ಲೆ: 6 ಕ್ಷೇತ್ರಗಳು; ಕಾಂಗ್ರೆಸ್-4, ಜೆಡಿಎಸ್-2
144. ಶ್ರೀನಿವಾಸಪುರ- ವೆಂಕಟಶಿವಾ ರೆಡ್ಡಿ- ಜೆಡಿಎಸ್
145. ಮುಳಬಾಗಿಲು- ಸಮೃದ್ಧಿ ಮಂಜುನಾಥ್-ಜೆಡಿಎಸ್
146. ಕೆಜಿಎಫ್- ರೂಪಕಲಾ ಎಂ- ಕಾಂಗ್ರೆಸ್
147. ಬಂಗಾರಪೇಟೆ: ಎಸ್.ಎನ್. ನಾರಾಯಣ ಸ್ವಾಮಿ- ಕಾಂಗ್ರೆಸ್
148. ಕೋಲಾರ: ಕೊತ್ತೂರು ಮಂಜುನಾಥ್- ಕಾಂಗ್ರೆಸ್
149. ಮಾಲೂರು: ಕೆ.ವೈ. ನಂಜೇಗೌಡ- ಕಾಂಗ್ರೆಸ್
ಗ್ರೇಟರ್ ಬೆಂಗಳೂರು: 32 ಕ್ಷೇತ್ರ: ಬಿಜೆಪಿ-17, ಕಾಂಗ್ರೆಸ್- 15
150. ಯಲಹಂಕ: ಎಸ್.ಆರ್. ವಿಶ್ವನಾಥ್- ಬಿಜೆಪಿ
151. ಕೆ.ಆರ್. ಪುರ: ಬೈರತಿ ಬಸವರಾಜ್- ಬಿಜೆಪಿ
152. ಬ್ಯಾಟರಾಯನಪುರ: ಕೃಷ್ಣ ಭೈರೇಗೌಡ- ಕಾಂಗ್ರೆಸ್
153. ಯಶ್ವಂತಪುರ: ಎಸ್.ಟಿ. ಸೋಮಶೇಖರ್- ಬಿಜೆಪಿ
154. ರಾಜರಾಜೇಶ್ವರಿ ನಗರ: ಮುನಿರತ್ನ- ಬಿಜೆಪಿ
155. ದಾಸರಹಳ್ಳಿ: ಎಸ್. ಮುನಿರಾಜು- ಬಿಜೆಪಿ
156. ಮಹಾಲಕ್ಷ್ಮಿ ಲೇಔಟ್- ಎಚ್. ಗೋಪಾಲಯ್ಯ- ಬಿಜೆಪಿ
157.. ಮಲ್ಲೇಶ್ವರಂ: ಡಾ.ಸಿ.ಎನ್ ಅಶ್ವಥ್ ನಾರಾಯಣ- ಬಿಜೆಪಿ
158. ಹೆಬ್ಬಾಳ: ಸುರೇಶ್ ಬಿ.ಎಸ್.- ಕಾಂಗ್ರೆಸ್
159. ಪುಲಿಕೇಶಿ ನಗರ: ಎ.ಸಿ. ಶ್ರೀನಿವಾಸ್- ಕಾಂಗ್ರೆಸ್
160. ಸರ್ವಜ್ಞ ನಗರ: ಕೆ.ಜೆ. ಜಾರ್ಜ್-ಕಾಂಗ್ರೆಸ್
161. ಸಿ.ವಿ. ರಾಮನ್ ನಗರ: ಆರ್. ರಘು- ಬಿಜೆಪಿ
162. ಶಿವಾಜಿ ನಗರ: ರಿಜ್ವಾನ್ ಅರ್ಷದ್- ಕಾಂಗ್ರೆಸ್
163. ಶಾಂತಿನಗರ: ಎನ್.ಎ ಹ್ಯಾರಿಸ್- ಕಾಂಗ್ರೆಸ್
164. ಗಾಂಧಿ ನಗರ: ದಿನೇಶ್ ಗುಂಡೂರಾವ್-ಕಾಂಗ್ರೆಸ್
165. ರಾಜಾಜಿ ನಗರ: ಸುರೇಶ್ ಕುಮಾರ್- ಬಿಜೆಪಿ
166. ಗೋವಿಂದರಾಜ ನಗರ: ಪ್ರಿಯಾಕೃಷ್ಣ- ಕಾಂಗ್ರೆಸ್
167. ವಿಜಯನಗರ: ಎಂ. ಕೃಷ್ಣಪ್ಪ- ಕಾಂಗ್ರೆಸ್
168. ಚಾಮರಾಜಪೇಟೆ: ಜಮೀರ್ ಅಹ್ಮದ್ ಖಾನ್- ಕಾಂಗ್ರೆಸ್
169. ಚಿಕ್ಕಪೇಟೆ: ಉದಯ ಗರುಡಾಚಾರ್- ಬಿಜೆಪಿ
170. ಬಸವನಗುಡಿ: ರವಿ ಸುಬ್ರಹ್ಮಣ್ಯ೦- ಬಿಜೆಪಿ
171. ಪದ್ಮನಾಭ ನಗರ: ಆರ್. ಅಶೋಕ್- ಬಿಜೆಪಿ
172. ಬಿಟಿಎಂ ಲೇಔಟ್: ರಾಮಲಿಂಗಾರೆಡ್ಡಿ- ಕಾಂಗ್ರೆಸ್
173. ಜಯನಗರ: ಎಂ.ಕೆ. ರಾಮಮೂರ್ತಿ-ಬಿಜೆಪಿ
174. ಮಹದೇವಪುರ: ಮಂಜುಳಾ ಅರವಿಂದ ಲಿಂಬಾವಳಿ- ಬಿಜೆಪಿ
175. ಬೊಮ್ನಳ್ಳಿ: ಸತೀಶ್ ರೆಡ್ಡಿ- ಬಿಜೆಪಿ
176. ಬೆಂಗಳೂರು ದಕ್ಷಿಣ: ಎಂ.ಕೃಷ್ಣಪ್ಪ- ಬಿಜೆಪಿ
177. ಆನೇಕಲ್: ಬಿ. ಶಿವಣ್ಣ- ಕಾಂಗ್ರೆಸ್
178. ಹೊಸಕೋಟೆ: ಶರತ್ ಬಚ್ಚೇಗೌಡ- ಕಾಂಗ್ರೆಸ್
179. ದೇವನಹಳ್ಳಿ: ಕೆ.ಎಚ್. ಮುನಿಯಪ್ಪ- ಕಾಂಗ್ರೆಸ್
180. ದೊಡ್ಡಬಳ್ಳಾಪುರ: ಧೀರಜ್ ಮುನಿರಾಜು- ಬಿಜೆಪಿ
