NAVIKA Summit: ಮತ್ತೆ ಬಂದ ನಾವಿಕ! ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ತಯಾರಿ, ಕ್ಷಣಗಣನೆ - Vistara News

ಕರ್ನಾಟಕ

NAVIKA Summit: ಮತ್ತೆ ಬಂದ ನಾವಿಕ! ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ತಯಾರಿ, ಕ್ಷಣಗಣನೆ

ಕೋವಿಡ್‌ ನಂತರ ಸಾವಿರಾರು ಅನಿವಾಸಿ ಕನ್ನಡಿಗರು ಮೊದಲ ಬಾರಿಗೆ ಒಂದು ಸೂರಿನಡಿ ಸೇರುತ್ತಿದ್ದಾರೆ. ಇದೇ ಸೆಪ್ಟೆಂಬರ್ 1, 2 ಮತ್ತು 3ರಂದು ಅಮೆರಿಕಾದ ಟೆಕ್ಸಾಸ್ ರಾಜ್ಯದ ಆಸ್ಟಿನ್‌ನಲ್ಲಿ ಸಮಾವೇಶ ನಡೆಯಲಿದೆ.

VISTARANEWS.COM


on

navika1
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

:: ಬೆಂಕಿ ಬಸಣ್ಣ, ನ್ಯೂಯಾರ್ಕ್

ಇದೇ ಸಪ್ಟೆಂಬರ್ 1, 2 ಮತ್ತು 3ರಂದು ʼಆನಂದ- ಅನುಭವ- ಅನುಬಂಧ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಅಮೆರಿಕಾ (USA) ದೇಶದ ಟೆಕ್ಸಾಸ್ (Texas state) ರಾಜ್ಯದ ಆಸ್ಟಿನ್‌ನಲ್ಲಿ ನಡೆಯಲಿರುವ ʼ7ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2023ʼಕ್ಕೆ (NAVIKA world kannada summit) ಸಕಲ ಸಿದ್ಧತೆಗಳು ಮುಗಿದಿದ್ದು ಕ್ಷಣಗಣನೆ ಪ್ರಾರಂಭವಾಗಿದೆ.

ಕರುನಾಡ ಚಕ್ರವರ್ತಿ, ಸ್ಯಾಂಡಲ್‌ವುಡ್ ಕಿಂಗ್, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೊ ಡಾ. ಶಿವ ರಾಜ್‌ಕುಮಾರ್ (Shiva Rajkumar) ವಿಶೇಷ ಅತಿಥಿಯಾಗಿದ್ದಾರೆ. ಕನ್ನಡ ಸಿನಿಮಾ ರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (arjun janya) ಅವರ ತಂಡ ಪ್ರೈಮ್ ಟೈಮ್‌ನಲ್ಲಿ ಪ್ರದರ್ಶನ ಕೊಡಲಿದೆ. ಖ್ಯಾತ ಹಿನ್ನೆಲೆ ಗಾಯಕರಾದ ವ್ಯಾಸರಾಜ ಸಾಸೋಲೆ, ಕೀರ್ತನ್ ಹೊಳ್ಳ, ಇಂದು ನಾಗರಾಜ್, ಐಶ್ವರ್ಯ ರಂಗರಾಜನ್ ಮುಂತಾದ ಗಾಯಕರು ಭಾಗವಹಿಸಲಿದ್ದಾರೆ. ಉತ್ತರ ಕರ್ನಾಟಕದ ಪ್ರಸಿದ್ಧ ಸಹೋದರರಾದ ಖಾನ್ ಬ್ರದರ್ಸ್ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ʼಬೀಟ್ ಗುರುಸ್ʼ ಮ್ಯೂಸಿಕ್ ಬ್ಯಾಂಡ್ ವಿನೂತನ ರೀತಿಯಲ್ಲಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಲಿದೆ. ರಘು ದೀಕ್ಷಿತ್ (Raghu Dixit) ಈ ನಾವಿಕ ವಿಶ್ವಕನ್ನಡ ಸಮ್ಮೇಳನಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಕೊಡಲಿದ್ದಾರೆ.

ಈ ಸಮಾವೇಶದಲ್ಲಿ ಇನ್‌ವೆಸ್ಟ್‌ಮೆಂಟ್ ಫೋರಮ್, ವುಮೆನ್ಸ್ ಫೋರಮ್, ಸಾಹಿತ್ಯ ಗೋಷ್ಠಿ, ಆಧ್ಯಾತ್ಮಿಕ ವೇದಿಕೆ, ವೈದ್ಯರ ಫೋರಮ್, ಮೆರವಣಿಗೆ ಹೀಗೆ ಅನೇಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಸತತವಾಗಿ ನಡೆಯಲಿವೆ. ಈ ಸಮಾವೇಶದಲ್ಲಿ ಅನಿವಾಸಿಗಳು ಮಾತ್ರವಲ್ಲದೇ ಕರ್ನಾಟಕದ ಖ್ಯಾತನಾಮ ಕಲಾವಿದರಿಂದ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

“ಕೋವಿಡ್‌ ನಂತರ ಸಾವಿರಾರು ಅನಿವಾಸಿ ಕನ್ನಡಿಗರು ಮೊದಲ ಬಾರಿಗೆ ಒಂದು ಸೂರಿನಡಿ ಸೇರುತ್ತಿದ್ದಾರೆ. ಈ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ನೂರಾರು ಜನ ಸ್ವಯಂಸೇವಕರು ಕಳೆದ ಆರೇಳು ತಿಂಗಳಿಂದ ಹಗಲಿರುಳು ದುಡಿದಿದ್ದಾರೆ” ಎಂದು ನಾವಿಕ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ್ ರಾವ್ ತಿಳಿಸಿದ್ದಾರೆ.

“ಈ ನಾವಿಕ ವಿಶ್ವಕನ್ನಡ ಸಮ್ಮೇಳನಕ್ಕೆ ಕರ್ನಾಟಕ ಮತ್ತು ಅಮೇರಿಕಾದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಸಾವಿರಾರು ಸಂಖ್ಯೆಯ ಕನ್ನಡಾಭಿಮಾನಿಗಳನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇವೆ” ಎಂದು ಈ ಸಮ್ಮೇಳನದ ಸಂಚಾಲಕರಾದ ಸದಾಶಿವ ಕಲ್ಲೂರ್ ತಿಳಿಸಿದ್ದಾರೆ. ಇವರ ಜೊತೆಗೆ ಸಹ-ಸಂಚಾಲಕರಾಗಿ ಹ್ಯೂಸ್ಟನ್ ಕನ್ನಡ ಸಂಘದ ಅನು ಅಯ್ಯಂಗಾರ್, ಸ್ಯಾನ್ ಅಂಟೋನಿಯೋ ಕುವೆಂಪು ಕನ್ನಡ ಸಂಘದ ಕಾರ್ತಿಕ್ ಹುಲಿಕುಂಟೆ, ಡಲ್ಲಾಸ್ ಕನ್ನಡ ಬಳಗದ ಗೌರಿಶಂಕರ್ ಮತ್ತು ಆಸ್ಟಿನ್ ಕನ್ನಡ ಸಂಘದ ಪ್ರಕಾಶ್ ಉಡುಪ ಸೇವೆ ಸಲ್ಲಿಸುತ್ತಿದ್ದಾರೆ.

“ಈ ಸಮಾವೇಶದಲ್ಲಿ ನೃತ್ಯ, ಸಂಗೀತ, ನಾಟಕ, ಫ್ಯಾಷನ್ ಶೋ, ಸ್ಟ್ಯಾಂಡ್-ಅಪ್ ಕಾಮಿಡಿ, ಮ್ಯಾಜಿಕ್ ಶೋ, ಗಾಲ್ಫ್ ಪಂದ್ಯಾವಳಿ, ಮೆರವಣಿಗೆ- ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಮತ್ತು ಕರ್ನಾಟಕದ ಪ್ರಾದೇಶಿಕ ವೈವಿಧ್ಯಮಯ ಭೋಜನವನ್ನು ಏರ್ಪಡಿಸಲಾಗಿದೆ. ಜನರ ಒತ್ತಾಯದ ಮೇರೆಗೆ ಈಗ ಸಿಂಗಲ್ ಡೇ ರೆಜಿಸ್ಟ್ರೇಷನ್ ಸಹ ಓಪನ್ ಮಾಡಿದ್ದೇವೆ” ಎಂದು ನಾವಿಕ ಸಂಸ್ಥೆಯ ಸಹ-ಸಂಸ್ಥಾಪಕ, ಮಾಜಿ ಅಧ್ಯಕ್ಷ ಮತ್ತು ಸಲಹೆಗಾರರಾದ ವಲ್ಲೀಶ ಶಾಸ್ತ್ರಿ ಹೇಳಿದ್ದಾರೆ.

ಕರ್ನಾಟಕದ ಪ್ರಖ್ಯಾತ ಯುವ ಸ್ಟಾಂಡ್‌ಅಪ್ ಕಾಮಿಡಿಯನ್‌ಗಳಾದ ರಾಘವೇಂದ್ರ ಆಚಾರ್, ಕಾರ್ತಿಕ್ ಪತ್ತಾರ್ ಮತ್ತು ನಿರೂಪ್ ಪ್ರೇಕ್ಷಕರನ್ನು ಹಾಸ್ಯಲೋಕಕ್ಕೆ ಕೊಂಡೊಯ್ಯಲಿದ್ದಾರೆ. ನಾವಿಕ ವಿಶ್ವ ಕನ್ನಡ ಸಮಾವೇಶ 2023ಕ್ಕೆ ಒರಿಯನ್ ರಿ-ಕ್ಯಾಪಿಟಲ್ ಡೈಮಂಡ್ ಪ್ರಾಯೋಜಕ ಮತ್ತು ಸೈಕಲ್ ಪ್ಯೂರ್ ಅಗರಬತ್ತಿ ರಜತ ಪ್ರಾಯೋಜಕರಾಗಿದ್ದಾರೆ.

