Kempe Gowda Jayanti 2023 The visionary who created a city around markets and lakesKempe Gowda Jayanti 2023 : ಬೆಂಗಳೂರನ್ನು ಸರ್ವಜನಾಂಗದ ತೋಟವಾಗಿಸಿದ ನಾಡಪ್ರಭು! - Vistara News

ಕರ್ನಾಟಕ

Kempe Gowda Jayanti 2023 : ಬೆಂಗಳೂರನ್ನು ಸರ್ವಜನಾಂಗದ ತೋಟವಾಗಿಸಿದ ನಾಡಪ್ರಭು!

ದಕ್ಷ ಆಡಳಿತ, ದೂರದೃಷ್ಟಿ ಯೋಜನೆಗಳ ಮೂಲಕ ನಾಡಿನ ಅಭಿವೃದ್ಧಿಗೆ ಭದ್ರ ಬುನಾದಿ ಕಲ್ಪಿಸಿದ ಕೆಂಪೇಗೌಡರ ಕೊಡುಗೆ ಅಪಾರ. ಇಂದು ಅವರ ಜಯಂತಿ (Kempe Gowda Jayanti 2023). ಈ ಸಂದರ್ಭದಲ್ಲಿ ಅವರ ಸಾಧನೆಗಳನ್ನು ಸ್ಮರಿಸೋಣ, ಅವರಿಗೆ ನಮಿಸೋಣ.

VISTARANEWS.COM


on

kempegowda jayanti
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
dr g v gopal
article about kempegowda

ಡಾ. ಜಿ.ವಿ. ಗೋಪಾಲ್
ನಾಡಪ್ರಭು ಕೆಂಪೇಗೌಡರು ವಿಶ್ವ ವಿಖ್ಯಾತ ಬೆಂಗಳೂರು ನಗರ ನಿರ್ಮಾಪಕ, ಸಾವಿರಾರು ಕೆರೆಗಳ ಸರದಾರ, ಮುನ್ನೋಟದ ಕನಸುಗಾರ, ನಾವ್ಯಾರು ಮರೆಯಲಾಗದ ನನಸುಗಾರ, ಕೋಟೆ ಪೇಟೆಗಳ ನಿರ್ಮಾಣದ ಸಾಕಾರ, ಕರುನಾಡಿನ ಹೆಮ್ಮೆಯ ಕುವರ, ಕೆಂಪೇಗೌಡ.

ಕರ್ನಾಟಕದ ಇತಿಹಾಸದಲ್ಲಿ ಕದಂಬ, ಗಂಗ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳು ಆಳಿವೆ. ಆದರೆ ಕೆಂಪೇಗೌಡರು ಈಗಲೂ ನಾಡಿನ ಚರಿತ್ರೆಯಲ್ಲಿ ಮತ್ತು ಜನಮಾನಸದಲ್ಲಿ ಉಳಿದಿದ್ದಾರೆ. ನಾಡಪ್ರಭು ಸ್ಥಳೀಯವಾಗಿ ಜನರ ಮಧ್ಯೆ ಇದ್ದು ಜನಕಲ್ಯಾಣ ಕಾರ್ಯ ಕೈಗೊಂಡ ಚಾರಿತ್ರಿಕ ಪುರುಷ ಕೆಂಪೇಗೌಡರ 514ನೇ ಜಯಂತಿ ಆಚರಣೆಯ ಈ ಸುಸಂಧರ್ಭದಲ್ಲಿ (Kempe Gowda Jayanti 2023) ಅವರ ಕಾರ್ಯ ಮತ್ತು ಸಾಧನೆಗಳನ್ನು ನೆನೆಯುವ ಮೂಲಕ ಅವರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

1510ರ ಜೂನ್-27ರಲ್ಲಿ ಜನಿಸಿದ ಕೆಂಪೆಗೌಡರು ಕೆಂಪನಂಜೇಗೌಡ ಮತ್ತು ಲಿಂಗಮಾಂಬೆಯವರ ನಾಲ್ವರು ಸುಮತ್ರರಲ್ಲಿ ಇವರು ಮೊದಲನೆಯವರು. ಆದ್ದರಿಂದ ಇವರನ್ನು ಹಿರಿಯ ಕೆಂಪೇಗೌಡ ಎಂತಲೂ ಕರೆಯುತ್ತೇವೆ. ಉಳಿದವರು ಕ್ರಮವಾಗಿ ವೀರೇಗೌಡ, ಬಸವೇಗೌಡ ಹಾಗೂ ಕೆಂಪಸೋಮೇಗೌಡ, ತಂದೆ ಕೆಂಪನಂಜೇಗೌಡ ವಿಜಯನಗರ ಸಾಮ್ರಾಜ್ಯದ ನಿಷ್ಟಾವಂತ ಸಾಮಂತ, ಯಲಹಂಕದ ಈ ಪ್ರಭುಗಳು ಭೈರವನ ಆರಾಧಕ ಪಾಳೇಗಾರರೆಂದು ಪ್ರಸಿದ್ದರಾಗಿದ್ದರು. ಕೆಂಪಮ್ಮ ಇವರ ಮನೆ ದೇವತೆ ಹಾಗೆ ಭೈರವನ ಆರಾಧಕರೂ ಆಗಿದ್ದರು.

ಹಾಗಾಗಿ ಈ ಮನೆತನದವರೆಲ್ಲರೂ ಕೆಂಪೇಗೌಡ ಎಂಬ ಹೆಸರನ್ನು ಇಟ್ಟುಕೊಂಡರು. ಒಂದನೇ ಕೆಂಪೇಗೌಡರು 1531ರಲ್ಲಿ ಪಟ್ಟಾಭಿಷಕ್ತರಾಗಿ 1569ರವರೆಗೆ ಸುಮಾರು 38 ವರ್ಷಗಳು ಆಡಳಿತ ನಡೆಸಿ ಇಹಲೋಕ ತ್ಯಜಿಸಿದ್ದರೂ ತಮ್ಮ ಸಾಧನೆಗಳಿಂದ ಈಗಲೂ ಚಿರಸ್ಮರಣೀಯರಾಗಿದ್ದಾರೆ.

ಹಂಪೆಯೇ ಸ್ಫೂರ್ತಿ!

ಕೆಂಪೇಗೌಡರು ಹೆಸರುಘಟ್ಟದ ಗುರುಕುಲದಲ್ಲಿ ಎಂಟು ವರ್ಷ ವಿದ್ಯಾಭ್ಯಾಸ ಮುಗಿಸಿ ಮಾಧವ ಭಟ್ಟರೆಂಬ ಗುರುಗಳ ಬಳಿ ಕಲಿತು ಸಂಸ್ಕಾರ ಮತ್ತು ಸಾಂಸ್ಕೃತಿಕ ಅನ್ಯನ್ಯತೆಯ ವ್ಯಕ್ತಿತ್ವ ಹೊಂದಿದ್ದರು. 1531 ರಿಂದ 1569ರವರೆಗೆ ಯಲಹಂಕದ ಮಹಾನಾಡ ಪ್ರಭುವಾದರು. ನಂತರ ಇವರ ಪುತ್ರ 2ನೇ ಕೆಂಪೇಗೌಡ (ಮಾಗಡಿ ಕೆಂಪೇಗೌಡ), ಮೂರನೇ ಕೆಂಪೇಗೌಡ ನಂತರ ಗಿಡ್ಡೆಗೌಡ ಮೊದಲಾದವರು ಆಳ್ವಿಕೆ ನಡೆಸಿದರು.

ಆದರೆ ಯಲಹಂಕ ಮಹಾನಾಡು ಹೆಚ್ಚು ಪ್ರಸಿದ್ದಿಗೆ ಬಂದದ್ದು ಹಿರಿಯ ಕೆಂಪೇಗೌಡರ ಕಾಲದಲ್ಲಿ ಪಟ್ಟಾಭಿಷಕ್ತರಾಗಿ ಚೆನ್ನಾಮಾಂಬೆಯವರೊಡನೆ ವಿವಾಹವಾದ ಇವರು ತಮ್ಮ ತಂದೆಯೊಡನೆ 1515ರಲ್ಲಿ ಹಂಪೆಯಲ್ಲಿ ಮೊಟ್ಟಮೊದಲು ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ಆರಂಭವಾದ ವಿಜಯದಶಮಿ ಉತ್ಸವ ನೋಡಲು ಹೋಗಿದ್ದ ಕೆಂಪೇಗೌಡರ ಮನಸ್ಸಿನಲ್ಲಿ ಅದಾಗಲೇ ಅಂತರಾಷ್ಟ್ರೀಯ ಸಾಂಸ್ಕೃತಿಕ, ವಾಣಿಜ್ಯ ಖ್ಯಾತಿ ಹೊಂದಿದ್ದ ಹಂಪೆಯಂತಹ ನಗರವನ್ನು ನಿರ್ಮಿಸುವ ಮನದಾಸೆಯ ಫಲವಾಗಿ 1537ರಲ್ಲಿ ಬೆಂಗಳೂರು ನಿರ್ಮಾಣ ಕಾರ್ಯ ಸಕಲ ಸಂಪ್ರದಾಯಗಳಂತೆ ಆರಂಭವಾಯಿತು.

ಶ್ರೀ ಕೃಷ್ಣದೇವರಾಯನ ನಂತರ ಅಧಿಕಾರಕ್ಕೆ ಬಂದ ಅಚ್ಯುತರಾಯರು 30,000 ಪಗೋಡ ಕಂದಾಯ ಬರುತ್ತಿದ್ದ ಹಳೇ ಬೆಂಗಳೂರು, ವರ್ತೂರು, ಬೇಗೂರು, ಹಲಸೂರು, ಕೆಂಗೇರಿ ತಲಘಟ್ಟಪುರ, ಜಿಗಣಿ, ಕುಂಬಳಗೂಡು, ಕಾನಳ್ಳಿ, ಬಾಣಾವರ ಹೆಸರುಘಟ್ಟ ಮುಂತಾದ ಹೋಬಳಿಗಳ ಆದಾಯವನ್ನು ಹೊಸನಗರ ನಿರ್ಮಿಸಲು ಮತ್ತು ಕೆರೆಕಟ್ಟೆ ಕಟ್ಟಲು ಅಚ್ಯುತರಾಯರು ಉಧಾರವಾಗಿ ನೀಡಿದರು.

kempegowda king of karnataka

ಹೊನ್ನಾರು ಬೆಂಗಳೂರು ನಿರ್ಮಾಣಕ್ಕೆ ಹಾದಿ

ಸಿರಿವಂತಿಕೆಯ ಹಂಪೆಯಂತಹ ವೈಭವಯುತ ನಗರ ನಿರ್ಮಾಣದ ಕನಸು ಹೊತ್ತಿದ್ದ ಕೆಂಪೇಗೌಡರು ವೃಷಭಾವತಿ ಮತ್ತು ಆರ್ಕಾವತಿ ನದಿಗಳಿಗೆ ಸೇರುತ್ತಿದ್ದ ತೊರೆಗಳು ಹರಿಯುವ ಪ್ರದೇಶ ಸಮುದ್ರಮಟ್ಟದಿಂದ 3000 ಅಡಿ ಎತ್ತರದ ಜಾಗ, ಉತ್ತಮ ಪರಿಸರ, ಫಲವತ್ತಾದ ಮಣ್ಣು ಇರುವ ಸ್ಥಳವನ್ನು ಆಯ್ಕೆಮಾಡಿದರು. ಅದು ಈಗಿನ ಯಲಹಂಕಕ್ಕೆ 10 ಮೈಲಿ ದೂರದಲ್ಲಿತ್ತು, ಚಿಕ್ಕಪೇಟೆ ಮತ್ತು ದೊಡ್ಡಪೇಟೆ ರಸ್ತೆಗಳು ಕೂಡುವ ಸ್ಥಳದಿಂದ ಭೂಮಿ ಪೂಜೆ-ವೇದ ಘೋಷಗಳೊಂದಿಗೆ 4 ಜನ ರೈತರು ನೇಗಿಲು ಕಟ್ಟಿದ ನಾಲ್ಕು ಜೊತೆ ಬಿಳಿ ಎತ್ತುಗಳು ನಾಲ್ಕು ದಿಕ್ಕಿಗೆ ಗೆರೆ ಎಳೆಯುತ್ತಾ ಸಾಗಲಾಗಿ ಪೂರ್ವ-ಪಶ್ಚಿಮದ ಸಾಲನ್ನು ಚಿಕ್ಕಪೇಟೆಯಾಗಿ ಉತ್ತರ-ದಕ್ಷಿಣ ಗೆರೆಯನ್ನು ದೊಡ್ಡಪೇಟೆ (ಈಗಿನ ಅವಿನ್ಯೂ ರಸ್ತೆ)ಯಾಗಿ ನಿರ್ಮಿಸಲಾಯಿತು.