181. ನೆಲಮಂಗಲ: ಶ್ರೀನಿವಾಸಯ್ಯ- ಕಾಂಗ್ರೆಸ್
ರಾಮ ನಗರ ಜಿಲ್ಲೆ: 4 ಕ್ಷೇತ್ರಗಳು; ಕಾಂಗ್ರೆಸ್ 3, ಜೆಡಿಎಸ್ 1
182. ಮಾಗಡಿ: ಎಚ್.ಸಿ. ಬಾಲಕೃಷ್ಣ- ಕಾಂಗ್ರೆಸ್
183. ರಾಮನಗರ: ಇಕ್ಬಾಲ್ ಹುಸೇನ್ ಎಚ್.ಎ- ಕಾಂಗ್ರೆಸ್
184. ಕನಕಪುರ: ಡಿ.ಕೆ. ಶಿವಕುಮಾರ್- ಕಾಂಗ್ರೆಸ್
185. ಚನ್ನಪಟ್ಟಣ ಎಚ್.ಡಿ. ಕುಮಾರಸ್ವಾಮಿ- ಜೆಡಿಎಸ್
ಮಂಡ್ಯ ಜಿಲ್ಲೆ: 7 ಕ್ಷೇತ್ರಗಳು; 5 ಕಾಂಗ್ರೆಸ್, 1 ಜೆಡಿಎಸ್, 1 ಪಕ್ಷೇತರ
186. ಮಳವಳ್ಳಿ: ಪಿ.ಎಂ. ನರೇಂದ್ರ ಸ್ವಾಮಿ- ಕಾಂಗ್ರೆಸ್
187. ಮದ್ದೂರು: ಕೆ.ಎಂ ಉದಯ್- ಕಾಂಗ್ರೆಸ್
188. ಮೇಲುಕೋಟೆ: ದರ್ಶನ್ ಪುಟ್ಟಣಯ್ಯ- ಸರ್ವೋದಯ-ಪಕ್ಷೇತರ
189. ಮಂಡ್ಯ: ಪಿ. ರವಿ ಕುಮಾರ್- ಕಾಂಗ್ರೆಸ್
190. ಶ್ರೀರಂಗಪಟ್ಟಣ: ರಮೇಶ್ ಬಂಡಿಸಿದ್ದೇಗೌಡ- ಕಾಂಗ್ರೆಸ್
191. ನಾಗಮಂಗಲ: ಚೆಲುವರಾಯಸ್ವಾಮಿ- ಕಾಂಗ್ರೆಸ್
192. ಕೆ.ಆರ್. ಪೇಟೆ: ಎಚ್.ಡಿ. ಮಂಜುನಾಥ್- ಜೆಡಿಎಸ್
ಹಾಸನ ಜಿಲ್ಲೆ: 7 ಕ್ಷೇತ್ರಗಳು; ಜೆಡಿಎಸ್-5, ಬಿಜೆಪಿ-2, ಕಾಂಗ್ರೆಸ್-1
193. ಶ್ರವಣಬೆಳಗೊಳ: ಸಿ.ಎನ್. ಬಾಲಕೃಷ್ಣ- ಜೆಡಿಎಸ್
194. ಅರಸೀಕೆರೆ: ಕೆ.ಎಂ. ಶಿವಲಿಂಗೇಗೌಡ- ಕಾಂಗ್ರೆಸ್
195. ಬೇಲೂರು: ಹುಲ್ಲಳ್ಳಿ ಕೆ. ಸುರೇಶ್- ಬಿಜೆಪಿ
196. ಹಾಸನ: ಸ್ವರೂಪ್ ಪ್ರಕಾಶ್- ಜೆಡಿಎಸ್
197. ಹೊಳೆನರಸೀಪುರ: ಎಚ್.ಡಿ. ರೇವಣ್ಣ- ಜೆಡಿಎಸ್
198. ಅರಕಲಗೂಡು: ಎ. ಮಂಜು- ಜೆಡಿಎಸ್
199. ಸಕಲೇಶಪುರ- ಸಿಮೆಂಟ್ ಮಂಜು- ಬಿಜೆಪಿ
ದಕ್ಷಿಣ ಕನ್ನಡ ಜಿಲ್ಲೆ: 8 ಕ್ಷೇತ್ರಗಳು; ಬಿಜೆಪಿ-6, ಕಾಂಗ್ರೆಸ್ 2
200. ಬೆಳ್ತಂಗಡಿ: ಹರೀಶ್ ಪೂಂಜಾ- ಬಿಜೆಪಿ
201. ಮೂಡುಬಿದಿರೆ: ಉಮಾನಾಥ ಕೋಟ್ಯಾನ್- ಬಿಜೆಪಿ
202. ಮಂಗಳೂರು ನಗರ ಉತ್ತರ- ವೈ ಭರತ್ ಶೆಟ್ಟಿ- ಬಿಜೆಪಿ
203. ಮಂಗಳೂರು ನಗರ ದಕ್ಷಿಣ- ವೇದವ್ಯಾಸ ಕಾಮತ್- ಬಿಜೆಪಿ
204. ಮಂಗಳೂರು: ಯು.ಟಿ. ಖಾದರ್- ಕಾಂಗ್ರೆಸ್
205. ಬಂಟ್ವಾಳ: ರಾಜೇಶ್ ನಾಯ್ಕ್- ಬಿಜೆಪಿ
206. ಪುತ್ತೂರು: ಅಶೋಕ್ ಕುಮಾರ್ ರೈ- ಕಾಂಗ್ರೆಸ್
207. ಸುಳ್ಯ: ಭಾಗೀರಥಿ ಮುರುಳ್ಯ- ಬಿಜೆಪಿ
ಮಡಿಕೇರಿ ಜಿಲ್ಲೆ: 2 ಕ್ಷೇತ್ರಗಳು: ಎರಡೂ ಕಾಂಗ್ರೆಸ್
208. ಮಡಿಕೇರಿ: ಡಾ. ಮಂಥರ್ ಗೌಡ- ಕಾಂಗ್ರೆಸ್
209. ವಿರಾಜಪೇಟೆ: ಎ.ಎಸ್. ಪೊನ್ನಣ್ಣ- ಕಾಂಗ್ರೆಸ್
ಮೈಸೂರು ಜಿಲ್ಲೆ: 11 ಕ್ಷೇತ್ರಗಳು: 8 ಕಾಂಗ್ರೆಸ್, 2 ಜೆಡಿಎಸ್, 1 ಬಿಜೆಪಿ
210. ಪಿರಿಯಾಪಟ್ಟಣ: ಕೆ.ವೆಂಕಟೇಶ್ -ಕಾಂಗ್ರೆಸ್
211. ಕೆ.ಆರ್. ನಗರ: ಡಿ. ರವಿಶಂಕರ್- ಕಾಂಗ್ರೆಸ್