ನಾವಿಕ ಮೆರವಣಿಗೆ

ಈ ವರ್ಷ ನಾವಿಕ ಮೆರವಣಿಗೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸುವ ಜವಾಬ್ದಾರಿಯನ್ನು ಅಶಿತಾ ಗೋವರ್ಧನ್ ಹೊತ್ತಿದ್ದಾರೆ. ಈ ನಾವಿಕ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲಾ ಊರುಗಳ ಕನ್ನಡ ಸಂಘಗಳ ಬ್ಯಾನರ್‌ಗಳು ರೆಡಿಯಾಗಿದ್ದು ಅಮೆರಿಕಾದ ಕನ್ನಡ ಸಂಘಗಳು ಕರ್ನಾಟಕದ ವಿವಿಧ ಪ್ರದೇಶಗಳ ಚರಿತ್ರೆಯನ್ನು, ಪರಂಪರೆಯನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಿವೆ.

ಶುಭಾ ಪ್ರಶಾಂತ್ ಅವರ ನೇತೃತ್ವದ ಡೆಕೋರೇಷನ್ ಸಮಿತಿಯು ಸಮ್ಮೇಳನಕ್ಕೆ, ಸಭಾ ಆವರಣಕ್ಕೆ ಮತ್ತು ವೇದಿಕೆಗೆ ಬೇಕಾಗುವ ಎಲ್ಲಾ ಆಲಂಕಾರಿಕ ವಸ್ತುಗಳನ್ನು ತಯಾರಿಸಲು ಕಳೆದ ಮೂರು ತಿಂಗಳಿಂದ ಹಗಲಿರಳು ಶ್ರಮಪಡುತ್ತಿವೆ.

ನಿರ್ಮಲ ಮಾಧವ ಮತ್ತು ಪಂಪ ನೃತ್ಯ ಅಕಾಡೆಮಿಯಿಂದ ಅದ್ಭುತ “ನಾದ ನೃತ್ಯ” ಪ್ರದರ್ಶನ ನಡೆಯಲಿದೆ. ಮರೆಯಲಾಗದ ಸಂಗೀತದ ಪ್ರದರ್ಶನವನ್ನು ನೀಡಲು ಪ್ರತಿಭಾವಂತ ಸ್ಯಾಕ್ಸೋಫೋನ್ ಕಲಾವಿದೆ ಅಂಜಲಿ ಶಾನ್‌ಬೋಗ್ ಅವರು ನಾವಿಕಗೆ ಬರುತ್ತಿದ್ದಾರೆ. ಯಕ್ಷಹೆಜ್ಜೆ – ಯಕ್ಷಗಾನ ಮತ್ತು ಕಲಾವಿದ್ಯಾ ಶಾಲೆಯವರು “ಚಂದ್ರಹಾಸ ಚರಿತ್ರೆ”ಯನ್ನು ಪ್ರದರ್ಶಿಸಲಿದ್ದಾರೆ. 8-15 ವರ್ಷ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಇತ್ತೀಚಿನ ಜನರೇಟಿವ್ AI ಅನ್ನು ಬಳಸಿಕೊಂಡು ಕನ್ನಡದಲ್ಲಿ ಕಥೆ ಹೇಳುವ ಕಲೆಯನ್ನು ಕಲಿಸಲಾಗುತ್ತದೆ.

ಕನ್ನಡ ಬರಹಗಾರರಿಂದ ಲೇಖನ, ಕಥೆ, ಕವನ, ಪ್ರಬಂಧ, ನಗೆಹನಿ ಮತ್ತು ಹಾಸ್ಯ ಲೇಖನಗಳನ್ನುಆಹ್ವಾನಿಸಿ, ಅವುಗಳಲ್ಲಿ ಅತ್ಯುತ್ತಮ ಗುಣಮಟ್ಟದ ವೈವಿಧ್ಯಮಯ ಬರಹಗಳನ್ನು ಆಯ್ಕೆ ಮಾಡಿ “ಮಂದಾರ” ಹೆಸರಿನ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ. ಉತ್ತರ ಕರ್ನಾಟಕದ ಸೊಗಡಿನ ವೈವಿಧ್ಯಮಯ ಕಾರ್ಯಕ್ರಮವನ್ನು ನಾರ್ತ್ ಅಮೇರಿಕನ್ ಉತ್ತರ ಕರ್ನಾಟಕ ಅಸೋಸಿಯೇಷನ್ (NAUKA) ತಂಡದ ಸದಸ್ಯರು ಪ್ರಸ್ತುತಪಡಿಸಲಿದ್ದಾರೆ.

ನಾವಿಕ 2023 ಸಾಹಿತ್ಯ ವೇದಿಕೆಯು ಕನ್ನಡದ ಹೆಸರಾಂತ ಸಾಹಿತಿ ಡಾ. ಗಜಾನನ ಶರ್ಮ ಅವರೊಂದಿಗೆ ಮುಕ್ತ “ಸಂವಾದ”ವನ್ನು ಪ್ರಸ್ತುತ ಪಡಿಸುತ್ತಿದೆ. ಇವರು “ಪುನರ್ವಸು”, “ಪ್ರಮೇಯ”, “ಚೆನ್ನಭೈರಾದೇವಿ” ಮುಂತಾದ ಪ್ರಸಿದ್ಧ ಕೃತಿಗಳ ಲೇಖಕರು, ನಾಟಕ ಜಗತ್ತಿನ ಹೆಸರಾಂತ ನಟ, ನಾಟಕಕಾರ ಹಾಗೂ ನಿರ್ದೇಶಕರು, “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ” ಭಕ್ತಿಗೀತೆಯನ್ನು ರಚಿಸಿದವರು.

ಹೆಸರಾಂತ ಕಲಾವಿದರು ಮತ್ತು ಕಲಾಸ್ನೇಹಿ ಹಾಗೂ ನರ್ತನಯೋಗ ಶಾಲೆಯ ನಿರ್ದೇಶಕರು ಆದ ಯೋಗೇಶ್ ಕುಮಾರ್ ಮತ್ತು ಸ್ನೇಹಾ ನಾರಾಯಣ್ ದಂಪತಿಗಳಿಂದ ಸೊಗಸಾದ ನೃತ್ಯ ಕಾರ್ಯಕ್ರಮ “ಯುಗಳ ನೃತ್ಯ ಸಂಭ್ರಮ” ಪ್ರಸ್ತುತವಾಗಲಿದೆ. ಈ ವಿಶ್ವ ಕನ್ನಡ ಸಮಾವೇಶದಲ್ಲಿ ರಂಗಸ್ಥಳ ನಾಟಕ, ನಾವಿಕ ಕೋಗಿಲೆ ಗಾಯನ ಸ್ಪರ್ಧೆ, ನೃತ್ಯೋತ್ಸವ ನೃತ್ಯ, ಶೃಂಗಾರ ಸಿರಿ ಫ್ಯಾಶನ್ ಶೋ ಹೀಗೆ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ನಾವಿಕದ ಅತಿಥಿಗಳು

ನಾವಿಕ ಕೋಗಿಲೆ

ಟೀನೇಜ್ ಕೆಟಗರಿಯಲ್ಲಿ ಪ್ರಕೃತಿ ಉಪಾಧ್ಯ, ಸನ್ಮಿತಾ ಹೊಸೂರ್, ನಯನ ಪ್ರಸಾದ್ ಮತ್ತು ತನ್ವಿ ಪ್ರಸಾದ್ ಫೈನಲ್‌ಗೆ ಬಂದಿದ್ದು ಮುಖ್ಯ ವೇದಿಕೆಯಲ್ಲಿ “ಯುವ ನಾವಿಕ ಕೋಗಿಲೆ” ಪ್ರಶಸ್ತಿಗಾಗಿ ಸ್ಪರ್ಧಿಸಲಿದ್ದಾರೆ. ವಯಸ್ಕರ ವಿಭಾಗದಲ್ಲಿ ಅರ್ಚನಾ ಪ್ರದೀಪ್, ಅಕ್ಷಯ್ ರಾವ್, ಮಾಳವಿಕಾ ಪ್ರಸಾದ್, ಅಮೋಘ ಅಯ್ಯರ್, ಸೌಜನ್ಯ ಮೂರ್ತಿ ಮತ್ತು ನಿಶಾಂತ್ ಉಡುಪ ಫೈನಲ್ ರೌಂಡ್‌ಗೆ ಅರ್ಹತೆ ಪಡೆದಿದ್ದಾರೆ. ಈ ಆರು ಜನರಲ್ಲಿ ಯಾರು ಪ್ರತಿಷ್ಠಿತ “ನಾವಿಕ ಕೋಗಿಲೆ” ಪ್ರಶಸ್ತಿಯನ್ನು ಪಡೆಯುತ್ತಾರೆ ಎಂದು ತೀವ್ರ ಕುತೂಹಲ ಮೂಡಿದೆ.