ಎತ್ತುಗಳು ಪೂರ್ವದಲ್ಲಿ ಹಲಸೂರು ಗೇಟ್, ಪಶ್ಚಿಮದಲ್ಲಿ ಅರಳೇಪೇಟೆ ಉತ್ತರಕ್ಕೆ ಯಲಹಂಕ ದಕ್ಷಿಣಕ್ಕೆ ಲಾಲ್ ಬಾಗ್‌ ವರೆಗೆ ಸಾಗಿ ನಿಂತ ಸ್ಥಳಗಳು ಬೆಂಗಳೂರಿನ ಗಡಿಯಾದವು. ಅಲ್ಲಿ ಕಾವಲು ಕೋಟೆಗಳನ್ನು ಮಧ್ಯದಲ್ಲಿ ಕೋಟೆ ನಿರ್ಮಾಣ ಆರಂಭವಾಯಿತು. ನಾಲ್ಕು ದಿಕ್ಕಿಗೆ ನಾಲ್ಕು ಮಹಾದ್ವಾರ ಮತ್ತು ಐದು ಕಿರು ದ್ವಾರಗಳನ್ನೊಳಗೊಂಡ ಕೋಟೆ ನಿರ್ಮಾಣ ಆರಂಭವಾಯಿತು. ಈಗಿನ ವಿಕ್ಟೋರಿಯಾ ಆಸ್ಪತ್ರೆ ಇರುವಲ್ಲಿ ದಕ್ಷಿಣ ದಿಕ್ಕಿಗೆ ಮುಖ್ಯದ್ದಾ ನಿಲ್ಲಿಸಲು ತೀಮಾ ಶಾಸ್ರೋಕ್ತವಾಗಿ ಪೂಜೆ ಸಲ್ಲಿಸಿ ಭೈರವೇಶ್ವರನನ್ನು ನೆನೆದು ದೈತ್ಯಾಕಾರದ ಬಾಗಿಲು ನಿಲ್ಲಿಸುತ್ತಾರೆ. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬಾಗಿಲು ಬಿದ್ದಿರುವುದನ್ನು ಕಂಡು ಏಂತವಾದ ಕೆಂಪೇಗೌಡರು ಜ್ಯೋತಿಷಿಗಳ ಬಳಿ ಕೇಳಿದಾಗ ಗರ್ಭಿಣಿಯೊಬ್ಬಳ ಬಲಿಯ ಅವಶ್ಯಕತೆಯನ್ನು ಹೇಳಿದಾಗ ಗೌಡರು ಕಂಗಾಲಾಗಿದ್ದರು.

ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕೆಂಪೇಗೌಡರ ಮಗ ದೊಡ್ಡವೀರಪ್ಪಗೌಡರ ಪತ್ನಿ ಮಹಾನ್ ಸಾದ್ವಿ ಲಕ್ಷ್ಮೀದೇವಿ ಕಡು ಕತ್ತಲಿನಲ್ಲಿ ಮನೆದೇವರನ್ನು ನೆನೆದು ಕೋಟೆಬಾಗಿಲು ನಿಲ್ಲಲೆಂದು ಪ್ರಾರ್ಥಿಸಿ ಕುಡುಗೋಲಿನಿಂದ ಕೋಟೆಬಾಗಿಲಿಗೆ ಹಾರವಾದರು. ಮಾರನೆ ದಿನ ಬಂದು ನೋಡಿದಾಗ ಕೋಟೆ ಬಾಗಿಲು ನಿಂತಿತ್ತು. ಒಂದು ಕಡೆ ಸಂತೋಷ ಮತ್ತೊಂದು ಕಡೆ ಆಕ್ರಂಧನ ಮುಗಿಲು ಮುಟ್ಟುತ್ತದೆ. ತ್ಯಾಗ ಬಲಿದಾನ ಮಾಡಿದ ಲಕ್ಷ್ಮೀದೇವಿಯ ಮೃತ ದೇಹವನ್ನು ತವರಿನವರ ಬಯಕೆಯಂತೆ ಕೋರಮಂಗಲದಲ್ಲಿ ಅಂತ್ಯಸಂಸ್ಕಾರ ಮಾಡಿ, ನಾಡಿನ ಪ್ರಜೆಗಳ ಹಿತಕ್ಕಾಗಿ ಬಲಿದಾನ ಮಾಡಿದ ಲಕ್ಷ್ಮೀದೇವಿ ಸಮಾಧಿ ಸ್ಥಳದಲ್ಲಿ ಲಕ್ಷ್ಮೀದೇವಿ ಗುಡಿ ನಿರ್ಮಿಸಿದರು.

ನಗರದ ಭಾಗ್ಯದೇವತೆ ಲಕ್ಷ್ಮೀದೇವಿ ನಗರಕ್ಕೆ ಹಸಿದು ಬಂದವರಿಗೆ ಅನ್ನ ನೀರು ನೀಡು ತಾಯೆ ಎಂದು ಬೇಡಿ ಕೊಳ್ಳಲಾಯಿತು. ಇಂತಹ ತ್ಯಾಗ ಬಲಿದಾನದ ದಂತಕತೆಯಾಗಿದ್ದ ಲಕ್ಷ್ಮೀದೇವಿ ಪ್ರತಿಮೆಯನ್ನು ಮೇಯರ್ ಜಿ. ಪದ್ಮಾವತಿಯವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದೆ ಪ್ರತಿಷ್ಠಾಪಿಸಿ ಕೋಟೆ ಮತ್ತು ನಗರ ನಿರ್ಮಾಣದಲ್ಲಿ ಲಕ್ಷ್ಮೀದೇವಿಯವರ ಬಲಿದಾನವನ್ನು ಮುಂದಿನ ಪೀಳಿಗೆಗೆ ಇತಿಹಾಸವಾಗಿಸಿದ್ದಾರೆ.

Lakshmi Devi
Kempegowda's daughter-in-law
ಲಕ್ಷ್ಮೀದೇವಿಯ ಪ್ರತಿಮೆ

ಕೋಟೆಯೊಂದಿಗೆ ಪೇಟೆಗಳ ನಿರ್ಮಾಣ

ಕೆಂಪೇಗೌಡರ ದೃಷ್ಟಿಯಲ್ಲಿ ನಾಡು ಎಂದರೆ ಬರೀ ಕಲ್ಲು ಮಣ್ಣುಗಳಲ್ಲ. ಎಲ್ಲಾ ವರ್ಗದ ಜನಸಮುದಾಯ ಎನ್ನುವ ಬಹುತ್ವ ದೂರದೃಷ್ಟಿ ಅವರಲ್ಲಿತ್ತು, ವಾರದ ಏಳು ದಿನಗಳು ನಗರದಲ್ಲಿ ವಾಣಿಜ್ಯ ವ್ಯಾಪಾರ ಚಟುವಟಿಕೆಗಳು ನಡೆಯಬೇಕು. ಕೃಷಿ ಪ್ರಧಾನ ಆರ್ಥಿಕ ವ್ಯವಸ್ಥೆಯನ್ನು ವಿಸ್ತರಿಸಿ ರೈತರು ಬೆಳೆದ ಬೆಳೆಗಳನ್ನು ನಗರದಲ್ಲಿ ಮಾರಾಟ ಮಾಡಲು ಅನೇಕ ಪೇಟೆಗಳಿಗೆ ಅಸ್ತಿಭಾರ ಹಾಕಿದರು.

ಎಲ್ಲಾ ಸಮುದಾಯದವರು ವೃತ್ತಿಗಳಿಗೆ ತಕ್ಕಂತೆ ವ್ಯವಹರಿಸಲು ದೊಡ್ಡಪೇಟೆ (ಸಗಟು ಮಾರುಕಟ್ಟೆ) ಚಿಕ್ಕಪೇಟೆ (ಚಿಲ್ಲರೆ ಮಾರುಕಟ್ಟೆ), ಅಕ್ಕಿಪೇಟೆ, ರಾಗಿಪೇಟೆ, ಅರಳೆಪೇಟೆ, ತರಗುಪೇಟೆ, ಗಾಣಿಗರ ಪೇಟೆ, ಉಪ್ಪಾರಪೇಟೆ, ಕುಂಬಾರಪೇಟೆ, ತಿಗಳರ ಪೇಟೆ, ನಗರ್ತಪೇಟೆ, ಬಳೆಪೇಟೆ, ಮುತ್ಯಾಲಪೇಟೆ, ಗೊಲ್ಲರಪೇಟೆ ಮುಂತಾದ ಸಮುದಾಯ ಆಧಾರಿತ ಪೇಟೆಗಳನ್ನು ನಿರ್ಮಿಸಿ ಎಲ್ಲಾ ದಿಕ್ಕುಗಳಿಂದ ವರ್ತಕರನ್ನು ಆಹ್ವಾನಿಸಿ ಬೆಂಗಳೂರನ್ನು ವಿಜಯನಗರದ ರಾಜಧಾನಿ ಹಂಪೆಯಂತೆ ವಾಣಿಜ್ಯ ವ್ಯಾಪಾರಗಳ ಕೇಂದ್ರವಾಗಿಸಿ ಬಹುತ್ವ ಸಮ ಸಮಾಜದ ನಗರ ನಿರ್ಮಿಸಿದ ಬ್ಯಾಗಿ ಒಕ್ಕಲು ಹಿನ್ನಲೆಯುಳ್ಳ ಕಂಡಗೌಡರ ದೂರದೃಷ್ಟಿಗೆ ಮತ್ತೊಂದು ಸಾಕ್ಷಿಯಾಗಿದೆ.

