karnataka-election-results-2023-full details of all 224 winners in Karnataka assembly election  Karnataka Election results 2023: ‌ ಎಲ್ಲ 224 ನೂತನ ಶಾಸಕರ ಫುಲ್‌ ಡಿಟೇಲ್‌; ಯಾವ ಜಿಲ್ಲೆಯಲ್ಲಿ ಯಾರ ಮೇಲುಗೈ? - Vistara News

ಪ್ರಮುಖ ಸುದ್ದಿ

Karnataka Election results 2023: ‌ ಎಲ್ಲ 224 ನೂತನ ಶಾಸಕರ ಫುಲ್‌ ಡಿಟೇಲ್‌; ಯಾವ ಜಿಲ್ಲೆಯಲ್ಲಿ ಯಾರ ಮೇಲುಗೈ?

Election results: ರಾಜ್ಯ ವಿಧಾನಸಭೆ ಚುನಾವಣೆಯ 224 ಕ್ಷೇತ್ರಗಳಲ್ಲಿ ಗೆದ್ದ ಎಲ್ಲ ಅಭ್ಯರ್ಥಿಗಳ ಪೂರ್ಣ ಮಾಹಿತಿ ಇಲ್ಲಿದೆ. ಜಿಲ್ಲಾವಾರು ಬಲಾಬಲವೂ ಇದೆ. ಕಾಂಗ್ರೆಸ್‌ 135 ಕ್ಷೇತ್ರಗಳಲ್ಲಿ, ಬಿಜೆಪಿ 66ರಲ್ಲಿ, ಜೆಡಿಎಸ್‌ 19 ಮತ್ತು ಇತರರು ನಾಲ್ಕು ಕಡೆ ಗೆದ್ದಿದ್ದಾರೆ.

VISTARANEWS.COM


on

Karnataka Election results: winners list
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ ಜಿಲ್ಲೆ : 18 ಕ್ಷೇತ್ರಗಳು: 11 ಕಾಂಗ್ರೆಸ್‌- 7 ಬಿಜೆಪಿ

1.ನಿಪ್ಪಾಣಿ: ಶಶಿಕಲಾ ಜೊಲ್ಲೆ- ಬಿಜೆಪಿ
2. ಚಿಕ್ಕೋಡಿ ಸದಲಗ: ಗಣೇಶ್‌ ಹುಕ್ಕೇರಿ- ಕಾಂಗ್ರೆಸ್‌
3. ಅಥಣಿ: ಲಕ್ಷ್ಮಣ ಸವದಿ- ಕಾಂಗ್ರೆಸ್‌
4. ಕಾಗವಾಡ: ಭರಮಗೌಡ ಆಲಗೌಡ ಕಾಗೆ- ಕಾಂಗ್ರೆಸ್‌
5. ಕುಡಚಿ: ಮಹೇಂದ್ರ ಕೆ. ತಮ್ಮಣ್ಣನವರ್‌- ಕಾಂಗ್ರೆಸ್‌
6. ರಾಯಭಾಗ: ದುರ್ಯೋಧನ ಐಹೊಳೆ-ಬಿಜೆಪಿ
7. ಹುಕ್ಕೇರಿ: ನಿಖಿಲ್‌ ಕತ್ತಿ-ಬಿಜೆಪಿ
8. ಅರಭಾವಿ: ಬಾಲಚಂದ್ರ ಜಾರಕಿಹೊಳಿ-ಬಿಜೆಪಿ
9. ಗೋಕಾಕ: ರಮೇಶ್‌ ಜಾರಕಿಹೊಳಿ- ಬಿಜೆಪಿ
10. ಯಮಕನಮರಡಿ: ಸತೀಶ್‌ ಜಾರಕಿಹೊಳಿ- ಕಾಂಗ್ರೆಸ್‌
11. ಬೆಳಗಾವಿ ಉತ್ತರ: ಆಸಿಫ್‌ ಸೇಠ್‌- ಕಾಂಗ್ರೆಸ್‌
12. ಬೆಳಗಾವಿ ದಕ್ಷಿಣ: ಅಭಯ್‌ ಪಾಟೀಲ್‌- ಬಿಜೆಪಿ
13. ಬೆಳಗಾವಿ ಗ್ರಾ.: ಲಕ್ಷ್ಮೀ ಹೆಬ್ಬಾಳ್ಕರ್‌- ಕಾಂಗ್ರೆಸ್‌
14. ಖಾನಾಪುರ: ವಿಠಲ್‌ ಹಲಗೇಕರ್‌- ಬಿಜೆಪಿ
15. ಕಿತ್ತೂರು: ಬಾಬಾಸಾಹೇಬ್‌ ಡಿ. ಪಾಟೀಲ್‌- ಕಾಂಗ್ರೆಸ್‌
16. ಬೈಲಹೊಂಗಲ: ಮಹಾಂತೇಶ್‌ ಶಿವಾನಂದ ಕೌಜಲಗಿ- ಕಾಂಗ್ರೆಸ್‌
17. ಸವದತ್ತಿ: ವಿಶ್ವಾಸ್‌ ವಸಂತ್‌ ವೈದ್ಯ-ಕಾಂಗ್ರೆಸ್‌
18. ರಾಮದುರ್ಗ: ಅಶೋಕ್‌ ಎಂ. ಪಟ್ಟಣ್‌- ಕಾಂಗ್ರೆಸ್‌

ಬಾಗಲಕೋಟೆ ಜಿಲ್ಲೆ: ಏಳು ಕ್ಷೇತ್ರಗಳು: ಕಾಂಗ್ರೆಸ್‌-5, ಬಿಜೆಪಿ-2

19. ಮುಧೋಳ: ಆರ್‌.ಬಿ. ತಿಮ್ಮಾಪುರ-ಕಾಂಗ್ರೆಸ್‌
20. ತೇರದಾಳ: ಸಿದ್ದು ಸವದಿ- ಬಿಜೆಪಿ
21. ಜಮಖಂಡಿ: ಜಗದೀಶ್‌ ಗುಡಗಂಟಿ- ಬಿಜೆಪಿ
22. ಬೀಳಗಿ: ಜೆ.ಟಿ. ಪಾಟೀಲ್‌- ಕಾಂಗ್ರೆಸ್‌
23. ಬಾದಾಮಿ: ಬಿ.ಬಿ. ಚಿಮ್ಮನಕಟ್ಟಿ-ಕಾಂಗ್ರೆಸ್‌
24. ಬಾಗಲಕೋಟೆ: ಎಚ್‌.ವೈ. ಮೇಟಿ- ಕಾಂಗ್ರೆಸ್‌
25. ಹುನಗುಂದ- ವಿಜಯಾನಂದ ಕಾಶಪ್ಪನವರ್‌- ಕಾಂಗ್ರೆಸ್‌

ವಿಜಯಪುರ ಜಿಲ್ಲೆ: 8 ಕ್ಷೇತ್ರಗಳು: ಕಾಂಗ್ರೆಸ್‌-6, ಬಿಜೆಪಿ-1, ಜೆಡಿಎಸ್‌-1

26. ಮುದ್ದೇಬಿಹಾಳ- ಅಪ್ಪಾಜಿ ನಾಡಗೌಡ- ಕಾಂಗ್ರೆಸ್‌
27. ದೇವರಹಿಪ್ಪರಗಿ- ರಾಜುಗೌಡ ಪಾಟೀಲ್‌- ಜೆಡಿಎಸ್‌
28. ಬಸವನ ಬಾಗೇವಾಡಿ- ಶಿವಾನಂದ ಪಾಟೀಲ್‌- ಕಾಂಗ್ರೆಸ್‌
29. ಬಬಲೇಶ್ವರ- ಎಂ.ಬಿ. ಪಾಟೀಲ್‌- ಕಾಂಗ್ರೆಸ್‌
30. ವಿಜಯಪುರ ನಗರ: ಬಸನಗೌಡ ಪಾಟೀಲ್‌ ಯತ್ನಾಳ್‌-ಬಿಜೆಪಿ
31. ನಾಗಠಾಣ- ವಿಠಲ್‌ ಕಾಕಟಧೋಂದ್‌- ಕಾಂಗ್ರೆಸ್‌
32. ಇಂಡಿ- ಯಶ್ವಂತ್‌ ಗೌಡ ಪಾಟೀಲ್‌-ಕಾಂಗ್ರೆಸ್‌
33. ಸಿಂದಗಿ- ಅಶೋಕ್‌ ಎಂ. ಮನಗೂಳಿ- ಕಾಂಗ್ರೆಸ್‌

ಯಾದಗಿರಿ ಜಿಲ್ಲೆ: 4 ಕ್ಷೇತ್ರಗಳು: ಕಾಂಗ್ರೆಸ್‌-3, ಜೆಡಿಎಸ್‌-1

34. ಶೋರಾಪುರ- ರಾಜಾ ವೆಂಕಟಪ್ಪ ನಾಯಕ್‌-ಕಾಂಗ್ರೆಸ್‌
35. ಶಹಾಪುರ- ಶರಣಬಸಪ್ಪ ಗೌಡ- ಕಾಂಗ್ರೆಸ್‌
36. ಯಾದಗಿರಿ- ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು- ಕಾಂಗ್ರೆಸ್‌
37. ಗುರುಮಿಠಕಲ್‌ – ಶರಣ್‌ಗೌಡ- ಜೆಡಿಎಸ್‌

ಕಲಬುರಗಿ ಜಿಲ್ಲೆ: 9 ಕ್ಷೇತ್ರಗಳು: 7 ಕಾಂಗ್ರೆಸ್‌, 2 ಬಿಜೆಪಿ

38. ಅಫ್ಜಲ್‌ಪುರ- ಎಂ.ವೈ ಪಾಟೀಲ್‌- ಕಾಂಗ್ರೆಸ್‌
39. ಜೇವರ್ಗಿ: ಡಾ. ಅಜಯ್‌ ಧರ್ಮ ಸಿಂಗ್‌- ಕಾಂಗ್ರೆಸ್‌
40. ಚಿತ್ತಾಪುರ- ಪ್ರಿಯಾಂಕ್‌ ಖರ್ಗೆ- ಕಾಂಗ್ರೆಸ್‌
41. ಸೇಡಂ- ಡಾ. ಶರಣ್‌ ಪ್ರಕಾಶ್‌ ಪಾಟೀಲ್‌- ಕಾಂಗ್ರೆಸ್‌
42. ಚಿಂಚೋಳಿ: ಡಾ. ಅವಿನಾಶ್‌ ಜಾಧವ್‌- ಬಿಜೆಪಿ
43. ಕಲಬುರಗಿ ಗ್ರಾ. – ಬಸವರಾಜ ಮತ್ತಿಮೋಡ- ಬಿಜೆಪಿ
44. ಕಲಬುರಗಿ ದಕ್ಷಿಣ- ಅಲ್ಲಮಪ್ರಭು ಪಾಟೀಲ್‌- ಕಾಂಗ್ರೆಸ್‌
45. ಕಲಬುರಗಿ ಉತ್ತರ- ಖನೀಜಾ ಫಾತಿಮಾ- ಕಾಂಗ್ರೆಸ್‌
46. ಆಳಂದ; ಬಿಆರ್‌ ಪಾಟೀಲ್‌-ಕಾಂಗ್ರೆಸ್‌