ಶುಚಿ- ರುಚಿಯಾದ ಭರ್ಜರಿ ಊಟ

ಕರ್ನಾಟಕದ ಪ್ರಾದೇಶಿಕ ವೈವಿಧ್ಯಮಯ ಸವಿ ಭೋಜನವನ್ನು ಮೂರು ದಿನಗಳ ಕಾಲ ಉಚಿತವಾಗಿ ಅನುಭವಿಸಿ. ಸಮ್ಮೇಳನಕ್ಕೆ ಬರುವವರಿಗೆಲ್ಲ ʻಬೀಗರೂಟʼದ ಔತಣ ನೀಡೋಕೆ ನಾವು ರೆಡಿ ಎನ್ನುತ್ತಿದ್ದಾರೆ ಆಸ್ಟಿನ್‌ ನಿವಾಸಿ, ಈ ಸಮ್ಮೇಳನದ ಊಟೋಪಚಾರ ಸಮಿತಿಯ ಪ್ರಮುಖರಾದ ಸಂದೀಪ್‌ ಚಕ್ರವರ್ತಿ, ಸಿಯಾಟಲ್‌ನ ಅನಿಲ್‌ ಪುವ್ವಾಡಿ ಮತ್ತವರ ತಂಡ. ಈ ಪಟ್ಟಿಯಲ್ಲಿ ಮಂಗಳೂರು, ಕಾರವಾರ ಉಡುಪಿ ಭಾಗದ ತಿನಿಸುಗಳು, ಇತ್ತ ಉತ್ತರ ಕರ್ನಾಟಕದ ರೊಟ್ಟಿ ಎಣ್ಣೆಗಾಯಿ, ಅತ್ತ ಮೈಸೂರು ಭಾಗದ ಸಿಹಿ ತಿನಿಸುಗಳು, ಬೆಳಗಾವಿಯ ಕುಂದ, ದಾವಣಗೆರೆಯ ಬೆಣ್ಣೆ ದೋಸೆ ಹೀಗೆ ಹತ್ತು ಹಲವು ಬಗೆಯ ತಿಂಡಿ ತಿನಿಸುಗಳಿವೆ. ಸಮ್ಮೇಳನ ನಡೆಯುವ ಹೋಟೆಲ್ಲಿನಲ್ಲೇ ಸುಸಜ್ಜಿತ ಅಡುಗೆಮನೆ ಇರುವುದರಿಂದ ಬಹುತೇಕ ಅಡುಗೆ ಇಲ್ಲಿಯೇ ತಯಾರಿಸಿ ಬಡಿಸಲಾಗುವುದು. ಕೆಲವೊಂದು ಸಿಹಿ ತಿಂಡಿಗಳನ್ನು ಮತ್ತು ರೊಟ್ಟಿ, ಉಪ್ಪುಮೆಣಸು, ಹಪ್ಪಳ, ಸಂಡಿಗೆ ಹೀಗೆ ಒಂದಷ್ಟನ್ನು ಕರ್ನಾಟಕದ ಕೆಲವು ಭಾಗಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಪ್ರತಿಬಾರಿಯ ಊಟದಲ್ಲಿ 9-10 ಐಟಂಗಳು ಇರಲಿವೆ. ಬೆಳಗಿನ ಉಪಹಾರದಲ್ಲಿಯೂ 4-5 ಮಾದರಿಯ ತಿಂಡಿಗಳು ಇರಲಿವೆ. ಊಟದ ಸಮಯದಲ್ಲಿ ಸರತಿಸಾಲುಗಳನ್ನು ವಿಂಗಡಿಸಲಾಗುತ್ತದೆ. ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ನೂಕುನುಗ್ಗಲು ತಪ್ಪಿಸಲು ಹೆಚ್ಚು ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ.

ಹೂಡಿಕೆದಾರರಿಗೆ ವಿನೂತನ ವೇದಿಕೆ

“ಬಿಜ್ ಸ್ಪಾರ್ಕ್ – ಇನ್‌ಸ್ಪೈರ್, ಕನೆಕ್ಟ್ ಮತ್ತು ಥ್ರೈವ್” ಅನ್ನುವ ಧ್ಯೇಯದೊಂದಿಗೆ ಹೂಡಿಕೆದಾರರ ಸಮಾವೇಶವನ್ನು ನಾವಿಕದಲ್ಲಿ ಆಯೋಜಿಸಲಾಗಿದೆ. ಉದ್ಯಮದ ಪ್ರಮುಖರೊಂದಿಗೆ ಭೇಟಿ ಮಾಡಿ, ಸೌಹಾರ್ದಯುತ ಪರಿಚಯವನ್ನು ಮಾಡಿಕೊಂಡು ಮೌಲ್ಯಯುತ ಒಳನೋಟಗಳನ್ನು ಪಡೆದುಕೊಳ್ಳುವ ಈ ವಿಶೇಷ ಅವಕಾಶವನ್ನು ಒದಗಿಸಲಾಗಿದೆ. “ಏಳು ಪ್ರಮುಖ ಕಂಪನಿಗಳ ಪ್ರತಿನಿಧಿಗಳು ‌ತಮ್ಮ ಕಂಪನಿಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ವಿವರಿಸಲಿದ್ದಾರೆ” ಎಂದು ಈ ʻಇನ್‌ವೆಸ್ಟ್‌ಮೆಂಟ್‌ ಫೋರಂʼ ಮುಖ್ಯಸ್ಥ ಹಾಗೂ ಸಹ-ಸಂಚಾಲಕರಾದ ಗೌರಿ ಶಂಕರ್‌ ರಂಗನಗೌಡ ತಿಳಿಸಿದರು. ಇನ್‌ವೆಸ್ಟ್‌ಮೆಂಟ್‌ ಫೋರಂ ಸಮಿತಿಯಲ್ಲಿ ಗೌರಿ ಶಂಕರ್‌ ಅವರೊಂದಿಗೆ ಆಸ್ಟಿನ್‌ ನಗರದ ಪ್ರವೀಣ್‌ ಕುಮಾರ್‌, ನ್ಯೂಯಾರ್ಕ್‌ ನಗರದ ಶಿವಕುಮಾರ್‌ ಬೆಂಗಳೂರ್‌, ನ್ಯೂಜರ್ಸಿಯ ಡಾ.ಅಶೋಕ ಕಟ್ಟೀಮನಿ, ಡ್ಯಾಲಸ್‌ ನಗರದ ವೆಂಕಟ್‌ ಗಂಗಲ್‌ ಹಾಗೂ ನಾರಾಯಣ ಮಹಾಜನ್‌ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೀಟ್ ಗುರುಸ್

ನಮ್ಮ ಕರುನಾಡ ಕಲೆಯಾದ ಜಾನಪದ ಸಂಗೀತದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಅತ್ಯದ್ಭುತ ಪ್ರಾಕಾರಗಳ ಮೂಲಕ ಜನಪ್ರಿಯಗೊಳಿಸಿರುವ ಹೆಸರಾಂತ ವಾದ್ಯಸಂಗೀತಗಾರರಾದ ಬೀಟ್ ಗುರುಸ್ ತಂಡ ಬರುತ್ತಿದ್ದಾರೆ. 2005ರಲ್ಲಿ ಪ್ರಾರಂಭವಾದ ಬೀಟ್ ಗುರುಸ್ ತಂಡ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ತಾಳವಾದ್ಯ ಸಂಗೀತದ ಮೂಲಕ ಶುದ್ಧ ಸ್ಥಳೀಯ ಹಾಗು ಜಾನಪದ ಶೈಲಿಯನ್ನು ಎಲ್ಲರಿಗೂ ಪರಿಚಯಿಸುತ್ತಿದ್ದಾರೆ.

ಗಂಧದ ಗೊಂಬೆಗಳು

ಈ ಬಾರಿ ಚಿಕ್ಕ ಮಕ್ಕಳಿಗಾಗಿ ಗಂಧದ ಗೊಂಬೆಗಳು ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಮಕ್ಕಳು ಕನ್ನಡದ ಚಾರಿತ್ರಿಕ ವ್ಯಕ್ತಿಗಳ ವೇಷಭೂಷಣದೊಂದಿಗೆ ಕೆಲವು ಆಯ್ದ ಜಾಗಗಳಲ್ಲಿ ನಿಂತಿರುತ್ತಾರೆ. ನೀವು ಈ ಶಿಲಾ ಮೂರ್ತಿಯನ್ನು ಮುಟ್ಟಿದರೆ, ಅದಕ್ಕೆ ಜೀವ ಬಂದು ತನ್ನ ಇತಿಹಾಸವನ್ನು ಹೇಳುತ್ತದೆ.

ಆಧ್ಯಾತ್ಮಿಕ ವೇದಿಕೆ

ಗ್ರ್ಯಾಂಡ್ ಮಾಸ್ಟರ್ ಪ್ರಬೋಧ್ ಅಚ್ಯುತರು ಪ್ರಬುದ್ಧ ಆರೋಗ್ಯ ಮತ್ತು ಆಧ್ಯಾತ್ಮಿಕ ವೇದಿಕೆಯಲ್ಲಿ ಸ್ಪೀಕರ್ ಆಗಿ ಬರುತ್ತಿದ್ದಾರೆ. ಗೌರವಾನ್ವಿತ ವೈದ್ಯರು ಮತ್ತು ಆಧ್ಯಾತ್ಮಿಕ ನಾಯಕರೊಂದಿಗೆ ಈ ವೇದಿಕೆಯಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಶಾಂತಿ, ಸ್ಪಷ್ಟತೆ ಮತ್ತು ಉದ್ದೇಶವನ್ನು ತರುವಂತಹ ಅಭ್ಯಾಸಗಳ ಶಕ್ತಿಯನ್ನು ಅನ್ವೇಷಿಸಬಹುದು.