212. ಹುಣಸೂರು: ಹರೀಶ್ ಗೌಡ- ಜೆಡಿಎಸ್
213. ಎಚ್.ಡಿ. ಕೋಟೆ: ಅನಿಲ್ ಕುಮಾರ್- ಕಾಂಗ್ರೆಸ್
214. ನಂಜನಗೂಡು: ದರ್ಶನ್ ಧ್ರುವನಾರಾಯಣ – ಕಾಂಗ್ರೆಸ್
215. ಚಾಮುಂಡೇಶ್ವರಿ: ಜಿ.ಟಿ. ದೇವೇಗೌಡ- ಜೆಡಿಎಸ್
216. ಕೃಷ್ಣರಾಜ: ಟಿ.ಎಸ್. ಶ್ರೀವತ್ಸ- ಬಿಜೆಪಿ
217. ಚಾಮರಾಜ: ಕೆ. ಹರೀಶ್ ಗೌಡ- ಕಾಂಗ್ರೆಸ್
218. ನರಸಿಂಹ ರಾಜ: ತನ್ವೀರ್ ಸೇಠ್- ಕಾಂಗ್ರೆಸ್
219. ವರುಣ: ಸಿದ್ದರಾಮಯ್ಯ- ಕಾಂಗ್ರೆಸ್
220. ಟಿ. ನರಸೀಪುರ: ಎಚ್.ಸಿ. ಮಹದೇವಪ್ಪ- ಕಾಂಗ್ರೆಸ್
ಚಾಮರಾಜನಗರ ಜಿಲ್ಲೆ: 5 ಸ್ಥಾನ: ಕಾಂಗ್ರೆಸ್-3, ಜೆಡಿಎಸ್-1
221. ಹನೂರು: ಮಂಜುನಾಥ್- ಜೆಡಿಎಸ್
222. ಕೊಳ್ಳೇಗಾಲ: ಎ.ಆರ್. ಕೃಷ್ಣಮೂರ್ತಿ- ಕಾಂಗ್ರೆಸ್
223. ಚಾಮರಾಜನಗರ: ಸಿ. ಪುಟ್ಟರಂಗ ಶೆಟ್ಟಿ-ಕಾಂಗ್ರೆಸ್
224. ಗುಂಡ್ಲುಪೇಟೆ: ಎಚ್.ಎಂ. ಗಣೇಶ್ ಪ್ರಸಾದ್- ಕಾಂಗ್ರೆಸ್
ಕರ್ನಾಟಕ
Leopard Attack: ಮಾಲೀಕನ ಕೊಲ್ಲಲು ಬಂದ ಚಿರತೆಯನ್ನು ಕೊಂಬಿನಿಂದ ತಿವಿದು ಓಡಿಸಿದ ಹಸು!
Leopard Attack: ಹಸು ಮೇಯಿಸುತ್ತಿದ್ದಾಗ ರೈತನ ಮೇಲೆ ಚಿರತೆ ದಾಳಿ ಮಾಡಲು ಬಂದಿದ್ದು, ಈ ವೇಳೆ ಹಸುವು ಕೊಂಬಿನಿಂದ ತಿವಿದು ಓಡಿಸಿದೆ. ಇದರಿಂದಾಗಿ ರೈತ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ/ರಾಮನಗರ: ರಾಜ್ಯದಲ್ಲಿ ಚಿರತೆ ದಾಳಿ (Leopard Attack) ಮುಂದುವರಿದಿದೆ. ದಾವಣಗೆರೆಯ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿಯ ಕೊಡಗೀಕೆರೆ ಗ್ರಾಮದಲ್ಲಿ ಹಸು ಮೇಯಿಸಲು ಹೋಗಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿದೆ. ಕರಿಹಾಲಪ್ಪ ಎಂಬುವವರು ಚಿರತೆ ದಾಳಿಗೆ ಒಳಗಾದವರು.
ಕರಿಹಾಲಪ್ಪ ಹಸು ಮೇಯಿಸಲು ಹೋದಾಗ ಹಿಂಬದಿಯಿಂದ ಚಿರತೆ ದಾಳಿ ಮಾಡಿ, ಬಳಿಕ ಅವರು ಸಾಕು ನಾಯಿ ಮೇಲೂ ಎರಗಿದೆ. ಇದಾದ ಬಳಿಕ ಹಸುವಿನ ಮೇಲೆ ಎರಗಲು ಹೋದಾಗ ಕೊಂಬಿನಿಂದ ತಿವಿದು ಚಿರತೆಯನ್ನು ಓಡಿಸಿದೆ. ಸದ್ಯ ರೈತ ಕರಿಹಾಲಪ್ಪ ಬೆನ್ನಿಗೆ ಸಣ್ಣ-ಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯವಾಗದೆ ಕರಿಹಾಲಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡ ಸುದ್ದಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕಕ್ಕೆ ಹೆಚ್ಚಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೆ.ಆರ್.ಸರ್ಕಲ್ ಅಂಡರ್ಪಾಸ್ ದುರಂತ; ಟೆಸ್ಟ್ ಮಾಡೋಕೆ ಟ್ಯಾಂಕರ್ನಲ್ಲಿ ನೀರು ಹರಿಸಿದರು!