ಕೆರೆಕಟ್ಟೆಗಳ ನಿರ್ಮಾಣ

ಒಕ್ಕಲು ಮನೆಯಲ್ಲಿ ಹುಟ್ಟಿ ಬಂದ ಕೆಂಪೇಗೌಡರಿಗೆ ಕೃಷಿಪ್ರಧಾನ ಆರ್ಥಿಕ ವ್ಯವಸ್ಥೆಗೆ ಮತ್ತು ನಗರಕ್ಕೆ ನೀರು ಅತಿ ತಿಳಿದಿದ್ದ ಅವರು ಸಾವಿರಾರು ಕೆರೆಕಟ್ಟೆಗಳನ್ನು ನಿರ್ಮಿಸಿದ್ದಾರೆ. ಮುಖ್ಯವಾಗಿ ಕೆಂಪಾಂಬುದಿ ಕೆರೆ, ಧರ್ಮಾಂಬುದಿ ಕೆರೆ, ಸಂಪಂಗಿರಾಮನ ಕೆರೆ, ಚೆನ್ನಮ್ಮನಕೆರೆ, ಹಲಸೂರು ಕೆರೆ, ಕಾರಂಜಿ ಕೆರೆ, ಕೆಂಪಾಪುರ ಅಗ್ರಹಾರ ಕೆರೆ, ಸಿದ್ದಿಕಟ್ಟೆಕೆರೆ ಮುಂತಾದ ಸರಣಿ ಕೆರೆಗಳನ್ನು ನಿರ್ಮಿಸಿ ಮಳೆಕೊಯ್ತು ರೀತಿ ನೀರು ಸಂಗ್ರಹದ ವ್ಯವಸ್ಥೆ ಮಾಡಿದ್ದರು. ಹಾಗೆ ಅರ್ಕಾವತಿ ನದಿಗೆ ಅಡ್ಡಲಾಗಿ ತಿಪ್ಪಗೊಂಡನಹಳ್ಳಿ ಬಳಿ ಮಣ್ಣಣೆ ನಿರ್ಮಿಸಿದ್ದಿರು. ಆದ್ದರಿಂದ ಇವರನ್ನು ಸಾವಿರ ಕೆರೆಗಳ ಸರದಾರನೆಂದರೆ ಅತಿಶಯೋಕ್ತಿಯಾಗಲಾರದು.

ಗುಡಿಗೋಪುರಗಳ ನಿರ್ಮಾಣ ಕಾರ್ಯ

1ನೇ ಕೆಂಪೇಗೌಡ/ಹಿರಿಯ ಕೆಂಪೇಗೌಡರು ದೈವ ಭಕ್ತರಾದ್ದರಿಂದ ಅನೇಕ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಮುಖ್ಯವಾಗಿ ಗವಿಗಂಗಾಧರೇಶ್ವರ, ದೊಡ್ಡಬಸವಣ್ಣ, ಜಲಕಂಠೇಶ್ವರ, ಹಲಸೂರಿನ ಸೋಮೇಶ್ವರ, ಗಣಪತಿ, ಆಂಜನೇಯ, ನಂಧೀಶ್ವರ, ಮಲ್ಲಿಕಾರ್ಜುನ ಶಿವಗಂಗೆಯ ದೇವಾಲಯದ ಪ್ರತಿಮೆಗಳು ಅಲ್ಲದೆ ನೆಲಪಟ್ಟಣ(ಮಾಗಡಿ) ಸಾವನದುರ್ಗ ಹುತ್ರಿದುರ್ಗ, ಹುಲಿಯೂರುದುರ್ಗ ಇನ್ನೂ ಮುಂತಾದ ಕಡೆ, ಕೆರೆಕಟ್ಟೆ, ಅಗ್ರಹಾರ ದೇವಾಲಯಗಳನ್ನು 1ನೇ ಕೆಂಪೇಗೌಡ, 2ನೇ ಕೆಂಪೇಗೌಡ 3ನೇ ಕೆಂಪೇಗೌಡರು ನಿರ್ಮಿಸಿದ್ದಾರೆ.

ವಿದೇಶಿಯರ ದೃಷ್ಟಿಯಲ್ಲಿ ವಿಜಯನಗರದ ರಾಜಧಾನಿ ಹಂಪೆ ಹೇಗೆ 60 ಮೈಲಿ ಸುತ್ತಳತೆ, ಕಡಿದಾದ ಬೆಟ್ಟಗುಡ್ಡಗಳ ಮಧ್ಯೆ ಕೋಟೆಕೊತ್ತಲಗಳಿಂದ ಕೂಡಿತ್ತೋ ಹಾಗೆ ಯಲಹಂಕ ನಾಡಪ್ರಭುಗಳ ಬೆಂಗಳೂರಿನ ಕೋಟೆಯ ಸುತ್ತ 60 ಮೈಲಿ ವ್ಯಾಪ್ತಿಯಲ್ಲಿ ನಾಡಪ್ರಭುಗಳು ಗಿರಿದುರ್ಗಗಳನ್ನು ದೇವಾಲಯಗಳನ್ನು ಕೆರೆಕಟ್ಟೆಗಳನ್ನು ನಿರ್ಮಿಸಿದ್ದರು. ಉದಾಹರಣೆಗೆ ಮಾಗಡಿ, ಸಾವನದುರ್ಗ, ಹುಲಿಯೂರುದುರ್ಗ, ಹುತ್ರಿದುರ್ಗ, ಶಿವಗಂಗೆ ಬೆಟ್ಟಗಳಲ್ಲಿರುವ ಸ್ಮಾರಕಗಳೆ ಸಾಕ್ಷಿಯಾಗಿವೆ. ಅವು ಸಹ ಬೆಂಗಳೂರಿನಷ್ಟೆ ಐತಿಹಾಸಿಕ & ಸಾಂಸ್ಕೃತಿಕ ಮಹತ್ವ ಪಡೆಯುವಲ್ಲಿ ಒಕ್ಕಲು ಕುಲದ ಯಲಹಂಕ ನಾಡಪ್ರಭುಗಳು ಕಾರಣರಾಗಿದ್ದಾರೆ.

ಮಾಗಡಿ-ಕುಣಿಗಲ್‌ನ ಹಿರಿಮೆ ಹೆಚ್ಚಿತು!

ನಾಡಪ್ರಭುಗಳ ಚರಿತ್ರೆಯಲ್ಲಿ ಒಂದು ಮಾತಿದೆ ಅಂದರೆ “ಕುಂತು ಕುಣಿಗಲ್ ಗೆದ್ದ-ನಿಂತು ಮಾಗಡಿ ಗೆದ್ದ” ಎಂದು ಅಂದರೆ ಕೆಂಪೇಗೌಡರ ಕಾಲಕ್ಕೆ ಯಲಹಂಕ ಪ್ರಭುಗಳ ನಾಡು ಕೃಷ್ಣಗಿರಿಯಿಂದ-ನುಗ್ಗೆಹಳ್ಳಿವರೆಗೆ ಹಿಂದೂಪುರದಿಂದ ಕಾವೇರಿವರೆಗೆ ವ್ಯಾಪಿಸಿದ್ದು, ಇದರಲ್ಲಿ ಮಾಗಡಿ 2ನೇ ಕಂಡೇಗೌಡನ ಕಾಲಕ್ಕೆ ರಾಜಧಾನಿಯೂ ಆಗಿತ್ತು, ಹಾಗೇ ಹಿರಿಯ ಕೆಂಪೇಗೌಡರ ಕಾಲಕ್ಕೆ ಕುಣಿಗಲ್ ಸೀಮೆಯಲ್ಲಿ ಬರುವ ಹುತ್ರಿದುರ್ಗ-ಹುಲಿಯೂರು ದುರ್ಗಗಳು ಸೇನಾನೆಲೆ ಮತ್ತು ಮದ್ದುಗುಂಡುಗಳನ್ನು ತಯಾರಿಸುವ ಕೇಂದ್ರಗಳಾಗಿದ್ದವು.

ಸರಿಸುಮಾರು 3000 ವರ್ಷಗಳಷ್ಟು ಪುರಾತನ ಶಿಲಾ ಸಮಾಧಿಗಳನ್ನು ಹೊಂದಿರುವ ಇಲ್ಲೆ ಕೆಂಪೇಗೌಡರು ನಾಡರಕ್ಷಣೆಗಾಗಿ ನಿರ್ಮಿಸಿರುವ ಕೋಟೆ ಇದೆ. ಇದೊಂದು ಅದ್ಭುತ ಸ್ಥಳ. ಇಲ್ಲಿ ಟಂಕಶಾಲೆ, ಲೋಹಗಳಿಂದ ಯುದ್ಧಕ್ಕೆ ಬೇಕಾದ ಆಯುಧಗಳನ್ನು ತಯಾರಿಸುತ್ತಿದ್ದ ಕುರುಹುಗಳಿವೆ. ವನ್ಯ ಜೀವಿಗಳಾದ ಕರಡಿ, ಚಿರತೆ, ನವಿಲು, ನರಿ, ತೋಳ, ಉಡ, ಗೌಜುಗ ಪ್ರಭೇದದ ಪ್ರಾಣಿಗಳಿವೆ. ಹಾಗೆ ಸಾವನದುರ್ಗ-ಹುತ್ರಿದುರ್ಗ-ಶಿವಗಂಗೆ-ದೇವರಾಯನ ದುರ್ಗ ಬೆಟ್ಟ ಸಾಲುಗಳು ಆನೇ ದಾರಿಗಳೆಂದು ಪ್ರಸಿದ್ದಿ ಪಡೆದಿವೆ. ಹೀಗೆ ಕೆಂಪೇಗೌಡರು ಕುಣಿಗಲ್ ಹೆಟ್ಟೂರು, ರಾಮದುರ್ಗ, ಹುತ್ತಿದುರ್ಗ, ಹುಲಿಯೂರು ದುರ್ಗ, ಗುಡದಾರನಹಳ್ಳಿ, ಮಾಗಡಿ, ತಿಪ್ಪಗೊಂಡನಹಳ್ಳಿದರೆಗೆ ಸುರಕ್ಷಿತ ಬೆಟ್ಟಗುಡ್ಡಗಳಿಂದ ಸುತ್ತುಮದ ಮತ್ತು ನೈಸರ್ಗಿಕ ಜಲಮೂಲಗಳಾದ ಹಳ್ಳ ತೊರೆಗಳಿದ್ದ ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿ ನಾಡಪ್ರಭುವಾಗಿ ಆಳಿದ್ದಾರೆ.

ಅವರಿಗೆ ಈ ಭಾಗ ಹಂಪೆಯಷ್ಟೆ ಆಯಕಟ್ಟಿನ ಪ್ರದೇಶವೆಂಬ ಒಳನೋಟ ಮತ್ತು ವಿಶಾಲಜ್ಞಾನವಿತ್ತು, ಆದರೆ ತಾವು ಕಟ್ಟಿದ್ದ ನಾಡು ಈ ರೀತಿ ತನ್ನ ಪರಿಧಿಯನ್ನು ವಿಸ್ತರಿಸಿಕೊಂಡು ಪರಂಪರೆ, ಪ್ರಾಚೀನತೆ, ಸಂಸ್ಕೃತಿಗಳೊಡನೆ ವಿಶ್ವದರ್ಚೆ ಸೀಮೆಯಾಗಬಲ್ಲದು ಎಂಬ ದೂರದೃಷ್ಟಿ ಕೆಂಪೇಗೌಡರಲ್ಲಿ ಇತ್ತು. ಹಾಗಾಗಿ ಬೆಂಗಳೂರು ರಾಜ್ಯದ ಮತ್ತು ದೇಶದ ಮೂಲೆಮೂಲೆಗಳಿಂದ ಜಗತ್ತಿನ ನಾನಾ ಕಡೆಗಳಿಂದ ಜನರನ್ನು ಕೈಬೀಸಿ ಕರೆಯುತ್ತಿದೆ. ಆದರೆ ಇಲ್ಲಿ ಯಾರಿಗೂ ಅನ್ನ ನೀರು ಉದ್ಯೋಗ ವಸತಿ ಸಾರಿಗೆಯ ಕೊರತೆ ಇಲ್ಲ. ಅಂತಹ ಸಮೃದ್ಧ ಪ್ರದೇಶವಾಗಿದೆ. ಸರ್ವ ಜನಾಂಗದ ನೆಲೆಯಾಗಿದೆ. ಜ್ಞಾನದ ಕೇಂದ್ರವಾಗಿದೆ. ಸುಂದರವಾದ ಪ್ರಾಕೃತಿಕ ಕೌತುಕಗಳು ಈ ಸೀಮೆಯಲ್ಲಿವೆ. ಇವು ಬೆಂಗಳೂರನ್ನು ನಿರ್ಮಿಸಿ ಆಳಿದ ಕೆಂಪೇಗೌಡರಿಗೂ ಇಲ್ಲಿ ಬಾಳಿದ ಬಾಳುತ್ತಿರುವ ಜನರು ಪಡೆದಿರುವ ಪ್ರಕೃತಿಯ ಭಾಗ್ಯ ಸೀಮೆ ಎನ್ನಬಹುದು.