ಆರೋಗ್ಯ ಮತ್ತು ಆಧ್ಯಾತ್ಮಿಕ ಫೋರಮ್

ಈ ವೇದಿಕೆಯಲ್ಲಿ ಡಾ. ಪದ್ಮಿನಿ ಶಾಮ ಸುಂದರ, ಡಾ. ರಾಮಕೃಷ್ಣರಾವ್ ಮತ್ತು ಡಾ. ಕೃಷ್ಣಮೂರ್ತಿ ಜೋಯಿಸ್ ಮಾತನಾಡಲಿದ್ದಾರೆ. ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅರ್ಚನಾ ಮತ್ತು ಪ್ರಶಾಂತ್ ಕುಲಕರ್ಣಿ ಯೋಗ ಮತ್ತು ಮೆಡಿಟೇಶನ್ ಕ್ಯಾಂಪ್‌ಗಳನ್ನು ನಡೆಸಲಿದ್ದಾರೆ. ಡಾ. ಕೃಷ್ಣಮೂರ್ತಿ ಜೋಯಿಸ್ ಅವರು ಗಣೇಶ ಪೂಜೆಯೊಂದಿಗೆ ನಾವಿಕ ಸಮ್ಮೇಳನವನ್ನು ಆರಂಭಿಸಲಿದ್ದಾರೆ.

ವೈದ್ಯರ ಫೋರಮ್

ಪ್ರಸಿದ್ಧ ವೈದ್ಯರುಗಳು ಈ ವೇದಿಕೆಯಲ್ಲಿ ತಮ್ಮ ಪರಿಣತಿ ಮತ್ತು ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ! ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವೈದ್ಯರು ಮತ್ತು ನಿಯೋಜಿತರಿಗೆ ಓಹಿಯೋ ವೈದ್ಯಕೀಯ ವಿಶ್ವವಿದ್ಯಾನಿಲಯವು 4.00 AMA PRA ವರ್ಗ 1ರ CME ಕ್ರೆಡಿಟ್ ಅನ್ನು ಕೊಡಲಿದ್ದಾರೆ. ಎಂಡಿ ಕೌಶಿಕ್ ತಮ್ಮ ಮ್ಯಾಜಿಕ್ ಶೋನಿಂದ ಎಲ್ಲರನ್ನೂ ಮಂತ್ರ ಮುಗ್ಧ ಮಾಡಲಿದ್ದಾರೆ.

ವೆಂಡರ್ಸ್‌ ಬೂತ್‌

ಇನ್ನು ನಾನಾ ವ್ಯಾಪಾರ ವ್ಯವಹಾರಗಳು, ದೇಶಿ ತಿಂಡಿತಿನಿಸುಗಳು, ಭಾರತೀಯ ಸಿದ್ಧ ಉಡುಗೆ ತೊಡುಗೆ, ಸೀರೆಗಳು, ಜ್ಯುವೆಲರಿ, ಕಾನೂನು ಸಲಹೆ, ವಿಮಾ ಯೋಜನೆ, ಉಳಿತಾಯ ವಿಚಾರಗಳು, ಶೇರು ಮಾರ್ಕೆಟ್‌ ಹೂಡಿಕೆಗಳ ಬಗ್ಗೆ ಮಾಹಿತಿ, ಹೀಗೆ ಹತ್ತು ಹಲವು ವ್ಯಾವಹಾರಿಕ ಮಾದರಿಗಳನ್ನು ಉತ್ತೇಜಿಸಲು ಸಮ್ಮೇಳನದ ಆವರಣದಲ್ಲಿ ವೆಂಡರ್ ಬೂತ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಈ ಸಮಿತಿಯಲ್ಲಿ ಆಸ್ಟಿನ್‌ ನಗರದ ಸಂತೋಷ ಕೊಂಡಜ್ಜಿ, ಡ್ಯಾಲಸ್ಸಿನ ವಿಷ್ಣುವರ್ಧನ ರೆಡ್ಡಿ ಹಾಗೂ ರಾಘವ ಸೇಟ್‌, ನ್ಯೂಯಾರ್ಕ್‌ ನಗರದ ಪುಷ್ಪಲತ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ: ನಾವಿಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಉತ್ತರ ಕನ್ನಡ

SSLC Result 2024: ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಪ್ರೌಢಶಾಲೆಗಳ ಉತ್ತಮ ಸಾಧನೆ

SSLC Result 2024: 2023-24 ನೇ ಸಾಲಿನ ರಾಜ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಮೂರು ಪ್ರೌಢಶಾಲೆಗಳು ಉತ್ತಮ ಸಾಧನೆ ತೋರಿದೆ. ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ.98.48 ಫಲಿತಾಂಶ ದಾಖಲಿಸಿದ್ದು, ಶಾಲೆಯ ವಿದ್ಯಾರ್ಥಿನಿ ಪ್ರಣತಿ ವಿ. ಮೆಣಸುಮನೆ 625ಕ್ಕೆ 620 ಅಂಕ ಗಳಿಸಿ ರಾಜ್ಯಕ್ಕೆ 6ನೇ ಸ್ಥಾನ ಹಾಗೂ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದು ವಿಶೇಷವಾಗಿದೆ. ಅದೇ ರೀತಿ ಇಡಗುಂದಿಯ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣಗೊಂಡು ನೂರಕ್ಕೆ ನೂರು ಫಲಿತಾಂಶ ದಾಖಲಿಸಿ ಗಮನ ಸೆಳೆದಿದ್ದಾರೆ. ಯಲ್ಲಾಪುರದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯುೂ ಕೂಡಾ ಉತ್ತಮ ಸಾಧನೆ ಮಾಡಿದ್ದು ಶೇ.98.24 ಫಲಿತಾಂಶ ಪಡೆದಿದೆ.

VISTARANEWS.COM


on

Yallapur Vishwadarshana Group of institutions performed well in SSLC Result 2024
Koo

ಯಲ್ಲಾಪುರ: 2023-24ನೇ ಸಾಲಿನ ರಾಜ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ (SSLC Result 2024) ಪ್ರಕಟಗೊಂಡಿದ್ದು, ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಮೂರು ಪ್ರೌಢಶಾಲೆಗಳು ಉತ್ತಮ ಸಾಧನೆ ತೋರಿವೆ.

ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ.98.48 ಫಲಿತಾಂಶ ದಾಖಲಿಸಿದ್ದು, ಶಾಲೆಯ ವಿದ್ಯಾರ್ಥಿನಿ ಪ್ರಣತಿ ವಿ. ಮೆಣಸುಮನೆ 625ಕ್ಕೆ 620 ಅಂಕ ಗಳಿಸಿ ರಾಜ್ಯಕ್ಕೆ 6ನೇ ಸ್ಥಾನ ಹಾಗೂ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಅದೇ ರೀತಿ ಇಡಗುಂದಿಯ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣಗೊಂಡು ನೂರಕ್ಕೆ ನೂರು ಫಲಿತಾಂಶ ದಾಖಲಿಸಿ ಗಮನ ಸೆಳೆದಿದ್ದಾರೆ. ಪಟ್ಟಣದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯುೂ ಕೂಡ ಉತ್ತಮ ಸಾಧನೆ ಮಾಡಿದ್ದು, ಶೇ.98.24 ಫಲಿತಾಂಶ ಪಡೆದಿದೆ.

ಇದನ್ನೂ ಓದಿ: Olive Oil Benefits: ಆಲಿವ್‌ ಎಣ್ಣೆ ಕೇವಲ ಅಡುಗೆಗಲ್ಲ, ಮುಖದ ಚರ್ಮ ಹಾಗೂ ಕೂದಲ ಸೌಂದರ್ಯಕ್ಕೂ ಬೇಕು!

ಈ ಕುರಿತು ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ್‌ ಕೋಣೆಮನೆ ಅವರು ಸಂತಸ ವ್ಯಕ್ತಪಡಿಸಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. ವಿಶ್ವದರ್ಶನ ಶಿಕ್ಷಣ ಸಮೂಹವು ನಿರಂತರವಾಗಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮವಾದ ಪದವಿಪೂರ್ವ ಕಾಲೇಜು ಇದ್ದು, ಇಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಬಹುದಾಗಿದೆ. ಹತ್ತನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಸ್ವಂತ ಊರಿನಲ್ಲಿಯೇ ಮುಂದಿನ ಶಿಕ್ಷಣಕ್ಕಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆ: ಶೇ.98.48 ಫಲಿತಾಂಶ

ಪ್ರಣತಿ ವಿ. ಮೆಣಸುಮನೆ 625ಕ್ಕೆ 620 ಅಂಕ ಗಳಿಸಿ ಶೇ. 99.20 ಫಲಿತಾಂಶದೊಂದಿಗೆ ರಾಜ್ಯಕ್ಕೆ 6ನೇ ಸ್ಥಾನ, ಶಾಲೆಗೆ ಪ್ರಥಮ ಸ್ಥಾನ, ಸಿಂಚನಾ ಎಸ್. ಭಟ್ಟ 615 ಅಂಕ ಗಳಿಸಿ ಶೇ.98.40 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ, ತೇಜಸ್ ಎಸ್. ಹೆಗಡೆ 609 ಅಂಕ ಗಳಿಸಿ ಶೇ.97.44 ಫಲಿತಾಂಶದೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 66 ವಿದ್ಯಾರ್ಥಿಗಳಲ್ಲಿ 33 ಡಿಸ್ಟಿಂಕ್ಷನ್‌ನಲ್ಲಿ, 28 ವಿದ್ಯಾರ್ಥಿಗಳು ಪ್ರಥಮ ದರ್ಜೆ, 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿ: ಶೇ. 100% ಫಲಿತಾಂಶ ಸಾಧನೆ

ತಾಲೂಕಿನ ಇಡಗುಂದಿಯಲ್ಲಿರುವ ವಿಶ್ವದರ್ಶನ ಪ್ರೌಢಶಾಲೆಯು ಎಂಟನೇ ಬಾರಿಗೆ ನೂರಕ್ಕೆ ನೂರು ಸಾಧನೆ ಮಾಡಿದೆ. ಪರೀಕ್ಷೆಗೆ ಕುಳಿತ 35 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಗಣೇಶ ಶಾಂತಾರಾಮ ದೇಸಾಯಿ 587 (93.92%) ಪ್ರಥಮ ಸ್ಥಾನ, ನಂದಿತಾ ಮಹೇಶ ತಾಮ್ಸೆ 583 (93.28%) ದ್ವಿತೀಯ ಸ್ಥಾನ ಹಾಗೂ ಸುಬ್ರಹ್ಮಣ್ಯ ನಾರಾಯಣ ಭಟ್ಟ 571 (91.36%) ತೃತೀಯ ಸ್ಥಾನವನ್ನು ಗಳಿಸಿದ್ದಾರೆ.

ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆ, ಯಲ್ಲಾಪುರ: ಶೇ. 98.24 ಫಲಿತಾಂಶ

ಅನನ್ಯ ನಾಗೇಶ ಹೆಗಡೆ 579 ಅಂಕ ಗಳಿಸಿ ಪ್ರಥಮ ಸ್ಥಾನ, ವೇದಶ್ರೀ ವೆಂಕಟರಮಣ ಭಟ್ಟ 570 ಅಂಕ ಗಳಿಸಿ ದ್ವಿತೀಯ ಸ್ಥಾನ, ಪವನ್ ಚಂದ್ರಕಾಂತ ಮರಾಠಿ 563 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: Sensex Crash : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ, ಸೆನ್ಸೆಕ್ಸ್​ 1100 ಅಂಕಗಳಷ್ಟು ಪತನ

ಒಟ್ಟು 57 ವಿದ್ಯಾರ್ಥಿಗಳಲ್ಲಿ 10 ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್ 33 ವಿಧ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ 3 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

Continue Reading

ಕರ್ನಾಟಕ

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್!

SSLC Result 2024: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Result 2024) ಪ್ರಕಟಗೊಂಡಿದ್ದು, ಹಾಸನ ಜಿಲ್ಲೆಯಲ್ಲಿ ಅಪರೂಪದ ಪ್ರಸಂಗ ನಡೆದಿದೆ. ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್ ಆಗಿದ್ದಾರೆ. ಸಕಲೇಶಪುರ ತಾಲೂಕಿನ ಚಿನ್ನಳ್ಳಿ ಗ್ರಾಮದಲ್ಲಿ ಎರಡನೇ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ 38 ವರ್ಷದ ಜ್ಯೋತಿ.ಪಿ.ಆರ್. ಉತ್ತೀರ್ಣರಾಗಿದ್ದಾರೆ.

VISTARANEWS.COM


on

Mother passed SSLC exam with her son in Hassan
Koo

ಹಾಸನ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Result 2024) ಪ್ರಕಟಗೊಂಡಿದ್ದು, ಹಾಸನ ಜಿಲ್ಲೆಯಲ್ಲಿ ಅಪರೂಪದ ಪ್ರಸಂಗ ನಡೆದಿದೆ. ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್ ಆಗಿದ್ದಾರೆ. ಸಕಲೇಶಪುರ ತಾಲೂಕಿನ ಚಿನ್ನಳ್ಳಿ ಗ್ರಾಮದಲ್ಲಿ ಎರಡನೇ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ 38 ವರ್ಷದ ಜ್ಯೋತಿ ಪಿ.ಆರ್. ಉತ್ತೀರ್ಣರಾಗಿದ್ದಾರೆ.

ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ‌ಉತ್ತರ ಪತ್ರಿಕೆ ಮರು ಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಷ್ಟೆ ಅವಕಾಶ

ತಾಯಿ-ಮಗ ಪಾಸ್‌

ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಸಿದ್ದಣ್ಯಯ್ಯ ಹೈಸ್ಕೂಲ್‍ನಲ್ಲಿ ಮಗ ನಿತಿನ್ ಸಿ.ಬಿ. ಜತೆ ತಾಯಿ ಜ್ಯೋತಿ ಪಿ.ಆರ್. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದರು. 250 ಅಂಕ ಪಡೆದು ಜ್ಯೋತಿ ಪಿ.ಆರ್. ಉತ್ತಿರ್ಣರಾಗಿದ್ದಾರೆ. ನಿತಿನ್‌ ಸಿ.ಬಿ. 582 ಅಂಕ ಪಡೆದಿದ್ದಾರೆ. ಬಾಳ್ಳುಪೇಟೆಯಲ್ಲಿರುವ ವಿವೇಕ ಕಾನ್ವೆಂಟ್‍ನಲ್ಲಿ ನಿತಿನ್ ಸಿ.ಬಿ. ಓದುತ್ತಿದ್ದಾರೆ.

ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಉತ್ತೀರ್ಣರಾಗಿದ್ದಕ್ಕೆ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

SSLC Result 2024: ಎಸ್‌ಎಸ್‌ಎಲ್‌ಸಿ ‌ಉತ್ತರ ಪತ್ರಿಕೆ ಮರು ಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಷ್ಟೆ ಅವಕಾಶ

ರಾಜ್ಯಾದ್ಯಂತ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ (SSLC Result 2024) ಫಲಿತಾಂಶವು ಮೇ 9ರಂದು ಪ್ರಕಟಿಸಲಾಗಿದೆ. ಇದೀಗ ಪರೀಕ್ಷೆಯ ಉತ್ತರ ಪತ್ರಿಕೆಗಳ ಪ್ರತಿಗಳನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಸ್ಕ್ಯಾನ್‌ ಪ್ರತಿ, ಮರು ಎಣಿಕೆ ಮತ್ತು ಮರುಮೌಲ್ಯಮಾಪನಕ್ಕೆ ಮಂಡಳಿಯ ವೆಬ್‌ಸೈಟ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Karnataka Weather : ಕೊಡಗು, ಕೊಪ್ಪಳ ಸೇರಿ ಹಲವೆಡೆ ಅಬ್ಬರಿಸುತ್ತಿರುವ ಗಾಳಿ- ಮಳೆ; ನಾಳೆಗೂ ವಾರ್ನಿಂಗ್‌

ಮೇ 9ರಿಂದ 16ರವರೆಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿಯನ್ನು ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತರ ಪತ್ರಿಕೆಗಳ ಮರುಎಣಿಕೆಗೆ ಮತ್ತು ಮರು ಮೌಲ್ಯಮಾಪನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಮೇ 13ರಿಂದ 22ವರೆಗೆ ಅರ್ಜಿ ಸಲ್ಲಿಸಬಹುದು ಜತೆಗೆ ಶುಲ್ಕವನ್ನು ಪಾವತಿಬಹುದಾಗಿದೆ.

ಇನ್ನೂ ನೇರವಾಗಿ ಮರು ಎಣಿಕೆಗಾಗಿ ಭೌತಿಕವಾಗಿ ಅರ್ಜಿ ಸಲ್ಲಿಸುವಂತಿಲ್ಲ. ಬದಲಿಗೆ ಆನ್‌ಲೈನ್‌ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕಿದೆ. ಮರು ಎಣಿಕೆ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಬಂಧಪಟ್ಟ ವಿಷಯದ ಉತ್ತರ ಪತ್ರಿಕೆಯ ಸ್ಕ್ಯಾನ್‌ ಪ್ರತಿಯನ್ನು ಪಡೆಯಬೇಕು.

ಸ್ಕ್ಯಾನ್‌ ಪ್ರತಿಯನ್ನು ಪಡೆದ ನಂತರ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದರೆ, ಅದನ್ನೂ ಖಚಿತಪಡಿಸಿಕೊಂಡ ನಂತರವಷ್ಟೇ ಮರುಎಣಿಕೆಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಮರುಎಣಿಕೆಗಾಗಿ ಭೌತಿಕವಾಗಿ ಅರ್ಜಿಗಳನ್ನು ಸ್ವೀಕರಿಸುವುದನ್ನು ರದ್ದುಗೊಳಿಸಲಾಗಿದೆ. ಮರುಎಣಿಕೆ ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

ಇನ್ನೂ ಮರುಎಣಿಕೆಯು ಉಚಿತವಾಗಿದ್ದು ಪ್ರತ್ಯೇಕ ಶುಲ್ಕವಿರುವುದಿಲ್ಲ. ಮರು ಎಣಿಕೆ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದಲ್ಲಿ ಪರಿಶೀಲಿಸಿ, ನಂತರ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ: Sensex Crash : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ, ಸೆನ್ಸೆಕ್ಸ್​ 1100 ಅಂಕಗಳಷ್ಟು ಪತನ

ಸಹಾಯವಾಣಿಗೆ ಕರೆ ಮಾಡಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ, ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪಡೆಯುವ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಯಾವುದೇ ಮಾಹಿತಿ ಪಡೆಯಬಹುದಾಗಿದೆ. ಹೀಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಹಾಯವಾಣಿಯನ್ನು ಆರಂಭವಿಸಿದೆ. ವಿದ್ಯಾರ್ಥಿಗಳು ಸಹಾಯವಾಣಿ ಸಂಖ್ಯೆ 080 23310075, 23310076ಕ್ಕೆ ಕರೆ ಮಾಡಬಹುದು.