ಬೀದರ್‌ ಜಿಲ್ಲೆ: 6 ಕ್ಷೇತ್ರಗಳು: 3 ಬಿಜೆಪಿ, 3 ಕಾಂಗ್ರೆಸ್‌

47. ಬಸವಕಲ್ಯಾಣ: ಶರಣು ಸಲಗರ- ಬಿಜೆಪಿ
48. ಹುಮನಾಬಾದ್‌: ಸಿದ್ದುಪಾಟೀಲ್‌- ಬಿಜೆಪಿ
49. ಬೀದರ್‌ ದಕ್ಷಿಣ: ಅಶೋಕ್‌ ಖೇಣಿ- ಕಾಂಗ್ರೆಸ್‌
50. ಬೀದರ್‌- ರಹೀಂ ಖಾನ್‌- ಕಾಂಗ್ರೆಸ್‌
51. ಭಾಲ್ಕಿ- ಈಶ್ವರ್‌ ಖಂಡ್ರೆ- ಕಾಂಗ್ರೆಸ್‌
52. ಔರಾದ್‌- ಪ್ರಭು ಚೌಹಾಣ್‌- ಬಿಜೆಪಿ

ರಾಯಚೂರು ಜಿಲ್ಲೆ: 7 ಕ್ಷೇತ್ರಗಳು: 4 ಕಾಂಗ್ರೆಸ್‌, 3 ಬಿಜೆಪಿ

53. ರಾಯಚೂರು ಗ್ರಾ.: ಬಸನಗೌಡ ದದ್ದಲ್‌-ಕಾಂಗ್ರೆಸ್‌
54. ರಾಯಚೂರು ನಗರ: ಡಾ. ಶಿವರಾಜ್‌ ಪಾಟೀಲ್‌- ಬಿಜೆಪಿ
55. ಮಾನ್ವಿ- ಹಂಪಯ್ಯ ನಾಯ್ಕ್‌- ಕಾಂಗ್ರೆಸ್‌
56. ದೇವದುರ್ಗ: ಕರೆಮ್ಮ ಜಿ. ನಾಯಕ್‌-ಬಿಜೆಪಿ
57. ಲಿಂಗಸುಗೂರು: ಮಾನಪ್ಪ ಡಿ. ವಜ್ಜಲ್‌- ಬಿಜೆಪಿ
58. ಸಿಂಧನೂರು: ಹಂಪನ ಗೌಡ ಬಾದ್ರಾಲಿ- ಕಾಂಗ್ರೆಸ್‌
59. ಮಸ್ಕಿ: ಬಸವಗೌಡ ತುರುವೀಹಾಳ_ ಕಾಂಗ್ರೆಸ್‌

ಕೊಪ್ಪಳ ಜಿಲ್ಲೆ: 5 ಕ್ಷೇತ್ರ, 3 ಕಾಂಗ್ರೆಸ್‌, 1 ಬಿಜೆಪಿ, 1 ಕೆ.ಆರ್‌ಪಿಪಿ

60. ಕುಷ್ಟಗಿ: ದೊಡ್ಡನಗೌಡ ಪಾಟೀಲ್‌- ಬಿಜೆಪಿ
61. ಕನಕಗಿರಿ: ಶಿವರಾಜ ತಂಗಡಗಿ- ಕಾಂಗ್ರೆಸ್‌
62. ಗಂಗಾವತಿ: ಜನಾರ್ದನ ರೆಡ್ಡಿ- ಕೆಆರ್‌ಪಿಪಿ
63. ಯಲಬುರ್ಗಾ: ಬಸವರಾಜ ರಾಯರೆಡ್ಡಿ-ಕಾಂಗ್ರೆಸ್‌
64. ಕೊಪ್ಪಳ: ಕೆ. ರಾಘವೇಂದ್ರ- ಕಾಂಗ್ರೆಸ್‌

ಗದಗ ಜಿಲ್ಲೆ: 4 ಕ್ಷೇತ್ರ; ಬಿಜೆಪಿ -2, ಕಾಂಗ್ರೆಸ್‌-2

65. ಶಿರಹಟ್ಟಿ: ಡಾ. ಚಂದ್ರ ಲಮಾಣಿ- ಬಿಜೆಪಿ
66. ಗದಗ: ಎಚ್‌.ಕೆ. ಪಾಟೀಲ್‌-ಕಾಂಗ್ರೆಸ್‌
67. ರೋಣ: ಜಿಎಸ್‌. ಪಾಟೀಲ್‌- ಕಾಂಗ್ರೆಸ್‌
68. ನರಗುಂದ- ಸಿ.ಸಿ. ಪಾಟೀಲ್‌- ಬಿಜೆಪಿ

ಧಾರವಾಡ ಜಿಲ್ಲೆ: 7 ಕ್ಷೇತ್ರ; 4 ಕಾಂಗ್ರೆಸ್‌, 3 ಬಿಜೆಪಿ

69. ನವಲಗುಂದ- ಕೋನ ರೆಡ್ಡಿ-ಕಾಂಗ್ರೆಸ್‌
70. ಕುಂದಗೋಳ:ಎಂ.ಆರ್‌. ಪಾಟೀಲ್‌- ಬಿಜೆಪಿ
71. ಧಾರವಾಡ- ವಿನಯ ಕುಲಕರ್ಣಿ- ಕಾಂಗ್ರೆಸ್‌
72. ಹುಬ್ಬಳ್ಳಿ- ಧಾರವಾಡ ಪೂರ್ವ: ಪ್ರಸಾದ್‌ ಅಬ್ಬಯ್ಯ- ಕಾಂಗ್ರೆಸ್‌
73. ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌- ಮಹೇಶ್‌ ಟೆಂಗಿನಕಾಯಿ- ಬಿಜೆಪಿ
74. ಹುಬ್ಬಳ್ಳಿ- ಧಾರವಾಡ ಪಶ್ಚಿಮ- ಅರವಿಂದ ಬೆಲ್ಲದ್‌- ಬಿಜೆಪಿ
75. ಕಲಘಟಗಿ- ಸಂತೋಷ್‌ ಲಾಡ್‌- ಕಾಂಗ್ರೆಸ್‌

ಉತ್ತರ ಕನ್ನಡ ಜಿಲ್ಲೆ: 6 ಕ್ಷೇತ್ರಗಳು; 4 ಕಾಂಗ್ರೆಸ್‌, 2 ಬಿಜೆಪಿ

76. ಹಳಿಯಾಳ: ಆರ್‌.ವಿ. ದೇಶಪಾಂಡೆ- ಕಾಂಗ್ರೆಸ್‌
77. ಕಾರವಾರ- ಸತೀಶ್‌ ಸೈಲ್‌- ಕಾಂಗ್ರೆಸ್‌
78, ಕುಮಟಾ: ದಿನಕರ ಶೆಟ್ಟಿ- ಬಿಜೆಪಿ
79. ಭಟ್ಕಳ: ಮಾಂಕಾಳ್‌ ವೈದ್ಯ- ಕಾಂಗ್ರೆಸ್‌
80. ಶಿರಸಿ: ಭೀಮಣ್ಣ ನಾಯಕ್‌- ಕಾಂಗ್ರೆಸ್‌
81. ಯಲ್ಲಾಪುರ: ಶಿವರಾಮ ಹೆಬ್ಬಾರ್‌- ಬಿಜೆಪಿ

ಹಾವೇರಿ ಜಿಲ್ಲೆ: 6 ಕ್ಷೇತ್ರಗಳು; 5 ಕಾಂಗ್ರೆಸ್‌, ಬಿಜೆಪಿ 1

82. ಹಾನಗಲ್‌: ಶ್ರೀನಿವಾಸ್‌ ವಿ. ಮಾನೆ- ಕಾಂಗ್ರೆಸ್‌
83. ಶಿಗ್ಗಾಂವಿ: ಬಸವರಾಜ ಬೊಮ್ಮಾಯಿ- ಬಿಜೆಪಿ
84. ಹಾವೇರಿ: ರುದ್ರಪ್ಪ ಲಮಾಣಿ-ಕಾಂಗ್ರೆಸ್‌
85. ಬ್ಯಾಡಗಿ: ಬಸವರಾಜ ಎನ್‌. ಶಿವಣ್ಣನರ್‌- ಕಾಂಗ್ರೆಸ್‌
86. ಹಿರೇಕೆರೂರ್‌- ಯು.ಬಿ. ಬಣಕಾರ್‌- ಕಾಂಗ್ರೆಸ್‌
87. ರಾಣೆಬೆನ್ನೂರು: ಪ್ರಕಾಶ್‌ ಕೆ. ಕೋಳಿವಾಡ: ಕಾಂಗ್ರೆಸ್‌

ವಿಜಯ ನಗರ ಜಿಲ್ಲೆ: 5 ಕ್ಷೇತ್ರ; 2 ಕಾಂಗ್ರೆಸ್‌, 1 ಬಿಜೆಪಿ, 1 ಜೆಡಿಎಸ್‌, 1 ಪಕ್ಷೇತರ

88. ಹಡಗಲಿ: ಕೃಷ್ಣ ನಾಯಕ- ಬಿಜೆಪಿ
89. ಹಗರಿ ಬೊಮ್ಮನಹಳ್ಳಿ: ನೇಮಿರಾಜ ನಾಯಕ್‌- ಜೆಡಿಎಸ್‌
90. ವಿಜಯನಗರ: ಎಚ್‌.ಆರ್‌. ಗವಿಯಪ್ಪ-ಕಾಂಗ್ರೆಸ್‌
96. ಕೂಡ್ಲಿಗಿ: ಡಾ. ಶ್ರೀನಿವಾಸ್‌ ಎನ್‌.ಟಿ- ಕಾಂಗ್ರೆಸ್‌
104. ಹರಪನಹಳ್ಳಿ: ಲತಾ ಮಲ್ಲಿಕಾರ್ಜುನ – ಪಕ್ಷೇತರ

ಬಳ್ಳಾರಿ ಜಿಲ್ಲೆ: 5 ಕ್ಷೇತ್ರ; ಎಲ್ಲವೂ ಕಾಂಗ್ರೆಸ್‌

91. ಕಂಪ್ಲಿ: ಜೆ.ಎನ್‌. ಗಣೇಶ್‌- ಕಾಂಗ್ರೆಸ್‌
92. ಸಿರಗುಪ್ಪ: ಎಂ.ಬಿ. ನಾಗರಾಜ್‌-ಕಾಂಗ್ರೆಸ್‌
93. ಬಳ್ಳಾರಿ: ಬಿ. ನಾಗೇಂದ್ರ- ಕಾಂಗ್ರೆಸ್‌
94. ಬಳ್ಳಾರಿ ನಗರ: ನಾರಾ ಭರತ್‌ ರೆಡ್ಡಿ- ಕಾಂಗ್ರೆಸ್‌
95. ಸಂಡೂರು: ವಿ. ತುಕಾರಾಮ್‌-ಕಾಂಗ್ರೆಸ್‌