ಸಂಕಷ್ಟ ಎದುರಿಸಿದ್ದ ಕೆಂಪೇಗೌಡ

ಚರಿತ್ರೆಯಲ್ಲಿ ನಾವು ನೋಡಿ ಕಲಿಯಬೇಕಾಗಿರುವುದು ಮಹಾನ್ ವೃತ್ತಿಗಳೆಲ್ಲರೂ ಒಂದಲ್ಲ ಒಂದು ಕಷ್ಟ ನೋವು, ಅಪಮಾನ, ನಿಂಧನೆಗೊಳಗಾಗಿದ್ದವರ, ಅವೆಲ್ಲವನ್ನು ದಾಟಿ ಬಾಳಿ ತಮ್ಮ ಸಮಾಜಕ್ಕೆ ಬೆಳಕಾದವರು ಚರಿತ್ರೆಯಲ್ಲಿ ಅಜರಾಮರಾಗಿದ್ದಾರೆ. ಹಾಗೆ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರಿಗೂ ಬಂದಿತ್ತು. ಯಲಹಂಕದ ಸಿರಿ ಕೋಟೆ ಕಟ್ಟೆ, ಕಟ್ಟಡಗಳ ವೈಬೋಗ ಕಂಡು ಸಹಿಸದಾದ ಚನ್ನಪಟ್ಟಣದ ಕುಹಕಿಜಗದೇವರಾಯ, ಕೆಂಪೇಗೌಡರು ಬೈರವ ನಾಣ್ಯಗಳನ್ನು ಮುದ್ರಿಸಿ ಹವಣಿಸುತ್ತಿದ್ದಾನೆ ಸ್ವತಂತ್ರನಾಗಲು ಹವಣಿಸುತ್ತಿದ್ದಾನೆಂದು ದೊರೆ ಸದಾಶಿವರಾಯ ಮತ್ತು ಅಧಿಕಾರ ನಡೆಸುತ್ತಿದ್ದ ರಾಮರಾಯರಲ್ಲಿ ಚಾಡಿಹೇಳಿದನು. ಆಗ 1ನೇ ಕೆಂಪೇಗೌಡರನ್ನು ಆನೆಗೊಂದಿ ಸೆರೆಯಲ್ಲಿಡಲಾಯಿತು.

ಇಷ್ಟಾದರೂ ಕೆಂಪೇಗೌಡನ ವಂಶಸ್ಥರು ವಿಜಯನಗರಕ್ಕೆ ನಿಷ್ಟಾವಂತ ಪ್ರಜಾವಾತ್ಸಲ್ಯಕರಾಗಿ ನಡೆದು ಕೊಳ್ಳುತ್ತಿದ್ದರು. ಕುತಂತ್ರಿಗಳ ಸಾಮಂತಾಧಿಪತಿಗಳಾಗಿ, ತಿಳಿದು ಕೆಂಪೇಗೌಡರು ಬಿಡುಗಡೆಯಾದರು. ಕಾರವಾಸದಿಂದ ಬೆಂಗಳೂರಿಗೆ ಹಿಂತಿರುಗಿದ ಗೌಡರು ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಜನರು ಜಯಘೋಷ ಕೂಗಿದರು. ಕೆಂಪೇಗೌಡರನ್ನು ಬೆಳ್ಳಿ ಉಯ್ಯಾಲೆ ಮೇಲೆ ಕೂರಿಸಿ ಅವರಿಗೆ ಹಾಲಿನ ಅಭಿಷೇಕ ಮಾಡಿದರು. ಆ ಸ್ಥಳ ಉಯ್ಯಾಲೆ ಕಾವಲು ಎಂದು ಹೆಸರಾಗಿ ನಂತರ ವಯ್ಯಾಲಿಕಾವಲ್ ಆಗಿ ಕರೆಯಲ್ಪಡುತ್ತಿದೆ. ಇಂತಹ ಕೆಂಪೇಗೌಡರು 1569ರಲ್ಲಿ ಕುಣಿಗಲ್‌ ನಿಂದ ಹಿಂತಿರುಗುವಾಗ ಮರಣ ಹೊಂದಿದರೆಂದು ತಿಳಿದು ಬರುತ್ತದೆ.

ನಂತರ ಬೆಂಗಳೂರಿನ ಸಿರಿ ಸಂಪತ್ತು, ಜಲ-ನೆಲಗಳು ಧಾರ್ಮಿಕ ಉತ್ಸವಗಳು, ತಂಪಾದ ಹವಾಮಾನ ಸುಭೀಕ್ಷೆ ವಾತಾವರಣ, ವ್ಯಾಪಾರ, ಉದ್ಯೋಗದ ನೆಲೆ 1638ರ ವೇಳೆಗೆ ಬಿಜಾಪುರದ ಸೇನಾನಿ ರಣದುಲ್ಲಾಖಾನನ ವಶವಾಗಿ ಶಿವಾಜಿಯ ತಂದೆ ಷಹಾಜಿಯ ಜಹಾಂಗೀರ್ ಆಯಿತು. ನಂತರ 1ನೇ ಕೆಂಪೇಗೌಡನ ನಂತರದವರು ಮಾಗಡಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಕುಣಿಗಲ್ ಸೀಮೆಗೆ ಹೊರಳಿದರು. ಹೀಗಾಗಿ ಸ್ಥಾಪನೆಯಾದ ಶತಮಾನದ ಅಂತರದಲ್ಲಿ ಬೆಂಗಳೂರು ನಗರ ತನ್ನ ಭವ್ಯತೆ, ಸಿರಿವಂತಿಕೆಯಿಂದ ಅನ್ಯರ ವಶವಾಯಿತು.

ಆದರೆ ಕೆಂಪೇಗೌಡರು ಕಟ್ಟಿದ್ದ ಬಹುಜನ ಸಂಸ್ಕೃತಿಯ ಭವ್ಯನಗರ ಎಂದು ತನ್ನ ಭವ್ಯತೆ ಮತ್ತು ಮಹತ್ವವನ್ನು ಕಳೆದುಕೊಂಡಿಲ್ಲ. ರಾಜ್ಯದ ಪ್ರಜಾಪ್ರಭುತ್ವದ ಶಕ್ತಿ ಕೇಂದ್ರವಾಗಿರುವ ನಗರ ಶ್ರೀಮಂತ ನಗರವಾಗಿದೆ. ಪ್ರಗತಿಯದಾಪುಗಾಲು ಇಡುತ್ತಾ ಜಗತ್ತಿನ ಜನಮನ ಸೂರೆಗೊಳ್ಳುತ್ತಿದೆ.

ಇದನ್ನೂ ಓದಿ : Kempegowda Jayanti | ಬೆಂಗಳೂರನ್ನು ದೇಗುಲಗಳ ನಗರವನ್ನಾಗಿಸಿದ ಕೆಂಪೇಗೌಡ

ಇಂತಹ ನಗರದಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 11-11-2022ರಂದು 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಅದರ ಹೆಸರು `ಪ್ರಗತಿ ಪ್ರತಿಮೆ’ (Statue of Prosperity). ಇದರ ಪಕ್ಕದಲ್ಲಿಯೇ ಥೀಮ್‌ ಪಾರ್ಕ್‌ ಕೂಡ ನಿರ್ಮಿಸಲಾಗಿದ್ದು, ಇದೊಂದು ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ. 22,000 ಹಳ್ಳಿ, ಪಟ್ಟಣ ನಗರಗಳಿಂದ ತಂದ ಮಣ್ಣನ್ನು ಥೀಮ್ ಪಾರ್ಕ್‌ನಲ್ಲಿ ಬಳಸಲಾಗಿದೆ.

Kempegowda statue

“ಕೆರೆಯಂ ಕಟ್ಟಿಸು”, “ಬಾವಿಯಂ ತೋಡಿಸು”, “ದೇವಗಾರಂ ನಿರ್ಮಿಸು” ಎಂಬ ನಾಣ್ಣುಡಿಯಂತೆ ಎಲ್ಲವನ್ನು ಮಾಡಿದ್ದ ʻಗಂಡಭೇರುಂಡ’ ಎಂಬ ಬಿರುದು ಹೊಂದಿದ್ದ ಕೆಂಪೇಗೌಡರ ಜಯಂತಿ ಸಂದಂರ್ಭದಲ್ಲಿ ಅವರಿಗೆ ನಮ್ಮೆಲ್ಲರ ನಮನಗಳು ಮುಂದೆ ನಾವೆಲ್ಲರೂ ಕೆಂಪೇಗೌಡರ ದೂರದರ್ಶಿತ್ವ ಮತ್ತು ಬಹುತ್ವದ ಮನೋ ಧರ್ಮದೊಂದಿಗೆ ಬದುಕುತ್ತಾ ನಾಡಿನ ಖ್ಯಾತಿಯನ್ನು ಎತ್ತಿ ಹಿಡಿಯೋಣ.

ಲೇಖಕರು ಇತಿಹಾಸ ಉಪನ್ಯಾಸಕರು, ತುಮಕೂರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Vijayapura News : ಪ್ರೀತಿಸಿದವಳನ್ನೇ ಮದುವೆಯಾಗಲು ಯುವಕನ ಹಠ; ಪರಸ್ಪರ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದರು!