ರಾಮನಗರದಲ್ಲೂ ಚಿರತೆ ಹಾವಳಿ
ರಾಮನಗರದ ದೊಡ್ಡಗಂಗವಾಡಿ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಿದೆ. ಚಿರತೆ ಹಸುವಿನ ಮೇಲೆ ದಾಳಿ ಮಾಡಿ ಬಲಿ ಪಡೆದಿದೆ. ರೈತ ಭದ್ರಯ್ಯ ಎಂಬುವವರಿಗೆ ಸೇರಿದ ಹಸು ಮೃತಪಟ್ಟಿದ್ದು, ಜೀವನಕ್ಕೆ ಆಸರೆಯಾಗಿದ್ದ ಹಸು ಕಳೆದುಕೊಂಡು ಕಂಗಾಲಾಗಿದ್ದಾರೆ. ಸರ್ಕಾರ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
MLC Election: ಕಾಂಗ್ರೆಸ್ ಸರ್ಕಾರಕ್ಕೆ 3ನೇ ಸವಾಲು: 3 ಪರಿಷತ್ ಸ್ಥಾನಕ್ಕೆ 19 ಆಕಾಂಕ್ಷಿಗಳು, ನಾಲ್ಕೈದು ಬಣಗಳು!
ಸದ್ಯ 34 ಸಚಿವರ ಪೈಕಿ ಬೋಸರಾಜು ಅವರು ವಿಧಾನಸಭೆ ಸದಸ್ಯರೂ ಅಲ್ಲ, ವಿಧಾನ ಪರಿಷತ್ ಸದಸ್ಯರೂ ಅಲ್ಲ. ಹಾಗಾಗಿ ಅವರನ್ನು ಆರು ತಿಂಗಳೊಳಗೆ ಕೆಳಮನೆ ಅಥವಾ ಮೇಲ್ಮನೆ ಸದಸ್ಯರನ್ನಾಗಿಸಬೇಕು.
ಬೆಂಗಳೂರು: ಈಗಷ್ಟೆ ಸಂಪುಟ ಸರ್ಕಸ್ ಮುಗಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಮೂರನೇ ಸವಾಲು ಎದುರಾಗಿದೆ. ವಿಧಾನಸಭೆಯಿಂದ ಆಯ್ಕೆ ಮಾಡಬೇಕಾದ ಮೂರು ವಿಧಾನ ಪರಿಷತ್ ಸ್ಥಾನಗಳನ್ನು ಭರ್ತಿ ಮಾಡಬೇಕಿದ್ದು, ಉಪಚುನಾವಣೆಗೆ ಈಗಾಗಲೆ ಆಕಾಂಕ್ಷಿಗಳ ಸಂಖ್ಯೆ ಬೆಳೆಯುತ್ತಲೇ ಸಾಗಿದೆ.
ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯ ಅನೇಕ ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡಿದ್ದರು. ಇದರಲ್ಲಿ, ವಿಧಾನ ಸಭೆಯಿಂದ ಆಯ್ಕೆ ಮಾಡಲಾಗಿದ್ದ ಲಕ್ಷ್ಮಣ ಸವದಿ, ಆರ್ ಶಂಕರ್, ಬಾಬುರಾವ್ ಚಿಂಚನಸೂರು ರಾಜೀನಾಮೆ ನೀಡಿದ್ದರು. ಲಕ್ಷ್ಮಣ ಸವದಿ ಹಾಗೂ ಬಾಬುರಾವ್ ಚಿಂಚನಸೂರು ಕಾಂಗ್ರೆಸ್ನಿಂದ ಸ್ಪರ್ಧಿಸಿದರೆ ಶಂಕರ್ ಪಕ್ಷೇತರರಾಗಿದ್ದರು. ಲಕ್ಷ್ಮಣ ಸವದಿ ಹೊರತುಪಡಿಸಿ ಇಬ್ಬರೂ ಸೋಲುಂಡರು. ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಜೂನ್ 30ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ.
ಮೂರೂ ಚುನಾವಣೆಗಳು ಒಟ್ಟಾಗಿ ನಡೆಯುತ್ತಿದೆಯಾದರೂ ಅವುಗಳು ಬೇರೆಬೇರೆ ಅವಧಿಯಲ್ಲಿ ಮುಕ್ತಾಯವಾಗುವ ಸ್ಥಾನಗಳಾದ್ಧರಿಂದ ಪ್ರತ್ಯೇಕ ಚುನಾವಣೆ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಮೂರಕ್ಕೆ ಮೂರೂ ಸ್ಥಾನಗಳು ಕಾಂಗ್ರೆಸ್ಗೇ ಸಿಗಲಿವೆ. ಈ ಮೂರು ಸ್ಥಾನಗಳಿಗೆ ಈಗಾಗಲೆ ಪೈಪೋಟಿ ಆರಂಭವಾಗಿದೆ. ಆದರೆ ಮೂರರಲ್ಲಿ ಒಂದು ಸ್ಥಾನ ಈಗಾಗಲೆ ನಿಗದಿಯಾಗಿರುವುದು ಮತ್ತಷ್ಟು ಒತ್ತಡ ಹೆಚ್ಚಿಸಿದೆ.
ಸದ್ಯ 34 ಸಚಿವರ ಪೈಕಿ ಬೋಸರಾಜು ಅವರು ವಿಧಾನಸಭೆ ಸದಸ್ಯರೂ ಅಲ್ಲ, ವಿಧಾನ ಪರಿಷತ್ ಸದಸ್ಯರೂ ಅಲ್ಲ. ಹಾಗಾಗಿ ಅವರನ್ನು ಆರು ತಿಂಗಳೊಳಗೆ ಕೆಳಮನೆ ಅಥವಾ ಮೇಲ್ಮನೆ ಸದಸ್ಯರನ್ನಾಗಿಸಬೇಕು. ಯಾವುದೇ ಸದಸ್ಯರನ್ನು ರಾಜೀನಾಮೆ ಕೊಡಿಸಿ ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವ ಸವಾಲನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುವುದು ಬಹುತೇಕ ಅಸಾಧ್ಯ. ಹಾಗಾಗು ಪರಿಷತ್ ಸದಸ್ಯರನ್ನಾಗಿ ನೇಮಿಸಬೇಕಾಗಿದೆ.
ಇನ್ನು ಎರಡು ಸ್ಥಾನಗಳಿಗೆ ಅನೇಕರು ಪ್ರಯತ್ನ ನಡೆಸಿದ್ದಾರೆ. ಇದರಲ್ಲಿಯೂ ಸಿದ್ದರಾಮಯ್ಯ ಬಣ, ಡಿ.ಕೆ. ಶಿವಕುಮಾರ್ ಬಣ, ಇನ್ನಿತರರ ಬಣ ಹಾಗೂ ಹೈಕಮಾಂಡ್ ಕೋಟಾ ಹೆಸರುಗಳು ಕೇಳಿಬರುತ್ತಿವೆ.