ದಾವಣಗೆರೆ ಜಿಲ್ಲೆ: 6 ಕ್ಷೇತ್ರ; 5 ಕಾಂಗ್ರೆಸ್‌, 1 ಬಿಜೆಪಿ

97. ಮೊಳಕಾಲ್ಮುರು: ಎನ್‌.ವೈ. ಗೋಪಾಲಕೃಷ್ಣ- ಕಾಂಗ್ರೆಸ್‌
98.ಚಳ್ಳಕೆರೆ: ಟಿ.ರಘುಮೂರ್ತಿ- ಕಾಂಗ್ರೆಸ್‌
99. ಚಿತ್ರದುರ್ಗ: ಕೆ.ಸಿ. ವೀರೇಂದ್ರ- ಕಾಂಗ್ರೆಸ್‌
100. ಹಿರಿಯೂರು: ಡಿ. ಸುಧಾಕರ್‌- ಕಾಂಗ್ರೆಸ್‌
101. ಹೊಸದುರ್ಗ: ಗೋವಿಂದಪ್ಪ ಬಿ.ಜಿ- ಕಾಂಗ್ರೆಸ್‌
102. ಹೊಳಲ್ಕೆರೆ: ಎಂ.ಚಂದ್ರಪ್ಪ- ಬಿಜೆಪಿ

ದಾವಣಗೆರೆ ಜಿಲ್ಲೆ: 7 ಕ್ಷೇತ್ರ; 6 ಕಾಂಗ್ರೆಸ್‌, 1 ಬಿಜೆಪಿ

103. ಜಗಳೂರು: ದೇವೇಂದ್ರಪ್ಪ-ಕಾಂಗ್ರೆಸ್‌
105. ಹರಿಹರ: ಬಿ.ಪಿ. ಹರೀಶ್‌- ಬಿಜೆಪಿ
106. ದಾವಣಗೆರೆ ಉತ್ತರ: ಎಸ್‌.ಎಸ್‌. ಮಲ್ಲಿಕಾರ್ಜುನ್‌-ಕಾಂಗ್ರೆಸ್‌
10.7: ದಾವಣಗೆರೆ ದಕ್ಷಿಣ: ಶಾಮನೂರು ಶಿವಶಂಕರಪ್ಪ- ಕಾಂಗ್ರೆಸ್‌
108: ಮಾಯಗೊಂಡ: ಕೆ.ಎಸ್‌. ಬಸವರಾಜು- ಕಾಂಗ್ರೆಸ್‌
109. ಚನ್ನಗಿರಿ: ಬಸವರಾಜ್‌ ವಿ.ವಿ. ಶಿವಗಂಗಾ- ಕಾಂಗ್ರೆಸ್‌
110. ಹೊನ್ನಾಳಿ: ಡಿ.ಜಿ ಶಾಂತನಗೌಡರ್‌- ಕಾಂಗ್ರೆಸ್‌

ಶಿವಮೊಗ್ಗ ಜಿಲ್ಲೆ: 7 ಕ್ಷೇತ್ರಗಳು; 3 ಬಿಜೆಪಿ, 3 ಕಾಂಗ್ರೆಸ್‌, 1 ಜೆಡಿಎಸ್‌

111. ಶಿವಮೊಗ್ಗ ಗ್ರಾಮಾಂತರ: ಶಾರದಾ ಪೂರ್ಯ ನಾಯ್ಕ್‌- ಜೆಡಿಎಸ್‌
112. ಭದ್ರಾವತಿ: ಸಂಗಮೇಶ್ವರ್‌ ಬಿ.ಕೆ. -ಕಾಂಗ್ರೆಸ್‌
113: ಶಿವಮೊಗ್ಗ: ಚನ್ನಬಸಪ್ಪ- ಬಿಜೆಪಿ
114. ತೀರ್ಥಹಳ್ಳಿ- ಆರಗ ಜ್ಞಾನೇಂದ್ರ- ಬಿಜೆಪಿ
115. ಶಿಕಾರಿಪುರ: ಬಿವೈ ವಿಜಯೇಂದ್ರ- ಬಿಜೆಪಿ
116. ಸೊರಬ: ಮಧು ಬಂಗಾರಪ್ಪ- ಕಾಂಗ್ರೆಸ್‌
117. ಸಾಗರ: ಗೋಪಾಲಕೃಷ್ಣ ಬೇಳೂರು- ಕಾಂಗ್ರೆಸ್‌

ಉಡುಪಿ ಜಿಲ್ಲೆ: 5 ಕ್ಷೇತ್ರಗಳು; ಎಲ್ಲ ಕಡೆ ಬಿಜೆಪಿ ಗೆಲುವು

118. ಬೈಂದೂರು: ಗುರುರಾಜ್‌ ಗಂಟಿಹೊಳೆ- ಬಿಜೆಪಿ
119. ಕುಂದಾಪುರ: ಕಿರಣ್‌ ಕೊಡ್ಗಿ- ಬಿಜೆಪಿ
120. ಉಡುಪಿ: ಯಶ್‌ಪಾಲ್‌ ಸುವರ್ಣ-ಬಿಜೆಪಿ
121. ಕಾಪು: ಗುರ್ಮೆ ಸುರೇಶ್‌ ಶೆಟ್ಟಿ- ಬಿಜೆಪಿ
122. ಕಾರ್ಕಳ: ವಿ. ಸುನಿಲ್‌ ಕುಮಾರ್‌- ಬಿಜೆಪಿ

ಚಿಕ್ಕಮಗಳೂರು: 5 ಕ್ಷೇತ್ರ: ಎಲ್ಲವೂ ಕಾಂಗ್ರೆಸ್

123. ಶೃಂಗೇರಿ: ರಾಜೇಗೌಡ- ಕಾಂಗ್ರೆಸ್‌
124. ಮೂಡಿಗೆರೆ: ನಯನಾ ಮೋಟಮ್ಮ- ಕಾಂಗ್ರೆಸ್‌
125. ಚಿಕ್ಕಮಗಳೂರು: ಎಚ್‌.ಡಿ. ತಮ್ಮಯ್ಯ- ಕಾಂಗ್ರೆಸ್‌
126. ತರೀಕೆರೆ: ಜಿ.ಎಚ್‌. ಶ್ರೀನಿವಾಸ್‌- ಕಾಂಗ್ರೆಸ್‌
127. ಕಡೂರು: ಆನಂದ್‌ ಕೆ.ಎಸ್‌.- ಕಾಂಗ್ರೆಸ್‌

ತುಮಕೂರು ಜಿಲ್ಲೆ: 11 ಕ್ಷೇತ್ರ, ಕಾಂಗ್ರೆಸ್‌-7, ಜೆಡಿಎಸ್‌-2, ಬಿಜೆಪಿ-2

128. ಚಿಕ್ಕನಾಯಕನಹಳ್ಳಿ: ಸಿ.ವಿ. ಸುರೇಶ್‌ ಬಾಬು- ಜೆಡಿಎಸ್‌
129. ತಿಪಟೂರು: ಕೆ. ಷಡಕ್ಷರಿ- ಕಾಂಗ್ರೆಸ್‌
130. ತುರುವೇಕೆರೆ: ಎಂ.ಟಿ. ಕೃಷ್ಣಪ್ಪ- ಜೆಡಿಎಸ್‌
131. ಕುಣಿಗಲ್‌: ಡಾ. ಎಚ್‌.ಡಿ. ರಂಗನಾಥ್‌- ಕಾಂಗ್ರೆಸ್‌
132. ತುಮಕೂರು: ಜ್ಯೋತಿ ಗಣೇಶ್‌- ಬಿಜೆಪಿ
133. ತುಮಕೂರು ಗ್ರಾಮೀಣ: ಸುರೇಶ್‌ ಗೌಡ ಬಿ- ಬಿಜೆಪಿ
134. ಕೊರಟಗೆರೆ: ಡಾ. ಜಿ. ಪರಮೇಶ್ವರ್‌- ಕಾಂಗ್ರೆಸ್‌
135. ಗುಬ್ಬಿ: ಎಸ್‌.ಆರ್‌. ಶ್ರೀನಿವಾಸ್‌- ಕಾಂಗ್ರೆಸ್‌
136. ಸಿರಾ: ಟಿ.ಬಿ. ಜಯಚಂದ್ರ- ಕಾಂಗ್ರೆಸ್‌
137. ಪಾವಗಡ: ಎಚ್‌.ವಿ. ವೆಂಕಟೇಶ್‌ -ಕಾಂಗ್ರೆಸ್‌
138. ಮಧುಗಿರಿ- ಕೆ.ಎನ್‌. ರಾಜಣ್ಣ- ಕಾಂಗ್ರೆಸ್‌

ಚಿಕ್ಕಬಳ್ಳಾಪುರ: 5 ಕ್ಷೇತ್ರ; ಕಾಂಗ್ರೆಸ್‌-3, ಜೆಡಿಎಸ್‌-1, ಪಕ್ಷೇತರ-1

139. ಗೌರಿಬಿದನೂರು- ಪುಟ್ವಸ್ವಾಮಿ ಗೌಡ- ಪಕ್ಷೇತರ
140. ಬಾಗೇಪಲ್ಲಿ: ಎಸ್‌.ಎನ್‌. ಸುಬ್ಬಾರೆಡ್ಡಿ- ಕಾಂಗ್ರೆಸ್‌
141. ಚಿಕ್ಕಬಳ್ಳಾಪುರ: ಪ್ರದೀಪ್‌ ಈಶ್ವರ್‌ ಅಯ್ಯರ್‌- ಕಾಂಗ್ರೆಸ್‌
142. ಶಿಡ್ಲಘಟ್ಟ- ರವಿಕುಮಾರ್‌-ಜೆಡಿಎಸ್‌
143. ಚಿಂತಾಮಣಿ: ಡಾ.ಎಂ.ಸಿ. ಸುಧಾಕರ್‌- ಕಾಂಗ್ರೆಸ್‌