Vijayapura News: ಘಟನೆಯಲ್ಲಿ ಯಾರು ಯಾರಿಗೆ ಪೆಟ್ರೋಲ್ ಎರಚಿ ಹತ್ಯೆಗೆ ಯತ್ನಿಸಿದರು ಅನ್ನೋದು ತನಿಖೆಯಿಂದ ಹೊರಬರಬೇಕಿದೆ. ತಮ್ಮ ಪ್ರೀತಿಗೆ ಮೋಸವಾಗಿದ್ದು ರಾಹುಲ್ ಸಿಟ್ಟಿಗೆ ಕಾರಣವಾಗಿತ್ತು. ಇನ್ನೊಂದು ಕಡೆಗೆ ರಾಹುಲ್​ ಕಿರುಕುಳದಿಂದ ಯುವತಿ ಮನೆಯವರು ಬೇಸತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

VISTARANEWS.COM


on

Vijayapura news
Koo

ವಿಜಯಪುರ : ತಮ್ಮ ಮಗಳನ್ನು ಮದುವೆಯಾಗಲು ಬಂದ ಆಕೆಯ ಪ್ರಿಯಕರನ ಮೇಲೆ ಪೋಷಕರೇ ಪೆಟ್ರೋಲ್​ ಹಾಕಿ ಸುಟ್ಟಿರುವ ಪ್ರಕರಣವೊಂದು ವಿಜಯಪುರ ಜಿಲ್ಲೆಯ (Vijayapura News) ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ಅದರೆ, ಯುವತಿಯ ಪೋಷಕರು ಇದನ್ನು ನಿರಾಕರಿಸಿದ್ದು ಮಗಳನ್ನು ಕೊಡದಿರಲು ನಿರ್ಧರಿಸಿದ ನಮ್ಮನ್ನು ಸುಡಲು ಯುವಕ ಪೆಟ್ರೋಲ್ ತಂದಿದ್ದ ಎಂದು ಆರೋಪಿಸಿದ್ದಾರೆ. ಘಟನೆಯಲ್ಲಿ ಪ್ರಿಯಕರ ರಾಹುಲ್​ ರಾಮನಗೌಡ ಬಿರಾದಾರ ಸುಟ್ಟ ಗಾಯಗಳು ಹಾಗೂ ಮಾರಕಾಸ್ತ್ರಗಳ ಪೆಟ್ಟಿನಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಯುವತಿಯ ಮನೆಯ ನಾಲ್ವರು ಆಸ್ಪತ್ರೆ ಸೇರಿದ್ದಾರೆ. ಘಟನೆ ಬಗ್ಗೆ ಎರಡೂ ಕಡೆಯಿಂದ ದೂರು ಹಾಗೂ ಪ್ರತಿದೂರು ದಾಖಲಾಗಿದೆ.

ಆಸ್ಪತ್ರೆ ಸೇರಿರುವ ಢವಳಗಿ ಗ್ರಾಮದ ರಾಹುಲ್ ರಾಮನಗೌಡ ಬಿರಾದಾರ ಅವರ ಕುಟುಂಬಸ್ಥರು ಆತನ ಪ್ರಿಯತಮೆ ಐಶ್ವರ್ಯ ಮದರಿ ಅವರ ಚಿಕ್ಕಪ್ಪ ಮುತ್ತು ಮದರಿ, ಚಿಕ್ಕಮ್ಮ ಸೀಮಾ ಮದರಿ ಎಂಬುವರ ಮೇಲೆ ದೂರು ದಾಖಲಿಸಿದ್ದಾರೆ. ಕನ್ಯೆ ಕೇಳಲು ಹೋದ ನಮ್ಮಣ್ಣನಿಗೆ ಬೆಂಕಿ ಹಾಕಿ ಸುಟ್ಟು ರಾಡ್​ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ ಐಶ್ವರ್ಯ ಸೇರಿದಂತೆ ಅವರ ಕುಟುಂಬಸ್ಥರು ಮದುವೆಗೆ ಒಪ್ಪದ ನಮ್ಮನ್ನು ಸುಡಲು ರಾಹುಲ್ ಯತ್ನಿಸಿದ್ದಾನೆ ಎಂದು ದೂರು ನೀಡಿದ್ದಾರೆ. ಶೇಕಡಾ 70ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿರುವ ರಾಹುಲ್​ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಪ್ರಕರಣ?

ರಾಹುಲ್ ರಾಮನಗೌಡ ಬಿರಾದಾರ ಅವರು ಐಶ್ವರ್ಯ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಮೂರು ವರ್ಷದಿಂದ ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಅಂತೆಯೇ ಅವರು ಮದುವೆಯಾಗಲು ನಿರ್ಧರಿಸಿದ್ದರು. ಇಬ್ಬರ ಪ್ರೀತಿ ವಿಚಾರ ತಿಳಿದ ಯುವತಿಯ ಪೋಷಕರು ಹುಡುಗನ ಮನೆಯವರಿಗೆ ಬರಲು ಹೇಳಿದ್ದರು. ಅವರು ಅಲ್ಲಿಗೆ ಹೋಗಿದ್ದಾಗ ಯುವತಿ ಮದುವೆ ನಿರಾಕರಿಸಿದ್ದಳು. ಆತನ ಗುಣ ಸರಿ ಇಲ್ಲ, ಹೀಗಾಗಿ ನಾನು ಮದ್ವೆಯಾಗಲ್ಲ ಎಂದು ಹೇಳಿದ್ದಳು. ಹುಡುಗಿ ಮದುವೆ ನಿರಾಕರಣೆ ಮಾಡಿದ್ದಾಳೆ ಎಂದು ರಾಹುಲ್ ಮನೆಯವರು ವಾಪಸ್ ಹೋಗಿದ್ದರು.

ಪ್ರೀತಿಸಿದ ಹುಡುಗಿಯೇ ಸಿಗಬೇಕು ಹಠ ಹಿಡಿದು ರಾಹುಲ್​ ಮತ್ತೆ ಹುಡುಗಿ ಮನೆಗೆ ಹೋಗಿದ್ದ. ಅಲ್ಲದೆ, ಮದುವೆಯಾಗದೇ ಹೋದರೆ ತಾವಿಬ್ಬರು ಜತೆಗಿದ್ದ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದ. ಫೋಟೋ ಬೆದರಿಕೆಗೆ ತಣ್ಣಾಗಾದ ಯುವತಿಯ ಕುಟುಂಬಸ್ಥರು ಆಕೆ ಒಪ್ಪಿದರೆ ಲಗ್ನ ಮಾಡಿ ಕೊಡುವುದಾಗಿ ರಾಜಿ ಮಾಡಿ ಕಳುಹಿಸಿದ್ದರು. ಆ ಬಳಿಕವೂ ವಿವಾದ ಮುಂದುವರಿದಿತ್ತು. ಅಲ್ಲದೆ, ಹಲವು ಬಾರಿ ರಾಜಿ ಪಂಚಾಯತಿ ಕೂಡಾ ಮಾಡಲಾಗಿತ್ತು.

ಇದನ್ನೂ ಓದಿ: Mandya News : ಬೆಳ್ಳೂರಿನಲ್ಲಿ ಮುಸ್ಲಿಮ್ ಯುವಕರ ಗುಂಪಿನಿಂದ ಅಭಿಲಾಷ್​ ಎಂಬುವರ ಮೇಲೆ ಮಾರಕ ಹಲ್ಲೆ

ಸೋಮವಾರ ಮತ್ತೆ ರಾಹುಲ್ ಬಿರಾದಾರ ಐಶ್ವರ್ಯಾ ಮನೆಗೆ ಮತ್ತೆ ಹೋಗಿದ್ದ. ಈ ವೇಳೆ ಮತ್ತೆ ಮಾತುಕತೆ ನಡೆದಿದೆ. ಐಶ್ವರ್ಯಾ ಪೋಷಕರ ಪ್ರಕಾರ ಆತ ಮಾತುಕತೆಗೆ ಬರುವಾಗ ಪೆಟ್ರೋಲ್ ತಂದಿದ್ದ. ಅದನ್ನು ನಮ್ಮ ಮೇಲೆ ಹಾಕಿ ಸುಡಲು ಯತ್ನಿಸಿದ್ದ. ಆದರೆ, ಯುವಕನ ಪೋಷಕರು ಹೇಳುವ ಪ್ರಕಾರ ಐಶ್ವರ್ಯಾ ಅವರ ಪೋಷಕರು ರಾಹುಲ್ ಕೈಯಲ್ಲಿದ್ದ ಮೊಬೈಲ್ ಕಸಿಯಲು ಯತ್ನಿಸಿದ್ದಾರೆ. ಕೊಡದೇ ಹೋದಾಗ ರಾಡ್​ನಿಂದ ತಲೆಗೆ ಹಲ್ಲೆ ಮಾಡಿದ್ದಾರೆ. ಬಳಿಕ ಮೊದಲೇ ತಂದಿಟ್ಟಿದ್ದ ಪೆಟ್ರೋಲ್​ನಿಂದ ಸುಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಡಿಎಸ್ಪಿ ಬಾಳಪ್ಪ ನಂದಗಾಂವ, ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈಗಳಾದ ಸಂಜಯ್ ತಿಪ್ಪರಡ್ಡಿ, ಎಸ್.ಆರ್.ನಾಯಕ ಅವರು ಭೇಟಿ ನೀಡಿ ತನಿಖೆ ಕೈಕೊಂಡಿದ್ದಾರೆ. ವಿಜಯಪುರದಿಂದ ಆಗಮಿಸಿದ್ದ ವಿಶೇಷ ತಂಡ ಘಟನಾ ಸ್ಥಳದಲ್ಲಿನ ಬೆರಳಚ್ಚು ಸೇರಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಘಟನೆಯಲ್ಲಿ ಯಾರು ಯಾರಿಗೆ ಪೆಟ್ರೋಲ್ ಎರಚಿ ಹತ್ಯೆಗೆ ಯತ್ನಿಸಿದರು ಅನ್ನೋದು ತನಿಖೆಯಿಂದ ಹೊರಬರಬೇಕಿದೆ. ತಮ್ಮ ಪ್ರೀತಿಗೆ ಮೋಸವಾಗಿದ್ದು ರಾಹುಲ್ ಸಿಟ್ಟಿಗೆ ಕಾರಣವಾಗಿತ್ತು. ಇನ್ನೊಂದು ಕಡೆಗೆ ರಾಹುಲ್​ ಕಿರುಕುಳದಿಂದ ಯುವತಿ ಮನೆಯವರು ಬೇಸತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Prajwal Revanna Case : ಮಾಜಿ ಶಾಸಕ ಪ್ರೀತಂ ಗೌಡ ಆಪ್ತ ಚೇತನ್​ಗೆ ಎಸ್ಐಟಿ ನೋಟಿಸ್

Prajwal Revanna Case: ಮಂಗಳವಾರ (ಮೇ 27ರಂದು) ನಾಳೆ ಯಾವುದೇ ಪರಿಸ್ಥಿತಿಯಲ್ಲಿ ಸಿಐಡಿ ಕಚೇರಿಗೆ ಹಾಜರಾಗಿ ವಿಚಾರಣೆಗೆ ಒಳಪಡಬೇಕು ಎಂದು ಎಸ್ಐಟಿ ತಿಳಿಸಿದೆ. ಪೆನ್ ಡ್ರೈವ್ ಪ್ರಕರಣ ಸದ್ದು ಮಾಡಿದಾಗ ಅದರಲ್ಲಿ ಕೇಳಿ ಬಂದ ಹೆಸರಗಳಲ್ಲಿ ಒಂದು ಹೆಸರು ಚೇತನ್​. ಸದ್ಯ ಎಸ್ಐಟಿ ಯಿಂದ ಚೇತನ್ ಗೌಡ ಗೆ ನೋಟಿಸ್ ಜಾರಿ ಮಾಡಲಾಗಿದ್ದು ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಪ್ರಜ್ವಲ್ ರೇವಣ್ಣಗೆ ಸೇರಿದ್ದು ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೊ ಹಗರಣದ (Prajwal Revanna Case ) ಸಂಬಂಧ ತನಿಖೆ ನಡೆಸುತ್ತಿರವು ಎಸ್​ಐಟಿ ಪೊಲೀಸರು ಮಾಜಿ ಶಾಸಕ ಪ್ರೀತಂ ಗೌಡ ಅವರ ಆಪ್ತ ಚೇತನ್ ಗೌಡ ಅವರಿಗೆ ನೋಟಿಸ್ ಜಾರಿ ಮಾಡಿದೆ. ಹಾಸನದ ಸೆನ್ ಪೋಲಿಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಮಂಗಳವಾರ (ಮೇ 27ರಂದು) ನಾಳೆ ಯಾವುದೇ ಪರಿಸ್ಥಿತಿಯಲ್ಲಿ ಸಿಐಡಿ ಕಚೇರಿಗೆ ಹಾಜರಾಗಿ ವಿಚಾರಣೆಗೆ ಒಳಪಡಬೇಕು ಎಂದು ಎಸ್ಐಟಿ ತಿಳಿಸಿದೆ. ಪೆನ್ ಡ್ರೈವ್ ಪ್ರಕರಣ ಸದ್ದು ಮಾಡಿದಾಗ ಅದರಲ್ಲಿ ಕೇಳಿ ಬಂದ ಹೆಸರಗಳಲ್ಲಿ ಒಂದು ಹೆಸರು ಚೇತನ್​. ಸದ್ಯ ಎಸ್ಐಟಿ ಯಿಂದ ಚೇತನ್ ಗೌಡ ಗೆ ನೋಟಿಸ್ ಜಾರಿ ಮಾಡಲಾಗಿದ್ದು ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.