ಆಕಾಂಕ್ಷಿಗಳು ಹಾಗೂ ಕೋಟ
ಜಗದೀಶ್ ಶೆಟ್ಟರ್ – ಹೈಕಮಾಂಡ್
ಬಾಬುರಾವ್ ಚಿಂಚನಸೂರ – ಮಲ್ಲಿಕಾರ್ಜುನ ಖರ್ಗೆ
ಬಿಎಲ್ ಶಂಕರ್ – ಡಿ.ಕೆ. ಶಿವಕುಮಾರ್
ವಿ.ಆರ್ ಸುದರ್ಶನ್ – ಸಿದ್ದರಾಮಯ್ಯ
ವಿಜಯ್ ಮುಳಗುಂದ್ – ಡಿ.ಕೆ. ಶಿವಕುಮಾರ್
ವಿಶ್ವನಾಥ್ ಕನಕಪುರ – ಡಿ.ಕೆ. ಶಿವಕುಮಾರ್
ಉಮಾಶ್ರೀ – ಸಿದ್ದರಾಮಯ್ಯ
ರಾಮಪ್ಪ – ಸಿದ್ದರಾಮಯ್ಯ
ಕವಿತಾರೆಡ್ಡಿ – ಸಿದ್ದರಾಮಯ್ಯ
ನಾಗಲಕ್ಷ್ಕೀ ಚೌಧರಿ – ಸಿದ್ದರಾಮಯ್ಯ/ಪರಮೇಶ್ವರ್
ಅನಿಲ್ ಕುಮಾರ್ – ಲಿಂಗಾಯತ – ಎಂಬಿ ಪಾಟೀಲ್, ಈಶ್ವರ ಖಂಡ್ರೆ
ಪುಷ್ಪಲತಾ ಅಮರನಾಥ – ಸಿದ್ದರಾಮಯ್ಯ
ನಟರಾಜ ಗೌಡ – ಡಿ.ಕೆ. ಶಿವಕುಮಾರ್
ಐವನ್ ಡಿಸೋಜ – ಸಿದ್ದರಾಮಯ್ಯ
ಮೈಸೂರು ಲಕ್ಷ್ಮಣ್ – ಸಿದ್ದರಾಮಯ್ಯ
ಗಾಯಿತ್ರಿ ಶಾಂತೇಗೌಡ – ಸಿದ್ದರಾಮಯ್ಯ
ಮಂಜುಳ ಮಾನಸ – ಸಿದ್ದರಾಮಯ್ಯ
ಸಾದುಕೋಕಿಲಾ – ಡಿ.ಕೆ. ಶಿವಕುಮಾರ್
ಇದನ್ನೂ ಓದಿ: Congress Guarantee: ಇದು ಸರ್ಕಾರ, ಸರ್ಕಾರ ನಡೆಸೋದು ನಾವು: ಗ್ಯಾರಂಟಿ ಕಂಡೀಷನ್ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಉತ್ತರ
ಕರ್ನಾಟಕ
ಕೆ.ಆರ್.ಸರ್ಕಲ್ ಅಂಡರ್ಪಾಸ್ ದುರಂತ; ಟೆಸ್ಟ್ ಮಾಡೋಕೆ ಟ್ಯಾಂಕರ್ನಲ್ಲಿ ನೀರು ಹರಿಸಿದರು!
Bangalore Rain : ಕೆ.ಆರ್.ಸರ್ಕಲ್ ಅಂಡರ್ಪಾಸ್ ದುರಂತದ (KR circle Underpass) ಕುರಿತು ಲೋಕಾಯುಕ್ತ ಜ್ಯುಡಿಷಿಯಲ್ ವಿಂಗ್ ತನಿಖೆ ಕೈಗೊಂಡಿದೆ. ದುರಂತ ನಡೆದ ದಿನ ನೀರು ಯಾಕೆ ಸರಾಗವಾಗಿ ಹರಿದು ಹೋಗಿಲ್ಲ ಎಂದು ತಿಳಿಯಲು ಬುಧವಾರ ಟ್ಯಾಂಕರ್ನಲ್ಲಿ ನೀರು ಹರಿಸಿ ಪರೀಕ್ಷಿಸಲಾಯಿತು.
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಸಣ್ಣ ಮಳೆ ಸುರಿದರೂ ನಾನಾ ಅವಾಂತರವೇ ಸೃಷ್ಟಿ ಆಗುತ್ತದೆ. ಕಳೆದ ಮೇ 21 ರಂದು ಸುರಿದ ಭಾರಿ ಮಳೆಗೆ ಕೆ.ಆರ್.ಸರ್ಕಲ್ ಅಂಡರ್ಪಾಸ್ನಡಿ (KR Circle Underpass) ಸಿಲುಕಿ ಕಾರಿನಲ್ಲಿ ತೆರಳುತ್ತಿದ್ದ ಆಂಧ್ರಪ್ರದೇಶ ಮೂಲದ ಟೆಕ್ಕಿ ಭಾನು ರೇಖಾ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಂಡರ್ಪಾಸ್ ಪರಿಶೀಲನೆ ನಡೆಸಲು ಲೋಕಾಯುಕ್ತ ತಂಡ ಬುಧವಾರ (ಜೂ.7) ಭೇಟಿ ನೀಡಿದ್ದು, ನ್ಯೂನತೆಯನ್ನು ಕಂಡು ಹಿಡಿಯಲು ಟ್ಯಾಂಕರ್ನಲ್ಲಿ ನೀರು ಹರಿಸಿ ಪರೀಕ್ಷಿಸಿದರು.
ಭಾನು ರೇಖಾ ಸಾವು ಪ್ರಕರಣ ಸಂಬಂಧ ಉಪ ಲೋಕಾಯುಕ್ತರ ಸೂಚನೆ ಮೇರೆಗೆ ಲೋಕಾಯುಕ್ತ ಜ್ಯುಡಿಷಿಯಲ್ ವಿಂಗ್ (Lokayukta Judicial Wing) ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. 15 ದಿನಗಳಲ್ಲಿ ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ (ಜೂ. 7) ಲೋಕಾಯುಕ್ತ ಐಜಿಪಿ ಸುಬ್ರಮಣ್ಯೇಶ್ವರ ರಾವ್ ನೇತೃತ್ವದ ತನಿಖಾ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಅಂಡರ್ಪಾಸ್ ನಿರ್ವಹಣೆ ಸಂಬಂಧಿಸಿದಂತೆ ಎಂಜಿನಿಯರ್ಗಳಿಂದ ಮಾಹಿತಿ ಪಡೆದರು.