ಕೋಲಾರ ಜಿಲ್ಲೆ: 6 ಕ್ಷೇತ್ರಗಳು; ಕಾಂಗ್ರೆಸ್‌-4, ಜೆಡಿಎಸ್‌-2

144. ಶ್ರೀನಿವಾಸಪುರ- ವೆಂಕಟಶಿವಾ ರೆಡ್ಡಿ- ಜೆಡಿಎಸ್‌
145. ಮುಳಬಾಗಿಲು- ಸಮೃದ್ಧಿ ಮಂಜುನಾಥ್‌-ಜೆಡಿಎಸ್‌
146. ಕೆಜಿಎಫ್‌- ರೂಪಕಲಾ ಎಂ- ಕಾಂಗ್ರೆಸ್‌
147. ಬಂಗಾರಪೇಟೆ: ಎಸ್‌.ಎನ್‌. ನಾರಾಯಣ ಸ್ವಾಮಿ- ಕಾಂಗ್ರೆಸ್‌
148. ಕೋಲಾರ: ಕೊತ್ತೂರು ಮಂಜುನಾಥ್‌- ಕಾಂಗ್ರೆಸ್‌
149. ಮಾಲೂರು: ಕೆ.ವೈ. ನಂಜೇಗೌಡ- ಕಾಂಗ್ರೆಸ್‌

ಗ್ರೇಟರ್‌ ಬೆಂಗಳೂರು: 32 ಕ್ಷೇತ್ರ: ಬಿಜೆಪಿ-17, ಕಾಂಗ್ರೆಸ್-‌ 15

150. ಯಲಹಂಕ: ಎಸ್‌.ಆರ್‌. ವಿಶ್ವನಾಥ್‌- ಬಿಜೆಪಿ
151. ಕೆ.ಆರ್‌. ಪುರ: ಬೈರತಿ ಬಸವರಾಜ್‌- ಬಿಜೆಪಿ
152. ಬ್ಯಾಟರಾಯನಪುರ: ಕೃಷ್ಣ ಭೈರೇಗೌಡ- ಕಾಂಗ್ರೆಸ್‌
153. ಯಶ್ವಂತಪುರ: ಎಸ್‌.ಟಿ. ಸೋಮಶೇಖರ್‌- ಬಿಜೆಪಿ
154. ರಾಜರಾಜೇಶ್ವರಿ ನಗರ: ಮುನಿರತ್ನ- ಬಿಜೆಪಿ
155. ದಾಸರಹಳ್ಳಿ: ಎಸ್‌. ಮುನಿರಾಜು- ಬಿಜೆಪಿ
156. ಮಹಾಲಕ್ಷ್ಮಿ ಲೇಔಟ್‌- ಎಚ್‌. ಗೋಪಾಲಯ್ಯ- ಬಿಜೆಪಿ
157.. ಮಲ್ಲೇಶ್ವರಂ: ಡಾ.ಸಿ.ಎನ್‌ ಅಶ್ವಥ್‌ ನಾರಾಯಣ- ಬಿಜೆಪಿ
158. ಹೆಬ್ಬಾಳ: ಸುರೇಶ್‌ ಬಿ.ಎಸ್‌.- ಕಾಂಗ್ರೆಸ್‌
159. ಪುಲಿಕೇಶಿ ನಗರ: ಎ.ಸಿ. ಶ್ರೀನಿವಾಸ್‌- ಕಾಂಗ್ರೆಸ್‌
160. ಸರ್ವಜ್ಞ ನಗರ: ಕೆ.ಜೆ. ಜಾರ್ಜ್-ಕಾಂಗ್ರೆಸ್‌
161. ಸಿ.ವಿ. ರಾಮನ್‌ ನಗರ: ಆರ್‌. ರಘು- ಬಿಜೆಪಿ
162. ಶಿವಾಜಿ ನಗರ: ರಿಜ್ವಾನ್ ಅರ್ಷದ್‌- ಕಾಂಗ್ರೆಸ್‌
163. ಶಾಂತಿನಗರ: ಎನ್‌.ಎ ಹ್ಯಾರಿಸ್‌- ಕಾಂಗ್ರೆಸ್‌
164. ಗಾಂಧಿ ನಗರ: ದಿನೇಶ್‌ ಗುಂಡೂರಾವ್‌-ಕಾಂಗ್ರೆಸ್‌
165. ರಾಜಾಜಿ ನಗರ: ಸುರೇಶ್‌ ಕುಮಾರ್‌- ಬಿಜೆಪಿ
166. ಗೋವಿಂದರಾಜ ನಗರ: ಪ್ರಿಯಾಕೃಷ್ಣ- ಕಾಂಗ್ರೆಸ್‌
167. ವಿಜಯನಗರ: ಎಂ. ಕೃಷ್ಣಪ್ಪ- ಕಾಂಗ್ರೆಸ್‌
168. ಚಾಮರಾಜಪೇಟೆ: ಜಮೀರ್‌ ಅಹ್ಮದ್‌ ಖಾನ್- ಕಾಂಗ್ರೆಸ್‌
169. ಚಿಕ್ಕಪೇಟೆ: ಉದಯ ಗರುಡಾಚಾರ್‌- ಬಿಜೆಪಿ
170. ಬಸವನಗುಡಿ: ರವಿ ಸುಬ್ರಹ್ಮಣ್ಯ೦- ಬಿಜೆಪಿ
171. ಪದ್ಮನಾಭ ನಗರ: ಆರ್‌. ಅಶೋಕ್‌- ಬಿಜೆಪಿ
172. ಬಿಟಿಎಂ ಲೇಔಟ್‌: ರಾಮಲಿಂಗಾರೆಡ್ಡಿ- ಕಾಂಗ್ರೆಸ್‌
173. ಜಯನಗರ: ‌ ಎಂ.ಕೆ. ರಾಮಮೂರ್ತಿ-ಬಿಜೆಪಿ
174. ಮಹದೇವಪುರ: ಮಂಜುಳಾ ಅರವಿಂದ ಲಿಂಬಾವಳಿ- ಬಿಜೆಪಿ
175. ಬೊಮ್ನಳ್ಳಿ: ಸತೀಶ್‌ ರೆಡ್ಡಿ- ಬಿಜೆಪಿ
176. ಬೆಂಗಳೂರು ದಕ್ಷಿಣ: ಎಂ.ಕೃಷ್ಣಪ್ಪ- ಬಿಜೆಪಿ
177. ಆನೇಕಲ್‌: ಬಿ. ಶಿವಣ್ಣ- ಕಾಂಗ್ರೆಸ್‌
178. ಹೊಸಕೋಟೆ: ಶರತ್‌ ಬಚ್ಚೇಗೌಡ- ಕಾಂಗ್ರೆಸ್‌
179. ದೇವನಹಳ್ಳಿ: ಕೆ.ಎಚ್‌. ಮುನಿಯಪ್ಪ- ಕಾಂಗ್ರೆಸ್‌
180. ದೊಡ್ಡಬಳ್ಳಾಪುರ: ಧೀರಜ್‌ ಮುನಿರಾಜು- ಬಿಜೆಪಿ
181. ನೆಲಮಂಗಲ: ಶ್ರೀನಿವಾಸಯ್ಯ- ಕಾಂಗ್ರೆಸ್‌

ರಾಮ ನಗರ ಜಿಲ್ಲೆ: 4 ಕ್ಷೇತ್ರಗಳು; ಕಾಂಗ್ರೆಸ್‌ 3, ಜೆಡಿಎಸ್‌ 1

182. ಮಾಗಡಿ: ಎಚ್‌.ಸಿ. ಬಾಲಕೃಷ್ಣ- ಕಾಂಗ್ರೆಸ್‌
183. ರಾಮನಗರ: ಇಕ್ಬಾಲ್‌ ಹುಸೇನ್‌ ಎಚ್‌.ಎ- ಕಾಂಗ್ರೆಸ್‌
184. ಕನಕಪುರ: ಡಿ.ಕೆ. ಶಿವಕುಮಾರ್‌- ಕಾಂಗ್ರೆಸ್‌
185. ಚನ್ನಪಟ್ಟಣ ಎಚ್.ಡಿ. ಕುಮಾರಸ್ವಾಮಿ- ಜೆಡಿಎಸ್‌

ಮಂಡ್ಯ ಜಿಲ್ಲೆ: 7 ಕ್ಷೇತ್ರಗಳು; 5 ಕಾಂಗ್ರೆಸ್‌, 1 ಜೆಡಿಎಸ್‌, 1 ಪಕ್ಷೇತರ

186. ಮಳವಳ್ಳಿ: ಪಿ.ಎಂ. ನರೇಂದ್ರ ಸ್ವಾಮಿ- ಕಾಂಗ್ರೆಸ್‌
187. ಮದ್ದೂರು: ಕೆ.ಎಂ ಉದಯ್‌- ಕಾಂಗ್ರೆಸ್‌
188. ಮೇಲುಕೋಟೆ: ದರ್ಶನ್‌ ಪುಟ್ಟಣಯ್ಯ- ಸರ್ವೋದಯ-ಪಕ್ಷೇತರ
189. ಮಂಡ್ಯ: ಪಿ. ರವಿ ಕುಮಾರ್‌- ಕಾಂಗ್ರೆಸ್‌
190. ಶ್ರೀರಂಗಪಟ್ಟಣ: ರಮೇಶ್‌ ಬಂಡಿಸಿದ್ದೇಗೌಡ- ಕಾಂಗ್ರೆಸ್‌
191. ನಾಗಮಂಗಲ: ಚೆಲುವರಾಯಸ್ವಾಮಿ- ಕಾಂಗ್ರೆಸ್‌
192. ಕೆ.ಆರ್‌. ಪೇಟೆ: ಎಚ್‌.ಡಿ. ಮಂಜುನಾಥ್‌- ಜೆಡಿಎಸ್‌

ಹಾಸನ ಜಿಲ್ಲೆ: 7 ಕ್ಷೇತ್ರಗಳು; ಜೆಡಿಎಸ್‌-5, ಬಿಜೆಪಿ-2, ಕಾಂಗ್ರೆಸ್‌-1

193. ಶ್ರವಣಬೆಳಗೊಳ: ಸಿ.ಎನ್‌. ಬಾಲಕೃಷ್ಣ- ಜೆಡಿಎಸ್‌
194. ಅರಸೀಕೆರೆ: ಕೆ.ಎಂ. ಶಿವಲಿಂಗೇಗೌಡ- ಕಾಂಗ್ರೆಸ್‌
195. ಬೇಲೂರು: ಹುಲ್ಲಳ್ಳಿ ಕೆ. ಸುರೇಶ್‌- ಬಿಜೆಪಿ
196. ಹಾಸನ: ಸ್ವರೂಪ್‌ ಪ್ರಕಾಶ್‌- ಜೆಡಿಎಸ್‌
197. ಹೊಳೆನರಸೀಪುರ: ಎಚ್.ಡಿ. ರೇವಣ್ಣ- ಜೆಡಿಎಸ್‌
198. ಅರಕಲಗೂಡು: ಎ. ಮಂಜು- ಜೆಡಿಎಸ್‌
199. ಸಕಲೇಶಪುರ- ಸಿಮೆಂಟ್‌ ಮಂಜು- ಬಿಜೆಪಿ