Continue Reading

ಮಂಡ್ಯ

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌; ನೇಣಿಗೆ ಶರಣಾದ ವಿದ್ಯಾರ್ಥಿ

SSLC Result 2024: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೋರ್ವ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ ಬೆಳಗಾವಿಯಲ್ಲಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿನಿಯೋರ್ವಳು ಪರೀಕ್ಷೆಯಲ್ಲಿ ಅನುತ್ತಿರ್ಣಗೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

VISTARANEWS.COM


on

Failed in SSLC Exam Student suicide in mandya
Koo

ಮಂಡ್ಯ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Result 2024) ಪ್ರಕಟಗೊಂಡಿದೆ. ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಫೇಲ್‌ ಆದ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: SSLC Result 2024: ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ

ನಿಖಿಲ್ (16) ನೇಣಿಗೆ ಶರಣಾದ ವಿದ್ಯಾರ್ಥಿ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ನಿಖಿಲ್, ಫಲಿತಾಂಶ ನೋಡಿ 3 ವಿಷಯದಲ್ಲಿ ಫೇಲ್ ಆದ ಹಿನ್ನೆಲೆಯಲ್ಲಿ ಹೊಲಕ್ಕೆ ತೆರಳಿ ಮರವೊಂದಕ್ಕೆ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಬೆಳಗಾವಿ: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತಿರ್ಣಗೊಂಡ ವಿದ್ಯಾರ್ಥಿನಿಯೋರ್ವಳು ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಜರುಗಿದೆ.

ಇದನ್ನೂ ಓದಿ: Self Harming: ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಸಾವು

ಸೃಷ್ಟಿ ಕಲ್ಲಪ್ಪ ಚೌವ್ಹಾಣ್ (16) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಯಾಗಿದ್ದಾಳೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading

ರಾಜಕೀಯ

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌ನಲ್ಲಿ ಸಂಬಂಧ ಇಲ್ಲ ಅಂದ್ಮೇಲೆ ಡಿಕೆಶಿ ಹೆಸರು ಏಕೆ ಬಂತು?‌ ಮಾಡೋದೆಲ್ಲ ಮಾಡಿ, ನನಗೆ ಒರೆಸಲು ಹೊರಟಿದ್ದೀರಾ? ಇದಕ್ಕೆಲ್ಲಾ ಸಿದ್ದರಾಮಯ್ಯ ಮಂತ್ರಿ ಮಂಡಲ‌ವೇ ಕಾರಣ. ಮಂತ್ರಿ ಮಂಡಲದಲ್ಲಿ ತಾವೂ ಇದ್ದೀರಿ ಕೃಷ್ಣಬೈರೇಗೌಡರೇ. ನಿಮ್ಮಲ್ಲಿ ಅಲ್ಪ ಸ್ವಲ್ಪ ಇದ್ದಿದ್ದರೆ ಇದೆನ್ನೆಲ್ಲ ಮಾಡೋಕೆ‌ ಬಿಡುತ್ತಿರಲಿಲ್ಲ. ನಮಗೆ ವಿಷ ಹಾಕಿದ್ದಾರೆ ಅಂತ‌ ಕೃಷ್ಣಬೈರೇಗೌಡ ಹೇಳಿದ್ದಾರೆ. ಅವರು ಹಾಸನಾಂಬೆ ಮುಂದೆ ಬರಲಿ ಎಂಬುದಾಗಿ ಎಚ್‌‌ಡಿಕೆ ಸವಾಲು ಹಾಕಿದರು. ಸರ್ಕಾರವನ್ನು ಹಾಸನಾಂಬೆ ಕೆಲವೇ ದಿನಗಳಲ್ಲಿ ಧ್ವಂಸ ಮಾಡಳಿದ್ದಾಳೆ ಎಂದು ಎಚ್.ಡಿ. ಕುಮಾರಸ್ವಾಮಿ ಶಾಪ ಹಾಕಿದ್ದಾರೆ.

VISTARANEWS.COM


on

Prajwal Revanna Case Hasanambe is going to destroy this government HD Kumaraswamy curse
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣ ಹಾಗೂ ಪೆನ್ ಡ್ರೈವ್ ಹಂಚಿಕೆ ಬಗ್ಗೆ ಆರೋಪ – ಪ್ರತ್ಯಾರೋಪಗಳು ತಾರಕಕ್ಕೇರುತ್ತಿವೆ. ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಮಾತಿನ ಸಮರಕ್ಕೆ ಬಿದ್ದಿದ್ದಾರೆ. ಇದರ ಜತೆಗೆ ಎಚ್‌ಡಿಕೆ ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. ಅಲ್ಲದೆ, ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ ಎಂದು ಎಚ್‌ಡಿಕೆ ಶಾಪ ಹಾಕಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಲೈಂಗಿಕ ಹಗರಣ ಆಗಿರುವುದನ್ನು ನಾನು ಒಪ್ಪುತ್ತೇನೆ. ಆದರೆ, ಕೃಷ್ಣಬೈರೇಗೌಡ ಸಂತ್ರಸ್ತರಿಗೆ ನ್ಯಾಯ ಹರಣ ಅಂದಿದ್ದಾರೆ. ನಾವು ಯಾರಿಗೆ ನ್ಯಾಯ ಹರಣ ಮಾಡಿದ್ದೇವೆ? ನೀವು ಸಂತ್ರಸ್ತರಿಗೆ ಯಾವ ನ್ಯಾಯ ಕೊಡಿಸಿದ್ದೀರಿ ಹೇಳಿ? ಹೆಣ್ಣು ಮಕ್ಕಳನ್ನು ಹೆದರಿಸಿ ಹೇಳಿಕೆ ಪಡೆಯಲು ಸಜ್ಜಾಗಿದ್ದಾರೆ. ತನಿಖೆ ಸರಿಯಾಗಿ ನಡೆದಿದ್ದರೆ ಇನ್ನೂ ಎಲ್ಲೆಲ್ಲಿಗೋ ಹೋಗಲಿದೆ. ಕೇಸ್‌ನಲ್ಲಿ ಕುಮಾರಸ್ವಾಮಿ ಸೇರಿಕೊಂಡಿದ್ದಾರೆ ಅಂತಾರೆ. ಪೆನ್‌ಡ್ರೈವ್‌ ಎ.ಡಿ. ಕುಮಾರಸ್ವಾಮಿ ಜೇಬಲ್ಲಿದೆ ಅಂತಾರೆ. ನನ್ನ ಬಳಿ ಇರೋದು ಅಶ್ಲೀಲ ಪೆನ್‌ಡ್ರೈವ್‌ ಅಲ್ಲ. ನನ್ನ ಬಳಿಯಿರುವ ಪೆನ್‌ಡ್ರೈವ್‌ ಕೂಡ ಬಿಡುಗಡೆ ಮಾಡುತ್ತೇನೆ. ಒಂದು ಪೆನ್‌ಡ್ರೈವ್‌ ಇಟ್ಟುಕೊಂಡು ರಸ್ತೆಯಲ್ಲಿ ಮಹಿಳೆಯರ ಮಾನ ಹರಾಜು ಹಾಕಿದ್ದಾರೆ ಎಂದು ಕಿಡಿಕಾರಿದರು.

ಕಾರ್ತಿಕ್ ಗೌಡ ನಿರೀಕ್ಷಣಾ ಜಾಮೀನು ರಿಜೆಕ್ಟ್ ಆಗಿದೆ. ಎಸ್‌ಐಟಿ ಇನ್ನೂ ಯಾಕೆ ಕಾರ್ತಿಕ್ ಗೌಡನನ್ನು ಬಂಧನ ಮಾಡಿಲ್ಲ? ರಾಮನಗರ ಶಾಸಕರ ತುಣುಕುವೊಂದನ್ನು ಬಿಟ್ಟಿದ್ದರು. ಶಾಸಕರ ತುಣುಕನ್ನು ಬಿಟ್ಟರು ಎಂದು ಮೂವರನ್ನು ಬಂಧಿಸಿದ್ದಾರೆ. ಈ ಪೆನ್‌ಡ್ರೈವ್ ಪ್ರಕರಣದಲ್ಲಿ ಯಾಕಪ್ಪ ಏನೂ ಆಗಿಲ್ಲ? ಡಿಸಿಎಂ ಡಿ.ಕೆ. ಶಿವಕುಮಾರ್ ಬಗ್ಗೆ ವಕೀಲ ದೇವರಾಜೇಗೌಡ ಮಾತಾಡಿದ್ದಾರೆ. ಸಂಬಂಧ ಇಲ್ಲ ಅಂದ್ಮೇಲೆ ಡಿಕೆಶಿ ಹೆಸರು ಏಕೆ ಬಂತು?‌ ಮಾಡೋದೆಲ್ಲ ಮಾಡಿ, ನನಗೆ ಒರೆಸಲು ಹೊರಟಿದ್ದೀರಾ? ಇದಕ್ಕೆಲ್ಲಾ ಸಿದ್ದರಾಮಯ್ಯ ಮಂತ್ರಿ ಮಂಡಲ‌ವೇ ಕಾರಣ. ಮಂತ್ರಿ ಮಂಡಲದಲ್ಲಿ ತಾವೂ ಇದ್ದೀರಿ ಕೃಷ್ಣಬೈರೇಗೌಡರೇ. ನಿಮ್ಮಲ್ಲಿ ಅಲ್ಪ ಸ್ವಲ್ಪ ಇದ್ದಿದ್ದರೆ ಇದೆನ್ನೆಲ್ಲ ಮಾಡೋಕೆ‌ ಬಿಡುತ್ತಿರಲಿಲ್ಲ. ನಮಗೆ ವಿಷ ಹಾಕಿದ್ದಾರೆ ಅಂತ‌ ಕೃಷ್ಣಬೈರೇಗೌಡ ಹೇಳಿದ್ದಾರೆ. ಅವರು ಹಾಸನಾಂಬೆ ಮುಂದೆ ಬರಲಿ ಎಂಬುದಾಗಿ ಎಚ್‌‌ಡಿಕೆ ಸವಾಲು ಹಾಕಿದರು. ಸರ್ಕಾರವನ್ನು ಹಾಸನಾಂಬೆ ಕೆಲವೇ ದಿನಗಳಲ್ಲಿ ಧ್ವಂಸ ಮಾಡಳಿದ್ದಾಳೆ ಎಂದು ಎಚ್.ಡಿ. ಕುಮಾರಸ್ವಾಮಿ ಶಾಪ ಹಾಕಿದರು.

ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐಗೆ ನೀಡಲು ಆಗ್ರಹ

ಪ್ರಕರಣ ಸಂಬಂಧ ರಾಜ್ಯಪಾಲರಿಗೆ ದೂರು ನೀಡಿದ್ದೇವೆ. ಸಿಬಿಐ ತನಿಖೆಗೆ ನೀಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಮನವಿ ಮಾಡಿದ್ದೇನೆ. ಇದನ್ನು ರಾಜ್ಯಪಾಲರು ಅಥವಾ ಕೇಂದ್ರ ಮಾಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರವೇ ಸಿಬಿಐ ತನಿಖೆಗೆ ಒಪ್ಪಿಸಬೇಕು. ನ್ಯಾಯಯುತವಾಗಿ ಈ ಪ್ರಕರಣದ ತನಿಖೆ ನಡೆಯಬೇಕು. ನಮ್ಮ ವಕೀಲರ ಮೂಲಕ ನಾವು ವಾದ ಮಾಡುತ್ತೇವೆ. ಎಲ್ಲವನ್ನೂ ಹೈಕೋರ್ಟ್ ತೀರ್ಮಾನ ಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

4 ಗೋಡೆ ಮಧ್ಯೆ ಇರುವುದನ್ನು ವಿಶ್ವಕ್ಕೆ ಹಬ್ಬಿಸಿರುವುದು ನೀವು

ಮಾನ ಹರಣ, ಶೀಲ ಹರಣ ಎಂದೆಲ್ಲ ದೊಡ್ಡದಾಗಿ ಹೇಳಿದ್ದೀರಿ. ಪ್ರಜ್ವಲ್ ಕೇಸ್‌ನಲ್ಲಿ ಸರ್ಕಾರದ ನಡಾವಳಿಗಳು ಏನು ಇದೆಯೋ ಗೊತ್ತಾ? ಹಾಸನದಲ್ಲಿ ಮಹಿಳೆ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿ ಆದೇಶ ಮಾಡಿದ್ದೀರಿ. ಮಹಿಳೆಯರ ಮಾನಹರಣ ಆಗಿದ್ದು ನಾಲ್ಕು ಗೋಡೆ ಮಧ್ಯೆ ಇತ್ತು. ಅದನ್ನು ವಿಶ್ವಕ್ಕೆ ಹಬ್ಬುವಂತೆ ಮಾಡಿದ್ದು ಯಾರಪ್ಪ ಕೃಷ್ಣಬೈರೇಗೌಡ? 4 ಗೋಡೆ ಮಧ್ಯೆ ಇರುವುದನ್ನು ವಿಶ್ವಕ್ಕೆ ಹಬ್ಬಿಸಿರುವುದು ನೀವು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಲೈಂಗಿಕ ದೌರ್ಜನ್ಯವೆಸಗಿದವರನ್ನು ಬಚಾವ್‌ ಮಾಡಲು ಯತ್ನ ಅಂದಿದ್ದೀರಿ. ನಿಮ್ಮ ಸರ್ಕಾರ ಏನು ಮಾಡುತ್ತಿದೆಯಪ್ಪಾ? ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದರೆ ನೀವು ಏನು ಮಾಡುತ್ತಿದ್ದೀರಿ? ನಿಮ್ಮ ಸರ್ಕಾರದಲ್ಲಿರುವುದು ಘಟಾನುಘಟಿ ನಾಯಕರಲ್ಲವಾ? ನಿಮ್ಮ ಮುಖ್ಯಮಂತ್ರಿ ಲಾಯರ್ ಆಗಿದ್ದಾರೆ. ಹೊಳೆನರಸೀಪುರ ಪ್ರಕರಣದಲ್ಲಿ ಬೇಲಬಲ್ ಸೆಕ್ಷನ್ ಹಾಕಿದ್ದೀರಿ. ನಂತರ ಎಚ್.ಡಿ.ರೇವಣ್ಣ ವಿರುದ್ಧ ಕಿಡ್ನ್ಯಾಪ್ ಕೇಸ್ ಹಾಕಿದ್ದಾರೆ. ಕಿಡ್ನ್ಯಾಪ್ ಆಗಿದ್ದಾಳೆ ಎನ್ನಲಾದ ಸಂತ್ರಸ್ತೆ ಸರ್ಕಾರದ ಸುಪರ್ದಿಯಲ್ಲೇ ಇದ್ದಾರೆ. ಎಸ್‌ಐಟಿ ವಶದಲ್ಲಿದ್ದರೂ 5 ದಿನದಿಂದ ಏನು ಮಾಡುತ್ತಿದ್ದೀರಿ? ಸಂತ್ರಸ್ತೆ ಕುಟುಂಬಸ್ಥರನ್ನು ಕೂಡ ಕರೆತಂದಿದ್ದೀರಿ. ಬೇಲ್ ಕೊಡಿಸಲು ಹೋದ ಲಾಯರ್‌ರನ್ನು ಕೂಡ ವಶಕ್ಕೆ ಪಡೆದಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪೆನ್‌ಡ್ರೈವ್ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರಗೆ ಬರಲೇಬೇಕು. ಸತ್ಯ ಹೊರಬರಬೇಕೆಂದು ನಿಮಗಿಂದ ನಾನೇ ಹೆಚ್ಚಿನ ಧ್ವನಿ ಎತ್ತುತ್ತೇನೆ. ಡಿಕೆಶಿಯವರೇ ನಾನು ಡೈರೆಕ್ಟರೂ ಇದ್ದೇನೆ, ನಿರ್ಮಾಪಕ ಇದ್ದೇನೆ. ನಾನು ಎಂದಿಗೂ ಆ್ಯಕ್ಟ್ ಮಾಡಿಲ್ಲ. ಆದರೆ, ಆ್ಯಕ್ಟ್ ಮಾಡಿಸಿದ್ದೇನೆ. ನನ್ನನ್ನು ಕಥಾನಾಯಕನನ್ನಾಗಿ ಮಾಡಿದ್ದೀರಿ ಎಂದ ಕುಮಾರಸ್ವಾಮಿ ಆಕ್ರೋಶವನ್ನ ಹೊರಹಾಕಿದರು.

‘ಪ್ರಪಂಚದ ಅತಿ ದೊಡ್ಡ ಲೈಂಗಿಕ ಹಗರಣ’ ಎಂದು ಸಚಿವ ಕೃಷ್ಣ ಬೈರೇಗೌಡರು ನಿನ್ನೆ ಈ ಮಾತನ್ನು ಹೇಳಿದ್ದಾರೆ. ಈ ಪ್ರಕರಣದ ಪ್ರಾಮುಖ್ಯತೆಯನ್ನು ಹಾಳು ಮಾಡುತ್ತಿರುವುದು ಯಾರು? ಚುನಾವಣೆಗೂ ಮುನ್ನ ಪೆನ್‌ಡ್ರೈವ್ ರಿಲೀಸ್ ಮಾಡಿದ್ದು ಯಾರಪ್ಪ? ದೇಶಾದ್ಯಂತ ಸುದ್ದಿಯಾಗುವಂತೆ ಮಾಡಿದವರು ಯಾರಪ್ಪ? ಪೆನ್‌ಡ್ರೈವ್ ಸಂಬಂಧ ಅಮಿತ್ ಶಾ ಅವರನ್ನು ಪ್ರಶ್ನಿಸಿದ್ರಲ್ಲಪ್ಪಾ? ಬಿಜೆಪಿ, ಜೆಡಿಎಸ್ ಮೈತ್ರಿಯ ಬಗ್ಗೆ ಪ್ರಶ್ನಿಸಿ ನಿಲುವು ಕೇಳಿದಿರಿ? ನಿಮಗೆ ಸಂತ್ರಸ್ತರಿಗೆ ನ್ಯಾಯ ಕೊಡಿಸುವುದು ಬೇಕಾಗಿಲ್ಲ. ನಿಮಗೆ ಬೇಕಾಗಿರುವುದು ಬಿಜೆಪಿ, ಜೆಡಿಎಸ್ ಪಕ್ಷದ ವಿಚಾರವಾಗಿದೆ. ಜೆಡಿಎಸ್ ಪಕ್ಷ ಯಾರ ದಯೆಯೂ ಇಲ್ಲ. ನಿಮ್ಮಂತೆ ನಾವು ಎಲ್ಲಿಯೂ ಹೋಗಿ ಕೇಳಿಕೊಂಡಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಪೆನ್‌ಡ್ರೈವ್ ಬಿಡುಗಡೆಯಿಂದ ಯಾರಿಗೆ ಅನ್ಯಾಯವಾಗಿದೆ ಗೊತ್ತಾ? ಕೃಷ್ಣ ಬೈರೇಗೌಡರೇ ನಿಮಗೆ ನಮಸ್ಕಾರ. ನೀವು ರಾಹುಲ್‌ರಂತೆ 400 ಎಂಬ ಸಂಖ್ಯೆಯನ್ನು ಹೇಳಿಲ್ಲ. ಭಾರಿ ಸಂಖ್ಯೆಯಲ್ಲಿ ಎಂಬ ಪದವನ್ನು ಬಳಕೆ ಮಾಡಿದ್ದೀರಿ. ಮೈಸೂರು ಕಾಂಗ್ರೆಸ್‌ ಅಭ್ಯರ್ಥಿ 2,900 ಎಂದು ಮಾತನಾಡಿದ್ದಾನೆ ಎಂದು ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರು.