ರಾತ್ರೋ ರಾತ್ರಿ ಡ್ರೈನೇಜ್ ಸಿಸ್ಟಮ್ ಕ್ಲೀನ್ ಆ್ಯಂಡ್ ಕ್ಲಿಯರ್
ದುರಂತ ನಡೆದ ದಿನ ಯಾಕೆ ನೀರು ಸರಾಗವಾಗಿ ಹರಿದು ಹೋಗಿಲ್ಲ. ಅಲ್ಲಿ ಯಾವ ನ್ಯೂನತೆಗಳಿದ್ದವು ಎಂಬುದನ್ನು ಅರಿಯಲು ಲೋಕಾಯುಕ್ತ ಟೀಂ ಪರಿಶೀಲನೆ ನಡೆಸಿತು. ಇತ್ತ ಲೋಕಾಯುಕ್ತ ತನಿಖಾ ತಂಡ ಭೇಟಿ ನೀಡುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಗಳು ರಾತ್ರೋ ರಾತ್ರಿ ಅಂಡರ್ಪಾಸ್ ಡ್ರೈನೇಜ್ ಸಿಸ್ಟಮ್ ಕ್ಲೀನ್ ಮಾಡಿದ್ದರು. ಆದರೆ ಈ ಸಮಸ್ಯೆಯ ನಿಖರ ಕಾರಣ ತಿಳಿಯಲು ಲೋಕಾಯುಕ್ತ ಅಧಿಕಾರಿಗಳು ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ಎರಡು ಟ್ಯಾಂಕರ್ನಲ್ಲಿ ನೀರು ತರಿಸಿ ಹರಿಸಿ ಪರೀಕ್ಷೆ ಮಾಡಿದರು. ಈ ವೇಳೆ ಕೇವಲ ಎರಡು ಟ್ಯಾಂಕ್ನ ನೀರು ಸಹ ಡ್ರೈನೇಜ್ಗೆ ಸರಾಗವಾಗಿ ಹರಿದು ಹೋಗದೆ ಇರುವುದು ಕಂಡು ಬಂತು.
ಅಂಡರ್ಪಾಸ್ ನಿರ್ವಹಣೆಯಲ್ಲಿ ಯಾರ ಕರ್ತವ್ಯ ಲೋಪವಿದೆ ಎಂಬುದರ ಕುರಿತು ಸಹ ತನಿಖೆ ನಡೆಸಿದರು. ಈ ವೇಳೆ ಡ್ರೈನೇಜ್ಗೆ ನೀರು ಸರಾಗವಾಗಿ ಹರಿದು ಹೋಗುಲು ಅಂಡರ್ಪಾಸ್ ನಿರ್ವಹಣೆ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂಬುದು ಬೆಳಕಿಗೆ ಬಂದಿದೆ.
ಸದ್ಯ ಸ್ಥಳ ಪರಿಶೀಲನೆ ಹಾಗೂ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದು, ವಾರದೊಳಗೆ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ವರದಿ ಸಲ್ಲಿಸಲಿದ್ದಾರೆ.
ಏನಿದು ಘಟನೆ?
ಕಳೆದ ಮೇ 21ರಂದು ವಿಧಾನಸೌಧ ಸಮೀಪದ ಕೆ.ಆರ್. ಸರ್ಕಲ್ (KR Circle Underpass) ಬಳಿ ಇರುವ ಅಂಡರ್ಪಾಸ್ನಲ್ಲಿ ಮಳೆಗೆ ಕಾರೊಂದು ಸಿಕ್ಕಿ ಬಿದ್ದಿತ್ತು. ಅದರೊಳಗೆ ಸಿಲುಕಿ ಇನ್ಫೋಸಿಸ್ ಉದ್ಯೋಗಿ (Infosys employee) ಭಾನುರೇಖಾ (22) ಮೃತಪಟ್ಟಿದ್ದರು.
ಆಂಧ್ರ ಮೂಲದ ಭಾನುರೇಖಾ ಅವರ ಕುಟುಂಬಸ್ಥರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಒಂದೇ ಕುಟುಂಬದ ಒಟ್ಟು ಆರು ಮಂದಿ ಹಾಗೂ ಡ್ರೈವರ್ ಸೇರಿ ಏಳು ಜನರಿದ್ದರು. ಸಮಿತಾ (13), ಸೋಹಿತಾ (15), ಸಂಭ್ರಾಜ್ಯಂ (65), ಭಾನುರೇಖಾ (22) ಹರೀಶ್ ಸ್ವರೂಪ (47), ಸಂದೀಪ್ (35) ಕಾರಿನಲ್ಲಿದ್ದರು.
ಪ್ರವಾಸಕ್ಕೆಂದು ಆಂಧ್ರ ಪ್ರದೇಶದ ಆರು ಮಂದಿಯನ್ನೊಳಗೊಂಡ ಕುಟುಂಬದವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ನಗರದ ಹಲವು ಕಡೆ ಕಾರಿನಲ್ಲಿ ಪ್ರಯಾಣಿಸಿ, ಭಾರಿ ಮಳೆ ಕಾರಣಕ್ಕೆ ಮನೆ ಸೇರುವ ಧಾವಂತದಲ್ಲಿದ್ದರು. ಇತ್ತ ಕೆ.ಆರ್. ಸರ್ಕಲ್ ಬಳಿಯ ಅಂಡರ್ಪಾಸ್ನಲ್ಲಿ 7 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿತ್ತು. ಇದರ ಅರಿವು ಇರದೆ ಕಬ್ಬನ್ ಪಾರ್ಕ್ ಕಡೆಯಿಂದ ಬರುತ್ತಿದ್ದ ಕಾರು ಅಲ್ಲಿಗೆ ಹೋಗಿದ್ದರಿಂದ ಮಳೆ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿತ್ತು.