ದಕ್ಷಿಣ ಕನ್ನಡ ಜಿಲ್ಲೆ: 8 ಕ್ಷೇತ್ರಗಳು; ಬಿಜೆಪಿ-6, ಕಾಂಗ್ರೆಸ್‌ 2

200. ಬೆಳ್ತಂಗಡಿ: ಹರೀಶ್‌ ಪೂಂಜಾ- ಬಿಜೆಪಿ
201. ಮೂಡುಬಿದಿರೆ: ಉಮಾನಾಥ ಕೋಟ್ಯಾನ್‌- ಬಿಜೆಪಿ
202. ಮಂಗಳೂರು ನಗರ ಉತ್ತರ- ವೈ ಭರತ್‌ ಶೆಟ್ಟಿ- ಬಿಜೆಪಿ
203. ಮಂಗಳೂರು ನಗರ ದಕ್ಷಿಣ- ವೇದವ್ಯಾಸ ಕಾಮತ್‌- ಬಿಜೆಪಿ
204. ಮಂಗಳೂರು: ಯು.ಟಿ. ಖಾದರ್‌- ಕಾಂಗ್ರೆಸ್‌
205. ಬಂಟ್ವಾಳ: ರಾಜೇಶ್‌ ನಾಯ್ಕ್‌- ಬಿಜೆಪಿ
206. ಪುತ್ತೂರು: ಅಶೋಕ್‌ ಕುಮಾರ್‌ ರೈ- ಕಾಂಗ್ರೆಸ್‌
207. ಸುಳ್ಯ: ಭಾಗೀರಥಿ ಮುರುಳ್ಯ- ಬಿಜೆಪಿ

ಮಡಿಕೇರಿ ಜಿಲ್ಲೆ: 2 ಕ್ಷೇತ್ರಗಳು: ಎರಡೂ ಕಾಂಗ್ರೆಸ್

208. ಮಡಿಕೇರಿ: ಡಾ. ಮಂಥರ್‌ ಗೌಡ- ಕಾಂಗ್ರೆಸ್‌
209. ವಿರಾಜಪೇಟೆ: ಎ.ಎಸ್‌. ಪೊನ್ನಣ್ಣ- ಕಾಂಗ್ರೆಸ್

‌‌ಮೈಸೂರು ಜಿಲ್ಲೆ: 11 ಕ್ಷೇತ್ರಗಳು: 8 ಕಾಂಗ್ರೆಸ್‌, 2 ಜೆಡಿಎಸ್‌, 1 ಬಿಜೆಪಿ

210. ಪಿರಿಯಾಪಟ್ಟಣ: ಕೆ.ವೆಂಕಟೇಶ್‌ -ಕಾಂಗ್ರೆಸ್‌
211. ಕೆ.ಆರ್‌. ನಗರ: ಡಿ. ರವಿಶಂಕರ್‌- ಕಾಂಗ್ರೆಸ್‌
212. ಹುಣಸೂರು: ಹರೀಶ್‌ ಗೌಡ- ಜೆಡಿಎಸ್‌
213. ಎಚ್‌.ಡಿ. ಕೋಟೆ: ಅನಿಲ್‌ ಕುಮಾರ್‌- ಕಾಂಗ್ರೆಸ್‌
214. ನಂಜನಗೂಡು: ದರ್ಶನ್‌ ಧ್ರುವನಾರಾಯಣ – ಕಾಂಗ್ರೆಸ್‌
215. ಚಾಮುಂಡೇಶ್ವರಿ: ಜಿ.ಟಿ. ದೇವೇಗೌಡ- ಜೆಡಿಎಸ್‌
216. ಕೃಷ್ಣರಾಜ: ಟಿ.ಎಸ್‌. ಶ್ರೀವತ್ಸ- ಬಿಜೆಪಿ
217. ಚಾಮರಾಜ: ಕೆ. ಹರೀಶ್‌ ಗೌಡ- ಕಾಂಗ್ರೆಸ್‌
218. ನರಸಿಂಹ ರಾಜ: ತನ್ವೀರ್‌ ಸೇಠ್‌- ಕಾಂಗ್ರೆಸ್‌
219. ವರುಣ: ಸಿದ್ದರಾಮಯ್ಯ- ಕಾಂಗ್ರೆಸ್
220. ಟಿ. ನರಸೀಪುರ: ಎಚ್.ಸಿ. ಮಹದೇವಪ್ಪ- ಕಾಂಗ್ರೆಸ್‌

‌ಚಾಮರಾಜನಗರ ಜಿಲ್ಲೆ: 5 ಸ್ಥಾನ: ಕಾಂಗ್ರೆಸ್‌-3, ಜೆಡಿಎಸ್‌-1

221. ಹನೂರು: ಮಂಜುನಾಥ್‌- ಜೆಡಿಎಸ್‌
222. ಕೊಳ್ಳೇಗಾಲ: ಎ.ಆರ್‌. ಕೃಷ್ಣಮೂರ್ತಿ- ಕಾಂಗ್ರೆಸ್‌
223. ಚಾಮರಾಜನಗರ: ಸಿ. ಪುಟ್ಟರಂಗ ಶೆಟ್ಟಿ-ಕಾಂಗ್ರೆಸ್‌
224. ಗುಂಡ್ಲುಪೇಟೆ: ಎಚ್‌.ಎಂ. ಗಣೇಶ್‌ ಪ್ರಸಾದ್‌- ಕಾಂಗ್ರೆಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Ranji Trophy : ರಣಜಿ ಟ್ರೋಫಿ ಆಡುವವರಿಗೆ ಇನ್ನು ಮುಂದೆ ಒಂದು ಕೋಟಿ ರೂ. ವೇತನ!

VISTARANEWS.COM


on

Ranji Trophy
Koo

ಬೆಂಗಳೂರು: ದೇಶೀಯ ಕ್ರಿಕೆಟ್ ಅದರಲ್ಲೂ ರಣಜಿ ಕ್ರಿಕೆಟ್ (Ranji Trophy) ಟೂರ್ನಿಯನ್ನು ಕ್ರಿಕೆಟಿಗರಿಗೆ ಹೆಚ್ಚು ಆಕರ್ಷಕವಾಗಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತೊಂದು ದೊಡ್ಡ ಹೆಜ್ಜೆ ಇಡಲು ಸಜ್ಜಾಗಿದೆ. ಆಟಗಾರರು ದೇಶೀಯ ಕ್ರಿಕೆಟ್​​ಗೆ ಸೂಕ್ತ ಪ್ರಾಮುಖ್ಯತೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಮಂಡಳಿಯು ಇತ್ತೀಚಿನ ದಿನಗಳಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೀಗ ವೇತನ ಹೆಚ್ಚಳದ ದೊಡ್ಡ ಆಫರ್​ ಕೊಡಲಿದ್ದು, ದೇಶೀಯ ಕ್ರಿಕೆಟ್ ಆಡವ ಪ್ರತಿಯೊಬ್ಬರಿಗೆ ವರ್ಷಕ್ಕೆ 1 ಕೋಟಿ ವೇತನ ನೀಡುವ ಯೋಜನೆಯೊಂದು ಶುರುವಾಗಿದೆ.

ಈ ವರ್ಷದ ಆರಂಭದಲ್ಲಿ, ಬಿಸಿಸಿಐ ಆಟಗಾರರಿಗೆ ದೇಶಿಯ ಕ್ರಿಕೆಟ್​ನಲ್ಲಿ ಪಾಲ್ಗೊಳ್ಳಲೇ ಬೇಕು ಎಂದು ನಿರ್ದೇಶನ ನೀಡಿತು. ಜತೆಗೆ ಕ್ರಿಕೆಟಿಗರು ಟೀಮ್ ಇಂಡಿಯಾಕ್ಕಾಗಿ ಆಡದಿದ್ದಾಗ ತಮ್ಮ ರಾಜ್ಯ ತಂಡಗಳನ್ನು ಪ್ರತಿನಿಧಿಸುವುದನ್ನು ಕಡ್ಡಾಯಗೊಳಿಸಿತು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ತಮ್ಮನ್ನು ಫಿಟ್​ ಆಗಿರಿಸಿಕೊಳ್ಳುವ ಉದ್ದೇಶದಿಂದ ಹಲವಾರು ಆಟಗಾರರು ರಣಜಿ ಟ್ರೋಫಿಯಲ್ಲಿ ಆಡುವುದನ್ನು ತಪ್ಪಿಸಿಕೊಂಡ ನಂತರ ಮಂಡಳಿಯು ಈ ಕ್ರಮವನ್ನು ತೆಗೆದುಕೊಳ್ಳಬೇಕಾಯಿತು.

ಬಿಸಿಸಿಐ ಈಗ ದೇಶೀಯ ಆಟಗಾರರ ಸಂಭಾವನೆಯನ್ನು ಹೆಚ್ಚಿಸಲು ಯೋಚಿಸುತ್ತಿದೆ ಎಂದು ವರದಿಯಾಗಿದೆ. ಈ ವಿಷಯದ ಬಗ್ಗೆ ಮಂಡಳಿಯು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲವಾದರೂ, ಈ ಕಲ್ಪನೆಯನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡುವ ಜವಾಬ್ದಾರಿಯನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ನೀಡಲಾಗಿದೆ.

ಕ್ರಿಕ್​ಬಜ್​ ವರದಿ ಪ್ರಕಾರ, ಪಂದ್ಯದ ಶುಲ್ಕ ಹೆಚ್ಚಳದ ಬಗ್ಗೆ ಬಿಸಿಸಿಐ ತಕ್ಷಣದ ಘೋಷಣೆ ಮಾಡುವ ಸಾಧ್ಯತೆಯಿಲ್ಲ. ಆದಾಗ್ಯೂ, ರಾಷ್ಟ್ರೀಯ ಆಯ್ಕೆ ಸಮಿತಿಯು ಈ ಪ್ರಸ್ತಾಪವನ್ನು ಚರ್ಚಿಸಿದೆ. ಸಂಭಾವನೆಯನ್ನು ಹೆಚ್ಚಿಸುವ ಮೂಲಕ, ಐಪಿಎಲ್ ಒಪ್ಪಂದಗಳನ್ನು ಹೊಂದಿರದ ದೇಶೀಯ ಆಟಗಾರರು ಆದಾಯದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಬಿಸಿಸಿಐ ಬಯಸಿದೆ.

ಕ್ರಿಕೆಟಿಗರ ವೇತನ ದುಪ್ಪಟ್ಟು ಮಾಡಲು ಬಿಸಿಸಿಐ ನಿರ್ಧಾರ

ಈ ವಿಷಯದ ಬಗ್ಗೆ ಬಿಸಿಸಿಐ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲವಾದರೂ, ದೇಶೀಯ ಕ್ರಿಕೆಟಿಗರ ಶುಲ್ಕವನ್ನು ದ್ವಿಗುಣಗೊಳಿಸಬೇಕು ಎಂದು ಸಂಬಂಧಪಟ್ಟ ಎಲ್ಲಾ ಪಾಲುದಾರರು ನಂಬಿದ್ದಾರೆ. ದೇಶೀಯ ಆಟಗಾರರು ಪ್ರತಿ ಋತುವಿನಲ್ಲಿ 10 ರಣಜಿ ಟ್ರೋಫಿ ಪಂದ್ಯಗಳನ್ನು ಆಡಿದರೆ ವಾರ್ಷಿಕವಾಗಿ 75 ಲಕ್ಷದಿಂದ 1 ಕೋಟಿ ರೂ.ಗಳವರೆಗೆ ಗಳಿಸಬೇಕು ಎಂಬ ಪ್ರಸ್ತಾಪವೂ ಇದೆ.