ನಾಳೆ ಚೇತನ್ ಗೌಡ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದ್ದು, ಬೆಳಗ್ಗೆ 11 ಗಂಟೆ ಮೊದಲು ಬರಲು ಸೂಚನೆ ನೀಡಲಾಗಿದೆ. ಹೀಗಾಗಿ ಚೇತನ್​ 10 ಗಂಟೆ ಸುಮಾರಿಗೆ ಸಿಐಡಿ ಕಚೇರಿಗೆ ಬರಲಿದ್ದಾರೆ. ಪೆನ್ ಡ್ರೈವ್ ಲೀಕ್ ವಿಚಾರವಾಗಿ ಚೇತನ್ ಗೌಡ ನನ್ನು ಎಸ್.ಐ.ಟಿ ವಿಚಾರಿಸುವ ಸಾಧ್ಯತೆ ಇದೆ.

ಪ್ರಜ್ವಲ್‌ ಬಂದ್ರೆ ಎಸ್‌ಐಟಿ ಮುಂದೆ ನಾನೂ ಹಾಜರಾಗುವೆ: ಆರೋಪಿ ನವೀನ್‌ ಗೌಡ

ಪ್ರಜ್ವಲ್‌ ರೇವಣ್ಣ ಅವರು ಬರಲಿ ವಿಚಾರಣೆ ಎದುರಿಸಲಿ. ಸಂತ್ರಸ್ತೆಯರಲ್ಲಿ ಜೆಡಿಎಸ್‌ ಕಾರ್ಯಕರ್ತರೆಯರೇ ಹೆಚ್ಚಾಗಿದ್ದಾರೆ. ಅವರಿಗೆಲ್ಲ ನ್ಯಾಯ ದೊರಕಬೇಕು. ಪ್ರಜ್ವಲ್‌ ಕೇಸ್‌ನಿಂದ (Prajwal Revanna Case) ಎಷ್ಟೋ ಜನ ಹೆಣ್ಣು ಮಕ್ಕಳು ತಲೆ ಎತ್ತಿ ಓಡಾಡಲು ಆಗುತ್ತಿಲ್ಲ. ಎಸ್‌ಐಟಿ ಮುಂದೆ ವಿಚಾರಣೆಗೆ ಅವರೂ ಬರಲಿ, ನಾನೂ ಹಾಜರಾಗುತ್ತೇನೆ ಎಂದು ಅಶ್ಲೀಲ ವಿಡಿಯೊ ವೈರಲ್‌ ಪ್ರಕರಣದ ಆರೋಪಿ, ತಲೆಮರೆಸಿಕೊಂಡಿರುವ ನವೀನ್‌ ಗೌಡ ಹೇಳಿದ್ದಾನೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಪ್ರತ್ಯಕ್ಷವಾದ ಬೆನ್ನಲ್ಲೇ ನಿರೀಕ್ಷಣಾ ಜಾಮೀನಿಗೆ ಭವಾನಿ ರೇವಣ್ಣ ಅರ್ಜಿ

ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಮೇ 31ರಂದು ಬೆಂಗಳೂರಿಗೆ ಆಗಮಿಸುತ್ತೇನೆ ಎಂದು ಹೇಳಿದ ಬೆನ್ನಲ್ಲೇ ನವೀನ್‌ ಗೌಡ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾನೆ.

ಅಶ್ಲೀಲ ವಿಡಿಯೊ ಆರೋಪದಲ್ಲಿ ಏ. 23ರಂದು ನನ್ನ ಮೇಲೆಯೂ ಎಫ್‌ಐಆರ್‌ ದಾಖಲಿಸಿದ್ದಾರೆ. ಹಾಸನದಲ್ಲಿ ಕಳೆದ 10 ವರ್ಷದಲ್ಲಿ ಎಷ್ಟು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ನಾಪತ್ತೆಯಾಗಿದ್ದಾರೆ ಎಂಬುವುದು ಮರು ತನಿಖೆಯಾಗಬೇಕಿದೆ. ಈ ಆತ್ಮಹತ್ಯೆಗಳಿಗೂ ಕೂಡ ಪ್ರಜ್ವಲ್‌ ರೇವಣ್ಣಗೆ ಸಂಬಂಧವಿದೆ. ಎಸ್‌ಐಟಿಯವರುವ ವಿಚಾರಣೆಗೆ ನನ್ನನ್ನು ಕರೆದಿಲ್ಲ. ಅವರು ಕರೆದರೆ ನಾನು ಹೋಗುತ್ತೇನೆ. ನಾನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಕೇಸ್‌ ಹಾಕಿದ್ದಾರೆ ಹೇಳಿದ್ದಾನೆ.

ಅಶ್ಲೀಲ ವಿಡಿಯೊ ವಿಷಯ ಬಹಿರಂಗಪಡಿಸದಂತೆ ನನಗೂ ಪ್ರಜ್ವಲ್‌ ರೇವಣ್ಣ ಅವರು ಆಮಿಷ ಒಡ್ಡಿದ್ದರು. ಅವರ ಸಹಚರನನ್ನು ನನ್ನ ಭೇಟಿಯಾಗಲು ಕಳುಹಿಸಿದ್ದರು ಎಂದು ಆರೋಪಿಸಿದ್ದಾನೆ.

ನವೀನ್‌ ಗೌಡ ಯಾರು?

ನವೀನ್‌ ಗೌಡ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದು, ಶಾಸಕ ಜಮೀರ್‌ ಅಹಮ್ಮದ್‌ ಆಪ್ತರಲ್ಲೊಬ್ಬನಾಗಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಈತ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೀಲ್‌ಗೂ ಆಪ್ತರಾಗಿದ್ದರು. ಚುನಾವಣೆ ವೇಳೆ ಶ್ರೇಯಸ್‌ ಪರವಾಗಿ ಪ್ರಚಾರವನ್ನೂ ಮಾಡಿದ್ದ. ಈತನೇ ಹಾಸನ ಜಿಲ್ಲಾದ್ಯಂತ ಪೆನ್‌ಡ್ರೈವ್‌ ಅನ್ನು ಹಂಚಿಕೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ನವೀನ್ ಗೌಡ ಮೇಲೆ ಏ.23ರಂದು ಹಾಸನ ಸೆನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ಬಳಿಕ ನವೀನ್ ಗೌಡ ನಾಪತ್ತೆಯಾಗಿದ್ದ. ಆದರೆ, ಭಾನುವಾರ ಫೇಸ್‌ಬುಕ್‌ನಲ್ಲಿ ದಿಢೀರನೆ ಪ್ರತ್ಯಕ್ಷ

Continue Reading

ದೇಶ

Samsung Galaxy: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್ 55 5ಜಿ ಸ್ಮಾರ್ಟ್‌ಫೋನ್ ರಿಲೀಸ್‌; ಏನಿದರ ವಿಶೇಷತೆ?

Samsung Galaxy: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್, ಗ್ಯಾಲಕ್ಸಿ ಎಫ್ ಸರಣಿಯ ಅತ್ಯಂತ ಪ್ರೀಮಿಯಂ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಫ್ 55 5ಜಿ ಅನ್ನು ಇಂದು ಬಿಡುಗಡೆ ಮಾಡಿದ್ದು, ನಯವಾಗಿ ಮತ್ತು ಸೊಗಸಾಗಿರುವ ಗ್ಯಾಲಕ್ಸಿ ಎಫ್55 5ಜಿ ಪ್ರೀಮಿಯಂ ಬ್ಯಾಕ್ ವೀಗನ್ ಲೆದರ್ ಫಿನಿಶ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದ್ದು, ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಗ್ಯಾಲಕ್ಸಿ ಎಫ್55 5ಜಿ ಮೂಲಕ ಸ್ಯಾಮ್ ಸಂಗ್ ಎಫ್ ಸೀರೀಸ್ ಉತ್ಪನ್ನಗಳಲ್ಲಿಯೇ ಮೊದಲ ಬಾರಿಗೆ ಕ್ಲಾಸಿ ವೀಗನ್ ಲೆದರ್ ವಿನ್ಯಾಸದ ಸ್ಮಾರ್ಟ್‌ಫೋನ್ ಅನ್ನು ರಿಲೀಸ್‌ ಮಾಡಿದೆ.

VISTARANEWS.COM


on

Samsung Galaxy F55 5G Smartphone Released With Exciting Classy Veegan Leather Design
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್, ಗ್ಯಾಲಕ್ಸಿ ಎಫ್ ಸರಣಿಯ ಅತ್ಯಂತ ಪ್ರೀಮಿಯಂ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ (Samsung Galaxy) ಎಫ್ 55 5ಜಿ ಅನ್ನು ಇಂದು ಬಿಡುಗಡೆ ಮಾಡಿದೆ.

ನಯವಾಗಿ ಮತ್ತು ಸೊಗಸಾಗಿರುವ ಗ್ಯಾಲಕ್ಸಿ ಎಫ್55 5ಜಿ ಪ್ರೀಮಿಯಂ ಬ್ಯಾಕ್ ವೀಗನ್ ಲೆದರ್ ಫಿನಿಶ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದ್ದು, ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಗ್ಯಾಲಕ್ಸಿ ಎಫ್55 5ಜಿ ಮೂಲಕ ಸ್ಯಾಮ್ ಸಂಗ್ ಎಫ್ ಸೀರೀಸ್ ಉತ್ಪನ್ನಗಳಲ್ಲಿಯೇ ಮೊದಲ ಬಾರಿಗೆ ಕ್ಲಾಸಿ ವೀಗನ್ ಲೆದರ್ ವಿನ್ಯಾಸದ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

ಗ್ಯಾಲಕ್ಸಿ ಎಫ್55 5ಜಿ ಸೂಪರ್ ಅಮೋಲ್ಡ್+ ಡಿಸ್ಪ್ಲೇ, ಶಕ್ತಿಶಾಲಿ ಸ್ನ್ಯಾಪ್ ಡ್ರಾಗನ್ 7 ಜೆನ್ 1 ಪ್ರೊಸೆಸರ್, 45ಡಬ್ಲ್ಯೂ ಸೂಪರ್-ಫಾಸ್ಟ್ ಚಾರ್ಜಿಂಗ್, 4 ಜನರೇಷನ್ ಆಂಡ್ರಾಯ್ಡ್ ಅಪ್ ಡೇಟ್‌ಗಳು ಮತ್ತು 5 ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್‌ಗಳಂತಹ ವಿಭಾಗ-ಶ್ರೇಷ್ಠ ಫೀಚರ್‌ಗಳನ್ನು ಹೊಂದಿದ್ದು, ಬಳಕೆದಾರರು ಮುಂದಿನ ಹಲವು ವರ್ಷಗಳ ಕಾಲ ಹೊಸ ಫೀಚರ್ ಮತ್ತು ಹೆಚ್ಚಿನ ಭದ್ರತೆಯನ್ನು ಹೊಂದಬಹುದಾಗಿದೆ.