ಇದನ್ನೂ ಓದಿ: Weather Report: ಬಿಪರ್ಜಾಯ್ ಸೈಕ್ಲೋನ್ ಎಫೆಕ್ಟ್; ರಾಜ್ಯಾದ್ಯಂತ ಇನ್ನೂ 4 ದಿನ ಜಡಿ ಮಳೆ
ಕ್ಷಣ ಕ್ಷಣಕ್ಕೂ ಅಂಡರ್ಪಾಸ್ ಒಳಗೆ ನೀರು ಹೆಚ್ಚಾಗುತ್ತ ಹೋಯಿತು. ಎಂಜಿನ್ಗೆ ನೀರು ತುಂಬಿಕೊಂಡು ಬ್ಲಾಕ್ ಆಯಿತು. ನಂತರ ಕಾರು ರೀಸ್ಟಾರ್ಟ್ ಮಾಡಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲೇ ನೀರು ಕಾರಿನ ಡೋರ್ನ ಮಟ್ಟಕ್ಕೆ ಬಂದಿದ್ದು, ನಂತರ ಡೋರ್ ಬ್ಲಾಕ್ ಆಗಿ ತೆಗೆಯಲು ಕಷ್ಟವಾಯಿತು. ಈ ವೇಳೆ ಡ್ರೈವರ್ ಡೋರ್ ತೆಗೆದು ಒಬ್ಬೊಬ್ಬರನ್ನೇ ಕೆಳಗೆ ಇಳಿಸಲು ಪ್ರಯತ್ನಿಸಿದ್ದ. ಅಷ್ಟರಲ್ಲಾಗಲೇ ಒಳಗಡೆ ಇದ್ದ ಭಾನುರೇಖಾ ಸಾಕಷ್ಟು ನೀರು ಕುಡಿದು, ಪ್ರಜ್ಞೆ ಕಳೆದುಕೊಂಡಿದ್ದರು. ನಂತರ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಒಬ್ಬೊಬ್ಬರನ್ನೇ ರಕ್ಷಣೆ ಮಾಡಿದ್ದರು. ಆದರೆ ಭಾನುರೇಖಾ ಅವರನ್ನು ಪರೀಕ್ಷಿಸಿದ ಆಸ್ಪತ್ರೆ ವೈದ್ಯರು, ಅವರು ಮೃತಪಟ್ಟಿದ್ದನ್ನು ಖಚಿತಪಡಿಸಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Caste Census: ಮತ್ತೆ ಜಾತಿ ಹುತ್ತಕ್ಕೆ ಕೈಹಾಕಿದ ಸಿದ್ದರಾಮಯ್ಯ?: ಒಕ್ಕಲಿಗ- ವೀರಶೈವ ಲಿಂಗಾಯತರು ವಿರೋಧಿಸಿದ್ದ ವರದಿ ಸ್ವೀಕಾರ?
ಜಾತಿವಾರು ಸಮೀಕ್ಷೆಯಿಂದ ಜನರಿಗೆ ಒದಗಿಸಬೇಕಾದ ಸೌಲಭ್ಯಗಳು, ಮೊದಲಾದ ಅಂಶಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಅಗತ್ಯವಿರುವ ದತ್ತಾಂಶ ಲಭ್ಯವಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಈ ಹಿಂದೆ ಒಮ್ಮೆ ರಾಜ್ಯದಲ್ಲಿ ವಿವಾದಕ್ಕೀಡಾಗಿ ತಣ್ಣಗಾಗಿದ್ದ ವಿಚಾರವನ್ನು ಮತ್ತೆ ಕೈಗೆತ್ತಿಕೊಳ್ಳಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ತಮ್ಮ ಮೊದಲ ಅವಧಿಯಲ್ಲಿ ನಡೆಸಲಾದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು (ಜಾತಿ ಗಣತಿ) ಸ್ವೀಕರಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವರದಿಗೆ ರಾಜ್ಯದ ಎರಡು ಪ್ರಬಲ ಜಾತಿಗಳಾದ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಈ ಹಿಂದೆಯೇ ವಿರೋಧ ವ್ಯಕ್ತಪಡಿಸಿದ್ದವು.
ಕರ್ನಾಟಕ ಶೋಷಿತ ವರ್ಗಗಳ ಮಹಾಒಕ್ಕೂಟದ ನಿಯೋಗವನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ನಂತರ ಮಾತನಾಡಿದರು. ಹಿಂದಿನ ಬಾರಿ ತಮ್ಮ ಸರ್ಕಾರದ ಅವಧಿಯಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಳ್ಳಲಾದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಿ, ಅದರ ದತ್ತಾಂಶದ ಆಧಾರದಲ್ಲಿ ವಿವಿಧ ಸಮುದಾಯಗಳಿಗೆ ಅನುಕೂಲ ಕಲ್ಪಿಸಲಾಗುವುದು.
ಜಾತಿವಾರು ಸಮೀಕ್ಷೆಯಿಂದ ಜನರಿಗೆ ಒದಗಿಸಬೇಕಾದ ಸೌಲಭ್ಯಗಳು, (preferential treatment) ಮೊದಲಾದ ಅಂಶಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಅಗತ್ಯವಿರುವ ದತ್ತಾಂಶ ಲಭ್ಯವಾಗುವುದು. ಮೀಸಲಾತಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ವೈಜ್ಞಾನಿಕ ಹಾಗೂ ನಿಖರ ಮಾಹಿತಿ ಅತಿ ಅಗತ್ಯ. ಈ ಉದ್ದೇಶದಿಂದ ಜಾತಿವಾರು ಸಮೀಕ್ಷೆಯನ್ನು ನಡೆಸಲಾಗಿತ್ತು. ಇದೀಗ ವರದಿಯನ್ನು ಸ್ವೀಕರಿಸಿ, ಅದರಲ್ಲಿನ ದತ್ತಾಂಶಗಳ ಆಧಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಜೆಪಿ ಸರ್ಕಾರವು ಮೀಸಲಾತಿಯಲ್ಲಿ ಸೃಷ್ಟಿಸಿದ ಗೊಂದಲ ನಿವಾರಣೆ ಮಾಡಲಾಗುವುದು. ಇಲ್ಲವಾದರೆ ಯಾರಿಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗದು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಿಯೋಗದಲ್ಲಿ ಒಕ್ಕೂಟದ ಮುಖಂಡರಾದ ಕೆ.ಎಂ.ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಮಾವಳ್ಳಿ ಶಂಕರ್, ಪ್ರೊ.ರವಿ ವರ್ಮಕುಮಾರ್, ಅನಂತ್ ನಾಯಕ್, ಡಾ.ನರಸಿಂಹಯ್ಯ, ಪ್ರೊ.ಜಾಫೆಟ್, ಬಿ.ಟಿ.ಲಲಿತಾನಾಯಕ್, ಜಿ.ಎಸ್.ಪಾಟೀಲ್ ಸೇರಿ 150 ಕ್ಕೂ ಹೆಚ್ಚು ಮಂದಿ ನಾನಾ ಜಾತಿಗಳ ಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.