ಪ್ರಸ್ತುತ, ಒಬ್ಬ ಆಟಗಾರನು 40 ಕ್ಕಿಂತ ಹೆಚ್ಚು ರಣಜಿ ಪಂದ್ಯಗಳನ್ನು ಆಡಿದರೆ ದಿನಕ್ಕೆ 60,000 ರೂ., 21 ರಿಂದ 40 ಪಂದ್ಯಗಳನ್ನು ಆಡಿದವರಿಗೆ 50,000 ರೂ., 20 ಪಂದ್ಯಗಳಲ್ಲಿ ಕಾಣಿಸಿಕೊಂಡವರಿಗೆ 40,000 ರೂ. ಮತ್ತೊಂದೆಡೆ, ಮೀಸಲು ಆಟಗಾರರು ಆಯಾ ವಿಭಾಗಗಳಲ್ಲಿ 30,000, 25,000 ಮತ್ತು 20,000 ರೂ.ಗಳವರೆಗೆ ಪಡೆಯುತ್ತಾರೆ.

ಈಗಿರುವ ವೇತನ ಶ್ರೇಣಿಯ ಪ್ರಕಾರ, ಹಿರಿಯ ಆಟಗಾರನು ಫೈನಲ್ ತಲುಪಿದರೆ 25 ಲಕ್ಷ ರೂ.ಗಳವರೆಗೆ ಮತ್ತು ತಂಡದ ಇತರ ಆಟಗಾರರು 17 ಲಕ್ಷದಿಂದ 22 ಲಕ್ಷ ರೂ.ಗಳವರೆಗೆ ಗಳಿಸುತ್ತಾರೆ. ಮುಂಬರುವ ಋತುವಿನಿಂದ ದೇಶೀಯ ಆಟಗಾರರ ಗಳಿಕೆಯನ್ನು ಗಣನೀಯವಾಗಿ ಹೆಚ್ಚಿಸುವುದನ್ನು ಖಚಿತಪಡಿಸಿಕೊಳ್ಳಲು ಬಿಸಿಸಿಐ ಉತ್ಸುಕವಾಗಿದೆ.

ಆಟಗಾರರು ಕೆಂಪು ಚೆಂಡಿನ ಕ್ರಿಕೆಟ್ಗೆ ಆದ್ಯತೆ ನೀಡುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು ಬಿಸಿಸಿಐನ ಮುಖ್ಯ ಉದ್ದೇಶವಾಗಿದೆ. ಆಟಗಾರರ ಶುಲ್ಕವನ್ನು ಹೆಚ್ಚಿಸಲು ಹಲವಾರು ಭಾಗಗಳಿಂದ ಸಲಹೆಗಳು ಬಂದಿವೆ ಮತ್ತು ಮಂಡಳಿಯು ಅಂತಿಮವಾಗಿ ಅದರ ಮೇಲೆ ಕೆಲಸ ಮಾಡುತ್ತಿದೆ. ಕಳೆದ ತಿಂಗಳು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ನಿರ್ದಿಷ್ಟ ಋತುವಿನಲ್ಲಿ ನಿಗದಿತ ಟೆಸ್ಟ್ ಪಂದ್ಯಗಳಲ್ಲಿ 75% ಅಥವಾ ಅದಕ್ಕಿಂತ ಹೆಚ್ಚು ಆಡುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 45 ಲಕ್ಷ ರೂ.ಗಳ ಪ್ರೋತ್ಸಾಹಧನವನ್ನು ಘೋಷಿಸಿದ್ದರು.

ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದರು.

“ರಣಜಿ ಟ್ರೋಫಿ ಶುಲ್ಕವನ್ನು ದ್ವಿಗುಣಗೊಳಿಸಲು ಅಥವಾ ಮೂರು ಪಟ್ಟು ಹೆಚ್ಚಿಸಲು ಸಾಧ್ಯವಾದರೆ, ಖಂಡಿತವಾಗಿಯೂ ರಣಜಿ ಟ್ರೋಫಿ ಆಡುವ ಹೆಚ್ಚಿನ ಆಟಗಾರರು ಬರುತ್ತಾರೆ. ರಣಜಿ ಟ್ರೋಫಿಯಿಂದ ತಪ್ಪಿಸಿಕೊಳ್ಳುವುದಿಲ್ಲ ಏಕೆಂದರೆ ರಣಜಿ ಟ್ರೋಫಿ ಪಂದ್ಯವನ್ನು ಆಡುವ ಶುಲ್ಕವು ಉತ್ತಮ ಶುಲ್ಕವಾಗಿದ್ದರೆ, ವಿವಿಧ ಕಾರಣಗಳಿಗಾಗಿ ಆಟಗಾರರು ಹೊರಗುಳಿಯುತ್ತಾರೆ” ಎಂದು ಗವಾಸ್ಕರ್ ಹೇಳಿದ್ದರು.

Continue Reading

ಕ್ರೀಡೆ

Bismah Maroof : ಹೆಣ್ಣು ಮಗುವಿನ ಸಮೇತ ಆಡಲು ಹೋಗುತ್ತಿದ್ದ ಪಾಕಿಸ್ತಾನದ ಮಹಿಳಾ ಕ್ರಿಕೆಟರ್ ನಿವೃತ್ತಿ

Bismah Maroof : ಬಿಸ್ಮಾ 136 ಏಕದಿನ ಪಂದ್ಯಗಳಲ್ಲಿ 29.55 ಸರಾಸರಿಯಲ್ಲಿ 3369 ರನ್ ಗಳಿಸಿದ್ದಾರೆ, 21 ಅರ್ಧಶತಕಗಳು ಮತ್ತು 99 ಗರಿಷ್ಠ ಸ್ಕೋರ್. 140 ಟಿ20 ಪಂದ್ಯಗಳಲ್ಲಿ 27.55ರ ಸರಾಸರಿಯಲ್ಲಿ 12 ಅರ್ಧಶತಕಗಳು ಸೇರಿದಂತೆ 2893 ರನ್ ಗಳಿಸಿದ್ದಾರೆ. ಅವರು 96 ಪಂದ್ಯಗಳು, 62 ಟಿ 20 ಮತ್ತು 34 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 32 ಏಕದಿನ ಪಂದ್ಯಗಳಲ್ಲಿ 16 ಗೆಲುವು ಮತ್ತು 27 ಟಿ 20 ಐ ಗೆಲುವುಗಳಿಗೆ ತಂಡವನ್ನು ಮುನ್ನಡೆಸಿದ್ದಾರೆ.

VISTARANEWS.COM


on

Bismah Maroof
Koo

ಇಸ್ಲಾಮಾಬಾದ್​​: ಪಾಕಿಸ್ತಾನ ಮಹಿಳಾ ಕ್ರಿಕೆಟ್​​ ತಂಡದ ಅತ್ಯಂತ ಪ್ರತಿಭಾವಂತರಲ್ಲಿ ಒಬ್ಬರಾಗಿದ್ದ ಬಿಸ್ಮಾ ಮರೂಫ್ 17 ವರ್ಷಗಳ ವೃತ್ತಿಜೀವನದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಪಾಕಿಸ್ತಾನದ ಪ್ರಮುಖ ರನ್ ಸ್ಕೋರರ್ ಆಗಿ ಮರೂಫ್ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಮದುವೆಯಾಗಿ ಪುಟಾಣಿ ಮಗು ಇದ್ದ ಹೊರತಾಗಿಯೂ ಕ್ರಿಕೆಟ್​ ಆಟವನ್ನು ಮುಂದುವರಿಸಿದ್ದ ಅವರು ಪ್ರಶಂಸೆಗೆ ಪಾತ್ರರಾಗಿದ್ದರು. ಮಗುವಿನ ಸಮೇತವೇ ಅವರು ವಿದೇಶಗಳಿಗೆ ಆಡಲು ಹೋಗುವ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದರು.

ಮರೂಫ್ ಅವರ ಕ್ರಿಕೆಟ್ ಪ್ರಯಾಣವು 2006ರಲ್ಲಿ ಪ್ರಾರಂಭವಾಗಿದೆ. ಜೈಪುರದಲ್ಲಿ ಅವರು ಭಾರತ ತಂಡದ ವಿರುದ್ಧ ಪಾದಾರ್ಪಣೆ ಮಾಡಿದ್ದರು. ಅಂದಿನಿಂದ, ಅವರು ಕ್ರಿಕೆಟ್​ ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಬಿಸ್ಮಾ 136 ಏಕದಿನ ಪಂದ್ಯಗಳಲ್ಲಿ 29.55 ಸರಾಸರಿಯಲ್ಲಿ 3369 ರನ್ ಗಳಿಸಿದ್ದಾರೆ, 21 ಅರ್ಧಶತಕಗಳು ಮತ್ತು 99 ಗರಿಷ್ಠ ಸ್ಕೋರ್. 140 ಟಿ20 ಪಂದ್ಯಗಳಲ್ಲಿ 27.55ರ ಸರಾಸರಿಯಲ್ಲಿ 12 ಅರ್ಧಶತಕಗಳು ಸೇರಿದಂತೆ 2893 ರನ್ ಗಳಿಸಿದ್ದಾರೆ. ಅವರು 96 ಪಂದ್ಯಗಳು, 62 ಟಿ 20 ಮತ್ತು 34 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 32 ಏಕದಿನ ಪಂದ್ಯಗಳಲ್ಲಿ 16 ಗೆಲುವು ಮತ್ತು 27 ಟಿ 20 ಐ ಗೆಲುವುಗಳಿಗೆ ತಂಡವನ್ನು ಮುನ್ನಡೆಸಿದ್ದಾರೆ.