ಇದನ್ನೂ ಓದಿ: Fortis Hospital: ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

ಸ್ಯಾಮ್‌ಸಂಗ್ ಇಂಡಿಯಾದ ಎಂಎಕ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಈ ಕುರಿತು ಮಾತನಾಡಿ, “ಗ್ಯಾಲಕ್ಸಿ ಎಫ್55 5ಜಿ ಮೂಲಕ ಸ್ಯಾಮ್ ಸಂಗ್ ಎಫ್ ಸರಣಿಯಲ್ಲಿಯೇ ಮೊದಲ ಬಾರಿಗೆ ಸ್ಯಾಡಲ್ ಸ್ಟಿಚ್ ಮಾದರಿಯ ಕ್ಲಾಸಿ ವೀಗನ್ ಲೆದರ್ ವಿನ್ಯಾಸವನ್ನು ನೀಡಲಾಗುತ್ತಿದೆ. ಗ್ಯಾಲಕ್ಸಿ ಎಫ್55 5ಜಿ ಏಪ್ರಿಕಾಟ್ ಕ್ರಶ್ ಮತ್ತು ರೈಸಿನ್ ಬ್ಲ್ಯಾಕ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಬರಲಿದೆ. ಇದರ ಜತೆಗೆ, ಸೂಪರ್ ಅಮೋಲ್ಡ್+ 120ಹರ್ಟ್ಜ್ ಡಿಸ್ಪ್ಲೇ, ಶಕ್ತಿಯುತ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಹಾಗೂ 4 ಜನರೇಷನ್‌ಗಳ ಓಎಸ್ ಅಪ್‌ಡೇಟ್‌ಗಳು, ಐದು ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್ ಮತ್ತು ನಾಕ್ಸ್ ಸೆಕ್ಯೂರಿಟಿ ಫೀಚರ್‌ಗಳನ್ನು ಹೊಂದಿದೆ. ಈ ಮೂಲಕ ಸ್ಯಾಮ್‌ಸಂಗ್ ತನ್ನ ಗ್ರಾಹಕರಿಗೆ ಉನ್ನತ-ಶ್ರೇಣಿಯ ಅನುಭವಗಳನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ.

ಕ್ಲಾಸಿ ವೀಗನ್ ಲೆದರ್ ಡಿಸೈನ್

ಮಂತ್ರಮುಗ್ಧಗೊಳಿಸುವಂತೆ ವಿನ್ಯಾಸಗೊಳಿಸಲಾಗಿರುವ ಗ್ಯಾಲಕ್ಸಿ ಎಫ್55 5ಜಿ ವಿಶಿಷ್ಟವಾದ ಸ್ಯಾಡಲ್ ಸ್ಟಿಚ್ ಮಾದರಿ ಜತೆಗೆ ಕ್ಲಾಸಿ ವೀಗನ್ ಲೆದರ್ ಫಿನಿಶ್ ಬ್ಯಾಕ್ ಪ್ಯಾನೆಲ್ ಹೊಂದಿದೆ. ಕ್ಯಾಮೆರಾ ಡೆಕೊ ಗೋಲ್ಡನ್ ಬಣ್ಣದಲ್ಲಿ ಬರುತ್ತದೆ ಮತ್ತು ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ. ಏಪ್ರಿಕಾಟ್ ಕ್ರಶ್ ಮತ್ತು ರೈಸಿನ್ ಬ್ಲ್ಯಾಂಕ್ ಎಂಬ ಎರಡು ಮನಮೋಹಕ ಬಣ್ಣಗಳ ಆಯ್ಕೆಗಳು ಲಭ್ಯವಿದೆ. ಸ್ಮಾರ್ಟ್‌ಫೋನ್ ಕೇವಲ 180 ಗ್ರಾಂ ತೂಗುತ್ತದೆ ಮತ್ತು 7.8 ಎಂಎಂ ಅಗಲ ಹೊಂದಿದ್ದು, ನಯವಾಗಿದೆ ಹಾಗೂ ಬಳಸುವಾಗ ಅದ್ಭುತ ಅನುಭವ ಉಂಟು ಮಾಡಲಿದೆ.

ಇದನ್ನೂ ಓದಿ: Snake Rescue: ಶಿರಾದಲ್ಲಿ ಹೆಬ್ಬಾವು ರಕ್ಷಿಸಿದ ಮಾಜಿ ಸೈನಿಕ

6.7″ ಫುಲ್ ಎಚ್ಡಿ+ ಸೂಪರ್ ಅಮೋಲ್ಡ್+ ಡಿಸ್‌ಪ್ಲೇ ಹೊಂದಿರುವ ಗ್ಯಾಲಕ್ಸಿ ಎಫ್55 5ಜಿ ಗ್ರಾಹಕರಿಗೆ ಅತ್ಯದ್ಭುತ ದೃಶ್ಯ ವೈಭವ ಮತ್ತು ಸೊಗಸಾದ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ದೊಡ್ಡ ಡಿಸ್‌ಪ್ಲೇಯು 1000 ನಿಟ್‌ಗಳ ಸಾಮರ್ಥ್ಯದ ಹೆಚ್ಚಿನ ಬ್ರೈಟ್‌ನೆಸ್‌ ಹೊಂದಿದೆ ಮತ್ತು ವಿಷನ್ ಬೂಸ್ಟರ್ ತಂತ್ರಜ್ಞಾನದಿಂದಾಗಿ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಬಳಕೆದಾರರು ತಮ್ಮ ಮೊಬೈಲ್ ಅನ್ನು ಅಡೆತಡೆಯಿಲ್ಲದೆ ವೀಕ್ಷಣೆ ಮಾಡಬಹುದಾಗಿದೆ.

ಶಕ್ತಿಯುತ ಪ್ರೊಸೆಸರ್

ಗ್ಯಾಲಕ್ಸಿ ಎಫ್55 5ಜಿ 4ಎನ್ಎಂ ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 7 ಜೆನ್ 1 ಪ್ರೊಸೆಸರ್‌ ಹೊಂದಿದ್ದು, ಬಳಕೆದಾರರಿಗೆ ನಿರರ್ಗಳವಾಗಿ ಮಲ್ಟಿ ಟಾಸ್ಕಿಂಗ್ ಮಾಡುವ ಅವಕಾಶ ಒದಗಿಸುತ್ತದೆ. 5ಜಿಯ ಅಪ್ರತಿಮ ವೇಗ ಮತ್ತು ಸಂಪರ್ಕ ಇರುವ ಕಾರಣ ಬಳಕೆದಾರರು ಎಲ್ಲಿಗೆ ಹೋದರೂ ಕನೆಕ್ಟೆಡ್ ಆಗಿರಬಹುದು ಮತ್ತು ಸಂಪರ್ಕದಲ್ಲಿರಬಹುದು. ವೇಗವಾಗಿ ಡೌನ್‌ಲೋಡ್‌, ಸುಗಮ ಸ್ಟ್ರೀಮಿಂಗ್ ಮತ್ತು ನಿರರ್ಗಳವಾಗಿ ಬ್ರೌಸಿಂಗ್ ಮಾಡಬಹುದು. ಪ್ರೊಸೆಸರ್ ಉತ್ತಮ ಗುಣಮಟ್ಟದ ಆಡಿಯೋ ಮತ್ತು ದೃಶ್ಯಗಳನ್ನು ನೀಡುವುದರ ಜತೆಗೆ ಹೈಸ್ಪೀಡ್ ಕನೆಕ್ಟಿವಿಟಿ ಹೊಂದಿದ್ದು, ಸೊಗಸಾದ ಮೊಬೈಲ್ ಗೇಮಿಂಗ್ ಅನುಭವವನ್ನು ನೀಡುತ್ತದೆ.

ನೈಟೋಗ್ರಫಿ ಕ್ಯಾಮೆರಾ

ಗ್ಯಾಲಕ್ಸಿ ಎಫ್55 5ಜಿ ಹೆಚ್ಚಿನ ರೆಸೆಲ್ಯೂಶನ್ ಹೊಂದಿರುವ ಮತ್ತು ಶೇಕ್-ಫ್ರೀ ಅಂದರೆ ಕೈ ಅಲುಗಾಡಿದರೂ ಸ್ಪಷ್ಟವಾದ ವೀಡಿಯೋ ಮತ್ತು ಫೋಟೋಗಳನ್ನು ಶೂಟ್ ಮಾಡಬಹುದಾದ 50 ಎಂಪಿ (ಓಐಎಸ್) ನೋ ಶೇಕ್ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ ಕೈ ನಡುಕ ಅಥವಾ ಆಕಸ್ಮಿಕ ಅಲುಗಾಟಗಳಿಂದ ಉಂಟಾಗುವ ಮಸುಕುತನವನ್ನು ತಡೆಯುತ್ತದೆ. ಕ್ಯಾಮೆರಾ ಸೆಟಪ್ 8ಎಂಪಿ ಅಲ್ಟ್ರಾ-ವೈಡ್ ಸೆನ್ಸರ್ ಅನ್ನು ಸಹ ಒಳಗೊಂಡಿದೆ. ವಿಶೇಷವಾಗಿ ಗ್ಯಾಲಕ್ಸಿ ಎಫ್55 5ಜಿ ನೈಟೋಗ್ರಫಿ ಫೀಚರ್ ಜತೆಗೆ ಬರುತ್ತದೆ, ಈ ಫೀಚರ್ ಕಡಿಮೆ-ಬೆಳಕಿನ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎಫ್55 5ಜಿ ವಿವರವಾದ, ತೀಕ್ಷ್ಣವಾದ ಸೆಲ್ಫಿ ತೆಗೆಯಲು 50ಎಂಪಿ ಸಾಮರ್ಥ್ಯದ ಹೈ ರೆಸಲ್ಯೂಶನ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಸೂಪರ್-ಫಾಸ್ಟ್ ಚಾರ್ಜಿಂಗ್

ಗ್ಯಾಲಕ್ಸಿ ಎಫ್55 5ಜಿ ಪ್ಯಾಕ್‌ಗಳು 5000 ಎಂಎಎಚ್ ಬ್ಯಾಟರಿ ಹೊಂದಿದೆ. ಅದರಿಂದ ದೀರ್ಘ ಕಾಲ ಬ್ರೌಸಿಂಗ್, ಗೇಮಿಂಗ್ ಮತ್ತು ಬಿಂಜ್ ವೀಕ್ಷಣೆ ಮಾಡಬಹುದಾಗಿದೆ. ಗ್ಯಾಲಕ್ಸಿ ಎಫ್55 5ಜಿ ಬಳಕೆದಾರರಿಗೆ ಯಾವುದೇ ಅಡೆತಡೆ ಇಲ್ಲದೆ ಆರಾಮಾಗಿ ಮೊಬೈಲ್ ಬಳಸಲು, ಸಂಪರ್ಕದಲ್ಲಿರಲು, ಮನರಂಜನೆ ನೀಡಲು ಮತ್ತು ಉತ್ಪಾದಕತೆ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎಫ್55 5ಜಿ ಕಡಿಮೆ ಸಮಯದಲ್ಲಿ ಹೆಚ್ಚಿನ ಚಾರ್ಜ್ ಮಾಡಬಹುದಾದ 45ಡಬ್ಲ್ಯೂ ಸೂಪರ್-ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ.