ಮಾಧ್ಯಮಗಳ ಮೂಲಕ ಸರ್ಕಾರಕ್ಕೆ ಸಂದೇಶ ಕಳಿಸುವಂತಾಗಿದೆ. ನಿನ್ನೆ ಹಲವು ನಾಯಕರು ಒಕ್ಕಲಿಗ ‘ಕೈ’ ನಾಯಕರಿಂದ ಸುದ್ದಿಗೋಷ್ಠಿ ನಡೆಸಲಾಗಿದೆ. ನಾವು ದಾರಿ ತಪ್ಪಿಸುತ್ತಿದ್ದೇವೆ ಎಂಬಂತೆ ಮಾತನಾಡಿದ್ದಾರೆ. ಈ ಘಟನೆಗೆ ನಾನು ಜಾತಿಯ ರಕ್ಷಣೆ ಪಡೆಯುವುದಕ್ಕೆ ಹೋಗಲ್ಲ. ಪ್ರಜ್ವಲ್‌ ಕೇಸಲ್ಲಿ ನಾನು ಜಾತಿ ರಕ್ಷಣೆ ಪಡೆಯುವುದಕ್ಕೆ ಹೋಗಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಾನು ಒಕ್ಕಲಿಗ ನಾಯಕನೆಂದು ಎಲ್ಲೂ ಹೇಳಿಕೊಂಡಿಲ್ಲ. ಒಕ್ಕಲಿಗ ನಾಯಕತ್ವಕ್ಕಾಗಿ ನಾನು ಪೈಪೋಟಿಯನ್ನು ಮಾಡಿಲ್ಲ. ಏನೋ ಡಿ.ಕೆ. ಶಿವಕುಮಾರ್‌ ಜತೆ ಪೈಪೋಟಿ ಎಂದು ಹೇಳಿದ್ದಾರೆ. ನನ್ನ ವಿರುದ್ಧ 150 ಕೋಟಿ ರೂಪಾಯಿಯ ಹಗರಣದ ಆರೋಪ ಮಾಡಿದ್ದರು. ನನ್ನ ವಿರುದ್ಧ ಆರೋಪ ಬಂದಾಗಲೂ ನಾನು ಸದನದಲ್ಲೇ ಹೇಳಿದ್ದೆ. ಶಾಸಕರ ಸಂಖ್ಯಾಬಲವನ್ನು ಬಳಸಿಕೊಳ್ಳುವುದಿಲ್ಲ ಎಂದು ಹೇಳಿದ್ದೆ. ನಾನು ಏಕಾಂಗಿಯಾಗಿ ಹೋರಾಡುವುದಾಗಿ ಹೇಳಿದ್ದೆ. ನಾನು ಹಿಟ್ ಆ್ಯಂಡ್ ರನ್ ಮಾಡುವ ವ್ಯಕ್ತಿಯಲ್ಲ. ಆಗ ಎಲ್ಲರೂ ನನ್ನ ದಾಖಲೆಗಾಗಿ ಕಾಯುತ್ತಿದ್ದರು. ನಾನು ದಾಖಲೆ ಬಿಟ್ಟಾಗ ನನ್ನ ಮೇಲೆ ಒಕ್ಕಲಿಗರನ್ನು ಬಿಟ್ಟಿದ್ದರು. ನಾನು ಆ ದಿನವೂ ಏಕಾಂಗಿಯಾಗಿಯೇ ಹೋರಾಟ ಮಾಡಿದ್ದೇನೆ. ಈಗಲೂ ನಾನು ಏಕಾಂಗಿಯಾಗಿಯೇ ಹೋರಾಟ ಮಾಡುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್ ಹಂಚಿಕೆದಾರರ ಬಂಧಿಸಿ; ಸಿಎಂ, ಡಿಸಿಎಂ ವಿರುದ್ಧ ಮಹಿಳಾ ಜೆಡಿಎಸ್‌ ಗರಂ!

ಹಾಸನ ರಾಜಕೀಯದಲ್ಲಿ ಇನ್ವಾಲ್ವ್ ಆಗಿಲ್ಲ

ಪ್ರಜ್ವಲ್ ಪ್ರಕರಣದಲ್ಲಿ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಈ ನೆಲದ ಕಾನೂನಿಗೆ ಪ್ರತಿಯೊಬ್ಬರೂ ತಲೆಬಾಗಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹೇಳಿದ್ದೇನೆ. ನನ್ನ ಹೇಳಿಕೆಯ ಬಗ್ಗೆ ಡಿ.ಕೆ. ಶಿವಕುಮಾರ್‌ ಅವರು ಕೂಡ ಮಾತನಾಡಿದ್ದಾರೆ. ರೇವಣ್ಣ ಕುಟುಂಬ ಬೇರೆ, ಎಚ್‌ಡಿಕೆ ಕುಟುಂಬ ಬೇರೆ ಅಂದಿದ್ದಾರೆ. ನಾನು ಹೇಳಿಕೆ ನೀಡಿದಂತೆ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. ದೇವೇಗೌಡರ ಮಕ್ಕಳು ಎಲ್ಲರೂ ಬೇರೆ ಬೇರೆಯಾಗಿ ಇದ್ದೇವೆ. ನಾನು ಎಂದಿಗೂ ಹಾಸನ ರಾಜಕೀಯದಲ್ಲಿ ಇನ್ವಾಲ್ವ್ ಆಗಿಲ್ಲ. ಒಮ್ಮೆ ಮಾತ್ರ ಹಾಸನ ಚುನಾವಣೆ ವೇಳೆ ಇನ್ವಾಲ್ವ್ ಆಗಿದ್ದೆ. ನಮ್ಮ ಕಾರ್ಯಕರ್ತನಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಆ ದಿನವೂ ನನ್ನ ಮೇಲೆಯೇ ಗೂಬೆ ಕೂರಿಸಿದ್ದರು. ರೇವಣ್ಣ ಕುಟುಂಬ ಮುಗಿಸಲು ಕುಮಾರಣ್ಣ ಹೊರಟಿದ್ದಾರೆಂದಿದ್ದಾರೆ ಎಂದು ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

Continue Reading
Advertisement
Yallapur Vishwadarshana Group of institutions performed well in SSLC Result 2024
ಉತ್ತರ ಕನ್ನಡ11 mins ago

SSLC Result 2024: ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಪ್ರೌಢಶಾಲೆಗಳ ಉತ್ತಮ ಸಾಧನೆ

women's Cricket team
ಕ್ರೀಡೆ15 mins ago

Womens Cricket Team : ಬಾಂಗ್ಲಾ ವಿರುದ್ಧ 5-0 ಕ್ಲೀನ್​ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರು

Mother passed SSLC exam with her son in Hassan
ಕರ್ನಾಟಕ27 mins ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್!

Failed in SSLC Exam Student suicide in mandya
ಮಂಡ್ಯ36 mins ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌; ನೇಣಿಗೆ ಶರಣಾದ ವಿದ್ಯಾರ್ಥಿ

Ranveer Singh
Latest48 mins ago

Ranveer Singh: 2 ಕೋಟಿ ರೂ. ಮೌಲ್ಯದ ವಜ್ರದ ನೆಕ್ಲೇಸ್ ಧರಿಸಿ ಗಮನ ಸೆಳೆದ ರಣವೀರ್ ಸಿಂಗ್

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ49 mins ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Racial Comments
ಪ್ರಮುಖ ಸುದ್ದಿ55 mins ago

Racist Comment : ಭಾರತದಲ್ಲಿ ನೀಗ್ರೊಗಳಿದ್ದಾರೆ…; ಇದೀಗ ಬಂಗಾಳ ಕಾಂಗ್ರೆಸ್​​ ಅಧ್ಯಕ್ಷರ ಸರದಿ

KL Rahul
ಕ್ರೀಡೆ2 hours ago

IPL 2024 : ಲಕ್ನೊ ತಂಡದ ನಾಯಕನ ಸ್ಥಾನದಿಂದ ರಾಹುಲ್ ಔಟ್​?

Prajwal Revanna Case DK Shivakumar alleged mastermind in 25000 pen drive allotment
ಹಾಸನ2 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

Maldives anti-India stance
ಪ್ರಮುಖ ಸುದ್ದಿ2 hours ago

Maldives anti-India stance : ಭಾರತ ವಿರೋಧಿ ಕ್ರಮಕ್ಕೆ ಪಶ್ಚಾತಾಪ ವ್ಯಕ್ತಪಡಿಸಿದ ಮಾಲ್ಡೀವ್ಸ್​​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ49 mins ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ8 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ8 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ9 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು9 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ9 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು11 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

ಟ್ರೆಂಡಿಂಗ್‌