“ನಾನು ಹೆಚ್ಚು ಪ್ರೀತಿಸುವ ಆಟದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಇದು ಸವಾಲುಗಳು, ಗೆಲುವುಗಳು ಮತ್ತು ಮರೆಯಲಾಗದ ನೆನಪುಗಳಿಂದ ತುಂಬಿದ ನಂಬಲಾಗದ ಪ್ರಯಾಣವಾಗಿದೆ. ಆರಂಭದಿಂದ ಇಂದಿನವರೆಗೆ ನನ್ನ ಕ್ರಿಕೆಟ್ ಪ್ರಯಾಣದುದ್ದಕ್ಕೂ ನನ್ನನ್ನು ಬೆಂಬಲಿಸಿದ ನನ್ನ ಕುಟುಂಬಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ, “ಎಂದು ಅವರು ಏಪ್ರಿಲ್ 26 ರಂದು ಪಿಸಿಬಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: IPL 2024 : ಸಾಯಿ ಕಿಶೋರ್ ನಿಂದನೆ; ರಸಿಕ್ ಸಲಾಂಗೆ ಪಾಠ ಕಲಿಸಿದ ಜಯ್​ ಶಾ

ತನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ಪಿಸಿಬಿಗೆ ಧನ್ಯವಾದ ಅರ್ಪಿಸಿದ್ದಾರೆ. “ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ನನ್ನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನನ್ನ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಪಿಸಿಬಿಯ ಬೆಂಬಲವು ಅಮೂಲ್ಯವಾಗಿದೆ, ವಿಶೇಷವಾಗಿ ನನಗಾಗಿ ಮೊದಲ ಪೋಷಕರ ನೀತಿಯನ್ನು ಜಾರಿಗೆ ತರುವಲ್ಲಿ, ಇದು ತಾಯಿಯಾಗಿರುವಾಗ ನನ್ನ ದೇಶವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸಲು ನನಗೆ ಅನುವು ಮಾಡಿಕೊಟ್ಟಿತು.

“ಕೊನೆಯದಾಗಿ, ನನಗೆ ಕುಟುಂಬದಂತೆ ಆಗಿರುವ ನನ್ನ ಸಹ ಆಟಗಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮೈದಾನದ ಒಳಗೆ ಮತ್ತು ಹೊರಗೆ ನಾವು ಹಂಚಿಕೊಂಡ ಸ್ನೇಹವನ್ನು ನಾನು ಎಂದೆಂದಿಗೂ ನೆನಪಿಸಿಕೊಳ್ಳುತ್ತೇನೆ, “ಎಂದು ಅವರು ಹೇಳಿದರು.

ತವರಿನಲ್ಲಿ ವೆಸ್ಟ್ ಇಂಡೀಸ್ ಮಹಿಳಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು. ಆತಿಥೇಯ ಪಾಕಿಸ್ತಾನವು ಸರಣಿಯನ್ನು 0-3 ರಿಂದ ಕಳೆದುಕೊಂಡಿತು ಮತ್ತು ಮರೂಫ್ 91 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಏಪ್ರಿಲ್ 26 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಸರಣಿಗಾಗಿ ವೆಸ್ಟ್ ಇಂಡೀಸ್ ಮಹಿಳೆಯರ ವಿರುದ್ಧದ ಟಿ 20 ಐ ತಂಡದ ಭಾಗವಾಗಿದ್ದಾರೆ. ಆದರೆ ಅವರ ಇತ್ತೀಚಿನ ಪ್ರಕಟಣೆಯೊಂದಿಗೆ, ಅವರ ಲಭ್ಯತೆ ಪ್ರಶ್ನಾರ್ಹವಾಗಿದೆ.

Continue Reading

ಕರ್ನಾಟಕ

Lok Sabha Election: ನಾಳೆ ಮೊದಲ ಹಂತದ ಮತದಾನ; ಬೆಂಗಳೂರಿನಲ್ಲಿ ಏನಿರತ್ತೆ? ಏನಿರಲ್ಲ?

Lok Sabha Election: ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆಯಲಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಚುನಾವಣೆ ಆಯೋಗವು ಸಿದ್ಧತೆ ಮಾಡಿಕೊಂಡಿದೆ. ಮತದಾನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೆಲ ಸೇವೆಗಳಲ್ಲಿ ವ್ಯತ್ಯಯವಾಗಲಿದೆ.

VISTARANEWS.COM


on

Lok Sabha Election
Koo

ಬೆಂಗಳೂರು: ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಲ್ಲಿ ಶುಕ್ರವಾರ (ಏಪ್ರಿಲ್‌ 26) ಮತದಾನ ನಡೆಯಲಿದೆ. ಆ ಮೂಲಕ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ (Lok Sabha Election 2024) ಅಬ್ಬರವು ಮತ್ತೊಂದು ಹಂತ ತಲುಪಲಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಮತದಾನ ಆರಂಭವಾಗಲಿದ್ದು, ಚುನಾವಣೆ ಆಯೋಗವು ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನು, ಮತದಾನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ (Bengaluru) ಕೆಲ ಸೇವೆಗಳಲ್ಲಿ ವ್ಯತ್ಯಯವಾಗಲಿದೆ.

ಶಾಲೆ-ಕಾಲೇಜುಗಳಿಗೆ ರಜೆ

ಮತದಾನದ ಹಿನ್ನೆಲೆಯಲ್ಲಿ ಶುಕ್ರವಾರ ಶಾಲೆ-ಕಾಲೇಜುಗಳು ಸೇರಿ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಅನಿವಾರ್ಯವಲ್ಲದ ಸರ್ಕಾರಿ ಸೇವೆಗಳಿಗೂ ರಜೆ ಘೋಷಿಸಲಾಗಿದೆ. ಇನ್ನು ಕಾರ್ಪೊರೇಟ್‌ ಕಚೇರಿಗಳು ಕೂಡ ಉದ್ಯೋಗಿಗಳಿಗೆ ಕಡ್ಡಾಯವಾಗಿ ರಜೆ ಘೋಷಿಸಬೇಕು ಎಂದು ಸೂಚಿಸಲಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಜನ ಭಾಗವಹಿಸಲು ಉತ್ತೇಜನ ನೀಡುವ ದಿಸೆಯಲ್ಲಿ ರಜೆ ಘೋಷಿಸಲು ಸೂಚಿಸಲಾಗಿದೆ. ಕರ್ನಾಟಕ ಹೈಕೋರ್ಟ್‌ ಕೂಡ ರಜೆ ಘೋಷಣೆ ಮಾಡಿದೆ.

Voters' Pledge

ಮತದಾನದ ಹಿನ್ನೆಲೆಯಲ್ಲಿ ಬುಧವಾರ (ಏಪ್ರಿಲ್‌ 24) ಸಂಜೆಯಿಂದಲೇ ಮದ್ಯ ಮಾರಾಟ ನಿಷೇಧಗೊಳಿಸಲಾಗಿದೆ. ಏಪ್ರಿಲ್‌ 26ರ ಮದ್ಯರಾತ್ರಿವರೆಗೆ ಮದ್ಯ ಸಿಗುವುದಿಲ್ಲ. ಹಾಗೆಯೇ, ಸಿಆರ್‌ಪಿಎಸಿ ಸೆಕ್ಷನ್‌ 144 ಜಾರಿಯಲ್ಲಿರುವ ಕಾರಣ ಐದಕ್ಕೂ ಅಧಿಕ ಜನ ಸೇರುವಂತಿಲ್ಲ. ರಾಜಕೀಯ ಘೋಷಣೆ ಕೂಗುವಂತಿಲ್ಲ ಹಾಗೂ ಪ್ರಚೋದನಕಾರಿ ಭಾಷಣಗಳನ್ನು ಮಾಡುವಂತಿಲ್ಲ.

ಕರ್ನಾಟಕದಲ್ಲಿ ಎಲ್ಲೆಲ್ಲಿ ಮತದಾನ?

ಕೋಲಾರ, ಮಂಡ್ಯ, ಉಡುಪಿ-ಚಿಕ್ಕಮಗಳೂರು, ಹಾಸನ, ಮೈಸೂರು, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರ ಕೇಂದ್ರ, ಬೆಂಗಳೂರು ಉತ್ತರ, ದಕ್ಷಿಣ ಕನ್ನಡ, ಚಾಮರಾಜನಗರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಜನರ ಸರತಿ ಸಾಲು ಇದ್ದರೆ ಮತದಾನದ ಸಮಯವನ್ನು ಒಂದು ಗಂಟೆವರೆಗೆ ವಿಸ್ತರಣೆ ಮಾಡಲಾಗುತ್ತದೆ.

ಯಾವ ರಾಜ್ಯದ ಎಷ್ಟು ಕ್ಷೇತ್ರಗಳಲ್ಲಿ ಮತದಾನ?

ಕೇರಳದ ಎಲ್ಲ 20, ಕರ್ನಾಟಕ 14, ರಾಜಸ್ಥಾನ 13, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದ ತಲಾ 8, ಮಧ್ಯಪ್ರದೇಶ 6, ಬಿಹಾರ ಹಾಗೂ ಅಸ್ಸಾಂನ ತಲಾ 5, ಛತ್ತೀಸ್‌ಗಢ ಹಾಗೂ ಪಶ್ಚಿಮ ಬಂಗಾಳದ ತಲಾ 3, ತ್ರಿಪುರ, ಜಮ್ಮು-ಕಾಶ್ಮೀರ ಹಾಗೂ ಮಣಿಪುರದ ತಲಾ 1 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 7 ಹಂತಗಳಲ್ಲಿ ನಡೆಯುವ ಚುನಾವಣೆಯು ಜೂನ್‌ 1ರಂದು ಮುಕ್ತಾಯವಾಗಲಿದೆ. ಜೂನ್‌ 4ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ; ಮೋದಿ, ರಾಹುಲ್‌ ಗಾಂಧಿ ಪ್ರತಿಕ್ರಿಯೆ ಕೇಳಿದ ಚುನಾವಣೆ ಆಯೋಗ!

Continue Reading

ಕ್ರೀಡೆ

IPL 2024 : ಸಾಯಿ ಕಿಶೋರ್ ನಿಂದನೆ; ರಸಿಕ್ ಸಲಾಂಗೆ ಪಾಠ ಕಲಿಸಿದ ಜಯ್​ ಶಾ

IPL 2024: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕ್ಯಾಪಿಟಲ್ಸ್ ನಾಲ್ಕು ರನ್ ಗಳ ಜಯ ಸಾಧಿಸುವಲ್ಲಿ ರಸಿಕ್ ಸಲಾಮ್ ದಾರ್ ನಿರ್ಣಾಯಕ ಪಾತ್ರ ವಹಿಸಿದ್ದರು. ಬಲಗೈ ವೇಗಿ ನಾಲ್ಕು ಓವರ್ ಗಳಲ್ಲಿ 44 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಸಾಯಿ ಸುದರ್ಶನ್, ಶಾರುಖ್ ಖಾನ್ ಮತ್ತು ಆರ್ ಸಾಯಿ ಕಿಶೋರ್ ಅವರನ್ನು ಅವರು ಬೌಲಿಂಗ್​ ಸ್ಪೆಲ್​ ಅವಧಿಯಲ್ಲಿ ಔಟ್ ಮಾಡಿದರು.