ಇದನ್ನೂ ಓದಿ: New Financial Rules: ಜೂನ್ 1ರಿಂದ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತಿದೆಯೆ?

ಗ್ಯಾಲಕ್ಸಿ ಎಫ್55 5ಜಿ, ಹಲವಾರು ಹೊಸ ಆವಿಷ್ಕಾರಗಳನ್ನು ಹೊಂದಿದೆ. ಇದರ ವಾಯ್ಸ್ ಫೋಕಸ್‌ ಫೀಚರ್ ವಾತಾವರಣದಲ್ಲಿನ ಶಬ್ದವನ್ನು ಕಡಿತಗೊಳಿಸಿ ಅದ್ಭುತ ಕರೆ ಅನುಭವ ನೀಡುತ್ತದೆ ಮತ್ತು ಆ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸಲಿದೆ. ಕ್ವಿಕ್ ಶೇರ್ ವೈಶಿಷ್ಟ್ಯವು ಬಳಕೆದಾರರಿಗೆ ಫೈಲ್‌ಗಳು, ಫೋಟೋಗಳು ಮತ್ತು ಡಾಕ್ಯುಮೆಂಟ್‌ಗಳನ್ನು ನಿಮ್ಮ ಲ್ಯಾಪ್‌ಟಾಪ್ ಮತ್ತು ಟ್ಯಾಬ್ ಸೇರಿದಂತೆ ಯಾವುದೇ ಸಾಧನ ಅದು ದೂರದಲ್ಲಿದ್ದರೂ ಕೂಡ ತ್ವರಿತವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಫ್55 5ಜಿ ನೊಂದಿಗೆ ನಾಲ್ಕು ಜನರೇಷನ್‌ಗಳ ಓಎಸ್ ಅಪ್‌ಡೇಟ್‌ಗಳು ಮತ್ತು ಐದು ವರ್ಷಗಳ ಸೆಕ್ಯೂರಿಟಿ ಅಪ್ ಡೇಟ್‌ಗಳನ್ನು ಒದಗಿಸುತ್ತಿದ್ದು, ಬಳಕೆದಾರರು ಮುಂಬರುವ ವರ್ಷಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು ಮತ್ತು ಹೆಚ್ಚಿನ ಭದ್ರತೆಯನ್ನು ಆನಂದಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ.

Continue Reading

ಕರ್ನಾಟಕ

Kannada New Movie: ʼಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿʼ ಚಿತ್ರದ ಅನಿಮೇಷನ್‌ ಟೀಸರ್‌ ರಿಲೀಸ್‌

Kannada New Movie: ʼರಂಗಿ ತರಂಗʼ, ʼಅವನೇ ಶ್ರೀಮನ್ನಾರಾಯಣʼ ದಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಎಚ್.ಕೆ ಪ್ರಕಾಶ್ ನಿರ್ಮಾಣದ, “ದಿಯಾ” ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ ಹಾಗೂ ಅಭಿಷೇಕ್ ಎಂ ನಿರ್ದೇಶನದ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಚಿತ್ರದ ಅನಿಮೇಷನ್‌ ಟೀಸರ್ ಈಚೆಗೆ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

VISTARANEWS.COM


on

Kannada New Movie
Koo

ಬೆಂಗಳೂರು: ʼದಿಯಾʼ ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಚಿತ್ರದ ಅನಿಮೇಷನ್‌ ಟೀಸರ್ ಈಚೆಗೆ (Kannada New Movie) ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

ʼರಂಗಿ ತರಂಗʼ, ʼಅವನೇ ಶ್ರೀಮನ್ನಾರಾಯಣʼ ದಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಎಚ್.ಕೆ ಪ್ರಕಾಶ್ ನಿರ್ಮಾಣದ, “ದಿಯಾ” ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ ಹಾಗೂ ಅಭಿಷೇಕ್ ಎಂ ನಿರ್ದೇಶನದ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಚಿತ್ರದ ಅನಿಮೇಷನ್‌ ಟೀಸರ್, ಕನ್ನಡ ಚಿತ್ರರಂಗದಲ್ಲೇ ಹೊಸ ಪ್ರಯೋಗ ಎನ್ನಬಹುದಾಗಿದೆ. ಈ ಟೀಸರ್ ಮೂಲಕ ಚಿತ್ರದ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ಈ ಅನಿಮೇಷನ್‌ ಟೀಸರ್ ಗಾಗಿ ಏಳೆಂಟು ಜನ ನುರಿತ ತಂತ್ರಜ್ಞರು ಸುಮಾರು ತಿಂಗಳ ಕಾಲ ಶ್ರಮ ಪಟ್ಟಿದ್ದಾರೆ‌. ಅನಿಮೇಷನ್‌ ಟೀಸರ್ ಗೆ ಬರುತ್ತಿರುವ ರೆಸ್ಪಾನ್ಸ್ ಗೆ ಬಹಳ ಖುಷಿಯಾಗಿದೆ ಎನ್ನುತ್ತಾರೆ ನಿರ್ದೇಶಕರು.

ಇದನ್ನೂ ಓದಿ: SBI Warning: ನಕಲಿ ಸಂದೇಶಗಳ ಬಗ್ಗೆ ಎಚ್ಚರ‌ ಇರಲಿ; ಗ್ರಾಹಕರಿಗೆ ಎಸ್ ಬಿ ಐ ಸೂಚನೆ

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಬೆಂಗಳೂರು, ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆದಿದೆ.ಕೆಲವು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.

ದೀಕ್ಷಿತ್ ಶೆಟ್ಟಿ ಅವರಿಗೆ ನಾಯಕಿಯಾಗಿ “ಪ್ರೇಮಂ ಪೂಜ್ಯಂ” ಹಾಗೂ “ಕೌಸಲ್ಯ ಸುಪ್ರಜಾ ರಾಮ” ಚಿತ್ರಗಳ ಮೂಲಕ ಜನಪ್ರಿಯರಾಗಿರುವ ಬೃಂದಾ ಆಚಾರ್ಯ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಗೋಪಾಲ ಕೃಷ್ಣ ದೇಶಪಾಂಡೆ, ಉಷಾ ಭಂಡಾರಿ, ಭರತ್, ವಿಶ್ವನಾಥ್, ಹರೀಶ್ ಸಮಷ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಸ್ ಶರ್ಮಾ, ಶ್ರೀ ವತ್ಸ, ವಿನುತ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಅವರ ಜತೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ಅಭಿಷೇಕ್ ಎಂ. ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಭಿಷೇಕ್ ಅವರೇ ಬರೆದಿದ್ದಾರೆ. ಹೆಸರಾಂತ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಸಚಿನ್ ಹಾಗೂ ಅಭಿಷೇಕ್ ಅವರ ಸಾರಥ್ಯದ “ಪಿನಾಕ” ವಿ ಎಫ್ ಎಕ್ಸ್ ಸ್ಟುಡಿಯೋದಲ್ಲೇ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಚಿತ್ರದ ಟೀಸರ್‌ನ ಅನಿಮೇಷನ್‌ ವರ್ಕ್ ನಡೆದಿದೆ.

ಇದನ್ನೂ ಓದಿ: Fortis Hospital: ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣ, ರಘು ಮೈಸೂರ್ ಕಲಾ ನಿರ್ದೇಶನ ಹಾಗೂ ಭೂಷಣ್ ಮಾಸ್ಟರ್ ನೃತ್ಯ ಈ ಚಿತ್ರಕ್ಕಿದೆ.

Continue Reading
Advertisement
Vijayapura news
ಪ್ರಮುಖ ಸುದ್ದಿ4 hours ago

Vijayapura News : ಪ್ರೀತಿಸಿದವಳನ್ನೇ ಮದುವೆಯಾಗಲು ಯುವಕನ ಹಠ; ಪರಸ್ಪರ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದರು!

Prajwal Revanna Case
ಪ್ರಮುಖ ಸುದ್ದಿ5 hours ago

Prajwal Revanna Case : ಮಾಜಿ ಶಾಸಕ ಪ್ರೀತಂ ಗೌಡ ಆಪ್ತ ಚೇತನ್​ಗೆ ಎಸ್ಐಟಿ ನೋಟಿಸ್

Yuvraj Singh
ಕ್ರೀಡೆ5 hours ago

Yuvraj Singh : ಅಪಾರ್ಟ್​ಮೆಂಟ್ ವಿತರಣೆಯಲ್ಲಿ ಮೋಸ, ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ನೋಟಿಸ್​ ಕೊಟ್ಟ ಯುವರಾಜ್ ಸಿಂಗ್

Kavya Maran
ಪ್ರಮುಖ ಸುದ್ದಿ6 hours ago

Kavya Maran : ಸೋತಾಗ ಕಣ್ಣೀರು ಹಾಕಿದ ಕಾವ್ಯಾ ಮಾರನ್​, ​ ಡ್ರೆಸಿಂಗ್​ ರೂಮ್​ಗೆ ತೆರಳಿ ಆಟಗಾರರನ್ನೇ ನಗಿಸಿದರು; ಇಲ್ಲಿದೆ ವಿಡಿಯೊ

Viral Video
ದೇಶ6 hours ago

Viral Video: ಬೆಂಗಳೂರಿನಲ್ಲಷ್ಟೇ ಅಲ್ಲ, ಮೌಂಟ್ ಎವರೆಸ್ಟ್ ನಲ್ಲೂ ಈಗ ಟ್ರಾಫಿಕ್ ಜಾಮ್!!

Samsung Galaxy F55 5G Smartphone Released With Exciting Classy Veegan Leather Design
ದೇಶ6 hours ago

Samsung Galaxy: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್ 55 5ಜಿ ಸ್ಮಾರ್ಟ್‌ಫೋನ್ ರಿಲೀಸ್‌; ಏನಿದರ ವಿಶೇಷತೆ?

Kannada New Movie
ಕರ್ನಾಟಕ6 hours ago

Kannada New Movie: ʼಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿʼ ಚಿತ್ರದ ಅನಿಮೇಷನ್‌ ಟೀಸರ್‌ ರಿಲೀಸ್‌

Golden Star Ganesh Krishnam Pranaya Sakhi movie first song release in Mysore
ಕರ್ನಾಟಕ6 hours ago

Golden Star Ganesh: ಮೊದಲ ಹಾಡಿನಲ್ಲೇ ಮೋಡಿ ಮಾಡಿದ ʼಕೃಷ್ಣಂ ಪ್ರಣಯ ಸಖಿʼ

Mandya News
ಪ್ರಮುಖ ಸುದ್ದಿ6 hours ago

Mandya News : ಬೆಳ್ಳೂರಿನಲ್ಲಿ ಮುಸ್ಲಿಮ್ ಯುವಕರ ಗುಂಪಿನಿಂದ ಅಭಿಲಾಷ್​ ಎಂಬುವರ ಮೇಲೆ ಮಾರಕ ಹಲ್ಲೆ

11th Annual Mahotsav of Sri Annapurneswari Temple in Belagavi from 29th May
ಬೆಳಗಾವಿ6 hours ago

Belagavi News: ಬೆಳಗಾವಿಯಲ್ಲಿ ಮೇ 29ರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11ನೇ ವಾರ್ಷಿಕ ಮಹೋತ್ಸವ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ11 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 day ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 day ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು7 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು7 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