ಸಮುದಾಯಗಳ ವಿರೋಧ:
ಜಾತಿ ಗಣತಿ ಎಂದೇ ಪ್ರಸಿದ್ಧವಾದ ವರದಿಯನ್ನು ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲೇ ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾಗಿತ್ತು. ವರದಿ ಸಿದ್ಧವಾಗಿದ್ದರೂ ಸರ್ಕಾರ ಅದನ್ನು ಸ್ವೀಕರಿಸಿಲ್ಲ ಹಾಗೂ ಸದನದಲ್ಲಿ ಮಂಡಿಸಿಲ್ಲ. ಹಾಗಾಗಿ ಗಣತಿಯ ಯಾವುದೇ ಅಂಶಗಳು ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ ಅನೇಕ ಸಂದರ್ಭದಲ್ಲಿ ಈ ಬಗ್ಗೆ ವಿವಿಧ ಮಾಹಿತಿಗಳು ʼಸೋರಿಕೆ ಆಗಿವೆʼ ಎನ್ನಲಾಗುತ್ತಿದೆ. ಅದರ ಪ್ರಕಾರ ರಾಜ್ಯದಲ್ಲಿ ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತ ಸಮುದಾಯಗಳ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬ ಆತಂಕ ಸಮುದಾಯಗಳ ಸಂಘಟನೆಗಳಲ್ಲಿದೆ. ವೀರಶೈವ ಲಿಂಗಾಯತರು ಹಾಗೂ ಒಕ್ಕಲಿಗರು 1.5 ಕೋಟಿಗೂ ಹೆಚ್ಚಿದ್ದಾರೆ. ಆದರೆ ಜಾತಿ ಗಣತಿಯಲ್ಲಿ ಎರಡೂ ಸಮುದಾಯಗಳನ್ನು ಒಂದು ತಲಾ ಒಂದು ಕೋಟಿಗಿಂತ ಕಡಿಮೆ ತೋರಿಸಲಾಗಿದೆ. ಈ ವರದಿಯನ್ನು ಸರ್ಕಾರ ಸ್ವೀಕರಿಸಬಾರದು ಎಂದು ವೀರಶೈವ ಲಿಂಗಾಯತ ಮಹಾಸಭಾ ಸಹ ಆಗ್ರಹಿಸಿತ್ತು.
ಎರಡು ವರ್ಷದ ಹಿಂದೆಯೂ ಈ ಕುರಿತು ಚರ್ಚೆ ನಡೆದಾಗ, ವರದಿ ಸ್ವೀಕರಿಸಲು ಸಿದ್ದರಾಮಯ್ಯ ಒಲವು ತೋರಿದ್ದರು. ಆದರೆ ಡಿ.ಕೆ. ಶಿವಕುಮಾರ್ ಭಿನ್ನ ನಿಲುವು ವ್ಯಕ್ತಪಡಿಸಿದ್ದರು. ಈ ಬಗ್ಗೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿಕೊಳ್ಳಲು ವೀರಪ್ಪ ಮೊಯ್ಲಿ ಅವರ ಸಮಿತಿ ರಚಿಸಲಾಗಿತ್ತು. ವಿಧಾನಸಭೆ ಚುನಾವಣೆಗೆ ಘೋಷಣೆ ಮಾಡಿದ್ದ ಪ್ರಣಾಳಿಕೆಯಲ್ಲಿ, ಜಾತಿ ಗಣತಿ ವರದಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಕಾಂಗ್ರೆಸ್ ಪಕ್ಷ ತಿಳಿಸಿತ್ತು. ಆದರೆ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಕುರಿತೇ ಹೆಚ್ಚು ಚರ್ಚೆ ಆಗಿದ್ದರಿಂದ ಜಾತಿ ಗಣತಿ ವರದಿ ಕುರಿತು ಚರ್ಚೆಗಳು ನಡೆದಿರಲಿಲ್ಲ. ಕಾಂಗ್ರೆಸ್ ಪಕ್ಷದೊಳಗೆ ಈ ಕುರಿತು ಯಾವ ಅಭಿಪ್ರಾಯಗಳಿವೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇದೀಗ ವರದಿ ಸ್ವೀಕರಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿರುವುದರಿಂದ ಮುಂದೆ ಯಾವ ರೀತಿ ಚರ್ಚೆಗಳು ನಡೆಯುತ್ತವೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: Bihar Caste Survey: ಬಿಹಾರದಲ್ಲಿ ಜಾತಿ ಸಮೀಕ್ಷೆಗೆ ನೀಡಿದ ತಡೆಯಾಜ್ಞೆ ತೆರವಿಗೆ ಸುಪ್ರೀಂ ನಕಾರ; ನಿತೀಶ್ಗೆ ಹಿನ್ನಡೆ
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ9 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ11 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಅಂಕಣ22 hours ago
ವಿಧಾನಸೌಧ ರೌಂಡ್ಸ್: ರೌಂಡ್ ಟೇಬಲ್ ಸ್ನೇಹಿತರು ಮತ್ತು ವಿಧಾನಸೌಧದಲ್ಲಿ ಬದಲಾಗದ 40 % ಬ್ರಾಂಡ್!
-
ಕರ್ನಾಟಕ23 hours ago
Fraud Case: ಬೆಳದಿಂಗಳ ಬಾಲೆಯ ಮೋಹಕ್ಕೆ ಬಿದ್ದರೇ ಸ್ವಾಮೀಜಿ? 35 ಲಕ್ಷ ರೂಪಾಯಿ ದೋಖಾ!
-
ಉತ್ತರ ಕನ್ನಡ19 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ23 hours ago
PhonePe : ಸುಲಭ ಸಾಲ, ಹಣಕಾಸು, ವಿಮೆ ಪಡೆಯಲು ಫೋನ್ಪೇಯಿಂದ ಹೊಸ ಅಗ್ರಿಗೇಟರ್ ಸರ್ವೀಸ್, ಏನಿದು?
-
ಪ್ರಮುಖ ಸುದ್ದಿ15 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!