VISTARANEWS.COM


on

IPL 2024
Koo

ನವದೆಹಲಿ: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಬೌಲರ್ ರಸಿಕ್ ಸಲಾಮ್ ದಾರ್ ಗೆ ದಂಡ ವಿಧಿಸಲಾಗಿದೆ. ಇತ್ತೀಚೆಗೆ ನಡೆದ ಐಪಿಎಲ್ 2024 ಪಂದ್ಯದಲ್ಲಿ ವಿಕೆಟ್ ಪಡೆದ ನಂತರ ಆಕ್ರಮಣಕಾರಿ ಸಂಭ್ರಮಾಚರಣೆಗಾಗಿ ರಸಿಕ್ ಸಲಾಮ್ ದಾರ್ ಅವರಿಗೆ ದಂಡ ವಿಧಿಸಲಾಗಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 24) ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕ್ಯಾಪಿಟಲ್ಸ್ ನಾಲ್ಕು ರನ್ ಗಳ ಜಯ ಸಾಧಿಸುವಲ್ಲಿ ರಸಿಕ್ ಸಲಾಮ್ ದಾರ್ ನಿರ್ಣಾಯಕ ಪಾತ್ರ ವಹಿಸಿದ್ದರು. ಬಲಗೈ ವೇಗಿ ನಾಲ್ಕು ಓವರ್ ಗಳಲ್ಲಿ 44 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಸಾಯಿ ಸುದರ್ಶನ್, ಶಾರುಖ್ ಖಾನ್ ಮತ್ತು ಆರ್ ಸಾಯಿ ಕಿಶೋರ್ ಅವರನ್ನು ಅವರು ಬೌಲಿಂಗ್​ ಸ್ಪೆಲ್​ ಅವಧಿಯಲ್ಲಿ ಔಟ್ ಮಾಡಿದರು.

ರಸಿಕ್ ಸಲಾಮ್ ದಾರ್ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ಲೆವೆಲ್ 1 ಅಪರಾಧ ಮಾಡಿದ್ದಾರೆ. 24 ವರ್ಷದ ಆಟಗಾರ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ಶಿಕ್ಷೆ ಒಪ್ಪಿಕೊಂಡಿದ್ದಾರೆ. “ಐಪಿಎಲ್​ನ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ದಾರ್ ಲೆವೆಲ್ 1 ಅಪರಾಧ ಮಾಡಿದ್ದಾರೆ. ಅವರು ಅಪರಾಧ ಒಪ್ಪಿಕೊಂಡಿದ್ದಾರೆ ಮ್ಯಾಚ್ ರೆಫರಿಯ ಅನುಮತಿ ಸ್ವೀಕರಿಸಿದ್ದಾರೆ. ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ, ಮ್ಯಾಚ್ ರೆಫರಿ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ” ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

ಐಪಿಎಲ್​​ನ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಪ್ರಕಾರ ಇನ್ನೊಬ್ಬ ಆಟಗಾರನಿಂದ ಆಕ್ರಮಣಕಾರಿ ಪ್ರತಿಕ್ರಿಯೆ ಪ್ರಚೋದಿಸುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದಾಗಿದೆ.

ಇದನ್ನೂ ಓದಿ: Virat kohli : ಅಂಪೈರ್​ಗಳ ಕೈ ಕುಲುಕಲೂ ನಿರಾಕರಿಸಿದ್ದ ವಿರಾಟ್​ ಕೊಹ್ಲಿ; ವಿಡಿಯೊ ಇದೆ

ನಿರ್ಣಾಯಕ ಬೌಲಿಂಗ್​

ಗುಜರಾತ್ ಟೈಟಾನ್ಸ್ ಗೆಲುವಿಗೆ 12 ಎಸೆತಗಳಲ್ಲಿ 37 ರನ್​ಗಳ ಅಗತ್ಯವಿದ್ದಾಗ ಜಮ್ಮು ಮತ್ತು ಕಾಶ್ಮೀರ ಮೂಲದ ಕ್ರಿಕೆಟಿಗನಿಗೆ 19 ನೇ ಓವರ್ ಎಸೆಯುವ ನಿರ್ಣಾಯಕ ಜವಾಬ್ದಾರಿ ನೀಡಲಾಗಿತ್ತು. ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಸಾಯಿ ಕಿಶೋರ್ ಅವರನ್ನು ತಮ್ಮ ಯಾರ್ಕರ್​ ಬೌಲಿಂಗ್​ ಮೂಲಕ ಔಟ್ ಮಾಡಿದ್ದರು. ಅದಕ್ಕಿಂತ ಮೊದಲು ಯುವ ವೇಗಿ ಎರಡು ಸಿಕ್ಸರ್​ಗಳನ್ನು ಬಿಟ್ಟುಕೊಟ್ಟರು.

ಡೆಲ್ಲಿ ಪರ ಕುಲ್ದೀಪ್ ಯಾದವ್ 29 ರನ್ ನೀಡಿ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಡಿಸಿ ತಂಡ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿತು. ಏತನ್ಮಧ್ಯೆ, ಶುಭ್​ಮನ್​ ಗಿಲ್ ನೇತೃತ್ವದ ತಂಡವು ಕಡಿಮೆ ನೆಟ್ ರನ್ ರೇಟ್ ( ನೊಂದಿಗೆ ಏಳನೇ ಸ್ಥಾನದಲ್ಲಿದೆ.

ನೋರ್ಜೆಗೆ ಕಠಿಣ ಸಮಯ: ರಿಷಭ್ ಪಂತ್

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ನಿರ್ಣಾಯಕ 19 ನೇ ಓವರ್​​ಗೆ ಅನ್ನು ನೋರ್ಜೆ ಬದಲಿಗೆ ರಸಿಕ್​ಗೆ ಬೌಲಿಂಗ್ ನೀಡುವ ನಿರ್ಧಾರವನ್ನು ಬಹಿರಂಗಪಡಿಸಿದ್ದರು. ಫಾರ್ಮ್ ನಲ್ಲಿರುವ ಬೌಲರ್ ಅನ್ನು ಅವಲಂಬಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ನೋರ್ಜೆ ಕಠಿಣ ಸಮಯ ಎದುರಿಸುತ್ತಿದ್ದರು. ಟಿ20 ಒಂದು ತಮಾಷೆಯ ಆಟ, 14-15 ಓವರ್​ಗಳ ನಂತರ ಚೆಂಡು ಚೆನ್ನಾಗಿ ಬ್ಯಾಟರ್​ಗಳಿಗೆ ಸಿಗುತ್ತದೆ. ಆದ್ದರಿಂದ ನಾವು ರಸಿಕ್ ಅವರನ್ನು ನಂಬಲು ಬಯಸಿದೆವು. ಆಟದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿರುವ ಯಾರನ್ನಾದರೂ ಯಾವಾಗಲೂ ನಂಬಲೇಬೇಕು. ಇದು ನಾಯಕ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಅದು ಕೆಲವೊಮ್ಮೆ ಫಲಿತಾಂಶ ಕೊಡುತ್ತದೆ,”ಎಂದು ರಿಷಭ್ ಪಂತ್ ಹೇಳಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಕ್ಯಾಪಿಟಲ್ಸ್ ಪವರ್ ಪ್ಲೇನಲ್ಲಿ 44 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ರಿಷಭ್ ಪಂತ್ ಹಾಗೂ ಅಕ್ಷರ್ ಪಟೇಲ್ ನಾಲ್ಕನೇ ವಿಕೆಟ್​ಗೆ 113 ರನ್​ಗಳ ಜೊತೆಯಾಟ ನೀಡಿದರು. ಅಕ್ಷರ್ 43 ಎಸೆತಗಳಲ್ಲಿ 66 ರನ್ ಗಳಿಸಿದರೆ, ಪಂತ್ 43 ಎಸೆತಗಳಲ್ಲಿ 88 ರನ್ ಗಳಿಸಿದರು. ಅಂತಿಮವಾಗಿ ಭಾರತ 20 ಓವರ್​ಗೆ 4 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು.

ರಿಷಭ್ ಪಂತ್ ನೇತೃತ್ವದ ಭಾರತ ತಂಡ ಏಪ್ರಿಲ್ 27 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ (ಎಂಐ) ತಂಡವನ್ನು ಎದುರಿಸಲಿದೆ.

Continue Reading
Advertisement
Viral Video
ವೈರಲ್ ನ್ಯೂಸ್36 seconds ago

Viral Video: ವಿಷ ಸೇವಿಸಿ ವಿಡಿಯೊ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ; ಸಾವಿಗೆ ಕಾರಣವೇನು?

deadly murder
Latest24 mins ago

Deadly Murder: ಬರ್ಗರ್‌ ತಿಂದನೆಂದು ಸ್ನೇಹಿತನನ್ನೇ ಗುಂಡಿಟ್ಟು ಕೊಂದ!

Chemistry paper leak case
ಕೋರ್ಟ್25 mins ago

Chemistry paper leak : ದ್ವಿತೀಯ ಪಿಯು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; 17 ಆರೋಪಿಗಳು ಖುಲಾಸೆ

Ranji Trophy
ಪ್ರಮುಖ ಸುದ್ದಿ47 mins ago

Ranji Trophy : ರಣಜಿ ಟ್ರೋಫಿ ಆಡುವವರಿಗೆ ಇನ್ನು ಮುಂದೆ ಒಂದು ಕೋಟಿ ರೂ. ವೇತನ!

Fire Tragedy
ದೇಶ1 hour ago

Fire Tragedy: ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ; 6 ಮಂದಿ ಸಾವು

World Malaria Day April 25
ಆರೋಗ್ಯ1 hour ago

World Malaria Day: ಮಲೇರಿಯಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆ?

Bismah Maroof
ಕ್ರೀಡೆ1 hour ago

Bismah Maroof : ಹೆಣ್ಣು ಮಗುವಿನ ಸಮೇತ ಆಡಲು ಹೋಗುತ್ತಿದ್ದ ಪಾಕಿಸ್ತಾನದ ಮಹಿಳಾ ಕ್ರಿಕೆಟರ್ ನಿವೃತ್ತಿ

Modi in Karnataka Pm Modi to visit Karnataka on April 28 and 29 Raichur conference maybe cancelled
Lok Sabha Election 20241 hour ago

Modi in Karnataka: ಏಪ್ರಿಲ್‌ 28 – 29ರಂದು ರಾಜ್ಯಕ್ಕೆ ಮೋದಿ; ರಾಯಚೂರು ಸಮಾವೇಶ ರದ್ದು?

Lok Sabha Election
ಕರ್ನಾಟಕ1 hour ago

Lok Sabha Election: ನಾಳೆ ಮೊದಲ ಹಂತದ ಮತದಾನ; ಬೆಂಗಳೂರಿನಲ್ಲಿ ಏನಿರತ್ತೆ? ಏನಿರಲ್ಲ?

KKR vs PBKS
ಕ್ರೀಡೆ2 hours ago

KKR vs PBKS: ಪಂಜಾಬ್​ಗೆ ಮಸ್ಟ್​ ವಿನ್​ ಗೇಮ್; ಕೆಕೆಆರ್​ ಎದುರಾಳಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ2 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ5 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20247 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